SENSEX
NIFTY
GOLD
USD/INR

Weather

25    C

ಡಿಜಿಟಲ್ ಸುದ್ದಿ ಮೂಲಗಳು

... ...View News by News Source

ಬರೋಬ್ಬರಿ 17 ಸಿಕ್ಸ್​…ವಿಶ್ವ ದಾಖಲೆಯ ಸೆಂಚುರಿ ಸಿಡಿಸಿದ ಇಹ್ಸಾನ್

Muhammad Ihsan T20 Records: ಟಿ20 ಅಂತಾರಾಷ್ಟ್ರೀಯ ಇನಿಂಗ್ಸ್​ನಲ್ಲಿ ಒಂದೇ ಓವರ್​ನಲ್ಲಿ ಅತ್ಯಧಿಕ ಸಿಕ್ಸ್ ಸಿಡಿಸಿದ ವಿಶ್ವ ದಾಖಲೆ ಎಸ್ಟೋನಿಯಾದ ಸಾಹಿಲ್ ಚೌಹಾನ್ ಹೆಸರಿನಲ್ಲಿದೆ. ಸಾಹಿಲ್ ಸೈಪ್ರಸ್ ವಿರುದ್ಧದ ಪಂದ್ಯದಲ್ಲಿ 18 ಸಿಕ್ಸ್ ಸಿಡಿಸಿ ಈ ದಾಖಲೆ ಬರೆದಿದ್ದಾರೆ. ಇದೀಗ ಸ್ಪೇನ್​ನ ಮುಹಮ್ಮದ್ ಇಹ್ಸಾನ್ 17 ಸಿಕ್ಸ್ ಬಾರಿಸಿ ಈ ಪಟ್ಟಿಯಲ್ಲಿ ದ್ವಿತೀಯ ಸ್ಥಾನ ಅಲಂಕರಿಸಿದ್ದಾರೆ.

ಟಿವಿ 9 ಕನ್ನಡ 8 Dec 2025 11:53 am

ಡಿಕೆಶಿ ಅವಕಾಶ ಕೇಳಿದ್ರು, ನಾಯಕತ್ವ ಬದಲಾವಣೆಗೆ ಹೈಕಮಾಂಡ್ ಸಮ್ಮತಿಸಿಲ್ಲ: ಯತೀಂದ್ರ ಸಿದ್ದರಾಮಯ್ಯ

ಸಿದ್ದರಾಮಯ್ಯ 5 ವರ್ಷ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ ಎಂಬ ವಿಶ್ವಾಸ ವೈಯಕ್ತಿಕವಾಗಿ ನನಗಿದೆ ಎಂದು ಯತೀಂದ್ರ ಸಿದ್ದರಾಮಯ್ಯ ಬೆಳಗಾವಿಯಲ್ಲಿ ಸ್ಪಷ್ಟಪಡಿಸಿದ್ದಾರೆ. ಡಿಕೆಶಿ ಅವಕಾಶ ಕೇಳಿದ್ದರು. ಆದರೆ, ನಾಯಕತ್ವ ಬದಲಾವಣೆ ಪರಿಸ್ಥಿತಿ ಇಲ್ಲ ಎಂದು ಹೈಕಮಾಂಡ್ ಹೇಳಿದೆ. ದೆಹಲಿಯಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ ಎಂದೂ ಅವರು ಹೇಳಿದ್ದಾರೆ.

ಟಿವಿ 9 ಕನ್ನಡ 8 Dec 2025 11:52 am

ನೆಟ್​ಫ್ಲಿಕ್ಸ್ ವಾರ್ನರ್ ಬ್ರೋಸ್ ಡೀಲ್​ನಿಂದ ಭಾರತೀಯ ಚಿತ್ರೋದ್ಯಮ ಕಂಗಾಲು; ಸಿನಿಮಾ ರಂಗದ ಆತಂಕವೇನು?

Why Indian film industry worried over Netflix acquiring Warner Bros: ವಾರ್ನರ್ ಬ್ರೋಸ್ ಡಿಸ್ಕವರಿ ಸಂಸ್ಥೆಯನ್ನು ನೆಟ್​ಫ್ಲಿಕ್ಸ್ ಖರೀದಿಸಲಾಗುತ್ತಿರುವ ಸುದ್ದಿಗೆ ಭಾರತದ ಮಲ್ಟಿಪ್ಲೆಕ್ಸ್​ಗಳು ಆತಂಕಗೊಂಡಿವೆ. ಈ ಬೆಳವಣಿಗೆಯಿಂದ ಚಿತ್ರಮಂದಿರಗಳಿಗೆ ಹಿನ್ನಡೆಯಾಗಬಹುದು ಎಂಬುದು ಮಲ್ಟಿಪ್ಲೆಕ್ಸ್​ಗಳ ಸಂಘಟನೆಯಾದ ಎಂಎಐ ಹೇಳಿಕೊಂಡಿದೆ. ವಿಶ್ವದ ಅತಿದೊಡ್ಡ ಸ್ಟ್ರೀಮಿಂಗ್ ಕಂಪನಿಯಾದ ನೆಟ್​ಫ್ಲಿಕ್ಸ್ 83 ಬಿಲಿಯನ್ ಡಾಲರ್​ಗೆ ವಾರ್ನರ್ ಬ್ರೋಸ್ ಅನ್ನು ಖರೀದಿಸುತ್ತಿದೆ.

ಟಿವಿ 9 ಕನ್ನಡ 8 Dec 2025 11:48 am

ನವಜೋತ್‌ ಸಿಂಗ್‌ ಸಿಧು ಅವರ ಪತ್ನಿ ಮೆಂಟಲ್‌ ಪೇಷೆಂಟ್‌ ಇರಬೇಕು : ಡಿಕೆಶಿ

ಬೆಂಗಳೂರು, ಡಿ.8- ಕಾಂಗ್ರೆಸ್‌‍ ಪಕ್ಷದಲ್ಲಿ ಮುಖ್ಯಮಂತ್ರಿಯಾಗಲು 500 ಕೋಟಿ ರೂಪಾಯಿಗಳನ್ನು ಲಂಚವಾಗಿ ನೀಡಬೇಕು ಎಂದು ಹೇಳುವವರನ್ನು ಮೆಂಟಲ್‌ ಆಸ್ಪತ್ರೆಗೆ ದಾಖಲಿಸಬೇಕಿದೆ ಎಂದು ಉಪಮುಖ್ಯಮಂತ್ರಿಯೂ ಆಗಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ತಿರುಗೇಟು ನೀಡಿದ್ದಾರೆ. ಹೈದರಾಬಾದ್‌ಗೆ ತೆರಳುವ ಮುನ್ನ ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಂಜಾಬ್‌ ನ ಕಾಂಗ್ರೆಸ್‌‍ ಮುಖಂಡರಾದ ನವಜೋತ್‌ ಸಿಂಗ್‌ ಸಿಧು ಅವರ ಪತ್ನಿ ನೀಡಿರುವ ಹೇಳಿಕೆಗೆ ಸಿಡಿಮಿಡಿ ವ್ಯಕ್ತಪಡಿಸಿದರು.ಹೇಳಿಕೆ ನೀಡಿದವರನ್ನು ಯಾವುದಾದರೂ ಒಳ್ಳೆಯ ಮಾನಸಿಕ ಆರೋಗ್ಯ ಚಿಕಿತ್ಸೆ ನೀಡುವ ಆಸ್ಪತ್ರೆಗೆ ದಾಖಲಿಸೋಣ ಎಂದು ಹೇಳಿದರು. ಸದ್ಯಕ್ಕೆ […] The post ನವಜೋತ್‌ ಸಿಂಗ್‌ ಸಿಧು ಅವರ ಪತ್ನಿ ಮೆಂಟಲ್‌ ಪೇಷೆಂಟ್‌ ಇರಬೇಕು : ಡಿಕೆಶಿ first appeared on Eesanje .

ಈಸಂಜೆ 8 Dec 2025 11:39 am

ಛತ್ತೀಸ್‌‍ಗಢದಲ್ಲಿ ಗುತ್ತಿಗೆದಾರನನ್ನು ಕೊಂದ ಕೆಂಪು ಉಗ್ರರು

ಬಿಜಾಪುರ, ಡಿ. 8 (ಪಿಟಿಐ) ಛತ್ತೀಸ್‌‍ಗಢದ ಬಿಜಾಪುರ ಜಿಲ್ಲೆಯಲ್ಲಿ ರಸ್ತೆ ನಿರ್ಮಾಣ ಗುತ್ತಿಗೆದಾರನನ್ನು ನಕ್ಸಲರು ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಗುತ್ತಿಗೆದಾರ ಇಮ್ತಿಯಾಜ್‌ ಅಲಿ ಅವರ ಶವ ತಡರಾತ್ರಿ ಪಮೇದ್‌ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿರುವ ಭದ್ರತಾ ಶಿಬಿರದ ಬಳಿ ಪತ್ತೆಯಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆ ಪ್ರದೇಶದಲ್ಲಿ ರಸ್ತೆ ನಿರ್ಮಾಣ ಕಾರ್ಯವನ್ನು ಅಲಿಗೆ ವಹಿಸಲಾಗಿದೆ ಎಂದು ಅವರು ಹೇಳಿದರು.ಪ್ರಾಥಮಿಕ ಮಾಹಿತಿಯ ಪ್ರಕಾರ, ಮಾವೋವಾದಿ ಮಿಲಿಟಿಯಾ ಸದಸ್ಯರ ಗುಂಪೊಂದು ನಿನ್ನೆ ಸಂಜೆ ಮೆಟಗುಡಾ ಭದ್ರತಾ ಶಿಬಿರದ ಬಳಿ […] The post ಛತ್ತೀಸ್‌‍ಗಢದಲ್ಲಿ ಗುತ್ತಿಗೆದಾರನನ್ನು ಕೊಂದ ಕೆಂಪು ಉಗ್ರರು first appeared on Eesanje .

ಈಸಂಜೆ 8 Dec 2025 11:32 am

ಮಾನವ ಸಮಾಜವನ್ನು ಭಕ್ತಿ, ನಂಬಿಕೆಯೊಂದಿಗೆ ಬೆಸೆದ ಶ್ರೇಯಸ್ಸು ಪ್ರಮುಖ್ ಸ್ವಾಮಿ ಮಹಾರಾಜ್​ಗೆ ಸಲ್ಲುತ್ತೆ: ಅಮಿತ್ ಶಾ

ಮಾನವ ಸಮಾಜವನ್ನು ಭಕ್ತಿ, ನಂಬಿಕೆಯೊಂದಿಗೆ ಸಂಪರ್ಕಿಸಿದ ಶ್ರೇಯಸ್ಸು ಬಿಎಪಿಎಸ್ ಸ್ವಾಮಿನಾರಾಯಣ ಸಂಸ್ಥೆಯ ಪ್ರಮುಖ್ ಸ್ವಾಮಿ ಮಹಾರಾಜ್ ಅವರಿಗೆ ಸಲ್ಲುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಬಿಎಪಿಎಸ್ ಆಯೋಜಿಸಿದ್ದ ಅಮೃತ್ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಪ್ರಮುಖ್ ಸ್ವಾಮಿ ಮಹಾರಾಜ್ ಆಧ್ಯಾತ್ಮಿಕತೆ ಮತ್ತು ವೈಷ್ಣವ ತತ್ವಶಾಸ್ತ್ರವನ್ನು ವಿಸ್ತರಿಸಿ ಸಮಾಜದಲ್ಲಿ ಪ್ರಾಯೋಗಿಕವಾಗಿಸಿದರು.

ಟಿವಿ 9 ಕನ್ನಡ 8 Dec 2025 11:31 am

IndiGo Flights: ಏಳನೇ ದಿನಕ್ಕೆ ಕಾಲಿಟ್ಟ ವಿಮಾನ ಹಾರಾಟ ವ್ಯತ್ಯಯ; 100ಕ್ಕೂ ಹೆಚ್ಚು ವಿಮಾನ ರದ್ದು

ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂಡಿಗೋ ವಿಮಾನಗಳ ಅವ್ಯವಸ್ಥೆ 7ನೇ ದಿನಕ್ಕೆ ಕಾಲಿಟ್ಟಿದೆ. ಇಂದು 100ಕ್ಕೂ ಹೆಚ್ಚು ವಿಮಾನಗಳ ಹಾರಾಟ ರದ್ದಾಗಿದ್ದು, ಸಹಸ್ರಾರು ಪ್ರಯಾಣಿಕರು ಪರದಾಡುತ್ತಿದ್ದಾರೆ. ವಿಮಾನ ನಿಲ್ದಾಣದಲ್ಲಿ ದಟ್ಟಣೆ ಹೆಚ್ಚಿದ್ದು, ಪ್ರವೇಶಕ್ಕೆ ಕಿಲೋಮೀಟರ್‌ಗಟ್ಟಲೆ ಸರದಿಯಲ್ಲಿ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ.

ಟಿವಿ 9 ಕನ್ನಡ 8 Dec 2025 11:31 am

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 127 ಇಂಡಿಗೋ ವಿಮಾನಗಳ ಹಾರಾಟ ರದ್ದು

ಬೆಂಗಳೂರು, ಡಿ. 8 (ಪಿಟಿಐ) ಇಂಡಿಗೋ ವಿಮಾನ ಯಾನ ಸಂಸ್ಥೆಯ ಗೋಳು ಮುಗಿಯುವ ಹಾಗೇ ಕಾಣುತ್ತಿಲ್ಲ. ಇಂದು ಕೂಡ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 127 ವಿಮಾನ ಯಾನಗಳನ್ನು ರದ್ದುಗೊಳಿಸಲಾಗಿದೆ. ಹೀಗಾಗಿ ಇಂಡಿಗೋ ಸಿಇಒ ಪೀಟರ್‌ ಎಲ್ಬರ್ಸ್‌ ಮತ್ತು ಮುಖ್ಯ ಕಾರ್ಯಾಚರಣಾ ಅಧಿಕಾರಿ ಮತ್ತು ಜವಾಬ್ದಾರಿಯುತ ವ್ಯವಸ್ಥಾಪಕ ಇಸಿಡ್ರೊ ಪೋರ್ಕ್‌ವೆರಾಸ್‌‍ ಅವರಿಗೆ ವಿಮಾನಯಾನ ಕಾರ್ಯಾಚರಣೆಯಲ್ಲಿ ನಡೆಯುತ್ತಿರುವ ಅಡಚಣೆಗಳ ಕುರಿತು ತನ್ನ ಶೋಕಾಸ್‌‍ ನೋಟಿಸ್‌‍ಗೆ ಉತ್ತರ ಸಲ್ಲಿಸಲು ಡಿಜಿಸಿಎ ಇಂದು ಸಂಜೆ 6 ಗಂಟೆಯವರೆಗೆ ಸಮಯವನ್ನು ವಿಸ್ತರಿಸಿದೆ. […] The post ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 127 ಇಂಡಿಗೋ ವಿಮಾನಗಳ ಹಾರಾಟ ರದ್ದು first appeared on Eesanje .

ಈಸಂಜೆ 8 Dec 2025 11:30 am

ಅಕ್ರಮ ವಲಸಿಗರ ವಿರುದ್ಧ ಠಿಣ ಮತ್ತು ನಿರ್ಣಾಯಕ ಕ್ರಮಕ್ಕೆ ಮುಂದಾದ ಯೋಗಿ ಆದಿತ್ಯನಾಥ್‌

ಲಕ್ನೋ, ಡಿ.8 (ಪಿಟಿಐ) ಅಕ್ರಮ ವಲಸಿಗರ ವಿರುದ್ಧ ಕಠಿಣ ಮತ್ತು ನಿರ್ಣಾಯಕ ಕ್ರಮ ಕೈಗೊಳ್ಳಲು ಉತ್ತರ ಪ್ರದೇಶ ಸರ್ಕಾರ ತೀರ್ಮಾನಿಸಿದೆ.ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಕೆಲಸಗಾರರನ್ನು ನೇಮಿಸಿಕೊಳ್ಳುವಾಗ ಜಾಗರೂಕರಾಗಿರಿ ಮತ್ತು ಗುರುತಿನ ಪರಿಶೀಲನೆಯನ್ನು ಮಾಡಿಸಿಕೊಳ್ಳುವಂತೆ ಅಲ್ಲಿನ ಜನತೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ. ಭದ್ರತೆ ಮತ್ತು ಸಾಮಾಜಿಕ ಸಮತೋಲನವನ್ನು ಕಾಪಾಡಲು ಉತ್ತರ ಪ್ರದೇಶವು ಅಕ್ರಮ ವಲಸಿಗರ ವಿರುದ್ಧ ಕಠಿಣ ಮತ್ತು ನಿರ್ಣಾಯಕ ಕ್ರಮವನ್ನು ಪ್ರಾರಂಭಿಸಿದೆ ಎಂದು ಅವರಿ ಪ್ರತಿಪಾದಿಸಿದರು.ಕಳೆದ ವಾರ ಅಧಿಕಾರಿಗಳಿಗೆ ನೀಡಿದ ಸೂಚನೆಗಳನ್ನು ಅನುಸರಿಸಿ ರಾಜ್ಯಾದ್ಯಂತ ನುಸುಳುಕೋರರ ವಿರುದ್ಧ […] The post ಅಕ್ರಮ ವಲಸಿಗರ ವಿರುದ್ಧ ಠಿಣ ಮತ್ತು ನಿರ್ಣಾಯಕ ಕ್ರಮಕ್ಕೆ ಮುಂದಾದ ಯೋಗಿ ಆದಿತ್ಯನಾಥ್‌ first appeared on Eesanje .

ಈಸಂಜೆ 8 Dec 2025 11:27 am

ನನ್ನ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದರೆ ಸರ್ಕಾರದ ತೀರ್ಮಾನಕ್ಕೆ ತಲೆಬಾಗುತ್ತೇನೆ : ಹೊರಟ್ಟಿ

ಬೆಳಗಾವಿ(ಸುವರ್ಣಸೌಧ),ಡಿ.8- ಒಂದು ವೇಳೆ ಸದನದಲ್ಲಿ ತಮ್ಮ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದರೆ ಸರ್ಕಾರದ ತೀರ್ಮಾನಕ್ಕೆ ತಲೆಬಾಗುವುದಾಗಿ ವಿಧಾನ ಪರಿಷತ್‌ ಸಭಾಪತಿ ಬಸವರಾಜ್‌ ಹೊರಟ್ಟಿ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಅಧಿವೇಶನದಲ್ಲಿ ತಮ ವಿರುದ್ಧ ಸರ್ಕಾರ ಅವಿಶ್ವಾಸ ನಿರ್ಣಯ ಮಂಡಿಸುವ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಒಂದು ವೇಳೆ ಮಂಡನೆ ಮಾಡಿದರೆ ಅದಕ್ಕೆ ತಲೆಬಾಗಲೇ ಬೇಕಾಗುತ್ತದೆ ಎಂದು ಸ್ಪಷ್ಟಪಡಿಸಿದರು. ಅವಿಶ್ವಾಸ ನಿರ್ಣಯ ಮಂಡಿಸುವುದು ಬಿಡುವುದು ಸರ್ಕಾರದ ತೀರ್ಮಾನಕ್ಕೆ ಬಿಟ್ಟ ವಿಷಯ. ಸಭಾಪತಿಯಾಗಿ ನಾನು ನಿಯಮಗಳ ಅಡಿ […] The post ನನ್ನ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದರೆ ಸರ್ಕಾರದ ತೀರ್ಮಾನಕ್ಕೆ ತಲೆಬಾಗುತ್ತೇನೆ : ಹೊರಟ್ಟಿ first appeared on Eesanje .

ಈಸಂಜೆ 8 Dec 2025 11:23 am

ಬೆಳಗಾವಿಯಲ್ಲಿ ಸಿಎಂ ತಂಗಿರೋ ಸರ್ಕ್ಯೂಟ್ ಹೌಸ್​​ಗೆ ಹೇಗಿದೆ ಗೊತ್ತಾ ಸೆಕ್ಯೂರಿಟಿ?

ಬೆಳಗಾವಿಯಲ್ಲಿ ಇಂದು ಚಳಿಗಾಲದ ಅಧಿವೇಶನ ಆರಂಭವಾಗಿದ್ದು, ಸಿಎಂ ಸಿದ್ದರಾಮಯ್ಯ ತಂಗಿರುವ ಸರ್ಕ್ಯೂಟ್ ಹೌಸ್ ಬಳಿ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ. ದೆಹಲಿ ಬ್ಲಾಸ್ಟ್ ಪ್ರಕರಣದ ಜೊತೆಗೆ 80ಕ್ಕೂ ಹೆಚ್ಚು ಸಂಘಟನೆಗಳಿಂದ ಪ್ರತಿಭಟನೆ ಎಚ್ಚರಿಕೆ ಹಿನ್ನೆಲೆ ಮುಂಜಾಗೃತಾ ಕ್ರಮ ಕೈಗೊಳ್ಳಲಾಗಿದೆ. ಸುವರ್ಣಸೌಧದ ಸುತ್ತಮುತ್ತಲೂ ಹೈ ಅಲರ್ಟ್ ಘೋಷಿಸಲಾಗಿದೆ.

ಟಿವಿ 9 ಕನ್ನಡ 8 Dec 2025 11:16 am

ಬಿಗ್ ಬಾಸ್ ಗೆದ್ದ ಗೌರವ್​ಗೆ ದೊಡ್ಮನೆಯಲ್ಲಿ ಕೋಟಿ ಕೋಟಿ ಸಂಭಾವನೆ

ಗೌರವ್ ಖನ್ನಾ 'ಬಿಗ್ ಬಾಸ್ 19' ವಿಜೇತರಾಗಿದ್ದಾರೆ. ಟ್ರೋಫಿ ಜೊತೆಗೆ 50 ಲಕ್ಷ ರೂ. ಬಹುಮಾನ ಪಡೆದರು. ಮನೆಯಲ್ಲಿದ್ದ 14 ವಾರಗಳಲ್ಲಿ ಗೌರವ್ ಪ್ರತಿ ವಾರ ಅತಿ ಹೆಚ್ಚು ಸಂಭಾವನೆ ಪಡೆದು, ಒಟ್ಟು 2.45 ಕೋಟಿ ರೂ. ಗಳಿಸಿದ್ದಾರೆ. ಅವರ ಒಟ್ಟು ಆಸ್ತಿ 15-18 ಕೋಟಿ ರೂ. ಎನ್ನಲಾಗಿದೆ. ಅವರ ಶಾಂತ ಸ್ವಭಾವವೇ ಈ ಗೆಲುವಿಗೆ ಕಾರಣವಾಯಿತು.

ಟಿವಿ 9 ಕನ್ನಡ 8 Dec 2025 11:00 am

Gold Rate Today Bangalore: ಚಿನ್ನದ ಬೆಲೆ ಅಲ್ಪ ಏರಿಕೆ; ಬೆಳ್ಳಿ ಬೆಲೆ ತುಸು ಇಳಿಕೆ

Bullion Market 2025 December 8th: ಕಳೆದ ವಾರದ ಕೊನೆಯಲ್ಲಿ ಒಂದಷ್ಟು ಏರಿಕೆ ಕಂಡಿದ್ದ ಚಿನ್ನದ ಬೆಲೆ ಇವತ್ತು ಸೋಮವಾರ ಗ್ರಾಮ್​ಗೆ 25 ರೂ ಹೆಚ್ಚಿದೆ. ಆಭರಣ ಚಿನ್ನದ ಬೆಲೆ 11,930 ರೂನಿಂದ 11,955 ರೂಗೆ ಏರಿದೆ. ಅಪರಂಜಿ ಚಿನ್ನದ ಬೆಲೆ 13,045 ರೂಗೆ ಏರಿದೆ. ಬೆಳ್ಳಿ ಬೆಲೆ ಮುಂಬೈ, ಬೆಂಗಳೂರು ಮೊದಲಾದೆಡೆ 189 ರೂಗೆ ಇಳಿದಿದೆ. ಚೆನ್ನೈ ಮೊದಲಾದ ಕೆಲವೆಡೆ ಬೆಲೆ 198 ರೂ ಆಗಿದೆ.

ಟಿವಿ 9 ಕನ್ನಡ 8 Dec 2025 10:57 am

ಕೊನೆಯ ಓವರ್​ನಲ್ಲಿ 17 ರನ್, ಅಂತಿಮ ಓವರ್​ನಲ್ಲಿ 6 ರನ್​: ಪಂದ್ಯ ಗೆಲ್ಲಿಸಿದ ಶೆಫರ್ಡ್

186 ರನ್​ಗಳ ಗುರಿ ಬೆನ್ನತ್ತಿದ ಶಾರ್ಜಾ ವಾರಿಯರ್ಸ್ ತಂಡವು 19 ಓವರ್​ಗಳ ಮುಕ್ತಾಯದ ವೇಳೆಗೆ 175 ರನ್ ಕಲೆಹಾಕಿದ್ದರು. ಅದರಂತೆ ಕೊನೆಯ ಓವರ್​ನಲ್ಲಿ ಗೆಲ್ಲಲು 11 ರನ್​ಗಳ ಅವಶ್ಯಕತೆಯಿತ್ತು. ಅಂತಿಮ ಓವರ್ ಎಸೆದ ರೊಮಾರಿಯೊ ಶೆಫರ್ಡ್ ನೀಡಿದ್ದು ಕೇವಲ 6 ರನ್​ಗಳು ಮಾತ್ರ. ಈ ಮೂಲಕ ಎಂಐ ಎಮಿರೇಟ್ಸ್ ತಂಡಕ್ಕೆ 4 ರನ್​ಗಳ ರೋಚಕ ಜಯ ತಂದು ಕೊಟ್ಟರು.

ಟಿವಿ 9 ಕನ್ನಡ 8 Dec 2025 10:54 am

ಅವಳಿ ಮಕ್ಕಳಿಗೆ ಜನ್ಮ ನೀಡಿ ಸಾವನ್ನಪ್ಪಿದ ಪಾಕಿಸ್ತಾನದ ಖ್ಯಾತ ಕಂಟೆಂಟ್​ ಕ್ರಿಯೆಟರ್

ಪಾಕಿಸ್ತಾನದ ಜನಪ್ರಿಯ ಸೋಶಿಯಲ್ ಮೀಡಿಯಾ ಕಂಟೆಂಟ್ ಕ್ರಿಯೇಟರ್ ಪ್ಯಾರಿ ಮರ್ಯಮ್ ಅವರು 26ನೇ ವಯಸ್ಸಿನಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಿದ ನಂತರ ನಿಧನರಾಗಿದ್ದಾರೆ. ಅವರ ದಿಢೀರ್ ಸಾವು ಅಭಿಮಾನಿಗಳಿಗೆ ಆಘಾತ ಮೂಡಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಪತಿ ಅಹ್ಸಾನ್ ಅಲಿ ಅವರ ಭಾವನಾತ್ಮಕ ಸಂದೇಶ ಹಂಚಿಕೊಂಡಿದ್ದು, ಮಕ್ಕಳ ಸಾವಿನ ಬಗ್ಗೆ ಹರಡಿದ ಸುಳ್ಳು ವದಂತಿಗಳನ್ನು ತಳ್ಳಿಹಾಕಿದ್ದಾರೆ.

ಟಿವಿ 9 ಕನ್ನಡ 8 Dec 2025 10:53 am

Video: ಚಹಾ ಕುಡಿಯಲೆಂದು ವಂದೇ ಭಾರತ್ ರೈಲಿನಿಂದ ಕೆಳಗಿಳಿದ ಪ್ರಯಾಣಿಕ, ಆಮೇಲೇನಾಯ್ತು?

ಚಹಾ ಕುಡಿಯಲೆಂದು ವಂದೇ ಭಾರತ್ ರೈಲಿನಿಂದ ಇಳಿದ ಪ್ರಯಾಣಿಕರೊಬ್ಬರು ಫಜೀತಿಗೆ ಸಿಲುಕಿರುವ ವಿಡಿಯೋ ವೈರಲ್ ಆಗಿದೆ. ಚಹಾ ಕುಡಿಯಲೆಂದು ಇಳಿದಿದ್ದ ಪ್ರಯಾಣಿಕನನ್ನು ಬಿಟ್ಟು ರೈಲು ಹೊರಟೇ ಬಿಟ್ಟಿತ್ತು. ಸಾಮಾನ್ಯ ರೈಲಿನಂತೆ ಬಾಗಿಲುಗಳು ಓಪನ್ ಇಲ್ಲದ ಕಾರಣ ಪ್ಲಾಟ್​ಫಾರಂಗೆ ಓಡಿ ಬಂದರೂ ಬಾಗಿಲು ತೆರೆಯಲೇ ಇಲ್ಲ. ಚಹಾದೊಂದಿಗೆ ರೈಲಿನ ಬಾಗಿಲ ಬಳಿ ಬಂದು ವ್ಯಕ್ತಿಯೊಬ್ಬ ನಿಂತಿದ್ದಾರೆ. ಆದರೆ ಬಾಗಿಲು ತೆರೆಯಲಿಲ್ಲ. ಆತ ಕಪ್ ನೆಲಕ್ಕೆ ಬೀಳಿಸಿ ವೇಗವಾಗಿ ಕ್ಯಾಬಿನ್ ಕಡೆಗೆ ಓಡಿದ್ದಾರೆ.

ಟಿವಿ 9 ಕನ್ನಡ 8 Dec 2025 10:49 am

ಪ್ರಿಯಕರನೊಂದಿಗೆ ಸೇರಿ ಗಂಡನನ್ನು ಕೊಲ್ಲಲು ಹಂತಕರಿಗೆ ಸುಪಾರಿ ಕೊಟ್ಟ ಮಹಿಳೆ, ಗಂಡ ಬಚಾವ್, ಹೆಂಡತಿ ಜೈಲು ಪಾಲು

ಪ್ರಿಯಕರನೊಂದಿಗೆ ಸೇರಿ ಗಂಡನನ್ನು ಕೊಲ್ಲಲು ಹಂತಕರಿಗೆ ಸುಪಾರಿ ನೀಡಿದ್ದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಬಿಹಾರದ ಸುಪೌಲ್​ನಲ್ಲಿ ಘಟನೆ ನಡೆದಿದೆ. ಪೊಲೀಸರು ಈ ಕೊಲೆ ಸಂಚನ್ನು ಬಯಲು ಮಾಡಿದ್ದಾರೆ. ಮಹಿಳೆ ಬಾಲ್ಯದ ಗೆಳೆಯ ಮತ್ತು ಪ್ರೇಮಿ ಬ್ರಜೇಶ್ ಜೊತೆ ಸೇರಿ ಈ ಕೊಲೆ ಸಂಚು ರೂಪಿಸಿದ್ದಾರೆ ಎಂದು ತಿಳಿದುಬಂದಿದೆ. 1.5 ಲಕ್ಷ ರೂ. ಕೊಟ್ಟು ಹಂತಕರನ್ನು ನೇಮಿಸಿಕೊಂಡಿದ್ದರು, ಆದರೆ ಕೊಲೆ ಮಾಡುವ ಪ್ರಯತ್ನ ವಿಫಲವಾಯಿತು. ಮಹಿಳೆಯ ಪತಿ ಶಶಿರಂಜನ್ ಚೌಧರಿಗೆ ಗುಂಡೇಟಿನ ಗಾಯಗಳಾಗಿದ್ದು, ಅವರು ಬದುಕುಳಿದಿದ್ದಾರೆ, ಪ್ರಸ್ತುತ ಆಸ್ಪತ್ರೆಯಲ್ಲಿದ್ದು ಚೇತರಿಸಿಕೊಳ್ಳುತ್ತಿದ್ದಾರೆ.

ಟಿವಿ 9 ಕನ್ನಡ 8 Dec 2025 10:18 am

ವನ್ಯ ಪ್ರಾಣಿಗಳಿಂದ ಬೆಳೆ ರಕ್ಷಣೆಗೆ ‘ಸೀರೆ’ ಐಡಿಯಾ! ಬೀದರ್ ರೈತರ ವಿನೂತನ ಯತ್ನಕ್ಕೆ ಸಿಕ್ಕಿದೆ ಯಶಸ್ಸು

ಬೀದರ್ ರೈತರು ವನ್ಯಜೀವಿಗಳಿಂದ ಬೆಳೆ ರಕ್ಷಿಸಲು ವಿಭಿನ್ನ ಐಡಿಯಾ ಕಂಡುಕೊಂಡಿದ್ದಾರೆ. ರಾತ್ರಿ ವೇಳೆ ಜಿಂಕೆ, ಮೊಲ, ಕಾಡುಹಂದಿಗಳು ಬೆಳೆ ನಾಶಪಡಿಸುವುದನ್ನು ತಡೆಯಲು, ಹೊಲದ ಅಂಚಿನಲ್ಲಿ ಹಳೆಯ ಸೀರೆಗಳನ್ನು ಕಟ್ಟುತ್ತಿದ್ದಾರೆ. ಗಾಳಿಗೆ ಹಾರಾಡುವ ಈ ಸೀರೆಗಳು ಪ್ರಾಣಿಗಳನ್ನು ಹೆದರಿಸಿ ಬೆಳೆ ರಕ್ಷಿಸುತ್ತಿವೆ. ಇದು ಕಡಿಮೆ ವೆಚ್ಚದ ಪರಿಣಾಮಕಾರಿ ವಿಧಾನವಾಗಿದೆ.

ಟಿವಿ 9 ಕನ್ನಡ 8 Dec 2025 10:14 am

ದುಬೈನಲ್ಲಿ ಅಮ್ಮನ 60ನೇ ಹುಟ್ಟುಹಬ್ಬ: ‘ಇದು ನಿನ್ನ ಮದುವೆಯಂತೆ ಭಾಸವಾಯಿತು ಅಮ್ಮ’

ಉದ್ಯಮಿ ಆಕಾಶ್ ಮೆಹ್ತಾ ತಮ್ಮ ತಾಯಿಯ 60ನೇ ಹುಟ್ಟುಹಬ್ಬವನ್ನು ದುಬೈನಲ್ಲಿ ಅದ್ದೂರಿಯಾಗಿ ಆಚರಿಸಿದ್ದಾರೆ. ಮಗನ ಈ ಅದ್ಭುತ ಆಯೋಜನೆ ಮತ್ತು ತಾಯಿಯ ಮೇಲಿನ ಪ್ರೀತಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಭಕ್ತಿಗೀತೆಗಳು, ಮರುಭೂಮಿ ಸಫಾರಿ ಸೇರಿದಂತೆ ಅನೇಕ ವಿಚಾರಗಳನ್ನು ಒಳಗೊಂಡ ಈ ವಿಡಿಯೋ ನೆಟ್ಟಿಗರ ಮನಸೂರೆಗೊಂಡಿದ್ದು, ಹಲವರು ಭಾವನಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ.

ಟಿವಿ 9 ಕನ್ನಡ 8 Dec 2025 10:13 am

Optical Illusion: ಈ ಎರಡು ಚಿತ್ರಗಳಲ್ಲಿನ ಮೂರು ವ್ಯತ್ಯಾಸ ಗುರುತಿಸಬಲ್ಲಿರಾ

ಆಪ್ಟಿಕಲ್‌ ಇಲ್ಯೂಷನ್‌, ಬ್ರೈನ್‌ ಟೀಸರ್‌ ಇತ್ಯಾದಿ ಒಗಟಿನ ಆಟಗಳು ದೃಷ್ಟಿ ಮತ್ತು ಮೆದುಳಿಗೆ ಕೆಲಸ ನೀಡುತ್ತವೆ. ಈ ಒಗಟನ್ನು ಬಿಡಿಸುವುದು ಕಷ್ಟವಾದರೂ ಉತ್ತರ ಕಂಡುಕೊಂಡಾಗ ಆಗುವ ಖುಷಿಯೇ ಬೇರೆ. ಇದೀಗ ಇಲ್ಲೊಂದು ಬಹಳ ಕಷ್ಟಕರವಾದ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರವೊಂದು ವೈರಲ್‌ ಆಗಿದ್ದು, ಈ ಎರಡು ಚಿತ್ರಗಳ ನಡುವಿನ ಮೂರು ವ್ಯತ್ಯಾಸಗಳನ್ನು ಗುರುತಿಸಬೇಕು. ಈ ಒಗಟು ಬಿಡಿಸಲು ನೀವು ರೆಡಿ ಇದ್ದೀರಾ.

ಟಿವಿ 9 ಕನ್ನಡ 8 Dec 2025 10:09 am

‘ಟಾಕ್ಸಿಕ್’ಗಾಗಿ ಒಂದಾದ ಎರಡು ದೊಡ್ಡ ಶಕ್ತಿಗಳು; ಯಶ್ ಫ್ಯಾನ್ಸ್​ಗೆ ಹಬ್ಬದೂಟ ಫಿಕ್ಸ್

ನಟ ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾ ಬಿಡುಗಡೆಗೆ 100 ದಿನ ಬಾಕಿ. ಶೂಟಿಂಗ್ ಮುಗಿದಿದ್ದು, ಪ್ರಚಾರಕ್ಕೆ ತಂಡ ಸಿದ್ಧವಾಗಿದೆ. ಈಗ ಚಿತ್ರದ ಸಂಗೀತದ ಬಗ್ಗೆ ದೊಡ್ಡ ಸುದ್ದಿ ಹೊರಬಿದ್ದಿದೆ. ಸಂಗೀತ ಸಂಯೋಜಕರಾದ ಅನಿರುದ್ಧ್ ರವಿಚಂದರ್ ಹಾಗೂ ರವಿ ಬಸ್ರೂರು ಅವರು ಟಾಕ್ಸಿಕ್ ಸಿನಿಮಾಗಾಗಿ ಒಂದಾಗಿದ್ದಾರೆ ಎನ್ನಲಾಗಿದೆ. ಅನಿರುದ್ಧ್ ಹಾಡುಗಳಿಗೆ, ರವಿ ಬಸ್ರೂರು ಹಿನ್ನೆಲೆ ಸಂಗೀತಕ್ಕೆ ಕೆಲಸ ಮಾಡಲಿದ್ದಾರೆ.

ಟಿವಿ 9 ಕನ್ನಡ 8 Dec 2025 10:01 am

6 ಗಂಟೆಗಳಿಗಿಂತ ಕಡಿಮೆ ನಿದ್ರೆ ಮಾಡಿದ್ರೆ ಏನೆಲ್ಲಾ ಸಮಸ್ಯೆಗಳು ಬರಬಹುದು ಗೊತ್ತಾ?

ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಮನುಷ್ಯನಿಗೆ ನಿದ್ರೆ ಎನ್ನುವಂತಹದ್ದು ತುಂಬಾನೇ ಮುಖ್ಯ. ನಿಯಮಿತ ವ್ಯಾಯಾಮ ಮತ್ತು ಸಮತೋಲಿತ ಆಹಾರ ಸೇವನೆಯಂತೆ ಪ್ರತಿನಿತ್ಯ ಕನಿಷ್ಟ 7 ರಿಂದ 9 ಗಂಟೆಗಳ ಕಾಲ ನಿದ್ರೆ ಮಾಡಲೇಬೇಕು. ಆದರೆ ನೀವೇನಾದ್ರೂ 6 ಗಂಟೆಗಳಿಗಿಂತ ಕಡಿಮೆ ನಿದ್ರೆ ಮಾಡಿದರೆ ಈ ಕೆಲವು ಸಮಸ್ಯೆಗಳು ನಿಮ್ಮನ್ನು ಕಾಡಬಹುದು ಎಚ್ಚರ.

ಟಿವಿ 9 ಕನ್ನಡ 8 Dec 2025 9:52 am

Year Ender 2025: ಪಹಲ್ಗಾಮ್​ನಿಂದ ಶ್ವೇತ ಭವನದವರೆಗೆ 2025ರಲ್ಲಿ ಪ್ರಪಂಚದಲ್ಲಿ ಏನೇನಾಯ್ತು?

2025ರಲ್ಲಿ ಭಯ, ನೋವು, ಗೆಲುವು ಹಾಗೂ ಭರವಸೆಯ ಮಿಶ್ರಣವಾಗಿತ್ತು. ಭಾರತೀಯರ ಪಾಲಿಗೆ ಕಹಿ ವರ್ಷವೇ ಆಗಿತ್ತು. ಪಹಲ್ಗಾಮ್ ದಾಳಿ, ಏರ್ ಇಂಡಿಯಾ ಅಪಘಾತಗಳು ಆಘಾತ ತಂದರೆ ಭಾರತ ಮೂಲದ ಶುಭಾಂಶು ಶುಕ್ಲಾ ಬಾಹ್ಯಾಕಾಶಕ್ಕೆ ಹಾರಿ ಭಾರತಕ್ಕೆ ಹೆಮ್ಮೆ ತಂದಿದ್ದರು. ಭಾರತ ಸೇರಿ ಪ್ರಪಂಚಾದ್ಯಂತ 2025ರಲ್ಲಿ ನಡೆದ ಪ್ರಮುಖ ಘಟನೆಗಳ ಕುರಿತ ಒಂದಿಷ್ಟು ಮಾಹಿತಿ ಇಲ್ಲಿದೆ.

ಟಿವಿ 9 ಕನ್ನಡ 8 Dec 2025 9:47 am

ಆರ್​ಸಿಬಿ ಅಭಿಮಾನಿಗಳಿಗೆ ಡಿಕೆ ಶಿವಕುಮಾರ್ ಗುಡ್ ನ್ಯೂಸ್ ನೀಡಿದ ಬೆನ್ನಲ್ಲೇ ಬೆಂಗಳೂರಲ್ಲಿ ಐಪಿಎಲ್​ಗೆ ಎದುರಾಯ್ತು ಹೊಸ ವಿಘ್ನ!

IPL 2026: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮತ್ತೆ ಐಪಿಎಲ್ ಪಂದ್ಯಗಳನ್ನು ಆಯೋಜಿಸುವ ಪ್ರಯತ್ನಗಳಿಗೆ ಹಿರಿಯ ವಕೀಲ ಅಮೃತೇಶ್ ವಿರೋಧ ವ್ಯಕ್ತಪಡಿಸಿದ್ದಾರೆ. ಪಂದ್ಯಗಳನ್ನು ಆಯೋಜಿಸದಂತೆ ಸರ್ಕಾರ ಹಾಗೂ ಹೈಕೋರ್ಟ್‌ಗೆ ಅವರು ಮನವಿ ಮಾಡಿದ್ದಾರೆ. ಐಪಿಎಲ್ ಸೇರಿ ಅಂತಾರಾಷ್ಟ್ರೀಯ ಮಟ್ಟದ ಪಂದ್ಯ ಆಯೋಜನೆಗೆ ಪ್ರಯತ್ನಿಸುವುದಾಗಿ ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ ಬೆನ್ನಲ್ಲೇ ಈ ಮನವಿ ಸಲ್ಲಿಕೆಯಾಗಿರುವುದು ಮಹತ್ವ ಪಡೆದಿದೆ.

ಟಿವಿ 9 ಕನ್ನಡ 8 Dec 2025 9:31 am

Ashes: ಅತಿಯಾದ ಸಿದ್ಧತೆ…ಆಶಸ್‌ನಲ್ಲಿ ಇಂಗ್ಲೆಂಡ್​​ನ ಮತ್ತೊಂದು ಸೋಲಿಗೆ ಕಾರಣ ವಿವರಿಸಿದ ಕೋಚ್ ಬ್ರೆಂಡನ್ ಮೆಕಲಮ್

AUS vs ENG, Ashes 2025-26: ಆಶಸ್ ಸರಣಿಯಲ್ಲಿ ಇಂಗ್ಲೆಂಡ್ ತಂಡ ಎರಡನೇ ಸೋಲು ಅನುಭವಿಸಿದೆ. ತಂಡ ಈಗ 2-0 ಹಿನ್ನಡೆಯಲ್ಲಿದೆ. ಅತಿಯಾದ ತರಬೇತಿಯೇ ಸೋಲಿಗೆ ಪ್ರಮುಖ ಕಾರಣ ಎಂದು ಕೋಚ್ ಬ್ರೆಂಡನ್ ಮೆಕಲಮ್ ಹೇಳಿದ್ದಾರೆ. ಆಶಸ್ ಅನ್ನು ಮರಳಿ ಪಡೆಯಲು ಇಂಗ್ಲೆಂಡ್ ಈಗ ಉಳಿದಿರುವ ಮೂರು ಟೆಸ್ಟ್‌ಗಳನ್ನು ಗೆಲ್ಲಬೇಕಾಗಿದೆ.

ಟಿವಿ 9 ಕನ್ನಡ 8 Dec 2025 9:17 am

ಸರಣಿ ಮುಗಿಯುತ್ತಿದ್ದಂತೆ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ ವಿರಾಟ್ ಕೊಹ್ಲಿ

Virat Kohli: ಸೌತ್ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ವಿರಾಟ್ ಕೊಹ್ಲಿ ಭರ್ಜರಿ ಪ್ರದರ್ಶನ ನೀಡಿದ್ದರು. ಈ ಸರಣಿಯ ಮೊದಲ ಮ್ಯಾಚ್​ನಲ್ಲಿ 135 ರನ್ ಬಾರಿಸಿದ್ದ ಕಿಂಗ್ ಕೊಹ್ಲಿ ದ್ವಿತೀಯ ಪಂದ್ಯದಲ್ಲಿ 102 ರನ್ ಕಲೆಹಾಕಿದ್ದರು. ಇನ್ನು ಮೂರನೇ ಪಂದ್ಯದಲ್ಲಿ ಅಜೇಯ 65 ರನ್ ಸಿಡಿಸಿ ಒಟ್ಟು 302 ರನ್​ ಕಲೆಹಾಕಿದ್ದರು. ಈ ಮೂಲಕ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದರು.

ಟಿವಿ 9 ಕನ್ನಡ 8 Dec 2025 9:15 am