SENSEX
NIFTY
GOLD
USD/INR

Weather

23    C
...

ದ್ವೇಷದ ಏಜೆಂಟರಿಂದ ದೇಶ ಸುಡುವುದನ್ನು ತಪ್ಪಿಸುವತ್ತ ಮುಹಮ್ಮದ್ ದೀಪಕ್ ಮಾದರಿ

ಭಾರತದಲ್ಲಿ ಇಂತಹ ಕೋಮು ದ್ವೇಷ ಎಷ್ಟು ಸಾಮಾನ್ಯವಾಗಿದೆಯೆಂದರೆ, ಸಾಮಾನ್ಯ ಜನರು ಸಹ ಇನ್ನೊಬ್ಬ ವ್ಯಕ್ತಿಗೆ ಸಹಾಯ ಮಾಡಲು ಹೆದರುತ್ತಾರೆ. ಆದರೆ ಕೋಟ್ದ್ವಾರದ ದೀಪಕ್ ಯಾವಾಗ ವೃದ್ಧ ಮುಸ್ಲಿಮ್ ವ್ಯಾಪಾರಿಯ ಪರವಾಗಿ ನಿಂತು ಧ್ವನಿ ಎತ್ತಿದರೋ ಅಂದಿನಿಂದ ಎಂಥದೋ ಒಂದು ಬದಲಾವಣೆ ಕಾಣುತ್ತಿದೆ. ಎಲ್ಲರೂ ಪ್ರಶ್ನಿಸಲು ನಿಂತರೆ, ಭಯ ಮತ್ತು ದ್ವೇಷದ ವ್ಯವಹಾರದಿಂದ ಜೀವನ ಸಾಗಿಸುವವರು ಹಾಗೆ ಮಾಡಲು ಸಾಧ್ಯವಾಗುವುದಿಲ್ಲ. ಈಗ ಅಂಥದೇ ಸಾಧ್ಯತೆ ತೆರೆಯುತ್ತಿರುವ ಹಾಗೆ ತೋರುತ್ತಿದೆ. ಮುಹಮ್ಮದ್ ದೀಪಕ್ ಮುಸ್ಲಿಮ್ ದ್ವೇಷದ ವಿರುದ್ಧ ದಿಟ್ಟತನದಿಂದ ನಿಂತ ಒಂದು ತಿಂಗಳ ಬಳಿಕ ಹಿಂದೂಗಳಲ್ಲಿ ಕೆಲವರಲ್ಲಾದರೂ ಒಂದು ಕಿಡಿಯನ್ನು ಹೊತ್ತಿಸಿದಂತೆ ಕಾಣುತ್ತದೆ. ನಿಧಾನವಾಗಿಯಾದರೂ ಖಂಡಿತವಾಗಿಯೂ ದೀಪಕ್‌ರಂತಹವರು ಧಾರ್ಮಿಕ ದ್ವೇಷ ಮತ್ತು ಹಿಂದುತ್ವ ಭಯೋತ್ಪಾದನೆಯನ್ನು ವಿರೋಧಿಸುತ್ತಿದ್ದಾರೆ. ಬಜರಂಗದಳದಂಥ ಕೆಟ್ಟ ಶಕ್ತಿಗಳನ್ನು ಬಹಿರಂಗವಾಗಿ ಪ್ರಶ್ನಿಸಲಾಗುತ್ತಿದೆ. ತಮ್ಮ ಅಸಮರ್ಥತೆ ಮರೆಮಾಡಲು ಧಾರ್ಮಿಕ ಭಯ ಹುಟ್ಟಿಸುವ ಮತ್ತು ದ್ವೇಷವನ್ನು ಬಳಸುವವರ ಪಾಲಿಗೆ ಮುಹಮ್ಮದ್ ದೀಪಕ್ ಅವರ ಮಾದರಿ ನಿಜಕ್ಕೂ ಒಂದು ಸವಾಲಾಗಿದೆ. ಜನವರಿ 26ರಂದು ಸಂಘಪರಿವಾರದ ಬಜರಂಗದಳದ ಕಾರ್ಯಕರ್ತರು ಉತ್ತರಾಖಂಡದ ಕೋಟ್ದ್ವಾರದಲ್ಲಿ 70 ವರ್ಷದ ವಕೀಲ್ ಅಹ್ಮದ್ ಅವರನ್ನು ಬಾಬಾ ಎಂದು ಅಂಗಡಿಗೆ ಹೆಸರಿಟ್ಟಿದ್ದಕ್ಕೆ ಟಾರ್ಗೆಟ್ ಮಾಡಿದ್ದರು. 30 ವರ್ಷಗಳ ಕಾಲ ಇಲ್ಲದ ತಕರಾರನ್ನು ಅವತ್ತು ಎತ್ತಲಾಗಿತ್ತು. ತಕ್ಷಣವೇ ಹೆಸರು ಬದಲಾಯಿಸಲು ಒತ್ತಾಯಿಸಲಾಯಿತು. ಆಗ ಮುಂದೆ ಬಂದು ಅಹ್ಮದ್ ಪರವಾಗಿ ನಿಂತವರೇ ದೀಪಕ್ ಕುಮಾರ್. ಆಗ ಬಜರಂಗದಳದವರು ಹೆಸರು ಕೇಳಿದಾಗ, ‘ಮುಹಮ್ಮದ್ ದೀಪಕ್’ ಎಂದು ಉತ್ತರಿಸಿದ್ದರು. ದೀಪಕ್ ಮುಸ್ಲಿಮ್ ವ್ಯಾಪಾರಿಯನ್ನು ಬೆಂಬಲಿಸಿದ ಬಳಿಕ ಅವರ ವಿರುದ್ಧ ಎಫ್‌ಐಆರ್ ದಾಖಲಿಸಲಾಯಿತು. ಅವರನ್ನು ಕೊಲ್ಲುವ ಬೆದರಿಕೆಯನ್ನೂ ಪೊಲೀಸರೆದುರೇ ಒಡ್ಡಲಾಯಿತು. ಅವರು ನಡೆಸುತ್ತಿದ್ದ ಜಿಮ್‌ಗೆ ಹೋಗುತ್ತಿದ್ದವರ ಸಂಖ್ಯೆ 150ರಿಂದ 10-12ಕ್ಕೆ ಇಳಿಯಿತು. ಆದರೆ ಯಾವ ಬೆದರಿಕೆಗೂ ದೀಪಕ್ ಹೆದರಲಿಲ್ಲ. ಜಿಮ್ ಬಗ್ಗೆ ತಲೆಕೆಡಿಸಿಕೊಳ್ಳದೆ ತನ್ನ ನಿಲುವಿಗೆ ಗಟ್ಟಿಯಾಗಿ ನಿಂತರು. ಇಡೀ ದೇಶದಿಂದ ದೀಪಕ್‌ಗೆ ಪ್ರೀತಿ ಸಿಕ್ಕಿತು. ಲಕ್ಷಾಂತರ ಜನರು ಸಾಮಾಜಿಕ ಮಾಧ್ಯಮದಲ್ಲಿ ಅವರನ್ನು ಫಾಲೋ ಮಾಡತೊಡಗಿದರು. ಕೇರಳದ ರಾಜ್ಯಸಭಾ ಸಂಸದ ಜಾನ್ ಬ್ರಿಟ್ಟಾಸ್ ಕೂಡ ದೀಪಕ್ ಅವರ ಬೆಂಬಲಕ್ಕೆ ಹೋದರು. ಜಾರ್ಖಂಡ್ ಸಚಿವ ಡಾ. ಇರ್ಫಾನ್ ಅನ್ಸಾರಿ ತಮ್ಮ ಸಂಬಳದಿಂದ ಎರಡು ಲಕ್ಷ ರೂ. ದೇಣಿಗೆ ನೀಡುವುದಾಗಿ ಭರವಸೆ ನೀಡಿದರು. ಇದರ ನಂತರ, ದೀಪಕ್ ಒಂದು ವೀಡಿಯೊ ಮಾಡಿ, ಈ ಹಣವನ್ನು ನನಗೆ ನೀಡಬೇಡಿ. ಇನ್ನೂ ಜೀವನ ಸಾಗಿಸಲು ಕಷ್ಟಪಡುತ್ತಿರುವ ಅಂಕಿತಾ ಭಂಡಾರಿ ಅವರ ಕುಟುಂಬಕ್ಕೆ ನೀಡಿ ಎಂದು ಹೇಳಿದರು. ಅವರ ಜಿಮ್ ಸದಸ್ಯತ್ವ ಕುಸಿದಾಗ, ಸುಪ್ರೀಂ ಕೋರ್ಟ್ ನ 15 ಮಂದಿ ವಕೀಲರು ಜಂಟಿಯಾಗಿ, ಜಿಮ್ ತರಬೇತಿ ಪಡೆಯಲು ಸಾಧ್ಯವಾಗದ ಸ್ಥಳೀಯ ಯುವಕರಿಗೆ ಸದಸ್ಯತ್ವ ವ್ಯವಸ್ಥೆ ಮಾಡಿದರು. ಅಲ್ಲದೆ, ಭವಿಷ್ಯದಲ್ಲಿ ಕಾನೂನು ಸಹಾಯ ಬೇಕಾದರೆ ತಾವು ಜೊತೆಗಿರುವುದಾಗಿ ದೀಪಕ್‌ಗೆ ಭರವಸೆ ನೀಡಿದರು. ಮುಹಮ್ಮದ್ ದೀಪಕ್, ಬಜರಂಗದಳ ಎಂದಿಗೂ ಮಾತನಾಡದ ಹಿಂದೂ ಅಂಕಿತಾ ಭಂಡಾರಿ ಅವರ ಕುಟುಂಬವನ್ನು ಭೇಟಿಯಾದರು. ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಕೂಡ ದೀಪಕ್ ಅವರನ್ನು ಹೊಗಳಿದರು. ಈ ದೇಶದಲ್ಲಿ ಅವರಂತೆ ದ್ವೇಷದ ವಿರುದ್ಧ ಮಾತನಾಡುವ ದೀಪಕ್ ಮಾದರಿ ನಮಗೆ ಬೇಕು, ಪ್ರೀತಿಯ ಬಗ್ಗೆ ಮಾತನಾಡುವವರು ನಮಗೆ ಬೇಕು ಎಂದು ರಾಹುಲ್ ಹೇಳಿದರು. ಫೆಬ್ರವರಿ 23ರಂದು ರಾಹುಲ್ ಗಾಂಧಿ ಸ್ವತಃ ದೀಪಕ್ ಅವರನ್ನು ಭೇಟಿಯಾದರು. ಪ್ರಯಾಗರಾಜ್‌ನಲ್ಲಿರುವ ಜನರು ಈಗ ದೀಪಕ್ ಅವರ ಅಭಿಮಾನಿಗಳಾಗಿದ್ದಾರೆ. ದೀಪಕ್ ಅವರ ಧೈರ್ಯ ಮತ್ತು ಸತ್ಯದ ಮೇಲಿನ ನಂಬಿಕೆ ಒಂದು ಕಿಡಿಯನ್ನು ಹೊತ್ತಿಸಿದೆ. ಈ ಕಿಡಿ ಹೊತ್ತಿಕೊಂಡರೆ, ದ್ವೇಷ ಹರಡುವವರ ಆಟ ದೊಡ್ಡ ಮಟ್ಟದಲ್ಲಿ ಮುಗಿಯುತ್ತದೆ. 12 ವರ್ಷಗಳಿಂದ ಸುಳ್ಳು, ವಂಚನೆ ಮತ್ತು ದ್ವೇಷವನ್ನೇ ಹರಡುತ್ತ ಬರಲಾಗಿದೆ. ಆದರೆ ಎಷ್ಟೋ ಹಿಂದೂಗಳಿಗೆ ಸತ್ಯ ಏನೆಂಬುದು ಗೊತ್ತಾಗಿದೆ. ಹಿಂದುತ್ವದ ಜ್ವಾಲೆ ತಮ್ಮ ಧರ್ಮವನ್ನು ದ್ವೇಷದ ಕಡೆಗೆ ಹೇಗೆ ತಳ್ಳುತ್ತಿದೆ ಎಂಬುದನ್ನು ಅವರು ನೋಡುತ್ತಿದ್ದಾರೆ. ಈ ಬೆಳವಣಿಗೆಯ ನಂತರ ಸಂಖ್ಯೆ ಸಣ್ಣದೇ ಆದರೂ ದ್ವೇಷದ ವಿರುದ್ಧ ನಿಲ್ಲಲು ಧೈರ್ಯ ಮಾಡುತ್ತಿರುವ ಮತ್ತಷ್ಟು ಮುಹಮ್ಮದ್ ದೀಪಕ್ ಮಾದರಿಗಳನ್ನು ನಾವು ನೋಡುತ್ತಿದ್ದೇವೆ. ವಾರಣಾಸಿಯಲ್ಲಿ ಫೆಬ್ರವರಿ 17ರಂದು ಮಹಾತ್ಮಾ ಗಾಂಧಿ ಕಾಶಿ ವಿದ್ಯಾಪೀಠ ವಿಶ್ವವಿದ್ಯಾನಿಲಯದ 20 ವಿದ್ಯಾರ್ಥಿಗಳ ಗುಂಪು ವಾರಣಾಸಿಯ ಮೇಕೆ ಮಾರುಕಟ್ಟೆಯಲ್ಲಿ ಕೆಲ ಅಂಗಡಿಗಳನ್ನು ಮುಚ್ಚಿಸಲು ಪ್ರಯತ್ನಿಸಿತು. ಅವರು ಕಾಶಿ ಮಹಾನಗರ ಎಬಿವಿಪಿ ಕಾರ್ಯದರ್ಶಿ ಶಿವಂ ತಿವಾರಿ ನೇತೃತ್ವದಲ್ಲಿ ಎಬಿವಿಪಿಗೆ ಸೇರಿದ ವಿದ್ಯಾರ್ಥಿಗಳು ಎಂದು ವರದಿಯಾಗಿದೆ. ಅಕ್ರಮ ಕಸಾಯಿಖಾನೆಗಳಿವೆ ಮತ್ತು ಆ ಪ್ರದೇಶದಲ್ಲಿ ಸತ್ತ ಮೇಕೆಯನ್ನು ತೋರಿಸುವ ವೀಡಿಯೊ ಇದೆ ಎಂದು ಗುಂಪು ಆರೋಪಿಸಿತ್ತು. ಈ ಯುವಕರು ಬಾಗಿಲು ಬಡಿಯುತ್ತಾ ಅಂಗಡಿಗಳನ್ನು ಮುಚ್ಚಲು ಒತ್ತಾಯಿಸುತ್ತಿರುವುದು ಕಂಡುಬಂದಿರುವ ಬಗ್ಗೆ ವರದಿಯಾಗಿದೆ. ಈ ಮಾರುಕಟ್ಟೆ ಕಾಶಿ ವಿಶ್ವನಾಥ ದೇವಾಲಯದಿಂದ 2 ಕಿ.ಮೀ. ವ್ಯಾಪ್ತಿಯಲ್ಲಿದೆ. ಈ ಮಾರುಕಟ್ಟೆ ಕಳೆದ 100 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ. ಈ ಪ್ರದೇಶದಾದ್ಯಂತ ಜನರು ಇಲ್ಲಿ ಮೇಕೆಗಳನ್ನು ಖರೀದಿಸಿ ಮಾರಾಟ ಮಾಡುತ್ತಿದ್ದಾರೆ. ಈ ವಿದ್ಯಾರ್ಥಿಗಳನ್ನು ಅವರ ಗುರುತಿನ ಚೀಟಿಗಳನ್ನು ತೋರಿಸಲು ಕೇಳಿದಾಗ ತಬ್ಬಿಬ್ಬಾದರು. ಅವರು ತಮ್ಮ ಗುರುತಿನ ಚೀಟಿಗಳನ್ನು ತೋರಿಸಲು ಸಾಧ್ಯವಾಗಲಿಲ್ಲ. ಬದಲಾಗಿ, ಅವರು ಮಾರುಕಟ್ಟೆಯನ್ನು ಮುಚ್ಚುವುದಾಗಿ ಬೆದರಿಕೆ ಹಾಕಿದರು. ಆದರೆ ಕೆಲವು ಜನರು ಅವರ ವಿರುದ್ಧ ನಿಂತಾಗ, ಅವರು ದಿಗಿಲುಗೊಂಡರು. ಅವರು ಓಡಿಹೋಗಬೇಕಾಯಿತು. ಅಂಗಡಿಯ ಹೆಸರನ್ನು ಬದಲಾಯಿಸುವುದರಿಂದ ಅಥವಾ ಮಾರುಕಟ್ಟೆ ಮುಚ್ಚುವುದರಿಂದ ಹಿಂದೂ ಸಮಾಜದ ಎಲ್ಲಾ ನೋವುಗಳು ಕೊನೆಗೊಳ್ಳುತ್ತವೆಯೇ? ಈ ಎಲ್ಲಾ ಅಸಂಬದ್ಧತೆಯ ಮೂಲಕ ಹಿಂದೂ ಸಮಾಜ ಹೇಗೆ ಸುಧಾರಿಸುತ್ತದೆ ಎಂಬುದಕ್ಕೆ ಅಂಗಡಿಗಳನ್ನು ಮುಚ್ಚಿಸಲು ಬರುವ ಯುವಕರ ಬಳಿಯಾಗಲಿ, ಬಜರಂಗದಳದವರ ಬಳಿಯಾಗಲಿ ಉತ್ತರ ಇರುವುದಿಲ್ಲ. ಪ್ರೇಮಿಗಳ ದಿನದಂದು ಕೂಡ ಅಂಥದೇ ಮತ್ತೊಂದು ಮುಹಮ್ಮದ್ ದೀಪಕ್ ಎಫೆಕ್ಟ್ ಸನ್ನಿವೇಶ ಕಂಡಿತು. ರಾಜಸ್ಥಾನದ ಜೈಪುರದಲ್ಲಿ ಪ್ರೇಮಿಗಳ ದಿನದಂದು, ಬಜರಂಗದಳದವರೆಂದು ಹೇಳಿಕೊಂಡ ಮಂದಿ ಪಾರ್ಕ್‌ನಲ್ಲಿದ್ದ ಜೋಡಿಗೆ ಕಿರುಕುಳ ನೀಡಲು ಬಂದರು. ಆಗ ಸ್ಥಳೀಯರೇ ಆ ಗುಂಪನ್ನು ಎದುರಿಸಿ ಪ್ರಶ್ನಿಸಿದ ಘಟನೆ ನಡೆಯಿತು. ಜನರು ಕೋಪಗೊಳ್ಳತೊಡಗಿದಂತೆ, ಪಾರ್ಕ್‌ನಲ್ಲಿದ್ದ ಜೋಡಿಯನ್ನು ಬೆದರಿಸಲು ಬಂದವರು ಓಡಿಹೋಗತೊಡಗಿದರು. ಒಬ್ಬ ವ್ಯಕ್ತಿ ಮತಾಂಧತೆ ಮತ್ತು ದಬ್ಬಾಳಿಕೆ ವಿರುದ್ಧ ನಿಂತರೂ, ಅದು ಅನೇಕರಿಗೆ ಜೀವದಾನ ನೀಡುತ್ತದೆ ಎಂಬುದು ಸ್ಪಷ್ಟ. ಜನರು ಅದರಿಂದ ಸ್ಫೂರ್ತಿ ಪಡೆಯುತ್ತಾರೆ, ಅದರಿಂದ ಕಲಿಯುತ್ತಾರೆ ಮತ್ತು ಅದು ಅವರಿಗೆ ಶಕ್ತಿಯನ್ನು ನೀಡುತ್ತದೆ. ಹಿಂದೂಗಳು ಎಚ್ಚರಗೊಂಡು ಒಗ್ಗೂಡಿದರೆ ಬಜರಂಗದಳದಂಥ ಜನರ ದ್ವೇಷದ ದಿನಗೂಲಿ ನಿಂತುಹೋಗುತ್ತದೆ. ಇತ್ತೀಚೆಗೆ ಬಿಜೆಪಿಯ ಗುರುಗ್ರಾಮದ ಮಾಜಿ ಸಂಸದ ಸುಖ್‌ಬೀರ್ ಸಿಂಗ್, ಧರ್ಮದ ಬಗ್ಗೆ ಕೇಳಿ ಮುಸ್ಲಿಮ್ ಮಹಿಳೆಯರಿಗೆ ಕೊಟ್ಟ ಕಂಬಳಿ ವಾಪಸ್ ಪಡೆಯುತ್ತಾರೆ. ಮುಸ್ಲಿಮ್ ಮಹಿಳೆಯರನ್ನು ಹೊರಹೋಗುವಂತೆ ಹೇಳಲಾಗುತ್ತದೆ. ಜನರು ಈ ಬಗ್ಗೆ ಅವರನ್ನು ಪ್ರಶ್ನಿಸಿ, ಪ್ರಜಾಪ್ರಭುತ್ವದಲ್ಲಿ ಇದನ್ನು ಮಾಡಲು ಸಾಧ್ಯವಿಲ್ಲ ಎಂದು ಹೇಳಿದಾಗ, ಆ ಮಾಜಿ ಸಂಸದ ಕೋಪಗೊಳ್ಳುತ್ತಾರೆ. ಈ ನಾಯಕನ ಅಸಭ್ಯತೆ ನೋಡಿ, ಗ್ರಾಮದವರೆಲ್ಲರೂ ತಮಗೆ ದಾನ ಮಾಡಿದ ಎಲ್ಲಾ ಕಂಬಳಿಗಳು ಮತ್ತು ಸಿಹಿತಿಂಡಿಗಳನ್ನು ಸುಖ್‌ಬೀರ್‌ಗೆ ಹಿಂದಿರುಗಿಸಲು ನಿರ್ಧರಿಸಿದರು ಮತ್ತು ತಮ್ಮ ಹಳ್ಳಿಗೆ ಕಾಲಿಡಬೇಡಿ ಎಂದು ಹೇಳಿದ್ದು ವರದಿಯಾಗಿದೆ. ಚುನಾವಣೆಯಲ್ಲಿ ಸ್ಪರ್ಧಿಸುವುದು ಹಾಗಿರಲಿ, ಅವರು ಇಲ್ಲಿಗೆ ಪ್ರವೇಶಿಸಲೂ ಸಾಧ್ಯವಿಲ್ಲ. ಜಾಟ್‌ಗಳು, ಮೀನಾಗಳು ಮತ್ತು ಗುರ್ಜರರು ಈ ಮುಸ್ಲಿಮ್ ಸಹೋದರರೊಂದಿಗೆ ನಿಲ್ಲುತ್ತಾರೆ ಎಂದು ಸ್ಪಷ್ಟಪಡಿಸಲಾಯಿತು. ಇದು ಕೇವಲ ಒಂದು ಸಣ್ಣ ಹಳ್ಳಿಯ ಕಥೆ. ದೇಶಾದ್ಯಂತ ಜನರು ಹಿಂದೂಗಳು ಮತ್ತು ಮುಸ್ಲಿಮರನ್ನು ವಿಭಜಿಸುವ ನಾಯಕರ ವಿರುದ್ಧ ಹೀಗೆಯೇ ನಿಲ್ಲಲು ಪ್ರಾರಂಭಿಸಿದರೆ, ಅಂಥ ನಾಯಕರು ಖಂಡಿತ ವಿಪತ್ತು ಎದುರಿಸಬೇಕಾಗುತ್ತದೆ. ಅಂಥ ಒಗ್ಗಟ್ಟು, ಸೋದರತೆಯ ಬಗ್ಗೆಯೇ ಬಿಜೆಪಿ, ಆರೆಸ್ಸೆಸ್ ಮತ್ತು ಬಜರಂಗದಳದವರು ಭಯಪಡುತ್ತಾರೆ. ಇದು ಮುಹಮ್ಮದ್ ದೀಪಕ್ ಪರಿಣಾಮ. ಲಕ್ನೊ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳ ಪ್ರಕಾರ, ನವೀಕರಣ ಕಾರ್ಯ ಪ್ರಾರಂಭಿಸಲು ವಿಶ್ವವಿದ್ಯಾಲಯದ ಆಡಳಿತ ಯಾವುದೇ ಸೂಚನೆಯಿಲ್ಲದೆ ಕ್ಯಾಂಪಸ್‌ನಲ್ಲಿರುವ ಲಾಲ್ ಬರಾದರಿ ಮಸೀದಿಯ ಗೇಟ್‌ಗಳನ್ನು ಮುಚ್ಚಿದೆ. ಮಸೀದಿ 200 ವರ್ಷ ಹಳೆಯದು ಮತ್ತು ಭಾರತೀಯ ಪುರಾತತ್ವ ಸಮೀಕ್ಷೆ ಎಎಸ್ ವ್ಯಾಪ್ತಿಗೆ ಬರುತ್ತದೆ. ಮಸೀದಿಯನ್ನು ಯಾವುದೇ ನವೀಕರಣ ಯೋಜನೆ ಅಥವಾ ಸೂಚನೆ ಇಲ್ಲದೆ ಮುಚ್ಚಲಾಗಿದೆ ಎಂದು ಅಲ್ಲಿನ ವಿದ್ಯಾರ್ಥಿಗಳು ಹೇಳುತ್ತಾರೆ. ತಮ್ಮ ಪ್ರಶ್ನೆಗಳಿಗೆ ಉತ್ತರಗಳನ್ನು ಪಡೆಯುವವರೆಗೆ ಅಲ್ಲಿ ಪ್ರಾರ್ಥನೆ ಸಲ್ಲಿಸುವುದನ್ನು ಮುಂದುವರಿಸುವುದಾಗಿ ಮುಸ್ಲಿಮ್ ವಿದ್ಯಾರ್ಥಿಗಳು ಹೇಳುತ್ತಾರೆ. ಮುಸ್ಲಿಮ್ ವಿದ್ಯಾರ್ಥಿಗಳನ್ನು ಒಳಗೆ ಬಿಡಲು ನಿರಾಕರಿಸಿದಾಗ, ಹಿಂದೂ ವಿದ್ಯಾರ್ಥಿಗಳು ತಮ್ಮ ಮುಸ್ಲಿಮ್ ಸಹೋದರರು ಪ್ರಾರ್ಥನೆ ಸಲ್ಲಿಸಲು ರಕ್ಷಣೆಗಾಗಿ ಮಾನವ ಸರಪಳಿ ರಚಿಸಿದರು. ಸಂಜೆ, ಜನರು ಮಸೀದಿಯ ಹೊರಗೆ ಇಫ್ತಾರ್ ಕೂಟವನ್ನು ಸಹ ನಡೆಸಿದರು. ಕೋಮು ಉದ್ವಿಗ್ನತೆ ಹೆಚ್ಚಿಸಲು ನಡೆಯುತ್ತಿರುವ ಪ್ರಯತ್ನಗಳ ಹೊರತಾಗಿಯೂ ವಿಶ್ವವಿದ್ಯಾನಿಲಯದಲ್ಲಿ ಸಹೋದರತ್ವವನ್ನು ಕಾಪಾಡಿಕೊಳ್ಳುವ ಭರವಸೆ ನೀಡುವ ಸಂದೇಶ ಈ ಮೂಲಕ ಬಂತು. ಭಾರತದಲ್ಲಿ ಇಂತಹ ಕೋಮು ದ್ವೇಷ ಎಷ್ಟು ಸಾಮಾನ್ಯವಾಗಿದೆ ಯೆಂದರೆ, ಸಾಮಾನ್ಯ ಜನರು ಸಹ ಇನ್ನೊಬ್ಬ ವ್ಯಕ್ತಿಗೆ ಸಹಾಯ ಮಾಡಲು ಹೆದರುತ್ತಾರೆ. ಆದರೆ ಕೋಟ್ದ್ವಾರದ ದೀಪಕ್ ಯಾವಾಗ ವೃದ್ಧ ಮುಸ್ಲಿಮ್ ವ್ಯಾಪಾರಿಯ ಪರವಾಗಿ ನಿಂತು ಧ್ವನಿ ಎತ್ತಿದರೋ ಅಂದಿನಿಂದ ಎಂಥದೋ ಒಂದು ಬದಲಾವಣೆ ಕಾಣುತ್ತಿದೆ. ಎಲ್ಲರೂ ಪ್ರಶ್ನಿಸಲು ನಿಂತರೆ, ಭಯ ಮತ್ತು ದ್ವೇಷದ ವ್ಯವಹಾರದಿಂದ ಜೀವನ ಸಾಗಿಸುವವರು ಹಾಗೆ ಮಾಡಲು ಸಾಧ್ಯವಾಗುವುದಿಲ್ಲ. ಈಗ ಅಂಥದೇ ಸಾಧ್ಯತೆ ತೆರೆಯುತ್ತಿರುವ ಹಾಗೆ ತೋರುತ್ತಿದೆ. ಮುಹಮ್ಮದ್ ದೀಪಕ್ ಹಿಂದೂವಾಗಿ ತನ್ನ ಕರ್ತವ್ಯವನ್ನು ಪೂರೈಸಿದ್ದಾರೆ. ಅಲ್ಲದೆ ಬೆಳೆಯುತ್ತಿರುವ ದ್ವೇಷದ ವಿರುದ್ಧ ಹೋರಾಡಲು ಅವರು ತಮ್ಮ ಸ್ನೇಹಿತನೊಂದಿಗೆ ಈಗ ಭಾರತದಾದ್ಯಂತ ಇನ್ಸಾನಿಯತ್ ಜೋಡೋ ಯಾತ್ರೆ ಆಯೋಜಿಸುವ ಬಗ್ಗೆ ಯೋಚಿಸಿದ್ದಾರೆ. ದೇಶದ ಕಲ್ಯಾಣಕ್ಕಾಗಿ, ದ್ವೇಷದ ಏಜೆಂಟರನ್ನು ತಡೆಯಲು, ದ್ವೇಷವೇ ದೇಶವನ್ನು ಸುಡುವುದನ್ನು ತಪ್ಪಿಸಲು ಮಾಡಬೇಕಿರುವುದೇನು ಎಂಬುದಕ್ಕೆ ಮುಹಮ್ಮದ್ ದೀಪಕ್ ಅವರ ಈ ದಾರಿ ಒಂದು ಮಾದರಿ.

ವಾರ್ತಾ ಭಾರತಿ 26 Feb 2026 10:34 am

Ind vs Zim: ನೋಡ್ತಾ ಇರಿ ಕೂತವರು ಎದ್ದೇಳ್ತಾರೆ; ಫಾರ್ಮ್‌ನಲ್ಲಿ ಇಲ್ಲದ ಅಭಿಷೇಕ್‌ ಶರ್ಮಾ ಪರ ಬ್ಯಾಟ್‌ ಬೀಸಿದ ಬ್ಯಾಟಿಂಗ್‌ ಕೋಚ್‌

ಟಿ-20 ವಿಶ್ವಕಪ್‌ 2026 ಪಂದ್ಯಾವಳಿಯಲ್ಲಿ ಭಾರತದ ಪಯಣ ಮುಂದುವರೆಯಲಿ ಎಂದು ಪ್ರಾರ್ಥಿಸುತ್ತಿರುವ ಕ್ರೀಡಾ ಪ್ರೇಮಿಗಳು, ಇಂದಿನ (ಫೆ.26-ಗುರುವಾರ) ಭಾರತ vs ಜಿಂಬಾಬ್ವೆ ಪಂದ್ಯದ ಫಲಿತಾಂಶದ ಬಗ್ಗೆ ತುಂಬಾ ತಲೆಕೆಡಿಸಿಕೊಂಡಿದ್ದಾರೆ. ಅರಂಭಿಕ ಆಟಗಾರ ಅಭಿಷೇಕ್‌ ಶರ್ಮಾ ತಮ್ಮ ಫಾರ್ಮ್‌ಗೆ ಮರಳಿದರೆ, ಜಿಂಬಾಬ್ವೆ ಧೂಳಿಪಟವಾಗಲಿದೆ ಎಂದು ಮಾತನಾಡಿಕೊಳ್ಳುತ್ತಿರುವ ಭಾರತೀಯ ಕ್ರಿಕೆಟ್‌ ಪ್ರೇಮಿಗಳು, ತಿಲಕ್‌ ವರ್ಮಾ ಕೂಡ ಅಬ್ಬರಿಸಲಿ ಎಂದು ಹಾರೈಸುತ್ತಿದ್ದಾರೆ. ಈ ಇಬ್ಬರೂ ಆಟಗಾರರ ಫಾರ್ಮ್‌ ಬಗ್ಗೆ ಭಾರತದ ಬ್ಯಾಟಿಂಗ್‌ ಕೋಚ್‌ ಹೇಳುವುದೇನು?

ವಿಜಯ ಕರ್ನಾಟಕ 26 Feb 2026 10:00 am

Gold Rate Fall: ಏರಿಕೆಯ ನಡುವೆ ದಿಢೀರ್ ಇಳಿದ ಚಿನ್ನದ ದರ: ಅಲ್ಪ ಇಳಿಕೆಗೆ ಇಲ್ಲಿವೆ ಕಾರಣಗಳು

ಹೂಡಿಕೆದಾರರು ಲಾಭ ಕಾಯ್ದಿರಿಸಿಕೊಳ್ಳಲು (profit booking) ಮುಂದಾಗಿದ್ದೇ ಇಂದಿನ ಬೆಲೆ ಇಳಿಕೆಗೆ ಕಾರಣವಾಗಿದೆ. ಅಮೆರಿಕ- ಇರಾನ್ ನಡುವೆ ಮಾತುಕತೆ ಮುಂದುವರಿದಿರುವ ಹಿನ್ನೆಲೆ ಬೆಲೆಗಳಲ್ಲಿ ಏರಿಳಿತ ಕಂಡುಬರುತ್ತಿದೆ.

ವಿಜಯ ಕರ್ನಾಟಕ 26 Feb 2026 9:53 am

ಮಂಗಳೂರು | ಅಪ್ರಾಪ್ತ ವಯಸ್ಸಿನವರ ಮೇಲೆ ಅನೈತಿಕ ಪೊಲೀಸ್ ಗಿರಿ: ತಂದೆ, ಮಗನ ವಿರುದ್ಧ ಪ್ರಕರಣ ದಾಖಲು

ಮಂಗಳೂರು: ಬಾಲಕ ಮತ್ತು ಬಾಲಕಿಯೊಬ್ಬಳ ಮೇಲೆ ಅನೈತಿಕ ಪೊಲೀಸ್ ಗಿರಿ ಎಸಗಿದ ಆರೋಪದಲ್ಲಿ ತಂದೆ ಮತ್ತು ಮಗನ ವಿರುದ್ಧ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸೋಮವಾರ ಸಂಜೆ ಈ ಘಟನೆ ನಡೆದಿದ್ದು, ನಗರದ ಬಾಬುಗುಡ್ಡ ರೈಲ್ವೆ ಟ್ರ್ಯಾಕ್ ಬಳಿಯಿದ್ದ ಬಾಲಕ ಮತ್ತು ಬಾಲಕಿಯನ್ನು ತಡೆದು ನಿಲ್ಲಿಸಿದ ಆರೋಪಿಗಳಾದ ತಂದೆ ಮತ್ತು ಮಗ ಅವರಿಬ್ಬರ ವೀಡಿಯೊ ಮಾಡಿದ್ದಾರೆ. ಅಲ್ಲದೇ, ಬಾಲಕನಿಗೆ ಹಲ್ಲೆ ನಡೆಸಿ, ಜಾತಿ ನಿಂದನೆಗೈದು ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಇದರ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಬಾಲಕನ ತಂದೆ ನೀಡಿದ ದೂರಿನಂತೆ ಪಾಂಡೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ.

ವಾರ್ತಾ ಭಾರತಿ 26 Feb 2026 9:53 am

ಬೈಕ್‌ ಅಪಘಾತಕ್ಕೆ ಮಂಡ್ಯ ಯುವಕನ ಬ್ರೇನ್‌ ಡೆಡ್:‌ 6 ಜನರ ಬಾಳಿಗೆ ಜೀವ ತುಂಬಿ ಸಾವಿನಲ್ಲೂ ಸಾರ್ಥಕತೆ ಮೆರೆದ ಯುವಕ!

ಮಂಡ್ಯದ ಯುವಕನೊಬ್ಬ ಬೈಕ ಅಪಘಾತಕ್ಕಿಡಾಗಿದ್ದು, ಇದರಿಂದಾಗಿ ಆತನ ತಲೆಗೆ ಪೆಟ್ಟುಬಿದ್ದಿದೆ. ಕೂಡಲೇ ಕುಟುಂಬಸ್ಥರು ಆತನನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ ಟ್ರಾಮಾ ಕೇರ್‌ ಸೆಂಟರ್‌ ಗೆ ಕರೆದುಕೊಂಡು ಬಂದಿದ್ದಾರೆ. ಈ ವೇಳೆ, ವೈದ್ಯರು ಈತನ ಮೆದುಳು ನಿಷ್ಕ್ರಿಯವಾಗಿದೆ ಎಂದು ತಿಳಿಸಿದ್ದು, ಈ ನೋವಿನಲ್ಲೂ ಸಹ ಕುಟುಂಬಸ್ಥರು ಆತನ ಅಂಗಾಂಗ ದಾನ ಮಾಡಲು ಸಮ್ಮತಿ ನೀಡಿದ್ದಾರೆ. ಈ ಮೂಲಕ ಆತನ ದೇಹದ ಅಂಗಾಂಗ ಕಸಿ ಮಾಡಿದ್ದು, ಸುಮಾರು 6 ಜನರ ಬಾಳಿಗೆ ಬೆಳಕು ನೀಡಿದೆ. ಈ ಮೂಲಕ ಕುಟುಂಬಸ್ಥರು ಯುವಕನ ಸಾವಿನಲ್ಲೂ ಸಾರ್ಥಕತೆ ಮೆರೆದು ಮಾದರಿಯಾಗಿದ್ದಾರೆ.

ವಿಜಯ ಕರ್ನಾಟಕ 26 Feb 2026 9:52 am

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇಸ್ರೇಲ್ ಸಂಸತ್‌ನಲ್ಲಿ ವಿಶೇಷ ಗೌರವ | PM Narendra Modi

ಭಾರತ ಮತ್ತು ಇಸ್ರೇಲ್ ಸಂಬಂಧ ಎಷ್ಟು ಗಟ್ಟಿಯಾಗಿದೆ ಎಂಬುದು ಇಡೀ ಜಗತ್ತಿಗೆ ಮತ್ತೊಮ್ಮೆ ಈಗ ಮನವರಿಕೆ ಆಗುತ್ತಿದ್ದು, ಇಸ್ರೇಲ್ ಸಂಸತ್ ಉದ್ದೇಶಿಸಿ ಪ್ರಧಾನಿ ಮೋದಿ ಅವರು ಆಡಿದ ಮಾತುಗಳು ಇದೀಗ ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯುತ್ತಿದೆ. ಒಂದು ಕಡೆ ಪಾಕಿಸ್ತಾನ ರೀತಿಯ ಉಗ್ರ ಪೋಷಕ ದೇಶಗಳಿಗೆ ಎಚ್ಚರಿಕೆ ಸಂದೇಶ ಹೋಗಿದ್ದರೆ, ಇನ್ನೊಂದು ಕಡೆ ಭಾರತದ ಅಭಿವೃದ್ಧಿಯ ವೇಗ

ಒನ್ ಇ೦ಡಿಯ 26 Feb 2026 9:41 am

AI ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಪ್ರತಿಭಟನೆ | ಯುವ ಕಾಂಗ್ರೆಸ್ ನಾಯಕರನ್ನು ಬಂಧಿಸಿ ಕರೆದೊಯ್ಯುತ್ತಿದ್ದ ದಿಲ್ಲಿ ಪೊಲೀಸರ 20 ಸಿಬ್ಬಂದಿಯನ್ನು ವಶಕ್ಕೆ ಪಡೆದ ಹಿಮಾಚಲ ಪ್ರದೇಶ ಪೊಲೀಸರು

ಶಿಮ್ಲಾ, ಫೆ.26: ಹೊಸದಿಲ್ಲಿಯಲ್ಲಿ ನಡೆದ ಎಐ ಇಂಪ್ಯಾಕ್ಟ್ ಶೃಂಗಸಭೆಯ ಸಂದರ್ಭ ನಡೆದ ಪ್ರತಿಭಟನೆಗೆ ಸಂಬಂಧಿಸಿ ರೋಹ್ರುವಿನ ಮೂವರು ಯುವ ಕಾಂಗ್ರೆಸ್ ನಾಯಕರನ್ನು ಬಂಧಿಸಲು ಹಿಮಾಚಲ ಪ್ರದೇಶಕ್ಕೆ ಬಂದಿದ್ದ ದಿಲ್ಲಿಯ ಪೊಲೀಸರ ತಂಡವನ್ನು ರಾಜ್ಯ ಪೊಲೀಸರು ಧರಂಪುರ ಬಳಿ ತಡೆದು ಕನಿಷ್ಠ 20 ಮಂದಿ ಸಿಬ್ಬಂದಿಯನ್ನು ವಶಕ್ಕೆ ಪಡೆದಿರುವ ಘಟನೆ ಬೆಳಕಿಗೆ ಬಂದಿದೆ. ದಿಲ್ಲಿಯಲ್ಲಿ ನಡೆದ ಎಐ ಶೃಂಗಸಭೆಯ ವೇಳೆ ಯುವ ಕಾಂಗ್ರೆಸ್ ನಾಯಕರು ಶರ್ಟ್ ಬಿಚ್ಚಿ ನಡೆಸಿದ ಪ್ರತಿಭಟನೆಗೆ ಸಂಬಂಧಿಸಿ ದಿಲ್ಲಿ ಪೊಲೀಸ್ ತಂಡ ರೋಹ್ರುಗೆ ಆಗಮಿಸಿತ್ತು. ಅಲ್ಲಿಂದ ಮೂವರು ನಾಯಕರನ್ನು ಬಂಧಿಸಿ ದಿಲ್ಲಿಗೆ ಕರೆದೊಯ್ಯುವ ವೇಳೆ ಧರಂಪುರ ಸಮೀಪ ಹಿಮಾಚಲ ಪೊಲೀಸರು ವಾಹನವನ್ನು ತಡೆದಿದ್ದಾರೆ. ಬಳಿಕ ದಿಲ್ಲಿ ಪೊಲೀಸರನ್ನೂ ಹಾಗೂ ಬಂಧಿತ ನಾಯಕರನ್ನೂ ಶಿಮ್ಲಾಕ್ಕೆ ಕರೆದೊಯ್ಯಲಾಗಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸುವ ಪ್ರಕ್ರಿಯೆ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. ಸೋಲನ್ ಜಿಲ್ಲೆಯ ಎಸ್ಪಿ ತಿರುಮಲರಾಜು ಎಸ್‌.ಡಿ. ವರ್ಮಾ ಘಟನೆಯ ಬಗ್ಗೆ ಮಾಹಿತಿ ಪಡೆದಿರುವುದನ್ನು ದೃಢಪಡಿಸಿದ್ದಾರೆ. ಶಿಮ್ಲಾ ಪೊಲೀಸರ ಮನವಿಯ ಮೇರೆಗೆ ಧರಂಪುರ ಬಳಿ ನಾಕಾಬಂಧಿ ತಪಾಸಣೆಗಳನ್ನು ಸ್ಥಾಪಿಸಲಾಗಿತ್ತು ಎಂದು ತಿಳಿಸಿದ್ದಾರೆ. ಈ ಕುರಿತು ರಾಜ್ಯದ ಡಿಜಿಪಿ ಪ್ರತಿಕ್ರಿಯೆ ನೀಡಿಲ್ಲ. ಈ ಘಟನೆಗೆ ಪ್ರತಿಕ್ರಿಯಿಸಿದ ಎಐಸಿಸಿ ವಕ್ತಾರ ಹಾಗೂ ಥಿಯೋಗ್ ಶಾಸಕ ಕುಲದೀಪ್ ರಾಥೋಡ್, ಹಿಮಾಚಲ ಸದನದ ಮೇಲೆ ದಾಳಿ ನಡೆಸಿದ ಆರೋಪದಡಿ ದಿಲ್ಲಿ ಪೊಲೀಸರ ವಿರುದ್ಧ ರಾಜ್ಯ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಯುವ ಕಾಂಗ್ರೆಸ್ ನಾಯಕರ ವಿರುದ್ಧ ಕೈಗೊಂಡ ಕ್ರಮವು ಅವರ ಧ್ವನಿಯನ್ನು ಹತ್ತಿಕ್ಕುವ ಪ್ರಯತ್ನ ಎಂದು ಆರೋಪಿಸಿದ್ದಾರೆ. “ವಾರೆಂಟ್ ಇಲ್ಲದೆ ಆವರಣದ ಮೇಲೆ ದಾಳಿ ನಡೆಸುವುದು ಗೌಪ್ಯತೆಯ ಸ್ಪಷ್ಟ ಉಲ್ಲಂಘನೆ,” ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ. ದಿಲ್ಲಿ ಪೊಲೀಸರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ. ದೇಶವು ಒಂದು ಪಕ್ಷದ ಆಸ್ತಿಯಲ್ಲ ಎಂದು ಕೇಂದ್ರ ಸರ್ಕಾರವನ್ನು ಟೀಕಿಸಿದ ಅವರು, “ಪ್ರಜಾಪ್ರಭುತ್ವದಲ್ಲಿ ಸರ್ಕಾರಗಳು ಬರುತ್ತವೆ ಮತ್ತು ಹೋಗುತ್ತವೆ. ಆದರೆ ವಿರೋಧ ಪಕ್ಷದ ಕರ್ತವ್ಯ ಜನರ ಧ್ವನಿಯನ್ನು ಎತ್ತುವುದು,” ಎಂದು ಹೇಳಿದ್ದಾರೆ. ಹೊಸದಿಲ್ಲಿಯಲ್ಲಿ ನಡೆದ ಎಐ ಶೃಂಗಸಭೆಯ ಸಂದರ್ಭ ಯುವ ಕಾಂಗ್ರೆಸ್ ಕಾರ್ಯಕರ್ತರು ಶರ್ಟ್ ಬಿಚ್ಚಿ ನಡೆಸಿದ ಪ್ರತಿಭಟನೆಯನ್ನು ದೊಡ್ಡ ವಿಷಯವನ್ನಾಗಿ ಮಾಡಿ ಯುವಜನರ ಧ್ವನಿಯನ್ನು ಹತ್ತಿಕ್ಕಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ. ಫೆಬ್ರವರಿ 20ರಂದು ಯುಎಸ್–ಭಾರತ ವ್ಯಾಪಾರ ಒಪ್ಪಂದ ಹಾಗೂ ರೈತರು ಮತ್ತು ಯುವಕರ ಮೇಲೆ ಅದರ ಪರಿಣಾಮದ ವಿರುದ್ಧ ಯುವ ಕಾಂಗ್ರೆಸ್ ಕಾರ್ಯಕರ್ತರು ಶಾಂತಿಯುತವಾಗಿ ಪ್ರತಿಭಟಿಸಿದ್ದರು ಎಂದು ರಾಥೋಡ್ ಹೇಳಿದ್ದಾರೆ. ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳು, ಉದ್ಯೋಗಾವಕಾಶಗಳ ಕೊರತೆ ಮತ್ತು ಉದ್ಯೋಗ ಕಡಿತದಿಂದ ಯುವಕರಲ್ಲಿ ತೀವ್ರ ಅಸಮಾಧಾನ ಉಂಟಾಗಿದೆ ಎಂದು ತಿಳಿಸಿದ್ದಾರೆ.  ಪ್ರತಿಭಟನಾಕಾರರು ಅಂತರರಾಷ್ಟ್ರೀಯ ಮಟ್ಟದಲ್ಲಿ ದೇಶದ ಪ್ರತಿಷ್ಠೆಯನ್ನು ಹಾನಿಗೊಳಿಸಿದ್ದಾರೆ ಎಂಬ ಪ್ರಧಾನಿ ಮೋದಿ ಹೇಳಿಕೆಯನ್ನು ರಾಥೋಡ್ ಖಂಡಿಸಿದ್ದಾರೆ. “ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ರಾಷ್ಟ್ರವಿರೋಧಿಯೇ?” ಎಂದು ಪ್ರಶ್ನಿಸಿದ ಅವರು, “ಪ್ರಧಾನಿಯ ವಿರುದ್ಧ ಮಾತನಾಡಿದವರನ್ನು ರಾಷ್ಟ್ರವಿರೋಧಿ ಎಂದು ಗುರುತಿಸುವುದು ಪ್ರಜಾಪ್ರಭುತ್ವದ ಆತ್ಮಕ್ಕೆ ವಿರುದ್ಧವಾಗಿದೆ,” ಎಂದು ಹೇಳಿದ್ದಾರೆ. “ಭಾರತದ ಘನತೆ ಪ್ರತಿಭಟನಾಕಾರರು ಹಾಗೂ ಸರ್ಕಾರ ಎರಡರ ಜವಾಬ್ದಾರಿಯಾಗಿದೆ,” ಎಂದು ಅವರು ತಿಳಿಸಿದ್ದಾರೆ.

ವಾರ್ತಾ ಭಾರತಿ 26 Feb 2026 9:00 am

ಪ್ರತಿಭಟನೆಯ ಅತಿರೇಕ : ಶರ್ಟ್‌ಲೆಸ್ ಹೋರಾಟಕ್ಕೆ ಮೈತ್ರಿಕೂಟದಲ್ಲಿ ಆಕ್ಷೇಪ - ರಾಹುಲ್ ಗಾಂಧಿಗೆ ತೀವ್ರ ಮುಜುಗರ

INC Youth Workers Shirtless Protest : ಇಡೀ ವಿಶ್ವವೇ ನೋಡುತ್ತಿದ್ದ ಎಐ ಸಮ್ಮಿಟ್’ನಲ್ಲಿ ಕಾಂಗ್ರೆಸ್ಸಿನ ಯುವ ಘಟಕದ ಕಾರ್ಯಕರ್ತರು ನಡೆಸಿದ ಪ್ರತಿಭಟನೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಅಂತಾರಾಷ್ಟ್ರ‍ೀಯ ಮಟ್ಟದ ಕಾರ್ಯಕ್ರಮವೊಂದರಲ್ಲಿ ದೇಶದ ಮರ್ಯಾದೆಯನ್ನು ಹರಾಜು ಹಾಕಲು ಕಾಂಗ್ರೆಸ್ ನಿರ್ಧರಿಸಿದಂತಿದೆ ಎಂದು ಸಾರ್ವಜನಿಕ ವಲಯದಲ್ಲೂ ಅಸಮಾಧಾನ ವ್ಯಕ್ತವಾಗಿದೆ. ಇಂಡಿಯಾ ಮೈತ್ರಿಕೂಟದ ಸದಸ್ಯರೂ ಈ ಪ್ರತಿಭಟನೆ ತಪ್ಪು ಎಂದಿದ್ದಾರೆ.

ವಿಜಯ ಕರ್ನಾಟಕ 26 Feb 2026 8:47 am

ನರೇಂದ್ರ ಮೋದಿ ಹೆಸರಿಗೆ ಮತ್ತೊಂದು ದಾಖಲೆ; ಪ್ರಧಾನಿ ಇನ್ಸ್ಟಾಗ್ರಾಮ್‌ನಲ್ಲಿ ಪ್ರಧಾನಿಗೆ 100 ಮಿಲಿಯನ್‌ ಫಾಲೋವರ್ಸ್‌

ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜನಪ್ರಿಯತೆ ಜಾಗತಿಕ ಮಟ್ಟದಲ್ಲಿ ಚರ್ಚೆಯಾಗುವ ವಿಷಯ. ಪ್ರಧಾನಿ ಮೋದಿ ಅವರ ಆಡಳಿತ ವೈಖರಿ, ಜನರೊಂದಿಗಿನ ಅವರ ನೇರ ಸಂಪರ್ಕದ ಬಗ್ಗೆ ಜಗತ್ತು ಮಾತನಾಡುತ್ತದೆ. ಅದೇ ರೀತಿ ಪ್ರಧಾನಿ ಮೋದಿ ಸಾಮಾಜಿಕ ಜಾಲತಾಣಗಳಲ್ಲೂ ಭಾರೀ ಸಂಖ್ಯೆಯ ಅನುಯಾಯಿಗಳನ್ನು ಹೊಂದಿದ್ದು, ಅವರ ಇನ್ಸ್ಟಾಗ್ರಾಮ್‌ ಅಕೌಂಟ್‌ ಈಗ ಬರೋಬ್ಬರಿ 100 ಮಿಲಿಯನ್ ಫಾಲೋವರ್ಸ್ ಹೊಂದಿದೆ. ಇನ್ಸ್ಟಾಗ್ರಾಮ್‌ನಲ್ಲಿ 10 ಕೋಟಿ ಫಾಲೋವರ್ಸ್‌ ಹೊಂದಿರುವ ವಿಶ್ವದ ಏಕೈಕ ರಾಜಕೀಯ ನೇತಾರ ಎಂಬ ಹೆಗ್ಗಳಿಕೆಗೆ ಪ್ರಧಾನಿ ಮೋದಿ ಪಾತ್ರರಾಗಿದ್ದಾರೆ.

ವಿಜಯ ಕರ್ನಾಟಕ 26 Feb 2026 8:42 am

ಖಾಸಗಿ ವಲಯದಲ್ಲಿ ಮೀಸಲಾತಿ: ಹೋರಾಟಕ್ಕೆ ಇನ್ನೇಕೆ ತಡ?

ಸರಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಬಿದ್ದಿರುವ ಹುದ್ದೆಗಳ ಭರ್ತಿಗೆ ಕೂಡಲೇ ಅಧಿಸೂಚನೆ ಪ್ರಕಟಿಸುವಂತೆ ಆಗ್ರಹಿಸಿ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿಗಳ ಸಂಘಟನೆಯು ಧಾರವಾಡದಲ್ಲಿ ಬೃಹತ್ ಧರಣಿಯನ್ನು ಮಂಗಳವಾರ ಹಮ್ಮಿಕೊಂಡಿತ್ತು. ಪ್ರತಿಭಟನೆಯ ಬಿಸಿ ಸರಕಾರಕ್ಕೆ ಮುಟ್ಟಿದ್ದು ತಕ್ಷಣ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟೀಕರಣ ನೀಡಿದ್ದಾರೆ. ಈ ಪ್ರತಿಭಟನೆಗೆ ಬಿಜೆಪಿ, ಜೆಡಿಎಸ್ ಕೂಡ ಕೈ ಜೋಡಿಸಿದ್ದು ಖಾಲಿ ಹುದ್ದೆಗಳನ್ನು ತುಂಬುವಲ್ಲಿ ಸರಕಾರದ ವೈಫಲ್ಯವನ್ನು ಟೀಕಿಸಿವೆ. ಸದ್ಯಕ್ಕೆ ರಾಜ್ಯದಲ್ಲಿ ೨.೮೪ ಲಕ್ಷ ಸರಕಾರಿ ಹುದ್ದೆಗಳು ಖಾಲಿ ಇವೆ ಎಂದು ಸಂಘಟನೆಗಳು ಆರೋಪಿಸಿವೆ. ಈಗಾಗಲೇ ೫೦,೦೦೦ ಹುದ್ದೆಗಳ ನೇಮಕಾತಿಗೆ ಹಣಕಾಸು ಇಲಾಖೆ ಅನುಮೋದಿಸಿದ್ದು, ತಕ್ಷಣ ಅಧಿಸೂಚನೆ ಹೊರಡಿಸಬೇಕು ಎಂದು ಒತ್ತಾಯಿಸಿವೆ. ಸುಮಾರು ಎರಡೂವರೆ ಲಕ್ಷಕ್ಕೂ ಅಧಿಕ ಸರಕಾರಿ ಹುದ್ದೆಗಳು ಕೇವಲ ಕಳೆದ ಮೂರು ವರ್ಷಗಳಿಂದ ಖಾಲಿ ಬಿದ್ದಿರುವುದಲ್ಲ. ಈ ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲೂ ಈ ಖಾಲಿ ಹುದ್ದೆಗಳನ್ನು ತುಂಬಲು ಸರಕಾರ ವಿಫಲವಾಗಿತ್ತು. ‘‘ಯುವ ಜನರು ಎರಡೂವರೆ ವರ್ಷಗಳಿಂದ ಕಣ್ಮೀರು ಹಾಕುತ್ತಿದ್ದಾರೆ’’ ಎಂದು ಬಿಜೆಪಿ ರಾಜ್ಯಾಧ್ಯಕ್ಷರು ಆರೋಪಿಸಿದ್ದಾರೆ. ಈ ಯುವಜನರು ಬಿಜೆಪಿ ಆಡಳಿತ ಕಾಲದಲ್ಲಿ ಖಾಲಿ ಬಿದ್ದಿರುವ ಹುದ್ದೆಗಳನ್ನು ನೋಡಿ ಸಂತೋಷ, ಸಂಭ್ರಮದಲ್ಲಿದ್ದರೆ? ಎನ್ನುವ ಪ್ರಶ್ನೆಗೆ ಅವರ ಬಳಿ ಉತ್ತರವಿರಲಿಕ್ಕಿಲ್ಲ. ಯಾಕೆಂದರೆ, ಈ ಯುವಜನರು ಬಿಜೆಪಿಯ ಕಾಲದಲ್ಲೂ ಉದ್ಯೋಗಗಳಿಗಾಗಿ ಹಲವು ಬಾರಿ ಬೀದಿಗಿಳಿದಿದ್ದರು. ಇದೇ ಸಂದರ್ಭದಲ್ಲಿ ಬಿಜೆಪಿಯ ಕಡೆಗೆ ಬೆರಳು ತೋರಿಸಿ ಹೊಣೆಗಾರಿಕೆಯಿಂದ ಸಿದ್ದರಾಮಯ್ಯ ಪಾರಾಗುವುದಕ್ಕೆ ಸಾಧ್ಯವಿಲ್ಲ. ‘‘ನಾವು ಅಧಿಕಾರಕ್ಕೆ ಬಂದಾಗ ೨.೬೪ ಲಕ್ಷಕ್ಕೂ ಹೆಚ್ಚು ಸರಕಾರಿ ಹುದ್ದೆಗಳು ಖಾಲಿ ಇದ್ದವು. ಹಿಂದಿನ ಬಿಜೆಪಿ ಸರಕಾರ ಸಕಾಲದಲ್ಲಿ ನೇಮಕಾತಿಗಳನ್ನು ಆರಂಭಿಸದಿರುವುದು ಮತ್ತು ಹುದ್ದೆಗಳನ್ನು ಭರ್ತಿ ಮಾಡಲು ಸೂಕ್ತ ಯೋಜನೆ ರೂಪಿಸದ ಕಾರಣ ದೊಡ್ಡ ಸಂಖ್ಯೆಯಲ್ಲಿ ಹುದ್ದೆಗಳು ಖಾಲಿ ಉಳಿದಿವೆ’’ ಎಂದು ಅವರು ಸಮರ್ಥನೆ ನೀಡಲು ಪ್ರಯತ್ನಿಸಿದ್ದಾರೆ. ಈ ಹಿಂದಿನ ಬಿಜೆಪಿ ಸರಕಾರವು ಸರಕಾರಿ ಹುದ್ದೆಗಳನ್ನು ತುಂಬಲು ತೋರಿಸಿದ ನಿರ್ಲಕ್ಷ್ಯದ ಕಾರಣದಿಂದ ಆ ಪಕ್ಷವನ್ನು ಯುವ ಜನತೆ ತಿರಸ್ಕರಿಸಿದ್ದಾರೆ. ಇದೀಗ ಕಾಂಗ್ರೆಸ್ ಸರಕಾರ ಅಧಿಕಾರ ಹಿಡಿದು ಮೂರು ವರ್ಷ ಕಳೆದಿದೆ. ಹೀಗಿರುವಾಗ ಆ ಖಾಲಿ ಉಳಿದಿರುವ ಹುದ್ದೆಗಳಲ್ಲಿ ಕನಿಷ್ಠ ಅರ್ಧದಷ್ಟು ಹುದ್ದೆಗಳನ್ನು ತುಂಬುವುದಕ್ಕೆ ಕ್ರಮ ತೆಗೆದುಕೊಳ್ಳಬಹುದಿತ್ತು. ಬಿಜೆಪಿಯ ಆಡಳಿತ ಯಾವ ಕಾರಣಕ್ಕೂ ಕಾಂಗ್ರೆಸ್‌ಗೆ ಮಾದರಿಯಾಗಬಾರದು. ಖಾಲಿ ಬಿದ್ದಿರುವ ಸರಕಾರಿ ಹುದ್ದೆಗಳು ಕೇವಲ ಯುವಕರ ನಿರುದ್ಯೋಗ ನಿವಾರಣೆಯ ಭಾಗವಾಗಿಯಷ್ಟೇ ಮುಖ್ಯ ಅಲ್ಲ. ಶಿಕ್ಷಣ ಇಲಾಖೆಯಲ್ಲಿ ಸುಮಾರು ೮೦,೦೦೦ ಹುದ್ದೆಗಳು ಖಾಲಿ ಬಿದ್ದಿವೆ. ಆರೋಗ್ಯ ಮತ್ತು ವೈದ್ಯಕೀಯ ಇಲಾಖೆಯಲ್ಲಿ ೩೭,೫೭೨ ಹುದ್ದೆಗಳು, ಒಳಾಡಳಿತದಲ್ಲಿ ೨೮,೧೮೮, ಉನ್ನತ ಶಿಕ್ಷಣದಲ್ಲಿ ೧೩, ೫೯೯, ಹಿಂದುಳಿದ ವರ್ಗಗಗಳ ಇಲಾಖೆಯಲ್ಲಿ ೧೧,೦೨೦, ಕಂದಾಯ ಇಲಾಖೆಯಲ್ಲಿ ೧೦,೮೬೭, ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ೧೦,೫೦೪ ಹೀಗೆ ಒಟ್ಟು ೨,೮೪, ೮೮೧ ಹುದ್ದೆಗಳು ಖಾಲಿ ಬಿದ್ದಿವೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಸರಕಾರವೂ ಈ ಆರೋಪಗಳನ್ನು ನಿರಾಕರಿಸಿಲ್ಲ. ಇಷ್ಟು ಪ್ರಮಾಣದಲ್ಲಿ ಹುದ್ದೆಗಳು ಖಾಲಿ ಬಿದ್ದರೆ ಅದು ಆಡಳಿತದ ಮೇಲೆ ಪರಿಣಾಮ ಬೀರುವುದಿಲ್ಲವೆ? ಇಂದು ವಿವಿಧ ಇಲಾಖೆಗಳು ವಿಧಿಸಿದ ಗುರಿಯನ್ನು ತಲುಪಲು ಸಾಧ್ಯವಾಗದೇ ಇರುವುದಕ್ಕೆ, ಅರ್ಹ ಸಿಬ್ಬಂದಿ ಕೊರತೆಯೂ ಮುಖ್ಯ ಕಾರಣವಾಗಿದೆ. ಇಂದು ರಾಜ್ಯದಲ್ಲಿ ಏಕೋಪಾಧ್ಯಾಯ ಶಾಲೆಗಳ ಸಂಖ್ಯೆ ಹೆಚ್ಚಿವೆ. ೨೦೧೮ರಲ್ಲಿ ೩,೪೫೦ರಷ್ಟಿದ್ದ ಏಕೋಪಾಧ್ಯಾಯ ಶಾಲೆಗಳು ಇಂದು ೬,೬೭೫ಕ್ಕೆ ತಲುಪಿವೆ. ಸರಕಾರಿ ಶಾಲೆಗಳ ಶಿಕ್ಷಣದ ಗುಣಮಟ್ಟ ಇಳಿಯಲು ಇದೂ ಮುಖ್ಯ ಕಾರಣ. ಇದರಿಂದಾಗಿ ಶಾಲೆಗಳ ವಿದ್ಯಾರ್ಥಿಗಳ ಸಂಖ್ಯೆ ಇಳಿಕೆಯಾಗುತ್ತಿದ್ದು, ಸರಕಾರಿ ಶಾಲೆಗಳು ಮುಚ್ಚುವುದಕ್ಕೆ ನೆಪವಾಗುತ್ತಿದೆ. ಇದೇ ಸಂದರ್ಭದಲ್ಲಿ ರಾಜ್ಯಾದ್ಯಂತ ಪೊಲೀಸ್ ಠಾಣೆಗಳಲ್ಲಿ ಇನ್‌ಸ್ಪೆಕ್ಟರ್‌ಗಳ ಕೊರತೆಯೂ ಎದ್ದು ಕಾಣುತ್ತಿದೆ. ಬೆಂಗಳೂರು ನಗರದ ೧೮ ಆಯಕಟ್ಟಿನ ಠಾಣೆಗಳಲ್ಲಿ ಇನ್ಸ್‌ಪೆಕ್ಟರ್‌ಗಳೇ ಇಲ್ಲ ಎನ್ನುವ ಆರೋಪ ಕೇಳಿ ಬರುತ್ತಿದೆ. ಪೊಲೀಸ್ ಸಿಬ್ಬಂದಿಯ ಕೊರತೆ, ಕಾನೂನು ಸುವ್ಯವಸ್ಥೆಯ ಮೇಲೆ ಪರಿಣಾಮ ಬೀರುವುದು ಸಹಜವೇ ಆಗಿದೆ. ಹೀಗಿರುವಾಗ, ಸರಕಾರಿ ಉದ್ಯೋಗವನ್ನು ನೀಡಿ ಯುವಜನರಿಗೆ ನೆಮ್ಮದಿಯ ಬದುಕನ್ನು ಕಟ್ಟಿಕೊಡುವ ಮಾತು ಪಕ್ಕಕ್ಕಿರಲಿ, ಮೊದಲು, ಸಿಬ್ಬಂದಿಯ ಕೊರತೆಯಿಂದ ನರಳುತ್ತಿರುವ ಇಲಾಖೆಗಳನ್ನು ಬಳಸಿಕೊಂಡು ಅತ್ಯುತ್ತಮ ಆಡಳಿತವನ್ನು ನೀಡುವುದು ಹೇಗೆ ಸಾಧ್ಯ ಎನ್ನುವ ಪ್ರಶ್ನೆಗೆ ಮುಖ್ಯಮಂತ್ರಿ ಅವರು ಉತ್ತರಿಸಬೇಕಾಗಿದೆ. ಇನ್ನುಳಿದಂತೆ ಇದು ನಿರುದ್ಯೋಗ ಸಮಸ್ಯೆಯ ಪರ್ವ ಕಾಲ. ಮೊದಲನೆಯದಾಗಿ, ಬರೇ ಸರಕಾರಿ ಹುದ್ದೆಗಳಿಂದಷ್ಟೇ ಯುವಕರ ನಿರುದ್ಯೋಗ ಸಮಸ್ಯೆಗಳನ್ನು ನಿವಾರಿಸಲು ಸಾಧ್ಯವಿಲ್ಲ. ಸಾರ್ವಜನಿಕ ಸಂಸ್ಥೆಗಳು ಒಂದೊಂದಾಗಿ ಖಾಸಗಿ ವಲಯದ ತೆಕ್ಕೆ ಸೇರುತ್ತಿರುವ ಈ ಸಂದರ್ಭದಲ್ಲಿ, ಈ ನಾಡಿನ ನೆಲ, ಜಲದ ಮೇಲೆ ಬೃಹತ್ ಕಾರ್ಪೊರೇಟ್ ಉದ್ದಿಮೆಗಳು ನಿಯಂತ್ರಣ ಸಾಧಿಸುತ್ತಿರುವ ಸಂದರ್ಭದಲ್ಲಿ ಯುವಕರು ಬರೇ ಸರಕಾರಿ ವಲಯದಲ್ಲಿ ಖಾಲಿ ಬಿದ್ದಿರುವ ಉದ್ಯೋಗಗಳ ನಿರೀಕ್ಷೆಯಲ್ಲಿ ಕಾದು ಕುಳಿತುಕೊಳ್ಳುವಂತಿಲ್ಲ. ಒಂದೆಡೆ ಸರಕಾರಿ ಹುದ್ದೆಗಳನ್ನು ತುಂಬುವಾಗ ಒಳ ಮೀಸಲಾತಿಯ ಸಮಸ್ಯೆಯನ್ನು ಗುರಾಣಿಯಾಗಿ ಬಳಸಲಾಗುತ್ತದೆ. ಒಳಮೀಸಲಾತಿಯು ಪರಿಣಾಮಕಾರಿಯಾಗಿ ಜಾರಿಗೊಳ್ಳದೆ ಈ ಖಾಲಿ ಹುದ್ದೆಗಳನ್ನು ತುಂಬಿದರೆ ಕೆಲವು ದುರ್ಬಲ ಸಮುದಾಯಗಳಿಗೆ ಅನ್ಯಾಯವಾಗುತ್ತದೆ ಎನ್ನುವ ಕೂಗು ಕೇಳಿ ಬರುತ್ತಿದೆ. ಆದರೆ, ಖಾಸಗಿ ವಲಯದಲ್ಲಿರುವ ಸಹಸ್ರಾರು ಹುದ್ದೆಗಳನ್ನು ಯಾವುದೇ ಮೀಸಲಾತಿಯಿಲ್ಲದೆ ತುಂಬಲಾಗುತ್ತಿದೆ. ಈ ವಲಯದಲ್ಲಿ ಮೀಸಲಾತಿ ಜಾರಿಯಾಗದೇ ಇದ್ದರೆ ದುರ್ಬಲ ಸಮುದಾಯದ ಯುವಕರಿಗೆ ನ್ಯಾಯ ಸಿಗುವುದು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಖಾಸಗಿ ವಲಯದಲ್ಲಿ ಮೀಸಲಾತಿ ಜಾರಿಯಾಗುವಂತೆ ಹೋರಾಟ ನಡೆಸುವುದು ಇಂದಿನ ತುರ್ತು ಅಗತ್ಯವಾಗಿದೆ. ಯುವಕರ ನಿರುದ್ಯೋಗದ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತಿರುವ ಬಿಜೆಪಿ ನಾಯಕರು ಖಾಸಗಿ ವಲಯದಲ್ಲಿ ಮೀಸಲಾತಿ ನೀಡುವುದರ ಬಗ್ಗೆ ಯಾಕೆ ಮೌನವಾಗಿದ್ದಾರೆ? ಎನ್ನುವುದು ಗಂಭೀರ ಪ್ರಶ್ನೆಯೇ ಆಗಿದೆ. ಇದೇ ಸಂದರ್ಭದಲ್ಲಿ ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗ ಬೇಡಿಕೆಯ ಬಗ್ಗೆಯೂ ಸರಕಾರ ಗಂಭೀರವಾಗಿ ಯೋಚಿಸಬೇಕಾಗಿದೆ. ಇದೀಗ ಖಾಸಗಿ ಸಂಸ್ಥೆಗಳು ಕೂಡ ‘ಎಐ’ ನೆಪವನ್ನು ಮುಂದಿಟ್ಟುಕೊಂಡು ಏಕಾಏಕಿ ನೌಕರರನ್ನು ಕಿತ್ತು ಹಾಕುತಿವೆ. ಭವಿಷ್ಯದಲ್ಲಿ ತಮ್ಮ ಉದ್ಯೋಗಗಳ ಮೇಲೆ ಎಐ ಬೀರಬಹುದಾದ ಪರಿಣಾಮಗಳ ಬಗ್ಗೆ ಯುವಕರು ಆತಂಕದಲ್ಲಿದ್ದಾರೆ. ಎಐ ಹೊಸ ಉದ್ಯೋಗಳನ್ನು ಸೃಷ್ಟಿಸುವುದಿಲ್ಲ. ಬದಲಿಗೆ ಇರುವ ಉದ್ಯೋಗಗಳನ್ನು ಹೇಗೆ ಕಿತ್ತು ಹಾಕಬಹುದು ಎನ್ನುವುದರಲ್ಲಿ ಅದರ ಯಶಸ್ಸು ಇದೆ. ಎಐ ಕೇವಲ ಬೃಹತ್ ಉದ್ದಿಮೆದಾರರ ಹಿತಾಸಕ್ತಿಗೆ ಪೂರಕವಾಗಿ ಬೆಳೆಯಲು ಸರಕಾರ ಅವಕಾಶ ನೀಡಬಾರದು. ಅದು ಎಲ್ಲರನ್ನೂ ಒಳಗೊಳ್ಳುವಂತಾಗಬೇಕು. ರಾಜ್ಯದ ಸಂಪನ್ಮೂಲಗಳನ್ನು ಎಐ ಕಂಪೆನಿಗಳಿಗೆ ಒತ್ತೆಯಿಡುವ ಸಂದರ್ಭದಲ್ಲಿ ಯುವಜನರ ಭವಿಷ್ಯದ ಬಗ್ಗೆ ಸರಕಾರ ಗಂಭೀರವಾಗಿ ಯೋಚಿಸಬೇಕು. ಅವರ ಭವಿಷ್ಯದ ಗೋರಿಗಳ ಮೇಲೆ ಎಐ ಕಂಪೆನಿಗಳು ವಿಜೃಂಭಿಸುವಂತಾಗಬಾರದು.

ವಾರ್ತಾ ಭಾರತಿ 26 Feb 2026 8:20 am

Karnataka rain effects: ಮಲೆನಾಡು-ಒಳನಾಡಲ್ಲಿ ಭಾರಿ ಗಾಳಿ ಮಳೆ: ನೆಲಕಚ್ಚಿದ ಬೆಳೆ, ಸಿಡಿಲಬ್ಬರಕ್ಕೆ ವಿದ್ಯುತ್ ಸ್ಥಗಿತ

ಕರಾವಳಿ ಸೇರಿದಂತೆ ಒಳನಾಡಿನ ಹತ್ತಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಧಾರಕಾರ ಮಳೆ ಸುರಿದಿದೆ. ಹಲವೆಡೆ ಅಡಕೆ ಕೃಷಿಗಳಿಗೆ ಅನುಕೂಲವಾಗಿದ್ದರೆ, ಮಲೆನಾಡು ಹಾಗೂ ಒಳನಾಡಲ್ಲಿ ದ್ರಾಕ್ಷಿ, ಕಾಫಿ, ಕಡಲೆ, ಸಜ್ಜೆ, ಜೋಳ ಬೆಳೆಗಳಿಗೆ ಭಾರಿ ಹಾನಿಯಾಗಿದೆ.

ವಿಜಯ ಕರ್ನಾಟಕ 26 Feb 2026 8:01 am

ಪತ್ನಿ, ಮೂವರು ಪುತ್ರಿಯರ ಕತ್ತು ಸೀಳಿ ಹತ್ಯೆ; ಆರೋಪಿ ಪತಿ ನಾಪತ್ತೆ

ಹೊಸದಿಲ್ಲಿ: ಉತ್ತರ ದೆಹಲಿಯ ಸಮಯಪುರ ಬದ್ಲಿ ಎಂಬಲ್ಲಿ ಬುಧವಾರ 30 ವರ್ಷದ ಮಹಿಳೆ ಹಾಗೂ ಐದು, ನಾಲ್ಕು ಮತ್ತು ಮೂರು ವರ್ಷದ ಮೂವರು ಪುತ್ರಿಯರ ಶವಗಳು ಕತ್ತುಸೀಳಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಪ್ರಕರಣದ ಶಂಕಿತ ಆರೋಪಿಯಾಗಿರುವ ಪತಿ ತಲೆ ಮರೆಸಿಕೊಂಡಿದ್ದಾನೆ. ಹತ್ಯೆಯ ಉದ್ದೇಶದ ಬಗ್ಗೆ ತಿಳಿದು ಬಂದಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಮೃತಪಟ್ಟವರನ್ನು ಅನಿತಾ ಮತ್ತು ಅವರ ಮೂವರು ಮಕ್ಕಳೆಂದು ಗುರುತಿಸಲಾಗಿದೆ. ಈ ಕುಟುಂಬ ಪಾಟ್ನಾ ಮೂಲದ್ದಾಗಿದ್ದು, ಚಂದನ್ ಪಾರ್ಕ್ ಬಳಿ ಬಾಡಿಗೆ ಮನೆಯಲ್ಲಿ ವಾಸವಿತ್ತು. ಶಂಕಿತ ಆರೋಪಿಯನ್ನು ಮುಂಚುನ್ ಕೇವಾಟ್ ಎಂದು ಗುರುತಿಸಲಾಗಿದ್ದು, ಈತ ಅಝಾದ್‌ಪುರ ಮಂಡಿಯಲ್ಲಿ ಶುಂಠಿ ವ್ಯಾಪಾರಿ. ಬೆಳಿಗ್ಗೆ 8ರ ಸುಮಾರಿಗೆ ಸ್ಥಳೀಯರು ಮಾಹಿತಿ ನೀಡಿದ್ದರಿಂದ ಪೊಲೀಸರ ಗಮನಕ್ಕೆ ಬಂದಿದೆ. ತಕ್ಷಣ ಸ್ಥಳಕ್ಕೆ ಧಾವಿಸಿದ ತಂಡ ನಾಲ್ವರ ಮೃತದೇಹಗಳನ್ನು ರಕ್ತದ ಮಡುವಿನಲ್ಲಿ ಪತ್ತೆ ಮಾಡಿದೆ ಎಂದು ಡಿಸಿಪಿ ಹರೇಶ್ವರ್ ಸ್ವಾಮಿ ಹೇಳಿದ್ದಾರೆ. ಎಲ್ಲರ ಕತ್ತುಗಳನ್ನು ಹರಿತವಾದ ಆಯುಧಗಳಿಂದ ಸೀಳಲಾಗಿತ್ತು ಎಂದು ವಿವರಿಸಿದ್ದಾರೆ. ಅಪರಾಧ ತನಿಖಾ ತಂಡ ಮತ್ತು ವಿಧಿವಿಜ್ಞಾನ ಪ್ರಯೋಗಾಲಯ ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪುರಾವೆಗಳನ್ನು ಕಲೆಹಾಕಿದ್ದಾರೆ. ಬೆಳಿಗ್ಗೆಯಿಂದಲೇ ಕೇವಾಟ್ ತಲೆಮರೆಸಿಕೊಂಡಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಆತನ ಪತ್ತೆಗೆ ಹಲವು ತಂಡಗಳನ್ನು ರಚಿಸಲಾಗಿದೆ.

ವಾರ್ತಾ ಭಾರತಿ 26 Feb 2026 8:00 am

ಮಹಿಳೆ, ಮೂವರು ಪುತ್ರಿಯರ ಕತ್ತು ಸೀಳಿ ಹತ್ಯೆ; ಆರೋಪಿ ಪತಿ ನಾಪತ್ತೆ

ಹೊಸದಿಲ್ಲಿ: ಉತ್ತರ ದೆಹಲಿಯ ಸಮಯಪುರ ಬದ್ಲಿ ಎಂಬಲ್ಲಿ ಬುಧವಾರ 30 ವರ್ಷದ ಮಹಿಳೆ ಹಾಗೂ ಐದು, ನಾಲ್ಕು ಮತ್ತು ಮೂರು ವರ್ಷದ ಮೂವರು ಪುತ್ರಿಯರರ ಶವಗಳು ಕತ್ತುಸೀಳಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಪ್ರಕರಣದ ಶಂಕಿತ ಆರೋಪಿಯಾಗಿರುವ ಪತಿ ತಲೆ ಮರೆಸಿಕೊಂಡಿದ್ದಾನೆ. ಹತ್ಯೆಯ ಉದ್ದೇಶದ ಬಗ್ಗೆ ತಿಳಿದು ಬಂದಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಮೃತಪಟ್ಟವರನ್ನು ಅನಿತಾ ಮತ್ತು ಅವರ ಮೂವರು ಮಕ್ಕಳೆಂದು ಗುರುತಿಸಲಾಗಿದೆ. ಈ ಕುಟುಂಬ ಪಾಟ್ನಾ ಮೂಲದ್ದಾಗಿದ್ದು, ಚಂದನ್ ಪಾರ್ಕ್ ಬಳಿ ಬಾಡಿಗೆ ಮನೆಯಲ್ಲಿ ವಾಸವಿತ್ತು. ಶಂಕಿತ ಆರೋಪಿಯನ್ನು ಮುಂಚುನ್ ಕೇವಾಟ್ ಎಂದು ಗುರುತಿಸಲಾಗಿದ್ದು, ಈತ ಅಝಾದ್ಪುರ ಮಂಡಿಯಲ್ಲಿ ಶುಂಠಿ ವ್ಯಾಪಾರಿ. ಬೆಳಿಗ್ಗೆ 8ರ ಸುಮಾರಿಗೆ ಸ್ಥಳೀಯರು ಮಾಹಿತಿ ನೀಡಿದ್ದರಿಂದ ಪೊಲೀಸರ ಗಮನಕ್ಕೆ ಬಂದಿದೆ. ತಕ್ಷಣ ಸ್ಥಳಕ್ಕೆ ಧಾವಿಸಿದ ತಂಡ ನಾಲ್ವರ ಮೃತದೇಹಗಳನ್ನು ರಕ್ತದ ಮಡುವಿನಲ್ಲಿ ಪತ್ತೆ ಮಾಡಿದೆ ಎಂದು ಡಿಸಿಪಿ ಹರೇಶ್ವರ್ ಸ್ವಾಮಿ ಹೇಳಿದ್ದಾರೆ. ಎಲ್ಲರ ಕತ್ತುಗಳನ್ನು ಹರಿತವಾದ ಆಯುಧಗಳಿಂದ ಸೀಳಲಾಗಿತ್ತು ಎಂದು ವಿವರಿಸಿದ್ದಾರೆ. ಅಪರಾಧ ತನಿಖಾ ತಂಡ ಮತ್ತು ವಿಧಿವಿಜ್ಞಾನ ಪ್ರಯೋಗಾಲಯ ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪುರಾವೆಗಳನ್ನು ಕಲೆಹಾಕಿದ್ದಾರೆ. ಬೆಳಿಗ್ಗೆಯಿಂದಲೇ ಕೇವಾಟ್ ತಲೆಮರೆಸಿಕೊಂಡಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಆತನ ಪತ್ತೆಗೆ ಹಲವು ತಂಡಗಳನ್ನು ರಚಿಸಲಾಗಿದೆ.

ವಾರ್ತಾ ಭಾರತಿ 26 Feb 2026 8:00 am

ಕ್ಯೂಬಾ ಕರಾವಳಿ ಕಾವಲು ಪಡೆಯಿಂದ ಅಮೆರಿಕದ ಸ್ಪೀಡ್ ಬೋಟ್‌ನ ನಾಲ್ವರು ಪ್ರಯಾಣಿಕರ ಹತ್ಯೆ

ಹವಾನಾ, ಕ್ಯೂಬಾ: ಕ್ಯೂಬಾ ಕರಾವಳಿಯಲ್ಲಿ ದೇಶದ ಕರಾವಳಿ ಕಾವಲು ಪಡೆ ಮತ್ತು ಅಮೆರಿಕ ನೋಂದಾಯಿತ ಸ್ಪೀಡ್ಬೋಟ್ನಲ್ಲಿ ಪ್ರಯಾಣಿಸುತ್ತಿದ್ದವರ ನಡುವೆ ಬುಧವಾರ ನಡೆದ ಗುಂಡಿನ ಚಕಮಕಿಯಲ್ಲಿ ಬೋಟ್ನಲ್ಲಿದ್ದ ನಾಲ್ವರು ಮೃತಪಟ್ಟು ಇತರ ಆರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಫ್ಲೋರಿಡಾ ನೋಂದಣಿ ಹೊಂದಿದ್ದ ಸ್ಪೀಡ್ಬೋಟ್, ವಿಲ್ಲಾ ಕ್ಲಾರಾ ಪ್ರಾಂತ್ಯದ ಫಾಲ್ಕನ್ಸ್ ಕೇ ಎಂಬಲ್ಲಿದ್ದ ಒಂದು ನಾಟಿಕಲ್ ಮೈಲು ದೂರದಲ್ಲಿ ಕಾನೂನುಬಾಹಿರವಾಗಿ ಸಂಚರಿಸುತ್ತಿದ್ದುದನ್ನು ಪತ್ತೆ ಮಾಡಿ ದಾಳಿ ಮಾಡಲಾಗಿದೆ ಎಂದು ರಕ್ಷಣಾ ಸಚಿವಾಲಯ ಸ್ಪಷ್ಟಪಡಿಸಿದೆ. ಸ್ಪೀಡ್ಬೋಟನ್ನು ಗುರುತಿಸುವ ಸಲುವಾಗಿ ಕರಾವಳಿ ಕಾವಲು ಪಡೆಯ ಹಡಗು ಸಮೀಪಕ್ಕೆ ಬಂದಾಗ ನಾವೆಯಿಂದ ಗುಂಡು ಹಾರಿಸಲಾಗಿದೆ. ಇದರಿಂದ ಕ್ಯೂಬಾ ಹಡಗಿನ ಕಮಾಂಡರ್ ಗಾಯಗೊಂಡಿದ್ದಾರೆ. ಈ ಸಂಘರ್ಷದಲ್ಲಿ ನಾವೆಯಲ್ಲಿದ್ದ ನಾಲ್ವರು ದಾಳಿಕೋರರು ಮೃತಪಟ್ಟಿದ್ದು ಇತರ ಆರು ಮಂದಿಗೆ ಗಾಯಗಳಾಗಿವೆ ಎಂದು ಸಚಿವಾಲಯ ಸ್ಪಷ್ಟನೆನೀಡಿದೆ. ಗಾಯಾಳುಗಳಿಗೆ ವೈದ್ಯಕೀಯ ನೆರವು ನೀಡಲಾಗುತ್ತಿದೆ. ತನ್ನ ಜಲಪ್ರದೇಶವನ್ನು ರಕ್ಷಿಸಿಕೊಳ್ಳಲು ಕ್ಯೂಬಾ ಬದ್ಧವಾಗಿದೆ ಎಂದು ಸಚಿವಾಲಯ ಹೇಳಿಕೆ ನೀಡಿದೆ. ಅಮೆರಿಕ ಮತ್ತು ಕಮ್ಯೂನಿಸ್ಟ್ ಆಡಳಿತದ ದ್ವೀಪದ ನಡುವಿನ ಸಂಬಂಧ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಫ್ಲೋರಿಡಾದಿಂದ ಕೇವಲ 100 ಮೈಲು ಅಂತರದ ಪ್ರದೇಶದಲ್ಲಿ ನಡೆದಿರುವ ಈ ಸಂಘರ್ಷ ಹೆಚ್ಚಿನ ಮಹತ್ವ ಪಡೆದಿದೆ.

ವಾರ್ತಾ ಭಾರತಿ 26 Feb 2026 7:45 am

Karnataka Weather : ರಾಜ್ಯದಲ್ಲಿ ಇಂದು ಮಳೆ ಮುನ್ಸೂಚನೆ: 5 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್, ಹವಾಮಾನ ಮುನ್ಸೂಚನೆ ಇಲ್ಲಿದೆ

ಬೆಂಗಳೂರು: ರಾಜ್ಯದಲ್ಲಿ ಬಿಸಿಲಿನ ಝಳ ದಿನೇ ದಿನೇ ಏರಿಕೆಯಾಗುತ್ತಿರುವ ನಡುವೆಯೇ ವಾತಾವರಣದಲ್ಲಿ ದಿಢೀರ್ ಬದಲಾವಣೆಯಾಗಿದೆ. ರಾಜ್ಯದ ಕೆಲವೆಡೆ ಗುರುವಾರ (ಫೆಬ್ರವರಿ 26) ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ (Meteorological Department) ಮುನ್ಸೂಚನೆ ನೀಡಿದೆ. ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಗುಡುಗು, ಗಾಳಿ ಸಹಿತ ಸಾಧಾರಣ ಮಳೆಯಾಗುವ ನಿರೀಕ್ಷೆಯಿರುವುದರಿಂದ, ಮುನ್ನೆಚ್ಚರಿಕಾ ಕ್ರಮವಾಗಿ ಐದು ಪ್ರಮುಖ ಜಿಲ್ಲೆಗಳಿಗೆ ಹವಾಮಾನ ಇಲಾಖೆಯು

ಒನ್ ಇ೦ಡಿಯ 26 Feb 2026 7:05 am

ಗೃಹಲಕ್ಷ್ಮಿಯರಿಗೆ ಡಿಜಿಟಲ್‌ ಮಾರುಕಟ್ಟೆ: ಉತ್ಪನ್ನಗಳ ಪ್ರದರ್ಶನ-ಮಾರಾಟಕ್ಕೆ ಅವಕಾಶ, ನೋಂದಣಿ, ಬೇಕಾಗಿರುವ ದಾಖಲೆಗಳ ವಿವರ ಇಲ್ಲಿದೆ

ಕೇವಲ 2 ಸಾವಿರದಿಂದ ಮಹಿಳೆಯರ ಸಬಲೀಕರಣ ಅಲ್ಲದೆ, ಮಹಿಳೆಯರು ಆರಂಭಿಸಿರುವ ಸ್ವ- ಉದ್ಯೋಗ, ಗುಡಿ ಕೈಗಾರಿಕೆಗಳಿಗೆ ಪ್ರೋತ್ಸಾಹ ಕೊಡಲು ಡಿಜಿಟಲ್ ಮಾರ್ಕೆಟಿಂಗ್ ಆ್ಯಪ್‌ ಅನ್ನು ಮಹಿಳಾ ಅಭಿವೃದ್ಧೀ ನಿಗಮವು ಬಿಡುಗಡೆಗೊಳಿಸಿದೆ.

ವಿಜಯ ಕರ್ನಾಟಕ 26 Feb 2026 6:52 am

ರಾಜ್ಯ ಹೆದ್ದಾರಿ ಪುತ್ತೂರು- ಉಪ್ಪಿನಂಗಡಿಯ ಚತುಷ್ಪಥ ಕಾಮಗಾರಿ ವಿಳಂಬ: ಜನರ ಆಕ್ರೋಶ, ಮಳೆಗಾಲಕ್ಕೆ ಮುನ್ನ ಮುಗಿಸುವ ಗಡುವು

ಇನ್ನು 3 ತಿಂಗಳು ಕಳೆದರೆ ಕರಾವಳಿಯಲ್ಲಿ ಮಳೆಗಾಲ ಅಬ್ಬರಿಸಲಿದೆ. ಈಗಾಗಲೇ ಆರಂಭ ಆಗಿರುವ 20 ಕೋಟಿ ರೂ ವೆಚ್ಚದ ಹೆದ್ದಾರಿ ಕಾಮಗಾರಿ ಇನ್ನೂ ಮುಗಿದಿಲ್ಲ ಎಂದು ಗುತ್ತಿಗೆದಾರರ ವಿರುದ್ಧ ಜನ ಅಸಮಾಧಾನ ಹೊರಹಾಕುತ್ತಿದ್ದು, ಕಾಮಗಾರಿಗೆ ಈಗ ಚುರುಕು ನೀಡಲಾಗಿದೆ.

ವಿಜಯ ಕರ್ನಾಟಕ 26 Feb 2026 6:20 am

ಬೇಸಿಗೆ ಆರಂಭ ಹಿನ್ನೆಲೆಯಲ್ಲಿ ವನ್ಯ ಜೀವಿಗಳಿಗೆ ನೀರಿನ ವ್ಯವಸ್ಥೆ; ಬೆಂಗಳೂರು ಗ್ರಾಮಾಂತರ ಅರಣ್ಯ ಇಲಾಖೆ ಕ್ರಮ

ಬೇಸಿಗೆ ಸಮೀಪಿಸುತ್ತಿದ್ದಂತೇ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತದೆ. ಆದರೆ ಈ ಸಮಸ್ಯೆ ಕೇವಲ ಮನುಷ್ಯರು ಮಾತ್ರವಲ್ಲದೇ ಪ್ರಾಣಿಗಳೂ ಎದುರಿಸುತ್ತವೆ. ಅದರಲ್ಲೂ ವನ್ಯಜೀವಿಗಳು ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯಿಂದ ಬಳಲುತ್ತವೆ.ಈ ಹಿನ್ನೆಲೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅರಣ್ಯ ಇಲಾಖೆ ವನ್ಯಜೀವಿಗಳಿಗೆ ಕುಡಿಯವ ನೀರಿನ ವ್ಯವಸ್ಥೆ ಮಾಡಿದ್ದು, ತನ್ನ ವ್ಯಾಪ್ತಿಯಲ್ಲಿ ಬರುವ ಕೆರೆಗಳನ್ನು ಗುರುತಿಸಿ ಹೂಳೆತ್ತುವ ಕಾರ್ಯ ಆರಂಭಿಸಿದೆ. ಅರಣ್ಯ ಇಲಾಖೆಯ ಈ ಕ್ರಮ ಮೆಚ್ಚುಗೆಗೆ ಪಾತ್ರವಾಗಿದೆ. ಈ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

ವಿಜಯ ಕರ್ನಾಟಕ 26 Feb 2026 5:57 am

ಬೆಂಗಳೂರು: ಕುಂಬಾರಪೇಟೆಯಲ್ಲಿ ಹೊತ್ತಿ ಉರಿದ ಮೂರಂತಸ್ತಿನ ವಾಣಿಜ್ಯ ಸಂಕೀರ್ಣ; ಶಾರ್ಟ್‌ ಸರ್ಕೀಟ್‌ ಕಾರಣ?

ರಾಜಧಾನಿ ಬೆಂಗಳೂರಿನ ಕುಂಬಾರಪೇಟೆಯಲ್ಲಿ ಮೂರು ಅಂತಸ್ತಿನ ವಾಣಿಜ್ಯ ಕಟ್ಟಡವೊಂದರಲ್ಲಿ ಬೆಂಕಿಗೆ ಆಹುತಿಯಾಗಿದ್ದು, ಅಗ್ನಿಶಾಮಕ ದಳದ ಕ್ಷಿಪ್ರ ಕಾರ್ಯಾಚರಣೆಯಿಂದ ಸಂಭವಿಸಬಹುದಾಗಿದ್ದ ಭಾರೀ ಅನಾಹುತವೊಂದು ತಪ್ಪಿದೆ. ಬರೋಬ್ಬರಿ ಮೂರು 123 ಮಳಿಗೆಗಳನ್ನು ಹೊಂದಿರುವ ಕುಮಾರ್‌ ಎಂಬುವವರಿಗೆ ಸೇರಿದ್ದ ಈ ಬೃಹತ್‌ ವಾಣಿಜ್ಯ ಸಂಕೀರ್ಣದ 21 ಮಳಿಗೆಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ. ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ಓರ್ವ ಅಗ್ನಿಶಾಮಕ ಸಿಬ್ಬಂದಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಬೆಂಕಿ ಅನಾಹುತಕ್ಕೆ ಶಾರ್ಟ್‌ ಸರ್ಕೀಟ್‌ ಕಾರಣ ಎಂದು ಹೇಳಲಾಗುತ್ತಿದೆ. ಇಲ್ಲಿದೆ ಮಾಹಿತಿ.

ವಿಜಯ ಕರ್ನಾಟಕ 26 Feb 2026 5:41 am

ಹ್ಯಾಟ್ರಿಕ್ ಡಕ್ ಹೊರತಾಗಿಯೂ ಅಭಿಷೇಕ್ ಶರ್ಮಾ ಐಸಿಸಿ ಟಿ20 ರ‍್ಯಾಂಕಿಂಗ್‌ ನಲ್ಲಿ ನಂಬರ್ 1! ಟಾಪ್ 5ರೊಳಗೆ ಇಶಾನ್ ಕಿಶನ್!

ICC T20 Rankings- ಪ್ರಸ್ತುತ ನಡೆಯುತ್ತಿರುವ ಟಿ20 ವಿಶ್ವಕಪ್‌ನಲ್ಲಿ ಕಳಪೆ ಪ್ರದರ್ಶನ ನೀಡಿದ್ದರೂ ಭಾರತ ತಂಡದ ಸ್ಫೋಟಕ ಆರಂಭಕಾರ ಅಭಿಷೇಕ್ ಶರ್ಮಾ ಅವರು ಇದೀಗ ಬಿಡುಗಡೆಯಾಗಿರುವ ಐಸಿಸಿ ಬ್ಯಾಟಿಂಗ್ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ನಂಬರ್ 1 ಸ್ಥಾನದಲ್ಲೇ ಮುಂದುವರಿದಿದ್ದಾರೆ. ಇದೇವೇಳೆ ನ್ಯೂಜಿಲೆಂಡ್ ವಿರುದ್ಧ ಟಿ20 ಸರಣಿಯ ಬಳಿಕ ಮಿಂಚುತ್ತಿರುವ ವಿಕೆಟ್ ಕೀಪರ್-ಬ್ಯಾಟರ್ ಇಶಾನ್ ಕಿಶನ್ ಅಗ್ರ ಐದರಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಟಾಪ್ 10ರೊಳಗೆ ಭಾರತದ ನಾಲ್ವರು ಬ್ಯಾಟರ್ ಗಳು ಇದ್ದಾರೆ ಎಂಬುದು ವಿಶೇಷವಾಗಿದೆ.

ವಿಜಯ ಕರ್ನಾಟಕ 26 Feb 2026 12:35 am

ಮೊದಲ ಬಾರಿ ಗೆದ್ದ 31 ಶಾಸಕರ ಪೈಕಿ 5 ಮಂದಿಗೆ ಸಚಿವ ಸ್ಥಾನ ನೀಡಬೇಕು: ಪ್ರದೀಪ್ ಈಶ್ವರ್

ಬೆಂಗಳೂರು: ಮೊದಲ ಬಾರಿ ಗೆದ್ದ 31 ಶಾಸಕರ ಪೈಕಿ 5 ಮಂದಿಗೆ ಸಚಿವ ಸ್ಥಾನ ನೀಡಬೇಕು. ಈ ಸಂಬಂಧ ಹೈಕಮಾಂಡ್‍ಗೆ ಪತ್ರ ಬರೆದಿದ್ದೇವೆ ಎಂದು ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಹೇಳಿದ್ದಾರೆ. ಬುಧವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊದಲ ಬಾರಿ ಗೆಲುವು ಸಾಧಿಸಿದ ಶಾಸಕರಿಗೆ ಸಚಿವ ಸ್ಥಾನ ನೀಡಬೇಕೆಂದು ಮೊದಲಿನಿಂದ ಬೇಡಿಕೆ ಇದೆ. ಈ ಸಂಬಂಧ ಸಹಿ ಸಂಗ್ರಹ ಮಾಡಿ ಹೈಕಮಾಂಡ್‍ಗೆ ಕಳುಹಿಸಲಾಗಿದೆ ಎಂದು ತಿಳಿಸಿದರು. ಜಾತಿ ಆಧಾರ, ಪ್ರಾದೇಶಿಕ ಆಧಾರದಲ್ಲಿ ಅರ್ಹರು ಇದ್ದಾರೆ ಎಂದ ಅವರು, ನಾನು ಸಚಿವ ಸ್ಥಾನದ ಆಕಾಂಕ್ಷಿ ಆಗಿದ್ದೇನೆ. ಮೊದಲ ಬಾರಿ ಗೆಲುವು ಸಾಧಿಸಿದರೂ, ಬಲಿಷ್ಠ ವ್ಯಕ್ತಿಯನ್ನೆ ಸೋಲಿಸಿದ್ದೇನೆ. ಹೀಗಾಗಿ, ಹೊಸಬರಿಗೆ ಅವಕಾಶ ಕಲ್ಪಿಸಬೇಕು ಎಂದು ನುಡಿದರು. ಸಚಿವ ಸ್ಥಾನಕ್ಕಾಗಿ ವಿಧಾನ ಪರಿಷತ್ತು ಸದಸ್ಯರಿಂದಲೂ ಪತ್ರ ಸಚಿವ ಸಂಪುಟ ಪುನಾರಚನೆಯ ಸಂದರ್ಭದಲ್ಲಿ ವಿಧಾನ ಪರಿಷತ್ತಿನ ಸದಸ್ಯರಿಗೂ ಸೂಕ್ತ ಪ್ರಾತಿನಿಧ್ಯ ನೀಡಬೇಕೆಂದು ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪತ್ರದ ಮೂಲಕ ಮನವಿ ಮಾಡಲಾಗಿದೆ. ರಾಜ್ಯ ಸಚಿವ ಸಂಪುಟದಲ್ಲಿ ಸ್ಥಾನ ನೀಡುವಂತೆ ಕಾಂಗ್ರೆಸ್ ಪಕ್ಷದ 24 ವಿಧಾನ ಪರಿಷತ್ತಿನ ಸದಸ್ಯರು ಪತ್ರ ಬರೆದಿದ್ದು, ಸಂಪುಟದಲ್ಲಿ ಪರಿಷತ್ ಸದಸ್ಯರ ಪ್ರಾತಿನಿಧ್ಯ ಇಲ್ಲದಿರುವುದು ಅಸಮಾನತೆ, ನಿರುತ್ಸಾಹ ಭಾವನೆ ಉಂಟುಮಾಡುತ್ತೆ. ಹೀಗಾಗಿ, ಸಂಪುಟ ಪುನಾರಚನೆಯ ಸಂದರ್ಭದಲ್ಲಿ ಪರಿಗಣಿಸುವಂತೆ ಕೋರಿದ್ದಾರೆ. 1907ರಲ್ಲಿ ಸ್ಥಾಪನೆಯಾದ ಕರ್ನಾಟಕ ವಿಧಾನ ಪರಿಷತ್ತು, ಅತ್ಯಂತ ಹಳೆಯ ಪರಿಷತ್ತುಗಳಲ್ಲಿ ಒಂದಾಗಿದೆ. ಪರಿಷತ್ತಿನ ಸದಸ್ಯರು 10ರಿಂದ15 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡ ದೊಡ್ಡ ಪ್ರದೇಶಗಳನ್ನು ಪ್ರತಿನಿಧಿಸುತ್ತಾರೆ. ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾದವರು ತಳಮಟ್ಟದ ಜನರೊಂದಿಗೆ ನೇರ ಸಂಪರ್ಕದಲ್ಲಿರುವ ಪ್ರತಿನಿಧಿಗಳು. ಶಾಸಕರಿಗೆ ಹೋಲಿಸಿದರೆ ವಿಧಾನ ಪರಿಷತ್ತು ಸದಸ್ಯರು ವ್ಯಾಪಕ ಮತದಾರರ ಮೇಲೆ ಪ್ರಭಾವ ಬೀರುತ್ತಾರೆ. ಪಕ್ಷದ ನೆಲೆಯನ್ನು ಬಲಪಡಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಾರೆ. ಎಲ್ಲ ಪರಿಷತ್ತಿನ ಸದಸ್ಯರು ಪಕ್ಷದ ಸಂಘಟನೆಯನ್ನು ಬಲಪಡಿಸುವಲ್ಲಿ ಆಳವಾಗಿ ತೊಡಗಿಸಿಕೊಂಡಿದ್ದಾರೆ. ಹಾಗಾಗಿ ಸಚಿವ ಸಂಪುಟ ಪುನರಚನೆ ವೇಳೆ ವಿಧಾನ ಪರಿಷತ್ತಿನ ಕನಿಷ್ಠ ಐದು ಸದಸ್ಯರನ್ನು ಸಚಿವ ಸಂಪುಟದಲ್ಲಿ ಸೇರಿಸಬೇಕು. ಸಂಪುಟದಲ್ಲಿ ಪರಿಷತ್ತಿನ ಸದಸ್ಯರಿಗೆ ಪ್ರಾತಿನಿಧ್ಯ ಇಲ್ಲದಿರುವುದು ಸದಸ್ಯರಲ್ಲಿ ಅಸಮಾನತೆ ಮತ್ತು ನಿರುತ್ಸಾಹದ ಭಾವನೆಯನ್ನು ಉಂಟುಮಾಡುತ್ತದೆ. ಇದು ಸದಸ್ಯರಿಗೆ ರಾಜಕೀಯ ನಿರೀಕ್ಷೆಗಳಿಲ್ಲ ಎಂಬ ಗ್ರಹಿಕೆಗೆ ಕಾರಣವಾಗುತ್ತದೆ. ಇದಕ್ಕೆ ಪ್ರತಿಯಾಗಿ ಸಮರ್ಥ ನಾಯಕರು ವಿಧಾನಪರಿಷತ್ ಚುನಾವಣೆಗಳಲ್ಲಿ ಸ್ಪರ್ಧಿಸುವ ಬದಲು ವಿಧಾನಸಭಾ ಟಿಕೆಟ್‍ಗಳನ್ನು ಪಡೆಯಲು ಪ್ರೇರೇಪಿಸುತ್ತದೆ. ಅಲ್ಲದೆ, ಗುಂಪುಗಾರಿಕೆಗೆ ಕಾರಣವಾಗುತ್ತದೆ ಮತ್ತು ಪಕ್ಷದ ಸಂಘಟನೆಯನ್ನು ದುರ್ಬಲಗೊಳಿಸುತ್ತದೆ ಎಂದೂ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ವಾರ್ತಾ ಭಾರತಿ 26 Feb 2026 12:21 am

ಮೈಸೂರು ನಗರ ಪೊಲೀಸರ ಕಾರ್ಯಾಚರಣೆ | 105 ಕಳವು ಪ್ರಕರಣ ಪತ್ತೆ: 2.96 ಕೋಟಿ ರೂ. ಮೌಲ್ಯದ ಚಿನ್ನಾಭರಣ ವಶ

ಮೈಸೂರು: ಮೈಸೂರು ನಗರ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಕಳೆದ ಆರು ತಿಂಗಳಲ್ಲಿ ನಡೆದ 105 ಕಳವು ಪ್ರಕರಣ ಪತ್ತೆಹಚ್ಚಿದ್ದು,  2.96 ಕೋಟಿ ರೂ. ಮೌಲ್ಯದ ಚಿನ್ನಾಭರಣ ಮತ್ತು ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಗರ ಪೊಲೀಸ್‌ ಆಯುಕ್ತೆ ಸೀಮಾ ಲಾಟ್ಕರ್, ನಗರದ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಾಖಲಾಗಿದ್ದ ಒಂದು ದರೋಡೆ, ಒಂದು ದರೋಡೆಗೆ ಸಂಚು, ನಾಲ್ಕು ಸುಲಿಗೆ, 2 ಸರಗಳ್ಳತನ, 26 ಕನ್ನ ಕಳುವು, 1 ಅರಣ್ಯ ಕಾಯ್ದೆಯ ಪ್ರಕರಣದಿಂದ 2.92 ಕೋಟಿ ರೂ. ಮೌಲ್ಯದ 2.54 ಕೆಜಿ ಚಿನ್ನ, 5.312 ಕೆಜಿ ಬೆಳ್ಳಿ, 49 ದ್ವಿಚಕ್ರ ವಾಹನ, 3 ಕಾರು, 1 ಥಾರ್‌ ಜೀಪ್‌, 2 ಲಾರಿ, 1 ಗೂಡ್ಸ್‌ ವಾಹನ, 1 ಆಟೋ ರಿಕ್ಷಾ, 10.03 ಲಕ್ಷ ರೂ. ನಗದು, 33 ಕೆಜಿ ಗಂಧದ ಮರದ ತುಂಡು ಮತ್ತಿತರ ವಸ್ತುಗಳನ್ನು ವಶಪಡಿಸಿಕೊಂಡಿರುವುದಾಗಿ ಹೇಳಿದರು. ಸರಸ್ವತಿಪುರಂ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿ 8 ಕನ್ನ ಕಳವು ಪ್ರಕರಣ ಪತ್ತೆ ಹಚ್ಚಲಾಗಿದೆ. ಈ ಪೈಕಿ ಸೈಯದ್‌ ಅಲೀಂ ಎಂಬಾತನ ವಿರುದ್ಧ ರಾಜ್ಯದ ಮತ್ತು ಹೊರ ರಾಜ್ಯದ ವಿವಿಧೆಡೆ 69 ಪ್ರಕರಣ ದಾಖಲಾಗಿದ್ದು, 2013 ರಿಂದ ಈಚೆಗೆ ಕಳವು ಕೃತ್ಯದಲ್ಲಿ ತೊಡಗಿದ್ದಾನೆ ಎಂದರು. ಚಾಮರಾಜನಗರ ಮೂಲಕ ಕಳ್ಳ ಮಂಜ ಎಂಬಾತ ಕೇವಲ ದೇವಸ್ಥಾನಗಳನ್ನು ಮಾತ್ರ ಗುರಿಯಾಗಿಸಿಕೊಂಡಿದ್ದ. ಆತನ ವಿರುದ್ಧ ವಿಜಯನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈತ ಕುವೆಂಪುನಗರ ರಾಘವೇಂದ್ರಸ್ವಾಮಿ ಮಠ ಸೇರಿದಂತೆ ಎರಡು ದೇವಾಲಯಗಳಲ್ಲಿ ಕಳ್ಳತನ ಮಾಡಿದ್ದ, ಹುಂಡಿ, ದೇವರ ತಾಳಿ ಮತ್ತಿತರ ಆಭರಣಗಳನ್ನು ಕಳವು ಮಾಡಿದ್ದಾಗಿ ನಗರ ಪೊಲೀಸ್‌ ಆಯುಕ್ತೆ ಸೀಮಾ ಲಾಟ್ಕರ್ ಅವರು ವಿವರಿಸಿದರು. ಪಾಲಿಟೆಕ್ನಿಕ್‌ ಒಂದರಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಲ್ಯಾಬ್‌ ಟೆಕ್ನಿಷಿಯನ್‌ ಹಾಗೂ ಉಪನ್ಯಾಸಕನಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬ ತಮ್ಮ ಮನೆಯ ಸಮೀಪದ ವಿಧವೆಯೊಬ್ಬರನ್ನು ಪರಿಚಯ ಮಾಡಿಕೊಂಡು ಅವರು ಮನೆಯಲ್ಲಿ ಇಲ್ಲದ ವೇಳೆ ಕಿಟಕಿ ಮುರಿದು ಕಳವು ಮಾಡಿದ್ದ. ಈತನಿಂದ 25.08 ಲಕ್ಷ ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ. ವಿದ್ಯಾರಣ್ಯಪುರಂ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ ಎಂದರು. ಉಳಿದಂತೆ ಮೇಟಗಳ್ಳಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ 17 ಆರೋಪಿಗಳು, ವಿಜನಯಗರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಆರು ಮಂದಿ, ಮಂಡಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಹನ್ನೊಂದು ಮಂದಿ ಮತ್ತು ನರಸಿಂಹರಾಜ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ 9 ಮಂದಿ ಆರೋಪಿಗಳನ್ನು ಬಂಧಿಸಿ, ವಿವಿಧ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಅವರು ಹೇಳಿದರು. ಫೆ. 24 ರಂದು ಉದಯಗಿರಿ ಪೊಲೀಸರು ರಾಜೀವನಗರ 2ನೇ ಹಂತದ ವರುಣ್‌ ಎಂಬಾತನನ್ನು ಬಂಧಿಸಿ ಆತನಿಂದ 24 ಕೆಜಿ 485 ಗ್ರಾಂ ಗಾಂಜಾ ಅಮಾನತ್ತುಪಡಿಸಿಕೊಂಡಿದ್ದಾರೆ. ಪ್ರಸಕ್ತ ಸಾಲಿನಲ್ಲಿ 22 ಎನ್‌.ಡಿ.ಪಿ.ಎಸ್‌ ಕಾಯ್ದೆ ಪ್ರಕರಣ ದಾಖಲಿಸಿ, 30,255 ಗ್ರಾಂ ಗಾಂಜಾ ಹಾಗೂ 311,579 ಮಿ.ಗ್ರಾಂ ಸಿಂಥೆಟಿಕ್‌ ಮಾದಕ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಜೊತೆಗೆ 102 ಸೇವನೆ ಪ್ರಕರಣ ದಾಖಲಿಸಲಾಗಿದೆ. ನಗರದಲ್ಲಿ ಮಾದಕ ವಸ್ತುಗಳ ಮಾರಾಟ, ಸಾಗಾಣೆ, ಸಂಗ್ರಹ ನಿಯಂತ್ರಣ ಸಂಬಂಧ 2025-26ನೇ ಸಾಲಿನಲ್ಲಿ 16 ಎನ್‌.ಡಿ.ಪಿ.ಎಸ್‌ ಆರೋಪಿಗಳ ವಿರುದ್ಧ ಗಡಿಪಾರು ಆದೇಶ ಹೊರಡಿಸಲಾಗಿದೆ ಎಂದರು. ನಗರದಲ್ಲಿ ರೌಡಿ ಚಟುವಟಿಕೆ ನಿಯಂತ್ರಣದಲ್ಲಿಡುವ ಸಂಬಂಧ ವಿದ್ಯಾರಣ್ಯಪುರಂ ಠಾಣಾ ವ್ಯಾಪ್ತಿಯ ಜನತಾ ಬಡಾವಣೆ ನಿವಾಸಿ ರೌಡಿ ಪಿ. ಗಣೇಶ್ (25)ವಿರುದ್ಧ ಗೂಂಡಾ ಕಾಯ್ದೆಯಡಿ ಬಂಧನದ ಆದೇಶ ಹೊರಡಿಸಿರುವುದಾಗಿ ಪೊಲೀಸ್‌ ಆಯುಕ್ತೆ ಸೀಮಾ ಲಾಟ್ಕರ್ ಅವರು ವಿವರಿಸಿದರು. ಆಂಧ್ರ ಮೂಲದ ವ್ಯಕ್ತಿಯೊಬ್ಬ ಗೂಗಲ್‌ ಮೂಲಕ ಒಂಟಿ ಮನೆಯನ್ನು ಪತ್ತೆಹಚ್ಚಿ ಅವುಗಳನ್ನೇ ಗುರಿಯಾಗಿಸಿಕೊಂಡು ಒಬ್ಬನೇ ದಾಳಿ ಮಾಡಿ ಕಳವು ಮಾಡುತ್ತಿದ್ದ ಆರೋಪಿಯನ್ನು ಬಂಧಿಸಲಾಗಿದೆ ಎಂದು ಸೀಮಾ ಲಾಟ್ಕರ್ ಅವರು ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ಡಿಸಿಪಿ ಸುಂದರ್ ರಾಜ್, ಎಸಿಪಿ ರವಿಪ್ರಸಾದ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 26 Feb 2026 12:15 am

ಅಮೆರಿಕ ಜೊತೆಗೆ ಇರಾನ್ ಸಂಧಾನ ಮಾತುಕತೆ, ಕೆಲವೇ ಹೊತ್ತಲ್ಲಿ ಸಭೆ ಆರಂಭ | USA And Iran

ಅಮೆರಿಕ ಮತ್ತೊಮ್ಮೆ ಇರಾನ್ ಜೊತೆಗೆ ಸಂಧಾನ ಸಭೆ ನಡೆಸಲು ಮುಂದೆ ಬಂದಿದೆ, ಇದೀಗ ಕಳೆದ ಕೆಲ ದಿನಗಳಲ್ಲಿ ನಡೆಯುತ್ತಿರುವ 3ನೇ ಸಭೆಗೆ ಸ್ವಿಝರ್ಲ್ಯಾಂಡ್‌ನ ಜಿನೇವಾದಲ್ಲಿ ಎಲ್ಲಾ ಸಿದ್ಧತೆಗಳನ್ನ ಮಾಡಿಕೊಳ್ಳಲಾಗಿದೆ. ಅಮೆರಿಕ ಮತ್ತು ಇರಾನ್ ಯುದ್ಧಕ್ಕೆ ಸಜ್ಜಾಗಿವೆ ಎಂಬ ಭೀತಿ ನಡುವೆ, ಶಾಂತಿ ಮಾತುಕತೆ ಮಾಡಿಸಲು ಮಧ್ಯಪ್ರಾಚ್ಯದ ದೇಶಗಳು ಒದ್ದಾಡಿದ್ದವು. ಅದರಲ್ಲೂ ಓಮಾನ್ ಈ ವಿಚಾರಕ್ಕೆ ದೊಡ್ಡ ಮಟ್ಟದಲ್ಲಿ

ಒನ್ ಇ೦ಡಿಯ 25 Feb 2026 11:51 pm

Karnataka Jobs: ಸಿದ್ದರಾಮಯ್ಯ ಸರ್ಕಾರಕ್ಕೆ 'ದೂರುವ ಚಾಳಿ': ನಿರುದ್ಯೋಗದ ಬಗ್ಗೆ ಬೊಮ್ಮಾಯಿ ಆಕ್ರೋಶ

ಬೆಂಗಳೂರು: ರಾಜ್ಯದಲ್ಲಿ ತಮ್ಮ ಸರ್ಕಾರದ ತಪ್ಪುಗಳಿದ್ದರೂ ಕೂಡ ಹಿಂದಿನ ಸರ್ಕಾರ ದೂರುವ ಚಾಳಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗಿದೆ. ಕಳೆದ ಮೂರು ವರ್ಷದಲ್ಲಿ ಎಷ್ಟು ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡಿದ್ದಾರೆ ಎನ್ನುವ ಲೆಕ್ಕವನ್ನು ಕರುನಾಡಿನ ಯುವಜನರಿಗೆ ಕೊಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣ 'ಎಕ್ಸ್‌'ನಲ್ಲಿ ಪ್ರತಿಕ್ರಿಯಿಸಿರುವ ಅವರು

ಒನ್ ಇ೦ಡಿಯ 25 Feb 2026 11:50 pm

Mandya |ಅಪಘಾತದಲ್ಲಿ ಗಾಯಗೊಂಡು ಮಿದುಳು ನಿಷ್ಕ್ರಿಯ: ಮಗನ ಅಂಗಾಂಗ ದಾನ ಮಾಡಿದ ಪೋಷಕರು

ಮಂಡ್ಯ: ಅಪಘಾತದಲ್ಲಿ ಗಂಭೀರ ಗಾಯಗೊಂಡು ಮಿದುಳು ನಿಷ್ಕ್ರಿಯಗೊಂಡ್ಡಿದ್ದ ತಾಲೂಕಿನ ಚಿಕ್ಕಮಂಡ್ಯ ಗ್ರಾಮದ ಯುವಕ ದರ್ಶನ್ ಅವರ ಅಂಗಾಂಗಗಳನ್ನು ದಾನಮಾಡುವ ಮೂಲಕ ಪೋಷಕರು ಸಾರ್ಥಕತೆ ಮೆರೆದಿದ್ದಾರೆ. ಬೈಕ್‍ನಿಂದ ಬಿದ್ದು ದರ್ಶನ್ ಗಂಭೀರವಾಗಿ ಗಾಯಗೊಂಡಿದ್ದರು. ನಗರದ ಮಿಮ್ಸ್ ಜಿಲ್ಲಾಸ್ಪತ್ರೆಯಿಂದ ಚಿಕಿತ್ಸೆ ಫಲಕಾರಿಯಾಗದೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಸೇರಿಸಲಾಗಿತ್ತು. ಮಿದುಳು ನಿಷ್ಕ್ರಿಯಗೊಂಡಿದ್ದ ಹಿನ್ನೆಲೆಯಲ್ಲಿ ಚಿಕಿತ್ಸೆ ಫಲಕಾರಿಯಾಗುವುದಿಲ್ಲವೆಂದು ವೈದ್ಯರು ಹೇಳಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆಯ ನಿರ್ದೇಶಕಿ ಡಾ.ಎಸ್.ಟಿ.ಕಾವ್ಯ ಹಾಗೂ ವೈದ್ಯಕೀಯ ಅಧೀಕ್ಷಕ ಡಾ.ಎಸ್.ದೀಪಕ್ ಮತ್ತಿವರ ವೈದ್ಯರ ತಂಡದ ಸಲಹೆ ಮೇರೆಗೆ ದರ್ಶನ್ ಅಂಗಾಂಗ ದಾನ ಮಾಡುವ ಮೂಲಕ ಪೋಷಕರು ಪ್ರಶಂಸೆಗೆ ಪಾತ್ರರಾಗಿದ್ದಾರೆ. ಮಂಗಳವಾರ ತಡರಾತ್ರಿ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರ ತಂಡ, ದರ್ಶನ್ ಅವರ ಯಕೃತ್, ಮೂತ್ರಪಿಂಡಗಳನ್ನು ಅಗತ್ಯ ಇರುವ ರೋಗಿಗಳಿಗೆ ಅಳವಡಿಸಿದರು. ನಂತರ, ಬುಧವಾರ ಬೆಳಗ್ಗೆ ಪೋಷಕರಿಗೆ ಯುವಕನರ ಮೃತದೇಹವನ್ನು ಹಸ್ತಾಂತರಿಸಿದರು.

ವಾರ್ತಾ ಭಾರತಿ 25 Feb 2026 11:44 pm

ಬೆಂಗಳೂರಲ್ಲಿ ಬೇಕಾಬಿಟ್ಟಿ ಕಸ ಎಸೆಯುತ್ತೀರೋ ಜೋಕೆ: ಈಗಾಗಲೇ 82 ಸಾವಿರ ಪ್ರಕರಣಗಳಲ್ಲಿ 3.6 ಕೋಟಿ ರೂ ದಂಡ ವಸೂಲಿ

ಬೆಂಗಳೂರಿನಲ್ಲಿ ಎಲ್ಲೆಂದರಲ್ಲಿ ಕಸ ಎಸೆಯುವವರ ವಿರುದ್ಧ ಇದೀಗ ಹದ್ದಿನ ಕಣ್ಣಿಟ್ಟಿರುವ ಘನತ್ಯಾಜ್ಯ ನಿರ್ವಹಣೆ ನಿಯಮಿತ ಈಗಾಗಲೇ 82 ಸಾವಿರ ಪ್ರಕರಣಗಳಲ್ಲಿ 3.6 ಕೋಟಿ ರೂಪಾಯಿ ದಂಡ ವಸೂಲಿ ಮಾಡಿದೆ. ಪ್ರತಿ ವಾರ್ಡ್ ನಲ್ಲೂ ಮಾರ್ಷಲ್ ಗಳು ಈ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಕಸ ಎಸೆವವರಿಗೆ ದಂಡ ಹಾಕಿ ಸ್ವಚ್ಛತೆಯ ಪಾಠ ಹೇಳುತ್ತಿದೆ. ಇಷ್ಟು ಮಾತ್ರವಲ್ಲದೆ ಸಾರ್ವಜನಿಕ ಸ್ಥಳಗಳಲ್ಲಿ ಮೂತ್ರ ಮಾಡುವವರಗೆ, ಉಗುಳುವವರಿಗೆ ಸಹ ದಂಡ ಹಾಕುವ ಮೂಲಕ ಬಿಸಿ ಮುಟ್ಟಿಸಿದೆ.

ವಿಜಯ ಕರ್ನಾಟಕ 25 Feb 2026 11:43 pm

ರಷ್ಯಾ ವಿರುದ್ಧ ಉಕ್ರೇನ್ ಸೇನೆಯಿಂದ ದಾಳಿ, ಘಟನೆಯಲ್ಲಿ 7 ಜನ ಬಲಿ ಆರೋಪ | Ukraine Military

ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧ ಶುರುವಾಗಿ ಬರೋಬ್ಬರಿ 4 ವರ್ಷಗಳೇ ಮುಗಿದ ಹೋಗಿದ್ದು, ಇದೀಗ ಬರೋಬ್ಬರಿ ಅರ್ಧ ದಶಕ ಎಂದರೆ 5ನೇ ವರ್ಷಕ್ಕೆ ಎಂಟ್ರಿ ಕೊಟ್ಟಿದೆ ಈ ಯುದ್ಧ. ಹೀಗಿದ್ದಾಗ ಎರಡೂ ದೇಶಗಳ ನಡುವೆ ಸಂಧಾನ ಮಾಡಿಸಲು ಒಂದು ಕಡೆ ಅಮೆರಿಕ ಪರದಾಡುತ್ತಿದೆ. ಯುರೋಪ್ ದೇಶಗಳು ಉಕ್ರೇನ್‌ಗೆ ಸಹಾಯ ಮಾಡಿ ಮಾಡಿ ನಲುಗಿ ಹೋಗಿವೆ. ಇಂತಹ

ಒನ್ ಇ೦ಡಿಯ 25 Feb 2026 11:38 pm

ಗಾಝಾ ಶಾಂತಿ ಉಪಕ್ರಮವನ್ನು ಭಾರತ ಬೆಂಬಲಿಸುತ್ತದೆ: ಪ್ರಧಾನಿ ಮೋದಿ

► ಇಸ್ರೇಲ್ ಸಂಸತ್ತು ನೆಸ್ಸೆಟನ್ನು ಉದ್ದೇಶಿಸಿ ಮಾತನಾಡಿದ ಮೊದಲ ಭಾರತೀಯ ಪ್ರಧಾನಿ ► ಮೋದಿಗೆ ನೆಸ್ಸೆಟ್ ನ ಅತ್ಯುನ್ನತ ಗೌರವ ಪ್ರದಾನ

ವಾರ್ತಾ ಭಾರತಿ 25 Feb 2026 11:37 pm

ಇಸ್ರೇಲ್‌ಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ಹಿನ್ನೆಲೆ ಪಾಕಿಸ್ತಾನಕ್ಕೆ ಶುರುವಾಯ್ತು ಭಯ | PM Narendra Modi

ಕಳ್ಳನ ಮನಸ್ಸು ಹುಳ್ಳಗೆ ಅನ್ನೋ ಗಾದೆ ಮಾತಿನಂತೆ, ಉಗ್ರರ ಪೋಷಕ ದೇಶವಾಗಿರುವ ಪಾಕಿಸ್ತಾನ ಈ ಜನ್ಮದಲ್ಲಿ ಬುದ್ಧಿ ಕಲಿಯುವುದಿಲ್ಲ ಅಂತಾ ಕಾಣುತ್ತದೆ. ಏಕೆಂದರೆ ಭಾರತ ಮತ್ತು ಇಸ್ರೇಲ್ ನಡುವೆ ಈಗ ಮಹತ್ವದ ಮಾತುಕತೆ ಆರಂಭ ಆಗಿದ್ದು, ಎರಡೂ ದೇಶಗಳು ದೊಡ್ಡ ಮಟ್ಟದಲ್ಲಿ ಒಪ್ಪಂದಕ್ಕೆ ಸಜ್ಜಾಗಿವೆ. ಇದೇ ಸಮಯದಲ್ಲಿ ಇಸ್ರೇಲ್ ಸರ್ಕಾರ ಕೂಡ ಪ್ರಧಾನಿ ಮೋದಿ ಅವರನ್ನು ಭರ್ಜರಿಯಾಗಿ

ಒನ್ ಇ೦ಡಿಯ 25 Feb 2026 11:24 pm

ಇಸ್ರೇಲ್ ದೇಶ ಘೋಷಿಸಲ್ಪಟ್ಟ ದಿನದಂದೇ ಜನಿಸಿದ್ದ ಮೋದಿ: ಕನೆಸೆಟ್‌ ನಲ್ಲಿ ಭಾರತದ ಪ್ರಧಾನಿ ಹೇಳಿದ್ದೇನು?

PM Modi In Israel- ಭಯೋತ್ಪಾದನೆ ವಿಚಾರದಲ್ಲಿ ಇಸ್ರೇಲ್ ಮತ್ತು ಭಾರತಗಳೆರಡೂ ಸಮಾನ ದುಃಖಿಗಳಾಗಿದ್ದು ಉಗ್ರವಾದ ನಿಗ್ರಹದಲ್ಲಿ ಇಸ್ರೇಲ್ ಗೆ ಭಾರತ ಸಾಥ್ ನೀಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ತಿಳಿಸಿದ್ದಾರೆ. ಇಸ್ರೇಲ್ ಪ್ರವಾಸದಲ್ಲಿರುವ ಅವರು ಬುಧವಾರ ಇಸ್ರೇಲ್ ಸಂಸತ್ತನ್ನು ಉದ್ದೇಶಿಸಿ ಭಾಷಣ ಮಾಡಿದರು. ಮುಂಬಯಿ ಮೇಲಿನ (26/11) ಉಗ್ರರ ದಾಳಿ ಮತ್ತು ಇಸ್ರೇಲ್ ಮೇಲೆ ಹಮಾಸ್ ನಡೆಸಿರುವ ದಾಳಿ ಮನುಕುಲವನ್ನು ಘಾಸಿಗೊಳಿಸಿದ ಕೃತ್ಯಗಳು ಎಂದು ಅವರು ತುಲನೆ ಮಾಡಿದರು.

ವಿಜಯ ಕರ್ನಾಟಕ 25 Feb 2026 11:11 pm

NZ Vs SL Highlights- ರಚಿನ್ ರವೀಂದ್ರ ಆಲ್ರೌಂಡ್ ಆಟಕ್ಕೆ ಆತಿಥೇಯ ಶ್ರೀಲಂಕಾ ಟೂರ್ನಿಯಿಂದಲೇ ಔಟ್! ಈಗ ಪಾಕ್ ಗೆ ಪುಕಪುಕ!

ಕೊಲಂಬೊದ ನಿಧಾನಗತಿಯ ಪಿಚ್ ನಲ್ಲಿ ಆರಂಭದಲ್ಲಿ ಎಡವಿದರೂ ಸಾವರಿಸಿಕೊಂಡು ಆಡಿದ ನ್ಯೂಜಿಲೆಂಡ್ ಆತಿಥೇಯ ಶ್ರೀಲಂಕಾವನ್ನು 61 ರನ್ ಗಳಿಂದ ಸೋಲಿಸುವಲ್ಲಿ ಯಶಸ್ವಿಯಾಗಿದೆ. ಹೀಗಾಗಿ ಆಡಿರುವ ಎರಡೂ ಪಂದ್ಯಗಳನ್ನು ಸೋತಿರುವ ಲಂಕಾ ತಂಡ ಟೂರ್ನಿಯಿಂದ ಹೊರಬಿದ್ದಿದೆ. ಇದೇವೇಳೆ ನ್ಯೂಜಿಲೆಂಡ್ ಗೆಲುವು ಪಾಕಿಸ್ತಾನದ ಸೆಮಿಫೈನಲ್ ಪ್ರವೇಶಕ್ಕೆ ಆತಂಕವನ್ನು ಉಂಟುಮಾಡಿದೆ. ಪಾಕಿಸ್ತಾನ ತನ್ನ ಕೊನೇ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ದೊಡ್ಡ ಅಂತರದಲ್ಲಿ ಗೆಲ್ಲಬೇಕು. ಮಾತ್ರವಲ್ಲದೆ ಇಂಗ್ಲೆಂಡ್ ತಂಡ ನ್ಯೂಜಿಲೆಂಡ್ ತಂಡವನ್ನು ದೊಡ್ಡ ಅಂತರದಿಂದ ಸೋಲಿಸಿದಲ್ಲಿ ಮಾತ್ರವೇ ಇದೀಗ ಪಾಕಿಸ್ತಾನಕ್ಕೆ ಸೆಮಿಫೈನಲ್ ಅವಕಾಶ ಇದೆ. ಇದೀಗ ಭರ್ಜರಿ ಫಾರ್ಮ್ ನಲ್ಲಿರುವ ನ್ಯೂಜಿಲೆಂಡ್ ತಂಡ ತನ್ನ ಅಂತಿಮ ಪಂದ್ಯದಲ್ಲಿ ಇಂಗ್ಲೆಂಡ್ ಅನ್ನು ಸೋಲಿಸಿದಲ್ಲಿ ಪಾಕಿಸ್ತಾನವೂ ಟೂರ್ನಿಯಿಂದ ಹೊರಬೀಳಲಿದೆ. ಒಂದು ವೇಳೆ ಶ್ರೀಲಂಕಾ ತಂಡ ನ್ಯೂಜಿಲೆಂಡ್ ಅನ್ನು ಸೋಲಿಸಿದಲ್ಲಿ ಪಾಕಿಸ್ತಾನದ ಸೆಮಿಫೈನಲ್ ಹಾದಿ ಇದಕ್ಕಿಂತ ಸುಲಭವಿರುತ್ತಿತ್ತು. ಕೊಲಂಬೊದಲ್ಲಿ ನಡೆದ ನ ಸೂಪರ್ 8 ಹಂತದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂಡ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 168 ರನ್ ಗಳಿಸಿತು. ಇದಕ್ಕುತ್ತಕವಾಗಿ ಶ್ರೀಲಂಕಾ ತಂಡ 10 ಓವರ್ ಗಳು ಮುಗಿದಾಗ 107 ರನ್ ಗಳಿಸಲು ಶಕ್ತವಾಯಿತು. () ಸಂಕ್ಷಿಪ್ತ ಸ್ಕೋರ್ ನ್ಯೂಜಿಲೆಂಡ್ 20 ಓವರ್ ಗಳಲ್ಲಿ 168/7, ಮಿಚೆಲ್ ಸ್ಯಾಂಟ್ನರ್ 47(26), ಕೋಲ್ ಕೋಲ್ ಮೆಕೊಂಚಿ ನಾಟೌಟ್ 31(23), ರಚಿನ್ ರವೀಂದ್ರ 32(22). ಮಹೀಶ್ ತೀಕ್ಷಣ 30ಕ್ಕೆ 3, ದುಶ್ಮಂತ ಚಾಮಿರ 38ಕ್ಕೆ 3.

ವಿಜಯ ಕರ್ನಾಟಕ 25 Feb 2026 10:43 pm

ಧರ್ಮ, ಜಾತಿ ಆಧಾರವಾಗಿ ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸುವುದು ಸಂವಿಧಾನದ ಉಲ್ಲಂಘನೆ: ಸುಪ್ರೀಂ ಕೋರ್ಟ್

ಹೊಸದಿಲ್ಲಿ, ಫೆ. 25: ಭಾಷಣಗಳು, ಮೀಮ್ಸ್, ವ್ಯಂಗ್ಯಚಿತ್ರಗಳು ಅಥವಾ ದೃಶ್ಯಕಲೆಗಳ ಮೂಲಕ ಯಾವುದೇ ಸಮುದಾಯವನ್ನು ನಿಂದಿಸುವುದು ಅಥವಾ ಅವಹೇಳನ ಮಾಡುವುದು ಸಾಂವಿಧಾನಿಕವಾಗಿ ಅನುಮತಿಸಲ್ಪಡುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಧರ್ಮ, ಜಾತಿ, ಭಾಷೆ ಅಥವಾ ಪ್ರದೇಶದ ಆಧಾರದ ಮೇಲೆ ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸುವುದು ಸಂವಿಧಾನದ ಆತ್ಮಕ್ಕೆ ವಿರುದ್ಧ ಎಂದು ಪೀಠವು ಹೇಳಿದೆ. ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿದ್ದ ‘ಘೂಸ್ ಖೋರ್ ಪಾಂಡತ್’ ಚಿತ್ರದ ಶೀರ್ಷಿಕೆಯನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ವಿಚಾರಣೆಯ ವೇಳೆ ನ್ಯಾಯಮೂರ್ತಿ ಉಜ್ಜಲ್ ಭುಯಾನ್ ತಮ್ಮ ಪ್ರತ್ಯೇಕ ಅಭಿಪ್ರಾಯದಲ್ಲಿ ಈ ಮಹತ್ವದ ಅವಲೋಕನಗಳನ್ನು ದಾಖಲಿಸಿದ್ದಾರೆ. ನಿರ್ಮಾಪಕರು ಶೀರ್ಷಿಕೆಯನ್ನು ಬದಲಾಯಿಸಲು ಒಪ್ಪಿಕೊಂಡ ನಂತರ, ನ್ಯಾಯಮೂರ್ತಿ ಬಿ.ವಿ. ನಾಗರತ್ನ ಮತ್ತು ನ್ಯಾಯಮೂರ್ತಿ ಭುಯಾನ್ ಅವರನ್ನೊಳಗೊಂಡ ಪೀಠವು ಪ್ರಕರಣವನ್ನು ಮುಕ್ತಾಯಗೊಳಿಸಿತು. ಉನ್ನತ ಸಾಂವಿಧಾನಿಕ ಹುದ್ದೆಗಳನ್ನು ಹೊಂದಿರುವ ಸಚಿವರು ಹಾಗೂ ಸಾರ್ವಜನಿಕ ವ್ಯಕ್ತಿಗಳು ಇಂತಹ ನಡೆ ತಾಳಿದರೆ ಅದು ಇನ್ನಷ್ಟು ಗಂಭೀರ ವಿಷಯವಾಗುತ್ತದೆ. ಸಂವಿಧಾನವನ್ನು ಕಾಪಾಡುವ ಪ್ರಮಾಣವಚನ ಸ್ವೀಕರಿಸಿರುವವರಿಗೆ ಹೆಚ್ಚಿನ ಜವಾಬ್ದಾರಿ ಇದೆ ಎಂದು ನ್ಯಾಯಾಲಯ ಎಚ್ಚರಿಸಿದೆ. ಅಸ್ಸಾಂ ಮುಖ್ಯಮಂತ್ರಿ ಮಾಡಿದ ಭಾಷಣಗಳ ಕುರಿತು ಉದ್ಭವಿಸಿದ ವಿವಾದದ ಹಿನ್ನೆಲೆಯಲ್ಲಿ ಈ ಅಭಿಪ್ರಾಯಗಳು ಪ್ರಸ್ತುತತೆಯನ್ನು ಪಡೆದಿವೆ. ಭಾರತದ ಮುಖ್ಯ ನ್ಯಾಯಮೂರ್ತಿಯವರ ನೇತೃತ್ವದ ಪೀಠವು ಅಸ್ಸಾಂ ಮುಖ್ಯಮಂತ್ರಿ ವಿರುದ್ಧ ದ್ವೇಷ ಭಾಷಣದ ಎಫ್‌ಐಆರ್ ಕೋರಿ ಸಲ್ಲಿಸಲಾದ ವಿಧಿ 32 ಅರ್ಜಿಗಳನ್ನು ಸ್ವೀಕರಿಸಲು ನಿರಾಕರಿಸಿ, ಅರ್ಜಿದಾರರನ್ನು ಹೈಕೋರ್ಟ್‌ಗೆ ತೆರಳುವಂತೆ ಸೂಚಿಸಿತ್ತು. ಶೀರ್ಷಿಕೆ ಹಿಂತೆಗೆದುಕೊಳ್ಳಲ್ಪಟ್ಟ ಹಿನ್ನೆಲೆಯಲ್ಲಿ ಅಂತಿಮ ತೀರ್ಪಿನ ಅಗತ್ಯವಿಲ್ಲದಿದ್ದರೂ, ಭ್ರಾತೃತ್ವ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಿಯಂತ್ರಿಸುವ ಸಾಂವಿಧಾನಿಕ ತತ್ವಗಳನ್ನು ಸ್ಪಷ್ಟಪಡಿಸುವುದು ಅಗತ್ಯವೆಂದು ನ್ಯಾಯಮೂರ್ತಿ ಭುಯಾನ್ ಅಭಿಪ್ರಾಯಪಟ್ಟರು. ಭ್ರಾತೃತ್ವವು ಸಂವಿಧಾನದ ಪೀಠಿಕೆಯಲ್ಲಿ ಉಲ್ಲೇಖಿತ ಮೂಲಭೂತ ಮೌಲ್ಯವಾಗಿದೆ ಎಂದು ನ್ಯಾಯಾಲಯ ತಿಳಿಸಿದೆ. ವಿಧಿ 51A(e) ಪ್ರಕಾರ ಧಾರ್ಮಿಕ, ಭಾಷಾ ಮತ್ತು ಪ್ರಾದೇಶಿಕ ವೈವಿಧ್ಯತೆಗಳನ್ನು ಮೀರಿ ಸಾಮರಸ್ಯ ಮತ್ತು ಸಹೋದರತ್ವವನ್ನು ಉತ್ತೇಜಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ. ಡಾ. ಬಿ.ಆರ್. ಅಂಬೇಡ್ಕರ್ ಭ್ರಾತೃತ್ವವನ್ನು ಸ್ವಾತಂತ್ರ್ಯ ಮತ್ತು ಸಮಾನತೆಯೊಂದಿಗೆ ಜೋಡಿಸಿದ್ದರು ಎಂದು ನ್ಯಾಯಮೂರ್ತಿ ಭುಯಾನ್ ಉಲ್ಲೇಖಿಸಿದರು. “ಭ್ರಾತೃತ್ವವೆಂದರೆ ಸಹಮಾನವರ ಬಗ್ಗೆ ಗೌರವದ ಮನೋಭಾವ. ಜಾತಿ, ಧರ್ಮ, ಭಾಷೆ ಬೇಧವಿಲ್ಲದೆ ಪರಸ್ಪರ ಗೌರವಿಸುವುದು ನಮ್ಮ ಸಾಂವಿಧಾನಿಕ ಧರ್ಮ,” ಎಂದು ಅವರು ಹೇಳಿದ್ದಾರೆ. ಪೌರತ್ವ ಕಾಯ್ದೆಯ ಸೆಕ್ಷನ್ 6A ಕುರಿತ ತೀರ್ಪನ್ನು ಉಲ್ಲೇಖಿಸಿ, ಸಮಾಜದೊಳಗಿನ ಎಲ್ಲಾ ವ್ಯಕ್ತಿಗಳಲ್ಲಿ ಸಹೋದರತ್ವದ ಭಾವನೆ ಬೆಳೆಸುವುದು ಭ್ರಾತೃತ್ವದ ಉದ್ದೇಶವೆಂದು ಸುಪ್ರೀಂ ಕೋರ್ಟ್ ಈಗಾಗಲೇ ಹೇಳಿದೆ ಎಂದು ಅವರು ಸ್ಮರಿಸಿದರು. “ರಾಜ್ಯ ಅಥವಾ ರಾಜ್ಯೇತರ ವ್ಯಕ್ತಿಗಳಾಗಿರಲಿ, ಯಾವುದೇ ಮಾಧ್ಯಮದ ಮೂಲಕ ಸಮುದಾಯವನ್ನು ನಿಂದಿಸುವುದು ಸಾಂವಿಧಾನಿಕವಾಗಿ ಮಾನ್ಯವಲ್ಲ,” ಎಂದು ಪೀಠ ಸ್ಪಷ್ಟಪಡಿಸಿದೆ. ಸಂವಿಧಾನದ ವಿಧಿ 19(1)(a) ಅಡಿಯಲ್ಲಿ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವು ಚಲನಚಿತ್ರ ನಿರ್ಮಾಪಕರಿಗೂ ಅನ್ವಯಿಸುತ್ತದೆ ಎಂದು ನ್ಯಾಯಾಲಯ ತಿಳಿಸಿದೆ. ಕಲಾತ್ಮಕ ಅಭಿವ್ಯಕ್ತಿ ಪ್ರಜಾಪ್ರಭುತ್ವ ಚರ್ಚೆಯ ಪ್ರಮುಖ ಅಂಗವಾಗಿದೆ ಎಂದು ನ್ಯಾಯಮೂರ್ತಿ ಭುಯಾನ್ ಹೇಳಿದ್ದಾರೆ. “75 ವರ್ಷಗಳ ಹಳೆಯ ಗಣರಾಜ್ಯವು ಕವಿತೆ ಅಥವಾ ಹಾಸ್ಯದಿಂದ ಬೆದರಿಕೆಗೆ ಒಳಗಾಗುವಷ್ಟು ದುರ್ಬಲವಲ್ಲ. ಇದೇ ತತ್ವ ಚಿತ್ರ ಶೀರ್ಷಿಕೆಗೂ ಅನ್ವಯಿಸುತ್ತದೆ,” ಎಂದು ನ್ಯಾಯಮೂರ್ತಿ ಭುಯಾನ್ ತಮ್ಮ ಪ್ರತ್ಯೇಕ ಅಭಿಪ್ರಾಯದಲ್ಲಿ ಹೇಳಿದ್ದಾರೆ.

ವಾರ್ತಾ ಭಾರತಿ 25 Feb 2026 10:43 pm

ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ಭಾರೀ ವಂಚನೆ: ಪ್ರಕರಣ ದಾಖಲು

ಮಂಗಳೂರು,ಫೆ.25: ಮುಂಬೈ ಸಿಸಿಬಿ ಪೊಲೀಸ್ ಪರಿಚಯಿಸಿಕೊಂಡ ಆರೋಪಿಯೊಬ್ಬ ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ವ್ಯಕ್ತಿಯೊಬ್ಬರಿಗೆ 41.85 ಲಕ್ಷ ರೂ. ವಂಚಿಸಿರುವ ಬಗ್ಗೆ ಪ್ರಕರಣ ದಾಖಲಾಗಿದೆ. ಜ.31ರಂದು ಅಪರಿಚಿತ ವ್ಯಕ್ತಿ ಹೊಸದಿಲ್ಲಿಯಿಂದ ಕರೆ ಮಾಡಿ ತನ್ನನ್ನು ಸಿಸಿಬಿ ಪೊಲೀಸ್ ಎಂದು ಪರಿಚಯಿಸಿ ಕೊಂಡು ನಿಮ್ಮ ಗುರುತಿನ ಚೀಟಿ ಉಪಯೋಗಿಸಿಕೊಂಡು ಮುಂಬೈನಲ್ಲಿ ಕೆನರಾ ಬ್ಯಾಂಕ್‌ನಲ್ಲಿ ಖಾತೆಯನ್ನು ತೆರೆಯಲಾಗಿದೆ. ಅದರಲ್ಲಿ ದೊಡ್ಡ ಮಟ್ಟದ ಅವ್ಯವಹಾರ ನಡೆಯುತ್ತಿದೆ. ಗುರುತಿನ ಚೀಟಿಯ ನಂಬರ್ ಉಪಯೋಗಿ ಸಿಕೊಂಡು ಮೊಬೈಲ್ ನಂಬರ್ ಪಡೆದುಕೊಳ್ಳಲಾಗಿದೆ. ಕೆನರಾ ಬ್ಯಾಂಕ್‌ನಲ್ಲಿ ಖಾತೆ ತರೆದು ಅಕ್ರಮ ಹಣ ವರ್ಗಾವಣೆ ಮಾಡಲಾಗಿದೆ. ನಿಮ್ಮನ್ನು ಬಂಧಿಸಲಾಗುವುದು. ಬಂಧನಕ್ಕೆ ಸುಪ್ರಿಂ ಕೋರ್ಟ್ ವಾರೆಂಟ್ ಇದೆ ಎಂದು ಹೇಳಿ ವಾಟ್ಸ್‌ಆ್ಯಪ್ ಮೂಲಕ ವಿಡಿಯೋ ಕಾಲ್‌ನಲ್ಲಿದ್ದು ತನಿಖೆಗೆ ಸಹಕರಿಸಬೇಕಾಗಿ ತಿಳಿಸಿದ. ಇಲ್ಲದಿದ್ದರೆ ಬಂಧಿಸುವುದಾಗಿ ಎಚ್ಚರಿಸಿದ. ಅಲ್ಲದೆ ಮಗ ಮತ್ತು ಸೊಸೆಗೆ ತಿಳಿಸದಂತೆಯೂ ಹೆದರಿಸಿದ್ದ. ಬಳಿಕ ತನ್ನ ಎಲ್ಲಾ ವೈಯಕ್ತಿಕ ವಿವರಗಳು ಮತ್ತು ಬ್ಯಾಂಕ್‌ನ ವಿವರಗಳನ್ನು ಪಡೆದುಕೊಂಡಿದ್ದ. ಬಂಧನದಿಂದ ಪಾರಾಗಬೇಕಾದರೆ ಬ್ಯಾಂಕ್ ಖಾತೆಗಳ ಪರಿಶೀಲನೆ ಮಾಡಬೇಕು ಎಂದು ತಿಳಿಸಿದ್ದ. ಬ್ಯಾಂಕ್ ಖಾತೆಯಲ್ಲಿರುವ ಹಣದ ಪರಿಶೀಲನೆ ಮುಗಿಯುವವರೆಗೂ ಅದನ್ನು ವರ್ಗಾಯಿಸುವಂತೆ ತಿಳಿಸಿದ್ದ. ಅದರಂತೆ ತಾನು ಅಪರಿಚಿತ ವ್ಯಕ್ತಿ ನೀಡಿದ ಬ್ಯಾಂಕ್ ಖಾತೆಗಳಿಗೆ ಫೆ.9ರಿಂದ ಫೆ.18ರವರೆಗೆ 41.85 ಲಕ್ಷ ರೂ. ವರ್ಗಾವಣೆ ಮಾಡಿರುವೆ ಎಂದು ಡಿಜಿಟಲ್ ಅರೆಸ್ಟ್‌ ಗೊಳಗಾಗಿದ್ದ ವ್ಯಕ್ತಿ ಮಂಗಳೂರಿನ ಸೆನ್ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ವಾರ್ತಾ ಭಾರತಿ 25 Feb 2026 10:39 pm

ಲೆಂಟನ್ ಗಾಸ್ಪೆಲ್ ಕಾಮಿಕ್ಸ್ ಪುಸ್ತಕ ಬಿಡುಗಡೆ

ಮಂಗಳೂರು: ಮಕ್ಕಳಿಗೆ ಅನುಕೂಲಕರವಾದ ವಿಶಿಷ್ಟ ಲೆಂಟನ್ ಪ್ರಕಟಣೆ ‘ಲೆಂಟನ್ ಗಾಸ್ಪೆಲ್ ಕಾಮಿಕ್ಸ್’ ಪುಸ್ತಕವನ್ನು ಮಂಗಳೂರು ಬಿಕರ್ಣಕಟ್ಟೆಯ ಇನ್ಫಂಟ್ ಜೀಸಸ್ ಶ್ರೈನ್‌ನಲ್ಲಿ ಇತ್ತೀಚೆಗೆ ಬಿಡುಗಡೆಗೊಂಡಿತು. ಇನ್ಫೆಂಟ್ ಜೀಸಸ್ ಶ್ರೈನ್ ನಿರ್ದೇಶಕ ಫಾ. ಸ್ಟಿಫನ್ ಪಿರೆರಾ ಈ ಪುಸ್ತಕವು ಲೆಂಟ್ ಅವಧಿಯಲ್ಲಿ ಮಕ್ಕಳಿಗೆ ಸುವಾರ್ತೆ ಯನ್ನು ಆಕರ್ಷಕ ಹಾಗೂ ಅರ್ಥಪೂರ್ಣ ರೀತಿಯಲ್ಲಿ ತಿಳಿದುಕೊಳ್ಳಲು ಮತ್ತು ಅನುಭವಿಸಲು ಸಹಾಯ ಮಾಡುವ ಉದ್ದೇಶದಿಂದ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ ಎಂದರು. ಈ ಪುಸ್ತಕವು ಮಕ್ಕಳನ್ನು ಯೇಸುವಿನ ಶಿಲುಬೆಯ ಕಡೆಗಿನ ಪ್ರಯಾಣವನ್ನು ತಿಳಿಯಲು , ಈಸ್ಟರ್ ಹಬ್ಬದ ಆನಂದ ವನ್ನು ಆಳವಾದ ಅರ್ಥದೊಂದಿಗೆ ಹಾಗೂ ಉತ್ಸಾಹದಿಂದ ಅನುಭವಿಸಲು ಪ್ರೇರೇಪಿಸುತ್ತದೆ ಎಂದು ಅವರು ತಿಳಿಸಿದರು.  ಧ್ಯಾನ ಸಾಧನಾ ನಿರ್ದೇಶಕರೂ ಹಾಗೂ ಲೇಖಕರೂ ಫಾ. ರಿಚರ್ಡ್ ಮಿನೆಜಸ್ ಅವರು, ಪ್ರತಿದಿನದ ಸುವಾರ್ತೆ ಯನ್ನು ಎರಡು ಭಾಗಗಳಲ್ಲಿ ನೀಡಲಾಗಿದೆ .ಮಕ್ಕಳಿಗೆ ಅರ್ಥವಾಗುವ ಕಥನ ರೂಪದಲ್ಲಿ ಮತ್ತು ಅವರ ದೈನಂದಿನ ಜೀವನದಲ್ಲಿ ಅನುಸರಿಸಬಹುದಾದ ಪ್ರಾಯೋಗಿಕ ಚಿಂತನೆ ರೂಪದಲ್ಲಿ. ಈ ಪುಸ್ತಕವು ಧಾರ್ಮಿಕ ರೂಪುಗೊಳಿಸು ವಿಕೆ ಮತ್ತು ಮಾನಸಿಕ ಅರಿವನ್ನು ಒಟ್ಟುಗೂಡಿಸಿ ಸಮಗ್ರ ಬೆಳವಣಿಗೆಗೆ ಸಹಾಯ ಮಾಡುತ್ತದೆ ಎಂದು ಹೇಳಿದರು. ಫಾ. ಮೆಲ್ವಿನ್ ಡಿಕುನ್ಹಾ, , ಫಾ. ವಾಲ್ಟರ್ ಡಿ ಸೋಜ ಹಾಗೂ ಶ್ರೈನ್ ನಿರ್ದೇಶಕ ಫಾ. ಸ್ಟಿಫನ್ ಪಿರೆರಾ ಉಪಸ್ಥಿತರಿದ್ದರು.

ವಾರ್ತಾ ಭಾರತಿ 25 Feb 2026 10:37 pm

ಎನ್‌ಐಟಿಕೆ ಸುರತ್ಕಲ್‌ನಲ್ಲಿ ನೀರು ಶುದ್ಧೀಕರಣ ಘಟಕ ಉದ್ಘಾಟನೆ

ಮಂಗಳೂರು: ರಾಷ್ಟ್ರೀಯ ತಾಂತ್ರಿಕ ಸಂಸ್ಥೆ ಕರ್ನಾಟಕ (ಎನ್‌ಐಟಿಕೆ ) ಸುರತ್ಕಲ್‌ನಲ್ಲಿ ಪ್ರತಿದಿನ ಒಂದು ಮಿಲಿಯನ್ ಲೀಟರ್ ಸಂಗ್ರಹ ಸಾಮರ್ಥ್ಯ ಹೊಂದಿರುವ ಅತ್ಯಾಧುನಿಕ ನೀರು ಶುದ್ಧೀಕರಣ ಘಟಕ ಮಂಗಳವಾರ ಆರಂಭಗೊಂಡಿತು. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಪೆಟ್ರೋನೆಟ್ ಎಂಎಚ್‌ಬಿ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಹಾಗೂ 1989ರ ಮೆಕ್ಯಾನಿಕಲ್ ಇಂಜಿನಿಯರಿಂಗ್ ಬ್ಯಾಚ್‌ನ ಎನ್‌ಐಟಿಕೆ ಹಳೆಯ ವಿದ್ಯಾರ್ಥಿ ಸುಧೀರ್ ಕುಮಾರ್ ಮತ್ತು ಎನ್‌ಐಟಿಕೆ ಸುರತ್ಕಲ್ ನಿರ್ದೇಶಕ ಪ್ರೊ. ಬಿ. ರವಿ ನೆರವೇರಿಸಿದರು. ಎನ್‌ಐಟಿಕೆ ಹಳೆಯ ವಿದ್ಯಾರ್ಥಿಯಾಗಿರುವುದರಿಂದ ಈ ಯೋಜನೆಯನ್ನು ಎನ್‌ಐಟಿಕೆಯಲ್ಲಿ ಕೈಗೊಳ್ಳುವುದು ವಿಶೇಷ ಗೌರವವಾಗಿದೆ ಎಂದು ತಿಳಿಸಿದರು. ಎನ್‌ಐಟಿಕೆ ನಿರ್ದೇಶಕ ಪ್ರೊ. ಬಿ. ರವಿ ಅವರು‘‘ಕಳೆದ ವರ್ಷ ಕ್ಯಾಂಪಸ್‌ನ ಉತ್ತರ-ಪೂರ್ವ ಭಾಗದಲ್ಲಿ ಸುಮಾರು 30 ಮಿಲಿಯನ್ ಲೀಟರ್ ಸಾಮರ್ಥ್ಯದ ಮಳೆನೀರು ಸಂಗ್ರಹಣಾ ಜಲಾಶಯವನ್ನು ನಿರ್ಮಿಸಲಾಗಿತ್ತು. ಈ ಶೋಧನಾ ಘಟಕವು ಅದರ ನೀರನ್ನು, ಹಾಗೆಯೇ ಕ್ಯಾಂಪಸ್‌ನ ಇತರ ಮೂಲಗಳಿಂದ ಪಡೆಯುವ ನೀರನ್ನು, ಬೇಸಿಗೆ ತಿಂಗಳಲ್ಲಿ ಮಹಾನಗರ ಪಾಲಿಕೆಯಿಂದ ದೊರೆಯುವ ನೀರಿನ ಕೊರತೆಯನ್ನು ಪೂರೈಸಲು ಬಳಸಲು ಸಾಧ್ಯವಾಗುತ್ತದೆ.’’ ಅವರು ಹೇಳಿದರು ಈ ಘಟಕವು ಕ್ಯಾಂಪಸ್‌ನ ಟ್ಯೂಬ್‌ವೆಲ್‌ಗಳು ಮತ್ತು ಓಪನ್‌ವೆಲ್‌ಗಳಿಂದ ಪಂಪ್ ಮಾಡಲಾದ ಕಚ್ಚಾ ನೀರನ್ನು ಶುದ್ಧೀಕರಿಸಲು ವಿನ್ಯಾಸಗೊಳಿಸಲಾಗಿದೆ. ಇದರಿಂದಾಗಿ ಮಂಗಳೂರು ಮಹಾನಗರ ಪಾಲಿಕೆಯಿಂದ ದೊರೆಯುವ ನೀರಿನ ಪೂರೈಕೆಯನ್ನು ಹೆಚ್ಚಿಸಲು ಸಾಧ್ಯವಾಗುತ್ತದೆ ಎಂದರು. ಈ ಕಾರ್ಯಕ್ರಮದಲ್ಲಿ ಪೆಟ್ರೋನೆಟ್‌ನ ತಾಂತ್ರಿಕ ಮುಖ್ಯಸ್ಥೆ ಸೈಸುಧಮ್ಯೀ, ಕಾರ್ಯಾಚರಣೆ ಮುಖ್ಯಸ್ಥ ಉದಯ ಪೈ, ಜೊತೆಗೆ ರಿಜಿಸ್ಟ್ರಾರ್ (ಪ್ರಭಾರ) ಪ್ರೊ.ಕುಮಾರ್ ಜಿ.ಎನ್, ಯೋಜನೆ ಮತ್ತು ಅಭಿವೃದ್ಧಿ ಡೀನ್ ಪ್ರೊ. ವೆಂಕಟೇಶ ಪೆರುಮಾಳ್, ಹಳೆಯ ವಿದ್ಯಾರ್ಥಿ ಮತ್ತು ಕಾರ್ಪೊರೇಟ್ ಸಂಬಂಧಗಳ ಡೀನ್ ಪ್ರೊ. ಪ್ರಸನ್ನ ಬೆಳೂರು, ಹಾಗೂ ಇತರ ಅಧಿಕಾರಿಗಳು, ಅಧ್ಯಾಪಕರು, ಸಿಬ್ಬಂದಿ ಮತ್ತು ವಿದ್ಯಾರ್ಥಿ ಪ್ರತಿನಿಧಿಗಳು ಉಪಸ್ಥಿತರಿದ್ದರು. 

ವಾರ್ತಾ ಭಾರತಿ 25 Feb 2026 10:35 pm

ಅಮೆರಿಕದಲ್ಲಿ ಡೆಲಿಲಾ ಕಾನೂನು ತರಲು ಮುಂದಾದ ಟ್ರಂಪ್‌; ಕಾನೂನು ಜಾರಿಯಾದರೆ ಭಾರತೀಯ ಟ್ರಕ್ ಡ್ರೈವರ್‌ಗಳಿಗೆ ಸಂಕಷ್ಟ ಯಾಕೆ?

ಅಕ್ರಮ ವಲಸಿಗರಿಗೆ ವಾಣಿಜ್ಯ ಚಾಲನಾ ಪರವಾನಗಿ ನೀಡುವುದನ್ನು ನಿರ್ಬಂಧಿಸುವ ಗುರಿಯನ್ನು ಹೊಂದಿರುವ ‘ಡೆಲಿಲಾ ಕಾನೂನು’ ಅನುಷ್ಠಾನಕ್ಕಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಫೆಬ್ರವರಿ 24ರಂದು ಯುಎಸ್ ಕಾಂಗ್ರೆಸ್‌ನ ಜಂಟಿ ಅಧಿವೇಶನವನ್ನು ಒತ್ತಾಯಿಸಿದ್ದಾರೆ. ಈ ಕ್ರಮವು ಸಾವಿರಾರು ಭಾರತೀಯ ಮೂಲದ ಚಾಲಕರ ಮೇಲೆ, ವಿಶೇಷವಾಗಿ ಪಂಜಾಬ್ ಮತ್ತು ಹರಿಯಾಣದ ಚಾಲಕರ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಜೂನ್ 20, 2024ರಂದು ಕ್ಯಾಲಿಫೋರ್ನಿಯಾದ ಸ್ಯಾನ್ ಬರ್ನಾರ್ಡಿನೊ ಕೌಂಟಿಯ ಅಡೆಲಾಂಟೊದಲ್ಲಿ ಭಾರತೀಯ ಟ್ರಕ್ ಚಾಲಕನೊಬ್ಬ ಕಾರಿಗೆ ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಡೆಲಿಲಾ ಕೋಲ್ಮನ್ ಎಂಬ ಬಾಲಕಿಗೆ ಗಂಭೀರ ಗಾಯಗಳಾಗಿತ್ತು. ಈ ಬಾಲಕಿಯ ಹೆಸರನ್ನೇ ಈ ಕಾನೂನಿಗೆ ಇಡಲಾಗಿದೆ. ತಮ್ಮ ವಾರ್ಷಿಕ ಯುಎಸ್ ಸ್ಟೇಟ್ ಆಫ್ ದಿ ಯೂನಿಯನ್ ಉದ್ದೇಶಿಸಿ ನಡೆಸಿದ ಭಾಷಣದಲ್ಲಿ ಅಧ್ಯಕ್ಷ ಟ್ರಂಪ್ ಈ ಕಾನೂನು ಬಗ್ಗೆ ಉಲ್ಲೇಖಿಸಿದ್ದಾರೆ. ಯಾವುದೇ ರಾಜ್ಯವು ದಾಖಲೆರಹಿತ ಚಾಲಕರಿಗೆ ಚಾಲನಾ ಪರವಾನಗಿ ನೀಡುವುದನ್ನು ತಡೆಯಲು ಏಕೀಕೃತ ಪ್ರಯತ್ನದ ಬೇಡಿಕೆಯನ್ನು ಟ್ರಂಪ್ ಒತ್ತಾಯಿಸಿದ್ದಾರೆ. “ಇಂದು ರಾತ್ರಿ, ನಾನು ಪ್ರತಿಯೊಬ್ಬ ಜನಪ್ರತಿನಿಧಿಯನ್ನು ನನ್ನ ಆಡಳಿತದೊಂದಿಗೆ ಸೇರಿ ಮೂಲಭೂತ ತತ್ವವನ್ನು ಪುನರುಚ್ಚರಿಸುವಂತೆ ಆಹ್ವಾನಿಸುತ್ತಿದ್ದೇನೆ. ನೀವು ಈ ಹೇಳಿಕೆಯನ್ನು ಒಪ್ಪಿದರೆ, ಎದ್ದುನಿಂತು ನಿಮ್ಮ ಬೆಂಬಲವನ್ನು ತೋರಿಸಿ. ಅಮೆರಿಕನ್ ಸರ್ಕಾರದ ಮೊದಲ ಕರ್ತವ್ಯವೆಂದರೆ ಅಕ್ರಮ ವಿದೇಶಿಯರನ್ನಲ್ಲ, ಅಮೆರಿಕನ್ ನಾಗರಿಕರನ್ನು ರಕ್ಷಿಸುವುದು” ಎಂದು ಟ್ರಂಪ್ ತಮ್ಮ ಭಾಷಣದಲ್ಲಿ ಹೇಳಿದ್ದಾರೆ. ಯಾರು ಈ ಡೆಲಿಲಾ ಕೋಲ್ಮನ್? ಡೆಲಿಲಾ ಕೋಲ್ಮನ್ ಆರು ವರ್ಷದ ಬಾಲಕಿ. ಭಾರತೀಯ ಟ್ರಕ್ ಚಾಲಕನಿಂದ ಸಂಭವಿಸಿದ ಬಹುವಾಹನ ಅಪಘಾತದಲ್ಲಿ ಈಕೆಗೆ ಗಂಭೀರ ಗಾಯಗಳಾಗಿತ್ತು. ಅಪಘಾತದ ಸಮಯದಲ್ಲಿ ಕೋಲ್ಮನ್‌ಗೆ ಐದು ವರ್ಷ ವಯಸ್ಸಾಗಿತ್ತು. ಗಂಭೀರ ಸ್ಥಿತಿಯಲ್ಲಿದ್ದ ಆಕೆಯನ್ನು ವಿಮಾನದ ಮೂಲಕ ಅಪಘಾತ ಸ್ಥಳದಿಂದ ಹೊರತರಲಾಗಿತ್ತು. ಈ ಅಪಘಾತದಲ್ಲಿ ಕೋಲ್ಮನ್‌ನ ಮೆದುಳು ಮತ್ತು ತಲೆಬುರುಡೆಗೆ ಗಾಯಗಳಾಗಿದ್ದು, ಎಲುಬು ಮುರಿದಿತ್ತು. ಆಕೆ ಮೂರು ವಾರಗಳ ಕಾಲ ಕೋಮಾದಲ್ಲಿದ್ದಳು. ನಂತರ ಆಕೆ ಕ್ರೇನಿಯೆಕ್ಟಮಿ (ತಲೆಬುರುಡೆಯ ಒಂದು ಭಾಗವನ್ನು ತೆಗೆಯುವ ಶಸ್ತ್ರಚಿಕಿತ್ಸೆ)ಗೆ ಒಳಗಾಗಬೇಕಾಯಿತು. ನ್ಯೂಯಾರ್ಕ್ ಪೋಸ್ಟ್ ವರದಿ ಪ್ರಕಾರ, ಅಪಘಾತದ ನಂತರ ಕೋಲ್ಮನ್ ನಡೆಯಲು ಕಷ್ಟಪಡುತ್ತಿದ್ದಾಳೆ. ಆಕೆಗೆ ಆಹಾರ ಸೇವಿಸಲು ಆಗುತ್ತಿಲ್ಲ. ಅವಳಿಗೆ ಡಿಪ್ಲೆಜಿಕ್ ಸೆರೆಬ್ರಲ್ ಪಾಲ್ಸಿ ಇರುವುದಾಗಿ ಪತ್ತೆಯಾಗಿದೆ. ಅಧ್ಯಕ್ಷ ಟ್ರಂಪ್ ಅವರ ಸ್ಟೇಟ್ ಆಫ್ ದಿ ಯೂನಿಯನ್ ಭಾಷಣದಲ್ಲಿ ಕೋಲ್ಮನ್ ಕೂಡ ಭಾಗವಹಿಸಿದ್ದಾಳೆ. ತಮ್ಮ ಭಾಷಣದಲ್ಲಿ ಟ್ರಂಪ್, “ಡೆಲಿಲಾ ಎಂದಿಗೂ ನಡೆಯಲು ಅಥವಾ ಮಾತನಾಡಲು ಸಾಧ್ಯವಾಗುವುದಿಲ್ಲ, ಉತ್ತಮ ಜೀವನವನ್ನು ನಡೆಸುವುದಿಲ್ಲ ಎಂದು ವೈದ್ಯರು ಹೇಳಿದರು. ಅವಳಿಗೆ ತಿನ್ನಲು ಸಹ ಸಾಧ್ಯವಾಗುವುದಿಲ್ಲ. ಆದರೆ ಈ ಎಲ್ಲ ತೊಂದರೆಗಳನ್ನು ಅನುಭವಿಸಿಯೂ ಅವಳು ಈಗ ಮೊದಲ ತರಗತಿಯಲ್ಲಿದ್ದಾಳೆ, ನಡೆಯಲು ಕಲಿಯುತ್ತಿದ್ದಾಳೆ. ಅವಳು ಇಂದು ಸಂಜೆ ಆಕೆಯ ಅಪ್ಪ ಮಾರ್ಕಸ್ ಜೊತೆ ಇಲ್ಲಿದ್ದಾಳೆ. ಆತ ಅದ್ಭುತ ವ್ಯಕ್ತಿ. ಡೆಲಿಲಾ, ನೀವು ದೊಡ್ಡ ಪ್ರೇರಣೆ. ದಯವಿಟ್ಟು ಎಲ್ಲರೂ ಎದ್ದುನಿಲ್ಲಿ. ಧನ್ಯವಾದಗಳು, ಡೆಲಿಲಾ” ಎಂದು ಹೇಳಿದ್ದಾರೆ. ಆರೋಪಿ ಚಾಲಕ ಯಾರು? ಜೂನ್ 2024ರಲ್ಲಿ ಕ್ಯಾಲಿಫೋರ್ನಿಯಾದಲ್ಲಿ ಪರ್ತಾಪ್ ಸಿಂಗ್ ಎಂಬಾತ ಚಲಾಯಿಸುತ್ತಿದ್ದ 18 ಚಕ್ರದ ಟ್ರಕ್ ಒಂದಕ್ಕಿಂತ ಹೆಚ್ಚು ಕಾರುಗಳಿಗೆ ಡಿಕ್ಕಿ ಹೊಡೆದಿತ್ತು. ಅಕ್ರಮವಾಗಿ ಅಮೆರಿಕಕ್ಕೆ ವಲಸೆ ಬಂದ ಭಾರತೀಯ ವ್ಯಕ್ತಿಯಾಗಿರುವ ಪರ್ತಾಪ್ ಸಿಂಗ್ ಅಸುರಕ್ಷಿತ ವೇಗದಲ್ಲಿ ಚಾಲನೆ ಮಾಡಿ ರಸ್ತೆ ಸಂಚಾರ ನಿಯಮ ಉಲ್ಲಂಘಿಸಿದ್ದರು. ಅವರನ್ನು ಆಗಸ್ಟ್ 2025ರಲ್ಲಿ ಯುಎಸ್ ವಲಸೆ ಮತ್ತು ಕಸ್ಟಮ್ಸ್ ಜಾರಿ (ICE) ಅಧಿಕಾರಿಗಳು ಬಂಧಿಸಿದರು. ಇದಕ್ಕೂ ಮುನ್ನ 2025ರ ಆಗಸ್ಟ್‌ನಲ್ಲಿ ಭಾರತದ 28 ವರ್ಷದ ಅಕ್ರಮ ವಲಸಿಗ ಹರ್ಜಿಂದರ್ ಸಿಂಗ್ ಫೋರ್ಟ್ ಪಿಯರ್ಸ್ ಬಳಿಯ “ಅಧಿಕೃತ ಬಳಕೆಗೆ ಮಾತ್ರ” ಪ್ರವೇಶ ದ್ವಾರದಲ್ಲಿ ಯು-ಟರ್ನ್ ಮಾಡಲು ಪ್ರಯತ್ನಿಸುವಾಗ ಫ್ಲೋರಿಡಾ ಟರ್ನ್‌ಪೈಕ್‌ನಲ್ಲಿ ರಸ್ತೆ ಅಪಘಾತ ಸಂಭವಿಸಿತ್ತು. ಅವರ ಸೆಮಿ-ಟ್ರಕ್ ಇಲ್ಲಿ ಸಿಕ್ಕಿಹಾಕಿಕೊಂಡು ಎಲ್ಲಾ ಲೇನ್‌ಗಳನ್ನು ನಿರ್ಬಂಧಿಸಿತು. ಇದರಲ್ಲಿ ಮಿನಿವ್ಯಾನ್ ಟ್ರೇಲರ್‌ಗೆ ಡಿಕ್ಕಿ ಹೊಡೆದು ಮೂವರು ಸಾವಿಗೀಡಾಗಿದ್ದರು. 2018ರಲ್ಲಿ ಅಕ್ರಮವಾಗಿ ಅಮೆರಿಕಕ್ಕೆ ಪ್ರವೇಶಿಸಿದ ಸಿಂಗ್ ಕ್ಯಾಲಿಫೋರ್ನಿಯಾಗೆ ತೆರಳಿದ್ದರು. ಅಲ್ಲಿ ಬಂಧನಕ್ಕೊಳಗಾದ ಅವರನ್ನು ಫ್ಲೋರಿಡಾಕ್ಕೆ ಕಳುಹಿಸಲಾಗಿತ್ತು. ಅಲ್ಲಿ ಅವರ ವಿರುದ್ಧ ನರಹತ್ಯೆ ಪ್ರಕರಣ ದಾಖಲಿಸಲಾಗಿದ್ದು, ಕಾನೂನು ಕ್ರಮ ಎದುರಿಸುತ್ತಿದ್ದಾರೆ. ಅಪರಾಧ ಸಾಬೀತಾದರೆ, ಅವರು 45 ವರ್ಷಗಳವರೆಗೆ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ. ಅಕ್ರಮ ವಲಸಿಗರನ್ನು ಒಳಗೊಂಡ ಎರಡು ಪ್ರಮುಖ ಅಪಘಾತಗಳ ನಂತರ ವಾಣಿಜ್ಯ ಚಾಲನಾ ಪರವಾನಗಿಗಳ ವಿತರಣೆಯನ್ನು ನಿರ್ಬಂಧಿಸಲು ಅಮೆರಿಕ ನಿರ್ಧರಿಸಿತು. ಭಾರತೀಯ ವಲಸಿಗರ ಮೇಲೆ ಪರಿಣಾಮ ಡೊನಾಲ್ಡ್ ಟ್ರಂಪ್ ಆಡಳಿತವು ಹಿಂದೆ 2,400 ಕ್ಕೂ ಹೆಚ್ಚು ಅಕ್ರಮ ಭಾರತೀಯ ವಲಸಿಗರನ್ನು ಗಡೀಪಾರು ಮಾಡಿತ್ತು. ಜನವರಿ 2025ರಿಂದ ಜನವರಿ 2026ರವರೆಗೆ 2,400 ಕ್ಕೂ ಹೆಚ್ಚು ಭಾರತೀಯ ಪ್ರಜೆಗಳನ್ನು ಗಡೀಪಾರು ಮಾಡಲಾಗಿದೆ ಅಥವಾ ಸ್ವದೇಶಕ್ಕೆ ಕಳುಹಿಸಲಾಗಿದೆ. 1.5 ಲಕ್ಷಕ್ಕೂ ಹೆಚ್ಚು ಭಾರತೀಯ ಮೂಲದ ಟ್ರಕ್ ಚಾಲಕರು ಅಮೆರಿಕದಲ್ಲಿ ಇದ್ದಾರೆ. ಇವರಲ್ಲಿ ಹೆಚ್ಚಿನವರು ಪಂಜಾಬ್ ಮತ್ತು ಹರಿಯಾಣದವರು ಎಂದು ವರದಿಯಾಗಿದೆ. ಆದಾಗ್ಯೂ, ಟ್ರಂಪ್ ತಮ್ಮ ಭಾಷಣದಲ್ಲಿ ಚಾಲಕರಿಗೆ ಇಂಗ್ಲಿಷ್ ಪ್ರಾವೀಣ್ಯತೆ ಇಲ್ಲದಿರುವುದರಿಂದ ರಸ್ತೆ ಅಪಘಾತಗಳು ಸಂಭವಿಸುತ್ತವೆ ಎಂದು ಹೇಳಿದ್ದಾರೆ. ಹೆಚ್ಚಿನ ಅಕ್ರಮ ವಲಸಿಗರು ಇಂಗ್ಲಿಷ್ ಮಾತನಾಡುವುದಿಲ್ಲ. ಅವರಿಗೆ ರಸ್ತೆಗಳಲ್ಲಿನ ಗುರುತು ಫಲಕಗಳನ್ನು ಸಹ ಓದಲು ಬರುವುದಿಲ್ಲ ಎಂದು ಟ್ರಂಪ್ ಹೇಳಿದ್ದಾರೆ. ಕಳೆದ ವರ್ಷ ಅಮೆರಿಕದಾದ್ಯಂತ ಕಡ್ಡಾಯ ಇಂಗ್ಲಿಷ್ ಪ್ರಾವೀಣ್ಯತೆ ಪರೀಕ್ಷೆಗಳಲ್ಲಿ ಅನುತ್ತೀರ್ಣರಾದ ಸುಮಾರು 7,248 ವಾಣಿಜ್ಯ ಟ್ರಕ್ ಚಾಲಕರನ್ನು ಅನರ್ಹಗೊಳಿಸಲಾಗಿತ್ತು. ಇದರಲ್ಲಿ ಹೆಚ್ಚಿನವರು ಭಾರತೀಯ ಮೂಲದವರು ಎಂದು ವರದಿಯಾಗಿದೆ. ಭಾರತದ ಚಾಲಕರು ಒಳಗೊಂಡ ಹಲವಾರು ಅಪಘಾತಗಳ ನಂತರ ಯುಎಸ್ ಸಾರಿಗೆ ಇಲಾಖೆ (DOT) ಈ ಕ್ರಮ ಕೈಗೊಂಡಿತ್ತು. ಪಂಜಾಬ್ ಮತ್ತು ಹರಿಯಾಣದಿಂದ 1,30,000ರಿಂದ 1,50,000 ಟ್ರಕ್ ಚಾಲಕರು ಪ್ರಸ್ತುತ ಯುಎಸ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಉತ್ತರ ಅಮೆರಿಕಾದ ಪಂಜಾಬಿ ಟ್ರಕ್ಕರ್ಸ್ ಅಸೋಸಿಯೇಷನ್ ಅಂದಾಜಿಸಿದೆ. ಅವರಲ್ಲಿ ಹಲವರು ಹೊಸ ನಿಯಮಗಳಿಂದ ಪ್ರಭಾವಿತರಾಗಿದ್ದಾರೆ. 2025ರಿಂದ ಯುಎಸ್ ಫೆಡರಲ್ ಮೋಟಾರ್ ಕ್ಯಾರಿಯರ್ ಸೇಫ್ಟಿ ಅಡ್ಮಿನಿಸ್ಟ್ರೇಷನ್ (FMCSA) ಟ್ರಕ್ ಚಾಲಕರ ಭಾಷಾ ಕೌಶಲ್ಯದ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಪ್ರಾರಂಭಿಸಿದೆ. ಫೆಡರಲ್ ನಿಯಂತ್ರಣ 49 ಸಿಎಫ್‌ಆರ್ 391.11(ಬಿ)(2) ಅಡಿಯಲ್ಲಿ ಅಧಿಕಾರಿಗಳು ಈಗ ರಸ್ತೆಬದಿಯ ತಪಾಸಣೆಯ ಸಮಯದಲ್ಲಿ ಕಡ್ಡಾಯ ಇಂಗ್ಲಿಷ್ ಭಾಷಾ ಪರೀಕ್ಷೆಗಳನ್ನು ನಡೆಸುತ್ತಿದ್ದಾರೆ. ಸಂಚಾರ ಚಿಹ್ನೆಗಳನ್ನು ಅನುಸರಿಸಲು ಮತ್ತು ಅಧಿಕಾರಿಗಳೊಂದಿಗೆ ಸಂವಹನ ನಡೆಸಲು ಇಂಗ್ಲಿಷ್ ಅನ್ನು ಸಮರ್ಪಕವಾಗಿ ಮಾತನಾಡಲು ಅಥವಾ ಅರ್ಥಮಾಡಿಕೊಳ್ಳಲು ಸಾಧ್ಯವಾಗದ ಯಾವುದೇ ವಾಣಿಜ್ಯ ಚಾಲಕನನ್ನು ಈಗ ಸ್ಥಳದಲ್ಲೇ ಗುರುತಿಸಿ ದಂಡ ವಿಧಿಸಲಾಗುತ್ತಿದೆ. ಒಬಾಮಾ ಆಡಳಿತದ ಅವಧಿಯಲ್ಲಿ ಮತ್ತು 2016ರವರೆಗೆ ಇಂಗ್ಲಿಷ್ ಪ್ರಾವೀಣ್ಯತೆ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಚಾಲಕರನ್ನು ತಕ್ಷಣವೇ ಸೇವೆಯಿಂದ ತೆಗೆದುಹಾಕಬೇಡಿ ಎಂದು ಅಧಿಕಾರಿಗಳಿಗೆ ಸೂಚಿಸಲಾಗಿತ್ತು. ಆದರೆ ಜೂನ್ 25, 2026ರಿಂದ ಟ್ರಂಪ್ ಆಡಳಿತವು ಈ ಸಡಿಲಿಕೆಯನ್ನು ಕೊನೆಗೊಳಿಸಿದೆ. ಈಗ ಸಾರಿಗೆ ಇಲಾಖೆಯ ಹೊಸ ಆದೇಶಗಳ ಅಡಿಯಲ್ಲಿ ತಪಾಸಣೆಯ ಸಮಯದಲ್ಲಿ ಇಂಗ್ಲಿಷ್ ಪ್ರಾವೀಣ್ಯತೆ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಯಾವುದೇ ಚಾಲಕರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಲಾಗುತ್ತಿದೆ. ಪ್ಯೂ ಸಂಶೋಧನಾ ಕೇಂದ್ರದ ಪ್ರಕಾರ ಅಮೆರಿಕದಲ್ಲಿರುವ ಎಲ್ಲಾ ದಾಖಲೆರಹಿತ ವಲಸಿಗರಲ್ಲಿ ಸರಿಸುಮಾರು 4.8%ರಿಂದ 5% ರಷ್ಟು ಜನರು ಭಾರತದಿಂದ ಬಂದವರು. ಅಕ್ರಮ ವಲಸಿಗರ ಶೇಕಡಾವಾರು ತುಲನಾತ್ಮಕವಾಗಿ ಕಡಿಮೆ ಇದ್ದರೂ, ಮೆಕ್ಸಿಕೊ ಮತ್ತು ಎಲ್ ಸಾಲ್ವಡಾರ್ ನಂತರ ಭಾರತವು ದಾಖಲೆರಹಿತ ವಲಸಿಗರ ಮೂರನೇ ಅತಿದೊಡ್ಡ ಮೂಲವಾಗಿದೆ.

ವಾರ್ತಾ ಭಾರತಿ 25 Feb 2026 10:30 pm

Urdu: ಆರೋಗ್ಯ ಇಲಾಖೆಯ ಉರ್ದು ಜಾಹೀರಾತು ವಿವಾದ: ಕನ್ನಡಪರ ಸಂಘಟನೆಗಳ ಆಕ್ಷೇಪ, ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದೇನು

Urdu: ಆರೋಗ್ಯ ಇಲಾಖೆಯು ಉರ್ದು ಭಾಷೆಯಲ್ಲಿ ನೀಡಿರುವ ಜಾಹೀರಾತು ತೀವ್ರ ವಿವಾದ ಸ್ವರೂಪವನ್ನು ಪಡೆದುಕೊಂಡಿದೆ. ಈ ಜಾಹೀರಾತಿಗೆ ಕನ್ನಡಪರ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿವೆ. ಆದರೆ ಈ ಜಾಹೀರಾತನ್ನು ಕರ್ನಾಟಕ ಕಾಂಗ್ರೆಸ್ ಸರ್ಕಾರವು ಸಮರ್ಥಿಸಿಕೊಂಡಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಟ್ವೀಟ್ ಮಾಡಿರುವ ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ ಅವರು, ಕರ್ನಾಟಕ ಸರ್ಕಾರ ಕನ್ನಡ ಮರೆತುಬಿಟ್ರಾ,

ಒನ್ ಇ೦ಡಿಯ 25 Feb 2026 10:25 pm

ಕಸಾಪ ಅವ್ಯವಹಾರ ಸಾಬೀತು: ಆಡಳಿತಾಧಿಕಾರಿಯಿಂದ ಮಹೇಶ್ ಜೋಶಿಗೆ ನೋಟೀಸ್

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್‍ನಲ್ಲಿ ನಡೆದಿವೆ ಎನ್ನಲಾದ ಅವ್ಯವಹಾರಗಳು ಸಾಬೀತಾಗಿದ್ದು, ಕನ್ನಡ ಸಾಹಿತ್ಯ ಪರಿಷತ್‍ನ ಆಡಳಿತಾಧಿಕಾರಿ ಮಹೇಶ್ ಜೋಶಿ ಅವರಿಗೆ ಕಾರಣ ಕೇಳಿ ನೋಟೀಸ್ ನೀಡಿದ್ದಾರೆ. ಕಸಾಪದ ಅವ್ಯವಹಾರಗಳ ವಿಚಾರಣೆ ನಡೆಸಿದ ಬೆಂಗಳೂರು ನಗರ ಜಿಲ್ಲೆ ಸಹಕಾರ ಸಂಘಗಳ ಉಪನಿಬಂಧಕರು ಹಾಗೂ ಸಂಘಗಳ ಜಿಲ್ಲಾ ನೋಂದಣಾಧಿಕಾರಿಗಳು ಸದರಿ ಅವ್ಯವಹಾರದ ಕುರಿತು ಕಾನೂನು ಕ್ರಮವಹಿಸುವಂತೆ ಸೂಚಿಸಿ ಕನ್ನಡ ಸಾಹಿತ್ಯ ಪರಿಷತ್‍ಗೆ ಪತ್ರ ಬರೆದಿದ್ದು, ಅದರಂತೆ ಮಹೇಶ್ ಜೋಶಿಗೆ ನೋಟೀಸ್ ನೀಡಿದ್ದಾರೆ. ಸಾಹಿತ್ಯ ಪರಿಷತ್‍ನ ಕಟ್ಟಡ ನಿರ್ಮಾಣದಲ್ಲಿ ಆಗಿರುವ ಅವ್ಯವಹಾರದ ಬಗ್ಗೆ ಲೋಕೋಪಯೋಗಿ ಇಲಾಖೆಯವರು ಸ್ಥಳ ಪರಿಶೀಲನೆ ಮಾಡಿ, ಎಲ್ಲ ಕಾಮಗಾರಿಗಳನ್ನು ಪರಿಶೀಲಿಸಿ, ಸಲ್ಲಿಸಿರುವ ವರದಿಯಂತೆ 3,76,73,885 ರೂ.ಗಳ ಕಾಮಗಾರಿಗಳನ್ನು ನಾನ್ ಷೆಡ್ಯೂಲ್ ರೇಟ್‍ನಲ್ಲಿ, ಕೆಟಿಪಿಪಿ ನಿಯಮ ಉಲ್ಲಂಘಿಸಿ, ಕಾಮಗಾರಿಗಳ ನಿರ್ಮಾಣ ಮಾಡಿರುವುದು ಹಾಗೂ ಕಾಮಗಾರಿಗಳಲ್ಲಿ ಅಳತೆ ವ್ಯತ್ಯಾಸದ ಕಾರಣ 65,53,571 ರೂ. ಆರ್ಥಿಕ ನಷ್ಟ ಉಂಟುಮಾಡಿರುವುದು ಸಾಬೀತುಗೊಂಡಿರುತ್ತದೆ ಎಂದು ನೋಟಿಸ್‍ನಲ್ಲಿ ತಿಳಿಸಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್‍ನಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸುವ ಸಂಬಂಧ 1,79,200 ರೂ., ಅಗ್ನಿಶಾಮಕ ಉಪಕರಣ ಖರೀದಿಯಲ್ಲಿ 1,75,452 ರೂ.ಗಳಂತೆ ಒಟ್ಟು 3,54,652 ರೂ.ಗಳನ್ನು ಹೆಚ್ಚುವರಿ ಮೊತ್ತವನ್ನು ಪಾವತಿಸಿ, ಸಾಹಿತ್ಯ ಪರಿಷತ್‍ಗೆ ಆರ್ಥಿಕ ನಷ್ಟ ಉಂಟು ಮಾಡಿರುವುದು ಸಾಬೀತುಗೊಂಡಿರುತ್ತದೆ ಎಂದು ನೋಟಿಸ್‍ನಲ್ಲಿ ಉಲ್ಲೇಖಿಸಿದ್ದಾರೆ. ರವೀಂದ್ರ ಕುಲಕರ್ಣಿ ಅವರು ಹಾವೇರಿಯಲ್ಲಿ ನಡೆದ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮೇಳನಕ್ಕೆ ವಿದೇಶದಿಂದ ಅವರ ಸ್ವಂತ ಖರ್ಚಿನಲ್ಲಿ ಆಗಮಿಸಿದ್ದು, ಅವರ ಹೆಸರಿನಲ್ಲಿ 2,57,530ರೂ. ಬಿಲ್ ತೋರಿಸಿ ಹಣ ದುರುಪಯೋಗ ಮಾಡಿರುವುದು ಹಾಗೂ ಮಂಡ್ಯದಲ್ಲಿ ನಡೆದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮೇಳನಕ್ಕೆ ಸಮ್ಮೇಳನದ ಆಹ್ವಾನ ಪತ್ರಿಕೆ ಮುದ್ರಣ ಮತ್ತು ಸನ್ಮಾನಿತರಿಗೆ ಸನ್ಮಾನಕ್ಕೆ ಸಂಬಂಧಿಸಿದ ಸಾಮಾಗ್ರಿಗಳ ಖರೀದಿಗಳಲ್ಲಿ ಒಟ್ಟು 86,57,321 ರೂ.ಹಣ ದುರುಪಯೋಗ ಪಡಿಸಿಕೊಂಡಿರುವುದು ಸಾಬೀತುಗೊಂಡಿರುತ್ತದೆ ಎಂದು ವಿಚಾರಣಾಧಿಕಾರಿಗಳು ವಿಚಾರಣಾ ವರದಿ ಸಲ್ಲಿಸಿದ್ದಾರೆ ಎಂದು ತಿಳಿಸಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯರ ಗುರುತಿನ ಕಾರ್ಡ್, ಸ್ಮಾರ್ಟ್ ಕಾರ್ಡ್ ತಯಾರಿಕೆಯಲ್ಲಿ 1,40,220 ರೂ. ಆರ್ಥಿಕ ನಷ್ಟ ಉಂಟು ಮಾಡಿರುವುದು ಸಾಬೀತುಗೊಂಡಿರುತ್ತದೆ ಎಂದು ತಿಳಿಸಿದ್ದಾರೆ. ವಿಚಾರಣಾಂಶ-5, 6, 7, 8, 12 ಮತ್ತು 15ರಲ್ಲಿ ಕರ್ನಾಟಕ ಪಾರದರ್ಶಕ ಕಾಯ್ದೆ 1999ರ ಅವಕಾಶಗಳನ್ನು ಸಂಪೂರ್ಣವಾಗಿ ಉಲ್ಲಂಘಿಸಿರುವುದು ವಿಚಾರಣೆಯಲ್ಲಿ ಸಾಬೀತುಗೊಂಡಿರುತ್ತದೆ ಎಂದು ವಿಚಾರಣಾಧಿಕಾರಿಗಳು ವಿಚಾರಣಾ ವರದಿಯನ್ನು ಸಲ್ಲಿಸಿರುತ್ತಾರೆ. ಸದರಿ ಉಲ್ಲಂಘನೆಗೆ ಕನ್ನಡ ಸಾಹಿತ್ಯ ಪರಿಷತ್‍ನ ಆ ಅವಧಿಯಲ್ಲಿನ ಅಧ್ಯಕ್ಷರನ್ನು ಜವಾಬ್ದಾರರನ್ನಾಗಿ ಮಾಡಿರುತ್ತಾರೆ ಎಂದು ತಿಳಿಸಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್‍ಗೆ ಆರ್ಥಿಕ ನಷ್ಟ ಉಂಟುಮಾಡಿರುವುದು ವಿಚಾರಣಾ ವರದಿಯಲ್ಲಿ ಕಂಡು ಬಂದಿರುವ ಅಂಶಗಳಾಗಿವೆ. ಕನ್ನಡ ಸಾಹಿತ್ಯ ಪರಿಷತ್ತಿನ ನಿಬಂಧನೆ ಸಂಖ್ಯೆ 7(8) ಮತ್ತು (9)ರಂತೆ ತಮ್ಮ ಮೇಲೆ ಏಕೆ ಕ್ರಮವಹಿಸಬಾರದು ಎಂಬುದಕ್ಕೆ ನಿಮ್ಮ ಸಮಜಾಯಿಷಿಕೆ ಏನಾದರೂ ಇದ್ದಲ್ಲಿ, ನೋಟೀಸ್ ಸ್ವೀಕರಿಸಿದ 7 ದಿನಗಳೊಳಗಾಗಿ ಲಿಖಿತ ಹೇಳಿಕೆ, ನೀಡಬೇಕು. ತಪ್ಪಿದ್ದಲ್ಲಿ, ಮುಂದಿನ ಕಾನೂನು ಕ್ರಮ ವಹಿಸಲಾಗುವುದು ಎಂದು ತಿಳಿಸಿದ್ದಾರೆ. ಬೈಲಾ, ಕ್ರಿಯಾ ಯೋಜನೆ ಅವಕಾಶವಿಲ್ಲದಿದ್ದರೂ ವಿದೇಶಿ ಪ್ರವಾಸ: ‘ಕನ್ನಡ ಸಾಹಿತ್ಯ ಪರಿಷತ್‍ನಿಂದ ವಿದೇಶಿ ಪ್ರವಾಸಕ್ಕೆ ಬೈಲಾ ಹಾಗೂ ಕ್ರಿಯಾ ಯೋಜನೆಯಲ್ಲಿ ಅವಕಾಶ ಇಲ್ಲದಿದ್ದರೂ, ಬಹರೇನ್ ಕನ್ನಡ ಭವನ ಉದ್ಘಾಟನಾ ಸಮಾರಂಭದಲ್ಲಿ ಹಾಗೂ ಅಮೇರಿಕಾದ 12ನೆ ವಿಶ್ವ ಅಕ್ಕ ಕನ್ನಡ ಸಮ್ಮೇಳನ ಕಾರ್ಯಕ್ರಮದಲ್ಲಿ ಭಾಗವಹಿಸಲು ವಿಮಾನ ಟಿಕೆಟ್ ಮತ್ತು ವಸತಿ ವ್ಯವಸ್ಥೆ ಇವೆರಡರ ವೆಚ್ಚವನ್ನು ಸಂಘದವರೆ ಭರಿಸಿದ್ದರೂ, ತಾವು ಪರಿಷತ್‍ನಿಂದ ವಿಮಾನ ಟಿಕೆಟ್ ಮತ್ತು ವಸತಿ ವ್ಯವಸ್ಥೆ ಇವೆರಡರ ವೆಚ್ಚವನ್ನು ಪಡೆದಿರುವುದು ಹಾಗೂ ಇತರೆ ವಿದೇಶ ಪ್ರವಾಸ ಕೈಗೊಂಡು 26,70,052 ರೂ.ಆರ್ಥಿಕ ನಷ್ಟ ಉಂಟು ಮಾಡಿರುವುದು ಸಾಬೀತುಗೊಂಡಿರುತ್ತದೆ. ಸದರಿ ಆರ್ಥಿಕ ನಷ್ಟಕ್ಕೆ ಕನ್ನಡ ಸಾಹಿತ್ಯ ಪರಿಷತ್‍ನ ಆ ಅವಧಿಯಲ್ಲಿನ ಅಧ್ಯಕ್ಷರನ್ನು ಜವಾಬ್ಧಾರರನ್ನಾಗಿ ಮಾಡಿ ವಿಚಾರಣಾ ವರದಿ ನೀಡಲಾಗಿದೆ’ ಎಂದು ಕಸಾಪ ಆಡಳಿತಾಧಿಕಾರಿ ತಿಳಿಸಿದ್ದಾರೆ.

ವಾರ್ತಾ ಭಾರತಿ 25 Feb 2026 10:23 pm

ಉದ್ಯೋಗಿಗಳ ಮಕ್ಕಳ ಆರೈಕೆ ರಜೆ ಆ ಮಗುವಿನ ಹಕ್ಕು; ನಿರಾಕರಿಸದೆ ಮಂಜೂರು ಮಾಡಿ - ಕರ್ನಾಟಕ ಹೈಕೋರ್ಟ್‌ ಮಹತ್ವದ ಆದೇಶ

ಉದ್ಯೋಗಿಗಳ ಮಕ್ಕಳ ಆರೈಕೆ ರಜೆಯ ಬಗ್ಗೆ ಕರ್ನಾಟಕ ಹೈಕೋರ್ಟ್‌ ಮಹತ್ವದ ಆದೇಶ. ಆ ರಜೆಯು ಮಗುವಿನ ಹಕ್ಕು ಎಂದು ಕೋರ್ಟ್‌ ಹೇಳಿದ್ದು, ಆದ್ಯತೆ ಮೇರೆಗೆ ರಜೆ ಮಂಜೂರು ಮಾಡಬೇಕು ಎಂದು ತಿಳಿಸಿದೆ. ಪ್ರಕರಣದಲ್ಲಿ ಕೇಂದ್ರ ಸರ್ಕಾರದ ಉದ್ಯೋಗಿಗೆ ರಜೆ ನೀಡಲು ಸೂಚನೆ ನೀಡಿದೆ. ಕೋರ್ಟ್‌ನ ಆದೇಶವು ಉದ್ಯೋಗಸ್ಥ ಮಹಿಳೆಯರಿಗೆ ಸಹಕಾರಿಯಾಗಲಿದೆ.

ವಿಜಯ ಕರ್ನಾಟಕ 25 Feb 2026 10:13 pm

ಗೃಹಲಕ್ಷ್ಮಿ ಯೋಜನೆಯಿಂದ ರಾಜ್ಯ ಮಹಿಳೆಯರ ಬದುಕು ಸುಧಾರಣೆ: ಲಕ್ಷ್ಮೀ ಹೆಬ್ಬಾಳ್ಕರ್

ಕಾರ್ಕಳ, ಫೆ.25: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ ಸಾಮಾಜಿಕ ನೆಲೆಗಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಗೃಹಲಕ್ಷ್ಮಿ ಯೋಜನೆಯನ್ನು ಮನೆ ಮನೆಗೆ ತಲುಪಿಸುವ ಮೂಲಕ ಮಹಿಳಾ ಸಬಲೀಕರಣಕ್ಕೆ ಮುನ್ನುಡಿ ಬರೆದಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ. ಕಾರ್ಕಳದ ಕುಕ್ಕುಂದೂರಿನಲ್ಲಿ ಕಿಸಾನ್ ಸಭಾ ಟ್ರಸ್ಟ್ ವತಿಯಿಂದ ನಡೆದ ಕಿಸಾನ್ ಸಭಾ ಸಭಾಂಗಣದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಸಚಿವೆ, ಇದುವರೆಗೂ 26 ಕಂತಿನ ಹಣವನ್ನು 1.24 ಕೋಟಿ ಮಹಿಳೆಯರಿಗೆ ತಲಾ 52 ಸಾವಿರ ರೂಪಾಯಿಯಂತೆ ಹಾಕಿದ್ದೇವೆ ಎಂದು ವಿವರಿಸಿದರು. ಉಡುಪಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಒಂದು ಸೀಟು ಗೆದ್ದಿಲ್ಲ, ಆದರೆ ಉಡುಪಿ ಜಿಲ್ಲೆಯಲ್ಲಿ ಅತಿಹೆಚ್ಚು ಗೃಹಲಕ್ಷ್ಮಿ ಫಲಾನುಭವಿಗಳು ಇದ್ದಾರೆ ಎಂದ ಸಚಿವೆ, ಕಾರ್ಕಳ ಕ್ಷೇತ್ರಾದ್ಯಂತ ಮನೆಮನೆಗೆ ತಿರುಗಿ ಗೃಹಲಕ್ಷ್ಮಿ ಯೋಜನೆ ಅರ್ಹ ಫಲಾನುಭವಿಗಳಿಗೆ ತಲುಪುವಂತೆ ಕಾರ್ಯಕರ್ತರು ಮಾಡಿದ್ದಾರೆ ಎಂದರು. ವೀರಪ್ಪ ಮೊಯ್ಲಿ ಅವರು ಕಿಸಾನ್ ಸಭಾ ಟ್ರಸ್ಟ್ ಮೂಲಕ ಆರಂಭಿಸಿದ ಮಹಾತ್ಮ ಗಾಂಧಿ ವಸತಿ ಶಾಲೆ ನಿಸ್ವಾರ್ಥತತೆಯಿಂದ ಕೆಲಸ ಮಾಡುತ್ತಿದೆ. ಬಡ ಮಕ್ಕಳಿಗೆ ಉಚಿತವಾಗಿ ಶಿಕ್ಷಣ ನೀಡುತ್ತಿದೆ. ಅವರು ನಮಗೆ ಆದರ್ಶ ಪ್ರಾಯರು ಎಂದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ,ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ, ಸಚಿವರಾದ ಎಚ್.ಸಿ.ಮಹದೇವಪ್ಪ, ಮಧು ಬಂಗಾರಪ್ಪ, ಶಾಸಕ ಸುನೀಲ್ ಕುಮಾರ್, ವಿಧಾನ ಪರಿಷತ್ ಸದಸ್ಯ ಐವಾನ್ ಡಿಸೋಜ ಹಾಗೂ ಇತರರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 25 Feb 2026 10:12 pm

Bengaluru | ನರ್ಸ್ ಮಾಡಿದ ಎಡವಟ್ಟಿನಿಂದ ಆರು ತಿಂಗಳ ಮಗುವಿನ ಬೆರಳು ತುಂಡು!

ನರ್ಸ್, ವೈದ್ಯರು, ಆಸ್ಪತ್ರೆಯ ಮಂಡಳಿ ವಿರುದ್ಧ ಪ್ರಕರಣ ದಾಖಲು

ವಾರ್ತಾ ಭಾರತಿ 25 Feb 2026 10:11 pm

ಏರ್ ಆಂಬ್ಯುಲೆನ್ಸ್ ದುರಂತದಲ್ಲಿ ಜಾರ್ಖಂಡ್ ದಂಪತಿ ಮೃತ್ಯು; ಅನಾಥರಾದ ಇಬ್ಬರು ಅಪ್ರಾಪ್ತರ ಮೇಲೆ ಕುಟುಂಬದ ಸಾಲದ ಋಣಭಾರ

ಲಾತಿಹಾರ್ (ಜಾರ್ಖಂಡ್), ಫೆ.25: ಗಂಡನ ಜೀವ ಉಳಿಸಲು ನಡೆಸಿದ ಹತಾಶ ಪ್ರಯತ್ನ ಕೊನೆಗೆ ದಂಪತಿಯ ದಾರುಣ ಸಾವಿನಲ್ಲಿ ಅಂತ್ಯಗೊಂಡಿರುವ ಘಟನೆ ಜಾರ್ಖಂಡ್‌ನ ಲಾತಿಹಾರ್ ಜಿಲ್ಲೆಯಲ್ಲಿ ನಡೆದಿದೆ. ಏರ್ ಆಂಬ್ಯುಲೆನ್ಸ್ ಅಪಘಾತದಲ್ಲಿ ಗಂಭೀರವಾಗಿ ಸುಟ್ಟಗಾಯಗೊಂಡಿದ್ದ ಸಂಜಯ್ ಕುಮಾರ್ ಸಾ ಹಾಗೂ ಅವರ ಜೊತೆಗಿದ್ದ ಪತ್ನಿ ಅರ್ಚನಾ ದೇವಿ ಮೃತಪಟ್ಟಿದ್ದಾರೆ. ಈ ದುರಂತದಿಂದ ಇಬ್ಬರು ಅಪ್ರಾಪ್ತ ಮಕ್ಕಳು ಅನಾಥರಾಗಿದ್ದು, ಕುಟುಂಬದ ಸಾಲದ ಭಾರ ಬಿದ್ದಿದೆ. ಸಂಜಯ್ ಕುಮಾರ್ ಸಾ ಜಿಲ್ಲೆಯಲ್ಲೇ ರಸ್ತೆಬದಿಯ ಉಪಾಹಾರ ಗೃಹ (ಧಾಬಾ) ನಡೆಸುತ್ತಿದ್ದರು. ಫೆ.16ರಂದು ಅವರ ಧಾಬಾದಲ್ಲಿ ಶಾರ್ಟ್ ಸರ್ಕ್ಯೂಟ್‌ ನಿಂದ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯನ್ನು ನಂದಿಸಿ ಜೀವನೋಪಾಯವನ್ನು ಉಳಿಸಲು ಮುಂದಾದ ವೇಳೆ ಅವರು ತೀವ್ರ ಸುಟ್ಟಗಾಯಗಳಿಗೆ ಒಳಗಾದರು. ದೇಹದ ಶೇಕಡಾ 60ಕ್ಕೂ ಹೆಚ್ಚು ಭಾಗ ಸುಟ್ಟಿತ್ತು ಎಂದು ವೈದ್ಯರು ತಿಳಿಸಿದ್ದಾರೆ. ಅವರನ್ನು ತಕ್ಷಣ ರಾಂಚಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಐಸಿಯುನಲ್ಲಿ ಚಿಕಿತ್ಸೆ ನೀಡಲಾಯಿತು. ಕೆಲವೇ ದಿನಗಳಲ್ಲಿ ಚಿಕಿತ್ಸೆಗಾಗಿ ಸುಮಾರು 3.5 ಲಕ್ಷ ರೂಪಾಯಿ ವೆಚ್ಚವಾಯಿತು. ಆದರೂ ಆರೋಗ್ಯದಲ್ಲಿ ಗಮನಾರ್ಹ ಸುಧಾರಣೆ ಕಂಡುಬರದ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ದಿಲ್ಲಿಗೆ ಸ್ಥಳಾಂತರಿಸಲು ಫೆಬ್ರವರಿ 22ರಂದು ವೈದ್ಯರು ಸಲಹೆ ನೀಡಿದರು. ದಿಲ್ಲಿಯ ಆಸ್ಪತ್ರೆಯಲ್ಲಿ ದಾಖಲಾತಿಗಾಗಿ 5 ಲಕ್ಷ ರೂಪಾಯಿ ಮುಂಗಡ ಠೇವಣಿ ಕೇಳಲಾಗಿದೆ ಎಂದು ಸಂಬಂಧಿಕರು ತಿಳಿಸಿದ್ದಾರೆ. ಸಂಜಯ್ ಅವರ ಸ್ಥಿತಿ ಗಂಭೀರವಾಗಿದ್ದರಿಂದ ರಸ್ತೆ ಮಾರ್ಗದ ಪ್ರಯಾಣ ಸಾಧ್ಯವಾಗಲಿಲ್ಲ. ವಿಮಾನದ ಮೂಲಕ ತುರ್ತು ವರ್ಗಾವಣೆ ಅಗತ್ಯವಾಯಿತು. ರಾಜ್ಯ ಸರ್ಕಾರದ ಏರ್ ಆಂಬ್ಯುಲೆನ್ಸ್ ಸಹಾಯವಾಣಿಗೆ ಹಲವು ಬಾರಿ ಕರೆ ಮಾಡಿದರೂ ಸ್ಪಂದನೆ ದೊರಕಲಿಲ್ಲವೆಂದು ಕುಟುಂಬಸ್ಥರು ಆರೋಪಿಸಿದ್ದಾರೆ. ನಂತರ ಖಾಸಗಿ ಸಂಸ್ಥೆಯನ್ನು ಸಂಪರ್ಕಿಸಿದಾಗ ರಾಂಚಿಯಿಂದ ದಿಲ್ಲಿಗೆ ಏರ್ ಆಂಬ್ಯುಲೆನ್ಸ್ ಮೂಲಕ ಸಾಗಿಸಲು 8 ಲಕ್ಷ ರೂಪಾಯಿ ವೆಚ್ಚವಾಗುತ್ತದೆ ಎಂದು ತಿಳಿಸಲಾಯಿತು. ಆಸ್ಪತ್ರೆ ವೆಚ್ಚಗಳಿಂದಲೇ ಸಂಕಷ್ಟಕ್ಕೀಡಾಗಿದ್ದ ಕುಟುಂಬಕ್ಕೆ ಈ ಮೊತ್ತ ಭಾರವಾಗಿತ್ತು. ಪತ್ನಿ ಅರ್ಚನಾ ದೇವಿ ತಮ್ಮ ಚಿನ್ನಾಭರಣಗಳನ್ನು ಅಡಮಾನ ಇಟ್ಟು, ಭೂಮಿಯ ಒಂದು ಭಾಗವನ್ನು ಮಾರಾಟ ಮಾಡಿ ಹಣ ಸಂಗ್ರಹಿಸಿದರು. ತುರ್ತಾಗಿ ಹಣ ಪಾವತಿಸಿ ಏರ್ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಲಾಯಿತು. ಆದರೆ ಜೀವ ಉಳಿಸುವ ಆಸೆಯೊಂದಿಗೆ ಆರಂಭವಾದ ಹಾರಾಟವೇ ದುರಂತದಲ್ಲಿ ಅಂತ್ಯಗೊಂಡಿತು. ರಾಂಚಿಯಿಂದ ದಿಲ್ಲಿಗೆ ತೆರಳುತ್ತಿದ್ದ ಏರ್ ಆಂಬ್ಯುಲೆನ್ಸ್ ಅಪಘಾತಕ್ಕೀಡಾಗಿ ಸಂಜಯ್ ಕುಮಾರ್ ಸಾ ಮತ್ತು ಅರ್ಚನಾ ದೇವಿ ಪ್ರಾಣ ಕಳೆದುಕೊಂಡರು. ಮನೆಯಲ್ಲಿ ಪೋಷಕರನ್ನು ಕಾಯುತ್ತಿದ್ದ ಇಬ್ಬರು ಅಪ್ರಾಪ್ತ ಮಕ್ಕಳು ಇಬ್ಬರು ಅನಾಥರಾಗಿದ್ದಾರೆ. ಅವರಿಬ್ಬರೂ ವಿದ್ಯಾರ್ಥಿಗಳು. ಚಿಕಿತ್ಸೆಗಾಗಿ ತೆಗೆದುಕೊಂಡ ಸಾಲ, ಅಡಮಾನ ಇಟ್ಟ ಆಭರಣಗಳು ಹಾಗೂ ಮಾರಾಟವಾದ ಭೂಮಿ ಕುಟುಂಬವನ್ನು ಆರ್ಥಿಕವಾಗಿ ಅವರನ್ನು ನಲುಗಿಸಿದೆ. ಮಕ್ಕಳ ಶಿಕ್ಷಣ ಮತ್ತು ಭವಿಷ್ಯದ ಭದ್ರತೆಗೆ ಸರ್ಕಾರ ತಕ್ಷಣ ನೆರವು ನೀಡಬೇಕು ಎಂದು ಸಂಬಂಧಿಕರು ಆಗ್ರಹಿಸಿದ್ದಾರೆ.

ವಾರ್ತಾ ಭಾರತಿ 25 Feb 2026 10:07 pm

ಅಮೆರಿಕವನ್ನು ಹೊಡೆಯಬಹುದಾದ ಕ್ಷಿಪಣಿ ಅಭಿವೃದ್ಧಿಗೆ ಇರಾನ್ ಪ್ರಯತ್ನ: ಡೊನಾಲ್ಡ್ ಟ್ರಂಪ್ ಪ್ರತಿಪಾದನೆ

ವಾಷಿಂಗ್ಟನ್, ಫೆ.25: ಅಮೆರಿಕವನ್ನು ಹೊಡೆಯಬಹುದಾದ ಕ್ಷಿಪಣಿಯನ್ನು ಅಭಿವೃದ್ಧಿಗೊಳಿಸಲು ಇರಾನ್ ಪ್ರಯತ್ನಿಸುತ್ತಿದೆ. ಜೊತೆಗೆ ಕಳೆದ ವರ್ಷ ಅಮೆರಿಕದ ದಾಳಿಗಳಿಗೆ ಗುರಿಯಾದ ಪರಮಾಣು ಕಾರ್ಯಕ್ರಮವನ್ನು ಮರು ನಿರ್ಮಾಣ ಮಾಡಲು ಕೆಲಸ ಮಾಡುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿಪಾದಿಸಿದ್ದಾರೆ. ಯುರೋಪ್ ಮತ್ತು ಸಾಗರೋತ್ತರದ ನಮ್ಮ ನೆಲೆಗಳನ್ನು ಬೆದರಿಸುವ ಕ್ಷಿಪಣಿಗಳನ್ನು ಅವರು ಈಗಾಗಲೇ ಅಭಿವೃದ್ಧಿಪಡಿಸಿದ್ದಾರೆ. ಮತ್ತು ಶೀಘ್ರದಲ್ಲೇ ಅಮೆರಿಕವನ್ನು ತಲುಪುವ ಕ್ಷಿಪಣಿಗಳನ್ನು ನಿರ್ಮಿಸಲು ಅವರು ಕೆಲಸ ಮಾಡುತ್ತಿದ್ದಾರೆ ಎಂದು ಅಮೆರಿಕ ಸಂಸತ್ತಿನ ಜಂಟಿ ಸದನವನ್ನು ಉಲ್ಲೇಖಿಸಿ ಮಾಡಿದ ವಾರ್ಷಿಕ ಭಾಷಣದಲ್ಲಿ ಟ್ರಂಪ್ ಹೇಳಿದ್ದಾರೆ. 2035ರ ವೇಳೆಗೆ ಇರಾನ್ ಖಂಡಾಂತರ ಕ್ಷಿಪಣಿಯನ್ನು ಅಭಿವೃದ್ಧಿಪಡಿಸಬಹುದು ಎಂದು 2025ರಲ್ಲಿ ಅಮೆರಿಕದ ರಕ್ಷಣಾ ಗುಪ್ತಚರ ಏಜೆನ್ಸಿ ಹೇಳಿತ್ತು. ಇರಾನ್‍ನ ಬಳಿ ಪ್ರಸ್ತುತ ಕಡಿಮೆ ಮತ್ತು ಮಧ್ಯಮ ಶ್ರೇಣಿಯ ಬ್ಯಾಲಿಸ್ಟಿಕ್ ಕ್ಷಿಪಣಿಗಳು (ಸುಮಾರು 3,000 ಕಿ.ಮೀ ದೂರದ ಗುರಿಗೆ ಅಪ್ಪಳಿಸುವ ಸಾಮಥ್ರ್ಯವಿರುವ) ಇವೆ. ಅಮೆರಿಕ ಖಂಡವು ಇರಾನ್‍ನ ಪಶ್ಚಿಮ ತುದಿಯಿಂದ ಸುಮಾರು 9,700 ಕಿ.ಮೀ ದೂರವಿದೆ. ಇರಾನ್‍ನ ಪರಮಾಣು ಕಾರ್ಯಕ್ರಮ, ಇರಾನ್‍ನ ಬ್ಯಾಲಿಸ್ಟಿಕ್ ಕ್ಷಿಪಣಿಗಳು ಮತ್ತು ಜನವರಿಯಲ್ಲಿ ಇರಾನ್‍ನಲ್ಲಿ ನಡೆದ ಅಶಾಂತಿಯ ಸಂದರ್ಭದ ಸಾವು-ನೋವಿನ ಸಂಖ್ಯೆಯ ಬಗ್ಗೆ ಅವರು(ಅಮೆರಿಕ) ಆರೋಪಿಸುತ್ತಿರುವುದೆಲ್ಲಾ ದೊಡ್ಡ ಸುಳ್ಳುಗಳ ಪುನರಾವರ್ತನೆಯಾಗಿದೆ ಎಂದು ವಿದೇಶಾಂಗ ಇಲಾಖೆಯ ವಕ್ತಾರರು `ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.

ವಾರ್ತಾ ಭಾರತಿ 25 Feb 2026 10:01 pm

ಹಕ್ಕಿ ಜ್ವರ | ಭಾರತ ಸೇರಿದಂತೆ 40 ದೇಶಗಳಿಂದ ಕೋಳಿ, ಮೊಟ್ಟೆ ಆಮದಿಗೆ ಸೌದಿ ಅರೇಬಿಯಾ ನಿಷೇಧ

ರಿಯಾದ್, ಫೆ.25: ಹಕ್ಕಿ ಜ್ವರ ಮತ್ತು ಇತರ ಪ್ರಾಣಿಗಳ ರೋಗಗಳ ವಿರುದ್ದ ಮುನ್ನೆಚ್ಚರಿಕೆ ಕ್ರಮದ ಭಾಗವಾಗಿ ಸೌದಿ ಅರೇಬಿಯಾ ಭಾರತ ಸೇರಿದಂತೆ 40 ದೇಶಗಳಿಂದ ಕೋಳಿ ಮತ್ತು ಮೊಟ್ಟೆ ಆಮದುಗಳ ಮೇಲೆ ಸಂಪೂರ್ಣ ನಿಷೇಧ ಹೇರಿದೆ. ಬಾಂಗ್ಲಾದೇಶ, ಚೀನ, ಇಂಡೊನೇಶ್ಯಾ, ಇರಾನ್, ಬ್ರಿಟನ್, ಭಾರತ ಸೇರಿದಂತೆ 40 ದೇಶಗಳ ಆಮದುಗಳ ಮೇಲೆ ಈ ನಿಷೇಧ ಅನ್ವಯಿಸುತ್ತದೆ. ಇದರ ಜೊತೆಗೆ ಅಮೆರಿಕ, ಆಸ್ಟ್ರೇಲಿಯಾ ಸೇರಿದಂತೆ 16 ಇತರ ದೇಶಗಳ ಮೇಲೆ ಭಾಗಷಃ ನಿಷೇಧ( ಕೆಲವು ನಗರಗಳ ಮೇಲೆ ಮಾತ್ರ) ಅನ್ವಯಿಸುತ್ತದೆ ಎಂದು ಸೌದಿ ಆಹಾರ ಮತ್ತು ಔಷಧ ಪ್ರಾಧಿಕಾರ (ಎಸ್‍ಎಫ್‍ಡಿಎ) ಹೇಳಿದೆ.

ವಾರ್ತಾ ಭಾರತಿ 25 Feb 2026 9:59 pm

ಹಿರಿಯ ಸಿಪಿಐ ನಾಯಕ, ಶತಾಯುಷಿ ಆರ್. ನಲ್ಲಕನ್ನು ನಿಧನ

ಚೆನ್ನೈ,ಫೆ.25: ಹಿರಿಯ ಸಿಪಿಐ ನಾಯಕ ಆರ್.ನಲ್ಲಕನ್ನು (101) ಅವರು ಬುಧವಾರ ಇಲ್ಲಿಯ ರಾಜೀವ್‌ ಗಾಂಧಿ ಸರಕಾರಿ ಆಸ್ಪತ್ರೆಯಲ್ಲಿ ನಿಧನರಾದರು. ಅವರು ದೀರ್ಘಕಾಲದಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು. ಫೆ.1ರಂದು ನಲ್ಲಕನ್ನು ಅವರನ್ನು ತೀವ್ರ ನಿಗಾ ಘಟಕಕ್ಕೆ (ಐಸಿಯು) ದಾಖಲಿಸಲಾಗಿತ್ತು. ತಜ್ಞವೈದ್ಯರ ತಂಡವು ಚಿಕಿತ್ಸೆ ನೀಡುತ್ತಿದ್ದರೂ ಅವರು ಸ್ಪಂದಿಸುತ್ತಿರಲಿಲ್ಲ ಮತ್ತು ಅವರ ಸ್ಥಿತಿಯು ಚಿಂತಾಜನಕಗೊಂಡಿತ್ತು. ಬುಧವಾರ ಅಪರಾಹ್ನ 1:55ಕ್ಕೆ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಆಸ್ಪತ್ರೆಯು ಹೇಳಿಕೆಯಲ್ಲಿ ತಿಳಿಸಿದೆ. 2023ರಲ್ಲಿ ಹಿರಿಯ ಸಿಪಿಎಂ ನಾಯಕ ಎನ್.ಶಂಕರಯ್ಯ ಅವರ ನಿಧನದ ಬಳಿಕ ನಲ್ಲಕನ್ನು ತಮಿಳನಾಡಿನಲ್ಲಿ ಕೊನೆಯ ಶತಾಯುಷಿ ಕಮ್ಯುನಿಸ್ಟ್ ನಾಯಕರಾಗಿದ್ದರು. ತನ್ನ ಸುಮಾರು ಎಂಟು ದಶಕಗಳ ರಾಜಕೀಯ ಬದುಕಿನಲ್ಲಿ ಅವರು ಪ್ರಾಮಾಣಿಕತೆ ಮತ್ತು ನಿಸ್ವಾರ್ಥ ಸೇವೆಯ ಪ್ರತಿರೂಪವಾಗಿದ್ದರು. ಡಿ.26,1925ರಂದು ತೂತ್ತುಕುಡಿ ಜಿಲ್ಲೆಯ ಪೆರುಂಪತು ಗ್ರಾಮದಲ್ಲಿ ಜನಿಸಿದ್ದ ನಲ್ಲಕನ್ನು ಎಳವೆಯಲ್ಲೇ ಬಡತನ ಮತ್ತು ಶೋಷಣೆಯನ್ನು ಅನುಭವಿಸಿದ್ದರು. ಮಾರ್ಕ್ಸ್‌ವಾದಿ ಸಿದ್ಧಾಂತಗಳಿಂದ ಆಕರ್ಷಿತರಾಗಿದ್ದ ಅವರು 1946ರಲ್ಲಿ,ಭಾರತವು ಇನ್ನೂ ಬ್ರಿಟಷರ ಆಳ್ವಿಕೆಯಲ್ಲಿದ್ದಾಗಲೇ ಸಿಪಿಐ ಸೇರಿದ್ದರು. 1948ರಲ್ಲಿ ನೆಲ್ಲಾಯಿ ಒಳಸಂಚು ಪ್ರಕರಣದಲ್ಲಿ ಅವರನ್ನು ಬಂಧಿಸಲಾಗಿದ್ದು, ಏಳು ವರ್ಷಗಳ ಜೈಲುವಾಸದಲ್ಲಿ ಅವರು ಕ್ರೂರ ಹಿಂಸೆಯನ್ನು ಅನುಭವಿಸಿದ್ದರು. ಅಂತಹ ಕ್ರೂರ ಘಟನೆಯೊಂದರಲ್ಲಿ ಪೋಲಿಸನೋರ್ವ ನಲ್ಲಕನ್ನು ಅವರ ಮೀಸೆಯನ್ನು ಸಿಗರೇಟಿನಿಂದ ಸುಟ್ಟಿದ್ದು, ಆ ಬಳಿಕ ಅವರು ಎಂದೂ ಮೀಸೆಯನ್ನು ಬೆಳೆಸಿರಲಿಲ್ಲ. ನೂರು ವರ್ಷ ಪ್ರಾಯವಾದ ಬಳಿಕ ಮನೆಗೇ ಸೀಮಿತಗೊಳ್ಳುವವರೆಗೂ ನಲ್ಲಕನ್ನು ರೈತರು ಮತ್ತು ಕೃಷಿ ಕಾರ್ಮಿಕರ ಪರವಾಗಿ ಅವಿಶ್ರಾಂತ ಹೋರಾಟವನ್ನು ನಡೆಸಿದ್ದರು. ಕಟ್ಟಾ ಪರಿಸರವಾದಿಯಾಗಿದ್ದ ಅವರು ಕುಡಂಕುಳಂ ಪರಮಾಣು ವಿದುತ್ ಸ್ಥಾವರದಂತಹ ಯೋಜನೆಗಳನ್ನು ಬಲವಾಗಿ ವಿರೋಧಿಸಿದ್ದರು. ಅವರು 13 ವರ್ಷಗಳ ದೀರ್ಘ ಅವಧಿಗೆ ಸಿಪಿಐ ರಾಜ್ಯ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದರು. 2022ರಲ್ಲಿ ರಾಜ್ಯ ಸರಕಾರವು ‘ಥಗೈಸಲ್ ತಮಿಳರ್’ ಪ್ರಶಸ್ತಿಯೊಂದಿಗೆ ನಲ್ಲಕನ್ನು ಅವರನ್ನು ಗೌರವಿಸಿತ್ತು. ಪ್ರಶಸ್ತಿಯ ಮೊತ್ತ 15 ಲ.ರೂ.ಗಳಿಗೆ ತನ್ನ ಸ್ವಂತದ 5,000 ರೂ.ಗಳನ್ನು ಸೇರಿಸಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿದ್ದರು.

ವಾರ್ತಾ ಭಾರತಿ 25 Feb 2026 9:55 pm

ಕಾರ್ಕಳ: ಅಂಬೇಡ್ಕರ್ ಭವನ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ

ಕಾರ್ಕಳ, ಫೆ.25: ತಾಲೂಕಿನ ಕಾಬೆಟ್ಟುವಿನಲ್ಲಿ ಸುಮಾರು ಆರು ಕೋಟಿ ರೂ. ವೆಚ್ಚದಲ್ಲಿ ಭವ್ಯ ಹಾಗೂ ವಿನೂತನ ರೀತಿಯಲ್ಲಿ ನಿರ್ಮಿಸಿರುವ ಡಾ.ಬಿ.ಆರ್. ಅಂಬೇಡ್ಕರ್ ಭವನವನ್ನು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಉದ್ಘಾಟಿಸಿ ಲೋಕಾರ್ಪಣೆಗೊಳಿಸಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಈ ಕಾರ್ಯಕ್ರಮ ನಡೆಯಿತು. ಮುಖ್ಯಮಂತ್ರಿಗಳು ನೂತನ ಕಟ್ಟಡವನ್ನು ಉದ್ಘಾಟಿಸಿ ಶುಭ ಹಾರೈಸಿ ಮುಂದಿನ ಕಾರ್ಯಕ್ರಮಕ್ಕೆ ತೆರಳಿದರು. ಬಳಿಕ ರಾಜ್ಯ ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹಾದೇವಪ್ಪ ಅವರು ವಿವಿಧ ದಲಿತ ಸಂಘಟನೆಗಳು ಹಾಗೂ ದಲಿತರಿಂದ ನೀಡಲಾದ ಮನವಿಗಳನ್ನು ಸ್ವೀಕರಿಸಿ, ಅವರೊಂದಿಗೆ ಸಂವಾದ ನಡೆಸಿದರು. ಅವರ ಹಲವು ಬೇಡಿಕೆಗಳು ಹಾಗೂ ಪ್ರಶ್ನೆಗಳಿಗೆ ಉತ್ತರಿಸಿದರು. ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷಿ ಆರ್. ಹೆಬ್ಬಾಳ್ಕರ್, ಶಾಲಾ ಶಿಕ್ಷಣ ಮತ್ತು ಸಾಕ್ಷರತ ಸಚಿವ ಎಸ್ ಮಧು ಬಂಗಾರಪ್ಪ, ಕರಾವಳಿ ಅಭಿವೃದ್ದಿ ಮಂಡಳಿಯ ಅಧ್ಯಕ್ಷ ಎಂ.ಎ.ಗಫೂರ್, ಮಾಜಿ ಸಚಿವ ಜೆ.ಪಿ.ಹೆಗ್ಡೆ, ಕಾರ್ಕಳ ಶಾಸಕ ಸುನೀಲ್ ಕುಮಾರ್, ಲಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಉಡುಪಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಮುಖಂಡರಾದ ಎಂ.ವೀರಪ್ಪ ಮೊಯಿಲಿ , ಉದಯ್ ಶೆಟ್ಟಿ ಮುನಿಯಾಲು, ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ಹಾಗೂ ಇತರರು ಉಪಸ್ಥಿತರಿದ್ದರು.    

ವಾರ್ತಾ ಭಾರತಿ 25 Feb 2026 9:55 pm

Kerala | ಕಣ್ಣೂರಿನಲ್ಲಿ ವಿದ್ಯಾರ್ಥಿ ಸಂಘಟನೆಯ ಪ್ರತಿಭಟನೆ ವೇಳೆ ಆರೋಗ್ಯ ಸಚಿವೆ ವೀಣಾ ಜಾರ್ಜ್‌ಗೆ ಗಾಯ

ದಾಳಿಯ ಆರೋಪ ತಳ್ಳಿ ಹಾಕಿದ ಕೆಎಸ್‌ಯು, ‘ಅತ್ಯುತ್ತಮ ನಟಿ’ ಎಂದು ವ್ಯಂಗ್ಯ

ವಾರ್ತಾ ಭಾರತಿ 25 Feb 2026 9:50 pm

ದೇರಳಕಟ್ಟೆ: ʼಮೇಲ್ತೆನೆʼ ವತಿಯಿಂದ ಇಫ್ತಾರ್ ಕೂಟ

ದೇರಳಕಟ್ಟೆ,ಫೆ.25: ಮೇಲ್ತೆನೆ (ಬ್ಯಾರಿ ಎಲ್ತ್‌ಕಾರ್-ಕಲಾವಿದರಮಾರೊ ಕೂಟ) ಇದರ ವತಿಯಿಂದ ನಾಟೆಕಲ್ ವಿಜಯನಗರದ ಇಲೈಟ್ ಟ್ಯೂಶನ್ ಸೆಂಟರ್‌ನಲ್ಲಿ ಮಂಗಳವಾರ ಇಫ್ತಾರ್ ಕೂಟ ನಡೆಯಿತು. ಮೇಲ್ತೆನೆಯ ಅಧ್ಯಕ್ಷ ಮಂಗಳೂರ ರಿಯಾಝ್ ಮತ್ತು ಮಾಜಿ ಅಧ್ಯಕ್ಷ ಟಿ. ಇಸ್ಮಾಯೀಲ್ ಮಾತನಾಡಿದರು. ಗೌರವಾಧ್ಯಕ್ಷ ಆಲಿಕುಂಞಿ ಪಾರೆ, ಪ್ರಧಾನ ಕಾರ್ಯದರ್ಶಿ ಹಂಝ ಮಲಾರ್, ಕೋಶಾಧಿಕಾರಿ ವಿ. ಇಬ್ರಾಹೀಂ ನಡುಪದವು ಉಪಾಧ್ಯಕ್ಷ ಇಬ್ರಾಹಿಂ ಮುದುಂಗಾರುಕಟ್ಟೆ, ಜೊತೆ ಕಾರ್ಯದರ್ಶಿ ಸಿ.ಎಂ ಶರೀಫ್ ಪಟ್ಟೋರಿ, ಸದಸ್ಯರಾದ ಯೂಸುಫ್ ವಕ್ತಾರ್, ಬಶೀರ್ ಅಹ್ಮದ್ ಕಿನ್ಯ, ಮುಹಮ್ಮದ್ ಬಾಷಾ ನಾಟೆಕಲ್, ಬಶೀರ್ ಕಲ್ಕಟ್ಟ, ಅಶೀರುದ್ದೀನ್ ಸಾರ್ತಬೈಲ್, ಬಿ.ಎಂ. ಕಿನ್ಯ, ಅಬೂಬಕರ್ ಹೂಹಾಕುವ ಕಲ್ಲು, ಸಿದ್ದೀಕ್ ಎಸ್. ರಾಝ್, ಆಸೀಫ್ ಬಬ್ಬುಕಟ್ಟೆ ಉಪಸ್ಥಿತರಿದ್ದರು.

ವಾರ್ತಾ ಭಾರತಿ 25 Feb 2026 9:49 pm

Meghalaya ವಿಧಾನಸಭೆ | ಸಿಎಂಗೆ ಪ್ರಶ್ನೆ ಕೇಳಿದ ಪತ್ನಿ; ಸ್ವಾರಸ್ಯಕರ ಕ್ಷಣದ ವಿಡಿಯೊ ವೈರಲ್

ಶಿಲ್ಲಾಂಗ್: ಪತಿಗೆ ಪತ್ನಿಯೇ ಸದನದಲ್ಲಿ ಪ್ರಶ್ನೆ ಕೇಳಿದ ಅಪರೂಪದ ಘಟನೆಗೆ ಮೇಘಾಲಯ ವಿಧಾನಸಭೆ  ಸಾಕ್ಷಿಯಾಯಿತು. ಮುಖ್ಯಮಂತ್ರಿ ಕಾನ್ರಾಡ್ ಕೆ. ಸಂಗ್ಮಾ ಅವರಿಗೆ ಅವರ ಪತ್ನಿ ಹಾಗೂ ಗಂಬೆಗ್ರೆ ಕ್ಷೇತ್ರದ ಶಾಸಕಿ ಮೆಹ್ತಾಬ್ ಚಾಂದೀ ಪೂರಕ ಪ್ರಶ್ನೆ ಕೇಳಿದ ಸಂದರ್ಭ ಸದನದಲ್ಲಿ ತಿಳಿ ಮಂದಹಾಸ ಮೂಡಿತು. ಘಟನೆಗೆ ಸಂಬಂಧಿಸಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. A rare husband-wife exchange enlivened proceedings in the Meghalaya Legislative Assembly on Tuesday as NPP MLA from Ampati, Mehtab Chandee A. Sangma, questioned Chief Minister Conrad K. Sangma over delays in setting up livestock education institutions proposed by the state… pic.twitter.com/ndsu54N1ph — IndiaToday (@IndiaToday) February 25, 2026 ರಾಜ್ಯದಲ್ಲಿನ ಕಾಲೇಜುಗಳ ಸ್ಥಿತಿ ಮತ್ತು ಪಶು ಸಂಗೋಪನೆ ಇಲಾಖೆಯ ಯೋಜನೆಗಳ ಕುರಿತು ಮೆಹ್ತಾಬ್ ಚಾಂದೀ ಪ್ರಶ್ನೆ ಎತ್ತಿದರು. “ರಾಜ್ಯದಲ್ಲಿ ಪಶು ಸಂಗೋಪನೆ, ಮೀನುಗಾರಿಕೆ ಮತ್ತು ಹೈನುಗಾರಿಕೆಗೆ ಸಂಬಂಧಿಸಿದ ಕಾಲೇಜುಗಳ ಸ್ಥಾಪನೆ ಕುರಿತು ಸರ್ಕಾರ ಯಾವ ಕ್ರಮ ಕೈಗೊಂಡಿದೆ?” ಎಂದು ಅವರು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಮುಖ್ಯಮಂತ್ರಿ ಕಾನ್ರಾಡ್ ಕೆ. ಸಂಗ್ಮಾ, “ರಾಜ್ಯದಲ್ಲಿ ತರಬೇತಿ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಆದರೆ, ಅವುಗಳ ನಿಖರ ಅಂಕಿ-ಅಂಶಗಳು ಮತ್ತು ಸ್ಥಳಗಳ ವಿವರ ಈ ಕ್ಷಣದಲ್ಲಿ ಲಭ್ಯವಿಲ್ಲ. ಪಶು ಸಂಗೋಪನೆ, ಮೀನುಗಾರಿಕೆ ಹಾಗೂ ಹೈನುಗಾರಿಕೆಗೆ ತಲಾ ಒಂದೊಂದು ಕಾಲೇಜು ಸ್ಥಾಪಿಸಲು 2022ರಲ್ಲಿ ಸಚಿವ ಸಂಪುಟ ತೀರ್ಮಾನ ಕೈಗೊಂಡಿದೆ,” ಎಂದು ತಿಳಿಸಿದರು. ಪೂರಕ ಪ್ರಶ್ನೆ ಕೇಳಿದ ಮೆಹ್ತಾಬ್ ಚಾಂದೀ, “ಪಶು ಸಂಗೋಪನೆ ಇಲಾಖೆಯಲ್ಲಿ ಸಿಬ್ಬಂದಿಗಳ ಕೊರತೆ ಇದೆ. ಇಲಾಖೆ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದೆಯೇ? ಮಾನವ ಸಂಪನ್ಮೂಲ ಕೊರತೆಯನ್ನು ಭರ್ತಿ ಮಾಡಲು ಯಾವ ಕ್ರಮ ಕೈಗೊಳ್ಳಲಾಗಿದೆ?” ಎಂದು ಕೇಳಿದರು. ಮುಖ್ಯಮಂತ್ರಿ ಪ್ರತಿಕ್ರಿಯಿಸಿ, “ಪಶು ಸಂಗೋಪನೆ ಇಲಾಖೆಯಲ್ಲಿ ಸಿಬ್ಬಂದಿಗಳ ಕೊರತೆ ಇರುವುದು ನಿಜ. ಇದು ಕಳವಳಕಾರಿ ಸಂಗತಿ. ಖಾಲಿ ಹುದ್ದೆಗಳನ್ನು ಶೀಘ್ರದಲ್ಲೇ ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗುವುದು,” ಎಂದು ಭರವಸೆ ನೀಡಿದರು. ಸದನದಲ್ಲಿ ಈ ಸಂವಾದ ನಡೆಯುವ ವೇಳೆ ಸದಸ್ಯರ ನಡುವೆ ಹಾಸ್ಯಮಯ ವಾತಾವರಣ ನಿರ್ಮಾಣವಾಗಿತ್ತು. ಪತಿ–ಪತ್ನಿಯರಾದ ಸಂಗ್ಮಾ ಮತ್ತು ಮೆಹ್ತಾಬ್ ಚಾಂದೀ ಈ ಹಿಂದೆಯೂ ನೀತಿ ವಿಷಯಗಳ ಕುರಿತು ವಿಧಾನಸಭೆಯಲ್ಲಿ ಚರ್ಚೆ ನಡೆಸಿ ಗಮನ ಸೆಳೆದಿದ್ದರು. 

ವಾರ್ತಾ ಭಾರತಿ 25 Feb 2026 9:45 pm

ಕಲಬುರಗಿ | ಸಾಹಿತ್ಯದ ಜ್ಞಾನ ಹಂಚುತ್ತಿರುವುದು ಪ್ರಶಂಸನೀಯ : ಪ್ರೊ.ಎಸ್.ಎಂ.ಹಿರೇಮಠ

ಕನ್ನಡ ಸಾಹಿತ್ಯ ಸಂಘದ ಕಾರ್ಯಚಟುವಟಿಕೆಗಳ ಉದ್ಘಾಟನೆ

ವಾರ್ತಾ ಭಾರತಿ 25 Feb 2026 9:44 pm

ವಿಶ್ವಗುರು ಫೋಟೋ ಸೇರಿಸಿ ಬಿಜೆಪಿ ಅವಧಿಯಲ್ಲಿ ಉರ್ದು ಜಾಹೀರಾತು ನೀಡಿಲ್ಲವೇ?: ಸಚಿವ ದಿನೇಶ್ ಗುಂಡೂರಾವ್

ಆರೋಗ್ಯ ಇಲಾಖೆಯ ಉರ್ದು ಜಾಹೀರಾತಿಗೆ ಆಕ್ಷೇಪಿಸಿರುವ ಬಿಜೆಪಿ ವಿರುದ್ದ ಸಚಿವ ಆಕ್ರೋಶ

ವಾರ್ತಾ ಭಾರತಿ 25 Feb 2026 9:43 pm

ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಎನ್‍ಡಿಎ ಜೊತೆ ಹೊಂದಾಣಿಕೆ ಮಾಡಿಕೊಳ್ಳಬೇಕೆಂಬ ಉದ್ದೇಶವಿದೆ: ಎಚ್.ಡಿ. ದೇವೇಗೌಡ

ಬೆಂಗಳೂರು: ಸ್ಥಳೀಯ ಸಂಸ್ಥೆಗಳ ಹಾಗೂ ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಗಳಲ್ಲಿ ಎನ್‍ಡಿಎ ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳಬೇಕೆಂಬ ಉದ್ದೇಶವಿದೆ ಎಂದು ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಇಂಗಿತ ವ್ಯಕ್ತಪಡಿಸಿದ್ದಾರೆ. ಬುಧವಾರ ಜೆ.ಪಿ. ಭವನದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಜೆಡಿಎಸ್ ಪ್ರಾದೇಶಿಕ ಪಕ್ಷ. ಬಿಜೆಪಿ ರಾಷ್ಟ್ರೀಯ ಪಕ್ಷ. ಅವರು ಚುನಾವಣಾ ಪೂರ್ವ ಹೊಂದಾಣಿಕೆ ಕುರಿತಂತೆ ಯಾವ ತೀರ್ಮಾನ ಮಾಡಿದ್ದಾರೆಂದು ಕಾದುನೋಡಬೇಕು. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ವಿಚಾರದಲ್ಲಿ ಎಲ್ಲರೂ ಸೇರಿ ಚರ್ಚೆ ಮಾಡುತ್ತೇವೆ ಎಂದರು. ‘ಜೆಡಿಎಸ್‍ನಲ್ಲಿ ಕುಟುಂಬದವರನ್ನು ಹೊರತುಪಡಿಸಿ ಬೇರೆಯವರಿಗೆ ಹುದ್ದೆ ಕೊಡುವುದಿಲ್ಲ’ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯರ ಆರೋಪದಲ್ಲಿ ಹುರುಳಿಲ್ಲ. ನನಗೆ ಇನ್ನೂ ನೆನಪಿನ ಶಕ್ತಿ ಇದೆ. ಪ್ರತಿಯೊಂದಕ್ಕೂ ಸಮಯ ಬಂದಾಗ ಪ್ರತಿಕ್ರಿಯಿಸುತ್ತೇನೆ ಎಂದ ಅವರು, ವಿಜಯಪುರದಲ್ಲಿ ಫೆ.27ರಂದು ಜೆಡಿಎಸ್ ಸಮಾವೇಶ ನಡೆಸಲಾಗುತ್ತದೆ. ಆ ಸಮಾವೇಶದಲ್ಲಿ ಪಾಲ್ಗೊಳ್ಳಲು ನನಗೂ ಆಹ್ವಾನ ನೀಡಿದ್ದಾರೆ ಎಂದರು.

ವಾರ್ತಾ ಭಾರತಿ 25 Feb 2026 9:34 pm

ಸಮಾಜಮುಖಿ ಚಿಂತನೆಗೆ ಶಿಕ್ಷಣದಲ್ಲಿ ವೈಚಾರಿಕತೆ, ವೈಜ್ಞಾನಿಕತೆ ಇರಬೇಕು: ಸಿಎಂ ಸಿದ್ದರಾಮಯ್ಯ

ಕಾರ್ಕಳ ಕುಕ್ಕುಂದೂರಿನಲ್ಲಿ ಕಿಶನ್ ಸಭಾ ಸಭಾಂಗಣ ಉದ್ಘಾಟನೆ

ವಾರ್ತಾ ಭಾರತಿ 25 Feb 2026 9:32 pm

ಆರ್ಥಿಕ ವ್ಯವಸ್ಥೆಯಲ್ಲಿ ಸಹಕಾರಿರಂಗ ಆಗ್ರ ಸ್ಥಾನ ಪಡೆಯುತ್ತಿದೆ: ಎಚ್ ವಸಂತ ಬರ್ನಾಡ್

ಮುಲ್ಕಿ: ದೇಶದ ಆರ್ಥಿಕ ವ್ಯವಸ್ಥೆಗಳನ್ನು ಅವಲೋಕಿಸಿದರೆ ಇತ್ತೀಚಿನ ದಿನಗಳಲ್ಲಿ ಸಹಕಾರಿ ಕ್ಷೇತ್ರಗಳು ಬಲಿಷ್ಠವಾಗಿ ಬೆಳೆಯುತ್ತಿದ್ದು, ಮುಂದಿನ ದಿನಗಳಲ್ಲಿ ಸಹಕಾರಿ ರಂಗವು ಎಲ್ಲಾ ಆರ್ಥಿಕ ವ್ಯವಸ್ಥೆಗೆ ನಾಯಕತ್ವ ವಹಿಸುವ ದಿನ ಹತ್ತಿರದಲ್ಲಿದೆ ಎಂದು ಪ್ರಿಯದರ್ಶಿನಿಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷರಾದ ಎಚ್ ವಸಂತ ಬರ್ನಾಡ್ ಹೇಳಿದ್ದಾರೆ. ಅವರು ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿ ಆಶ್ರಯದಲ್ಲಿ ನಡೆದ ಇಂಟರ್ಶಿಪ್ ತರಬೇತಿಯ ಎರಡನೇ ಹಂತದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸುವ ಕಾರ್ಯದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಯುವಜನತೆ ಕೇವಲ ರಾಷ್ಟ್ರೀಕೃತ ಬ್ಯಾಂಕ್ ಗಳಿಗೆ ಮೊರೆ ಹೋಗದೆ ಸಹಕಾರಿ ಕ್ಷೇತ್ರದಲ್ಲಿ ಕೂಡ ತಮ್ಮ ಸೇವೆ ನೀಡಲು ಮುಂದಾಗಬೇಕು ಎಂದು ಯುವ ಜನತೆಗೆ ಕಿವಿಮಾತು ಹೇಳಿದರು. ಇದೇ ವೇಳೆ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳ ಕಾಲೇಜಿನ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಧಿಕಾರಿ ಸುದರ್ಶನ್ ಪಂಜ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಲೆಕ್ಕಿಗರಾದ ಲೋಲಾಕ್ಷಿ ಧನ್ಯವಾದ ಅರ್ಪಿಸಿದರು. ಸಾಲ ವಿಭಾಗದ ಪ್ರಬಂಧಕರಾದ ಅಕ್ಷತಾ ಶೆಟ್ಟಿ ಅವರು ಕಾರ್ಯಕ್ರಮ ನಿರ್ವಹಿಸಿದರು.

ವಾರ್ತಾ ಭಾರತಿ 25 Feb 2026 9:28 pm

Indonesia | ‘ಸೂಟ್‌ಕೇಸ್ ಹತ್ಯೆ’ ಪ್ರಕರಣ: 11 ವರ್ಷಗಳ ಬಳಿಕ ಅಮೆರಿಕ ಪ್ರಜೆ ಗಡೀಪಾರು

ಜಕಾರ್ತಾ, ಫೆ. 25: ಜಾಗತಿಕ ಮಟ್ಟದಲ್ಲಿ ಭಾರೀ ಸಂಚಲನ ಮೂಡಿಸಿದ್ದ 2014ರ ‘ಬಾಲಿ ಸೂಟ್‌ಕೇಸ್ ಹತ್ಯೆ’ ಪ್ರಕರಣದಲ್ಲಿ 11 ವರ್ಷಗಳಿಂದ ಜೈಲು ಶಿಕ್ಷೆ ಅನುಭವಿಸುತ್ತಿದ್ದ ಅಮೆರಿಕ ಪ್ರಜೆಯನ್ನು ಇಂಡೋನೇಶಿಯಾ ಸರ್ಕಾರ ಮಂಗಳವಾರ ಬಿಡುಗಡೆ ಮಾಡಿ ದೇಶದಿಂದ ಗಡೀಪಾರು ಮಾಡಿದೆ.  ರಜಾಕಾಲದ ವೇಳೆ ತನ್ನ ಗೆಳತಿ ಹೀತರ್ ಮ್ಯಾಕ್ ಅವರ ತಾಯಿ ಶೀಲಾ ವಾನ್ ವೀಸ್–ಮ್ಯಾಕ್ ಅವರನ್ನು ಪೂರ್ವಯೋಜಿತವಾಗಿ ಹತ್ಯೆಗೈದ ಆರೋಪದಲ್ಲಿ ಟಾಮಿ ಶೇಫರ್ ಗೆ 18 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು. ಪ್ರಕರಣದ ಕ್ರೂರ ಸ್ವರೂಪ ಹಾಗೂ ಮೃತದೇಹವನ್ನು ಸೂಟ್‌ಕೇಸ್‌ನಲ್ಲಿ ಇರಿಸಿ ತ್ಯಜಿಸಿದ ವಿಧಾನವು ವಿಶ್ವದ ಗಮನ ಸೆಳೆದಿತ್ತು. ಶೇಫರ್ ತನ್ನ ಶಿಕ್ಷೆಯ ಬಹುಭಾಗವನ್ನು ಪೂರ್ಣಗೊಳಿಸಿದ್ದಲ್ಲದೆ, ಉತ್ತಮ ನಡತೆಯ ಆಧಾರದ ಮೇಲೆ ಅನೇಕ ಕ್ಷಮಾದಾನಗಳನ್ನು ಪಡೆದಿದ್ದರಿಂದ, ಬಾಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಅವನನ್ನು ಅಮೆರಿಕಕ್ಕೆ ವಾಪಸು ಕಳುಹಿಸಲಾಗಿದೆ ಎಂದು ವಲಸೆ ಪ್ರಧಾನ ನಿರ್ದೇಶನಾಲಯದ ಬಾಲಿ ಪ್ರಾಂತೀಯ ಕಚೇರಿಯ ಮುಖ್ಯಸ್ಥ ಫೆಲುಶಿಯ ಸೆಂಗ್ಕಿ ರತ್ನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಆಗಸ್ಟ್ 2014ರಲ್ಲಿ ಐಷಾರಾಮಿ ಸೇಂಟ್ ರೆಗಿಸ್ ಬಾಲಿ ರೆಸಾರ್ಟ್ ಸಮೀಪ ನಿಲುಗಡೆ ಮಾಡಲಾಗಿದ್ದ ಟ್ಯಾಕ್ಸಿಯ ಹಿಂಭಾಗದಲ್ಲಿ ಚಿಕಾಗೊ ಮೂಲದ 62 ವರ್ಷದ ಶ್ರೀಮಂತ ಮಹಿಳೆ ವಾನ್ ವೀಸ್–ಮ್ಯಾಕ್ ಅವರ ತೀವ್ರವಾಗಿ ಕೊಳೆತ ಸ್ಥಿತಿಯಲ್ಲಿದ್ದ ಮೃತದೇಹ ಪತ್ತೆಯಾಗಿತ್ತು. ಈ ಬೆಳವಣಿಗೆ ದೇಶ–ವಿದೇಶಗಳಲ್ಲಿ ತೀವ್ರ ಆಕ್ರೋಶ ಮತ್ತು ಚರ್ಚೆಗೆ ಕಾರಣವಾಗಿತ್ತು. ಮೃತದೇಹ ಪತ್ತೆಯಾದ ಮರುದಿನವೇ ಆಗಷ್ಟೇ ಕೆಲವಾರಗಳ ಗರ್ಭಿಣಿಯಾಗಿದ್ದ 19 ವರ್ಷದ ಹೀತರ್ ಮ್ಯಾಕ್ ಹಾಗೂ 21 ವರ್ಷದ ಟಾಮಿ ಶೇಫರ್ ಅವರನ್ನು ಪೊಲೀಸರು ಬಂಧಿಸಿದ್ದರು. ತನಿಖೆಯ ವೇಳೆ ಹತ್ಯೆ ಪೂರ್ವಯೋಜಿತವಾಗಿದ್ದುದಾಗಿ ಬಹಿರಂಗವಾಗಿತ್ತು. ತನ್ನ ತಾಯಿಯ ಹತ್ಯೆಗೆ ನೆರವು ನೀಡಿದ ಆರೋಪದಲ್ಲಿ ಹೀತರ್ ಮ್ಯಾಕ್‌ಗೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು. ಏಳು ವರ್ಷಗಳ ಸೆರೆವಾಸ ಪೂರ್ಣಗೊಳಿಸಿದ ಬಳಿಕ, ಅಕ್ಟೋಬರ್ 2021ರಲ್ಲಿ ಆಕೆಯನ್ನು ಬಾಲಿಯಿಂದ ಗಡೀಪಾರು ಮಾಡಲಾಗಿತ್ತು. ನ್ಯಾಯಾಲಯದ ಮುಂದೆ ತಾನು ತಾಯಿಯ ಹತ್ಯೆಗೆ ಸಹಕರಿಸಿದ್ದು ಹಾಗೂ ಮೃತದೇಹವನ್ನು ತುಂಡುಮಾಡಿ ಸೂಟ್‌ಕೇಸ್‌ನಲ್ಲಿ ತುಂಬಲು ನೆರವಾದುದಾಗಿ ತಪ್ಪೊಪ್ಪಿಕೊಂಡಿದ್ದ ಹಿನ್ನೆಲೆಯಲ್ಲಿ, ಅಮೆರಿಕದ ಚಿಕಾಗೊದಲ್ಲಿ ಜನವರಿ 2024ರಲ್ಲಿ ಹೀತರ್ ಮ್ಯಾಕ್‌ಗೆ 26 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. 

ವಾರ್ತಾ ಭಾರತಿ 25 Feb 2026 9:25 pm

ಅಂತರ್‌ರಾಷ್ಟ್ರೀಯ ರೋಟರಿ ಸಂಸ್ಥೆಯ ಸ್ಥಾಪನಾ ದಿನಾಚರಣೆ: ಬಾಲಕೃಷ್ಣ ಪೈಗೆ ಶ್ರೇಷ್ಠ ವೃತ್ತಿಪರ ಸೇವಾ ಪ್ರಶಸ್ತಿ ಪ್ರದಾನ

ಮಂಗಳೂರು: ರೋಟರಿ ಕ್ಲಬ್ ಮಂಗಳೂರು ಸಿಟಿ ಸಂಸ್ಥೆಯ ಆಶ್ರಯದಲ್ಲಿ ಅಂತರಾಷ್ಟ್ರೀಯ ರೋಟರಿ ಸಂಸ್ಥೆಯ 121ನೇ ಸ್ಥಾಪನಾ ದಿನಾಚರಣೆ ಹಾಗೂ ಸಾಧಕರಿಗೆ ಶ್ರೇಷ್ಠ ವೃತ್ತಿಪರ ಸೇವಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ನಗರದ ಆಫಿಸರ್ಸ್‌ ಕ್ಲಬ್ ಸಭಾಂಗಣದಲ್ಲಿ ಸಂಸ್ಥೆಯ ಅಧ್ಯಕ್ಷೆ ಸಜ್ಞಾ ಭಾಸ್ಕರ್ ನೇತೃತ್ವದಲ್ಲಿ ಜರಗಿತು. ಈ ಸಂದರ್ಭದಲ್ಲಿ ಮಾತನಾಡಿದ ಸಜ್ಞಾ ಭಾಸ್ಕರ್ ಅವರು ರೋಟರಿ ಸಂಸ್ಥೆಯ ವೃತ್ತಿಪರ ಸೇವಾ ಮಾಸಾಚರಣೆ ಹಾಗೂ ಯೋಜನೆಯ ಮಹತ್ವ ಮತ್ತು ಉದ್ದೇಶವನ್ನು ವಿವರಿಸಿ ಸಮಾಜಕ್ಕೆ ಉತ್ತಮ, ನಿಸ್ವಾರ್ಥ, ಮತ್ತು ಪ್ರಾಮಾ ಣಿಕ ಸೇವಾ ಮನೋಭಾವದಿಂದ ಶ್ರೇಷ್ಠ ಕೊಡುಗೆ ನೀಡಿದವರನ್ನು ಗುರುತಿಸಿ, ಆಯ್ಕೆ ಮಾಡಿ ರೋಟರಿ ಸಂಸ್ಥೆಯ ಪ್ರತಿಷ್ಠಿತ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಕ್ರಿಕೆಟ್‌ನಲ್ಲಿ ಸಾಧಕರಾದ ಕಸ್ತೂರಿ ಬಾಲಕೃಷ್ಣ ಪೈ ಅವರ ಸೇವೆಯನ್ನು ಗುರುತಿಸಿ ಪ್ರಶಸ್ತಿ ಪ್ರದಾನ ಮಾಡಿ ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಪೈ ಅವರು ಸಾಧಕರನ್ನು ಗುರುತಿಸಿ ಸನ್ಮಾನಿಸುವ ರೋಟರಿ ಸಂಸ್ಥೆಯ ಕಾರ್ಯ ಪ್ರಶಂಸನೀಯ ಎಂದು ನುಡಿದು ಕೃತಜ್ಞತೆ ಸಲ್ಲಿಸಿದರು. ಮುಖ್ಯ ಅತಿಥಿ ವಲಯ ಸಹಾಯಕ ಗವರ್ನರ್ ಡಾ. ರವಿಶಂಕರ್ ರಾವ್‌ರವರು ಫೆ. 23 1905 ರಲ್ಲಿ ಶಿಕಾಗೋ (ಅಮೆರಿಕಾ) ನಗರದಲ್ಲಿ ಸ್ಥಾಪನೆಗೊಂಡು ಅದರ ಇತಿಹಾಸ, ಬೆಳವಣಿಗೆ, ಕೊಡುಗೆ ಮತ್ತು ವಿವಿಧ ಸಮಾಜ ಸೇವಾ ಸಾಧನೆಗಳ ಮಾಹಿತಿ ನೀಡಿದರು. ಸ್ಥಾಪನಾ ಅಧ್ಯಕ್ಷ ಡಾ. ರಂಜನ್‌ರವರು ತಮ್ಮ ಅಭಿನಂದನಾ ಭಾಷಣದಲ್ಲಿ ಪ್ರಶಸ್ತಿ ವಿಜೇತರ ಪರಿಚಯ ನೀಡಿ, ಅಭಿನಂದಿಸಿದರು. ವೇದಿಕೆಯಲ್ಲಿ ವೃತ್ತಿಪರ ಸೇವಾ ಯೋಜನೆಯ ನಿರ್ದೇಶಕ ನಿತಿನ್ ದೇವಾಡಿಗ ಉಪಸ್ಥಿತರಿದ್ದರು. ಕಾರ್ಯದರ್ಶಿ ಸುಜೀರ್ ಪದ್ಮನಾಭ ನಾಯ್ಕ್ ವಂದಿಸಿದರು. 

ವಾರ್ತಾ ಭಾರತಿ 25 Feb 2026 9:23 pm

ಗ್ಯಾರಂಟಿ ಪ್ರಯೋಜನ ಅರ್ಹರಿಗೆ ತಲುಪಿಸಲು ಕ್ರಮ ವಹಿಸಿ: ಭರತ್ ಮುಂಡೋಡಿ ಸೂಚನೆ

ಮಂಗಳೂರು: ಅರ್ಹ ಫಲಾನುಭವಿಗಳು ಮಾತ್ರ ಗ್ಯಾರಂಟಿ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು. ಜನರ ಸಮಸ್ಯೆಗಳನ್ನು ನಿವಾರಿಸಲು ಎಲ್ಲಾ ಇಲಾಖೆಗಳು ಸಮರ್ಥವಾಗಿ ಕಾರ್ಯನಿರ್ವಹಿಸಬೇಕು ಎಂದು ದ.ಕ. ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ ಸೂಚಿಸಿದ್ದಾರೆ. ದ.ಕ.ಜಿಪಂನಲ್ಲಿ ಬುಧವಾರ ನಡೆದ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸುಳ್ಯ ವ್ಯಾಪ್ತಿಯಲ್ಲಿ ಸುಮಾರು 7 ವರ್ಷಗಳಿಂದ ವಿದ್ಯುತ್ ಕಳ್ಳತನ ನಡೆಯುತ್ತಿದ್ದು, 1 ವರ್ಷಕ್ಕೆ ಮಾತ್ರ ದಂಡ ವಿಧಿಸಲಾಗಿದೆ ಎಂದು ಸುಳ್ಯ ತಾಲೂಕು ಗ್ಯಾರಂಟಿ ಯೋಜನೆಗಳ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ವಿಷಯ ಪ್ರಸ್ತಾಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಭರತ್ ಮುಂಡೋಡಿ ಈ ಬಗ್ಗೆ ಮೆಸ್ಕಾಂ ಅಧಿಕಾರಿಗಳು ತನಿಖೆ ಮಾಡಿ ಸೂಕ್ತ ಕ್ರಮವಹಿಸುವಂತೆ ತಿಳಿಸಿದರು. ಗೃಹಲಕ್ಷ್ಮಿ ಯೋಜನೆಗೆ ಜ.24ರಿಂದ ಫೆ.20ರವರೆಗೆ 222 ಫಲಾನುಭವಿಗಳು ಹೆಸರು ನೋಂದಾಯಿಸಿದ್ದಾರೆ. ಅದರೊಂದಿಗೆ ಜಿಲ್ಲೆಯಲ್ಲಿ ಈವರೆಗೆ 3,80,630 ಫಲಾನುಭವಿಗಳು ಹೆಸರು ನೋಂದಾಯಿಸಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರು ಸಭೆಗೆ ಮಾಹಿತಿ ನೀಡಿದರು. ಅನ್ನಭಾಗ್ಯ ಯೋಜನೆಯಡಿ ಎಲ್ಲಾ ಕಾರ್ಡ್‌ಗಳನ್ನು ಸರ್ವೆ ಮಾಡಿಸುವ ಕೆಲಸ ಆಗಬೇಕೆಂದು ಮುಲ್ಕಿ ತಾಲೂಕು ಮಟ್ಟದ ಗ್ಯಾರಂಟಿ ಅಧ್ಯಕ್ಷರು ಒತ್ತಾಯಿಸಿದರು. ಈ ಬಗ್ಗೆ ವಿಸ್ತೃತ ಚರ್ಚೆ ಮಾಡಿ ಜಿಲ್ಲೆಯಲ್ಲಿ ಪಡಿತರ ಚೀಟಿಗಾಗಿ ಕಾಯುತ್ತಿರುವ ಅರ್ಹ ಫಲಾನುಭವಿಗಳ ಸಂಖ್ಯೆ ಸಾಕಷ್ಟಿದ್ದು, ಬೇರೆ ಬೇರೆ ಯೋಜನೆಯಡಿ ಸೌಲಭ್ಯವನ್ನು ಪಡೆಯಲು ರೇಶನ್ ಕಾರ್ಡಿನ ಅವಶ್ಯಕತೆ ಇರುತ್ತದೆ. ಆದರೆ ಈಗಾಗಲೇ ರಾಜ್ಯ ಮಟ್ಟದಲ್ಲಿ ಹೆಚ್ಚುವರಿ ಕಾರ್ಡ್‌ಗಳನ್ನು ನೀಡಿರುವ ನೆಲೆಯಲ್ಲಿ ಹೊಸ ರೇಶನ್ ಕಾರ್ಡ್‌ಗಳನ್ನು ವಿತರಿಸಲು ಅವಕಾಶವಿರುವುದಿಲ್ಲ. ಹಾಗಾಗಿ ಅರ್ಹ ಹೊಸ ಫಲಾನುಭವಿಗಳಿಗೆ ರೇಶನ್ ಕಾರ್ಡ್ ವಿತರಿಸಲು ಅವಕಾಶ ಮಾಡಿಕೊಡುವ ಬಗ್ಗೆ ಸರಕಾರಕ್ಕೆ ಪತ್ರ ಬರೆಯಲು ನಿರ್ಣಯ ಮಾಡಲಾಯಿತು. ಹಳೆಯಂಗಡಿಯಿಂದ ಪಕ್ಷಿಕೆರೆಯಲ್ಲಿ 1 ಕಿ.ಮೀ ರಸ್ತೆ ಅಗಲೀಕರಣ ಮಾಡಿ ಡಾಂಬರು ಮಾಡಲಾಗಿ ರಸ್ತೆಯಲ್ಲಿರುವ ಕಂಬಗಳನ್ನು ಸ್ಥಳಾಂತರಿಸುವ ಬಗ್ಗೆ ಮಾಹಿತಿ ನೀಡುವಂತೆ ಮುಲ್ಕಿ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿಯ ಅಧ್ಯಕ್ಷರು ಕೋರಿಕೊಂಡರು. ಈ ಕಂಬಗಳನ್ನು ಸ್ಥಳಾಂತರಿಸಲು ಈಗಾಗಲೇ ಸ್ಥಳ ಪರಿಶೀಲನೆ ನಡೆಸಿ ಸ್ವಯಂ ನಿರ್ವಹಣೆಯಡಿಯಲ್ಲಿ ಅಂದಾಜುಪಟ್ಟಿ ಮಂಜೂರುಗೊಂಡು ಕಾರ್ಯಾದೇಶ ನೀಡಲಾಗಿದೆ. ಕಾಮಗಾರಿ ಪ್ರಗತಿಯಲ್ಲಿರುತ್ತದೆ ಎಂದು ಮೆಸ್ಕಾಂ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ಯುವನಿಧಿ ಯೋಜನೆಯಡಿ ಶೇ.25 ಅಭ್ಯರ್ಥಿಗಳ ನೈಜತೆ ಪರಿಶೀಲನೆ ನಡೆಸಲಾಗಿದೆ. ಅದರಂತೆ ಸದ್ಯ ತಾಲೂಕುಗಳ ಮಟ್ಟದಲ್ಲಿ ಶೇ.25 ಅಭ್ಯರ್ಥಿಗಳ ನೈಜತಾ ಪರಿಶೀಲನೆ ಪಟ್ಟಿಯು ಸ್ವೀಕೃತವಾಗಿದ್ದು, ಆಯುಕ್ತಾಲಯಕ್ಕೆ ಸಲ್ಲಿಸಲು ಕ್ರಮ ವಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು. ಸಭೆಯಲ್ಲಿ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಉಪಾಧ್ಯಕ್ಷರಾದ ಜೋಕಿಂ ಡಿಸೋಜ, ಸುರೇಖಾ ಚಂದ್ರಹಾಸ್, ನಾರಾಯಣ ನಾಯಕ್, ಸದಸ್ಯರಾದ ಅರುಣ್ ಕುಮಾರ್ ಶೆಟ್ಟಿ, ಆಲ್ವಿನ್ ಕ್ಲೆಮೆಂಟ್ ಕುಟಿನ್ಹ, ಜಯಂತಿ ಬಿಎ, ಶಾಹುಲ್ ಹಮೀದ್, ಉಮಾನಾಥ್ ಶೆಟ್ಟಿ, ಸುರೇಂದ್ರ ಕಂಬಳಿ, ಎಸ್.ರಫೀಕ್, ಸುಧೀರ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.

ವಾರ್ತಾ ಭಾರತಿ 25 Feb 2026 9:19 pm

ಮಂಗಳೂರು ವಿ.ವಿ: ಮೂವರು ಸಾಧಕರಿಗೆ ಯಕ್ಷಮಂಗಳ ಪ್ರಶಸ್ತಿ ಪ್ರಕಟ

ಕೊಣಾಜೆ, ಫೆ.25: ಮಂಗಳೂರು ವಿಶ್ವವಿದ್ಯಾನಿಲಯದ ಡಾ.ಪಿ.ದಯಾನಂದ ಪೈ ಮತ್ತು ಶ್ರೀ ಪಿ.ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ 2025-26ನೇ ಸಾಲಿನ ಯಕ್ಷಮಂಗಳ ಪ್ರಶಸ್ತಿಗೆ ಯಕ್ಷಗಾನ ರಂಗದ ಹಿರಿಯ ಕಲಾವಿದ ಕಪ್ಪೆಕೆರೆ ಸುಬ್ರಾಯ ಭಾಗವತ, ಯಕ್ಷಗಾನ ಗುರು ಮಾಂಬಾಡಿ ಸುಬ್ರಹ್ಮಣ್ಯ ಭಟ್, ಹಿರಿಯ ಯಕ್ಷಗಾನ ಅರ್ಥಧಾರಿ ಜಬ್ಬಾರ್ ಸಮೊ ಆಯ್ಕೆಯಾಗಿದ್ದಾರೆ. ಯಕ್ಷಮಂಗಳ ಕೃತಿ ಪ್ರಶಸ್ತಿಗೆ ಕೃಷ್ಣ ಪ್ರಕಾಶ್ ಉಳಿತ್ತಾಯ ಅವರ ’ಬಲಿಪ ಮಾರ್ಗ ಹಾಗೂ ಅಗರಿಮಾರ್ಗ’ ಕೃತಿಯು ಆಯ್ಕೆಯಾಗಿದೆ. ಯಕ್ಷಮಂಗಳ ಪ್ರಶಸ್ತಿಯು 25,000 ರೂ. ನಗದು, ಪ್ರಶಸ್ತಿ ಪತ್ರ, ಸ್ಮರಣಿಕೆ ಹಾಗೂ ಯಕ್ಷಮಂಗಳ ಕೃತಿ ಪ್ರಶಸ್ತಿಯು 10,000 ರೂ. ನಗದು, ಪ್ರಶಸ್ತಿ , ಸ್ಮರಣಿಕೆ ಒಳಗೊಂಡಿದೆ. ಕಲಾವಿದರ ಪರಿಚಯ:- *ಕಪ್ಪೆಕೆರೆ ಸುಬ್ರಾಯ ಭಾಗವತ ಕಪ್ಪೆಕೆರೆ ಸುಬ್ರಾಯ ಭಾಗವತರು ಬಡಗುತಿಟ್ಟು ಯಕ್ಷಗಾನ ರಂಗದ ಹಿರಿಯ ತಲೆಮಾರಿನ ಅಗ್ರಮಾನ್ಯ ಕಲಾವಿ ದರಾಗಿದ್ದಾರೆ. ಉತ್ತರ ಕನ್ನಡದ ಹೊನ್ನಾವರ ತಾಲೂಕಿನ ಹಡಿನಬಾಳ ಎಂಬಲ್ಲಿ 1947ರಲ್ಲಿ ಈಶ್ವರ ಹೆಗಡೆ-ಗೋಪಿ ಹೆಗಡೆ ದಂಪತಿಯ ಪುತ್ರರಾಗಿ ಜನಿಸಿದ ಅವರು ಹದಿನಾರರ ಹರೆಯದಲ್ಲೇ ಯಕ್ಷಗಾನ ರಂಗಕ್ಕೆ ಪದಾರ್ಪಣೆ ಮಾಡಿ ದರು. ಸರ್ವಾಂಗೀಣ ಕಲಾವಿದರಾಗಿ, ಶ್ರೇಷ್ಠ ಭಾಗವತರಾಗಿ ಗುರುತಿಸಿದ್ದಾರೆ. ಗುಂಡುಬಾಳ, ಇಡಗುಂಜಿ, ಅಮೃತೇಶ್ವರಿ, ಕಮಲಶಿಲೆ, ಸಾಲಿಗ್ರಾಮ, ಬಚ್ಚಗಾರು, ಪಂಚಲಿಂಗ ಮೇಳಗಳಲ್ಲಿ ಐದು ದಶಕಗಳಿಗೂ ಹೆಚ್ಚು ಕಾಲ ಸೇವೆಗೈದ ಹಿರಿಯ ಕಲಾವಿದರಾಗಿದ್ದಾರೆ. ಮಾಂಬಾಡಿ ಸುಬ್ರಹ್ಮಣ್ಯ ಭಾಗವತ ಯಕ್ಷಗಾನ ಕ್ಷೇತ್ರದಲ್ಲಿ ಹಿಮ್ಮೇಳ ವಾದಕರಾಗಿ ಮೇಳದ ತಿರುಗಾಟದ ಜೊತೆಗೆ ಯಕ್ಷಗಾನ ಗುರುಗಳಾಗಿ ಗುರುಪರಂಪರೆಯನ್ನು ಮೆರೆಸಿದ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಯಕ್ಷಗಾನ ರಂಗದ ಹಿರಿಯ ಸಾಧಕರಾಗಿದ್ದಾರೆ. ಮಾಂಬಾಡಿ ನಾರಾಯಣ ಭಾಗವತರ ಪುತ್ರರಾಗಿ ತಂದೆಯ ಮಾರ್ಗದರ್ಶನದಲ್ಲಿ ಮುಂದುವರಿದು ಕಟೀಲು, ಕರ್ನಾಟಕ, ಕದ್ರಿ ಮೇಳಗಳಲ್ಲಿ ತಿರುಗಾಟ ಮಾಡಿದ್ದಾರೆ.ಕಾಸರಗೋಡು, ದ.ಕ.ಜಿಲ್ಲೆಯ ನಾನಾ ಕಡೆ ಯಕ್ಷಗಾನದ ಹಿಮ್ಮೇಳ ತರಗತಿಗಳನ್ನು ನಡೆಸಿ ನೂರಾರು ಶಿಷ್ಯಂದಿರಿಗೆ ಹಿಮ್ಮೇಳ ಶಿಕ್ಷಣ ನೀಡಿದ್ದಾರೆ. ಇವರಲ್ಲಿ ಕಲಿತ ಅನೇಕ ಶಿಷ್ಯರು ವೃತ್ತಿಪರ ಕಲಾವಿದರಾಗಿ, ಹವ್ಯಾಸಿ ಕಲಾವಿದರಾಗಿ ಸೇವೆಗೈಯ್ಯುತ್ತಿದ್ದಾರೆ. ಜಬ್ಬಾರ್ ಸಮೊ ಯಕ್ಷಗಾನ ರಂಗದ ಹಿರಿಯ ತಾಳಮದ್ದಳೆಯ ಅರ್ಥಧಾರಿಯಾಗಿರುವ ಜಬ್ಬಾರ್ ಸಮೊ ಸಂಪಾಜೆಯ ಮೊಯ್ದಿನ್ ಕುಂಞಿ ಹಾಗೂ ಬಿಪಾತುಮ್ಮ ದಂಪತಿಯ ಪುತ್ರರಾಗಿ 1963ರಲ್ಲಿ ಜನಿಸಿದರು. ಎಳವೆಯಲ್ಲಿಯೇ ಯಕ್ಷಗಾನದ ಬಗ್ಗೆ ಆಸಕ್ತಿಯನ್ನು ಬೆಳೆಸಿಕೊಂಡಿದ್ದ ಅವರು ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಣ ಪಡೆದಿದ್ದರು. ವಳಕುಂಜ ಕುಮಾರ ಸುಬ್ರಹ್ಮಣ್ಯ ಭಟ್ ಅವರ ಮೊದಲ ಗುರುವಾಗಿದ್ದು, ಆರಂಭದಲ್ಲಿ ದ್ರೋಣ, ಜಾಬಾಲಿ, ಈಶ್ವರ, ಸಂಜಯ, ಅಕ್ರೂರ, ಬ್ರಹ್ಮ, ಕಂಸ ಮೊದಲಾದ ಪಾತ್ರಗಳನ್ನು ಮಾಡಿದ್ದರು. 990ರ ಬಳಿಕ ತಾಳಮದ್ದಳೆಯಲ್ಲಿ ಭಾಗವಹಿಸಲು ಆರಂಭಿಸಿದ ಅವರು ವಾಲಿ, ಮಾಗಧ, ಕರ್ಣ, ಅರ್ಜುನ, ಶಲ್ಯ, ಸುಗ್ರೀವ, ಭೀಷ್ಮ, ಕೌರವ, ಶುಂಭ, ರಕ್ತಬೀಜ, ಧರ್ಮಾಂಗದ, ಭರತ, ಶತ್ರುಘ್ನ, ಹನುಮಂತ, ವೀರಮಣಿ, ಈಶ್ವರ, ಬಲರಾಮ, ರುಕ್ಮ, ಭೀಷ್ಮ, ಜಾಂಬವಂತ, ಶತ್ರುಪ್ರಸೂದನ, ಬಲಿ, ಶುಕ್ರಾಚಾರ್ಯ ಮುಂತಾದ ಪಾತ್ರಗಳು ಅವರಿಗೆ ಖ್ಯಾತಿಯನ್ನು ತಂದಿದೆ. ಅವರ ಪಾಂಡಿತ್ಯಪೂರ್ಣ ಸಂಭಾಷಣೆ, ಆಕರ್ಷಕ ಪದಪ್ರಯೋಗ ಮತ್ತು ಭಾವಪೂರ್ಣ ನಟನೆಯು ಅವರಿಗೆ ಎಲ್ಲಾ ಸಮುದಾಯಗಳಿಂದ ಅಪಾರ ಅಭಿಮಾನಿಗಳನ್ನು ಗಳಿಸಿಕೊಟ್ಟಿದೆ. *ಬಲಿಪ ಮಾರ್ಗ’, ’ಅಗರಿ ಮಾರ್ಗ’ಕ್ಕೆ ಯಕ್ಷಮಂಗಳ ಕೃತಿ ಪ್ರಶಸ್ತಿ ’ಬಲಿಪ ಮಾರ್ಗ’ ಹಾಗೂ ’ಅಗರಿ ಮಾರ್ಗ’ ಕೃತಿಗಳ ಲೇಖಕರಾಗಿರುವ ಕೃಷ್ಣ ಪ್ರಕಾಶ ಉಳಿತ್ತಾಯರು ಹಿಮ್ಮೇಳ ಕಲಾವಿದರಾಗಿದ್ದಾರೆ. ಬಲಿಪ ಮಾರ್ಗ ಕೃತಿಯು ಯಕ್ಷಗಾನ ರಂಗದ ಹಿರಿಯ ಕಲಾವಿದರಾದ ಹಿರಿಯ ಅಜ್ಜ ಬಲಿಪ ನಾರಾಯಣ ಭಾಗವತರು ಹಾಗೂ ಕಿರಿಯ ಬಲಿಪ ನಾರಾಯಣ ಭಾಗವತರ ಬದುಕು, ಗಾನಮಾರ್ಗ ಇವುಗಳನ್ನು ಸುಂದರವಾಗಿ, ಅರ್ಥಪೂರ್ವಾಗಿ ನಿರೂಪಿಸುವ ಕೃತಿಯಾಗಿದೆ. ಅಗರಿ ಮಾರ್ಗ ಕೃತಿಯು ಅಗರಿ ಮಾರ್ಗ ಕೃತಿಯು ತೆಂಕುತಿಟ್ಟಿನ ಯಕ್ಷಗಾನ ಪ್ರದರ್ಶನ ಕಲೆಯಲ್ಲಿ ಯಕ್ಷಬ್ರಹ್ಮ ಎಂದು ಪ್ರಸಿದ್ದರಾದ ಅಗರಿಶ್ರೀನಿವಾಸ ಭಾಗವತರ ಬದುಕು, ಹಾಡುವ ಕ್ರಮ, ರಚನೆ, ಸಾಹಿತ್ಯ ವೈಶಿಷ್ಟ್ಯತೆಯನ್ನು ತೆರೆದಿಡುವ ಮಹತ್ವದ ಕೃತಿಯಾಗಿದೆ. ಜಾನಪದ ವಿದ್ವಾಂಸರಾದ ಡಾ.ಕೆ.ಚಿನ್ನಪ್ಪಗೌಡ ಅವರ ನೇತೃತ್ವದಲ್ಲಿ ಪ್ರೊ.ಪಾದೆಕಲ್ಲು ವಿಷ್ಣುಭಟ್, ಯಕ್ಷಗಾನ ಸಂಘಟಕ ಮುರಲಿ ಕಡೇಕಾರ್ ಹಾಗೂ ಕೇಂದ್ರದ ನಿರ್ದೆಶಕ ಡಾ.ಧನಂಜಯ ಕುಂಬ್ಳೆ ಅವರನ್ನು ಒಳಗೊಂಡಿರುವ ಆಯ್ಕೆ ಸಮಿತಿಯು ಪ್ರಶಸ್ತಿಗೆ ಸಾಧಕರನ್ನು ಶಿಫಾರಸು ಮಾಡಿದೆ, ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಲ್.ಧರ್ಮ ಅಧ್ಯಕ್ಷತೆಯಲ್ಲಿ ಮಾರ್ಚ್‌ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಮಂಗಳೂರು ವಿವಿ ಕುಲಸಚಿವ ಪ್ರೊ. ಗಣೇಶ್ ಸಂಜೀವ್ ಹಾಗೂ ಯಕ್ಷಗಾನ ಅಧ್ಯಯನ ಕೇಂದ್ರದ ನಿರ್ದೆಶಕ ಡಾ.ಧನಂಜಯ ಕುಂಬ್ಳೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಒಂದು ಕೋ.ರೂ. ಅನುದಾನ ಮಂಗಳೂರು ವಿಶ್ವವಿದ್ಯಾನಿಲಯದ ಡಾ.ದಯಾನಂದ ಪೈ-ಸತೀಶ್ ಪೈ ಯಕ್ಷಗಾನ ಕೇಂದ್ರದಲ್ಲಿ ಯಕ್ಷಗಾನ ಸಂಬಂಧಿ ಅಧ್ಯಯನ ಸಂಶೋಧನೆಯನ್ನು ವಿಸ್ತರಿಸುವ ಉದ್ದೇಶಕ್ಕಾಗಿ ಬೆಂಗಳೂರಿನ ಡಾ.ದಯಾನಂದ ಪೈ 1ಕೋ.ರೂ.ವಿಶೇಷ ಅನುದಾನ ನೀಡುವುದಾಗಿ ತಿಳಿಸಿದ್ದಾರೆ.ಯಕ್ಷಮಂಗಳ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ದಯಾನಂದ ಪೈ ಭಾಗವಹಿಸಲಿದ್ದು ಆ ದಿನ ಈ ಮೊತ್ತವನ್ನು ಹಸ್ತಾಂತರಿಸಲಿದ್ದಾರೆ ಎಂದು ವಿವಿ ಕುಲಪತಿ ಪ್ರೊ.ಪಿ.ಎಲ್. ಧರ್ಮ ತಿಳಿಸಿದ್ದಾರೆ.

ವಾರ್ತಾ ಭಾರತಿ 25 Feb 2026 9:16 pm

DPDP ಕಾಯ್ದೆ RTI ಮೇಲೆ ಹೇಗೆ ಪರಿಣಾಮ ಬೀರುತ್ತದೆ?

ಡಿಜಿಟಲ್ ವೈಯಕ್ತಿಕ ದತ್ತಾಂಶ ರಕ್ಷಣೆ (DPDP) ಕಾಯ್ದೆ–2023 ರ ಹಲವಾರು ನಿಬಂಧನೆಗಳ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆಗೆ ಸುಪ್ರೀಂ ಕೋರ್ಟ್ ಫೆ. 16ರಂದು ಒಪ್ಪಿಗೆ ನೀಡಿದೆ. ಸಂಸತ್ತಿನಲ್ಲಿ ಜಾರಿಯಾದ ನಿಬಂಧನೆಗಳ ಕುರಿತು ನಾವು ಆಲಿಸದೆ ಮಧ್ಯಂತರ ತಡೆ ನೀಡಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ತಿಳಿಸಿದೆ. ಆರ್‌ಟಿಐ ಕಾಯ್ದೆ ಜಾರಿಗೆ ತರುವಲ್ಲಿ ಪ್ರಮುಖ ಪಾತ್ರವಹಿಸಿರುವ ನ್ಯಾಷನಲ್ ಕ್ಯಾಂಪೇನ್ ಫಾರ್ ಪೀಪಲ್ಸ್ ರೈಟ್ ಟು ಇನ್ಫರ್ಮೇಷನ್ (NCPRI), ಮಾಹಿತಿ ಹಕ್ಕು ಕಾರ್ಯಕರ್ತ ವೆಂಕಟೇಶ್ ನಾಯಕ್ ಹಾಗೂ ತನಿಖಾ ಪತ್ರಕರ್ತರ ಗುಂಪಾದ ದಿ ರಿಪೋರ್ಟರ್ಸ್ ಕಲೆಕ್ಟಿವ್ ಸಲ್ಲಿಸಿದ ಮೂರು ಅರ್ಜಿಗಳನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸಲು ನ್ಯಾಯಾಲಯ ನಿರ್ಧರಿಸಿದೆ. ಡಿಪಿಡಿಪಿ ಕಾಯ್ದೆಯನ್ನು ಹೇಗೆ ರೂಪಿಸಲಾಯಿತು? ಪುಟ್ಟಸ್ವಾಮಿ (2017) ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಗೌಪ್ಯತೆಯ ಹಕ್ಕನ್ನು ಸಂವಿಧಾನದ ವಿಧಿ 21 (ಜೀವನ ಮತ್ತು ಸ್ವಾತಂತ್ರ್ಯದ ಹಕ್ಕು) ಅಡಿಯಲ್ಲಿ ಮೂಲಭೂತ ಹಕ್ಕು ಎಂದು ಘೋಷಿಸಿತು. ಇದು ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು (ವಿಧಿ 19) ಒಳಗೊಂಡಿರುವ ಪ್ರಮುಖ ಹಕ್ಕಾಗಿದೆ. ಈ ತೀರ್ಪಿನಲ್ಲಿ ಸರ್ಕಾರವು ದತ್ತಾಂಶ ಸಂರಕ್ಷಣಾ ವ್ಯವಸ್ಥೆಯನ್ನು ರೂಪಿಸಬೇಕು ಎಂದು ನ್ಯಾಯಾಲಯ ನಿರ್ದೇಶಿಸಿತ್ತು. ದತ್ತಾಂಶ ಸಂರಕ್ಷಣಾ ಚೌಕಟ್ಟಿನ ಕುರಿತು ಚರ್ಚಿಸಲು ಮತ್ತು ವರದಿ ನೀಡಲು ಸರ್ಕಾರ ನ್ಯಾಯಮೂರ್ತಿ ಬಿ.ಎನ್. ಶ್ರೀಕೃಷ್ಣ ಅವರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಿತು. ಸಮಿತಿಯು ಜುಲೈ 2018ರಲ್ಲಿ ತನ್ನ ವರದಿ ಹಾಗೂ ದತ್ತಾಂಶ ಸಂರಕ್ಷಣೆಯ ಕರಡು ಮಸೂದೆಯನ್ನು ಸಲ್ಲಿಸಿತು. ಬಳಿಕ, 2023ರ ಆಗಸ್ಟ್‌ನಲ್ಲಿ ಸಂಸತ್ತು ಡಿಜಿಟಲ್ ವೈಯಕ್ತಿಕ ದತ್ತಾಂಶ ರಕ್ಷಣೆ (DPDP) ಕಾಯ್ದೆ–2023 ಅನ್ನು ಅಂಗೀಕರಿಸಿತು. ಈ ಕಾಯ್ದೆ ವ್ಯಕ್ತಿಗಳ ವೈಯಕ್ತಿಕ ದತ್ತಾಂಶದ ರಕ್ಷಣೆಗೆ ಕಾನೂನು ಚೌಕಟ್ಟನ್ನು ಒದಗಿಸುತ್ತದೆ. ಈ ದತ್ತಾಂಶವನ್ನು ಅವರು ಇತರ ವ್ಯಕ್ತಿಗಳು, ಕಂಪೆನಿಗಳು ಹಾಗೂ ಸರ್ಕಾರಿ ಘಟಕಗಳೊಂದಿಗೆ ಹಂಚಿಕೊಳ್ಳುತ್ತಾರೆ. ವಿವಾದವೇನು? ಸಾರ್ವಜನಿಕ ಅಧಿಕಾರಿಗಳಿಂದ ಮಾಹಿತಿಯನ್ನು ಪಡೆಯುವ ಹಕ್ಕನ್ನು ನಾಗರಿಕರಿಗೆ ಒದಗಿಸಲು 2005ರ ಮಾಹಿತಿ ಹಕ್ಕು (RTI) ಕಾಯ್ದೆ ಜಾರಿಗೆ ತರಲಾಯಿತು. DPDP ಕಾಯ್ದೆಯ ಸೆಕ್ಷನ್ 44(3) ಆರ್‌ಟಿಐ ಕಾಯ್ದೆಯ ಸೆಕ್ಷನ್ 8(1)(j) ಅನ್ನು ತಿದ್ದುಪಡಿ ಮಾಡುತ್ತದೆ. ಆರ್‌ಟಿಐ ಕಾಯ್ದೆಯ ಸೆಕ್ಷನ್ 8(1)(j) ಪ್ರಕಾರ, ಯಾವುದೇ ವ್ಯಕ್ತಿಯ ಖಾಸಗಿ ಮಾಹಿತಿ ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸದಿದ್ದರೆ ಅಥವಾ ನೀಡುವ ಮಾಹಿತಿಯಿಂದ ವ್ಯಕ್ತಿಯ ಖಾಸಗಿತನಕ್ಕೆ ಅನಗತ್ಯ ಧಕ್ಕೆ ಉಂಟಾಗುವ ಸಾಧ್ಯತೆ ಇದ್ದರೆ, ಸಾರ್ವಜನಿಕ ಮಾಹಿತಿ ಅಧಿಕಾರಿ ಅಥವಾ ಮೇಲ್ಮನವಿ ಪ್ರಾಧಿಕಾರಗಳು ಕಾಯ್ದೆಯ ಅಡಿಯಲ್ಲಿ ಕೇಳಲಾದ ಮಾಹಿತಿಯನ್ನು ನಿರಾಕರಿಸಬಹುದು. ಆದರೆ, DPDP ಕಾಯ್ದೆಯ ಸೆಕ್ಷನ್ 44(3)ರಲ್ಲಿ ಸಾರ್ವಜನಿಕ ಹಿತಾಸಕ್ತಿ ಹಾಗೂ ಇತರ ವಿಚಾರಗಳ ಉಲ್ಲೇಖಗಳನ್ನು ತೆಗೆಯಲಾಗಿದೆ. ಇದರ ಫಲವಾಗಿ ವ್ಯಕ್ತಿಯ “ವೈಯಕ್ತಿಕ ಮಾಹಿತಿ”ಯನ್ನು ತಡೆಹಿಡಿಯಲು ಹೆಚ್ಚಿನ ಅವಕಾಶ ಸೃಷ್ಟಿಯಾಗಿದೆ. ಎನ್‌ಸಿಪಿಆರ್‌ಐ, ವೆಂಕಟೇಶ್ ನಾಯಕ್ ಮತ್ತು ದಿ ರಿಪೋರ್ಟರ್ಸ್ ಕಲೆಕ್ಟಿವ್ ಸಲ್ಲಿಸಿದ ಅರ್ಜಿಗಳ ಪ್ರಮುಖ ಆಕ್ಷೇಪವೇ 2005ರ ಆರ್‌ಟಿಐ ಕಾಯ್ದೆಗೆ ಮಾಡಲಾದ ಈ ತಿದ್ದುಪಡಿ. ಈ ತಿದ್ದುಪಡಿಯ ಮೊದಲು, ಸಾರ್ವಜನಿಕ ಅಧಿಕಾರಿಗಳು ಯಾವುದೇ ಸಾರ್ವಜನಿಕ ಚಟುವಟಿಕೆ ಅಥವಾ ಹಿತಾಸಕ್ತಿಗೆ ಸಂಬಂಧಿಸದಿದ್ದರೆ ಅಥವಾ ಅದು ವ್ಯಕ್ತಿಯ ಖಾಸಗಿತನಕ್ಕೆ ಅನಗತ್ಯ ಧಕ್ಕೆ ಉಂಟುಮಾಡುವಂತಿದ್ದರೆ ಮಾತ್ರ ಕಾಯ್ದೆಯಡಿ ವಿನಂತಿಸಿದ ವೈಯಕ್ತಿಕ ಮಾಹಿತಿಯನ್ನು ನಿರಾಕರಿಸಬಹುದಿತ್ತು. ತಿದ್ದುಪಡಿ ಮಾಡದ ಸೆಕ್ಷನ್ 8(1)(j) ಸಾರ್ವಜನಿಕ ಹಿತಾಸಕ್ತಿ ವಿನಾಯಿತಿಯನ್ನು ಒಳಗೊಂಡಿತ್ತು. ಮೂಲ ಆವೃತ್ತಿಯ ಪ್ರಕಾರ, ಮಾಹಿತಿಯನ್ನು ಖಾಸಗಿ ಎಂದು ಪರಿಗಣಿಸಿದ್ದರೂ ಸಹ, ಸಾರ್ವಜನಿಕ ಮಾಹಿತಿ ಅಧಿಕಾರಿ (PIO) ಅದನ್ನು ಬಿಡುಗಡೆ ಮಾಡುವ ಅಧಿಕಾರ ಹೊಂದಿದ್ದರು. ವ್ಯಕ್ತಿಯ ಗೌಪ್ಯತೆಯನ್ನು ರಕ್ಷಿಸುವುದಕ್ಕಿಂತ ಮಾಹಿತಿಯನ್ನು ಹಂಚಿಕೊಳ್ಳುವುದು ಸಾರ್ವಜನಿಕ ಹಿತಾಸಕ್ತಿಗೆ ಹೆಚ್ಚು ಮಹತ್ವದ್ದು ಎಂದು ಅವರು ಭಾವಿಸಿದರೆ, ಮಾಹಿತಿಯನ್ನು ಬಹಿರಂಗಪಡಿಸಬಹುದಾಗಿತ್ತು. ತಿದ್ದುಪಡಿ ಮಾಡಿದ ಸೆಕ್ಷನ್ 8(1)(j) ಈಗ ಯಾವುದೇ “ವೈಯಕ್ತಿಕ ಮಾಹಿತಿ”ಯನ್ನು ಹಂಚಿಕೊಳ್ಳುವುದನ್ನು ಕಟ್ಟುನಿಟ್ಟಾಗಿ ನಿರ್ಬಂಧಿಸುತ್ತದೆ. ಎನ್‌ಸಿಪಿಆರ್‌ಐ ಪ್ರಕಾರ, ಈ ಬದಲಾವಣೆ ಸಾರ್ವಜನಿಕರ ತಿಳಿದುಕೊಳ್ಳುವ ಹಕ್ಕು ವ್ಯಕ್ತಿಯ ಗೌಪ್ಯತೆಯಿಗಿಂತ ಹೆಚ್ಚು ಮುಖ್ಯವೆಂದು ನಿರ್ಧರಿಸುವ ಅಧಿಕಾರವನ್ನು ಸರ್ಕಾರಿ ಅಧಿಕಾರಿಗಳಿಂದ ಕಸಿದುಕೊಳ್ಳುತ್ತದೆ. ಭ್ರಷ್ಟಾಚಾರದ ತನಿಖೆಗಳು ಅಧಿಕಾರಿಗಳ ಆಸ್ತಿ ಬಹಿರಂಗಪಡಿಸುವಿಕೆ, ಸರ್ಕಾರಿ ಟೆಂಡರ್‌ಗಳ ವಿವರಗಳು ಹಾಗೂ ಆಂತರಿಕ ಕಚೇರಿ ಟಿಪ್ಪಣಿಗಳಂತಹ ದಾಖಲೆಗಳ ಮೇಲೆ ಅವಲಂಬಿತವಾಗಿರುತ್ತವೆ. ಈ ದಾಖಲೆಗಳು ಸಾಮಾನ್ಯವಾಗಿ ಕೆಲವು ವೈಯಕ್ತಿಕ ಹೆಸರುಗಳು ಅಥವಾ ವಿವರಗಳನ್ನು ಒಳಗೊಂಡಿರುತ್ತವೆ. “ಸಾರ್ವಜನಿಕ ಹಿತಾಸಕ್ತಿ” ನಿಯಮವನ್ನು ತೆಗೆದುಹಾಕುವುದರಿಂದ, ಮಾಹಿತಿಯು ಸಾರ್ವಜನಿಕ ವ್ಯವಹಾರಕ್ಕೆ ಸಂಬಂಧಪಟ್ಟಿದ್ದರೂ ಸಹ, ಸರ್ಕಾರವು ಅದನ್ನು “ವೈಯಕ್ತಿಕ” ಎಂದು ಉಲ್ಲೇಖಿಸಿ ಮರೆಮಾಡುವ ಸಾಧ್ಯತೆ ಇದೆ ಎಂದು ರಿಪೋರ್ಟರ್ಸ್ ಕಲೆಕ್ಟಿವ್ ವಾದಿಸಿದೆ. ಈ ತಿದ್ದುಪಡಿಯು ಸಂವಿಧಾನ ಉಲ್ಲಂಘನೆ ಎಂದು ಹಲವು ಅರ್ಜಿಗಳ ಮೂಲಕ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆ. ಪತ್ರಿಕೋದ್ಯಮದ ದೃಷ್ಟಿಕೋನದಿಂದ DPDP ಕಾಯ್ದೆ ದಿ ರಿಪೋರ್ಟರ್ಸ್ ಕಲೆಕ್ಟಿವ್ ಫೆಬ್ರವರಿ 16ರಂದು ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ಪ್ರಜಾಪ್ರಭುತ್ವ, ಪಾರದರ್ಶಕತೆ ಹಾಗೂ ತನಿಖಾ ಪತ್ರಿಕೋದ್ಯಮದ ಮೇಲೆ ನೇರ ದಾಳಿ ಎಂದು ಪರಿಗಣಿಸಿ ಸುಪ್ರೀಂ ಕೋರ್ಟ್‌ನಲ್ಲಿ DPDP ಕಾಯ್ದೆಯನ್ನು ಪ್ರಶ್ನಿಸಿದ್ದೇವೆ ಎಂದು ತಿಳಿಸಿದೆ. DPDP ಕಾಯ್ದೆಯು ಪ್ರಸ್ತುತ ರೂಪದಲ್ಲಿ ಪ್ರಜಾಪ್ರಭುತ್ವವನ್ನು ಕುಗ್ಗಿಸುವ ಸಾಧ್ಯತೆ ಹೊಂದಿದೆ. ಸಾರ್ವಜನಿಕ ಹಿತಾಸಕ್ತಿಗಾಗಿ ಡೇಟಾವನ್ನು ಸಂಗ್ರಹಿಸುವ ಅಥವಾ ಪತ್ರಿಕೋದ್ಯಮ ಅಭಿವ್ಯಕ್ತಿಗಳಂತಹ ಸಾರ್ವಜನಿಕ ಉದ್ದೇಶಗಳಿಗಾಗಿ ವೈಯಕ್ತಿಕ ಡೇಟಾವನ್ನು ಪ್ರಕ್ರಿಯೆಗೊಳಿಸುವ ಸಂದರ್ಭಗಳಿಗೆ ಯಾವುದೇ ಸ್ಪಷ್ಟ ವಿನಾಯಿತಿ ಇಲ್ಲ. ಈ ವಿನಾಯಿತಿಯ ಕೊರತೆಯಿಂದ DPDP ಕಾಯ್ದೆಯ ರೂಪುರೇಷೆ ಅಸಂವಿಧಾನಿಕ, ಅಸಮಂಜಸ ಮತ್ತು ಸ್ಪಷ್ಟವಾಗಿ ಅನಿಯಂತ್ರಿತವಾಗಿದೆ ಎಂದು ಅರ್ಜಿಯಲ್ಲಿ ವಾದಿಸಲಾಗಿದೆ. “ಸಾರ್ವಜನಿಕ ಹಿತಾಸಕ್ತಿ” ವಿನಾಯಿತಿ ಇಲ್ಲದಿದ್ದರೆ, ಸುದ್ದಿಗಾಗಿ ಡೇಟಾವನ್ನು ಸಂಗ್ರಹಿಸುವ ವರದಿಗಾರನನ್ನೇ ಕಾನೂನು ಉಲ್ಲಂಘಿಸಿದವನಾಗಿ ಪರಿಗಣಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಮುಂದೆ ಏನಾಗಬಹುದು? ಸುಪ್ರೀಂ ಕೋರ್ಟ್ ವಿವಿಧ ಪ್ರಕರಣಗಳಲ್ಲಿ ಮಾಹಿತಿ ಹಕ್ಕನ್ನು ವಿಧಿ 19 ಮತ್ತು 21ರ ಅವಿಭಾಜ್ಯ ಅಂಗವೆಂದು ಪರಿಗಣಿಸಿದೆ. ಹಿಂದೆ ಅಧಿಕಾರಿಗಳ ಹಣಕಾಸು ದಾಖಲೆಗಳು ಮತ್ತು ಆಸ್ತಿ ಬಹಿರಂಗಪಡಿಸುವಿಕೆ ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದರೆ RTI ಕಾಯ್ದೆಯಡಿ ಹಂಚಿಕೊಳ್ಳಲಾಗುತ್ತಿತ್ತು. ಇದು ಭ್ರಷ್ಟಾಚಾರ ಬಹಿರಂಗಪಡಿಸಲು ಪ್ರಮುಖ ಸಾಧನವಾಗಿತ್ತು. ಆದರೆ ಪ್ರಸ್ತುತ ತಿದ್ದುಪಡಿ ಅಧಿಕಾರಿಗಳಿಗೆ ಈ ದಾಖಲೆಗಳನ್ನು “ವೈಯಕ್ತಿಕ ಮಾಹಿತಿ” ಎಂದು ಉಲ್ಲೇಖಿಸಿ ಮರೆಮಾಡುವ ಅವಕಾಶ ನೀಡುತ್ತದೆ. “ವೈಯಕ್ತಿಕ ಮಾಹಿತಿ”ಯ ಅರ್ಥವನ್ನು ಕಟ್ಟುನಿಟ್ಟಾಗಿ ವ್ಯಾಖ್ಯಾನಿಸುವ ಸುಪ್ರೀಂ ಕೋರ್ಟ್‌ನ ಪ್ರಯತ್ನ ಈ ಸಂಘರ್ಷವನ್ನು ಪರಿಹರಿಸಲು ಆರಂಭಿಕ ಹಂತವಾಗಬಹುದು. ಆದರೆ ಅತ್ಯಂತ ಪರಿಣಾಮಕಾರಿ ಪರಿಹಾರವೆಂದರೆ DPDP ಕಾಯ್ದೆಯಿಂದ ಮಾಡಲಾದ ಬದಲಾವಣೆಗಳನ್ನು ರದ್ದುಗೊಳಿಸಿ, ಸೆಕ್ಷನ್ 8(1)(j) ಅನ್ನು ಅದರ ಮೂಲ ರೂಪಕ್ಕೆ ಹಿಂತಿರುಗಿಸುವುದು. ಮೂಲ ನಿಯಮವು ಸಾರ್ವಜನಿಕರ ತಿಳಿದುಕೊಳ್ಳುವ ಹಕ್ಕು ಮತ್ತು ಅಧಿಕಾರಿಗಳ ಗೌಪ್ಯತೆಯ ನಡುವೆ ಸಮತೋಲನ ಸಾಧಿಸುವಂತೆ ಎಚ್ಚರಿಕೆಯಿಂದ ವಿನ್ಯಾಸಗೊಳಿಸಲಾಗಿತ್ತು. ಅದನ್ನು ಮರುಸ್ಥಾಪಿಸುವುದರಿಂದ ಗೌಪ್ಯತೆ ರಕ್ಷಣೆ ಹಾಗೂ ಪಾರದರ್ಶಕತೆ — ಎರಡನ್ನೂ ಸಮತೋಲನದಲ್ಲಿ ಉಳಿಸಬಹುದು.

ವಾರ್ತಾ ಭಾರತಿ 25 Feb 2026 9:15 pm

ಶೀಘ್ರದಲ್ಲೇ ಕ್ಯಾನ್ಸರ್, ತಾಯಿ-ಮಕ್ಕಳ ಆಸ್ಪತ್ರೆ ಕಾಮಗಾರಿ ಪೂರ್ಣ : ಡಾ.ಶರಣಪ್ರಕಾಶ್‌ ಪಾಟೀಲ್‌

ಕಲಬುರಗಿ: ನಗರದ ಜಿಮ್ಸ್ ಆಸ್ಪತ್ರೆ ಆವರಣದಲ್ಲಿ ಸುಮಾರು 76 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ 210 ಹಾಸಿಗೆಯ ಕ್ಯಾನ್ಸರ್ ಆಸ್ಪತ್ರೆಯ ವಿಸ್ತರಣಾ ಕಟ್ಟಡವು ಆಗಸ್ಟ್ ಮಾಹೆಗೆ ಮತ್ತು 92 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ 200 ಹಾಸಿಗೆಯ ತಾಯಿ-ಮಕ್ಕಳ ಆಸ್ಪತ್ರೆ ಬರುವ ಅಕ್ಟೋಬರ್ ಮಾಹೆಗೆ ಕಟ್ಟಡ ಕಾಮಗಾರಿ ಪೂರ್ಣಗೊಳ್ಳಲಿವೆ ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಜೀವನೋಪಾಯ ಹಾಗೂ ಉದ್ಯಮಶೀಲತೆ ಸಚಿವ ಡಾ.ಶರಣಪ್ರಕಾಶ್‌ ಪಾಟೀಲ್‌ ತಿಳಿಸಿದರು. ಬುಧವಾರ ಜಿಮ್ಸ್ ಆಸ್ಪತ್ರೆ ಆವರಣದಲ್ಲಿ ನಿರ್ಮಿಸಲಾಗುತ್ತಿರುವ ಕ್ಯಾನ್ಸರ್ ಆಸ್ಪತ್ರೆ, ತಾಯಿ-ಮಕ್ಕಳ ಆಸ್ಪತ್ರೆ, ಸುಟ್ಟು ಗಾಯಗಳ ಘಟಕ, ತೀವ್ರ ನಿಗಾ ಘಟಕ ಕಟ್ಟಡ ಕಾಮಗಾರಿಗಳನ್ನು ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಮಗಾರಿ ಗುಣಮಟ್ಟ ಕಾಯ್ದುಕೊಳ್ಳುವುದರ ಜೊತೆಗೆ ಕಾಲಾವಧಿವರೆಗೆ ಕಾಯದೆ ಸಾಧ್ಯವಾದಷ್ಟು ಬೇಗ ಕಾಮಗಾರಿ ಮುಗಿಸಬೇಕು ಎಂದು ಗುತ್ತಿಗೆದಾರನಿಗೆ ಸೂಚನೆ ನೀಡಲಾಗಿದೆ ಎಂದರಲ್ಲದೆ ಈಗಾಗಲೆ ಇರುವ ಕ್ಯಾನ್ಸರ್ ಆಸ್ಪತ್ರೆಯ 90 ಹಾಸಿಗೆ ಜೊತೆಗೆ 210 ಹಾಸಿಗೆ ಸೇರಿದಲ್ಲಿ 300 ಹಾಸಿಗೆ ಸಾಮರ್ಥ್ಯದೊಂದಿಗೆ ಕಲಬುರಗಿ ಕ್ಯಾನ್ಸರ್ ಆಸ್ಪತ್ರೆ ಉತ್ತರ ಕರ್ನಾಟಕದ ಸೆಂಟರ್ ಆಗಿ ಗುರುತಿಸಿಕೊಳ್ಳಲಿದೆ ಎಂದರು. 22 ಕೋಟಿ ರೂ. ವೆಚ್ಚದಲ್ಲಿ ಸ್ಥಾಪಿಸಲಾಗುತ್ತಿರುವ 50 ಹಾಸಿಗೆಯ ತೀವ್ರ ನಿಗಾ ಘಟಕ ಕಾಮಗಾರಿ ಸಹ ಅಕ್ಟೋಬರ್‌ನಲ್ಲಿ ಮುಗಿಯಲಿದೆ. 9.80 ಕೋಟಿ ರೂ. ಮೊತ್ತದ ಸಿವಿಲ್ ಕಾಮಗಾರಿ ಮತ್ತು 5 ಕೋಟಿ ರೂ. ವೈದ್ಯಕೀಯ ಉಪಕರಣಗಳೊಂದಿಗೆ ಸ್ಥಾಪನೆಯಾಗುತ್ತಿರುವ 30 ಹಾಸಿಗೆಯ ಸುಟ್ಟ ಗಾಯ ಘಟಕ ಬಹುತೇಕ ಕಾಮಗಾರಿ ಮುಗಿದಿದ್ದು, ಮಂದಿನ ಎರಡು ತಿಂಗಳಿನಲ್ಲಿ ಇದನ್ನು ಲೋಕಾರ್ಪಣೆಗೊಳಿಸಲಾಗುವುದು ಎಂದರು. ಇದಲ್ಲದೆ ಗುಲ್ಬರ್ಗಾ ವಿ.ವಿ. ಆವರಣದಲ್ಲಿ 92 ಕೋಟಿ ರೂ. ವೆಚ್ಚದಲ್ಲಿ 150 ಹಾಸಿಗೆಯ ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆಯ ಶಾಖೆ ತೆರೆಯಲಾಗುತ್ತಿದ್ದು, ಕೆಲಸ ಪ್ರಾರಂಭವಾಗಿದೆ. 50 ಕೋಟಿ ರೂ. ವೆಚ್ಚದಲ್ಲಿ 50 ಹಾಸಿಗೆಯ ಇನ್ಸ್ಟಿಟ್ಯೂಟ್ ಆಫ್ ಡಯಾಬೆಟಾಲೋಜಿ ಸೆಂಟರ್ ಸ್ಥಾಪಿಸಲಾಗುತ್ತಿದೆ. 100 ಕೋಟಿ ರೂ. ವೆಚ್ಚದಲ್ಲಿ 100 ಹಾಸಿಗೆ ಸಾಮರ್ಥ್ಯದ ನಿಮ್ಹಾನ್ಸ್ ಶಾಖೆ ನಿರ್ಮಾಣಕ್ಕೆ ಟೆಂಡರ್ ಪ್ರಕ್ರಿಯೆ ಮುಕ್ತಾಯವಾಗಿದ್ದು, ಇನ್ನಷ್ಟೆ ಕೆಲಸ ಆರಂಭವಾಗಬೇಕಿದೆ. ಒಟ್ಟಾರೆಯಾಗಿ ಕಲಬುರಗಿ ನಗರವರ‍್ನು ಮೆಡಿಕಲ್ ಹಬ್ ಮಾಡುವ ನಿಟ್ಟಿನಲ್ಲಿ ಬಡವರಿಗೆ ಏನೆಲ್ಲ ಮಾಡಲು ಸಾಧ್ಯವೆ ಎಲ್ಲಾ ವೈದ್ಯಕೀಯ ಸವಲತ್ತು ತರುವಂತ ಕೆಲಸ ನಮ್ಮ ಸರ್ಕಾರ ಮಾಡುತ್ತಿದೆ ಎಂದರು. ಗುಲ್ಬರ್ಗಾ ವಿ.ವಿ. ಆವರಣದಲ್ಲಿ ಕೌಶಲ್ಯಾಭಿವೃದ್ಧಿ ಇಲಾಖೆಯಡಿಯಲ್ಲಿ 120 ಕೊಟಿ ರೂ. ವೆಚ್ಚದಲಿ ಮಲ್ಟಿ ಸ್ಕಿಲ್ ಡೆವಲೆಪಮೆಂಟ್ ಸೆಂಟರ್ ಸ್ಥಾಪಿಸಲಾಗುತ್ತಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. ಇದಲ್ಲದೆ ನಗರದಲ್ಲಿ 20 ಕೋಟಿ ರೂ. ವೆಚ್ಚದಲ್ಲಿ ಕಲಬುರಗಿ ಐ.ಟಿ.ಐ ಉನ್ನತಿಕರಣ ಕಾಮಗಾರಿ ಸಹ ಪ್ರಗತಿಯಲ್ಲಿದೆ ಎಂದು ಸಚಿವ ಡಾ.ಶರಣಪ್ರಕಾಶ್‌ ಪಾಟೀಲ್‌ ಮಾಹಿತಿ ನೀಡಿದರು. ನಮ್ಮ ಸರ್ಕಾರ ಕೇವಲ ಗ್ಯಾರಂಟಿ ಯೋಜನೆಗಳಷ್ಟೆ ಜಾರಿಗೊಳಿಸಿಲ್ಲ. ಅಭಿವೃದ್ಧಿ ಕಾಮಗಾರಿಗಳನ್ನು ಜೊತೆ ಜೊತೆಯಲ್ಲಿ ತೆಗೆದುಕೊಂಡು ಹೋಗುತ್ತಿದೆ. ಇದ್ಕೆ ಸಾಕ್ಷಿ ಕಲಬುರಗಿ ಜಿಲ್ಲೆಯ ಈ ಕೆಲಸ ಕಾಮಗಾರಿಗಳೆ. ಹಣ ಇಲ್ಲದಿದ್ದರೆ ಇಷ್ಟೆಲ್ಲ ಕೆಲಸ ಕಾರ್ಯ ನಡೆಯುವುದಾದರು ಹೇಗೆ ಎಂದು ಸುದ್ದಿಗಾರರನ್ನು ಮರು ಪ್ರಶ್ನಿಸಿದ ಅವರು, ತಮ್ಮ ವೈದ್ಯಕೀಯ ಇಲಾಖೆಯಲ್ಲಿ ಯಾವುದೇ ಬಿಲ್ಲು ಪೆಂಡಿಂಗ್ ಇಲ್ಲ ಎಂದು ಸ್ಪಷ್ಟಪಡಿಸಿದರು. ಜಿಲ್ಲೆಗೊಂದು ಮೆಡಿಕಲ್ ಕಾಲೇಜು, ಟ್ರಾಮಾ ಸೆಂಟರ್ : ರಾಜ್ಯ ಸರ್ಕಾರವು ಮುಂದಿನ ಐದು ವರ್ಷದಲ್ಲಿ ಜಿಲ್ಲೆಗೊಂದು ಮೆಡಿಕಲ್ ಕಾಲೇಜು, ಕ್ಯಾನ್ಸರ್ ಆಸ್ಪತ್ರೆ, ಟ್ರಾಮಾ ಸೆಂಟರ್, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ತೆರೆಯಲು ಈಗಾಗಲೆ ನಿರ್ಧರಿಸಿದ್ದು, ಹಂತ ಹಂತವಾಗಿ ಇದನ್ನು ಜಾರಿಗೆ ತರಲಾಗುತ್ತಿದೆ. ಹಿಂದೆ ನಮ್ಮ ಸರ್ಕಾರದ ಅವಧಿಯಲ್ಲಿಯೆ ಕಲಬುರಗಿಯಲ್ಲಿ ಮೆಡಿಕಲ್ ಕಾಲೇಜು, ಟ್ರಾಮಾ ಸೆಂಟರ್ ತರಲಾಗಿತ್ತು. ಇತ್ತೀಚೆಗೆ ಸೂಪರ್ ಸ್ಪೆಷಾಲಿಟಿ ಲೋಕಾರ್ಪಣೆ ಮಾಡಿದ್ದೇವೆ, ಇದೀಗ ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣದ ಹಂತದಲ್ಲಿದೆ. ಕನಕಪುರ, ರಾಮನಗರದಲ್ಲಿ ಇದೇ ವರ್ಷ ಹೊಸದಾಗಿ ಮೆಡಿಕಲ್ ಕಾಲೇಜು ಪ್ರಾರಂಭಿಸುತ್ತಿದ್ದೇವೆ. 330 ಕೋಟಿ ರೂ. ವೆಚ್ಚದಲ್ಲಿ ಬಳ್ಳಾರಿಯಲ್ಲಿ ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣಕ್ಕೆ ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಬರುವಂತಹ ಆಯವ್ಯಯದಲ್ಲಿ ಇನ್ನಷ್ಟು ಯೋಜನೆಗಳು ಜಿಲ್ಲೆಗೆ ಘೋಷಣೆ ಮಾಡಲು ಪ್ರಸ್ತಾವನೆ ಸಹ ಸಲ್ಲಿಸಲಾಗಿದೆ ಎಂದು ಡಾ.ಶರಣಪ್ರಕಾಶ್‌ ಪಾಟೀಲ್‌ ತಿಳಿಸಿದರು. ಜಿಮ್ಸ್ ನಿರ್ದೇಶಕ ಡಾ.ಉಮೇಶ ಎಸ್.ಆರ್, ವೈದ್ಯಕೀಯ ಅಧೀಕ್ಷಕ ಡಾ.ಶಿವಕುಮಾರ ಸಿ.ಆರ್., ಜಿಲ್ಲಾ ಆಸ್ಪತ್ರೆಯ ಸರ್ಜನ್ ಡಾ.ಅಸ್ನಾ ರುಕಿಯಾ ರಬಾ ಸೇರಿದಂತೆ ಇನ್ನಿತರ ಅಧಿಕಾರಿಗಳು ಇದ್ದರು. ತದನಂತರ ಸಚಿವ ಡಾ.ಶರಣಪ್ರಕಾಶ ಪಾಟೀಲ ಅವರು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಪ್ರಗತಿ ಪರಿಶೀಲನೆ ನಡೆಸಿದರು.

ವಾರ್ತಾ ಭಾರತಿ 25 Feb 2026 9:13 pm

ಬಾರಾಮತಿ ವಿಮಾನ ದುರಂತ | ಎಫ್‌ಐಆರ್ ದಾಖಲಿಸಲು ಪೊಲೀಸರು ನಿರಾಕರಣೆ: ರೋಹಿತ್ ಪವಾರ್ ಆರೋಪ

ಮುಂಬೈ, ಫೆ. 25: ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರು ನಿಧನರಾದ ವಿಮಾನ ಅಪಘಾತಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸಲು ಮುಂಬೈ ಪೊಲೀಸರು ನಿರಾಕರಿಸಿದ್ದಾರೆ ಎಂದು ಎನ್‌ಸಿಪಿ (ಎಸ್‌ಪಿ) ಶಾಸಕ ರೋಹಿತ್ ಪವಾರ್ ಬುಧವಾರ ಆರೋಪಿಸಿದ್ದಾರೆ. ಈ ನಿರಾಕರಣೆ ಅಪಘಾತದ ಸುತ್ತಲಿನ ಅನುಮಾನವನ್ನು ಇನ್ನಷ್ಟು ಹೆಚ್ಚಿಸಿದೆ. ಸರಕಾರ ಹಾಗೂ ಸರಕಾರದ ವ್ಯವಸ್ಥೆ ಯಾರನ್ನೋ ರಕ್ಷಿಸುವಂತೆ ಕಾಣುತ್ತಿದೆ ಎಂದು ಅವರು ತಿಳಿಸಿದ್ದಾರೆ. ಸಾಮಾಜಿಕ ವೇದಿಕೆಯಲ್ಲಿ ಪೋಸ್ಟ್ ಮಾಡಿದ ಸಂದೇಶದಲ್ಲಿ ರೋಹಿತ್ ಪವಾರ್, ‘‘ಅಜಿತ್‌ದಾದಾ ಅವರ ವಿಮಾನ ಅಪಘಾತದ ಕುರಿತು ಸೂಕ್ತ ಕ್ರಮಕ್ಕಾಗಿ ಕಾಯುತ್ತಿರುವಾಗ, ನಿನ್ನೆ ಬಂದ ಡಿಜಿಸಿಎ ವರದಿ ವಿಎಸ್‌ಆರ್ ಕಂಪೆನಿಯ ನಿರ್ಲಕ್ಷ್ಯದಿಂದ ಈ ಅಪಘಾತ ಸಂಭವಿಸಿದೆ ಎಂದು ಹೇಳಿದೆ’’ ಎಂದು ತಿಳಿಸಿದ್ದಾರೆ. ಆದುದರಿಂದ ಈ ಸಂಬಂಧ ಯಾವುದೇ ಎಫ್‌ಐಆರ್ ದಾಖಲಾಗಿಲ್ಲ. ಈ ಹಿನ್ನೆಲೆಯಲ್ಲಿ ತಾನು ಪಕ್ಷದ ಎಂಎಲ್‌ಸಿ ಅಮೋಲ್ ವಿಟ್ಕಾರಿ, ಇದ್ರೀಸ್ ನಾಯ್ಕ್ವಾಡಿ, ಶಾಸಕ ಸಂದೀಪ್ ಕ್ಷೀರನಗರ್ ಅವರೊಂದಿಗೆ ದಕ್ಷಿಣ ಮುಂಬೈನ ಮರೈನ್ ಡ್ರೈವ್ ಪೊಲೀಸ್ ಠಾಣೆಗೆ ತೆರಳಿ ಬಿಎನ್‌ಎಸ್ ನಿಯಮದ ಅಡಿಯಲ್ಲಿ ಎಫ್‌ಐಆರ್ ದಾಖಲಿಸುವಂತೆ ಒತ್ತಾಯಿಸಿದ್ದೇನೆ ಎಂದು ಹೇಳಿದ್ದಾರೆ.  

ವಾರ್ತಾ ಭಾರತಿ 25 Feb 2026 9:09 pm

ಮಕ್ಕಳ ಆರೈಕೆ ರಜೆ ಮಗುವಿನ ಹಕ್ಕು, ಆದ್ಯತೆ ಮೇರೆಗೆ ಮಂಜೂರು ಮಾಡಬೇಕು: ಹೈಕೋರ್ಟ್

ಬೆಂಗಳೂರು: ಮಕ್ಕಳ ಆರೈಕೆ ರಜೆ (ಸಿಸಿಎಲ್‌) ಎನ್ನುವುದು ಮಗುವಿನ ಹಕ್ಕು. ಬೇರೆ ಎಲ್ಲ ರಜೆಗಳನ್ನು ನೀಡುವ ವಿವೇಚನಾ ಅಧಿಕಾರ ಉದ್ಯೋಗದಾತರಿಗೆ ಇದೆಯಾದರೂ, ಸಿಸಿಎಲ್‌ ಕೋರಿಕೆ ಬಂದಾಗ ನಿರಾಕರಿಸದೆ ಆದ್ಯತೆ ಮೇರೆಗೆ ರಜೆ ಮಂಜೂರು ಮಾಡಬೇಕು ಎಂದು ಆದೇಶಿಸಿರುವ ಹೈಕೋರ್ಟ್, ಕೇಂದ್ರ ಸರ್ಕಾರದ ಸೆಂಟರ್‌ ಫಾರ್‌ ಡೆವಲಪಮೆಂಟ್‌ ಆಫ್‌ ಅಡ್ವಾನ್ಸ್ಡ್ ಕಂಪ್ಯೂಟಿಂಗ್‌ನಲ್ಲಿ (ಸಿಡಾಕ್) ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಉದ್ಯೋಗಿಯೊಬ್ಬರಿಗೆ ಸಿಸಿಎಲ್ ಮಂಜೂರು ಮಾಡುವಂತೆ ನಿರ್ದೇಶಿಸಿದೆ‌. ಕವಿತಾ ವಡ್ಡೆ ಎಂಬವರಿಗೆ ಮಕ್ಕಳ ಆರೈಕೆ ರಜೆ ನೀಡುವಂತೆ ಕೇಂದ್ರೀಯ ಆಡಳಿತ ನ್ಯಾಯಮಂಡಳಿ (ಸಿಎಟಿ) ಫೆಬ್ರವರಿ 5ರಂದು ನೀಡಿದ್ದ ಆದೇಶ ಪ್ರಶ್ನಿಸಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ವಜಾಗೊಳಿಸಿರುವ ನ್ಯಾಯಮೂರ್ತಿ ಎಸ್‌.ಜಿ.ಪಂಡಿತ್‌ ಹಾಗೂ ನ್ಯಾಯಮೂರ್ತಿ ಕೆ.ವಿ. ಅರವಿಂದ್‌ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಆದೇಶ ಮಾಡಿದೆ. ತಾಯಿಯ ರಜೆ ನಿರಾಕರಿಸಿದರೆ ಅದು ಮಕ್ಕಳ ಮೇಲೆ ಒತ್ತಡವಾಗಬಹುದು. ಆದ್ದರಿಂದ, ಸಿಸಿಎಲ್‌ ಮಗುವಿನ ಹಕ್ಕೆಂದು ಅಭಿಪ್ರಾಯಪಟ್ಟು ಸಿಎಟಿ ಆದೇಶವನ್ನು ಎತ್ತಿಹಿಡಿದಿರುವ ನ್ಯಾಯಪೀಠ, ಕವಿತಾ ವಡ್ಡೆ ಅವರಿಗೆ ಫೆಬ್ರವರಿ 6ರಿಂದ ಅನ್ವಯವಾಗುವಂತೆ ಮೇ 20ರವರೆಗೆ ಸಿಸಿಎಲ್ ನೀಡಲು ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಿದೆ. ಉದ್ಯೋಗಿಗಳಿಗೆ ಇತರ ಎಲ್ಲ ರಜೆಗಳನ್ನು ಮಂಜೂರು ಮಾಡುವುದು ಅಥವಾ ಬಿಡುವುದು ಉದ್ಯೋಗದಾತರ ವಿವೇಚನೆಗೆ ಬಿಟ್ಟಿದ್ದು. ಆದರೆ, ಮಕ್ಕಳ ಆರೈಕೆ ರಜೆಯ ವಿಚಾರ ಬಂದಾಗ ಅದರಲ್ಲಿ ವಿವೇಚನೆ ಅಧಿಕಾರದ ಪ್ರಶ್ನೆಯೇ ಇಲ್ಲ. ಅದು ಮಕ್ಕಳ ಆರೈಕೆಗೆಂದೇ ಮೀಸಲಿರುವುದರಿಂದ ಅದನ್ನು ನೀಡಲೇಬೇಕಾಗುತ್ತದೆ. ಮಕ್ಕಳಿಗೆ ತಾಯಿಯ ಆರೈಕೆ ಬೇಕಾಗುತ್ತದೆ. ಆದ್ದರಿಂದ, ತಾಯಿ ಸಿಸಿಎಲ್‌ ಅನ್ನು ತನ್ನ ಹಕ್ಕನ್ನಾಗಿ ಕೋರಬಹುದು ಎಂದು ನ್ಯಾಯಪೀಠ ಆದೇಶಿಸಿದೆ. ಪ್ರಕರಣವೇನು? ಕೇಂದ್ರ ಸರ್ಕಾರಿ ನಿಯಮದಲ್ಲಿ ಅಪ್ರಾಪ್ತ ಮಕ್ಕಳ ಆರೈಕೆಗಾಗಿ ಸೇವಾವಧಿಯಲ್ಲಿ 730 ದಿನ ಸಿಸಿಎಲ್‌ ರಜೆ ಪಡೆಯಲು ಮಹಿಳಾ ಉದ್ಯೋಗಿ ಮತ್ತು ಒಂಟಿ ಪೋಷಕ ಪುರುಷ ಉದ್ಯೋಗಿಗೆ ಅವಕಾಶವಿದೆ. ಅದರಂತೆ, ಕೇಂದ್ರ ಸರ್ಕಾರದ ಅಧೀನದಲ್ಲಿರುವ ಸಿಡಾಕ್‌ನಲ್ಲಿ ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಕವಿತಾ ವಡ್ಡೆ ತಮ್ಮ ಮಗನ 10ನೇ ತರಗತಿ ಪರೀಕ್ಷೆಗೆ ನೆರವಾಗಲು 5 ತಿಂಗಳು ಸಿಸಿಎಲ್‌ ಕೋರಿದ್ದರು. ಆದರೆ, ಆ ಮನವಿ ನಿರಾಕರಿಸಿ ಕೇವಲ 18 ದಿನ ಮಾತ್ರ ರಜೆ ನೀಡಲಾಗಿತ್ತು. ಇದನ್ನು ಕವಿತಾ ಸಿಎಟಿಯಲ್ಲಿ ಪ್ರಶ್ನಿಸಿದ್ದರು. ವಿಚಾರಣೆ ನಡೆಸಿದ್ದ ಸಿಎಟಿಯ ನ್ಯಾಯಾಂಗ ಸದಸ್ಯೆ ಎಸ್‌. ಸುಜಾತಾ ಹಾಗೂ ಆಡಳಿತ ಸದಸ್ಯ ಡಾ. ಸಂಜೀವ್‌ ಕುಮಾರ್‌ ಅವರಿದ್ದ ಪೀಠ ಕವಿತಾ ಅವರಿಗೆ ಸಿಸಿಎಲ್‌ ರಜೆ ನೀಡಲೇಬೇಕೆಂದು ಫೆ.5ರಂದು ಆದೇಶಿಸಿತ್ತು. ಅಲ್ಲದೆ, ಸಂಸ್ಥೆಯಲ್ಲಿ ಮಾನವ ಸಂಪನ್ಮೂಲದ ಕೊರತೆ ಇದೆ ಎಂಬ ಸಂಸ್ಥೆಯ ವಾದವನ್ನು ಒಪ್ಪಲಾಗದು. ಸಿಸಿಎಲ್‌ ಇರುವುದೇ ಮಕ್ಕಳ ಆರೈಕೆಗೆ, ಅರ್ಜಿದಾರರು ಎಲ್ಲ ರೀತಿಯಲ್ಲೂ ಸಿಸಿಎಲ್‌ ಪಡೆಯಲು ಅರ್ಹರಾಗಿದ್ದಾರೆ. ಅರ್ಜಿದಾರರ ಪುತ್ರ 10ನೇ ತರಗತಿಯಲ್ಲಿ ಓದುತ್ತಿದ್ದು, ಇದು ಮಗುವಿನ ಭವಿಷ್ಯದ ದೃಷ್ಟಿಯಿಂದ ನಿರ್ಣಾಯಕವಾಗಿದೆ. ಆಡಳಿತಾತ್ಮಕ ತೊಂದರೆ ಮತ್ತು ಮಾನವ ಸಂಪನ್ಮೂಲ ಕೊರತೆ ಕಾರಣಗಳಿಂದ ಸಂವಿಧಾನ ಬದ್ಧ ಹಕ್ಕನ್ನು ಕಸಿದುಕೊಳ್ಳಲಾಗದು ಎಂದು ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಕೇಂದ್ರ ಸರ್ಕಾರ ಹೈಕೋರ್ಟ್‌‌ಗೆ ಮೇಲ್ಮನವಿ ಸಲ್ಲಿಸಿತ್ತು. ಕವಿತಾ ಪರ ಪರ ವಾದ ಮಂಡಿಸಿದ್ದ ವಕೀಲ ಕೆ. ಸತೀಶ್‌ ಭಟ್‌, ಅಡ್ವಾನ್ಸಿಂಗ್‌ ಕಂಪ್ಯೂಟಿಂಗ್‌ ಕೇಂದ್ರದ ಉದ್ಯೋಗಿಯಾರುವ ಕವಿತಾ ಅವರು 5 ತಿಂಗಳು ಸಿಸಿಎಲ್‌ ಕೋರಿದರೆ ಕೇವಲ 18 ದಿನಗಳ ರಜೆ ನಿಡಲಾಗಿದೆ. ಇದು ಕೇಂದ್ರೀಯ ನಾಗರಿಕ ಸೇವಾ ರಜೆ ನಿಯಮ 43ಸಿ ಉಲ್ಲಂಘನೆಯಾಗಿದ್ದು, ಅರ್ಜಿದಾರರ ಹಕ್ಕಿಗೆ ಧಕ್ಕೆಯಾಗಿದೆ. ಸದ್ಯ ಪರೀಕ್ಷೆ ನಡೆಯುತ್ತಿರುವುದರಿಂದ ಅರ್ಜಿದಾರರು ರಜೆಯ ವಿಚಾರಕ್ಕೆ ಒತ್ತಡದಲ್ಲಿದ್ದಾರೆ. ಅಪ್ರಾಪ್ತ ಮಕ್ಕಳ ಹಕ್ಕು ರಕ್ಷಿಸಲು ಈ ನಿಯಮವನ್ನು ರೂಪಿಸಲಾಗಿದೆ. ಮಗುವಿನ ಅಭಿವೃದ್ದಿಗೆ ಶಿಕ್ಷಣದ ಪಾತ್ರ ಪ್ರಮುಖವಾಗಿದೆ. ಆದ್ದರಿಂದ, ಫೆಬ್ರವರಿ 6 ರಿಂದ ಮೇ 20ರವರೆಗೆ ರಜೆ ನೀಡಲು ಸಿಎಟಿ ಆದೇಶಿಸಿತ್ತು ಎಂದು ನ್ಯಾಯಪೀಠಕ್ಕೆ ವಿವರಿಸಿದ್ದರು.

ವಾರ್ತಾ ಭಾರತಿ 25 Feb 2026 9:08 pm

ನಾಟಕಗಳು ಸಮಾಜವನ್ನು ಎಚ್ಚರಿಸುತ್ತವೆ: ತಲ್ಲೂರು ಶಿವರಾಮ ಶೆಟ್ಟಿ

ಉಡುಪಿ, ಫೆ.25: ತಪ್ಪು ಯಾವುದು, ಸರಿ ಯಾವುದು ಎಂದು ತಿಳಿಸಿ ಕೊಡುವ ನಾಟಕಗಳು ಸಮಾಜವನ್ನು ಸದಾ ಎಚ್ಚರಿಸುತ್ತಿರುತ್ತವೆ. ಸರಿದಾರಿಯಲ್ಲಿ ನಡೆಯಲು ಬೆಳಕು ತೋರುತ್ತವೆ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ತಿಳಿಸಿದ್ದಾರೆ. ಸುಮನಸಾ ಕೊಡವೂರು ಸಾಂಸ್ಕೃತಿಕ ಸಂಘಟನೆಯ ನಾಟಕೋತ್ಸವ ರಂಗಹಬ್ಬ-14ರ ನಾಲ್ಕನೇ ದಿನ ಬುಧವಾರ ನಡೆದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು. ಯಾವುದೇ ಸಂಘಟನೆಯು ಅದರ ಸದಸ್ಯರ ಒಗ್ಗಟ್ಟಿನ ಆಧಾರದಲ್ಲಿ ಮುಂದುವರಿಯುತ್ತದೆ ಮತ್ತು ಬೆಳೆಯುತ್ತದೆ. ಒಗ್ಗಟ್ಟಿಲ್ಲದೇ ಹೋದರೆ ಬೆಳೆಯಲು ಸಾಧ್ಯವಿಲ್ಲ. ಸಂಘಟನೆ ಮಾಡುವುದು ಯಾವಾಗಲೂ ಕಷ್ಟದ ವಿಚಾರ. ಶ್ರಮವಹಿಸುವ ಸದಸ್ಯರು ಇರಬೇಕು. ಹಣ ಬೇಕು. ಪ್ರೇಕ್ಷಕರ ಪ್ರೋತ್ಸಾಹವೂ ಇರಬೇಕು. ಆಗ ಮಾತ್ರ ಸಂಘ ಸಂಸ್ಥೆಗಳು ಯಶಸ್ವಿಯಾಗಲು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು. ರಂಗಸಾಧಕ ಗೌರವ ಸ್ವೀಕರಿಸಿದ ಯಕ್ಷಗುರು ನಿತ್ಯಾನಂದ ಶೆಟ್ಟಿಗಾರ್ ಮಾತನಾಡಿ, ತುಳುಕೂಟದವರು ನಡೆಸುವ ತುಳು ನಾಟಕ ಸ್ಪರ್ಧೆಯಿಂದಾಗಿ ಅನೇಕ ತಂಡಗಳು ಉಳಿದು ಬೆಳೆದಿವೆ. ತುಳುನಾಡಿನಲ್ಲಿರುವ ಕಲೆ ಬೇರೆಲ್ಲೂ ಸಿಗುವುದಿಲ್ಲ. ಅಭಿಮಾನಿಗಳ ಪ್ರೋತ್ಸಾಹದಿಂದ ಕಲಾವಿದರು ಬೆಳೆದಿದ್ದಾರೆ ಎಂದು ಹೇಳಿದರು. ಮಲ್ಪೆ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಗೋಪಾಲ ಸಿ.ಬಂಗೇರ ಮಾತನಾಡಿ, ನಾಟಕ ಅಂದರೆ ಮನರಂಜನೆ ಮಾತ್ರವಲ್ಲ, ನಮ್ಮ ಬದುಕಿನ ಆಗುಹೋಗುಗಳನ್ನು ದುಃಖ ದುಮ್ಮಾನಗಳನ್ನು, ಸುಖ ಕಷ್ಟಗಳನ್ನು, ಪ್ರೀತಿ ವಿರಹಗಳನ್ನು ಬಿಂಬಿಸುವ ವೇದಿಕೆ. ಸಿನಿಮಾ ತಾರೆಯರಿಗಿಂತ ನಾಟಕ ಕಲಾವಿದರ ಶ್ರಮ ಅಪಾರವಾದುದು. ನಾಟಕ ಕಲೆ ಶ್ರೇಷ್ಠ ಕಲೆ. ಯುವಜನರು ಇದರಲ್ಲಿ ಇನ್ನಷ್ಟು ತೊಡಗಿಸಿಕೊಳ್ಳಬೇಕು ಎಂದು ಹೇಳಿದರು. ನಗರಸಭೆಯ ಮಾಜಿ ಸದಸ್ಯೆ ರಶ್ಮಿ ಚಿತ್ತರಂಜನ್ ಭಟ್, ಡೆಂಟಾಕೇರ್ ಉಡುಪಿಯ ಡಾ.ವಿಜಯೇಂದ್ರ ಮಾತನಾಡಿ ದರು. ಸೌಹಾರ್ದ ಸಂಘ ನಿಯಮಿತದ ಅಧ್ಯಕ್ಷ ಬಿ.ಜಿ.ಸುಬ್ಬರಾವ್, ಮಲ್ಪೆ ಮತ್ಸ್ಯ ರಾಜ್ ಗ್ರೂಪ್‌ನ ಅಭಿನಂದನ್ ಕೆ.ಕೋಟ್ಯನ್, ಸುಮನಸಾ ಕೊಡವೂರು ಸಾಂಸ್ಕೃತಿಕ ಸಂಘಟನೆಯ ಅಧ್ಯಕ್ಷ ಪ್ರಕಾಶ್ ಜಿ.ಕೊಡವೂರು ಉಪಸ್ಥಿತರಿದ್ದರು. ವಿದ್ದು ಉಚ್ಚಿಲ್ ಸ್ವಾಗತಿಸಿದರು. ರಾಗಿಣಿ ಹರೀಶ್ ವಂದಿಸಿದರು, ಕಾರ್ತಿಕ್ ಪ್ರಭು, ಸೌಭಾಗ್ಯ ತಂತ್ರಿ ಕಾರ್ಯಕ್ರಮ ನಿರೂಪಿಸಿದರು.

ವಾರ್ತಾ ಭಾರತಿ 25 Feb 2026 9:07 pm

ಉಡುಪಿ ನಗರಸಭೆ ತೆರಿಗೆ ಪಾವತಿಯಲ್ಲಿ ಅಕ್ರಮ: ತನಿಖೆಗೆ ಆಗ್ರಹಿಸಿ ಡಿಸಿಗೆ ಮನವಿ

ಉಡುಪಿ, ಫೆ.25: ಉಡುಪಿ ನಗರಸಭೆಯ ತೆರಿಗೆ ಪಾವತಿ ರಶೀದಿಯಲ್ಲಿ ನಡೆದ ಅಕ್ರಮದ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಆಗ್ರಹಿಸಿ ಬಿಜೆಪಿ ಉಡುಪಿ ನಗರ ವತಿಯಿಂದ ಉಡುಪಿ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಅವರಿಗೆ ಮನವಿ ಸಲ್ಲಿಸಲಾಯಿತು. ಉಡುಪಿ ನಗರಸಭೆಯಲ್ಲಿ ತೆರಿಗೆ ವಂಚನೆ ಪ್ರಕರಣ ಬೆಳಕಿಗೆ ಬಂದಿದ್ದು, ನಗರಸಭೆಯ ಪೌರಾಯುಕ್ತರು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವುದು ತಿಳಿದು ಬಂದಿದೆ. ಮೇಲ್ನೋಟಕ್ಕೆ ಆರೋಪಿ ಗಳೆಂದು ಕಂಡು ಬಂದಿರುವ ಮೂರು ವ್ಯಕ್ತಿಗಳನ್ನು ಬಂಧಿಸಲಾಗಿದ್ದು, ತೆರಿಗೆ ಪಾವತಿ ಚಲನ್‌ಗಳಿಗೆ ನಕಲಿ ಬ್ಯಾಂಕ್ ಸೀಲ್ ಬಳಸಿರುವ ವಿಚಾರ ಮಾಧ್ಯಮಗಳಲ್ಲಿ ವರದಿಯಾಗಿರುವುದು ಸಾರ್ವಜನಿಕರಲ್ಲಿ ಗೊಂದಲ ಹಾಗೂ ಸಂಶಯ ಮೂಡಿಸಿದೆ. ದಿನಂಪ್ರತಿ ಇಂತಹ ನಕಲಿ ರಶೀದಿ ಪ್ರಕರಣಗಳು ಒಂದೊಂದಾಗಿ ಬೆಳಕಿಗೆ ಬರುತ್ತಿವೆ. ಉಡುಪಿ ನಗರ ಸಭೆ ತನ್ನದೇ ಆದ ಘನತೆ, ಗೌರವ ಹಾಗೂ ಹಿರಿಮೆಯನ್ನು ಹೊಂದಿದ್ದು ಇಂತಹ ಪ್ರಕರಣಗಳಿಂದ ತೆರಿಗೆದಾರರು ಆತಂಕಕ್ಕೆ ಒಳಗಾಗಿರುವುದಲ್ಲದೆ ನಾಗರಿಕರು ತಲೆ ತಗ್ಗಿಸುವಂತಾಗಿದೆ. ಉಡುಪಿ ನಗರಸಭೆಯಲ್ಲಿ ಸಾರ್ವಜನಿಕರ ಹಣ ದುರುಪಯೋಗದ ಬಹಳಷ್ಟು ಸುದ್ದಿಗಳು ಕೇಳಿ ಬರುತ್ತಿವೆ. ಈ ಪ್ರಕರಣವು ಗಂಭೀರ ಸ್ವರೂಪ ಹೊಂದಿರುವ ಸಾಧ್ಯತೆ ಇರುವುದ ರಿಂದ, ಪ್ರಕರಣದಲ್ಲಿ ಭಾಗಿಯಾಗಿರಬಹು ದಾದ ಬ್ಯಾಂಕಿನ ಹಾಗೂ ನಗರ ಸಭೆಯ ನೌಕರರು ಮತ್ತು ಅಧಿಕಾರಿಗಳನ್ನು ಪತ್ತೆ ಹಚ್ಚಿ ಅವರ ವಿರುದ್ಧ ಕಾನೂನಾ ತ್ಮಕ ಪ್ರಕರಣ ದಾಖಲಿಸಿ, ಸಮಗ್ರ ಇಲಾಖಾ ತನಿಖೆಗೆ ಒಳಪಡಿಸುವ ಜೊತೆಗೆ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸಿ ಎಲ್ಲಾ ಆರೋಪಿಗಳನ್ನು ಕಾನೂನಾತ್ಮಕ ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಮನವಿಯಲ್ಲಿ ಅಗ್ರಹಿಸಲಾಗಿದೆ ಈ ಸಂದರ್ಭದಲ್ಲಿ ಬಿಜೆಪಿ ನಗರಾಧ್ಯಕ್ಷ ದಿನೇಶ್ ಅಮೀನ್, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ನಗರಸಭೆ ಮಾಜಿ ಸದಸ್ಯರುಗಳು ಹಾಜರಿದ್ದರು.

ವಾರ್ತಾ ಭಾರತಿ 25 Feb 2026 9:06 pm

ಹರಪನಹಳ್ಳಿ | ರಾಜ್ಯ ಹೆದ್ದಾರಿ ನಿರ್ಮಾಣದಿಂದ ಸಂಪರ್ಕ ವ್ಯವಸ್ಥೆ ಸುಗಮ: ಶಾಸಕಿ ಲತಾ ಮಲ್ಲಿಕಾರ್ಜುನ್

ಹರಪನಹಳ್ಳಿ  : ‘ಮರಿಯಮ್ಮನಹಳ್ಳಿ–ಶಿವಮೊಗ್ಗ ರಾಜ್ಯ ಹೆದ್ದಾರಿ ರಸ್ತೆ ನಿರ್ಮಾಣದಿಂದ ಮೂರು ಜಿಲ್ಲೆಗಳ ಸಾರಿಗೆ ಸಂಪರ್ಕ ವ್ಯವಸ್ಥೆ ಸುಗಮವಾಗಲಿದೆ’ ಎಂದು ದಾವಣಗೆರೆ ಸಂಸದೆ ಪ್ರಭಾ ಮಲ್ಲಿಕಾರ್ಜುನ ತಿಳಿಸಿದರು. ನಗರದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮೇಗಳಪೇಟೆಯಲ್ಲಿ ಡಿಎಂಎಫ್ ಅನುದಾನದಡಿ 1 ಕೋಟಿ ರೂ. ವೆಚ್ಚದಲ್ಲಿ 6 ಶಾಲಾ ಕೊಠಡಿಗಳು ಹಾಗೂ 1 ಕೋಟಿ ರೂ. ವೆಚ್ಚದಲ್ಲಿ ರಂಗಮಂಟಪ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. ಕಲಿಯಲು ಯೋಗ್ಯ ವಾತಾವರಣ ಸೃಷ್ಟಿಯಾದರೆ ಮಕ್ಕಳು ಶೈಕ್ಷಣಿಕವಾಗಿ ಪ್ರಗತಿ ಸಾಧಿಸಬಹುದು. ಕಲಿಕೆಯ ಜೊತೆಗೆ ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ ನಾಯಕತ್ವ ಗುಣಗಳು ಬೆಳೆಯುತ್ತವೆ ಎಂದು ಹೇಳಿದರು. ಮಕ್ಕಳು ತಮ್ಮ ಆಸಕ್ತಿ ಕ್ಷೇತ್ರವನ್ನು ಗುರುತಿಸಿಕೊಂಡು ಭವಿಷ್ಯದಲ್ಲಿ ಅದನ್ನು ಆರಿಸಿಕೊಂಡು ಜೀವನದಲ್ಲಿ ಯಶಸ್ಸು ಸಾಧಿಸಬೇಕು ಎಂದು ಸಲಹೆ ನೀಡಿದರು. ಹರಪನಹಳ್ಳಿ ನಗರದಲ್ಲಿ ಕೇಂದ್ರೀಯ ವಿಶ್ವವಿದ್ಯಾಲಯ ಸ್ಥಾಪನೆಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು. ಶಾಸಕಿ ಲತಾ ಮಲ್ಲಿಕಾರ್ಜುನ್ ಮಾತನಾಡಿ, ಮರಿಯಮ್ಮನಹಳ್ಳಿ–ಶಿವಮೊಗ್ಗ ರಾಜ್ಯ ಹೆದ್ದಾರಿ ದುರಸ್ತಿ ಕಾಣದೆ ಅಪಘಾತಗಳು ಹೆಚ್ಚಾಗುತ್ತಿವೆ. ಸುರಕ್ಷಿತ ಸಂಚಾರಕ್ಕಾಗಿ ರಸ್ತೆ ಅಭಿವೃದ್ಧಿಗೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರುವಂತೆ ಸಂಸದೆಗೆ ಮನವಿ ಮಾಡಿದರು. ತಾಲೂಕಿಗೆ ಹೆಚ್ಚಿನ ಸಂಸದರ ಅನುದಾನ ದೊರೆತರೆ ಕ್ಷೇತ್ರದ ಸಮಗ್ರ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಬಿಇಓ ಎಚ್ ಲೇಪಾಕ್ಷಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ ಅಂಜಿನಪ್ಪ, ಹಿರಿಯ ಮುಖ್ಯ ಶಿಕ್ಷಕ ಪಾಂಡಪ್ಪ ಬಡಿಗೇರ, ಸಿಆರ್‌ಪಿಗಳಾದ ಮೈಲಾರಿ, ಸಲೀಂ, ಶಿಕ್ಷಕರಾದ ಎನ್ ಜಿ ಚಿದಾನಂದಪ್ಪ, ಮಂಜಪ್ಪ ಬಣಕಾರ, ಶಿವಯೋಗಿ ಎಸ್ , ನಾಗರತ್ನಮ್ಮ, ಮಂಗಳ ಗೌರಮ್ಮ, ಶಾರದಮ್ಮ, ಮಂಜುಳ ಎಂ ಎಸ್, ಎಚ್ ಎಂ ವಿಜಯಕುಮಾರಿ, ಕೊಟ್ರಮ್ಮ ಎಂ, ಕುಬೇರಗೌಡ, ದೇವೇಂದ್ರಗೌಡ, ಮೈದೂರು ರಾಮಣ್ಣ, ನಜೀರ್ ಸಾಹೇಬ್, ಸೇರಿದಂತೆ ಇತರರಿದ್ದರು.

ವಾರ್ತಾ ಭಾರತಿ 25 Feb 2026 9:06 pm

ಟಿ-20 ವಿಶ್ವಕಪ್ | ಇಂಗ್ಲೆಂಡ್ ವಿರುದ್ಧ ಸೋತಿರುವ ಪಾಕಿಸ್ತಾನ ಸೆಮಿ ಫೈನಲ್ ತಲುಪುವುದೇ?

ಕೊಲಂಬೊ, ಫೆ.25: ಪಾಕಿಸ್ತಾನ ತಂಡವನ್ನು ಮಂಗಳವಾರ ಸೂಪರ್-8 ಪಂದ್ಯದಲ್ಲಿ ಮಣಿಸಿರುವ ಇಂಗ್ಲೆಂಡ್ ಕ್ರಿಕೆಟ್ ತಂಡವು ಪುರುಷರ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಸೆಮಿ ಫೈನಲ್‌ಗೆ ಅರ್ಹತೆ ಪಡೆದಿರುವ ಮೊದಲ ತಂಡ ಎನಿಸಿಕೊಂಡಿದೆ. ಈ ಫಲಿತಾಂಶದಿಂದಾಗಿ ಪಾಕಿಸ್ತಾನ ತಂಡದ ಸೆಮಿ ಫೈನಲ್ ವಿಶ್ವಾಸಕ್ಕೆ ತೀವ್ರ ಹಿನ್ನಡೆಯಾಗಿದೆ ಇಂಗ್ಲೆಂಡ್ ವಿರುದ್ಧ ಸೋಲು ಹಾಗೂ ನ್ಯೂಝಿಲ್ಯಾಂಡ್ ವಿರುದ್ಧ ಪಂದ್ಯ ಮಳೆಗಾಹುತಿಯಾದ ಕಾರಣ ಪಾಕಿಸ್ತಾನ ತಂಡದ ಸೆಮಿ ಫೈನಲ್ ಹಾದಿ ದುರ್ಗಮವಾಗಿದೆ. ಗ್ರೂಪ್-2ರಲ್ಲಿ ಖಾಲಿ ಇರುವ ಒಂದು ಸೆಮಿ ಫೈನಲ್ ಸ್ಥಾನಕ್ಕಾಗಿ ಪಾಕಿಸ್ತಾನ, ಶ್ರೀಲಂಕಾ, ನ್ಯೂಝಿಲ್ಯಾಂಡ್ ತಂಡಗಳ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಒಂದು ವೇಳೆ ನ್ಯೂಝಿಲ್ಯಾಂಡ್ ತಂಡವು ಶ್ರೀಲಂಕಾ ಹಾಗೂ ಇಂಗ್ಲೆಂಡ್ ವಿರುದ್ಧದ ಎರಡೂ ಪಂದ್ಯಗಳನ್ನು ಗೆದ್ದುಕೊಂಡರೆ, ಪಾಕಿಸ್ತಾನ ತಂಡ ಶ್ರೀಲಂಕಾವನ್ನು ಮಣಿಸಿದರೂ ಟೂರ್ನಿಯಿಂದ ನಿರ್ಗಮಿಸಲಿದೆ. ಒಂದು ವೇಳೆ ನ್ಯೂಝಿಲ್ಯಾಂಡ್ ತಂಡವು ಎರಡೂ ಪಂದ್ಯಗಳನ್ನು ಸೋತರೆ, ಪಾಕಿಸ್ತಾನ ತಂಡವು ಲಂಕಾ ವಿರುದ್ಧ ಗೆಲುವು ದಾಖಲಿಸಿದರೆ ಸೆಮಿ ಫೈನಲ್‌ಗೆ ಅರ್ಹತೆ ಪಡೆಯುತ್ತದೆ. ನ್ಯೂಝಿಲ್ಯಾಂಡ್ ತಂಡ ಒಂದು ಪಂದ್ಯ ಸೋತರೂ ಪಾಕಿಸ್ತಾನಕ್ಕೆ ಅವಕಾಶ ಸಿಗಲಿದೆ. ಆದರೆ ಇದು ನೆಟ್‌ರನ್‌ರೇಟ್ ಆಧರಿಸಿದೆ. ಇಂಗ್ಲೆಂಡ್ ವಿರುದ್ಧ ಕೊನೆಯ ಓವರ್‌ನಲ್ಲಿ ಸೋತಿರುವ ಪಾಕಿಸ್ತಾನದ ನೆಟ್‌ರನ್‌ರೇಟ್ ಕೂಡ ಹೆಚ್ಚಾಗಿಲ್ಲ. 8ನೇ ಓವರ್‌ನಲ್ಲಿ ಇಂಗ್ಲೆಂಡ್ ತಂಡದ 4 ವಿಕೆಟ್‌ಗಳನ್ನು ಉರುಳಿಸಿದ್ದ ಪಾಕಿಸ್ತಾನ ಆ ನಂತರ ತನ್ನ ಹಿಡಿತ ಕಳೆದುಕೊಂಡಿತು.

ವಾರ್ತಾ ಭಾರತಿ 25 Feb 2026 9:05 pm

ಮೇ ತಿಂಗಳಲ್ಲಿ ಪ್ರಥಮ ಬಾರಿಗೆ ವಿಧಾನಸೌಧದ ಆವರಣದಲ್ಲಿ ಯಕ್ಷಗಾನ ಪ್ರದರ್ಶನ

ಉಡುಪಿ: ಕರ್ನಾಟಕ ಯಕ್ಷಗಾನ ಅಕಾಡೆಮಿ ವತಿಯಿಂದ ವಿಧಾನಸಭಾ ಸಚಿವಾಲಯ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದಲ್ಲಿ ಬೆಂಗಳೂರಿನ ವಿಧಾನ ಸೌಧದ ಆವರಣದಲ್ಲಿ ಇದೇ ಪ್ರಥಮ ಬಾರಿಗೆ ಉಭಯ ತಿಟ್ಟುಗಳ ಸುಪ್ರಸಿದ್ಧ ಯಕ್ಷಗಾನ ಕಲಾವಿದರ ಕೂಡುವಿಕೆ ಯಲ್ಲಿ ಯಕ್ಷಗಾನ ಪ್ರದರ್ಶನ ಮುಂಬರುವ ಮೇ ತಿಂಗಳಲ್ಲಿ ಆಯೋಜಿಸ ಲಾಗುವುದೆಂದು ವಿಧಾನಸೌಧದ ಸ್ಪೀಕರ್ ಯು.ಟಿ.ಖಾದರ್ ತಿಳಿಸಿದ್ದಾರೆ. ಈ ಬಗ್ಗೆ ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ನೇತೃತ್ವದ ಅಕಾಡೆಮಿ ನಿಯೋಗ ಮಂಗಳವಾರ ವಿಧಾನಸೌಧದ ಸ್ಪೀಕರ್ ಯು.ಟಿ.ಖಾದರ್ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿತು. ನಿಯೋಗದ ಮನವಿಗೆ ಸ್ಪಂದಿಸಿದ ಸ್ಪೀಕರ್ ಯು.ಟಿ.ಖಾದರ್, ಶಾಸಕರು ಮತ್ತು ಪರಿಷತ್ ಸದಸ್ಯರು ವೀಕ್ಷಿಸಲು ಅನುಕೂಲವಾಗುವ ಹಾಗೆ ಹೆಸರಾಂತ ಯಕ್ಷಗಾನ ಕಲಾವಿದರನ್ನು ಒಳಗೊಂಡ ಯಕ್ಷಗಾನ ಪ್ರದರ್ಶನಕ್ಕೆ ಅವಕಾಶ ನೀಡುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ವಿಧಾನಸಭಾ ಸಚಿವಾಲಯದ ಕಾರ್ಯದರ್ಶಿ ವಿಶಾಲಾಕ್ಷಿ, ಯಕ್ಷಗಾನ ಅಕಾಡೆಮಿ ರಿಜಿಸ್ಟ್ರಾರ್ ನಮೃತಾ ಎನ್., ಸದಸ್ಯರು ಗಳಾದ ಕೊಪ್ಪಲ ಮೋಹನ್ ಕದ್ರಿ, ಸುಧಾಕರ ಶೆಟ್ಟಿ, ಪುಟ್ಟಸ್ವಾಮಿ ಎ.ಆರ್. ಉಪಸ್ಥಿತರಿದ್ದರು.

ವಾರ್ತಾ ಭಾರತಿ 25 Feb 2026 9:05 pm

ಉದ್ಯೋಗ ಭರ್ತಿ; ಬಜೆಟ್‌ನಲ್ಲಿ ಘೋಷಣೆ: ಸಿಎಂ ಸಿದ್ದರಾಮಯ್ಯ

ಧಾರವಾಡದಲ್ಲಿ ಉದ್ಯೋಗಾಕಾಂಕ್ಷಿ ವಿದ್ಯಾರ್ಥಿಗಳ ಪ್ರತಿಭಟನೆ

ವಾರ್ತಾ ಭಾರತಿ 25 Feb 2026 9:02 pm

ಕೊಟ್ಟೂರು | ಕಳಪೆ ಕಾಮಗಾರಿ ನೆಪದಲ್ಲಿ ಗುತ್ತಿಗೆದಾರರಿಗೆ ತೊಂದರೆ ಕೊಟ್ಟರೆ ಸೂಕ್ತ ಕ್ರಮ: ಶಾಸಕ ನೇಮಿರಾಜ್ ನಾಯ್ಕ್

ಕೊಟ್ಟೂರು : ಪಟ್ಟಣದಲ್ಲಿ ನಡೆಯುತ್ತಿರುವ ಪ್ರಜಾಸೌಧ ಕಾಮಗಾರಿ ಗುಣಮಟ್ಟದಿಂದ ನಡೆಯುತ್ತಿದೆ ಎಂದು ಶಾಸಕ ಶಾಸಕ ಕೆ.ನೇಮಿರಾಜ್ ನಾಯ್ಕ್ ತಿಳಿಸಿದ್ದಾರೆ. ಪ್ರಜಾಸೌಧ ಕಾಮಗಾರಿ ಸ್ಥಳವನ್ನು ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವರು ಕಾಮಗಾರಿ ಕಳಪೆಯಾಗಿದೆ ಎಂದು ಮಾಡುತ್ತಿರುವ ಆರೋಪಗಳನ್ನು ತಳ್ಳಿಹಾಕಿದರು. ಕಾಮಗಾರಿ ಸ್ಥಳಕ್ಕೆ ಪದೇಪದೆ ಆಗಮಿಸಿ ಸಂಘಟನೆಗಳ ಹೆಸರಿನಲ್ಲಿ ತೊಂದರೆ ನೀಡುವುದು ಹಾಗೂ ಗುತ್ತಿಗೆದಾರರಿಗೆ ಬೆದರಿಕೆ ಹಾಕಿ ಬೇಡಿಕೆ ಇಡುವುದು ಸರಿಯಲ್ಲ ಎಂದು ಹೇಳಿದರು. ಇಂತಹ ಚಟುವಟಿಕೆಗಳು ಮುಂದುವರಿದರೆ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ಪ್ರಜಾಸೌಧ ನಿರ್ಮಾಣಕ್ಕೆ ಸಾಕಷ್ಟು ಪ್ರಯತ್ನಪಟ್ಟು ಅನುದಾನ ತಂದಿರುವುದಾಗಿ ತಿಳಿಸಿ, ಕ್ಷೇತ್ರದ ಅಭಿವೃದ್ಧಿಗೆ ಭಂಗ ತರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ತಹಸೀಲ್ದಾರ್ ಹಾಗೂ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು. ಈ ಸಂದರ್ಭದಲ್ಲಿ ತಹಶೀಲ್ದಾರ್ ಅಮರೇಶ ಜಿ.ಕೆ., ಪಪಂ ಮುಖ್ಯಾಧಿಕಾರಿ ನಸರುಲ್ಲಾ, ತಾಪಂ ಇಒ ವಿಜಯಕುಮಾರ್, ಎಪಿಎಂಸಿ ಮಾಜಿ ಅಧ್ಯಕ್ಷ ಬೂದಿ ಶಿವಕುಮಾರ್, ಪಪಂ ಸದಸ್ಯ ಶಿವಾನಂದ ಬಾವಿಕಟ್ಟಿ, ಕರ್ನಾಟಕ ಗೃಹ ಮಂಡಳಿ ಇಂಜಿನಿಯರ್ ಹರ್ಷ ಸೇರಿದಂತೆ ಇತರರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 25 Feb 2026 9:00 pm

ಬಳ್ಳಾರಿ | ಡಿಪ್ಲೋಮಾ ಕಾಲೇಜು ಮುಂಭಾಗ ಬಸ್ ನಿಲ್ದಾಣಕ್ಕೆ ಆಗ್ರಹಿಸಿ ಎಬಿವಿಪಿ ಪ್ರತಿಭಟನೆ

ಬಳ್ಳಾರಿ/ ಕಂಪ್ಲಿ : ತಾಲೂಕಿನ ಮುದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಡಿಪ್ಲೋಮಾ ಪಾಲಿಟೆಕ್ನಿಕ್ ಕಾಲೇಜು ಮುಂಭಾಗದಲ್ಲಿ ಬಸ್‌ಗಳು ನಿಲ್ಲಿಸದೇ ಇರುವುದರಿಂದ ವಿದ್ಯಾರ್ಥಿಗಳು ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಆರೋಪಿಸಿ ಎಬಿವಿಪಿ ವತಿಯಿಂದ ಬುಧವಾರ ಕಂಪ್ಲಿ ಹೊಸ ಬಸ್ ನಿಲ್ದಾಣ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಯಿತು. ಕಂಪ್ಲಿಯಿಂದ ಹೊಸಪೇಟೆ ಮಾರ್ಗವಾಗಿ ಸಂಚರಿಸುವ ಹಾಗೂ ಹೊಸಪೇಟೆಯಿಂದ ಕಂಪ್ಲಿಗೆ ಬರುವ ಬಸ್‌ಗಳನ್ನು ಡಿಪ್ಲೋಮಾ ಕಾಲೇಜು ಮುಂಭಾಗದಲ್ಲಿ ನಿಲ್ಲಿಸಬೇಕು ಎಂದು ಆಗ್ರಹಿಸಲಾಯಿತು. ದೂರದೂರಿನಿಂದ ಬರುವ ನೂರಾರು ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಹೇಳಿದರು. ಡಿಪ್ಲೋಮಾ ಕಾಲೇಜಿನ ವಿದ್ಯಾರ್ಥಿಗಳು ಡಿಪೋ ನಿಯಂತ್ರಣಾಧಿಕಾರಿಗೆ ಎಚ್ಚರಿಕೆ ನೀಡಿದ್ದು, ತಕ್ಷಣ ಕ್ರಮ ಕೈಗೊಳ್ಳುವಂತೆ ಸರ್ಕಾರವನ್ನು ಒತ್ತಾಯಿಸಿದರು. ಕಂಪ್ಲಿ ಬಸ್ ಸ್ಟ್ಯಾಂಡ್ ನಿಯಂತ್ರಣಾಧಿಕಾರಿ ಆದಿಶೇಷ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಎಬಿವಿಪಿ ಸದಸ್ಯ ಸಪ್ತಗಿರಿ ಮಂಚಿಕಂಠಿ ಮಾತನಾಡಿ, ಸಾರಿಗೆ ಇಲಾಖೆ ಅಧಿಕಾರಿಗಳು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು. ಪ್ರತಿಭಟನೆಯಲ್ಲಿ ಬಳ್ಳಾರಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ತಾಳ್ವರ ಭರತ್, ವಿದ್ಯಾರ್ಥಿಗಳಾದ ಕಾರ್ತಿಕ್, ಶಶಾಂಕ್, ರಾಮು, ಅನು ಸೇರಿದಂತೆ ಹಲವರು ಪಾಲ್ಗೊಂಡಿದ್ದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಕಂಪ್ಲಿ ಪೊಲೀಸ್ ಠಾಣೆ ವತಿಯಿಂದ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ವಾರ್ತಾ ಭಾರತಿ 25 Feb 2026 8:57 pm

ಅಕ್ರಮ ಹಣ ವರ್ಗಾವಣೆ ಪ್ರಕರಣ | ಅನಿಲ್ ಅಂಬಾನಿಯ 3,716 ಕೋಟಿ ರೂ.ಮೌಲ್ಯದ ಮುಂಬೈ ನಿವಾಸವನ್ನು ಜಪ್ತಿ ಮಾಡಿದ ಈಡಿ

ಹೊಸದಿಲ್ಲಿ,ಫೆ.25: ಕೈಗಾರಿಕೋದ್ಯಮಿ ಅನಿಲ್ ಅಂಬಾನಿಯವರ ಗ್ರೂಪ್ ಕಂಪೆನಿ ರಿಲಯನ್ಸ್ ಕಮ್ಯುನಿಕೇಷನ್ಸ್ (ಆರ್‌ಕಾಮ್) ಭಾಗಿಯಾಗಿರುವ ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ತನಿಖೆಯನ್ನು ತೀವ್ರಗೊಳಿಸಿರುವ ಜಾರಿ ನಿರ್ದೇಶನಾಲಯವು (ಈ.ಡಿ) ಅವರ 3,716 ಕೋಟಿ ರೂ.ಮೌಲ್ಯದ ಮುಂಬೈ ನಿವಾಸ ‘ಅಬೋಡ್’ನ್ನು ಜಪ್ತಿ ಮಾಡಿದೆ. ಮುಂಬೈನ ಪಾಲಿಹಿಲ್ ಪ್ರದೇಶದಲ್ಲಿರುವ 66 ಮೀ.ಎತ್ತರದ ಐಷಾರಾಮಿ ಆಸ್ತಿಯ ವಿರುದ್ಧ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ (ಪಿಎಂಎಲ್‌ಎ) ತಾತ್ಕಾಲಿಕ ಜಪ್ತಿ ಆದೇಶವನ್ನು ಹೊರಡಿಸಲಾಗಿದೆ ಎಂದು ಅಧಿಕೃತ ಮೂಲಗಳು ಬುಧವಾರ ತಿಳಿಸಿದವು. ಇದರೊಂದಿಗೆ ಪ್ರಕರಣದಲ್ಲಿ ಜಪ್ತಿ ಮಾಡಲಾಗಿರುವ ಆಸ್ತಿಗಳ ಒಟ್ಟು ಮೌಲ್ಯ ಸುಮಾರು 15,700 ಕೋ.ರೂ.ಗೇರಿದೆ. 66ರ ಹರೆಯದ ಅಂಬಾನಿ ಎರಡನೇ ಸುತ್ತಿನ ವಿಚಾರಣೆಗಾಗಿ ದಿಲ್ಲಿಯಲ್ಲಿ ಈ.ಡಿ.ಮುಂದೆ ಹಾಜರಾಗುವ ನಿರೀಕ್ಷೆಯಿದೆ. ಅವರು ಆಗಸ್ಟ್ 2025ರಲ್ಲಿ ಈ.ಡಿ.ಯ ಮುಂದೆ ಮೊದಲ ಬಾರಿಗೆ ಹಾಜರಾಗಿದ್ದು,ಪಿಎಂಎಲ್‌ಎ ಅಡಿ ಅವರ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿತ್ತು. ಆರ್‌ಕಾಮ್ ವಂಚನೆ ಆರೋಪಕ್ಕೆ ನಂಟು ಜಪ್ತಿ ಕ್ರಮವು ಆರ್‌ಕಾಮ್‌ನಿಂದ ಹಣಕಾಸು ಅಕ್ರಮಗಳು ಮತ್ತು ಸಾಲದ ಹಣದ ದುರ್ಬಳಕೆ ಆರೋಪಗಳ ಕುರಿತು ಈ.ಡಿ.ನಡೆಸುತ್ತಿರುವ ವ್ಯಾಪಕ ತನಿಖೆಯ ಭಾಗವಾಗಿದೆ. ರಿಲಯನ್ಸ್ ಅನಿಲ್ ಅಂಬಾನಿ ಗ್ರೂಪ್ ಕಂಪನಿಗಳಿಂದ ವಂಚನೆ, ಲಂಚ ಮತ್ತು ಬ್ಯಾಂಕ್ ಸಾಲಗಳ ದುರ್ಬಳಕೆ ಆರೋಪಗಳಿಗೆ ಸಂಬಂಧಿಸಿದಂತೆ ಸಿಬಿಐ ದಾಖಲಿಸಿಕೊಂಡಿರುವ ಎರಡು ಎಫ್‌ಐಆರ್‌ಗಳ ಆಧಾರದಲ್ಲಿ ಈಡಿ ಅಂಬಾನಿ ವಿರುದ್ಧ ತನಿಖೆ ನಡೆಸುತ್ತಿದೆ. ಈ.ಡಿ.ಪಿಎಂಎಲ್‌ಎದ ಕಲಂ 17ರಡಿ ಗ್ರೂಪ್‌ಗೆ ಸಂಬಂಧಿಸಿದ ಕಂಪೆನಿಗಳು ಮತ್ತು ಅಧಿಕಾರಿಗಳಿಗೆ ಸೇರಿದ 35ಕ್ಕೂ ಅಧಿಕ ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆಗಳನ್ನು ನಡೆಸಿದೆ. ಕಾರ್ಯಾಚರಣೆಯು 50ಕ್ಕೂ ಅಧಿಕ ಕಂಪನಿಗಳಿಗೆ ವಿಸ್ತರಿಸಿದ್ದು, ಮುಂಬೈ ಮತ್ತು ದಿಲ್ಲಿಗಳಲ್ಲಿ 25ಕ್ಕೂ ಅಧಿಕ ವ್ಯಕ್ತಿಗಳನ್ನು ಪ್ರಶ್ನಿಸಲಾಗಿದೆ. 3,000 ಕೋ.ರೂ.ಸಾಲ ದುರ್ಬಳಕೆ ಆರೋಪ ಬಲ್ಲ ಮೂಲಗಳ ಪ್ರಕಾರ 2017 ಮತ್ತು 2019ರ ನಡುವೆ ಅಂಬಾನಿಗೆ ಸಂಬಂಧಿಸಿದ ಕಂಪೆನಿಗಳು ಯೆಸ್ ಬ್ಯಾಂಕ್‌ನಿಂದ ಪಡೆದಿದ್ದ 3,000 ಕೋ.ರೂ.ಸಾಲವನ್ನು ಅನ್ಯ ಉದ್ದೇಶಕ್ಕೆ ಬಳಸುವಲ್ಲಿ ಕೈಜೋಡಿಸಿದ್ದವು ಎನ್ನುವುದನ್ನು ಪ್ರಾಥಮಿಕ ತನಿಖೆಯು ಸೂಚಿಸಿದೆ. ಹಣವನ್ನು ಶೆಲ್ ಕಂಪನಿಗಳ ಮೂಲಕ ರವಾನಿಸಲಾಗಿತ್ತೇ ಮತ್ತು ರೌಂಡ್-ಟ್ರಿಪ್ (ಹಣವನ್ನು ಇನ್ನೊಂದು ದೇಶಕ್ಕೆ ಕಳುಹಿಸಿ ಅದನ್ನು ವಿದೇಶಿ ಹೂಡಿಕೆ ಅಥವಾ ಬೇರೆ ರೂಪದಲ್ಲಿ ಮೂಲದೇಶಕ್ಕೆ ಮರಳಿಸುವುದು) ವಿಧಾನವನ್ನು ಬಳಸಲಾಗಿತ್ತೇ ಎನ್ನುವುದನ್ನು ತನಿಖಾಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಹಿಂದಿನ ದಿನಾಂಕಗಳ ಸಾಲ ಅನುಮೋದನೆ ವರದಿ ಪತ್ರ,ಸೂಕ್ತ ವಿವೇಚನೆಯಿಲ್ಲದೆ ಸಾಲಗಳ ಮಂಜೂರಾತಿ ಮತ್ತು ಸಾಲ ಅನುಮೋದನೆಗೊಳ್ಳುವ ಮುನ್ನವೇ ಹಣ ಬಿಡುಗಡೆ ಆರೋಪಗಳ ಕುರಿತೂ ಕಳವಳಗಳೂ ವ್ಯಕ್ತವಾಗಿವೆ. ಸಾಲ ವಿತರಣೆಗೆ ಸ್ವಲ್ಪ ಮೊದಲು ಯೆಸ್ ಬ್ಯಾಂಕಿನ ಪ್ರವರ್ತಕರಿಗೆ ಸಂಬಂಧಿಸಿದ ಸಂಸ್ಥೆಗಳು ಹಣವನ್ನು ಸ್ವೀಕರಿಸಿದ್ದವು ಎಂದು ಆರೋಪಿಸಲಾಗಿರುವುದರಿಂದ ಸಂಭಾವ್ಯ ಕಮಿಷನ್ ವ್ಯವಸ್ಥೆಯ ಬಗ್ಗೆಯೂ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ನ್ಯಾಷನಲ್ ಹೌಸಿಂಗ್ ಬ್ಯಾಂಕ್, ಸೆಬಿ, ನ್ಯಾಷನಲ್ ಫೈನಾನ್ಸಿಯಲ್ ರಿಪೋರ್ಟಿಂಗ್ ಅಥಾರಿಟಿ ಮತ್ತು ಬ್ಯಾಂಕ್ ಆಫ್ ಬರೋಡಾ ಸೇರಿದಂತೆ ಹಲವಾರು ಸಂಸ್ಥೆಗಳು ತನಿಖೆಗೆ ಪೂರಕ ಮಾಹಿತಿಗಳನ್ನು ಹಂಚಿಕೊಂಡಿವೆ.

ವಾರ್ತಾ ಭಾರತಿ 25 Feb 2026 8:56 pm

ವಿಜಯನಗರ | ಎಂ.ದಾದಾ ಖಲಂದರ್‌ಗೆ ಕಾಂಗ್ರೆಸ್ ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಸ್ಥಾನ

ಹಲವಾರು ವರ್ಷಗಳಿಂದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಲ್ಲಿ ಕಾರ್ಯಕರ್ತರಾಗಿ ಸೇವೆ ಸಲ್ಲಿಸುತ್ತಿದ್ದ ಎಂ. ದಾದಾ ಖಲಂದರ್ ಅವರನ್ನು ವಿಜಯನಗರ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ವಿಜಯನಗರ ಜಿಲ್ಲಾ ಅಧ್ಯಕ್ಷ ಹಾಗೂ ಮಾಜಿ ಶಾಸಕ ಸಿರಾಜ್ ಶೇಖ್ ಅವರ ಶಿಫಾರಸ್ಸಿನ ಮೇರೆಗೆ ಈ ನೇಮಕಾತಿ ನಡೆದಿದ್ದು, ಬೆಂಗಳೂರು ಕೇಂದ್ರ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಕಚೇರಿಯಲ್ಲಿ ನಡೆದ ಸಭೆಯಲ್ಲಿ ಆದೇಶ ಪತ್ರ ವಿತರಿಸಿ ಪಕ್ಷದ ಜವಾಬ್ದಾರಿಯನ್ನು ವಹಿಸಲಾಯಿತು. ಈ ಸಂದರ್ಭದಲ್ಲಿ ವಿಜಯನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಕೆ.ಎಂ. ಹಾಲಪ್ಪ, ಹಿಂದುಳಿದ ವರ್ಗಗಳ ವಿಭಾಗದ ಜಿಲ್ಲಾಧ್ಯಕ್ಷ ತಮ್ಮನ್ನೆಳ್ಳಪ್ಪ, ಸೇವಾದಳ ಜಿಲ್ಲಾ ಸಂಘಟಕ ಬಿ. ಮಾರೆಣ್ಣ, ಜಿಲ್ಲಾ ಕಾರ್ಯದರ್ಶಿ ಸಂಗಪ್ಪ ಸೇರಿದಂತೆ ತಾರಾ ಭಾಷ, ಎಂ.ಡಿ. ರಫೀಕ್, ಶಫೀ ಕುರೇಷಿ, ಪೀರಾ ಸಾಬ್, ಜೀಲಾನ್ ಹಾಗೂ ಹಲವಾರು ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 25 Feb 2026 8:54 pm

`ನನ್ನನ್ನು ಮತ್ತು ನನ್ನ ಮುಗ್ಧ ಮಗನನ್ನು ನಿಂದಿಸಿದ್ರೆ ವಿಶ್ವಕಪ್ ಸಿಗುತ್ತಾ?': ಪಾಕ್ ಫ್ಯಾನ್ಸ್ ಗೆ ಸಲ್ಮಾನ್ ಆಘಾ ಪತ್ನಿ ಕ್ಲಾಸ್

Salman Agha Wife Sabba Manzer- ಐಸಿಸಿ ಟಿ20 ವಿಶ್ವಕಪ್ 2026ರ ಸೂಪರ್ 8 ಹಂತದ ಪಂದ್ಯದಲ್ಲಿ ಪಾಕಿಸ್ತಾನ ತಂಡ ಇಂಗ್ಲೆಂಡ್ ವಿರುದ್ಧ ಸೋಲನುಭವಿಸಿದ ಬಳಿಕ ಅಲ್ಲಿನ ಅಭಿಮಾನಿಗಳು ವಿಪರೀತ ಸಿಟ್ಟಿಗೆದ್ದಿದ್ದಾರೆ. ಅದು ಎಷ್ಟರ ಮಟ್ಟಿಗೆ ಎಂದರೆ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲೆ ಮೀರಿ ಕುಟುಂಬದವರನ್ನೆಲ್ಲಾ ನಿಂದಿಸುತ್ತಿದ್ದಾರೆ. ತಮ್ಮನ್ನು ಮತ್ತು ತಮ್ಮ ಪುತ್ರನನ್ನು ನೆಟ್ಟಿಗರು ನಿಂದಿಸಿರವುದಕ್ಕೆ ಇದೀಗ ಪಾಕಿಸ್ತಾನ ತಂಡದ ನಾಯಕ ಸಲ್ಮಾನ್ ಅಲಿ ಆಘಾ ಪತ್ನಿ ಸಭಾ ಮನ್ಸರ್ ಅವರು ತಿರುಗೇಟು ನೀಡಿದ್ದಾರೆ.

ವಿಜಯ ಕರ್ನಾಟಕ 25 Feb 2026 8:53 pm

ವಾಟ್ಸ್‌ಆ್ಯಪ್ ಸಂದೇಶ ರವಾನೆಗೆ ಮೊಬೈಲ್‌ನಲ್ಲಿ ಸಿಮ್ ಇರಲೇಬೇಕು : ಸಚಿವ ಜ್ಯೋತಿರಾದಿತ್ಯ ಸಿಂಧ್ಯಾ

ಹೊಸದಿಲ್ಲಿ, ಫೆ. 25: ನೋಂದಾಯಿತ ಸಿಮ್ ಮೊಬೈಲ್ ಫೋನ್‌ನಲ್ಲಿ ಇದ್ದರೆ ಮಾತ್ರ ವಾಟ್ಸ್‌ಆ್ಯಪ್ ಮತ್ತು ಟೆಲಿಗ್ರಾಮ್ ಮುಂತಾದ ಸಂದೇಶವಾಹಕ ಆ್ಯಪ್‌ಗಳು ಕಾರ್ಯನಿರ್ವಹಿಸಬೇಕು ಹಾಗೂ ಡೆಸ್ಕ್‌ಟಾಪ್ ಕಂಪ್ಯೂಟರ್‌ಗಳಲ್ಲಿ ಸಂದೇಶವಾಹಕ ವೆಬ್‌ಗಳು ಆರು ಗಂಟೆಗಳಿಗೊಮ್ಮೆ ಕಡ್ಡಾಯವಾಗಿ ಮರುದೃಢೀಕರಣ ಮಾಡಬೇಕು ಎಂಬ ನಿಯಮವನ್ನು ಸರಕಾರ ಸಡಿಲಿಸುವುದಿಲ್ಲ ಎಂದು ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧ್ಯಾ ಬುಧವಾರ ಸ್ಪಷ್ಟಪಡಿಸಿದ್ದಾರೆ. ವರಮಾನಕ್ಕಿಂತ ರಾಷ್ಟ್ರೀಯ ಭದ್ರತೆಯೇ ಮುಖ್ಯ ಎಂದು ಹೇಳಿದ್ದಾರೆ. ‘‘ಕಂಪ್ಯೂಟರ್‌ಗಳಲ್ಲಿ ಸಂದೇಶಗಳನ್ನು ಕಳುಹಿಸುವ ವೆಬ್‌ಸೈಟ್‌ಗಳು ಆರು ಗಂಟೆಗಳಿಗೊಮ್ಮೆ ಕಡ್ಡಾಯವಾಗಿ ಲಾಗೌಟ್ ಆಗಬೇಕು ಎಂಬ ನಿಯಮದಲ್ಲಿ ಬದಲಾವಣೆ ಮಾಡುವ ಬಗ್ಗೆ ಯೋಚಿಸಿಲ್ಲ. ನಿಯಮಗಳು ಹೇಗಿದ್ದವೋ ಹಾಗೆಯೇ ಇರುತ್ತವೆ’’ ಎಂದು ಮಾಧ್ಯಮಗಳೊಂದಿಗೆ ಮಾತನಾಡಿದ ಸಿಂಧ್ಯಾ ಹೇಳಿದರು. ಆರು ಗಂಟೆಗಳಿಗೊಮ್ಮೆ ಲಾಗೌಟ್ ಆಗುವ ನಿಯಮವು ವೆಬ್ ಮತ್ತು ಆ್ಯಪ್‌ಗಳ ಕಂಪ್ಯೂಟರ್ ಮಾದರಿಗಳ ವರ್ಚುವಲ್ ಸಂಪರ್ಕಗಳಿಗೆ ಮಾತ್ರ ಅನ್ವಯಿಸುತ್ತದೆ ಹಾಗೂ ಮೊಬೈಲ್ ಫೋನ್‌ಗಳಲ್ಲಿರುವ ನೇರ ಸಂಪರ್ಕಗಳಿಗೆ ಅನ್ವಯಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ನಿಯಮಗಳನ್ನು ಅಳವಡಿಸಿಕೊಳ್ಳಲು ವಿಧಿಸಲಾಗಿರುವ ಫೆಬ್ರವರಿ 28ರ ಗಡುವಿನ ಯಾವುದೇ ವಿಸ್ತರಣೆಯನ್ನು ದೂರಸಂಪರ್ಕ ಇಲಾಖೆ ತಳ್ಳಿಹಾಕಿದೆ. ದೂರಸಂಪರ್ಕ ಇಲಾಖೆಯು ಕಳೆದ ವರ್ಷದ ನವೆಂಬರ್ 28ರಂದು ಹೊರಡಿಸಿದ ನಿರ್ದೇಶನಗಳ ಪ್ರಕಾರ, ವಾಟ್ಸ್‌ಆ್ಯಪ್, ಟೆಲಿಗ್ರಾಮ್ ಮುಂತಾದ ಒಟಿಟಿ ಸಂದೇಶವಾಹಕ ವೇದಿಕೆಗಳು ಬಳಕೆದಾರರ ಸಕ್ರಿಯ ಸಿಮ್ ಕಾರ್ಡ್‌ನೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿರಬೇಕು. ಒಂದು ವೇಳೆ, ಫೋನ್‌ನಿಂದ ಸಿಮ್ ತೆಗೆದರೆ ಅಥವಾ ನಿಷ್ಕ್ರಿಯಗೊಂಡರೆ, ಆ ಫೋನ್‌ನಲ್ಲಿ ಆ್ಯಪ್ ಸ್ಥಗಿತಗೊಳ್ಳಬೇಕು.

ವಾರ್ತಾ ಭಾರತಿ 25 Feb 2026 8:53 pm

ಪ್ರತ್ಯೇಕ ಪ್ರಕರಣ: ಇಬ್ಬರು ಆತ್ಮಹತ್ಯೆ

ಗಂಗೊಳ್ಳಿ, ಫೆ.25: ವಿಪರೀತ ಮದ್ಯ ಸೇವನೆ ಮಾಡುವ ಚಟ ಹೊಂದಿದ್ದ ಗುಜ್ಜಾಡಿ ಗ್ರಾಮದ ಕೊಡಪಾಡಿಯ ಸುಧಾಕರ ಶೇರುಗಾರ(37) ಎಂಬವರು ಜೀವನದಲ್ಲಿ ಜಿಗುಪ್ಸೆಗೊಂಡು ಫೆ.24ರಂದು ರಾತ್ರಿ ವೇಳೆ ಮನೆಯ ಎದುರಿನ ಜಗಲಿಯಲ್ಲಿ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಡುಬಿದ್ರಿ: ವಿಪರೀತ ಮದ್ಯಪಾನ ಮಾಡಿಕೊಂಡಿದ್ದ ಶಿರ್ವ ಗ್ರಾಮದ ಚಂದ್ರಶೇಖರ(48) ಎಂಬವರು ಜೀವನದಲ್ಲಿ ಜಿಗುಪ್ಸೆಗೊಂಡು ಫೆ.24ರಂದು ಮಧ್ಯಾಹ್ನ ಮಲಗುವ ಕೋಣೆಯ ಮಾಡಿನ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಾರ್ತಾ ಭಾರತಿ 25 Feb 2026 8:51 pm

ರಸ್ತೆ ಬದಿಯ ತೋಡಿಗೆ ಬಿದ್ದ ಸ್ಕೂಟಿ: ಸವಾರ ಮೃತ್ಯು

ಕುಂದಾಪುರ, ಫೆ.25: ಸ್ಕೂಟಿಯೊಂದು ರಸ್ತೆ ಬದಿಯ ತೋಡಿಗೆ ಬಿದ್ದ ಪರಿಣಾಮ ಸವಾರರೊಬ್ಬರು ಮೃತಪಟ್ಟ ಘಟನೆ ಕೊರ್ಗಿ ಗ್ರಾಮದ ಚಾರುಕೊಟ್ಟಿಗೆಯ ಸಾಗಿನಗುಡ್ಡೆ ಬಸ್ ನಿಲ್ದಾಣದ ಸಮೀಪ ಫೆ.24ರಂದು ರಾತ್ರಿ ವೇಳೆ ನಡೆದಿದೆ. ಮೃತರನ್ನು ಸ್ಥಳೀಯ ನಿವಾಸಿ ಪ್ರತಾಪ ಶೆಟ್ಟಿ ಎಂದು ಗುರುತಿಸಲಾಗಿದೆ. ಇವರು ಬ್ರಹ್ಮಾವರದಲ್ಲಿ ಕಿರಣಿ ಅಂಗಡಿ ಇಟ್ಟುಕೊಂಡು ವ್ಯವಹಾರ ಮಾಡಿಕೊಂಡಿದ್ದು, ರಾತ್ರಿ ಬ್ರಹ್ಮಾವರದಿಂದ ಮನೆ ಕಡೆಗೆ ಸ್ಕೂಟಿಯಲ್ಲಿ ಕೃಷಿ ಸಾಮಗ್ರಿ ಯಾದ ಹಾರೆ, ಪಿಕಾಸಿ ಮತ್ತು ಪ್ಲಾಸ್ಟಿಕ್ ಬುಟ್ಟಿ ಇಟ್ಟುಕೊಂಡು ತೆಕ್ಕಟ್ಟೆ-ದಬ್ಬೆಕಟ್ಟೆ ರಸ್ತೆಯಲ್ಲಿ ಹೋಗುತ್ತಿದ್ದರು. ಈ ವೇಳೆ ದಾರಿ ಮಧ್ಯೆ ಸ್ಕೂಟಿ ಆಯತಪ್ಪಿ, ಸ್ಕಿಡ್ ಆಗಿ ರಸ್ತೆ ಬದಿ ಹೊಂಡದಂತ್ತಿರುವ ತೋಡಿಗೆ ಬಿತ್ತೆನ್ನಲಾಗಿದೆ. ಇದರಿಂದ ಸ್ಕೂಟಿಯಲ್ಲಿದ್ದ ಕೃಷಿ ಸಲಕರಣೆ ಪ್ರತಾಪ್ ಶೆಟ್ಟಿ ಅವರ ತಲೆಗೆ ತಾಗಿತ್ತು. ಇದರ ಪರಿಣಾಮ ಗಂಭೀರವಾಗಿ ಗಾಯಗೊಂಡ ಇವರು, ಕೋಟೇಶ್ವರ ಖಾಸಗಿ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರು ಎಂದು ತಿಳಿದು ಬಂದಿದೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಾರ್ತಾ ಭಾರತಿ 25 Feb 2026 8:51 pm

ಡಾ.ರಾಜ್‌ಕುಮಾರ್ ಅಪಹರಣ ಪ್ರಕರಣ | 9 ಆರೋಪಿಗಳ ಖುಲಾಸೆ ಎತ್ತಿ ಹಿಡಿದ ಮದ್ರಾಸ್ ಹೈಕೋರ್ಟ್

ಚೆನ್ನೈ, ಫೆ. 25: ಕನ್ನಡದ ವರ ನಟ ಡಾ. ರಾಜ್‌ಕುಮಾರ್ ಅವರ ಅಪಹರಣ ಪ್ರಕರಣದಲ್ಲಿ 9 ಮಂದಿಯನ್ನು ಖುಲಾಸೆಗೊಳಿಸಿ ಗೋಪಿಚೆಟ್ಟಿಪಾಳಯಂ ಸೆಷನ್ಸ್ ನ್ಯಾಯಾಲಯ ನೀಡಿದ ಆದೇಶವನ್ನು ಮದ್ರಾಸ್ ಉಚ್ಚ ನ್ಯಾಯಾಲಯ ಬುಧವಾರ ಎತ್ತಿ ಹಿಡಿದಿದೆ. ಈರೋಡ್ ಜಿಲ್ಲೆಯ ತಲವಾಡಿ ಸಮೀಪದ ದೊಡ್ಡಗಾಜನೂರುನಲ್ಲಿರುವ ತೋಟದ ಮನೆಯಿಂದ ರಾಜ್ ಕುಮಾರ್ ಅವರನ್ನು ಕಾಡುಗಳ್ಳ ವೀರಪ್ಪನ್ ಹಾಗೂ ಅವನ ಸಹಚರರು 2000 ಜುಲೈ 30ರಂದು ಅಪಹರಣಗೈದಿದ್ದರು. ರಾಜ್‌ಕುಮಾರ್ ಅವರ ಬಿಡುಗಡೆಗೆ ವೀರಪ್ಪನ್‌ನೊಂದಿಗೆ ಮಾತುಕತೆ ನಡೆಸಲು ತಮಿಳುನಾಡು ಹಾಗೂ ಕರ್ನಾಟಕ ಸರಕಾರ ಎರಡು ತಂಡಗಳನ್ನು ಕಾಡಿಗೆ ಕಳುಹಿಸಿತ್ತು. ಹಲವು ಸುತ್ತಿನ ಮಾತುಕತೆಗಳ ನಂತರ ರಾಜ್‌ಕುಮಾರ್ ಅವರನ್ನು 108 ದಿನಗಳ ಬಳಿಕ ಬಿಡುಗಡೆ ಮಾಡಲಾಗಿತ್ತು. ಈ ಅಪಹರಣ ಪ್ರಕರಣಕ್ಕೆ ಸಂಬಂಧಿಸಿ ಈರೋಡ್ ಜಿಲ್ಲೆಯ ತಲವಾಡಿ ಪೊಲೀಸರು ಪ್ರಕರಣ ದಾಖಲಿಸಿದ್ದರು. ವೀರಪ್ಪನ್ ಹಾಗೂ ಅವರ ಸಹಚರ ಸೇತುಕುಳಿ ಗೋವಿಂದನ್, ಚಂದ್ರಗೌಡ, ಮಲ್ಲು, ರಮೇಶ್, ಗೋವಿಂದರಾಜ್, ಆಂಡ್ರಿಲ್ ಪಸುವಣ್ಣ, ಪುಟ್ಟುಸಾಮಿ, ಕಲ್ಮಂಡಿ ರಾಮನ್, ಮಾರನ್, ಸೆಲ್ವನ್, ಅಮರ್ತಲಿಂಗಂ, ನಾಗರಾಜ್ ಸೇರಿದಂತೆ 14 ಮಂದಿಯನ್ನು ಆರೋಪಿಗಳು ಎಂದು ಹೆಸರಿಸಿದ್ದರು ಹಾಗೂ ಬಂಧಿಸಿದ್ದರು. ಅನಂತರ ಅವರು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಈ ಪ್ರಕರಣದ ವಿಚಾರಣೆ ಗೋಪಿಚೆಟ್ಟಿಪಾಳಯಂನ 3ನೇ ಸೆಷನ್ಸ್ ನ್ಯಾಯಾಲಯದಲ್ಲಿ ನಡೆಯುತ್ತಿತ್ತು. 2004ರಲ್ಲಿ ಆರೋಪ ಪಟ್ಟಿ ಸಲ್ಲಿಸುವ ಮುನ್ನ ವೀರಪ್ಪನ್ ಹಾಗೂ ಆತನ ಇಬ್ಬರು ಸಹಚರರಾದ ಸೇಥುಕುಳಿ ಗೋವಿಂದನ್ ಹಾಗೂ ಚಂದ್ರಗೌಡನನ್ನು ವಿಶೇಷ ಕಾರ್ಯ ಪಡೆ ಎನ್‌ಕೌಂಟರ್‌ನಲ್ಲಿ ಗುಂಡು ಹಾರಿಸಿ ಹತ್ಯೆಗೈದಿತ್ತು. ಇನ್ನೋರ್ವ ಸಹಚರ ಮಲ್ಲು ಕ್ಯಾನ್ಸರ್‌ನಿಂದ ಮೃತಪಟ್ಟಿದ್ದ. ರಮೇಶ್ ನಾಪತ್ತೆಯಾಗಿದ್ದ. ಉಳಿದ 9 ಮಂದಿ ಪ್ರಕರಣದ ವಿಚಾರಣೆಗಾಗಿ 18 ವರ್ಷಗಳಿಂದ ಗೋಪಿಚೆಟ್ಟಿಪಾಳಯಂ ನ್ಯಾಯಾಲಯಕ್ಕೆ ಹಾಜರಾಗುತ್ತಿದ್ದರು. 2018 ಸೆಪ್ಟಂಬರ್ 25ರಂದು ಈ ಪ್ರಕರಣದ ತೀರ್ಪು ಪ್ರಕಟಿಸಲಾಗಿತ್ತು. ಗೋಪಿಚೆಟ್ಟಿಪಾಳಯಂ ನ್ಯಾಯಾಲಯದ ನ್ಯಾಯಮೂರ್ತಿ ಮಣಿ ಅವರು ವೀರಪ್ಪನ್‌ನ 9 ಮಂದಿ ಸಹಚರರಾದ ಗೋವಿಂದರಾಜ್, ಆಂಡ್ರಿಲ್, ಪಸುವಣ್ಣ, ಪುಟ್ಟುಸಾಮಿ, ಕಲ್ಮಾಂದಿರಾಮನ್, ಮಾರನ್, ಸೆಲ್ವಂ, ಅಮರ್ತಲಿಂಗಂ ಹಾಗೂ ನಾಗರಾಜ್‌ನನ್ನು ಖುಲಾಸೆಗೊಳಿಸಿದರು. ಈ ತೀರ್ಪಿನ ವಿರುದ್ಧ ತಮಿಳುನಾಡು ಪೊಲೀಸರು ಮದ್ರಾಸ್ ಉಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಈ ಪ್ರಕರಣವನ್ನು ನ್ಯಾಯಮೂರ್ತಿಗಳಾದ ವೇಲ್ಮುರುಗನ್ ಹಾಗೂ ಎಂ. ಜ್ಯೋತಿರಾಮನ್ ವಿಚಾರಣೆ ನಡೆಸಿದರು. ಎರಡೂ ಕಡೆಯ ವಾದ ಪ್ರತಿವಾದವನ್ನು ಆಲಿಸಿದ ಬಳಿಕ ಪೀಠ ಇಂದು ತೀರ್ಪು ನೀಡಿತು. ಎಲ್ಲಾ ಆರೋಪಿಗಳನ್ನು ಖುಲಾಸೆಗೊಳಿಸಿ ಕೆಳ ನ್ಯಾಯಾಲಯ ನೀಡಿದ ತೀರ್ಪನ್ನು ಎತ್ತಿ ಹಿಡಿಯಿತು. ಆರೋಪಿಗಳ ವಿರುದ್ಧದ ಆರೋಪಗಳನ್ನು ಸಾಬೀತುಪಡಿಸಲು ಪೊಲೀಸರು ಸಾಕಷ್ಟು ಸಾಕ್ಷ್ಯಗಳನ್ನು ಸಲ್ಲಿಸಿಲ್ಲ ಎಂದು ಹೇಳಿತು.

ವಾರ್ತಾ ಭಾರತಿ 25 Feb 2026 8:49 pm

ಆಳಂದ | ಬೆಲ್ಲ ತಯಾರಿಕಾ ಘಟಕ ವೀಕ್ಷಿಸಿದ ಜಿಲ್ಲಾಧಿಕಾರಿ

ಕಲಬುರಗಿ: ಜಿಲ್ಲಾಧಿಕಾರಿ ಬಿ‌.ಫೌಝಿಯಾ ತರನ್ನುಮ್ ಅವರು ಮಂಗಳವಾರ ಆಳಂದ ತಾಲೂಕು ಪ್ರವಾಸ ಕೈಗೊಂಡಿದ್ದು, ತಾಲೂಕಿನ ಗೋಳಾ ಗ್ರಾಮಕ್ಕೆ‌ ಭೇಟಿ ನಿಡಿ ಬೆಲ್ಲ ತಯಾರಿಸುವ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆಲ್ಲ ತಯಾರಿಕಾ ಘಟಕಕ್ಕೆ ಭೇಟಿ ನೀಡಿ ತಯಾರಿಕೆ ವಿಧಾನಗಳನ್ನು ಕುರಿತು ರೈತರಿಂದ‌ ಮಾಹಿತಿ ಪಡೆದುಕೊಂಡರು. ನಂತರ ಕಲಬುರಗಿ ತಾಲೂಕಿನ ಕಪನೂರ ಗ್ರಾಮಕ್ಕೆ ಭೇಟಿ ನೀಡಿ ಭೂ ಪರಿವರ್ತನೆ ಕೋರಿ ಬಂದಿರುವ ಅರ್ಜಿಗಳನ್ನು ಸ್ಥಳ ಪರಿಶೀಲನೆ ಮಾಡಿದರು. ಈ ಸಂದರ್ಭದಲ್ಲಿ ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್ ಸೇರಿದಂತೆ ಆಳಂದ ತಹಶೀಲ್ದಾರ್, ಇನ್ನಿತರ ಅಧಿಕಾರಿಗಳು ಇದ್ದರು.

ವಾರ್ತಾ ಭಾರತಿ 25 Feb 2026 8:49 pm

ಕಲಬುರಗಿ | ಕಳ್ಳತನ ಪ್ರಕರಣ; ಇಬ್ಬರ ಬಂಧನ, 26.54 ಲಕ್ಷ ರೂ. ಮೌಲ್ಯದ ಸ್ವತ್ತು ವಶ: ಎಸ್ಪಿ ಅಡ್ಡೂರು ಶ್ರೀನಿವಾಸಲು

ಕಲಬುರಗಿ: ಸೇಡಂ ಹಾಗೂ ಮಳಖೇಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಮನೆ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಇಬ್ಬರು ವ್ಯಕ್ತಿಯನ್ನು ವಶಕ್ಕೆ ಪಡೆದು ಅವರಿಂದ 26.54 ಲಕ್ಷ ರೂ. ಮೌಲ್ಯದ ಸ್ವತ್ತು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು ಹೇಳಿದ್ದಾರೆ. ಬುಧವಾರ ಪೊಲೀಸ್ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೇಡಂ ಪೊಲೀಸ್ ಠಾಣೆಯಲ್ಲಿ ನಾಲ್ಕು ಹಾಗೂ ಮಳಖೇಡ ಠಾಣೆಯಲ್ಲಿ ಒಂದು ಕಳ್ಳತನ ಪ್ರಕರಣ ದಾಖಲಿಸಿಕೊಂಡು ಎಎಸ್ಪಿ ಮಹೇಶ್ ಮೇಘಣ್ಣನವರ್, ಡಿವೈಎಸ್ಪಿ ಸಂಗಮನಾಥ ಹಿರೇಮಠ, ಸಿಪಿಐ ಮಹಾದೇವ ಡಿಡಿಮನಿ ಹಾಗೂ ಪಿಎಸ್ಐ, ಸಿಬ್ಬಂದಿಗಳ ನೇತೃತ್ವದಲ್ಲಿ ತನಿಖಾ ತಂಡ ರಚಿಸಲಾಗಿತ್ತು. ಕ್ಷಿಪ್ರ ಕಾರ್ಯಾಚರಣೆ ನಡೆಸಿ, ಆಳಂದ ತಾಲೂಕಿನ ಝಳಕಿ ತಾಂಡಾದ ನಿವಾಸಿ ಕರಣ ರಂಗು ಪವಾರ್ ಹಾಗೂ ಅದೇ ತಾಲೂಕಿನ ಕಂಸರ ನಾಯಕ ತಾಂಡಾದ ರಾಮದಾಸ ಗಂಗಾರಾಮ ಚವ್ಹಾಣ ಎಂಬಾತರನ್ನು ಬಂಧಿಸಿದ್ದು, ಇನ್ನೂ ಮೂವರ ಪತ್ತೆಗೆ ಜಾಲ ಬೀಸಲಾಗಿದೆ ಎಂದರು. ಫೆ.17ರಂದು ಸೇಡಂ ಪಟ್ಟಣದ ಬಸ್ ನಿಲ್ದಾಣ, ಜಿ.ಕೆ ಕ್ರಾಸ್ ಮಾರ್ಗದಲ್ಲಿ ಹಾದುಹೋಗುವಾಗ ವ್ಯಕ್ತಿಗಳಿಬ್ಬರೂ ಪೊಲೀಸ್ ಸಮವಸ್ತ್ರ ಧರಿಸಿದ್ದವರನ್ನು ನೋಡಿ ಮರೆಮಾಚುತ್ತಿದ್ದರು. ಸಂಶಯಾಸ್ಪದರನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಬಳಿಕ ಅವರಿಂದ 25.57 ಲಕ್ಷ ರೂ. ಮೌಲ್ಯದ 15.5 ಗ್ರಾಂ. ಬಂಗಾರದ ಆಭರಣಗಳು ಹಾಗೂ 96,900 ಮೌಲ್ಯದ 340 ಗ್ರಾಂ. ಬೆಳ್ಳಿಯ ಆಭರಣಗಳನ್ನು ವಶಕ್ಕೆ ಪಡೆದು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ವಿವರಿಸಿದರು. ಬಂಧಿತ ಇಬ್ಬರ ವಿರುದ್ಧ ಈಗಾಗಲೇ ವಿವಿಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಳೆದ ನಾಲ್ಕು ವರ್ಷದಿಂದ ಆಗಾಗ ಹಗಲು ಮತ್ತು ರಾತ್ರಿ ಸಮಯದಲ್ಲಿ ಕೀಲಿ ಹಾಕಿದ ಮನೆಗಳನ್ನು ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿದ್ದರು ಎಂದು ಎಸ್ಪಿ ಅಡ್ಡೂರು ಶ್ರೀನಿವಾಸಲು ವಿವರಿಸಿದರು. ಸುದ್ದಿಗೋಷ್ಠಿಯಲ್ಲಿ ಎಎಸ್ಪಿ ಮಹೇಶ್ ಮೇಘಣ್ಣನವರ್, ಡಿವೈಎಸ್ಪಿ ಸಂಗಮನಾಥ ಹಿರೇಮಠ, ಸಿಪಿಐ ಮಹಾದೇವ ದಿಡಿಮನಿ, ಸೇಡಂ ಪಿಎಸ್ಐ ಉಪೇಂದ್ರಕುಮಾರ್, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 25 Feb 2026 8:44 pm

ಮಂಗಳೂರು| ಬಾಲಕಿಯ ಅತ್ಯಾಚಾರ ಪ್ರಕರಣ: ಆರೋಪಿಗೆ 20 ವರ್ಷ ಕಠಿಣ ಜೈಲುಶಿಕ್ಷೆ, ದಂಡ

ಮಂಗಳೂರು: ಮದುವೆಯಾಗುವುದಾಗಿ ನಂಬಿಸಿ ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಆಕೆಯನ್ನು ಗರ್ಭವತಿಯನ್ನಾಗಿಸಿದ ಆರೋಪಿಗೆ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ (ಪೊಕ್ಸೊ-ಎಫ್‌ಟಿ ಎಸ್‌ಸಿ-2 ) ನ್ಯಾಯಾಧೀಶ ಮಾನು ಕೆ.ಎಸ್. 20 ವರ್ಷ ಕಠಿಣ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ನಗರದಲ್ಲಿ ಆಟೋ ಚಾಲಕನಾಗಿರುವ ಮೂಲತ: ಬಾಗಲಕೋಟೆಯ ನಾಗರಾಜ್ ಶಿವಪ್ಪದುರಗಣ್ಣವರ (21) ಶಿಕ್ಷೆಗೊಳಗಾದ ಆರೋಪಿ. ಈತ ತನ್ನ ತಾಯಿಯ ಪರಿಚಯದ ಮಹಿಳೆಯ ಪುತ್ರಿಯ ಜೊತೆಗೆ ಅನ್ಯೋನ್ಯವಾಗಿದ್ದು, ಆಕೆಯ ಮನೆಗೂ ಆಗಾಗ್ಗೆ ಹೋಗುತ್ತಿದ್ದ ಎನ್ನಲಾಗಿದೆ. 2025ರ ಫೆ.25 ಮತ್ತು ಮಾ.13ರಂದು ಅತ್ತಾವರದಲ್ಲಿರುವ ತನ್ನ ಬಾಡಿಗೆ ಮನೆಗೆ ಬಾಲಕಿಯನ್ನು ಕರೆದುಕೊಂಡು ಬಂದು ಲೈಂಗಿಕ ದೌರ್ಜನ್ಯ ಎಸಗಿದ್ದ ಎನ್ನಲಾಗಿದೆ. ಪರಿಣಾಮ ಆಕೆ ಗರ್ಭವತಿಯಾ ಗಿದ್ದಳು. ಈ ಬಗ್ಗೆ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ವಿಚಾರಣೆ ನಡೆಸಿದ ನ್ಯಾಯಾಧೀಶರು ಆರೋಪಿಗೆ ಪೊಕ್ಸೊ ಕಲಂ 6 ರಡಿ 20 ವರ್ಷ ಕಠಿಣ ಸಜೆ ಮತ್ತು 40,000 ರೂ ದಂಡ, ಒಂದು ವೇಳೆ ದಂಡ ಪಾವತಿಸಲು ತಪ್ಪಿದರೆ ಹೆಚ್ಚುವರಿ 4 ತಿಂಗಳು ಸಾದಾ ಸಜೆ ಮತ್ತು ಬಿಎನ್‌ಎಸ್ ಕಲಂ 69ರಡಿ 5 ವರ್ಷ ಸಾದಾ ಸಜೆ, 10,000 ರೂ. ದಂಡ, ಒಂದು ವೇಳೆ ದಂಡ ಪಾವತಿಸಲು ತಪ್ಪಿದರೆ ಹೆಚ್ಚುವರಿ ಒಂದು ತಿಂಗಳ ಸಜೆ ವಿಧಿಸಿ ಮಂಗಳವಾರ ತೀರ್ಪು ನೀಡಿದ್ದಾರೆ. ದಂಡದ ಮೊತ್ತ ಒಟ್ಟು 50,000 ರೂ. ಅಲ್ಲದೆ 6.50 ಲಕ್ಷ ರೂ.ಗಳನ್ನು ಸಂತ್ರಸ್ತೆಗೆ ಪರಿಹಾರವಾಗಿ ನೀಡುವಂತೆ ಜಿಲ್ಲಾ ಕಾನುನು ಸೇವಾ ಪ್ರಾಧಿಕಾರಕ್ಕೆ ನಿರ್ದೇಶನ ನೀಡಿದ್ದಾರೆ. ಮಹಿಳಾ ಠಾಣಾಧಿಕಾರಿ ಬಾಲಕೃಷ್ಣ ಎಚ್.ಎನ್. ತನಿಖೆ ನಡೆಸಿ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಪ್ರಾಸಿಕ್ಯೂಷನ್ ಪರವಾಗಿ ಪೊಕ್ಸೊ ವಿಶೇಷ ಸರಕಾರಿ ಅಭಿಯೋಜಕಿ ಸಹನಾ ದೇವಿ ಬೋಳೂರು ವಾದಿಸಿದ್ದರು.

ವಾರ್ತಾ ಭಾರತಿ 25 Feb 2026 8:43 pm

ಪಶ್ಚಿಮದಂಡೆಯಲ್ಲಿ ರಾಜತಾಂತ್ರಿಕ ಸೇವೆ ಒದಗಿಸಲು ಅಮೆರಿಕ ಕ್ರಮ

ಜೆರುಸಲೇಂ, ಫೆ.25: ಅಮೆರಿಕ ಈ ವಾರ ಪಶ್ಚಿಮದಂಡೆಯ ವಸಾಹತುಗಳಲ್ಲಿ ಸ್ಥಳದಲ್ಲಿಯೇ ಪಾಸ್‍ಪೋರ್ಟ್ ಸೇವೆಗಳನ್ನು ಒದಗಿಸುತ್ತದೆ. ಆಕ್ರಮಿತ ಪ್ರದೇಶದಲ್ಲಿ ವಸಾಹತುಗಾರರಿಗೆ ಇದೇ ಮೊದಲ ಬಾರಿ ಅಮೆರಿಕದ ಕಾನ್ಸುಲರ್ ಅಧಿಕಾರಿಗಳು ಈ ರೀತಿಯ ಸೇವೆಗಳನ್ನು ಒದಗಿಸಲಿದ್ದಾರೆ ಎಂದು ಇಸ್ರೇಲ್‍ನಲ್ಲಿನ ಅಮೆರಿಕ ರಾಯಭಾರಿ ಕಚೇರಿ ಘೋಷಿಸಿದೆ. ಶುಕ್ರವಾರ ಜೆರುಸಲೇಂನ ಎಫ್ರಾತ್ ವಸಾಹತುಗಳಲ್ಲಿನ ಅಮೆರಿಕನ್ ಪ್ರಜೆಗಳಿಗೆ ಪಾಸ್‍ಪೋರ್ಟ್ ಸೇವೆಯನ್ನು ಒದಗಿಸುವ ಕಾರ್ಯಕ್ರಮವಿದೆ. ಇದು ಎಲ್ಲಾ ಅಮೆರಿಕನ್ ಪ್ರಜೆಗಳನ್ನು ತಲುಪುವ `ಫ್ರೀಡಮ್ 250' ಉಪಕ್ರಮದ ಭಾಗವಾಗಿದೆ ಎಂದು ರಾಯಭಾರಿ ಕಚೇರಿ ಹೇಳಿದೆ. ಇದು ಪಶ್ಚಿಮ ದಂಡೆಯಲ್ಲಿ ಇಸ್ರೇಲಿ ವಸಾಹತುಗಳನ್ನು ಕಾನೂನುಬದ್ಧಗೊಳಿಸುವ ನಿಟ್ಟಿನಲ್ಲಿ ಅಮೆರಿಕದ ಮತ್ತಷ್ಟು ಕ್ರಮಗಳನ್ನು ಸೂಚಿಸುತ್ತದೆ ಮತ್ತು ಪಶ್ಚಿಮದಂಡೆಯಲ್ಲಿ ಇಸ್ರೇಲಿ ವಸಾಹತುಗಳು ಶಾಂತಿಗೆ ಅಡ್ಡಿಯಾಗಿವೆ ಎಂಬ ಅಮೆರಿಕದ ವಿದೇಶಾಂಗ ನೀತಿಯನ್ನು ಮುರಿದಿದೆ. ಫೆಲೆಸ್ತೀನಿಯನ್ ನಗರ ರಮಲ್ಲಾ, ಪಶ್ಚಿಮದಂಡೆಯ ಬೀಟಾರ್ ಇಲ್ಲಿಟ್‍ನ ವಸಾಹತು, ಜೆರುಸಲೇಂ, ಹೈಫಾ, ನೆತನ್ಯಾ ಮತ್ತು ಬೀಟ್ ಶೆಮೆಶ್ ನಗರಗಳಲ್ಲಿಯೂ ಕಾನ್ಸುಲರ್ ಕಾರ್ಯಕ್ರಮಗಳು ನಡೆಯಲಿವೆ. ಆದರೆ ದಿನಾಂಕವನ್ನು ಘೋಷಿಸಲಾಗಿಲ್ಲ. `ಪಶ್ಚಿಮದಂಡೆಯಲ್ಲಿ ಅಮೆರಿಕನ್ ಪ್ರಜೆಗಳಿಗೆ ಕಾನ್ಸುಲರ್ ಸೇವೆಗಳನ್ನು ವಿಸ್ತರಿಸುವ ಐತಿಹಾಸಿಕ ನಿರ್ಧಾರವನ್ನು' ಸ್ವಾಗತಿಸುವುದಾಗಿ ಇಸ್ರೇಲ್ ವಿದೇಶಾಂಗ ಇಲಾಖೆ ಪ್ರತಿಕ್ರಿಯಿಸಿದೆ.

ವಾರ್ತಾ ಭಾರತಿ 25 Feb 2026 8:43 pm

ಭಾರತ ಮತ್ತು ಇತರ ದೇಶಗಳೊಂದಿಗೆ ಪ್ರಾದೇಶಿಕ ಮೈತ್ರಿ : ಇಸ್ರೇಲ್ ಪ್ರಧಾನಿ ನೆತನ್ಯಾಹು ಹೇಳಿಕೆ ಖಂಡಿಸುವ ನಿರ್ಣಯ ಅಂಗೀಕರಿಸಿದ ಪಾಕಿಸ್ತಾನ ಸಂಸತ್‍

ಇಸ್ಲಮಾಬಾದ್, ಫೆ.25: ಪ್ರಧಾನಿ ನರೇಂದ್ರ ಮೋದಿಯವರ ಎರಡು ದಿನಗಳ ಇಸ್ರೇಲ್ ಭೇಟಿಗೆ ಪಾಕಿಸ್ತಾನದ ರಾಜಕೀಯ ವಲಯ ಮತ್ತು ಮಾಧ್ಯಮಗಳಿಂದ ತೀಕ್ಷ್ಣ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಇಸ್ರೇಲ್ ಮತ್ತು ಹೊಸದಿಲ್ಲಿ ನಡುವೆ ಬೆಳೆಯುತ್ತಿರುವ ಕಾರ್ಯತಂತ್ರದ ಸಂಬಂಧಗಳ ಬಗ್ಗೆ ಸರಕಾರ ಕಳವಳ ವ್ಯಕ್ತಪಡಿಸಿದೆ. ಭಾರತ ಮತ್ತು ಇತರ ದೇಶಗಳೊಂದಿಗೆ ಪ್ರಾದೇಶಿಕ ಮೈತ್ರಿ ಸಾಧಿಸುವ ಕುರಿತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ನೀಡಿರುವ ಹೇಳಿಕೆಯನ್ನು ಖಂಡಿಸುವ ನಿರ್ಣಯವನ್ನು ಪಾಕಿಸ್ತಾನದ ಸಂಸತ್ತು ಅವಿರೋಧವಾಗಿ ಅಂಗೀಕರಿಸಿದ್ದು ಇದು ಮುಸ್ಲಿಮ್ ರಾಷ್ಟ್ರಗಳ ವಿರುದ್ದದ ಪಿತೂರಿಯಾಗಿದೆ ಎಂದು ಸಂಸದರು ಟೀಕಿಸಿದ್ದಾರೆ. `ಪ್ರಸ್ತಾವಿತ ಒಕ್ಕೂಟವು ಪ್ರಾದೇಶಿಕ ಶಾಂತಿ ಮತ್ತು ಜಾಗತಿಕ ಸ್ಥಿರತೆಗೆ ಬೆದರಿಕೆಯಾಗಿದೆ ಎಂದು ನಿರ್ಣಯದಲ್ಲಿ ಉಲ್ಲೇಖಿಸಲಾಗಿದ್ದು ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರಗಳನ್ನು ಪ್ರತ್ಯೇಕಿಸುವ ಉದ್ದೇಶದಿಂದ ಇಸ್ರೇಲ್ ಬಣಗಳನ್ನು ರೂಪಿಸಲು ಯತ್ನಿಸುತ್ತಿದೆ ಎಂದು ಆರೋಪಿಸಲಾಗಿದೆ. ಪಾಕಿಸ್ತಾನದ ಇಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಪ್ರಧಾನಿ ಮೋದಿ ಇಸ್ರೇಲ್ ಭೇಟಿಯ ಬಗ್ಗೆ ಚರ್ಚೆ ನಡೆಯುತ್ತಿದ್ದು ಭಾರತ- ಇಸ್ರೇಲ್ ಸಹಭಾಗಿತ್ವವು ಪಾಕಿಸ್ತಾನ ಮತ್ತು ಚೀನಾವನ್ನು ಗುರಿಯಾಗಿಸಿದ ಕಾರ್ಯತಂತ್ರದ ಉಪಕ್ರಮವಾಗಿದೆ. ಎರಡು ದೇಶಗಳ ನಡುವಿನ ರಕ್ಷಣಾ ಮತ್ತು ಗುಪ್ತಚರ ಸಂಬಂಧಗಳನ್ನು ವಿಸ್ತರಿಸುವುದರಿಂದ ಪ್ರಾದೇಶಿಕ ಶಕ್ತಿಯ ಸಮತೋಲನ ಬದಲಾಗಬಹುದು ಎಂದು ಪ್ರತಿಪಾದಿಸಲಾಗಿದೆ.

ವಾರ್ತಾ ಭಾರತಿ 25 Feb 2026 8:36 pm

ಹಂಪಿ ಕನ್ನಡ ವಿ.ವಿಯ ನಾಡೋಜ ಗೌರವ ತಿರಸ್ಕಾರಿಸಿಲ್ಲ; ಆ ವ್ಯಕ್ತಿಯಿಂದ ಸ್ವೀಕರಿಸಲು ಸಿದ್ಧನಿರಲಿಲ್ಲ: ಸಾಹಿತಿ ಡಾ.ಜಿ. ರಾಮಕೃಷ್ಣ

ಹಂಪಿ ಕನ್ನಡ ವಿಶ್ವವಿದ್ಯಾಲಯವು ನೀಡಿದ್ದ ನಾಡೋಜ ಗೌರವವನ್ನು ಪದವಿಯನ್ನು ನಿರಾಕರಣೆ ಮಾಡಿಲ್ಲ. ಯಾರು ಪದವಿಪ್ರದಾನ ಮಾಡುವುದಿತ್ತೋ ಅವರಿಂದ ಅರ್ಹತಾ ಪತ್ರ ಪಡೆಯಲು ನಾನು ಸಿದ್ಧನಿರಲಿಲ್ಲವಾದ್ದರಿಂದ ನಾನು ಹೋಗಿ ಅರ್ಹತಾ ಪತ್ರ ಸ್ವೀಕರಿಸಿಲ್ಲ ಎಂದು ಸಾಹಿತಿ, ಪ್ರಾಧ್ಯಪಕ ಡಾ.ಜಿ ರಾಮಕೃಷ್ಣ (Ramakrishna Gampalahalli)ಗಂಪಲಹಳ್ಳಿ ಅವರು ಹೇಳಿದ್ದಾರೆ. ಈ ವಿಚಾರವಾಗಿ ಅವರು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಸುದೀರ್ಘವಾಗಿ ಬರೆದುಕೊಂಡಿದ್ದಾರೆ.

ಒನ್ ಇ೦ಡಿಯ 25 Feb 2026 8:33 pm

ದೇವದುರ್ಗ | ಕರಾಟೆ ಕಟಾ ಸ್ಪರ್ಧೆಯಲ್ಲಿ ಡಾನ್ ಬೊಸ್ಕೋ ವಿದ್ಯಾರ್ಥಿಗಳ ಸಾಧನೆ

ದೇವದುರ್ಗ : 2ನೇ ಕಲ್ಯಾಣ ಕರ್ನಾಟಕ ಕ್ರೀಡಾ ಕರಾಟೆ ಅಸೋಸಿಯೇಷನ್ ವತಿಯಿಂದ ಕಲಬುರ್ಗಿ ನಗರದ ಚಂದ್ರಶೇಖರ ಪಾಟೀಲ್ ಜಿಲ್ಲಾ ಒಳಕ್ರೀಡಾಂಗಣದಲ್ಲಿ ಫೆಬ್ರವರಿ 21 ಮತ್ತು 22ರಂದು ನಡೆದ 2026ನೇ ಸಾಲಿನ ಚಾಂಪಿಯನ್ ಕರಾಟೆ ಕಟಾ ಸ್ಪರ್ಧೆಯಲ್ಲಿ ದೇವದುರ್ಗ ತಾಲೂಕಿನ ಡಾನ್ ಬೊಸ್ಕೋ ಸಂಸ್ಥೆಯ 15 ವಿದ್ಯಾರ್ಥಿಗಳು ಭಾಗವಹಿಸಿ ವಿಜೇತರಾಗಿದ್ದಾರೆ. ಯುವರಾಜ ಎಸ್, ವರದ, ಮೌನೇಶ್, ಫಯಾಜ್ ಎಂ.ಡಿ. ಬಾಲೆಪಿರ್, ಭಾರ್ಗವ್, ಭಾರತ ಕುಮಾರ, ಸವಿ, ಸಾತ್ವಿಕ್, ಅಶ್ವಿತಾ ಪಿ, ಅಭಯ್ ರಾಜ್ ಮಲ್ಲಿಕಾರ್ಜುನ, ಶ್ರೇಯಸ್ ಪಾಟೀಲ್ ಮಲ್ಲಿಕಾರ್ಜುನ, ಲಲಿತ್, ಪವನ್ ಕುಮಾರ, ಸುಹಾನ್ ವಿಜೇತರಾಗಿದ್ದಾರೆ. ತರಬೇತುದಾರ ನಾಗರಾಜ ಅಕ್ಕರಕಿ ಅವರ ನೇತೃತ್ವದಲ್ಲಿ ವಿದ್ಯಾರ್ಥಿಗಳು ಸ್ಪರ್ಧೆಗೆ ತಯಾರಿ ನಡೆಸಿದ್ದರು. ಡಾನ್ ಬೊಸ್ಕೋ ಶಾಲೆಯ ಪ್ರಾಂಶುಪಾಲರು, ಶಾಲಾ ಆಡಳಿತ ಮಂಡಳಿ, ಗುರುವೃಂದ ಹಾಗೂ ಪಾಲಕರ ಸಹಕಾರದಿಂದ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ. ವಿಜೇತ ವಿದ್ಯಾರ್ಥಿಗಳನ್ನು ಶಾಲಾ ಮಂಡಳಿ ವತಿಯಿಂದ ಅಭಿನಂದಿಸಲಾಯಿತು.

ವಾರ್ತಾ ಭಾರತಿ 25 Feb 2026 8:32 pm

ಪ್ರಧಾನಿ ಮೋದಿಯ ಸೆನೆಟ್ ಭಾಷಣ ಬಹಿಷ್ಕಾರಕ್ಕೆ ಮುಂದಾದ ಇಸ್ರೇಲ್‍ನ ವಿರೋಧ ಪಕ್ಷ

ಟೆಲ್ ಅವೀವ್, ಫೆ.25: ಭಾರತದ ಪ್ರಧಾನಿ ನರೇಂದ್ರ ಮೋದಿ ಇಸ್ರೇಲ್ ಸಂಸತ್ತನ್ನು ಉದ್ದೇಶಿಸಿ ಮಾಡಲಿರುವ ಭಾಷಣವನ್ನು ಬಹಿಷ್ಕರಿಸಲು ಇಸ್ರೇಲ್‍ನ ವಿರೋಧ ಪಕ್ಷಗಳು ಮುಂದಾಗಿವೆ. ಸಂಸತ್ತಿನ ಸ್ಪೀಕರ್ ಅಮಿರ್ ಒಹಾನಾ ಮತ್ತು ವಿರೋಧ ಪಕ್ಷಗಳ ಸಂಸದರ ನಡುವಿನ ತಿಕ್ಕಾಟದ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ವಿರೋಧ ಪಕ್ಷದ ಸಂಸದರು ಮುಂದಾಗಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಸಂಸತ್ತಿನ ವಿಶೇಷ ಅಧಿವೇಶನಕ್ಕೆ ಸುಪ್ರೀಂಕೋರ್ಟ್ ಮುಖ್ಯಸ್ಥ ಐಸಾಕ್ ಅಮಿಟ್‍ರನ್ನು ನಿರಾಕರಿಸುವ ಸ್ಪೀಕರ್ ನಿರ್ಧಾರದ ಬಗ್ಗೆ ವಿರೋಧ ಪಕ್ಷದ ಸಂಸದರು ಅಸಮಾಧಾನ ಹೊಂದಿದ್ದಾರೆ. ಈ ನಿರ್ಧಾರವು ನ್ಯಾಯಾಂಗದಲ್ಲಿ ಬದಲಾವಣೆ ತರುವ ಮತ್ತು ಸುಪ್ರೀಂಕೋರ್ಟ್‍ನ ಮುಖ್ಯಸ್ಥರು ಹಾಗೂ ಅಟಾರ್ನಿ ಜನರಲ್ ಅವರ ಅಧಿಕಾರವನ್ನು ಪ್ರಶ್ನಿಸುವ ನೆತನ್ಯಾಹು ಸರಕಾರದ ನಿಲುವನ್ನು ಪ್ರತಿಬಿಂಬಿಸುತ್ತದೆ ಎಂದು ವಿರೋಧ ಪಕ್ಷ ಟೀಕಿಸಿದೆ. ಇಸ್ರೇಲ್ ಸಂಸತ್ತನ್ನು ಉದ್ದೇಶಿಸಿ ಭಾಷಣ ಮಾಡಿದ ಪ್ರಥಮ ಭಾರತೀಯ ನಾಯಕ ಎಂಬ ದಾಖಲೆಗೆ ಮೋದಿ ಪಾತ್ರವಾಗಲಿದ್ದಾರೆ. `ಸ್ಪೀಕರ್ ಸುಪ್ರೀಂಕೋರ್ಟ್‍ನ ಮುಖ್ಯಸ್ಥರನ್ನು ಆಹ್ವಾನಿಸಿದರೆ ಅಧಿವೇಶನದಲ್ಲಿ ಪಾಲ್ಗೊಳ್ಳಲು ನಾವು ಬಯಸಿದ್ದೇವೆ ಎಂದು ವಿರೋಧ ಪಕ್ಷದ ನಾಯಕ ಯಾಯಿರ್ ಲಾಪಿಡ್ `ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.

ವಾರ್ತಾ ಭಾರತಿ 25 Feb 2026 8:31 pm

ಮಸ್ಕಿ | ಕೂಲಿ ಪಾವತಿಯಲ್ಲಿ ಅನ್ಯಾಯ ಆರೋಪ: ವಟಗಲ್‌ ಗ್ರಾಪಂ ಎದುರು ಪ್ರತಿಭಟನೆ

ಮಸ್ಕಿ : ತಾಲೂಕಿನ ವಟಗಲ್ ಗ್ರಾಮ ಪಂಚಾಯಿತಿ ಎದುರು ವಿಬಿ ಜಿ ರಾಮ್‌ ಜಿ ಕೂಲಿಕಾರರು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಸ.ನಂ. 170ರಲ್ಲಿ ಕೆರೆ ಹೂಳೆತ್ತುವ ಕಾಮಗಾರಿಯನ್ನು 14 ದಿನಗಳ ಕಾಲ ನಿರ್ವಹಿಸಿದ ಕೂಲಿಕಾರರಿಗೆ ನಿತ್ಯ ಕೇವಲ 60 ರೂ. ರಂತೆ ಕೂಲಿ ಪಾವತಿ ಮಾಡಲಾಗಿದೆ. ಇದು ಕಾರ್ಮಿಕರ ಮೇಲೆ ಅನ್ಯಾಯವಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಅಧಿಕಾರಿಗಳು ಯಂತ್ರ ಬಳಸಿ ಹೆಚ್ಚಿನ ಕಾಮಗಾರಿ ಮಾಡಿಸಿಕೊಂಡು ಕಾರ್ಮಿಕರನ್ನು ವಂಚಿಸುತ್ತಿದ್ದಾರೆ. ಜೊತೆಗೆ ಕೂಲಿ ಪಾವತಿಯಲ್ಲಿ ಅನಗತ್ಯ ವಿಳಂಬ ಮಾಡಲಾಗುತ್ತಿದೆ ಎಂದು ಕೂಲಿಕಾರರು ದೂರಿದರು. ಕಾರ್ಮಿಕ ಸುಭಾಷ್‌ಚಂದ್ರ ಕಡಬೂರು ಮಾತನಾಡಿ, ನಿತ್ಯ ಕನಿಷ್ಠ 370 ರೂ. ಕೂಲಿ ಪಾವತಿಸಬೇಕು. ಕಾಮಗಾರಿ ಸ್ಥಳದಲ್ಲಿ ಶಾಮಿಯಾನ ಹಾಕಿ ನೆರಳು ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಅಲ್ಲದೆ ಸ್ಥಳಕ್ಕೆ ಹೋಗಿ ಬರಲು ಆಟೊ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿದರು. ಬೇಸಿಗೆ ಆರಂಭವಾಗಿರುವ ಹಿನ್ನೆಲೆಯಲ್ಲಿ ನೆರಳು ಮತ್ತು ಕುಡಿಯುವ ನೀರಿನ ಕೊರತೆಯಿಂದ ಕಾರ್ಮಿಕರಿಗೆ ತೊಂದರೆ ಉಂಟಾಗಿದೆ. ಒಂದು ತಿಂಗಳಿಂದ ಕುಡಿಯುವ ನೀರು ಒದಗಿಸಿಲ್ಲ ಎಂದು ಲಕ್ಷ್ಮೀ ಆರೋಪಿಸಿದರು. ಸ್ಥಳಕ್ಕೆ ಆಗಮಿಸಿದ ಮಸ್ಕಿ ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಶಿವಾನಂದರೆಡ್ಡಿ ಲಿಖಿತ ಭರವಸೆ ನೀಡದ ಕಾರಣ ಪ್ರತಿಭಟನೆಯನ್ನು ಮುಂದುವರಿಸಲಾಗುವುದು ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ. ಈ ವೇಳೆ ಅಮರೇಶ ಸಾನಬಾಳ, ಬಸವರಾಜ, ಮೌನೇಶ, ಹುಲ್ಲೂರು, ಮಲ್ಲಯ್ಯ, ಶರಣಬಸಪ್ಪ, ಮಹಾಂತಪ್ಪ, ಮರಿದೇವಪ್ಪ, ಯಲ್ಲಪ್ಪ, ಕನಕಪ್ಪ ನಾಯಕ, ಯಲ್ಲಮ್ಮ, ಶಂಕ್ರಮ್ಮ, ನೀಲಮ್ಮ, ಗಂಗಮ್ಮ, ಚನ್ನಮ್ಮ, ಶಾಂತಮ್ಮ ಸೇರಿದಂತೆ ಹಲವರು ಭಾಗವಹಿಸಿದ್ದರು.

ವಾರ್ತಾ ಭಾರತಿ 25 Feb 2026 8:29 pm

ಇಸ್ರೇಲ್‍ನೊಂದಿಗಿನ ಶಾಶ್ವತ ಸ್ನೇಹವನ್ನು ಭಾರತ ಗೌರವಿಸುತ್ತದೆ : ಪ್ರಧಾನಿ ನರೇಂದ್ರ ಮೋದಿ

ಟೆಲ್‍ಅವೀವ್, ಫೆ.25: ಇಸ್ರೇಲ್ ಜೊತೆಗಿನ ಶಾಶ್ವತ ಮತ್ತು ಆಳವಾದ ಸ್ನೇಹವನ್ನು ಭಾರತ ಗೌರವಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ಹೇಳಿದ್ದಾರೆ. ಎರಡು ದಿನಗಳ ಇಸ್ರೇಲ್ ಭೇಟಿಗಾಗಿ ಬುಧವಾರ ಟೆಲ್‍ಅವೀವ್‍ನ ಬೆನ್ ಗ್ಯುರಿಯನ್ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಪ್ರಧಾನಿ ಮೋದಿಯವರನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತವರ ಪತ್ನಿ ಸಾರಾ ನೆತನ್ಯಾಹು ಹಾರ್ದಿಕವಾಗಿ ಸ್ವಾಗತಿಸಿದರು. ಇಸ್ರೇಲ್ ಮತ್ತು ಭಾರತದ ನಡುವಿನ ಬಾಂಧವ್ಯವು ಇಬ್ಬರು ಜಾಗತಿಕ ನಾಯಕರ ನಡುವಿನ ಪ್ರಬಲ ಮೈತ್ರಿಯಾಗಿದೆ. ನಾವೀನ್ಯತೆ, ಭದ್ರತೆ ಮತ್ತು ಹಂಚಿಕೆಯ ಕಾರ್ಯತಂತ್ರದ ದೃಷ್ಟಿಯಲ್ಲಿ ನಾವು ಪಾಲುದಾರರಾಗಿದ್ದೇವೆ. ಒಟ್ಟಾಗಿ ನಾವು ಸ್ಥಿರತೆ ಮತ್ತು ಅಭಿವೃದ್ಧಿಗೆ ಬದ್ಧವಾಗಿರುವ ರಾಷ್ಟ್ರಗಳ ಒಕ್ಕೂಟವನ್ನು ನಿರ್ಮಿಸುತ್ತಿದ್ದೇವೆ' ಎಂದು ಬೆಂಜಮಿನ್ ನೆತನ್ಯಾಹು `ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ. ಎರಡು ರಾಷ್ಟ್ರಗಳ ನಡುವಿನ ಸ್ನೇಹವನ್ನು ಬಲಪಡಿಸುವ ಮಾತುಕತೆ ಮತ್ತು ಫಲಪ್ರದ ಫಲಿತಾಂಶಗಳನ್ನು ನಿರೀಕ್ಷಿಸುತ್ತಿರುವುದಾಗಿ ಈ ಸಂದರ್ಭ ಪ್ರಧಾನಿ ಮೋದಿ ಹೇಳಿದರು. ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಆಳವಾದ ವೈಯಕ್ತಿಕ ಸಂಬಂಧವು ಎರಡೂ ರಾಷ್ಟ್ರಗಳ ನಡುವಿನ ಸ್ಥಿರ ಸಂಬಂಧಗಳ ಮೇಲೆ ಪ್ರಭಾವ ಬೀರುತ್ತದೆ ಎಂದು ಇಸ್ರೇಲ್‌ ಪ್ರಧಾನಿಯವರ ಕಚೇರಿ ಹೇಳಿದೆ. 9 ವರ್ಷಗಳಲ್ಲಿ ಇಸ್ರೇಲ್‍ಗೆ ತನ್ನ ಮೊದಲ ಭೇಟಿಯಲ್ಲಿ ಪ್ರಧಾನಿ ಮೋದಿ ಮತ್ತು ಇಸ್ರೇಲ್ ಪ್ರಧಾನಿ ಕೃತಕ ಬುದ್ದಿಮತ್ತೆ (ಎಐ) ಮತ್ತು ರಕ್ಷಣಾ ಕ್ಷೇತ್ರಗಳ ಕುರಿತು ಮಾತುಕತೆ ನಡೆಸುವ ನಿರೀಕ್ಷೆಯಿದೆ.

ವಾರ್ತಾ ಭಾರತಿ 25 Feb 2026 8:29 pm

Raichur | ಎಸೆಸೆಲ್ಸಿ ವಿದ್ಯಾರ್ಥಿಗಳು ಮೊಬೈಲ್, ಟಿವಿಯಿಂದ ದೂರವಿರಲು ಜಿ.ಪಂ ಸಿಇಓ ಈಶ್ವರ ಕುಮಾರ್ ಕಾಂದೂ ಸಲಹೆ

ರಾಯಚೂರು : ಎಸೆಸೆಲ್ಸಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳು ಮೊಬೈಲ್ ಬಳಕೆ ಹಾಗೂ ಟಿವಿ ವೀಕ್ಷಣೆಯನ್ನು ಕಡಿಮೆ ಮಾಡಿ ಓದಿನ ಕಡೆ ಹೆಚ್ಚಿನ ಗಮನ ಹರಿಸಬೇಕು ಎಂದು ರಾಯಚೂರು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ್ ಕುಮಾರ್ ಕಾಂದೂ ಸಲಹೆ ನೀಡಿದ್ದಾರೆ. ಹತ್ತನೇ ತರಗತಿ ವಿದ್ಯಾರ್ಥಿಯ ಜೀವನದ ಪ್ರಮುಖ ಘಟ್ಟವಾಗಿದ್ದು, ಈ ಸಂದರ್ಭದಲ್ಲಿ ಶಿಕ್ಷಕರಷ್ಟೇ ಅಲ್ಲ, ಪೋಷಕರ ಪ್ರೋತ್ಸಾಹ ಮತ್ತು ಬೆಂಬಲವೂ ಅತಿ ಮುಖ್ಯವಾಗಿದೆ ಎಂದು ತಿಳಿಸಿದ್ದಾರೆ. ಪರೀಕ್ಷೆಯು ಭಯದ ವಿಷಯವಾಗಬಾರದು. ಮಕ್ಕಳ ಮೇಲೆ ಹೆಚ್ಚಿನ ಅಂಕಗಳ ಒತ್ತಡ ಹೇರದೆ, “ನಿನ್ನ ಅತ್ಯುತ್ತಮ ಪ್ರಯತ್ನ ಮಾಡು, ನಾವು ನಿನ್ನ ಜೊತೆಯಲ್ಲಿದ್ದೇವೆ” ಎಂಬ ಭರವಸೆ ನೀಡಬೇಕು ಎಂದು ತಿಳಿಸಿದ್ದಾರೆ. ಮಗುವಿಗೆ ಮನೆಯಲ್ಲಿ ಪೂರಕ ವಾತಾವರಣ ಕಲ್ಪಿಸಬೇಕು. ಓದುತ್ತಿರುವಾಗ ಟಿವಿ ಹಾಗೂ ಮೊಬೈಲ್ ಬಳಕೆಯನ್ನು ಕಡಿಮೆ ಮಾಡಿ, ಏಕಾಗ್ರತೆಯಿಂದ ಓದಲು ಅವಕಾಶ ಕಲ್ಪಿಸಬೇಕು ಎಂದು ಸಲಹೆ ನೀಡಿದ್ದಾರೆ. ಪರೀಕ್ಷಾ ಸಮಯದಲ್ಲಿ ಪೌಷ್ಟಿಕ ಆಹಾರ, ಸಾಕಷ್ಟು ಕುಡಿಯುವ ನೀರು ನೀಡಬೇಕು. ಮಗು ಕನಿಷ್ಠ 6–7 ಗಂಟೆಗಳ ನಿದ್ರೆ ಪಡೆಯುತ್ತಿರುವುದನ್ನು ಖಚಿತಪಡಿಸಿಕೊಳ್ಳಬೇಕು. ನಿದ್ರೆ ಕಡಿಮೆಯಾದರೆ ಮರೆವು ಉಂಟಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿದರು. ನಿಗದಿತ ಸಮಯದಲ್ಲಿ ಓದು, ಮಧ್ಯೆ ಅಲ್ಪ ವಿರಾಮ, ಅರ್ಥ ಮಾಡಿಕೊಂಡು ಓದುವ ಅಭ್ಯಾಸ ಬೆಳೆಸಬೇಕು ಎಂದು ತಿಳಿಸಿದರು. ಮೊಬೈಲ್, ಟಿವಿ, ವ್ಯಾಟ್ಸ್‌ಆಪ್, ಇನ್‌ಸ್ಟಾಗ್ರಾಂ, ಯೂಟ್ಯೂಬ್ ಮುಂತಾದ ಸಾಮಾಜಿಕ ಜಾಲತಾಣಗಳು ವಿದ್ಯಾರ್ಥಿಗಳ ಏಕಾಗ್ರತೆಗೆ ಅಡ್ಡಿಯಾಗುತ್ತವೆ. ಆದ್ದರಿಂದ ಪರೀಕ್ಷೆ ಮುಗಿಯುವವರೆಗೂ ಅವುಗಳಿಂದ ದೂರವಿರಿಸಿ, ಅಗತ್ಯವಿದ್ದರೆ ಶೈಕ್ಷಣಿಕ ಕಾರಣಕ್ಕಾಗಿ ಮಾತ್ರ ಪೋಷಕರ ಮೇಲ್ವಿಚಾರಣೆಯಲ್ಲಿ ಬಳಸಲು ಅವಕಾಶ ನೀಡಬೇಕು ಎಂದು ಹೇಳಿದರು. ಪ್ರತಿ ಮಗುವಿನಲ್ಲೂ ವಿಶೇಷ ಪ್ರತಿಭೆ ಇದೆ. ಅಂಕಗಳು ಮಾತ್ರ ಜೀವನವಲ್ಲ; ಶ್ರದ್ಧೆ ಮತ್ತು ಪರಿಶ್ರಮ ಜೀವನದ ಯಶಸ್ಸಿಗೆ ಮುಖ್ಯ ಎಂದು ತಿಳಿಸಿ, ಜಿಲ್ಲೆಯ ಎಲ್ಲಾ ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಿ ಉತ್ತಮ ಯಶಸ್ಸು ಸಾಧಿಸಲಿ ಎಂದು ಶುಭಹಾರೈಸಿದರು.

ವಾರ್ತಾ ಭಾರತಿ 25 Feb 2026 8:26 pm

Raichur | ಪಿಎಸ್‌ಐ ವಿರುದ್ಧ ದೌರ್ಜನ್ಯ ಆರೋಪ: ಸಮಗ್ರ ತನಿಖೆಗೆ ಆಗ್ರಹ

ರಾಯಚೂರು : ಮುದುಗಲ್ ಪೊಲೀಸ್ ಠಾಣೆ ವ್ಯಾಪ್ತಿಯ ಮಟ್ಟೂರು ತಾಂಡದಲ್ಲಿ ನಡೆದ ಘಟನೆಯ ಸಂಬಂಧ, ಮುದುಗಲ್ ಪಿಎಸ್‌ಐ ವೆಂಕಟೇಶನಾಯಕ ಸುಳ್ಳು ಆರೋಪ ಮಾಡಿ ಹಲ್ಲೆ ನಡೆಸಿದ್ದು, ಮಹಿಳೆಯರ ಮೇಲೂ ದೌರ್ಜನ್ಯ ಎಸಗಿದ್ದಾರೆ ಎಂದು ರಾಮಪ್ಪ ನಾಯ್ಕ ಆರೋಪಿಸಿದರು. ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಮಕ್ಕಳ ಗಲಾಟೆ ಹಿನ್ನೆಲೆಯಲ್ಲಿ ರೈಲ್ವೆ ಇಲಾಖೆ ಪೇದೆ ರಾಘವೇಂದ್ರ ನಾಯಕ್ ವಿರುದ್ಧ ದೂರು ನೀಡಲಾಗಿತ್ತು. ಈ ವಿಚಾರಣೆಯ ಸಂದರ್ಭದಲ್ಲಿ ಪಿಎಸ್‌ಐ ವೆಂಕಟೇಶನಾಯಕ ಅವರು ರಾಘವೇಂದ್ರ ನಾಯಕ್ ಜೊತೆಗೂಡಿ ತನಿಖೆ ಹೆಸರಿನಲ್ಲಿ ತನ್ನ ಪತ್ನಿ ಸಕ್ಕೂಬಾಯಿ ಹಾಗೂ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ದೂರಿದರು. ರಾಘವೇಂದ್ರ ನಾಯಕ್ ಅವರೊಂದಿಗೆ ವಾಗ್ವಾದ ನಡೆದಿರುವುದು ನಿಜವಾದರೂ, ಪಿಎಸ್‌ಐ ಅವರನ್ನು ಕಟ್ಟಿಹಾಕಿ ಹೊಡೆದಿಲ್ಲ. ಆದರೂ ಸುಳ್ಳು ಪ್ರಕರಣ ದಾಖಲಿಸಲಾಗಿದೆ. ಮಹಿಳೆಯರ ಮೇಲೆಯೇ ಅವಾಚ್ಯ ಶಬ್ದಗಳಿಂದ ನಿಂದಿಸಿ ದೌರ್ಜನ್ಯ ಎಸಗಲಾಗಿದೆ ಎಂದು ಅವರು ಹೇಳಿದರು. ಈ ಸಂಬಂಧ ಗೃಹ ಸಚಿವರು, ಪೊಲೀಸ್ ಹಿರಿಯ ಅಧಿಕಾರಿಗಳು ಹಾಗೂ ಕರ್ನಾಟಕ ರಾಜ್ಯ ಮಹಿಳಾ ಆಯೋಗ ಅವರಿಗೆ ದೂರು ಸಲ್ಲಿಸಲಾಗಿದೆ. ಆದರೆ ಆರು ತಿಂಗಳು ಕಳೆದರೂ ಪಿಎಸ್‌ಐ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿರುವುದು ವಿಷಾದನೀಯ ಎಂದು ರಾಮಪ್ಪ ನಾಯ್ಕ ಆರೋಪಿಸಿದರು. ಹಲ್ಲೆಗೆ ಒಳಗಾದ ಸಕ್ಕೂಬಾಯಿ ಮಾತನಾಡಿ, ಪಿಎಸ್‌ಐ ಹಾಗೂ ಸಿಬ್ಬಂದಿ ಮಹಿಳೆ ಎಂದು ನೋಡದೇ ಅವಮಾನಕರವಾಗಿ ನಿಂದಿಸಿ ಹಲ್ಲೆ ನಡೆಸಿದ್ದಾರೆ. ತಕ್ಷಣ ಸಮಗ್ರ ತನಿಖೆ ನಡೆಸಿ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಶಿಲ್ಪಾ ಹಾಗೂ ಲಾಲಮ್ಮ ಉಪಸ್ಥಿತರಿದ್ದರು.

ವಾರ್ತಾ ಭಾರತಿ 25 Feb 2026 8:22 pm