SENSEX
NIFTY
GOLD
USD/INR

Weather

24    C

ಡಿಜಿಟಲ್ ಸುದ್ದಿ ಮೂಲಗಳು

... ...View News by News Source

ಆಸ್ತಿಗಾಗಿ ತಂದೆ ಹಾಗೂ ಅಣ್ಣನನ್ನೇ ಬರ್ಬರವಾಗಿ ಕೊಂದ ತಮ್ಮ

ಹಾಸನ,ಜು.10- ಆಸ್ತಿ ವಿಚಾರವಾಗಿ ಜನ್ಮ ಕೊಟ್ಟ ತಂದೆ ಹಾಗೂ ಅಣ್ಣನನ್ನು ತಮ್ಮನೇ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಹೊಳೆನರಸೀಪುರ ತಾಲ್ಲೂಕಿನ ಗಂಗೂರು ಗ್ರಾಮದಲ್ಲಿ ನಡೆದಿದೆ.ದೇವೇಗೌಡ (70), ಮಂಜುನಾಥ (50) ಕೊಲೆಯಾದ ದುರ್ದೈವಿಗಳು. ಒಂದೇ ಮನೆಯಲ್ಲಿ ತಂದೆ, ತಾಯಿ ಜೊತೆ ಮಂಜುನಾಥ ವಾಸವಾಗಿದ್ದು, ಅದೇ ಮನೆಯಲ್ಲಿ ಆರೋಪಿ ಮೋಹನ್ ಕೂಡ ಪ್ರತ್ಯೇಕವಾಗಿ ವಾಸವಾಗಿದ್ದ. ಇಬ್ಬರೂ ಮಕ್ಕಳು ಕೂಡ ಅವಿವಾಹಿತರಾಗಿದ್ದರು. ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಕುಟುಂಬದಲ್ಲಿ ಆಗಾಗ್ಗೆ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ನಿನ್ನೆಯೂ ಕೂಡ ಆಸ್ತಿವಿಚಾರಕ್ಕೆ ಜಗಳ ನಡೆದಿದ್ದು, ಇದರಿಂದ […] The post ಆಸ್ತಿಗಾಗಿ ತಂದೆ ಹಾಗೂ ಅಣ್ಣನನ್ನೇ ಬರ್ಬರವಾಗಿ ಕೊಂದ ತಮ್ಮ appeared first on Eesanje News .

ಈಸಂಜೆ 10 Jul 2025 10:58 am

ದರ್ಶನ್​ಗೆ ದೇವರ ಮೇಲೆ ಎಷ್ಟು ಭಕ್ತಿ ನೋಡಿ; ಇಲ್ಲಿದೆ ವಿಡಿಯೋ ಸಾಕ್ಷಿ

ನಟ ದರ್ಶನ್ ಅವರು ರೇಣುಕಾ ಸ್ವಾಮಿ ಕೊಲೆ ಕೇಸ್​ನಲ್ಲಿ ಇಂದು ಕೋರ್ಟ್​ ಎದುರು ಹಾಜರಿ ಹಾಕಬೇಕಿದೆ. ಅದಕ್ಕೂ ಮೊದಲು ಅವರು ಮನೆಯ ಹೊರಗೆ ಕಾಣಿಸಿಕೊಂಡದರು. ದರ್ಶನ್ ದೈವ ಭಕ್ತ. ಹೀಗಾಗಿ, ಮನೆಯಿಂದ ಹೊರಡುವ ಮುನ್ನ ಅವರು ತುಳಸಿ ಗಿಡಕ್ಕೆ ಕೈ ಮುಗಿದರು.

ಟಿವಿ 9 ಕನ್ನಡ 10 Jul 2025 10:52 am

Video: ಐದು ದೇಶಗಳ ಪ್ರವಾಸ ಮುಗಿಸಿ ಭಾರತಕ್ಕೆ ಮರಳಿದ ಪ್ರಧಾನಿ ಮೋದಿ

ಧಾನಿ ನರೇಂದ್ರ ಮೋದಿ(Narendra Modi) ಐದು ದೇಶಗಳ ಪ್ರವಾಸ ಕೈಗೊಂಡಿದ್ದರು. ಪ್ರಧಾನಿ ಮೋದಿ ಮೊದಲು ಘಾನಾಗೆ ಭೇಟಿ ನೀಡಿದ್ದರು. ನಂತರ ಅವರು ಕೆರಿಬಿಯನ್ ದೇಶವಾದ ಟ್ರಿನಿಡಾಡ್ ಮತ್ತು ಟೊಬೆಗೊಗೆ ಭೇಟಿ ನೀಡಿದ್ದರು.ಪ್ರವಾಸದ ಮೂರನೇ ಹಂತದಲ್ಲಿ, ಪ್ರಧಾನಿ ಮೋದಿ ಅರ್ಜೆಂಟೀನಾಗೆ ಹೋಗಿದ್ದರು. ಇದರ ನಂತರ ಬ್ರೆಜಿಲ್ ತಲುಪಿದ್ದರು.ಇಲ್ಲಿ ಅವರು ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಿದರು ಮತ್ತು ಬ್ರೆಸಿಲಿಯಾ ರಾಜ್ಯ ಭೇಟಿ ನೀಡಿದ್ದರು. ಇದರ ನಂತರ, ಕೊನೆಯ ಹಂತದಲ್ಲಿ, ಪ್ರಧಾನಿ ಮೋದಿ ನಮೀಬಿಯಾಕ್ಕೆ ಹೋಗಿದ್ದರು. ಐದು ದೇಶಗಳ ಭೇಟಿಯ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಹಿಂತಿರುಗಿದ್ದಾರೆ.

ಟಿವಿ 9 ಕನ್ನಡ 10 Jul 2025 10:49 am

Video : ರೈಲ್ವೆ ಹಳಿ ಮೇಲೆ ಮರಿಗೆ ಜನ್ಮ ನೀಡಿದ ಆನೆ : ಎರಡು ಗಂಟೆಗಳ ಕಾಲ ಸ್ಥಗಿತಗೊಂಡ ರೈಲು

ಮಗುವಿಗೆ ಜನ್ಮ ನೀಡುವುದು ಎಂದರೆ ಅದು ಹುಟ್ಟು ಸಾವಿನ ನಡುವಿನ ಹೋರಾಟ. ಪ್ರಾಣಿಗಳು ಕೂಡ ಈ ವೇಳೆಯಲ್ಲಿ ವಿಪರೀತ ನೋವನ್ನು ಅನುಭವಿಸುತ್ತವೆ. ಮಾನವೀಯತೆಗೆ ಈ ವಿಡಿಯೋ ಸಾಕ್ಷಿಯಾಗಿದ್ದು, ರೈಲು ಹಳಿಯಲ್ಲೇ ಆನೆಯೊಂದು ಮರಿಗೆ ಜನ್ಮ ನೀಡಿದ್ದು ಇದಕ್ಕಾಗಿ ರೈಲ್ವೆ ಅಧಿಕಾರಿಗಳು ಸರಕು ರೈಲನ್ನು ಎರಡು ಗಂಟೆಗಳ ಕಾಲ ಸ್ಥಗಿತಗೊಳಿಸಿದ್ದಾರೆ. ಈ ಹೃದಯಸ್ಪರ್ಶಿ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಮೆಚ್ಚುಗೆಗೆ ಪಾತ್ರವಾಗಿದೆ.

ಟಿವಿ 9 ಕನ್ನಡ 10 Jul 2025 10:47 am

ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ ಅಬ್ಬರ: ಐತಿಹಾಸಿಕ ಬಂಗಾರೇಶ್ವರ ದೇವಾಲಯ ಸಂಪೂರ್ಣ ಜಲಾವೃತ

ಭಾರಿ ಮಳೆಯ ಕಾರಣ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಗುಡ್ನಾಪುರ ಗ್ರಾಮದ ಐತಿಹಾಸಿಕ ಬಂಗಾರೇಶ್ವರ ದೇವಸ್ಥಾನ ಜಲಾವೃತಗೊಂಡಿದೆ. ಜುಲೈ ಮೊದಲ ವಾರದಲ್ಲೇ ದೇಗುಲ ಮುಳುಗಡೆಯಾಗಿದ್ದು, ಇದೇ ಮೊದಲು ಎನ್ನಲಾಗಿದೆ. ಇದರಿಂದಾಗಿ, ಈ ವರ್ಷವಿಡೀ ಉತ್ತಮ ಮಳೆಯಾಗಲಿದೆ ಎಂದು ಭಕ್ತರು ನಂಬಿದ್ದಾರೆ.

ಟಿವಿ 9 ಕನ್ನಡ 10 Jul 2025 10:41 am

IND VS ENG: ಲಾರ್ಡ್ಸ್​ನಲ್ಲಿ ಹೆಚ್ಚು ಕಹಿಯನ್ನೇ ಉಂಡಿರುವ ಭಾರತ: ಈ ಬಾರಿ ಕಥೆ ಬದಲಾಗುತ್ತಾ?

Lords Cricket Ground: ಕ್ರಿಕೆಟ್ ಕಾಶಿ ಎಂದು ಕರೆಯಲ್ಪಡುವ ಈ ಮೈದಾನದಲ್ಲಿ ಭಾರತ ಒಟ್ಟು 19 ಟೆಸ್ಟ್ ಪಂದ್ಯಗಳನ್ನು ಆಡಿದೆ. ಈ ಪೈಕಿ 12 ಪಂದ್ಯಗಳನ್ನು ಸೋತಿದೆ. ಕೇವಲ 3 ಪಂದ್ಯಗಳನ್ನು ಗೆದ್ದಿದೆ. ಉಳಿದ 4 ಪಂದ್ಯಗಳು ಡ್ರಾ ಆಗಿವೆ. ಈ ಮೂರು ಗೆಲುವುಗಳಲ್ಲಿ ಎರಡು ಕಳೆದ ಮೂರು ಪ್ರವಾಸಗಳಲ್ಲಿ ಸಾಧಿಸಲಾಗಿದೆ ಎಂಬುದು ಗಮನಾರ್ಹ.

ಟಿವಿ 9 ಕನ್ನಡ 10 Jul 2025 10:33 am

Earthquake: ಉತ್ತರ ಪ್ರದೇಶ, ದೆಹಲಿ ಮತ್ತು ಹರ್ಯಾಣದಲ್ಲಿ 4.4 ತೀವ್ರತೆಯ ಭೂಕಂಪ

ಇಂದು ದೆಹಲಿ, ಉತ್ತರ ಪ್ರದೇಶ, ಹರ್ಯಾಣದಲ್ಲಿ ಭೂಕಂಪದ ಅನುಭವವಾಗಿದೆ. ರಿಕ್ಟರ್ ಮಾಪಕದಲ್ಲಿ 4.4 ತೀವ್ರತೆ ದಾಖಲಾಗಿದೆ. ಗುರುವಾರ ಬೆಳಗ್ಗೆ 9.04ಕ್ಕೆ ಭೂಮಿ ತೀವ್ರವಾಗಿ ಕಂಪಿಸಿತ್ತು. ದೆಹಲಿ, ನೋಯ್ಡಾ, ಗಾಜಿಯಾಬಾದ್, ಗುರುಗ್ರಾಮ್, ಫರಿದಾಬಾದ್, ಜಿಂದ್, ರೋಹ್ಟಕ್, ಭಿವಾನಿ, ಝಜ್ಜರ್, ಬಹದ್ದೂರ್‌ಗಢ ಸೇರಿದಂತೆ ಹಲವು ನಗರಗಳಲ್ಲಿ ಕಂಪನದ ಅನುಭವವಾಯಿತು. ಭೂಕಂಪದ ಕೇಂದ್ರಬಿಂದು ಹರ್ಯಾಣ.

ಟಿವಿ 9 ಕನ್ನಡ 10 Jul 2025 10:31 am

ಕೇವಲ ಅಕ್ಕಿಯಿಂದ ಮಾತ್ರ ಬಡವರ ಹೊಟ್ಟೆ ತುಂಬುತ್ತಾ? ಅವರಿಗೆ ದುಡಿಯುವುದು ತಪ್ಪಲ್ಲ: ಯತೀದ್ರ ಸಿದ್ದರಾಮಯ್ಯ

ಗ್ಯಾರಂಟಿ ಯೋಜನೆಗಳ ಬಗ್ಗೆ ಮುಖ್ಯಮಂತ್ರಿಯವರ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ನೀಡಿರುವ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ ಯತೀಂದ್ರ, ರಾಯರೆಡ್ಡಿ ನಂತರ ಸ್ಪಷ್ಟನೆ ನೀಡಿರುವ ವಿಷಯ ಯಾರೂ ಮಾತಾಡಲ್ಲ, ಸರ್ಕಾರ ರಚನೆಯಾದಾಗಿನಿಂದ ಯೋಜನೆಗಳು ನಿಲ್ಲುತ್ತವೆ ಅಂತ ಹೇಳುತ್ತಿದ್ದಾರೆ, ಆದರೆ ಅವು ಯಾವತ್ತೂ ನಿಲ್ಲಲ್ಲ ಎಂದು ಹೇಳಿದರು.

ಟಿವಿ 9 ಕನ್ನಡ 10 Jul 2025 10:29 am

ಜಾತಿ ನಿಂದನೆಗೆ ಹೆದರಿ ಮಗ ಆತ್ಮಹತ್ಯೆ: ಸುದ್ದಿ ತಿಳಿದು ಹೃದಯಾಘಾತದಿಂದ ತಂದೆ ಕೂಡ ಸಾವು

ಯಾದಗಿರಿ ಜಿಲ್ಲೆಯ ವಡಗೇರ ಗ್ರಾಮದಲ್ಲಿ ಜಾತಿ ನಿಂದನೆ​ಗೆ ಹೆದರಿ ಮಗ ಆತ್ಮಹತ್ಯೆ ಮಾಡಿಕೊಂಡಿದ್ದು, ಮಗನ ಸಾವಿನ ಸುದ್ದಿ ತಿಳಿದು ತಂದೆ ಹೃದಯಾಘಾತದಿಂದ ಮೃತಪಟ್ಟಿರುವಂತಹ ಘಟನೆ ನಡೆದಿದೆ. ವಡಗೇರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ. ಜಮೀನಿನಲ್ಲಿ ದಾರಿ ವಿಚಾರಕ್ಕೆ ದಲಿತ ಕುಟುಂಬದ ಜತೆ ಜಗಳ ಆಗಿತ್ತು.

ಟಿವಿ 9 ಕನ್ನಡ 10 Jul 2025 10:19 am

Guru Mantras: ಗುರು ಮಂತ್ರ ಎಂದರೇನು? ಅದರ ಮಹತ್ವವನ್ನು ಇಲ್ಲಿ ತಿಳಿದುಕೊಳ್ಳಿ

ಗುರುಪೂರ್ಣಿಮೆಯು ಗುರುಗಳಿಗೆ ಸಮರ್ಪಿತವಾದ ಪವಿತ್ರ ದಿನ. ಈ ದಿನ ಗುರುಗಳ ಆಶೀರ್ವಾದ ಪಡೆಯುವುದು ಮತ್ತು ಅವರು ನೀಡಿದ ಜ್ಞಾನಕ್ಕೆ ಕೃತಜ್ಞತೆ ಸಲ್ಲಿಸುವುದು ಮುಖ್ಯ. ಗುರುಗಳು ನೀಡುವ ಗುರುಮಂತ್ರವು ಆಧ್ಯಾತ್ಮಿಕ ಪ್ರಗತಿಗೆ ಸಹಾಯ ಮಾಡುತ್ತದೆ. ಇಲ್ಲಿ ಗುರುಪೂರ್ಣಿಮೆಯ ಮಹತ್ವ, ಗುರುಮಂತ್ರದ ಪ್ರಾಮುಖ್ಯತೆ ಮತ್ತು ಅದರ ಜಪನ ವಿಧಾನವನ್ನು ವಿವರಿಸುಲಾಗಿದೆ.

ಟಿವಿ 9 ಕನ್ನಡ 10 Jul 2025 10:15 am

IND vs ENG: ಲಾರ್ಡ್ಸ್ ಟೆಸ್ಟ್​ಗೂ ಮುನ್ನ ಬಾಲ್ ಬಗ್ಗೆ ಅಪಸ್ವರ

India vs England 3rd Test: ಭಾರತ ಮತ್ತು ಇಂಗ್ಲೆಂಡ್ ನಡುವಣ ಮೂರನೇ ಟೆಸ್ಟ್ ಪಂದ್ಯವು ಇಂದಿನಿಂದ (ಜುಲೈ 10) ಶುರುವಾಗಲಿದೆ. ಲಂಡನ್​ನ ಲಾರ್ಡ್ಸ್ ಮೈದಾನದಲ್ಲಿ ಜರುಗಲಿರುವ ಈ ಪಂದ್ಯದಲ್ಲೂ ಡ್ಯೂಕ್ಸ್ ಬಾಲ್​ಗಳನ್ನು ಬಳಸಲಾಗುತ್ತದೆ. ಅತ್ತ ಮೊದಲೆರಡು ಪಂದ್ಯಗಳ ವೇಳೆ ಡ್ಯೂಕ್ಸ್ ಬಾಲ್​ನ ಗುಣಮಟ್ಟದ ಬಗ್ಗೆ ಆಟಗಾರರು ಅಸಮಾಧನಗೊಂಡಿದ್ದರು ಎಂಬುದು ಇಲ್ಲಿ ಉಲ್ಲೇಖಾರ್ಹ.

ಟಿವಿ 9 ಕನ್ನಡ 10 Jul 2025 10:09 am

ಜಗ್ಗೇಶ್ ಬದುಕು ಬದಲಿಸಿತು ಆ ರಾತ್ರಿ.. ಎಲ್ಲಾ ರಾಯರ ಕೃಪೆ

ಜಗ್ಗೇಶ್ ಅವರು ರಾಯರ ಮೇಲಿನ ಅಪಾರ ಭಕ್ತಿಯನ್ನು ಹೊಂದಿದ್ದಾರೆ. ರಾಯರು ಅವರ ಜೀವನವನ್ನು ಬದಲಾಯಿಸಿದರು ಎಂಬುದನ್ನು ಅವರು ನಂಬುತ್ತಾರೆ. ಅವರ ಮದುವೆ, ವೃತ್ತಿ, ಮತ್ತು ಕುಟುಂಬದ ಮೇಲೆ ರಾಯರ ಪ್ರಭಾವ ಇದೆ ಎಂದು ಅವರು ನಂಬುತ್ತಾರೆ. ಆ ಬಗ್ಗೆ ಇಲ್ಲಿದೆ ವಿವರ.

ಟಿವಿ 9 ಕನ್ನಡ 10 Jul 2025 10:08 am

Video: ಮೇಘಸ್ಫೋಟ, ಪ್ರವಾಹದ ಬಳಿಕ ಹಿಮಾಚಲ ಪ್ರದೇಶದ ಸ್ಥಿತಿ ಹೇಗಿದೆ ನೋಡಿ

ಇತ್ತೀಚೆಗೆ ಹಿಮಾಚಲ ಪ್ರದೇಶದಲ್ಲಿ ಮೇಘ ಸ್ಫೋಟ ಸಂಭವಿಸಿ,ಪ್ರವಾಹದಂಥಾ ಪರಿಸ್ಥಿತಿ ನಿರ್ಮಾಣವಾಗಿತ್ತು. ನೂರಾರು ಮನೆಗಳು ಕೊಚ್ಚಿಕೊಂಡು ಹೋಗಿದ್ದವು. ಮಂಡಿಯಲ್ಲಿ ಹೆಚ್ಚು ಹಾನಿಯುಂಟಾಗಿತ್ತು. ಮಂಡಿಯಲ್ಲಿ 17 ಸೇರಿ ಒಟ್ಟು 85 ಮಂದಿ ಪ್ರಾಣ ಕಳೆದುಕೊಂಡಿದ್ದರು. 35ಕ್ಕೂ ಅಧಿಕ ಮಂದಿ ಕಾಣೆಯಾಗಿದ್ದಾರೆ. ಸಾಕಷ್ಟು ಮಂದಿಗೆ ಮನೆಯೇ ಇಲ್ಲದಂತಾಗಿದ್ದು, ಯಾವುದೇ ದೇವಸ್ಥಾನ ಅಲ್ಲಿಲ್ಲಿ ಉಳಿದುಕೊಳ್ಳುತ್ತಿದ್ದಾರೆ. ಇನ್ನೂ ಸಂಪೂರ್ಣವಾಗಿ ಮಳೆ ನಿಂತಿಲ್ಲ. ಜನರು ಕೇವಲ ಮನೆಯಷ್ಟೇ ಅಲ್ಲ, ತಮ್ಮ ಪರಿವಾರ, ತಮ್ಮ ಆಸ್ತಿ, ಹಣ, ಬಟ್ಟೆ, ಬರೆ ಎಲ್ಲವನ್ನೂ ಕಳೆದುಕೊಂಡಿದ್ದಾರೆ.

ಟಿವಿ 9 ಕನ್ನಡ 10 Jul 2025 10:00 am

ಕೃಷಿ ಉಪಕರಣಾ ತಯಾರಿಕಾ ಸಂಸ್ಥೆಯಾದ TAFE ಹಾಗೂ AGCO ನಡುವಿನ ಸಮರ ಅಂತ್ಯ

ಬೆಂಗಳೂರು: ವಿಶ್ವದ ಅತಿ ದೊಡ್ಡ ಟ್ರಾಕ್ಟರ್‌ ಮತ್ತು ಕೃಷಿ ಉಪಕರಣ ತಯಾರಕಾ ಸಂಸ್ಥೆಯಾದ ಟ್ರ್ಯಾಕ್ಟರ್ಸ್ ಮತ್ತು ಫಾರ್ಮ್ ಎಕ್ವಿಪ್ಮೆಂಟ್ ಲಿಮಿಟೆಡ್ (TAFE) ಅಮೆರಿಕ ಮೂಲದ AGCO ಕಾರ್ಪೊರೇಷನ್ ಜೊತೆ ಮ್ಯಾಸ್ಸಿ ಫರ್ಗುಸನ್ ಬ್ರ್ಯಾಂಡ್, ವಾಣಿಜ್ಯ ಸಮಸ್ಯೆ ಮತ್ತು ಷೇರುಗಳಿಗೆ ಸಂಬಂಧಿಸಿದ ಎಲ್ಲಾ ವಿಷಯಗಳ ಕುರಿತು ನ್ಯಾಯಾಲಯದ ಹೊರಗೆ ಸಮಗ್ರ ಇತ್ಯರ್ಥಕ್ಕೆ ಬಂದಿರುವುದಾಗಿ ಘೋಷಿಸಿದ್ದು, ಈ ಮೂಲಕ ಅವರ ಕಾರ್ಪೊರೇಟ್ ದ್ವೇಷ ಕೊನೆಗೊಂಡಂತಾಗಿದೆ. ಈ ಒಪ್ಪಂದದ ಪ್ರಕಾರ, ಮ್ಯಾಸ್ಸಿ ಫರ್ಗುಸನ್ ಬ್ರ್ಯಾಂಡ್‌ನ ಮಾಲೀಕತ್ವವು ಭಾರತ, ನೇಪಾಳ ಮತ್ತು ಭೂತಾನ್‌ನ […] The post ಕೃಷಿ ಉಪಕರಣಾ ತಯಾರಿಕಾ ಸಂಸ್ಥೆಯಾದ TAFE ಹಾಗೂ AGCO ನಡುವಿನ ಸಮರ ಅಂತ್ಯ appeared first on Eesanje News .

ಈಸಂಜೆ 10 Jul 2025 9:53 am

Happy Birthday Sunil Gavaskar: 76ನೇ ವರ್ಷಕ್ಕೆ ಕಾಲಿಟ್ಟ ಟೀಮ್ ಇಂಡಿಯಾದ ಲಿಟಲ್ ಮಾಸ್ಟರ್ ಸುನಿಲ್ ಗವಾಸ್ಕರ್

ಭಾರತ ಕ್ರಿಕೆಟ್ ತಂಡಕ್ಕೆ ಬೆಟ್ಟದಷ್ಟು ಕೊಡುಗೆ ನೀಡಿರುವ ಗವಾಸ್ಕರ್, 1983ರಲ್ಲಿ ಮೊದಲ ವಿಶ್ವಕಪ್‌ ಗೆಲ್ಲಲು ಪ್ರಮುಖ ಪಾತ್ರವಹಿಸಿದ್ದರು. ವಿಶ್ವ ಕ್ರಿಕೆಟ್‌ನಲ್ಲಿ 10,000 ರನ್ ಗಡಿ ದಾಟಿದ ಮೊದಲ ಆಟಗಾರ ಎಂಬ ಖ್ಯಾತಿ ಕೂಡ ಗವಾಸ್ಕರ್‌ ಅವರದ್ದು. ಸುನಿಲ್ ಗವಾಸ್ಕರ್ 1971ರಲ್ಲಿ ವೆಸ್ಟ್ ಇಂಡಿಸ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು.

ಟಿವಿ 9 ಕನ್ನಡ 10 Jul 2025 9:39 am

ದಾವಣಗೆರೆ: ಮೂರೇ ತಿಂಗಳಲ್ಲಿ 50 ಲಕ್ಷ ರೂ. ತೆರಿಗೆ ಸಂಗ್ರಹಿಸಿದ ಮಹಿಳೆಯರು! ಇದು ಕರ್ನಾಟಕದಲ್ಲೇ ಮೊದಲು

ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ಮಹಿಳಾ ಸ್ವಸಹಾಯ ಸಂಘದ ಸದಸ್ಯರು ಕೇವಲ ಮೂರು ತಿಂಗಳಲ್ಲಿ 50 ಲಕ್ಷ ರೂಪಾಯಿಗಳನ್ನು ತೆರಿಗೆಯಾಗಿ ಸಂಗ್ರಹಿಸಿ ರಾಜ್ಯದಲ್ಲೇ ಅಪೂರ್ವ ಸಾಧನೆ ಮಾಡಿದ್ದಾರೆ. ಇದರಿಂದ ಅವರಿಗೆ 5 ಲಕ್ಷ ರೂಪಾಯಿಗಳ ಪ್ರೋತ್ಸಾಹಧನ ದೊರೆಯಲಿದೆ. ಇದರೊಂದಿಗೆ, ರಾಜ್ಯ ಸರ್ಕಾರ ಕೈಗೊಂಡ ಮಹತ್ವದ ನಿರ್ಧಾರವನ್ನು ಅನುಷ್ಠಾನಗೊಳಿಸಿ ಯಶಸ್ವಿಯಾದ ಮೊದಲ ಪಾಲಿಕೆ ಎಂಬ ಹೆಗ್ಗಳಿಗೆ ದಾವಣಗೆರೆಯದ್ದಾಗಿದೆ.

ಟಿವಿ 9 ಕನ್ನಡ 10 Jul 2025 9:26 am

ಗುರುಪೂರ್ಣಿಮೆ: ಗುರು ರಾಯರಿಂದ ಸಾಕಷ್ಟು ಪ್ರಭಾವಿತರಾಗಿದ್ದ ರಾಜ್​ಕುಮಾರ್

ಗುರುಪೂರ್ಣಿಮೆಯಂದು ರಾಜ್‌ಕುಮಾರ್ ಅವರ ರಾಯರ ಭಕ್ತಿಯನ್ನು ನೆನಪಿಸಿಕೊಳ್ಳುವುದು ಅತ್ಯಂತ ಸೂಕ್ತ. ರಾಘವೇಂದ್ರ ಸ್ವಾಮಿಗಳ ಮೇಲಿನ ಅವರ ಅಪಾರ ನಂಬಿಕೆ 'ಮಂತ್ರಾಲಯ ಮಹಾತ್ಮೆ' ಚಿತ್ರದ ಮೂಲಕ ವ್ಯಕ್ತವಾಗಿದೆ. ಜಗ್ಗೇಶ್ ಅವರೊಂದಿಗಿನ ಅವರ ಚರ್ಚೆಗಳು ಕೂಡ ರಾಯರ ಭಕ್ತಿಯನ್ನು ಸೂಚಿಸುತ್ತವೆ. ಆ ಬಗ್ಗೆ ಇಲ್ಲಿದೆ ವಿವರ.

ಟಿವಿ 9 ಕನ್ನಡ 10 Jul 2025 8:59 am

ಟೀಮ್ ಇಂಡಿಯಾ ಪರ ಆಡಲು ವೈಭವ್ ಸೂರ್ಯವಂಶಿ ಅನರ್ಹ..!

Vaibhav Suryavanshi: ಇಂಗ್ಲೆಂಡ್ ಅಂಡರ್-19 ತಂಡದ ವಿರುದ್ಧ ನಡೆದ ಯೂತ್ ಏಕದಿನ ಸರಣಿಯಲ್ಲಿ ವೈಭವ್ ಸೂರ್ಯವಂಶಿ ಅಕ್ಷರಶಃ ಅಬ್ಬರಿಸಿದ್ದಾರೆ. ಈ ಅಬ್ಬರದೊಂದಿಗೆ 355 ರನ್​ ಕಲೆಹಾಕುವ ಮೂಲಕ ಯೂತ್ ಒಡಿಐ ಸರಣಿಯಲ್ಲಿ ಭಾರತದ ಪರ ಅತ್ಯಧಿಕ ರನ್ ಕಲೆಹಾಕಿದ ಬ್ಯಾಟರ್ ಎನಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಐಪಿಎಲ್​ನಲ್ಲಿ 35 ಎಸೆತಗಳಲ್ಲಿ ಸೆಂಚುರಿ ಸಿಡಿಸಿ ದಾಖಲೆ ಬರೆದಿದ್ದರು. ಈ ಭರ್ಜರಿ ಪ್ರದರ್ಶನದ ಹೊರತಾಗಿಯೂ ಟೀಮ್ ಇಂಡಿಯಾ ಪರ ಪಾದಾರ್ಪಣೆ ಮಾಡಲು ವೈಭವ್ ಇನ್ನೂ ಒಂದು ವರ್ಷ ಕಾಯಲೇಬೇಕು.

ಟಿವಿ 9 ಕನ್ನಡ 10 Jul 2025 8:54 am

ತ್ರಿಶಂಕುಸ್ಥಿತಿಗೆ ಸಿಲುಕಿದ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯ ಕುಲಪತಿ ಹುದ್ದೆ: ಹೈಕೋರ್ಟ್​ನಿಂದ ತಡೆಯಾಜ್ಞೆ

ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಹುದ್ದೆಗೆ ಸದ್ಯ ಜಟಾಪಟಿ ಶುರುವಾಗಿದೆ. ಮೆರಿಟ್ ಮತ್ತು ಸಾಮಾಜಿಕ ನ್ಯಾಯದ ಮೇಲೆ ನೇಮಕಾತಿ ನಡೆದಿಲ್ಲವೆಂಬ ಆರೋಪ ಕೇಳಿಬಂದಿದೆ. ಹೀಗಾಗಿ ಕುಲಪತಿ ಆಕಾಂಕ್ಷಿಯೊಬ್ಬರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಇದೀಗ ನೇಮಕಾತಿಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಸರ್ಕಾರ ಇತ್ತೀಚೆಗೆ ನೂತನ ಕುಲಪತಿಯ ನೇಮಕ ಮಾಡಿತ್ತು.

ಟಿವಿ 9 ಕನ್ನಡ 10 Jul 2025 8:54 am

ಶಾಲೆಯ ಶೌಚಾಲಯದಲ್ಲಿ ರಕ್ತದ ಕಲೆ ಕಂಡಿದ್ದಕ್ಕೆ, ವಿದ್ಯಾರ್ಥಿನಿಯರ ಬಟ್ಟೆ ಬಿಚ್ಚಿಸಿದ ಮುಖ್ಯ ಶಿಕ್ಷಕರು

ಶಾಲೆಯ ಶೌಚಾಲಯದಲ್ಲಿ ರಕ್ತದ ಕಲೆ ಕಂಡಿದ್ದಕ್ಕೆ, ಯಾರು ಮುಟ್ಟಾಗಿದ್ದಾರೆಂದು ತಿಳಿಯಲು ಮುಖ್ಯೋಪಾಧ್ಯಾಯರು ಎಲ್ಲಾ ವಿದ್ಯಾರ್ಥಿನಿಯರ ಬಟ್ಟೆ ಬಿಚ್ಚಿಸಿರುವ ವಿಚಿತ್ರ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಈ ಘಟನೆಗೆ ಸಂಬಂಧಿಸಿದಂತೆ ಮುಖ್ಯೋಪಾಧ್ಯಾಯರು ಹಾಗೂ ಓರ್ವ ಸಹಾಯಕ ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಶಿಕ್ಷಕರು ವಿದ್ಯಾರ್ಥಿನಿಯರನ್ನು ವಿವಸ್ತ್ರಗೊಳಿಸಿ ಯಾರು ಮುಟ್ಟಾಗಿದ್ದಾರೆಂದು ತಿಳಿದುಕೊಳ್ಳಲು ಪ್ರಯತ್ನಿಸಿದ್ದು, ಪೋಷಕರಲ್ಲಿ ಆಕ್ರೋಶವನ್ನುಂಟುಮಾಡಿದೆ.

ಟಿವಿ 9 ಕನ್ನಡ 10 Jul 2025 8:51 am

Daily Devotional: ಗುರು ಪೌರ್ಣಮಿಯ ರಹಸ್ಯ ಹಾಗೂ ಆಚರಣೆಯ ಮಹತ್ವವನ್ನು ಇಲ್ಲಿ ತಿಳಿಯಿರಿ

ಡಾ. ಬಸವರಾಜ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ಗುರು ಪೌರ್ಣಮಿಯ ರಹಸ್ಯ ಹಾಗೂ ಆಚರಣೆಯ ಮಹತ್ವವನ್ನು ವಿವರಿಸಿದ್ದಾರೆ. ಗುರುಪೂರ್ಣಿಮೆ ಹಿಂದೂಗಳ ಪ್ರಮುಖ ಹಬ್ಬವಾಗಿದ್ದು, ಗುರುಗಳನ್ನು ಸ್ಮರಿಸುವ ಮತ್ತು ಅವರನ್ನು ಗೌರವಿಸುವ ದಿನ. ವೇದವ್ಯಾಸರ ಜನ್ಮದಿನವಾಗಿಯೂ ಇದನ್ನು ಆಚರಿಸಲಾಗುತ್ತದೆ. ಗುರುಗಳ ದರ್ಶನ, ಪಾದಪೂಜೆ, ದಾನ, ಭಜನೆ ಮುಂತಾದ ಕ್ರಿಯೆಗಳ ಮೂಲಕ ಗುರುಪೂರ್ಣಿಮೆಯನ್ನು ಆಚರಿಸಲಾಗುತ್ತದೆ.

ಟಿವಿ 9 ಕನ್ನಡ 10 Jul 2025 8:47 am

Daily Devotional: ಕಳಸಕ್ಕೆ ಎಲೆ ಇಡುವ ವಿಷಯದಲ್ಲಿ ಈ ತಪ್ಪುಗಳನ್ನು ಮಾಡಬೇಡಿ

ಕಲಶವು ಮನೆಗೆ ಶಕ್ತಿಯನ್ನು ನೀಡುವ ಒಂದು ಪರಿಕರ. ವಾರಕ್ಕೊಮ್ಮೆ ಕಲಶ ಬದಲಾಯಿಸಿದರೆ ಐದು ಎಲೆಗಳನ್ನು, ಮೂರು ದಿನಕ್ಕೊಮ್ಮೆ ಬದಲಾಯಿಸಿದರೆ ಮೂರು ಎಲೆಗಳನ್ನು ಇಡಬೇಕು. ಒಣಗಿದ ಎಲೆಗಳನ್ನು ಕಸಕ್ಕೆ ಹಾಕದೆ, ನೀರಿನಲ್ಲಿ ಅಥವಾ ಮರದ ಕೆಳಗೆ ಹಾಕಬೇಕು. ಐದು ಎಲೆಗಳು ಪಂಚಭೂತಗಳನ್ನು ಪ್ರತಿನಿಧಿಸುತ್ತವೆ ಮತ್ತು ಮನೆಗೆ ಶ್ರೇಯಸ್ಸು ಮತ್ತು ಆರೋಗ್ಯವನ್ನು ತರುತ್ತವೆ ಎಂದು ಡಾ. ಬಸವರಾಜ ಗುರೂಜಿಯವರು ವಿವರಿಸಿದ್ದಾರೆ.

ಟಿವಿ 9 ಕನ್ನಡ 10 Jul 2025 8:30 am

ಉಗ್ರ ನಾಸೀರ್ ಜೈಲಿನಿಂದ ತಪ್ಪಿಸಿಕೊಳ್ಳಲು ನಡೆದಿತ್ತು ಸಿನಿಮೀಯ ರೀತಿ ಸಂಚು! ಎನ್​ಐಎ ತನಿಖೆಯಲ್ಲಿ ಸ್ಫೋಟಕ ಅಂಶ ಬಯಲು

ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಪರಾರಿಯಾಗಲು ಉಗ್ರ ನಾಸೀರ್​​ಗೆ ನೆರವಾಗಲು ಸಿನಿಮೀಯ ರೀತಿಯಲ್ಲಿ ಸಂಚು ರೂಪಿಸಲಾಗಿದ್ದು, ಜೈಲಿನ ಎಎಸ್​ಐ ಚಾಂದ್ ಪಾಷಾನೇ ಮುಖ್ಯ ಸೂತ್ರಧಾರನಾಗಿದ್ದ ಎಂಬ ಸ್ಫೋಟಕ ಅಂಶ ಎನ್​ಐಎ ತನಿಖೆಯಿಂದ ಬಯಲಾಗಿದೆ. ಉಗ್ರನನ್ನು ನ್ಯಾಯಾಲಯಕ್ಕೆ ಕರೆದುಕೊಂಡು ಹೋಗುವ ವೇಳೆ ಗ್ರೆನೇಡ್ ಸ್ಫೋಟಿಸಿ ಪರಾರಿಯಾಗುವ ಸಂಚು ಹೂಡಲಾಗಿತ್ತು ಎಂಬುದು ತಿಳಿದುಬಂದಿದೆ. ಅದೃಷ್ಟವಶಾತ್, ಬೆಂಗಳೂರು ಸಿಸಿಬಿ ಪೊಲೀಸರಿಂದಾಗಿ ಅದು ವಿಫಲವಾಗಿತ್ತು.

ಟಿವಿ 9 ಕನ್ನಡ 10 Jul 2025 8:18 am

T20 World Cup 2026: ಹೀಗಾದ್ರೆ ಟಿ20 ವಿಶ್ವಕಪ್​ಗೆ ಇಟಲಿ ತಂಡದ ಎಂಟ್ರಿ ಖಚಿತ..!

T20 World Cup 2026: ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆಯೋಜಿಸಲಿರುವ 2026ರ ಟಿ20 ವಿಶ್ವಕಪ್​ಗಾಗಿ ಅರ್ಹತಾ ಸುತ್ತಿನ ಪಂದ್ಯಗಳು ನಡೆಯುತ್ತಿದೆ. ಯೂರೋಪ್​ ತಂಡಗಳ ನಡುವಣ ಅರ್ಹತಾ ಸುತ್ತಿನಲ್ಲಿ ಬಲಿಷ್ಠ ಸ್ಕಾಟ್ಲೆಂಡ್ ತಂಡಕ್ಕೆ ಸೋಲುಣಿಸಿ ಇಟಲಿ ಮುಂಬರುವ ಟಿ20 ವಿಶ್ವಕಪ್​ನಲ್ಲಿ ಸ್ಥಾನ ಪಡೆಯುವ ಸನಿಹಕ್ಕೆ ಬಂದು ನಿಂತಿದೆ.

ಟಿವಿ 9 ಕನ್ನಡ 10 Jul 2025 8:18 am

Karun Nair: ಇಂದು ಪ್ಲೇಯಿಂಗ್ XI ನಲ್ಲಿ ಕರುಣ್ ನಾಯರ್​ಗೆ ಸಿಗುತ್ತ ಅವಕಾಶ: ಸಿಗಲೇ ಬೇಕು ಎಂದ ಮಾಜಿ ಆಟಗಾರ

England vs India 3rd Test: ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ವಿಫಲವಾದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಕರುಣ್ ನಾಯರ್‌ಗೆ ಮತ್ತೊಂದು ಅವಕಾಶ ನೀಡಬೇಕೆಂದು ಭಾರತದ ಮಾಜಿ ಕ್ರಿಕೆಟಿಗ ಮತ್ತು ಪ್ರಸ್ತುತ ಜನಪ್ರಿಯ ವೀಕ್ಷಕ ವಿವರಣೆಗಾರ ಆಕಾಶ್ ಚೋಪ್ರಾ ಒತ್ತಾಯಿಸಿದ್ದಾರೆ.

ಟಿವಿ 9 ಕನ್ನಡ 10 Jul 2025 8:15 am

ವಿಧವಾ ಮಹಿಳೆಗೆ ಖಾಸಗಿ ಅಂಗಾಂಗ ತೋರಿಸಿ ವಿಕೃತಿ ಮೆರೆದ ವ್ಯಕ್ತಿ: ಪ್ರಶ್ನೆ ಮಾಡಿದ್ದಕ್ಕೆ ಸುಳ್ಳು ಕೇಸ್​ ದಾಖಲು

ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನಲ್ಲಿ ಓರ್ವ ವ್ಯಕ್ತಿ ವಿಧವೆ ಮಹಿಳೆಗೆ ತನ್ನ ಖಾಸಗಿ ಅಂಗಾಂಗ ತೋರಿಸಿ ಅಸಭ್ಯವಾಗಿ ವರ್ತಿಸಿರುವಂತಹ ಘಟನೆ ನಡೆದಿದೆ. ಅಷ್ಟೇ ಅಲ್ಲದೆ ಇದನ್ನು ಪ್ರಶ್ನೆ ಮಾಡಿದ ಮಹಿಳೆ ಸೇರಿ ಆಕೆಯ ಪೋಷಕರ ವಿರುದ್ಧವೇ ಕೇಸ್​ ದಾಖಲಿಸಲಾಗಿದೆ. ಇದರಿಂದ ರೊಚ್ಚಿಗೆದ್ದ ಮಹಿಳೆಯರು ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ಮಾಡಿದ್ದಾರೆ.

ಟಿವಿ 9 ಕನ್ನಡ 10 Jul 2025 8:11 am

ಈ ಫೋಟೋದಲ್ಲಿರೋ ಮಗು ಈಗ ಸ್ಟಾರ್ ನಾಯಕಿ, 16 ವರ್ಷ ಹಿರಿಯ ನಟನ ಜೊತೆ ಮದುವೆ

ಈ ನಟಿ ಬಾಲಿವುಡ್ ದಂತಕಥೆಗಳಾದ ದಿಲೀಪ್ ಕುಮಾರ್ ಮತ್ತು ಸೈರಾ ಬಾನು ಅವರ ಮೊಮ್ಮಗಳು. ತಮ್ಮ ಅದ್ಭುತ ನಟನೆಯಿಂದ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಯುವರತ್ನ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೂ ಪರಿಚಯವಾದ ಅವರು, ನಟ ಆರ್ಯ ಅವರನ್ನು ವಿವಾಹವಾಗಿ ಆಗಿದ್ದಾರೆ. ಪ್ರಸ್ತುತ ಚಿತ್ರರಂಗದಿಂದ ದೂರವಿದ್ದರೂ, ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿದ್ದಾರೆ.

ಟಿವಿ 9 ಕನ್ನಡ 10 Jul 2025 8:04 am