SENSEX
NIFTY
GOLD
USD/INR

Weather

22    C

ಡಿಜಿಟಲ್ ಸುದ್ದಿ ಮೂಲಗಳು

... ...View News by News Source

IPL 2025: ಗುಜರಾತ್ ಮಣಿಸಿ ಕ್ವಾಲಿಫೈಯರ್ 2 ಕ್ಕೆ ಅರ್ಹತೆ ಪಡೆದ ಮುಂಬೈ ಇಂಡಿಯನ್ಸ್‌

Mumbai Indians Win IPL 2025 Eliminator: ಐಪಿಎಲ್ 2025 ರ ಎಲಿಮಿನೇಟರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಗುಜರಾತ್ ಟೈಟನ್ಸ್ ತಂಡವನ್ನು 21 ರನ್‌ಗಳಿಂದ ಸೋಲಿಸಿ ಕ್ವಾಲಿಫೈಯರ್ 2 ಕ್ಕೆ ಲಗ್ಗೆ ಇಟ್ಟಿದೆ. ಮೊದಲು ಬ್ಯಾಟ್ ಮಾಡಿದ ಮುಂಬೈ 229 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಗುಜರಾತ್ 208 ರನ್ ಗಳಿಸಲಷ್ಟೇ ಶಕ್ತವಾಯಿತು. ಭಾನುವಾರ ನಡೆಯಲಿರುವ ಕ್ವಾಲಿಫೈಯರ್ 2 ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಪಂಜಾಬ್ ಕಿಂಗ್ಸ್ ವಿರುದ್ಧ ಸೆಣಸಾಡಲಿದೆ.

ಟಿವಿ 9 ಕನ್ನಡ 30 May 2025 11:44 pm

ಸಾಧು ಕೋಕಿಲ ಸಿನಿಮಾ ಮಾಡೋದು ಕಡಿಮೆ ಆಗಿದ್ದು ಯಾಕೆ? ಕಾರಣ ತಿಳಿಸಿದ ಕಾಮಿಡಿ ಕಿಂಗ್

ಖ್ಯಾತ ನಟ ಸಾಧು ಕೋಕಿಲ ಅವರು ಹಾಸ್ಯ ಪಾತ್ರಗಳ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಸಾಧು ಕೋಕಿಲ ಅವರ ಚಿತ್ರಗಳ ಸಂಖ್ಯೆ ಕಮ್ಮಿ ಆಗುತ್ತಿದೆ. ಅದಕ್ಕೆ ಕಾರಣವೇನು ಎಂಬುದನ್ನು ಸ್ವತಃ ಸಾಧು ಕೋಕಿಲ ತಿಳಿಸಿದ್ದಾರೆ. ಇನ್ನೂ ಅನೇಕ ವಿಷಯಗಳ ಬಗ್ಗೆ ಅವರು ಮಾತನಾಡಿದ್ದಾರೆ.

ಟಿವಿ 9 ಕನ್ನಡ 30 May 2025 10:52 pm

ಪಾಕಿಸ್ತಾನಕ್ಕೆ ಟರ್ಕಿ ಬೆಂಬಲ; ಆ. 31ರೊಳಗೆ ಟರ್ಕಿಶ್ ಏರ್‌ಲೈನ್ಸ್ ಜೊತೆಗಿನ ಗುತ್ತಿಗೆ ಕೊನೆಗೊಳಿಸಲು ಇಂಡಿಗೋಗೆ ಸರ್ಕಾರ ಆದೇಶ

ಭಾರತ ಮತ್ತು ಪಾಕಿಸ್ತಾನದ ನಡುವಿನ ಬಿಕ್ಕಟ್ಟಿನಲ್ಲಿ ಪಾಕಿಸ್ತಾನಕ್ಕೆ ಅಂಕಾರಾ ಬೆಂಬಲ ನೀಡಿದ್ದಕ್ಕೆ ಪ್ರತಿಯಾಗಿ ಟರ್ಕಿಶ್ ಏರ್​ಲೈನ್ಸ್​ಗೆ ಕೇಂದ್ರ ಸರ್ಕಾರ ಬಹಿಷ್ಕಾರ ಹಾಕಿದೆ. ಆಗಸ್ಟ್ 31ರೊಳಗೆ ಟರ್ಕಿಶ್ ಏರ್‌ಲೈನ್ಸ್ ಜೊತೆಗಿನ ಸಂಬಂಧವನ್ನು ಕೊನೆಗೊಳಿಸುವಂತೆ ಇಂಡಿಗೋಗೆ ಭಾರತ ಸರ್ಕಾರ ಸೂಚಿಸಿದೆ. ಟರ್ಕಿಶ್ ಏರ್‌ಲೈನ್ಸ್‌ನಿಂದ ಗುತ್ತಿಗೆ ಪಡೆದ 2 ಬೋಯಿಂಗ್ 777 ವಿಮಾನಗಳನ್ನು ನಿರ್ವಹಿಸುತ್ತಿರುವ ಇಂಡಿಗೋಗೆ ಆಗಸ್ಟ್ 31ರವರೆಗೆ ಅವುಗಳನ್ನು ಬಳಸಲು ಅನುಮತಿ ನೀಡಲಾಗಿದೆ. ವಿಮಾನಯಾನ ಸಂಸ್ಥೆಗಳು ನಾಗರಿಕ ವಿಮಾನಯಾನ ಸಚಿವಾಲಯದಿಂದ 6 ತಿಂಗಳ ವಿಸ್ತರಣೆಯನ್ನು ಕೋರಿದ್ದವು.

ಟಿವಿ 9 ಕನ್ನಡ 30 May 2025 10:34 pm

ಗ್ರೇಟರ್ ಬೆಂಗಳೂರಿನ ಜನರಿಗೆ ಬೋಟ್ ಭಾಗ್ಯ: ಬಿಬಿಎಂಪಿಯಿಂದ ಹೊಸ ಕೊಡುಗೆ

ಮಳೆಗೆ ರಾಜಧಾನಿ ಬೆಂಗಳೂರಿನ ಹಲವು ಏರಿಯಾಗಳು ಜಲಾವೃತಗೊಂಡಿದ್ದವು. ಸಾಯಿಲೇಔಟ್, ಯಲಹಂಕ, ಕೋರಮಂಗಲ ಸುತ್ತಮುತ್ತ ಇಡೀ ಏರಿಯಾ ನೀರಿನಿಂದ ಆವರಿಸಿಬಿಟ್ಟಿತ್ತು. ಇತ್ತ, ಮುಂಗಾರು ಮಳೆ ಆರಂಭವಾಗುತ್ತಿರುವ ಹೊತ್ತಿನಲ್ಲೇ ಪಾಲಿಕೆ ಸಮಸ್ಯೆಗೆ ಪರಿಹಾರ ಹುಡುಕುತ್ತೆ ಅಂತ ಜನರು ಕಾದುಕುಳಿತಿದ್ದಾರೆ. ಆದರೆ, ಪಾಲಿಕೆ ಮಾತ್ರ ಜನರಿಗೆ ಬೋಟ್ ಭಾಗ್ಯ ನೀಡಲು ತೀರ್ಮಾನಿಸಿದೆ. ಏನಿದು ಬೋಟ್​ ಭಾಗ್ಯ? ಇಲ್ಲಿದೆ ವಿವರ

ಟಿವಿ 9 ಕನ್ನಡ 30 May 2025 10:29 pm

ಜಪಾನ್​ನಲ್ಲಿ ಭಾರತದ ಮೊದಲ ಬುಲೆಟ್ ರೈಲಿನ ಪ್ರಾಯೋಗಿಕ ಸಂಚಾರ ಆರಂಭ; ಹೀಗಿರಲಿದೆ ಬುಲೆಟ್ ಟ್ರೈನ್

ಭಾರತದ ಮೊದಲ ಬುಲೆಟ್ ರೈಲಾದ ಶಿಂಕನ್ಸೆನ್ ನ ಪ್ರಾಯೋಗಿಕ ಸಂಚಾರ ಜಪಾನ್ ನಲ್ಲಿ ಆರಂಭವಾಗಿದೆ. 2026ರ ಆರಂಭದಲ್ಲಿ ಭಾರತಕ್ಕೆ ಈ ರೈಲುಗಳ ರವಾನೆಯಾಗಲಿದೆ. ಅಹಮದಾಬಾದ್-ಮುಂಬೈ ಕಾರಿಡಾರ್ ನಲ್ಲಿ ಸಂಚರಿಸಲಿರುವ ಭಾರತದ ಮೊದಲ ಬುಲೆಟ್ ರೈಲು ಶಿಂಕನ್ಸೆನ್ ಜಪಾನ್ ನಲ್ಲಿ ಸಂಚಾರದ ಟ್ರಯಲ್ ಆರಂಭಿಸಿದೆ. ಭಾರತವು ತನ್ನ ಮೊದಲ ಬುಲೆಟ್ ರೈಲು ಕಾರಿಡಾರ್ ಗಾಗಿ ಎರಡು E5 ಸರಣಿಯ ಶಿಂಕನ್ಸೆನ್ ರೈಲು ಸೆಟ್ ಗಳನ್ನು ಸ್ವೀಕರಿಸಲಿದೆ.

ಟಿವಿ 9 ಕನ್ನಡ 30 May 2025 10:11 pm

ಬೆಂಗಳೂರು: ಪೊಲೀಸರಿಗೇ ಚಳ್ಳೆ ಹಣ್ಣು ತಿನ್ನಿಸುತ್ತಿದ್ದ ಗ್ಯಾಂಗ್ ಸಿಕ್ಕಿಬಿತ್ತು, ಮಾಡಿದ್ದೇನು ಗೊತ್ತಾ?

ನಕಲಿ ದಾಖಲೆಗಳನ್ನು ಬಳಸಿ ಪೊಲೀಸ್ ವೆರಿಫಿಕೇಶನ್ ಲೆಟರ್ ಪಡೆಯುತ್ತಿದ್ದ ಮೂವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಕೆಲಸಕ್ಕಾಗಿ ಪೊಲೀಸ್ ವೆರಿಫಿಕೇಶನ್ ಅಗತ್ಯವಿರುವ ವ್ಯಕ್ತಿಗಳಿಂದ ಹಣ ಪಡೆದು ನಕಲಿ ದಾಖಲೆಗಳ ಮೂಲಕ ವೆರಿಫಿಕೇಶನ್ ಲೆಟರ್ ಪಡೆಯುವ ಜಾಲವನ್ನು ಈ ಆರೋಪಿಗಳು ನಡೆಸುತ್ತಿದ್ದರು. ಪೊಲೀಸರು ಈ ಜಾಲವನ್ನು ಪತ್ತೆ ಹಚ್ಚಿ ಆರೋಪಿಗಳನ್ನು ಬಂಧಿಸಿ, ತನಿಖೆ ನಡೆಸುತ್ತಿದ್ದಾರೆ.

ಟಿವಿ 9 ಕನ್ನಡ 30 May 2025 10:05 pm

IPL 2025: 81 ರನ್ ಬಾರಿಸಿ ಐಪಿಎಲ್‌ನಲ್ಲಿ ಇತಿಹಾಸ ಸೃಷ್ಟಿಸಿದ ರೋಹಿತ್ ಶರ್ಮಾ

Rohit Sharma: ರೋಹಿತ್ ಶರ್ಮಾ ಗುಜರಾತ್ ಟೈಟನ್ಸ್ ವಿರುದ್ಧದ ಎಲಿಮಿನೇಟರ್ ಪಂದ್ಯದಲ್ಲಿ ಅದ್ಭುತವಾದ 81 ರನ್‌ಗಳ ಇನಿಂಗ್ಸ್ ಆಡಿದರು. ಇದು ಅವರ ಐಪಿಎಲ್ ಪ್ಲೇಆಫ್‌ನಲ್ಲಿನ ಅತಿ ಹೆಚ್ಚು ಸ್ಕೋರ್. ಈ ಇನಿಂಗ್ಸ್ ಮೂಲಕ ಅವರು ಐಪಿಎಲ್‌ನಲ್ಲಿ 7000 ರನ್‌ಗಳನ್ನು ಪೂರ್ಣಗೊಳಿಸಿದರು ಮತ್ತು 300 ಸಿಕ್ಸರ್‌ಗಳನ್ನು ಬಾರಿಸಿದ ಮೊದಲ ಭಾರತೀಯ ಆಟಗಾರರಾದರು. ಪಂದ್ಯದಲ್ಲಿ ಅವರು 4 ಸಿಕ್ಸರ್ ಮತ್ತು 9 ಬೌಂಡರಿಗಳನ್ನು ಬಾರಿಸಿದರು.

ಟಿವಿ 9 ಕನ್ನಡ 30 May 2025 10:02 pm

ನೈಜೀರಿಯಾದ ಮೊಕ್ವಾ ನಗರದಲ್ಲಿ ಡ್ಯಾಂ ಕುಸಿದು ಭಾರೀ ಪ್ರವಾಹ; 111 ಜನ ಸಾವು

ನೈಜೀರಿಯಾದ ಮೊಕ್ವಾ ಪಟ್ಟಣದಲ್ಲಿ ಪ್ರವಾಹ ಉಂಟಾಗಿದೆ. ಡ್ಯಾಂ ಒಡೆದ ಹಿನ್ನೆಲೆಯಲ್ಲಿ 111 ಜನರು ಸಾವನ್ನಪ್ಪಿದ್ದಾರೆ. ನೈಜೀರಿಯಾದ ನೈಜರ್ ರಾಜ್ಯದ ಜನನಿಬಿಡ ಮಾರುಕಟ್ಟೆ ಪಟ್ಟಣವಾದ ಮೊಕ್ವಾವನ್ನು ಆವರಿಸಿರುವ ಪ್ರವಾಹವು ಗುರುವಾರದ ವೇಳೆಗೆ ಕನಿಷ್ಠ 111 ಜನರನ್ನು ಬಲಿ ತೆಗೆದುಕೊಂಡಿದೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ. ರಾಜ್ಯ ರಾಜಧಾನಿ ಮಿನ್ನಾದಲ್ಲಿನ ಕಾರ್ಯಾಚರಣೆ ಕಚೇರಿಯ ಮುಖ್ಯಸ್ಥ ಹುಸೇನಿ ಇಸಾಹ್ ರಕ್ಷಣಾ ಪ್ರಯತ್ನಗಳು ನಡೆಯುತ್ತಿವೆ ಮತ್ತು ಸಾವಿನ ಸಂಖ್ಯೆ ಹೆಚ್ಚಾಗಬಹುದು ಎಂದು ಹೇಳಿದ್ದಾರೆ.

ಟಿವಿ 9 ಕನ್ನಡ 30 May 2025 9:52 pm

‘ಕಮಲ್ ಹಾಸನ್​ನ ಪ್ರೀತಿಸುತ್ತೇವೆ, ಆದ್ರೆ ಅವರು ಮಾಡಿದ್ದು ತಪ್ಪು’: ವಸಿಷ್ಠ ಸಿಂಹ

ತಮಿಳಿನ ನಟ ಕಮಲ್ ಹಾಸನ್ ಅವರು ಕನ್ನಡ ಭಾಷೆಯ ಕುರಿತು ನೀಡಿದ ಹೇಳಿಕೆಯಿಂದ ಕನ್ನಡದ ಜನರಿಗೆ ನೋವಾಗಿದೆ. ಕನ್ನಡ ಚಿತ್ರರಂಗದ ಸೆಲೆಬ್ರಿಟಿಗಳು ಸಹ ಕಮಲ್ ಅವರ ಹೇಳಿಕೆಯನ್ನು ವಿರೋಧಿಸಿದ್ದಾರೆ. ನಟ ವಸಿಷ್ಠ ಸಿಂಹ ಅವರು ಈ ಬಗ್ಗೆ ಮಾತನಾಡಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ..

ಟಿವಿ 9 ಕನ್ನಡ 30 May 2025 9:31 pm

ಕಮಲ್ ಹಾಸನ್ ಸಿನಿಮಾವೇನಾದರೂ ಬಿಡುಗಡೆ ಮಾಡಿದರೆ ಥೇಟರ್​ಗಳಿಗೆ ಬೆಂಕಿ ಹಾಕ್ತೀವಿ: ಟಿಎ ನಾರಾಯಣಗೌಡ, ಕರವೇ

ಯಾರೆಷ್ಟೇ ವಿರೋಧ ಮಾಡಿದರೂ ತನ್ನ ಅಭಿಮಾನಿಗಳು ಸಿನಿಮಾ ನೋಡುತ್ತಾರೆ ಎಂದು ಕಮಲ್ ಹಾಸನ್ ಹೇಳಿದ್ದಾರೆ, ಅದರೆ ಈ ನಟನ ಬಗ್ಗೆ ಯಾರಿಗೆ ಎಷ್ಟೇ ಅಭಿಮಾನವಿರಲಿ, ಅವರ ಸಿನಿಮಾ ನೋಡಬಾರದು, ಸಿನಿಮಾವನ್ನೇದರೂ ವೀಕ್ಷಿಸಲು ಹೋದರೆ ಕಮಲ್ ಹಾಸನ್​ನಂತೆ ಅವರು ಸಹ ಕನ್ನಡಕ್ಕೆ ಘೋರ ಅಪಮಾನವೆಗಿದಂತೆ ಎಂದು ಹೇಳಿದ ನಾರಾಯಣಗೌಡ ಕರ್ನಾಟಕ ತಮಿಳು ಸಂಘವೂ ಕನ್ನಡಿಗರ ಜತೆ ನಿಂತಿದೆ ಎಂದರು.

ಟಿವಿ 9 ಕನ್ನಡ 30 May 2025 9:31 pm

ದಕ್ಷಿಣ ಕನ್ನಡದಲ್ಲಿ ಐವರನ್ನು ಬಲಿ ಪಡೆದ ವರುಣ: ಇನ್ನಷ್ಟು ದಿನ ಮಳೆ ಅಬ್ಬರ, ಶಾಲಾ-ಕಾಲೇಜುಗಳಿಗೆ ರಜೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆಯಿಂದಾಗಿ ಐದು ಜನರು ಮೃತಪಟ್ಟಿದ್ದಾರೆ. ಭೂಕುಸಿತ, ಪ್ರವಾಹದಿಂದ ಹಲವಾರು ಮನೆಗಳಿಗೆ ಹಾನಿಯಾಗಿದೆ. ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದ್ದು, ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಮಳೆಯಿಂದಾಗಿ ಮೃತಪಟ್ಟಿರುವ ಕುಟುಂಬಗಳಿಗೆ ಸರ್ಕಾರ ಐದು ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ.

ಟಿವಿ 9 ಕನ್ನಡ 30 May 2025 9:19 pm

ಆಂಗ್ಲರ ನಾಡಿನಲ್ಲಿ ಭರ್ಜರಿ ಶತಕ ಸಿಡಿಸಿದ ಕನ್ನಡಿಗ ಕರುಣ್ ನಾಯರ್

Karun Nair's 24th First-Class Century: ಭಾರತದಲ್ಲಿ ಐಪಿಎಲ್ ಪ್ಲೇ ಆಫ್ ನಡೆಯುತ್ತಿರುವಾಗಲೇ, ಭಾರತ ಎ ತಂಡ ಇಂಗ್ಲೆಂಡ್ ಪ್ರವಾಸದಲ್ಲಿದೆ. ಅಭಿಮನ್ಯು ಈಶ್ವರನ್ ನಾಯಕತ್ವದಲ್ಲಿ ಇಂಗ್ಲೆಂಡ್ ಲಯನ್ಸ್ ವಿರುದ್ಧದ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ಕನ್ನಡಿಗ ಕರುಣ್ ನಾಯರ್ ಅಮೋಘ ಶತಕ ಸಿಡಿಸಿದ್ದಾರೆ. ಆರಂಭಿಕರಾದ ಜೈಸ್ವಾಲ್ ಮತ್ತು ಈಶ್ವರನ್ ಬೇಗನೆ ಔಟ್ ಆದ ನಂತರ, ಸರ್ಫರಾಜ್ ಖಾನ್ ಜೊತೆಗೂಡಿ ಕರುಣ್ ಅವರು ಅದ್ಭುತ ಇನ್ನಿಂಗ್ಸ್‌ ಆಡಿದರು. ಇದು ಕರುಣ್ ಅವರ 24ನೇ ಪ್ರಥಮ ದರ್ಜೆ ಶತಕ.

ಟಿವಿ 9 ಕನ್ನಡ 30 May 2025 9:11 pm

ರಾಹುಲ್ ಗಾಂಧಿ, ರೇವಂತ್ ರೆಡ್ಡಿಯಿಂದ ಸಶಸ್ತ್ರ ಪಡೆಗಳಿಗೆ ಅವಮಾನ; ಕೇಂದ್ರ ಸಚಿವ ಕಿಶನ್ ರೆಡ್ಡಿ ಟೀಕೆ

ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಹೇಳಿಕೆಗೆ ಕೇಂದ್ರ ಸಚಿವ ಮತ್ತು ತೆಲಂಗಾಣ ಬಿಜೆಪಿ ಅಧ್ಯಕ್ಷ ಜಿ. ಕಿಶನ್ ರೆಡ್ಡಿ ತಿರುಗೇಟು ನೀಡಿದ್ದಾರೆ. ಈ ಹೇಳಿಕೆಯನ್ನು ನಾನು ಖಂಡಿಸುತ್ತೇನೆ ಎಂದು ಅವರು ಹೇಳಿದ್ದಾರೆ. ರಾಹುಲ್ ಗಾಂಧಿ ದೆಹಲಿಯಿಂದ ಮತ್ತು ರೇವಂತ್ ರೆಡ್ಡಿ ಹೈದರಾಬಾದ್‌ನಿಂದ ಮಾತನಾಡುತ್ತಾರೆ. ಭಾರತೀಯ ಸಶಸ್ತ್ರ ಪಡೆಗಳನ್ನು ಅವಮಾನಿಸುವುದು ಪೂರ್ತಿ ತಪ್ಪು ಎಂದು ಅವರು ಹೇಳಿದ್ದಾರೆ. ಪಾಕಿಸ್ತಾನ ಕೂಡ ರಫೇಲ್ ಯುದ್ಧ ವಿಮಾನಗಳನ್ನು ಹೊಡೆದುರುಳಿಸಿದ್ದೇವೆ ಎಂದು ಹೇಳಿಕೊಂಡಿಲ್ಲ. ಆದರೆ ಈ ಇಬ್ಬರೂ ಹಾಗೆ ಹೇಳಿಕೊಂಡಿದ್ದಾರೆ ಎಂದು ಟೀಕಿಸಿದ್ದಾರೆ.

ಟಿವಿ 9 ಕನ್ನಡ 30 May 2025 9:04 pm

ಕರ್ನಾಟಕದಲ್ಲಿ ಕೊರೊನಾ ಮತ್ತಷ್ಟು ಹೆಚ್ಚಳ, ಹೆಮ್ಮಾರಿಗೆ 3ನೇ ಬಲಿ: ಟೆಸ್ಟಿಂಗ್ ಕಡ್ಡಾಯಗೊಳಿಸಿದ ಕೇಂದ್ರ

ಕರ್ನಾಟಕದಲ್ಲಿ ಕೊರೊನಾ ಕೇಸ್​​​​​​ಗಳ ಸಂಖ್ಯೆ ದಿನೆದಿನೇ ಏರಿಕೆಯಾಗ್ತಿದೆ. ರಾಜಧಾನಿಯಲ್ಲೂ ಕೋವಿಡ್ ಸೋಂಕು ಸೆಂಚುರಿ ಬಾರಿಸಿ ಮುನ್ನುಗ್ಗುತ್ತಿದೆ. ಮಳೆ ಹಾಗೂ ಮೋಡದ ವಾತಾವರಣ ಇರೋದ್ರಿಂದ ಕೋವಿಡ್ ಕೇಸ್ ಗಳು ಕೂಡ ಸದ್ದಿಲ್ಲದೇ ಏರಿಕೆಯಾಗ್ತಿದ್ದು, ಜನರಿಗೆ ಆತಂಕ ಹೆಚ್ಚಿಸಿದೆ. ಹಾಗಾದ್ರೆ, ಇಂದು ಎಷ್ಟು ಕೊರೋನಾ ಪ್ರಕಣಗಳು ಪತ್ತೆಯಾಗಿವೆ ಎನ್ನುವ ವಿವರ ಇಲ್ಲಿದೆ.

ಟಿವಿ 9 ಕನ್ನಡ 30 May 2025 8:54 pm

ಜನ ನೀಡುವ ಕಾಸಿನಿಂದಲೇ ಕಮಲ್ ಹಾಸನ್ ಒಬ್ಬ ನಟನಾಗಿ ಬೆಳೆದಿದ್ದು: ವಿ ಸೋಮಣ್ಣ, ಕೇಂದ್ರ ಸಚಿವ

ವಿವಾದದ ಬಗ್ಗೆ ಚಿತ್ರನಟ ಡಾ ಶಿವರಾಜಕುಮಾರ್ ಅವರು ಮೌನ ತಳೆದಿರುವುದಕ್ಕೆ ಪ್ರತಿಕ್ರಿಯೆ ನೀಡಿದ ಸೋಮಣ್ಣ, ಅವರ ಅರೋಗ್ಯದಲ್ಲಿ ಏರುಪೇರಾಗಿದೆ, ಡಾ ರಾಜ್ ಕುಮಾರ್ ಮತ್ತು ಶಿವಣ್ಣ ಅವರನ್ನು ಚಿಕ್ಕಂದಿನಿಂದ ನೋಡುತ್ತ ಬಂದಿರುವ ತನಗೆ ಆ ಕುಟುಂಬ ಹೇಗೆ ಅಂತ ಚೆನ್ನಾಗಿ ಗೊತ್ತು ಎಂದು ಹೇಳಿದರು. ಕನ್ನಡಿಗರು ಯಾವತ್ತೂ ಬೇರೆ ಭಾಷೆಗಳ ಬಗ್ಗೆ ಹಗುರವಾಗಿ ಮಾತಾಡಿಲ್ಲ ಎಂದು ಸೋಮಣ್ಣ ಹೇಳಿದರು.

ಟಿವಿ 9 ಕನ್ನಡ 30 May 2025 8:37 pm

ದುಬೈನಲ್ಲಿ ಪಾಕಿಸ್ತಾನಿ ಕ್ರಿಕೆಟಗರಿಗೆ ಕೇರಳ ಸಮುದಾಯದವರಿಂದ ಅದ್ದೂರಿ ಸ್ವಾಗತ; ನೆಟ್ಟಿಗರಿಂದ ತೀವ್ರ ಆಕ್ರೋಶ

ಪಾಕಿಸ್ತಾನಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ಹಾಗೂ ಉಮರ್ ಗುಲ್ ಅವರನ್ನು ಕಾರ್ಯಕ್ರಮಕ್ಕೆ ಸ್ವಾಗತಿಸಿದ ದುಬೈನಲ್ಲಿರುವ ಕೇರಳ ಸಮುದಾಯದವರನ್ನು ನೆಟಿಜನ್‌ಗಳು ಟೀಕಿಸಿದ್ದಾರೆ. ಪಹಲ್ಗಾಮ್‌ನಲ್ಲಿ ನಡೆದ ಇತ್ತೀಚೆಗೆ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ನಾಗರಿಕರು ಸಾವನ್ನಪ್ಪಿದ ನಂತರ ಪಾಕಿಸ್ತಾನದ ಮಾಜಿ ನಾಯಕ ಭಾರತದ ವಿರುದ್ಧ ವಿಷಕಾರಿ ನಿಲುವು ತಳೆದ ಹಿನ್ನೆಲೆಯಲ್ಲಿ ಈ ನಕಾರಾತ್ಮಕ ಪ್ರತಿಕ್ರಿಯೆಗಳು ಬಂದಿವೆ.

ಟಿವಿ 9 ಕನ್ನಡ 30 May 2025 8:30 pm

Jasprit Bumrah: ಕ್ರಿಕೆಟ್​ಗಿಂತ ಕುಟುಂಬ ಮುಖ್ಯ; ನಿವೃತ್ತಿಯ ಸುಳಿವು ನೀಡಿದ್ರಾ ಜಸ್ಪ್ರೀತ್ ಬುಮ್ರಾ?

Jasprit Bumrah's Shocking Revelation: ಜಸ್ಪ್ರೀತ್ ಬುಮ್ರಾ ಅವರು ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಕುಟುಂಬವು ವೃತ್ತಿಗಿಂತ ಮುಖ್ಯ ಎಂದು ಹೇಳಿದ್ದಾರೆ. ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನ ಈ ಹೇಳಿಕೆ ಕ್ರಿಕೆಟ್ ಅಭಿಮಾನಿಗಳಲ್ಲಿ ಆತಂಕವನ್ನು ಹುಟ್ಟುಹಾಕಿದೆ. ಮೂರು ಸ್ವರೂಪಗಳಲ್ಲಿ ಆಡುವುದರ ಕಷ್ಟವನ್ನು ಉಲ್ಲೇಖಿಸಿ, ತಮ್ಮ ದೇಹದ ಆರೋಗ್ಯವನ್ನು ಗಮನಿಸಬೇಕೆಂದು ಅವರು ಹೇಳಿದ್ದಾರೆ. ಇದರಿಂದ ಅವರ ನಿವೃತ್ತಿ ಸನ್ನಿಹಿತವಾಗಿದೆ ಎಂಬ ಊಹಾಪೋಹಗಳು ಹರಡುತ್ತಿವೆ.

ಟಿವಿ 9 ಕನ್ನಡ 30 May 2025 8:20 pm

ಓದೋದರಲ್ಲಿ ಜ್ಯೋತಿಕಾ-ಸೂರ್ಯ ಮಗಳು ಜಾಣೆ; ಹೆಮ್ಮೆಯಿಂದ ಪೋಸ್ ನೀಡಿದ ಸ್ಟಾರ್ ಕಪಲ್

ಸ್ಟಾರ್ ದಂಪತಿ ಸೂರ್ಯ ಹಾಗೂ ಜ್ಯೋತಿಕಾ ಅವರ ಮಗಳು ದಿಯಾಗೆ ಈಗ 18 ವರ್ಷ ವಯಸ್ಸು. ಮಗಳು ಉತ್ತಮ ಅಂಕ ಪಡೆದಿರುವುದಕ್ಕೆ ಈ ದಂಪತಿ ಖುಷಿಪಟ್ಟಿದ್ದಾರೆ. ಹೆಮ್ಮೆಯಿಂದ ಪೋಸ್ ನೀಡಿದ್ದಾರೆ. ಜ್ಯೋತಿಕಾ-ಸೂರ್ಯ ದಂಪತಿಯ ಮಕ್ಕಳಾದ ದಿಯಾ ಮತ್ತು ದೇವ್ ಮುಂಬೈನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

ಟಿವಿ 9 ಕನ್ನಡ 30 May 2025 8:16 pm

Relationship Tips: ದಂಪತಿ ಈ ಸಮಯದಲ್ಲಿ ಅಪ್ಪಿತಪ್ಪಿಯೂ ಸೇರಬಾರದು

ಸಾಮಾನ್ಯವಾಗಿ ಮನೆಯಲ್ಲಿರುವ ಹಿರಿಯರು ಗಂಡ- ಹೆಂಡತಿ ಮೊದಲು ಸೇರುವುದಕ್ಕೆ ಒಂದು ಮುಹೂರ್ತ ಹುಡುಕುತ್ತಾರೆ. ಈ ರೀತಿಯ ಪದ್ಧತಿ ಇತ್ತೀಚಿಗೆ ಕಡಿಮೆಯಾಗಿದ್ದರೂ ಕೂಡ ಹಿಂದೆ ಈ ರೀತಿ ಸಂಪ್ರದಾಯವನ್ನು ಅನುಸರಿಸುತ್ತಿದ್ದರು ಅದೇ ರೀತಿ ಕೆಲವು ಸಂದರ್ಭಗಳಲ್ಲಿ ದಂಪತಿ ಸೇರಬಾರದು, ಅದು ಒಳ್ಳೆಯದಲ್ಲ ಎನ್ನಲಾಗುತ್ತದೆ. ಹಾಗಾದರೆ ದಂಪತಿ ಯಾವ ಸಮಯದಲ್ಲಿ ಶೃಂಗಾರ ಮಾಡುವುದು ಒಳ್ಳೆಯದಲ್ಲ? ಈ ರೀತಿ ಹೇಳುವುದಕ್ಕೆ ಕಾರಣವೇನು? ಈ ಬಗ್ಗೆ ಮಾಹಿತಿ ಇಲ್ಲಿದೆ ತಿಳಿದುಕೊಳ್ಳಿ.

ಟಿವಿ 9 ಕನ್ನಡ 30 May 2025 8:14 pm

ಒಂದು ಕಪ್ ಕಾಫಿ ಬೆಲೆ ಬರೋಬ್ಬರಿ ಆರು ಸಾವಿರ ರೂಪಾಯಿಯಂತೆ, ಈ ಕಾಫಿ ಅಷ್ಟೊಂದು ದುಬಾರಿ ಯಾಕೆ?

ಕಾಫಿ ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಹೌದು, ಹೆಚ್ಚಿನವರು ಈ ಟೀ ಕಾಫಿಗೆ ಅಡಿಕ್ಟ್ ಆಗಿಬಿಟ್ಟಿದ್ದಾರೆ. ಕೆಲವರು ಕಾಫಿ ಕುಡಿಯುವುದನ್ನು ಮಾತ್ರ ಯಾವುದೇ ಕಾರಣಕ್ಕೂ ಮಿಸ್ ಮಾಡುವುದೇ ಇಲ್ಲ. ಆದ್ರೆ ವಿಶ್ವದ ದುಬಾರಿ ಬೆಲೆಯ ಕಾಫಿಯ ಬಗ್ಗೆ ನಿಮಗೆ ಗೊತ್ತಾ? ಹೌದು ದುಬಾರಿ ಬೆಲೆ ಬಾಳುವ ಈ ಕಾಫಿಯನ್ನು ತಯಾರಿಸುವ ರೀತಿ ತಿಳಿದ್ರೆ ಅಚ್ಚರಿ ಪಡ್ತೀರಾ. ಹಾಗಾದ್ರೆ ಈ ಕುರಿತಾದ ಕುತೂಹಲಕಾರಿ ಮಾಹಿತಿ ಇಲ್ಲಿದೆ.

ಟಿವಿ 9 ಕನ್ನಡ 30 May 2025 8:10 pm

IPL 2025: ಆರ್​ಸಿಬಿಯ ಹೊಸ ಆಪತ್ಭಾಂಧವ ಜೋಶ್ ಹೇಜಲ್​ವುಡ್ ಎಷ್ಟು ಕೋಟಿಯ ಒಡೆಯ ಗೊತ್ತಾ?

Josh Hazelwood Net Worth: ಆರ್‌ಸಿಬಿ ತಂಡ ಸೇರಿದ ಬಳಿಕ ಜೋಶ್ ಹೇಜಲ್‌ವುಡ್ ಅವರ ಅದ್ಭುತ ಬೌಲಿಂಗ್ ಪ್ರದರ್ಶನದಿಂದ ತಂಡದ ಚಿತ್ರಣವೇ ಬದಲಾಗಿದೆ. 11 ಪಂದ್ಯಗಳಲ್ಲಿ 21 ವಿಕೆಟ್‌ಗಳನ್ನು ಪಡೆದ ಅವರು 12.5 ಕೋಟಿ ರೂ.ಗಳಿಗೆ ಆರ್​ಸಿಬಿ ಸೇರಿಕೊಂಡಿದ್ದರು. ಐಪಿಎಲ್‌ನಿಂದ 32.5 ಕೋಟಿ ರೂ. ಗಳಿಸಿರುವ ಹೇಜಲ್‌ವುಡ್ ಅವರ ನಿವ್ವಳ ಮೌಲ್ಯ 80 ಕೋಟಿ ರೂ.ಗಿಂತ ಹೆಚ್ಚು ಎಂದು ಅಂದಾಜಿಸಲಾಗಿದೆ.

ಟಿವಿ 9 ಕನ್ನಡ 30 May 2025 7:51 pm

ರಮ್ಯಾ ಕನ್ನಡ ಹೋರಾಟಗಾರರ ಬದಲು ಕಮಲ್ ಹಾಸನ್​ಗೆ ಉಪದೇಶ ಮಾಡಲಿ: ಟಿಎ ನಾರಾಯಣಗೌಡ, ಕರವೇ

ಕರ್ನಾಟಕದದಲ್ಲಿ ಕನ್ನಡಕ್ಕಿಂತ ದೊಡ್ಡೋರು ಯಾರೂ ಇಲ್ಲ, ಕಮಲ್ ಹಾಸನ್ ಗೆ ಈಗಲೂ ಕಾಲ ಮಿಂಚಿಲ್ಲ, ಅವರ ಸಿನಿಮಾ ಬಿಡುಗಡೆ ಆಗುವ ದಿನಾಂಕದೊಳಗೆ ಕನ್ನಡಿಗರ ಕ್ಷಮೆ ಯಾಚಿಸಲಿ, ಅವರು ಮಾಡದ ತಪ್ಪಿಗೆ ಯಾರೂ ಕ್ಷಮೆ ಕೇಳುವಂತೆ ಹೇಳುತ್ತಿಲ್ಲ, ಅವರು ಮಾತಾಡಿದ್ದು ತಪ್ಪು ಅಂತ ಎಲ್ಲರಿಗೂ ಗೊತ್ತು, ಮೂರ್ಖ ಸಮರ್ಥನೆಗಳನ್ನು ಬಿಟ್ಟು ಕ್ಷಮೆ ಯಾಚಿಸಲಿ ಎಂದು ನಾರಾಯಣಗೌಡ ಹೇಳಿದರು.

ಟಿವಿ 9 ಕನ್ನಡ 30 May 2025 7:49 pm

ನಾಲ್ಕೇ ದಿನದಲ್ಲಿ ಕೆಆರ್​​​ಎಸ್​​ಗೆ ಹರಿದುಬಂತು 11 ಅಡಿ ನೀರು: ಹಲವು ವರ್ಷಗಳ ಬಳಿಕ ಮೇ ತಿಂಗಳಲ್ಲೇ 100 ಅಡಿ ಭರ್ತಿ

ಕಳೆದ ನಾಲ್ಕು ದಿನದ ಹಿಂದಷ್ಟೇ ಮೈಸೂರು ಭಾಗದ ಜೀವನಾಡಿ ಕೆಆರ್ ಎಸ್ ಡ್ಯಾಂ ನೀರಿನ ಮಟ್ಟ 89 ಅಡಿಗೆ ಕುಸಿದಿತ್ತು.‌ ಬರಿದಾಗುತ್ತಿದ್ದ ಜಲಾಶಯ ನೋಡೋದಕ್ಕೆ ಕೆರೆಯಂತೆ ಕಾಣುತ್ತಿತ್ತು, ಇದೀಗ ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದ್ದರಿಂದ ಡ್ಯಾಂಗೆ ‌ಜೀವ‌‌ ಕಳೆ ಬಂದಿದೆ. ಇದರಿಂದ ಮಂಡ್ಯ ಜಿಲ್ಲೆಯ ರೈತರ ಸಂತಸಕ್ಕೆ‌ ಕಾರಣವಾಗಿದ್ರೆ, ಮತ್ತೊಂದೆಡೆ ಸಿಲಿಕಾನ್ ಸಿಟಿ ಬೆಂಗಳೂರಿನ ಆತಂಕ‌ ದೂರ ಮಾಡಿದೆ. ಹಾಗಾದ್ರೆ, ಸದ್ಯ ಜಲಾಶಯದಲ್ಲಿ ನೀರು ಎಷ್ಟಿದೆ? ಎನ್ನುವ ವಿವರ ಇಲ್ಲಿದೆ.

ಟಿವಿ 9 ಕನ್ನಡ 30 May 2025 7:48 pm