SENSEX
NIFTY
GOLD
USD/INR

Weather

22    C

ಡಿಜಿಟಲ್ ಸುದ್ದಿ ಮೂಲಗಳು

... ...View News by News Source

ಬಿಹಾರ: ಮಹಿಳೆಯ ವೋಟರ್​ ಐಡಿಯಲ್ಲಿ ಸಿಎಂ ನಿತೀಶ್ ಕುಮಾರ್ ಫೋಟೊ

ಮಹಿಳೆಯ ಮತದಾರರ ಗುರುತಿನ ಚೀಟಿಯಲ್ಲಿ ಸಿಎಂ ನಿತೀಶ್​ ಕುಮಾರ್ ಫೋಟೊ ಮುದ್ರಣವಾಗಿರುವ ಘಟನೆ ಬಿಹಾರದಲ್ಲಿ ನಡೆದಿದೆ. ಈ ಸಂದರ್ಭದಲ್ಲಿ ಮಹಿಳೆಯ ಪತಿ ಈ ಮಾಹಿತಿ ನೀಡಿದ್ದಾರೆ.ಹೀಗಾಗಿದೆ ಎಂದು ಯಾರ ಬಳಿಯೂ ಹೇಳದಂತೆ ಬಿಎಲ್​ಒ ಒತ್ತಾಯಿಸಿದ್ದರು ಎಂಬುದನ್ನು ಹೇಳಿದ್ದಾರೆ. ಚಂದನ್ ಕುಮಾರ್ ಎಂಬುವವರು ತಮ್ಮ ಪತ್ನಿಯ ಮತದಾರರ ಗುರುತಿನ ಚೀಟಿ ಅಂಚೆ ಮೂಲಕ ಬಂದಿತ್ತು ಎಂದು ಮಾಹಿತಿ ನೀಡಿದ್ದಾರೆ.

ಟಿವಿ 9 ಕನ್ನಡ 10 Jul 2025 7:52 am

ಲ್ಯಾಂಬೋರ್ಗಿನಿ ಇದ್ದರೂ ಸ್ವಿಫ್ಟ್​ನಲ್ಲಿ ಓಡಾಡುತ್ತಾರೆ ಈ ನಟಿ..

ಶ್ರದ್ಧಾ ಕಪೂರ್ ಅವರು ಬಾಲಿವುಡ್‌ನ ಯಶಸ್ವಿ ನಟಿ. ಅವರ ಐಷಾರಾಮಿ ಜೀವನಶೈಲಿಯ ಹೊರತಾಗಿಯೂ, ಅವರು ಸರಳವಾದ ಜೀವನ ನಡೆಸುತ್ತಾರೆ. ಮಾರುತಿ ಸುಜುಕಿ ಸ್ವಿಫ್ಟ್ ಕಾರನ್ನು ಓಡಿಸುವುದು ಜನರ ಗಮನ ಸೆಳೆದಿದೆ. ಇದು ಅವರ ಸರಳತೆಯನ್ನು ತೋರಿಸುತ್ತದೆ. ಅವರ ಕಾರು ಸಂಗ್ರಹದಲ್ಲಿ ಲ್ಯಾಂಬೋರ್ಗಿನಿ ಮತ್ತು ರೇಂಜ್ ರೋವರ್‌ಗಳಂತಹ ಐಷಾರಾಮಿ ಕಾರುಗಳೂ ಸೇರಿವೆ.

ಟಿವಿ 9 ಕನ್ನಡ 10 Jul 2025 7:51 am

ವಿಎಫ್​ಎಕ್ಸ್ ಮಶಿನ್, 86 ಕ್ಯಾಮೆರಾಗಳ ಮಧ್ಯೆ ಶೂಟ್ ಮಾಡಿದ ಯಶ್

Ramayana Movie: ಇಂದಿರಾ ಕೃಷ್ಣ ಅವರು ರಾಮಾಯಣ ಚಿತ್ರದಲ್ಲಿ ಕೌಸಲ್ಯಾ ಪಾತ್ರ ನಿರ್ವಹಿಸಿದ್ದಾರೆ. ಚಿತ್ರದಲ್ಲಿ 86 ಕ್ಯಾಮೆರಾಗಳು ಮತ್ತು ಅತ್ಯಾಧುನಿಕ ವಿಎಫ್ಎಕ್ಸ್ ತಂತ್ರಜ್ಞಾನ ಬಳಸಲಾಗಿದೆ. ಚಿತ್ರೀಕರಣದ ಅನುಭವವನ್ನು ಹಂಚಿಕೊಂಡ ಇಂದಿರಾ ಅವರು, ವಿಎಫ್ಎಕ್ಸ್ಗಾಗಿ ತಮ್ಮ ದೇಹದ ಅಳತೆ ತೆಗೆದುಕೊಳ್ಳಲಾಗಿದ್ದ ವಿಷಯವನ್ನು ತಿಳಿಸಿದ್ದಾರೆ.

ಟಿವಿ 9 ಕನ್ನಡ 10 Jul 2025 7:33 am

ಇಂಗ್ಲೆಂಡ್​ನಲ್ಲಿ ಹೊಸ ಇತಿಹಾಸ ನಿರ್ಮಿಸಿದ ಟೀಮ್ ಇಂಡಿಯಾ

England Women vs India Women: ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯ ಮೊದಲ ಮ್ಯಾಚ್​ನಲ್ಲಿ ಭಾರತ ತಂಡ 97 ರನ್​ಗಳ ಭರ್ಜರಿ ಜಯ ಸಾಧಿಸಿತ್ತು. ಇನ್ನು ದ್ವಿತೀಯ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು 24 ರನ್​ಗಳಿಂದ ಸೋಲಿಸಿತ್ತು. ಮೂರನೇ ಪಂದ್ಯದಲ್ಲಿ ಆಂಗ್ಲ ಪಡೆ 5 ರನ್​ಗಳ ರೋಚಕ ಜಯ ಸಾಧಿಸಿದ್ದರು. ಇದೀಗ ನಾಲ್ಕನೇ ಮ್ಯಾಚ್​ನಲ್ಲಿ 6 ವಿಕೆಟ್​ಗಳ ಗೆಲುವು ದಾಖಲಿಸಿ ಟೀಮ್ ಇಂಡಿಯಾ ಸರಣಿ ವಶಪಡಿಸಿಕೊಂಡಿದೆ.

ಟಿವಿ 9 ಕನ್ನಡ 10 Jul 2025 7:23 am

ಗಾಂಜಾ ನಶೆಯಲ್ಲೇ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ: ಬೆಂಗಳೂರು ಹೊರವಲಯದಲ್ಲಿ ಭೀಕರ ಕೃತ್ಯ

ಬೆಂಗಳೂರು ಹೊರವಲಯದ ತಾವರೆಕೆರೆಯಲ್ಲಿ 14 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಕಾಮುಕನೊಬ್ಬ ಆಕೆಯನ್ನು ಭೀಕರವಾಗಿ ಕೊಲೆ ಮಾಡಿ ಪರಾರಿಯಾದ ಘಟನೆ ಬುಧವಾರ ನಡೆದಿದೆ. ತಂದೆ, ತಾಯಿ ಹಾಗೂ ಸಹೋದರ ಕೂಲಿ ಕೆಲಸಕ್ಕೆ ಹೋಗಿದ್ದಾಗ ಮಟಮಟ ಮಧ್ಯಾಹ್ನವೇ ಮನೆಗೆ ನುಗ್ಗಿದ್ದ ಆರೋಪಿ ಕೃತ್ಯ ಎಸಗಿ ಪರಾರಿಯಾಗಿದ್ದಾನೆ.

ಟಿವಿ 9 ಕನ್ನಡ 10 Jul 2025 7:23 am

Karnataka Rains: ಕರ್ನಾಟಕದ ಈ ಜಿಲ್ಲೆಗಳಲ್ಲಿ ಜುಲೈ 16ರವರೆಗೂ ಮಳೆ

ಕರ್ನಾಟಕದಾದ್ಯಂತ ಜುಲೈ 16ರವರೆಗೂ ಭಾರಿ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಕರಾವಳಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ. ಬೆಳಗಾವಿ,ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿಯಲ್ಲಿ ಒಣಹವೆ ಇರಲಿದ್ದು, ಆಗೊಮ್ಮೆ, ಈಗೊಮ್ಮೆ ಒಂದೊಂದು ಬಾರಿ ಮಳೆ ಬರಲಿದೆ. ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ,ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು, ವಿಜಯನಗರದಲ್ಲಿ ಮಳೆಯಾಗಲಿದೆ.

ಟಿವಿ 9 ಕನ್ನಡ 10 Jul 2025 7:14 am

ಟಾಲಿವುಡ್​​ನ ಸ್ಟಾರ್ ಹೀರೋ ಚಿತ್ರಕ್ಕೆ ನಾಯಕಿ ಆದ ರಶ್ಮಿಕಾ ಮಂದಣ್ಣ

ರಶ್ಮಿಕಾ ಮಂದಣ್ಣ ಅವರು ಅಲ್ಲು ಅರ್ಜುನ್ ಅವರೊಂದಿಗೆ ಮತ್ತೊಂದು ಚಿತ್ರದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಟಾಲಿವುಡ್ ಅಭಿಮಾನಿಗಳಲ್ಲಿ ಸಂತೋಷವನ್ನು ತಂದಿದೆ. 'AA22xA6' ಎಂಬ ಚಿತ್ರದಲ್ಲಿ ಅವರು ನಟಿಸಲಿದ್ದಾರೆ. ಈ ಚಿತ್ರದಲ್ಲಿ ದೀಪಿಕಾ ಪಡುಕೋಣೆ, ಜಾನ್ವಿ ಕಪೂರ್ ಮತ್ತು ಮೃಣಾಲ್ ಠಾಕೂರ್ ಕೂಡ ನಟಿಸುತ್ತಿದ್ದಾರೆ.

ಟಿವಿ 9 ಕನ್ನಡ 10 Jul 2025 7:00 am

ದೆಹಲಿಯಲ್ಲಿ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಕುತೂಹಲದ ನಡೆ: ಇಂದು ಸಂಜೆ ಹೈಕಮಾಂಡ್ ಭೇಟಿ

ಕರ್ನಾಟಕ ಕಾಂಗ್ರೆಸ್‌ನಲ್ಲಿ ಅಧಿಕಾರ ಹಂಚಿಕೆ ಕುರಿತು ತೀವ್ರ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲೇ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ದೆಹಲಿಯಲ್ಲಿ ಹೈಕಮಾಂಡ್‌ನೊಂದಿಗೆ ಚರ್ಚೆ ನಡೆಸಲು ಸಮಯ ನಿಗದಿ ಆಗಿದೆ. ಇಂದು ಸಂಜೆ ಉಭಯ ನಾಯಕರು ರಾಹುಲ್ ಗಾಂಧಿ ಅವರನ್ನು ಭೇಟಿಯಾಗಲಿದ್ದಾರೆ. ಈ ಮಧ್ಯೆ, ಕೆಲ ಶಾಸಕರು ನಾಯಕತ್ವ ಬದಲಾವಣೆ ವಿಚಾರವನ್ನು ಪ್ರಸ್ತಾಪಿಸಿದ್ದಾರೆ ಎಂದು ಸುರ್ಜೇವಾಲ ಹೇಳಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಟಿವಿ 9 ಕನ್ನಡ 10 Jul 2025 6:53 am

ಗುರುಪೂರ್ಣಿಮೆಯ ರಹಸ್ಯ ಹಾಗೂ ಆಚರಣೆಯ ಮಹತ್ವ ಗೊತ್ತಾ?

ಗುರುಪೂರ್ಣಿಮೆ ಹಿಂದೂಗಳ ಪ್ರಮುಖ ಹಬ್ಬವಾಗಿದ್ದು, ಗುರುಗಳನ್ನು ಸ್ಮರಿಸುವ ಮತ್ತು ಅವರನ್ನು ಗೌರವಿಸುವ ದಿನ. ವೇದವ್ಯಾಸರ ಜನ್ಮದಿನವಾಗಿಯೂ ಇದನ್ನು ಆಚರಿಸಲಾಗುತ್ತದೆ. ಗುರುಗಳ ದರ್ಶನ, ಪಾದಪೂಜೆ, ದಾನ, ಭಜನೆ ಮುಂತಾದ ಕ್ರಿಯೆಗಳ ಮೂಲಕ ಗುರುಪೂರ್ಣಿಮೆಯನ್ನು ಆಚರಿಸಲಾಗುತ್ತದೆ. ಇದರಿಂದ ಆರೋಗ್ಯ, ಮಾನಸಿಕ ಸ್ಥೈರ್ಯ ಮತ್ತು ಆತ್ಮವಿಶ್ವಾಸ ಹೆಚ್ಚಾಗುತ್ತದೆ ಎಂದು ನಂಬಕೆ ಇದೆ.

ಟಿವಿ 9 ಕನ್ನಡ 10 Jul 2025 6:50 am

ಗುರುಪೂರ್ಣಿಮೆ ದಿನದಂದು ಯಾವೆಲ್ಲಾ ರಾಶಿಗಳಿಗೆ ಗುರುಬಲ ಯೋಗ ತಿಳಿಯಿರಿ

ಜುಲೈ 10ರ ದಿನದ ರಾಶಿ ಭವಿಷ್ಯವನ್ನು ಡಾ. ಬಸವರಾಜ ಗುರೂಜಿಯವರು ವಿಡಿಯೋದಲ್ಲಿ ವಿವರಿಸಿದ್ದಾರೆ. ಪ್ರತಿ ರಾಶಿಯವರಿಗೂ ಆರ್ಥಿಕ, ವೃತ್ತಿಪರ ಮತ್ತು ವೈಯಕ್ತಿಕ ಜೀವನದ ಬಗ್ಗೆ ಮುನ್ಸೂಚನೆಗಳನ್ನು ನೀಡಲಾಗಿದೆ. ಜೊತೆಗೆ ಇಂದು ಗುರುಪೂರ್ಣಿಮೆ ಕೂಡ ಇದೆ. ಹಾಗಾಗಿ ಯಾವೆಲ್ಲಾ ರಾಶಿಗಳಿಗೆ ಶುಭ ಕಾದಿದೆ ತಿಳಿಯಿರಿ.

ಟಿವಿ 9 ಕನ್ನಡ 10 Jul 2025 6:43 am

ದೌರ್ಬಲ್ಯವನ್ನೇ ಅಸ್ತ್ರವಾಗಿಸಿಕೊಂಡು ಲಾಭ ಪಡಯುವಿರಿ

ಶಾಲಿವಾಹನ ಶಕವರ್ಷ 1948ರ ಉತ್ತರಾಯಣ, ಗ್ರೀಷ್ಮ ಋತುವಿನ ಆಷಾಢ ಮಾಸ ಶುಕ್ಲ ಪಕ್ಷದ ಪೂರ್ಣಿಮಾ ತಿಥಿ ಗುರುವಾರ ಆಡಳಿತ ಬದಲಾವಣೆ, ಪ್ರಭಾವಿಗಳ ಭೇಟಿ, ಅದೃಷ್ಟದ ಸೂಚನೆ, ಸಮಾಜಸೇವೆಯಿಂದ ಆಯಾಸ ಇವೆಲ್ಲ ಇರಲಿದೆ. ಇಂದಿನ ದಿನ ಭವಿಷ್ಯದಲ್ಲಿ ಯಾವ ರಾಶಿಗೆ ಏನು ಫಲಾಫಲ ಎನ್ನುವುದನ್ನು ತಿಳಿದುಕೊಳ್ಳಿ.

ಟಿವಿ 9 ಕನ್ನಡ 10 Jul 2025 1:54 am

ವ್ಯಾಪಾರದಲ್ಲಿ ಮೋಸದಿಂದ ನಷ್ಟವಾಗಬಹುದು

ಶಾಲಿವಾಹನ ಶಕವರ್ಷ 1948ರ ಉತ್ತರಾಯಣ, ಗ್ರೀಷ್ಮ ಋತುವಿನ ಆಷಾಢ ಮಾಸ ಶುಕ್ಲ ಪಕ್ಷದ ಪೂರ್ಣಿಮಾ ತಿಥಿ ಗುರುವಾರ ಆಡಳಿತ ಬದಲಾವಣೆ, ಪ್ರಭಾವಿಗಳ ಭೇಟಿ, ಅದೃಷ್ಟದ ಸೂಚನೆ, ಸಮಾಜಸೇವೆಯಿಂದ ಆಯಾಸ ಇವೆಲ್ಲ ಇರಲಿದೆ. ಇಂದಿನ ದಿನ ಭವಿಷ್ಯದಲ್ಲಿ ಯಾವ ರಾಶಿಗೆ ಏನು ಫಲಾಫಲ ಎನ್ನುವುದನ್ನು ತಿಳಿದುಕೊಳ್ಳಿ.

ಟಿವಿ 9 ಕನ್ನಡ 10 Jul 2025 1:53 am

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಜುಲೈ 10ರ ದಿನಭವಿಷ್ಯ

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಜುಲೈ 10ರ ಗುರುವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಟಿವಿ 9 ಕನ್ನಡ 10 Jul 2025 1:44 am

IND vs ENG: ಲಾರ್ಡ್ಸ್‌ ಟೆಸ್ಟ್ ಎಷ್ಟು ಗಂಟೆಗೆ ಆರಂಭ? ಯಾವ ಚಾನೆಲ್​ನಲ್ಲಿ ನೇರಪ್ರಸಾರ?

India vs England 3rd Test: ಲಂಡನ್‌ನ ಐತಿಹಾಸಿಕ ಲಾರ್ಡ್ಸ್ ಕ್ರೀಡಾಂಗಣದಲ್ಲಿ ಜುಲೈ 10 ರಿಂದ ಆರಂಭವಾಗುವ ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾ ಸಜ್ಜಾಗಿದೆ. ಈ ಪಂದ್ಯ ಎರಡೂ ತಂಡಗಳಿಗೂ ನಿರ್ಣಾಯಕವಾಗಿದ್ದು, ಸರಣಿಯಲ್ಲಿ ಮುನ್ನಡೆ ಸಾಧಿಸಲು ಗೆಲುವು ಅತ್ಯಗತ್ಯ. ಮಳೆಯ ಯಾವುದೇ ಭಯವಿಲ್ಲದೆ ಅಭಿಮಾನಿಗಳು ಪಂದ್ಯ ವೀಕ್ಷಿಸಬಹುದು. ಸೋನಿ ಸ್ಪೋರ್ಟ್ಸ್ ಮತ್ತು ಜಿಯೋ ಹಾಟ್‌ಸ್ಟಾರ್‌ನಲ್ಲಿ ಪಂದ್ಯದ ಲೈವ್ ಸ್ಟ್ರೀಮಿಂಗ್ ಲಭ್ಯವಿದೆ.

ಟಿವಿ 9 ಕನ್ನಡ 9 Jul 2025 10:52 pm

ಮೂರೇ ಗಂಟೆಗಳಲ್ಲಿ ಸಂಪೂರ್ಣ ಚಂದಾದಾರರನ್ನು ಪಡೆದ ಅದಾನಿ ಎಂಟರ್‌ಪ್ರೈಸಸ್‌ನ 1,000 ಕೋಟಿ ರೂ. ಬಾಂಡ್

ಅದಾನಿ ಎಂಟರ್‌ಪ್ರೈಸಸ್ ಲಿಮಿಟೆಡ್‌ನ 1,000 ಕೋಟಿ ರೂ. ಬಾಂಡ್ ವಿತರಣೆ ಪ್ರಾರಂಭವಾದ ಕೇವಲ ಮೂರೇ ಗಂಟೆಗಳಲ್ಲಿ ಸಂಪೂರ್ಣವಾಗಿ ಚಂದಾದಾರರನ್ನು ಪಡೆದಿದೆ ಎಂದು ಸ್ಟಾಕ್ ಎಕ್ಸ್‌ಚೇಂಜ್ ಡೇಟಾ ತೋರಿಸಿದೆ. ಇಂದು ಪ್ರಾರಂಭವಾಗಿ ಜುಲೈ 22ರಂದು ಮುಕ್ತಾಯಗೊಳ್ಳಬೇಕಿದ್ದ ಕನ್ವರ್ಟಿಬಲ್ ಅಲ್ಲದ ಡಿಬೆಂಚರ್ (NCD) ವಿತರಣೆಯು ಸಂಪೂರ್ಣವಾಗಿ ಚಂದಾದಾರರಾಗಿರುವುದರಿಂದ ಅವಧಿಪೂರ್ವ ಮುಕ್ತಾಯವನ್ನು ಕಾಣಬಹುದು ಎಂದು ಮೂಲಗಳು ತಿಳಿಸಿವೆ. NCDಗಳು ಹೂಡಿಕೆದಾರರಿಂದ ಹಣವನ್ನು ಸಂಗ್ರಹಿಸಲು ಕಂಪನಿಗಳು ನೀಡುವ ಸಾಲ ಸಾಧನಗಳಾಗಿವೆ. ಇದು ಸ್ಥಿರ ಬಡ್ಡಿ ಪಾವತಿಗಳ ಭರವಸೆ ನೀಡುತ್ತದೆ.

ಟಿವಿ 9 ಕನ್ನಡ 9 Jul 2025 10:36 pm

T20 World Cup 2026 qualifier: ಫುಟ್‌ಬಾಲ್‌ ಜೊತೆಗೆ ಕ್ರಿಕೆಟ್​ನಲ್ಲೂ ಜಾದೂ ಮಾಡುತ್ತಿದೆ ಇಟಲಿ

T20 World Cup 2026 qualifier: ಐಸಿಸಿ ಟಿ20 ವಿಶ್ವಕಪ್ ಯುರೋಪಿಯನ್ ಕ್ವಾಲಿಫೈಯರ್‌ನಲ್ಲಿ ಇಟಲಿ ತಂಡವು ಸ್ಕಾಟ್ಲೆಂಡ್ ತಂಡವನ್ನು ಸೋಲಿಸುವ ಮೂಲಕ 2026ರ ಟಿ20 ವಿಶ್ವಕಪ್‌ಗೆ ಅರ್ಹತೆ ಪಡೆಯುವತ್ತ ಮುನ್ನಡೆಯುತ್ತಿದೆ. ಸ್ಕಾಟ್ಲೆಂಡ್ ಮತ್ತು ನೆದರ್ಲ್ಯಾಂಡ್ಸ್ ಪ್ರಬಲ ತಂಡಗಳಾಗಿದ್ದರೂ, ಇಟಲಿ ಅದ್ಭುತ ಪ್ರದರ್ಶನ ನೀಡುತ್ತಿದೆ. ಈ ಗೆಲುವಿನಿಂದ ಇಟಲಿ ಟೂರ್ನಮೆಂಟ್‌ನಲ್ಲಿ ಅಗ್ರ ಸ್ಥಾನದಲ್ಲಿದೆ.

ಟಿವಿ 9 ಕನ್ನಡ 9 Jul 2025 10:24 pm

ಶಕ್ತಿ ಯೋಜನೆ: 500 ಕೋಟಿ ತಲುಪಲಿರುವ ಮಹಿಳಾ ಪ್ರಯಾಣಿಕರ ಸಂಖ್ಯೆ

ಕರ್ನಾಟಕದ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಶಕ್ತಿ ಯೋಜನೆ ಜಾರಿಗೆ ಬಂದು ಎರಡು ವರ್ಷಗಳು ಪೂರ್ಣಗೊಂಡಿದೆ. ಕೆಲವೇ ದಿನಗಳಲ್ಲಿ ರಾಜ್ಯ ಸಾರಿಗೆ ಇಲಾಖೆಯ ಇತಿಹಾಸದಲ್ಲಿ ಹೊಸ ದಾಖಲೆ ಸೃಷ್ಟಿಯಾಗಲಿದೆ. ಶಕ್ತಿ ಯೋಜನೆಯ ಯಶಸ್ಸನ್ನು ಆಚರಿಸಲು ಸರ್ಕಾರ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಏನದು ಹೊಸ ದಾಖಲೆ? ಇಲ್ಲಿದೆ ವಿವರ

ಟಿವಿ 9 ಕನ್ನಡ 9 Jul 2025 10:18 pm

ಸ್ವಾತಂತ್ರ್ಯ ಹೋರಾಟದ ವೇಳೆ ನಮೀಬಿಯಾದ ಜೊತೆ ನಿಂತಿದ್ದಕ್ಕೆ ಭಾರತಕ್ಕೆ ಹೆಮ್ಮೆಯಿದೆ; ಸಂಸತ್​​ನಲ್ಲಿ ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರು ನಮೀಬಿಯಾ ಸಂಸತ್ತಿನಲ್ಲಿ ತಮ್ಮ ಭಾಷಣವನ್ನು ಪ್ರಾರಂಭಿಸುತ್ತಿದ್ದಂತೆ ಸಂಸತ್ ಸದಸ್ಯರು ಎದ್ದು ನಿಂತು ಚಪ್ಪಾಳೆ ತಟ್ಟಿದ್ದಾರೆ. ಇಂದು ನಮೀಬಿಯಾ ಸಂಸತ್ ಜಂಟಿ ಅಧಿವೇಶನದಲ್ಲಿ ಮಾತನಾಡಿದ ಮೋದಿ ‘ಭಾರತವು ಆಫ್ರಿಕಾವನ್ನು ಕೇವಲ ಕಚ್ಚಾ ವಸ್ತುಗಳ ಮೂಲವಾಗಿ ನೋಡಿಲ್ಲ’ ಎಂದಿದ್ದಾರೆ.

ಟಿವಿ 9 ಕನ್ನಡ 9 Jul 2025 10:06 pm