ಹೊಸ ಹುಡುಗಿ ಜೊತೆ ಹಾರ್ದಿಕ್ ಪಾಂಡ್ಯ ತುಂಟಾಟ, ವಿಡಿಯೋ ವೈರಲ್... Hardik Pandya
ಹಾರ್ದಿಕ್ ಪಾಂಡ್ಯ ಜೀವನ ಯಾಕೆ ಹಿಂಗಾಯ್ತು... ಇದಕ್ಕಿದ್ದಂತೆ ಫಾರಿನ್ ಹೆಂಡತಿ ಕೈಕೊಟ್ಟು ಹೋಗಿದ್ದು ಯಾಕೆ... ಹೀಗೆ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಚರ್ಚೆ ಮಾಡುವಾಗಲೇ, ಈ ಬಗ್ಗೆ ಆಕ್ರೋಶ ಕೂಡ ಮೊಳಗುತ್ತಿತ್ತು. ಹಾರ್ದಿಕ್ ಪಾಂಡ್ಯ ವಿಚಾರ ದೊಡ್ಡ ಸಂಚಲನ ಸೃಷ್ಟಿಸಿ ಎಲ್ಲೆಲ್ಲೂ ಇದೇ ವಿಚಾರ ಹಲವು ತಿಂಗಳ ಕಾಲ ವೈರಲ್ ಆಗಿತ್ತು. ಕೊನೆಗೆ ಹಾರ್ದಿಕ್ ಪಾಂಡ್ಯ ಹೆಂಡತಿ ಬೇರೆ
Smriti Mandhana: ಭಾರತ ಕ್ರಿಕೆಟ್ ತಂಡದ ಸ್ಮೃತಿ ಮಂಧಾನ ಮದುವೆ ರದ್ದು.. ಇನ್ಸ್ಟಾಗ್ರಾಂ ಪೋಸ್ಟ್ನಲ್ಲೇನಿದೆ?
Smriti Mandhana's Marriage Cancelled: ಭಾರತ ಕ್ರಿಕೆಟ್ ತಂಡದ ಉಪನಾಯಕಿ, ಆರ್ಸಿಬಿ ನಾಯಕಿ ಸ್ಮೃತಿ ಮಂಧಾನ ಮದುವೆ ರದ್ದಾಗಿದೆ. ಈ ಬಗ್ಗೆ ಸ್ವತಃ ಮಂಧಾನ ಅವರೇ ತಮ್ಮ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಹಾಗಾದ್ರೆ ಅವರು ಇದರಲ್ಲಿ ಏನೆಲ್ಲಾ ಹೇಳಿದ್ದಾರೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ಸ್ಮೃತಿ ಮಂಧಾನ ಅವರು ಸಂಗೀತ ಸಂಯೋಜಕ ಪಲಾಶ್ ಮುಚ್ಚಲ್
Property Good News: ಕರ್ನಾಟಕದ ಈ ಆಸ್ತಿದಾರರಿಗೆ ಭರ್ಜರಿ ಗುಡ್ನ್ಯೂಸ್ ಕೊಟ್ಟ ಸರ್ಕಾರ!
Property Good News: ಕರ್ನಾಟಕ ಸರ್ಕಾರವು ಇ ಖಾತಾ ಹಾಗೂ ಇ ಸ್ವತ್ತಿಗೆ ಸಂಬಂಧಿಸಿದಂತೆ ಮಹತ್ವದ ಅಪ್ಡೇಟ್ಸ್ ನೀಡಿದೆ. ಕರ್ನಾಟಕ ಸರ್ಕಾರವು ಕರ್ನಾಟಕ ಪಂಚಾಯತ್ ರಾಜ್ ಆಯುಕ್ತಾಲಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಇ-ಸ್ವತ್ತು 2.0 ತಂತ್ರಾಂಶ ಪ್ರಮುಖ ಬದಲಾವಣೆಗಳನ್ನು ಮಾಡಿದೆ. ಈ ಮೂಲಕ ಸಾರ್ವಜನಿಕರು ಇ-ಸ್ವತ್ತು ಪೋರ್ಟಲ್ ಮೂಲಕ ಮನೆಯಿಂದಲೇ ಆಸ್ತಿ ದಾಖಲೆಗಳನ್ನು ಪಡೆಯಬಹುದಾಗಿದೆ.
ಚಿನ್ನಸ್ವಾಮಿ ಸ್ಟೇಡಿಯಂನಿಂದ ಐಪಿಎಲ್ ಪಂದ್ಯಗಳು ಸ್ಥಳಾಂತರವಾಗಲು ಬಿಡಲ್ಲ: ಡಿ.ಕೆ.ಶಿವಕುಮಾರ್
ಬೆಂಗಳೂರು : ಚಿನ್ನಸ್ವಾಮಿ ಸ್ಟೇಡಿಯಂನಿಂದ ಐಪಿಎಲ್ ಪಂದ್ಯಗಳು ಸ್ಥಳಾಂತರವಾಗಲು ಬಿಡಲ್ಲ. ಪಂದ್ಯಗಳು ಇಲ್ಲೇ ನಡೆಸುವಂತೆ ಮಾಡುತ್ತೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಿಳಿಸಿದರು. ಕೆಎಸ್ ಸಿಎ ಚುನಾವಣೆಯಲ್ಲಿ ಮತದಾನ ಮಾಡಿದ ಬಳಿಕ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ರವಿವಾರ ಪ್ರತಿಕ್ರಿಯೆ ನೀಡಿದರು. ಆರ್ ಸಿಬಿ ಸಂಭ್ರಮಾಚರಣೆ ವೇಳೆ ನಡೆದ ದುರ್ಘಟನೆ ಬಳಿಕ ಐಪಿಎಲ್ ಸೇರಿದಂತೆ ಪ್ರಮುಖ ಪಂದ್ಯಗಳು ಈ ಕ್ರೀಡಾಂಗಣದಿಂದ ಸ್ಥಳಾಂತರವಾಗಿರುವ ಬಗ್ಗೆ ಕೇಳಿದಾಗ, ಇದು ಕರ್ನಾಟಕ ರಾಜ್ಯ ಹಾಗೂ ಬೆಂಗಳೂರಿನ ಗೌರವದ ವಿಚಾರ. ಮುಂದಿನ ಐಪಿಎಲ್ ಪಂದ್ಯಗಳನ್ನು ಇಲ್ಲೇ ನಡೆಸುವಂತೆ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು. ಮಹಿಳಾ ಟಿ 20 ವಿಶ್ವಕಪ್ ಪಂದ್ಯಗಳ ಬಗ್ಗೆ ಕೇಳಿದಾಗ, ಮುಂದಿನ ದಿನಗಳಲ್ಲಿ ಯಾವೆಲ್ಲಾ ಪಂದ್ಯಗಳಿವೆಯೋ ಅದಕ್ಕೆ ಅವಕಾಶ ನೀಡುತ್ತೇವೆ ಎಂದು ತಿಳಿಸಿದರು. ಕೆಎಸ್ ಸಿಎ ಚುನಾವಣೆಯಲ್ಲಿ ಮತದಾನ ಮಾಡಿರುವ ಬಗ್ಗೆ ಕೇಳಿದಾಗ, ನಾನು ಕೆಎಸ್ ಸಿಎ ಸದಸ್ಯ. ನಾನು ಚಿಕ್ಕ ವಯಸ್ಸಿನಲ್ಲಿದ್ದಾಗಲೇ, ನಾಗರಾಜ್ ಅವರು ನನಗೆ ಸದಸ್ಯತ್ವ ನೀಡಿದರು. ಅವರ ಮಗ ನನ್ನ ಸಹಪಾಠಿ. ನನಗೆ ಬ್ರಿಜೇಶ್ ಪಟೇಲ್ ಅವರಿಂದ ಅನಿಲ್ ಕುಂಬ್ಳೆ, ಪ್ರಸನ್ನ ಸೇರಿದಂತೆ ಅನೇಕರು ಬಹಳ ಪರಿಚಯ. ನನಗೆ ಬೇಕಾದವರಿಗೆ ನಾನು ಮತ ಹಾಕಿದ್ದೇನೆ ಎಂದರು. ನಾನು ಕ್ರಿಕೆಟ್ ಅಭಿಮಾನಿ. ಇತ್ತೀಚಿಗೆ ಆಗಿರುವ ಅನಾಹುತ ಮುಂದೆ ಮರುಕಳಿಸದಂತೆ ಎಚ್ಚರಿಕೆ ವಹಿಸಿ ಕ್ರೀಡಾಂಗಣದ ಗೌರವ ಉಳಿಯುವಂತೆ ಮಾಡುತ್ತೇವೆ. ಕಾನೂನು ಚೌಕಟ್ಟಿನಲ್ಲಿ ಜನದಟ್ಟಣೆ ನಿಭಾಯಿಸಿಕೊಂಡು ಕ್ರೀಡಾಂಗಣ ಬೆಳೆಸಲಾಗುವುದು. ಇದರ ಜೊತೆಗೆ ಪರ್ಯಾಯವಾಗಿ ದೊಡ್ಡ ಕ್ರೀಡಾಂಗಣವನ್ನು ನಿರ್ಮಾಣ ಮಾಡುತ್ತೇವೆ ಎಂದು ತಿಳಿಸಿದರು.
ನಮ್ಮ ಮೆಟ್ರೋ ಗುಲಾಬಿ ಮಾರ್ಗದ ರೈಲು ರೆಡಿ! ಡಿಸೆಂಬರ್ 11 ಅನಾವರಣ; ಸಂಚಾರ ಆರಂಭ ಯಾವಾಗ?
ನಮ್ಮ ಮೆಟ್ರೋ ಗುಲಾಬಿ ಮಾರ್ಗದ ಪ್ರೊಟೊಟೈಪ್ ರೈಲು ಡಿಸೆಂಬರ್ 11 ರಂದು ಅನಾವರಣಗೊಳ್ಳಲಿದೆ. ಕೆಲವು ಉಪಕರಣಗಳ ಕೊರತೆ ಮತ್ತು ಟೈಪ್ ಟೆಸ್ಟ್ಗಳಲ್ಲಿನ ವಿಳಂಬದಿಂದಾಗಿ ರೈಲು ತಡವಾಗಿದೆ. ಮೇ 2026 ರಲ್ಲಿ ಗುಲಾಬಿ ಮಾರ್ಗದ ಎತ್ತರಿಸಿದ ಮಾರ್ಗವು ಕಾರ್ಯಾರಂಭಿಸುವ ನಿರೀಕ್ಷೆಯಿದೆ. ಈ ಬಗ್ಗೆ ಹೆಚ್ಚಿನ ವಿವರ ಇಲ್ಲಿದೆ.
ಪಲಾಶ್ ಮುಚ್ಚಲ್ ಜೊತೆಗಿನ ಮದುವೆ ರದ್ದುಪಡಿಸಿದ ಸ್ಮೃತಿ ಮಂಧಾನಾ: ಇನ್ಸ್ಟಾಗ್ರಾಮ್ ಪೋಸ್ಟ್ ಮೂಲಕ ಅಧಿಕೃತ ಘೋಷಣೆ
ಭಾರತ ಕ್ರಿಕೆಟ್ ತಾರಾ ಆಟಗಾರ್ತಿ ಸ್ಮೃತಿ ಮಂಧಾನಾ ಅವರು ಸಂಗೀತ ಸಂಯೋಜಕ ಪಲಾಶ್ ಮುಚ್ಚಲ್ ಅವರೊಂದಿಗಿನ ತಮ್ಮ ಮದುವೆಯನ್ನು ರದ್ದುಪಡಿಸಿರುವುದನ್ನು ಖಚಿತಪಡಿಸಿದ್ದಾರೆ. ವೈಯಕ್ತಿಕ ಜೀವನದ ಊಹಾಪೋಹಗಳಿಗೆ ತೆರೆ ಎಳೆದ ಅವರು, ತಮ್ಮ ಗಮನ ಈಗ ದೇಶಕ್ಕಾಗಿ ಆಡುವುದರ ಮೇಲೆ ಕೇಂದ್ರೀಕೃತವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ನಾನು ಕೃಷ್ಣತತ್ತ್ವ ನಂಬಿದವ - ಕಂಸ ಹಿಂಸೆಯನ್ನಲ್ಲ: ಸಿ.ಎಂ ಬುದ್ಧಿಗೇಡಿತನಕ್ಕೂ ಮಿತಿ ಬೇಡವೇ: ಎಚ್ಡಿಕೆ ಪ್ರಶ್ನೆ!
ನಾನು ಕೃಷ್ಣತತ್ತ್ವ ನಂಬಿದವನೇ ಹೊರತು ಕಂಸ ಹಿಂಸೆಯನ್ನಲ್ಲ. ಕಾಂಗ್ರೆಸ್ ಕಂಸನಲ್ಲಿ ನಂಬಿಕೆ ಇಟ್ಟಿದೆ ಎಂದು ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರು ಹೇಳಿದ್ದಾರೆ. ನನ್ನನ್ನು ಮನುವಾದಿ ಎಂದಿರುವ ಮುಖ್ಯಮಂತ್ರಿ, ಸೈದ್ಧಾಂತಿಕ ಅಧಃಪತನ ಎಂದು ತಾಳ ಹಾಕಿದ ಸಚಿವ ಮಹದೇವಪ್ಪ; ಇವರಿಬ್ಬರೂ ಶಾಲಾ ಮಕ್ಕಳಿಗೇನು ಬೋಧಿಸುತ್ತಾರೆ ಎಂಬುದನ್ನು ಹೇಳಿಲಿ. ಬುದ್ಧಿಗೇಡಿತನಕ್ಕೂ ಮಿತಿ ಬೇಡವೇ ಎಂದು ಅವರು ಪ್ರಶ್ನೆ ಮಾಡಿದ್ದಾರೆ.
2026 ರ ಜನವರಿಯಲ್ಲಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಭಾರತಕ್ಕೆ ಭೇಟಿ ನೀಡುವ ಸಾಧ್ಯತೆ
ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ 2026 ರ ಜನವರಿಯಲ್ಲಿ ಭಾರತಕ್ಕೆ ಭೇಟಿ ನೀಡುವ ಸಾಧ್ಯತೆಯಿದೆ. ಈ ಮೂಲಕ ಭಾರತವು ರಷ್ಯಾ-ಉಕ್ರೇನ್ ಯುದ್ಧದಲ್ಲಿ ಎರಡೂ ಕಡೆಯವರೊಂದಿಗೆ ಸಂಪರ್ಕದಲ್ಲಿರಲು ಪ್ರಯತ್ನಿಸುತ್ತಿದೆ. ಭಾರತವು ಮಾತುಕತೆ ಮತ್ತು ರಾಜತಾಂತ್ರಿಕತೆ ಮಾತ್ರ ಪರಿಹಾರ ಎಂದು ನಿರಂತರವಾಗಿ ಹೇಳುತ್ತಾ ಬಂದಿದೆ.
ಸಂವಿಧಾನ ಜಪಿಸುವ ಮಹಾದೇವಪ್ಪನವರೇ, ಭಗವದ್ಗೀತೆಯ ಜತೆ ರಾಮಾಯಣ, ಮಹಾಭಾರತವನ್ನೂ ಓದಿ - ಎಚ್ಡಿ ಕುಮಾರಸ್ವಾಮಿ
ಕೇಂದ್ರ ಸಚಿವ ಎಚ್ಡಿ ಕುಮಾರಸ್ವಾಮಿ, ಸಂವಿಧಾನ ಜಪಿಸುವ ಸಚಿವ ಮಹದೇವಪ್ಪನವರಿಗೆ ಭಗವದ್ಗೀತೆಯ ಜತೆ ರಾಮಾಯಣ, ಮಹಾಭಾರತವನ್ನೂ ಓದಿ ಎಂದು ಸಲಹೆ ನೀಡಿದ್ದಾರೆ. ಮಹದೇವಪ್ಪನವರಿಗೆ ಭಗವದ್ಗೀತೆಯ ಸಾರ ಗೊತ್ತಿಲ್ಲ, ಅವರು ಕಂಸ ಮಾರ್ಗದಲ್ಲಿದ್ದಾರೆ ಎಂದು ಕುಮಾರಸ್ವಾಮಿ ಕಿಡಿಕಾರಿದ್ದಾರೆ. ಕೃಷ್ಣತತ್ತ್ವದ ಮೇಲೆ ಭಾರತದ ರಾಜನೀತಿ ನಿಂತಿದೆ ಎಂದಿದ್ದಾರೆ.
ಕಲಬುರಗಿ | ರೈತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬಿಜೆಪಿಯಿಂದ ಪ್ರತಿಭಟನೆ
ಕಲಬುರಗಿ: ಅತಿವೃಷ್ಟಿ, ಪ್ರವಾಹ ಮೊದಲಾದ ಪ್ರಕೃತಿ ವಿಕೋಪದಿಂದ ರಾಜ್ಯದ ರೈತರು, ಕೃಷಿ ಕಾರ್ಮಿಕರು ಸಂಕಷ್ಟದಲ್ಲಿದ್ದಾರೆ, ಸರ್ಕಾರ ಕೂಡಲೇ ರೈತರ ಪರ ನಿಲ್ಲಬೇಕೆಂದು ಆಗ್ರಹಿಸಿ, ಬಿಜೆಪಿಯ ರೈತ ಮೋರ್ಚಾ ವತಿಯಿಂದ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಲಾಯಿತು. ನಗರದ ಸರ್ದಾರ್ ವಲ್ಲಭಭಾಯ್ ಪಟೇಲ್ ವೃತ್ತದಿಂದ ಶುರುವಾದ ಟ್ರ್ಯಾಕ್ಟರ್ ರ್ಯಾಲಿ ಪ್ರತಿಭಟನಾ ಮೆರವಣಿಗೆ ಜಿಲ್ಲಾಧಿಕಾರಿಗಳ ಕಚೇರಿವರೆಗೆ ನಡೆಯಿತು. ಸಂಕಷ್ಟದಲ್ಲಿರುವ ರೈತರಿಗೆ ಬಾಕಿ ಇರುವ ಪರಿಹಾರ ಹಣ ಕೂಡಲೇ ಬಿಡುಗಡೆಗೊಳಿಸಬೇಕು, ರೈತರ ಪ್ರತಿ ಲೀಟರ್ ಹಾಲಿನ ಪ್ರೋತ್ಸಾಹಧನ 620 ಕೋಟಿ ರೂ. ರಿಲೀಸ್ ಮಾಡಬೇಕು, ಹಾಲಿನ ಪ್ರೋತ್ಸಾಹಧನ 5 ರೂ. ನಿಂದ 7 ರೂ. ಗೆ ಏರಿಸಬೇಕು ಎಂದು ಆಗ್ರಹಿಸಿದರು. ಈ ವೇಳೆ ಮಾತನಾಡಿದ ಮಾಜಿ ಸಂಸದ ಡಾ.ಉಮೇಶ್ ಜಾಧವ್, ಈ ಭಾಗದಲ್ಲಿ ಶೇ.100 ರಷ್ಟು ಬೆಳೆಹಾನಿಯಾಗಿದೆ, ಸರ್ಕಾರ ಪರಿಹಾರ ನೀಡುತ್ತಿಲ್ಲ, ಕಬ್ಬಿಗೆ 3,300 ರೂ. ದರ ನಿಗದಿಯಾದರೂ ಸಚಿವರ ಹಸ್ತಕ್ಷೇಪದ ಮೇರೆಗೆ 2,950 ರೂ. ಕೊಡುತ್ತಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು. ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು ಮಾತನಾಡಿದರು. ಪ್ರತಿಭಟನೆಯಲ್ಲಿ ಶಾಸಕ ಅವಿನಾಶ್ ಜಾಧವ್, ಎಂಎಲ್ಸಿ ಶಶೀಲ್ ನಮೋಶಿ, ಮಾಜಿ ಸಚಿವ ಬಾಬುರಾವ್ ಚವ್ಹಾಣ, ದತ್ತಾತ್ರೇಯ ಪಾಟೀಲ್ ರೇವೂರ್, ರೈತ ಮೋರ್ಚಾದ ಗ್ರಾಮಾಂತರ ಅಧ್ಯಕ್ಷ ಬಸವರಾಜ ಮಾಲಿಪಾಟೀಲ್, ಲಿಂಗರಾಜ ಪಟ್ಟಣ, ಗ್ರಾಮಾಂತರ ಅಧ್ಯಕ್ಷ ಅಶೋಕ್ ಬಗಲಿ, ಚಂದು ಪಾಟೀಲ್, ಶರಣಪ್ಪ ತಳವಾರ, ಅಮರನಾಥ್ ಪಾಟೀಲ್, ಅಂಬಾರಾಯ್ ಅಷ್ಟಗಿ, ಸುಧಾ ಹಾಲಕಾಯಿ, ಸಂತೋಷ್ ಹಾದಿಮನಿ, ಅವ್ವಣ್ಣ ಮ್ಯಾಕೇರಿ, ಶಿವಮೂರ್ತಯ್ಯ ಹಿರೇಮಠ್, ಅಶೋಕ್ ಪಾಟೀಲ್, ಶರಣು ಸಜ್ಜನ್, ಸೂರ್ಯಕಾಂತ್ ಡೆಂಗಿ, ಹುಲಿಕಂಠ ತೆಲ್ಲೂರ್, ಮಲ್ಲಣ್ಣ ಕಲಗುರ್ತಿ ಸೇರಿದಂತೆ ಹಲವರು ಇದ್ದರು.
ಗೋವಾ ನೈಟ್ ಕ್ಲಬ್ನಲ್ಲಿ ಅಗ್ನಿ ಅವಘಡ| ಆಡಳಿತದ ಕ್ರಿಮಿನಲ್ ವೈಫಲ್ಯ: ರಾಹುಲ್ ಗಾಂಧಿ ಪ್ರತಿಕ್ರಿಯೆ
ಹೊಸದಿಲ್ಲಿ : ಗೋವಾದ ನೈಟ್ ಕ್ಲಬ್ನಲ್ಲಿ ಅಗ್ನಿ ಅವಘಡ ಸಂಭವಿಸಿ 25 ಮಂದಿ ಮೃತಪಟ್ಟ ಘಟನೆ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಘಾತ ವ್ಯಕ್ತಪಡಿಸಿದ್ದು, ಈ ಕುರಿತು ಸಂಪೂರ್ಣ ಮತ್ತು ಪಾರದರ್ಶಕ ತನಿಖೆಗೆ ಆಗ್ರಹಿಸಿದ್ದಾರೆ. ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ, ಗೋವಾದ ಅರ್ಪೋರಾದಲ್ಲಿ 20ಕ್ಕೂ ಹೆಚ್ಚು ಜನರ ಪ್ರಾಣಹಾನಿಗೆ ಕಾರಣವಾದ ಭೀಕರ ಅಗ್ನಿ ದುರಂತದಿಂದ ತೀವ್ರ ನೋವುಂಟಾಗಿದೆ. ಮೃತರ ಕುಟುಂಬಗಳಿಗೆ ನನ್ನ ಆಳವಾದ ಸಂತಾಪಗಳು ಮತ್ತು ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ. ಇದು ಕೇವಲ ಅಪಘಾತವಲ್ಲ, ಸುರಕ್ಷತೆ ಮತ್ತು ಆಡಳಿತದ ಕ್ರಿಮಿನಲ್ ವೈಫಲ್ಯ. ಈ ಬಗ್ಗೆ ಸಂಪೂರ್ಣ, ಪಾರದರ್ಶಕ ತನಿಖೆ ನಡೆಯಬೇಕು. ಅಂತಹ ದುರಂತಗಳು ಮತ್ತೆ ಸಂಭವಿಸದಂತೆ ನೋಡಿಕೊಳ್ಳಬೇಕು' ಎಂದು ಹೇಳಿದ್ದಾರೆ. ತಡರಾತ್ರಿ ಗೋವಾದ ಬಿರ್ಚ್ ಬೈ ರೋಮಿಯೊ ಲೇನ್ನಲ್ಲಿರುವ ನೈಟ್ ಕ್ಲಬ್ನಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಕನಿಷ್ಠ 25 ಜನರು ಮೃತಪಟ್ಟಿದ್ದರು. ಮೃತರಲ್ಲಿ ನಾಲ್ವರು ಪ್ರವಾಸಿಗರು ಮತ್ತು ಹದಿನಾಲ್ಕು ಮಂದಿ ಸಿಬ್ಬಂದಿ ಎಂದು ಗುರುತಿಸಲಾಗಿದೆ. ದುರಂತಕ್ಕೆ ಸಂಬಂಧಿಸಿ ಮ್ಯಾಜಿಸ್ಟ್ರೇಟ್ ತನಿಖೆಗೆ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಆದೇಶಿಸಿದ್ದಾರೆ.
ರಾಯಚೂರು | ಶವಸಂಸ್ಕಾರಕ್ಕೆ ನೆರವಾಗಲು ಕೈಲಾಸ ರಥಯಾತ್ರೆ ವಾಹನ, ರೆಫ್ರಿಜರ್ ಹಸ್ತಾಂತರ
ರಾಯಚೂರು: ನಗರದ ಶಿವಶರಣ ಮಾದಾರ ಚನ್ನಯ್ಯ ಗುರು ಪೀಠಕ್ಕೆ, ನಗರದಲ್ಲಿ ಮೃತದೇಹಗಳನ್ನು ಗೌರವಯುತವಾಗಿ ಸ್ಮಶಾನಕ್ಕೆ ಸಾಗಿಸಲು ಸುಮಾರು 20 ಲಕ್ಷ ರೂ. ವೆಚ್ಚದ ಕೈಲಾಸ ರಥಯಾತ್ರೆ ವಾಹನ ಮತ್ತು ಎರಡು ರೆಫ್ರಿಜರ್ಗಳನ್ನು ವಿಧಾನಪರಿಷತ್ ಸದಸ್ಯರು ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಎ. ವಸಂತಕುಮಾರ ಅವರು ತಮ್ಮ ಸ್ಥಳೀಯ ಪ್ರದೇಶಾಭಿವೃದ್ಧಿ 2024-25ನೇ ಸಾಲಿನ ಅನುದಾನದಲ್ಲಿ ಒದಗಿಸಿಕೊಟ್ಟರು. ಇಂದು ಶಿವಶರಣ ಮಾದಾರ ಚನ್ನಯ್ಯ ಗುರು ಪೀಠದ ಪದಾಧಿಕಾರಿಗಳಿಗೆ ಕೈಲಾಸ ರಥಯಾತ್ರೆ ವಾಹನ ಮತ್ತು ಫ್ರೀಜರ್ ಗಳನ್ನು ಸಮಾಜದ ಮುಖಂಡರ ಸಮ್ಮುಖದಲ್ಲಿ ಪೀಠದ ಅಧ್ಯಕ್ಷರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಎ.ವಸಂತ ಕುಮಾರ ಅವರು ನಗರ ಪ್ರದೇಶದಿಂದ ಸ್ಮಶಾನವು ಸುಮಾರು ಎರಡು-ಮೂರು ಕೀ.ಮೀ ದೂರವಿದ್ದು, ಶವ ಸಂಸ್ಕಾರಕ್ಕೆ ಅನಾನುಕೂಲ ಆಗುತ್ತಿರುವುದನ್ನು ಮನಗೊಂಡು ಸ್ಥಳೀಯ ಮುಖಂಡರು ಸದರಿ ವಾಹನ ಮತ್ತು ರೆಫ್ರಿಜರ್ ಅವಶ್ಯಕತೆ ಇದ್ದು, ಒದಗಿಸಿಕೊಡಬೇಕೆಂದು ಮನವಿ ಮಾಡಿದ್ದರು. ಅಲ್ಲದೇ ಇದು ಅವಶ್ಯಕ ಮೂಲಭೂತ ಸೌಕರ್ಯಗಳಲ್ಲಿ ಒಂದಾಗಿರುವುದರಿಂದ ವಿಧಾನಪರಿಷತ್ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯ 2024-25ನೇ ಸಾಲಿನ ಅನುದಾನದಲ್ಲಿ 20.00 ಲಕ್ಷ ರೂ. ಒದಗಿಸಿಕೊಡಲಾಗಿದೆ ಎಂದು ಹೇಳಿದರು. ಈ ವ್ಯವಸ್ಥೆಯನ್ನು ನಗರದ ಎಲ್ಲಾ ವಾರ್ಡ್ಗಳಲ್ಲಿ ಒದಗಿಸಲು ಪ್ರಯತ್ನಿಸಲಾಗುವದು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಗುರುಪೀಠದ ಅಧ್ಯಕ್ಷ ಯಮನಪ್ಪ, ಬಸವರಾಜ, ರಾಮಣ್ಣ (CPI ನಿವೃತ್ತ), ಜೆ. ಸತ್ಯನಾಥ್, ಎಚ್. ಗುಂಡಳ್ಳಿ, ವೆಂಕಟೇಶ (KEB), ಬಾಬು ಕಮಲಾಪುರ, ತಿಮ್ಮಪ್ಪ (LIC), ಜೆ.ರಾಮುಲು, ಎ.ರಾಮುಲು ಸೇರಿದಂತೆ ಪದಾಧಿಕಾರಿಗಳು ಹಾಗೂ ಸ್ಥಾನಿಕರು ಉಪಸ್ಥಿತರಿದ್ದರು. ಮುಖಂಡರಾದ ಕೆ.ಅಸ್ಲಂ ಪಾಶಾ, ಡಾ. ರಝಾಕ ಉಸ್ತಾದ್, ಡಿ.ಕೆ. ಮುರಳಿ ಯಾದವ, ಅಂಜಿನಕುಮಾರ, ಪಿ. ಯಲ್ಲಪ್ಪ, ಮೊಹಮ್ಮದ್ ಉಸ್ಮಾನ್ ಮತ್ತಿತರರೂ ಪಾಲ್ಗೊಂಡರು.
ಉಳ್ಳಾಲ | ಡಿ.20ರಂದು ಮದನೀಸ್ ಅಸೋಸಿಯೇಷನ್ ಗ್ರ್ಯಾಂಡ್ ಕಾನ್ಪರೆನ್ಸ್ ಘೋಷಣಾ ಸಮಾವೇಶ
ಉಳ್ಳಾಲ: ಸಯ್ಯಿದ್ ಮದನಿ ಅರಬಿಕ್ ಕಾಲೇಜಿನಲ್ಲಿ ಕಲಿತು ತಾಜುಲ್ ಉಲಮಾ ಅಸ್ಸಯ್ಯಿದ್ ಅಬ್ದುರ್ರಹ್ಮಾನ್ ಅಲ್ ಬುಖಾರಿ ಖ.ಸಿ. ರವರ ಶಿಷ್ಯತ್ವ ಪಡೆದ ಮದನಿ ಬಿರುದು ದಾರಿಗಳ ಸಂಘಟನೆಯಾದ ಕೇಂದ್ರ ಮದನೀಸ್ ಅಸೋಸಿಯೇಷನ್ ವತಿಯಿಂದ 2026 ಎಪ್ರಿಲ್ ತಿಂಗಳಲ್ಲಿ ನಡೆಯಲಿರುವ ಬೃಹತ್ ಮದನಿ ಸಂಗಮ ಮತ್ತು ಸಾರ್ವಜನಿಕ ಮಹಾ ಸಮ್ಮೇಳನ ದ ಘೋಷಣಾ ಸಮಾವೇಶವನ್ನು ಅಸ್ಸಯ್ಯಿದ್ ಆಟಕ್ಕೋಯ ತಂಙಳ್ ಕುಂಬೋಳ್ ರವರು , ಉಳ್ಳಾಲ ಮದನಿ ಅಡಿಟೋರಿಯಂ ನಲ್ಲಿ ಡಿ.20 ರಂದು ನಡೆಸಲಿದ್ದಾರೆ. ಮದನೀಸ್ ಸ್ಟೇಟ್, ಜಿಲ್ಲಾ, ತಾಲೂಕುಗಳ ಕಾರ್ಯಕರ್ತರಿಗೆ ಭೋದಕನ ಜೀವನ ಶೈಲಿ ಮತ್ತು ಜವಾಬ್ದಾರಿಗಳು ಎಂಬ ವಿಷಯದಲ್ಲಿ ಮಲ್ಹರ್ ಮುದರ್ರಿಸ್ ಅಸ್ಸಯ್ಯಿದ್ ಜಲಾಲುದ್ದೀನ್ ತಂಙಳ್ ತರಗತಿ ನಡೆಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಕೇಂದ್ರ ಮದನೀಸ್ ಅಧ್ಯಕ್ಷರಾದ ಅಸ್ಸಯ್ಯಿದ್ ಅಬೂಬಕರ್ ಸಿದ್ದೀಖ್ ತಂಙಳ್ ಮುರ ಅಧ್ಯಕ್ಷತೆ ವಹಿಸಲಿದ್ದು, ಸಯ್ಯಿದ್ ಮದನಿ ದರ್ಗಾ ಅಧ್ಯಕ್ಷರಾದ ಬಿ.ಜಿ.ಹನೀಫ್ ಹಾಜಿ ಉದ್ಘಾಟನೆ ನಡೆಸಲಿದ್ದಾರೆ. ದರ್ಗಾ ಉಪಾಧ್ಯಕ್ಷರಾದ ಅಶ್ರಫ್ ಅಹ್ಮದ್ ರೈಟ್ ವೇ, ಪ್ರಧಾನ ಕಾರ್ಯದರ್ಶಿ ಶಿಹಾಬುದ್ದೀನ್ ಸಖಾಫಿ, ಕೋಶಾಧಿಕಾರಿ ನಾಝಿಂ ಭಾಗವಹಿಸಲಿದ್ದಾರೆ. ಇದರ ನಿರ್ವಹಣಾ ಸಮಿತಿ ನಿರ್ದೇಶಕರಾದ ಅಸ್ಸಯ್ಯಿದ್ ಅಬೂಬಕ್ಕರ್ ಸಿದ್ದೀಖ್ ತಂಙಳ್ ಅಲ್ ಮದನಿ ಮುರ, ಅಸ್ಸಯ್ಯಿದ್ ಅಶ್ರಫ್ ಅಸ್ಸಖಾಫ್ ಮದನಿ ತಂಙಳ್ ಆದೂರ್, ಚಯರ್ ಮೇನ್ ಅಸ್ಸಯ್ಯಿದ್ ಇಸ್ಮಾಯೀಲ್ ಮದನಿ ಅಲ್ ಹಾದಿ ತಂಙಳ್ ಉಜಿರೆ, ವೈಸ್ ಚಯರ್ ಮೇನ್ ಅಸ್ಸಯ್ಯಿದ್ ಹಸನ್ ಕುಂಞ ಕೋಯ ತಂಙಳ್ ಮದನಿ ಎಡರಿಕ್ಕೋಡ್, ಮೂಸಲ್ ಮದನಿ ಅಲ್ ಬಿಷಾರ, ಅಬ್ದುಲ್ ಖಾದರ್ ಮದನಿ ಪಳ್ಳಂಗೋಡ್, ಯು.ಕೆ.ಅಬೂಬಕರ್ ಮದನಿ ಮುದುಂಗಾರುಕಟ್ಟೆ, ಸಿ.ಕೆ.ಕುಂಞಾಲನ್ ಮದನಿ ನೀಲಗಿರಿ, ಅಬ್ದುರ್ರಹ್ಮಾನ್ ಮದನಿ ಕಾಡಾಚಿರ, ಕನ್ವೀನರ್ ಜೆಪ್ಪು ಅಬ್ದುರ್ರಹ್ಮಾನ್ ಮದನಿ, ಬಿ.ಟಿ.ಎಂ. ಅಬ್ಬಾಸ್ ಮದನಿ ಬಂಡಾಡಿ, ಕೂಳೂರು ಬಶೀರ್ ಮದನಿ, ನೀಲಗಿರಿ ಬಶೀರ್ ಮದನಿ, ಪಿ.ಎಂ. ಮುಹಮ್ಮದ್ ಮದನಿ ಪೂಡಲ್, ಕೆ.ಎಂ.ಮುಹ್ಯಿದ್ದೀನ್ ಮದನಿ ಕಟ್ಟತ್ತಿಲ ಮತ್ತು ಸದಸ್ಯರಾಗಿ ಜಲಾಲುದ್ದೀನ್ ಮದನಿ ಉಳ್ಳಾಲ, ಆರ್.ಕೆ.ಮದನಿ ಅಮ್ಮೆಂಬಳ, ಇಸ್ಮಾಯೀಲ್ ಬುಖಾರಿ ಮದನಿ ನೂಜಿ, ಇಸ್ಮಾಯೀಲ್ ಮದನಿ ಗೂಡಲ್ಲೂರ್,ಹಸೈನಾರ್ ಮದನಿ ಕಾಂಞಗಾಡ್, ಪಿ.ಕೆ. ಮುಹಮ್ಮದ್ ಮದನಿ ಅಳಕೆ, ಯೂಸುಫ್ ಮದನಿ, ಚೆರ್ವತ್ತೂರ್ ಹಸೈನಾರ್ ಮದನಿ ಕುಂಜಿಲ, ಉಮರ್ ಮದನಿ ಮಚ್ಚಂಪಾಡಿ, ಕೆ.ಸಿ.ಎಮ್.ಅಬ್ದುಲ್ ಖಾದರ್ ಮದನಿ ಕನ್ಯಾರ ಕೋಡಿ, ಅಬ್ದುಲ್ಲ ಮದನಿ ಕುಂಜಿಲ, ಇರ್ಶಾದ್ ಮದನಿ ಮಲಪ್ಪುರಂ ಎಂಬವರನ್ನು ಆಯ್ಕೆ ಮಾಡಲಾಗಿದೆ ಎಂದು ಕೇಂದ್ರ ಮದನೀಸ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಜೆಪ್ಪು ಅಬ್ದುರ್ರಹ್ಮಾನ್ ಮದನಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಭಾರತದ ಪ್ರಗತಿ, ಅಭಿವೃದ್ಧಿಗೆ ಕೈಜೋಡಿಸಿ; ಅದಾನಿ ವಿಶ್ವವಿದ್ಯಾಲಯದ ಪದವೀಧರರಿಗೆ ಡಾ. ಪ್ರೀತಿ ಅದಾನಿ ಕರೆ
ಇಲ್ಲಿನ ಶಾಂತಿಗ್ರಾಮದ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಶನಿವಾರ ಅದಾನಿ ವಿಶ್ವವಿದ್ಯಾಲಯವು ತನ್ನ 2 ನೇ ಘಟಿಕೋತ್ಸವ ಸಮಾರಂಭವನ್ನು ಆಯೋಜಿಸಿತ್ತು. ಇದರಲ್ಲಿ ಮೂವರು ಪ್ರತಿಷ್ಠಿತ ವಿಶ್ವವಿದ್ಯಾಲಯ ಪದಕ ವಿಜೇತರು ಸೇರಿದಂತೆ 87 ಪದವಿ ಪಡೆದ ವಿದ್ಯಾರ್ಥಿಗಳ ಸಾಧನೆಗೆ ಗೌರವಿಸಲಾಯಿತು. ಈ ಕಾರ್ಯಕ್ರಮವು ಹಲವು ಕುಟುಂಬಗಳು, ಅಧ್ಯಾಪಕರು, ಆಡಳಿತ ಮಂಡಳಿ ಸದಸ್ಯರು, ಉದ್ಯಮ ಮುಖಂಡರು ಮತ್ತು ಆಹ್ವಾನಿತ ಅತಿಥಿಗಳನ್ನು ಒಂದೆಡೆ ಸೇರಿಸಿತು.
ನಮ್ಮ ನಡುವಣ ಸಾಮಾಜಿಕ ಕಹಿಯ ಹೂರಣ ‘ವರ್ಣಪಲ್ಲಟ’
ಕೆ.ವೈ.ಎನ್. ಅವರ ನಾಟಕ ‘ವರ್ಣಪಲ್ಲಟ’ವು ವಿನೋದ ವಿಷಾದ ಪ್ರಹಸನ. ಈ ಕತೆಯ ಈ ಪಾತ್ರಗಳು ಭಾರತದ ಯಾವ ಊರಿನಲ್ಲೂ ಯಾವ ಕಾಲದಲ್ಲೂ ಕಂಡುಬರಬಹುದು. ಭಾರತೀಯ ಸಮಾಜದಲ್ಲಿ ನೆಲೆಗೊಂಡಿರುವ ಎಲ್ಲ ಬಗೆಯ ಅಸಮಾನತೆಗಳ ಬೇರು ಜಾತಿ ಪದ್ಧತಿಯಾಗಿದೆ. ಮನುಷ್ಯ ಸಹಜವಾದ ಪ್ರೀತಿ ಮತ್ತು ನಡವಳಿಕೆಗಳು ಕೂಡ ಅಪರಾಧವಾಗಿಸುವ ವ್ಯವಸ್ಥೆಯ ಕುರಿತು ಯೋಚಿಸುವಂತೆ ಮಾಡುವ ಉದ್ದೇಶದಿಂದ ಈ ನಾಟಕವನ್ನು ರಚಿಸಲಾಗಿದೆ. ಶಿಕ್ಷಣ-ರಾಜಕಾರಣ-ನ್ಯಾಯದಾನ-ಸಾಮಾಜಿಕ ಜೀವನಗಳು ಇಂದು ತಲುಪಿರುವ ಅಸೂಕ್ಷ್ಮತೆಯ ಸ್ವರೂಪವನ್ನು ಅನಾವರಣ ಮಾಡುವ ಪ್ರಯತ್ನವನ್ನು ಈ ರಂಗ ಪ್ರಯೋಗದಲ್ಲಿ ಮಾಡಲಾಗಿದೆ. ಸ್ವಾತಂತ್ರ್ಯ-ಸಮಾನತೆ ಮತ್ತು ಭ್ರಾತೃತ್ವಗಳನ್ನು ಸಾರುತ್ತಿರುವ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕನಸಿನ ಭಾರತದ ಮೂಲೆಮೂಲೆಗಳಿಂದ ಪ್ರತಿನಿತ್ಯ ವರದಿಯಾಗುತ್ತಿರುವ ಜಾತಿ ಆಧಾರಿತ ಹಿಂಸೆ ಮತ್ತು ಅನ್ಯಾಯಗಳಿಗೆ ಕುರುಡು ಕಿವುಡು ಆಗಿರುವ ಪರಿಸ್ಥಿತಿಯನ್ನು ಅರ್ಥೈಸಲು ಹಾಗೂ ಸಂವಿಧಾನದ ಆಧಾರದಲ್ಲಿ ಅಸ್ತಿತ್ವಕ್ಕೆ ಬಂದಿರುವ ಸಾರ್ವಜನಿಕ ಸಂಸ್ಥೆಗಳೇ ಜಾತಿ ಮತ್ತು ಪ್ರಸರಣ ಕೇಂದ್ರಗಳಾಗಿ ಪರಿವರ್ತನೆಯಾಗಿರುವುದನ್ನು ವಿಡಂಬಿಸುವ ಮೂಲಕ ಪ್ರೇಕ್ಷಕರ ಮನಸ್ಸನ್ನು ಮೊನಚುಗೊಳಿಸುವ ಆಸೆಯಿಂದ ಈ ಪ್ರಯೋಗವನ್ನು ಸಿದ್ಧಪಡಿಸಲಾಗಿದೆ. ಜಾತಿ, ಮೌಢ್ಯಗಳಿಂದ ತುಂಬಿರುವ ಸಿಡ್ಲುಪಟ್ಟಣ ಎಂಬ ಸಣ್ಣ ಪಟ್ಟಣ ಪ್ರದೇಶದಲ್ಲಿ ಈ ಘಟನೆಗಳು ನಡೆಯುತ್ತವೆ. ತಳ ಸಮುದಾಯದಿಂದ ಬಂದ ಸಹಜ ಪ್ರತಿಭಾವಂತ ಮಾಧವನಂತಹ ಹುಡುಗರು, ಮೇಲ್ಜಾತಿಗೆ ಸೇರಿದ್ದರೂ ಪ್ರೀತಿಗಾಗಿ ಜಾತಿ ಕಂದಕವನ್ನು ದಾಟಲು ಪ್ರಯತ್ನಿಸುವ ಕಾವ್ಯಪ್ರೇಮಿ ರಾಧಾಳಂತಹ ಹುಡುಗಿಯರು, ಶಿಕ್ಷಣದ ಮೂಲಕ ಮಾನವೀಯ ಸಂವೇದನೆಯನ್ನು ಜಾಗೃತಗೊಳಿಸುವ ಹಂಬಲದ ಮೇಷ್ಟ್ರು ಇಂತಹವರ ಚೈತನ್ಯವನ್ನು ಬಲಿಗೊಳ್ಳುವ, ದುರ್ಬಲಗೊಳಿಸುವ ಸ್ವಾರ್ಥ ಪೂರಿತ ಸಮಾಜೋರಾಜಕೀಯ ವ್ಯವಸ್ಥೆಗಳು ಬೀಸುವ ಬಲೆಗಳನ್ನು ಈ ಪ್ರಹಸನ ತೋರಿಸುವ ಗುರಿಯನ್ನು ಹೊಂದಿದೆ. ನಾಟಕ ರಂಜನೆಯಂತೆ ಕಂಡರೂ ನಮ್ಮ ನಡುವಣ ಸಾಮಾಜಿಕ ಕಹಿಯನ್ನು ಹೂರಣವಾಗಿ ಹೊಂದಿದೆ. ‘‘ಹದಿಹರೆಯದ ಅಮಾಯಕ ರಾಧಾ-ಮಾಧವರ ಕಣ್ಮರೆಯು ಪರಾರಿಯೋ? ಮರ್ಯಾದೆ ಹತ್ಯೆಯೋ? ಎಂಬ ಸಂಗತಿ ಸ್ವತಃ ನಾಟಕಕಾರನಿಗಾಗಲಿ, ರಂಗ ನಿರ್ದೇಶಕರಿಗಾಗಲಿ ಗೊತ್ತಿಲ್ಲದಿರುವುದರಿಂದ ಈ ಸತ್ಯವನ್ನು ಬಯಲಿಗೆಳೆಯುವ ಹೊಣೆಯನ್ನು ಪ್ರೇಕ್ಷಕರಿಗೆ ಬಿಟ್ಟಿದ್ದೇವೆ. ಪೊಲೀಸರಿಗೆ, ನ್ಯಾಯಾಧೀಶರಿಗೆ ಹೊಳೆಯದ ಸತ್ಯ ತಮಗೆ ಹೊಳೆದರೆ ದಯಮಾಡಿ ಮೇಷ್ಟ್ರನ್ನು ಸೆರೆಯಿಂದ ಬಿಡಿಸಲು ನೆರವಾಗಿ ಎಂದು ತಮ್ಮಲ್ಲಿ ವಿನಂತಿಸುತ್ತೇವೆ. ‘ಅನಾವರಣ’ ರಂಗ ತಂಡ ತಮ್ಮ ಪ್ರತಿಕ್ರಿಯೆಗಾಗಿ ಕಾಯುತ್ತಿದೆ’’ ಎಂಬುದಾಗಿ ರಂಗತಂಡದ ಕರಪತ್ರ ವಿನಂತಿಸುತ್ತಿದೆ. ನಿಜ. ಆದರೆ ಊರಿಗೆಲ್ಲಾ ಗೊತ್ತಿರುವ ವಿಚಾರವನ್ನು ನಿನ್ನ ಕಿವಿಯಲ್ಲಿ ಹೇಳ್ತಿನಿ ಬಾ ಎಂಬಂತಿದೆ ಈ ವಿನಂತಿ. ಯಾಕೆಂದರೆ ‘ವರ್ಣಪಲ್ಲಟ’ ನಾಟಕದ ತೆರೆ ಇಳಿಯುವ ಮುನ್ನವೇ ಇಂಥದೊಂದು ಘಟನೆ ಜರುಗಿರುವ ಸುದ್ದಿ ಪತ್ರಿಕೆಗಳಲ್ಲಿ ವರದಿಯಾಗಿದೆ: ಮಹಾರಾಷ್ಟ್ರದ ನಾಂದೇಡ್ನಲ್ಲಿ ಪ್ರೇಮ ಕಥೆಯೊಂದು ಅತ್ಯಂತ ದುರಂತ ಅಂತ್ಯವನ್ನು ಕಂಡಿದೆ. ಜಾತಿ ವಿವಾದದಿಂದಾಗಿ ತನ್ನ ತಂದೆ ಮತ್ತು ಸೋದರರಿಂದ ಬರ್ಬರವಾಗಿ ಹತ್ಯೆಗೀಡಾದ ಪ್ರಿಯಕರ ಸಕ್ಷಮ್ ತಾಟೆ(25) ಎಂಬಾತನನ್ನು ಅಂತ್ಯ ಸಂಸ್ಕಾರಕ್ಕೆ ಮುನ್ನ ಆತನ ಮೃತದೇಹದೊಂದಿಗೆ ಆಂಚಲ್ ಮಾಮಿದ್ವಾರ್(21) ಎಂಬಾಕೆ ಮದುವೆ ಮಾಡಿಕೊಂಡಿದ್ದಾಳೆ. ‘‘ಸಕ್ಷಮ್ನ ಸಾವಿನಲ್ಲಿಯೂ ನಮ್ಮ ಪ್ರೀತಿ ಗೆದ್ದಿದೆ ಮತ್ತು ನನ್ನ ತಂದೆ ಹಾಗೂ ಸೋದರರು ಸೋತಿದ್ದಾರೆ’’ ಎಂದು ಆಂಚಲ್ ಹೇಳಿದ್ದಾಳೆ. ಆಕೆ ತನ್ನ ಜೀವನವಿಡೀ ಕುಟುಂಬದ ಸೊಸೆಯಾಗಿ ಸಕ್ಷಮ್ನ ಮನೆಯಲ್ಲಿ ವಾಸವಾಗಿರಲು ನಿರ್ಧರಿಸಿದ್ದಾಳೆ. ವಿವಾಹದ ಈ ಪವಿತ್ರ ಸಮಾರಂಭವು ತಮ್ಮ ಪ್ರೇಮವನ್ನು ಅಮರಗೊಳಿಸುತ್ತದೆ ಎಂದು ಆಂಚಲ್ ಘೋಷಿಸಿದ್ದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಈ ಹೃದಯವಿದ್ರಾವಕ ಘಟನೆಯನ್ನು ಸೆರೆ ಹಿಡಿದಿರುವ ವೀಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ. ಸುದ್ದಿಗಾರರೊಂದಿಗೆ ಮಾತನಾಡಿದ ಆಂಚಲ್, ಈ ಕ್ರೂರ ಹತ್ಯೆಗಾಗಿ ತನ್ನ ತಂದೆ ಮತ್ತು ಸೋದರರನ್ನು ಗಲ್ಲಿಗೇರಿಸಬೇಕು ಎಂದು ಆಗ್ರಹಿಸಿದ್ದಾಳೆ. ಷೇಕ್ಸ್ಪಿಯರ್ನ ವಿಶ್ವವಿಖ್ಯಾತ ನಾಟಕ ರೋಮಿಯೋ-ಜೂಲಿಯಟ್ ಮೊದಲುಗೊಂಡು (ಅದಕ್ಕೂ ಪೂರ್ವದಿಂದಲೂ ಇರಬಹುದು) ಕೆ.ವೈ.ಎನ್.ರವರ ವರ್ಣಪಲ್ಲಟದವರೆಗೆ, ಇಂಥ ದುರಂತ ಪ್ರೇಮಕತೆಗಳು ಸಂಭವಿಸುತ್ತಲೇ ಇವೆ. ಇವುಗಳಿಗೆ ಮೊದಲಾಗಲೀ ಕೊನೆಯಾಗಲೀ ಇಲ್ಲ. ಈ ದುರಂತಗಳಿಗೆ ಕಾರಣ ಪೋಷಕರು, ಪೊಲೀಸರು, ನ್ಯಾಯಾಧೀಶರು, ರಾಜಕಾರಣಿಗಳು ಹಾಗೂ ನಾವು-ನೀವು ಒಳಗೊಂಡು ಅಂದಂದಿನ ಸಮಾಜವೇ ಕಾರಣ. ಈ ಎಲ್ಲರ ಹಿಪೋಕ್ರಸಿಗೆ ತುತ್ತಾಗಿ ಹದಿಹರೆಯದ ಅಮಾಯಕ ಹುಡುಗ ಹುಡುಗಿಯರು ನಿತ್ಯ ಹತ್ಯೆಗೆ ಒಳಗಾಗುತ್ತಲೇ ಇದ್ದಾರೆ. ಕಾವ್ಯ, ಕಥೆ, ಕಾದಂಬರಿ ರಚಿಸುವ ಸಾಹಿತಿಗಳಿಗೆ ವಸ್ತುವಾಗುತ್ತಾ! ಇದನ್ನು ತಪ್ಪಿಸಲು ಇನ್ನೆಷ್ಟು ನೂರು ವರ್ಷಗಳು ಬೇಕೋ? 21ನೇ ಶತಮಾದಲ್ಲೂ ರಾಷ್ಟ್ರವ್ಯಾಪಿ, ಅಮೆರಿಕವೂ ಸೇರಿದಂತೆ ವಿಶ್ವವ್ಯಾಪಿ ಜಾತಿ ತಾರತಮ್ಯ, ದಲಿತರ ಮೇಲಿನ ದೌರ್ಜನ್ಯ ಅಸ್ತಿತ್ವದಲ್ಲಿರುವುದು ಸಮೀಕ್ಷೆಗಳಿಂದ ಬೆಳಕಿಗೆ ಬಂದಿದೆ. ಭಾರತದ ಮಟ್ಟಿಗೆ ಹೇಳುವುದಾದರೆ ನಮ್ಮ ಸಂವಿಧಾನದ ಪ್ರಕಾರ ಜಾತಿವಿನಾಶ ಆಗಲೇಬೇಕು. ಆಗ ಮಾತ್ರ ಇಂಥ ಪ್ರಕರಣಗಳ ಪ್ರಮಾಣ ಕೊಂಚ ತಗ್ಗಬಹುದು. ಜೊತೆಗೆ ವರ್ಗ ಸಮಾನತೆಯೂ ಸೇರಿದರೆ ಉತ್ತಮ ಸಮಾಜ ಉದಯ ಆದೀತು. ಈ ನಿಟ್ಟಿನಲ್ಲಿ ಡಾ. ಅಂಬೇಡ್ಕರ್ ವಿರಚಿತ ಸಂವಿಧಾನವನ್ನು ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರಬೇಕು.
ಲೋಕಸಭೆಯಲ್ಲಿ 'ರೈಟ್ ಟು ಡಿಸ್ಕನೆಕ್ಟ್ ಬಿಲ್, 2025' ಮಂಡನೆಯಾಗಿದ್ದು, ಕೆಲಸದ ನಂತರ ಸಂಪರ್ಕ ಕಡಿತಗೊಳಿಸುವ ಉದ್ಯೋಗಿಗಳ ಹಕ್ಕನ್ನು ಇದು ಬಲಪಡಿಸುತ್ತದೆ. ಅಧಿಕೃತ ಕೆಲಸದ ಸಮಯದ ಹೊರಗಿನ ಕರೆಗಳು, ಇಮೇಲ್ಗಳಿಗೆ ಉತ್ತರಿಸುವ ಒತ್ತಡ ಇರುವುದಿಲ್ಲ. ನಿಯಮ ಉಲ್ಲಂಘನೆಗೆ ದಂಡ, ಉದ್ಯೋಗಿಗಳ ಕಲ್ಯಾಣ ಪ್ರಾಧಿಕಾರ ಸ್ಥಾಪನೆಗೆ ಪ್ರಸ್ತಾವನೆ ಇದೆ. ಇದು ಕೆಲಸ-ಜೀವನ ಸಮತೋಲನಕ್ಕೆ ಮಹತ್ವ ನೀಡುತ್ತದೆ. ಈ ಕುರಿತಾದ ವಿವರಗಳು ಇಲ್ಲಿವೆ.
ಕರಾಚಿ ಮೂಲದ ನಿಕಿತಾ ನಾಗ್ದೇವ್ ಎನ್ನುವ ಮಹಿಳೆ ತನ್ನ ಪತಿ ವಿಕ್ರಮ್ ನಾಗ್ದೇವ್ ತನ್ನನ್ನು ಕೈ ಬಿಟ್ಟು ದೆಹಲಿಯಲ್ಲಿ ಎರಡನೇ ಮದುವೆಗೆ ಯೋಜನೆ ರೂಪಿಸಿದ್ದಾನೆ ಎಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ವಿಡಿಯೋ ಮೂಲಕ ಮನವಿ ಮಾಡಿದ್ದಾರೆ. 2020ರಲ್ಲಿ ಕರಾಚಿಯಲ್ಲಿ ವಿವಾಹವಾಗಿದ್ದ ದಂಪತಿ, ವಿಕ್ರಮ್ಗೆ ಭಾರತಕ್ಕೆ ಕರೆತಂದ ಬಳಿಕ ವೀಸಾ ಸಮಸ್ಯೆಯ ನೆಪ ಹೇಳಿ ಗಡಿಯಲ್ಲಿ ಕೈಬಿಡಲಾಗಿದೆ. ನ್ಯಾಯಕ್ಕಾಗಿ ನಿಕಿತಾ ಒತ್ತಾಯಿಸಿದ್ದಾರೆ.
ಹಬ್ಬಗಳ ಹೆಸರಿನಲ್ಲಿ ಪರಿಸರ ಹಾನಿಗೆ ಸಂವಿಧಾನದ ವಿಧಿ 25 ರಕ್ಷಣೆ ನೀಡುವುದಿಲ್ಲ: ನಿವೃತ್ತ ನ್ಯಾಯಮೂರ್ತಿ ಅಭಯ್ ಓಕಾ
ಹೊಸದಿಲ್ಲಿ: ಧಾರ್ಮಿಕ ಆಚರಣೆಗಳ ಸಂದರ್ಭಗಳಲ್ಲಿ ಪರಿಸರಕ್ಕೆ ಉಂಟಾಗುತ್ತಿರುವ ಹಾನಿ ಗಂಭೀರ ವಿಚಾರವಾಗಿದ್ದು, ಧಾರ್ಮಿಕ ಸ್ವಾತಂತ್ರ್ಯದ ಹೆಸರಿನಲ್ಲಿ ಅಂತಹ ಕೃತ್ಯಗಳನ್ನು ಸಮರ್ಥಿಸಲಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ಅಭಯ್ ಓಕಾ ಅಭಿಮತ ವ್ಯಕ್ತಪಡಿಸಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ನ್ಯಾಯಮೂರ್ತಿ ಅಭಯ್ ಓಕಾ, ಹಬ್ಬಗಳು ಮತ್ತು ಮೆರವಣಿಗೆಗಳ ಸಂದರ್ಭದಲ್ಲಿ ನದಿಗಳು, ಸರೋವರಗಳು, ಸಮುದ್ರಗಳು ಕಲುಷಿತವಾಗುತ್ತಿರುವುದನ್ನು ಉಲ್ಲೇಖಿಸಿದರು. “ವಿಧಿ 25 ಪೂಜೆ ಹಾಗೂ ಧಾರ್ಮಿಕ ವಿಧಿವಿಧಾನಗಳ ಹಕ್ಕನ್ನು ಒದಗಿಸಿದರೂ, ಅದು ಪರಿಸರ ಹಾನಿಗೆ ಛತ್ರಿಯಾಗುವುದಿಲ್ಲ. ಭಾಗ III ರ ಇತರ ಹಕ್ಕುಗಳಿಗೆ ಒಳಪಟ್ಟಿರುವುದರಿಂದ, ಪರಿಸರ ನಾಶ ಮಾಡುವ ಕೃತ್ಯಗಳಿಗೆ ಸಂವಿಧಾನ ರಕ್ಷಣೆ ನೀಡುವುದಿಲ್ಲ,” ಎಂದು ಹೇಳಿದರು. ತಂತ್ರಜ್ಞಾನ ಬಳಕೆ ಹೆಚ್ಚಾದರೂ ವೈಜ್ಞಾನಿಕ ಮನೋಭಾವ ಬೆಳೆಸುವಲ್ಲಿ ಸಮಾಜ ಹಿಂದುಳಿದಿದೆ ಎಂದು ನ್ಯಾಯಮೂರ್ತಿ ಓಕಾ ವಿಷಾದ ವ್ಯಕ್ತಪಡಿಸಿದರು. ಹಬ್ಬಗಳ ವೇಳೆ ಧ್ವನಿವರ್ಧಕಗಳ ಅತಿಯಾದ ಬಳಕೆ ಹಾಗೂ ನದಿಗಳಲ್ಲಿ ಅನಿಯಂತ್ರಿತವಾಗಿ ಕಸ ಬಿಸಾಡುವ ಪ್ರವೃತ್ತಿ ಪರಿಸರಕ್ಕೆ ತೀವ್ರ ಹಾನಿ ಮಾಡುತ್ತಿದೆ ಎಂದು ಉಲ್ಲೇಖಿಸಿದರು. “ಮಾಲಿನ್ಯದಿಂದ ತುಂಬಿರುವ ನದಿಗಳನ್ನು ನಾವು ಪವಿತ್ರವೆಂದು ಹೇಗೆ ಹೇಳಬಹುದು?” ಎಂದು ಅವರು ಪ್ರಶ್ನಿಸಿದರು. ದೇಶದಲ್ಲಿ ಮುಂದುವರಿದಿರುವ ಮೂಢನಂಬಿಕೆಗಳನ್ನು ಉಲ್ಲೇಖಿಸಿದ ಅವರು, ಸುಧಾರಣೆಗಳನ್ನು ಪ್ರಸ್ತಾಪಿಸುವವರು ಧಾರ್ಮಿಕ ಗುಂಪುಗಳ ಟಾರ್ಗೆಟ್ ಆಗುತ್ತಿದ್ದಾರೆ. ಸುಧಾರಣೆಗಳನ್ನು ವಿಧಿ 25ರ ಹಕ್ಕುಗಳ ಆಕ್ಷೇಪಣೆ ಎಂಬಂತೆ ಚಿತ್ರಿಸಲಾಗುತ್ತಿದೆ. ಮತಬ್ಯಾಂಕ್ ರಾಜಕೀಯದ ಕಾರಣದಿಂದ ಸುಧಾರಣೆಯತ್ತ ರಾಜಕೀಯ ಕ್ಷೇತ್ರವು ಗಮನ ಹರಿಸುತ್ತಿಲ್ಲ ಎಂದು ಅಭಿಪ್ರಾಯಪಟ್ಟರು. ವಿಧಿ 51A ಅಡಿಯಲ್ಲಿ ರಾಜ್ಯದ ಕರ್ತವ್ಯಗಳನ್ನು ಉಲ್ಲೇಖಿಸಿದ ನ್ಯಾಯಮೂರ್ತಿ ಓಕಾ, 2027ರ ಕುಂಭಮೇಳಕ್ಕಾಗಿ ನಾಸಿಕ್ ನಲ್ಲಿ ನೂರು ವರ್ಷಗಳಷ್ಟು ಹಳೆಯ ಮರಗಳನ್ನು ಕಡಿಯುವ ಪ್ರಸ್ತಾಪವೇ ರಾಜ್ಯ ಸರಕಾರದ ವೈಫಲ್ಯಕ್ಕೆ ಉದಾಹರಣೆ. ನಾಗರಿಕರ ಜೊತೆಗೆ ರಾಜ್ಯವೂ ವೈಜ್ಞಾನಿಕ ಮನೋಭಾವ ಬೆಳೆಸುವಲ್ಲಿ ವಿಫಲವಾಗಿದೆ,” ಎಂದು ಓಕಾ ಅಭಿಪ್ರಾಯಪಟ್ಟರು. “ವೈಜ್ಞಾನಿಕ ಮನೋಭಾವ ಮತ್ತು ಸುಧಾರಣಾತ್ಮಕ ಚಿಂತನೆಯನ್ನು ನಾವು ನಿಜವಾಗಿಯೂ ಅಳವಡಿಸಿಕೊಂಡಿದ್ದರೆ, ಹಬ್ಬಗಳಲ್ಲಿ ಪ್ರಾಣಿಬಲಿ, ಧ್ವನಿವರ್ಧಕಗಳ ಹಾವಳಿ ಮತ್ತು ಪರಿಸರ ಹಾನಿ ಮಾಡುವ ಆಚರಣೆಗಳಿಗೆ ಅವಕಾಶವೇ ಇರುತ್ತಿರಲಿಲ್ಲ” ಎಂದು ನಿವೃತ್ತ ನ್ಯಾಯಮೂರ್ತಿ ಓಕಾ ವಿಷಾದ ವ್ಯಕ್ತಪಡಿಸಿದರು.
ಶೇರ್ ಅಲಿ- ವೈಸರಾಯ್ ಮೇಯೋನ ಹತ್ಯೆಗೈದ ಕ್ರಾಂತಿಕಾರಿ: ಇವರಾರೂ ಕ್ಷಮೆ ಯಾಚಿಸಲಿಲ್ಲ!
ಕರಿನೀರಿನ ಕಠಿಣ ಶಿಕ್ಷೆ ಅನುಭವಿಸಿದ ಕ್ರಾಂತಿಕಾರಿಗಳು!
IMD Weather Forecast: ಈ ಭಾಗಗಳಲ್ಲಿ ಮುಂದಿನ ಮೂರು ದಿನ ರಣಭೀಕರ ಮಳೆ ಮುಂದುವರೆಯುವ ಮುನ್ಸೂಚನೆ
IMD Weather Forecast: ದೇಶದ ಬಹುತೇಕ ರಾಜ್ಯಗಳಲ್ಲಿ ಚಳಿ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲಿದೆ. ಈ ನಡುವೆಯೇ ಹಲವೆಡೆ ಮಳೆಯೂ ಆಗುತ್ತಿದೆ. ಹಾಗೆಯೇ ಮುಂದಿನ ಮೂರು ದಿನಗಳ ಕಾಲ ಈ ಭಾಗಗಳಲ್ಲಿ ಭಾರೀ ಮಳೆ ಸುರಿಯುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಾಗಾದ್ರೆ ಎಲ್ಲೆಲ್ಲಿ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ಉತ್ತರ
ಸಾಹಿತ್ಯ ರಚನೆ ಸಮಾಜದ ಓರೆ-ಕೋರೆಗಳ ತಿದ್ದುವಂತಿರಬೇಕು: ಬಾನು ಮುಷ್ತಾಕ್
ಬೆಂಗಳೂರು ಸಾಹಿತ್ಯ ಉತ್ಸವ-2025ರ ವಿಚಾರ ಗೋಷ್ಠಿ
ಒಳ ಮೀಸಲಾತಿ ಬಿಕ್ಕಟ್ಟುಗಳ ಭಾರಗಳು ಸಮರ್ಪಕ ಅನುಷ್ಠಾನಕ್ಕೆ ಅಡ್ಡಿಯಾಗುತ್ತಿವೆಯೇ?
ಒಳ ಮೀಸಲಾತಿ ಎಂದಾಕ್ಷಣ ಅನೇಕರಿಗೆ ಎಲ್ಲಿಲ್ಲದ ಕಹಿ; ಅದರೆ ಅದನ್ನು ಬೇಡುವವರಿಗೆ ಒಂದು ಹನಿ ಸವಿ ಜೇನಂತಾಗಿದೆ. ಸಿದ್ದರಾಮಯ್ಯ ನೇತೃತ್ವದ ಸರಕಾರ ನ್ಯಾ. ನಾಗಮೋಹನ್ ದಾಸ್ ಆಯೋಗದ ಶಿಫಾರಸುಗಳನ್ನು ಯಥಾವತ್ತಾಗಿ ಜಾರಿಗೆ ತರದೆ ರಾಜಕೀಯ ನಿರ್ಧಾರಗಳಡಿ ಅಖೈರುಮಾಡಿದೆ. ಆದರೆ ಅನುಷ್ಠಾನ ಪ್ರಕ್ರಿಯೆಗಳು ಹೂ ಹಿಡಿದು ಬೆಟ್ಟವತ್ತುವ ಯಾತ್ರಿಕನಂತಾಗದೆ; ಹೊತ್ತ ಕಟ್ಟಿಗೆಯ ಭಾರದಲ್ಲಿ ತೆವಳುತ್ತಾ ಸಾಗಿದಂತಾಗಿದೆ. ಸಾಮಾಜಿಕ ತಾರತಮ್ಯಗಳನ್ನು ಲಂಬಾಂತರ (Vertical) ಮತ್ತು ಸಮನಾಂತರ (Horizontal) ಮುಖಾಂತರ ನೋಡಿದಾಗ ಲಂಭಾಂತರ ಶೋಷಣೆಗಳು ವೇಷ್ಠಿ ಗುಣಗಳಾದರೆ; ಸಮನಾಂತರ ಶೋಷಣೆಗಳು ಅಂತರ ವೈರುಧ್ಯಗಳಾಗುತ್ತವೆ. ಈ ವೈರುಧ್ಯಗಳನ್ನು ತಹಬದಿಗೆ ತರಲು ಒಳಮೀಸಲಾತಿ ಸಿದ್ಧೌಷಧವಾಗಿದೆ ಎಂದು ಸರಿಸುಮಾರು 35 ವರ್ಷಗಳಿಂದ ಸಮುದಾಯಗಳು ಹೋರಾಡುತ್ತಿವೆ. ಕೊನೆಗೆ ಸುಪ್ರೀಂ ಕೋರ್ಟಿನ ತೀರ್ಪಿನಿಂದ ಸಂಪನ್ನವಾಗಿದೆ. ಬಹುಶಃ ಇದೇ ನ್ಯಾಯಾಲಯ ಸಾಂವಿಧಾನಿಕ ಅನುಚ್ಛೇದಗಳಿಗೆ ತಿದ್ದುಪಡಿ ಮೂಲಕ ಪಡೆಯಲು ಅಜ್ಞಾಪಿಸಿದ್ದರೆ ಹೋರಾಟಗಾರರಿಗೆ ಗಗನ ಕುಸುಮವಾಗುತ್ತಿತ್ತು ಅಥವಾ ನಿಟ್ಟುಸಿರು ಬಿಡುತ್ತಿದ್ದರು. ಆದರೂ ಕರ್ನಾಟಕ ರಾಜ್ಯ ಮೀಸಲಾತಿಯ ಜಾರಿಯಲ್ಲಿ ರಾಷ್ಟ್ರಕ್ಕೆ ಹಿರಿಯ ಮುತ್ತಜ್ಜನಾಗಿದ್ದರೂ ಒಳ ಮೀಸಲಾತಿ ವಿಚಾರದಲ್ಲಿ ಒಂದು ಸಮಷ್ಟಿ ಸ್ವರೂಪದ ಅಭಿಮತಗಳನ್ನು ಬಿತ್ತುವಲ್ಲಿ ಎಡವುತ್ತಾಬಂದಿದೆ. ಏಕೆಂದರೆ ‘ಬೇಡ’ ಅನ್ನುವವರ ಕಪಿಮುಷ್ಟಿ ಹಿಡಿತದಿಂದ ಸರಕಾರಗಳು ಹೊರಬರಲಾಗದೆ ನರಳುತ್ತಾ ಬಂದಿವೆ. ಒಂದಷ್ಟು ಸಮಧಾನಕರವಾದ ಸ್ಥಿತಿ ನಿರ್ಮಾಣವಾಗಬೇಕೆನ್ನುವಾಗ ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ. ಎಚ್.ಸಿ. ಮಹಾದೇವಪ್ಪ ಹೊಸದೊಂದು ಬಾಂಬ್ ಸಿಡಿಸಿದ್ದಾರೆ. ಎಲ್ಲಾ ನೇಮಕಾತಿಗಳನ್ನು ಹಳೆಯ ನಿಯಮಗಳಡಿ ಮಾಡಲು ಆದೇಶ ನೀಡಿದ್ದೇನೆಂದು ಹೇಳಿದ್ದಾರೆ (ಡಿಸೆಂಬರ್ 2, ವಾ.ಭಾ. ಸುದ್ದಿ). ಈ ಸುದ್ದಿ ಹಿನ್ನೆಲೆಗಳನ್ನು ಸ್ವಲ್ಪ ಅವಲೋಕಿಸೋಣ. ಪ್ರಸಂಗ-1: ಹಿಂದಿನ ಭಾಜಪ ಸರಕಾರ ಪರಿಶಿಷ್ಟ ಜಾತಿ (ಶೇ.17) ಮತ್ತು ಪಂಗಡಗಳಿಗೆ (ಶೇ.7) ಅವರ ಜನಸಂಖ್ಯಾಧಾರಿತ ಮೀಸಲಾತಿಗಾಗಿ ನ್ಯಾ. ನಾಗಮೋಹನ್ ದಾಸ್ ಆಯೋಗದ ಶಿಫಾರಸುಗಳನ್ನು ಜಾರಿ ಮಾಡಿ ದಿ: 28-12-2022ರಂದು ಆದೇಶಿಸಿತ್ತು. ಆಗ ಮೀಸಲಾತಿ ಪ್ರಮಾಣ ಶೇ. 60ಕ್ಕೇರಿತ್ತು. ಸಹಜವಾಗಿ ಮೀಸಲಾತಿ ರಿಕ್ತಬಿಂದುಗಳು ಅದಲುಬದಲಾದವು. ಈ ಆದೇಶವನ್ನು ಕರ್ನಾಟಕ ರಾಜ್ಯ ಆಡಳಿತ ನ್ಯಾಯಾಧಿಕರಣ ಮುಂದೆ (ಅರ್ಜಿ ಸಂ. 2144/2024) ಪ್ರಶ್ನಿಸಲಾಗಿತ್ತು. ತರುವಾಯ ಬಂದ ಕಾಂಗ್ರೆಸ್ ಸರಕಾರ ಹಿಂದುಳಿದ ವರ್ಗಗಳ ವರ್ಗೀಕರಣ ಕೈಬಿಟ್ಟ ಕಾರಣ ಅದು 56ಕ್ಕೆ ಇಳಿಯಿತು. ನ್ಯಾಯಾಧಿಕರಣ ಒಟ್ಟಾರೆ ಸರಕಾರದ ಆದೇಶವನ್ನು ತಳ್ಳಿಹಾಕಿತು. ಸದರಿ ತೀರ್ಪಿನ ವಿರುದ್ಧ ರಾಜ್ಯ ಸರಕಾರ ಬಲವಾದ ಅಭಿಮತಗಳನ್ನು ಉಚ್ಚ ನ್ಯಾಯಾಲಯದ ಮುಂದೆ ಮಂಡನೆ ಮಾಡುವ ಮೂಲಕ ಷರತ್ತು ಬದ್ಧ ಮಧ್ಯಂತರ ಆದೇಶ ಪಡೆಯುವಲ್ಲಿ ಯಶಸ್ವಿಯಾಯಿತು. ಪ್ರಸಂಗ-2: ರಾಯಚೂರಿನ ಮಹೇಂದ್ರ ಕುಮಾರ್ ಮಿತ್ರ ಎಂಬವರು ಈ ಹಿಂದೆ ಸ್ಪಶ್ಯ ಜಾತಿಗಳನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸಿದ್ದು ಅಸಾಂವಿಧಾನಿಕ ಎಂದು ಸುಪ್ರೀಂ ಕೋರ್ಟ್ ಮುಂದೆ ಅಪೀಲು ಮಾಡಿದ್ದವರ ಮುಖಂಡರು. ಇಂದ್ರಾ ಸಹಾನಿ ಎದುರು ಭಾರತ ಸರಕಾರ ಪ್ರಕರಣದಲ್ಲಿ ರಾಜ್ಯಗಳು ಜಾತಿ ಆಧಾರಿತ ಮೀಸಲಾತಿ ನೀಡುವಾಗ 50:50 ಅನುಪಾತ ಮೀರಬಾರದೆಂದು ಸುಪ್ರೀಂ ಕೋರ್ಟ್ ಬಂಧಕ ಸ್ವರೂಪದ ತೀರ್ಪನ್ನು ನೀಡಿತ್ತು. ಒಳ ಮೀಸಲಾತಿಯ ಜಾರಿಗೆ ಸಂಬಂಧಿಸಿದ ನಿರ್ಣಾಯಾತ್ಮಕ ಘಟ್ಟದಲ್ಲಿದ್ದಾಗಲೇ ಅಂದರೆ ಫೆಬ್ರವರಿ 2025ರಂದು ಅದರಡಿ (200448/2025) ಸಂವಿಧಾನದ ಅನುಚ್ಛೇದ 226 ಪ್ರಕಾರ ಸಾರ್ವಜನಿಕ ಹಿತಾಸಕ್ತಿ ಅಪೀಲನ್ನು ರಾಜ್ಯದಲ್ಲಿಯೂ ಈ ಆದೇಶದಂತೆ ಮೀಸಲಾತಿ ಮಿತಿ ಮೀರಬಾರದೆಂದು ವಾದಿಸಿದ್ದಾರೆ. ಅದರ ಮೇರೆಗೆ ವಿಭಾಗೀಯ ಪೀಠ ಮಧ್ಯಂತರ ಆದೇಶ ನೀಡಿ ಮುಂದಿನ ಆದೇಶದ ತನಕ ಯಾವುದೇ ನೇಮಕಾತಿ ಮಾಡಬಾರದೆಂದು ಸರಕಾರಕ್ಕೆ ಸೂಚಿಸಿದೆ. ಸಮಾಜ ಕಲ್ಯಾಣ ಇಲಾಖೆ ಸಚಿವರು ಹಿಂದಿನ ನಿಯಮಾವಳಿಗಳ ಪ್ರಕಾರ ನೇಮಕಾತಿ ಮಾಡಲಾಗುವುದೆಂದು ಹೇಳಿಕೆ ನೀಡಿದ್ದಾರೆ. ಹಾಗಾದರೆ, ಒಳ ಮೀಸಲಾತಿ ಜಾರಿಗಾಗಿ ಹಿಂದಿನ ಸಚಿವ ಸಂಪುಟದ ತೀರ್ಮಾನದಲ್ಲಿ ಇವರೂ ಸಹ ಭಾಗೀದಾರರಾಗಿದ್ದರು. ‘‘ಸರಕಾರದ ಬದ್ಧತೆಯನ್ನು ಸಾಮೂಹಿಕವಾಗಿ ಸಾದರಪಡಿಸುವುದು ಇಲಾಖೆಗಳ ಸಚಿವರಾದವರ ಆದ್ಯ ಕರ್ತವ್ಯ ಕೂಡ ಆಗಿರುತ್ತದೆ’’. ಹೈಕೋರ್ಟು ತೀರ್ಪು ಬಂದ ಕೂಡಲೇ ಸಚಿವರೇ ‘ಒಳ ಮೀಸಲಾತಿ ಜಾರಿ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ವಿಚಾರವಾಗಿದೆ; ಅದರ ವಿರುದ್ಧ ಸರಕಾರ ಮೇಲ್ಮನವಿ ಸಲ್ಲಿಸುತ್ತದೆ’ ಎಂದು ಹೇಳುವ ಬದಲು ಸರಕಾರದೊಳಗಿಂದಲೇ ನೀಡಿರುವ ಹೇಳಿಕೆ ಬೀದಿಯಲ್ಲಿ ಬಿಸಿಬಿಸಿ ಚರ್ಚೆಗಳಾಗುತ್ತಿವೆ. ಈ ಹಿಂದೆ, ಸರತಿ ಸಾಲಿನಲ್ಲಿ ಒಳ ಮೀಸಲಾತಿಯ ಪಕ್ವ ಜಾರಿಗಾಗಿ ಹೋರಾಟಗಾರರು ಅವರಿಗೆ ಅರುಹಿದಾಗ ಪ್ರತಿಯೊಂದಕ್ಕೂ ಸಚಿವ ಸಂಪುಟದ ತೀರ್ಮಾನ ಆಗಬೇಕೆಂದು ತಿಳಿಸುತ್ತಿದ್ದರು. ಆದರೆ ಮಹೇಂದ್ರ ಮಿತ್ರ ಪ್ರಕರಣದ ಮೇಲೆ ಯಾವಾಗ ಸಚಿವ ಸಂಪುಟದಲ್ಲಿ ತೀರ್ಮಾನವಾಗಿದೆ ಎಂಬ ವಿಚಾರ ಶರವೇಗದಲ್ಲಿ ಹರಿದು ಸಾರ್ವಜನಿಕ ಚರ್ಚೆಗಳಾಗುತ್ತಿವೆ. ಮಹೇಂದ್ರ ಕುಮಾರ್ ಮಿತ್ರ ಸುಪ್ರೀಂ ಕೋರ್ಟಿನ ಒಳ ಮೀಸಲಾತಿ ದಾವೆಯಲ್ಲಿಯೂ ಅಪಸ್ವರ ದಾಖಲಿಸಿದ್ದಾರೆಂದು ಬಲ್ಲವರ ಅಭಿಮತಗಳಾಗಿವೆ. ಜನ್ಮತಃ ಈತ ಮಾದಿಗ ಸಮುದಾಯದವರು. ಅವರ ಸಮುದಾಯ ಒಂದು ಪ್ರವಾಹದಂತೆ ಜಮಾವಣೆ ಆಗುತ್ತಿದ್ದರೆ; ಅಪಸ್ವರವೆತ್ತಿರುವ ವಿಚಾರವನ್ನು ಅವರ ಅಭಿಮತ ಸ್ವಾತಂತ್ರ್ಯ ಅಂಬೋಣ. ಒಟ್ಟಾರೆ ಇವರ ಗುಪ್ತಗಾಮಿನಿಯ ನಡೆ ಒಳ ಮೀಸಲಾತಿ ಬೇಡವೆನ್ನುವವರ ಪಾಲಿಗೆ ಹಾಲು ಜೇನಾಗಿದೆ. ಇಂದ್ರಾ ಸಹಾನಿ ತೀರ್ಪಿನ ಬಗ್ಗೆ ಅವರಿಗೆ ಅಷ್ಟೊಂದು ಕಾಳಜಿ ತುಂಬಿದ್ದರೆ, ಕೇಂದ್ರ ಸರಕಾರ 103ನೇ ತಿದ್ದುಪಡಿ ಮೂಲಕ ಶೇ.10ರಷ್ಟು ಮೀಸಲಾತಿಯನ್ನು ಸದ್ದುಗದ್ದಲವಿಲ್ಲದೆ ಇಡಬ್ಲ್ಯುಎಸ್ ವರ್ಗಗಳಿಗೆ ಶರವೇಗದಲ್ಲಿ ಸಂಸತ್ತಿನಲ್ಲಿ ಅಂಗೀಕರಿಸಿದಾಗ ಅದನ್ನೇ ಶ್ರೇಷ್ಠ ನ್ಯಾಯಾಲಯದ ಮುಂದೆ ಈ ಮಿತ್ರ ಏಕೆ ಪ್ರಶ್ನಿಸಲಿಲ್ಲ ಎಂಬ ಪ್ರಶ್ನೆಗಳ ಸುರಿಮಳೆಯಾಗುತ್ತಿವೆ. ಇಡಬ್ಲ್ಯುಎಸ್ ಮೀಸಲಾತಿಯ ಸಾಂವಿಧಾನಿಕ ಅರ್ಹತೆಯನ್ನು ಸದರಿ ನ್ಯಾಯಾಲಯದ ಮುಂದೆ ಅನೇಕರು ಪ್ರಶ್ನೆ ಮಾಡಿದ್ದಾಗ ಇಂದ್ರಾ ಸಹಾನಿ ಬಂಧಕ ತೀರ್ಪಿನ (Binding Verdict) ಬದ್ಧತೆಗಳು ಏಕೆ ಮಂಗಮಾಯವಾದವು? ಈ ಸಂದರ್ಭದಲ್ಲೇ ಸದರಿ ಘನ ನ್ಯಾಯಾಲಯ ಕೇಂದ್ರದ ಶೇ.59.5ರಷ್ಟು ಮೀಸಲಾತಿ ಅನುಪಾತ ( ಪ.ಜಾತಿ -15, ಪ.ವರ್ಗ -7.5, ಒಬಿಸಿ-27 ಮತ್ತು ಇಡಬ್ಲ್ಯುಎಸ್-10) ಮೀರಿದ್ದನ್ನು ಮೌನವಾಗಿ ಸಮ್ಮತ್ತಿಸಿದ್ದು ಇಂದಿಗೂ ಯಕ್ಷಪ್ರಶ್ನೆಯಾಗಿದೆ. ಸದರಿ ತೀರ್ಪಿನಲ್ಲಿ ಉಲ್ಲೇಖಿಸಿರುವ ರಾಜ್ಯ ಪದ ವ್ಯಾಖ್ಯಾನ ಕೇಂದ್ರ ಸರಕಾರದ ವ್ಯಾಪ್ತಿಗೂ ಅನ್ವಯಿಸುತ್ತದೆ. ಶ್ರೇಷ್ಠ ನ್ಯಾಯಾಲಯದಲ್ಲಿಯೇ ಇಂದ್ರಾ ಸಹಾನಿ ತೀರ್ಪಿಗೆ ಮನ್ನಣೆಯಿಲ್ಲದಿರುವಾಗ ರಾಜ್ಯಗಳ ಹೈಕೋರ್ಟ್ಗಳು ಹೇಗೆ ಬಾಧ್ಯವಾಗುತ್ತವೆ ಎಂಬ ಗಂಭೀರ ಪ್ರಶ್ನೆಗೆ ಉತ್ತರ ಸಿಗುವುದೆಲ್ಲಿಂದ? ಅಥವಾ ಸಂಸತ್ ಉತ್ತರದಾಯಿತ್ವ ಸ್ಥಾಪಿಸುತ್ತದೆಯೇ? ಇತ್ತೀಚೆಗೆ ಚಿಂತಕ ಯೋಗೇಂದ್ರ ಯಾದವ್ ಹತ್ತಾರು ಯುವಕರ ಜೊತೆ ಸಂವಾದ ಮಾಡುವಾಗ ಒಂದು ಪ್ರಶ್ನೆಯನ್ನು ಅವರಿಗಿಟ್ಟರು. ‘‘ನಿಮ್ಮೊಳಗೆ ಹಿಂದುಳಿದ-ದಲಿತ-ಆದಿವಾಸಿಗಳೆಷ್ಟಿದ್ದಾರೆ’’ ಎಂದಾಗ ಎಲ್ಲರೂ ನೀರವ ಮೌನಕ್ಕೆ ಜಾರುತ್ತಾರೆ. ‘‘ಇಲ್ಲಿ ಈ ಸಮುದಾಯದವರಾರು ಇಲ್ಲದಿದ್ದಾಗ ನೀವು ಹೇಗೆ ಅವರ ಪ್ರತಿನಿಧಿಗಳಾಗಿ ನೋವು-ನಲಿವುಗಳನ್ನು ಪ್ರತಿಪಾದಿಸಲು ಮುಖವಾಣಿಗಳಾಗುತ್ತೀರಾ?’’ ಎಂದರು. ಈ ದೃಷ್ಟಿಯಲ್ಲಿ ಮೀಸಲಾತಿ ವಿಚಾರಗಳನ್ನು ವಿಶ್ಲೇಷಿಸಿದಾಗ ಯಾದವ್ರ ಅಂತರ್ಗತ ರಾಷ್ಟ್ರೀಯ ಮುಖ್ಯವಾಹಿನಿ ಮನೋಧರ್ಮಗಳು ಅನಾವರಣವಾಗುತ್ತವೆ. ಮೀಸಲಾತಿ ಮತ್ತು ಒಳಮೀಸಲಾತಿ ಇರುವುದು ಜನಾಂಗೀಯ ಪ್ರಾತಿನಿಧ್ಯಗಳ ಕೊರತೆಯನ್ನು ತುಂಬುವ ಕೋಮುವಾರು ಆದೇಶಗಳಾಗಿವೆ. 1960ರ ಆರಂಭಿಕ ದಿನಗಳಿಂದಲೂ ರಾಜ್ಯದಲ್ಲಿ ಹಿಂದುಳಿದ ವರ್ಗಗಳೊಳಗೆ ನಾಲ್ಕು ಸಾಮಾಜಿಕ ಮಾನದಂಡಗಳಡಿ ಒಳ ಮೀಸಲಾತಿ ವರ್ಗೀಕರಣ ತಾತ್ವಿಕತೆಯನ್ನು ಅನುಸರಿಸುತ್ತಾ ಬರಲಾಗಿದೆ. ಆದರೆ, ಪರಿಶಿಷ್ಟ ಜಾತಿ ಮತ್ತು ವರ್ಗಗಳಲ್ಲಿ ಈ ಸೂತ್ರ ತಡವಾಗಿ ಮುಖ್ಯವಾಹಿನಿಯಲ್ಲಿ ತೆರೆದುಕೊಂಡಿದೆ. ಒಳಮೀಸಲಾತಿ ಜಾರಿ ಬೇಡಿಕೆ ಮಂಡನೆಗಳಲ್ಲಿ ಒಂದಷ್ಟು ಬೇಡದ ಉದ್ರೇಕತೆಯ ಭಾಷಣಗಳೂ ತೇಲಿ ಬಂದವು. ಇಂದಿಗೂ ಸರಿಯಾದ ಕ್ರಮದಲ್ಲಿ ಅನುಷ್ಠಾನವಾಗಿಲ್ಲವೆಂಬ ಕೂಗು ಜೀವಂತವಾಗಿದೆ. ಹೋರಾಟಗಾರರ ಪರಿಕ್ರಮಣಗಳಂತೂ ಸಂಪೂರ್ಣವಾಗಿ ನಿಂತಿಲ್ಲ. ಬಹುಶಃ ಈ ನಿಟ್ಟಿನಲ್ಲಿ ಸರಕಾರದ ನಡೆಯು ಅಷ್ಟೇ ಮುಕ್ತವಾಗಿರಬೇಕಿತ್ತು. ದೀರ್ಘಕಾಲದಿಂದ ದಣಿದಿದ್ದವನಿಗೆ ತಂಬಿಗೆ ನೀರು ಕೊಡುವ ಬದಲು ಸರಕಾರ ಬೆರಳ ಹನಿಗಳಂತೆ ನೀಡತೊಡಗಿತ್ತು. ಇದರಿಂದ ಒಳ ಮೀಸಲಾತಿ ಹೋರಾಟಗಾರರ ದಣಿವೂ ಇಂಗಲಿಲ್ಲ; ವಿಧಾನ ಸೌಧ ಸುತ್ತುವ ಧರ್ಮ ನಡಿಗೆಯೂ ನಿಲ್ಲಲಿಲ್ಲ. ತೆಲಂಗಾಣ ಮಾದರಿಯ ಆದೇಶ ಬೇಕೆಂಬ ಅನೇಕರ ಬೇಡಿಕೆ ಇಂದಿಗೂ ಅರ್ಥಪೂರ್ಣವಾಗಿದೆ. ಈ ಹಿಂದೆ, ಸಚಿವ ಬಿ. ಬಸವಲಿಂಗಪ್ಪ ಪಂಚಾಯತ್ ರಾಜ್ ವ್ಯವಸ್ಥೆಗೆ ಮಹಿಳಾ ಮೀಸಲಾತಿ ಮತ್ತು ಅಧ್ಯಕ್ಷ/ಉಪಾಧ್ಯಕ್ಷ ಹುದ್ದೆಗಳಿಗೆ ಒಳ ಮೀಸಲಾತಿ ಅಳವಡಿಸಿದ ಕಾರಣಕ್ಕಾಗಿ ಅಧಿಕಾರ ವಿಭಜನೆ ಮೂಲಕ ಸ್ಥಾಪಿತ ಶಕ್ತಿಗಳನ್ನು ಮೂಲೆ ಗುಂಪುಮಾಡಿತ್ತು. ಈ ದೃಷ್ಟಿಯಲ್ಲಿ ಪಂಚಾಯತ್ ರಾಜ್ ಮತ್ತು ನಗರ ಸ್ಥಳೀಯ ಸಂಸ್ಥೆಗಳಿಗೆ ಒಳ ಮೀಸಲಾತಿ ಅನ್ವಯಿಸಬೇಕೆಂಬ ಬೇಡಿಕೆಯಿದೆ. ಅಸಮಾನತೆಯಲ್ಲಿ ಸಮಾನತೆ ಸ್ಥಾಪಿಸುವುದು ಸಾಂವಿಧಾನಿಕ ಆಶಯವಾಗಿವೆ. ಹಾಗೆಯೇ ಆರ್ಥಿಕ ಯೋಜನೆಗಳಿಗೂ ಅನ್ವಯಿಸಬೇಕೆಂಬ ಒತ್ತಾಯಗಳಿವೆ. ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ಅನೇಕ ಸಂದರ್ಭಗಳಲ್ಲಿ ಒಳ ಮೀಸಲಾತಿಗೆ ಸಂಬಂಧಿಸಿದಂತೆ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಲು ಒಂದು ಸೂಕ್ತವಾದ ಬಿಲ್ ಅನ್ನು ಮುಂದಿನ ಅಧಿವೇಶನದಲ್ಲಿ ಮಂಡಿಸುತ್ತೇವೆ ಎಂದಿದ್ದಾರೆ. ಬಹುಶಃ ಬೆಳಗಾವಿ ಚಳಿಗಾಲ ಅಧಿವೇಶನದಲ್ಲಿಯೇ ಸೂಕ್ತ ವ್ಯಾಖ್ಯಾನಗಳೊಂದಿಗೆ ಮಜಭೂತವಾದ ಬಿಲ್ ಮಂಡನೆಯಾದರೆ ಭುಗಿಲೆದ್ದಿರುವ ಸರಣಿ ಕಾನೂನು ಬಿಕ್ಕಟ್ಟುಗಳಿಗೆ ಪರಿಹಾರಗಳು ಖಂಡಿತವಾಗಿಯೂ ಲಭಿಸುತ್ತವೆ. ಈ ಕಾರ್ಯ ಯಶಸ್ವಿಯಾದರೆ, ರಾಜ್ಯ ಸರಕಾರಕ್ಕೆ ತಡವಾಗಿಯಾದರೂ ನೊಂದವರಿಂದ ಚಂಗುಲಾಬಿ ಸಿಗುವುದಂತೂ ನಿಶ್ಚಿತ. ಬಹುತೇಕ ಕಾಂಗ್ರೆಸ್ ಶಾಸಕರು ಒಳ ಮೀಸಲಾತಿ ತಮ್ಮನ್ನು 2028ರ ಚುನಾವಣೆಯಲ್ಲಿ ಆಹುತಿ ಪಡೆಯುತ್ತದೆಯೋ ಎಂಬ ಆಂತರಿಕ ಭೀತಿಯಲ್ಲಿದ್ದಾರೆ. ಅತ್ತ ಭಾಜಪ ಸಹ ಇದರ ಹಬೆಯಲ್ಲಿ ಸಾಧ್ಯವಾದಷ್ಟೂ ಕೈ ಕಾಯಿಸಲು ತಾಲೀಮು ಮಾಡುತ್ತಲೇ ಸಾಗಿದೆ. ಈ ಹಿಂದೆ, ಚಂದ್ರಬಾಬು ನಾಯ್ಡು ಮನೆಯಿಂದ ಮಾದಿಗ ದಂಡೋರ ಪಾದಯಾತ್ರೆ ಹೊರಟಂತೆ ಮುಖ್ಯಮಂತ್ರಿಗಳ ಹುಟ್ಟೂರಾದ ಸಿದ್ದರಾಮಯ್ಯನ ಹುಂಡಿಯಿಂದ ಮತ್ತೊಂದು ಸುತ್ತಿನ ಪಾದಯಾತ್ರೆ ಅಣಿಗೊಳ್ಳುತ್ತಿದೆ. ಬಹುಶಃ ಅನುಭವಿ ಸಚಿವರಾದ ಡಾ. ಮಹದೇವಪ್ಪ ಅವರು ತಮ್ಮ ದೀರ್ಘಕಾಲದ ರಾಜಕೀಯ ಒಡನಾಡಿಗಳಾದ ಸಿದ್ದರಾಮಯ್ಯ ಅವರ ಕೈ ಬಲಪಡಿಸಲು ಇಷ್ಟೊತ್ತಿಗೆ ಒಂದು ಸಕಾಲಿಕ ಮತ್ತು ನ್ಯಾಯೋಜಿತ ಕ್ರಮಗಳ ಅನುಪಾಲನೆಯಲ್ಲಿ ಯಶಸ್ಸು ಕಂಡಿದ್ದರೆ ಯಾರೊಬ್ಬರೂ ಪದೇ ಪದೇ ಬೀದಿಗಿಳಿಯುತ್ತಿರಲಿಲ್ಲ. ಕಡೆಗಣಿಸಿದ ಕಿಡಿಯೊಂದು ಊರನ್ನೇ ಸುಟ್ಟಂತಾಗಬಾರದು ಒಳ ಮೀಸಲಾತಿಯ ಸಾಂವಿಧಾನಿಕ ಆಶಯಗಳು. ರಾಜ್ಯ ಸರಕಾರದ ಜೈ ಸಂವಿಧಾನ್ ಜಯಘೋಷ ‘‘ಸಾಂಘಿಕ ಹಿತಾಸಕ್ತಿಯಲ್ಲಿ ವೈಯಕ್ತಿಕ ಶ್ರೇಯೋಭಿವೃದ್ಧಿ ಕಾಣುವ ಆಶಯದತ್ತ’’ ಸಮಾಜ ಕಲ್ಯಾಣ ಇಲಾಖೆಯ ಸಚಿವರ ಕಾರ್ಯವೈಖರಿ ಆಗಲೆಂದು ರಾಜ್ಯದ ಜನತೆಯ ಅಭಿಲಾಷೆ ಅಂಬೋಣ.
ವೈದಿಕ ಸಾಹಿತ್ಯ ಬಯಲು: ಗೋವು ನಿಜವಾಗಿಯೂ ಬ್ರಾಹ್ಮಣರ ಮಾತೆಯೇ?
ಇಂದು ಬ್ರಾಹ್ಮಣರು ತಮ್ಮನ್ನು ಶುದ್ಧ ಸಸ್ಯಾಹಾರಿಗಳು ಮತ್ತು ಶುದ್ಧ ಚಾರಿತ್ರ್ಯವಂತರು ಎಂದು ಬಿಂಬಿಸಿಕೊಂಡರೂ, ಹಿಂದಿನ ಕಾಲದಲ್ಲಿ ಅವರ ಆಹಾರ ಪದ್ಧತಿ ಮತ್ತು ಅಭ್ಯಾಸಗಳ ವಿವರ ಅವರ ಪೂರ್ವಜರು ಬರೆದ ಪುಸ್ತಕಗಳಲ್ಲಿ ಇನ್ನೂ ಲಭ್ಯವಿದೆ. ಈ ಗ್ರಂಥಗಳು ಬ್ರಾಹ್ಮಣರು ಹಿಂದಿನ ಕಾಲದಲ್ಲಿ ಮಾಂಸಾಹಾರಿಗಳಾಗಿದ್ದರು ಎನ್ನುವುದಕ್ಕೆ ದಾಖಲೆ ಒದಗಿಸುತ್ತವೆ, ಮಾತ್ರವಲ್ಲ ಇಂದು ಅವರು ಪವಿತ್ರವೆಂದು ಪರಿಗಣಿಸುವ ಹಸುವನ್ನು ಮತ್ತು ಅದರ ಎಳೆ ಕರುಗಳನ್ನು ತಿನ್ನುತ್ತಿದ್ದರು ಎನ್ನುವುದನ್ನು ಎತ್ತಿ ತೋರಿಸುತ್ತವೆ. ಸುಮಾರು 2,000 ವರ್ಷಗಳ ಹಿಂದೆ ಬ್ರಾಹ್ಮಣರು ಭಾರತೀಯ ಉಪಖಂಡದಲ್ಲಿ ಜಾತಿ ವ್ಯವಸ್ಥೆಯನ್ನು ಹುಟ್ಟುಹಾಕಲು ಪ್ರಾರಂಭಿಸಿದರು. ಏಕೆಂದರೆ, ವರ್ಣ ವ್ಯವಸ್ಥೆಯ ಉಚ್ಛ್ರಾಯ ಕಾಲದಲ್ಲಿಯೇ ಕ್ಷತ್ರಿಯರಾದ ಮಹಾವೀರ ಮತ್ತು ಗೌತಮ ಬುದ್ಧ ವೈದಿಕ ಧರ್ಮದ ವಿರುದ್ಧ ತಿರುಗಿ ಬಿದ್ದಿದ್ದರು. ಕೇವಲ ನಾಲ್ಕು ವರ್ಣಗಳಲ್ಲಿ ಭಾರತಿಯ ಬಹುಜನರನ್ನು ಒಡೆದರೂ ವೈದಿಕರು ಪ್ರತಿರೋಧವನ್ನು ಎದುರಿಸಬೇಕಾಯಿತು. ಭವಿಷ್ಯತ್ತಿನಲ್ಲಿ ಬಹುಜನರನ್ನು ಸಂಘಟಿತರಾಗುವುದನ್ನು ತಡೆಯಲು ಅವರನ್ನು ಅನೇಕ ಜಾತಿಗಳಲ್ಲಿ ವಿಘಟಿಸುವುದು ವೈದಿಕರಿಗೆ ಅನಿವಾರ್ಯವಾಗಿತ್ತು. ಹಾಗಾದರೆ ಮಾತ್ರ ಭಾರತೀಯ ಸಮಾಜದ ಮೇಲೆ ವೈದಿಕರ ಹಿಡಿತ ಬಿಗಿಗೊಳ್ಳುವುದೆಂಬುದು ಅವರು ಬಲವಾಗಿ ನಂಬಿದ್ದರು. ಜಾತಿ ವ್ಯವಸ್ಥೆಯ ಮೇಲ್ಭಾಗದಲ್ಲಿ ಯಾವ ಜಾತಿಗಳನ್ನು ಇಡಬೇಕು ಮತ್ತು ಕೆಳಮಟ್ಟದಲ್ಲಿ ಯಾವ್ಯಾವ ಜಾತಿಗಳನ್ನು ಇರಿಸಬೇಕು ಎಂಬುದಕ್ಕೆ ಬ್ರಾಹ್ಮಣರು ವಿವಿಧ ಮಾನದಂಡಗಳನ್ನು ನಿಗದಿಪಡಿಸಿದರು. ಜಾತಿ ವ್ಯವಸ್ಥೆಯಲ್ಲಿ ಸಂಪತ್ತು ಮತ್ತು ಅಧಿಕಾರ ಹೊಂದಿರುವವರಿಗೆ ಬ್ರಾಹ್ಮಣರು ಉನ್ನತ ಸ್ಥಾನಮಾನವನ್ನು ನೀಡಿದರು, ಆದರೆ ಬ್ರಾಹ್ಮಣವಾದಿ ವ್ಯವಸ್ಥೆಯನ್ನು ಬಲವಾಗಿ ವಿರೋಧಿಸುವವರನ್ನು ಅಸ್ಪಶ್ಯ ಜಾತಿಗೆ ತಳ್ಳಲಾಯಿತು. ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ತಮ್ಮ ‘ಭಾರತದಲ್ಲಿ ಜಾತಿಗಳು’, ‘ಅಸ್ಪಶ್ಯರು ಮೊದಲು ಯಾರು?’ ಮತ್ತು ‘ಜಾತಿ ವ್ಯವಸ್ಥೆಯ ನಾಶ’ ಎಂಬ ಪುಸ್ತಕಗಳಲ್ಲಿ ಇದರ ಬಗ್ಗೆ ವಿಸ್ತಾರವಾಗಿ ಹೇಳಿದ್ದಾರೆ. ಜಾತಿ ವ್ಯವಸ್ಥೆಯ ಉನ್ನತ ಸ್ಥಾನದಲ್ಲಿ ತಮ್ಮನ್ನು ಸ್ಥಾಪಿಸಿಕೊಳ್ಳಲು ಬ್ರಾಹ್ಮಣರು ಸಸ್ಯಾಹಾರವನ್ನು ಮಾನದಂಡವನ್ನಾಗಿ ಮಾಡಿಕೊಂಡಿದ್ದರು. ಅದಕ್ಕೂ ಮೊದಲು ವರ್ಣ ವ್ಯವಸ್ಥೆಯ ಕಾಲಘಟ್ಟದಲ್ಲಿ ಸಸ್ಯಾಹಾರ ಮತ್ತು ಮಾಂಸಾಹಾರಿಗಳ ನಡುವೆ ಹೆಚ್ಚಿನ ಮಟ್ಟದ ತಾರತಮ್ಯವಿರಲಿಲ್ಲ. ವರ್ಣ ವ್ಯವಸ್ಥೆಯನ್ನು ಪ್ರತಿಪಾದಿಸಿದ ವೇದಗಳೇ ಮಾಂಸಾಹಾರವನ್ನು ಉತ್ತೇಜಿಸುತ್ತಿದ್ದವು. ವೇದಗಳನ್ನು ಪ್ರಮಾಣವಾಗಿ ನಂಬುವ ಬ್ರಾಹ್ಮಣರೇ ಮಾಂಸಾಹಾರಿಗಳಾಗಿದ್ದರು. ಬುದ್ಧನ ಅಹಿಂಸಾ ಮಾರ್ಗ ಭಾರತದಲ್ಲಿ ಹೋಮ ಹವನಗಳ ಹೆಸರಿನಲ್ಲಿ ನಡೆಯುವ ಪ್ರಾಣಿಬಲಿ, ಗೋವುಗಳ ಮಾರಣ ಹೋಮ ಹಾಗೂ ಆರ್ಯ ಬ್ರಾಹ್ಮಣರ ಗೋಮಾಂಸ ಸೇವನೆಗೆ ತಡೆಯನ್ನು ಒಡ್ಡಿತು. ಆ ಕಾರಣದಿಂದ ಬ್ರಾಹ್ಮಣರು ಮಾಂಸಾಹಾರ ತ್ಯಜಿಸುವಂತಾಯಿತು. ಬ್ರಾಹ್ಮಣರು ಮೂಲತಃ ಬೌದ್ಧ ಸನ್ಯಾಸಿಗಳಿಂದ ಸಸ್ಯಾಹಾರವನ್ನು ಯಥಾವತ್ ನಕಲು ಮಾಡಿದರು ಎಂಬುದು ಇಲ್ಲಿ ಗಮನಾರ್ಹ. ಆರ್ಯ ಬ್ರಾಹ್ಮಣರು ಬೌದ್ಧರಿಂದ ಅನೇಕ ಬಗೆಯ ಆಚರಣೆ, ಧರ್ಮ ಲಾಂಛನ, ಸಿದ್ಧಾಂತಗಳನ್ನು ಕದ್ದರು, ಅದರಲ್ಲಿ ಸಸ್ಯಾಹಾರವೂ ಒಂದು. ಸನಾತನ ಎಂದು ಶಬ್ದವೂ ಸೇರಿದಂತೆ ಆರ್ಯ ಬ್ರಾಹ್ಮಣ ಧರ್ಮವು ಬೌದ್ಧರಿಂದ ಕದ್ದ ಅನೇಕ ವಸ್ತುಗಳು, ಆಚರಣೆಗಳು, ಪ್ರತಿಮೆಗಳು, ಮಂದಿರಗಳು, ಸಿದ್ಧಾಂತಗಳು, ಜಾತಕ ಕತೆಗಳ ಮೇಲೆ ನಿರ್ಮಿತವಾಗಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಹೋಮ, ಹವನಗಳ ಸಂದರ್ಭದಲ್ಲಿ ಕೊಡಲಾಗುತ್ತಿದ್ದ ಗೋವಧೆ ಮತ್ತು ಅವುಗಳ ಮಾಂಸ ಭಕ್ಷಣೆ ಬ್ರಾಹ್ಮಣರ ವೇದಗಳಲ್ಲಿ ಪ್ರಸ್ತಾಪವಾಗಿದೆ. ಬ್ರಾಹ್ಮಣರಲ್ಲಿ ಕೆಲವರು ಸಾಂಕೇತಿಕವಾಗಿ ಈಗಲೂ ಹಿಟ್ಟಿನ ಹಸುವನ್ನು ಬಲಿಕೊಟ್ಟು ಅದನ್ನು ಹಬ್ಬದ ಅಡುಗೆಯಲ್ಲಿ ಬೆರೆಸಿ ಭಕ್ಷಿಸುತ್ತಾರೆ. ಇಂದು ಬ್ರಾಹ್ಮಣರು ತಮ್ಮನ್ನು ಶುದ್ಧ ಸಸ್ಯಾಹಾರಿಗಳು ಮತ್ತು ಶುದ್ಧ ಚಾರಿತ್ರ್ಯವಂತರು ಎಂದು ಬಿಂಬಿಸಿಕೊಂಡರೂ, ಹಿಂದಿನ ಕಾಲದಲ್ಲಿ ಅವರ ಆಹಾರ ಪದ್ಧತಿ ಮತ್ತು ಅಭ್ಯಾಸಗಳ ವಿವರ ಅವರ ಪೂರ್ವಜರು ಬರೆದ ಪುಸ್ತಕಗಳಲ್ಲಿ ಇನ್ನೂ ಲಭ್ಯವಿದೆ. ಈ ಗ್ರಂಥಗಳು ಬ್ರಾಹ್ಮಣರು ಹಿಂದಿನ ಕಾಲದಲ್ಲಿ ಮಾಂಸಾಹಾರಿಗಳಾಗಿದ್ದರು ಎನ್ನುವುದಕ್ಕೆ ದಾಖಲೆ ಒದಗಿಸುತ್ತವೆ, ಮಾತ್ರವಲ್ಲ ಇಂದು ಅವರು ಪವಿತ್ರವೆಂದು ಪರಿಗಣಿಸುವ ಹಸುವನ್ನು ಮತ್ತು ಅದರ ಎಳೆ ಕರುಗಳನ್ನು ತಿನ್ನುತ್ತಿದ್ದರು ಎನ್ನುವುದನ್ನು ಎತ್ತಿ ತೋರಿಸುತ್ತವೆ. ಅವರಲ್ಲಿ ಕೆಲವರು ಇಂದಿಗೂ ಕದ್ದು ಮುಚ್ಚಿ ಮಾಂಸ ಸೇವಿಸುವುದನ್ನು ನಿಲ್ಲಿಸಲಿಲ್ಲ. ಪ್ರಾಚ್ಯ ಶಾಸ್ತ್ರಜ್ಞ ಶರದ್ ಪಾಟೀಲ್ ತಮ್ಮ ಒಂದು ಗ್ರಂಥದಲ್ಲಿ, ಕ್ರಿ.ಶ. 1,000 ವರ್ಷಗಳ ತನಕ ಬ್ರಾಹ್ಮಣರು ಗೋಮಾಂಸವನ್ನು ತಿನ್ನುತ್ತಿದ್ದರು ಎಂದು ಬರೆಯುತ್ತಾರೆ. ಭವಭೂತಿ ಎನ್ನುವ ಕವಿ ಏಳನೇ ಶತಮಾನದಲ್ಲಿ ತನ್ನ ‘ಮಹಾವೀರ ಚರಿತ’ ಸಂಸ್ಕೃತ ನಾಟಕ ಕೃತಿಯಲ್ಲಿ ‘‘ಜನಕ ರಾಜನು ಪರಶುರಾಮನಿಗೆ ಆತಿಥ್ಯ ನೀಡಿದಾಗ ಎರಡು ವರ್ಷದ ಎಳೆ ಕರುವಿನ ಮಾಂಸವನ್ನು ಬೇಯಿಸಿ ತಿನ್ನಿಸಿದ್ದ’’ ಎಂದು ಬರೆದಿದ್ದಾನೆ ಎಂದು ಶರದ್ ಪಾಟೀಲ್ ತಮ್ಮ ‘ಕೃತಿ ಶಿವಾಜಿಯ ಹಿಂದೂ ಸ್ವರಾಜ್ಯದ ನಿಜವಾದ ಶತ್ರು ಯಾರು: ಮಹಮ್ಮದೀಯರೋ ಅಥವಾ ಬ್ರಾಹ್ಮಣರೋ?’, ಪುಟ 121ರಲ್ಲಿ ಉಲ್ಲೇಖಿಸಿದ್ದಾರೆ. ಭವಭೂತಿ ತನ್ನ ನಾಟಕದ ದೃಶ್ಯದಲ್ಲಿ ಜನಕನಲ್ಲಿ ಹೇಳುತ್ತಾನೆ: ‘‘ಭೋ ಭೋ: ಶುದ್ಯಮಾತಿಥ್ಯ ವಿಧಿಯತಾಮ್. ದ್ವಿವತ್ಸ ವತ್ಸರೀ ದೀಯಾತಾಂ ಪಚ್ಯತಾಂ.’’ ಅರ್ಥ: ಸರಿ, ಆತಿಥ್ಯಕ್ಕೆ ಬೇಗ ವ್ಯವಸ್ಥೆ ಮಾಡಿ. ಎರಡು ವರ್ಷದ ಕರುವನ್ನು ತಂದು ಬೇಯಿಸಿ (ಮಹಾವೀರಚರಿತಂ, 3ನೇ ಅಂಕ). ಇಷ್ಟೇ ಅಲ್ಲ, ‘ಋಗ್ವೇದ’ವು ವೇದಗಳಲ್ಲಿ ಮೊದಲನೆಯದು, ಇದನ್ನು ಬ್ರಾಹ್ಮಣರು ಅಪೌರುಷೇಯವೆಂದು ಮತ್ತು ಭೂಮಿಯ ಮೇಲಿನ ಅತ್ಯಂತ ಪವಿತ್ರ ಗ್ರಂಥವೆಂದು ಪರಿಗಣಿಸುತ್ತಾರೆ. ಋಗ್ವೇದದಲ್ಲಿ ಗೋಮಾಂಸದ ಬಗ್ಗೆ ಹೇಳಲಾಗಿದೆ, ‘‘ಉಕ್ಷಣೋಂ ಹಿ ಮೇ ಪಂಚದಂಶ್ ಸಾಂಕ ಪಂಚಂತಿ: ವಿಷ್ಟ್ತಿಮ್. ಉತಾಹಮದಿಮ್ ಪಿವ ಇದುಭಾ ಕುಕ್ಷಿ ಪ್ರಣತಿ ಮೇ ವಿಶ್ವಸ್ಮಾದ್ರಿಂದ್ರ’’ ಅರ್ಥ: ಇಂದ್ರಾಣಿಯಿಂದ ಪ್ರೇರಿತನಾಗಿ ಬಲಿದಾನಗೈದ ಬಲಿಪಶು, ನನಗಾಗಿ (ಇಂದ್ರ) 15-30 ಎತ್ತುಗಳನ್ನು ವಧಿಸಿ ಅಡುಗೆ ಮಾಡುತ್ತಾನೆ, ಅದನ್ನು ತಿಂದು ನಾನು ಬಲಶಾಲಿ ಮತ್ತು ದಪ್ಪನಾಗುತ್ತೇನೆ. ಅವು ನನ್ನ ರಕ್ತನಾಳಗಳನ್ನು ಸೋಮರಸದಿಂದ (ಮದ್ಯ) ತುಂಬುತ್ತವೆ. (ಋಗ್ವೇದ, 10-86-14). ಋಗ್ವೇದದಲ್ಲಿ ಈ ಕೆಳಗಿನ ಉಲ್ಲೇಖಗಳನ್ನು ನೋಡಿ, ‘‘ಆಂದ್ರಿನಾತೇ ಮಂದಿನ ಇಂದ್ರ ತ್ರಯನ್ಸುನ್ಬಂತಿ, ಸೋಮಾನ ಪಿವಸಿತ್ವ ಮೇಷ, ಪಂಚಂತಿ ತೆ ವಶಂ ಅತ್ಸಿ ತೇಷಮ್| ಪ್ರಶೇನ್ ಯನ್ಮಧವನ್ ಹುಯ್ ಮಾನ್’’. ಅರ್ಥ: ಓ ಇಂದ್ರ! ತಿನ್ನುವ ಬಯಕೆಯಿಂದ ನಿನಗಾಗಿ ಯಜ್ಞ ಮಾಡಿದಾಗ, ಆತಿಥೇಯನು ಬೇಗನೆ ಸೋಮರಸವನ್ನು ಸಿದ್ಧಪಡಿಸುತ್ತಾನೆ. ನೀನು ಅದನ್ನು ಕುಡಿಯುತ್ತೀಯ. ಆತಿಥೇಯನು ಎತ್ತನ್ನು ಬೇಯಿಸುತ್ತಾನೆ ಮತ್ತು ನೀನು ಅದನ್ನು ತಿನ್ನುತ್ತೀಯ. (ಋಗ್ವೇದ, 10-28-3). ಮೇಲಿನ ಋಗ್ವೇದದ ಶ್ಲೋಕಗಳು ಆರ್ಯ ಬ್ರಾಹ್ಮಣರಿಂದ, ಅಂದರೆ ದೇವತೆಗಳ ರಾಜ ಇಂದ್ರನಿಂದ ಬಂದಿವೆ. ಅವು ಇಂದ್ರನಿಗೆ ಎತ್ತುಗಳು ಮತ್ತು ಮದ್ಯವನ್ನು ಅರ್ಪಿಸುವುದನ್ನು ಸ್ಪಷ್ಟವಾಗಿ ಉಲ್ಲೇಖಿಸುತ್ತವೆ. ವ್ಯಾಸನು ಮಹಾಭಾರತದಲ್ಲಿ ಬರೆಯುತ್ತಾನೆ, ‘‘ರಾಜ್ಞೋ ಮಹಾಂಸೇ ಪೂರ್ವಾ ರಂತಿದೇವಸ್ಯ ವೈದ್ವಿಜಃ ದ್ವೈಸಹಸ್ರ ತು ವಾದ್ಯತೇ ಪಶೂನಾಮನ್ವಹಂ ತದಾ॥ ಅಹನ್ಯಹಾನಿ ವದ್ಯತೇ ದ್ವೈಸಹಸ್ರೆ ಗ್ರಾಮಾ ತಥಾ ಸಮಾಂಶಂ ದದಾತೋ ಹನ್ನಂ ರಂತಿದೇವಸ್ಯ ನಿತ್ಯಃ: ಅತುಲ ಕೀರ್ತಿರ್ಭವನ್ನುಪ್ಸ್ತ ದ್ವಿಜಸತ್ತಮ್.’’ ಅರ್ಥ: ರಾಜ ರಂತಿದೇವನ ಅಡುಗೆಮನೆಯಲ್ಲಿ ಪ್ರತಿದಿನ ಎರಡು ಸಾವಿರ ಗೋವುಗಳನ್ನು ವಧಿಸಲಾಗುತ್ತಿತ್ತು. ಮಾಂಸ ಸೇರಿದಂತೆ ಬೇರೆ ಆಹಾರನ್ನು ದಾನ ಮಾಡುವುದರಿಂದಾಗಿ ರಾಜ ರಂತಿದೇವನು ಅನುಪಮ ಖ್ಯಾತಿಯನ್ನು ಗಳಿಸಿದನು. (ಮಹಾಭಾರತ, ವನ ಪರ್ವ, ಅಧ್ಯಾಯ 208, ಶ್ಲೋಕಗಳು 810). ಮಹಾಭಾರತದ ಕೆಳಗಿನ ಪದ್ಯವನ್ನು ನೋಡಿ, ‘‘ಮಹಾನದಿ ಚರ್ಮರಾಶೆರು ತ್ಕ್ಲೆದತ್ ಸಂಸ್ರಜೆ ಯತ: ತತಶ್ಚರ್ಮನ್ವತಿತ್ಯೇವಂ ವಿಖ್ಯಾತಾ ಸ ಮಹಾನದಿ.’’ ಅರ್ಥ: ರಾಜ ರಂತಿದೇವನು ಹಸುಗಳ ಚರ್ಮವನ್ನು ಸುಲಿದನು. ಆ ಚರ್ಮಗಳಿಂದ ಹರಿಯುವ ರಕ್ತದ ಹನಿಗಳಿಂದ ಒಂದು ದೊಡ್ಡ ನದಿ ರೂಪುಗೊಂಡಿತು, ಅದನ್ನು ಚರ್ಮಣ್ವತಿ ಎಂದು ಕರೆಯಲಾಗುತ್ತದೆ. (ಶಾಂತಿಪರ್ವ: ಅಧ್ಯಾಯ 29, ಶ್ಲೋಕ 123). ಮಹಾಭಾರತದ ಮೇಲಿನ ಶ್ಲೋಕಗಳು ಬ್ರಾಹ್ಮಣರು ಗೋಮಾಂಸ ತಿನ್ನುವುದನ್ನು ನಿಷಿದ್ಧವೆಂದು ಪರಿಗಣಿಸಿರಲಿಲ್ಲ, ಬದಲಿಗೆ ಅತಿಥಿಗಳನ್ನು ಸತ್ಕರಿಸಲು ಅವರ ಮುಖ್ಯ ಆಹಾರಗಳ ಪಟ್ಟಿಯಲ್ಲಿ (ಮೆನು) ಗೋಮಾಂಸ ಸ್ಥಾನ ಪಡೆದಿತ್ತು ಮತ್ತು ಅವರು ಅದನ್ನು ಬಹಳ ಸಂತೋಷದಿಂದ ಬೇಯಿಸುತ್ತಿದ್ದರು ಎಂಬುದನ್ನು ಋಗ್ವೇದವು ನಿಸ್ಸಂದೇಹವಾಗಿ ಸ್ಪಷ್ಟಪಡಿಸುತ್ತವೆ. ಕಾಶ್ಮೀರದಲ್ಲಿ, ಶೈವ ಮತ್ತು ತಾಂತ್ರಿಕ ಸಂಪ್ರದಾಯಗಳನ್ನು ಅನುಸರಿಸುವ ಬ್ರಾಹ್ಮಣರು ಬ್ರಿಟಿಷರ ಅವಧಿಯವರೆಗೆ ವ್ಯಾಪಕವಾಗಿ ಗೋಮಾಂಸವನ್ನು ತಿನ್ನುತ್ತಿದ್ದರು. ಬಂಗಾಳದಲ್ಲಿ (ವಿಶೇಷವಾಗಿ ಹಿಂದಿನ ಬಂಗಾಳ, ಈಗ ಬಾಂಗ್ಲಾದೇಶದಲ್ಲಿಯೂ ಸಹ) ಅನೇಕ ಬ್ರಾಹ್ಮಣರು ಗೋಮಾಂಸವನ್ನು ತಿನ್ನುತ್ತಾರೆ. ಶ್ಯಾಮಚರಣ್ ದಾಸ್ ಮತ್ತು ರಜನಿಕಾಂತ್ ಸೇನ್ ಅವರಂತಹ ಪ್ರಸಿದ್ಧ ಬಂಗಾಳಿ ಬ್ರಾಹ್ಮಣರು ಗೋಮಾಂಸ ತಿನ್ನುತ್ತಿದ್ದರು. ಇಂದಿಗೂ ಸಹ, ಹಳೆಯ ಶಾಕ್ತ ಸಂಪ್ರದಾಯಗಳನ್ನು ಹೊಂದಿರುವ ಕೋಲ್ಕತಾದ ಕೆಲವು ಬ್ರಾಹ್ಮಣ ಕುಟುಂಬಗಳಲ್ಲಿ ಗೋಮಾಂಸವನ್ನು ತಿನ್ನಲಾಗುತ್ತದೆ. ಅಸ್ಸಾಂ, ಒಡಿಶಾ ಮತ್ತು ಮಹಾರಾಷ್ಟ್ರಗಳಲ್ಲಿ ಕೆಲವು ತಾಂತ್ರಿಕ ಬ್ರಾಹ್ಮಣರು ಹಸುಗಳನ್ನು ಬಲಿ ನೀಡಿ ಗೋಮಾಂಸವನ್ನು ತಿನ್ನುತ್ತಿದ್ದರು (ವಿಶೇಷವಾಗಿ ದುರ್ಗಾ ಪೂಜೆ ಮತ್ತು ಕಾಳಿ ಪೂಜೆ ಹಾಗೂ ಯಜ್ಞಗಳ ಸಮಯದಲ್ಲಿ) ಎಂಬುದರ ಐತಿಹಾಸಿಕ ದಾಖಲೆಗಳಿವೆ. ವಿದೇಶಗಳಲ್ಲಿ ವಾಸಿಸುವ ಅನೇಕ ಬ್ರಾಹ್ಮಣರು ಇನ್ನೂ ಗೋಮಾಂಸವನ್ನು ಬಹಳ ಇಷ್ಟಪಟ್ಟು ತಿನ್ನುತ್ತಾರೆ ಮತ್ತು ಅಂತಹ ವಿಷಯಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡುತ್ತಾರೆ. ಋಗ್ವೇದದಲ್ಲಿ ಹಸುಗಳ ರಕ್ಷಣೆ, ಸಾಕಣೆ, ಪಾಲನೆ, ಅವುಗಳಿಗೆ ಉತ್ತಮ ಮೇವು ನೀಡುವುದು ಮತ್ತು ಹಸುಗಳು ಕೃಷಿ ಕಾರ್ಯಗಳಿಗಾಗಿ ಉತ್ತಮ ಎತ್ತುಗಳನ್ನು ಒದಗಿಸುತ್ತವೆ ಎನ್ನುವ ವಿಷಯ ಕುರಿತು ಅನೇಕ ಶ್ಲೋಕಗಳನ್ನು ಒಳಗೊಂಡಿದೆ. ಹಸುಗಳ ಕುರಿತು ಕಥೆಗಳನ್ನು ಸೃಷ್ಟಿಸಿದವರು ಮಹಿಳೆಯರು ಎಂದು ಶರದ್ ಪಾಟೀಲ್ ತಮ್ಮ ಕೃತಿಯಲ್ಲಿ ಹೇಳುತ್ತಾರೆ. ಪ್ರಪಂಚದಾದ್ಯಂತ ಮಹಿಳೆಯರು ಕೃಷಿಯನ್ನು ಕಂಡುಹಿಡಿದರು ಎಂದು ಇತಿಹಾಸ ಸಂಶೋಧಕರು ಸಾಬೀತುಪಡಿಸಿದ್ದಾರೆ ಎನ್ನುತ್ತಾರೆ ಪಾಟೀಲ್. ‘‘ಹಸುಗಳು ಮತ್ತು ಎತ್ತುಗಳು ಕೃಷಿಗೆ ಬಹಳ ಉಪಯುಕ್ತ ಪ್ರಾಣಿಗಳಾಗಿದ್ದವು. ಹಸು ರೈತರಿಗೆ ಹಾಲು ನೀಡುತ್ತಿತ್ತು, ಕೃಷಿಗೆ ಎತ್ತುಗಳನ್ನು ಒದಗಿಸುತ್ತಿತ್ತು, ಮಲ ಮತ್ತು ಮೂತ್ರದ ರೂಪದಲ್ಲಿ ಗೊಬ್ಬರವನ್ನು ಒದಗಿಸುತ್ತಿತ್ತು, ಆದ್ದರಿಂದ ಆರ್ಯ ಬ್ರಾಹ್ಮಣರು ಹಸುವನ್ನು ಪ್ರೀತಿಸುವುದು ಸಹಜ, ಆದರೆ, ನನ್ನ ಪ್ರಶ್ನೆ ಏನೆಂದರೆ, ರೈತರು ಮತ್ತು ಕಾರ್ಮಿಕರ ಶ್ರಮದಿಂದ ಆಹಾರವನ್ನು ಪಡೆದ ಸಾವಿರಾರು ತಲೆಮಾರುಗಳ ಜನರು, ಕಡಲೆಕಾಯಿ ಬೀಜಗಳು ನೆಲದಡಿಯಲ್ಲಿ ಬೆಳೆಯುತ್ತವೋ ಅಥವಾ ನೆಲದ ಮೇಲೆ ಬೆಳೆಯುತ್ತವೆಯೋ ಎಂದು ತಿಳಿಯದ ಬ್ರಾಹ್ಮಣರಿಗೂ ಮತ್ತು ಕೃಷಿಗೂ ಸಂಬಂಧವೇನು, ‘ಹಾಲು ಯಾರು ಉತ್ಪಾದಿಸುತ್ತಾರೆ ಮತ್ತು ಎಲ್ಲಿ ಉತ್ಪಾದಿಸಲಾಗುತ್ತೆ?’ ಎಂದು ಕೇಳಿದರೆ ಇಂದಿನ ಬ್ರಾಹ್ಮಣ ಪೀಳಿಗೆ ‘ಹಾಲು ಮಾರುವ ಗೌಳಿ’ ಎಂದು ಉತ್ತರಿಸುತ್ತಾರೆ. ಹಸುವಿಗೂ ಬ್ರಾಹ್ಮಣರಿಗೂ ಸಂಬಂಧವೇನು?’’ ಎಂಬುದು ಶರದ್ ಪಾಟೀಲ್ರ ಪ್ರಶ್ನೆ. ಶರದ್ ಪಾಟೀಲ್ ಮುಂದುವರಿದು ಹೀಗೆ ಪ್ರಶ್ನಿಸುತ್ತಾರೆ: ‘‘ಇತಿಹಾಸದ ವಿಪರ್ಯಾಸವೆಂದರೆ ಗೋವುಗಳ ಬಗ್ಗೆ ಗೌರವವಿಲ್ಲದ ಜನರು ಇಂದು ಅದೇ ಗೋವುಗಳ ಹೆಸರಿನಲ್ಲಿ ದೇಶಕ್ಕೆ ಬೆಂಕಿ ಹಚ್ಚುತ್ತಿದ್ದಾರೆ. ಇತಿಹಾಸದ ಕುರಿತು ನಮ್ಮ ಅಜ್ಞಾನವೇ ಇದಕ್ಕೆಲ್ಲಾ ಕಾರಣ ಎಂಬುದನ್ನು ನಾವು ಅರಿತುಕೊಳ್ಳಬೇಕು. ಇತಿಹಾಸದ ಅಜ್ಞಾನದ ಜೊತೆಯಲ್ಲಿ ನಮಗೆ ವರ್ತಮಾನದ ಬಗ್ಗೆ ಕೂಡ ಏನೂ ಗೊತ್ತಿಲ್ಲ. ಗೋಹತ್ಯೆಗೆ ಮುಸ್ಲಿಮರು ಮತ್ತು ದಲಿತರು ಕಾರಣ ಎಂದು ಇಂದಿನ ಹಿಂದುತ್ವವಾದಿ ಬ್ರಾಹ್ಮಣರು ಆರೋಪಿಸುತ್ತಾರೆ. ಈ ವಿಷಯದಲ್ಲಿ ನಾವು ಸತ್ಯ ಸಂಗತಿಗಳನ್ನು ಪರಿಶೀಲಿಸಬೇಕು’’ ಎನ್ನುತ್ತಾರೆ ಶರದ್ ಪಾಟೀಲ್. ಇಂದು ದೇಶದಲ್ಲಿ ಗೋಮಾಂಸ ರಫ್ತು ಮಾಡುವ ಪ್ರಮುಖ ಹತ್ತು ಸಂಸ್ಥೆಗಳು ಮತ್ತು ಅವುಗಳ ಮಾಲಕರು ಹಿಂದೂಗಳೇ ಆಗಿದ್ದಾರೆ ಎನ್ನುವ ಸಂಗತಿಯನ್ನು ಪಾಟೀಲರು ಒತ್ತಿ ಹೇಳುತ್ತಾ ಆ ಪಟ್ಟಿ ಕೊಡುತ್ತಾರೆ: 1. ಆಲ್ ಕಬೀರ್ ಎಕ್ಸ್ಪೋರ್ಟ್ ಪ್ರೈ. ಲಿ., (ಮಾಲಕ: ಸತೀಶ್ ಶಾಬರವಾಲ್ ಮತ್ತು ಅತುಲ್ ಶಾಬರವಾಲ್), 2. ಅರೇಬಿಯನ್ ಎಕ್ಸ್ಪೋರ್ಟ್ ಪ್ರೈ. ಲಿ., (ಮಾಲಕ: ಸುನೀಲ್ ಕಪೂರ್), 3. ಎಂಕೆಆರ್ ಫ್ರೋಜನ್ ಫುಡ್ ಎಕ್ಸ್ಪೋರ್ಟ್ ಪ್ರೈ. ಲಿ. (ಮಾಲಿಕ: ಮದನ್ ಅಬೋಟ್), 4. ಆಲ್ ನೂರ್ ಎಕ್ಸ್ಪೋರ್ಟ್ ಪ್ರೈ. ಲಿ., (ಮಾಲಕ: ಸುನೀಲ್ ಸೂದ್ ಮತ್ತು ಅಜೇಯ್ ಸೂದ್). ಬ್ರಾಹ್ಮಣರು ಹಿಂದಿನ ಕಾಲದಲ್ಲಿ ಗೋಮಾಂಸ ತಿನ್ನುತ್ತಿದ್ದರು ಎಂದು ಅವರ ಧರ್ಮ ಗ್ರಂಥಗಳನ್ನು ಉಲ್ಲೇಖಿಸಿ ಸ್ವಾಮಿ ವಿವೇಕಾನಂದರೂ ಸಹ ಮಾತನಾಡಿದ್ದಾರೆ. ಅವರ ಮಾತುಗಳು ರಾಮಕೃಷ್ಣ ಮಿಷನ್ ಪ್ರಕಟಿಸಿರುವ ವಿವೇಕಾನಂದರ ಕೃತಿ ಶ್ರೇಣಿಯಲ್ಲಿ ನೋಡಬಹುದು. ಹನ್ನೆರಡನೇ ಶತಮಾನದಲ್ಲಿ ಬಸವಣ್ಣನವರು ಸಹ ‘‘...ಹೊಲೆಯರ ಹೊಟ್ಟೆಯಲ್ಲಿ ವಿಪ್ರರು ಹುಟ್ಟಿ ಗೋಮಾಂಸ ತಿಂದರೆನ್ನುವುದಕ್ಕೆ ಇದೇ ದೃಷ್ಟ...’’ ಎಂದಿದ್ದಾರೆ. ಆದರೆ, ವಿಪರ್ಯಾಸದ ಸಂಗತಿ ಎಂದರೆ ಇಂದು ದೇಶದ ಜನರಿಗೆ ಗೋವಿನ ಶ್ರೇಷ್ಠತೆಯನ್ನು ಸಾರುವ ಮತ್ತು ಅದನ್ನು ತಮ್ಮ ತಾಯಿಯೆಂದು ಪೂಜಿಸಲು ಆದೇಶಿಸುವ ಈ ಗೋಭಕ್ತರು, ಗೋರಕ್ಷಕರೆನಿಸಿಕೊಳ್ಳುವವರು ಮತ್ತು ಹಿಂದೂ ಧರ್ಮದ ಸ್ವಯಂ ಘೋಷಿತ ರಕ್ಷಕರೆನಿಸಿಕೊಳ್ಳುವವರ ಹಲ್ಲುಗಳನ್ನು ಒಮ್ಮೆ ಪರಿಶೀಲಿಸಬೇಕು, ಇವರ ಪೂರ್ವಜರ ಹಲ್ಲುಗಳು ಗೋಮಾಂಸವನ್ನು ಕಡಿದು ತಿಂದಿರುವುದಕ್ಕೆ ಇತಿಹಾಸ ಸಾಕ್ಷಿಯಾಗಿದೆ. ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು: ‘‘ಒಂದು ರಾಷ್ಟ್ರ, ಒಂದು ಸಮಾಜ ಮತ್ತು ದೇಶದ ಇತಿಹಾಸವನ್ನು ಮರೆತ ವ್ಯಕ್ತಿ; ಆ ರಾಷ್ಟ್ರ, ಆ ಸಮಾಜ ಮತ್ತು ಆ ವ್ಯಕ್ತಿ ಇತಿಹಾಸವನ್ನು ಸೃಷ್ಟಿಸಲು ಸಾಧ್ಯವಿಲ್ಲ’’ ಎನ್ನುತ್ತಾರೆ. ಆದ್ದರಿಂದ, ನಾವು ನಮ್ಮ ನಿಜವಾದ ಇತಿಹಾಸವನ್ನು ಮತ್ತೊಮ್ಮೆ ನಮ್ಮ ಕಣ್ಣುಗಳನ್ನು ತೆರೆದು ಓದಬೇಕು, ಚಿಂತಿಸಬೇಕು ಮತ್ತು ಅದರ ಕುರಿತು ಸಮಾಜದಲ್ಲಿ ಜಾಗೃತಿಯನ್ನು ಮೂಡಿಸಬೇಕು. ಇತಿಹಾಸವನ್ನು ತಿರುಚಿ ಇಂದಿನ ಪೀಳಿಗೆಯನ್ನು ದಾರಿ ತಪ್ಪಿಸಲಾಗುತ್ತಿದೆ. ಇಂದು ಸಂತೋಷದಿಂದ ಗೋಮಯ ತಿಂದು ಗೋಮೂತ್ರ ಕುಡಿಯುವ ಜನರು ಅಂದು ಅದೇ ಗೋವನ್ನು ಕೊಂದು ಸಂತೋಷದಿಂದ ಸೇವಿಸುತ್ತಿದ್ದರು ಎನ್ನವ ನೈಜ ಇತಿಹಾಸವನ್ನು ಎಲ್ಲರೂ ಓದಿ, ಜನರಿಗೆ ತಿಳಿಸಬೇಕು. ಉಲ್ಲೇಖ ಪಟ್ಟಿ: 1. ಶಿವಾಜಿಯ ಹಿಂದೂ ಸ್ವರಾಜ್ಯದ ನಿಜವಾದ ಶತ್ರು ಯಾರು: ಮಹಮ್ಮದೀಯರು ಅಥವಾ ಬ್ರಾಹ್ಮಣರು?, ಲೇಖಕರು, ಕಾಂ. ಶರದ್ ಪಾಟೀಲ್. 2. ಮಹಾವೀರ ಚರಿತಂ, ಭವಭೂತಿ ವಿರಚಿತ ನಾಟಕ. 3. ಋಗ್ವೇದ. 4. ಮಹಾಭಾರತ.
ಗೋವಾ ನೈಟ್ ಕ್ಲಬ್ನಲ್ಲಿ ಅಗ್ನಿ ಅವಘಡ: ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶ
ಕ್ಲಬ್ ಮಾಲಕ, ಪ್ರಧಾನ ವ್ಯವಸ್ಥಾಪಕನ ವಿರುದ್ಧ ಎಫ್ಐಆರ್ ದಾಖಲು
ದೆಹಲಿಯ ಗಾಳಿಯ ಗುಣಮಟ್ಟ ಸ್ವಲ್ಪ ಸುಧಾರಣೆ; ಎಕ್ಯೂಐ ಮಟ್ಟ 305
ದೆಹಲಿಯಲ್ಲಿ ಭಾನುವಾರ ದಟ್ಟವಾದ ಹೊಗೆ ಆವರಿಸಿದ್ದು, ತಾಪಮಾನ 9 ಡಿಗ್ರಿ ಸೆಲ್ಸಿಯಸ್ಗಿಂತ ಕಡಿಮೆಯಾಗಿದೆ. ಗಾಳಿಯ ಗುಣಮಟ್ಟ ಸೂಚ್ಯಂಕ (AQI) 305 ರಷ್ಟಿದ್ದು, 'ಅತ್ಯಂತ ಕಳಪೆ' ವಿಭಾಗದಲ್ಲಿದೆ. ನಗರದೊಳಗಿನ ಸಾರಿಗೆಯು ಮಾಲಿನ್ಯಕ್ಕೆ ಪ್ರಮುಖ ಕಾರಣವಾಗಿದೆ ಎಂದು ನಿರ್ಧಾರ ಬೆಂಬಲ ವ್ಯವಸ್ಥೆ ತಿಳಿಸಿದೆ.
ಭಾರತದ ಬೆಳವಣಿಗೆಯ ದರವನ್ನು ‘ಹಿಂದೂ ಬೆಳವಣಿಗೆಯ ದರ' ಎಂದು ಕರೆಯುವುದು ಧರ್ಮಕ್ಕೆ ಮಾಡುವ ಅಪಮಾನ: ಪ್ರಧಾನಿ ಮೋದಿ ಟೀಕೆ
ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಬೆಳವಣಿಗೆಯ ದರವನ್ನು ಹಿಂದೂ ಧರ್ಮಕ್ಕೆ ಜೋಡಿಸುವುದನ್ನು ತೀವ್ರವಾಗಿ ಖಂಡಿಸಿದ್ದಾರೆ. ಹಿಂದಿನ ಸರ್ಕಾರಗಳು ತಮ್ಮ ನಾಗರಿಕರ ಮೇಲೆ ನಂಬಿಕೆ ಇಡುತ್ತಿರಲಿಲ್ಲ ಎಂದು ಅವರು ಟೀಕಿಸಿದರು. ಗ್ಯಾರಂಟಿ ಇಲ್ಲದ ಸಾಲಗಳು ಮತ್ತು ಹಣಕಾಸು ಸೇರ್ಪಡೆಗೆ ಒತ್ತು ನೀಡಲಾಗಿದೆ. ಬ್ಯಾಂಕುಗಳಲ್ಲಿ ಕ್ಲೇಮ್ ಮಾಡದ ಹಣವನ್ನು ನಾಗರಿಕರಿಗೆ ಹಿಂದಿರುಗಿಸಲು ಸರ್ಕಾರ ವಿಶೇಷ ಶಿಬಿರಗಳನ್ನು ನಡೆಸುತ್ತಿದೆ ಎಂದು ಮೋದಿ ಅವರು ಹೇಳಿದ್ದಾರೆ.
ಕೇರಳದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್–ಸಿಪಿಎಂ–ಬಿಜೆಪಿ ಮೈತ್ರಿ!
ಕಾರ್ಪೊರೇಟ್ ಸಂಸ್ಥೆಯಾದ ಟ್ವೆಂಟಿ20 ಪಕ್ಷದ ಪ್ರಭಾವಕ್ಕೆ ಪ್ರತಿಪಕ್ಷಗಳ ಒಗ್ಗಟ್ಟು
ಕಲಬುರಗಿ | ದೇಶದಲ್ಲಿರುವ ಅವೈಜ್ಞಾನಿಕ ಪದ್ದತಿಯ ದಿಕ್ಕನ್ನೇ ಬದಲಾಯಿಸಿದವರು ಅಂಬೇಡ್ಕರ್: ನಿಂಗಣ್ಣ ಹುಳಗೋಳಕರ್
ಕಲಬುರಗಿ: ಹುಟ್ಟಿನಿಂದ ಹಿಡಿದು ಅವರ ಕೊನೆ ಉಸಿರು ಇರುವ ತನಕ ಅನೇಕ ಹೋರಾಟಗಳನ್ನು ಮಾಡಿ ಈ ದೇಶದಲ್ಲಿರುವ ಅವೈಜ್ಞಾನಿಕ ಪದ್ದತಿಯ ದಿಕ್ಕನ್ನೇ ಬದಲಾಯಿಸಿ ಹೊಸ ಬದಲಾವಣೆಯನ್ನು ತಂದoತಹ ಮಹಾನ್ ವ್ಯಕ್ತಿ ಡಾ.ಬಿ.ಆರ್.ಅಂಬೇಡ್ಕರ್ ಎಂದು ಶಹಾಬಾದ ಬಿಜೆಪಿ ಅಧ್ಯಕ್ಷ ನಿಂಗಣ್ಣ ಹುಳಗೋಳಕರ್ ಹೇಳಿದರು. ಅವರು ಶನಿವಾರ ಶಹಾಬಾದ್ ನಗರದ ಬಿಜೆಪಿ ವತಿಯಿಂದ ಬಿಜೆಪಿ ಕಾರ್ಯಾಲಯಲದಲ್ಲಿ ಆಯೋಜಿಸಲಾದ ಡಾ.ಬಿ.ಆರ್.ಅಂಬೇಡ್ಕರ್ ರವರ ಮಹಾಪರಿನಿರ್ವಾಣ ದಿನದ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಬಿಜೆಪಿ ಮುಖಂಡ ಅರುಣ ಪಟ್ಟಣಕರ್ ಮಾತನಾಡಿ, ಬಾಬಾ ಸಾಹೇಬರ ಭಾಚಿತ್ರಕ್ಕೆ ಪೂಜೆ ಸಲ್ಲಿಸುವುದಕ್ಕಿಂತ ಅವರ ತತ್ವಗಳ ಅನುಷ್ಠಾನವಾಗಬೇಕಿದೆ. ಆಗ ಮಾತ್ರ ದೇಶದಲ್ಲಿ ಸಮಗ್ರ ಬದಲಾವಣೆ ಸಾಧ್ಯ ಎಂದು ಹೇಳಿದರು. ಬಿಜೆಪಿ ಮುಖಂಡರಾದ ಕನಕಪ್ಪ ದಂಡಗುಲಕರ್, ಮೋಹನ ಹಳ್ಳಿ ಮಾತನಾಡಿದರು. ಸದಾನಂದ ಕುಂಬಾರ, ದಿನೇಶ ಗೌಳಿ, ರಾಜು ಮಾನೆ, ಶಿವಕುಮಾರ ಇಂಗಿನಶೆಟ್ಟಿ, ಅನೀಲಕುಮಾರ ಬೋರಗಾಂವಕರ್, ಸಾಯಬಣ್ಣ ಬೆಳಗುಂಪಿ, ಯಲ್ಲಪ್ಪ ದಂಡಗುಲಕರ, ಪದ್ಮಾ ಕಟಗೆ, ಬಸವರಾಜ ಹಡಪದ, ರೇವಣಸಿದ್ದ ಮತ್ತಿಮಡು, ಉಮೇಶನಿಂಬಾಳಕರ, ಶ್ರೀನಿವಾಸ ದೇವಕರ, ಭೀಮಯ್ಯ ಗುತ್ತೆದಾರ, ನಾಗರಾಜ ಮುದ್ನಾಳ, ಅನೀಲ ದೊಡ್ಡಮನಿ, ವಿಕಾಸ ಕರಣಿಕ, ಕಾಶಿನಾಥ ಹಂಪಿ ಇತರರು ಇದ್ದರು. ಬಸವರಾಜ ಬಿರಾದಾರ ನಿರೂಪಿಸಿ, ಸ್ವಾಗತಿಸಿದರು, ಅಮರ ಕೋರೆ ವಂದಿಸಿದರು.
ಗೋವಾ| ನೈಟ್ ಕ್ಲಬ್ನಲ್ಲಿ ಅಗ್ನಿ ಅವಘಡ: ಮೃತರ ಸಂಖ್ಯೆ 25ಕ್ಕೆ ಏರಿಕೆ
ತಲಾ 2 ಲಕ್ಷ ರೂ. ಪರಿಹಾರ ಘೋಷಿಸಿದ ಪ್ರಧಾನಿ ಮೋದಿ
ಕಾರ್ಕಳ | ಜಿಲ್ಲಾ ಉತ್ತಮ ಯುವ ಸಾಹಿತಿ, ಉತ್ತಮ ಸಂಘ ಸಂಸ್ಥೆಗೆ ನೀಡುವ ಪ್ರಶಸ್ತಿಗೆ ಅರ್ಜಿ ಆಹ್ವಾನ
ಕಾರ್ಕಳ : ಕಾರ್ಕಳ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ನೀಡಲಾಗುವ ಉಡುಪಿ ಜಿಲ್ಲೆ “ಉತ್ತಮ ಯುವ ಸಾಹಿತಿ ಪ್ರಶಸ್ತಿ” ಹಾಗೂ ಕನ್ನಡ ಕಾಯಕದಲ್ಲಿ ಸೇವೆ ಸಲ್ಲಿಸಿದ ಉತ್ತಮ ಸಂಘ ಸಂಸ್ಥೆ ಪ್ರಶಸ್ತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ಪ್ರಶಸ್ತಿಗಳನ್ನು ಡಾ. ಸುಧಾಕರ ಶೆಟ್ಟಿ (ಅಧ್ಯಕ್ಷರು, ಪದ್ಮ ಗೋಪಾಲ ಎಜುಕೇಶನ್ ಟ್ರಸ್ಟ್, ಗಣಿತ ನಗರ ಕುಕ್ಕುಂದೂರು) ಅವರ ಪ್ರಾಯೋಜಕತ್ವದಲ್ಲಿ, ದಿವಂಗತ ಪ್ರೊ. ಎನ್. ರಾಮಚಂದ್ರ ಮತ್ತು ಗೋಪಾಲ ಭಂಡಾರಿ ಅವರ ಸ್ಮರಣಾರ್ಥವಾಗಿ ಪ್ರದಾನ ಮಾಡಲಾಗುತ್ತದೆ. ಪ್ರಶಸ್ತಿಯಲ್ಲಿ 10,000 ರೂ. ನಗದು ಮತ್ತು ಶಾಶ್ವತ ಫಲಕ ಒಳಗೊಂಡಿವೆ. ಆಸಕ್ತರು ಸಂಪೂರ್ಣ ವಿವರಗಳೊಂದಿಗೆ ಅರ್ಜಿಯನ್ನು ದೇವದಾಸ್ ಕೆರೆಮನೆ ಗೌರವ ಕಾರ್ಯದರ್ಶಿಗಳು ಕನ್ನಡ ಸಾಹಿತ್ಯ ಪರಿಷತ್ತು ಕಾರ್ಕಳ C/o ವಂದ್ಯುಕ್ತ ನಿಸರ್ಗನಗರ , ಶ್ಯಾಮಲಾ ಕಾಂಪೌಂಡ್, ಮಿಯ್ಯಾರು, ಮುಡಾರು, ಬಜಗೋಳಿ ಅಂಚೆ, ಕಾರ್ಕಳ -574122 ದೂರವಾಣಿ: 916360686393 ಈ ವಿಳಾಸಕ್ಕೆ ಡಿ.10 ರ ಒಳಗೆ ತಲುಪುವಂತೆ ಕಳುಹಿಸಿ ಕೊಡಬೇಕೆಂದು ಕನ್ನಡ ಸಾಹಿತ್ಯ ಪರಿಷತ್ತು ಕಾರ್ಕಳ ತಾಲೂಕು ಘಟಕ ಪ್ರಕಟನೆಯಲ್ಲಿ ತಿಳಿಸಿದೆ.
ಕಾರ್ಕಳ ತಾಲೂಕು 21ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಸಿದ್ದಾಪುರ ವಾಸುದೇವ ಭಟ್ಟ ಆಯ್ಕೆ
ಕಾರ್ಕಳ : ಕಾರ್ಕಳ ತಾಲೂಕು ಇಪ್ಪತ್ತೊಂದನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷರಾಗಿ ಸಿದ್ಧಾಪುರ ವಾಸುದೇವ ಭಟ್ಟ ಆಯ್ಕೆಯಾಗಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ಕಾರ್ಕಳ ತಾಲೂಕು ಘಟಕ ಪ್ರಕಟಣೆಯಲ್ಲಿ ತಿಳಿಸಿದೆ. ಇವರು ಉಡುಪಿ ಜಿಲ್ಲೆ ಕುಂದಾಪುರ ತಾಲ್ಲೂಕು ಸಿದ್ದಾಪುರದ ಲಕ್ಷ್ಮಣ ಭಟ್ ಮತ್ತು ರಾಧಾಬಾಯಿ ದಂಪತಿ ಪುತ್ರರಾಗಿ 1960ರ ಅಕ್ಟೋಬರ್ 20ರಂದು ಜನಿಸಿದರು. ವಾಸುದೇವ ಭಟ್ಟ ಅವರು ತಮ್ಮ ಪ್ರಾಥಮಿಕ ಶಾಲಾ ಶಿಕ್ಷಣ ಐದನೇ ತರಗತಿಯವರೆಗೆ ಸಿದ್ದಾಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪಡೆದು ಮುಂದೆ ಸಂಸ್ಥಾನ ಕಾಶೀಮಠಾಧೀಶ ಶ್ರೀ ಸುಧೀಂದ್ರ ತೀರ್ಥರು ಸ್ಥಾಪಿಸಿದ ಕುಂದಾಪುರ ತಾಲ್ಲೂಕಿನ ಬಸ್ರೂರು ಶ್ರೀ ಭುವನೇಂದ್ರ ಬಾಲಕಾಶ್ರಮದ ಆಶ್ರಯ ಪಡೆದರು. ಎಸೆಸೆಲ್ಸಿವರೆಗೆ ಶಾಲಾ ಶಿಕ್ಷಣದ ಜೊತೆಗೆ ಶಿಸ್ತುಬದ್ಧ ಜೀವನವನ್ನು, ಆಶ್ರಮದಲ್ಲಿದ್ದುಕೊಂಡು ಆರು ಮತ್ತು ಏಳನೇ ತರಗತಿಯನ್ನು ಬಸ್ರೂರು ಹಿಂದೂ ಹಿರಿಯ ಪ್ರಾಥಮಿಕ ಶಾಲೆಯಲ್ಲೂ ಎಸೆಸೆಲ್ಸಿ ತನಕದ ಶಿಕ್ಷಣವನ್ನು ಬಸ್ರೂರು ಸರ್ಕಾರಿ ಪ್ರೌಢಶಾಲೆಯಲ್ಲಿಯೂ ಕಲಿತರು.. ಎಸೆಸೆಲ್ಸಿ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿ ತರುವಾಯ ಭಟ್ಟರು ಆಶ್ರಮದಲ್ಲೇ ಇದ್ದು ಅಲ್ಲಿಯ ಸಮೀಕ್ಷಕರಿಗೆ ಸಹಾಯಕರಾಗಿ ಬಸ್ರೂರು ಶ್ರೀ ಶಾರದಾ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಂದುವರಿಸಿದರು. ಕಾಲೇಜಿನ ಮೂಲಕ ಜಿಲ್ಲಾ, ರಾಜ್ಯ ಮಟ್ಟದ ಭಾಷಣ, ಚರ್ಚಾ ಸ್ಪರ್ಧೆಗಳಲ್ಲಿ ಬಹುಮಾನಗಳಿಸಿ ಕಾಲೇಜಿಗೆ ಖ್ಯಾತಿಯನ್ನು ತಂದುಕೊಟ್ಟರು. ವಾಸುದೇವ ಭಟ್ಟರು ಬಿ.ಎ ಪದವಿಯನ್ನು ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾದರು. ಕಾಲೇಜಿನ ಕನ್ನಡ ಉಪನ್ಯಾಸಕ ಕನರಾಡಿ ವಾದಿರಾಜ ಭಟ್ಟರ ಪ್ರೇರಣೆ ಮತ್ತು ಮಾರ್ಗದರ್ಶನದಿಂದ ಮಂಗಳೂರು ವಿಶ್ವವಿದ್ಯಾಲಯದ ಮಂಗಳ ಗಂಗೋತ್ರಿಯಲ್ಲಿ ಕನ್ನಡ ಸ್ನಾತಕೋತ್ತರ ಪದವಿಗೆ ಸೇರಿ ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿದರು. ಕರ್ನಾಟಕ ಕರಾವಳಿಯ ಪ್ರಮುಖ ಆರಾಧನೆಯಾದ ನಾಗಾರಾಧನೆಯ ಕುರಿತು ವಿಶೇಷ ಅಧ್ಯಯನಗಳು ನಡೆದಿರದ ಸಂದರ್ಭದಲ್ಲಿ ವಾಸುದೇವ ಭಟ್ ಅವರು ಮಂಗಳೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಬಿ.ಎ.ವಿವೇಕ ರೈ ಅವರ ಮಾರ್ಗದರ್ಶನದಲ್ಲಿ 'ನಾಗ ಜಾನಪದ-ಒಂದು ಅಧ್ಯಯನ' ಎಂಬ ವಿಷಯದಲ್ಲಿ ಎಂ.ಫಿಲ್ ಪದವಿಯನ್ನು, ನಂತರ ಮೈಸೂರು ವಿಶ್ವವಿದ್ಯಾಲಯದ ಮೂಲಕ ಡಿಪ್ಲೊಮಾ ಇನ್ ಜರ್ನಲಿಸಂ ನ್ನು ಅಧ್ಯಯನ ಮಾಡಿದರು. 1987ರಲ್ಲಿ ಕಾರ್ಕಳ ತಾಲ್ಲೂಕಿನ ನಿಟ್ಟೆ ಡಾ. ಎನ್.ಎಸ್.ಎ.ಎಂ. ಪದವಿಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಇವರು ಕಾಲೇಜಿನಲ್ಲಿ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಶಿಕ್ಷಕರಾಗಿದ್ದರು. ಇವರ ಸೇವೆಯನ್ನು ಅನುಲಕ್ಷಿಸಿ ಕಾಲೇಜಿನ ಆಡಳಿತ ಮಂಡಳಿ ಇವರಿಗೆ 2019ರಲ್ಲಿ ಪ್ರಾಂಶುಪಾಲರಾಗಿ ಬಡ್ತಿ ನೀಡಿತು. 2020ರ ಅಕ್ಟೋಬರ್ ತಿಂಗಳಿನಲ್ಲಿ ಇವರು ವೃತ್ತಿಯಿಂದ ನಿವೃತ್ತರಾದರು ವಾಸುದೇವ ಭಟ್ಟ ಅವರ ಕನ್ನಡದ ಕೃತಿಗಳಾದ 'ಪ್ರಬಂಧ ಕಲೆ' : (1991), 'ಉಳ್ಳಾಲದ ರಾಣಿ ಅಬ್ಬಕ್ಕ' ( ಮಕ್ಕಳ ಪುಸ್ತಕ ಬಹುಮಾನಿತ), 'ಸರ್ಪರಾಜಾ ಮತ್ತು ಇತರ ಕತೆಗಳು' (1996), 'ನಮ್ಮೂರಿನ ಬಸ್ಸುಗಳು ಹಾಗೂ ಇತರ ಲಲಿತ ಪ್ರಬಂಧಗಳು'(2003), 'ಕಾಂತಾಬಾರೆ ಬೂದಾಬಾರೆ ಮತ್ತು ಅಗೋಳಿ ಮಂಜಣ್ಣ(2006) - ಇದು ಮೂಲ್ಕಿ ಬಪ್ಪನಾಡು ಕ್ಷೇತ್ರದ ಜೀರ್ಣೋದ್ಧಾರ ಸಂದರ್ಭದಲ್ಲಿ ಪುರಸ್ಕೃತ ಕೃತಿ ಪ್ರಕಟವಾಗಿವೆ. ಕೊಂಕಣಿ ಭಾಷೆಯಲ್ಲಿ 'ಡಾ.ಟಿ.ಎಂ.ಎ. ಪೈ', 'ಪಂಜೆ ಮಂಗೇಶ್ರಾವ್', '20ವೆ ಶೆಕ್ಡ್ಯಾಚೆ ಮಾನ್ ಮನಿಸ್' ಎಂಬ ಕೃತಿ ಸಂಪಾದನೆ ಪ್ರಕಟವಾಗಿವೆ. ಅಪ್ರಕಟಿತ ಕೃತಿ 'ನಾಗ ಜಾನಪದ' ಎಂ.ಫಿಲ್ ಸಂಶೋಧನಾ ಪ್ರಬಂಧ. ತಮ್ಮ ಕಾಲೇಜು ದಿನಗಳಲ್ಲಿ 'ರೋಟರಿ ಯುವಜನ ಪ್ರಶಸ್ತಿ', ಕನ್ನಡ ಸಾಹಿತ್ಯ ಪರಿಷತ್ತು ಕಾರ್ಕಳ ತಾಲ್ಲೂಕು ಘಟಕದಿಂದ 'ಸಾಧಕ ಪ್ರಶಸ್ತಿ 2023' ಬಂದಿದೆ. ಮಂಗಳೂರು ಆಕಾಶವಾಣಿಯ ಕಾರ್ಯಕ್ರಮಗಳಲ್ಲಿ ಅಲ್ಲಲ್ಲಿನ ಧಾರ್ಮಿಕ ಪ್ರವಚನಗಳಲ್ಲಿ ಇವರು ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ವಾಸುದೇವ ಭಟ್ಟರನ್ನು ಅನೇಕ ಸಂಘ ಸಂಸ್ಥೆಗಳು ಗೌರವ, ಸನ್ಮಾನಗಳನ್ನು ನೀಡಿ ಪುರಸ್ಕರಿಸಿವೆ.
ಕಾಪು | ಬಸ್ ನಿಲ್ದಾಣಕ್ಕೆ ಕಾರು ಢಿಕ್ಕಿ: ಚಾಲಕನಿಗೆ ತೀವ್ರ ಗಾಯ
ಕಾಪು, ಡಿ.7: ಕಾರೊಂದು ಬಸ್ ನಿಲ್ದಾಣಕ್ಕೆ ಢಿಕ್ಕಿ ಹೊಡೆದ ಪರಿಣಾಮ ಕಾರು ಚಾಲಕ ಗಾಯಗೊಂಡ ಘಟನೆ ರವಿವಾರ ಬೆಳಗ್ಗೆ ಕಾಪು ವಿದ್ಯಾನಿಕೇತನ ಶಾಲೆಯ ಎದುರು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ. ಗಾಯಗೊಂಡವರನ್ನು ಕಾರು ಚಲಾಯಿಸುತ್ತಿದ್ದ ಕೊಪ್ಪಲಂಗಡಿಯ ಇಸ್ಮಾಯಿಲ್ ಎಂದು ಗುರುತಿಸಲಾಗಿದೆ. ಕಾಪುನಿಂದ ಉಚ್ಚಿಲ ಕಡೆ ಬರುತ್ತಿದ್ದ ಕಾರು, ಚಾಲಕನ ನಿಯಂತ್ರಣ ತಪ್ಪಿ, ರಸ್ತೆ ಬದಿಯ ಬಸ್ ನಿಲ್ದಾಣಕ್ಕೆ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರಿಂದ ತೀವ್ರವಾಗಿ ಗಾಯಗೊಂಡ ಇಸ್ಮಾಯಿಲ್ ಅವರನ್ನು ಎಸ್ಡಿಪಿಐ ಅಂಬುಲೆನ್ಸ್ನಲ್ಲಿ ಜಲಾಲುದ್ದೀನ್ ಉಚ್ಚಿಲ ಹಾಗೂ ಹಮೀದ್ ಉಡುಪಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸ್ಥಳಕ್ಕೆ ಕಾಪು ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.
ಕಲಬುರಗಿ: ಡಿ.9ರಂದು ಡಾ.ಅಂಬೇಡ್ಕರ್ ಅವರ ಕುರಿತಾದ ಹಿರಿಯ ಸಾಹಿತಿ ಪ್ರೊ.ಎಚ್.ಟಿ ಪೋತೆ ರಚಿತದ 'ಮಹಾಯಾನ' ಕಾದಂಬರಿ ಲೋಕಾರ್ಪಣೆ ಹಾಗೂ ಡಿ.10 ರಂದು ಗುಲಬರ್ಗಾ ವಿಶ್ವವಿದ್ಯಾಲಯದಿಂದ ಕೊಡಮಾಡುವ 'ಕರ್ನಾಟಕ ರಾಜ್ಯೋತ್ಸವ' ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ವಿವಿಯ ಕುಲಪತಿ ಪ್ರೊ.ಶಶಿಕಾಂತ್ ಉಡಿಕೇರಿ ತಿಳಿಸಿದ್ದಾರೆ. ಗುಲಬರ್ಗಾ ವಿವಿಯ ಆವರಣದಲ್ಲಿರುವ ಅತಿಥಿಗೃಹದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿ.10ರಂದು ನಡೆಯಲಿರುವ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬೂಕರ್ ಪ್ರಶಸ್ತಿ ವಿಜೇತೆ ಲೇಖಕಿ ದೀಪಾ ಬಸ್ತಿ ಅವರು ಪ್ರಶಸ್ತಿ ಪ್ರದಾನ ಮಾಡುವರು, ವಿಮರ್ಶಕ ಎಸ್.ಆರ್.ವಿಜಯಶಂಕರ್, ದಲಿತ ಮುಖಂಡ ಡಾ.ಡಿ.ಜಿ.ಸಾಗರ್ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಇದೇ ವೇಳೆಯಲ್ಲಿ ಸಿಂಡಿಕೇಟ್ ಸದಸ್ಯೆ ಶ್ರೀದೇವಿ ಕಟ್ಟಿಮನಿ, ಸಿ.ಸುಲೋಚನಾ, ಮೌಲ್ಯಮಾಪನ ಕುಲಸಚಿವ ಡಾ.ಎನ್.ಜಿ. ಕಣ್ಣೂರ, ಜಯಂಬಿಕ ಉಪಸ್ಥಿತರಿರುವರು ಎಂದರು. ಕನ್ನಡ ಪುಸ್ತಕ ಸೃಜನ, ಸೃಜನೇತರ, ವಚನ, ಜಾನಪದ, ಸಮಾಜ ವಿಜ್ಞಾನ, ಇಂಗ್ಲೀಷ್, ಉರ್ದು, ಪ್ರಕಾಶಕರು, ಜನಪದ ಕಲಾವಿದ, ಚಿತ್ರ, ಶಿಲ್ಪಕಲಾವಿದ, ಡಾ.ಅಂಬೇಡ್ಕರ್ ಪ್ರಶಸ್ತಿ, ವಿಜ್ಞಾನ ಪುಸ್ತಕ ಹಾಗೂ ಜಯತೀರ್ಥ ರಾಜಪುರೋಹಿತ ಸ್ಮಾರಕ ದತ್ತಿ ರಾಜ್ಯಮಟ್ಟದ ಕಥಾ ಸ್ಪರ್ಧೆಯ ಚಿನ್ನ, ಬೆಳ್ಳಿ ಹಾಗೂ ಕಂಚಿನ ಪದಕ ಪಡೆದವರನ್ನು ಗೌರವಿಸಲಾಗುವುದು ಎಂದು ವಿವರಿಸಿದರು. ಡಿ.9 ರಂದು 'ಮಹಾಯಾನ' ಕಾದಂಬರಿ ಲೋಕಾರ್ಪಣೆ : ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ.ಎಚ್.ಟಿ.ಪೋತೆ ಮಾತನಾಡಿ, ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ 120 ಕ್ಕಿಂತ ಹೆಚ್ಚು ಪುಸ್ತಕಗಳನ್ನು ಅಧ್ಯಯನವನ್ನು ಮಾಡಿ ಡಾ.ಬಿ.ಆರ್.ಅಂಬೇಡ್ಕರ್ ಜೀವನ ಕಥನ ಕುರಿತಾದ 700 ಪುಟಗಳ ಬೃಹತ್ ಕಾದಂಬರಿಯ ಲೋಕಾರ್ಪಣೆಯನ್ನು ಡಿ.9ರಂದು ಬೂಕರ್ ಪ್ರಶಸ್ತಿ ವಿಜೇತೆ ಲೇಖಕಿ ದೀಪಾ ಅವರು ಲೋಕಾರ್ಪಣೆ ಮಾಡುವರು ಎಂದು ತಿಳಿಸಿದರು. ಇದೇ ವೇಳೆಯಲ್ಲಿ ವಿವಿಯ ಕುಲಪತಿ ಪ್ರೊ.ಶಶಿಕಾಂತ್ ಉಡಿಕೇರಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು, ಖ್ಯಾತ ವಿಮರ್ಶಕ ಎಸ್.ಆರ್.ವಿಜಯಶಂಕರ್ ಅವರು ಕೃತಿ ಕುರಿತು ಮಾತನಾಡುವರು, ಕೇಂದ್ರೀಯ ವಿವಿಯ ಪ್ರಾಧ್ಯಾಪಕ ವಿಕ್ರಮ ವಿಸಾಜಿ ಅವರು ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದು ಹೇಳಿದರು. ಕಲಬುರಗಿಯಲ್ಲಿ ಪ್ರತಿಷ್ಠಾನ ಸ್ಥಾಪಿಸಿ : ಗುಲಬರ್ಗಾ ವಿವಿ ಮಾತ್ರ ಈ ಭಾಗದ ಸಾಹಿತಿ, ಕಲಾವಿದರನ್ನು ಪ್ರೋತ್ಸಾಹಿಸಲು ಹಲವು ವರ್ಷಗಳಿಂದ ರಾಜ್ಯೋತ್ಸವ ಪ್ರಶಸ್ತಿ ನೀಡುತ್ತಿದೆ, ಆದರೆ ನಮ್ಮ ಕಡೆ ಖಾಸಗಿಯಾಗಲಿ ಸರ್ಕಾರದ್ದಾಗಲಿ ಯಾವುದೇ ಪ್ರತಿಷ್ಠಾನಗಳು ಇಲ್ಲ, ಹಾಗಾಗಿ ಸರ್ಕಾರವೇ ಖುದ್ದಾಗಿ ಚೆನ್ನಣ್ಣ ವಾಲೀಕಾರ, ಗೀತಾ ನಾಗಭೂಷಣ್, ಬಿ.ಶ್ಯಾಮಸುಂದರ್ ಅಥವಾ ಮತ್ತಿತ್ತರ ಬೇರೆ ಸಾಹಿತಿಗಳ ಹೆಸರಿನಲ್ಲಿ ಪ್ರತಿಷ್ಠಾನ ಸ್ಥಾಪಿಸಿ ಪ್ರಶಸ್ತಿ ಕೊಡುವಂತಾಗಲಿ. _ ಪ್ರೊ.ಎಚ್.ಟಿ.ಪೋತೆ (ಡೀನರು, ಕಲಾನಿಕಾಯ ಹಾಗೂ ನಿರ್ದೇಶಕರು, ಕನ್ನಡ ಅಧ್ಯಯನ ಸಂಸ್ಥೆ ಗು.ವಿ.ಕ)
ನ್ಯೂಯಾರ್ಕ್| ಅಗ್ನಿ ಅವಘಡದಲ್ಲಿ ಭಾರತೀಯ ಮೂಲದ ವಿದ್ಯಾರ್ಥಿನಿ ಮೃತ್ಯು
ಹೈದರಾಬಾದ್: ನ್ಯೂಯಾರ್ಕ್ನಲ್ಲಿ ಅಗ್ನಿ ಅವಘಡದಲ್ಲಿ ತೆಲಂಗಾಣದ ಜಲಗಾಂವ್ ಜಿಲ್ಲೆಯ ವಿದ್ಯಾರ್ಥಿನಿಯೊಬ್ಬರು ಮೃತಪಟ್ಟಿದ್ದಾರೆ. ಮೃತ ವಿದ್ಯಾರ್ಥಿನಿಯನ್ನು ಸಹಜ ರೆಡ್ಡಿ ಉದುಮಲ ಎಂದು ಗುರುತಿಸಲಾಗಿದೆ. ಉನ್ನತ ವ್ಯಾಸಂಗಕ್ಕಾಗಿ 2021ರಲ್ಲಿ ಅಮೆರಿಕಕ್ಕೆ ತೆರಳಿದ್ದ ಸಹಜ ರೆಡ್ಡಿ ಉದುಮಲ, ನ್ಯೂಯಾರ್ಕ್ನ ಅಲ್ಬನಿಯಲ್ಲಿ ವಾಸಿಸುತ್ತಿದ್ದರು. ಪ್ರಾಥಮಿಕ ಮಾಹಿತಿಗಳ ಪ್ರಕಾರ, ಪಕ್ಕದ ಕಟ್ಟಡದಲ್ಲಿ ಉದ್ಭವಿಸಿದ ಬೆಂಕಿಯ ಜ್ವಾಲೆ ಕ್ಷಿಪ್ರವಾಗಿ ಸಹಜ ರೆಡ್ಡಿ ಉದುಮಲ ಅವರ ಮನೆಗೂ ಹಬ್ಬಿದೆ. ಮನೆಗೆ ಬೆಂಕಿ ಆವರಿಸಿದಾಗ ಆಕೆ ನಿದ್ರಿಸುತ್ತಿದ್ದರು ಎನ್ನಲಾಗಿದೆ. ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ನ್ಯೂಯಾರ್ಕ್ನಲ್ಲಿರುವ ಭಾರತೀಯ ರಾಜತಾಂತ್ರಿಕ ಕಚೇರಿ, ಅಗ್ನಿ ಅವಘಡದಲ್ಲಿ ಮೃತ ವಿದ್ಯಾರ್ಥಿನಿಯ ಕುಟುಂಬಕ್ಕೆ ಈ ಕುರಿತು ಮಾಹಿತಿ ನೀಡಲಾಗಿದ್ದು, ಅವರಿಗೆ ಅಗತ್ಯವಿರುವ ಎಲ್ಲಾ ನೆರವನ್ನು ಒದಗಿಸಲಾಗುವುದು ಎಂದು ಭರವಸೆ ನೀಡಿದೆ.
ನ್ಯಾಷನಲ್ ಹೆರಾಲ್ಡ್ ಪ್ರಕರಣ: ಡಿಕೆಶಿ ಆಪ್ತನಿಗೂ ಈಡಿ ಸಂಕಟ
ಇನಾಯತ್ ಅಲಿಗೂ EOW-ದಿಲ್ಲಿ ಪೋಲಿಸರಿಂದ ನೋಟಿಸ್ ಜಾರಿ
Indigo: ನಿಲ್ಲದ ಇಂಡಿಗೋ ಎಡವಟ್ಟು: ಮತ್ತೊಮ್ಮೆ ಕ್ಷಮೆಯಾಚನೆ, ಈ ಬಾರಿ ಏನಾಯ್ತು ?
ಇಂಡಿಗೋ ವಿಮಾನಗಳ ಸಂಚಾರದಲ್ಲಿನ ವ್ಯತ್ಯಾಸ ಹಾಗೂ ಎಡವಟ್ಟು ಇನ್ನೂ ಪೂರ್ಣ ಪ್ರಮಾಣದಲ್ಲಿ ಪರಿಹಾರವಾಗಿಲ್ಲ. ಈ ರೀತಿ ಇರುವಾಗಲೇ ಇನ್ನಷ್ಟು ಎಡವಟ್ಟುಗಳು ವರದಿಯಾಗುತ್ತಿದ್ದು, ಇಂಡಿಗೋ ಇದೀಗ ಮತ್ತೊಮ್ಮೆ ದೇಶದ ಜನರ ಕ್ಷಮೆಯಾಚನೆ ಮಾಡಿದೆ. ಅದರ ವಿವರ ಇಲ್ಲಿದೆ. ಈಚೆಗೆ ಸೋಷಿಯಲ್ ಮೀಡಿಯಾ ಎಕ್ಸ್ನ ಇಂಡಿಗೋ ಖಾತೆಯಿಂದ ಟ್ವೀಟ್ ಮಾಡಿರುವ ಇಂಡಿಗೋ (ಶನಿವಾರ ತಡರಾತ್ರಿ) ನಮ್ಮ ನೆಟ್ವರ್ಕ್ನಲ್ಲಿನ ಇತ್ತೀಚಿನ ಅಡಚಣೆಗಳನ್ನು
ಇಂಡಿಗೋ ವಿಮಾನಗಳ ಕಾರ್ಯಾಚರಣೆಯಲ್ಲಿನ ಅಡಚಣೆಗಳ ಹಿನ್ನೆಲೆಯಲ್ಲಿ, ಕೇಂದ್ರ ಸರ್ಕಾರ ವಿಮಾನ ಟಿಕೆಟ್ ದರಗಳಿಗೆ ತಾತ್ಕಾಲಿಕ ಮಿತಿ ಹೇರಿದೆ. ದೇಶೀಯ ವಿಮಾನಗಳ ಗರಿಷ್ಠ ಟಿಕೆಟ್ ದರ 18,000 ರೂ.ಗೆ ನಿಗದಿಪಡಿಸಲಾಗಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಟಿಕೆಟ್ ರದ್ದಾದಲ್ಲಿ ಇಂಡಿಗೋ ಸಂಪೂರ್ಣ ಮರುಪಾವತಿ ಮತ್ತು ಲಗೇಜ್ ಹಿಂದಿರುಗಿಸುವಂತೆ ಸೂಚಿಸಲಾಗಿದೆ. ಈ ದರ ನಿಯಂತ್ರಣವು ಇಂಡಿಗೋ ಸೇವೆಗಳು ಸಹಜ ಸ್ಥಿತಿಗೆ ಮರಳುವವರೆಗೆ ಜಾರಿಯಲ್ಲಿರುತ್ತದೆ.
Goa Fire Tragedy: ಧಗಧಗಿಸಿದ ಗೋವಾದ ನೈಟ್ ಕ್ಲಬ್: ಭೀಕರ ಅಗ್ನಿ ದುರಂತದಲ್ಲಿ 23 ಜನ ಸಾವು
Goa Fire Tragedy: ಗೋವಾದ ನೈಟ್ ಕ್ಲಬ್ನಲ್ಲಿ ಭೀಕರ ಅಗ್ನಿ ದುರಂತ ಸಂಭವಿಸಿ 23 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಹಾಗಾದ್ರೆ ದುರಂತ ಸಂಭವಿಸಿದ್ದು ಯಾವಾಗ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ಈ ಘಟನೆ ಉತ್ತರ ಗೋವಾದ ಅರ್ಪೋರಾದಲ್ಲಿರುವ ನೈಟ್ ಕ್ಲನ್ನಲ್ಲಿ ಘಟನೆ ನಡೆದಿದೆ. ಶನಿವಾರ (ಡಿಸೆಂಬರ್ 6) ಮಧ್ಯರಾತ್ರಿ 12 ಗಂಟೆ ಸುಮಾರಿಗೆ ನೈಟ್
ಆಗ್ರಾ | ‘ಪತ್ನಿಯ ಹಿಂಸೆಯನ್ನು ಸಹಿಸಲಾಗಲಿಲ್ಲ’ ಎಂದು ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದ ಪತಿ
ಲಾಕ್ ಮಾಡಿದ್ದ ಫೋನ್ ನಲ್ಲಿದ್ದ ವಿಡಿಯೋ ಕ್ಲಿಪ್ ಪತ್ತೆ: ಎರಡು ತಿಂಗಳ ನಂತರ ಮೃತದೇಹ ಹೊರತೆಗೆದು ತನಿಖೆ
Karnataka Weather: ಮಾಯವಾಯ್ತು ಮಳೆ.. ಬೆಂಗಳೂರು ಸೇರಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಭೀಕರ ಚಳಿ ಮುನ್ಸೂಚನೆ
Karnataka Weather: ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಚಳಿ ಆವರಿಸಿಬಿಟ್ಟಿದೆ. ಈ ನಡುವೆಯೆ ಹಲವೆಡೆ ಮಳೆಯಾಗುತ್ತಿದೆ. ಹಾಗೆಯೇ ಇಂದು (ಡಿಸೆಂಬರ್ 7) ರಾಜಧಾನಿ ಬೆಂಗಳೂರು ಸೇರಿದಂತೆ ಕೆಲವೇ ಕೆಲವು ಭಾಗಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ. ಉಳದೆಡೆ ಬೆಳಗ್ಗೆ ಹಾಗೂ ಸಂಜೆ ವೇಳೆ ಮಂಜಿನ ಜೊತೆ ಚಳಿ ಇರಲಿದ್ದು, ಒಣಹವೆ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯ ರಾಜಧಾನಿ
ಮಂಗಳೂರು | ಡಿ.9ರಂದು ದಾಂಪತ್ಯ ಜೀವನ ಉಪನ್ಯಾಸ ಕಾರ್ಯಕ್ರಮ
ಮಂಗಳೂರು : ಅಖಿಲ ಭಾರತ ಬ್ಯಾರಿ ಪರಿಷತ್ (ರಿ.) ಮಂಗಳೂರು ವತಿಯಿಂದ ಸಮುದಾಯ ಅಭಿವೃದ್ಧಿ ಕಾರ್ಯಕ್ರಮದ ಅಂಗವಾಗಿ ದಾಂಪತ್ಯ ಜೀವನ ಉಪನ್ಯಾಸವನ್ನು ಡಿ.9ರಂದು ಮಧ್ಯಾಹ್ನ 2.ರಿಂದ ಸಂಜೆ 4.30ರವರೆಗೆ ಮಂಗಳೂರಿನ ನ್ಯಾಷನಲ್ ಟ್ಯುಟೋರಿಯಲ್ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ. ಕಾರ್ಯಕ್ರಮದಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ರಾಜ್ಯ ಕಾರ್ಯದರ್ಶಿ ಮಹಮ್ಮದ್ ಕುಂಞಿ ಯವರು ಉಪನ್ಯಾಸ ನೀಡಲಿದ್ದು, ಅಖಿಲ ಭಾರತ ಬ್ಯಾರಿ ಪರಿಷತ್ (ರಿ.) ಮಂಗಳೂರು ಕೇಂದ್ರೀಯ ಸಮಿತಿ ಅಧ್ಯಕ್ಷ ಯು.ಎಚ್. ಖಾಲಿದ್ ಉಜಿರೆ ಅವರು ಸಭಾಧ್ಯಕ್ಷತೆ ವಹಿಸಲಿದ್ದಾರೆ ಎಂದು ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ನಡುಪದವು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದಿಲ್ಲಿಯಲ್ಲಿ ಎರಡನೇ ಮದುವೆ ಆರೋಪ: ಪಾಕಿಸ್ತಾನಿ ಮಹಿಳೆಯಿಂದ ಪ್ರಧಾನಿ ಮೋದಿ ಅವರಿಗೆ ಮನವಿ
ಹೊಸದಿಲ್ಲಿ: ದಿಲ್ಲಿಯಲ್ಲಿ ತಮ್ಮ ಪತಿ ಎರಡನೇ ಮದುವೆಗೆ ಸಿದ್ಧತೆ ನಡೆಸುತ್ತಿದ್ದಾರೆ ಎಂದು ಆರೋಪಿಸಿರುವ ಪಾಕಿಸ್ತಾನಿ ಮಹಿಳೆ ನಿಕಿತಾ ನಾಗ್ದೇವ್, ಪ್ರಧಾನಿ ನರೇಂದ್ರ ಮೋದಿ ಅವರಿಗೆ ನ್ಯಾಯ ದೊರಕಿಸಿಸಬೇಕೆಂದು ಮನವಿ ಮಾಡಿಕೊಂಡಿದ್ದಾರೆ. ಕರಾಚಿಯಿಂದ ಬಿಡುಗಡೆ ಮಾಡಿದ ಅವರ ಭಾವನಾತ್ಮಕ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ, ಎರಡು ದೇಶಗಳಲ್ಲೂ ಚರ್ಚೆಗೆ ಕಾರಣವಾಗಿದೆ. ಕರಾಚಿಯ ನಿಕಿತಾ, ಇಂದೋರ್ ನಲ್ಲಿ ವಾಸವಿರುವ ಪಾಕ್ ಮೂಲದ ವಿಕ್ರಮ್ ನಾಗ್ದೇವ್ ಅವರನ್ನು 2020ರ ಜನವರಿ 26ರಂದು ಹಿಂದೂ ಪದ್ಧತಿಯಲ್ಲಿ ವಿವಾಹವಾಗಿದ್ದರು. ಫೆಬ್ರವರಿಯಲ್ಲಿ ಭಾರತಕ್ಕೆ ಬಂದ ನಿಕಿತಾ, ಕೆಲವೇ ತಿಂಗಳಲ್ಲಿ 'ವಿಭಿನ್ನ' ಪರಿಸ್ಥಿತಿಯನ್ನು ಎದುರಿಸಬೇಕಾಯಿತು. ಜುಲೈ 9, 2020 ರಂದು, ವೀಸಾ ತಾಂತ್ರಿಕ ಕಾರಣ ನೆಪವೊಡ್ಡಿ ಅಟ್ಟಾರಿ ಗಡಿಯಲ್ಲಿ ಪಾಕಿಸ್ತಾನಕ್ಕೆ ವಾಪಸ್ ಹೋಗುವಂತಾಯಿತು ಎಂದು ನಿಕಿತಾ ದೂರಿದ್ದಾರೆ. ಬಳಿಕ ವಿಕ್ರಮ್ ತಮ್ಮನ್ನು ಮರಳಿ ಕರೆಸಿಕೊಳ್ಳಲು ತೋರಿದ ನಿರ್ಲಕ್ಷ್ಯ ತೋರಿದರು ಎಂದು ಆರೋಪಿಸಿದ್ದಾರೆ. ವಿಡಿಯೋದಲ್ಲಿ ಅವರು, “ಇಂದು ನ್ಯಾಯ ಸಿಗದಿದ್ದರೆ ಮಹಿಳೆಯರು ನ್ಯಾಯದ ಮೇಲಿನ ನಂಬಿಕೆಯನ್ನು ಕಳೆದುಕೊಳ್ಳುತ್ತಾರೆ” ಎಂದು ಮನವಿ ಮಾಡಿದ್ದು, ದೈಹಿಕ–ಮಾನಸಿಕ ಕಿರುಕುಳ ಅನುಭವಿಸುತ್ತಿರುವ ಅನೇಕ ಮಹಿಳೆಯರ ಪರವಾಗಿ ಧ್ವನಿ ಎತ್ತಿದ್ದಾರೆ. ಮದುವೆಯ ನಂತರ ಪತಿ ಸಂಬಂಧಿಕರೊಬ್ಬರೊಂದಿಗೆ ಸಂಬಂಧ ಹೊಂದಿದ್ದಾನೆಂಬ ಮಾಹಿತಿ ತಿಳಿದು ತಮಗೆ ಆಘಾತವಾಗಿದೆ ಎಂದು ಅವರು ಹೇಳಿದ್ದಾರೆ. “ಹುಡುಗರಿಗೆ ಇಂಥದ್ದು ಸಾಮಾನ್ಯ” ಎಂಬುದೇ ಮನೆಯವರ ಪ್ರತಿಕ್ರಿಯೆಯಾಗಿದೆ ಎಂದು ಅವರು ಆರೋಪಿಸಿದ್ದಾರೆ. ಲಾಕ್ಡೌನ್ ಸಮಯದಲ್ಲಿ ತನ್ನನ್ನು ಪಾಕಿಸ್ತಾನಕ್ಕೆ ತೆರಳುವಂತೆ ಒತ್ತಾಯಿಸಿ, ಬಳಿಕ ಭಾರತ ಪ್ರವೇಶಕ್ಕೂ ಅಡ್ಡಿಪಡಿಸಿದ ಆರೋಪವನ್ನು ಕೂಡ ನಿಕಿತಾ ಮಾಡಿದ್ದಾರೆ. ಪತಿ ದಿಲ್ಲಿಯ ಮಹಿಳೆಯನ್ನು ಮದುವೆಯಾಗಲು ಸಿದ್ಧತೆ ನಡೆಸುತ್ತಿರುವ ಮಾಹಿತಿ ತಿಳಿದ ನಂತರ, ಅವರು 2025ರ ಜನವರಿ 27ರಂದು ಅಧಿಕೃತ ದೂರು ಸಲ್ಲಿಸಿದ್ದಾರೆ. ಪ್ರಕರಣವನ್ನು ಪರಿಗಣಿಸಿದ ಸಿಂಧಿ ಪಂಚ ಮಧ್ಯಸ್ಥಿಕೆ ಕೇಂದ್ರವು ಮಧ್ಯಸ್ಥಿಕೆ ವಿಫಲವಾದ ಹಿನ್ನೆಲೆಯಲ್ಲಿ ವಿಕ್ರಮ್ ಅವರನ್ನು ಪಾಕಿಸ್ತಾನಕ್ಕೆ ಗಡೀಪಾರು ಮಾಡುವಂತೆ ಶಿಫಾರಸು ಮಾಡಿದೆ. ಇಬ್ಬರೂ ಭಾರತೀಯ ನಾಗರಿಕರಲ್ಲದ ಕಾರಣ ಪ್ರಕರಣ ಪಾಕಿಸ್ತಾನದ ನ್ಯಾಯವ್ಯಾಪ್ತಿಗೆ ಸಂಬಂಧಿಸಿದೆ ಎಂದು ಕೇಂದ್ರದ ವರದಿ ಹೇಳಿದೆ. ಇದೆ ವೇಳೆ, ಇಂದೋರ್ ಸಾಮಾಜಿಕ ಪಂಚಾಯತ್ ಕೂಡಾ ಈ ಪ್ರಕರಣವನ್ನು ಪರಿಶೀಲಿಸಿ ವಿಕ್ರಮ್ ವಿರುದ್ಧ ಕ್ರಮದ ಶಿಫಾರಸು ಮಾಡಿತ್ತು. ತನಿಖೆ ಮುಂದುವರಿಯಲಿದ್ದು, ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಆಶಿಷ್ ಸಿಂಗ್ ತಿಳಿಸಿದ್ದಾರೆ.
ಡಿಸೆಂಬರ್ 7ರಂದು ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ?: ಜಿಲ್ಲಾವರು ಅಂಕಿಅಂಶಗಳ ವಿವರ
Petrol, Diesel Price: ಪೆಟ್ರೋಲ್, ಡೀಸೆಲ್ ದರಲ್ಲಿ ಜಾಸ್ತಿ ಅಲ್ಲದಿದ್ದರೂ, ಸ್ವಲ್ಪ ಪ್ರಮಾಣದಲ್ಲಾದ್ರೂ ಏರಿಳಿತ ಆಗುತ್ತಿರುತ್ತದೆ. ಹಾಗಾದರೆ, ಇಂದು (ಡಿಸೆಂಬರ್ 7) ಬೆಂಗಳೂರು ಸೇರಿದಂತೆ ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಲೀಟರ್ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟಿದೆ ಎನ್ನುವ ಅಂಕಿಅಂಶಗಳನ್ನು ಇಲ್ಲಿ ನೀಡಲಾಗಿದೆ ಕಣ್ಣಾಡಿಸಿ. ಶಕ್ತಿಯ ಮೂಲ ಎನಿಸಿಕೊಂಡಿರುವ ಪೆಟ್ರೋಲ್ ಮತ್ತು ಡೀಸೆಲ್ ಇಂಧನ ಅತ್ಯವಶ್ಯಕವಾಗಿ ಬೇಕಾಗುವ ಸಂಪನ್ಮೂಲಗಳಲ್ಲಿ
ಚಳಿಗಾಲದ ಅಬ್ಬರ: ಉತ್ತರ, ಮಧ್ಯ ಹಾಗೂ ಪೂರ್ವ ಭಾರತದಲ್ಲಿ ತೀವ್ರ ಚಳಿ, ಹಲವು ರಾಜ್ಯಗಳಲ್ಲಿ ತಾಪಮಾನ ಕುಸಿತ
ಆಹಾ ಚಳಿ..... ಚಳಿ.... ದೇಶದ ಉತ್ತರ, ಮಧ್ಯ ಮತ್ತು ಪೂರ್ವ ಭಾಗಗಳಲ್ಲಿ ಈ ವಾರ ತೀವ್ರ ಚಳಿ ಆವರಿಸಲಿದೆ. ಪಂಜಾಬ್, ಹರಿಯಾಣ, ಮಧ್ಯಪ್ರದೇಶ, ಜಾರ್ಖಂಡ್ ಮತ್ತು ಒಡಿಶಾ ಸೇರಿದಂತೆ ಹಲವು ರಾಜ್ಯಗಳಲ್ಲಿ ತಾಪಮಾನ ಗಣನೀಯವಾಗಿ ಕುಸಿಯುವ ನಿರೀಕ್ಷೆಯಿದೆ. ಬೆಳಗಿನ ಜಾವ ಮತ್ತು ರಾತ್ರಿ ವೇಳೆ ದಟ್ಟವಾದ ಮಂಜು ಕೂಡ ಕಂಡುಬರಲಿದೆ, ಇದು ಜನಜೀವನದ ಮೇಲೆ ಪರಿಣಾಮ ಬೀರಲಿದೆ.
ಉಕ್ರೇನ್ ವಿರುದ್ಧ ರಷ್ಯಾ ಕೊತ, ಕೊತ... ಭೀಕರ ಕ್ಷಿಪಣಿ ದಾಳಿ ಆರಂಭ!
ಯುದ್ಧ.. ಯುದ್ಧ.. ಯುದ್ಧ.. ಹೀಗೆ ರಷ್ಯಾ ಮತ್ತು ಉಕ್ರೇನ್ ಯುದ್ಧದ ಭೀಕರತೆಗೆ ಬ್ರೇಕ್ ಬೀಳುವ ಯಾವುದೇ ರೀತಿಯ ಲಕ್ಷಣ ಕೂಡ ಈಗ ಕಾಣುತ್ತಿಲ್ಲ. ಯುದ್ಧ ನಿಲ್ಲಿಸುವ ಬದಲಾಗಿ ಎರಡೂ ದೇಶಗಳ ಸೇನೆ ನಡುವೆ ಡೆಡ್ಲಿ ಫೈಟಿಂಗ್ ಶುರುವಾಗಿದೆ. ಇದರ ಪರಿಣಾಮ ಅವರ ವಿರುದ್ಧ ಇವರು &ಇವರ ವಿರುದ್ಧ ಅವರು ಅಂತಾ ದಾಳಿ ಆರಂಭ ಮಾಡಿದ್ದಾರೆ. ಅದರಲ್ಲೂ
6ನೇ ಗ್ಯಾರಂಟಿ ಘೋಷಣೆ... ಸಿಎಂ ಬದಲಾವಣೆ ಸಂಚಲನದ ಬೆನ್ನಲ್ಲೇ... Gruhalakshmi Karnataka
ಮಹಿಳೆಯರಿಗೆ ಪ್ರತಿ ತಿಂಗಳು 2,000 ರೂಪಾಯಿ ನೀಡುವ ಗೃಹಲಕ್ಷ್ಮೀ ಯೋಜನೆ ಸೇರಿದಂತೆ ಉಚಿತ ಆಹಾರ ಧಾನ್ಯ ನೀಡುವ ಅನ್ನಭಾಗ್ಯ ಹಾಗೂ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆ ಸೇರಿ, ಒಟ್ಟಾರೆ 5 ಗ್ಯಾರಂಟಿ ಯೋಜನೆಗಳನ್ನು ನೀಡಿ ಕರ್ನಾಟಕದ ಸಿದ್ದರಾಮಯ್ಯ ಅವರ ಸರ್ಕಾರ ದೇಶದ ಮೂಲೆ ಮೂಲೆಯಲ್ಲೂ ಗಮನ ಸೆಳೆದಿದೆ. ಆದರೆ ಮತ್ತೊಂದು ಕಡೆ ಕರ್ನಾಟಕದಲ್ಲಿ ಸಿಎಂ
ವಿಶ್ವ ವೇದಿಕೆಯಲ್ಲಿ ಗ್ರಾಮೀಣ ಪ್ರತಿಭೆ ಧನುಷ್ ಎಂ.ಜಿ.ಗೆ ಐತಿಹಾಸಿಕ ಗೌರವ
ಜಿಟಿಟಿಸಿಗೆ ಮೊದಲ ಬಾರಿಗೆ ವರ್ಲ್ಡ್ ಸ್ಕಿಲ್ಸ್ ಏಷ್ಯ ಪದಕ
Gold Price December 7: ಚಿನ್ನದ ಬೆಲೆ ದಿಢೀರ್ 5,400 ರೂಪಾಯಿ ಕುಸಿತ, ಈಗ ಎಷ್ಟಿದೆ ಬೆಲೆ...
ಚಿನ್ನದ ಬೆಲೆ ಯಾವಾಗ ಕುಸಿತ ಕಾಣುತ್ತೆ... ಚಿನ್ನದ ಬೆಲೆ ಯಾವಾಗ ಕಡಿಮೆ ಆಗುತ್ತೆ... ಹೀಗೆ ಕಾಯುತ್ತಿದ್ದ ಜನರಿಗೆ ಅಂತೂ ಇಂತೂ ಚಿನ್ನದ ಬೆಲೆ ಕುಸಿತ ಕಂಡು ಭರ್ಜರಿ ಸುದ್ದಿ ಸಿಕ್ಕಿದೆ. ಈ ಮೂಲಕ ಭರ್ಜರಿ ಏರಿಕೆ ಕಾಣುತ್ತಿದ್ದ ಚಿನ್ನದ ಬೆಲೆ ಇದೀಗ ಭಾರಿ ಭರ್ಜರಿ ಇಳಿಕೆ ಕಂಡಿದೆ. ಆ ಮೂಲಕ ಮದುವೆ &ಶುಭಕಾರ್ಯಗಳಿಗೆ ಚಿನ್ನ ಖರೀದಿ
ಗೋವಾದ ಕ್ಲಬ್ನಲ್ಲಿ ಭೀಕರ ಅಗ್ನಿ ದುರಂತ: ಪ್ರವಾಸಿಗರು ಸೇರಿ 23 ಮಂದಿ ಬಲಿ
ಪ್ರವಾಸಿಗರ ನೆಚ್ಚಿನ ತಾಣವಾಗಿರುವ ಗೋವಾದಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, ಕ್ಲಬ್ ಹಾಗೂ ರೆಸ್ಟೋರೆಂಟ್ ಧಗಧಗನೆ ಹೊತ್ತಿ ಉರಿದಿದ್ದು, ಅಲ್ಲಿದ್ದ ಪ್ರವಾಸಿಗರು ಕೂಡಾ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ತಪ್ಪಿತಸ್ಥರ ವಿರದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಗೋವಾ ಸಿಎಂ ತಿಳಿಸಿದದ್ದಾರೆ.
ಕಲಬುರಗಿಯಿಂದ ವಿಮಾನ ಹಾರಾಟವೇ ಬಂದ್: ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಇದ್ದೂ ಇಲ್ಲದಂತಾದ ವಿಮಾನ ನಿಲ್ದಾಣ
ಕಲಬುರಗಿ ವಿಮಾನ ನಿಲ್ದಾಣ ಆರಂಭವಾಗಿ 7 ವರ್ಷಗಳಲ್ಲೇ ವಿಮಾನ ಹಾರಾಟ ಸಂಪೂರ್ಣ ಸ್ಥಗಿತಗೊಂಡಿದ್ದು, ಜಿಲ್ಲೆಯ ಜನರಲ್ಲಿ ನಿರಾಸೆ ಮೂಡಿಸಿದೆ. 175 ಕೋಟಿ ರೂ.ಗೂ ಹೆಚ್ಚು ಖರ್ಚು ಮಾಡಿ ನಿರ್ಮಿಸಿದರೂ, ವಿಮಾನ ಸೇವೆ ಸ್ಥಗಿತಕ್ಕೆ ಕಾರಣ ಏನು ಎಂಬ ಪ್ರಶ್ನೆ ಎದುರಾಗಿದೆ. ಜನರ ಒತ್ತಾಯಕ್ಕೆ ಶೀಘ್ರವೇ ಸಂಚಾರ ಪುನರಾರಂಭಿಸಬೇಕಿದೆ.
ಉತ್ತರ ಕರ್ನಾಟಕದ ಸರ್ಕಾರಿ ಆರೋಗ್ಯ ವ್ಯವಸ್ಥೆಯಲ್ಲಿ ತಾರತಮ್ಯವಿದ್ದು, ಅತ್ಯಾಧುನಿಕ ಚಿಕಿತ್ಸೆಗಾಗಿ ಜನರು ನೆರೆ ರಾಜ್ಯಗಳ ಆಸ್ಪತ್ರೆಗಳನ್ನೇ ಅವಲಂಬಿಸಬೇಕಾಗಿದೆ. ಹುಬ್ಬಳ್ಳಿ ಮತ್ತು ಕಲಬುರ್ಗಿ ಹೊರತುಪಡಿಸಿ, ಇತರ ಜಿಲ್ಲೆಗಳಲ್ಲಿ ಸೂಕ್ತ ಸೌಲಭ್ಯಗಳ ಕೊರತೆಯಿಂದಾಗಿ ರೋಗಿಗಳು ತೊಂದರೆ ಅನುಭವಿಸುತ್ತಿದ್ದಾರೆ. ವೈದ್ಯರ ಕೊರತೆ, ಹಾಸಿಗೆಗಳ ಲಭ್ಯತೆ ಕಡಿಮೆ, ಮತ್ತು ಮೂಲಸೌಕರ್ಯಗಳ ಅಭಾವ ಈ ಭಾಗದ ಆರೋಗ್ಯ ರಕ್ಷಣೆಗೆ ದೊಡ್ಡ ಸವಾಲಾಗಿದೆ.
ಧರ್ಮ ರಾಜಕಾರಣದ ಅರಿವಿದ್ದರಿಂದಲೇ ಅಂಬೇಡ್ಕರ್ ಮನುಸ್ಮೃತಿ ಸುಟ್ಟಿದ್ದು : ದಿನೇಶ್ ಅಮಿನ್ ಮಟ್ಟು
ಡಿಎಸ್ಎಸ್ ಪ್ರತಿರೋಧ ಸಮಾವೇಶ
ಹೊಸದಿಲ್ಲಿ: ರಾಜ್ಯ ಕಾಂಗ್ರೆಸ್ ನಲ್ಲಿ ಉಂಟಾಗಿರುವ ನಾಯಕತ್ವ ಬಿಕ್ಕಟ್ಟನ್ನು ಶಮನಗೊಳಿಸಲು ಪಕ್ಷದ ಉನ್ನತ ನಾಯಕತ್ವ ಶನಿವಾರ ತುರ್ತು ಸಮಾಲೋಚನೆ ನಡೆಸಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಸಮಾಧಾನ ಹೆಚ್ಚುತ್ತಿರುವ ವಿಚಾರವಾಗಿ ನಡೆದ ಸಭೆಯಲ್ಲಿ ಈ ಬಾರಿ ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರೇ ಸ್ವತಃ ಚರ್ಚೆಯಲ್ಲಿ ಭಾಗವಹಿಸಿದ್ದರು. ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು 10-ಜನಪಥ್ ನಿವಾಸಕ್ಕೆ ತೆರಳಿ ಸೋನಿಯಾ ಮತ್ತು ವಿರೋಧಪಕ್ಷದ ನಾಯಕ ರಾಹುಲ್ ಗಾಂಧಿ ಅವರೊಂದಿಗೆ ಸುಮಾರು ಎರಡೂವರೆ ಗಂಟೆಗಳ ಕಾಲ “ಪ್ರಸ್ತುತ ರಾಜಕೀಯ ಪರಿಸ್ಥಿತಿ” ಕುರಿತು ಚರ್ಚಿಸಿದರು. ಸಭೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ವೇಣುಗೋಪಾಲ್, “ಸಾಮಾನ್ಯ ರಾಜಕೀಯ ಚರ್ಚೆಯ ಜೊತೆಗೆ ಕರ್ನಾಟಕದ ವಿಷಯವೂ ಪ್ರಸ್ತಾಪವಾಯಿತು. ಯಾವುದೇ ನಿರ್ಧಾರ ಹೊರಬರಲಿಲ್ಲ. ಈ ವಿಚಾರವಾಗಿ ಮತ್ತೊಂದು ಸುತ್ತಿನ ಚರ್ಚೆಯೂ ನಡೆಯಲಿದೆ,” ಎಂದು ಸ್ಪಷ್ಟಪಡಿಸಿದರು. ಸೋನಿಯಾ ಗಾಂಧಿ ಕೆಲಕಾಲದಿಂದ ಇಂತಹ ರಾಜಕೀಯ ಸಮಾಲೋಚನೆಗಳಿಂದ ದೂರವಿದ್ದರು. ಆದರೆ ಕರ್ನಾಟಕದ ನಾಯಕತ್ವದ ಕುರಿತ ಚರ್ಚೆಯಲ್ಲಿ ಅವರು ಭಾಗವಹಿಸಿರುವುದು ಕರ್ನಾಟಕದ ವಿಚಾರದಲ್ಲಿ ಹೈಕಮಾಂಡ್ ಗಂಭೀರವಾಗಿದೆ ಎಂಬ ಸೂಚನೆ ನೀಡಿದೆ. ಪಕ್ಷದ ಮೂಲಗಳ ಪ್ರಕಾರ, ಸಂಸತ್ತಿನ ಚಳಿಗಾಲದ ಅಧಿವೇಶನದ ನಂತರ, ಸಾಧ್ಯವಾದರೆ ಜನವರಿ ಮೊದಲ ವಾರದಲ್ಲೇ ಮತ್ತೊಂದು ಸುತ್ತಿನ ಸಭೆ ನಡೆಯುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ. ಸಿದ್ದರಾಮಯ್ಯ–ಶಿವಕುಮಾರ್ ಬಣಗಳ ನಡುವಿನ ಅಧಿಕಾರ ಹಂಚಿಕೆ ಸೂತ್ರದ ವಿಷಯವೇ ವಿವಾದದ ಮೂಲವಾಗಿದ್ದು, ಈ ಕುರಿತಂತೆ ಹೈಕಮಾಂಡ್ ಎರಡೂ ಬಣಗಳಿಗೆ ಸಾರ್ವಜನಿಕವಾಗಿ ಮಾತನಾಡದಂತೆ ಸೂಚನೆ ನೀಡಲಿದೆ. ಅಂತಿಮ ನಿರ್ಧಾರ ಸೋನಿಯಾ ಮತ್ತು ರಾಹುಲ್ ಗಾಂಧಿ ಅವರೊಂದಿಗೆ ಸಮಾಲೋಚನೆಯ ಬಳಿಕವೇ ಹೊರಬೀಳಲಿದೆ ಎಂದು ಖರ್ಗೆ ಈ ಮೊದಲು ಹೇಳಿದ್ದರು. ಇದೇ ಸಂದರ್ಭದಲ್ಲಿ, ಇಬ್ಬರು ನಾಯಕರು ಬ್ರೇಕ್ ಫಾಸ್ಟ್ ಮತ್ತು ಲಂಚ್ ಮೀಟಿಂಗ್ ಮೂಲಕ ಸಭೆಗಳನ್ನು ನಡೆಸಿ ಐಕ್ಯತೆಯನ್ನು ಸಾಧಿಸಲು ನಡೆಸಿದ ಪ್ರಯತ್ನಗಳ ಬಗ್ಗೆ ವೇಣುಗೋಪಾಲ್ ಸೋನಿಯಾ ಅವರಿಗೆ ವಿವರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸಮಸ್ಯೆಗಳನ್ನು ಪಕ್ಷದ ಒಳಾಂಗಣದಲ್ಲಿ ಚರ್ಚಿಸಬೇಕೆಂಬ ಸೂಚನೆಯನ್ನೂ ಇಬ್ಬರಿಗೂ ನೀಡಲಾಗಿದೆ. ಕೇಂದ್ರದ ನಿರ್ಧಾರಕ್ಕೆ ಬದ್ಧರಾಗಿರುವುದಾಗಿ ಸಿದ್ದರಾಮಯ್ಯ ಹಾಗೂ ಶಿವಕುಮಾರ್ ಇಬ್ಬರೂ ಹೈಕಮಾಂಡ್ಗೆ ಭರವಸೆ ನೀಡಿರುವುದಾಗಿ ತಿಳಿದುಬಂದಿದೆ. ಇತ್ತೀಚೆಗೆ ಮಂಗಳೂರಿನಲ್ಲಿ ಸಿದ್ದರಾಮಯ್ಯ ಮತ್ತು ವೇಣುಗೋಪಾಲ್ ನಡುವೆ ನಡೆದ ಮಾತುಕತೆಯೂ ನಡೆದಿದೆ. ಮಲ್ಲಿಕಾರ್ಜುನ ಖರ್ಗೆಯವರೂ ಇಬ್ಬರು ನಾಯಕರೊಂದಿಗೆ ಚರ್ಚೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಸೌಜನ್ಯ : deccanherald.com
ದಸಂಸ ಮನುಷ್ಯತ್ವದ ಪರ ಹೋರಾಡಿದೆ : ಸುಬ್ಬು ಹೊಲೆಯಾರ್
ಬೆಂಗಳೂರು : ರಾಜ್ಯದಲ್ಲಿ ಅನೇಕ ಚಳವಳಿಗಳು ಬಂದು ಹೋಗಿವೆ. ವಚನ ಸಾಹಿತ್ಯದ ನಂತರ ಕಮ್ಯುನಿಸ್ಟರನ್ನು ಹೊರತು ಪಡಿಸಿದರೆ, ದಲಿತ ಸಂಘರ್ಷ ಸಮಿತಿ ಒಂದೇ ಮನುಷ್ಯತ್ವದ ಪರವಾಗಿ ಹೋರಾಡಿದ್ದು ಎಂದು ಹಿರಿಯ ಸಾಹಿತಿ ಸುಬ್ಬು ಹೊಲೆಯಾರ್ ಅಭಿಪ್ರಾಯಪಟ್ಟಿದ್ದಾರೆ. ಶನಿವಾರ ನಗರದ ವಿಧಾನಸೌಧ ಮುಂಭಾಗದಲ್ಲಿರುವ ಅಂಬೇಡ್ಕರ್ ಪುತ್ಥಳಿಯ ಎದುರಿಗೆ ದಸಂಸ ವತಿಯಿಂದ ‘ಸಂವಿಧಾನ ಉಳಿಸಿ, ಅಸಮಾನತೆ ಅಳಿಸಿ’ ಎಂಬ ಘೋಷ ವಾಕ್ಯದಡಿ ಆಯೋಜಿಸಿದ್ದ ಪರಿನಿಬ್ಬಾಣದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಡಿ.6ರಂದು ಬೆಳಕು ಹಾರಿ ಹೋಗಿದ್ದಲ್ಲ, ಅದು ಬೆಳಕು ಮತ್ತೊಮ್ಮೆ ಉಜ್ವಲವಾಗಿ ಬೆಳಗಿದ್ದು ಎಂದು ಭಾವಿಸುತ್ತೇನೆ ಎಂದರು. ಅಂಬೇಡ್ಕರ್ ಅಸಮಾನತೆ ಅಳಿಸಲು ಸಂವಿಧಾನದ ಬೆಳಕನ್ನು ಕೊಟ್ಟಿದ್ದಾರೆ. ಅವರು ಒಂದು ಜಾತಿ, ಸಮುದಾಯಕ್ಕೆ ಮೀಸಲಾಗದೇ ಎಲ್ಲರ ಹೃದಯಗಳನ್ನು ಮಿಡಯುವ ಹಾಗೆ ದೇಶಕ್ಕೆ ಉತ್ತಮವಾದ ಸಂವಿಧಾನ ಕೊಟ್ಟಿದ್ದಾರೆ. ಅವರು ನಮ್ಮನ್ನು ಅಗಲಿಲ್ಲ, ಮತ್ತಷ್ಟು ಎಚ್ಚರವಾಗಿರಿ ಎಂದು ಹೇಳಿ ಹೋಗಿದ್ದಾರೆ. ಅವರು ಬದುಕಿನುದ್ದಕ್ಕು ನಮ್ಮ ಪರವಾಗಿ ಎಚ್ಚರವಾಗಿದ್ದರು. ಇದೀಗ ನಾವೆಲ್ಲ ಅವರಷ್ಟೇ ಜಾಗೃತರಾಗಬೇಕಿದೆ. ಅಸಮಾನತೆಯನ್ನು ಅಳಿಸಲು ನಾವೆಲ್ಲರೂ ಸನ್ನದ್ದರಾಗಬೇಕಿದೆ. ದಸಂಸ ರಾಜ್ಯದ ಚಳವಳಿಗಳ ತಾಯಿ ಎಂದು ಹೇಳಿದರೆ ತಪ್ಪಾಗಲಾರದು ಎಂದು ಅವರು ತಿಳಿಸಿದರು. ಕಾರ್ಯಕ್ರಮದಲ್ಲಿ ಸರಕಾರಿ ನೌಕರರ ಸಂಘದ ಖಜಾಂಚಿ ಶಿವರುದ್ರಯ್ಯ ಮಾತನಾಡಿದರು. ದಸಂಸ ಹೋರಾಟಗಾರರಾದ ಮಾವಳ್ಳಿ ಶಂಕರ್, ಇಂದಿರಾ ಕೃಷ್ಣಪ್ಪ, ಶ್ರೀರಾಮ್, ನಿರ್ಮಲಾ, ಪುರುಷೋತ್ತಮ ದಾಸ್, ಬಾಲಕೃಷ್ಣ, ವಕೀಲ ನರಸಿಂಹಮೂರ್ತಿ ಸೇರಿದಂತೆ ಹಲವರು ಭಾಗವಹಿಸಿದ್ದರು.
ಉತ್ತರ ಕರ್ನಾಟಕ ಸಮಸ್ಯೆಗಳ ಚರ್ಚೆಗೆ ಸರಕಾರ ಬದ್ಧ : ಎಂ.ಬಿ.ಪಾಟೀಲ್
ವಿಜಯಪುರ : ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಬಗ್ಗೆ ಬೆಳಗಾವಿ ಅಧಿವೇಶನದಲ್ಲಿ ಪ್ರತ್ಯೇಕ ಚರ್ಚೆ ಆಗಬೇಕು. ಈ ವಿಚಾರದಲ್ಲಿ ಸರಕಾರ ಕೂಡ ಬದ್ಧವಾಗಿದ್ದು, ಚರ್ಚೆ ಕೂಡ ಆಗುತ್ತೆ. ಪರಿಹಾರ ಕೊಡಲು ನಮ್ಮ ಸರಕಾರ ಬದ್ಧವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ. ನಗರದಲ್ಲಿ ಬೆಳಗಾವಿಯ ಚಳಿಗಾಲದ ಅಧಿವೇಶನದ ವಿಚಾರಕ್ಕೆ ಸಂಬಂಧಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಬ್ಬು ಬೆಳೆಗಾರರ ಸಮಸ್ಯೆ ವಿಚಾರದಲ್ಲಿ ಕೇಂದ್ರ ಸರಕಾರ ನೆರವಿಗೆ ಬಂತಾ?, ಎಫ್ಆರ್ಪಿ ಫಿಕ್ಸ್ ಮಾಡುವುದು ಕೇಂದ್ರ ಸರಕಾರ, ಕೇಂದ್ರ ಸರಕಾರ ಒಂದು ರೂಪಾಯಿ ಕೂಡ ಕೊಟ್ಟಿಲ್ಲ ಎಂದು ದೂರಿದರು. ಕೇಂದ್ರ ಸರಕಾರವು ಎಥಿನಾಲ್ ಕೂಡ ಅವರು ಶೇ.50 ರಷ್ಟು ಖರೀದಿ ಮಾಡುತ್ತಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರಧಾನಿಯವರಿಗೆ ಹೋಗಿ ಭೇಟಿಯಾದರೂ ಏನಾದರೂ ಕೊಟ್ಟರಾ?, ಸದ್ಯ ಮೆಕ್ಕೆಜೋಳಕ್ಕೆ ಏನಾದರೂ ಕೊಟ್ಟರೂ, ಕಬ್ಬು ಹಾಗೂ ಮೆಕ್ಕೆಜೋಳ ಕೇಂದ್ರ ಸರಕಾರದ ಜವಾಬ್ದಾರಿ ಎಂದು ಹೇಳಿದರು. ಯಡಿಯೂರಪ್ಪ ಸುಪುತ್ರ ವಿಜಯೇಂದ್ರ ರೈತರ ಹೋರಾಟದಲ್ಲಿ ಹೋಗಿ ಮಲಗುತ್ತಾರೆ. ಮೊದಲು ಕೇಂದ್ರದಲ್ಲಿ ಪರಿಹಾರ ಕೊಡಿಸಲಿ. ಕಬ್ಬು ಬೆಳೆಗಾರರ ಹೋರಾಟ, ಮೆಕ್ಕೆಜೋಳದ ಹೋರಾಟ ಕೇಂದ್ರ ಸರಕಾರದ್ದು ಎಂದರು.
ಬೆಳ್ತಂಗಡಿ | ಚಿನ್ನಯ್ಯನಿಗೆ ರಕ್ಷಣೆ ನೀಡಲು ಆಗ್ರಹಿಸಿ ನ್ಯಾಯಾಲಯಕ್ಕೆ ಅಪೀಲು
ಬೆಳ್ತಂಗಡಿ, ಡಿ.6: ಧರ್ಮಸ್ಥಳ ಪ್ರಕರಣದ ಆರೋಪಿ ಚಿನ್ನಯ್ಯನಿಗೆ ಜೀವ ಬೆದರಿಕೆಯಿದ್ದು, ಸೂಕ್ತ ರಕ್ಷಣೆ ನೀಡಬೇಕು ಹಾಗೂ ಆತನಿಗೆ ವಿಧಿಸಿರುವ ಹತ್ತನೇ ನಿಬಂಧನೆಯನ್ನು ಸಡಿಲಗೊಳಿಸಬೇಕು ಎಂದು ಚಿನ್ನಯ್ಯನ ಪರ ವಕೀಲರು ಬೆಳ್ತಂಗಡಿ ನ್ಯಾಯಾಲಯಕ್ಕೆ ಅಪೀಲು ಸಲ್ಲಿಸಿದ್ದಾರೆ. ಸಾಕ್ಷಿ ಸಂರಕ್ಷಣೆ ಕಾಯ್ದೆಯಲ್ಲಿ ರಕ್ಷಣೆ ಪಡೆದಿದ್ದ ಚಿನ್ನಯ್ಯ ಆರೋಪಿಯಾದ ಬಳಿಕ ಆ ರಕ್ಷಣೆಯನ್ನು ಕಳೆದುಕೊಂಡಿದ್ದ. ಇದೀಗ ಸಕ್ಷಮ ಪ್ರಾಧಿಕಾರದ ಮುಂದೆಯೂ ನ್ಯಾಯವಾದಿಗಳು ಚಿನ್ನಯ್ಯನಿಗೆ ರಕ್ಷಣೆ ನೀಡುವಂತೆ ಮನವಿ ಸಲ್ಲಿಸಿದ್ದಾರೆ. ಅದರ ಆಧಾರದಲ್ಲಿ ಆತನಿಗೆ ಜೀವ ಭಯವಿದ್ದು, ಸೂಕ್ತ ರಕ್ಷಣೆ ನೀಡುವಂತೆ ಬೆಳ್ತಂಗಡಿ ನ್ಯಾಯಾಲಯದಲ್ಲೂ ಅರ್ಜಿ ಸಲ್ಲಿಸಲಾಗಿದೆ. ಅದೇ ರೀತಿ ಚಿನ್ನಯ್ಯ ಜಾಮೀನಿನ ಮೇಲೆ ಹೊರ ಬಂದರೆ ಆತ ಸ್ಥಳೀಯ ಠಾಣೆಗೆ ಬಂದು ಸಹಿ ಹಾಕುವಂತೆ ನಿಬಂಧನೆ ವಿಧಿಸಲಾಗಿದ್ದು, ಈ ನಿಬಂಧನೆಯನ್ನು ಸಡಿಲಿಸುವಂತೆಯೂ ನ್ಯಾಯಾಲಯಕ್ಕೆ ಮನವಿ ಸಲ್ಲಿಸಲಾಗಿದೆ. ಚಿನ್ನಯ್ಯ ಜಮೀನು ಲಭಿಸಿದರೆ ಆತನ ಊರಾದ ಮಂಡ್ಯದಲ್ಲಿ ವಾಸಿಸಲು ನಿರ್ಧರಿಸಿದ್ದಾನೆ. ಈ ಹಿನ್ನಲೆಯಲ್ಲಿ ಠಾಣೆಗೆ ಹಾಜರಾತಿಗೆ ವಿನಾಯಿತಿ ನೀಡುವಂತೆಯೂ ವಿನಂತಿಸಲಾಗಿದೆ. ಚಿನ್ನಯ್ಯ ರಕ್ಷಣೆ ಕೋರಿರುವ ಬಗ್ಗೆ, ರಕ್ಷಣೆ ನೀಡುವ ಬಗ್ಗೆ ಬೆಳ್ತಂಗಡಿ ವೃತ್ತ ನಿರೀಕ್ಷಕರಿಂದ ಹಾಗೂ ಇತರ ವಿಚಾರಗಳ ಬಗ್ಗೆ ಎಸ್ಐಟಿ ಅಧಿಕಾರಿಗಳಿಂದ ನ್ಯಾಯಾಲಯ ವರದಿ ಕೋರಿದೆ. ಸೆಕ್ಷನ್ 215ರ ಕುರಿತಾದ ವರದಿಯ ಬಗ್ಗೆ ವಾದ ಮಂಡಿಸಲು ವಕೀಲರು ಸಮಯಾವಕಾಶ ಕೋರಿದ್ದು, ಒಟ್ಟು ಪ್ರಕರಣದ ವಿಚಾರಣೆಯನ್ನು ಡಿ.9ಕ್ಕೆ ಮುಂದೂಡಲಾಗಿದೆ.
ಗೌತಮ್ ಗಂಭೀರ್ ಮೇಲಿನ ಕೋಪಕ್ಕೆ 6.. 6.. 6... ಚಚ್ಚಿ ಬಿಸಾಡಿದ ವಿರಾಟ್ ಕೊಹ್ಲಿ... Virat Kohli
ವಿರಾಟ್ ಕೊಹ್ಲಿ ಮತ್ತು ಗೌತಮ್ ಗಂಭೀರ್ ನಡುವೆ ಇರುವ ಬಿರುಕು ದಿನದಿಂದ ದಿನಕ್ಕೆ ಮತ್ತಷ್ಟು ಹೆಚ್ಚಾಗುತ್ತಿದ್ದು, ಗೌತಮ್ ಗಂಭೀರ್ ಕಂಡ್ರೆ ಸಾಕು ವಿರಾಟ್ ಕೊಹ್ಲಿ ಅವರ ಅಭಿಮಾನಿಗಳು ಉರಿದು ಉರಿದು ಬೀಳುತ್ತಿದ್ದಾರೆ. ಅದರಲ್ಲೂ ವಿರಾಟ್ ಕೊಹ್ಲಿ ದಿಢೀರ್ ಟಿ20 &ಟೆಸ್ಟ್ ಕ್ರಿಕೆಟ್ಗೆ ನಿವೃತ್ತಿ ಘೋಷಣೆ ಮಾಡಿ ಹೊರಗೆ ಹೋಗಲು ಕಾರಣವೇ ಗೌತಮ್ ಗಂಭೀರ್ ಅನ್ನೋ ಗಂಭೀರ
ಮುಂದುವರಿದ ಇಂಡಿಗೊ ಅವ್ಯವಸ್ಥೆ, ಜನದಿಂದ ಕಂಪನಿಗೆ ಹಿಡಿಶಾಪ, ಸಿಇಒಗೆ ನೋಟಿಸ್ ನೀಡಿದ ಕೇಂದ್ರ
ಇಂಡಿಗೊ ವಿಮಾನಯಾನ ಸಂಸ್ಥೆಯ ಗಂಭೀರ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಸರಕಾರ ಕ್ರಮಕ್ಕೆ ಮುಂದಾಗಿದೆ. ಶನಿವಾರ 850 ವಿಮಾನಗಳ ರದ್ದತಿಯಿಂದ ಲಕ್ಷಾಂತರ ಪ್ರಯಾಣಿಕರು ತೊಂದರೆ ಅನುಭವಿಸಿದ್ದು, ವಿಮಾನ ನಿಲ್ದಾಣಗಳಲ್ಲಿ ಊಟ, ನಿದ್ರೆ, ವೈದ್ಯಕೀಯ ನೆರವು ಇಲ್ಲದೆ ಪರದಾಡಿದ್ದಾರೆ. ಸಂಸ್ಥೆಯ ಸಿಇಒಗೆ ಶೋಕಾಸ್ ನೋಟಿಸ್ ನೀಡಲಾಗಿದ್ದು, ಪರಿಸ್ಥಿತಿಯ ಬಗ್ಗೆ ಪ್ರಧಾನಿಗೆ ಮಾಹಿತಿ ನೀಡಲಾಗಿದೆ.
Bengaluru | ಕಾರಾಗೃಹದೊಳಗೆ ಸಿಗರೇಟ್ ಪ್ಯಾಕ್ ಕೊಂಡೊಯ್ಯುವಾಗ ಸಿಕ್ಕಿಬಿದ್ದ ವಾರ್ಡನ್!
ಬೆಂಗಳೂರು : ಪರಪ್ಪನ ಅಗ್ರಹಾರ ಕಾರಾಗೃಹದೊಳಗೆ ಸಿಗರೇಟ್ ಪ್ಯಾಕ್ಗಳನ್ನು ತೆಗೆದುಕೊಂಡು ಹೋಗುತ್ತಿದ್ದ ಜೈಲಿನ ವಾರ್ಡನ್ ಸಿಕ್ಕಿಬಿದ್ದಿರುವ ಘಟನೆ ವರದಿಯಾಗಿದೆ. ರಾಹುಲ್ ಪಾಟೀಲ್ ಎಂಬಾತ ಬಂಧನಕ್ಕೊಳಗಾದ ಜೈಲು ವಾರ್ಡನ್ ಎಂದು ಗುರುತಿಸಲಾಗಿದೆ. ಈತ ಹಿಂದಿನ ಜೂನ್ನಲ್ಲಿ ಬೆಳಗಾವಿ ಜೈಲಿನಿಂದ ಬೆಂಗಳೂರಿನ ಪರಪ್ಪನ ಅಗ್ರಹಾರ ಕಾರಾಗೃಹಕ್ಕೆ ವರ್ಗಾವಣೆಯಾಗಿದ್ದಾರೆ. ಶುಕ್ರವಾರ(ಡಿ.5) ಸಂಜೆ ಕೆಎಸ್ಇಎಸ್ಎಫ್ ಸಿಬ್ಬಂದಿಯು ಪರಪ್ಪನ ಅಗ್ರಹಾರ ಕಾರಾಗೃಹದ ಮುಖ್ಯದ್ವಾರದ ಬಳಿ ತಪಾಸಣೆ ಮಾಡುತ್ತಿದ್ದಾಗ ಜೈಲ್ ವಾರ್ಡನ್ ರಾಹುಲ್ ಪಾಟೀಲ್ ಕರ್ತವ್ಯಕ್ಕೆ ಬಂದಿದ್ದಾರೆ. ಆ ಸಂದರ್ಭದಲ್ಲಿ ಅವರನ್ನು ತಪಾಸಣೆ ಮಾಡಿದಾಗ ಅವರು ಒಳ ಉಡುಪಿನಲ್ಲಿ ಎರಡು ಸಿಗರೇಟ್ ಪ್ಯಾಕ್ಗಳನ್ನು ಇಟ್ಟುಕೊಂಡಿರುವುದು ಗೊತ್ತಾಗಿದೆ. ಈ ಬಗ್ಗೆ ಜೈಲಿನ ಅಧೀಕ್ಷರ ಪರಮೇಶ್ ಎಂಬುವರ ಗಮನಕ್ಕೆ ತರಲಾಗಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ಘಟನೆ ಆಧಾರದ ಮೇಲೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಜೈಲ್ ವಾರ್ಡನ್ ರಾಹುಲ್ ಪಾಟೀಲ್ನನ್ನು ಬಂಧಿಸಿ ಅವರ ಬಳಿ ಇದ್ದ ಸಿಗರೇಟ್ ಪ್ಯಾಕ್ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ಚಳಿಗಾಲದ ಅಧಿವೇಶನದಲ್ಲಿ ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯ : ಕಾರವಾರದಲ್ಲಿ ಅರಣ್ಯವಾಸಿಗಳ ಬೃಹತ್ ಸಮಾವೇಶ
ಕಾರವಾರ, ಡಿ.6: ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಅರಣ್ಯವಾಸಿಗಳ ಭೂಮಿ ಹಕ್ಕಿಗೆ ಸಂಬಂಧಿಸಿದ ಪರಿಹಾರಕ್ಕೆ ಆಗ್ರಹಿಸಿ ಶನಿವಾರ ಕಾರವಾರದಲ್ಲಿ ಅರಣ್ಯವಾಸಿಗಳ ಬೃಹತ್ ಸಮಾವೇಶವನ್ನು ಹಮ್ಮಿಕೊಳ್ಳಲಾಗಿತ್ತು. ಉತ್ತರ ಕನ್ನಡ ಜಿಲ್ಲೆಯ ಮೂಲೆ ಮೂಲೆಯಿಂದಲೂ ಆಗಮಿಸಿ, ಭೂಮಿ ಹಕ್ಕಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರ ಒದಗಿಸುವಂತೆ ಚಳಿಗಾಲದ ಅಧಿವೇಶನದಲ್ಲಿ ಚರ್ಚಿಸಬೇಕೆಂದು ಸಮಾವೇಶದಲ್ಲಿ ಪಾಲ್ಗೊಂಡ ಅರಣ್ಯವಾಸಿಗಳು ಸರಕಾರವನ್ನು ಒತ್ತಾಯಿಸಿದರು. ಸಮಾವೇಶಕ್ಕೂ ಮುನ್ನ ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಅವರ ನೇತೃತ್ವದಲ್ಲಿ ಅರಣ್ಯವಾಸಿಗಳ ಕಾನೂನು ಜಾಗೃತ ಜಾಥಾವು ನಗರದ ಪ್ರಮುಖ ಬೀದಿಯಲ್ಲಿ ಸಂಚರಿಸಿತು. ನಗರದ ರವೀಂದ್ರನಾಥ ಟ್ಯಾಗೋರ್ ಬಳಿಯಿಂದ ಸಾಗಿದ ಜಾಥಾದಲ್ಲಿ ಘೋಷಣೆ, ಬೇಡಿಕೆ ಮತ್ತು ಹಕ್ಕೊತ್ತಾಯದ ಧ್ವನಿ ಮೊಳಗಿದವು. ಜಾತಿ, ಮತ, ಪಂಥ, ಬೇಧ ಭಾವವಿಲ್ಲದೆ ಒಗ್ಗಟ್ಟಾಗಿ ಸಹಸ್ರಾರರು ಸಂಖ್ಯೆಯಲ್ಲಿ ಅರಣ್ಯವಾಸಿಗಳು ಭಾಗವಹಿಸಿದ್ದರು. ಜಾಥಾವು ಮಾಲಾದೇವಿ ಕ್ರೀಡಾಂಗಣದಲ್ಲಿ ಸಮಾರೋಪಗೊಂಡಿತು. ವಿವಿಧ ಅರಣ್ಯವಾಸಿಗಳ ಕಲಾ ತಂಡವು ಐತಿಹಾಸಿಕ ಅರಣ್ಯವಾಸಿಗಳ ಸಮಾವೇಶಕ್ಕೆ ಮೆರುಗು ತಂದವು. ಮೆರವಣಿಯಲ್ಲಿ ಹೋರಾಟಗಾರರ ವೇದಿಕೆಯ ಉತ್ತರ ಕನ್ನಡ ಜಿಲ್ಲಾ ಸಂಚಾಲಕರಾದ ಇಬ್ರಾಹೀಂ ಗೌಡಳ್ಳಿ, ರಾಜೇಶ್ ಮಿತ್ರ ನಾಯ್ಕ, ಮಾಬ್ಲೇಶ್ವರ ನಾಯ್ಕ ಬೇಡ್ಕಣಿ, ಕುಮಟಾ ಅಧ್ಯಕ್ಷ ಮಂಜುನಾಥ ಮರಾಠಿ ನಾಗೂರು, ಮಹೇಶ ನಾಯ್ಕ ಕಾನಕ್ಕಿ, ಮುಂಡಗೊಡ ಅಧ್ಯಕ್ಷ ಶಿವಾನಂದ ಜೋಗಿ ಮುಂಡಗೋಡ, ಅಂಕೋಲಾ ಅಧ್ಯಕ್ಷ ರಮಾನಂದ ನಾಯಕ ಅಚವೆ, ಯಲ್ಲಾಪುರ ಅಧ್ಯಕ್ಷ ಭೀಮಸಿ ವಾಲ್ಮೀಕಿ, ಜಗದೀಶ್ ಶಿರಳಗಿ, ಪಾಂಡುರಂಗ ನಾಯ್ಕ ಬೆಳಕೆ, ಚಂದ್ರ ಪೂಜಾರಿ ಮಂಚಿಕೇರಿ, ದಿವಾಕರ್ ಮರಾಠಿ ಆನಗೋಡ, ದೇವರಾಜ ಗೊಂಡ, ರಫೀಕ್ ಗಫಾರ್, ಪ್ರಭಾಕರ ವೇಳಿಪ್ ಜೋಯಿಡಾ, ವಿಜು ಪೀಟರ್ ಪಿಲ್ಲೆ, ಶಾಂತರಾಮ ನಾಯ್ಕ ಅಂಕೋಲಾ, ರಾಮು ಕಲಕರಡಿ, ಹರಿಹರ ನಾಯ್ಕ ಓಂಕಾರ, ಸೀತಾರಾಮ ಗೌಡ, ಅರವಿಂದ ಗೌಡ, ಉದಯ ಗುನಗ ಅಚವೆ, ಶಂಕರ್ ಕೊಡಿಯಾ, ಮಾದೇವ ನಾಯಕ ಮತ್ತಿತರರು ಹಾಜರಿದ್ದರು. ಸಹಸ್ರಾರು ಸಂಖ್ಯೆಯಲ್ಲಿ ಆಕ್ಷೇಪ ಸಲ್ಲಿಕೆ ಅರಣ್ಯ ಹಕ್ಕು ಕಾಯ್ದೆ, ನ್ಯಾಯಾಲಯದ ತೀರ್ಪು ಮತ್ತು ಕೇಂದ್ರ ಸರಕಾರದ ಆದೇಶಕ್ಕೆ ವ್ಯತಿರಿಕ್ತವಾಗಿ ಉತ್ತರ ಕನ್ನಡ ಜಿಲ್ಲೆಯಲ್ಲಿ 73 ಸಾವಿರ ಅರ್ಜಿಗಳು ತಿರಸ್ಕರಿಸಿರುವ ಹಿನ್ನೆಲೆಯಲ್ಲಿ ಶನಿವಾರ ಜಿಲ್ಲಾದ್ಯಂತ ಆಗಮಿಸಿದ ಸಹಸ್ರಾರು ಅರಣ್ಯವಾಸಿಗಳು, ಜಿಲ್ಲಾ ಅರಣ್ಯ ಭೂಮಿ ಹಕ್ಕು ಅಧ್ಯಕ್ಷರು ಮತ್ತು ಜಿಲ್ಲಾಧಿಕಾರಿಗೆ ವೈಯಕ್ತಿಕವಾಗಿ ಆಕ್ಷೇಪ ಪತ್ರ ಸಲ್ಲಿಸಿದರು.
ಕಲಬುರಗಿ ಜಿಮ್ಸ್ ಆಸ್ಪತ್ರೆಯಲ್ಲಿ ಅಂಬೇಡ್ಕರ್ ಅವರ 69ನೇ ಮಹಾಪರಿನಿರ್ವಾಣ ಕಾರ್ಯಕ್ರಮ
ಕಲಬುರಗಿ: ಭಾರತರತ್ನ ಡಾಬಿಆರ್ ಅಂಬೇಡ್ಕರ್ ಅವರ 69ನೇ ಮಹಾ ಪರಿನಿರ್ವಾಣ ದಿನವನ್ನು ಕಲಬುರಗಿ ಜಿಮ್ಸ್ ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಆಯೋಜಿಸಲಾಯಿತು. ಡಾ.ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಶ್ರದ್ಧಾಭಕ್ತಿಯಿಂದ ಗೌರವ ಪುಷ್ಪ ನಮನ ಸಲ್ಲಿಸಲಾಯಿತು. ಈ ವೇಳೆ ಸ್ಥಳೀಯ ವೈದ್ಯಾಧಿಕಾರಿಗಳಾದ ಡಾ. ನಾಗರಾಜ ಪಾಟೀಲ್, ಡಾ.ಓಂ ಪ್ರಕಾಶ್ ಅಂಬುರೆ, ಡಾ.ವಿನೋದ್ ಕುಮಾರ್, ಡಾ.ರಘುನಾಥ್ ಕುಲಕರ್ಣಿ, ಡಾ. ಶಾಲಾನಿ ಸಜ್ಜನಶೆಟ್ಟಿ, ಡಾ. ಪ್ರತಿಭಾ ಹಾಗೂ ಸಹಾಯಕ ಆಡಳಿತ ಅಧಿಕಾರಿಗಳಾದ ವೀರಣ್ಣ ಶಿವಪುರ, ಮಲ್ಲಿಕಾರ್ಜುನ ಸಂಗೋಳಾಗಿ, ಹಿರಿಯ ರೆಡಿಯಾಲೋಜಿ ಇಮ್ಯಾಜಿಂಗ್ ಅಧಿಕಾರಿ ಮಲ್ಲರೆಡ್ಡೆಪ್ಪ ಬಡಿಗೇರ, ಫಿಜಿಯೋಥೆರಪಿಸ್ಟ್ ಜೈಶೀಲನಾಥ್, ಬಾಳಪ್ಪ, ಫಕೀರಪ್ಪ ದೊಡ್ಡಮನಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕೆಸೆಟ್: ಡಿ.10ರಿಂದ 12ರ ವರೆಗೆ ದಾಖಲೆ ಪರಿಶೀಲನೆ
ಬೆಂಗಳೂರು : 2023, 2024 ಮತ್ತು 2025ನೆ ಸಾಲಿನ ಕೆ-ಸೆಟ್ ಪರೀಕ್ಷೆಯಲ್ಲಿ ಅರ್ಹತೆ ಪಡೆದು, ಇದುವರೆಗೂ ಮೂಲ ದಾಖಲೆಗಳ ಪರಿಶೀಲನೆಗೆ ಗೈರಾದವರ ಸಲುವಾಗಿ ಡಿ.10ರಿಂದ 12ರವರೆಗೆ ದಾಖಲೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ರಾಜ್ಯ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ತಿಳಿಸಿದ್ದಾರೆ. ಅರ್ಹ ಅಭ್ಯರ್ಥಿಗಳು, ಮೂಲ ದಾಖಲೆಗಳ ಸಮೇತ ಬಂದು ಪರಿಶೀಲನೆ ಮಾಡಿಸಿಕೊಳ್ಳಬೇಕು. ಎಲ್ಲವೂ ಸರಿ ಇದ್ದರೆ ಸ್ಥಳದಲ್ಲೇ ಪ್ರಮಾಣ ಪತ್ರ ನೀಡಲಾಗುತ್ತದೆ. ಡಿ.10ರಂದು ಬೆಳಗಿನ ವೇಳೆಯಲ್ಲಿ 2023ನೆ ಸಾಲಿನ ಅಭ್ಯರ್ಥಿಗಳು ಹಾಗೂ ಅದೇ ದಿನ ಮಧ್ಯಾಹ್ನದ ನಂತರ 2024ನೇ ಸಾಲಿನ ಅಭ್ಯರ್ಥಿಗಳ ದಾಖಲೆ ಪರಿಶೀಲನೆ ಮಾಡಲಾಗುತ್ತದೆ ಎಂದು ಅವರು ಹೇಳಿದ್ದಾರೆ. ಡಿ.11 ಮತ್ತು 12ರಂದು 2025ನೆ ಸಾಲಿನ ಅಭ್ಯರ್ಥಿಗಳ ದಾಖಲೆ ಪರಿಶೀಲನೆ ಇರುತ್ತದೆ. ಹೆಚ್ಚಿನ ವಿವರಗಳಿಗೆ ಕೆಇಎ ವೆಬ್ಸೈಟ್ ನೋಡಬೇಕು ಎಂದು ಪ್ರಸನ್ನ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಯುಜಿ ವೈದ್ಯಕೀಯ : 3ನೇ ಸುತ್ತಿನ ಪರಿಷ್ಕೃತ ತಾತ್ಕಾಲಿಕ ಫಲಿತಾಂಶ ಪ್ರಕಟ
ಬೆಂಗಳೂರು : ಹೈಕೋರ್ಟ್ ಆದೇಶದ ಪ್ರಕಾರ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್ನ 3ನೆ ಸುತ್ತಿನ ಸೀಟು ಹಂಚಿಕೆಯ ಪರಿಷ್ಕೃತ ತಾತ್ಕಾಲಿಕ ಫಲಿತಾಂಶವನ್ನು ರಾಜ್ಯ ಪರೀಕ್ಷಾ ಪ್ರಾಧಿಕಾರ (ಕೆಇಎ) ಶನಿವಾರ ಪ್ರಕಟಿಸಿದೆ. ಅ.24ರಂದು ಕೆಇಎ ಪ್ರಕಟಿಸಿದ್ದ ತಾತ್ಕಾಲಿಕ ಫಲಿತಾಂಶವನ್ನು ಹೈಕೋರ್ಟ್ ಆದೇಶದಂತೆ ರದ್ದುಪಡಿಸಲಾಗಿದೆ. ಪರಿಷ್ಕೃತ ತಾತ್ಕಾಲಿಕ ಫಲಿತಾಂಶಕ್ಕೆ ಏನಾದರು ಆಕ್ಷೇಪಣೆಗಳು ಇದ್ದಲ್ಲಿ ಡಿ.7ರಂದು ಮಧ್ಯಾಹ್ನ 3ಗಂಟೆಯೊಳಗೆ ಇ-ಮೇಲ್(keauthority-ka@nic.in) ಮೂಲಕ ಕಳುಹಿಸಬೇಕು ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ತಿಳಿಸಿದ್ದಾರೆ. ಡಿ.8ರಂದು ಬೆಳಗ್ಗೆ 11ರ ನಂತರ ಅಂತಿಮ ಫಲಿತಾಂಶ ಪ್ರಕಟಿಸಲಾಗುತ್ತದೆ. ಸೀಟು ಹಂಚಿಕೆಯಾದವರು ಡಿ.10ರೊಳಗೆ ಶುಲ್ಕ ಪಾವತಿಸಬೇಕು(ಈಗಾಗಲೇ ಪಾವತಿಸಿರುವ ಶುಲ್ಕವನ್ನು ಕಡಿತಗೊಳಿಸುವ ಮೂಲಕ). ಸೀಟು ಖಾತರಿ ಚೀಟಿ ಡೌನ್ಲೋಡ್ ಮಾಡಿಕೊಂಡು, ಡಿ.11ರೊಳಗೆ ಕಾಲೇಜುಗಳಲ್ಲಿ ವರದಿ ಮಾಡಿಕೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ. ಅಭ್ಯರ್ಥಿಗಳು ಈಗಾಗಲೇ ದಾಖಲಿಸಿರುವ ಇಚ್ಚೆ/ಆಯ್ಕೆಗಳನ್ನು ಪರಿಗಣಿಸಿ ಸೀಟು ಹಂಚಿಕೆ ಮಾಡಲಾಗಿದೆ. ಈ ಸುತ್ತಿನಲ್ಲಿ ಸೀಟು ಹಂಚಿಕೆಯಾದವರು ಕಡ್ಡಾಯವಾಗಿ ಸಂಬಂಧಪಟ್ಟ ಕಾಲೇಜಿಗಳಲ್ಲಿ ವರದಿ ಮಾಡಿಕೊಳ್ಳಬೇಕಾಗುತ್ತದೆ ಎಂದು ಪ್ರಸನ್ನ ಹೇಳಿದ್ದಾರೆ. 3ನೆ ಸುತ್ತಿಗೆ ಹೊಸದಾಗಿ ಸೇರ್ಪಡೆಯಾದ 9 ಕಾಲೇಜುಗಳ 443 ಸೀಟುಗಳಿಗೆ ಎಲ್ಲ ಅಭ್ಯರ್ಥಿಗಳನ್ನು ಹಂಚಿಕೆಗೆ ಪರಿಗಣಿಸಲಾಗಿದೆ. 443 ಸೀಟುಗಳನ್ನು ಪಡೆದ ಅಭ್ಯರ್ಥಿಗಳಲ್ಲಿ ಒಟ್ಟು 301 ಅಭ್ಯರ್ಥಿಗಳು, ಈಗಾಗಲೆ ಎಂಬಿಬಿಎಸ್ ಸೀಟನ್ನು ಮೊದಲ ಮತ್ತು ಎರಡನೆ ಸುತ್ತಿನಲ್ಲಿ ಪಡೆದವರಾಗಿದ್ದು, ಅವರಿಂದ ತೆರವಾಗುವ 301 ಸೀಟುಗಳಿಗೆ ಎಲ್ಲ ಅಭ್ಯರ್ಥಿಗಳನ್ನು ಹಂಚಿಕೆಗೆ ಪರಿಗಣಿಸಲಾಗುತ್ತದೆ ಎಂದು ಅವರು ವಿವರಿಸಿದ್ದಾರೆ. ಮೂರನೆ ಸುತ್ತಿನ ಆರಂಭದಲ್ಲಿ ಇದ್ದ ಸೀಟು ಹಾಗೂ ಡಿ.5ರವರೆಗೆ ವಿವಿಧ ಕಾರಣಗಳಿಂದ ರದ್ದುಪಡಿಸಿಕೊಂಡಿರುವ ಸೀಟು ಹಾಗೂ ಮೇಲಿನ ಕ್ರಮದ ಸೀಟು ಹಂಚಿಕೆ ನಂತರ ಉಳಿಕೆಯಾಗುವ ಸೀಟುಗಳನ್ನು ನಿಯಮಾನುಸಾರ ಸೀಟು ಹಂಚಿಕೆಗೆ ಪರಿಗಣಿಸಲಾಗುತ್ತದೆ ಎಂದು ಪ್ರಸನ್ನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಭಾರತ ಇರುವವರೆಗೂ ಡಾ.ಅಂಬೇಡ್ಕರ್ ಅವರ ಹೆಸರು ಅಜರಾಮರ: ಶಾಸಕ ಎಂವೈ ಪಾಟೀಲ್
ಕಲಬುರಗಿ: ಸಂವಿಧಾನ ರಚನೆ ಮಾಡಲು ಡಾ.ಬಿ.ಆರ್ ಅಂಬೇಡ್ಕರ್ ಅವರು ಪಟ್ಟ ಶ್ರಮ ಅಸಾಧಾರಣವಾಗಿದೆ. ಭಾರತ ಇರುವವರೆಗೆ ಬಾಬಾಸಾಹೇಬರ ಹೆಸರು ಅಜರಾಮರವಾಗಿರುತ್ತದೆ ಎಂದು ಅಫಜಲಪುರ ಶಾಸಕ ಎಂ.ವೈ ಪಾಟೀಲ್ ಹೇಳಿದ್ದಾರೆ. ಅಫಜಲಪುರ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿರುವ ಅಂಬೇಡ್ಕರ್ ಉದ್ಯಾನವನದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ 69ನೇ ಮಹಾಪರಿನಿರ್ವಾಣ ದಿನದ ನಿಮಿತ್ತ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಶಾಸಕ ಎಂ.ವೈ ಪಾಟೀಲ್, ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹಲವು ದೇಶಗಳನ್ನು ಸುತ್ತಿ ಆಯಾ ದೇಶದ ಸಂವಿಧಾನಗಳನ್ನು ಹಗಲು ರಾತ್ರಿಯೆನ್ನದೆ ಅಧ್ಯಯನ ಮಾಡಿ ತಮ್ಮ ಅನಾರೋಗ್ಯದ ನಡುವೆಯೂ ಮಹಾನ್ ಸಂವಿಧಾನ ಕೊಟ್ಟ ದೇಶಭಕ್ತ. ಇತ್ತೀಚೆಗೆ ಕೆಲವು ವ್ಯಕ್ತಿಗಳು ತಾವು ಅಧಿಕಾರಕ್ಕೆ ಬಂದಿರುವುದೇ ಸಂವಿಧಾನವನ್ನು ಬದಲಾಯಿಸುವುದಕ್ಕಾಗಿ ಎಂದು ಹೇಳುತ್ತಿದ್ದಾರೆ. ಇಂಥ ಮಾತುಗಳು ಅಂಬೇಡ್ಕರರಿಗೆ ಬಗೆದ ದ್ರೋಹವಾಗಿದೆ ಎಂದು ಹೇಳಿದರು. ಮುಖ್ಯ ಅತಿಥಿಗಳಾಗಿದ್ದ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ನಿತಿನ್ ಗುತ್ತೇದಾರ್ ಮಾತನಾಡಿ, ಅಂಬೇಡ್ಕರ್ ಅವರ ದಿವ್ಯ ಬದುಕನ್ನು ನೆನಪಿಸುವ ಸ್ಮಾರಕ ಸದರಿ ಉದ್ಯಾನವನದಲ್ಲಿ ನಿರ್ಮಾಣವಾಗಬೇಕು. ಈ ಬಗ್ಗೆ ಶಾಸಕರು ಮುತುವರ್ಜಿ ವಹಿಸಿ ಅಂಬೇಡ್ಕರ್ ಅವರ ಸ್ಮರಣೆಯನ್ನು ಶಾಶ್ವತವಾಗಿ ಇರುವಂತೆ ಮಾಡಬೇಕು ಎಂದು ಒತ್ತಾಯಿಸಿದರು. ಅಫಜಲ್ಪುರ ತಾಲೂಕು ದಂಡಾಧಿಕಾರಿಗಳಾದ ಸಂಜೀವ್ ಕುಮಾರ್ ದಾಸರ್ ಮಾತನಾಡಿ, ಬಾಬಾ ಸಾಹೇಬ್ ಅಂಬೇಡ್ಕರ್ ಅವರು ತಮ್ಮ ಉಸಿರಿರುವ ತನಕ ನಿರಂತರ ಅಧ್ಯಯನದಲ್ಲಿ ತೊಡಗಿದ್ದರು. ಇಂಥ ಜ್ಞಾನ ಸೂರ್ಯ ನನ್ನು ಪಡೆದ ನಾವೆಲ್ಲರೂ ಧನ್ಯರು ಎಂದು ಹೇಳಿದರು. ಅಫಜಲಪುರ ಪಟ್ಟಣದ ವಿವಿಧ ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಮುಖಂಡರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ವೀರಣ್ಣ, ಅಶೋಕ್ ನಾಯಕ, ಮಹಾನಾಯಕ ಅಂಬೇಡ್ಕರ್ ಸಂಘದ ಜಿಲ್ಲಾ ಅಧ್ಯಕ್ಷ ನಾಗೇಶ ಕೊಳ್ಳಿ, ತಾಲೂಕಿನ ದಲಿತ ಮುಖಂಡ ಭೀಮರಾಯ ಗೌರ್, ದಲಿತ ಸಂಘರ್ಷ ಸಮಿತಿಯ ಮುಖಂಡ ಮಹಾಂತೇಶ್ ಬಳಗುಂಡಿ , ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಮಳೆಂದ್ರ ಡಾಂಗೆ, ತಾಲೂಕು ಕಾಂಗ್ರೆಸ್ ಕಮಿಟಿ ಅಧ್ಯಕ್ಷ ರಮೇಶ್ ಪೂಜಾರಿ, ಆಶಾ ಕಿರಣ ಸ್ವಯಂ ಸೇವಾ ಸಮಿತಿಯ ಅಧ್ಯಕ್ಷೆ ಪ್ರಭಾವತಿ ಮೇತ್ರಿ, ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಸವರಾಜ್ ಚಂದಕೋಟೆ, ಪಂಚ ಗ್ಯಾರಂಟಿಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಪ್ರಕಾಶ್ ಜಮಾದಾರ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಸಿದ್ಧಾರ್ಥ ಬಸರಿಗಿಡ, ಪುರಸಭೆ ಮುಖ್ಯ ಅಧಿಕಾರಿ ಫಕ್ರುದ್ದೀನ್, ಅರವಿಂದ ದೊಡ್ಡಮನಿ, ರಾಜು ಬಬಲಾದ, ಸಂತೋಷ ಚಲವಾದಿ, ಪ್ರಕಾಶ್ ಬನ್ನಟ್ಟಿ ಮತ್ತು ಧಾನು ಪತಾಟೆ ರಾಜು ಅರೆಕರ್ ಉಪಸ್ಥಿತರಿದ್ದರು. ರವಿ ಗೌರ ಕಾರ್ಯಕ್ರಮ ನಿರೂಪಣೆ ಮಾಡಿದರು. ಇದಕ್ಕೂ ಮೊದಲು ಶಾಸಕರಾದ ಎಂ.ವೈ. ಪಾಟೀಲ್ ಮತ್ತು ಇತರ ಅಂಬೇಡ್ಕರ್ ಅನುಯಾಯಿಗಳು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮೂರ್ತಿಗೆ ಪುಷ್ಪ ನಮನ ಸಲ್ಲಿಸಿದರು.
ಬೈಂದೂರು | ಡಿಸಿಗೆ ಉತ್ಸವದ ಬಗೆಗಿನ ಆಸಕ್ತಿ ರೈತರ ಸಂಕಷ್ಟದ ಬಗ್ಗೆ ಇಲ್ಲ: ರೈತ ಸಂಘ ಆಕ್ರೋಶ
ಬೈಂದೂರು, ಡಿ.6: ಕಳೆದ 78 ದಿನಗಳಿಂದ ನ್ಯಾಯಕ್ಕಾಗಿ ನೂರಾರು ರೈತರು ತಾಲೂಕು ಆಡಳಿತ ಸೌಧದ ಎದುರು ಅನಿಧಿಷ್ಟಾವಧಿ ಧರಣಿ ನಡೆಸುತ್ತಿದ್ದು ಸಾವಿರಾರು ರೈತರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಹತ್ತಾರು ಬಾರಿ ಜಿಲ್ಲಾಧಿಕಾರಿ ಕಛೇರಿಗೆ ತೆರಳಿದರು ಕೂಡ, ಕನಿಷ್ಟ ಪಕ್ಷ ಕುಳಿತುಕೊಂಡು ಮಾತನಾಡಿಸಿದ ಜಿಲ್ಲಾಧಿಕಾರಿಗಳು ಬೈಂದೂರಿಗೆ ಬಂದಾಗಲೂ ರೈತರ ಬಳಿ ಬಂದಿಲ್ಲ ಎಂದು ಬೈಂದೂರು ರೈತ ಸಂಘ ಆಕ್ರೋಶ ವ್ಯಕ್ತಪಡಿಸಿದೆ. ಈವರೆಗೆ ಒಂದು ಅಧಿಕಾರಿಗಳ ನಿಯೋಗ ರಚಿಸಿ ರೈತರ ಸಮಸ್ಯೆ ಆಲಿಸದ ಜಿಲ್ಲಾಧಿಕಾರಿಗಳು ಬೈಂದೂರು ಉತ್ಸವದ ಬಗ್ಗೆ ಮುತುವರ್ಜಿ ವಹಿಸಿ ಎಲ್ಲಾ ಅಧಿಕಾರಿಗಳ ಸಭೆ ನಡೆಸಿ ರೈತರನ್ನು ನಿರ್ಲಕ್ಷಿಸಿದ್ದಾರೆ. ಜಿಲ್ಲಾಧಿಕಾರಿಗಳ ಈ ನಡೆ ಸರಿಯಲ್ಲ ಎಂದು ಬೈಂದೂರು ರೈತ ಸಂಘದ ಅಧ್ಯಕ್ಚ ದೀಪಕ್ ಕುಮಾರ್ ಶೆಟ್ಟಿ ಹೇಳಿಕೆಯಲ್ಲಿ ಟೀಕಿಸಿದ್ದಾರೆ. ರೈತರ ಬೇಡಿಕೆ ಶೀಘ್ರ ಈಡೇರಿಸಿ ಸಂಪುಟ ಸಭೆಯಲ್ಲಿಡಲು ಸ್ವತಃ ಸಚಿವರೇ ಸೂಚಿಸಿದ್ದಾರೆ. ಅದರೆ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ದಿನಕ್ಕೊಂದು ಸಬೂಬು ನೀಡಿ ಸಮಯ ಕಳೆಯುತ್ತಿದ್ದಾರೆ. ಹಾಲಿ ಶಾಸಕರು ಮಾಜಿ ಶಾಸಕರು ಸಂಸದರು ಮಂತ್ರಿಗಳು ಎಲ್ಲರೂ ಕೂಡ ಪಕ್ಷಾತೀತವಾಗಿ ಇದಕ್ಕೆ ಒಪ್ಪಿಗೆ ನೀಡಿದ್ದಾರೆ. ಹಾಗಿದ್ದರೆ ಯಾವ ಅಡ್ಡಿಯಿಂದ ವಿಳಂಬವಾಗುತ್ತದೆ ಎಂಬುದನ್ನು ತಿಳಿಸಬೇಕು. ಬೈಂದೂರು ಕುಂದಾಪುರ ತಾಲೂಕಿನಲ್ಲಿ ಇಲಾಖೆ ಹೆಸರಲ್ಲಿ ಮಂಜೂರಾದ ಸಾವಿರಾರು ಲೋಡ್ ಮರಳು ಎಲ್ಲಿಗೆ ಹೋಗಿದೆ. ಮರಳು ದಂಧೆಗೆ ಯಾವ ಕಾನೂನು ನಿಯಮ ಪಾಲನೆ ಇಲ್ಲ. ನಮ್ಮ ರೈತರ ಬೇಡಿಕೆಗೆ ನಿಯಮ ಬೋಧನೆ ಮಾಡುತ್ತಾರೆ. ಮರಳು ದಂಧಗೆ ಹೊಂದಾಣಿಕೆ ನಡೆಯುತ್ತದೆ. ಅಲ್ಲಿ ಯಾವ ಕಾನೂನು ತೊಡಕುಗಳಿಲ್ಲ ಇದು ಜಿಲ್ಲಾಡಳಿತದ ರೈತ ವಿರೋಧಿ ನಡೆಯಾಗಿದೆ. ಹೀಗಾಗಿ ರೈತ ಸಂಘ ಸೋಮವಾರದಿಂದ ಗಣಿ ಇಲಾಖೆಗೆ ಮುತ್ತಿಗೆ ಹಾಕುವ ಸಿದ್ದತೆ ನಡೆಸಿದ್ದೇವೆ ಎಂದು ಅವರು ಹೇಳಿಕೆಯಲ್ಲಿ ಎಚ್ಚರಿಕೆ ನೀಡಿದರು.
ಹೊಸದಿಲ್ಲಿ: ಸುಪ್ರೀಂಕೋರ್ಟ್ ಈ ತಿಂಗಳ 2ರಂದು ನೀಡಿದ ತೀರ್ಪಿನಲ್ಲಿ ರೋಹಿಂಗ್ಯಾ ನಿರಾಶ್ರಿತರ ವಿರುದ್ಧ ವ್ಯಕ್ತಪಡಿಸಿದ ಅಭಿಪ್ರಾಯಗಳಿಗೆ ನಿವೃತ್ತ ನ್ಯಾಯಮೂರ್ತಿಗಳು, ವಕೀಲರು ಮತ್ತು ನ್ಯಾಯಾಂಗ ಹೊಣೆಗಾರಿಕೆ ಮತ್ತು ಸುಧಾರಣಾ ಅಭಿಯಾನ (ಸಿಜೆಎಆರ್) ಕಾರ್ಯಕರ್ತರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ 100ಕ್ಕೂ ಹೆಚ್ಚು ನ್ಯಾಯಾಂಗ ತಜ್ಞರು ಮುಖ್ಯ ನ್ಯಾಯಮೂರ್ತಿಗಳಿಗೆ ಬಹಿರಂಗ ಪತ್ರ ಬರೆದಿದ್ದಾರೆ. ರೋಹಿಂಗ್ಯಾ ನಿರಾಶ್ರಿತರು ಕಸ್ಟಡಿಯಿಂದ ಕಣ್ಮರೆಯಾಗಿದ್ದಾರೆ ಎಂದು ಆಪಾದಿಸಿ ಸಲ್ಲಿಸಿದ ಅರ್ಜಿಯ ಬಗ್ಗೆ ವಿಚಾರಣೆ ನಡೆಸುವ ವೇಳೆ ಸುಪ್ರೀಂಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿತ್ತು. ಖ್ಯಾತ ಲೇಖಕಿ, ಚಿಂತಕಿ ಮತ್ತು ಮಾನವ ಹಕ್ಕುಗಳ ಹೋರಾಟಗಾರ್ತಿ ಡಾ.ರೀಟಾ ಮಚಾಂಡಾ ಎಂಬವವರು ಅರ್ಜಿ ಸಲ್ಲಿಸಿದ್ದರು. ಸುಪ್ರೀಂಕೋರ್ಟ್ ಪೀಠ ವ್ಯಕ್ತಪಡಿಸಿದ ಅಭಿಪ್ರಾಯಗಳು ಸಂವಿಧಾನಾತ್ಮಕ ಮೌಲ್ಯಗಳಿಗೆ ವಿರುದ್ಧವಾದದ್ದು. ಯಾವ ಸಂವಿಧಾನ, ನಮ್ಮ ಕಾನೂನುಗಳು ಮತ್ತು ಅಂತರರಾಷ್ಟ್ರೀಯ ಕಾನೂನುಗಳು ಯಾವ ನಿರಾಶ್ರಿತರ ಸಮಾನ ಮಾನವೀಯತೆ ಮತ್ತು ಸಮಾನ ಮಾನವಹಕ್ಕುಗಳನ್ನು ರಕ್ಷಿಸಿದೆಯೋ ಅದಕ್ಕೆ ರೋಹಿಂಗ್ಯಾ ನಿರಾಶ್ರಿತರನ್ನು ಅಮಾನವೀಯವಾಗಿಸುವ ಮೂಲಕ ಧಕ್ಕೆಯಾಗಿದೆ. ಎಲ್ಲ ಪ್ರಜೆಗಳು ಸಮಾನತೆ, ಮಾನವೀಯ ಘನತೆ ಮತ್ತು ನ್ಯಾಯದ ನೈತಿಕ ತಳಹದಿಗೆ ಬದ್ಧರಾಗಿರಬೇಕು. ಇತ್ತೀಚಿನ ವಿಚಾರಣೆ ವೇಳೆ ವ್ಯಕ್ತಪಡಿಸಿದ ಅಭಿಪ್ರಾಯಗಳಿಂದ ನಮಗೆ ತೀವ್ರ ಆಘಾತವಾಗಿದೆ ಎಂದು ಗಣ್ಯರು ವಿವರಿಸಿದ್ದಾರೆ. ಅದರಲ್ಲೂ ಮುಖ್ಯವಾಗಿ, ರೋಹಿಂಗ್ಯಾ ಸಮುದಾಯದವರಿಗೆ ನಿರಾಶ್ರಿತರು ಎಂಬ ಸ್ಥಾನಮಾನ ನೀಡಿರುವುದನ್ನೇ ಪ್ರಶ್ನಿಸಲಾಗಿದ್ದು, ಅವರನ್ನು ಭಾರತಕ್ಕೆ ಅಕ್ರಮವಾಗಿ ನುಸುಳಿದವರಿಗೆ ಸಮಾನವಾಗಿ ಬಿಂಬಿಸಲಾಗಿದೆ. ಅಕ್ರಮವಾಗಿ ಪ್ರವೇಶಿಸಲು ಸುರಂಗ ಕೊರೆದಿದ್ದಾರೆ ಎಂಬ ಉಲ್ಲೇಖವನ್ನೂ ಮಾಡಲಾಗಿದೆ. ಹೀಗೆ ಪ್ರವೇಶಿಸಿದವರಿಗೆ, ದೇಶದ ಆಂತರಿಕ ಬಡತನದ ಕಾರಣದಿಂದ ಆಹಾರ, ಆಸರೆ ಮತ್ತು ಶಿಕ್ಷಣ ನೀಡಿರುವುದನ್ನು ಪ್ರಶ್ನಿಲಾಗಿದ್ದು, ಇದು ನಿರಾಶ್ರಿತರಿಗೆ ಸಂವಿಧಾನ ಖಾತರಿಪಡಿಸಿದ ಸೌಲಭ್ಯಗಳ ನಿರಾಕರಣೆಯಾಗಿದೆ; ಅವರನ್ನು ತೃತೀಯ ದರ್ಜೆ ಪ್ರಜೆಗಳನ್ನಾಗಿ ಭಾರತದಲ್ಲಿ ನಡೆಸಿಕೊಳ್ಳಲಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿಗಳಾದ ಎ.ಪಿ.ಶಾ, ಕೆ.ಚಂದ್ರು, ಅಂಜನಾ ಪ್ರಕಾಶ್, ರಾಷ್ಟ್ರೀಯ ನ್ಯಾಯಾಂಗ ಅಕಾಡೆಮಿ ಮಾಜಿ ನಿರ್ದೇಸಕ ಪ್ರೊ.ಮೋಹನ್ ಗೋಪಾಲ್, ಸುಪ್ರೀಂಕೋಟ ಹಿರಿಯ ವಕೀಲ ಡಾ.ರಾಜೀವ್ ಧವನ್, ಚಂದ್ರ ಉದಯ ಸಿಂಗ್, ಕೋಲಿನ ಗೋನ್ಸಾಲ್ವೆನ್ಸ್, ಕಾಮಿನಿ ಜೈಸ್ವಾಲ್, ಮಿಹಿರ್ ದೇಸಾಯಿ, ಗೋಪಾಲ್ ಶಂಕರ ನಾರಾಯಣ, ಗೌತಮ್ ಭಾಟಿಯಾ, ಶಾರೂಕ್ ಅಲಂ, ಪ್ರಶಾಂತ್ ಭೂಷಣ್ ಮತ್ತಿತರರು ಸಹಿ ಮಾಡಿದ್ದಾರೆ.
ಕಲಬುರಗಿ| ಹಳೆ ವೈಷಮ್ಯದಿಂದ ವ್ಯಕ್ತಿಯೋರ್ವನ ಕೊಲೆ
ಕಲಬುರಗಿ: ಹಳೆ ವೈಷಮ್ಯದಿಂದ ವ್ಯಕ್ತಿಯೋರ್ವರನ್ನು ಮಾರಕಾಸ್ತ್ರಗಳಿಂದ ಕಡಿದು ಕೊಲೆ ಮಾಡಿರುವ ಘಟನೆ ಕಮಲಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ರಾತ್ರಿ ನಡೆದಿದೆ. ಕಮಲಾಪುರ ಪಟ್ಟಣದ ನಿವಾಸಿ ಮುಹಮ್ಮದ್ ಹನೀಫ್ (65) ಕೊಲೆಯಾದವರು. ಅದೇ ಗ್ರಾಮದ ರಿಝ್ವಾನ್(25) ಎಂಬಾತ ಕೊಲೆ ಕೃತ್ಯ ನಡೆಸಿರುವುದಾಗಿ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಹಿಂದೆ ರಿಝ್ವಾನ್ ಹಾಗೂ ಮೃತ ಹನೀಫ್ ನಡುವೆ ಜಗಳವಾಗಿತ್ತು. ಇದೇ ಕಾರಣಕ್ಕೆ ಹಳೆ ವೈಷಮ್ಯ ಇಟ್ಟುಕೊಂಡು ಕಮಲಾಪುರದ ಜೇವಣಗಿ ರಸ್ತೆಯ ಕೆಇಬಿ ಕಚೇರಿ ಬಳಿ ಹನೀಫ್ ಅವರನ್ನು ರಿಝ್ವಾನ್ ಕೊಲೆ ಮಾಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು, ಸ್ಥಳೀಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತೆಂಕಮಿಜಾರು | ಅಶ್ವತ್ಥಪುರ-ಸಂಪಿಗೆ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ
ಮೂಡುಬಿದಿರೆ : 1 ಕೋ. ರೂ. ವೆಚ್ಚದಲ್ಲಿ ಅಭಿವೃದ್ಧಿಗೊಳ್ಳಲಿರುವ ತಾಲೂಕಿನ ತೆಂಕಮಿಜಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಅಶ್ವತ್ಥಪುರ-ಸಂಪಿಗೆ ಜಿಲ್ಲಾ ಮುಖ್ಯ ರಸ್ತೆಯ ಕಾಮಗಾರಿಗೆ ಶಾಸಕ ಉಮಾನಾಥ ಎ.ಕೋಟ್ಯಾನ್ ಅವರು ಗುದ್ದಲಿಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಪಂಚಾಯತ್ ಅಧ್ಯಕ್ಷೆ ಶಾಲಿನಿ ಕೆ. ಸಾಲ್ಯಾನ್, ಸದಸ್ಯರಾದ ಹರಿಪ್ರಸಾದ್ ಶೆಟ್ಟಿ, ದಿನೇಶ್ ಭಟ್, ರುಕ್ಮಿಣಿ, ಸಮಿತಾ, ನಿಶಾ, ನಮಿತಾ, ಲಕ್ಷ್ಮೀ, ಗೀತಾ, ಮಹೇಶ್, ವಿದ್ಯಾನಂದ ಶೆಟ್ಟಿ, ಬಿಜೆಪಿ ಪುತ್ತಿಗೆ ಮಹಾಶಕ್ತಿ ಕೇಂದ್ರದ ಕಾರ್ಯದರ್ಶಿ ಶ್ಯಾಮ್ ಭಟ್, ಪ್ರಮುಖರಾದ ರಾಘವೇಂದ್ರ ರಾವ್ ಮತ್ತು ಹಿರಿಯರಾದ ಅರುಣ್ ಕುಮಾರ್ ಉಪಸ್ಥಿತರಿದ್ದರು.
ವೈಝಾಗ್ ಮೈದಾನದಲ್ಲಿ ವಿರಾಟ್ ಕೊಹ್ಲಿ ಫುಲ್ ಕಾಮಿಡಿ; ಕುಲ್ದೀಪ್ ಯಾದವ್ ಜೊತೆ ಕಪಲ್ ಡ್ಯಾನ್ಸ್ ಹೇಗಿತ್ತು ನೋಡಿ!
Virat Kohli- Kuldeep Yadav Couple Dance- ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿಗೆ ಮೈದಾನದಲ್ಲಿ ಪ್ರತಿನಿತ್ಯ ಹೊಸದೇನಾದರೂ ತಮಾಷೆ ಮಾಡದೇ ಹೋದಲ್ಲಿ ಸಮಾಧಾನ ಇಲ್ಲ ಎಂದು ಕಾಣುತ್ತದೆ. ಅವರ ಅಭಿಮಾನಿಗಳು ಅವರ ಆಟದಷ್ಟೇ ಅವರು ನೀಡುವ ಮನರಂಜನೆಯನ್ನೂ ಇಷ್ಟಪಡುತ್ತಾರೆ. ಈ ಬಾರಿ ದಕ್ಷಿಣ ಆಫ್ರಿಕಾ ವಿರುದ್ಧ ಸರಣಿಯಲ್ಲೂ ಅವರ ಅನೇಕ ಹಾವಭಾವಗಳು ವೈರಲ್ ಆಗಿದ್ದವು. ಇದೀಗ ಕುಲ್ದೀಪ್ ಯಾದವ್ ಜೊತೆ ಕಪಲ್ ಡ್ಯಾನ್ಸ್ ಮಾಡಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ.
ಅಯೋಧ್ಯೆಯ ನೂತನ ಮಸೀದಿ ನಿರ್ಮಾಣ ಯೋಜನೆ 2026ರಲ್ಲಿ ಆರಂಭ ಸಾಧ್ಯತೆ: IICF
ಲಕ್ನೋ,ಡಿ.6: 1992ರಲ್ಲಿ ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಸಂಘಪರಿವಾರದ ಬೆಂಬಲಿಗರಿಂದ ಧ್ವಂಸಗೊಂಡ 33 ವರ್ಷಗಳ ಬಳಿಕ ಅಯೋಧ್ಯೆಯಿಂದ 25 ಕಿ.ಮೀ. ದೂರದ ಧನ್ನಿಪುರ ಗ್ರಾಮದಲ್ಲಿ ನೂತನ ಮಸೀದಿಯ ನಿರ್ಮಾಣ ಕಾರ್ಯ 2026ರಲ್ಲಿ ಆರಂಭಗೊಳ್ಳಲಿದೆ, ಎಂದು ಯೋಜನೆಯ ಹೊಣೆ ಹೊತ್ತಿರುವ ಇಂಡೊ-ಇಸ್ಲಾಮಿಕ್ ಸಾಂಸ್ಕೃತಿಕ ಪ್ರತಿಷ್ಠಾನ ಶನಿವಾರ ತಿಳಿಸಿದೆ. ಈ ಬಗ್ಗೆ ಟ್ರಸ್ಟ್ ನ ಚೇರ್ಮನ್ ಝಫರ್ ಫರೂಖಿ ಅವರು ಪಿಟಿಐ ಸುದ್ದಿಸಂಸ್ಥೆ ಜೊತೆ ಮಾತನಾಡುತ್ತಾ, ‘‘ ಎಲ್ಲವೂ ಅಂದುಕೊಂಡಂತೆ ನಡೆದಲ್ಲಿ ಮಸೀದಿಯ ಪರಿಷ್ಕೃತ ವಿನ್ಯಾಸ ಯೋಜನೆಗೆ ಅನುಮೋದನೆಯನ್ನು ಡಿಸೆಂಬರ್ ತಿಂಗಳ ಅಂತ್ಯದೊಳಗೆ ಸಲ್ಲಿಸುವ ಆಶಾವಾದವನ್ನು ಹೊಂದಿದ್ದೇವೆ. 2026ರ ಏಪ್ರಿಲ್ ನಲ್ಲಿ ಮಸೀದಿ ನಿರ್ಮಾಣ ಯೋಜನೆಯು ಎಪ್ರಿಲ್ 2026ರಂದು ಆರಂಭಗೊಳ್ಳಲಿದೆ ಎಂದು ಹೇಳಿದ್ದಾರೆ. ಟ್ರಸ್ಟ್ ಸಲ್ಲಿಸಿದ್ದ ಮಸೀದಿಯ ಮೊದಲ ವಿನ್ಯಾಸವನ್ನು ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರ ತಿರಸ್ಕರಿಸಿತ್ತು. ಇದಕ್ಕೂ ಮುನ್ನ ಮಸೀದಿಯ ಅತ್ಯಾಧುನಿಕ ವಿನ್ಯಾಸದ ಬಗ್ಗೆ ಸಮುದಾಯದಿಂದ ಆಕ್ಷೇಪ ವ್ಯಕ್ತವಾಗಿದ್ದರಿಂದ ಐಐಎಸ್ಎಫ್ ಅದನ್ನು ಕೈಬಿಟ್ಟಿತ್ತು. ಇದೀಗ ಸಾಂಪ್ರಾದಾಯಿಕ ವಿನ್ಯಾಸದ ಮಸೀದಿಯ ನಕ್ಷೆಯು ಸದ್ಯದಲ್ಲೇ ಸಿದ್ಧವಾಗಲಿದೆ ಎಂದವರು ಹೇಳಿದ್ದಾರೆ. ಈಗಾಗಲೇ ತುಂಬಾ ವಿಳಂಬವಾಗಿರುವ ಮಸೀದಿಯ ನಿರ್ಮಾಣ ಯೋಜನೆಗೆ ಎಡಿಎ ಅನುಮೋದನೆ ಮಹತ್ವದ್ದಾಗಿದೆ. ಆರೆ ಧನ್ನಿಪುರ ಸುತ್ತಮುತ್ತ ನಿವೇಶನದ ಕೊರತೆ ಸೇರಿದಂತೆ ಮಸೀದಿ ನಿರ್ಮಾಣಕ್ಕೆ ಸಂಬಂಧಿಸಿದ ಇತರ ಸಮಸ್ಯೆಗಳ ಬಗ್ಗೆ ಐಐಸಿಎಫ್ ಪರಿಶೀಲನೆ ನಡೆಸುತ್ತಿದೆ ಎಂದು ಫರೂಕಿ ತಿಳಿಸಿದ್ದಾರೆ.
ಕಲಬುರಗಿ ವಲಯ ಯುವಜನೋತ್ಸವ ಕಾರ್ಯಕ್ರಮ: ವಿದ್ಯಾರ್ಥಿಗಳಿಗೆ ಪ್ರಶಸ್ತಿ ವಿತರಣೆ
ಕಲಬುರಗಿ: ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಹುಬ್ಬಳ್ಳಿ, ಸಿದ್ಧಾರ್ಥ ಕಾನೂನು ಮಹಾವಿದ್ಯಾಲಯ ಕಲಬುರಗಿ (ಐಕ್ಯೂಎಸಿ) ಸಂಯುಕ್ತಾಶ್ರಯದಲ್ಲಿ ಎರಡು ದಿನಗಳ ಕಲಬುರಗಿ ವಲಯದ ಯುವಜನೋತ್ಸವನ್ನು ನಗರದ ವಿಶ್ವೇಶ್ವರಯ್ಯ ಭವನದಲ್ಲಿ ಆಚರಿಸಲಾಯಿತು. ಈ ಕಾರ್ಯಕ್ರಮಕ್ಕೆ ಏಂಟು ಕಾನೂನು ಮಹಾವಿದ್ಯಾಲಯಗಳಿಂದ ಸುಮಾರು 200ಕ್ಕೂ ಹೆಚ್ಚಿನ ಸ್ಪರ್ಧಾಳುಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಯುವ ಜನೋತ್ಸವವನ್ನು ಯಶ್ವಸ್ವಿಗೊಳಿಸಿದರು. ಶರಣಬಸವ ವಿಶ್ವವಿದ್ಯಾಲಯ ಕುಲಸಚಿವ ಡಾ. ಸಣ್ಣಬಸನಗೌಡ ಜಿ.ಡೋಳ್ಳೆಗೌಡ ಅವರು ವಿದ್ಯಾರ್ಥಿಗಳಿಗೆ ಪ್ರಶಸ್ತಿಗಳನ್ನು ವಿತರಿಸಿ ಮಾತನಾಡಿ, ವಿದ್ಯಾರ್ಥಿಗಳು ಅಧ್ಯಯನದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿ ತಮ್ಮ ವ್ಯಕ್ತಿತ್ವವನ್ನು ಸರಿಯಾದ ರೀತಿಯಲ್ಲಿ ಬೆಳೆಸಿಕೊಳ್ಳಬೇಕೆಂದು ಹೇಳಿದರು. ಸಿದ್ಧಾರ್ಥ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿಗಳು ಅತಿ ಹೆಚ್ಚು ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಥಮ ಸ್ಥಾನವನ್ನು ಪಡೆದುಕೊಂಡು ಕಲಬುರಗಿ ವಲಯ ಯುವಜನೋತ್ಸವದ ಚಾಂಪಿಯನ್ ಆಗಿ ಹೊರ ಹೊಮ್ಮಿದರು. ಜೆ.ಎನ್ಆರ್ ಲಡ್ಡಾ ಕಾನೂನು ಮಹಾವಿದ್ಯಾಲಯ ಸೇಡಂ ರನ್ನರ್ ಅಪ್ ಆಯಿತು. ವಿದ್ಯಾರ್ಥಿಗಳ ಸಾಧನೆಗೆ ಕರ್ನಾಟಕ ಪೀಪಲ್ಸ್ ಎಜುಕೇಶನ್ ಸೊಸೈಟಿಯ ಕಾರ್ಯದರ್ಶಿಗಳಾದ ಶಾಂತಪ್ಪ ಸೂರನ, ಆಡಳಿತಾಧಿಕಾರಿ ಡಾ.ಚಂದ್ರಶೇಖರ್ ಶೀಲವಂತ ಅವರು ಹರ್ಷ ವ್ಯಕ್ತಪಡಿಸಿದ್ದಾರೆ. ಪ್ರಾಚಾರ್ಯ ಡಾ.ಚಂದ್ರಶೇಖರ ಎಸ್, ಕಾರ್ಯಕ್ರಮದ ಸಂಚಾಲಕರಾದ ಡಾ. ತಿಪ್ಪೆಸ್ವಾಮಿ, ಸಂಯೋಜನಾಧಿಕಾರಿಯಾದ ಮಹಾಂತೇಶ್ ಬಿದನೂರ್ ಮತ್ತು ಕಾಲೇಜಿನ ಎಲ್ಲಾ ಸಿಬ್ಬಂದಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಸುಗಮ ವಾಯುಯಾನದ ಭರವಸೆ ನೀಡಿದ್ದ ಮೋದಿ ವಿಮಾನಗಳ ಹಾರಾಟವನ್ನೇ ನಿಲ್ಲಿಸಿದ್ದಾರೆ: ಕಾಂಗ್ರೆಸ್ ಟೀಕೆ
ಹೊಸದಿಲ್ಲಿ,ಡಿ.6: ಇಂಡಿಗೋ ವಿಮಾನ ಗಳ ಹಾರಾಟ ರದ್ದುಗೊಂಡ ಹಿನ್ನೆಲೆಯಲ್ಲಿ ಜನಸಾಮಾನ್ಯರು ತೊಂದರೆಗೀಡಾಗಿರುವ ಬಗ್ಗೆ ಕೇಂದ್ರ ಸರಕಾರವನ್ನು ಕಾಂಗ್ರೆಸ್ ಪಕ್ಷವು ತರಾಟೆಗೆ ತೆಗೆದುಕೊಂಡಿದೆ.ವಾಯುಯಾನವನ್ನು ಸುಗಮಗೊಳಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದರು. ಆದರೆ ಅವರು ‘ವಾಯುಯಾನವನ್ನೇ ನಿಲ್ಲಿಸಿಬಿಟ್ಟಿದ್ದಾರೆ’ ಎಂದು ಅದು ಟೀಕಿಸಿದೆ. ಹಿಂದೆಂದೂ ಸಂಭವಿಸಿರದಂತಹ ಈ ಬಿಕ್ಕಟ್ಟಿನ ಹೊಣೆಗಾರಿಕೆಯನ್ನು ಕೇಂದ್ರ ನಾಗರಿಕ ವಾಯುಯಾನ ಸಚಿವ ಕೆ.ರಾಮಮೋಹನ್ ನಾಯ್ಡು ತೆಗೆದುಕೊಳ್ಳುವರೇ ಎಂದು ಕಾಂಗ್ರೆಸ್ ಪ್ರಶ್ನಿಸಿದೆ. ಇಂಡಿಗೋ ಅವ್ಯವಸ್ಥೆಯು ಆಕಸ್ಮಿಕವೇನೂ ಅಲ್ಲ. ವಾಯುಯಾನ ಕ್ಷೇತ್ರದಲ್ಲಿ ‘ದ್ವಿಸಾಮ್ಯ’ವನ್ನು ಸೃಷ್ಟಿಸಲು ಬಿಜೆಪಿ ನಡೆಸುತ್ತಿರುವ ನಿರಂತರ ಪ್ರಯತ್ನದ ನೇರ ಫಲಿತಾಂಶ ಇದಾಗಿದೆ ಎಂದು ಕಾಂಗ್ರೆಸ್ ಪಕ್ಷದ ನಾಯಕ ಶಶಿಕಾಂತ್ ಸೆಂಥಿಲ್ ಆಪಾದಿಸಿದ್ದಾರೆ. ಹೊಸದಿಲ್ಲಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಇಂಡಿಗೋ ವಿಮಾನಗಳ ಹಾರಾಟ ರದ್ದತಿಯು, ದೇಶದ ವಾಯುಯಾನ ಕ್ಷೇತ್ರವನ್ನು ಮೊಣಕಾಲೂರುವಂತೆ ಮಾಡಿದೆ ಎಂದರು. ವಾಯುಯಾನ ಕ್ಷೇತ್ರದಲ್ಲಿ ಸ್ಪರ್ಧಾತ್ಮಕತೆಯನ್ನು ದಮನಿಸಲು ಕಟಿಬದ್ಧವಾಗಿರುವ ಬಿಜೆಪಿಯು, ಕೆಲವೇ ಕಾರ್ಪೊರೇಟ್ ಜೊತೆಗಾರರಿಗೆ ಅನುಕೂಲಕರವಾಗುವಂತೆ ಇಡೀ ವಾಯುಯಾನ ಕ್ಷೇತ್ರವನ್ನು ಮರುರೂಪಿಸುತ್ತಿದೆ ಎಂದು ಸೆಂಥಿಲ್ ಆಪಾದಿಸಿದರು.
ನಟ ಯಶ್ಗೆ ಬಿಗ್ ರಿಲೀಫ್ ನೀಡಿದ ಕರ್ನಾಟಕ ಹೈಕೋರ್ಟ್, ಏನಿದು ಪ್ರಕರಣ?
ನಟ ಯಶ್ಗೆ ಆದಾಯ ತೆರಿಗೆ ಇಲಾಖೆ ನೀಡಿದ್ದ ನೋಟಿಸ್ಗಳನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದೆ. ಬೆಂಗಳೂರಿನಲ್ಲಿ ಶೋಧ ನಡೆಸಿದ್ದರೂ, ಅಧಿಕಾರಿಗಳು ಯಶ್ ಅವರನ್ನು ಶೋಧಿಸದ ವ್ಯಕ್ತಿ ಎಂದು ತಪ್ಪಾಗಿ ನಡೆಸಿಕೊಂಡಿದ್ದಾರೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಅಲ್ಲದೆ, ಸೆಕ್ಷನ್ 153ರ 'ಸಿ' ಅಡಿಯಲ್ಲಿ ನೀಡಲಾಗಿದ್ದ ನೋಟಿಸ್ಗಳು ಕಾನೂನುಬದ್ಧವಾಗಿ ಸಮರ್ಥನೀಯವಲ್ಲ ಎಂದು ನ್ಯಾಯಾಲಯ ಹೇಳಿದೆ.
ಉಡುಪಿ | ಡಿ.15ರಿಂದ ಅಣಬೆ, ಜೇನು ಕೃಷಿ ತರಬೇತಿ
ಉಡುಪಿ, ಡಿ.6: ಕೃಷಿ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಆತ್ಮ ಯೋಜನೆಯಡಿ ಯುವ ರೈತ ಮತ್ತು ಯುವ ರೈತ ಮಹಿಳೆಯರಿಗೆ ಡಿ.15ರಿಂದ 19ರವರೆಗೆ ಐದು ದಿನಗಳ ಕಾಲ ಅಣಬೆ ಹಾಗೂ ಜೇನು ಕೃಷಿ ಕುರಿತು ತರಬೇತಿ ಕಾರ್ಯಕ್ರಮವನ್ನು ಕುಂದಾಪುರದ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದೆ. ಆಸಕ್ತರು ಡಿ.12ರ ಒಳಗೆ ಮೇಲಿನ ಕಚೇರಿಗೆ ಆಧಾರ್, ಪಹಣೀ ಪತ್ರ, ಬ್ಯಾಂಕ್ ಖಾತೆ ಪ್ರತಿ ಮತ್ತು ಭಾವಚಿತ್ರ ನೀಡಿ ಹೆಸರು ನೋಂದಾಯಿಸಿ ಕೊಳ್ಳಬಹುದು ಎಂದು ಕುಂದಾಪುರ ಸಹಾಯಕ ಕೃಷಿ ನಿರ್ದೇಶಕರ ಪ್ರಕಟಣೆ ತಿಳಿಸಿದೆ.
ಡಿ.7ರ ರಾತ್ರಿ 8 ಗಂಟೆಯೊಳಗೆ ಪೂರ್ಣ ಟಿಕೆಟ್ ದರ ಮರುಪಾವತಿ ಮಾಡಿ: IndiGoಗೆ ಸರಕಾರ ಆದೇಶ
ಹೊಸದಿಲ್ಲಿ: ಸಾವಿರಾರು ವಿಮಾನಯಾನ ಗಳ ರದ್ದತಿಯ ಹಿನ್ನೆಲೆಯಲ್ಲಿ, ಪ್ರಯಾಣಿಕರ ಟಿಕೆಟ್ ಮೊತ್ತವನ್ನು ರವಿವಾರ ರಾತ್ರಿ 8 ಗಂಟೆಯ ಒಳಗೆ ಮರುಪಾವತಿಸುವಂತೆ ನಾಗರಿಕ ವಾಯಯಾನ ಸಚಿವಾಲಯವು ಶನಿವಾರ ಇಂಡಿಗೋ ವಿಮಾನಯಾನ ಸಂಸ್ಥೆಗೆ ಆದೇಶ ನೀಡಿದೆ. ಈ ನಿರ್ದೇಶನವನ್ನು ಪಾಲಿಸಲು ವಿಫಲವಾದರೆ ‘‘ತಕ್ಷಣ ನಿಯಂತ್ರಣ ಕ್ರಮ’’ವನ್ನು ತೆಗೆದುಕೊಳ್ಳಲಾಗುವುದು ಎಂಬ ಎಚ್ಚರಿಕೆಯನ್ನೂ ಅದು ನೀಡಿದೆ. ಯಾರ ಯಾನಗಳು ರದ್ದಾಗಿವೆಯೋ ಆ ಪ್ರಯಾಣಿಕರಿಗೆ ಅವರ ಮೂಲ ಪಾವತಿ ವಿಧಾನಕ್ಕೆ ಟಿಕೆಟ್ ನ ಪೂರ್ಣ ಮೊತ್ತ ಮರುಪಾವತಿಯಾಗುತ್ತದೆ. ವಿಮಾನಯಾನವನ್ನು ಮರುನಿಗದಿಪಡಿಸಲು ಇಂಡಿಗೋ ಯಾವುದೇ ಶುಲ್ಕವನ್ನು ಕಡಿತಗೊಳಿಸುವಂತಿಲ್ಲ. ಅದೇ ವೇಳೆ, ಯಾನಗಳ ವಿಳಂಬ ಅಥವಾ ರದ್ದತಿಯಿಂದಾಗಿ ಪ್ರಯಾಣಿಕರಿಂದ ಬೇರ್ಪಡೆಗೊಂಡಿರುವ ಎಲ್ಲಾ ಬ್ಯಾಗ್ ಗಳನ್ನು ಪತ್ತೆ ಹಚ್ಚಿ ಅವರ ನಿವಾಸಗಳಿಗೆ ಅಥವಾ ಅವರು ತಿಳಿಸುವ ವಿಳಾಸಗಳಿಗೆ ಮುಂದಿನ 48 ಗಂಟೆಗಳ ಒಳಗೆ ತಲುಪಿಸುವಂತೆಯೂ ಸಚಿವಾಲಯವು ಇಂಡಿಗೋಗೆ ಸೂಚಿಸಿದೆ.
ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಅಂಬೇಡ್ಕರ್ ಅವರ 69ನೇ ಮಹಾಪರಿನಿರ್ವಾಣ ಕಾರ್ಯಕ್ರಮ
ಕಲಬುರಗಿ: ಕೇಂದ್ರ ಕಾರಾಗೃಹದಲ್ಲಿ ಅಂಬೇಡ್ಕರರವರ 69ನೇ ಮಹಾಪರಿನಿರ್ವಾಣ ಕಾರ್ಯಕ್ರಮ ಆಯೋಜಿಸಲಾಯಿತು. ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಸಂಸ್ಥೆಯ ಪ್ರಭಾರಿ ಮುಖ್ಯ ಅಧೀಕ್ಷಕರಾದ ಬಿ.ಸುರೇಶ್, ಇಂದು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನಮ್ಮನೆಲ್ಲ ಅಗಲಿದ ದಿನ. ಕೇವಲ ಅವರ ಶರೀರವಷ್ಟೆ ನಮ್ಮಿಂದ ದೂರವಾಗಿದೆ ಎಂದು ಹೇಳಿದೆ. ಸಹಾಯಕ ಅಧೀಕ್ಷಕ ಚನ್ನಪ್ಪ ಮಾತನಾಡುತ್ತಾ, “ದೇಶ ಸುತ್ತಿ ಕೋಶ ಓದು” ಎಂಬಂತೆ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಈ ದೇಶಕ್ಕೆ ಸಂವಿಂಧಾನ ಎಂಬ ಅಮೂಲ್ಯ ರತ್ನ ನೀಡಿದ್ದಾರೆ ಎಂದು ಹೇಳಿದರು. ಈ ಕಾರ್ಯಕ್ರಮದಲ್ಲಿ ಸಹಾಯಕ ಆಡಳಿತಾಧಿಕಾರಿಗಳಾದ ಭೀಮಾಶಂಕರ್ ಡಾಂಗೆ, ಜೈಲರ್ಗಳಾದ ಸುನಂದ ವಿ., ಪುಂಡಲಿಕ ಟಿ.ಕೆ, ಶಾಮ ಬಿದ್ರಿ, ಕಾರಾಗೃಹದ ಎಲ್ಲಾ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.
ಹಾರಾಟ ನಡೆಸದ IndiGo | 84 ವಿಶೇಷ ರೈಲುಗಳನ್ನು ಘೋಷಿಸಿದ ಭಾರತೀಯ ರೈಲ್ವೇ
ಹೊಸದಿಲ್ಲಿ, ಡಿ. 6: ಇಂಡಿಗೊ ಅಗಾಧ ಪ್ರಮಾಣದಲ್ಲಿ ವಿಮಾನ ಯಾನ ವನ್ನು ರದ್ದುಪಡಿಸಿದ ಹಿನ್ನೆಲೆಯಲ್ಲಿ ಸಂಚಾರ ವ್ಯತ್ಯಯ ಎದುರಿಸುತ್ತಿರುವ ಜನರಿಗೆ ನೆರವು ನೀಡಲು ಭಾರತೀಯ ರೈಲ್ವೆ 84 ವಿಶೇಷ ರೈಲು ಗಳನ್ನು ಶನಿವಾರ ಘೋಷಿಸಿದೆ. ಸಾಧ್ಯವಾದಷ್ಟು ಕಡಿಮೆ ಸಮಯದಲ್ಲಿ ಈ ರೈಲುಗಳ ವ್ಯವಸ್ಥೆ ಮಾಡಲಾಗಿದೆ. ಹೊಸದಿಲ್ಲಿ, ಮುಂಬೈ, ಚೆನ್ನೈ, ಬೆಂಗಳೂರು, ಪಾಟ್ನಾ ಹಾಗೂ ಹೌರಾ ಸೇರಿದಂತೆ ಪ್ರಮುಖ ಕೇಂದ್ರಗಳಲ್ಲಿ ಪ್ರಯಾಣಿಕರ ದಟ್ಟಣೆ ಪರಿಶೀಲಿಸಿದ ಬಳಿಕ ರೈಲುಗಳ ವ್ಯವಸ್ಥೆ ಮಾಡಲಾಗಿದೆ ಎಂದು ರೈಲ್ವೆ ಸಚಿವಾಲಯ ತಿಳಿಸಿದೆ. ಬೇಡಿಕೆಗಳಿಗೆ ಅನುಗುಣವಾಗಿ ವಿಶೇಷ ರೈಲುಗಳ ಸಂಖ್ಯೆ ಹೆಚ್ಚಾಗಬಹುದು ಅಧಿಕಾರಿಗಳು ಹೇಳಿದ್ದಾರೆ. ಲಭ್ಯವಿರುವ ಎಲ್ಲಾ ಸಂಪನ್ಮೂಲಗಳು, ರೈಲುಗಳು ಮತ್ತು ಸಿಬ್ಬಂದಿಯನ್ನು ಬಳಸುವಂತೆ ಎಲ್ಲಾ ವಲಯಗಳಿಗೆ ಸೂಚಿಸಲಾಗಿದೆ. ವಿಮಾನ ರದ್ದತಿಯಿಂದ ತೊಂದರೆಗೊಳಗಾದ ಪ್ರಯಾಣಿಕರಿಗಾಗಿ ರೈಲುಗಳನ್ನು ಸುರಕ್ಷಿತವಾಗಿ ಓಡಿಸುವ ಉದ್ದೇಶ ಹೊಂದಲಾಗಿದೆ ಎಂದು ರೈಲ್ವೇ ಮಂಡಳಿಯ ಕಾರ್ಯನಿರ್ವಾಹಕ ನಿರ್ದೇಶಕ (ಮಾಹಿತಿ ಹಾಗೂ ಪ್ರಚಾರ) ದಿಲೀಪ್ ಕುಮಾರ್ ತಿಳಿಸಿದ್ದಾರೆ.
ಉಡುಪಿ | ಡಿ.17ರಂದು ಉದ್ಯಮಶೀಲರಿಗೆ ಮಾಹಿತಿ ಕಾರ್ಯಾಗಾರ
ಉಡುಪಿ, ಡಿ.6: ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಉದ್ಯಮಗಳ (ಎಂಎಸ್ಎಂಇ) ಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಹಾಗೂ ಅವುಗಳ ಕಾರ್ಯಚಟುವಟಿಕೆಗಳನ್ನು ವೇಗಗೊಳಿಸಲು ಭಾರತ ಸರ್ಕಾರದ ರ್ಯಾಂಪ್ ಯೋಜನೆಯಡಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಬೆಂಗಳೂರು, ಕರ್ನಾಟಕ ತಾಂತ್ರಿಕ ಉನ್ನತೀಕರಣ ಪರಿಷತ್, ಕರ್ನಾಟಕ ತಾಂತ್ರಿಕ ಸಲಹಾ ಸೇವಾ ಸಂಸ್ಥೆ ಬೆಂಗಳೂರು, ಜಿಲ್ಲಾ ಕೈಗಾರಿಕಾ ಕೇಂದ್ರ ಉಡುಪಿ ಹಾಗೂ ಜಿಲ್ಲಾ ಸಣ್ಣ ಕೈಗಾರಿಕಾ ಸಂಘದ ಸಹಯೋಗದಲ್ಲಿ ಡಿ.10ರಂದು ಉಡುಪಿಯ ಹೋಟೆಲ್ ಚಿತ್ತಾರ ಕಂಫರ್ಟ್ಸ್ ನಲ್ಲಿ ಆಯೋಜಿಸಲಾಗಿದ್ದ ಒಂದು ದಿನದ ಮಾಹಿತಿ ಕಾರ್ಯಗಾರವನ್ನು ಕಾರಣಾಂತರಗಳಿಂದ ಮುಂದೂಡಿ ಡಿ.17ರಂದು ಬೆಳಗ್ಗೆ 10 ಗಂಟೆಗೆ ನಗರದ ಕಡಿಯಾಳಿ ಜಂಕ್ಷನ್ ಸಮೀಪದ ದಿ ಓಷಿಯನ್ ಪರ್ಲ್ ನಲ್ಲಿ ಮರು ನಿಗದಿಪಡಿಸಲಾಗಿದೆ ಕಾರ್ಯಕ್ರಮದಲ್ಲಿ ಪ್ರತಿಷ್ಠಿತ ಕಂಪೆನಿಗಳಿಂದ ಆಗಮಿಸುವ ಪರಿಣಿತ ಬೋಧಕರು ಎಂಎಸ್ಎಂಇ ಉದ್ಯಮಶೀಲರಿಗೆ ಉಪಯುಕ್ತ ಮಾಹಿತಿ ನೀಡಲಿದ್ದು, ನೋಂದಾಯಿತ ಎಂ.ಎಸ್.ಎಂ.ಇ ಉದ್ಯಮಶೀಲರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಾಗಾರದ ಸದುಪಯೋಗ ಪಡೆದುಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕೈಗಾರಿಕಾ ಕೇಂದ್ರ, ಉಡುಪಿ ದೂರವಾಣಿ ಸಂಖ್ಯೆ: 0820-2575650ನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಲಬುರಗಿ| ಬಾಬರಿ ಮಸೀದಿ ಧ್ವಂಸದ ವೀಡಿಯೊ ಹಂಚಿಕೊಂಡ ಪಾಲಿಕೆ ವ್ಯವಸ್ಥಾಪಕನ ವಿರುದ್ಧ ಪ್ರಕರಣ ದಾಖಲು
ಕಲಬುರಗಿ: ಬಾಬರಿ ಮಸೀದಿ ಧ್ವಂಸ ಮಾಡುತ್ತಿರುವ ಪ್ರಚೋದನಾಕಾರಿ ಸ್ಟೇಟಸ್ ಹಾಕಿರುವ ವೀಡಿಯೊ ವೈರಲ್ ಬೆನ್ನಲ್ಲೆ ಕಲಬುರಗಿ ಮಹಾನಗರ ಪಾಲಿಕೆ ಕಚೇರಿ ವ್ಯವಸ್ಥಾಪಕ ಅಂಬಾದಾಸ್ ಖತಾಲ್ ವಿರುದ್ಧ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಹಾನಗರ ಪಾಲಿಕೆ ಸದಸ್ಯ ಶೇಖ್ ಅಜ್ಮಲ್ ಅಹ್ಮದ್ ಗೋಳಾ ನೀಡಿದ ದೂರಿನ ಮೇರೆಗೆ ಅಂಬಾದಾಸ್ ಖತಾಲ್ ವಿರುದ್ಧ ಬ್ರಹ್ಮಪುರ ಠಾಣೆ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಅಂಬಾದಾಸ್ ಅವರು 1992ರ ಡಿಸೆಂಬರ್ 6ರಂದು ಬಾಬರಿ ಮಸೀದಿ ಧ್ವಂಸ ಮಾಡಿರುವ ದೃಶ್ಯವಿರುವ ವಿಡಿಯೋವನ್ನು ತನ್ನ ವಾಟ್ಸಾಪ್ ಸ್ಟೇಟಸ್ ನಲ್ಲಿ ಹಂಚಿಕೊಂಡಿದ್ದರು. ವೀಡಿಯೊದಲ್ಲಿ ಬನಾಯೆಂಗೆ ಮಂದಿರ ಎಂಬ ಹಾಡು ಇರುವುದು ಕೇಳಿಸುತ್ತಿದೆ. ಅದರಲ್ಲಿ ಹಿಂದೂ ಶೌರ್ಯ ದಿನ 1992ರ ಡಿಸೆಂಬರ್ 6 ಎಂದು ಬರೆಯಲಾಗಿದೆ. ಹೇಳಿದಂತೆ ಅಲ್ಲೇ ಮಂದಿರ ಮಾಡಿದ್ದೇವೆ ಎಂದು ಸ್ಟೇಟಸ್ನಲ್ಲಿ ಬರೆದುಕೊಂಡಿರುವುದು ಕಂಡು ಬಂದಿತ್ತು. ಈ ಕುರಿತ ವೀಡಿಯೊ ವೈರಲ್ ಬೆನ್ನಲ್ಲೆ ಅಲ್ಪಸಂಖ್ಯಾತ ಸಮುದಾಯದ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿ ಪ್ರಚೋದನೆ ನೀಡಿದ ಅಧಿಕಾರಿಯ ವಿರುದ್ಧ ಪ್ರಕರಣ ದಾಖಲಿಸಿ ಸೂಕ್ತ ತನಿಖೆ ನಡೆಸಬೇಕೆಂದು ಕೆಲ ಪಾಲಿಕೆ ಸದಸ್ಯರು ಪಾಲಿಕೆಯ ಆಯುಕ್ತರಿಗೆ ದೂರು ನೀಡಿದ್ದರು. ಅಂಬಾದಾಸ್ ವಿರುದ್ಧ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಕಲಂ 196, 353(ಸಿ) ಬಿಎನ್ ಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
5ನೇ ದಿನವೂ ಹಾರದ IndiGo; 400ಕ್ಕೂ ಅಧಿಕ ಯಾನಗಳ ರದ್ದು
ದರ ಮಿತಿ ನಿಗದಿಪಡಿಸಿದ ಸರಕಾರ
Uttar Pradesh | ಅಯೋಧ್ಯೆಯ ಬಳಿಕ ಕಾಶಿ, ಮಥುರಾ: ಸಿಎಂ ಆದಿತ್ಯನಾಥ್
ಹೊಸದಿಲ್ಲಿ, ಡಿ. 6: ಅಯೋಧ್ಯೆಯ ಬಳಿಕ, ನಾವು ಕಾಶಿ ಮತ್ತು ಮಥುರಾಕ್ಕೆ ಹೋಗುತ್ತೇವೆ ಎಂದು ಉತ್ತರಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಶನಿವಾರ ಹೇಳಿದ್ದಾರೆ. ‘ಹಿಂದೂಸ್ತಾನ್ ಟೈಮ್ಸ್’ ಪತ್ರಿಕೆಯ ‘ನಾಯಕತ್ವ ಸಮ್ಮೇಳನ 2025’ರಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ. ಅಯೋಧ್ಯೆಯ ಬಳಿಕ, ಸರಕಾರವು ಕಾಶಿ, ಮಥುರಾದ ಮೇಲೆ ಕಣ್ಣಿಟ್ಟಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ, ‘‘ನಾವು ಎಲ್ಲಾ ಕಡೆಗೂ ಹೋಗುತ್ತೇವೆ’’ ಎಂದು ಹೇಳಿದರು. ‘ಅಯೋಧ್ಯಾ ತೊ ಬಸ್ ಝಾನ್ಕಿ ಹೈ.. ಕಾಶಿ-ಮಥುರಾ ಅಭೀ ಬಾಕಿ ಹೈ’ ಎಂಬ ಘೋಷಣೆಯ ಹಿನ್ನೆಲೆಯಲ್ಲಿ, ಜ್ಞಾನವಾಪಿ ಮತ್ತು ಶಾಹಿ ಈದ್ಗಾ ಮಸೀದಿ ಆವರಣಗಳ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ‘‘ನಾವು ಎಲ್ಲಾ ಸ್ಥಳಗಳಿಗೂ ಹೋಗುತ್ತೇವೆ, ನಾವು ಈಗಾಗಲೇ ಹೋಗಿದ್ದೇವೆ’’ ಎಂದು ಹೇಳಿದರು. ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿ ಸುದೀರ್ಘ ಎಂಟು ವರ್ಷಗಳ ಕಾಲ ನಡೆಸಿರುವ ಆಳ್ವಿಕೆಯ ಬಗ್ಗೆ ಮಾತನಾಡಿದ ಮಾತನಾಡಿದ ಆದಿತ್ಯನಾಥ್, ‘‘ಉತ್ತರಪ್ರದೇಶವು ದೇಶದ ಅತ್ಯಂತ ದೊಡ್ಡ ರಾಜ್ಯವಾಗಿದೆ. ಅಲ್ಲಿ ಎಂಟು ವರ್ಷಗಳಿಗಿಂತಲೂ ಹೆಚ್ಚು ಸಮಯ ಕೆಲಸ ಮಾಡಲು ನನ್ನ ಪಕ್ಷ ನನಗೆ ಅವಕಾಶ ನೀಡಿದೆ. ಈ ಎಂಟು ವರ್ಷಗಳ ಅವಧಿಯಲ್ಲಿ ಉತ್ತರಪ್ರದೇಶದಲ್ಲಿ ತುಂಬಾ ಬದಲಾವಣೆಯಾಗಿದೆ’’ ಎಂದು ಹೇಳಿದರು.
ಉಡುಪಿ | ಗೃಹರಕ್ಷಕರ ಸಾಧನೆ ಇತರರಿಗೆ ಮಾದರಿಯಾಗಲಿ: ಎಎಸ್ಪಿ ಸುಧಾಕರ್ ನಾಯ್ಕ್
ಅಖಿಲ ಭಾರತ ಗೃಹರಕ್ಷಕ ದಿನಾಚರಣೆ
ಕೇರಳ | Tiger Census ನಡೆಸುತ್ತಿದ್ದಾಗ ಕಾಡಾನೆ ದಾಳಿ; ಅರಣ್ಯಾಧಿಕಾರಿ ಮೃತ್ಯು
ತಿರುವನಂತಪುರ, ಡಿ. 6: ಹುಲಿ ಗಣತಿ ನಡೆಸುತ್ತಿದ್ದ ಅರಣ್ಯ ಅಧಿಕಾರಿಯೋರ್ವರನ್ನು ಕಾಡಾನೆಯೊಂದು ತುಳಿದು ಕೊಂದ ಘಟನೆ ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಾಡಾನೆ ದಾಳಿಯಿಂದ ಮೃತಪಟ್ಟ ಅರಣ್ಯ ಇಲಾಖೆ ಅಧಿಕಾರಿಯನ್ನು ಕಾಳಿಮುತ್ತು (52) ಎಂದು ಗುರುತಿಸಲಾಗಿದೆ. ಕಾಳಿ ಮುತ್ತು ಸೇರಿದಂತೆ ಮೂವರು ಅರಣ್ಯಾಧಿಕಾರಿಗಳು ಗಣತಿ ಪ್ರಕ್ರಿಯೆ ನಡೆಸುತ್ತಿರುವಾಗ ಅಟ್ಟಪಾಡಿ ಅರಣ್ಯ ವಲಯದ ಒಳಗೆ ಈ ಘಟನೆ ನಡೆದಿದೆ. ಕೆಲಸ ಮುಗಿಸಿ ಹಿಂದಿರುಗುತ್ತಿದ್ದ ಸಂದರ್ಭ ಕಾಡಾನೆ ಅರಣ್ಯಾಧಿಕಾರಿಗಳ ಮೇಲೆ ದಾಳಿ ನಡೆಸಿದೆ. ಈ ಸಂದರ್ಭ ಎಲ್ಲರೂ ಓಡಿದ್ದಾರೆ. ಘಟನೆಯಲ್ಲಿ ಇಬ್ಬರು ಅಧಿಕಾರಿಗಳು ಸಣ್ಣ ಪುಟ್ಟ ಗಾಯಗಳಿಂದ ಪಾರಾಗಿದ್ದಾರೆ. ಆದರೆ, ಕಾಳಿಮುತ್ತು ಅವರ ಮೃತದೇಹದ ಸಮೀಪದ ಪ್ರದೇಶದಲ್ಲಿ ಅನಂತರ ಪತ್ತೆಯಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ ಕಾಳಿಮುತ್ತು ಅಗಲಿಯ ನೆಲ್ಲಿಪಥಿ ಬುಡಕಟ್ಟು ಪ್ರದೇಶದ ನಿವಾಸಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅತ್ಯಾಚಾರ ಪ್ರಕರಣ | ಮಾಂಕ್ಕುಟತ್ತಿಲ್ ಗೆ ಬಂಧನದಿಂದ ಮಧ್ಯಂತರ ರಕ್ಷಣೆ
ಹೊಸದಿಲ್ಲಿ, ಡಿ. 6: ಅತ್ಯಾಚಾರ ಪ್ರಕರಣದಲ್ಲಿ ಪಾಲಕ್ಕಾಡ್ ಶಾಸಕ ರಾಹುಲ್ ಮಾಂಕ್ಕುಟತ್ತಿಲ್ ಗೆ ಕೇರಳ ಉಚ್ಚ ನ್ಯಾಯಾಲಯ ಶನಿವಾರ ಬಂಧನದಿಂದ ಮಧ್ಯಂತರ ರಕ್ಷಣೆ ನೀಡಿದೆ. ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಮಾಂಕ್ಕುಟತ್ತಿಲ್ ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ. ಬಾಬು ಈ ಆದೇಶ ನೀಡಿದ್ದಾರೆ. ಮಾಂಕ್ಕುಟತ್ತಿಲ್ ಅವರ ಅರ್ಜಿಯನ್ನು ಡಿಸೆಂಬರ್ 15ರಂದು ಆಲಿಸಲಾಗುವುದು. ಅಲ್ಲಿಯವರೆಗೆ ಅವರನ್ನು ಬಂಧಿಸಬಾರದು ಎಂದು ನ್ಯಾಯಾಲಯ ಹೇಳಿದೆ. ಈ ಪ್ರಕರಣದಲ್ಲಿ ತಿರುವನಂತಪುರದ ಸೆಷನ್ಸ್ ನ್ಯಾಯಾಲಯ ನಿರೀಕ್ಷಣಾ ಜಾಮೀನು ನೀಡಲು ನಿರಾಕರಿಸಿತ್ತು. ಅನಂತರ ಅವರು ಉಚ್ಚ ನ್ಯಾಯಾಲಯದ ಮೆಟ್ಟಿಲೇರಿದ್ದರು. ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಕೇರಳ ಕಾಂಗ್ರೆಸ್ ಮಾಂಕ್ಕುಟತ್ತಿಲ್ ಅವರನ್ನು ಪಕ್ಷದಿಂದ ಗುರುವಾರ ವಜಾಗೊಳಿಸಿತ್ತು. ಮಹಿಳೆಯೋರ್ವರು ತನ್ನನ್ನು ಮಾಂಕ್ಕುಟತ್ತಿಲ್ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿದ್ದರು. ಅವರು ವಂಚನೆಯ ಮೂಲಕ ತನ್ನ ಒಪ್ಪಿಗೆ ಪಡೆದರು ಹಾಗೂ ಗರ್ಭಪಾತಕ್ಕೆ ಒತ್ತಾಯಿಸಿದರು ಎಂದು ಅವರು ಹೇಳಿದ್ದರು. ಅನಂತರ ನವೆಂಬರ್ 28ರಂದು ಅವರ ವಿರುದ್ಧ ಪ್ರಕರಣ ದಾಖಲಾಯಿತು. ಮಾಂಕ್ಕುಟತ್ತಿಲ್ ವಿರುದ್ಧ ನಿಂದನೆ, ದೂರದಾರರಿಗೆ ಜೀವ ಬೆದರಿಕೆ ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಯ ದುರ್ಬಳಕೆ ಆರೋಪ ಮಾಡಲಾಗಿದೆ. ಮಂಗಳವಾರ ಇನ್ನೋರ್ವ ಮಹಿಳೆ ಮಾಂಕ್ಕುಟತ್ತಿಲ್ ತನಗೆ 2023ರಲ್ಲಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ಅವರು ಕಾಂಗ್ರೆಸ್ ನ ರಾಜ್ಯ ನಾಯಕತ್ವಕ್ಕೆ ಇಮೇಲ್ ಮೂಲಕ ದೂರು ನೀಡಿದ್ದರು. ಈ ದೂರನ್ನು ಪೊಲೀಸರಿಗೆ ಹಸ್ತಾಂತರಿಸಲಾಗಿತ್ತು. ಈ ದೂರಿನ ಹಿನ್ನೆಲೆಯಲ್ಲಿ ಮಾಂಕ್ಕುಟತ್ತಿಲ್ ವಿರುದ್ಧ ಎರಡನೇ ಎಫ್ಐಆರ್ ದಾಖಲಿಸಲಾಗಿದೆ.
ಹಿರಿಯಡ್ಕ | ವ್ಯಕ್ತಿ ಆತ್ಮಹತ್ಯೆ : ಪ್ರಕರಣ ದಾಖಲು
ಹಿರಿಯಡ್ಕ, ಡಿ.6: ಅನಾರೋಗ್ಯದಿಂದ ಬಳಲುತ್ತಿದ್ದ ಅಂಜಾರು ಗ್ರಾಮದ ಮೂಡುಕಾಂತರ ಗುಂಡಿ ನಿವಾಸಿ ಮೋಹನ್ ದಾಸ ಪ್ರಭು(69) ಎಂಬವರು ಜೀವನದಲ್ಲಿ ಜಿಗುಪ್ಸೆಗೊಂಡು ಡಿ.5ರಂದು ರಾತ್ರಿ ಮನೆಯ ಬಾವಿಗೆ ನೀರು ಸೇದಲು ಅಳವಡಿಸಿದ ಕಬ್ಬಿಣದ ರಾಟೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆತ್ಮಹತ್ಯೆಯ ಯೋಚನೆ ಬಂದಾಗ ಅದನ್ನು ನಿಗ್ರಹಿಸಲು ರಾಜ್ಯ ಸರಕಾರದ ಅರೋಗ್ಯ ಇಲಾಖೆಯ ಹೆಲ್ಪ್ ಲೈನ್ 104 ಸಹಾಯ ಮಾಡುತ್ತದೆ. ಅದರ ಜೊತೆಗೆ Tele-MANAS ನ 14416 ಅನ್ನೂ ಸಂಪರ್ಕಿಸಬಹುದು.
ಕಲಬುರಗಿ| 8.51 ಲಕ್ಷ ರೂ. ಮೌಲ್ಯದ ಪಡಿತರ ಅಕ್ಕಿ ಅಕ್ರಮ ಸಾಗಾಟ : ಓರ್ವನ ಬಂಧನ
ಕಲಬುರಗಿ: ಯಾದಗಿರಿಯಿಂದ ಮಹಾರಾಷ್ಟ್ರ ಹಾಗೂ ಗುಜರಾತ್ ರಾಜ್ಯಕ್ಕೆ ಪಡಿತರ ಅಕ್ಕಿ ಸಾಗಾಟ ಮಾಡುತ್ತಿದ್ದ ವ್ಯಕ್ತಿಯೋರ್ವನನ್ನು ಬಂಧಿಸಿ 8,51,020ರೂ. ಮೌಲ್ಯದ 25 ಕ್ವಿಂಟಾಲ್ ಅಕ್ಕಿ ವಶಪಡಿಸಿಕೊಳ್ಳುವಲ್ಲಿ ವಿಶ್ವವಿದ್ಯಾಲಯ ಪೊಲೀಸರು ಯಶಸ್ವಿಯಾಗಿದ್ದಾರೆ. ಬೀದರ್ ಜಿಲ್ಲೆಯ ಹುಮನಾಬಾದ ತಾಲೂಕಿನ ದುಬಲಗುಂಡಿ ಗ್ರಾಮದ ಲಾರಿ ಚಾಲಕ ರಾಜು ನರಸಿಂಗರಾವ್(28) ಬಂಧಿತ ಆರೋಪಿಯಾಗಿದ್ದಾನೆ. ವಿಶ್ವವಿದ್ಯಾಲಯ ಪೊಲೀಸ್ ಠಾಣಾ ವ್ಯಾಪ್ತಿಯ ಗೀತಾ ನಗರ ಸೇಡಂ ರೋಡ ಹತ್ತಿರ ಆರೋಪಿ ರಾಜು ನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಅಕ್ರಮ ಅಕ್ಕಿ ಸಾಗಾಟ ಮಾಡುತ್ತಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಭಾರತದಲ್ಲಿ ಖಾಲಿಸ್ತಾನ್ ಪರ ಚಟುವಟಿಕೆಯಲ್ಲಿ ಸಂಪರ್ಕ; ಸಿಖ್ ಉದ್ಯಮಿಗೆ ಬ್ರಿಟನ್ ನಿರ್ಬಂಧ
ಲಂಡನ್, ಡಿ.6: ಭಾರತದಲ್ಲಿ ಖಾಲಿಸ್ತಾನ್ ಪರ ಭಯೋತ್ಪಾದಕ ಚಟುವಟಿಕೆಗಳಿಗೆ ಆರ್ಥಿಕ ನೆರವು ನೀಡುವ ಜೊತೆಗೆ ಇಂತಹ ಚಟುವಟಿಕೆಗಳನ್ನು ಪ್ರೋತ್ಸಾಹಿಸುತ್ತಿದ್ದ ಆರೋಪದಡಿ ಬ್ರಿಟಿಷ್ ಸಿಖ್ ಉದ್ಯಮಿ ಗುರುಪ್ರೀತ್ ಸಿಂಗ್ ರೆಹಾಲ್ ಮತ್ತು ಅವರಿಗೆ ಸಂಬಂಧಿಸಿದ `ಬಬ್ಬರ್ ಅಕಾಲಿ ಲೆಹರ್' ಗುಂಪಿನ ಮೇಲೆ ಬ್ರಿಟನ್ ಕಠಿಣ ನಿರ್ಬಂಧಗಳನ್ನು ವಿಧಿಸಿದೆ. `ದೇಶೀಯ ಭಯೋತ್ಪಾದನಾ ನಿಗ್ರಹ' ಕಾನೂನನ್ನು ಮೊದಲ ಬಾರಿ ಬಳಸಿ ಗುರುಪ್ರೀತ್ ಸಿಂಗ್ ರೆಹಾಲ್ ವಿರುದ್ಧ ಕ್ರಮ ಕೈಗೊಳ್ಳಲಾಗಿದ್ದು ತಕ್ಷಣ ಅವರ ಆಸ್ತಿಯನ್ನು ಸ್ಥಂಭನಗೊಳಿಸಲಾಗುತ್ತದೆ. ಉನ್ನತ ಗುಪ್ತಚರ ಮೂಲಗಳ ಪ್ರಕಾರ, ಈ ಕ್ರಮವು ಬ್ರಿಟನ್ ಮೂಲದ ಭಯೋತ್ಪಾದಕ ಹಣಕಾಸು ಜಾಲಗಳನ್ನು ಕೆಡವಲು ಮತ್ತು `ಭಾರತ ವಿರೋಧಿ' ಪ್ರತ್ಯೇಕತಾವಾದಿ ಚಟುವಟಿಕೆಗಳಿಗೆ ಆರ್ಥಿಕ ನೆರವನ್ನು ಕಿತ್ತುಹಾಕುವ ಭಾರತದ ಪ್ರಯತ್ನಗಳನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ.
ಕುಂದಾಪುರ | ಬೈಕ್ ಢಿಕ್ಕಿ: ಪಾದಾಚಾರಿ ಮೃತ್ಯು
ಕುಂದಾಪುರ, ಡಿ.6: ಬೈಕೊಂದು ಢಿಕ್ಕಿ ಹೊಡೆದ ಪರಿಣಾಮ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಡಿ.5ರಂದು ರಾತ್ರಿ ವೇಳೆ ನಡೆದಿದೆ. ಮೃತರನ್ನು ಗೋವಿಂದ ಪೂಜಾರಿ ಎಂದು ಗುರುತಿಸಲಾಗಿದೆ. ಮೆಹಂದಿ ಕಾರ್ಯಕ್ರಮಕ್ಕೆ ಹೋಗಿ ಬಂದು, ಬಸ್ರೂರು ಮೂರಕೈ-ಕೋಣಿ ರಸ್ತೆಯಲ್ಲಿ ಮನೆ ಕಡೆ ನಡೆದುಕೊಂಡು ಹೋಗುತ್ತಿದ್ದ ಗೋವಿಂದ ಪೂಜಾರಿಗೆ ಬಸ್ರೂರು ಮೂರಕೈ ಕಡೆಯಿಂದ-ಕೋಣಿ ಕಡೆಗೆ ಬರುತ್ತಿದ್ದ ಬೈಕ್ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರಿಂದ ಗಂಭೀರ ಗಾಯಗೊಂಡ ಅವರು ಚಿಕಿತ್ಸೆ ಫಲಕಾರಿಯಾಗದೆ ಮಣಿಪಾಲ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಅಪಘಾತದಿಂದ ಬೈಕ್ ಸವಾರ ರೋಶನ ಪೂಜಾರಿ ಹಾಗೂ ಸಹಸವಾರ ಅಖೀಲೇಶ ಎಂಬವರು ಗಾಯಗೊಂಡಿದ್ದಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಡುಪಿ | ವಾಟ್ಸಾಪ್ ಗೆ ಬಂದ APK ಫೈಲ್ ಡೌನ್ಲೋಡ್ ಮಾಡಿ 10.70ಲಕ್ಷ ರೂ. ಕಳೆದುಕೊಂಡ ವ್ಯಕ್ತಿ !
ಉಡುಪಿ, ಡಿ.6: ಅಪರಿಚಿತ ನಂಬರಿನಿಂದ ವಾಟ್ಸಾಪ್ ಗೆ ಬಂದ ಫೈಲ್ನ್ ಅನ್ನು ಡೌನ್ಲೋಡ್ ಮಾಡಿದ ಪರಿಣಾಮ ವ್ಯಕ್ತಿಯೊಬ್ಬರು ತಮ್ಮ ಖಾತೆಯಿಂದ ಲಕ್ಷಾಂತರ ರೂ. ಹಣ ಕಳೆದುಕೊಂಡು ವಂಚನೆ ಒಳಗಾಗಿರುವ ಬಗ್ಗೆ ವರದಿಯಾಗಿದೆ. ಉಡುಪಿ ಕರಂಬಳ್ಳಿಯ ಕಮಲನಾಭ ಬಾಯರಿ ಎಸ್.(57) ಎಂಬವರ ವಾಟ್ಸಾಪ್ ನಂಬರ್ ಗೆ ಡಿ.4 ಹಾಗೂ 5ರಂದು ಅಪರಿಚಿತ ನಂಬರಿನಿಂದ ಎ.ಪಿ.ಕೆ ಫೈಲ್ ಬಂದಿದ್ದು, ಅದನ್ನು ಕಮಲನಾಭ ಡೌನ್ಲೋಡ್ ಮಾಡಿದರು. ಆಗ ಅವರ ಬ್ಯಾಂಕ್ ಖಾತೆಯಿಂದ ಹಂತ ಹಂತವಾಗಿ ಒಟ್ಟು 10,70,000ರೂ. ಹಣ ಕಡಿತವಾಗಿರುವುದು ಕಂಡುಬಂದಿದೆ. ಸೈಬರ್ ವಂಚಕರು ಮೋಸ ಮಾಡಿ ಇವರಿಗೆ ವಂಚನೆ ಮಾಡಿದ್ದಾರೆಂದು ದೂರಲಾಗಿದೆ. ಈ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Pakistan | ಇಮ್ರಾನ್ ಖಾನ್ ಮಾನಸಿಕ ಅಸ್ವಸ್ಥ, ದುರಹಂಕಾರಿ: ಪಾಕ್ ಸೇನೆ ವಾಗ್ದಾಳಿ
ಇಸ್ಲಾಮಾಬಾದ್, ಡಿ.6: ಪಾಕಿಸ್ತಾನದ ಸೇನಾ ಮುಖ್ಯಸ್ಥ ಆಸಿಮ್ ಮುನೀರ್ ವಿರುದ್ಧ ಮಾಜಿ ಪ್ರಧಾನಿ ಇಮ್ರಾನ್ ಖಾನ್ ನೀಡಿರುವ ಹೇಳಿಕೆಗಳಿಗೆ ಮಿಲಿಟರಿ ಎದಿರೇಟು ನೀಡಿದ್ದು `ಇಮ್ರಾನ್ ಖಾನ್ ಮಾನಸಿಕ ಅಸ್ವಸ್ಥ ಮತ್ತು ದುರಹಂಕಾರಿ' ಎಂದು ಟೀಕಿಸಿದೆ. ಆಸಿಮ್ ಮುನೀರ್ `ಮಾನಸಿಕವಾಗಿ ಅಸ್ಥಿರವಾಗಿದ್ದಾರೆ' ಎಂದು ಇಮ್ರಾನ್ ಟೀಕಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಸೇನೆ `ಇಮ್ರಾನ್ ಖಾನ್ ಮಾನಸಿಕ ಅಸ್ವಸ್ಥ. ಸಶಸ್ತ್ರ ಪಡೆಗಳ ಮೇಲೆ ದಾಳಿ ನಡೆಸಿ ಅಶಾಂತಿಯನ್ನು ಉಂಟು ಮಾಡಲು ಕುಟುಂಬ ಭೇಟಿಗಳು ಮತ್ತು ಸಾಮಾಜಿಕ ಮಾಧ್ಯಮ ಪೋಸ್ಟ್ ಗಳನ್ನು ಬಳಸಿಕೊಳ್ಳುತ್ತಿದ್ದಾರೆ' ಎಂದು ಆರೋಪಿಸಿದೆ. ಇಮ್ರಾನ್ ಖಾನ್ ಓರ್ವ ದುರಹಂಕಾರಿ. `ನಾನು ಅಧಿಕಾರದಲ್ಲಿ ಇರದಿದ್ದರೆ ಎಲ್ಲವೂ ನಾಶವಾಗಬೇಕು' ಎಂಬ ರಾಜಕೀಯ ಮಹತ್ವಾಕಾಂಕ್ಷೆ ಇರುವ ವ್ಯಕ್ತಿ. ಜೈಲಿನಲ್ಲಿ ಇಮ್ರಾನ್ ಖಾನ್ ರನ್ನು ಭೇಟಿಯಾಗಲು ಬರುವ ವ್ಯಕ್ತಿಗಳನ್ನು ಸೇನೆಯ ವಿರುದ್ಧ ವಿಷ ಹರಡಲು ಬಳಸಲಾಗುತ್ತಿದೆ' ಎಂದು ಸೇನೆಯ ವಕ್ತಾರ ಲೆ|ಜ| ಅಹ್ಮದ್ ಷರೀಫ್ ಚೌಧರಿ ಆರೋಪಿಸಿದ್ದಾರೆ. ಸೇನೆಯ ಬಗ್ಗೆ ಹಗೆತನವನ್ನು ಪ್ರಚೋದಿಸಲು ಖಾನ್ ಪ್ರಯತ್ನಿಸುತ್ತಿದ್ದಾರೆ. ಪಾಕಿಸ್ತಾನದ ಮಿಲಿಟರಿ ಮತ್ತು ಜನರ ನಡುವೆ ಕಂದಕವನ್ನು ಸೃಷ್ಟಿಸಲು ನಾವು ಯಾರಿಗೂ ಅವಕಾಶ ನೀಡುವುದಿಲ್ಲ. ಸಾಂವಿಧಾನಿಕ ಹಕ್ಕುಗಳು ಮಿತಿಗಳನ್ನು ಒಳಗೊಂಡಿರುತ್ತವೆ. ಈ ವ್ಯಕ್ತಿಯೇ 2023ರ ಮೇ 9ರಂದು ರಾವಲ್ಪಿಂಡಿಯ ಮಿಲಿಟರಿ ಪ್ರಧಾನ ಕಚೇರಿ ಸೇರಿದಂತೆ ಸೇನಾ ನೆಲೆಗಳ ಮೇಲಿನ ದಾಳಿಯನ್ನು ಯೋಜಿಸಿದ್ದವರು' ಎಂದು ಅವರು ಪ್ರತಿಪಾದಿಸಿದ್ದಾರೆ.

26 C