SENSEX
NIFTY
GOLD
USD/INR

Weather

20    C

ಡಿಜಿಟಲ್ ಸುದ್ದಿ ಮೂಲಗಳು

... ...View News by News Source

ಅನನ್ಯಾ ಅಮರ್ ಅಭಿಮಾನ ನೋಡಿ ಭಾವುಕರಾದ ಶಿವರಾಜ್​ಕುಮಾರ್

ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೀಸನ್ 5 ವೇದಿಕೆ ಮೇಲೆ ನಟಿ ಅನನ್ಯಾ ಅಮರ್ ಶಿವಣ್ಣನ 'ಜೋಗಿ' ಹಾಡಿಗೆ ಅದ್ಭುತವಾಗಿ ನರ್ತಿಸಿ ತಮ್ಮ ಅಭಿಮಾನ ವ್ಯಕ್ತಪಡಿಸಿದರು. ಅವರ ಅಚಲ ಅಭಿಮಾನತ್ವದಿಂದ ಶಿವಣ್ಣ ಭಾವುಕರಾದರು. ಶಿವಣ್ಣರ ಮಾರ್ಗದರ್ಶನ ಸ್ಪರ್ಧಿಗಳಿಗೆ ಖುಷಿ ನೀಡಿದೆ. ಸದ್ಯ ಹಿರಿತೆರೆಯಲ್ಲಿ 'ಪೆದ್ದಿ' ಹಾಗೂ '666 ಆಪರೇಷನ್ ಡ್ರೀಮ್ ಥಿಯೇಟರ್' ಚಿತ್ರಗಳಲ್ಲಿ ಶಿವಣ್ಣ ಬ್ಯುಸಿಯಾಗಿದ್ದಾರೆ.

ಟಿವಿ 9 ಕನ್ನಡ 14 Nov 2025 7:50 am

Bihar Election 2025 Results: ಮತ ಎಣಿಕೆ ನಿಧಾನಗೊಳಿಸುವ ಹುನ್ನಾರ ನಡೆಯುತ್ತಿದೆ: ತೇಜಸ್ವಿ ಗಂಭೀರ ಆರೋಪ

ಬಿಹಾರ ವಿಧಾನಸಭಾ ಚುನಾವಣೆಯ ಫಲಿತಾಂಶ(Bihar Assembly Election Results)ಕ್ಕೆ ಕ್ಷಣಗಣನೆ ಇದೆ. ಮಹಾ ಮೈತ್ರಿಕೂಟದ ಮುಖ್ಯಮಂತ್ರಿ ಅಭ್ಯರ್ಥಿ ತೇಜಸ್ವಿ ಯಾದವ್ ಕೆಲವು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಮತ ಎಣಿಕೆ ನಿಧಾನಗೊಳಿಸಲು ಯೋಜನೆ ರೂಪಿಸಲಾಗುತ್ತಿದೆ ಎಂದು ದೂರಿದ್ದಾರೆ. ಈ ಬಾರಿ ಬಿಹಾರ ಇತಿಹಾಸದಲ್ಲಿಯೇ ಅತಿ ಹೆಚ್ಚು ಮತದಾನವಾಗಿದೆ ಎಂದು ಅವರು ಹೇಳಿದರು. ಸುಮಾರು 8 ಮಿಲಿಯನ್ ಹೆಚ್ಚಿನ ಮತಗಳು ಚಲಾವಣೆಯಾಗಿವೆ,

ಟಿವಿ 9 ಕನ್ನಡ 14 Nov 2025 7:46 am

ತನ್ನತ್ತ ಎಸೆದ ಕಲ್ಲಲ್ಲೇ ಮನೆ ಕಟ್ಟಿಕೊಂಡ ರಘು; ಮತ್ತೆ ಸಿಗಲಿದೆ ಕಿಚ್ಚನ ಮೆಚ್ಚುಗೆ?

ಬಿಗ್ ಬಾಸ್ ಮನೆಯಲ್ಲಿ ರಘು ಅವರ ಆಟ ಎಲ್ಲರ ಗಮನ ಸೆಳೆದಿದೆ. ರಕ್ಷಿತಾ ಮತ್ತು ಮಾಳು ಅವರಿಂದ ನಾಮಿನೇಷನ್ ಆದರೂ, ರಘು ಅದನ್ನು ಸವಾಲಾಗಿ ಸ್ವೀಕರಿಸಿದರು. ನಾಮಿನೇಟ್ ಆದ ತಂಡದ ಟಾಸ್ಕ್ ಗೆಲುವಿನಿಂದಾಗಿ ಕ್ಯಾಪ್ಟನ್ಸಿ ಟಾಸ್ಕ್​ಗೆ ಅರ್ಹತೆ ಪಡೆದರು. ಕಲ್ಲುಗಳಲ್ಲೇ ಮನೆ ಕಟ್ಟಿಕೊಂಡಂತೆ, ಈ ವಾರ ಮತ್ತೆ ಕ್ಯಾಪ್ಟನ್ ಆಗಿ ಹೊರಹೊಮ್ಮುವ ಮೂಲಕ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ಕಿಚ್ಚನ ಮೆಚ್ಚುಗೆಗೆ ಪಾತ್ರರಾಗುವ ನಿರೀಕ್ಷೆಯಿದೆ.

ಟಿವಿ 9 ಕನ್ನಡ 14 Nov 2025 7:33 am

Karnataka Weather Today: ರಾಜ್ಯದಲ್ಲಿಂದು ಒಣ ಹವೆಯ ಸಾಧ್ಯತೆ; ಹವಾಮಾನ ಇಲಾಖೆ ವರದಿ

Karnataka Weather: ಇಂದು ಕರಾವಳಿಯ ಜಿಲ್ಲೆಗಳಲ್ಲಿ, ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡು ಪ್ರದೇಶಗಳಲ್ಲಿ ಒಣ ಹವೆ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ರಾಜಧಾನಿ ಬೆಂಗಳೂರಲ್ಲಿ ಮೋಡಕವಿದ ವಾತಾವರಣದ ಸಾಧ್ಯತೆ ಇದ್ದರೆ, ರಾಜ್ಯದಲ್ಲಿ ಒಣಹವೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಟಿವಿ 9 ಕನ್ನಡ 14 Nov 2025 7:16 am

Bihar Election Results 2025 LIVE: ಇಂದು ಬಿಹಾರ ವಿಧಾನಸಭಾ ಚುನಾವಣಾ ಫಲಿತಾಂಶ, ಮತ ಎಣಿಕೆಗೆ ಕ್ಷಣ ಗಣನೆ

Bihar Assembly Election Results 2025 LIVE Counting and Updates in Kannada: ಬಿಹಾರಕ್ಕೆ ಇಂದು ನಿರ್ಣಾಯಕ ದಿನ, ಬಿಹಾರ ವಿಧಾನಸಭಾ ಚುನಾವಣಾ ಫಲಿತಾಂಶ ಇಂದು ಪ್ರಕಟವಾಗಲಿದ್ದು, ಯಾರು ಅಧಿಕಾರದ ಗದ್ದುಗೆ ಏರಲಿದ್ದಾರೆ ಎಂದು ಕಾದು ನೋಡಬೇಕಿದೆ. 243 ಸ್ಥಾನಗಳ ಎರಡು ಹಂತಗಳ ಮತ ಎಣಿಕೆ ಬೆಳಗ್ಗೆ 8 ಗಂಟೆಗೆ 46 ಮತಗಟ್ಟೆಗಳಲ್ಲಿ ಪ್ರಾರಂಭವಾಗಲಿದೆ. ನಿತೀಶ್ ಕುಮಾರ್ ಒಂದೆಡೆ ವಿಜಯವನ್ನು ಘೋಷಿಸಿದ್ದರೆ, ಮತ್ತೊಂದೆಡೆ ತೇಜಸ್ವಿ ಯಾದವ್ ಕೂಡ ನವೆಂಬರ್ 18 ರಂದು ಪ್ರಮಾಣವಚನ ಸ್ವೀಕರಿಸುವುದಾಗಿ ಹೇಳಿಕೊಂಡಿದ್ದಾರೆ. ಎಕ್ಸಿಟ್ ಪೋಲ್‌ಗಳ ಪ್ರಕಾರ ಎನ್‌ಡಿಎಗೆ ಮಹಿಳೆಯರು ಮತ್ತು ಒಬಿಸಿಗಳಿಂದ ಹೆಚ್ಚು ಬೆಂಬಲ ಸಿಗುವ ಸಾಧ್ಯತೆಯಿದೆ ಎಂಬುದನ್ನು ಸೂಚಿಸುತ್ತವೆ.

ಟಿವಿ 9 ಕನ್ನಡ 14 Nov 2025 7:14 am

ಕಿಚ್ಚನ ಚಪ್ಪಾಳೆಯಲ್ಲೇ ಸ್ಟ್ರಕ್ ಆಗಿದ್ದಾರೆ ಗಿಲ್ಲಿ; ಅಸಲಿ ಆಟ ಎಲ್ಲಿ?

ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ ಮನರಂಜನೆ ನೀಡಿದರೂ, ಮೂರನೇ ವಾರದಲ್ಲಿ ಕಿಚ್ಚನ ಚಪ್ಪಾಳೆ ಪಡೆದ ನಂತರ ಅವರ ಆಟದಲ್ಲಿ ಗಂಭೀರತೆ ಕಡಿಮೆಯಾಗಿದೆ. ಆ ಚಪ್ಪಾಳೆಯನ್ನು ಪದೇ ಪದೇ ನೆನಪಿಸಿಕೊಳ್ಳುತ್ತಾ, ಟಾಸ್ಕ್‌ಗಳಲ್ಲಿ ಗಮನ ಕಳೆದುಕೊಂಡಿದ್ದಾರೆ. ಈ ಬಗ್ಗೆ ಅಶ್ವಿನಿ ಗೌಡ ಗಿಲ್ಲಿಯವರನ್ನು ಪ್ರಶ್ನಿಸಿದ್ದಾರೆ.

ಟಿವಿ 9 ಕನ್ನಡ 14 Nov 2025 7:02 am

Daily Devotional: ಮನೆಯಲ್ಲಿ ಬಾತ್ರೂಮ್ ವಾಸ್ತು ಸಹ ಮುಖ್ಯ ಯಾಕೆ ಗೊತ್ತಾ?

ಮನೆಯಲ್ಲಿ ಬಾತ್ರೂಮ್ ವಾಸ್ತು ಕೂಡ ಅಷ್ಟೇ ಮುಖ್ಯ. ಮುರಿದ ಬಕೆಟ್, ಮಗ್, ಹಳೆಯ ಸ್ಕ್ರಾಪ್, ಒದ್ದೆ ಬಟ್ಟೆಗಳು, ಸೋರುವ ಟ್ಯಾಪ್‌ಗಳನ್ನು ಬಾತ್ರೂಮ್‌ನಲ್ಲಿ ಇಡಬೇಡಿ. ಬಕೆಟ್‌ನಲ್ಲಿ ಯಾವಾಗಲೂ ಸ್ವಲ್ಪ ನೀರು ಇಡಿ. ಸ್ವಚ್ಛತೆ ಮತ್ತು ಗಾಳಿ ಆಡುವ ವಾತಾವರಣ ನಿರ್ವಹಿಸಿ. ಇದು ಮನೆಯಲ್ಲಿ ಆರ್ಥಿಕ ಲಾಭ, ಆರೋಗ್ಯ ಮತ್ತು ಮಾನಸಿಕ ನೆಮ್ಮದಿಗೆ ಕಾರಣವಾಗುತ್ತದೆ. ಈ ವಾಸ್ತು ಸಲಹೆಗಳನ್ನು ಪಾಲಿಸುವುದರಿಂದ ಕುಟುಂಬದಲ್ಲಿ ಸುಖ ಸಮೃದ್ಧಿ ಹೆಚ್ಚುತ್ತದೆ.

ಟಿವಿ 9 ಕನ್ನಡ 14 Nov 2025 6:52 am

Horoscope Today 14 November: ಇಂದು ಈ ರಾಶಿಯವರಿಗೆ ಎಲ್ಲವನ್ನೂ ಬಿಟ್ಟುಕೊಡುವ ಮನೋಭಾವ ಬರಲಿದೆ

ಡಾ. ಬಸವರಾಜ ಗುರೂಜಿ ಅವರು ನವೆಂಬರ್ 14, 2025ರ ದೈನಂದಿನ ರಾಶಿ ಭವಿಷ್ಯವನ್ನು ನೀಡಿದ್ದಾರೆ. ಮೇಷ ರಾಶಿಯವರಿಗೆ ವ್ಯಾಪಾರದಲ್ಲಿ ಶುಭ, ಆಕಸ್ಮಿಕ ಪ್ರಯಾಣ ಯೋಗವಿದೆ. ಮಕ್ಕಳ ಬಗ್ಗೆ ಚಿಂತೆ, ಉದ್ಯೋಗದಲ್ಲಿ ಮಾತುಕತೆಯಲ್ಲಿ ಎಚ್ಚರಿಕೆ ಅಗತ್ಯ. ಆರೋಗ್ಯ ಉತ್ತಮವಾಗಿರುತ್ತದೆ. ಆಸ್ತಿ ಮತ್ತು ಪ್ರೇಮ ವಿಚಾರಗಳಲ್ಲಿ ನಿರ್ಧಾರಗಳು ಉತ್ತಮ ಫಲ ನೀಡಲಿವೆ. ಕೇಸರಿ ಬಣ್ಣ ಮತ್ತು ಏಳು ಅದೃಷ್ಟ ಸಂಖ್ಯೆ. ಓಂ ಚಂದ್ರ ರೂಪಾಯೈ ನಮಃ ಮಂತ್ರ ಜಪಿಸಿ.

ಟಿವಿ 9 ಕನ್ನಡ 14 Nov 2025 6:49 am

Bihar Election 2025 Results: ಇಂದು ಬಿಹಾರ ವಿಧಾನಸಭೆ ಚುನಾವಣೆ ಫಲಿತಾಂಶ: ಗೆಲುವಿನ ಬಿ‘ಹಾರ’ ಎನ್​ಡಿಎಗಾ, ಮಹಾಘಟಬಂಧನಕ್ಕಾ?

ಬಿಹಾರ ವಿಧಾನಸಭೆ ಚುನಾವಣೆ ಫಲಿತಾಂಶ: ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಈ ಬಾರಿ ದಾಖಲೆಯ ಮತದಾನ ಆಗಿದ್ದೇ ಆಗಿದ್ದು, ಫಲಿತಾಂಶದ ಬಗ್ಗೆಯೂ ಸಾಕಷ್ಟು ಕುತೂಹಲ ಮೂಡಿದೆ. ಇದರ ಬೆನ್ನಲ್ಲೇ ಆರ್​​ಜೆಡಿ ಮತ್ತು ಜೆಡಿಯು ನಾಯಕರ ಮಧ್ಯೆ ಪೋಸ್ಟರ್ ಸಮರ ಶುರುವಾಗಿದ್ದು, ಪರಸ್ಪರ ವ್ಯಂಗ್ಯ ಮಾಡುವ ಮೂಲಕ ಕಾಲೆಳೆಯುತ್ತಿದ್ದಾರೆ. ಮತ ಎಣಿಕೆ ಇಂದು ನಡೆಯುತ್ತಿದ್ದು, ಮಧ್ಯಾಹ್ನದ ವೇಳೆಗೆ ಬಹುತೇಕ ಚಿತ್ರಣ ಸಿಗುವ ನಿರೀಕ್ಷೆ ಇದೆ.

ಟಿವಿ 9 ಕನ್ನಡ 14 Nov 2025 6:47 am

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ನವೆಂಬರ್ 14ರ ದಿನಭವಿಷ್ಯ

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಈ ಲೇಖನದಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಕೂಡ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ನವೆಂಬರ್ 14ರ ಶುಕ್ರವಾರದ ದಿನ ಭವಿಷ್ಯ ಹೇಗಿದೆ ಎಂಬದರ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿದುಕೊಂಡು, ನಿಮ್ಮ ದಿನವನ್ನು ಪ್ರಾರಂಭಿಸಿ.

ಟಿವಿ 9 ಕನ್ನಡ 14 Nov 2025 12:28 am

Horoscope Today 14 November : ಇಂದು ಈ ರಾಶಿಯವರಿಗಾಗಿ ಎಲ್ಲವನ್ನೂ ಬಿಟ್ಟುಕೊಡುವ ಮನೋಭಾವ ಬರಲಿದೆ

ದಿನ ಭವಿಷ್ಯ, 14 ನವೆಂಬರ್​ 2025: ಶಾಲಿವಾಹನ ಶಕವರ್ಷ 1948ರ ದಕ್ಷಿಣಾಯನ, ಶರದ್ ಋತುವಿನ ಕಾರ್ತಿಕ ಮಾಸ ಕೃಷ್ಣ ಪಕ್ಷದ ನವಮೀ ತಿಥಿ ಶುಕ್ರವಾರದಂದು ನಿಂದನೆಯಿಂದ ಮನೋವಿಕಾರ, ಏಕಾಗ್ರತೆ, ಕುಟುಂಬದ ಪ್ರೀತಿ, ಪ್ರತಿಕೂಲ ಸಂದರ್ಭ, ಆಕರ್ಷಣೆ, ವ್ಯಾವಹಾರಿಕ ಚಾಣಾಕ್ಷತನ ಇವೆಲ್ಲ ಹನ್ನೆರಡು ರಾಶಿಗಳ ಇಂದಿನ ಭವಿಷ್ಯದಲ್ಲಿ ಇರಲಿದೆ.

ಟಿವಿ 9 ಕನ್ನಡ 14 Nov 2025 12:15 am

ಬಾಗಲಕೋಟೆ: ಕಬ್ಬು ಬೆಳೆಗಾರರ ಪ್ರತಿಭಟನೆಯಲ್ಲಿ ಕಲ್ಲೂ ತೂರಾಟ; ಎಎಸ್​ಪಿಗೆ ಗಾಯ, ನಿಷೇಧಾಜ್ಞೆ ಜಾರಿ

ಬಾಗಲಕೋಟೆಯಲ್ಲಿ ಕಬ್ಬು ಬೆಲೆಗೆ ಆಗ್ರಹಿಸಿ ನಡೆದಿರುವ ರೈತರ ಪ್ರತಿಭಟನೆ ಉಗ್ರ ಸ್ವರೂಪಕ್ಕೆ ತಿರುಗಿದೆ. 100ಕ್ಕೂ ಹೆಚ್ಚು ಟ್ರ್ಯಾಕ್ಟರ್​ಗಳು ಬೆಂಕಿಗಾಹುತಿಯಾಗಿವೆ. ಇನ್ನು ಈ ವೇಳೆ ಕಲ್ಲೂ ತೂರಾಟ ಉಂಟಾಗಿ ಎಎಸ್ಪಿ ಕಾಲಿಗೆ ಗಂಭೀರ ಗಾಯಾಗಿದೆ. ಮುಂಜಾಗ್ರತಾ ಕ್ರಮವಾಗಿ ಮೂರು ತಾಲೂಕುಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಟಿವಿ 9 ಕನ್ನಡ 13 Nov 2025 10:56 pm

ದೆಹಲಿ ಸ್ಫೋಟ ಪ್ರಕರಣದ ಅಪರಾಧಿಗಳಿಗೆ ಕಠಿಣ ಶಿಕ್ಷೆ; ಅಮಿತ್ ಶಾ ಶಪಥ

ದೆಹಲಿ ಸ್ಫೋಟದ ಅಪರಾಧಿಗಳಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಕಠಿಣ ಶಿಕ್ಷೆಯ ಎಚ್ಚರಿಕೆ ನೀಡಿದ್ದಾರೆ. ದೆಹಲಿಯ ಕೆಂಪು ಕೋಟೆಯ ಬಳಿ ನಡೆದ ಮಾರಕ ಕಾರು ಸ್ಫೋಟದಲ್ಲಿ ಭಾಗಿಯಾದವರಿಗೆ ಶಿಕ್ಷೆಯು ಭಾರತದಲ್ಲಿ ಮತ್ತೆ ಯಾರೂ ಅಂತಹ ದಾಳಿಯನ್ನು ನಡೆಸಲು ಧೈರ್ಯ ಮಾಡುವುದಿಲ್ಲ ಎಂಬ ಸಂದೇಶವನ್ನು ವಿಶ್ವಾದ್ಯಂತ ರವಾನಿಸುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಈ ದಾಳಿ ಹೇಡಿತನದ ಕೃತ್ಯ. ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸಲಾಗುವುದು ಎಂದು ಅಮಿತ್ ಶಾ ಹೇಳಿದ್ದಾರೆ.

ಟಿವಿ 9 ಕನ್ನಡ 13 Nov 2025 10:47 pm

ನೇರವಾಗಿ ನಾಮಿನೇಟ್ ಆದ ಕಾಕ್ರೋಚ್ ಸುಧಿ: ಮಾಡಿದ ತಪ್ಪು ಏನು?

ಕ್ಯಾಪ್ಟನ್ ಆಗಿರುವ ಮಾಳು ನಿಪನಾಳ ಅವರು ತಮ್ಮ ಅಧಿಕಾರ ಬಳಸಿ ನಾಮಿನೇಟ್ ಮಾಡಿದ್ದಾರೆ. ಕಾಕ್ರೋಚ್ ಸುಧಿ ಹಾಗೂ ರಘು ಅವರನ್ನು ನೇರವಾಗಿ ಈ ವಾರ ನಾಮಿನೇಟ್ ಮಾಡಲಾಗಿದೆ. ಒಟ್ಟು 8 ಜನರ ಮೇಲೆ ನಾಮಿನೇಷನ್ ತೂಗುಗತ್ತಿ ಇದೆ. ವಾರಂತ್ಯದ ಸಂಚಿಕೆಗಾಗಿ ಕಾತರ ಹೆಚ್ಚಾಗಿದೆ.

ಟಿವಿ 9 ಕನ್ನಡ 13 Nov 2025 10:44 pm

IND-A vs SA-A: ರುತುರಾಜ್ ಶತಕ; ಮೊದಲ ಏಕದಿನ ಪಂದ್ಯ ಗೆದ್ದ ಭಾರತ

India A vs South Africa A: ಭಾರತ ಎ ಹಾಗೂ ದಕ್ಷಿಣ ಆಫ್ರಿಕಾ ಎ ನಡುವಿನ ಮೊದಲ ಅನಧಿಕೃತ ಏಕದಿನ ಪಂದ್ಯದಲ್ಲಿ ಭಾರತ ಎ ತಂಡ 6 ವಿಕೆಟ್‌ಗಳ ಗೆಲುವು ಸಾಧಿಸಿದೆ. ರುತುರಾಜ್ ಗಾಯಕ್ವಾಡ್ 117 ರನ್ ಗಳಿಸಿ ತಂಡದ ಗೆಲುವಿಗೆ ಪ್ರಮುಖ ಕಾರಣರಾದರು. ದಕ್ಷಿಣ ಆಫ್ರಿಕಾ ಎ ನೀಡಿದ 286 ರನ್‌ಗಳ ಗುರಿಯನ್ನು ಭಾರತ ಎ 49.3 ಓವರ್‌ಗಳಲ್ಲಿ ಮುಟ್ಟಿ ಸರಣಿಯಲ್ಲಿ 1-0 ಮುನ್ನಡೆ ಗಳಿಸಿತು. ರಾಜ್‌ಕೋಟ್‌ನಲ್ಲಿ ಈ ಪಂದ್ಯ ನಡೆಯಿತು.

ಟಿವಿ 9 ಕನ್ನಡ 13 Nov 2025 10:33 pm

ದೆಹಲಿ ಸ್ಫೋಟದ ಆರೋಪಿಗೂ ಪುಲ್ವಾಮಾ ದಾಳಿಯ ಮಾಸ್ಟರ್​ಮೈಂಡ್ ಪತ್ನಿಗೂ ಇತ್ತು ಲಿಂಕ್!

ದೆಹಲಿಯ ಕೆಂಪು ಕೋಟೆ ಬಳಿಯ ಮೆಟ್ರೋ ನಿಲ್ದಾಣದ ಹೊರಗೆ ಸೋಮವಾರ ಕಾರು ಸ್ಫೋಟವಾಗಿತ್ತು. ಈ ಸ್ಫೋಟ ಪ್ರಕರಣದಲ್ಲಿ ದಿನದಿಂದ ದಿನಕ್ಕೆ ಹೊಸ ತಿರುವುಗಳು ಉಂಟಾಗುತ್ತಿವೆ. ಇದೀಗ ದೆಹಲಿ ಸ್ಫೋಟದ ಶಂಕಿತ ಭಯೋತ್ಪಾದಕಿ ಡಾ. ಶಾಹೀನ್ ಪುಲ್ವಾಮಾ ದಾಳಿಯ ಮಾಸ್ಟರ್‌ಮೈಂಡ್‌ನ ಪತ್ನಿಯೊಂದಿಗೆ ಸಂಪರ್ಕದಲ್ಲಿದ್ದಳು ಎಂಬ ವಿಷಯ ತನಿಖೆ ವೇಳೆ ಹೊರಬಿದ್ದಿದೆ.

ಟಿವಿ 9 ಕನ್ನಡ 13 Nov 2025 10:27 pm

IPL 2026 Trade: ಒಂದೇ ದಿನ ಇಬ್ಬರು ಸ್ಟಾರ್ ಆಟಗಾರರನ್ನು ಖರೀದಿಸಿದ ಮುಂಬೈ ಇಂಡಿಯನ್ಸ್‌

IPL 2026 Trade: ಐಪಿಎಲ್ 2026 ಹರಾಜಿಗೂ ಮುನ್ನ ಮುಂಬೈ ಇಂಡಿಯನ್ಸ್ ಟ್ರೇಡಿಂಗ್ ವಿಂಡೋ ಮೂಲಕ ದೊಡ್ಡ ಮಟ್ಟದ ಸಿದ್ಧತೆ ನಡೆಸಿದೆ. ಶಾರ್ದೂಲ್ ಠಾಕೂರ್ ಮತ್ತು ಶೆರ್ಫೇನ್ ರುದರ್‌ಫೋರ್ಡ್ ಅವರನ್ನು ನಗದು ಒಪ್ಪಂದದ ಮೂಲಕ ತಂಡಕ್ಕೆ ಸೇರಿಸಿಕೊಂಡಿದೆ. ಯಾವುದೇ ಆಟಗಾರರನ್ನು ಬಿಡುಗಡೆ ಮಾಡದೆ ಈ ಪ್ರಮುಖ ಆಲ್‌ರೌಂಡರ್‌ಗಳನ್ನು ಪಡೆದಿರುವುದು ಮುಂಬೈಗೆ ಬಲ ತುಂಬಿದೆ. ಇದು ಮುಂಬರುವ ಸೀಸನ್‌ಗೆ ತಂಡದ ಗೆಲುವಿಗೆ ನಿರ್ಣಾಯಕವಾಗಬಲ್ಲದು.

ಟಿವಿ 9 ಕನ್ನಡ 13 Nov 2025 10:17 pm