ಧೈರ್ಯದಿಂದ ಪ್ರೇಮಿಗಳ ದಿನ ಆಚರಿಸಿ: ಯುವ ಕಾಂಗ್ರೆಸ್ ಕರೆ
ಸಮಾಜಘಾತುಕ ಸಂಘಟನೆಗಳಿಗೆ ಹೆದರಬೇಕಿಲ್ಲ: ಎಚ್.ಎಸ್.ಮಂಜುನಾಥ್ ಗೌಡ
Chikkamagaluru | ಅಪಘಾತ ಪರಿಹಾರ ನೀಡದ ಆರೋಪ: ಸರಕಾರಿ ಬಸ್ ನ್ಯಾಯಾಲಯದ ವಶಕ್ಕೆ!
ಚಿಕ್ಕಮಗಳೂರು: ಅಪಘಾತ ಪರಿಹಾರ ಕೊಡದ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಡಿಪೋಗೆ ಸೇರಿದ ಸರಕಾರಿ ಬಸ್ ಅನ್ನು ನ್ಯಾಯಾಲಯದ ಆದೇಶದ ಮೇರೆಗೆ ವಕೀಲರ ತಂಡ ಚನ್ನರಾಯಪಟ್ಟಣದಲ್ಲಿ ವಶಕ್ಕೆ ಪಡೆದಿರುವ ಘಟನೆ ಶುಕ್ರವಾರ ನಡೆದಿದೆ. ವಾಹನ ಅಪಘಾತ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೆ.ನಾಗರತ್ನಮ್ಮ ಎಂಬವರಿಗೆ 12.41 ಲಕ್ಷ ರೂ. ಪರಿಹಾರದ ಹಣ ಕ್ಲೈಮ್ ಆಗದಿದ್ದಕ್ಕೆ ಪ್ರಯಾಣಿಕರನ್ನು ಇಳಿಸಿ ವಾಹನ ಸೀಜ್ ಮಾಡಲಾಗಿದೆ. ಎರಡು ಬಸ್ಸಿನಲ್ಲಿದ್ದ ಪ್ರಯಾಣಿಕರನ್ನು ಇಳಿಸಿ ವಕೀಲರ ತಂಡ ಬಸ್ಸನ್ನು ವಶಕ್ಕೆ ಪಡೆದಿದೆ. ಪೊಲೀಸರನ್ನು ಕರೆ ತರದೇ, ಮಾಹಿತಿಯನ್ನು ನೀಡದೇ ಏಕಾಏಕಿ ವಾಹನ ವಶಕ್ಕೆ ಪಡೆದ ವಕೀಲರ ಕ್ರಮವನ್ನು ಪ್ರಯಾಣಿಕರು ಖಂಡಿಸಿದ್ದಾರೆ. ಅಪಘಾತದ ಹಣ ಕ್ಲೈಮ್ ಆಗದಿದ್ದಕ್ಕೆ ನ್ಯಾಯಾಲಯದಿಂದ ಗಾಡಿ ಜಪ್ತಿಗೆ ಆದೇಶ ಪಡೆಯಲಾಗಿತ್ತು. ಮೂವರು ವಕೀಲರ ತಂಡದಿಂದ ಎರಡು ಸರಕಾರಿ ಬಸ್ ಜಪ್ತಿ ಮಾಡಿ ವಾಹನವನ್ನು ಚನ್ನರಾಯಪಟ್ಟಣ ಕೋರ್ಟ್ ಆವರಣಕ್ಕೆ ತಂದು ನಿಲ್ಲಿಸಲಾಗಿದೆ. ರಸ್ತೆ ಮಧ್ಯೆ ಇಳಿಸಿದ್ದರಿಂದ ಸರಕಾರದ ವಿರುದ್ಧ ಎರಡೂ ಬಸ್ಸಿನ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಿಂದ ಶೃಂಗೇರಿಗೆ ಬಂದು ಬೆಂಗಳೂರಿಗೆ ಹೋಗುತ್ತಿದ್ದ ಮತ್ತು ಬೆಂಗಳೂರಿನಿಂದ ಮತ್ತೆ ಚಿಕ್ಕಮಗಳೂರಿಗೆ ಬರುವಾಗ ಮಾರ್ಗ ಮಧ್ಯೆ ಬಸ್ಸುಗಳನ್ನು ತಡೆಯಲಾಗಿದೆ.
ರಾಹುಲ್ ಗಾಂಧಿ ಸದಸ್ಯತ್ವ ರದ್ದುಗೊಳಿಸಬೇಕೆಂದು ಕೋರಿ ಸ್ವತಂತ್ರ ನಿರ್ಣಯದ ನೋಟಿಸ್; ಏನಿದು substantive motion ?
ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ಸ್ವತಂತ್ರ ನಿರ್ಣಯದ (substantive motion) ನೋಟಿಸ್ ನೀಡಿದ್ದಾರೆ. ಇದು ನೇರವಾಗಿ ರಾಹುಲ್ ಗಾಂಧಿ ಅವರ ಸದಸ್ಯತ್ವವನ್ನೇ ಗುರಿಯಾಗಿಸುತ್ತದೆ. ಗುರುವಾರ ನೋಟಿಸ್ ನೀಡಿದ ದುಬೆ, ದೇಶವನ್ನು ಅಸ್ಥಿರಗೊಳಿಸುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯ ನಿರಂತರ ದುಷ್ಕೃತ್ಯಗಳ ಬಗ್ಗೆ ಸಂಸದೀಯ ಸಮಿತಿಯಿಂದ ತನಿಖೆ ನಡೆಸಬೇಕು, ರಾಹುಲ್ ಗಾಂಧಿಯವರನ್ನು ಸಂಸದ ಸ್ಥಾನದಿಂದ ಹೊರಹಾಕಬೇಕು ಮತ್ತು ಜೀವನದುದ್ದಕ್ಕೂ ಅವರನ್ನು ಚುನಾವಣೆಗಳಿಂದ ನಿಷೇಧಿಸಬೇಕು ಎಂದು ಒತ್ತಾಯಿಸಿದ್ದಾರೆ. ದುಬೆ ನೀಡಿದ ನೋಟಿಸ್ನಲ್ಲಿ ಏನಿದೆ? ದುಬೆ ಸಲ್ಲಿಸಿರುವ ಸ್ವತಂತ್ರ ನಿರ್ಣಯದ ನೋಟಿಸ್ನಲ್ಲಿ ರಾಹುಲ್ ಗಾಂಧಿಯನ್ನು ಭಾರತವನ್ನು ಒಳಗಿನಿಂದ ಅಸ್ಥಿರಗೊಳಿಸುವ ಗ್ಯಾಂಗ್ ನ ಪ್ರಮುಖ ಘಟಕ ಎಂದು ಆರೋಪಿಸಿದ್ದಾರೆ. ಲೋಕಸಭೆಯ ಬಜೆಟ್ ಅಧಿವೇಶನದಲ್ಲಿ ರಾಹುಲ್ ಗಾಂಧಿ ಅವರು ಮಾಡಿದ ಭಾಷಣದಲ್ಲಿ ಮಾಜಿ ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಎಂ.ಎಂ. ನರವಣೆ ಅವರ ಅಪ್ರಕಟಿತ ಪುಸ್ತಕವನ್ನು ಉಲ್ಲೇಖಿಸಿದಕ್ಕೆ ನೋಟಿಸ್ ನಲ್ಲಿ ಆಕ್ಷೇಪ ವ್ಯಕ್ತಪಡಿಸಲಾಗಿದೆ. 2020ರಲ್ಲಿ ಚೀನಾದೊಂದಿಗಿನ ಗಡಿ ಉದ್ವಿಗ್ನತೆಯ ಸಂದರ್ಭದಲ್ಲಿ ಜನರಲ್ ನರವಣೆ ಅವರ ಪುಸ್ತಕವು ಪ್ರಧಾನಿ ನರೇಂದ್ರ ಮೋದಿ ಜವಾಬ್ದಾರಿಯಿಂದ ನುಣುಚಿಕೊಂಡಿರುವುದನ್ನು ಬಹಿರಂಗಪಡಿಸುತ್ತದೆ ಎಂದು ರಾಹುಲ್ ಹೇಳಿದ್ದರು. ರಾಹುಲ್ ಗಾಂಧಿಯವರು ಭಾರತೀಯ ಸೇನೆ ಮತ್ತು ರಕ್ಷಣಾ ಸಚಿವಾಲಯವನ್ನು ಅವಮಾನಿಸಲು ಉದ್ದೇಶಪೂರ್ವಕವಾಗಿ ಪುಸ್ತಕವನ್ನು ಬಳಸಿದ್ದಾರೆ. ಪ್ರಧಾನಿಯವರನ್ನು ಅವರು ಟೀಕಿಸಿದ್ದಾರೆ ಎಂದು ದುಬೆ ಆರೋಪಿಸಿದ್ದಾರೆ. ಭಾರತ–ಚೀನಾ ನಡುವೆ 2020ರಲ್ಲಿ ಲಡಾಖ್ ನಲ್ಲಿ ನಡೆದ ಮುಖಾಮುಖಿ ಬಗ್ಗೆ ನರವಣೆ ಅವರ ಅಪ್ರಕಟಿತ ಪುಸ್ತಕದಲ್ಲಿನ ಅಂಶಗಳ ಕುರಿತು ನಿಯತಕಾಲಿಕವೊಂದರಲ್ಲಿ ಪ್ರಕಟವಾದ ಲೇಖನವನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಲೋಕಸಭೆಯಲ್ಲಿ ಪ್ರಸ್ತಾಪಿಸಿದ್ದು ಭಾರೀ ಗದ್ದಲಕ್ಕೆ ಕಾರಣವಾಗಿತ್ತು. ಅಪ್ರಕಟಿತ ಪುಸ್ತಕವನ್ನು ಸದನದಲ್ಲಿ ಉಲ್ಲೇಖಿಸಲು ಸಾಧ್ಯವಿಲ್ಲ ಎಂದು ಆಡಳಿತರೂಢ ಬಿಜೆಪಿ ಸಂಸದರು ಆಕ್ಷೇಪ ವ್ಯಕ್ತಪಡಿಸಿದ್ದರು. ಜನರಲ್ ನರವಣೆ ಅವರ ‘ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ’ ಹಸ್ತಪ್ರತಿ 2023ರಿಂದ ರಕ್ಷಣಾ ಸಚಿವಾಲಯದ ಅನುಮೋದನೆಗಾಗಿ ಬಾಕಿ ಇದೆ. ಆದರೆ ರಾಹುಲ್ ಗಾಂಧಿ ಪುಸ್ತಕದ ಮುದ್ರಿತ ಪ್ರತಿಯನ್ನು ತೋರಿಸಿದ್ದರು. ಈ ಗದ್ದಲದ ನಡುವೆಯೇ ‘ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ’ ಪ್ರಕಾಶನ ಹಕ್ಕುಗಳನ್ನು ಹೊಂದಿರುವ ಪೆಂಗ್ವಿನ್ ರ್ಯಾಂಡಮ್ ಹೌಸ್ ಇಂಡಿಯಾ, ಈ ಪುಸ್ತಕ ಇನ್ನೂ ಪ್ರಕಟಣೆಗೆ ಬಂದಿಲ್ಲ, ಮುದ್ರಿತ ಅಥವಾ ಡಿಜಿಟಲ್ ಪ್ರತಿಗಳನ್ನು ಪ್ರಕಟಣೆ, ವಿತರಣೆ, ಮಾರಾಟ ಅಥವಾ ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಲಾಗಿಲ್ಲ ಎಂದು ಸ್ಪಷ್ಟಪಡಿಸಿದೆ. ಸಬ್ಸ್ಟಾನ್ಸಿವ್ ಮೋಷನ್ ಎಂದರೇನು? ಸದಸ್ಯರನ್ನು ಹೊರಹಾಕಲು ಈ ಹಿಂದೆಯೂ ಸಬ್ಸ್ಟಾನ್ಸಿವ್ ಮೋಷನ್ ಬಳಸಿದ್ದಕ್ಕೆ ಪೂರ್ವನಿದರ್ಶನಗಳಿವೆ. ಉದಾಹರಣೆಗೆ 2005ರ ‘cash-for-questions’ ಪ್ರಕರಣದಲ್ಲಿ ಕನಿಷ್ಠ 10 ಲೋಕಸಭಾ ಸದಸ್ಯರನ್ನು ಸಂಸದೀಯ ತನಿಖಾ ಸಮಿತಿಯು ನಿರ್ದಿಷ್ಟ ಪ್ರಶ್ನೆಗಳನ್ನು ಕೇಳಲು ಹಣ ಪಡೆದ ಆರೋಪದ ಮೇಲೆ ಹೊರಹಾಕಿತ್ತು. ಇದೇ ರೀತಿ ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಅವರನ್ನು 2023ರಲ್ಲಿ ಹಣಕ್ಕಾಗಿ ಪ್ರಶ್ನೆ ಪ್ರಕರಣದಲ್ಲಿ ತಪ್ಪಿತಸ್ಥರೆಂದು ಸಂಸದೀಯ ನೀತಿ ಸಮಿತಿಯು ಘೋಷಿಸಿದ ಬಳಿಕ, ಸದನದ ಮತದಾನದ ಮೂಲಕ ಹೊರಹಾಕಲಾಯಿತು. ನಂತರ ಮೊಯಿತ್ರಾ 2024ರ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದ ಅದೇ ಕೃಷ್ಣನಗರ ಲೋಕಸಭಾ ಕ್ಷೇತ್ರವನ್ನು ಗೆದ್ದು ಸದನಕ್ಕೆ ಮರಳಿದರು. ಅವರ ವಿರುದ್ಧದ ಕೇಂದ್ರ ಸರ್ಕಾರದ ಆರೋಪಗಳು ಹಾಗೂ ಉಚ್ಚಾಟನೆಯ ವಿರುದ್ಧದ ಅವರ ಸವಾಲು ಈಗಲೂ ನ್ಯಾಯಾಲಯಗಳಲ್ಲಿ ಮುಂದುವರಿದಿವೆ. ಸಂಸತ್ತಿನ ಘನತೆಗೆ ಧಕ್ಕೆ ತರುವ ಗಂಭೀರ ದುಷ್ಕೃತ್ಯ ಅಥವಾ ಕ್ರಮಗಳಿಗಾಗಿ ಲೋಕಸಭೆಯು ತನ್ನ ಸದಸ್ಯರನ್ನು ಹೊರಹಾಕುವ ಅಧಿಕಾರವನ್ನು ಹೊಂದಿದೆ. ಇದು ಸಂವಿಧಾನದ 105ನೇ ವಿಧಿ ಮತ್ತು ಸಂಸದೀಯ ನಿಯಮಗಳಿಗೆ ಅನುಗುಣವಾಗಿದೆ. ಸಬ್ಸ್ಟಾನ್ಸಿವ್ ಮೋಷನ್ ಮಹತ್ವದ ವಿಷಯಗಳ ಬಗ್ಗೆ ಸದನದ ನಿರ್ಧಾರ ಅಥವಾ ಅಭಿಪ್ರಾಯವನ್ನು ವ್ಯಕ್ತಪಡಿಸಲು ಬಳಸುವ ಸ್ವತಂತ್ರ ಪ್ರಸ್ತಾವನೆಯಾಗಿದೆ. ಸರಳವಾಗಿ ಹೇಳುವುದಾದರೆ, ಇದು ಚರ್ಚೆ ಮತ್ತು ನಿರ್ಧಾರಕ್ಕಾಗಿ ಸದನದ ಮುಂದೆ ಇಡಲಾದ ಔಪಚಾರಿಕ ಪ್ರಸ್ತಾವನೆ. ಸ್ಪೀಕರ್ ಅಂಗೀಕರಿಸಿದರೆ, ಅದು ಕಡ್ಡಾಯ ಮತದಾನದೊಂದಿಗೆ ಚರ್ಚೆಗೆ ಒಳಪಡುತ್ತದೆ. ರಾಹುಲ್ ಗಾಂಧಿ ವಿರುದ್ಧ ನಿಶಿಕಾಂತ್ ದುಬೆ ಗಂಭೀರ ಆರೋಪ ಹಕ್ಕುಚ್ಯುತಿ ನೋಟಿಸ್ ಅಥವಾ ಪ್ರಸ್ತಾವನೆಗಿಂತ ಸ್ವತಂತ್ರ ನಿರ್ಣಯದ ನೋಟಿಸ್ ಭಿನ್ನವಾಗಿದೆ. ಇದು ಸಾಮಾನ್ಯವಾಗಿ ಹೆಚ್ಚು ನೇರವಾಗಿ ಕ್ರಮ ಕೈಗೊಳ್ಳಬಹುದಾದದ್ದು ಎಂದು ಪರಿಗಣಿಸಲಾಗುತ್ತದೆ. ರಾಹುಲ್ ಗಾಂಧಿ ವಿರುದ್ಧ ಹಕ್ಕುಚ್ಯುತಿ ನೋಟಿಸ್ ನೀಡಿಲ್ಲ. ಅವರ ಸದಸ್ಯತ್ವವನ್ನು ಯಾಕೆ ರದ್ದುಗೊಳಿಸಬೇಕು ಎಂಬುದಕ್ಕೆ ಕಾರಣಸಹಿತ ಸ್ವತಂತ್ರ ನಿರ್ಣಯದ ನೋಟಿಸ್ ಸಲ್ಲಿಸಿರುವೆ ಎಂದು ದುಬೆ ಹೇಳಿದ್ದಾರೆ. ರಾಹುಲ್ ಗಾಂಧಿ ಅವರನ್ನು ಉಚ್ಚಾಟಿಸುವುದಲ್ಲದೆ, ಚುನಾವಣೆಯಲ್ಲಿ ಸ್ಪರ್ಧಿಸುವುದನ್ನು ನಿಷೇಧಿಸಬೇಕೆಂದು ಇದರಲ್ಲಿ ಕೋರಲಾಗಿದೆ. ರಾಹುಲ್ ಗಾಂಧಿ ದೇಶವನ್ನು ದಾರಿ ತಪ್ಪಿಸುತ್ತಿದ್ದಾರೆ. ಮಾಜಿ ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಎಂ.ಎಂ. ನರವಣೆ ಅವರ ಅಪ್ರಕಟಿತ ಪುಸ್ತಕ ಮತ್ತು ಇತ್ತೀಚಿನ ಭಾರತ–ಅಮೆರಿಕಾ ವ್ಯಾಪಾರ ಒಪ್ಪಂದದಂತಹ ವಿಷಯಗಳ ಬಗ್ಗೆ ಅವರು ಆಧಾರರಹಿತ ಹಾಗೂ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ರಕ್ಷಣೆ, ಹಣಕಾಸು, ವಾಣಿಜ್ಯ ಅಥವಾ ಬಾಹ್ಯ ವ್ಯವಹಾರಗಳಲ್ಲಿ ಸರ್ಕಾರವನ್ನು ‘ಮಾನಹಾನಿ’ ಮಾಡುವ ಉದ್ದೇಶದಿಂದ ರಾಹುಲ್ ಗಾಂಧಿ ವಿವಾದ ಸೃಷ್ಟಿಸಲು ಪ್ರಯತ್ನಿಸಿದ್ದು ಇದೇ ಮೊದಲಲ್ಲ. ಸೊರೋಸ್ ಫೌಂಡೇಷನ್, ಯುಎಸ್ಎಐಡಿ, ಫೋರ್ಡ್ ಫೌಂಡೇಷನ್ ನೆರವಿನೊಂದಿಗೆ ರಾಹುಲ್ ಗಾಂಧಿ ವಿದೇಶಗಳಿಗೆ ಭೇಟಿ ನೀಡುತ್ತಾರೆ. ಇದು ದೇಶವಿರೋಧಿ ಶಕ್ತಿಗಳೊಂದಿಗೆ ಸೇರಿ ಪಿತೂರಿ ನಡೆಸಿದಂತೆಯೇ. ಅವರು ಥೈಲ್ಯಾಂಡ್, ವಿಯೆಟ್ನಾಂ, ಕಾಂಬೋಡಿಯಾ ಮೊದಲಾದ ದೇಶಗಳಿಗೆ ಭೇಟಿ ನೀಡುತ್ತಾರೆ. ಈ ಪ್ರವಾಸಗಳಿಗೆ ಮೇಲ್ಕಂಡ ಸಂಘಟನೆಗಳು ನೆರವು ನೀಡುತ್ತವೆ ಎಂದು ದುಬೆ ಆರೋಪಿಸಿದ್ದಾರೆ. ಅದೇ ವೇಳೆ ಸಂಸತ್ತಿನ ಘನತೆಯನ್ನು ರಕ್ಷಿಸುವ ಮತ್ತು ಹೊಣೆಗಾರಿಕೆಯನ್ನು ಖಚಿತಪಡಿಸಿಕೊಳ್ಳುವ ಗುರಿಯನ್ನು ಈ ನಿರ್ಣಯ ಹೊಂದಿದೆ ಎಂದು ದುಬೆ ಸಮರ್ಥಿಸಿಕೊಂಡಿದ್ದಾರೆ. ಆದಾಗ್ಯೂ, ಕಾಂಗ್ರೆಸ್ ಇಂತಹ ಪ್ರಯತ್ನಗಳನ್ನು ರಾಜಕೀಯ ಪ್ರೇರಿತವೆಂದು ಪ್ರತಿಕ್ರಿಯಿಸಿದೆ. ಇದು ತಮ್ಮ ನಾಯಕತ್ವವನ್ನು ಗುರಿಯಾಗಿಸುವ ಪ್ರಯತ್ನದ ಭಾಗವೆಂದು ಹೇಳಿದೆ. ಮುಂದೇನಾಗುತ್ತದೆ? ನಿಯಮಿತ ರಾಜಕೀಯ ವಿವಾದಗಳಲ್ಲಿ ಇಂತಹ ನಿರ್ಣಯಗಳನ್ನು ಸಾಮಾನ್ಯವಾಗಿ ಅನ್ವಯಿಸಲಾಗುವುದಿಲ್ಲ. ನಿರ್ಣಯವನ್ನು ಅಂಗೀಕರಿಸಿದರೆ, ಲೋಕಸಭೆಯು ಈ ವಿಷಯದ ಬಗ್ಗೆ ಔಪಚಾರಿಕವಾಗಿ ಚರ್ಚಿಸಿ ನಿರ್ಧರಿಸಬೇಕಾಗುತ್ತದೆ. ಪ್ರಸ್ತುತ ಮುಂದಿನ ಹಂತವು ಸ್ಪೀಕರ್ ಓಂ ಬಿರ್ಲಾ ಅವರ ನಿರ್ಧಾರಕ್ಕೆ ಅವಲಂಬಿತವಾಗಿದೆ. ಅವರು ನಿರ್ಣಯವನ್ನು ಒಪ್ಪಿಕೊಳ್ಳಬಹುದು, ನಿರಾಕರಿಸಬಹುದು ಅಥವಾ ನಿಯಮಗಳ ಅಡಿಯಲ್ಲಿ ಮತ್ತೊಂದು ಮಾರ್ಗವನ್ನು ನಿರ್ಧರಿಸಬಹುದು. ಸರ್ಕಾರ ಯಾವುದೇ ಗೊತ್ತುವಳಿ ಮಂಡಿಸುವುದಿಲ್ಲ: ರಿಜಿಜು ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ಕ್ರಮ ಕೋರಿ ಸರ್ಕಾರ ಯಾವುದೇ ಗೊತ್ತುವಳಿ ಮಂಡಿಸುವುದಿಲ್ಲ ಎಂದು ಕೇಂದ್ರ ಸಚಿವ ಕಿರಣ್ ರಿಜಿಜು ಹೇಳಿದ್ದಾರೆ. ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸಂಸದರು ಈಗಾಗಲೇ ‘ಸ್ವತಂತ್ರ ನಿರ್ಣಯ’ದ ನೋಟಿಸ್ ಸಲ್ಲಿಸಿದ್ದಾರೆ. ಇದೇ ವಿಚಾರವಾಗಿ ಮತ್ತೊಂದು ಗೊತ್ತುವಳಿ ಮಂಡಿಸುವುದಿಲ್ಲ. ನಿಶಿಕಾಂತ್ ದುಬೆ ಸಲ್ಲಿಸಿರುವ ನೋಟಿಸ್ ಅನ್ನು ಹಕ್ಕುಬಾಧ್ಯತಾ ಸಮಿತಿ ಅಥವಾ ನೈತಿಕ ಸಮಿತಿಗೆ ಕಳುಹಿಸಬೇಕೇ, ಬೇಡವೇ ಅಥವಾ ನೇರವಾಗಿ ಲೋಕಸಭೆಯಲ್ಲಿ ಮಂಡಿಸಬೇಕೇ ಎಂಬುದರ ಬಗ್ಗೆ ಸ್ಪೀಕರ್ ಜೊತೆ ಸಮಾಲೋಚನೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ತಮಿಳುನಾಡು ಚುನಾವಣೆಯಲ್ಲಿ ಉಚಿತ ಯೋಜನೆಗಳ ಪೈಪೋಟಿ, ಗೆಲುವಿಗಾಗಿ ಭರ್ಜರಿ ಹೋರಾಟ ಶುರು | Tamil Nadu Election
ತಮಿಳುನಾಡು ವಿಧಾನಸಭೆ ಚುನಾವಣೆಗೆ ಇನ್ನೇನು ಕೆಲವೇ ಕೆಲವು ದಿನಗಳು ಬಾಕಿ ಉಳಿದಿದ್ದು, ಈ ಚುನಾವಣೆ ಗೆದ್ದು ಬೀಗಲು ರಾಜಕೀಯ ಪಕ್ಷಗಳ ನಾಯಕರು ನಾನಾ ರೀತಿಯ ರಣತಂತ್ರ ಹೆಣೆಯುತ್ತಾ ಇದ್ದಾರೆ. ತಮಿಳುನಾಡು ಸೇರಿದಂತೆ ಕೇರಳ, ಪಶ್ಚಿಮ ಬಂಗಾಳ ಹಾಗೂ ಅಸ್ಸಾಂ ರಾಜ್ಯದ ವಿಧಾನಸಭೆ ಚುನಾವಣೆ ಕೂಡ ಒಟ್ಟಿಗೆ ಬರಲಿದೆ. ಹೀಗಿದ್ದರೂ ತಮಿಳುನಾಡು ರಾಜ್ಯದ ಚುನಾವಣೆ ಮಾತ್ರ ಇದೀಗ ಭಾರಿ
Chikkamagaluru | ಭೂ ಭೌತಿಕ ಸಮೀಕ್ಷೆ ಉದ್ದೇಶದಿಂದ ಲಘು ವಿಮಾನ ಹಾರಾಟ; ಆತಂಕಕ್ಕೆ ತೆರೆ
ಚಿಕ್ಕಮಗಳೂರು: ಜಿಲ್ಲೆಯ ನರಸಿಂಹರಾಜಪುರ ತಾಲೂಕಿನ ಬಾಳೆಹೊನ್ನೂರು ಮತ್ತು ಕಳಸ ತಾಲೂಕು ವ್ಯಾಪ್ತಿಯಲ್ಲಿ ಕಳೆದ ಮೂರು ದಿನಗಳ ಹಿಂದೆ ಲಘು ವಿಮಾನವೊಂದು ತಳಮಟ್ಟದಲ್ಲಿ ಹಾರಾಟ ನಡೆಸಿ ಇಲ್ಲಿನ ಜನತೆಯ ಆತಂಕಕ್ಕೆ ಕಾರಣವಾಗಿತ್ತು, ಈ ಲಘು ವಿಮಾನ ಭೂ ಭೌತಿಕ ಸಮೀಕ್ಷೆ ಉದ್ದೇಶದಿಂದ ಹಾರಾಟ ನಡೆಸಿದೆ ಎಂಬುದು ಲಭ್ಯ ಮೂಲಗಳಿಂದ ತಿಳಿದು ಬಂದಿದ್ದು, ಇಲ್ಲಿನ ಜನರು ನಿರಾಳರಾಗಿದ್ದಾರೆ. ಕಳೆದ ಮೂರು ದಿನಗಳ ಹಿಂದೆ ಜಿಲ್ಲೆಯ ಮಲೆನಾಡು ಭಾಗದಲ್ಲಿ ಲಘು ವಿಮಾನವೊಂದು ಎರೆಡೆರೆಡು ಬಾರಿ ತಳಮಟ್ಟದಲ್ಲಿ ಹಾರಾಟ ನಡೆಸಿ ಸಂಚಲನ ಮೂಡಿಸಿತ್ತು. ಯಾವ ಉದ್ದೇಶಕ್ಕಾಗಿ ಲಘು ವಿಮಾನ ಹಾರಾಟ ನಡೆಸುತ್ತಿದೆ. ವಿಮಾನದಲ್ಲಿ ಯಾರಿದ್ದಾರೆ. ಎಲ್ಲಿಂದ ವಿಮಾನ ಬಂದಿತ್ತು ಎಂಬ ಹಲವು ಪ್ರಶ್ನೆಗಳು ಇಲ್ಲಿನ ಜನರಲ್ಲಿ ಮೂಡಿತ್ತು. ಈ ವಿಮಾನ ಹಾರಾಟದ ಬಗ್ಗೆ ಅರಣ್ಯ, ಪೊಲೀಸ್ ಇಲಾಖೆಗೂ ಯಾವುದೇ ಮಾಹಿತಿ ಇರಲಿಲ್ಲ. ಸದ್ಯ ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ದೊರೆತ್ತಿದ್ದು, ಭೂ ಗರ್ಭದ ಸಮೀಕ್ಷೆ ಉದ್ದೇಶದಿಂದ ಲಘು ವಿಮಾನ ಪಶ್ಚಿಮಘಟ್ಟ ಪ್ರದೇಶದಲ್ಲಿ ಹಾರಾಟ ನಡೆಸಿದೆ ಎಂಬುದು ಮೂಲಗಳಿಂದ ತಿಳಿದು ಬಂದಿದೆ. ಬಾಳೆಹೊನ್ನೂರು ಮತ್ತು ಕಳಸ ತಾಲೂಕು ಭಾಗದಲ್ಲಿ ಈ ವಿಮಾನ ಹಾರಾಟ ಸಂಚಲನ ಮೂಡಿಸಿದ್ದು, ಇದು ಸೆಸ್ನಾ 208 ಗ್ರ್ಯಾಂಡ್ ಕಾರವಾನ್ ವಿಮಾನವಾಗಿದ್ದು, ಈ ಪ್ರದೇಶದಲ್ಲಿ ವೈಜ್ಞಾನಿಕ ಉದ್ದೇಶಕ್ಕಾಗಿ ಕಾರ್ಯ ನಿರ್ವಹಿಸಿದೆ, ವಿಶೇಷವಾಗಿ ಭೂ ಭೌತಿಕ ಸಮೀಕ್ಷೆ ನಡೆಸುತ್ತಿದೆ ಎನ್ನಲಾಗುತ್ತಿದೆ. ಭೂಮಿಯ ಅಡಿಭಾಗವನ್ನು ಗಾಳಿಯಿಂದ ಮ್ಯಾಪಿಂಗ್ ಮಾಡುವ ಕಂಪೆನಿ ಇದನ್ನು ನಿರ್ವಹಣೆ ಮಾಡಲಾಗುತ್ತಿದ್ದು, ವಿಮಾನದ ಹಿಂಭಾಗದಲ್ಲಿ ಉದ್ದವಾದ ಸೂಜಿತರಹ ಕಾಣುವ ಸಾಧನ ಇದೆ. ಇದನ್ನು ಮ್ಯಾಗ್ನೆಟೋಮೀಟರ್ ಸ್ಟಿಂಗರ್ ಎಂದು ಕರೆಯಲಾಗುತ್ತದೆ. ಇದು ಭೂಮಿಯ ಚುಂಬಕ ವ್ಯತ್ಯಾಸಗಳನ್ನು ಅಳೆಯಲು ಬಳಸಲಾಗುತ್ತದೆ ಎಂದು ಹೇಳ ಲಾಗುತ್ತದೆ. ಈ ಲಘು ವಿಮಾನವೂ ಮಂಗಳೂರು(ಐಎಕ್ಸ್ಇ) ವಿಮಾನ ನಿಲ್ದಾಣದಿಂದ ಹಾರಾಟ ನಡೆಸಿ ಚಿಕ್ಕಮಗಳೂರು ಹಾಗೂ ಪಶ್ಚಿಮಘಟ್ಟ ಪ್ರದೇಶಗಳಲ್ಲಿ ಸಮೀಕ್ಷೆ ನಡೆಸಿದೆ ಎನ್ನಲಾಗುತ್ತಿದೆ. ಈ ವಿಮಾನವು ಕಡಿಮೆ ಎತ್ತರದಲ್ಲಿ ಹಾರಾಡುವಂತಹ ವಿಮಾನವಾಗಿದ್ದು, ಜಿಗ್ ಜಾಗ್ ಅಥವಾ ಜಾಲರಿಯ ರೀತಿಯಲ್ಲಿ ಹಾರಾಟ ನಡೆಸುತ್ತದೆ. ಒಂದೇ ಪ್ರದೇಶದ ಮೇಲೆ ಮತ್ತೆ ಮತ್ತೆ ಹಾರಾಟ ನಡೆಸುತ್ತದೆ ಎಂದು ತಿಳಿದು ಬಂದಿದೆ. ಈ ಲಘು ವಿಮಾನವೂ ಖನಿಜ ಸಂಪತ್ತು, ಭೂಗರ್ಭ ರಚನೆ, ಭೂಗರ್ಭ ಜಲ ಸಂಪನ್ಮೂಲ, ಚುಂಬಕ ಕ್ಷೇತ್ರದ ಬದಲಾವಣೆಗಳ ಬಗ್ಗೆ ಮಾಹಿತಿ ಸಂಗ್ರಹಿಸುತ್ತದೆ. ಈ ಹಿನ್ನೆಲೆಯಲ್ಲಿ ಲಘು ವಿಮಾನ ಹಾರಾಟ ನಡೆಸಿದೆ ಎಂಬುದು ಲಭ್ಯ ಮೂಲಗಳಿಂದ ತಿಳಿದು ಬಂದಿದೆ. ಒಟ್ಟಾರೆ ಕಳೆದ ಮೂರು ದಿನಗಳ ಹಿಂದೆ ತಳ ಮಟ್ಟದಲ್ಲಿ ಹಾರಾಟ ನಡೆಸಿ ಜನರ ಆತಂಕಕ್ಕೆ ಕಾರಣವಾಗಿದ್ದ ವಿಮಾನವೂ ಭೂ ಭೌತಿಕ ಸಮೀಕ್ಷೆಗೆ ಹಾರಾಟ ನಡೆಸಿದ್ದೆಂದು ತಿಳಿದು, ಈ ವಿಚಾರ ಇಲ್ಲಿನ ಜನರು ನಿಟ್ಟುಸಿರು ಬಿಡುವಂತೆ ಮಾಡಿದೆ.
ಇರಾನ್ ಕಡೆಗೆ ನುಗ್ಗಿ ಬಂತು ಮತ್ತೊಂದು ಬೃಹತ್ ನೌಕೆ, ಅಮೆರಿಕ ಮುಂದಿನ ಹೆಜ್ಜೆ ಬಗ್ಗೆ ಭಾರಿ ಕುತೂಹಲ | USA Military
ಅಮೆರಿಕ ತನ್ನ ಸೇನಾ ಬಲವನ್ನು ನೇರವಾಗಿ ಇರಾನ್ ವಿರುದ್ಧ ಪ್ರಯೋಗ ಮಾಡಲು ಸಜ್ಜಾಗಿ ಇದೀಗ ಕಾಯುತ್ತಿದೆ. ಅತ್ತ ಶಾಂತಿ ಮಾತುಕತೆ ಎಡವಟ್ಟಿನ ಬಳಿಕ ತಾನೇ ಮಾಡಿಕೊಂಡ ತಪ್ಪಿಗೆ ಇರಾನ್ ಕೂಡ ಯುದ್ಧ ಭಯದಲ್ಲಿ ನಲುಗುವ ಸ್ಥಿತಿ ನಿರ್ಮಾಣ ಆಗಿದೆ. ಇನ್ನೊಂದು ಕಡೆ ಮಧ್ಯಪ್ರಾಚ್ಯ ಭಾಗದಲ್ಲಿ ಪರಮಾಣು ಯುದ್ಧದ ಆತಂಕ ಕ್ಷಣಕ್ಷಣಕ್ಕೂ ಹೆಚ್ಚಾಗುತ್ತಾ ಸಾಗುತ್ತಿದೆ. ಇದು ಸಾಲದ ಎನ್ನುವಂತೆ,
ರೌಡಿ ಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣ: ಭೈರತಿ ಬಸವರಾಜು ಬಂಧನದ ಬಳಿಕ ಈಗ ಪೊಲೀಸರಿಗೂ ತಟ್ಟಿದ ಸಿಐಡಿ ತನಿಖೆ ಸಂಕಷ್ಟ!
ಇಡೀ ಬೆಂಗಳೂರನ್ನೇ ಬೆಚ್ಚಿ ಬೀಳಿಸಿದ್ದ ರೌಡಿ ಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪೊಲೀಸರಿಗೂ ಸಿಐಡಿ ತನಿಖಾ ಸಂಕಷ್ಟ ಪ್ರಾರಂಭ ಆಗಿದೆ. ಹತ್ಯೆಗೆ ಪರೋಕ್ಷವಾಗಿ ಕಾರಣವಾಗಿರುವ ಕೆಲವು ಪೊಲೀಸ್ ಅಧಿಕಾರಿಗಳ ಪಾತ್ರದ ಬಗ್ಗೆಯೂ ಮಾಹಿತಿ ಪಡೆಯಬೇಕಿದೆ. ಹೀಗಾಗಿ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾಗಿರುವ ಬಿಜೆಪಿ ಶಾಸಕ ಭೈರತಿ ಬಸವರಾಜು ಅವರ ವಿಚಾರಣೆ ಬಳಿಕ ಭಾರತಿನಗರದ ಕೆಲವು ಪೊಲೀಸರನ್ನು ವಿಚಾರಣೆ ನಡೆಸಲು ಸಿಐಡಿ ಅಧಿಕಾರಿಗಳು ತೀರ್ಮಾನ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
Sindhanur | ಲಾರಿ-ಬೈಕ್ ಢಿಕ್ಕಿ : ಸವಾರ ಸ್ಥಳದಲ್ಲೇ ಮೃತ್ಯು
ಸಿಂಧನೂರು: ಬೈಕ್ ಗೆ ಲಾರಿ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಶುಕ್ರವಾರ ತಡರಾತ್ರಿ ಗಂಗಾವತಿ ಮುಖ್ಯರಸ್ತೆಯ ಸುಝುಕಿ ಶೋರೂಮ್ ಬಳಿ ನಡೆದಿದೆ. ಮೃತರನ್ನು ಲಿಂಗಸುಗೂರು ತಾಲೂಕಿನ ಮರಿಸ್ವಾಮಿ ಚಿಕ್ಕಹೆಸರೂರು (35) ಎಂದು ಗುರುತಿಸಲಾಗಿದೆ. ಸಂಬಂಧಿಕರೊಬ್ಬರ ಗೃಹಪ್ರವೇಶ ಕಾರ್ಯಕ್ರಮಕ್ಕೆ ಶುಕ್ರವಾರ ಸಿಂಧನೂರಿಗೆ ಆಗಮಿಸಿದ್ದ ಅವರು, ಬಳಿಕ ತಮ್ಮ ಬೈಕ್ನಲ್ಲಿ ಗಂಗಾವತಿ ರಸ್ತೆಯಲ್ಲಿ ತೆರಳುತ್ತಿದ್ದಾಗ ಎದುರಿಗೆ ಬಂದ ಲಾರಿ ಢಿಕ್ಕಿ ಹೊಡೆದಿದೆ. ಪರಿಣಾಮ ಸ್ಥಳದಲ್ಲೇ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ವಿಷಯ ತಿಳಿದ ತಕ್ಷಣ ನಗರ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ, ಮೃತದೇಹವನ್ನು ನಗರದ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಿದ್ದಾರೆ.
ಉಕ್ರೇನ್ ವಿಚಾರದಲ್ಲಿ ರಷ್ಯಾ ಹೊಸ ಪ್ಲಾನ್, ಶಾಂತಿ ಒಪ್ಪಂದ ಮತ್ತಷ್ಟು ಸುಲಭ ಸಾಧ್ಯತೆ | Ukraine Peace
ಉಕ್ರೇನ್ ವಿಚಾರದಲ್ಲಿ ರಷ್ಯಾ ಮೇಲೆ ಒತ್ತಡ ಹೆಚ್ಚಾಗುತ್ತಿದ್ದು, ಆದಷ್ಟು ಬೇಗನೇ ಉಕ್ರೇನ್ ಜೊತೆಯಲ್ಲಿ ಶಾಂತಿ ಒಪ್ಪಂದ ಮಾಡಿಕೊಳ್ಳಲು ಅಮೆರಿಕ ಒತ್ತಾಯ ಮಾಡುತ್ತಿದೆ. ಡೊನಾಲ್ಡ್ ಟ್ರಂಪ್ ಅವರ ಆಡಳಿತ ಈ ವಿಚಾರದಲ್ಲಿ ಒತ್ತಡ ಹೆಚ್ಚು ಮಾಡಿದ ನಂತರ ರಷ್ಯಾ ಕೂಡ ಗಂಭೀರ ಚರ್ಚೆ ನಡೆಸಿದೆ. ಈ ಮಧ್ಯೆ ಅಮೆರಿಕ ತನ್ನ ಮಾತನ್ನು ರಷ್ಯಾ ಕೇಳುತ್ತಿಲ್ಲ ಎಂದು ಬೇಸರಗೊಂಡು, ಉಕ್ರೇನ್
ಬಂಟ್ವಾಳ : ನೀರಿನ ಸಮಸ್ಯೆ, ಪುರಸಭಾ ಕಚೇರಿಗೆ ಬೀಗ ಜಡಿದ ನಾಗರಿಕರು
ಬಂಟ್ವಾಳ : ಪುರಸಭಾ ವ್ಯಾಪ್ತಿಯಲ್ಲಿ ಕುಡಿಯುವ ನೀರು ಪೂರೈಕೆಲ್ಲಿನ ಅವ್ಯವಸ್ಥೆಯನ್ನು ತಕ್ಷಣ ಸರಿಪಡಿಸುವಂತೆ ಆಗ್ರಹಿಸಿದ ಸಾರ್ವಜನಿಕರು ಪುರಸಭಾ ಕಚೇರಿಗೆ ಬೀಗ ಜಡಿದು ಶುಕ್ರವಾರ ಪ್ರತಿಭಟನೆ ನಡೆಸಿದರು. ಪುರಸಭೆಯಲ್ಲಿ ಸಿಬ್ಬಂದಿಗಳ ಕೊರತೆಯಿಂದಾಗಿ ಕಳೆದ ಕೆಲವು ದಿನಗಳಿಂದ ನೀರು ಪೂರೈಕೆಯಲ್ಲಿ ವ್ಯತ್ಯಾಸ ಉಂಟಾಗಿದ್ದು ಜನರು ನೀರಿಗಾಗಿ ಪರದಾಡುವಂತಾಗಿತ್ತು. ಈ ಬಗ್ಗೆ ಅಧಿಕಾರಿಗಳಿಗೆ ಮೌಖಿಕ ದೂರು ನೀಡಿದ್ದರಾ ದರೂ ಯಾವುದೇ ರೀತಿಯ ಸ್ಪಂದನೆ ದೊರಕಿದೆ ಹಿನ್ನೆಲೆಯಲ್ಲಿ ಶುಕ್ರವಾರ ಕಛೇರಿಗೆ ಬೀಗ ಪ್ರತಿಭಟನೆ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದ ಸಾರ್ವಜನಿಕರು ನೀರಿನ ವ್ಯವಸ್ಥೆ ಮಾಡದೇ ಇಲ್ಲಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದು ಘೋಷಣೆ ಕೂಗುತ್ತ ಪ್ರತಿಭಟನೆ ನಡೆಸಿದರು. ಬಂಟ್ವಾಳ ಪುರಸಭೆಯ ಮುಖ್ಯಾಧಿಕಾರಿಯಾಗಿ ನೂತನವಾಗಿ ನೇಮಕಗೊಂಡ ತೀರ್ಥಪ್ರಸಾದ್ ಅವರು ಪುರಸಭೆಯಲ್ಲಿ ಕಾನೂನು ಬಾಹಿರವಾಗಿ ನೇಮಕ ಮಾಡಲಾದ ಸಿಬ್ಬಂದಿಗಳ ವೇತನ ತಡೆಹಿಡಿದಿದ್ದರು. ಇದರ ವಿರುದ್ಧ ಪುರಸಭೆಯ ಹೊರ ಗುತ್ತಿಗೆ ಹಾಗೂ ದಿನಗೂಲಿ ನೌಕರರು ಪ್ರತಿಭಟನೆ ನಡೆಸಿದ್ದು, ಮೇಲಾಧಿಕಾರಿಗಳು ಮದ್ಯ ಪ್ರವೇಶಿಸಿ ಬಾಕಿ ವೇತನದ ಪಾವತಿಗೆ ವ್ಯವಸ್ಥೆ ಕಲ್ಪಿಸಿದ್ದರು. ಆದರೆ ಕಾನೂನು ಬಾಹಿರವಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿಗಳನ್ನು ತೆರವುಗೊಳಿಸಲಾಗಿತ್ತು. ಉಪ ಜಿಲ್ಲಾಧಿಕಾರಿ ಮೀನಾಕ್ಷಿ ಆರ್ಯ, ಬಂಟ್ವಾಳ ತಹಶೀಲ್ದಾರ್ ಮಂಜುನಾಥ್, ಜಿಲ್ಲಾ ನಗರಾಭಿವೃದ್ಧಿ ಕೋಶದ ಪ್ರೊಜೆಕ್ಟ್ ಡೈರೆಕ್ಟರ್ ಸಂತೋಷ್ ಅವರು ಸ್ಥಳಕ್ಕೆ ಭೇಟಿ ನೀಡಿ ಸಾರ್ವಜನಿಕ ಅಹವಾಲು ಸ್ವೀಕರಿಸಿ, ಮುಖ್ಯಾಧಿಕಾರಿ ತೀರ್ಥಪ್ರಸಾದ್ ಮತ್ತು ಇಂಜಿನಿಯರ್ ಡಿಮೆಲ್ಲೋ ಅವರೊಂದಿಗೆ ಚರ್ಚಿಸಿ ಸಮಸ್ಯೆಯನ್ನು ಬಗೆಹರಿಸಿದರು. ಈ ವೇಳೆ ನೂತನ ಮುಖ್ಯಾಧಿಕಾರಿ ಅವರೊಂದಿಗೆ ಇಂಜಿನಿಯರ್ ಡಿಮೆಲ್ಲೋ ಅವರಿಗೆ ಇರುವ ಮುನಿಸು ಕೂಡಾ ಈ ಎಲ್ಲಾ ಸಮಸ್ಯೆಗಳಿಗೆ ಕಾರಣವಾಗಿದ್ದು ನಾವು ನೀರಿಲ್ಲದೆ ಪರದಾಡುವಂತಾಗಿದೆ ಎಂದು ಸಾರ್ವಜನಿಕರು ತಿಳಿಸಿದ್ದಾರೆ.
Mangalore | ಗಲ್ಫ್ ನಿವೃತ್ತರ ಕಲ್ಯಾಣಕ್ಕೆ ವಿಶೇಷ ಯೋಜನೆ ರೂಪಿಸುವಂತೆ ಗಲ್ಫ್ ರಿಟಾಯರೀಸ್ ಅಸೋಸಿಯೇಶನ್ ಮನವಿ
ಮಂಗಳೂರು: ಗಲ್ಫ್ ದೇಶಗಳಲ್ಲಿ ದೀರ್ಘಕಾಲ ಉದ್ಯೋಗ ನಿರ್ವಹಿಸಿ ಕೋವಿಡ್ ನಂತರ ಉದ್ಯೋಗ ನಷ್ಟ, ವಯೋಮಿತಿ ಹಾಗೂ ಆರೋಗ್ಯ ಸಮಸ್ಯೆಗಳ ಕಾರಣದಿಂದ ಸ್ವದೇಶಕ್ಕೆ ಮರಳಿರುವ ನಿವೃತ್ತ ಕಾರ್ಮಿಕರ ಕಲ್ಯಾಣಕ್ಕಾಗಿ ರಾಜ್ಯ ಸರ್ಕಾರವು ಸಮಗ್ರ ಯೋಜನೆ ರೂಪಿಸಬೇಕೆಂದು ಗಲ್ಫ್ ರಿಟಾಯರೀಸ್ ಅಸೋಸಿಯೇಶನ್ (GRA) ಮನವಿ ಮಾಡಿದೆ. ಈ ಸಂಬಂಧ ಫೆ.12ರಂದು ಸಂಘದ ಪದಾಧಿಕಾರಿಗಳು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದರು. ಗಲ್ಫ್ ದೇಶಗಳಲ್ಲಿ ಸೇವೆ ಸಲ್ಲಿಸಿದ ಅವಧಿಯಲ್ಲಿ ಈ ಕಾರ್ಮಿಕರು ಗಳಿಸಿದ ವಿದೇಶಿ ವಿನಿಮಯವು ದೇಶದ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದೆ. ಆದರೆ ಸ್ವದೇಶಕ್ಕೆ ಮರಳಿದ ನಂತರ ಹಲವರು ನಿರುದ್ಯೋಗ, ಆರೋಗ್ಯ ಸಮಸ್ಯೆ ಹಾಗೂ ಮಕ್ಕಳ ಶಿಕ್ಷಣ ಸಂಬಂಧಿತ ಸವಾಲುಗಳನ್ನು ಎದುರಿಸುತ್ತಿದ್ದಾರೆ ಎಂದು ಮನವಿಯಲ್ಲಿ ವಿವರಿಸಲಾಗಿದೆ. 2023ರಲ್ಲಿ ಮಂಗಳೂರಿನಲ್ಲಿ ಸ್ಥಾಪನೆಯಾದ ಗಲ್ಫ್ ರಿಟಾಯರೀಸ್ ಅಸೋಸಿಯೇಶನ್ ಸದಸ್ಯರ ಆರೋಗ್ಯ ನೆರವು, ಉದ್ಯೋಗ ಮಾರ್ಗದರ್ಶನ, ವಿದ್ಯಾರ್ಥಿವೇತನ ಹಾಗೂ ಜಾಗೃತಿ ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಿದೆ. ಕೇರಳ ರಾಜ್ಯದಲ್ಲಿ ಜಾರಿಯಲ್ಲಿರುವ ‘ನೋರ್ಕಾ’ ಮಾದರಿಯಂತೆ ಕರ್ನಾಟಕದಲ್ಲಿಯೂ ಪಿಂಚಣಿ, ವಿದ್ಯಾರ್ಥಿವೇತನ ಮತ್ತು ಇತರೆ ಸೌಲಭ್ಯಗಳನ್ನು ಒಳಗೊಂಡ ವಿಶೇಷ ಯೋಜನೆ ರೂಪಿಸಬೇಕು ಎಂದು ಸಂಘವು ಒತ್ತಾಯಿಸಿದೆ. ಗಲ್ಫ್ ನಿವೃತ್ತರಿಗಾಗಿ ಪ್ರತ್ಯೇಕ ಸಚಿವಾಲಯ ಸ್ಥಾಪಿಸಿ ಬಜೆಟ್ನಲ್ಲಿ ವಿಶೇಷ ಅನುದಾನ ಮೀಸಲಿಡಬೇಕು, ಅಲ್ಪಸಂಖ್ಯಾತರ ಇಲಾಖೆಯ ಹಿಂದಿನ ಬಡ್ಡಿರಹಿತ ಸಾಲ ಹಾಗೂ ಸಬ್ಸಿಡಿ ಯೋಜನೆಯನ್ನು ಪುನರಾರಂಭಿಸಬೇಕು, ಅವಲಂಬಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಬೇಕು ಹಾಗೂ ಆರೋಗ್ಯ ಸಮಸ್ಯೆಗಳ ನಿರ್ವಹಣೆಗೆ ವಿಶೇಷ ಕಾರ್ಯಕ್ರಮಗಳನ್ನು ಜಾರಿಗೊಳಿಸಬೇಕು ಎಂಬ ಬೇಡಿಕೆಗಳನ್ನು ಮನವಿಯಲ್ಲಿ ಉಲ್ಲೇಖಿಸಲಾಗಿದೆ. ಮನವಿ ಸಲ್ಲಿಸುವ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಶಾಹುಲ್ ಹಮೀದ್, ಉಪಾಧ್ಯಕ್ಷರಾದ ಮೊಹಮ್ಮದ್ ಹುಸೇನ್ ಅರಕಿ ಮತ್ತು ಅಬ್ದುಲ್ ಹಮೀದ್ ಉಚ್ಚಿಲ್, ಕಾರ್ಯದರ್ಶಿ ಮೆಲ್ವಿನ್ ಲೋಬೋ, ಲೆಕ್ಕ ಪರಿಶೋಧಕ ಅಬ್ದುಲ್ ಹಮೀದ್ ಸೇರಿದಂತೆ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಜಿಂಬಾಬ್ವೆ ತಂಡ ಆಸ್ಟ್ರೇಲಿಯಾವನ್ನು ಸೋಲಿಸಿದ್ರೆ ಭಾರತ ವಿಶ್ವಕಪ್ ಗೆಲ್ಲುತ್ತಾ? ಇದೆಂತಹಾ ಪ್ರಶ್ನೆ! ಬೇರೆ ಗುಂಪಿನಲ್ಲಿರುವ ತಂಡದ ಸೋಲು ಗೆಲುವಗಳನ್ನು ಕಟ್ಟಿಕೊಂಡು ಭಾರತಕ್ಕೆ ಏನಾಗಬೇಕಿದೆ ನೀವು ಅಂದುಕೊಂಡರೆ ಅದೇನು ತಪ್ಪಲ್ಲಾ. ಆದರೆ ಜಿಂಬಾಬ್ವೆ ತಂಡ ಅಚ್ಚರಿಯ ಫಲಿತಾಂಶ ನೀಡಿದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ವಿಚಿತ್ರವಾದ ಲೆಕ್ಕಾಚಾರವೊಂದನ್ನು ಹಾಕಲಾಗಿದೆ. ಅದರ ಪ್ರಕಾರ ಈ ಸಾರಿ ಭಾರತವೇ ಗೆಲ್ಲಬೇಕು. ಇದೇನಿದು ಲೆಕ್ಕಾಚಾರ ಎಂದು ಬಹಳ ತಲೆ ಕೆಡೆಸಿಕೊಳ್ಳಬೇಕಿಲ್ಲ. ವಿಷಯ ಸಿಂಪಲ್. ಯಾವಾಗೆಲ್ಲಾ ವಿಶ್ವಕಪ್ ಟೂರ್ನಿಯಲ್ಲಿ ಜಿಂಬಾಬ್ವೆ ತಂಡ ಆಸ್ಟ್ರೇಲಿಯಾವನ್ನು ಸೋಲಿಸಿದೆಯೋ ಆಗೆಲ್ಲಾ ಭಾರತ ಚಾಂಪಿಯನ್ ಆಗಿದೆ. ಬೇಕಿದ್ದರೆ ನೋಡಿ 1983ರ ಏಕದಿನ ವಿಶ್ವಕಪ್ ನಲ್ಲಿ ಜಿಂಬಾಬ್ವೆ ತಂಡ ಆಸ್ಟ್ರೇಲಿಯಾವನ್ನು ಸೋಲಿಸಿತ್ತು. ಕಪಿಲ್ ಡೆವಿಲ್ಸ್ ಬಳಗ ವಿಶ್ವವಿಜಯಿಯಾಗಿತ್ತು. ಇನ್ನು 2007ರ ಉದ್ಘಾಟನಾ ನಲ್ಲೂ ಜಿಂಬಾಬ್ವೆ ತಂಡ ಆಸ್ಟ್ರೇಲಿಯಾಗೆ ನೀರು ಕುಡಿಸಿತ್ತು. ಆ ಬಾರಿ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಭಾರತ ತಂಡ ಕಪ್ ತನ್ನದಾಗಿಸಿಕೊಂಡಿತ್ತು. ಇನ್ನು ಈ ಬಾರಿ ವಿಶ್ವಕಪ್ ನಲ್ಲಿ . ಹಾಗಾಗಿ ಈ ಬಾರಿ ಭಾರತ ವಿಶ್ವಕಪ್ ಗೆಲ್ಲುತ್ತದೆ ಎಂಬುದು ಲೆಕ್ಕಾಚಾರವೋ, ಭವಿಷ್ಯವೋ ಅಂತೂ ಈ ಬಗ್ಗೆ ಜಾಲತಾಣಗಳಲ್ಲಿ ಪೋಸ್ಟ್ ಗಳು ಓಡಾಡುತ್ತಿವೆ. ಅಷ್ಟು ಮಾತ್ರವಲ್ಲದೆ ಜಯ್ ಶಾ ಇದರ ಸ್ಕ್ರಿಪ್ಟ್ ರೈಟರ್ ಎಂದು ನೆಟ್ಟಿಗರು ಹಾಸ್ಯ ಮಾಡಿದ್ದಾರೆ. 1983ರಲ್ಲಿ ಏನಾಗಿತ್ತು? ಇಂಗ್ಲೆಂಡ್ ನಲ್ಲಿ 1983ರಲ್ಲಿ ನಡೆದ ಫ್ರುಡೆನ್ಶಿಯಲ್ ವಿಶ್ವಕಪ್ ನಲ್ಲಿ 8 ತಂಡಗಳು ಆಡಿದ್ದು 4 ತಂಡಗಳ 2 ಬಣಗಳನ್ನು ರಚಿಸಲಾಗಿತ್ತು. ಎ ಬಣದಲ್ಲಿ ಇಂಗ್ಲೆಂಡ್, ಪಾಕಿಸ್ತಾನ, ನ್ಯೂಜಿಲೆಂಡ್ ಮತ್ತು ಶ್ರೀಲಂಕಾ ಇದ್ದರೆ, ಬಿ ಬಣದಲ್ಲಿ ವೆಸ್ಟ್ ಇಂಡೀಸ್, ಭಾರತ, ಆಸ್ಟ್ರೇಲಿಯಾ ಮತ್ತು ಜಿಂಬಾಬ್ವೆ ತಂಡಗಳಿದ್ದವು. ಪ್ರತಿ ತಂಡವೂ ಬಣದಲ್ಲಿನ ಉಳಿದ ತಂಡಗಳೊಡನೆ 3 ಪಂದ್ಯಗಳನ್ನು ಆಡಬೇಕಿತ್ತು. ವೆಸ್ಟ್ ಇಂಡೀ ಆಡಿದ 6 ಪಂದ್ಯಗಳಿಂದ 5 ಪಂದ್ಯಗಳನ್ನು ಗೆದ್ದು ಪ್ರಥಮ ಸ್ಥಾನಿಯಾಗಿ ಸೆಮಿಫೈನಲ್ ಗೇರಿದರೆ, ಭಾರತ ತಂಡ 4 ಪಂದ್ಯಗಳನ್ನು ಗೆದ್ದು ದ್ವಿತೀಯ ಸ್ಥಾನಿಯಾಗಿ ಸೆಮಿಫೈನಲ್ ಗೇರಿತ್ತು. ಈ ಟೂರ್ನಿಯಲ್ಲಿ ಅತ್ಯಂತ ಆತ್ಮವಿಶ್ವಾಸದಲ್ಲಿದ್ದ ಜಿಂಬಾಬ್ವೆ ತಂಡ ಯಾರೂ ಊಹಿಸದ ರೀತಿಯಲ್ಲಿ ಎದುರಾಳಿ ತಂಡಗಳಿಗೆ ಚಮಕ್ ನೀಡಿತ್ತು. ಆಡಿದ ಮೊದಲ ಪಂದ್ಯದಲ್ಲೇ ಬಲಿಷ್ಠ ಆಸ್ಟ್ರೇಲಿಯಾ ತಂಡವವನ್ನು 13 ರನ್ ಗಳಿಂದ ಸೋಲಿಸಿತ್ತು. ಉಳಿದ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದರೂ ಪಂದ್ಯ ಗೆಲ್ಲಲು ವಿಫಲವಾದದ್ದರಿಂದ ಬಣದಲ್ಲಿ ಕೊನೇ ಸ್ಥಾನಿಯಾಗಿಯೇ ಉಳಿಯಿತು. ಆದರೆ ಕಪಿಲ್ ದೇವ್ ಅಜೇಯ 175 ರನ್ ಹೊಡೆದ ಪಂದ್ಯದಲ್ಲಿ ಜಿಂಬಾಬ್ವೆಯ ಬೌಲರ್ ಗಳು ಭಾರತದ ಅಗ್ರಕ್ರಮಾಂಕದ ಬ್ಯಾಟರ್ ಗಳನ್ನು ಕಟ್ಟಿ ಹಾಕಿದ್ದನ್ನು ಯಾರೂ ಮರೆಯಲು ಸಾಧ್ಯವಿಲ್ಲ. ಬಿ ಬಣದಲ್ಲಿ ಎರಡನೇ ಸ್ಥಾನಿಯಾಗಿದ್ದ ಭಾರತ ತಂಡ ಎ ಬಣದ ಅಗ್ರಸ್ಥಾನಿಯಾಗಿದ್ದ ಇಂಗ್ಲೆಂಡ್ ತಂಡವನ್ನು ಸೆಮಿಫೈನಲ್ ನಲ್ಲಿ ಸೋತಿಸಿತು. ಮತ್ತೊಂದೆಡೆ ಬಿ ಬಣದ ಅಗ್ರಸ್ಥಾನಿಯಾದ ವೆಸ್ಟ್ ಇಂಡೀಸ್ ತಂಡ ಎ ಬಣದ ದ್ವಿತೀಯ ಸ್ಥಾನಿಯಾಗಿದ್ದ ಪಾಕಿಸ್ತಾನ ತಂಡವನ್ನು ಸೋಲಿಸಿ ಫೈನಲ್ ಗೆ ಲಗ್ಗೆಯಿಟ್ಟಿತು. ಫೈನಲ್ ನಲ್ಲಿ ಏನಾಯಿತು ಎಂಬುದು ನಿಮಗೆ ಗೊತ್ತೇ ಇದೆ. 2007ರಲ್ಲಿ ಏನಾಗಿತ್ತು? ದಕ್ಷಿಣ ಆಫ್ರಿಕಾದಲ್ಲಿ ನಡೆದ ಉದ್ಘಾಟನಾ ಟಿ20 ವಿಶ್ವಕಪ್ ನಲ್ಲಿ ಒಟ್ಟು 12 ತಂಡಗಳನ್ನು 4 ಗುಂಪುಗಳಲ್ಲಿ ವಿಂಗಡಿಸಲಾಗಿತ್ತು. ಜಿಂಬಾಬ್ವೆ ತಂಡ ಬಲಿಷ್ಠ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ಜೊತೆ ಬಿ ಬಣದಲ್ಲಿ ಇತ್ತು. ಇನ್ನು ಭಾರತ ತಂಡ ಪಾಕಿಸ್ತಾನ ಮತ್ತು ಸ್ಕಾಟ್ಲೆಂಡ್ ಜೊತೆ ಡಿ ಬಣದಲ್ಲಿ ಇತ್ತು. ಉಳಿದಂತೆ ಎ ಬಣದಲ್ಲಿ ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ, ವೆಸ್ಟ್ ಇಂಡೀಸ್, ಸಿ ಬಣದಲ್ಲಿ ಶ್ರೀಲಂಕಾ, ನ್ಯೂಜಿಲೆಂಡ್ ಮತ್ತು ಕೀನ್ಯಾಗಳಿದ್ದವು. ಪ್ರತಿಯೊಂದು ತಂಡವೂ ಬಣದ ಉಳಿದ ತಂಡಗಳೊಂದಿಗೆ ಒಂದು ಬಾರಿ ಆಡಬೇಕಿತ್ತು. ಸೆಪ್ಟೆಂಬರ್ 12ರಂದು ನಡೆದ ಬಿ ಬಣದ ಪಂದ್ಯದಲ್ಲಿ ಜಿಂಬಾಬ್ವೆ ತಂಡವು ಆಸ್ಟ್ರೇಲಿಯಾವನ್ನು ಯಾರೂ ಊಹಿಸದ ರೀತಿಯಲ್ಲಿ ಮಕಾಡೆ ಮಲಗಿಸಿತ್ತು. ಆದರೆ ಮುಂದಿನ ಪಂದ್ಯವನ್ನು ಇಂಗ್ಲೆಂಡ್ ವಿರುದ್ಧ ಜಯಿಸಿದ ಆಸ್ಟ್ರೇಲಿಯಾ ರನ್ ರೇಟ್ ಆಧಾರದಲ್ಲಿ ಸೂಪರ್ 8ರ ಹಂತವನ್ನು ತಲುಪಿಸಿತು. ಸೂಪರ್ 8 ಹಂತದಲ್ಲಿ ಇ ಬಣದಲ್ಲಿದ್ದ ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ ಸೋತರೂ ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾವನ್ನು ಸೋಲಿಸಿ ಪ್ರಥಮ ಸ್ಥಾನಿಯಾಗಿಯೇ ಸೆಮಿಫೈನಲ್ ಗೇರಿತ್ತು. ನ್ಯೂಜಿಲೆಂಡ್ ದ್ವಿತೀಯ ಸ್ಥಾನಿಯಾಗಿ ಸೆಮಿಫೈನಲ್ ಗೇರಿತು. ಮತ್ತೊಂದೆಡೆ ಎಫ್ ಬಣದಲ್ಲಿದ್ದ ಆಸ್ಟ್ರೇಲಿಯಾ ಪಾಕಿಸ್ತಾನದ ವಿರುದ್ಧ ಸೋತರೂ ಬಾಂಗ್ಲಾದೇಶ ಮತ್ತು ಶ್ರೀಲಂಕಾಗಳನ್ನು ಸೋಲಿಸಿ ದ್ವಿತೀಯ ಸ್ಥಾನಿಯಾಗಿ ಸೆಮಿಫೈನಲ್ ತಲಪಿತು. ಮೂರು ಪಂದ್ಯ ಗೆದ್ದ ಪಾಕಿಸ್ತಾನ ಪ್ರಥಮ ಸ್ಥಾನಿಯಾಗಿ ಉಪಾಂತ್ಯ ಪ್ರವೇಶಿಸಿತು. ಸೆಮಿಫೈನಲ್ ನಲ್ಲಿ ಭಾರತ ತಂಡ ಆಸ್ಟ್ರೇಲಿಯಾವನ್ನು 15 ರನ್ ಗಳಿಂದ ಸೋಲಿಸಿ ಪೈನಲ್ ತಲುಪಿತು. ಪಾಕಿಸ್ತಾನ ತಂಡ ನ್ಯೂಜಿಲೆಂಡ್ ತಂಡವನ್ನು 6 ವಿಕೆಟ್ ಗಳಿಂದ ಸೋಲಿಸಿ ಫೈನಲ್ ಗೇರಿತು. ಫೈನಲ್ ಫಲಿತಾಂಶ ಏನೆಂದು ಹೇಳಬೇಕಿಲ್ಲ. ಇದೀಗ ಜಿಂಬಾಬ್ವೆ ಮತ್ತೊಮ್ಮೆವನ್ನು ವಿಶ್ವಕಪ್ ಟೂರ್ನಿಯಲ್ಲಿ ಸೋಲಿಸಿ ಆಘಾತ ನೀಡಿದೆ 2007ರ ವಿಶ್ವಕಪ್ ಮುಗಿದ ಮೇಲೆ ಇದು ಯಾವುದೇ ವಿಶ್ವಕಪ್ ಟೂರ್ನಿಯಲ್ಲಿ ಈವರೆಗೂ ಜಿಂಬಾಬ್ವೆ ತಂಡ ಆಸ್ಟ್ರೇಲಿಯಾವನ್ನು ಸೋಲಿಸಲು ಸಾಧ್ಯವಾಗಿರಲಿಲ್ಲ. ಇದೀಗ 19 ವರ್ಷಗಳ ಬಳಿಕ ಸೋಲಿಸಲು ಸಾಧ್ಯವಾಗಿದೆ. ಮಾತ್ರವಲ್ಲದೆ ಈ ಸೋಲಿನೊಂದಿಗೆ ಆಸ್ಟ್ರೇಲಿಯಾ ತಂಡ ಅನಗತ್ಯ ಒತ್ತಡವನ್ನು ಮೈಗೆಳೆದುಕೊಂಡಿದೆ. ಅದು ಇನ್ನುಳಿದ ಗುಂಪು ಹಂತದ 2 ಪಂದ್ಯಗಳನ್ನು ಗೆಲ್ಲಲೇಬೇಕಾದ ಅನಿವಾರ್ಯತೆಗೆ ಸಿಲುಕಿಕೊಂಡಿದೆ. ಅದರಲ್ಲಿ ಒಂದು ಪಂದ್ಯ ಆತಿಥೇಯ ಶ್ರೀಲಂಕಾ ವಿರುದ್ಧ ಆಗಿರುವುದರಿಂದ ಈ ಹಂತ ದಾಟುವುದು ಸುಲಭವಲ್ಲ. ಅದೇನೇ ಇರಲಿ, 1983 ಮತ್ತು 2007ರ ಫಲಿತಾಂಶಗಳನ್ನು ಗಣನೆಗೆ ತೆಗೆದುಕೊಂಡರೆ ಈ ಬಾರಿವೇ ವಿಶ್ವಚಾಂಪಿಯನ್ ಆಗವುದು ಖಚಿತ ಎಂಬ ಆಶಾವಾದ ಭಾರತದ ಕ್ರಿಕೆಟ್ ಪ್ರೇಮಿಗಳದ್ದು.
ಮಂಗಳೂರು: ರೀಮ್ ಡೇಟ್ಸ್ ಫೆಸ್ಟ್-2026ಗೆ ಚಾಲನೆ
ಮಂಗಳೂರು, ಫೆ.13: ನಗರದ ಪಾಂಡೇಶ್ವರದಲ್ಲಿರುವ ಫಿಝಾ ನೆಕ್ಸಸ್ ಮಾಲ್ನಲ್ಲಿರುವ ಪ್ರಸಿದ್ಧ ಖರ್ಜೂರದ ಮಳಿಗೆ ’ರೀಮ್’ ವತಿಯಿಂದ ’ಡೇಟ್ಸ್ಫೆಸ್ಟ್’ಗೆ ಶುಕ್ರವಾರ ಚಾಲನೆ ನೀಡಲಾಯಿತು. ರೀಮ್ ಶಾಪ್ನ ನಡೆಯುವ ಈ ಫೆಸ್ಟ್ ಫೆ.14 ಮತ್ತು 15ರಂದು ಕೂಡ ನಡೆಯಲಿದೆ. ರೀಮ್ ಡೇಟ್ಸ್ ಫೆಸ್ಟ್ನ್ನು ಯೆನೆಪೋಯ ವಿಶ್ವವಿದ್ಯಾನಿಲಯದ ಕುಲಾಧಿಪತಿ ಡಾ. ಯೆನೆಪೊಯ ಅಬ್ದುಲ್ಲಾ ಕುಂಞಿ ಉದ್ಘಾಟಿಸಿ ಶುಭ ಹಾರೈಸಿದರು. ಈ ಸಂದರ್ಭ ಕರ್ನಾಟಕ ಹೆಲ್ತ್ ಅಲೈಡ್ ಕೌನ್ಸಿಲ್ ಅಧ್ಯಕ್ಷ ಡಾ. ಯು.ಟಿ. ಇಫ್ತಿಕಾರ್, ಆಝಾದ್ ಗ್ರೂಪ್ನ ಆಡಳಿತ ನಿರ್ದೇಶಕ ಮನ್ಸೂರ್ ಅಹ್ಮದ್, ಅಮರ್ ಭಂಡಾರಿ, ನಟ ನಿತ್ಯ ಪ್ರಕಾಶ್, ಅಜ್ಮಲ್ ಹಬೀಬ್, ಡಿ.ಎಂ. ಅಸ್ಲಂ ಮತ್ತು ರೀಮ್ ಡೇಟ್ಸ್ನ ಪಾಲುದಾರ ಅಹ್ಮದ್ ಹುಸೇನ್ ಮತ್ತಿತರರು ಉಪಸ್ಥಿತರಿದ್ದರು. ರೀಮ್ ಡೇಟ್ಸ್ನ ಪಾಲುದಾರ ಮುಹಮ್ಮದ್ ಮುಖ್ತಾರ್ ಮಾತನಾಡಿ ’ಡೇಟ್ಸ್ ಫೆಸ್ಟ್’ನಲ್ಲಿ 12ಕ್ಕೂ ಅಧಿಕ ವಿವಿಧ ದೇಶಗಳಿಂದ ಸುಮಾರು 50ಕ್ಕೂ ಅಧಿಕ ವಿಧಗಳ ಖರ್ಜೂರವನ್ನು ಖರೀದಿಸಲು ಮತ್ತು ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ. ಉತ್ತಮ ಗುಣಮಟ್ಟದ ನೈಸರ್ಗಿಕ ಖರ್ಜೂರಗಳು ಲಭ್ಯವಿದೆ ಎಂದರು. ನಮಿತಾ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
ಆಳಂದದಲ್ಲಿ ಎರಡು ದಿನಗಳ ಕಾಲ ನಿಷೇದಾಜ್ಞೆ ಜಾರಿ
ಕಲಬುರಗಿ: ಆಳಂದ ಪಟ್ಟಣದಲ್ಲಿ ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಲಾಡ್ಲೆ ಮಶಾಕ್ ದರ್ಗಾದ ಆವರಣದಲ್ಲಿರುವ ರಾಘವ ಚೈತನ್ಯ ಶಿವಲಿಂಗಕ್ಕೆ ಪೂಜೆ ಕೈಗೊಳ್ಳಲಿರುವ ಹಿನ್ನೆಲೆಯಲ್ಲಿ ಎರಡು ದಿನಗಳ ಕಾಲ ನಿಷೇಧಾಜ್ಞೆ ಜಾರಿ ಮಾಡಲಾಗಿದೆ ಎಂದು ತಹಶೀಲ್ದಾರು, ತಾಲೂಕು ದಂಡಾಧಿಕಾರಿ ಅಣ್ಣಾರಾವ್ ಪಾಟೀಲ್ ಅವರು ಆದೇಶ ಹೊರಡಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು, ಮುಂಬರುವ ಎರಡು ದಿನಗಳ ಅವಧಿಯಲ್ಲಿ ಆಳಂದ ಪಟ್ಟಣ ಸೇರಿದಂತೆ ತಾಲೂಕು ಗ್ರಾಮೀಣ ಭಾಗದಲ್ಲಿ ಈ ಸುವ್ಯವಸ್ಥೆಯನ್ನು ಕಾಪಾಡುವ ಪ್ರಯುಕ್ತ ತಾಲೂಕು ಆಡಳಿತ ಮುಂಜಾಗ್ರತ ಕ್ರಮವಾಗಿ ಫೆ.14ರಂದು ರಾತ್ರಿ 10:00 ಗಂಟೆಯಿಂದ ಫೆ.15 ರಾತ್ರಿ 12 ಗಂಟೆವರೆಗೆ 2023 ಬಿ ಎನ್ಎಸ್ಎಸ್ 163 ರನ್ವಯ ನಿಷೇದಾಜ್ಞೆ ಕೈಗೊಳ್ಳಲಾಗಿದ್ದು, ಸಾರ್ವಜನಿಕರು ಸಹಕರಿಸಬೇಕು ಎಂದು ತಾಲೂಕು ದಂಡಾಧಿಕಾರಿಗಳು ಅಣ್ಣಾರಾವ್ ಪಾಟೀಲ್ ಅವರು ತಿಳಿಸಿದ್ದಾರೆ.
Holiday: ರಾಜ್ಯದಲ್ಲಿ ಪೊಲೀಸ್ ಸಿಬ್ಬಂದಿಗೆ ವಿಶೇಷ ರಜೆ ಮಂಜೂರು ಕುರಿತು ಮಹತ್ವದ ಆದೇಶ
Police Officers Special Holiday: ರಾಜ್ಯ ಸರ್ಕಾರವು ಪೊಲೀಸ್ ಸಿಬ್ಬಂದಿಗಳಿಗೆ ಮಹತ್ವದ ಸಿಹಿಸುದ್ದಿ ನೀಡಿದೆ. ಕಾನ್ಸ್ಟೇಬಲ್ನಿಂದ ಎಎಸ್ಐ (ಸಹಾಯಕ ಉಪ ನಿರೀಕ್ಷಕ) ದರ್ಜೆಯವರೆಗೆ ಕಾರ್ಯನಿರ್ವಹಿಸುವ ಪೊಲೀಸ್ ಸಿಬ್ಬಂದಿಗೆ ಹುಟ್ಟುಹಬ್ಬ ಹಾಗೂ ವಿವಾಹ ವಾರ್ಷಿಕೋತ್ಸವದ ಸಂದರ್ಭಗಳಲ್ಲಿ ಕಡ್ಡಾಯವಾಗಿ ವಿಶೇಷ ರಜೆ ಮಂಜೂರು ಮಾಡಬೇಕು ಎಂದು ಕರ್ನಾಟಕ ಪೊಲೀಸ್ ಮಹಾನಿರ್ದೇಶಕರು ಸುತ್ತೋಲೆ ಹೊರಡಿಸಿದ್ದಾರೆ. ಈ ಕುರಿತು ಹೊರಡಿಸಿರುವ ಸೂಚನೆಯಲ್ಲಿ, ಅರ್ಜಿ
ಮಂಗಳೂರಿನಲ್ಲಿ ಸಮುದ್ರ ಮೀನು ಮರಿ ಉತ್ಪಾದನಾ ಕೇಂದ್ರ ಸ್ಥಾಪನೆಗೆ ಸಂಸದ ಬ್ರಿಜೇಶ್ ಚೌಟ ಒತ್ತಾಯ
ಲೋಕಸಭೆಯಲ್ಲಿ ನಿಯಮ 377ರಡಿ ವಿಷಯ ಪ್ರಸ್ತಾಪಿಸಿದ ಸಂಸದ
Kalaburagi | ಚಾಕುವಿನಿಂದ ಇರಿದು ವ್ಯಕ್ತಿಯ ಭೀಕರ ಹತ್ಯೆ : ಪ್ರಕರಣ ದಾಖಲು
ಕಲಬುರಗಿ: ವ್ಯಕ್ತಿಯೋರ್ವನನ್ನು ಚಾಕುವಿನಿಂದ ಇರಿದು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಶುಕ್ರವಾರ ಸಂಜೆ ನಗರದ ಸೂಪರ್ ಮಾರ್ಕೆಟ್ ಪ್ರದೇಶದಲ್ಲಿ ನಡೆದಿದೆ. ಮೃತರನ್ನು ಗಾಜಿಪುರ ಬಡಾವಣೆಯ ನಿವಾಸಿ ಶರಣಬಸಪ್ಪ ಗೌಳಿ (35) ಎಂದು ಗುರುತಿಸಲಾಗಿದೆ. ಮೊಬೈಲ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಶರಣು ಗೌಳಿ ಅವರು ಶುಕ್ರವಾರ ಸಂಜೆ ಸುಮಾರು 6 ಗಂಟೆ ವೇಳೆಗೆ ಸೂಪರ್ ಮಾರ್ಕೆಟ್ನ ನರ್ತಕಿ ಬಾರ್ ಪಾರ್ಕಿಂಗ್ ಪ್ರದೇಶದಲ್ಲಿ ನಿಂತಿದ್ದಾಗ, ದುಷ್ಕರ್ಮಿಗಳು ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಕೊಲೆಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ. ಘಟನಾ ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ಶರಣಪ್ಪ ಎಸ್.ಡಿ., ಎಸಿಪಿ ಶಿವನಗೌಡ ಪಾಟೀಲ ಹಾಗೂ ಬ್ರಹ್ಮಪುರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಿಓಕೆ ಭಾರತದ ಭಾಗವೆಂದು ತೋರಿಸುವ ಭೂಪಟ| ಅಮೆರಿಕದ ಪೋಸ್ಟ್ ಡಿಲೀಟ್ ಮಾಡಿಸಿದ ಪಾಕಿಸ್ತಾನ
ಇಸ್ಲಾಮಾಬಾದ್,ಫೆ.13: ಅಮೆರಿಕವು ಪಾಕ್ ಆಕ್ರಮಿತ ಕಾಶ್ಮೀರ (ಪಿಓಕೆ) ಹಾಗೂ ಅಕ್ಸಾಯ್ ಚಿನ್ ಪ್ರದೇಶಗಳನ್ನು ಭಾರತದ ಪ್ರಾಂತಗಳೆಂದು ತೋರಿಸುವ ಭೂಪಟವನ್ನು ಪೋಸ್ಟ್ ಮಾಡಿದ್ದರಿಂದ ಮುಜುಗರಕ್ಕೀಡಾಗಿರುವ ಪಾಕಿಸ್ತಾನವು, ಈ ವಿಷಯವಾಗಿ ತಾನು ಅಮೆರಿಕದ ಅಧಿಕಾರಿಗಳನ್ನು ಸಂಪರ್ಕಿಸಿದ್ದಾಗಿ ಹೇಳಿದೆ. ಈ ನಕ್ಷೆಯ ಬಗ್ಗೆ ಆಕ್ಷೇಪಗಳನ್ನು ವ್ಯಕ್ತಪಡಿಸಿದ ಬಳಿಕ ಈ ಪೋಸ್ಟ್ ಅನ್ನು ತೆಗೆದುಹಾಕಲಾಯಿತೆಂದು ಹೇಳಿದೆ. ಈ ವಿವಾದಿತ ನಕ್ಷೆಯನ್ನು ಕೆಲವು ನಿರ್ದಿಷ್ಟ ಜಾಲತಾಣಗಳಲ್ಲಿ ಪೋಸ್ಟ್ ಮಾಡಲಾಗಿತ್ತು. ಈ ಬಗ್ಗೆ ನಾವು ಅಮೆರಿಕದ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಅದು ಅಕ್ರಮವೆಂದು ಅವರಿಗೆ ಅರಿವಾಯಿತು ಎಂದು ಪಾಕ್ ವಿದೇಶಾಂಗ ಇಲಾಖೆಯ ವಕ್ತಾರ ತಾಹಿರ್ ಅಂದ್ರಾಬಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
KSRTC Good News: ರಾಜ್ಯದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಕೆಎಸ್ಆರ್ಟಿಸಿ ಭರ್ಜರಿ ಸಿಹಿಸುದ್ದಿ ನೀಡಿದೆ. ಪರೀಕ್ಷಾ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪ್ರಯಾಣ ವ್ಯವಸ್ಥೆ ಕಲ್ಪಿಸುವುದಾಗಿ ನಿಗಮ ಘೋಷಣೆ ಮಾಡಿದೆ. ಫೆಬ್ರವರಿ 28ರಿಂದ ಮಾರ್ಚ್ 17ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆಗಳು ನಡೆಯಲಿದ್ದು, ಪರೀಕ್ಷಾ ದಿನಗಳಲ್ಲಿ ವಿದ್ಯಾರ್ಥಿಗಳು ತಮ್ಮ ಪರೀಕ್ಷಾ ಕೇಂದ್ರಗಳಿಗೆ ಕೆಎಸ್ಆರ್ಟಿಸಿ ಬಸ್ಗಳಲ್ಲಿ ಉಚಿತವಾಗಿ
ಮಂಗಳೂರು ಇಎಸ್ಐ ಆಸ್ಪತ್ರೆ ಇಎಸ್ಐಸಿ ಸುಪರ್ದಿಯ ಪ್ರಕ್ರಿಯೆ ತ್ವರಿತಗೊಳಿಸಲು ಮನವಿ
ಕೇಂದ್ರ ಕಾರ್ಮಿಕ ಸಚಿವರನ್ನು ಭೇಟಿಯಾದ ಸಂಸದ ಬ್ರಿಜೇಶ್ ಚೌಟ
ವಿಜಯನಗರ | ಹಂಪಿ ಉತ್ಸವದ ವೇದಿಕೆ ಸಮೀಪ ಬೆಂಕಿ ಅವಘಡ
ವಿಜಯನಗರ/ಹಂಪಿ : ಹಂಪಿ ಉತ್ಸವದ ಮುಖ್ಯ ವೇದಿಕೆಯಾದ ಎಂ.ಪಿ.ಪ್ರಕಾಶ್ ವೇದಿಕೆಯ ಬಲಭಾಗದಲ್ಲಿ ಅಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು. ಸಿಎಂ ವೇದಿಕೆಯ ಮೇಲೆ ಪೂಜೆ ಸಲ್ಲಿಸುವ ವೇಳೆ ಸಿಡಿದ ಪಟಾಕಿಯ ಕಿಡಿ ತಾಗಿ ಬೆಂಕಿ ಹೊತ್ತಿಕೊಂಡಿರುವ ಸಾಧ್ಯತೆ ವ್ಯಕ್ತವಾಗಿದೆ. ಪಟಾಕಿಯ ಕಿಡಿಯಿಂದ ವೇದಿಕೆ ಸಮೀಪದ ಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿತು ಎಂದು ತಿಳಿದುಬಂದಿದೆ. ತಕ್ಷಣ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಅಗ್ನಿಶಾಮಕ ಸಿಬ್ಬಂದಿಯ ತ್ವರಿತ ಕ್ರಮದಿಂದ ದೊಡ್ಡ ಅನಾಹುತ ತಪ್ಪಿದಂತಾಗಿದೆ.
ವಂಚಕ ಉದ್ಯೋಗ ಏಜೆನ್ಸಿಗಳಿಗೆ ಕಡಿವಾಣ ಹಾಕಲು ವಿದೇಶಾಂಗ ಸಚಿವರಿಗೆ ಸಂಸದ ಬ್ರಿಜೇಶ್ ಚೌಟ ಆಗ್ರಹ
ಗಲ್ಫ್, ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿ ಕರಾವಳಿ ಯುವಕರ ಸಂಕಷ್ಟ
ಬೆಂಗಳೂರು: ಅಕ್ರಮವಾಗಿ ಗಣಿ ಗುತ್ತಿಗೆ ಪರವಾನಗಿಗಳನ್ನು ನೀಡಿದ ಹಾಗೂ ಕಾನೂನುಬಾಹಿರವಾಗಿ ಗಣಿ ಗುತ್ತಿಗೆ ನವೀಕರಣ ಮಾಡಿದ ಆರೋಪದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ಭ್ರಷ್ಟಾಚಾರ ತಡೆ (ಪಿಸಿ) ಕಾಯ್ದೆಯಡಿ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಲು ರಾಜ್ಯಪಾಲರಿಗೆ ಆದೇಶಿಸುವಂತೆ ಹಾಗೂ ಪ್ರಕರಣದ ತನಿಖೆ ನಡೆಸುವಂತೆ ಸಿಬಿಐಗೆ ನಿರ್ದೇಶಿಸುವಂತೆ ಕೋರಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಎಪ್ರಿಲ್ 17ಕ್ಕೆ ಮುಂದೂಡಿದೆ. ಬೆಂಗಳೂರಿನ ಉದ್ಯಮಿ ಎಂ.ಪಿ. ವೇಣುಗೋಪಾಲ್ ಎಂಬವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ವಿಭಾಗೀಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಪರ ಹಿರಿಯ ವಕೀಲ ಕೆ. ಶಶಿಕಿರಣ್ ಶೆಟ್ಟಿ ಹಾಜರಾಗಿ, ಅರ್ಜಿದಾರರ ಪರ ವಕೀಲರು ವಿಚಾರಣೆಗೆ ಸತತ ಗೈರಾದ ಹಿನ್ನೆಲೆಯಲ್ಲಿ ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ನ್ಯಾಯಾಲಯ ಈ ಹಿಂದೆ ವಜಾಗೊಳಿಸಿತ್ತು. ಅರ್ಜಿದಾರರ ವಕೀಲರ ಮನವಿಯಂತೆ ಅರ್ಜಿಯನ್ನು ವಿಚಾರಣೆಗೆ ಮರು ಪರಿಗಣಿಸಲಾಗಿದೆ. ಆದರೆ, ಐದಾರು ಬಾರಿ ಕಾಲಾವಕಾಶ ಕೇಳಿದ್ದಾರೆ, ಈ ದಿನವೂ ಸಹ ಮತ್ತೆ ಕಾಲಾವಕಾಶ ಕೇಳುತ್ತಿದ್ದಾರೆ ಎಂದರು. ಮುಂದುವರಿದು, ಇದೇ ವಿಚಾರವಾಗಿ ಈ ಹಿಂದೆ ರಾಮಮೂರ್ತಿ ಗೌಡ ಎಂಬುವರು ಖಾಸಗಿ ದೂರು (ಪಿಸಿಆರ್) ಸಲ್ಲಿಸಿದ್ದರು. ಆ ಖಾಸಗಿ ದೂರಿನಲ್ಲಿದ್ದ ವಿಷಯ ಮತ್ತು ಅಂಶಗಳನ್ನೇ ಪುಟ ಸಂಖ್ಯೆಗಳ ಸಮೇತ ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ನಕಲು ಮಾಡಲಾಗಿದೆ. ಆ ಖಾಸಗಿ ದೂರಿನಲ್ಲೂ ಸಿದ್ದರಾಮಯ್ಯ ಸೇರಿ ಈಗಿನ ಪಿಐಎಲ್ನಲ್ಲಿರುವ ಎಲ್ಲರನ್ನೂ ಪ್ರತಿವಾದಿಗಳನ್ನಾಗಿ ಮಾಡಲಾಗಿತ್ತು ಎಂದು ನ್ಯಾಯಾಲಯದ ಗಮನಕ್ಕೆ ತಂದರು. ಇದನ್ನು ಪರಿಗಣಿಸಿದ ನ್ಯಾಯಪೀಠ, ಖಾಸಗಿ ದೂರಿನ ಅಂಶಗಳನ್ನೇ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ನಕಲು ಮಾಡಲಾಗಿದೆ ಎಂದು ಸಿಎಂ ಪರ ವಕೀಲರು ಹೇಳುತ್ತಿದ್ದಾರೆ. ಆದ್ದರಿಂದ, ಖಾಸಗಿ ದೂರಿನ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಅರ್ಜಿದಾರರ ಪರ ವಕೀಲರಿಗೆ ನಿರ್ದೇಶಿಸಿ, ಅರ್ಜಿ ವಿಚಾರಣೆ ಮುಂದೂಡಿತು. ಅರ್ಜಿಯಲ್ಲೇನಿದೆ? ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ನೀಡುವಂತೆ ರಾಜ್ಯಪಾಲರಿಗೆ ನಿರ್ದೇಶನ ನೀಡಬೇಕು. ಗಣಿ ಗುತ್ತಿಗೆಗಳ ಕಾನೂನುಬಾಹಿರ ನವೀಕರಣ ಸಂಬಂಧ ಸ್ವತಂತ್ರ ತನಿಖೆ ನಡೆಸುವಂತೆ ಸಿಬಿಐಗೆ ನಿರ್ದೇಶನ ನೀಡಬೇಕು. ಈ ವಿಚಾರವಾಗಿ ವರದಿ ನೀಡುವಂತೆ ಲೋಕಾಯುಕ್ತಕ್ಕೆೆ ಸೂಚಿಸಬೇಕು. ರಾಮಗಡ ಮಿನರಲ್ ಆ್ಯಂಡ್ ಮೈನಿಂಗ್ ಪ್ರೈ. ಲಿಮಿಟೆಡ್, ವೀರಭದ್ರಪ್ಪ ಸಂಗಪ್ಪ ಆ್ಯಂಡ್ ಕಂಪನಿಗಳಿಗೆ ನೀಡಲಾಗಿರುವ ಗಣಿ ಗುತ್ತಿಗೆ ರದ್ದುಪಡಿಸಬೇಕು. ಎಲ್ಲ ಗಣಿ ಗುತ್ತಿಗೆ ಪರವಾನಗಿಗಳನ್ನು ಕಾನೂನುಬಾಹಿರವೆಂದು ಘೋಷಿಸಬೇಕು. ಇದರಿಂದ, ಆಗಿರುವ ಆರ್ಥಿಕ ನಷ್ಟವನ್ನು ಅಕ್ರಮ ಗಣಿ ಗುತ್ತಿಗೆದಾರರಿಂದ ವಸೂಲಿ ಮಾಡಲು ನಿರ್ದೇಶನ ನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ. ಸಿಎಂ ಸಿದ್ದರಾಮಯ್ಯ, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಹಿಂದಿನ ಕಾರ್ಯದರ್ಶಿ ತುಷಾರ್ ಗಿರಿನಾಥ್ ಸೇರಿ ಕೆಲ ಖಾಸಗಿ ಗಣಿ ಕಂಪನಿಗಳನ್ನು ಅರ್ಜಿಯಲ್ಲಿ ಪ್ರತಿವಾದಿಗಳನ್ನಾಗಿಸಲಾಗಿದೆ.
ಚಿನ್ನದ ಸಾಲ ನೀಡುವ ಕಂಪನಿಗಳು ಕದ್ದ ಚಿನ್ನವನ್ನು ಅಡಮಾನವಿರಿಸಿಕೊಳ್ಳಲಾಗದು: ಹೈಕೋರ್ಟ್ ಆದೇಶ
ಬೆಂಗಳೂರು: ಕದ್ದ ಆಸ್ತಿ ಹೊಂದಿರುವ ಯಾವುದೇ ವ್ಯಕ್ತಿ ಅಥವಾ ಸಂಸ್ಥೆಗಳು ಪೊಲೀಸರು ಕೇಳಿದಾಗ ಅದನ್ನು ಹಸ್ತಾಂತರ ಮಾಡಲು ವಿಳಂಬಿಸುವ ಅಥವಾ ನಿರಾಕರಿಸುವ ಯಾವುದೇ ಕಾನೂನುಬದ್ಧ ಹಕ್ಕು ಹೊಂದಿರುವುದಿಲ್ಲ, ಚಿನ್ನದ ಸಾಲ ನೀಡುವ ಕಂಪನಿಯಾಗಿದ್ದರೂ ಸಹ ಬಡ್ಡಿ ಮತ್ತು ಭದ್ರತೆಯ ಕಾರಣ ನೀಡಿ ಕದ್ದ ವಸ್ತುಗಳನ್ನು ತನ್ನ ಬಳಿಯೇ ಇಟ್ಟುಕೊಳ್ಳುವುದಕ್ಕೆ ಅವಕಾಶವಿಲ್ಲ ಎಂದು ಹೈಕೋರ್ಟ್ ಆದೇಶಿಸಿದೆ. ಕೆಂಗೇರಿಯ ಕರೂರು ವೈಶ್ಯ ಬ್ಯಾಂಕ್ ಶಾಖೆಯಿಂದ ಕದ್ದ ಒಡವೆಗಳನ್ನು ಅಡವಿಟ್ಟುಕೊಂಡು ಸಾಲ ಮಂಜೂರು ಮಾಡಿದ್ದ ಆರೋಪದಲ್ಲಿ ಕದ್ದ ಒಡವೆಗಳನ್ನು ಒಪ್ಪಿಸುವಂತೆ ಕೆಂಗೇರಿ ಪೊಲೀಸರು ನೀಡಿದ್ದ ನೋಟಿಸ್ ಪ್ರಶ್ನಿಸಿ ಐಐಎಫ್ಎಲ್ ಫೈನಾನ್ಸ್ ಕಂಪನಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿರುವ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ. ಹೈಕೋರ್ಟ್ ಆದೇಶವೇನು? ಹಣಕಾಸುದಾರರ ಯಾವುದೇ ಭದ್ರತಾ ಹಿತಾಸಕ್ತಿ ಒಪ್ಪಂದದ ಪ್ರಕಾರ ಮಾನ್ಯವಾಗಿದ್ದರೂ ಸಹ ಕದ್ದ ಆಸ್ತಿಯ ನಿಜವಾದ ಮಾಲೀಕರ ಉನ್ನತ ಹಕ್ಕುಗಳನ್ನು ಅತಿಕ್ರಮಿಸಲು ಅಥವಾ ತನಿಖೆಗೆ ಅಡ್ಡಿಪಡಿಸಲು ಸಾಧ್ಯವಿಲ್ಲ. ಒಡವೆಗಳನ್ನು ಹಿಂದಿರುಗಿಸಿದಲ್ಲಿ ತನಗೆ ಆರ್ಥಿಕವಾಗಿ ನಷ್ಟವಾಗಲಿದೆ ಎಂಬ ಕಾರಣ ನೀಡಿ ಅಂತಹ ವಸ್ತುಗಳನ್ನು ತನಿಖಾಧಿಕಾರಿಗಳು ವಶಕ್ಕೆ ಪಡೆಯುವುದನ್ನು ವಿರೋಧಿಸುವುದಕ್ಕೆ ಅವಕಾಶವಿರುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ. ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್ಎಸ್ಎಸ್) 2023ರ ಸೆಕ್ಷನ್ 94(1)ರ ಅಡಿಯಲ್ಲಿ ಚಿನ್ನದ ವಸ್ತುಗಳು ಇತರ ವಿಷಯದ ವ್ಯಾಪ್ತಿಗೆ ಬರುತ್ತವೆ. ಕದ್ದ ಒಡವೆಗಳನ್ನು ಹೊಂದಿದ್ದಾರೆ ಎಂದು ನಂಬಲಾದ ಯಾವುದೇ ವ್ಯಕ್ತಿಗಳಿಗೆ ಅವುಗಳನ್ನು ಒಪ್ಪಿಸಲು ಒತ್ತಾಯಿಸಿ ನೋಟಿಸ್ಗಳನ್ನು ಹೊರಡಿಸುವ ಅಧಿಕಾರ ತನಿಖಾಧಿಕಾರಿಗಳು ಹೊಂದಿದ್ದಾರೆ ಎಂದು ನ್ಯಾಯಪೀಠ ಆದೇಶಿಸಿದೆ. ಅರ್ಜಿದಾರ ಕಂಪನಿಯ ಮನವಿ ಪುರಸ್ಕರಿಸಲು ಯಾವುದೇ ಬಲವಾದ ಕಾರಣಗಳು ಲಭ್ಯವಿಲ್ಲ ಎಂದು ಅಭಿಪ್ರಾಯಪಟ್ಟು ಅರ್ಜಿ ವಜಾಗೊಳಿಸಿರುವ ಹೈಕೋರ್ಟ್, ಚಿನ್ನದ ಆಭರಣಗಳನ್ನು ಕಂಪನಿಯು ತನಿಖಾಧಿಕಾರಿಗಳಿಗೆ ಒಪ್ಪಿಸಬೇಕು. ಆ ಒಡವೆಗಳು ಕರೂರು ವೈಶ್ಯ ಬ್ಯಾಂಕ್ ಕೆಂಗೇರಿ ಶಾಖೆಯಿಂದ ಕಳವು ಮಾಡಲಾಗಿದೆಯೇ ಎಂಬುದನ್ನು ತನಿಖಾಧಿಕಾರಿಗಳು ಪತ್ತೆ ಹಚ್ಚಿ, ಅದು ಸಾಬೀತಾದಲ್ಲಿ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಆದೇಶದಲ್ಲಿ ಹೇಳಿದೆ. ಕಂಪನಿಯ ವಾದವೇನು? ವಿಚಾರಣೆ ವೇಳೆ ವಾದ ಮಂಡಿಸಿದ್ದ ಐಐಎಫ್ಎಲ್ ಫೈನಾನ್ಸ್ ಕಂಪನಿ ಪರ ವಕೀಲರು, ಚಿನ್ನವನ್ನು ಉತ್ತಮ ನಂಬಿಕೆಯಿಂದ ಸ್ವೀಕರಿಸಿದೆ ಮತ್ತು ಸೂಕ್ತ ಕಾರ್ಯವಿಧಾನಗಳನ್ನು ಅನುಸರಿಸಿದ ನಂತರ ಸಾಲಗಳನ್ನು ವಿತರಿಸಲಾಗಿದೆ. ಒಪ್ಪಂದದ ಬಾಧ್ಯತೆಗಳು ಅಡವಿಟ್ಟ ಚಿನ್ನವನ್ನು ಬಿಟ್ಟುಕೊಡುವುದನ್ನು ತಡೆಯುತ್ತಿದ್ದವು. ಆದರೆ, ಚಿನ್ನವನ್ನು ವಶಪಡಿಸಿಕೊಳ್ಳದೆ ತನಿಖೆಗೆ ಸಹಕರಿಸಲು ಸಾಧ್ಯವಿದೆ ಎಂದಿದ್ದರು. ಕರೂರು ವೈಶ್ಯ ಬ್ಯಾಂಕ್ ಪರ ವಕೀಲರು ವಾದ ಮಂಡಿಸಿ, ಕಳುವಾಗಿರುವ ಚಿನ್ನವನ್ನು ಸಾಲ ಪಡೆದ ಗ್ರಾಹಕರಿಗೆ ಹಿಂದಿರುಗಿಸುವುದು ತನ್ನ ಕಾನೂನುಬದ್ಧ ಕರ್ತವ್ಯ ಎಂದು ತಿಳಿಸಿದ್ದರು. ಸರ್ಕಾರದ ಪರ ವಕೀಲರು, ಐಐಎಫ್ಎಲ್ ಕಂಪನಿಯಲ್ಲಿ ಅಡಮಾನ ಇಡಲಾಗಿರುವ ಚಿನ್ನವನ್ನು ಬ್ಯಾಂಕ್ನ ಅಧಿಕಾರಿಯೇ ಕದ್ದಿದ್ದಾರೆನ್ನಲಾಗಿದೆ. ಆದ್ದರಿಂದ, ತನಿಖೆ ಮುಂದುವರಿಯಬೇಕು ಎಂದು ವಾದಿಸಿದ್ದರು. ಪ್ರಕರಣವೇನು? ಕರೂರು ವೈಶ್ಯ ಬ್ಯಾಂಕ್ನ ಕೆಂಗೇರಿ ಶಾಖೆಯಲ್ಲಿ ಮಹಿಳಾ ಸಿಬ್ಬಂದಿಯೊಬ್ಬರು 2022ರಿಂದ ಸಹಾಯಕ ವ್ಯವಸ್ಥಾಪಕಿಯಾಗಿ ಸೇವೆ ಸಲ್ಲಿಸುತ್ತಿದ್ದರು. 2025ರ ಅಕ್ಟೋಬರ್ ತಿಂಗಳಲ್ಲಿ ನಡೆದ ಅನಿರೀಕ್ಷಿತ ಮರು ಮೌಲ್ಯಮಾಪನದ ಸಮಯದಲ್ಲಿ ಸಹಾಯಕ ವ್ಯವಸ್ಥಾಪಕಿ ನಿರ್ವಹಿಸುವ ಚಿನ್ನದ ಸಾಲ ಖಾತೆಗಳ ಸಂಬಂಧ ಗಂಭೀರ ಅಕ್ರಮಗಳು ಪತ್ತೆಯಾಗಿದ್ದವು. ಈ ಕುರಿತು ಪರಿಶೀಲನೆ ನಡೆಸಿದಾಗ, ಗ್ರಾಹಕರು ಅಡವಿಟ್ಟಿದ್ದ ನಿಜವಾದ ಚಿನ್ನಾಭರಣಗಳನ್ನು ರಹಸ್ಯವಾಗಿ ತೆಗೆದು ನಕಲಿ ವಸ್ತುಗಳೊಂದಿಗೆ ಬದಲಾಯಿಸುವ ಮೂಲಕ ಕಳ್ಳತನ ಮತ್ತು ಕ್ರಿಮಿನಲ್ ನಂಬಿಕೆ ದ್ರೋಹಕ್ಕೆ ಸಮನಾದ ಕೃತ್ಯಗಳಲ್ಲಿ ಅವರು ಭಾಗಿಯಾಗಿರುವ ಅಂಶ ಬೆಳಕಿಗೆ ಬಂದಿತ್ತಲ್ಲದೆ, ಕದ್ದ ಒಡವೆಗಳನ್ನು ಐಐಎಫ್ಎಲ್ ಫೈನಾನ್ಸ್ ಕಂಪನಿ ಸೇರಿ ವಿವಿಧೆಡೆಗಳಲ್ಲಿ ಅಡವಿಟ್ಟು ಸಾಲ ಪಡೆದುಕೊಂಡಿದ್ದ ಆರೋಪವಿತ್ತು. ಈ ಸಂಬಂಧ ಕರೂರು ವೈಶ್ಯ ಬ್ಯಾಂಕ್ ದೂರು ನೀಡಿದ್ದ ಹಿನ್ನೆಲೆಯಲ್ಲಿ ಪೊಲೀಸರು ಫೈನಾನ್ಸ್ ಕಂಪನಿಗೆ ನೋಟಿಸ್ ಜಾರಿ ಮಾಡಿದ್ದರು. ಇದರಿಂದ, ನೋಟಿಸ್ ರದ್ದು ಕೋರಿ ಕಂಪನಿ ಹೈಕೋರ್ಟ್ ಮೆಟ್ಟಿಲೇರಿತ್ತು.
ಕುಕನೂರು | ಗುದ್ನೇಶ್ವರ ಮಠದ ಜಮೀನು ವಿವಾದ ಪ್ರಕರಣ: ಸ್ಥಳಕ್ಕೆ ಅಧಿಕಾರಿಗಳ ಭೇಟಿ
ಹೈಕೋರ್ಟ್ ವಿಚಾರಣೆಯ ಮಧ್ಯೆ ಜಮೀನು ಪರಿಶೀಲನೆ
Parliament Budget Session| ಪ್ರತಿಪಕ್ಷಗಳ ಪ್ರತಿಭಟನೆ ಮಧ್ಯೆ ಲೋಕಸಭೆ ಅಧಿವೇಶನ ಮಾ.9ವರೆಗೆ ಮುಂದೂಡಿಕೆ
ಹೊಸದಿಲ್ಲಿ,ಫೆ.13: ಎಪ್ಸ್ಟೀನ್ ಕಡತಗಳಿಗೆ ಸಂಬಂಧಿಸಿದಂತೆ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಅವರ ರಾಜೀನಾಮೆಗೆ ಆಗ್ರಹಿಸಿ ಸಂಸತ್ ಸಂಕೀರ್ಣದಲ್ಲಿ ಪ್ರತಿಪಕ್ಷ ಸಂಸದರ ನಿರಂತರ ಪ್ರತಿಭಟನೆ, ಘೋಷಣೆಗಳು ಮತ್ತು ಕಲಾಪಕ್ಕೆ ವ್ಯತ್ಯಯಗಳ ನಡುವೆ ಮೊದಲ ಹಂತದ ಬಜೆಟ್ ಅಧಿವೇಶನದ ಕೊನೆಯ ದಿನವಾಗಿದ್ದ ಶುಕ್ರವಾರ ಲೋಕಸಭೆಯನ್ನು ಮಾರ್ಚ್ 9ರವರೆಗೆ ಮುಂದೂಡಲಾಯಿತು. ಇದಕ್ಕೂ ಮುನ್ನ, ಪುರಿ ಮತ್ತು ಜೆಫ್ರಿ ಎಪ್ಸ್ಟೀನ್ ನಡುವಿನದ್ದೆನ್ನಲಾಗಿರುವ ಇಮೇಲ್ಗಳು ಬಹಿರಂಗಗೊಂಡ ಹಿನ್ನೆಲೆಯಲ್ಲಿ ಸಂಸತ್ ಸಂಕೀರ್ಣದಲ್ಲಿ ಪ್ರತಿಪಕ್ಷಗಳ ಪ್ರತಿಭಟನೆಗಳಿಂದಾಗಿ ಸದನವನ್ನು ಮಧ್ಯಾಹ್ನದವರೆಗೆ ಮುಂದೂಡಲಾಗಿತ್ತು. ಸಂಪೂರ್ಣ ವಿವರಣೆಯನ್ನು ನೀಡುವವರೆಗೆ ಪುರಿ ಸಚಿವ ಹುದ್ದೆಯಿಂದ ಕೆಳಗಿಳಿಯಬೇಕು ಎಂದು ಪ್ರತಿಪಕ್ಷವು ಆಗ್ರಹಿಸಿತು. ಗದ್ದಲದ ನಡುವೆಯೇ ಬಿಜಿಪಿ ಸಂಸದ ನಿಶಿಕಾಂತ ದುಬೆಯವರು ಲೋಕಸಭೆಯಲ್ಲಿ ವಿಪಕ್ಷ ನಾಯಕ ರಾಹುಲ್ ಗಾಂಧಿ ವಿರುದ್ಧ ಮಂಡಿಸಿರುವ ನಿರ್ಣಯವನ್ನು ಕಾಂಗ್ರೆಸ್ ಬಲವಾಗಿ ವಿರೋಧಿಸಿತು. ಆರಂಭದಲ್ಲಿ ಸದನವು ಇತ್ತೀಚಿಗೆ ನಿಧನರಾದ ಹರಿದ್ವಾರದ ಮಾಜಿ ಸಂಸದ ಭಗವಾನದಾಸ್ ರಾಠೋಡ್ ಅವರ ಗೌರವಾರ್ಥ ಒಂದು ನಿಮಿಷ ಮೌನವನ್ನು ಆಚರಿಸಿತು. ಕಾಂಗ್ರೆಸ್ ಸಂಸದೀಯ ಪಕ್ಷದ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ಹಿಬಿ ಎಡೆನ್ ಅವರು,ಪಕ್ಷವನ್ನು ಬೆದರಿಸಲು ಸಾಧ್ಯವಿಲ್ಲ,ರೈತರು ಮತ್ತು ಭಾರತ-ಅಮೆರಿಕ ಒಪ್ಪಂದ ಸೇರಿದಂತೆ ಭಾರತದ ವ್ಯಾಪಾರ ಒಪ್ಪಂದಗಳಿಗೆ ಸಂಬಂಧಿಸಿದ ವಿಷಯಗಳನ್ನು ಎತ್ತುವುದನ್ನು ಪಕ್ಷವು ಮುಂದುವರಿಸಲಿದೆ ಎಂದು ತಿಳಿಸಿದರು.
ಬಲೂಚಿಸ್ತಾನದಲ್ಲಿ ಭೂಕಂಪನ|ರಿಕ್ಟರ್ ಮಾಪಕದಲ್ಲಿ 5.6 ತೀವ್ರತೆ ದಾಖಲು
ಇಸ್ಲಾಮಾಬಾದ್,ಫೆ.13: ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತದಲ್ಲಿ ಶುಕ್ರವಾರ ಭೂಕಕಂಪನವಾಗಿದ್ದು, ರಿಕ್ಟರ್ ಮಾಪಕದಲ್ಲಿ 5.6 ತೀವ್ರತೆ ದಾಖಲಾಗಿದೆ. ಈಶಾನ್ಯ ಖುಝ್ದಾರ್ ಪಟ್ಟಣದಿಂದ 86 ಕಿ.ಮೀ. ಈಶಾನ್ಯಕ್ಕೆ, ಭೂಮಿಯಿಂದ 13 ಕಿ.ಮೀ. ಆಳದಲ್ಲಿ ಭೂಕಂಪನವಾಗಿದೆಯೆಂದು ಪಾಕಿಸ್ತಾನದ ಭೂಕಂಪಶಾಸ್ತ್ರ ಇಲಾಖೆ (ಪಿಎಂಡಿ) ತಿಳಿಸಿದೆ. ಮುಂಜಾನೆ 6:30ರ ಹೊತ್ತಿಗೆ ಭೂಕಂಪನವಾಗಿದ್ದು, ಬಲೂಚಿಸ್ತಾನದ ಝಾಲ್ ಮಾಗ್ಸಿ, ಜಾಫರಾಬಾದ್ ಹಾಗೂ ನಾಸಿರಾಬಾದ್ ಪಟ್ಟಣಗಳಲ್ಲಿ ಭೂಮಿ ಕಂಪಿಸಿದೆ. ಅಲ್ಲದೆ ಸಿಂಧ್ ಪ್ರಾಂತದ ಸುಕ್ಕೂರ್, ಖ್ವಾಂಬರ್, ಶಾಹದ್ಕೋಟ್ ಹಾಗೂ ದಾಡು ಜಿಲ್ಲೆಗಳಲ್ಲಿಯೂ ಭೂಮಿ ನಡುಗಿದ ಅನುಭವವಾಗಿದೆ. ಆದರೆ ಯಾವುದೇ ಸಾವುನೋವು ಸಂಭವಿಸಿರುವ ಬಗ್ಗೆ ವರದಿಗಳು ಬಂದಿಲ್ಲವೆಂದು ಮೂಲಗಳು ತಿಳಿಸಿವೆ. ಕಳೆದ ತಿಂಗಳು ಪಾಕ್ ಆಕ್ರಮಿತ ಕಾಶ್ಮೀರದ ಗಿಲ್ಗಿಟ್-ಬಾಲ್ಟಿಸ್ತಾನ್ ಹಾಗೂ ಖೈಬರ್ ಪಖ್ತೂಂಖ್ವಾ ಪ್ರಾಂತದ ಕೆಲವು ಪ್ರದೇಶಗಳಲ್ಲಿ 5.8 ತೀವ್ರತೆಯ ಭೂಕಂಪನವಾಗಿತ್ತು.
ಮುಂದಿನ 12 ರಿಂದ 18 ತಿಂಗಳುಗಳಲ್ಲಿ ಸಾವಿರಾರು ವೈಟ್ಕಾಲರ್
ಉದ್ಯೋಗಗಳನ್ನು ಕಸಿಯಲಿರುವ ಎಐ
ಜಾಗತಿಕವಾಗಿ ಮಕ್ಕಳ ಹಸಿವು ನಿವಾರಣೆಗೆ ಯುಎಇಯಿಂದ ಬೃಹತ್ ಅಭಿಯಾನ ಘೋಷಣೆ
ದುಬೈ,ಫೆ.13: ಪವಿತ್ರ ರಮಝಾನ್ ತಿಂಗಳು ಸಮೀಪಿಸುತ್ತಿರುವಂತೆಯೇ, ಯುಎಇನ ಆಡಳಿತಗಾರ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಖ್ತೂಮ್ ಅವರು ಶುಕ್ರವಾರದಂದು, ವಿಶ್ವದಾದ್ಯಂತದ ಕೋಟ್ಯಂತರ ಬಡಮಕ್ಕಳ ಹಸಿವು ನಿವಾರಣೆಗಾಗಿ ‘ಎಡ್ಜ್ ಆಫ್ ಲೈಫ್’ ಅಭಿಯಾನವನ್ನು ಘೋಷಿಸಿದ್ದಾರೆ. ಈ ಕಾರ್ಯಕ್ರಮವು ಅಪೌಷ್ಟಿಕತೆ ಹಾಗೂ ಹಸಿವಿನಿಂದ ಐದು ವರ್ಷಕ್ಕಿಂತ ಕೆಳವಯಸ್ಸಿನ ಮಕ್ಕಳು ಸಾವಿಗೀಡಾಗುವುದನ್ನು ತಡೆಯುವ ಉದ್ದೇಶವನ್ನು ಹೊಂದಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಪೋಸ್ಟ್ ಮಾಡಿರುವ ಶೇಖ್ ಮೊಹಮ್ಮದ್ ಅವರು, ಪವಿತ್ರವಾದ ರಮಝಾನ್ ಅತ್ಯಂತ ಉದಾರತೆ ಹಾಗೂ ಮಮತೆಯ ಮಾಸವಾಗಿದೆ. ಯುಎಇನ ಜನತೆಯ ಬೆಂಬಲದೊಂದಿಗೆ ಜಗತ್ತಿನಾದ್ಯಂತ ಸಮುದಾಯಗಳಿಗಾಗಿ ಮಾನವೀಯ ಅಭಿಯಾನದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಯುಎಇನ ವಾರ್ಷಿಕ ಸಂಪ್ರದಾಯವಾಗಿದೆ ಎಂದರು.
Ballari | ಅಖಿಲ ಭಾರತ ಮುಷ್ಕರ : ಕಂಪ್ಲಿಯಲ್ಲಿ ಪ್ರತಿಭಟನೆ
ಬಳ್ಳಾರಿ / ಕಂಪ್ಲಿ: ಅಖಿಲ ಭಾರತ ಸಾರ್ವತ್ರಿಕ ಮುಷ್ಕರದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಸಾಮಾಜಿಕ ಹಾಗೂ ಆರ್ಥಿಕ ವ್ಯವಸ್ಥೆಯನ್ನು ಬುಡಮೇಲು ಮಾಡುವ ನೀತಿಗಳನ್ನು ಖಂಡಿಸಿ, ಸಿಐಟಿಯು ನೇತೃತ್ವದಲ್ಲಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ, ಗ್ರಾಮ ಪಂಚಾಯತ್ ನೌಕರರು, ಕಟ್ಟಡ ಕಾರ್ಮಿಕರು, ಅಂಗನವಾಡಿ, ಬಿಸಿಯೂಟ ಹಾಗೂ ಹಮಾಲಿ ಕಾರ್ಮಿಕರ ಸಹಕಾರದೊಂದಿಗೆ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಗುರುವಾರ ಪ್ರತಿಭಟನೆ ನಡೆಸಲಾಯಿತು. ನಂತರ ಸಿಐಟಿಯು ತಾಲೂಕು ಅಧ್ಯಕ್ಷ ಐ. ಹೊನ್ನೂರಸಾಬ್ ಹಾಗೂ ಕಾರ್ಯದರ್ಶಿ ಆರ್. ನಾಗರಾಜ ಮಾತನಾಡಿ, ಕೇಂದ್ರ ಸರ್ಕಾರ ಕಾರ್ಮಿಕರ ಬದುಕಿಗೆ ಹಾನಿ ಉಂಟುಮಾಡುವ ಹೊಸ ನೀತಿಗಳನ್ನು ಜಾರಿಗೊಳಿಸಲು ಮುಂದಾಗಿರುವುದು ದುರ್ಘಟನೆಯಾಗಿದೆ ಎಂದು ಆರೋಪಿಸಿದರು. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ರದ್ದುಪಡಿಸಬೇಕು. ಶ್ರಮಶಕ್ತಿ ನೀತಿ ಕೈಬಿಡಬೇಕು. ಗ್ರಾಮ ಪಂಚಾಯತ್ಗಳಿಗೆ ಹೆಚ್ಚಿನ ಅನುದಾನ ನೀಡಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಗ್ರಾಪಂ ನೌಕರರ ಸಂಘದ ರಾಜ್ಯ ಸಹ ಕಾರ್ಯದರ್ಶಿ ರಾಜಾಸಾಬ್ ನೆಲ್ಲುಡಿ, ತಾಲೂಕು ಅಧ್ಯಕ್ಷ ಜಡೆಯ್ಯಸ್ವಾಮಿ, ಪ್ರಧಾನ ಕಾರ್ಯದರ್ಶಿ ಚಾಂದ್ಬಾಷಾ, ಖಜಾಂಚಿ ಚಂದ್ರಶೇಖರ, ಮುಖಂಡರಾದ ಬಂಡಿ ಬಸವರಾಜ, ಶಾಂತಪ್ಪ, ಆರ್. ಏಸಯ್ಯ, ಹುಸೇನಿ, ಅನುರಾಧ, ತಿಪ್ಪಮ್ಮ, ಶಾಂತಮ್ಮ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಇರಾನ್ ಬಿಕ್ಕಟ್ಟು| ಮಧ್ಯಪ್ರಾಚ್ಯದಲ್ಲಿ ಇನ್ನೊಂದು ಸಮರ ನೌಕೆ ನಿಯೋಜನೆಗೆ ಅಮೆರಿಕ ನಿರ್ಧಾರ
ಹೊಸದಿಲ್ಲಿ, ಫೆ.13: ಇರಾನ್ ಬಿಕ್ಕಟ್ಟನ ಹಿನ್ನೆಲೆಯಲ್ಲಿ ಅಮೆರಿಕವು ಜಗತ್ತಿನ ಅತಿ ದೊಡ್ಡ ಯುದ್ದವಿಮಾನ ವಾಹಕ ಹಡಗನ್ನು ಮಧ್ಯಪ್ರಾಚ್ಯಕ್ಕೆ ಕಳುಹಿಸಲು ನಿರ್ಧರಿಸಿದೆ. ಇರಾನ್ನ ಅಣುಶಕ್ತಿ ಕಾರ್ಯಕ್ರಮದ ವಿರುದ್ಧ ಆ ದೇಶದ ಮೇಲೆ ಒತ್ತಡ ಹೇರುವ ತಂತ್ರವಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಈ ಕ್ರಮ ಕೈಗೊಂಡಿದ್ದಾರೆ. ಈಗಾಗಲೇ ಅಮೆರಿಕವು ಮಧ್ಯಪ್ರಾಚ್ಯದ ಸಮುದ್ರಪ್ರದೇಶದಲ್ಲಿ ಅಬ್ರಹಾಂ ಲಿಂಕನ್ ವಿಮಾನವಾಹಕ ನೌಕೆಯನ್ನು ನಿಯೋಜಿಸಿದ್ದು, ಇದೀಗ ಯುಎಸ್ಎಸ್ ಜೆರಾಲ್ಡ್ ಆರ್.ಫೋರ್ಡ್ ಯುದ್ಧನೌಕೆ ಕೂಡ ಅದರ ಜೊತೆಗೂಡಲಿದೆ. ಇರಾನ್ ಜೊತೆ ಇನ್ನೊಂದು ಸುತ್ತಿನ ಮಾತುಕತೆಯನ್ನು ನಡೆಸಲಾಗುವುದೆಂದು ಟ್ರಂಪ್ ಹೇಳಿಕೆ ನೀಡಿದ ಕೆಲವೇ ದಿನಗಳ ಬಳಿಕ ಎರಡನೇ ಯುದ್ಧನೌಕೆಯ ನಿಯೋಜನೆಯ ನಿರ್ಧಾರವನ್ನು ಘೋಷಿಸಲಾಗಿದೆ. ಈಗಾಗಲೇ ಇರಾನ್ ಮೇಲೆ ಅಮೆರಿಕ ದಾಳಿ ನಡೆಸಿದಲ್ಲಿ ಈಗಾಗಲೇ ಇಸ್ರೇಲ್-ಹಮಾಸ್ ಸಂಘರ್ಷದಿಂದ ತತ್ತರಿಸಿರುವ ಮಧ್ಯಪ್ರಾಚ್ಯದಲ್ಲಿ ಇನ್ನೊಂದು ಭೀಕರ ಪ್ರಾದೇಶಿಕ ಸಂಘರ್ಷಕ್ಕೆ ದಾರಿಮಾಡಿಕೊಡಲಿದೆ ಎಂದು ಈಗಾಗಲೇ ಗಲ್ಫ್ ಆರಬ್ರಾಷ್ಟ್ರಗಳು ಎಚ್ಚರಿಕೆ ನೀಡಿವೆ. ಈಗಾಗಲೇ ಮಧ್ಯಪ್ರಾಚ್ಯದ ಅರಬಿ ಸಮುದ್ರದಲ್ಲಿ ಯುಎಸ್ಎಸ್ ಅಬ್ರಹಾಂ ಲಿಂಕನ್ ಯುದ್ಧ ನೌಕೆಯ ಜೊತೆಗೆ ಕ್ಷಿಪಣಿ ಧ್ವಂಸಕ ನೌಕೆಗಳನ್ನು ಕೂಡಾ ನಿಯೋಜಿಸಲಾಗಿದೆ. ಅಮೆರಿಕದ ಜೊತೆಗೆ ಒಪ್ಪಂದಕ್ಕೆ ಬರಲು ವಿಫಲವಾದಲ್ಲಿ ಅದರ ಪರಿಣಾಮ ಅತ್ಯಂತ ಯಾತನಾಮಯವಾಗಿರುವುದು ಎಂದು ಟ್ರಂಪ್ ಗುರುವಾರ ಎಚ್ಚರಿಕೆ ನೀಡಿದ್ದರು. ಬುಧವಾರ ವಾಶಿಂಗ್ಟನ್ಗೆ ಭೇಟಿ ನೀಡಿದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತಾನ್ಯಾಹು ಜೊತೆ ಟ್ರಂಪ್ ಅವರು ವಿಸ್ತೃತ ಮಾತುಕತೆ ನಡೆಸಿದ್ದರು. ಇರಾನ್ನ ಪ್ರಕ್ಷೇಪಕ ಕ್ಷಿಪಣಿ ಕಾರ್ಯಕ್ರಮಗಳ ಮೇಲೆ ನಿಯಂತ್ರಣ ಹೇರಬೇಕು ಮತ್ತು ಹಮಾಸ್ ಹಾಗೂ ಹಿಝ್ಬುಲ್ಲಾದಂತಹ ಹೋರಾಟಗಾರ ಸಂಘಟನೆಗಳಿಗೆ ಬೆಂಬಲ ನೀಡದಂತೆ ಆ ದೇಶದ ಮೇಲೆ ಒತ್ತಡ ಹೇರಬೇಕೆಂದು ಬೆಂಜಮಿನ್ ಅವರು ಡೊನಾಲ್ಡ್ ಟ್ರಂಪ್ ಅವರನ್ನು ಆಗ್ರಹಿಸಿದ್ದರು.
2016ರಿಂದ ಹಾಲಿ ನ್ಯಾಯಾಧೀಶರ ವಿರುದ್ಧ 8,600ಕ್ಕೂ ಅಧಿಕ ದೂರು ಸ್ವೀಕಾರ: ಲೋಕಸಭೆಗೆ ತಿಳಿಸಿದ ಕೇಂದ್ರ ಸರಕಾರ
ಹೊಸದಿಲ್ಲಿ, ಫೆ.14: 2016ರಿಂದ ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಕಚೇರಿ ಹಾಲಿ ನ್ಯಾಯಾಧೀಶರ ವಿರುದ್ಧ 8,600ಕ್ಕೂ ಅಧಿಕ ದೂರುಗಳನ್ನು ಸ್ವೀಕರಿಸಿದೆ ಎಂದು ಲೋಕಸಭೆಗೆ ಶುಕ್ರವಾರ ಮಾಹಿತಿ ನೀಡಲಾಯಿತು. ಲೋಕಸಭೆಗೆ ಲಿಖಿತ ಪ್ರತಿಕ್ರಿಯೆ ನೀಡಿದ ಕಾನೂನು ಸಚಿವ ಅರ್ಜುನ್ ರಾಮ್ ಮೇಘಾವಲ್, 2016 ಹಾಗೂ 2025ರ ನಡುವೆ ಹಾಲಿ ನ್ಯಾಯಾಧೀಶರ ವಿರುದ್ಧ 8,639 ದೂರುಗಳನ್ನು ಸ್ವೀಕರಿಸಲಾಗಿದೆ ಎಂದರು. ಸಿಜೆಐ ಕಚೇರಿ 2024ರಲ್ಲಿ ಹಾಲಿ ನ್ಯಾಯಾಧೀಶರ ವಿರುದ್ಧ ಅತ್ಯಧಿಕ ದೂರು (1,170) ಗಳನ್ನು ಸ್ವೀಕರಿಸಿದೆ ಎಂದು ಅವರು ಹೇಳಿದರು. ಉಚ್ಚ ನ್ಯಾಯಾಲಯದ ನ್ಯಾಯಾಧೀಶರು ಹಾಗೂ ನ್ಯಾಯಾಧೀಶರ ವಿರುದ್ಧ ಸ್ವೀಕರಿಸಲಾದ ದೂರುಗಳನ್ನು ನ್ಯಾಯಾಂಗದ ಆಂತರಿಕ ವ್ಯವಸ್ಥೆಯ ಮೂಲಕ ನಿರ್ವಹಿಸಲಾಗಿದೆ ಎಂದು ತಿಳಿಸಿದರು.
ರವೀಂದ್ರ ಜಡೇಜಾರಂಥ ಘಟಾನುಘಟಿಯನ್ನೇ ಪಕ್ಕಕ್ಕಿಟ್ಟು ರಿಯಾನ್ ಪರಾಗ್ ಗೇ ರಾಜಸ್ಥಾನ ರಾಯಲ್ಸ್ ಪಟ್ಟ ಕಟ್ಟಿದ್ದೇಕೆ?
Rajasthan Royals Captain Riyan Parag- ಸಂಜು ಸ್ಯಾಮ್ಸನ್ ಅವರು ಟ್ರೇಡ್ ಪ್ರಕ್ರಿಯೆಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪಾಲಾಗಾದ ಅವರ ಬದಲಿಗೆ ಅಲ್ಲಿಂದ ರಾಜಸ್ಥಾನ ರಾಯಲ್ಸ್ ತೆಕ್ಕೆಗೆ ಬಿದ್ದ ಅನುಭವಿ ರವೀಂದ್ರ ಜಡೇಜಾ ಅವರಿಗೆ ನಾಯಕನ ಸ್ಥಾನ ಸಿಗಬಹುದೆಂದು ಅಂದುಕೊಂಡಿದ್ದರು. ಅವರನ್ನು ವಯಸ್ಸಿನ ಕಾರಣಕ್ಕೆ ಪರಿಗಣಿಸದಿದ್ದರೂ ಯುವ ಆಟಗಾರರಾದ ಯಶಸ್ವಿ ಜೈಸ್ವಾಲ್, ಧ್ರುವ್ ಜ್ಯುರೆಲ್ ಇದ್ರು. ಆದ್ರೆ ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿಯ ಲೆಕ್ಕಾಚಾರವೇ ವಿಭಿನ್ನವಾಗಿದೆ. ಅದಕ್ಕೇ ರಿಯಾನ್ ಪರಾಗ್ ಅವರಿಗೆ ಮಣೆ ಹಾಕಿದೆ.
44 ಕೋಟಿ ರೂ.ವಂಚನೆ ಪ್ರಕರಣ| ನಿರ್ಮಾಪಕ ವಿಕ್ರಮ ಭಟ್ ಪತ್ನಿಗೆ ಮಧ್ಯಂತರ ಜಾಮೀನು ನೀಡಿದ ಸುಪ್ರೀಂ ಕೋರ್ಟ್
ಹೊಸದಿಲ್ಲಿ,ಫೆ.13: ಸರ್ವೋಚ್ಚ ನ್ಯಾಯಾಲಯವು 44 ಕೋಟಿ.ರೂ.ವಂಚನೆ ಪ್ರಕರಣದಲ್ಲಿ ಚಿತ್ರ ನಿರ್ಮಾಪಕ-ನಿರ್ದೇಶಕ ವಿಕ್ರಮ ಭಟ್ ಅವರ ಪತ್ನಿ ಶ್ವೇತಾಂಬರಿ ಭಟ್ ಅವರಿಗೆ ಶುಕ್ರವಾರ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ದಂಪತಿಗೆ ಜಾಮೀನು ನಿರಾಕರಿಸಿದ್ದ ರಾಜಸ್ಥಾನ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಮೇಲ್ಮನವಿಗೆ ಸಂಬಂಧಿಸಿದಂತೆ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ ಮತ್ತು ನ್ಯಾ.ಜಾಯಮಾಲ್ಯ ಬಾಗ್ಚಿ ಅವರ ಪೀಠವು ನೋಟಿಸ್ಗಳನ್ನು ಹೊರಡಿಸಿತು. ಅರ್ಜಿದಾರರ ಪರ ಹಿರಿಯ ವಕೀಲ ಮುಕುಲ ರೋಹಟ್ಗಿಯವರು, ದೂರುದಾರರ ಜೀವನ ಕಥೆಯನ್ನು ಆಧರಿಸಿದ ಚಲನಚಿತ್ರ ನಿರ್ಮಾಣ ಯೋಜನೆಯಿಂದಾಗಿ ವಿವಾದವು ಉದ್ಭವಿಸಿದೆ ಮತ್ತು ಚಿತ್ರದ ವೈಫಲ್ಯವು ಕ್ರಿಮಿನಲ್ ಮೊಕದ್ದಮೆಗೆ ಕಾರಣವಾಗುವುದಿಲ್ಲ ಎಂದು ವಾದಿಸಿದರು. ಶ್ವೇತಾಂಬರಿ ಭಟ್ ಅವರಿಗೆ ಮಧ್ಯಂತರ ಪರಿಹಾರವನ್ನು ಒದಗಿಸುವಂತೆ ಅವರು ನ್ಯಾಯಾಲಯವನ್ನು ಕೋರಿದರು. ಇದನ್ನು ವಿರೋಧಿಸಿದ ದೂರುದಾರರ ಪರ ವಕೀಲರು ಪ್ರಕರಣವು 44 ಕೋಟಿ ರೂ.ಗಳ ವಂಚನೆಯನ್ನು ಒಳಗೊಂಡಿದೆ ಎಂದು ಹೇಳಿದರೆ ರಾಜಸ್ಥಾನ ಸರಕಾರವು ವಿವರವಾದ ಉತ್ತರವನ್ನು ಸಲ್ಲಿಸಲು ಸಮಯಾವಕಾಶವನ್ನು ಕೋರಿತು. ಹಣವನ್ನು ವಸೂಲು ಮಾಡಲು ಕ್ರಿಮಿನಲ್ ಮೊಕದ್ದಮೆಗಳನ್ನು ಬಳಸಲಾಗುತ್ತಿದೆಯೇ ಎಂದು ಪ್ರಶ್ನಿಸಿದ ಪೀಠವು ಮಧ್ಯಂತರ ಜಾಮೀನಿನಲ್ಲಿ ಶ್ವೇತಾಂಬರಿ ಭಟ್ ಅವರನ್ನು ತಕ್ಷಣ ಬಿಡುಗಡೆಗೊಳಿಸುವಂತೆ ಆದೇಶಿಸಿತು. ಪ್ರಕರಣದ ಮುಂದಿನ ವಿಚಾರಣೆ ಫೆ.19ರಂದು ನಡೆಯಲಿದೆ. ಕಳೆದ ವರ್ಷದ ಡಿಸೆಂಬರ್ನಲ್ಲಿ ರಾಜಸ್ಥಾನದ ಉದಯಪುರ ಪೋಲಿಸರು ಭಟ್ ದಂಪತಿಯನ್ನು ಮುಂಬೈನಿಂದ ಬಂಧಿಸಿದ್ದರು. ಈ ವರ್ಷದ ಜ.31ರಂದು ರಾಜಸ್ಥಾನ ಉಚ್ಚ ನ್ಯಾಯಾಲಯದ ಜೋಧಪುರ ಪೀಠವು ಅವರ ಜಾಮೀನು ಅರ್ಜಿಯನ್ನು ವಜಾಗೊಳಿಸಿತ್ತು. ನಂತರ ದಂಪತಿ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಿದ್ದರು.
ಬ್ಯಾಡಗಿ ಶಾಸಕ ಬಸವರಾಜ್ ಶಿವಣ್ಣನವರ ಅವರಿಗೆ ಲಘು ಹೃದಯಾಘಾತ; ಆಸ್ಪತ್ರೆಗೆ ದಾಖಲು
ಹಾವೇರಿ : ಹಾವೇರಿಯ ಬ್ಯಾಡಗಿ ಶಾಸಕ ಬಸವರಾಜ್ ಶಿವಣ್ಣನವರ ಆರೋಗ್ಯದಲ್ಲಿ ಏರುಪೇರು ಆಗಿದ್ದು ಇಂದು ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ. ನಾಳೆ ಹಾವೇರಿಯಲ್ಲಿ ರಾಜ್ಯ ಸರಕಾರ 1000 ದಿನಗಳ ಯಶಸ್ವಿಯಾಗಿ ಪೂರೈಸಿದ ಹಿನ್ನಲೆಯಲ್ಲಿ ಸಾಧನಾ ಸಮಾವೇಶ ಹಮ್ಮಿಕೊಂಡಿದ್ದು ಇದರ ಪೂರ್ವ ಸಿದ್ದತೆಯ ಕೆಲಸವನ್ನು ವಿಕ್ಷಣೆ ಮಾಡಿ ಮನೆಗೆ ಹೋದಾಗ ಗುರುವಾರ ರಾತ್ರಿ ಆಯಾಸ ಹಾಗು ಎದೆಯಲ್ಲಿ ನೋವು ಕಾಣಿಸಿಕೊಂಡಿದ್ದು ಇಂದು ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬಸವರಾಜ್ ಶಿವಣ್ಣನವರಗೆ ಹುಬ್ಬಳ್ಳಿಯ ವಿಹಾನ್ ಆಸ್ಪತ್ರೆಯಲ್ಲಿ ಹೃದಯ ಸಮಸ್ಯೆ ಇರುವದು ಪತ್ತೆಹಚ್ಚಿದ ವೈದ್ಯರು ನಂತರ ಹೃದಯದ ಶಸ್ತ್ರ ಚಿಕಿತ್ಸೆ ಮಾಡಿ ಸ್ಟಂಟ್ ಗಳನ್ನ ಅಳವಡಿಕೆ ಮಾಡಿ ಐಸಿಯುನಲ್ಲಿ ಚಿಕಿತ್ಸೆ ಮುಂದುವರೆಸಿದ್ದಾರೆ. ಸುದ್ದಿ ತಿಳಿದ ತಕ್ಷಣ ಸಚಿವ ಶಿವಾನಂದ ಪಾಟೀಲ್ ಹಾಗು ವಿಧಾನ ಸಭೆ ಉಪ ಸಭಾಪತಿ ರುದ್ರಪ್ಪ ಲಮಾಣಿ, ಹಾನಗಲ್ ಶಾಸಕ ಶ್ರೀನಿವಾಸ್ ಮಾನೆ ಹಾಗು ಕಾಂಗ್ರೆಸ್ ನ ನಾಯಕರು ಆಸ್ಪತ್ರೆಗೆ ಭೇಟಿ ನೀಡಿ ಬಸವರಾಜ್ ಶಿವಣ್ಣನವರ ಆರೋಗ್ಯವನ್ನು ವಿಚಾರಿಸಿದ್ದಾರೆ.
ಮುಂಬೈ,ಫೆ.13: ಇಲ್ಲಿಯ ಕಾಲಾ ಘೋಡಾ ಕಲಾ ಉತ್ಸವದಲ್ಲಿ ಸಾಮಾಜಿಕ ಹೋರಾಟಗಾರ ಆನಂದ್ ತೇಲ್ತುಂಬ್ಡೆಯವರು ಭಾಗವಹಿಸಬೇಕಿದ್ದ ಪುಸ್ತಕ ಚರ್ಚೆಯನ್ನು ಪೊಲೀಸರ ಆದೇಶದ ಮೇರೆಗೆ ರದ್ದುಗೊಳಿಸಿದ ಹಿನ್ನೆಲೆಯಲ್ಲಿ ಉತ್ಸವದ ನಿರ್ದೇಶಕಿ ಬೃಂದಾ ಮಿಲ್ಲರ್ ಅವರು, ವಿವಾದವನ್ನು ಮತ್ತು ಅನಗತ್ಯ ಗೊಂದಲವನ್ನು ತಪ್ಪಿಸುವುದು ಉತ್ತಮ ಎಂದು ಶುಕ್ರವಾರ ಹೇಳಿದರು. ಪೋಲಿಸರು ತನ್ನನ್ನು ಸಂಪರ್ಕಿಸುವವರೆಗೂ ತನಗೆ ವಿಷಯವೇ ಗೊತ್ತಿರಲಿಲ್ಲ ಎಂದು ಸುದ್ದಿಸಂಸ್ಥೆಗೆ ತಿಳಿಸಿದ ಮಿಲ್ಲರ್, ‘ನಂತರ ನಾನು ನನ್ನ ಸಾಹಿತ್ಯ ಮೇಲ್ವಿಚಾರಕರನ್ನು ಸಂಪರ್ಕಿಸಿದ್ದೆ. ಕಾರ್ಯಕ್ರಮವು ಕೇವಲ ತೇಲ್ತುಂಬ್ಡೆಯವರ ಪುಸ್ತಕದ (ದಿ ಸೆಲ್ ಆ್ಯಂಡ್ ಸೋಲ್:ಎ ಪ್ರಿಜನ್ ಮೆಮೊಯಿರ್) ಕುರಿತಾಗಿತ್ತು ಎಂದು ಅವರು ತಿಳಿಸಿದ್ದರು’ ಎಂದು ಹೇಳಿದರು. ಪುಸ್ತಕವು ಈಗಾಗಲೇ ಸೆನ್ಸಾರ್ ಮಂಡಳಿಯಿಂದ ಅನುಮೋದನೆಯನ್ನು ಪಡೆದಿದೆ ಎಂದೂ ಅವರು ಬೆಟ್ಟು ಮಾಡಿದರು. ಪೊಲೀಸರು ತನ್ನನ್ನು ಸಂಪರ್ಕಿಸಿದ ಬಳಿಕ ಕಾರ್ಯಕ್ರಮವನ್ನು ರದ್ದುಗೊಳಿಸಿದ್ದ ಸಂಘಟಕರು ಪ್ಯಾನೆಲಿಸ್ಟ್ಗಳಿಗೆ ಅವರ ಪೋಸ್ಟ್ಗಳನ್ನು ತೆಗೆದುಹಾಕುವಂತೆ ಸೂಚಿಸಿದ್ದರು. ಆದರೆ ಅವರು ಮಾಧ್ಯಮಗಳೊಂದಿಗೆ ಮಾತನಾಡಿದ್ದರು ಮತ್ತು ಜನರು ಅತಿಯಾಗಿ ಪ್ರತಿಕ್ರಿಯಿಸಿದ್ದರು ಎಂದರು. ಫೆ.6ರಂದು ನಡೆಯಬೇಕಿದ್ದ ಚರ್ಚಾ ಕಾರ್ಯಕ್ರಮದಲ್ಲಿ ತೇಲ್ತುಂಬ್ಡೆ ಮತ್ತು ಲೇಖಕಿ ನೀತಾ ಕೊಲ್ಹಾಟಕರ್ ಅವರು ಭಾಗವಹಿಸಲಿದ್ದರು. ಸುದ್ದಿ ಜಾಲತಾಣ ಸ್ಕ್ರೋಲ್ನ ಸಂಪಾದಕ ನರೇಶ ಫೆರ್ನಾಂಡಿಸ್ ಕಾರ್ಯಕ್ರಮವನ್ನು ನಿರ್ವಹಿಸಲಿದ್ದರು. ಆದರೆ ಫೆ.4ರಂದು ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿತ್ತು. ಭೀಮಾ-ಕೋರೆಗಾಂವ್ ಪ್ರಕರಣದಲ್ಲಿ ಬಂಧಿಸಲ್ಪಟ್ಟಿದ್ದ ತೇಲ್ತುಂಬ್ಡೆ ಪ್ರಸ್ತುತ ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದಾರೆ. ‘ನಾನು ತೇಲ್ತುಂಬ್ಡೆಯವರ ಪುಸ್ತಕವನ್ನು ಓದಿಲ್ಲ, ಓದುವ ಉದ್ದೇಶವೂ ಇಲ್ಲ’ ಎಂದು ಮಿಲ್ಲರ್ ಹೇಳಿದ್ದನ್ನು ಸುದ್ದಿಸಂಸ್ಥೆಯು ಉಲ್ಲೇಖಿಸಿದೆ. ‘ನಾನು ಪುಸ್ತಕದ ಪರವಾಗಿದ್ದೇನೆ ಅಥವಾ ವಿರುದ್ಧವಾಗಿದ್ದೇನೆ ಎಂದು ನಾನು ಹೇಳುತ್ತಿಲ್ಲ,ನಾನು ತಟಸ್ಥ ನಿಲುವನ್ನು ಹೊಂದಿದ್ದೇನೆ. ಏಕೆಂದರೆ ಕಾಲಾ ಘೋಡಾ ಕಲಾ ಉತ್ಸವದ ದೊಡ್ಡ ಜವಾಬ್ದಾರಿ ನನ್ನ ಮೇಲಿದೆ ಮತ್ತು ಉತ್ಸವದ ನಿರ್ದೇಶಕಿಯಾಗಿ ಅದರ ಸುರಕ್ಷತೆ ನನಗೆ ಅತ್ಯಂತ ಮುಖ್ಯವಾಗಿದೆ ’ಎಂದು ಹೇಳಿದರು. ವಾರ್ಷಿಕ ಕಾಲಾ ಘೋಡಾ ಕಲಾ ಉತ್ಸವವು ಜ.31ರಂದು ಆರಂಭಗೊಂಡು ಫೆ.8ರಂದು ಸಮಾರೋಪಗೊಂಡಿತ್ತು.
ಹರ್ಷದಲ್ಲಿ ರಾಯಲ್ ರಿಪಬ್ಲಿಕ್ ಡೀಲ್ಸ್ ಕ್ಯಾಂಪೇನ್: ರಾಯಲ್ ಎನ್ಫೀಲ್ಡ್ ಬೈಕ್, ನಾಲ್ಕು ಅದೃಷ್ಟಶಾಲಿ ವಿಜೇತರ ಆಯ್ಕೆ
ಉಡುಪಿ, ಫೆ.13: ಹರ್ಷ ಗೃಹೋಪಯೋಗಿ 21 ಮಳಿಗೆಗಳಲ್ಲಿ ಜ. 22ರಿಂದ 27ರ ತನಕ ನಡೆದ ರಾಯಲ್ ರಿಪಬ್ಲಿಕ್ ಡೀಲ್ಸ್ ಕ್ಯಾಂಪೇನ್ ಅಂಗವಾಗಿ ರಾಯಲ್ ಎನ್ಫೀಲ್ಡ್ 350ಸಿಸಿ ಬೈಕ್ ವಿಜೇತ 4ಅದೃಷ್ಟಶಾಲಿ ಗ್ರಾಹಕರ ಆಯ್ಕೆ ಶುಕ್ರವಾರ ನಡೆಯಿತು. ಸಿಟಿ ಬಸ್ ನಿಲ್ದಾಣದ ಬಳಿಯ ಹರ್ಷ ಮಳಿಗೆಯಲ್ಲಿ ನಡೆದ ಸಮಾರಂಭ ದಲ್ಲಿ ನಾಲ್ವರು ಅದೃಷ್ಟಶಾಲಿ ಗ್ರಾಹಕರನ್ನು ರೋಶನಿ ಮಲ್ಪೆ, ವಿದ್ಯಾ ಶೆಟ್ಟಿ ನಿಟ್ಟೆ, ಉಮೇಶ್ ಶೆಟ್ಟಿ ಮಣಿಪಾಲ, ಪತ್ರಕರ್ತ ಆ್ಯಸ್ಟ್ರೋ ಮೋಹನ್ ಆಯ್ಕೆ ಮಾಡಿದರು. ಹರ್ಷ ಮಳಿಗೆಗಳಲ್ಲಿ 15,000ರೂ.ಗಳಿಗೂ ಅಧಿಕ ಶಾಪಿಂಗ್ ಮಾಡಿದವ ರಿಗೆ ನೀಡಿದ ಕೂಪನ್ಗಳ ಆಧಾರದಲ್ಲಿ ನಾಲ್ಕು ವಲಯವಾರು ರಾಯಲ್ ಎನ್ಫೀಲ್ಡ್ 350ಸಿಸಿ ಬೈಕ್ ವಿಜೇತರ ಆಯ್ಕೆ ಮಾಡಲಾಯಿತು. ಹರ್ಷ ಹೆಡ್ ಆಫ್ ಮಾರ್ಕೆಟಿಂಗ್ ಶ್ರೀವತ್ಸ ಬಲ್ಲಾಳ್, ಕ್ಲಸ್ಟರ್ ಮ್ಯಾನೇಜರ್ ರೋನ್ಸನ್ ಡಿಸೋಜಾ, ಸ್ಟೋರ್ ಮ್ಯಾನೇಜರ್ ಅಭಿನ್, ಎಜಿಎಂ(ಸೇಲ್ಸ್) ಸ್ಟೀವನ್ ಲೋಬೊ ಹಾಗೂ ರಿಟೇಲ್ ಕಮರ್ಶಿಯಲ್ ಆಪರೇಶನ್ಸ್ವಿಭಾಗದ ಮ್ಯಾನೇಜರ್ ಪ್ರವೀಣ್ ಕುಮಾರ್ ಉಪಸ್ಥಿತರಿದ್ದರು. ಅವಿನಾಶ್ ಕಾಮತ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ರಾಯಲ್ ಎನ್ಫೀಲ್ಡ್: ಅದೃಷ್ಟಶಾಲಿ ವಿಜೇತರು *ಜ್ಯೋತಿ ಎಸ್., ಉಡುಪಿ ಕೆ.ಎಂ. ಮಾರ್ಗ ಸ್ಟೋರ್ (ಕೂಪನ್: 7414) *ನುಮಾನ್, ಮಂಗಳೂರು ಫಳ್ನೀರ್ ಸ್ಟೋರ್(ಕೂಪನ್: 5681) *ಪ್ರವೀಣ್, ಧಾರವಾಡ ಸ್ಟೋರ್(ಕೂಪನ್:4768) *ಗಣೇಶ್ ಟಿ. ಆರ್., ಶಿವಮೊಗ್ಗ ಸ್ಟೋರ್(ಕೂಪನ್:3700) ಪ್ರತಿಯೊಂದು ಹಬ್ಬವನ್ನು ಸಂಭ್ರಮದಿಂದ ಗ್ರಾಹಕರ ಸಹಭಾಗಿತ್ವದಲ್ಲಿ ಆಚರಿಸಲಾಗುತ್ತಿದೆ. ಹರ್ಷೋತ್ಸವ, ದೀಪಾವಳಿ ಹಾಗೂ ಮೊದಲ ಬಾರಿಗೆ ಗಣರಾಜ್ಯ ಅಂಗವಾಗಿ ರಾಯಲ್ ರಿಪಬ್ಲಿಕ್ ಡೀಲ್ಸ್ ಕ್ಯಾಂಪೇನ್ ನಡೆದಿದ್ದು ಗ್ರಾಹಕರಿಂದ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮಾರ್ಚ್ ತಿಂಗಳಲ್ಲಿ ಹಷೋತ್ಸವಕ್ಕೆ ಸಿದ್ಧತೆ ನಡೆದಿದೆ. -ಸಿದ್ಧಾರ್ಥ ಪ್ರಭು, ಹೆಡ್ ಆಫ್ ಮರ್ಚೆಂಡೈಸಿಂಗ್, ಹರ್ಷ ಪ್ರಧಾನ ಕಚೇರಿ, ಅಂಬಲಪಾಡಿ, ಉಡುಪಿ
ಉಡುಪಿ, ಫೆ.13:ಉಡುಪಿಯಲ್ಲಿ ಗಾರೆ ಕೆಲಸ ಮಾಡಿಕೊಂಡಿದ್ದ ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿ ಬಸಪ್ಪ ಛಲವಾದಿ (50) ಎಂಬವರು ಕಳೆದ ಜುಲೈ6ರಂದು ಮನೆಯಿಂದ ಹೊರಗೆ ಹೋದವರು ವಾಪಾಸ್ಸುಬಾರದೇ, ಸಂಬಂಧಿಕರ ಮನೆಗೂ ಹೋಗದೇ ನಾಪತ್ತೆಯಾಗಿದ್ದಾರೆ. 5 ಅಡಿ 5 ಇಂಚು ಎತ್ತರ, ಅಗಲ ಮುಖ, ಗೋಧಿ ಮೈಬಣ್ಣ ಹೊಂದಿದ್ದು, ಕನ್ನಡ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಮಣಿಪಾಲ ಪೊಲೀಸ್ ಠಾಣೆಯ ಪಿ.ಐ ಮೊ.ನಂ: 9480805448, ಪಿ.ಎಸ್.ಐ ಮೊ.ನಂ: 9480805475, 8277988945 ಹಾಗೂ ಉಡುಪಿ ಕಂಟ್ರೋಲ್ ರೂಂ ದೂ.ಸಂಖ್ಯೆ:0820-2526444ನ್ನು ಸಂಪರ್ಕಿಸಬಹುದು ಎಂದು ಮಣಿಪಾಲ ಪೊಲೀಸ್ ಠಾಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.
ಉಡುಪಿ: ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಭಾಷೆ ಬಳಕೆ ಕಡ್ಡಾಯ
ಉಡುಪಿ, ಫೆ.13: ಉಡುಪಿ ನಗರಸಭಾ ವ್ಯಾಪ್ತಿಯ ಎಲ್ಲಾ ಕಚೇರಿ, ಹೋಟೆಲ್, ಬ್ಯಾಂಕ್, ಕಂಪೆನಿಗಳು, ಅಂಗಡಿಗಳ ನಾಮಫಲಕದಲ್ಲಿ ಶೇ.60 ರಷ್ಟು ಕನ್ನಡ ಭಾಷೆಯಲ್ಲಿರುವಂತೆ ಹಾಗೂ ನಾಮಫಲಕದ ಜೊತೆಗೆ ಆ ಸ್ಥಳದ ಐತಿಹ್ಯ ಹಾಗೂ ಸಾಂಸ್ಕೃತಿಕ ಹಿನ್ನೆಲೆಯಲ್ಲಿ ಊರಿನ ಹೆಸರನ್ನು ಸಹ ನಮೂದಿಸುವುದು ಕಡ್ಡಾಯವಾಗಿರುವುದರಿಂದ ಉಡುಪಿ ನಗರಸಭಾ ವ್ಯಾಪ್ತಿಯ ಎಲ್ಲಾ ಉದ್ದಿಮೆದಾರರು, ತಮ್ಮ ಉದ್ದಿಮೆಯ ನಾಮಫಲಕದಲ್ಲಿ ಊರಿನ ಹೆಸರಿನೊಂದಿಗೆ ಕನ್ನಡದಲ್ಲಿ ನಾಮಫಲಕವನ್ನು ಕಡ್ಡಾಯವಾಗಿ ಅಳವಡಿಸಬೇಕು ಮತ್ತು ಇತರೆ ಭಾಷೆಯ ನಾಮಫಲಕಕ್ಕಿಂತ ಕನ್ನಡ ನಾಮಫಲಕವನ್ನು ಶೇ.60ರಷ್ಟು ದೊಡ್ಡದಾಗಿ ಪ್ರದರ್ಶಿಸಬೇಕು. ಈವರೆಗೂ ಉದ್ದಿಮೆ ಪರವಾನಿಗೆಯನ್ನು ಪಡೆದುಕೊಳ್ಳದ/ನವೀಕರಿಸದೇ ಇರುವ ಉದ್ದಿಮೆದಾರರು, ಉದ್ದಿಮೆ ಪರವಾನಿಗೆ ಪಡೆಯಲು ನಿಯಮಾ ನುಸಾರ ಅರ್ಜಿ ಸಲ್ಲಿಸುವಂತೆ ಸೂಚನೆ ನೀಡಲಾಗಿದ್ದರೂ, ಸಹ ಕೆಲವು ವಾಣಿಜ್ಯ ಮಳಿಗೆಗಳು ನಗರಸಭೆಯ ಸೂಚನೆಗಳನ್ನು ಪಾಲಿಸದೆ ಇರುವುದು ಕಂಡು ಬಂದಿದೆ. ಫೆಬ್ರವರಿ ತಿಂಗಳೊಳಗೆ ನಾಮ ಫಲಕಆಳವಡಿಸದಿದ್ದರೆ ದಂಡ ವಿಧಿಸಲಾಗುವುದು ಹಾಗೂ ಉದ್ದಿಮೆ ಪರವಾನಿಗೆಯನ್ನು ರದ್ದುಪಡಿಸಲು ಕ್ರಮ ವಹಿಸಲಾಗುವುದು ಎಂದು ನಗರಸಭೆ ಪೌರಾಯುಕ್ತರ ಪ್ರಕಟಣೆ ತಿಳಿಸಿದೆ.
ಮಾದಕ ವಸ್ತು ಸೇವಿಸಿದ್ದ ಆರೋಪ: ಮೂವರ ಬಂಧನ
ಮಂಗಳೂರು, ಫೆ.13: ನಗರದ ಕೊಟ್ಟಾರಚೌಕಿ ಮತ್ತು ಕೂಳೂರು ಬಸ್ ನಿಲ್ದಾಣದ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಮಾದಕ ವಸ್ತು ಸೇವಿಸಿದ್ದ ಆರೋಪದಲ್ಲಿ ಮೂವರನ್ನು ಕಾವೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಲೋಹಿತ್ ನಗರದ ಸುದೀಪ್ (23), ಗುರುಪುರ ಕೈಕಂಬದ ಶಿಖಿನ್ (25), ಶಕ್ತಿನಗರದ ಸೋಹನ್ ಶೆಟ್ಟಿ (25) ಬಂಧಿತ ಆರೋಪಿಗಳಾಗಿದ್ದಾರೆ. ಇವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಮಾದಕ ವಸ್ತು ಸೇವನೆ ದೃಢಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳ ವಿರುದ್ಧ ಎನ್ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಭಾರತ ಮತ್ತು ಬಾಂಗ್ಲಾದೇಶ ಮತ್ತೊಮ್ಮೆ ಒಟ್ಟಿಗೆ ಸಾಗುವ ಸಮಯ ಬಂದಂತೆ ಭಾಸವಾಗುತ್ತಿದೆ, ಈ ಮಾತು ಯಾಕಂದ್ರೆ ಕಳೆದ ಕೆಲವು ವರ್ಷಗಳಿಂದ ಭಾರತ ಮತ್ತು ಬಾಂಗ್ಲಾದೇಶದ ನಡುವೆ ಬಾಂಧವ್ಯ ಹಾಳಾಗಿ ಹೋಗಿತ್ತು. ಅದರಲ್ಲೂ ಶೇಖ್ ಹಸೀನಾ ಅಧಿಕಾರ ಬಿಟ್ಟು ಕೆಳಗೆ ಇಳಿದು, ಭಾರತಕ್ಕೆ ಬಂದು ಆಶ್ರಯ ಪಡೆದ ನಂತರ ಎರಡೂ ದೇಶಗಳ ಸಂಬಂಧ ಹಾಳು ಮಾಡಲು ಅನೇಕರು ಎಲ್ಲಾ
ದ.ಕ. ಜಿಲ್ಲೆಯ ಶಾಲಾ, ಕಾಲೇಜುಗಳ ಕುಂದುಕೊರತೆಗಳ ಅಹವಾಲು ಸಭೆ
ಮಂಗಳೂರು, ಫೆ.13: ದ.ಕ.ಜಿಲ್ಲೆಯ ಪ್ರಾಥಮಿಕ, ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳ ಕುಂದು ಕೊರತೆಗಳ ಅಹವಾಲು ಮತ್ತು ಸ್ಪಂದನಾ ಸಭೆಯು ವಿಧಾನ ಪರಿಷತ್ ಶಾಸಕ ಎಸ್.ಎಲ್. ಭೋಜೇಗೌಡರ ಅಧ್ಯಕ್ಷತೆಯಲ್ಲಿ ಶುಕ್ರವಾರ ದ.ಕ.ಜಿ.ಪಂ.ನ ನೇತ್ರಾವತಿ ಸಭಾಂಗಣದಲ್ಲಿ ನಡೆಯಿತು. ಈ ಸಂದರ್ಭ ಶಿಕ್ಷಕರ ಸಂಘಟನೆಗಳು ಅನೇಕ ಪ್ರಮುಖ ವಿಚಾರಗಳ ಬಗ್ಗೆ ಸದಸ್ಯರ ಗಮನ ಸೆಳೆದರು. ಅದರಲ್ಲೂ ಮುಖ್ಯವಾಗಿ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಸಿದ್ಧಪಡಿಸುವ ಈ ಅವಧಿಯಲ್ಲಿ ಶಿಕ್ಷಕರಿಗೆ ಚುನಾವಣೆಯ ಬಿಎಲ್ಒ ಜವಾಬ್ದಾರಿ ನೀಡಿರುವುದು ಸರಿಯಲ್ಲ. ಇದರಿಂದ ಎಸೆಸೆಲ್ಸಿ ಫಲಿತಾಂಶದ ಮೇಲೆ ನೇರ ಪರಿಣಾಮ ಬೀಳುವ ಸಾಧ್ಯತೆ ಇದೆ. 400 ಮಕ್ಕಳಿರುವ ಕೆಲವು ಶಾಲೆಗಳಲ್ಲಿ ಒಂದೆರಡು ಶಿಕ್ಷಕರು ಇದ್ದಾಗ ಅವರಿಗೂ ಬಿಎಲ್ಒ ಜವಾಬ್ದಾರಿ ನೀಡಿರುವುದರಿಂದ ಶಿಕ್ಷಣದ ಮೇಲೆ ಬಹುದೊಡ್ಡ ಪರಿಣಾಮ ಬೀಳಲಿದೆ ಎಂದು ಶಿಕ್ಷಕರ ಹಲವು ಸಂಘಟನೆಗಳ ಪ್ರಮುಖರು ಶಿಕ್ಷಣ ಇಲಾಖೆಯ ಗಮನಸೆಳೆದರು. ಚುನಾವಣೆ ಕೆಲಸ ತುಂಬಾ ಮುಖ್ಯ. ಜೊತೆಗೆ ಮಕ್ಕಳ ಶಿಕ್ಷಣವೂ ಮುಖ್ಯ. ಹಾಗಾಗಿ ಬಿಎಲ್ಒ ಕೆಲಸಗಳಿಗೆ ಶಿಕ್ಷಣ ಮತ್ತು ಆರೋಗ್ಯ ಇಲಾಖೆಯವರನ್ನು ಬಿಟ್ಟು ಉಳಿದ ಇಲಾಖೆಯಲ್ಲಿ ಇರುವವರನ್ನು ಬಳಸಿಕೊಂಡರೆ ಉತ್ತಮ ಭೋಜೇಗೌಡ ಹೇಳಿದರು. ಶಿಕ್ಷಕ ತ್ಯಾಗಂ ಹರೇಕಳ ಮಾತನಾಡಿ ದೈಹಿಕ ಶಿಕ್ಷಕರನ್ನು ಕೂಡ ಬಿಎಲ್ಒಗಳನ್ನಾಗಿ ಬಳಸಿಕೊಳ್ಳಲಾಗುತ್ತಿದೆ. ಅದೂ ಕೂಡ ತಾವಿರುವ ಪ್ರದೇಶದ ಬದಲು ಇತರ ಪ್ರದೇಶವನ್ನು ಗೊತ್ತುಪಡಿಸಲಾಗಿದೆ. ಇದರಿಂದ ಬಹಳಷ್ಟು ತೊಂದರೆ ಆಗುತ್ತಿದೆ ಎಂದರು. ಪ್ರಾಂಶುಪಾಲ ವಿಠಲ್ ಕೆ. ಮಾತನಾಡಿ ವಿದ್ಯಾರ್ಥಿಗಳ ಅನುಗುಣಕ್ಕೆ ಉಪನ್ಯಾಸಕರ ನೇಮಕ ಮಾಡುವುದು ಸರಿಯಾದ ಕ್ರಮವಲ್ಲ. ಕಡಿಮೆ ವಿದ್ಯಾರ್ಥಿಗಳು ಇರುವ ಕಾಲೇಜುಗಳಿಗೆ ಉಪನ್ಯಾಸಕ/ಪ್ರಾಂಶುಪಾಲರನ್ನು ನೇಮಿಸುವುದೇ ಇಲ್ಲ. ಇದರಿಂದ ಸೀಮಿತ ಸಂಖ್ಯೆಯಲ್ಲಿ ಮಕ್ಕಳಿರುವ ಶಾಲೆಯಲ್ಲಿ ಅನ್ಯಾಯವಾಗುತ್ತದೆ ಎಂದರು. ಅಪರ ಜಿಲ್ಲಾಧಿಕಾರಿ ರಾಜು ಕೆ. ಮಾತನಾಡಿ ಈ ಹಿಂದೆ ಚುನಾವಣೆಗೆ ಅಂಗನವಾಡಿ, ಆಶಾ ಕಾರ್ಯಕರ್ತೆಯರನ್ನು ಬಿಎಲ್ಒ ಕೆಲಸಗಳಿಗೆ ಬಳಸಲಾಗುತ್ತಿತ್ತು. ಈ ಬಾರಿ ಶಿಕ್ಷಕರನ್ನು ಬಳಸಿಕೊಳ್ಳುವಂತೆ ಆಯೋಗದ ಸೂಚನೆ ಇದೆ. ಹೀಗಾಗಿ ಇದರಲ್ಲಿ ನಮಗೆ ಏನೂ ಮಾಡುವಂತಿಲ್ಲ. ಅನಾರೋಗ್ಯದ ಸಮಸ್ಯೆ ಇರುವ ಮಂದಿಗೆ ವಿನಾಯಿತಿ ನೀಡುವ ಕೆಲಸವನ್ನು ಮಾಡಬಹುದಾಗಿದೆ ಎಂದರು. ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಧನಂಜಯ ಸರ್ಜಿ, ದ.ಕ.ಜಿ.ಪಂ. ಸಿಇಒ ನರವಡೆ ವಿನಾಯಕ್ ಕರ್ಬಾರಿ, ಡಿಡಿಪಿಐ ಶಶಿಧರ್, ಡಿಡಿಪಿಯು ರಾಜೇಶ್ವರಿ, ಡಯೆಟ್ನ ಸದಾನಂದ ಪೂಂಜ, ಶಿಕ್ಷಣ ಕ್ಷೇತ್ರದ ಪ್ರಮುಖರಾದ ರವೀಂದ್ರ ಶೆಟ್ಟಿ ಉಳಿದೊಟ್ಟು, ನವೀನ್ ಶೆಟ್ಟಿ, ಮಂಜುನಾಥ ರೇವಣ್ಕರ್, ರಿಯಾಝ್, ಶಿವಪ್ರಕಾಶ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಫೆ.16ಕ್ಕೆ ಶಾಲಾ ಮಾನ್ಯತೆ ನವೀಕರಣ ಸಭೆ ರಾಜ್ಯಾದ್ಯಂತ ಶಾಲಾ ಮಾನ್ಯತಾ ನವೀಕರಣ ಸಮಸ್ಯೆ ಇದೆ. ಅದರ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಫೆ.16ರಂದು ಬೆಂಗಳೂರಿನಲ್ಲಿ ಶಿಕ್ಷಣ ಸಚಿವ ಸಹಿತ ಇಲಾಖೆಯ ಅಧಿಕಾರಿಗಳ ಜತೆಗೆ ಸಭೆ ನಡೆಯಲಿದೆ. ಶಾಲೆಗಳ ಮಾನ್ಯತಾ ನವೀಕರಣಕ್ಕೆ ಸಂಬಂಧಿಸಿ ಜಮೀನಿನ ಕನ್ವರ್ಶನ್ ವಿಚಾರವನ್ನು ಕೈ ಬಿಟ್ಟಾಗ ಸಾಕಷ್ಟು ಸಮಸ್ಯೆಗಳು ಬಗೆಹರಿ ಯುತ್ತದೆ. ನವೀಕರಣ ವಿಚಾರ ಭ್ರಷ್ಟಾಚಾರದ ದಂಧೆಯಾಗುತ್ತಿದೆ. ಎಂದು ಎಸ್.ಎಲ್. ಭೋಜೇಗೌಡ ಹೇಳಿದರು.
ಫಿಲ್ಮ್ ಚೇಂಬರ್ ನ ಸಭೆಯಲ್ಲಿ ಹೃದಯಾಘಾತ: ʼಸಾಹಸಸಿಂಹʼ ಖ್ಯಾತಿಯ ಚಲನಚಿತ್ರ ನಿರ್ದೇಶಕ ಜೋ ಸೈಮನ್ ನಿಧನ
ಬೆಂಗಳೂರು: ಶುಕ್ರವಾರ ನಗರದಲ್ಲಿ ಚಲನಚಿತ್ರ ನಿರ್ದೇಶಕ ಜೋ ಸೈಮನ್ ನಿಧನರಾಗಿದ್ದಾರೆ. ಫಿಲ್ಮ್ ಚೇಂಬರ್ ನ ಸಭೆಯಲ್ಲಿ ಅವರಿಗೆ ಹೃದಯಾಘಾತವಾಗಿದೆ. ತಕ್ಷಣ ಅವರನ್ನು ಬೆಂಗಳೂರಿನ ಮಲ್ಲಿಗೆ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ. ಮೂಲತಃ ಮಂಡ್ಯ ಮೂಲದ ಜೋ ಸೈಮನ್ ಅವರು, 1967ರಲ್ಲಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಕಣಗಾಲ್ ಪ್ರಭಾಕರ ಶಾಸ್ತ್ರಿ, ಎಸ್.ವಿ ರಾಜೇಂದ್ರ ಸಿಂಗ್ ಬಾಬು ಮುಂತಾದ ನಿರ್ದೇಶಕರೊಂದಿಗೆ ಕೆಲಸ ಮಾಡಿದ್ದರು. 1977ರಲ್ಲಿ ‘ಒಂದು ಪ್ರೇಮದ ಕಥೆ’ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶರಾಗಿದ್ದು, ನಂತರ ಕನ್ನಡದ ಸುಮಾರು 100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ಸಾಹಸಸಿಂಹ, ನ್ಯಾಯ ಗೆದ್ದಿತು, ಪ್ರೇಮ ಜಾಲ, ರವಿ ವರ್ಮ, ಊರಿಗೆ ಉಪಕಾರಿ, ನನ್ನ ರೋಷ ನೂರು ವರುಷ ಮುಂತಾದ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಫೆ.14 ರಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೂ ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಸಂಜೆಯೇ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಸಚಿವ ಶಿವರಾಜ ತಂಗಡಗಿ ಸಂತಾಪ: ಚಲನಚಿತ್ರ ನಿರ್ದೇಶಕ ಜೋಸೈಮನ್ ನಿಧನಕ್ಕೆ ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಸಂತಾಪ ಸೂಚಿಸಿದ್ದಾರೆ. ಈ ಸಂಬಂಧ ಪ್ರಕಟನೆ ಹೊರಡಿಸಿರುವ ಅವರು, ಅನೇಕ ಹೊಸ ಪ್ರತಿಭೆಗಳಿಗೆ ಅವಕಾಶ ಕೊಟ್ಟು, ತಂತ್ರಜ್ಞರನ್ನು ಪರಿಚಯಿಸಿ ಕನ್ನಡ ಚಲನಚಿತ್ರ ರಂಗಕ್ಕೆ ಅಪಾರವಾದ ಕೊಡುಗೆ ಕೊಟ್ಟಿದ್ದಾರೆ. ಅವರ ನಿಧನದಿಂದ ಕನ್ನಡ ಚಲನಚಿತ್ರ ರಂಗ ಒಬ್ಬ ಕ್ರಿಯಾಶೀಲ, ಸೃಜನಶೀಲ ನಿರ್ದೇಶಕನನ್ನು ಕಳೆದುಕೊಂಡಿದೆ ಎಂದು ಅವರು ತಿಳಿಸಿದ್ದಾರೆ.
ಫೆ.17ರಂದು ಸಂಭವಿಸಲಿರುವ ವರ್ಷದ ಮೊದಲ ಸೂರ್ಯಗ್ರಹಣ ಭಾರತದಲ್ಲಿ ಗೋಚರಿಸಲಿದೆಯೇ? ಇಲ್ಲಿದೆ ಸತ್ಯಾಸತ್ಯತೆ
ಬೆಂಗಳೂರು: ಖಗೋಳ ಪ್ರಿಯರ ಪಾಲಿಗೆ 2026 ನೇ ವರ್ಷವು ವಿಶೇಷವಾಗಿರಲಿದೆ. ಈ ವರ್ಷದ ಮೊದಲ ಖಗೋಳ ವಿಸ್ಮಯವಾದ 'ಕಂಕಣ ಸೂರ್ಯಗ್ರಹಣ' (Annular Solar Eclipse) ಫೆಬ್ರವರಿ 17 ರಂದು ಸಂಭವಿಸಲಿದೆ. ಆಕಾಶದಲ್ಲಿ ಸೂರ್ಯನು ಬೆಂಕಿಯ ಉಂಗುರದಂತೆ (Ring of Fire) ಕಾಣುವ ಈ ಅದ್ಭುತ ದೃಶ್ಯವನ್ನು ಕಣ್ತುಂಬಿಕೊಳ್ಳಲು ಜಗತ್ತು ಕಾತರದಿಂದ ಕಾಯುತ್ತಿದೆ. ಆದರೆ, ಪ್ರತಿಯೊಬ್ಬ ಭಾರತೀಯರ ಮನದಲ್ಲೂ
ಉಡುಪಿ| ಬ್ಯಾಂಕ್ ಸೀಲ್ ದುರ್ಬಳಕೆ ಮಾಡಿ ನಗರಸಭೆಗೆ ವಂಚನೆ: ಮಹಿಳೆ ಸಹಿತ ಇಬ್ಬರು ಆರೋಪಿಗಳ ಬಂಧನ
ಉಡುಪಿ: ಉಡುಪಿ ನಗರಸಭೆಯಲ್ಲಿ ಆಸ್ತಿತೆರಿಗೆ ಪಾವತಿಯಲ್ಲಿ ವಂಚನೆ ನಡೆದಿರುವುದು ಬೆಳಕಿಗೆ ಬಂದಿದ್ದು, ಈ ಸಂಬಂಧ ಉಡುಪಿ ನಗರ ಪೊಲೀಸರು 24 ಗಂಟೆಗಳಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳನ್ನು ಬಡಗುಬೆಟ್ಟಿನ ಸುಪೇಶ್ ಹಾಗೂ ಕುಂತಳನಗರದ ಶಾಂತಾ ಎಂದು ಗುರುತಿಸಲಾಗಿದೆ. ಪ್ರಕರಣದ ಹಿನ್ನೆಲೆ: ಉಡುಪಿ ನಗರಸಭೆ ಪೌರಾಯುಕ್ತ ಮಹಾಂತೇಶ್ ಅವರು ಗುರುವಾರ ನೀಡಿದ ದೂರಿನ ಪ್ರಕಾರ, ನಗರಸಭೆ ಕಚೇರಿಯಲ್ಲಿ ಆಸ್ತಿ ತೆರಿಗೆ ಪಾವತಿಯನ್ನು ಇ-ಸ್ವೀಕೃತಿ ಮೂಲಕ ಚಲನ್ ಸೃಜಿಸಿ ಯೂನಿಯನ್ ಬ್ಯಾಂಕ್ನ ನಗರಸಭೆಯ ಖಾತೆಗೆ ಜಮಾ ಮಾಡುವ ವ್ಯವಸ್ಥೆ ಇದೆ. ಫೆ.3ರಂದು ಆಸ್ತಿತೆರಿಗೆ ಪಾವತಿಗಳ ತುಲನೆ ಯಲ್ಲಿ, ಜನವರಿ 28ರಂದು ಪಾವತಿಯಾಗಿದೆ ಎಂದು ಯೂನಿಯನ್ ಬ್ಯಾಂಕ್ ಸೀಲ್ ಹೊಂದಿದ್ದ ಚಲನ್ ಪತ್ತೆಯಾದರೂ, ಅದೇ ದಿನಾಂಕದ ಬ್ಯಾಂಕ್ ವಿವರ ಪಟ್ಟಿಯಲ್ಲಿ ಪಾವತಿ ದಾಖಲಾಗಿರಲಿಲ್ಲ ಎಂಬುದು ಗಮನಕ್ಕೆ ಬಂದಿದೆ. ಅದೇ ರೀತಿ ಫೆಬ್ರವರಿ 4ರಂದು ಪರಿಶೀಲನೆ ನಡೆಸಿದಾಗ, ಯೂನಿಯನ್ ಬ್ಯಾಂಕ್ ಸೀಲ್ ಹೊಂದಿದ್ದ ಕೆಲವು ಚಲನ್ಗಳು ಈಗಾಗಲೇ ಜನವರಿ 28ರಂದು ಜನರೇಟ್ ಆಗಿದ್ದ ಅದೇ ಚಲನ್ ಸಂಖ್ಯೆಯನ್ನು ಹೊಂದಿರುವುದು ಪತ್ತೆಯಾಗಿದೆ. ಒಂದೇ ಚಲನ್ ಸಂಖ್ಯೆಗೆ ಎರಡು ಬೇರೆ ಬೇರೆ ದಿನಾಂಕಗಳಲ್ಲಿ ಸೀಲ್ ಹೊಂದಿದ ಚಲನ್ಗಳು ದೊರೆತಿರುವುದು ಅನುಮಾನಕ್ಕೆ ಕಾರಣವಾಗಿತ್ತು. ಯಾರೋ ಆರೋಪಿಗಳು ಯೂನಿಯನ್ ಬ್ಯಾಂಕ್ ಸೀಲ್ ದುರ್ಬಳಕೆ ಮಾಡಿ ಆಸ್ತಿತೆರಿಗೆ ಪಾವತಿಸಿದ ಹಣವನ್ನು ವಂಚನೆ ಮಾಡಿರುವ ಶಂಕೆಯ ಮೇರೆಗೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆಗಾಗಿ ವಿಶೇಷ ತಂಡವನ್ನು ರಚಿಸಲಾಗಿದ್ದು, ತನಿಖೆ ವೇಳೆ ಬಡಗುಬೆಟ್ಟು ಕಸ್ತೂರ್ಬಾ ನಗರದ ಸುಪೇಶ್ (25) ಹಾಗೂ ಮೂಡು ಅಲೆವೂರು ಕುಂತಲ ನಗರದ ಶಾಂತಾ (43) ಎಂಬಿಬ್ಬರು ಆರೋಪಿಗಳನ್ನು ಕೃಷ್ಣ ಮಠದ ರಾಜಾಂಗಣ ಸಮೀಪ ಬಂಧಿಸಲಾಗಿದೆ. ಆರೋಪಿಗಳಿಂದ ವಂಚನೆಗೆ ಬಳಸಿದ ಬ್ಯಾಂಕ್ ಸೀಲ್ ಹಾಗೂ ಸಂಬಂಧಿತ ದಾಖಲೆಗಳನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ. ಉಡುಪಿ ನಗರ ಠಾಣೆಯ ಪೊಲೀಸ್ ನಿರೀಕ್ಷಕ (ಪ್ರಬಾರ) ಮಹೇಶ್ ಪ್ರಸಾದ್ ನೇತೃತ್ವದಲ್ಲಿ ಪತ್ತೆ ಕಾರ್ಯ ಕೈಗೊಂಡು ಆರೋಪಿಗಳನ್ನು ಬಂಧಿಸಲಾಯಿತು.
HALನೊಂದಿಗೆ ₹2,312 ಕೋಟಿ ರೂ. ಮೊತ್ತದ ಖರೀದಿ ಒಪ್ಪಂದಕ್ಕೆ ರಕ್ಷಣಾ ಸಚಿವಾಲಯ ಸಹಿ
ನೌಕಾಪಡೆಗೆ 8 ಡಾರ್ನಿಯರ್, 228 ವಿಮಾನಗಳ ಖರೀದಿ
ಅಕ್ರಮ ಮರಳುಗಾರಿಕೆ: ಆರೋಪಿಗಳ ಬಂಧನ; ಸೊತ್ತುಗಳು ವಶ
ಉಡುಪಿ, ಫೆ.13: ಕುಂದಾಪುರ ತಾಲೂಕು ಮೊಳಹಳ್ಳಿ ಗ್ರಾಮದ ಮರತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಮೀಪ ಖಾಲಿ ಜಾಗದಲ್ಲಿ ವರಾಹಿ ನದಿಯಿಂದ ಅಕ್ರಮವಾಗಿ ಮರಳುಗಾರಿಕೆ ನಡೆಸುತ್ತಿದ್ದ ಇಪ್ಪತ್ತಕ್ಕೂ ಅಧಿಕ ಆರೋಪಿಗಳನ್ನು ಕೋಟ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಾದ ದೇವಾನಂದ ಶೆಟ್ಟಿ ಹಳ್ನಾಡು, ಉತ್ತರ ಪ್ರದೇಶ ಮೂಲದ ಅಮರೇಶ(27), ಕೃಪಾಲ್(32), ಪರಶುರಾಮ(35), ಪ್ರಬೀನ್(20), ರಾಮಚರಣ್(35), ಸತ್ರೊಹನ್ (28), ರಾಮ ಅವತಾರ್ (21), ಬಿಮಲೇಶ್(23), ರಾಮಲಾಲ್(40), ಬೊಲಾ(23), ಸಂಜಯ (27), ಹಿರಿದೆ ರಾಮ(27), ಸರ್ವನ್(21), ಮುಖೇಶ(24), ಕರಣ್(21), ಪ್ರೀನ್ಸ್ (19), ಕಿಶುನ್(19), ಸುರಾಜ(30), ನೀರಾಜ(22), ಕಲ್ಲು(19), ರಾಜೀವ(26) ಎನ್ನುವವರ ವಿರುದ್ದ ಕೋಟ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ. ಕುಂದಾಪುರ ತಾಲೂಕು ಮೊಳಹಳ್ಳಿ ಗ್ರಾಮದ ಮರತ್ತೂರಿನ ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಸಮೀಪ ಖಾಲಿ ಜಾಗದಲ್ಲಿ ವರಾಹಿ ನದಿಯಿಂದ ಅಕ್ರಮವಾಗಿ ಮರಳುಗಾರಿಕೆ ನಡೆಸುತ್ತಿದ್ದ ಸ್ಥಳಕ್ಕೆ ದಾಳಿ ನಡೆಸಿ ಸುಮಾರು 8 ಲಕ್ಷ 50 ಸಾವಿರ ಮೌಲ್ಯದ 315 ಯುನಿಟ್ ಮರಳು, ಮರಳು ತೆಗೆಯಲು ಬಳಸಿದ 3 ಲಕ್ಷ ಮೌಲ್ಯದ ಮೂರು ಪೈಬರ್ ಬೋಟ್ ಗಳ ಸಹಿತ ಇತರ ಪರಿಕರಗಳನ್ನು ವಶಪಡಿಸಿಕೊಂಡಿದ್ದಾರೆ. ಉಡುಪಿ ಡಿವೈಎಸ್ಪಿ ಬೆಳ್ಳಿಯಪ್ಪ ಕೆ.ಯು, ಬ್ರಹ್ಮಾವರ ವೃತ್ತ ನಿರೀಕ್ಷಕ ಗೋಪಿಕೃಷ್ಣ ಇವರ ಮಾರ್ಗದರ್ಶನದಲ್ಲಿ ಕೋಟ ಠಾಣಾ ಪಿಎಸ್ಐ ಪ್ರವೀಣ್ಕುಮಾರ್ ಆರ್. ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದ್ದರು.
ಸಾಲ ನೀಡುವ ಸಂಸ್ಥೆಗಳು ಕದ್ದ ಆಸ್ತಿಯನ್ನು ಪೊಲೀಸರಿಗೆ ಹಸ್ತಾಂತರಿಸಬೇಕು - ಕರ್ನಾಟಕ ಹೈಕೋರ್ಟ್ ಆದೇಶ
ಕದ್ದ ಆಸ್ತಿಯ ವಿಷಯನ್ನು ಹಿಂದಿರುಗಿಸುವ ಬಗ್ಗೆ ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ. ಐಐಎಫ್ಎಲ್ ಫೈನಾನ್ಸ್ ಕಂಪನಿಯಿಂದ ಹೈಕೋರ್ಟ್ಗೆ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ. ಪೊಲೀಸರು ವಸ್ತುಗಳನ್ನು ಹಿಂದಿರುಗಿಸುವ ಅಧಿಕಾರನ್ನು ಹೊಂದಿದ್ದಾರೆ. ಆ ಬಗ್ಗೆ ನೋಟಿಸ್ಗಳನ್ನು ಹೊರಡಿಸುವ ಅಧಿಕಾರ ಪೊಲೀಸರಿಗೆ ಇದೆ ಎಂದು ಕೋರ್ಟ್ ಹೇಳಿದೆ.
ಬಳ್ಳಾರಿ | ಕಂಪ್ಲಿ ಉತ್ಸವದಲ್ಲಿ ಫಲಪುಷ್ಪ ಪ್ರದರ್ಶನ, ಸಿರಿಧಾನ್ಯ ಮೇಳ
ಬಳ್ಳಾರಿ/ ಕಂಪ್ಲಿ: ನಾಡಿನ ಸಂಸ್ಕೃತಿ ವೈಭವವನ್ನು ಪ್ರತಿಬಿಂಬಿಸುವ ಕಂಪ್ಲಿ ಉತ್ಸವದಲ್ಲಿ ಫಲಪುಷ್ಪ ಪ್ರದರ್ಶನ ಮತ್ತು ಸಿರಿಧಾನ್ಯ ಮೇಳ ಪ್ರಮುಖ ಆಕರ್ಷಣೆಯಾಗಿವೆ. ಉತ್ಸವದ ಅಂಗವಾಗಿ ಸಕ್ಕರೆ ಕಾರ್ಖಾನೆಯ ಮುಖ್ಯ ವೇದಿಕೆಯ ಎದುರಿನ ಆವರಣದಲ್ಲಿ ತೋಟಗಾರಿಕೆ, ಕೃಷಿ, ಆರೋಗ್ಯ ಸೇರಿದಂತೆ ವಿವಿಧ ಇಲಾಖೆಗಳ ವಸ್ತು ಪ್ರದರ್ಶನಗಳನ್ನು ಆಯೋಜಿಸಲಾಗಿತ್ತು. ಸೇವಂತಿಗೆ ಹೂವುಗಳಿಂದ ಗಂಡುಗಲಿ ಕುಮಾರರಾಮನ ಕೋಟೆಯ ಮಾದರಿ ನಿರ್ಮಿಸಲಾಗಿದ್ದು, ಐತಿಹಾಸಿಕ ಸೋಮಪ್ಪ ಮೂರ್ತಿಯ ಪ್ರತಿರೂಪವೂ ಸಿದ್ಧಪಡಿಸಲಾಗಿತ್ತು. ಸಿರಿಧಾನ್ಯಗಳಿಂದ ವಿವಿಧ ಕಲಾಕೃತಿಗಳನ್ನು ರೂಪಿಸಲಾಗಿದ್ದು, ವೀಕ್ಷಕರ ಗಮನ ಸೆಳೆದವು. ಬುಧವಾರ ಸಂಜೆ ತುಂಗಭದ್ರಾ ಆರತಿ ಪ್ರಯುಕ್ತ ಭವ್ಯ ಮೆರವಣಿಗೆ ವಿಜೃಂಭಣೆಯಿಂದ ನಡೆಯಿತು. ಗುರುವಾರ ಉತ್ಸವದ ಅಂಗವಾಗಿ ಫಲಪುಷ್ಪ ಪ್ರದರ್ಶನ ಹಾಗೂ ಸಿರಿಧಾನ್ಯ ಮೇಳ ಇನ್ನಷ್ಟು ರಂಗೇರಿಸಿತು. ಉತ್ಸವಕ್ಕೆ ಹರಿದು ಬಂದ ಅನೇಕ ವೀಕ್ಷಕರು ಫಲಪುಷ್ಪ ಪ್ರದರ್ಶನ, ಸಿರಿಧಾನ್ಯ ಮೇಳ ಹಾಗೂ ಇತರೆ ಇಲಾಖೆಗಳ ವಸ್ತು ಪ್ರದರ್ಶನಗಳನ್ನು ಕಣ್ತುಂಬಿಕೊಂಡರು. ಈ ವಸ್ತು ಪ್ರದರ್ಶನಕ್ಕೆ ಶಾಸಕ ಜೆ.ಎನ್.ಗಣೇಶ್ ಸೇರಿದಂತೆ ಗಣ್ಯರು ಚಾಲನೆ ನೀಡಿದರು.
ಆರೋಗ್ಯ ಇಲಾಖೆಯ ಅಧಿಕಾರಿ ಅಬಕಾರಿ ಇಲಾಖೆಗೆ ವರ್ಗಾವಣೆ ಆರೋಪ: ದಿನೇಶ್ ಗುಂಡೂರಾವ್ ಹೇಳಿದ್ದೇನು, ಸಿ.ಎಂ ಎಚ್ಚರಿಕೆ
ಸರ್ಕಾರಿ ಅಧಿಕಾರಿಗಳ ವರ್ಗಾವಣೆಗೆ ಸಂಬಂಧಿಸಿದ ಎಲ್ಲ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಮಂಡ್ಯ ಜಿಲ್ಲೆಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಯನ್ನು ಮೈಸೂರು ಗ್ರಾಮಾಂತರ ಜಿಲ್ಲೆ ಅಬಕಾರಿ ಡಿಸಿಯಾಗಿ ನಿಯೋಜಿಸುವಂತೆ ಪತ್ರ ಬರೆದು ನಿರ್ದೇಶಿಸಿದ್ದಾರೆ ಎಂದು ಬಿಜೆಪಿ ಆರೋಪಿಸಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಒಂದೇ
ಬೆಂಗಳೂರು: ‘ಸಿಎಂ ಸಿದ್ದರಾಮಯ್ಯರ ಹೆಸರಿನಲ್ಲಿ ನಕಲಿ ವರ್ಗಾವಣೆ ಪತ್ರವನ್ನು ಸೃಷ್ಟಿಸಿ ಜಾಲತಾಣಗಳಲ್ಲಿ ಹಂಚಿಕೆ ಮಾಡಿ ಭ್ರಷ್ಟಾಚಾರದ ಸುಳ್ಳು ಆರೋಪ ಮಾಡಿದ ಬಿಜೆಪಿ ಶಾಸಕ ಸುನಿಲ್ ಕುಮಾರ್ ಮತ್ತು ಪರಿಷತ್ ಸದಸ್ಯ ರವಿಕುಮಾರ್ ಹಾಗೂ ಇನ್ನಿತರರ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸಿ ಕ್ರಮ ಕೈಗೊಳ್ಳಬೇಕು’ ಎಂದು ಕೋರಿ ಕೆಪಿಸಿಸಿ ಸಂವಹನ ವಿಭಾಗದ ಅಧ್ಯಕ್ಷ ರಮೇಶ್ಬಾಬು, ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ. ಶುಕ್ರವಾರ ಈ ಸಂಬಂಧ ದೂರು ನೀಡಿರುವ ರಮೇಶ್ ಬಾಬು, ‘ಪ್ರಸಾರವಾಗಿರುವ ಪತ್ರವು ಸಂಪೂರ್ಣ ಕೃತಕ ಹಾಗೂ ದುರುದ್ದೇಶದಿಂದ ಕೂಡಿದೆ. ದಿನಾಂಕ ಇಲ್ಲದ 2024ರ ಸಂಖ್ಯೆ ಇಲ್ಲದ ಪತ್ರ ಸೃಷ್ಟಿ ಮಾಡಿ ಅಪಪ್ರಚಾರ ಮೂಲಕ ವ್ಯಕ್ತಿತ್ವಕ್ಕೆ ಮಸಿ ಬಳಿದು ಚಾರಿತ್ರ್ಯಹರಣ ಮಾಡುವ ಕೆಲಸ ಮಾಡಿ ಅಪರಾಧ ಎಸಗಿರುತ್ತಾರೆ. ಇದು ಜನರನ್ನು ತಪ್ಪುದಾರಿಗೆಳೆಯುವುದು, ಸಿಎಂ ಅವರ ಸಂವಿಧಾನಿಕ ಹುದ್ದೆಯ ಗೌರವ ಹಾನಿ, ಸರಕಾರದ ವಿರುದ್ಧ ಜನರಲ್ಲಿ ಅನುಮಾನ ಮತ್ತು ಅಶಾಂತಿ ಉಂಟುಮಾಡುವುದು, ರಾಜಕೀಯ ಲಾಭ ಪಡೆಯಲು ಸುಳ್ಳು ಪ್ರಚಾರ ನಡೆಸುವುದು ಆಗಿದ್ದು ಕ್ರಿಮಿನಲ್ ಅಪರಾಧದಿಂದ ಕೂಡಿರುತ್ತದೆ ಎಂದು ಉಲ್ಲೇಖಿಸಿದ್ದಾರೆ. ಈ ಕೃತ್ಯವು ಗಂಭೀರ ಅಪರಾಧವಾಗಿದ್ದು, ವಿಶೇಷವಾಗಿ, ಸರಕಾರಿ ದಾಖಲೆಗಳ ಕಟ್ಟುಕತೆ, ಸುಳ್ಳು ದಾಖಲೆಗಳನ್ನು ನಿಜವೆಂದು ಬಳಕೆ, ಮಾನಹಾನಿ, ಸಾರ್ವಜನಿಕ ಶಾಂತಿಗೆ ಧಕ್ಕೆ ಉಂಟುಮಾಡುವ ಸುಳ್ಳು ಮಾಹಿತಿ ಪ್ರಸಾರ, ಅಪರಾಧ ಸಂಚುಗಳಿಂದ ಕೂಡಿರುತ್ತದೆ. ಇವುಗಳುBharatiya Nyaya Sanhita-2023ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧಗಳಾಗಿವೆ. ಚುನಾಯಿತ ಜನಪ್ರತಿನಿಧಿಗಳಿಂದ ಇಂತಹ ಕೃತ್ಯ ನಡೆಯುವುದು ಗಂಭೀರ ವಿಷಯವಾಗಿದ್ದು, ಇದು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಧಕ್ಕೆ ಉಂಟುಮಾಡುತ್ತದೆ ಎಂದು ಅವರು ತಿಳಿಸಿದ್ದಾರೆ. ಆದ್ದರಿಂದ, ದಯವಿಟ್ಟು ಸಂಬಂಧಪಟ್ಟ ಶಾಸಕ ಮತ್ತು ಪರಿಷತ್ ಸದಸ್ಯರ ವಿರುದ್ಧ ತಕ್ಷಣ ಎಫ್ಐಆರ್ ದಾಖಲಿಸಬೇಕು. ನಕಲಿ ಪತ್ರದ ಫೊರೆನ್ಸಿಕ್ ಪರಿಶೀಲನೆ ನಡೆಸಬೇಕು. ಜಾಲತಾಣಗಳಲ್ಲಿ ಪತ್ರವನ್ನು ಮೂಲವನ್ನು ಪತ್ತೆ ಹಚ್ಚಬೇಕು. ಅಲ್ಲದೆ, ಮುಂದಿನ ಪ್ರಸಾರ ತಡೆಯಲು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ರಮೇಶ್ಬಾಬು ದೂರಿನಲ್ಲಿ ಆಗ್ರಹಿಸಿದ್ದಾರೆ.
ಬಳ್ಳಾರಿ | ವಿದ್ಯುತ್ ಖಾಸಗೀಕರಣಕ್ಕೆ ವಿರೋಧ: ಜೆಸ್ಕಾಂ ನೌಕರರಿಂದ ಪ್ರತಿಭಟನೆ
ಬಳ್ಳಾರಿ / ಕಂಪ್ಲಿ: ವಿದ್ಯುತ್ ಇಲಾಖೆಯನ್ನು ಖಾಸಗೀಕರಣಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿರುವುದನ್ನು ಖಂಡಿಸಿ ಜೆಸ್ಕಾಂ ನೌಕರರು ಹಾಗೂ ಸಿಬ್ಬಂದಿಗಳು ಪಟ್ಟಣದ ಜೆಸ್ಕಾಂ ಕಚೇರಿ ಮುಂಭಾಗದಲ್ಲಿ ಕಪ್ಪು ಪಟ್ಟಿ ಧರಿಸಿ ಸಾಂಕೇತಿಕ ಪ್ರತಿಭಟನೆ ನಡೆಸಿದರು. ನಂತರ ಎಇಇ ಶ್ರೀನಿವಾಸ ಪ್ರಸಾದ್ ಮಾತನಾಡಿ, ವಿದ್ಯುತ್ ಖಾಸಗೀಕರಣ ಕಾಯ್ದೆ ತರಲು ಕೇಂದ್ರ ಸರ್ಕಾರ ಪಿತೂರಿ ನಡೆಸುತ್ತಿದೆ. ಇದಕ್ಕೆ ವಿದ್ಯುತ್ ಇಲಾಖೆಯ ನೌಕರರ ತೀವ್ರ ವಿರೋಧವಿದೆ ಎಂದರು. ಇಂಧನ ಇಲಾಖೆ ಸಾರ್ವಜನಿಕರ ಆಸ್ತಿಯಾಗಿದ್ದು, ಅದನ್ನು ಖಾಸಗಿ ವಲಯಕ್ಕೆ ಹಸ್ತಾಂತರಿಸಿದರೆ ರೈತರು ಹಾಗೂ ಸಾಮಾನ್ಯ ಗ್ರಾಹಕರಿಗೆ ಅನ್ಯಾಯವಾಗಲಿದೆ. ಅಧಿವೇಶನದಲ್ಲಿ ಮಂಡಿಸಲು ಉದ್ದೇಶಿಸಿರುವ ವಿದ್ಯುತ್ ಕಾಯ್ದೆ ತಿದ್ದುಪಡಿ ಬಿಲ್ ನೌಕರರ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದು ಹೇಳಿದರು. ಸಾವಿರಾರು ನೌಕರರ ತ್ಯಾಗ ಮತ್ತು ಶ್ರಮದಿಂದ ನಿರ್ಮಿತವಾದ ಈ ಬೃಹತ್ ಸಂಸ್ಥೆಯನ್ನು ಉಳಿಸಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ನೌಕರರ ಒಗ್ಗಟ್ಟಿನಿಂದ ಮಾತ್ರ ಈ ಕಾಯ್ದೆಯನ್ನು ತಡೆಯಲು ಸಾಧ್ಯ. ಕೇಂದ್ರ ಸರ್ಕಾರ ಕೂಡಲೇ ಖಾಸಗೀಕರಣದ ನಿರ್ಧಾರವನ್ನು ಹಿಂಪಡೆಯಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು. ಈ ಸಂದರ್ಭದಲ್ಲಿ ಸೆಕ್ಷನ್ ಅಧೀಕ್ಷಕ ವಿನೋದ್, ಜೆಇ ಭೀಮೇಶ, ಪಟ್ಟಣ ಶಾಖಾ ಅಧಿಕಾರಿ ಶಮಿವುಲ್ಲಾ ಸೇರಿದಂತೆ ಪಟ್ಟಣ ಮತ್ತು ಗ್ರಾಮೀಣ ಭಾಗದ ನೌಕರರು ಉಪಸ್ಥಿತರಿದ್ದರು.
Ballari | ಹಳೇ ವಿದ್ಯಾರ್ಥಿಗಳಿಂದ ಗುರುವಂದನಾ ಕಾರ್ಯಕ್ರಮ
ಬಳ್ಳಾರಿ / ಕಂಪ್ಲಿ: ತಾಲೂಕಿನ ಚಿಕ್ಕ ಜಾಯಿಗನೂರು ಗ್ರಾಮದ ನೇತಾಜಿ ಸುಭಾಸ್ ಚಂದ್ರ ಬೋಸ್ ಸರ್ಕಾರಿ ಪ್ರೌಢ ಶಾಲೆಯಲ್ಲಿ ಗುರುವಂದನೆ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು. ಅದೇ ಶಾಲೆಯ 1999–2000ನೇ ಸಾಲಿನ ಹತ್ತನೇ ತರಗತಿ ಹಳೆಯ ವಿದ್ಯಾರ್ಥಿಗಳು ಈ ಗುರುವಂದನೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಶಾಲಾ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಳೆಯ ವಿದ್ಯಾರ್ಥಿಗಳು ತಮ್ಮ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಿ ನೆನಪಿನ ಕಾಣಿಕೆಗಳನ್ನು ನೀಡಿದರು. ನಿವೃತ್ತ ಶಿಕ್ಷಕ ಚಂದ್ರಶೇಖರ ಮಾತನಾಡಿ, “ಸಮಾಜದಿಂದ ಏನಾದರೂ ಪಡೆಯುವುದಕ್ಕಿಂತ ಮೊದಲು ಸಮಾಜಕ್ಕೆ ನಾವು ಏನು ಕೊಟ್ಟಿದ್ದೇವೆ ಎಂಬುದನ್ನು ಮನದಟ್ಟು ಮಾಡಿಕೊಳ್ಳಬೇಕು. ಸಮಾಜಕ್ಕೆ ಒಳಿತಾಗುವ ಕಾರ್ಯಗಳನ್ನು ಮಾಡಿ ಆದರ್ಶ ವ್ಯಕ್ತಿಗಳಾಗಿ ಬದುಕಬೇಕು” ಎಂದು ಹೇಳಿದರು. ಹಳೆಯ ವಿದ್ಯಾರ್ಥಿಗಳಾದ ಮಂಗಮ್ಮ, ವೀರಭದ್ರ, ಶಿವರಾಮ ಪ್ರಸಾದ್, ಮಲ್ಲಿಕಾರ್ಜುನ ತಮ್ಮ ಶಾಲಾ ದಿನಗಳ ನೆನಪುಗಳನ್ನು ಹಂಚಿಕೊಂಡರು. ಶಿಕ್ಷಕರಾದ ಚಂದ್ರಶೇಖರ, ಮುರ್ತುಜಾ ಖಾದ್ರಿ, ಶಂಕ್ರಮ್ಮ, ಬಸನಗೌಡ, ರಾಮಚಂದ್ರ, ರಾಜಶೇಖರ, ಶಿವರುದ್ರ, ಜಡಿಯಪ್ಪ, ಚನ್ನಬಸಪ್ಪ ಅವರು ವಿದ್ಯಾರ್ಥಿಗಳಿಂದ ಗುರುವಂದನೆ ಸ್ವೀಕರಿಸಿದರು. ಎಲ್ಲಾ ಶಿಕ್ಷಕರಿಗೆ ಗ್ರಾಮದ ಈಶ್ವರ ದೇವಾಲಯದಿಂದ ಶಾಲಾ ಆವರಣದವರೆಗೆ ಮೆರವಣಿಗೆಯ ಮೂಲಕ ಅದ್ದೂರಿಯಾಗಿ ಸ್ವಾಗತಿಸಲಾಯಿತು. ವಿಶೇಷವಾಗಿ ಹಳೆಯ ಶಿಕ್ಷಕರಿಂದ ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಕಾರ್ಯಕ್ರಮ ಹಾಗೂ ಭೋಜನದ ವ್ಯವಸ್ಥೆಯನ್ನು ವಿದ್ಯಾರ್ಥಿಗಳು ಅಚ್ಚುಕಟ್ಟಾಗಿ ನಿರ್ವಹಿಸಿದರು. ಹಳೆಯ ವಿದ್ಯಾರ್ಥಿಗಳಾದ ವೀರೇಶ್, ವೀರಭದ್ರ, ಮಲ್ಲಿಕಾರ್ಜುನ ಜೆ., ಗುರುರಾಜ್, ರವಿಕುಮಾರ್, ಮಂಗಮ್ಮ, ಮಂಗಳಗೌರಿ, ಪುಷ್ಪಾವತಿ, ಹನುಮಂತ ರೆಡ್ಡಿ, ವಿಶ್ವನಾಥ್, ಬಸವರಾಜ್ ಸೇರಿದಂತೆ 28ಕ್ಕೂ ಹೆಚ್ಚು ವಿದ್ಯಾರ್ಥಿ–ವಿದ್ಯಾರ್ಥಿನಿಯರು ಭಾಗವಹಿಸಿದ್ದರು.
ಫೆಬ್ರವರಿ 9ರಂದು ವರ್ಮೊಂಟ್ನ ಯುಎಸ್ ಪ್ರತಿನಿಧಿ ಬೆಕ್ಕಾ ಬಾಲಿಂಟ್ ಸುಮಾರು 30 ನಿಮಿಷಗಳ ಕಾಲ ಪರಿಷ್ಕರಿಸದ ಎಪ್ಸ್ಟೀನ್ ಫೈಲ್ಗಳನ್ನು ಪರಿಶೀಲಿಸಿದ ನಂತರ, ಇಷ್ಟೊಂದು ಪ್ರಭಾವಿ ವ್ಯಕ್ತಿಗಳು ದುರುಪಯೋಗದ ಬಗ್ಗೆ ತಿಳಿದಿದ್ದರು; ಆದರೆ ಅದನ್ನು ತಡೆಯಲು ಏನನ್ನೂ ಮಾಡಲಿಲ್ಲವಲ್ಲ ಎಂದು ಹೇಳಿದ್ದಾರೆ. ಬಾಲಿಂಟ್ ಅವರದ್ದು ರಾಜಕೀಯ ಹೇಳಿಕೆಯಾಗಿರಲಿಲ್ಲ; ಅದು ಆ ಹೊತ್ತಿಗೆ ಅವರು ವ್ಯಕ್ತಪಡಿಸಿದ ತೀಕ್ಷ್ಣ ಪ್ರತಿಕ್ರಿಯೆಯಾಗಿತ್ತು. ಎಪ್ಸ್ಟೀನ್ ಎಸಗಿದ ಅಪರಾಧಗಳ ಸಂಪೂರ್ಣ ದಾಖಲೆಗಳು ಹೊರಬರಲು ವರ್ಷಗಳೇ ಬೇಕಾಗಬಹುದು. ಆದರೆ ಆತ ಎಸಗುತ್ತಿದ್ದ ಕುಕೃತ್ಯಗಳ ಬಗ್ಗೆ ಅರಿವಿದ್ದರೂ ಪ್ರಭಾವಿ ವ್ಯಕ್ತಿಗಳು ಅವರೊಂದಿಗೆ ಸಂಪರ್ಕದಲ್ಲಿದ್ದರು ಎಂಬುದು ಈಗ ಬಹಿರಂಗವಾಗಿರುವ ಪುರಾವೆಗಳು ಸಾಬೀತುಪಡಿಸುತ್ತವೆ. ಮುಂದಿನ ಪ್ರಶ್ನೆ ಎಪ್ಸ್ಟೀನ್ ಅಪರಾಧಗಳ ಬಗ್ಗೆ ಅಲ್ಲ. ಅವು ಸಾಬೀತಾಗಿವೆ. ಆದರೆ ಅವನ ಅಪರಾಧಗಳು ಬಹಿರಂಗಗೊಂಡ ನಂತರವೂ ಪ್ರಭಾವಿ ವ್ಯಕ್ತಿಗಳು ಯಾಕೆ ಅವನೊಂದಿಗೆ ಸಹವಾಸ ಮುಂದುವರಿಸಿದರು? ಅಪ್ರಾಪ್ತ ವಯಸ್ಸಿನ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಆ ವ್ಯಕ್ತಿಯೊಡನೆ ಅವರು ಯಾಕೆ ಸಂಪರ್ಕದಲ್ಲಿದ್ದರು ಎಂಬುದು. ಸತ್ಯಗಳು ಹೊರಬಂದ ನಂತರವೂ ಕಡಿದಿರಲಿಲ್ಲ ಸಂಪರ್ಕ ಎಪ್ಸ್ಟೀನ್ ಅಪರಾಧಗಳ ಬಗ್ಗೆ ನೈಜ ಸಮಯದಲ್ಲೇ ತಿಳಿದಿತ್ತು. ಅವುಗಳ ಬಗ್ಗೆ ವರದಿಯಾಗಿತ್ತು. ಆದರೆ ಪ್ರಭಾವಿ ವ್ಯಕ್ತಿಗಳು ಅವೆಲ್ಲವನ್ನೂ ನಿರ್ಲಕ್ಷಿಸಿದರು. ಅದಕ್ಕೆ ಒಂದು ಪ್ರಮುಖ ಉದಾಹರಣೆಯೆಂದರೆ ವಿಕಿ ವಾರ್ಡ್ ಬರೆದ 2003ರ ವ್ಯಾನಿಟಿ ಫೇರ್ ಲೇಖನ. ಅಲ್ಲಿ ಇಬ್ಬರು ಸಂತ್ರಸ್ತರಾದ ಮರಿಯಾ ಮತ್ತು ಆಕೆಯ ಸಹೋದರಿ ಆನಿ ಫಾರ್ಮರ್ ಅವರ ಸಾಕ್ಷ್ಯವನ್ನು ಸಂಪಾದಕ ಗ್ರೇಡನ್ ಕಾರ್ಟರ್ ಪ್ರಕಟವಾಗುವುದಕ್ಕೆ ಬಿಡಲಿಲ್ಲ. ಆ ಸತ್ಯವನ್ನು ಆಗ ಪ್ರಕಟಿಸಿದ್ದರೆ, ಇತರ ಅನೇಕ ಮಹಿಳೆಯರು ಭವಿಷ್ಯದ ದೌರ್ಜನ್ಯದಿಂದ ತಪ್ಪಿಸಿಕೊಳ್ಳಬಹುದಿತ್ತು. ಎಪ್ಸ್ಟೀನ್ ಎಸಗಿದ ಅಪರಾಧಗಳು ಬಹಿರಂಗವಾದಾಗಲೂ ಆತನ ಜತೆಗಿನ ಪ್ರಭಾವಿಗಳ, ಶ್ರೀಮಂತರ ಭೇಟಿ ಮುಂದುವರಿಯುತ್ತಲೇ ಇತ್ತು. ಆತನ ಇಮೇಲ್ಗಳಿಗೆ ಇವರು ಪ್ರತಿಕ್ರಿಯಿಸುತ್ತಿದ್ದರು. ಆತನ ಆಹ್ವಾನಗಳಿಗೆ ಈ ಪ್ರಭಾವಿ ವ್ಯಕ್ತಿಗಳು ‘ಇಲ್ಲ’ ಎಂದು ಹೇಳುತ್ತಿರಲಿಲ್ಲ. ಆತನನ್ನು ದೂರವಿಡುವ ಬದಲು ದಾರಿತಪ್ಪಿಸುವ ಕೆಲಸಗಳು ನಡೆದವು. ಹೆಸರುಗಳು ಮುಖ್ಯವಾಗುವುದು ಇಲ್ಲಿಯೇ. 2003ರ ಲೇಖನದಲ್ಲಿನ ಹೆಸರುಗಳನ್ನು ಓದಿದರೆ ಗೊತ್ತಾಗುತ್ತದೆ, ಆತನ ಸಾಮಾಜಿಕ ವಲಯದ ವ್ಯಾಪ್ತಿ ಎಷ್ಟಿತ್ತು ಎಂಬುದು. ಇದರಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಎಪ್ಸ್ಟೀನ್ ನಡುವಿನ ಸಂಬಂಧ ಮಹತ್ವದ್ದಾಗಿದೆ. ಟ್ರಂಪ್ ಅವರನ್ನು ಹೆಚ್ಚಾಗಿ ಪ್ರಜಾಪ್ರಭುತ್ವ ಮೌಲ್ಯಗಳಿಂದ ಬೇರೆ ದಾರಿ ಹಿಡಿದವರು ಎಂದು ಕರೆಯಲಾಗುತ್ತದೆ. ಎಪ್ಸ್ಟೀನ್ ಜಗತ್ತಿನಲ್ಲಿ ಟ್ರಂಪ್ ಮುಖ್ಯ ಭಾಗವಾಗಿದ್ದರು ಎಂದು ಫೈಲ್ಗಳು ತೋರಿಸುತ್ತವೆ. ಅಹಿತಕರ ಸತ್ಯವೆಂದರೆ, ನೈತಿಕ ಎಂದು ಹೇಳಿಕೊಳ್ಳುವ ಆಧುನಿಕ ‘ಗಣ್ಯ’ರು ಅವರನ್ನು ಟೀಕಿಸುವವರಂತೆಯೇ ಈ ವಿಷಯದಲ್ಲಿ ಮೌನವಾಗಿದ್ದರು. ಇದು ಬೇರೆಬೇರೆ ವ್ಯಕ್ತಿಗಳ ದೀರ್ಘಕಾಲೀನ ಸಂಬಂಧಗಳಿಂದ ಸಾಬೀತಾಗಿದೆ. ಎಪ್ಸ್ಟೀನ್ ಅವರು ಫೈನಾನ್ಸಿಯರ್ ಲೆಕ್ಸ್ ವೆಕ್ಸ್ನರ್ ಜೊತೆ ದೀರ್ಘ ಸಂಬಂಧ ಹೊಂದಿದ್ದರು. ವಿಶ್ವಪ್ರಸಿದ್ಧ ಭಾಷಾಶಾಸ್ತ್ರಜ್ಞ ಮತ್ತು ಚಿಂತಕ ನೋಮ್ ಚೋಮ್ಸ್ಕಿ ಅವರು ಎಪ್ಸ್ಟೀನ್ನೊಂದಿಗೆ ಹಣಕಾಸಿನ ವಹಿವಾಟು ನಡೆಸಿದ ಬಗ್ಗೆ ಇಮೇಲ್ಗಳು ಇವೆ. ಸಿನಿಮಾ ನಿರ್ಮಾಪಕ ವುಡಿ ಅಲೆನ್ ಜತೆಗಿನ ಸಂಭಾಷಣೆಗಳೂ ಬಹಿರಂಗವಾಗಿವೆ. ಅಮೆರಿಕದ ಮಾಜಿ ಖಜಾನೆ ಕಾರ್ಯದರ್ಶಿ ಹಾಗೂ ಹಾರ್ವರ್ಡ್ ವಿಶ್ವವಿದ್ಯಾಲಯದ ಮಾಜಿ ಅಧ್ಯಕ್ಷ ಲಾರೆನ್ಸ್ ಸಮ್ಮರ್ಸ್ ಅವರು ಎಪ್ಸ್ಟೀನ್ ಜತೆ ಆರ್ಥಿಕ ಸಲಹೆಗಳ ಬಗ್ಗೆ ಚರ್ಚಿಸಿದ್ದ ಇಮೇಲ್ಗಳೂ ಇದರಲ್ಲಿ ಸೇರಿವೆ. ಇಸ್ರೇಲಿನ ಮಾಜಿ ಪ್ರಧಾನಿ ಎಹುದ್ ಬರಾಕ್ ಆಪ್ತ ಸ್ನೇಹಿತ ಹಾಗೂ ವ್ಯಾಪಾರ ಸಹಾಯಕರಾಗಿ ಕಾರ್ಯನಿರ್ವಹಿಸಿದರು. ಡಿಪಿ ವರ್ಲ್ಡ್ ಸಿಇಒ ಸುಲ್ತಾನ್ ಅಹ್ಮದ್ ಬಿನ್ ಸುಲಾಯೆಮ್ ಎಪ್ಸ್ಟೀನ್ ಅವರೊಂದಿಗೆ ವ್ಯವಹಾರ ಮತ್ತು ಖಾಸಗಿ ವಿಷಯಗಳೆರಡನ್ನೂ ಚರ್ಚಿಸಿದರು. ಅವರ ಖಾಸಗಿ ದ್ವೀಪವನ್ನು ಖರೀದಿಸಲು ಸಹಾಯ ಮಾಡಲು ಕಂಪನಿಯನ್ನು ಸಹ ಬಳಸಿದರು. ಇವು ಯಾವುದೂ ಆಕಸ್ಮಿಕ ಭೇಟಿಗಳಾಗಿರಲಿಲ್ಲ. ಎಪ್ಸ್ಟೀನ್ ಅವರನ್ನು ದೂರವಿಡಬೇಕಾಗಿದ್ದ ನಂತರವೂ ಗಣ್ಯರು ದೀರ್ಘಕಾಲ ಅವರೊಂದಿಗೆ ಸಂಪರ್ಕದಲ್ಲಿದ್ದರು ಎಂಬುದನ್ನು ಇಮೇಲ್ಗಳು ತೋರಿಸುತ್ತವೆ. ಎಪ್ಸ್ಟೀನ್ನ ಅಪರಾಧಗಳ ಬಗ್ಗೆ ತಿಳಿದಿದ್ದರೂ ಇವರ್ಯಾರೂ ಆತನೊಂದಿನ ಸಂಪರ್ಕ ಕಡಿತ ಮಾಡಿಲ್ಲ. ಅತ್ಯಂತ ಆಘಾತಕಾರಿ ವಿಷಯವೆಂದರೆ ಎಲ್ಲರೂ ಎಷ್ಟು ಬಿಂದಾಸ್ ಆಗಿದ್ದರು ಎಂಬುದು. ಅವರ ಇಮೇಲ್ ವ್ಯವಹಾರಗಳನ್ನು ನೋಡಿದರೆ ಗೊತ್ತಾಗುತ್ತದೆ. ಅಲ್ಲಿ ಅವರಿಗೆ ಸಿಕ್ಕಿಬೀಳುವ ಭಯ ಇರಲಿಲ್ಲ. ಅವರು ಏನನ್ನೂ ಮರೆಮಾಡಲು ಪ್ರಯತ್ನಿಸುತ್ತಿರಲಿಲ್ಲ. ಒಂದು ವೇಳೆ ಸಿಕ್ಕಿಬಿದ್ದರೂ ಯಾವುದೇ ಪರಿಣಾಮಗಳನ್ನು ಎದುರಿಸಲು ಅವರು ತುಂಬಾ ಶಕ್ತಿಶಾಲಿಗಳು ಎಂದು ಖಚಿತವಾಗಿ ನಂಬಿದ್ದರು. ಎಪ್ಸ್ಟೀನ್ ಫೈಲ್ಗಳು ಭಾರತೀಯರೂ ಈತನ ಜತೆ ಸಂಪರ್ಕ ಹೊಂದಿದ್ದರು ಎಂಬುದನ್ನು ತೋರಿಸುತ್ತವೆ. ಅನಿಲ್ ಅಂಬಾನಿ ಜರೆಡ್ ಕುಶ್ನರ್ ಮತ್ತು ಸ್ಟೀವ್ ಬ್ಯಾನನ್ ಅವರಂತಹ ಜನರೊಂದಿಗೆ ಸಂಪರ್ಕ ಸಾಧಿಸಲು ಎಪ್ಸ್ಟೀನ್ ಅವರನ್ನು ಮಧ್ಯವರ್ತಿಯಾಗಿ ಬಳಸಿಕೊಂಡರು. ದಾಖಲೆಗಳ ಪ್ರಕಾರ, 2017ರಿಂದ 2019ರವರೆಗೆ ಎಪ್ಸ್ಟೀನ್ ಮತ್ತು ಅಂಬಾನಿ ಪರಸ್ಪರ ಸಂದೇಶಗಳನ್ನು ವಿನಿಮಯ ಮಾಡಿಕೊಂಡಿದ್ದರು. ಎಪ್ಸ್ಟೀನ್ ಅವರ ಅಪರಾಧ ದಾಖಲೆಯು ಅವರನ್ನು ತಡೆಯಲಿಲ್ಲ ಎಂಬುದು ಇದರಿಂದ ತಿಳಿಯುತ್ತದೆ. ಹಾಲಿ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಮತ್ತು ಎಪ್ಸ್ಟೀನ್ ನಡುವೆ 2014ರಿಂದ ಇಮೇಲ್ ವಿನಿಮಯವಾಗಿದೆ. ಎಪ್ಸ್ಟೀನ್ ಪುರಿ ಅವರಿಗೆ ಇಮೇಲ್ ಮಾಡಿ ಲಿಂಕ್ಡ್ಇನ್ ತಾಣದ ಸಹ ಸಂಸ್ಥಾಪಕ ರೀಡ್ ಹಾಫ್ಮನ್ ಅವರ ಭಾರತ ಭೇಟಿಗೆ ವ್ಯವಸ್ಥೆ ಮಾಡುವ ಬಗ್ಗೆ ಮಾತನಾಡಿದ್ದರು. ಪುರಿ ಅವರು ಭಾರತದಲ್ಲಿನ ಹೂಡಿಕೆ ಅವಕಾಶಗಳು, ಮೋದಿ ಸರ್ಕಾರದ ಆರ್ಥಿಕ ಯೋಜನೆಗಳ ಬಗ್ಗೆ ವಿವರಿಸಿದ್ದರು. ಅವರು ಮ್ಯಾನ್ಹಟನ್ನಲ್ಲಿರುವ ಎಪ್ಸ್ಟೀನ್ ಮನೆಯಲ್ಲೇ ಆತನನ್ನು ಭೇಟಿ ಮಾಡಿದ್ದರು ಎಂದು ದಾಖಲೆಗಳು ತೋರಿಸಿವೆ. ಈ ಎಲ್ಲವನ್ನೂ ಗಮನಿಸಿದರೆ ಅಸಮಾನತೆಗಳು ಸ್ಪಷ್ಟವಾಗಿ ಕಾಣಿಸುತ್ತವೆ. ಸಂತ್ರಸ್ತರು ಸಹಾಯಕ್ಕಾಗಿ ಬೇಡಿಕೊಂಡಾಗ ಸಂಸ್ಥೆಗಳು ಬಸವನ ಹುಳುವಿನಂತೆ ನಿಧಾನವಾಗಿ ಚಲಿಸಿದವು. ಆದರೆ ಪ್ರಬಲ ಜನರು ತಮ್ಮ ಖ್ಯಾತಿಯನ್ನು ರಕ್ಷಿಸಿಕೊಳ್ಳಲು ಅಗತ್ಯವಿರುವ ಕ್ಷಣದಲ್ಲಿ ಅವು ಮಿಂಚಿನ ವೇಗದಲ್ಲಿ ಚಲಿಸಿದವು. ಸಂತ್ರಸ್ತರು ವರ್ಷಗಳ ಕಾಲ ನ್ಯಾಯಕ್ಕಾಗಿ ಕಾದರು; ಆದರೆ ಪ್ರಭಾವಿಗಳ ರಕ್ಷಣೆಗೆ ಎಲ್ಲವೂ ಸಿದ್ಧವಾಗಿತ್ತು. ಆಸ್ಟ್ರೇಲಿಯಾದ ಮಾಜಿ ಪ್ರಧಾನಿ ಕೆವಿನ್ ರುಡ್ ಹೆಸರು ಎಪ್ಸ್ಟೀನ್ ಫೈಲ್ಗಳಲ್ಲಿ ಕಾಣಿಸಿಕೊಂಡರೂ ಅವರ ಕಚೇರಿ ಅದನ್ನು ನಿರಾಕರಿಸಿತು. ಮಾಜಿ ಪ್ರಧಾನಿ ಪಾಲ್ ಕೀಟಿಂಗ್ ಅವರ ಮಗಳು ಕ್ಯಾಥರೀನ್ ಕೀಟಿಂಗ್ ಸಾಮಾಜಿಕ ಮಧ್ಯವರ್ತಿಯಾಗಿ ಇದರಲ್ಲಿ ಕಾಣಿಸಿಕೊಂಡಿದ್ದಾರೆ. ಯುರೋಪ್ನಲ್ಲಿ ಪೀಟರ್ ಮ್ಯಾಂಡೆಲ್ಸನ್ ಮತ್ತು ಥಾರ್ಬ್ಜೋರ್ನ್ ಜಗ್ಲ್ಯಾಂಡ್ ಅವರಂತಹ ವ್ಯಕ್ತಿಗಳೂ ಎಪ್ಸ್ಟೀನ್ ಜತೆ ಸಂಪರ್ಕದಲ್ಲಿದ್ದರು ಎಂಬುದನ್ನು ಫೈಲ್ಗಳು ತೋರಿಸುತ್ತವೆ. ನಾರ್ವೆಯ ಕ್ರೌನ್ ಪ್ರಿನ್ಸೆಸ್ ಮೆಟ್ಟೆ–ಮಾರಿಟ್ ಅವರ ಹೆಸರು ಎಪ್ಸ್ಟೀನ್ ಸಂಬಂಧಿತ ಪತ್ರವ್ಯವಹಾರದಲ್ಲಿ ಪುನರಾವರ್ತನೆಯಾಗಿದೆ. ದಕ್ಷಿಣ ಆಫ್ರಿಕಾದ ಮಾಜಿ ಅಧ್ಯಕ್ಷ ಜಾಕೋಬ್ ಜುಮಾ ಅವರ ಹೆಸರೂ ಇಮೇಲ್ಗಳಲ್ಲಿ ಇದೆ. ಮಾನವ ಹಕ್ಕುಗಳ ಶಾಶ್ವತ ಸಮಿತಿಯ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿರುವ ಯುಎಇ ರಾಜತಾಂತ್ರಿಕ ಹಿಂದ್ ಅಲ್–ಒವೈಸ್ ಅವರ ಹೆಸರು ಕೂಡಾ ಇಮೇಲ್ಗಳಲ್ಲಿ ಇದೆ. ಇತ್ತೀಚೆಗೆ ಬಿಡುಗಡೆಯಾದ ಫೈಲ್ಗಳು ಅವರು 2011 ಮತ್ತು 2012ರ ನಡುವೆ ಎಪ್ಸ್ಟೀನ್ ಜೊತೆ 400ಕ್ಕೂ ಹೆಚ್ಚು ಇಮೇಲ್ಗಳನ್ನು ವಿನಿಮಯ ಮಾಡಿಕೊಂಡಿದ್ದಾರೆ ಎಂದು ಸೂಚಿಸುತ್ತವೆ. ಇದರಲ್ಲಿ ಒವೈಸ್ ತಮ್ಮ ಸಹೋದರಿಯ ಬಗ್ಗೆ ಮಾತ್ರವಲ್ಲದೆ ಹುಡುಗಿಯರನ್ನು ಏರ್ಪಾಡು ಮಾಡುವ ಬಗ್ಗೆಯೂ ಮಾತನಾಡಿದ್ದಾರೆ ಎಂಬ ಉಲ್ಲೇಖಗಳಿವೆ. ಪ್ರತಿಯೊಂದು ಉಲ್ಲೇಖವೂ ಒಂದೇ ವಿಷಯವನ್ನು ಸೂಚಿಸುವುದಿಲ್ಲ. ಪ್ರತಿಯೊಂದು ಸಂವಹನವೂ ವಿಭಿನ್ನವಾಗಿದೆ. ಆದರೆ ಇವೆಲ್ಲವನ್ನು ಒಟ್ಟಿಗೆ ತೆಗೆದುಕೊಂಡರೆ ಗಣ್ಯರ ಇಮೇಲ್ಗಳು ಎಪ್ಸ್ಟೀನ್ ಅವರನ್ನು ಹೊರಗಿಡುವ ಬದಲು ಪ್ರಮುಖ ವ್ಯಕ್ತಿಯಾಗಿ ಪರಿಗಣಿಸಿದ್ದನ್ನು ತೋರಿಸುತ್ತವೆ. ಜೆಫ್ರಿ ಎಪ್ಸ್ಟೀನ್ ಯಾರು? ಏನಿದು ಎಪ್ಸ್ಟೀನ್ ಫೈಲ್ಗಳು? ಅಮೆರಿಕದ ಲೈಂಗಿಕ ಅಪರಾಧಿ ಜೆಫ್ರಿ ಎಪ್ಸ್ಟೀನ್. ಜನವರಿ 30ರಂದು ಅಮೆರಿಕದ ನ್ಯಾಯಾಂಗ ಇಲಾಖೆ ಬಿಡುಗಡೆ ಮಾಡಿರುವ 30 ಲಕ್ಷ ಪುಟಗಳ ದಾಖಲೆಗಳೇ ಎಪ್ಸ್ಟೀನ್ ಫೈಲ್ಗಳು. ಅದರಲ್ಲಿ 1.8 ಲಕ್ಷ ಚಿತ್ರಗಳು ಮತ್ತು ಎರಡು ಸಾವಿರ ವಿಡಿಯೊಗಳು ಇವೆ. ಇವು ಜಗತ್ತಿನ ವಿವಿಧ ದೇಶಗಳ ನಾಯಕರು, ಪ್ರಭಾವಿಗಳ ಹೆಸರುಗಳನ್ನು ಒಳಗೊಂಡಿವೆ. ನ್ಯೂಯಾರ್ಕ್ನಲ್ಲಿ ಹುಟ್ಟಿ ಬೆಳೆದ ಜೆಫ್ರಿ ಎಪ್ಸ್ಟೀನ್ ಮ್ಯಾನ್ಹಟನ್ನ ಪ್ರತಿಷ್ಠಿತ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕನಾಗಿದ್ದ. ಆಮೇಲೆ ಹಣಕಾಸು ಸಂಸ್ಥೆಯೊಂದರಲ್ಲಿ ಪಾಲುದಾರನಾಗಿ ಸೇರಿ ಶ್ರೀಮಂತನಾದ. ಈತ ರಾಜಕಾರಣಿಗಳು, ಉದ್ಯಮಿಗಳು, ಶ್ರೀಮಂತರ ಜತೆ ಒಡನಾಟವಿರಿಸಿಕೊಂಡಿದ್ದ. ದೇಶ–ವಿದೇಶಗಳ ಗಣ್ಯರು, ಪ್ರಭಾವಿಗಳು, ಖ್ಯಾತನಾಮರು ಈತನೊಂದಿಗೆ ಸಂಪರ್ಕ ಹೊಂದಿದ್ದರು. ಈತ ತನ್ನ ಕಾಮತೃಷೆಗೆ ಅನೇಕ ಅಪ್ರಾಪ್ತ ವಯಸ್ಸಿನ ಮಹಿಳೆಯರು, ಬಾಲಕಿಯರನ್ನು ಬಳಸಿಕೊಂಡಿದ್ದ ಎಂಬ ವರದಿ ಬಹಿರಂಗವಾದೊಡನೆ ಇವನ ಅಪರಾಧಗಳು ಒಂದೊಂದಾಗಿ ಹೊರಬರಲು ಆರಂಭವಾದವು. ಈ ಮಹಿಳೆಯರನ್ನು ಕಳ್ಳಸಾಗಣೆ ಮಾಡಿ ಅವರ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ. ಹೀಗೆ ಕರೆದುಕೊಂಡು ಬಂದ ಹೆಣ್ಮಕ್ಕಳನ್ನು ವೇಶ್ಯಾವಾಟಿಕೆಗೆ ಬಳಸುತ್ತಿದ್ದ. 2005ರಲ್ಲಿ ಲೈಂಗಿಕ ಅಪರಾಧಗಳಿಗಾಗಿ ಆತನನ್ನು ಬಂಧಿಸಲಾಯಿತು; 2008ರಲ್ಲಿ ಆರೋಪಗಳು ಸಾಬೀತಾದವು. ಪ್ರಭಾವ ಬಳಸಿ ಆತ ಜೈಲು ಶಿಕ್ಷೆಯಿಂದ ಬಚಾವಾದ. ಆಮೇಲೆ ಕಳ್ಳಸಾಗಣೆ ಮತ್ತು ಲೈಂಗಿಕ ದೌರ್ಜನ್ಯದ ಆರೋಪದಲ್ಲಿ 2019ರಲ್ಲಿ ಮತ್ತೆ ಬಂಧಿತನಾದ ಎಪ್ಸ್ಟೀನ್ ವಿಚಾರಣೆಗೆ ಮುನ್ನವೇ ಜೈಲಿನಲ್ಲೇ ಆತ್ಮಹತ್ಯೆ ಮಾಡಿಕೊಂಡನು.
ಬಾಂಗ್ಲಾದೇಶ ಸಾರ್ವತ್ರಿಕ ಚುನಾವಣೆ | ಸಂಸತ್ತಿಗೆ ಏಳು ಮಹಿಳಾ ಸಂಸದರ ಆಯ್ಕೆ
ಢಾಕಾ: ಬಾಂಗ್ಲಾದೇಶದಲ್ಲಿ ನಡೆದ 13ನೇ ಸಾರ್ವತ್ರಿಕ ಚುನಾವಣೆಯಲ್ಲಿ ಬಾಂಗ್ಲಾದೇಶ ಸಂಸತ್ತಿಗೆ ಏಳು ಮಂದಿ ಮಹಿಳಾ ಸಂಸದರು ಆಯ್ಕೆಯಾಗಿದ್ದು, ಈ ಪೈಕಿ ಬಹುತೇಕರು ಬಿಎನ್ಪಿ ಪಕ್ಷಕ್ಕೆ ಸೇರಿದ್ದಾರೆ ಎಂದು ಶುಕ್ರವಾರ ಮಾಧ್ಯಮವೊಂದು ವರದಿ ಮಾಡಿದೆ. ನಿಶ್ಚಿತ ಬಹುಮತ ಪಡೆದು ಸರ್ಕಾರ ರಚಿಸಲು ಸಜ್ಜಾಗಿರುವ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿಯ ಆರು ಮಂದಿ ಅಭ್ಯರ್ಥಿಗಳು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿದ್ದಾರೆ ಎಂದು ಅನಧಿಕೃತ ಫಲಿತಾಂಶಗಳನ್ನು ಉಲ್ಲೇಖಿಸಿ The Dhaka Tribune ಸುದ್ದಿ ಸಂಸ್ಥೆ ವರದಿ ಮಾಡಿದೆ. ಮಾಣಿಕ್ಗಂಜ್–3 ಕ್ಷೇತ್ರದಿಂದ ಸ್ಪರ್ಧಿಸಿದ್ದ ಅಫ್ರೋಜಾ ಖಾನ್ ರೀತು, ಝಾಲೋಕಾಠಿ–2 ಕ್ಷೇತ್ರದಿಂದ ಸ್ಪರ್ಧಿಸಿದ್ದ ಇಸ್ರತ್ ಸುಲ್ತಾನಾ ಎಲೆನ್ ಭುಟ್ಟೊ, ಸಿಲ್ಹೆಟ್–2 ಕ್ಷೇತ್ರದಿಂದ ಸ್ಪರ್ಧಿಸಿದ್ದ ತಹ್ಸೀನಾ ರುಶ್ದೀಶರ್ ಲೂನಾ, ಫರೀದ್ಪುರ್–2 ಕ್ಷೇತ್ರದಿಂದ ಸ್ಪರ್ಧಿಸಿದ್ದ ಶಮಾ ಒಬೈದ್, ಫರೀದ್ಪುರ್–3 ಕ್ಷೇತ್ರದಿಂದ ಸ್ಪರ್ಧಿಸಿದ್ದ ಯೂಸುಫ್ ಕಮಾಲ್ ಹಾಗೂ ನಟೋರ್–1 ಕ್ಷೇತ್ರದಿಂದ ಸ್ಪರ್ಧಿಸಿದ್ದ ಫರ್ಝಾನಾ ಶರ್ಮೀನ್ ಪುತುಲ್ ಆಯ್ಕೆಯಾಗಿದ್ದಾರೆ. ಇದರೊಂದಿಗೆ, ಬ್ರಹ್ಮಣಬಾರಿಯಾ–2 ಕ್ಷೇತ್ರದಿಂದ ಬಿಎನ್ಪಿ ಪಕ್ಷದಿಂದ ಉಚ್ಚಾಟನೆಗೊಂಡಿದ್ದ ಬ್ಯಾರಿಸ್ಟರ್ ರುಮೀನ್ ಫರ್ಹಾನಾ ಗೆಲುವು ಸಾಧಿಸಿದ್ದಾರೆ. ದೇಶಾದ್ಯಂತ ನಡೆದ ಮತದಾನ ಹಾಗೂ ಮತ ಎಣಿಕೆ ಮುಕ್ತಾಯದ ನಂತರ ಪ್ರಕಟವಾಗಿರುವ ಅನಧಿಕೃತ ಪಟ್ಟಿಯನ್ನು ಆಧರಿಸಿ ಈ ಫಲಿತಾಂಶಗಳನ್ನು ನೀಡಲಾಗಿದೆ ಎಂದು ಪತ್ರಿಕೆ ವರದಿ ಮಾಡಿದೆ. ಬಾಂಗ್ಲಾದೇಶ ಸಂಸತ್ತಿನ 300 ಕ್ಷೇತ್ರಗಳ ಪೈಕಿ ಬಿಎನ್ಪಿ ಕೇವಲ 10 ಕ್ಷೇತ್ರಗಳಲ್ಲಿ ಮಾತ್ರ ಮಹಿಳಾ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಈ ಪೈಕಿ ಬಿಎನ್ಪಿಯ ಆರು ಮಂದಿ ಅಭ್ಯರ್ಥಿಗಳು ಹಾಗೂ ಬಿಎನ್ಪಿಯಿಂದ ಉಚ್ಚಾಟಿತರಾಗಿದ್ದ ಓರ್ವ ಅಭ್ಯರ್ಥಿ ಗೆಲುವಿನ ನಗೆ ಬೀರಿದ್ದಾರೆ ಎಂದು ವರದಿಯಾಗಿದೆ.
ಮುಂಬೈ: ಪ್ರಧಾನಿ ನರೇಂದ್ರ ಮೋದಿ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಡಿದ್ದ ಪೋಸ್ಟ್ಗೆ ಸಂಬಂಧಿಸಿ ಭಾರತೀಯ ಮೂಲದ ಬ್ರಿಟಿಷ್ ವೈದ್ಯ ಹಾಗೂ ಯೂಟ್ಯೂಬರ್ ಡಾ. ಸಂಗ್ರಾಮ್ ಪಾಟೀಲ್ ವಿರುದ್ಧ ದಾಖಲಾಗಿರುವ ಪ್ರಕರಣದ ಹಿನ್ನೆಲೆ ಅವರು ಯುನೈಟೆಡ್ ಕಿಂಗ್ಡಮ್ (ಯುಕೆ)ಗೆ ಮರಳಲು ಸಾಧ್ಯವಾಗದೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಂಬೆ ಹೈಕೋರ್ಟ್ ಇನ್ನೂ ಅಂತಿಮ ತೀರ್ಪು ನೀಡಿಲ್ಲ. ಬದಲಾಗಿ, ಪಾಟೀಲ್ ವಿರುದ್ಧ ದಾಖಲಾಗಿರುವ ಎಫ್ಐಆರ್ ಮತ್ತು ವಿಧಿಸಲಾದ ಪ್ರಯಾಣ ನಿರ್ಬಂಧಗಳ ಕಾನೂನುಬದ್ಧತೆಯನ್ನು ನ್ಯಾಯಾಲಯವು ಪರಿಶೀಲಿಸುತ್ತಿದೆ. ಕಳೆದ ಮೂರು ತಿಂಗಳಿಂದ ಅವರು ಯುಕೆಗೆ ಹಿಂತಿರುಗಲು ಸಾಧ್ಯವಾಗಿಲ್ಲ ಎಂದು ತಿಳಿದುಬಂದಿದೆ. ಡಿಸೆಂಬರ್ 14ರಂದು ಬಿಜೆಪಿ ಮಹಾರಾಷ್ಟ್ರ ಘಟಕದ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥ ನಿಖಿಲ್ ಭಮ್ರೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದ್ದು, ಡಿಸೆಂಬರ್ 18ರಂದು ಲೋವರ್ ಪರೇಲ್ ನ ಎನ್.ಎಂ. ಜೋಶಿ ಮಾರ್ಗ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಪೋಸ್ಟ್ನಲ್ಲಿ ಪಾಟೀಲ್, ಮೋದಿಯವರ ವಿರುದ್ಧ ಲೈಂಗಿಕ ಹಗರಣಕ್ಕೆ ಸಂಬಂಧಿಸಿದ ಆರೋಪ ಉಲ್ಲೇಖಿಸಿ, ಬಿಜೆಪಿ ಸೇರಿದಂತೆ ಕೆಲವರು ಹಣ ಪಡೆದು ಮೌನವಾಗಿದ್ದಾರೆ ಎಂದು ಹೇಳಿದ್ದರು. ಆ ಪೋಸ್ಟ್ನ ಲಿಂಕ್ ಅನ್ನು ಎಫ್ಐಆರ್ನಲ್ಲಿ ಸೇರಿಸಲಾಗಿದೆ. ಈ ಕುರಿತು ಭಮ್ರೆ ತಮ್ಮ ದೂರಿನಲ್ಲಿ, “ಆಕ್ಷೇಪಾರ್ಹ ಹಾಗೂ ಮಾನನಷ್ಟಕರ ವಿಷಯವನ್ನು ಅಪ್ಲೋಡ್ ಮಾಡಿದ್ದಾರೆ. ಅದು ದಾರಿತಪ್ಪಿಸುವ ಮತ್ತು ಸಾರ್ವಜನಿಕ ಸಾಮರಸ್ಯವನ್ನು ಕೆಡಿಸುವ ಉದ್ದೇಶ ಹೊಂದಿದೆ” ಎಂದು ಆರೋಪಿಸಿದ್ದಾರೆ. ಭಾರತೀಯ ಮೂಲದ ಬ್ರಿಟಿಷ್ ಪ್ರಜೆ ಹಾಗೂ ಯುಕೆಯ ರಾಷ್ಟ್ರೀಯ ಆರೋಗ್ಯ ಸೇವೆ (ಎನ್ಎಚ್ಎಸ್) ಸಲಹೆಗಾರರಾಗಿರುವ ಡಾ. ಪಾಟೀಲ್ ಭಾರತದಲ್ಲಿಯೂ ವೃತ್ತಿಪರ ಮತ್ತು ವೈಯಕ್ತಿಕ ಸಂಪರ್ಕ ಹೊಂದಿದ್ದಾರೆ. ತಮ್ಮದೇ ಹೆಸರಿನಲ್ಲಿ ಯೂಟ್ಯೂಬ್ ಮತ್ತು ಫೇಸ್ಬುಕ್ ಸೇರಿದಂತೆ ಹಲವು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ಅವರು, ಪ್ರಸ್ತುತ ಯೂಟ್ಯೂಬ್ ನಲ್ಲಿ ಸುಮಾರು 4.73 ಲಕ್ಷ ಚಂದಾದಾರರನ್ನು ಹೊಂದಿದ್ದಾರೆ. ಅವರ ಆನ್ಲೈನ್ ಚಟುವಟಿಕೆಗಳಲ್ಲಿ ಸಾರ್ವಜನಿಕ ವಿಚಾರಗಳು ಮತ್ತು ರಾಜಕೀಯ ಬೆಳವಣಿಗೆಗಳ ಕುರಿತ ಅಭಿಪ್ರಾಯಗಳು ಪ್ರಮುಖವಾಗಿದ್ದು, ಇವುಗಳನ್ನು ತಾವು ವಾಕ್ಸ್ವಾತಂತ್ರ್ಯದ ಹಕ್ಕಿನ ಅಡಿಯಲ್ಲಿ ಮಾಡುತ್ತಿರುವುದಾಗಿ ಪಾಟೀಲ್ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಎಫ್ಐಆರ್ ದಾಖಲಾಗುವ ಸಮಯದಲ್ಲಿ ಅವರು ಪ್ರವಾಸಿ ವೀಸಾದ ಮೇಲೆ ಭಾರತದಲ್ಲಿದ್ದರು ಎಂದು ಹೈಕೋರ್ಟ್ಗೆ ತಿಳಿಸಿರುವ ಪಾಟೀಲ್, ಯುಕೆಗೆ ಹಿಂತಿರುಗುವ ಮೊದಲು ಸಣ್ಣ ವೈಯಕ್ತಿಕ ಭೇಟಿಗಾಗಿ ಮುಂಬೈಗೆ ಬಂದಿದ್ದಾಗಿ ವಿವರಿಸಿದ್ದಾರೆ. ಪೊಲೀಸರು ಹೊರಡಿಸಿದ ಲುಕ್ಔಟ್ ಸರ್ಕ್ಯುಲರ್ (ಎಲ್ಒಸಿ) ಕಾರಣದಿಂದ ಭಾರತವನ್ನು ತೊರೆಯಲು ಸಾಧ್ಯವಾಗದೇ, ಸುಮಾರು ಮೂರು ತಿಂಗಳ ಕಾಲ ಯುಕೆಯಲ್ಲಿನ ತಮ್ಮ ವೈದ್ಯಕೀಯ ಕರ್ತವ್ಯಗಳಿಗೆ ಹಾಜರಾಗಲು ಅಡಚಣೆ ಉಂಟಾಗಿದೆ ಎಂದು ಅವರು ಹೇಳಿದ್ದಾರೆ. ಈ ಪ್ರಕರಣದಲ್ಲಿ ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್)–2023ರ ಸೆಕ್ಷನ್ 353(2) ಅಡಿ ಗುಂಪುಗಳ ನಡುವೆ ದ್ವೇಷ ಪ್ರಚೋದನೆಗೆ ಸಂಬಂಧಿಸಿದ ವಿಧಿಗಳು ಹಾಗೂ ಸೆಕ್ಷನ್ 356 ಅಡಿ ಕ್ರಿಮಿನಲ್ ಮಾನನಷ್ಟಕ್ಕೆ ಸಂಬಂಧಿಸಿದ ವಿಧಿಗಳನ್ನು ಮುಂಬೈ ಪೊಲೀಸರು ಅನ್ವಯಿಸಿದ್ದಾರೆ. ಸಾಮಾಜಿಕ ಜಾಲತಾಣದ ಪೋಸ್ಟ್ಗಳು ಸಾರ್ವಜನಿಕ ವ್ಯಕ್ತಿಗಳ ಪ್ರತಿಷ್ಠೆಗೆ ಧಕ್ಕೆ ತಂದಿವೆ ಎಂಬುದು ಪೊಲೀಸರ ಆರೋಪವಾಗಿದೆ. ಫೆಬ್ರವರಿ 6ರಂದು ಹೈಕೋರ್ಟ್ಗೆ ಸಲ್ಲಿಸಿದ ಅಫಿಡವಿಟ್ನಲ್ಲಿ, “ಈ ವಿಷಯವು ಸಾಮಾನ್ಯ ರಾಜಕೀಯ ಟೀಕೆಯ ಮಿತಿಯನ್ನು ಮೀರಿರುವುದಾಗಿ ಕಂಡುಬರುತ್ತಿದ್ದು, ಸಾಂವಿಧಾನಿಕ ಹುದ್ದೆಯಲ್ಲಿರುವವರನ್ನು ಕೆಣಕುವ ಸಂಘಟಿತ ಪ್ರಯತ್ನವಿದೆಯೇ ಎಂಬುದನ್ನು ನಿರ್ಧರಿಸಲು ಸಮಗ್ರ ತನಿಖೆ ಅಗತ್ಯ” ಎಂದು ಪೊಲೀಸರು ತಿಳಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಫೆಬ್ರವರಿ 9ರಂದು ಸಲ್ಲಿಸಿದ ಮರು–ಅಫಿಡವಿಟ್ನಲ್ಲಿ ಪಾಟೀಲ್ ಅವರು ಆರೋಪಗಳನ್ನು ತಳ್ಳಿ ಹಾಕಿ, “ನಾನು ವಾಕ್ಸ್ವಾತಂತ್ರ್ಯದ ಹಕ್ಕಿನ ಅಡಿಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದೇನೆ; ಯಾವುದೇ ದ್ವೇಷ ಪ್ರಚೋದನೆ ಉದ್ದೇಶ ಇರಲಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ. ಇನ್ನೊಂದೆಡೆ, ಹೆಸರು ಬಹಿರಂಗಪಡಿಸಲು ಇಚ್ಛಿಸದ ಬಿಜೆಪಿ ಕಾರ್ಯಕರ್ತನೊಬ್ಬರು ನೀಡಿದ ಮಾಹಿತಿಯಲ್ಲಿ, “ನಾನು ಪ್ರತಿದಿನ ಸುಮಾರು 12 ಗಂಟೆಗಳ ಕಾಲ ಸಾಮಾಜಿಕ ಜಾಲತಾಣ ವೀಕ್ಷಿಸುತ್ತೇನೆ. ಆ ಪೋಸ್ಟ್ ಕಂಡ ತಕ್ಷಣ ಉಲ್ಲೇಖಿಸಿದೆ. ಇದೇ ರೀತಿಯ ಮತ್ತೊಂದು ಪೋಸ್ಟ್ ‘ಶಹರ್ ವಿಕಾಸ್ ಅಘಾಡಿ’ ಎಂಬ ಪುಟದಲ್ಲಿಯೂ ಕಂಡುಬಂದಿತ್ತು. ಅದನ್ನೂ ಉಲ್ಲೇಖ ಮಾಡಲಾಗಿತ್ತು. ಆ ಪೋಸ್ಟ್ ಈಗ ಲಭ್ಯವಿಲ್ಲ. ಆದರೆ ಪೊಲೀಸರು ಅವರನ್ನು ಗುರುತಿಸಿ ಸಂಪೂರ್ಣ ತನಿಖೆ ನಡೆಸಲು ಸಾಧ್ಯ”, ಎಂದು ಹೇಳಿದ್ದಾರೆ. ಸೌಜನ್ಯ: theprint.in
ಐಪಿಎಲ್ 2026| ರಾಜಸ್ಥಾನ ರಾಯಲ್ಸ್ ನಾಯಕನಾಗಿ ರಿಯಾನ್ ಪರಾಗ್
ಹೊಸದಿಲ್ಲಿ, ಫೆ.13: ಸಂಜು ಸ್ಯಾಮ್ಸನ್ ಚೆನ್ನೈ ಸೂಪರ್ ಕಿಂಗ್ಸ್ಗೆ ವರ್ಗಾವಣೆಯಾಗಿರುವ ಹಿನ್ನೆಲೆಯಲ್ಲಿ 2026ರ ಆವೃತ್ತಿಯ ಐಪಿಎಲ್ಗಿಂತ ಮೊದಲು ರಾಜಸ್ಥಾನ ರಾಯಲ್ಸ್ ತಂಡದ ನೂತನ ನಾಯಕನಾಗಿ ರಿಯಾನ್ ಪರಾಗ್ರನ್ನು ನೇಮಿಸಲಾಗಿದೆ. 24ರ ವಯಸ್ಸಿನ ಪರಾಗ್ ಕಳೆದ ಋತುವಿನಲ್ಲಿ ಸ್ಯಾಮ್ಸನ್ ಗಾಯಗೊಂಡಿದ್ದಾಗ ಎಂಟು ಪಂದ್ಯಗಳಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ನಾಯಕತ್ವ ವಹಿಸಿದ್ದರು. ಆ ಎಂಟು ಪಂದ್ಯಗಳ ಪೈಕಿ ರಾಜಸ್ಥಾನ ತಂಡ ಕೇವಲ ಎರಡರಲ್ಲಿ ಗೆಲುವು ದಾಖಲಿಸಿತ್ತು. ಪರಾಗ್ ಅವರ ವೈಯಕ್ತಿಕ ಪ್ರದರ್ಶನ ಅತ್ಯುತ್ತಮವಾಗಿದ್ದು, 38.57ರ ಸರಾಸರಿಯಲ್ಲಿ ಬ್ಯಾಟಿಂಗ್ ಮಾಡಿದ್ದರು. ಕೋಲ್ಕತಾದ ಈಡನ್ಗಾರ್ಡನ್ಸ್ನಲ್ಲಿ ಕೆಕೆಆರ್ ವಿರುದ್ಧ ಜೀವನಶ್ರೇಷ್ಠ ಸಾಧನೆ(95 ರನ್)ಮಾಡಿದ್ದರು. 2019ರಲ್ಲಿ ಐಪಿಎಲ್ಗೆ ಕಾಲಿಟ್ಟ ನಂತರ ಪರಾಗ್ ಅವರು ರಾಜಸ್ಥಾನ ತಂಡದಲ್ಲಿದ್ದಾರೆ. ಆ ನಂತರ ಪ್ರತೀ ಋತುವಿನಲ್ಲೂ ಆಡಿದ್ದರು. ಕಳೆದ ಎರಡು ವರ್ಷ ಪ್ರತಿಯೊಂದು ಪಂದ್ಯ ಆಡಿದ್ದರು. 2024ರಲ್ಲಿ 52.09ರ ಸರಾಸರಿಯಲ್ಲಿ 149.21ರ ಸ್ಟ್ರೈಕ್ರೇಟ್ನಲ್ಲಿ ಒಟ್ಟು 573 ರನ್ ಗಳಿಸಿದ್ದರು. ಒಟ್ಟಾರೆ ಪರಾಗ್ ಅವರು ರಾಜಸ್ಥಾನ ಪರ 84 ಪಂದ್ಯಗಳನ್ನು ಆಡಿ 1,566 ರನ್ ಗಳಿಸಿದ್ದರು. ಏಳು ವಿಕೆಟ್ಗಳನ್ನು ಉರುಳಿಸಿದ್ದರು.
ಏಶ್ಯನ್ ಚಾಂಪಿಯನ್ಶಿಪ್| 13 ಚಿನ್ನ ಸಹಿತ 33 ಪದಕ ಗೆದ್ದ ಭಾರತ
ಹೊಸದಿಲ್ಲಿ, ಫೆ.13: ಭಾರತದ ಪಿಸ್ತೂಲ್ ಶೂಟರ್ ಅಮನ್ಪ್ರೀತ್ ಸಿಂಗ್ ಏಶ್ಯನ್ ಚಾಂಪಿಯನ್ಶಿಪ್ನ 25 ಮೀ. ಸೆಂಟರ್ಫೈಯರ್ ಇವೆಂಟ್ನಲ್ಲಿ ಚಿನ್ನದ ಪದಕ ಜಯಿಸಿ ವೃತ್ತಿಬದುಕಿನಲ್ಲಿ ಮಹತ್ವದ ಸಾಧನೆ ಮಾಡಿದರು. ಕೊನೆಯ ದಿನವಾದ ಶುಕ್ರವಾರ ಭಾರತದ ಶೂಟರ್ಗಳು ಕ್ಲೀನ್ಸ್ವೀಪ್ ಸಾಧಿಸಿದರು. 38ರ ವಯಸ್ಸಿನ ಅಮನ್ಪ್ರೀತ್ 589 ಅಂಕ ಗಳಿಸಿ ಚಿನ್ನದ ಪದಕ ಜಯಿಸಿದರು. ಭಾರತದ ಒಲಿಂಪಿಯನ್ ಗುರುಪ್ರೀತ್ ಸಿಂಗ್(584)ಹಾಗೂ ಅಂಕುರ್ ಗೊಯೆಲ್(570)ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕ ಜಯಿಸಿದ್ದು, ಈ ಮೂಲಕ ಭಾರತವು 25ಮೀ.ಸೆಂಟರ್ಫೈಯರ್ ಇವೆಂಟ್ನಲ್ಲಿ ಕ್ಲೀನ್ಸ್ವೀಪ್ ಸಾಧಿಸಿತು. ಭಾರತದ ಮೂವರು ಶೂಟರ್ಗಳು ಟೀಮ್ ಸ್ಪರ್ಧೆಯಲ್ಲೂ ಪ್ರಾಬಲ್ಯ ಸಾಧಿಸಿದ್ದು,1,743 ಅಂಕ ಗಳಿಸಿ ಚಿನ್ನದ ಪದಕ ಜಯಿಸಿದರು. ವಿಯೆಟ್ನಾಂ(1,671 ಅಂಕ)ಬೆಳ್ಳಿ ಪದಕ ಗೆದ್ದಿದೆ. ಕೊನೆಯ ದಿನದ ಸ್ಪರ್ಧೆಯಲ್ಲಿ ಭಾರತವು ಒಟ್ಟು ಏಳು ಪದಕಗಳನ್ನು ಜಯಿಸಿ ಪಾರಮ್ಯ ಮೆರೆದಿದೆ. ಭಾರತೀಯ ತಂಡವು ಸೀನಿಯರ್ ರೈಫಲ್ ಹಾಗೂ ಪಿಸ್ತೂಲ್ ಸ್ಪರ್ಧೆಗಳಲ್ಲಿ 13 ಚಿನ್ನ, 11 ಬೆಳ್ಳಿ ಹಾಗೂ 9 ಕಂಚು ಸಹಿತ ಚಾಂಪಿಯನ್ಶಿಪ್ನಲ್ಲಿ ಒಟ್ಟು 33 ಪದಕಗಳನ್ನು ಗೆದ್ದುಕೊಂಡು ಗಮನ ಸೆಳೆದಿದೆ. ಭಾರತೀಯ ಶೂಟರ್ ಸಿಫ್ಟ್ ಕೌರ್ ಸಾಮ್ರಾ ಮಹಿಳೆಯರ 50ಮೀ.ರೈಫಲ್ ಪ್ರೋನ್ ಸ್ಪರ್ಧೆಯಲ್ಲಿ ಶ್ರೇಷ್ಠ ಪ್ರದರ್ಶನ ನೀಡಿದರು. ಕೊನೆಯ ತನಕ ಹೋರಾಡಿ ಬೆಳ್ಳಿ ಪದಕ ಗೆದ್ದರು. ಹಿರಿಯ ಶೂಟರ್ ತೇಜಸ್ವಿನಿ ಸಾವಂತ್ ಕಂಚಿನ ಪದಕ ಜಯಿಸಿದ್ದು, ಭಾರತ ಒಟ್ಟು ಎರಡು ಪದಕಗಳನ್ನು ಜಯಿಸಿದೆ. ಚಿನ್ನದ ಪದಕ ಕಝಕ್ಸ್ತಾನದ ಯೆಲಿಝವೆಟಾ ಪಾಲಾಯಿತು. ಕಳೆದ ವರ್ಷ ಐಎಸ್ಎಸ್ಎಫ್ ವರ್ಲ್ಡ್ ಕಪ್ ಹಾಗೂ ಏಶ್ಯನ್ ಚಾಂಪಿಯನ್ಶಿಪ್ನಲ್ಲಿ 50 ಮೀ. ರೈಫಲ್ 3-ಪೊಸಿಶನ್ಸ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಜಯಿಸಿದ್ದ 24ರ ಹರೆಯದ ಸಾಮ್ರಾ 623.2 ಅಂಕ ಗಳಿಸಿದರು. ಕೇವಲ 0.2 ಅಂಕದಿಂದ ಚಿನ್ನದ ಪದಕದಿಂದ ವಂಚಿತರಾದರು. ಕಝಕ್ಸ್ತಾನದ ಯೆಲಿಝವೆಟಾ 623.4 ಅಂಕ ಗಳಿಸಿ ಚಿನ್ನದ ಪದಕ ಜಯಿಸಿದರು. ಒಲಿಂಪಿಯನ್ ಸಾವಂತ್ 621.0 ಅಂಕ ಗಳಿಸಿ ಕಂಚಿನ ಪದಕ ಗೆದ್ದುಕೊಂಡರು. ಭಾರತದ ತ್ರಿವಳಿ ಶೂಟರ್ಗಳಾದ ಸಾಮ್ರಾ, ಸಾವಂತ್ ಹಾಗೂ ಜೈಪುರದ ಶೂಟರ್ ಮಾನಿನಿ ಕೌಶಿಕ್ ಒಟ್ಟು 1862.9 ಅಂಕ ಗಳಿಸಿ ಟೀಮ್ ವಿಭಾಗದಲ್ಲಿ ಚಿನ್ನದ ಪದಕ ಜಯಿಸಿದರು. ಕಝಕ್ಸ್ತಾನದ ಜೋಡಿ 1862.8 ಅಂಕ ಗಳಿಸಿ ಬೆಳ್ಳಿ ಗೆದ್ದುಕೊಂಡಿತು.
ಪ್ರಧಾನಿ ಹುದ್ದೆಯನ್ನೆ ಕೇಳುತ್ತಿರುವ ಬಿಜೆಪಿ ಅಭ್ಯರ್ಥಿ: ಪ್ರಿಯಾಂಕ್ ಖರ್ಗೆ ವ್ಯಂಗ್ಯ
ಬೆಂಗಳೂರು, ಫೆ. 13: ವಿಧಾನಸಭೆ ಚುನಾವಣೆಯ ಬಿಜೆಪಿ ಅಭ್ಯರ್ಥಿ ಈಗ ಪ್ರಧಾನಿ ಮೋದಿ ಹುದ್ದೆಯನ್ನೇ ಕೇಳುತ್ತಿದ್ದಾರೆ. ಮೋದಿಯವರ ಕುರ್ಚಿಗೆ ಕಣ್ಣು ಹಾಕಿರುವ ಈ ವ್ಯಕ್ತಿಯ ಪರವಹಿಸಿ ಬಿಜೆಪಿಯ ರಾಜ್ಯಾಧ್ಯಕ್ಷರು, ವಿರೋಧ ಪಕ್ಷದ ನಾಯಕರು ಸೇರಿದಂತೆ ಇಡೀ ಬಿಜೆಪಿ ತಂಡ ಕಲಬುರಗಿಯಲ್ಲಿ ‘ಸದಾರಮೆ ನಾಟಕ’ ಪ್ರದರ್ಶಿಸಿದ್ದರು ಎಂದು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ವ್ಯಂಗ್ಯವಾಡಿದ್ದಾರೆ. ಶುಕ್ರವಾರ ಈ ಸಂಬಂಧ ಎಕ್ಸ್ ನಲ್ಲಿ ಚಿತ್ತಾಪುರ ವಿಧಾನಸಭಾ ಕ್ಷೇತ್ರದ ಪರಾಜಿತ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ್ ಅವರ ವಿಡಿಯೋ ಒಂದನ್ನು ಪೋಸ್ಟ್ ಮಾಡಿರುವ ಅವರು, ಅದೇ ವ್ಯಕ್ತಿ ಈಗ ಹಲವು ಗಂಭೀರ ವಿಷಯಗಳನ್ನು ಪ್ರಸ್ತಾಪಿಸಿದ್ದಾನೆ, ಇದಕ್ಕೆ ರಾಜ್ಯ ಬಿಜೆಪಿ ನಾಯಕರು ಉತ್ತರ ಹೇಳಲೇಬೇಕಾಗಿದೆ. ಶೋಷಿತ ಸಮುದಾಯಗಳ ಮೀಸಲಾತಿ ರದ್ದುಗೊಳಿಸಬೇಕು, ಸಮುದಾಯ ಆಧಾರಿತ ಮೀಸಲಾತಿ ಕೇಳುವವರನ್ನು ಜೈಲಿಗಟ್ಟಬೇಕು ಎಂಬ ಮಾತುಗಳನ್ನು ಆಡಿದ್ದಾನೆ ಎಂದು ತಿಳಿಸಿದ್ದಾರೆ. ಈ ಬಗ್ಗೆ ಬಿಜೆಪಿಯವರು ಮೌನವಹಿಸಿರುವುದೇಕೆ? ಇದು ಬಿಜೆಪಿಯ ಒಳಮನಸಿನ ಮಾತುಗಳೇ? ಈ ಮಾತುಗಳನ್ನು ಬಿಜೆಪಿ ಅನುಮೋದಿಸುತ್ತದೆಯೇ? ಈ ವ್ಯಕ್ತಿಯ ಪರವಹಿಸಿ, ದಂಡೆತ್ತಿ ಬಂದು ‘ದಂಡ'ಯಾತ್ರೆ ಮಾಡಿದ್ದ ಆರ್.ಅಶೋಕ್, ವಿಯೇಂದ್ರ ಹಾಗೂ ಛಲವಾದಿ ನಾರಾಯಣಸ್ವಾಮಿ ಅವರೇ, ಈತನ ಮಾತುಗಳಿಗೆ ನಿಮ್ಮ ಉತ್ತರವೇನು? ಈತನ ಅಭಿಪ್ರಾಯ ನಿಮ್ಮ ಅಭಿಪ್ರಾಯವೂ ಆಗಿದೆಯೇ? ಎಂದು ಪ್ರಶ್ನಿಸಿರುವ ಪ್ರಿಯಾಂಕ್ ಖರ್ಗೆ, ಆರೆಸ್ಸೆಸ್ ಚಿಂತನಾ ಕ್ರಮಗಳಿಂದಲೆ ಇಂತಹ ಮೂರ್ಖತನಗಳು ಸೃಷ್ಟಿಯಾಗುತ್ತಿವೆ ಎಂದು ಟೀಕಿಸಿದ್ದಾರೆ.
113 ಸ್ಥಾನ ಗೆದ್ದರೆ ಎಚ್ಡಿಕೆ ಸಿಎಂ ಆಗಲಿ: ಛಲವಾದಿ ನಾರಾಯಣಸ್ವಾಮಿ
‘‘ರಾಜ್ಯದಲ್ಲಿ ರಾಜಕೀಯ ಅಸ್ಥಿರತೆ ಉಂಟಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವುದೇ ಕಾರಣಕ್ಕೂ ಅಧಿಕಾರ ಬಿಡಲ್ಲ ಎನ್ನುತ್ತಾರೆ. ಡಿಕೆಶಿ ಅಧಿಕಾರ ಕಿತ್ತುಕೊಳ್ಳುತ್ತೇನೆ ಎನ್ನುತ್ತಾರೆ. ಇದು ಒಂದು ರೀತಿ ರಾಜಕೀಯ ಸರ್ಕಸ್,’’ ಎಂದು ಛಲವಾದಿ ನಾರಾಯಣಸ್ವಾಮಿ ಲೇವಡಿ ಮಾಡಿದ್ದಾರೆ.
Kalaburagi | ಫೆ.28 ರಿಂದ ಮಾ.17ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ-1 : ನಿಷೇಧಾಜ್ಞೆ ಜಾರಿ
ಕಲಬುರಗಿ: ಕಲಬುರಗಿ ಜಿಲ್ಲೆಯಾದ್ಯಂತ ಫೆ.28 ರಿಂದ ಮಾ.17ರ ವರೆಗೆ ಕಲಬುರಗಿ ನಗರದಲ್ಲಿ 25 ಸೇರಿ ಒಟ್ಟಾರೆ ಜಿಲ್ಲೆಯಾದ್ಯಂತ 51 ಪರೀಕ್ಷಾ ಕೇಂದ್ರಗಳಲ್ಲಿ ದ್ವಿತೀಯ ಪಿ.ಯು.ಸಿ. ಪರೀಕ್ಷೆ-1 ಜರುಗಲಿದ್ದು, ಪರೀಕ್ಷೆ ಶಾಂತಿಯುತವಾಗಿ ನಡೆಯಲು ಪರೀಕ್ಷೆ ಸಮಯದಲ್ಲಿ ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲಿನ 200 ಮೀಟರ್ ಪ್ರದೆಶವನ್ನು ನಿಷೇಧಿತ ಪ್ರದೇಶವೆಂದು ಘೋಷಿಸಿ ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್ ಅವರು ಆದೇಶ ಹೊರಡಿಸಿದ್ದಾರೆ. ಕಲಬುರಗಿ ನಗರದಲ್ಲಿ 25, ಕಮಲಾಪೂರ-2, ಜೇವರ್ಗಿ-4, ಆಳಂದ-5, ಅಫಜಲಪೂರ-4, ಕಾಳಗಿ-1, ಚಿಂಚೋಳಿ-3, ಚಿತ್ತಾಪುರ-2, ಶಹಾಬಾದ್-3 ಹಾಗೂ ಸೇಡಂ-2 ಸೇರಿ ಒಟ್ಟಾರೆ 51 ಕೇಮದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಠಿಯಿಂದ ಬಿ.ಎನ್.ಎಸ್.ಎಸ್ ಕಾಯ್ದೆ-2023ರ ಕಲಂ 163 ರನ್ವಯ ಜಿಲ್ಲಾ ದಂಡಾಧಿಕಾರಿಗಳಾಗಿರುವ ಜಿಲ್ಲಾಧಿಕಾರಿಗಳು ಆದೇಶ ಮಾಡಿದ್ದಾರೆ. ಪರೀಕ್ಷೆ ನಡೆಯುವ ಸಂದರ್ಭದಲ್ಲಿ ಪರೀಕ್ಷೆ ಕೇಂದ್ರದ 200 ಮೀಟರ್ ಸುತ್ತ ಪ್ರದೇಶದಲ್ಲಿ ಬರುವ ಎಲ್ಲಾ ಜೆರಾಕ್ಸ್ ಅಂಗಡಿಗಳು, ಪುಸ್ತಕ ಅಂಗಡಿಗಳು ಮತ್ತು ಕಂಪ್ಯೂಟರ್ / ಸೈಬರ್ ಅಂಗಡಿಗಳು ಮುಚ್ಚುವಂತೆ ಆದೇಶಿಸಲಾಗಿದೆ. ಇದಲ್ಲದೆ ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರು, ಸಿಬ್ಬಂದಿ ವರ್ಗದವರು ಹೊರತುಪಡಿಸಿ. ಯಾವುದೇ ಬೇರೆ ವ್ಯಕ್ತಿಗಳು ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲಿನ 200 ಮೀಟರ್ ಪ್ರದೇಶದಲ್ಲಿ ಮೊಬೈಲ್ ಫೋನ್, ಪೇಜರ್, ಬ್ಲೂಟೂತ್, ವೈರಲ್ಸ್ ಸೆಟ್ ಗಳು ಹಾಗೂ ಇತ್ಯಾದಿ ಎಲೆಕ್ಟ್ರಾನಿಕ್ ವಸ್ತುಗಳನ್ನು ಉಪಯೋಗಿಸುವುದನ್ನು ಸಹ ಕರ್ನಾಟಕ ಪೊಲೀಸ್ ಅಧಿನಿಯಮ-1963ರ ಕಲಂ-35(ಸಿ) ರಡಿಯಲ್ಲಿ ನಿಷೇಧಿಸಿ ಡಿ.ಸಿ. ಅವರು ಆದೇಶ ಮಾಡಿದ್ದಾರೆ.
Kalaburagi | ಯೋಜನಾ ಸಲಹೆಗಾರರ ನೇಮಕಕ್ಕೆ ಅರ್ಜಿ ಆಹ್ವಾನ
ಕಲಬುರಗಿ : ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಕಲಬುರಗಿ ಕಾರ್ಯಾಲಯದಲ್ಲಿ ಯೋಜನಾ ಸಲಹೆಗಾರರನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಆಸಕ್ತಿಯುಳ್ಳ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಮಂಡಳಿಯ ಉಪ ಕಾರ್ಯದರ್ಶಿಗಳು ತಿಳಿಸಿದ್ದಾರೆ. ಯೋಜನಾ ಸಲಹೆಗಾರರ 1 ಹುದ್ದೆಗೆ ಮಾಸಿಕ 90,000 ರೂ.ಗಳ ಗೌರವಧನ (ಸ್ಟೈಪೆಂಡ್) ನೀಡಲಾಗುವುದು ಹಾಗೂ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕೆಳಕಂಡ ವಿದ್ಯಾರ್ಹತೆಯನ್ನು ಹೊಂದಿರಬೇಕು ಎಂದು ಹೇಳಿದ್ದಾರೆ. ಜಿಲ್ಲಾ ಯೋಜನೆ ಮತ್ತು ಆರ್ಥಿಕ ಅಭಿವೃದ್ಧಿ ವಿಷಯಗಳಲ್ಲಿ ಪಿ.ಎಚ್.ಡಿ ಪಡೆದಿರಬೇಕು, ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಿಸಿ, ನಿವೃತ್ತರಾಗಿರಬೇಕು ಮತ್ತು ಅರ್ಥಶಾಸ್ತ್ರ ವಿಭಾಗದ ವಿಭಾಗ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿರಬೇಕು, ರಾಜ್ಯ ಸರಕಾರದಿಂದ ನೇಮಿಸಿದ ವಿವಿಧ ಆಯೋಗ/ಸಮಿತಿಗಳಲ್ಲಿ ಕಾರ್ಯನಿರ್ವಹಿಸಿದ ಸರಕಾರದ ಸಾಮಾಜಿಕ ಆರ್ಥಿಕ ಅಭಿವೃದ್ಧಿ ಸಮಿತಿಯಲ್ಲಿ ಕಾರ್ಯನಿರ್ವಹಿಸಿದ ಅನುಭವವಿರಬೇಕು, ಯೋಜನಾ ಇಲಾಖೆಯಡಿ ಕನಿಷ್ಟ 5 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿರಬೇಕು. ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಜೊತೆಗೆ ಕಾರ್ಯ ನಿರ್ವಹಿಸಿರುವಂತಂಹ ಅನುಭವವಿರಬೇಕು ಹಾಗೂ ಕಲಬುರಗಿಯಲ್ಲಿ ವಾಸಿಸುತ್ತಿರಬೇಕು ಎಂದು ಹೇಳಿದರು. ಕಲಬುರಗಿ ಹೊರತುಪಡಿಸಿ, ಮಂಡಳಿ ವ್ಯಾಪ್ತಿಯಲ್ಲಿ ಬರುವ ಜಿಲ್ಲೆಗಳಿಗೆ ಹಾಜರಾದಲ್ಲಿ ಗ್ರೂಪ್ “ಎ” ಅಧಿಕಾರಿಗಳಿಗೆ ಅನ್ವಯಿಸುವ ಪ್ರಯಾಣ ಭತ್ಯ ಹಾಗೂ ದಿನಭತ್ಯೆಗಳನ್ನು ಪಾವತಿಸಲಾಗುವುದು. ಮೇಲ್ಕಾಣಿಸಿದ ಅರ್ಹತಾ ಮಾನದಂಡಗಳನ್ನು ಹೊಂದಿದ ಅಭ್ಯರ್ಥಿಗಳು ಅವಶ್ಯಕ ದಾಖಗಳೊಂದಿಗೆ (Resume) ಅನ್ನು ಕಾರ್ಯದರ್ಶಿಗಳು, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಕಲಬುರಗಿ ಕಚೇರಿಯಲ್ಲಿ 2026ರ ಫೆ.16 ರೊಳಗಾಗಿ ಸಲ್ಲಿಸಬೇಕು ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಮಂಡಳಿಯ www.hkrdb.kar.nic.in ವೆಬ್ಸೈಟ್ ವಿಕ್ಷೀಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಾರ್ಖಂಡ್| ಕಾಡಾನೆಗಳ ದಾಳಿಗೆ 1 ವರ್ಷದ ಮಗು ಸಹಿತ 6 ಮಂದಿ ಮೃತ್ಯು
ರಾಂಚಿ, ಫೆ. 14: ಜಾರ್ಖಂಡ್ನಲ್ಲಿ ಕಾಡಾನೆಗಳ ದಾಳಿ ಮುಂದುವರಿದಿದ್ದು, ಹಝಾರಿಬಾಗ್ನ ಚರ್ಚ್ ಬ್ಲಾಕ್ ವ್ಯಾಪ್ತಿಯ ಗೊಂಡ್ವಾರ್ ಗ್ರಾಮದಲ್ಲಿ ಶುಕ್ರವಾರ ಬೆಳಗ್ಗೆ ಆನೆಗಳ ಹಿಂಡು ಮತ್ತೆ ಆರು ಜನರನ್ನು ತುಳಿದು ಹತ್ಯೆ ಮಾಡಿದೆ. ಐದು ಆನೆಗಳ ಗುಂಪು ಮನೆಯ ಗೇಟಿಗೆ ಹಾನಿ ಉಂಟು ಮಾಡಿತು. ಅನಂತರ ಮನೆಯ ಒಳಗೆ ನಿದ್ರಿಸುತ್ತಿದ್ದವರ ಮೇಲೆ ದಾಳಿ ಮಾಡಿತು ಎಂದು ಸ್ಥಳೀಯರು ಹೇಳಿದ್ದಾರೆ. ಆನೆಗಳ ದಾಳಿಯಲ್ಲಿ ಸುಮನಾ ಕುಮಾರಿ (26), ಧನೇಶ್ವರ್ ರಾಮ್ (52), ಸೂರಜ್ ರಾಮ್ (50), ಸವಿತಾ ದೇವಿ (25), ಅನುರಾಗ್ ರಾಮ್ (1) ಹಾಗೂ ಸಂಜನಾ ಕುಮಾರಿ (3 ತಿಂಗಳು) ಮೃತಪಟ್ಟಿದ್ದಾರೆ. ಆನೆಗಳ ದಾಳಿ ನಡೆಯುವ ಸಂದರ್ಭ ಎಲ್ಲರೂ ತಮ್ಮ ಮನೆಯಲ್ಲಿ ಮಲಗಿದ್ದರು ಎಂದು ಅವರು ತಿಳಿಸಿದ್ದಾರೆ. ಸೂರಜ್ ರಾಮ್, ಸವಿತಾ ದೇವಿ, ಅನುರಾಗ್ ರಾಮ್ ಹಾಗೂ ಸಂಜನಾ ಕುಮಾರಿ ಒಂದೇ ಕುಟುಂಬದ ಸದಸ್ಯರು. ಆನೆಗಳು ಈ ಪ್ರದೇಶದಲ್ಲಿ ತಿರುಗಾಡುತ್ತಿದ್ದು, ತಮ್ಮ ಜೀವ ಹಾಗೂ ಸೊತ್ತುಗಳಿಗೆ ಬೆದರಿಕೆಯಾಗಿದೆ ಎಂದು ಗ್ರಾಮಸ್ಥರು ಹೇಳಿದ್ದಾರೆ. ಆನೆಗಳ ದಾಳಿಯಿಂದ ಮೃತಪಟ್ಟವರಿಗೆ ಕೂಡಲೇ ಪರಿಹಾರ ನೀಡುವಂತೆ ಹಾಗೂ ಆನೆಗಳ ದಾಳಿಯನ್ನು ತಡೆಯಲು ಶಾಶ್ವತ ಪರಿಹಾರ ರೂಪಿಸುವಂತೆ ಅವರು ಆಗ್ರಹಿಸಿದ್ದಾರೆ. ಘಟನೆಯನ್ನು ದೃಢಪಡಿಸಿರುವ ಪೂರ್ವ ಅರಣ್ಯ ವಿಭಾಗದ ಡಿಎಫ್ಒ ವಿಕಾಸ್ ಕುಮಾರ್ ಉಜ್ವಲ್, ಆನೆಗಳ ಹಿಂಡು ಆಕ್ರಮಣಕಾರಿಯಾಗಿ ವರ್ತಿಸುತ್ತಿರುವುದರಿಂದ ಟ್ರಾಂಕ್ವಿಲೈಜರ್ ಇಂಜೆಕ್ಷನ್ ಬಳಸಿ ಅವುಗಳನ್ನು ಶಾಂತಗೊಳಿಸಲು ಅನುಮತಿ ಕೋರಲಾಗಿದೆ ಎಂದಿದ್ದಾರೆ.
Kalaburagi | ಫೆ.16ರಂದು ಜಿಲ್ಲಾ ಮಟ್ಟದ ಕ್ರೀಡಾಕೂಟ ಉದ್ಘಾಟನೆ
ಕಲಬುರಗಿ: ಕಲಬುರಗಿ ಸರಕಾರಿ ಕೈಗಾರಿಕೆ ತರಬೇತಿ ಸಂಸ್ಥೆ(ಪುರುಷ) ವತಿಯಿಂದ 2025-26ನೇ ಸಾಲಿನ ಜಿಲ್ಲೆಯ ಸರ್ಕಾರಿ ಮತ್ತು ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆಗಳ ತರಬೇತಿದಾರರಿಗೆ ಜಿಲ್ಲಾ ಮಟ್ಟದ ಕ್ರೀಡಾಕೂಟವನ್ನು ಫೆ.16 ರಂದು ಬೆಳಿಗ್ಗೆ 10 ಗಂಟೆಗೆ ಕಲಬುರಗಿ ನಗರದ ಚಂದ್ರಶೇಖರ ಪಾಟೀಲ್ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್ ಕ್ರೀಡಾಕೂಟ ಉದ್ಘಾಟಿಸಲ್ಲಿದ್ದು, ಮುಖ್ಯ ಅತಿಥಿಗಳಾಗಿ ನಗರ ಪೊಲೀಸ್ ಆಯುಕ್ತ ಡಾ.ಎಸ್.ಡಿ.ಶರಣಪ್ಪ ಆಗಮಿಸುವರು. ಕಲಬುರಗಿ ಸರ್ಕಾರಿ ಕೈಗಾರಿಕೆ ತರಬೇತಿ ಸಂಸ್ಥೆ(ಪು) ಪ್ರಾಚಾರ್ಯ ಮುರಲಿಧರ ರತ್ನಗಿರಿ ಅಧ್ಯಕ್ಷತೆಯಲ್ಲಿ ನಡೆಯುವ ಈ ಕ್ರೀಡಾಕೂಟದಲ್ಲಿ ಕೈಗಾರಿಕೆ ತರಬೇತಿ ಹಾಗೂ ಉದ್ಯೋಗ ಇಲಾಖೆಯ ಕಲಬುರಗಿ ವಿಭಾಗದ ಜಂಟಿ ನಿರ್ದೇಶಕಿ ಮಂಜುಳಾ ಎಸ್., ದಾವಣಗೆರೆಯ ಐ.ಟಿ.ಓ.ಟಿ ಜಂಟಿ ನಿರ್ದೇಶಕ ರವೀಂದ್ರನಾಥ ಬಾಳಿ, ಕಲಬುರಗಿ ಕೆ.ಜಿ.ಟಿ.ಟಿ.ಐ ನಿರ್ದೇಶಕ ರಾಜೇಶ ಬಾವಗಿ, ಆದರ್ಶ ಶಿಕ್ಷಣ ಸಂಸ್ಥೆಯ ಸಂಯೋಜಕ ಬಸವರಾಜ ಯಲ್ಲೇರಿ, ತರಬೇತಿ ಸಂಸ್ಥೆಯ ಆಡಳಿತಾಧಿಕಾರಿ ಮತ್ತು ಸರಕಾರಿ ನೌಕರರ ಸಂಘದ ಹಿರಿಯ ಉಪಾಧಕ್ಷ ಸುರೇಶ ವಗ್ಗೆ, ವಿ.ಇ.ಎಸ್. ಕೈಗಾರಿಕೆ ತರಬೇತಿ ಸಂಸ್ಥೆಯ ಪ್ರಾಚಾರ್ಯ ಶಕೀಲ ಅನ್ಸಾರಿ ಭಾಗವಹಿಸಲಿದ್ದಾರೆ.
ಚಿಂಚೋಳಿ| ಕ್ಷುಲ್ಲಕ ಕಾರಣಕ್ಕೆ ಬಸ್ ಚಾಲಕ, ನಿರ್ವಾಹಕ ಮೇಲೆ ಹಲ್ಲೆ ಆರೋಪ : ಪ್ರಕರಣ ದಾಖಲು
ಚಿಂಚೋಳಿ: ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೋರ್ವ ಕೆಕೆಆರ್ಟಿಸಿ (KKRTC) ಬಸ್ ಚಾಲಕ ಹಾಗೂ ನಿರ್ವಾಹಕರ ಮೇಲೆ ಹಲ್ಲೆ ನಡೆಸಿರುವ ಘಟನೆ ಶುಕ್ರವಾರ ಚಿಂಚೋಳಿ ತಾಲೂಕಿನ ಗಾರಂಪಳ್ಳಿ–ಹುಡದಳ್ಳಿ ನಡುವಿನ ರಸ್ತೆಯಲ್ಲಿ ನಡೆದಿದೆ. ಪ್ರಯಾಣಿಕನೊಂದಿಗೆ ಉಂಟಾದ ವಾಗ್ವಾದವು ಮಾರಾಮಾರಿಗೆ ತಿರುಗಿ, ಬಸ್ ಚಾಲಕ ಹಾಗೂ ನಿರ್ವಾಹಕರ ಮೇಲೆ ಹಲ್ಲೆ ನಡೆದಿದೆ. ಘಟನೆಯಲ್ಲಿ ಚಾಲಕನಿಗೆ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ಚಾಲಕನ ಕಿವಿಗೆ ಪೆಟ್ಟಾಗಿರುವುದರಿಂದ ಚಿಂಚೋಳಿ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ಬೇರೆ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದುಬಂದಿದೆ. ಈ ಕುರಿತು ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಲ್ಲೆ ಸಂಬಂಧಿತ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ತಮಿಳುನಾಡು| ವಿಧಾನಸಭೆ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳುವುದಿಲ್ಲ: ಟಿವಿಕೆ ಮುಖ್ಯಸ್ಥ ವಿಜಯ್ ಸ್ಪಷ್ಟನೆ
ಚೆನ್ನೈ, ಫೆ. 14: ಮುಂಬರುವ ತಮಿಳುನಾಡು ವಿಧಾನ ಸಭೆ ಚುನಾವಣೆಯಲ್ಲಿ ತನ್ನ ಪಕ್ಷ ಸ್ಪರ್ಧಿಸಲಿದೆ ಎಂದು ನಟ, ರಾಜಕಾರಣಿ ಹಾಗೂ ಟಿವಿಕೆಯ ಮುಖ್ಯಸ್ಥ ವಿಜಯ್ ಶುಕ್ರವಾರ ಹೇಳಿದ್ದಾರೆ. ತನ್ನ ಪಕ್ಷ ಸಂಪೂರ್ಣ ಬಹುಮತದೊಂದಿಗೆ ಸರಕಾರ ರಚಿಸಲಿದೆ ಎಂದು ಅವರು ಭರವಸೆ ವ್ಯಕ್ತಪಡಿಸಿದ್ದಾರೆ. ಖಾಸಗಿ ಸುದ್ದಿ ವಾಹಿನಿಯ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ವಿಜಯ್, ಟಿವಿಕೆ ಚುನಾವಣೆಯ ಮೊದಲು ಅಥವಾ ಅನಂತರ ಇಂಡಿಯಾ ಮೈತ್ರಿಕೂಟ ಅಥವಾ ಬಿಜೆಪಿ ನೇತೃತ್ವದ ಎನ್ಡಿಎಯೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದಿದ್ದಾರೆ. ತನ್ನ ರಾಜಕೀಯ ಪ್ರತಿಸ್ಪರ್ಧಿಗಳು ಮತದಾರರಿಗೆ ಹಣ ವಿತರಿಸುವ ಸಾಧ್ಯತೆ ಇದೆ. ಆದರೆ, ಜನರು ಟಿವಿಕೆಯನ್ನು ಬೆಂಬಲಿಸಲಿದ್ದಾರೆ ಎಂದು ತನಗೆ ಭರವಸೆ ಇದೆ ಎಂದು ಹೇಳಿದ್ದಾರೆ. ‘‘ಕೊರೋನಾ ಸಂದರ್ಭದಲ್ಲಿ ನಾನು ರಾಜಕೀಯ ಪ್ರವೇಶಿಸಲು ನಿರ್ಧರಿಸಿದೆ. ಅದು ಸರಿಯಾದ ಸಮಯ ಎಂಬುದು ನನಗೆ ಗೊತ್ತಿತ್ತು’’ ಎಂದು ವಿಜಯ್ ತಿಳಿಸಿದ್ದಾರೆ.
4 ಜನರಿಗೆ ಹೊಸ ಬದುಕು ಕೊಟ್ಟ ಪುಟ್ಟ ಕಂದಮ್ಮ: ವೈದ್ಯಕೀಯ ಇತಿಹಾಸದಲ್ಲೇ ಇದು ದಾಖಲೆ
ಭೂಮಿಯ ಮೇಲೆ ಒಂದು ವರ್ಷವೂ ಪೂರ್ಣವಾಗಿ ಕಳೆಯದ ಪುಟಾಣಿ ಕಂದಮ್ಮ ನಾಲ್ವರಿಗೆ ಹೊಸ ಬದುಕು ಕೊಟ್ಟಿದೆ. ರಸ್ತೆ ಅಪಘಾತದಲ್ಲಿ ಅಲಿನ್ ಶೆರಿನ್ ಎನ್ನುವ ಮಗು ಮೃತಪಟ್ಟಿದ್ದು, ನಾಲ್ವರ ಬಾಳಿನಲ್ಲಿ ಆಶಾಕಿರಣವಾಗಿದೆ. 4 ಜನರಿಗೆ ಹೊಸ ಬದುಕು ಕೊಟ್ಟ ಪುಟ್ಟ ಕಂದಮ್ಮ... ವೈದ್ಯಕೀಯ ಇತಿಹಾಸದಲ್ಲೇ ಇದು ದಾಖಲೆ. ಸಂಕಷ್ಟದ ಸಮಯದಲ್ಲೂ ಮಗುವಿನ ಪೋಷಕರು ತೆಗೆದುಕೊಂಡ ನಿರ್ಧಾರದಿಂದ ಇದು ಸಾಧ್ಯವಾಗಿದೆ.
ವಿರೋಧ ಪಕ್ಷದ ವೈಫಲ್ಯದಿಂದ ಆಡಳಿತ ಪಕ್ಷಕ್ಕೆ ಲಾಭ: ಶಾಸಕ ಯತ್ನಾಳ್
ಕುಂದಾಪುರ, ಫೆ.13: ರಾಜ್ಯದಲ್ಲಿ ವಿರೋಧ ಪಕ್ಷದ ವೈಫಲ್ಯದ ಲಾಭವನ್ನು ಆಡಳಿತ ಪಕ್ಷ ಬಳಸಿಕೊಳ್ಳುತ್ತಿದೆ. ಹೀಗಾಗಿ ರಾಜ್ಯ ಸರಕಾರದ ವಿರುದ್ಧದ ಅಬಕಾರಿ ಹಗರಣದ ಅದರ ಹೋರಾಟ ತಾರ್ಕಿಕ ಅಂತ್ಯ ಕಂಡಿಲ್ಲ. ಅಬಕಾರಿ ಹಗರಣದ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನ್ನೇ ಆಡಿಲ್ಲ ಎಂದು ಬಿಜೆಪಿಯಿಂದ ಉಚ್ಛಾಟಿತ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಬಿಜೆಪಿ ಪಕ್ಷವನ್ನು ಕಟುವಾಗಿ ಟೀಕಿಸಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಕುಂದಾಪುರಕ್ಕೆ ಆಗಮಿಸಿದ ಯತ್ನಾಳ್ ಇಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡುತಿದ್ದರು. ಅಬಕಾರಿ ಇಲಾಖೆಯ ಭ್ರಷ್ಟಾಚಾರವನ್ನು ವಿಪಕ್ಷ ಸರಿಯಾಗಿ ನಿಭಾಯಿಸಿಲ್ಲ ಎಂದವರು ಗಂಭೀರ ಆರೋಪ ಮಾಡಿದರು. ವಿಜಯೇಂದ್ರ ಅವರು ಸರಕಾರದ ವೈಫಲ್ಯವನ್ನು ಎತ್ತಿ ತೋರಿಸುತ್ತಿಲ್ಲ. ವಿಧಾನಸಭೆಯಲ್ಲೂ ಮಾತಾಡೋಲ್ಲ, ಬಹಿರಂಗವಾಗಿಯೂ ಮಾತನಾಡಲ್ಲ. ಸದನದಲ್ಲಿ ಕುಳಿತುಕೊಳ್ಳುತ್ತಿಲ್ಲ, ಚರ್ಚೆಯಲ್ಲೂ ಭಾಗವಹಿಸುತ್ತಿಲ್ಲ ಎಂದು ವಿಜಯೇಂದ್ರ ವಿರುದ್ಧ ಆರೋಪಗಳ ಸುರಿಮಳೆಗೆರೆದರು. ರಾಮ್ಜಿ ಬಗ್ಗೆ ರಾಜ್ಯ ಸರಕಾರ ಜನತೆಯಲ್ಲಿ ಮೂಡಿಸಿದ್ದ ತಪ್ಪು ಅಭಿಪ್ರಾಯವನ್ನು ಬಿಜೆಪಿ ರಾಜ್ಯಾಧ್ಯಕ್ಷರು ಹೋಗಲಾಡಿಸಲು ವಿಫಲರಾಗಿ ದ್ದಾರೆ. ಅವರಿಗೆ ಎಲ್ಲಿ ತಮ್ಮ ಫೈಲ್ಗಳನ್ನು ಹೊರ ತೆಗೆಯುತ್ತಾರೋ ಎಂಬ ಭಯ.ಈ ಭಯದಲ್ಲಿ ಸದನದಿಂದ ಓಡಿಹೋಗಿದ್ದಾರೆ ಎಂದು ಲೇವಡಿ ಮಾಡಿದ ಯತ್ನಾಳ್, ಸದನದಲ್ಲಿ ವಿರೋಧ ಪಕ್ಷದ ನಾಯರೇನೊ ಪ್ರಯತ್ನ ಮಾಡಿದ್ದಾರೆ ಎಂದು ಆಶೋಕರನ್ನು ಹೊಗಳಿದರು. ಅರ್ಥಹೀನ ಅಧಿವೇಶನ: ರಾಜ್ಯ ವಿಧಾನಮಂಡಲದ ಈ ಬಾರಿಯ ಅಧಿವೇಶನವನ್ನು ಅರ್ಥಹೀನ ಅಧಿವೇಶನ ಎಂದು ಟೀಕಿಸಿದ ಯತ್ನಾಳ್, ಇದರಲ್ಲಿ ಜನರ ತೆರಿಗೆ ಹಣವನ್ನು ಹಾಳು ಮಾಡುವ ಕೆಲಸವಾಯಿತು ಎಂದರು. ಇದು ಕೇಂದ್ರ ಸರಕಾರ ಹಾಗೂ ಪ್ರಧಾನಿ ಮೋದಿ ಅವರನ್ನು ಟೀಕಿಸಲು ಕರೆದ ಅಧಿವೇಶನ. ರಾಮ್ಜಿ ಬಗ್ಗೆ ಸರಿಯಾಗಿ ಚರ್ಚೆಯೇ ಆಗಿಲ್ಲ. ಶಾಸಕರ ಸಂಬಳ ಭತ್ಯೆಗಾಗಿ ನಡೆದ ಅಧಿವೇಶನ ಇದಾಗಿದೆ ಎಂದು ಹೇಳಿದರು. ಮಾಜಿ ಸಂಸದ ಅನಂತ್ಕುಮಾರ್ ಹೆಗಡೆ ಅವರು ರಾಜ್ಯ ರಾಜಕಾರಣಕ್ಕೆ ಮರಳುವ ಕುರಿತಂತೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಯತ್ನಾಳ್, ಈ ಬಗ್ಗೆ ಹೆಗಡೆ ಎಲ್ಲೂ ವೈಯಕ್ತಿಕವಾಗಿ ಪ್ರತಿಕ್ರಿಯೆ ಕೊಟ್ಟಿಲ್ಲ. ಯಾವುದೇ ದೃಢವಾದ ಮಾಹಿತಿ ಇಲ್ಲ . ರಾಜ್ಯ ರಾಜಕಾರಣಕ್ಕೆ ಬರಲು ಮನಸ್ಸಿದ್ದರೆ ಅವರೇ ಬಹಿರಂಗ ಪಡಿಸಬೇಕು ಎಂದರು. ಬಿಜೆಪಿಯಲ್ಲಿ ಒಳ್ಳೆಯ ನಾಯಕತ್ವವನ್ನು ಮುಗಿಸಲಾಗುತ್ತದೆ.ತಂದೆ-ಮಕ್ಕಳ ಸಹವಾಸದಿಂದ ಹೀಗೆ ಆಗಿದೆ. ಇಂಥವರಿಗೆ ನಾಯಕತ್ವ ನೀಡಬೇಕೇ ಎಂಬುದನ್ನು ಕೇಂದ್ರ ಸರಕಾರ ನಿರ್ಧರಿಸಬೇಕು.ಇವರದು ಹೊಂದಾಣಿಕೆಯ ರಾಜಕೀಯ ಎಂದು ಮತ್ತೆ ಟೀಕಿಸಿದರು. ಕಾಂಗ್ರೆಸ್ ಶಾಸಕರ ವಿದೇಶ ಪ್ರವಾಸದ ಕುರಿತಂತೆ ಮಾತನಾಡಿದ ಯತ್ನಾಳ್, ವಿದೇಶಕ್ಕೆ ಹೋಗಿ ಅವರು ಅಧ್ಯಯನ ಮಾಡುವುದು ಏನಿದೆ. ಬೇಕಿದ್ದರೆ ಭ್ರಷ್ಟಾಚಾರವನ್ನು ಹೇಗೆ ಕಡಿಮೆ ಮಾಡಬೇಕು ಎಂದು ಅಧ್ಯಯನ ಮಾಡಲಿ ಎಂದು ವ್ಯಂಗ್ಯವಾಡಿದರು. ಅವರು ಅಧ್ಯಯನಕ್ಕೆ ವಿದೇಶಕ್ಕೆ ಹೋಗಿಲ್ಲ, ಶಕ್ತಿಪ್ರದರ್ಶನಕ್ಕೆ ಹೋಗಿದ್ದಾರೆ. ನಮ್ಮ ಬಳಿ ಎಷ್ಟು ಶಾಸಕರ ಒಲವಿದೆ ಎಂದು ತೋರಿಸಲು ಹೋಗಿದ್ದಾರೆ ಎಂದರು. ರಾಜ್ಯ ಸರಕಾರ ಪತನದ ಅಂಚಿಗೆ: ಯತ್ನಾಳ್ ಸಿದ್ಧರಾಮಯ್ಯ ನೇತೃತ್ವದ ಸರಕಾರ ಪತನವಾಗುವ ಹಂತಕ್ಕೆ ಬರುತ್ತೆ.ಡಿ.ಕೆ. ಶಿವಕುಮಾರ್ ಯಾವುದೇ ಪರಿಸ್ಥಿತಿ ಯಲ್ಲಿ ಮುಖ್ಯಮಂತ್ರಿ ಆಗಲು ಹೊರಟಿದ್ದಾರೆ. ಸರಕಾರ ಬಿದ್ದರೂ ತೊಂದರೆ ಇಲ್ಲ ಎಂಬ ಹಂತಕ್ಕೆ ತಲುಪಿದ್ದಾರೆ. ಕಳೆದ ಎರಡು ಮೂರು ದಿನಗಳ ಹೇಳಿಕೆಯಲ್ಲಿ ಇದನ್ನು ಗಟ್ಟಿಯಾಗಿ ಮಾತನಾಡಿದ್ದಾರೆ. ಹೊಸದಿಲ್ಲಿಗೆ ಗಾಳಿ ಬಿಸಿಲು ನೋಡಲು ಬಂದಿಲ್ಲ ಎಂದು ಅವರೇ ಹೇಳಿದ್ದಾರೆ. ಹೀಗಾಗಿ ಶೀಘ್ರವೇ ರಾಜ್ಯ ಸರಕಾರ ಪತನವಾದರೂ ಆಶ್ಚರ್ಯ ಇಲ್ಲ ಎಂದು ಬಸವನಗೌಡ ಯತ್ನಾಳ್ ನುಡಿದರು.
Epstein files| ಹರ್ದೀಪ್ ಸಿಂಗ್ ಪುರಿ ರಾಜೀನಾಮೆ ನೀಡುವಂತೆ ಆಗ್ರಹಿಸಿ ವಿಪಕ್ಷಗಳಿಂದ ಸಂಸತ್ನ ಹೊರಗೆ ಪ್ರತಿಭಟನೆ
ಹೊಸದಿಲ್ಲಿ, ಫೆ. 14: ಅಮೆರಿಕದಲ್ಲಿ ಬಿಡುಗಡೆಯಾದ ‘ಎಪ್ಸ್ಟೀನ್ ಫೈಲ್’ನಲ್ಲಿ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಅವರ ಹೆಸರು ಕಾಣಿಸಿಕೊಂಡ ನಂತರ ಅವರ ರಾಜೀನಾಮೆಗೆ ಆಗ್ರಹಿಸಿ ಕಾಂಗ್ರೆಸ್ ಸಂಸದರು ಸಂಸತ್ ಭವನದ ಸಂಕೀರ್ಣದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು. ಸಂಸತ್ತಿನ ಕಟ್ಟಡದ ಹೊರಗೆ ಸಾಲಾಗಿ ನಿಂತ ಕಾಂಗ್ರೆಸ್ನ ಹಲವು ಸಂಸದರು ಪುರಿ ವಿರುದ್ಧ ಘೋಷಣೆಗಳನ್ನು ಕೂಗಿದರು. ಉತ್ತರಿಸುವಂತೆ ಆಗ್ರಹಿಸಿದರು. ಪುರಿ ಹಾಗೂ ಜೆಫ್ರಿ ಎಪ್ಸ್ಟೀನ್ನ ಭಾವಚಿತ್ರಗಳನ್ನು ಒಳಗೊಂಡ ದೊಡ್ಡ ಬ್ಯಾನರ್ ಅನ್ನು ಕೂಡ ಹಿಡಿದುಕೊಂಡಿದ್ದರು. ತನ್ನ ವಿರುದ್ಧ ‘‘ಪರೋಕ್ಷ ಆರೋಪ’’ ಮಾಡಿರುವುದಕ್ಕೆ ಪುರಿ ಅವರು ಬುಧವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ನಾನು ಅಮೆರಿಕದ ಲೈಂಗಿಕ ಅಪರಾಧಿ ಎಪ್ಸ್ಟೀನ್ನನ್ನು ಕೆಲವು ಬಾರಿ ಭೇಟಿಯಾಗಿದ್ದೇನೆ. ಆದರೆ, ಆತ ನಡೆಸಿದ ಅಪರಾಧಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದರು.
ಹಿಮಾಚಲ ಪ್ರದೇಶ| ಸರಕಾರಿ ಶಾಲೆಯಲ್ಲಿ ಅಡುಗೆ ಸಿಬ್ಬಂದಿಯ ಹತ್ಯೆ
ಶಿಮ್ಲಾ, ಫೆ. 14: ಹಿಮಾಚಲಪ್ರದೇಶದ ಕಾಂಗ್ರಾ ಜಿಲ್ಲೆಯ ಡೆಹ್ರಾದಲ್ಲಿರುವ ಚಿನೌರ್ ಗ್ರಾಮದಲ್ಲಿರುವ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಮಧ್ಯಾಹ್ನದ ಊಟ ತಯಾರಿಸುವ 58 ವರ್ಷದ ಕೆಲಸಗಾರ್ತಿಯನ್ನು ವಿದ್ಯಾರ್ಥಿಗಳ ಎದುರು ಹಾಡ ಹಗಲೇ ಹತ್ಯೆಗೈಯಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ. ಈ ಘಟನೆ ಗುರುವಾರ ಅಪರಾಹ್ನ ನಡೆದಿದ್ದು, ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿ ಶಾಲೆಯ ಆವರಣ ಪ್ರವೇಶಿಸಿ ಚಿನೌರ್ನ ನಿವಾಸಿ ಸಲೋಚನಾ ದೇವಿ ಅವರ ಮೇಲೆ ಕುಡಗೋಲಿನಿಂದ ದಾಳಿ ನಡೆಸಿದ್ದಾನೆ. ಮಕ್ಕಳ ಚೀರಾಟ ಕೇಳಿದ ಶಿಕ್ಷಕರು ತರಗತಿಯಿಂದ ಹೊರಗೆ ಓಡಿ ಬಂದರು. ಅಡುಗೆ ಮಾಡುವ ಪ್ರದೇಶದಲ್ಲಿ ಆರೋಪಿ ರಾಕೇಶ್ ಕುಮಾರ್ (48) ಹರಿತವಾದ ಕುಡುಗೋಲು ಹಿಡಿದುಕೊಂಡು ನಿಂತಿದ್ದ. ಸಲೋಚನಾ ಅವರ ದೇಹ ರಕ್ತದ ಮಡುವಿನಲ್ಲಿ ಬಿದ್ದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳದಿಂದ ತೆರಳುವಂತೆ ಶಿಕ್ಷಕರು ರಾಕೇಶ್ ಕುಮಾರ್ಗೆ ಸೂಚಿಸಿದರು. ಆದರೆ, ಆತ ಅವರಿಗೆ ಬೆದರಿಕೆ ಒಡ್ಡಿದ. ಕೂಡಲೇ ಸಮೀಪದ ಶಾಲೆಯ ಶಿಕ್ಷಕರು ಸ್ಥಳಕ್ಕೆ ಧಾವಿಸಿದರು. ಆತನ ಮೇಲೆ ಕಲ್ಲು ತೂರಾಟ ನಡೆಸಿದರು. ಇದರಿಂದ ಆತ ಹೆದರಿ ಓಡಿ ಹೋದ ಎಂದು ಅವರು ಹೇಳಿದ್ದಾರೆ. ಗಂಭೀರ ಗಾಯಗೊಂಡಿದ್ದ ಸಲೋಚನಾ ಅವರನ್ನು ಕೂಡಲೇ ಸಮೀಪದ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು. ಆದರೆ, ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಘಟನೆಯ ಸುದ್ದಿ ಹರಡಲು ಆರಂಭವಾಗುತ್ತಿದ್ದಂತೆ, ವಿದ್ಯಾರ್ಥಿಗಳ ಹೆತ್ತವರು ಶಾಲೆಗೆ ಆಗಮಿಸಿದರು ಹಾಗೂ ಶಾಲೆಯ ಆವರಣದ ಒಳಗೆ ಹೊರಗಿನವರು ಪ್ರವೇಶಿಸುವುದನ್ನು ನಿರ್ಬಂಧಿಸಬೇಕು ಎಂದು ಆಗ್ರಹಿಸಿದರು. ಈ ನಡುವೆ ಹತ್ಯೆ ಪ್ರಕರಣ ದಾಖಲಿಸಲಾಗಿದೆ ಹಾಗೂ ಅದೇ ಗ್ರಾಮದ ನಿವಾಸಿಯಾಗಿರುವ ಆರೋಪಿ ರಾಕೇಶ್ ಕುಮಾರ್ನನ್ನು ಬಂಧಿಸಲಾಗಿದೆ. ಈ ಬರ್ಬರ ಕೃತ್ಯದ ಹಿಂದಿನ ಕಾರಣ ಏನು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Kalaburagi | ಅಸಂಘಟಿತ ಕಾರ್ಮಿಕರಿಗೆ ಪಿಂಚಣಿ ಯೋಜನೆ: ಮಾ.15ರವರೆಗೆ ವಿಶೇಷ ನೋಂದಣಿ ಅಭಿಯಾನ : ಅವಿನಾಶ ಶಿಂಧೆ
ಕಲಬುರಗಿ: ಅಸಂಘಟಿತ ವಲಯದ ಕಾರ್ಮಿಕರಿಗೆ ವಯೋವೃದ್ಧ ಅವಧಿಯಲ್ಲಿ ಸಾಮಾಜಿಕ ಭದ್ರತೆ ಒದಗಿಸಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್-ಧನ್ ಯೋಜನೆಯಡಿ ಮಾರ್ಚ್ 15ರವರೆಗೆ ವಿಶೇಷ ನೋಂದಣಿ ಅಭಿಯಾನ ನಡೆಯುತ್ತಿದೆ ಎಂದು ಕಲಬುರಗಿ ಮಹಾನಗರ ಪಾಲಿಕೆಯ ಆಯುಕ್ತ ಅವಿನಾಶ ಶಿಂಧೆ ತಿಳಿಸಿದ್ದಾರೆ. ಈ ಯೋಜನೆ ಎನ್ಪಿಎಸ್ (NPS) ಮಾದರಿಯ ವಂತಿಗೆ ಆಧಾರಿತ ಪಿಂಚಣಿ ಯೋಜನೆಯಾಗಿದ್ದು, ಕೇಂದ್ರ ಸರ್ಕಾರ ಗುರುತಿಸಿರುವ ಸುಮಾರು 170 ವರ್ಗಗಳ ಅಸಂಘಟಿತ ಕಾರ್ಮಿಕರಿಗೆ ಹೆಸರು ನೋಂದಾಯಿಸಲು ಅವಕಾಶವಿದೆ. 18ರಿಂದ 40 ವರ್ಷ ವಯಸ್ಸಿನ ಕಾರ್ಮಿಕರು, ಇಪಿಎಫ್ಒ (EPFO) ಮತ್ತು ಇಎಸ್ಐಸಿ (ESIC) ಸದಸ್ಯರಾಗಿರಬಾರದು. ಜೊತೆಗೆ ಆದಾಯ ತೆರಿಗೆ ಪಾವತಿಸುವವರಾಗಿರಬಾರದು. ಇಂತಹ ಅರ್ಹ ಅಸಂಘಟಿತ ಕಾರ್ಮಿಕರು ಯೋಜನೆಗೆ ನೋಂದಣಿ ಮಾಡಿಕೊಳ್ಳಬಹುದು. ನೋಂದಣಿಗಾಗಿ ಆರಂಭಿಕ ವಂತಿಗೆ ಮೊತ್ತ, ಆಧಾರ್ ಕಾರ್ಡ್, ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆಯ ಪಾಸ್ಬುಕ್, ಸಕ್ರಿಯ ಮೊಬೈಲ್ ಸಂಖ್ಯೆ ಮತ್ತು ನಾಮನಿರ್ದೇಶಿತರ ವಿವರಗಳೊಂದಿಗೆ ಕಾಮನ್ ಸರ್ವಿಸ್ ಸೆಂಟರ್ಗೆ (CSC) ಭೇಟಿ ನೀಡಬೇಕು. ನಂತರ ಮಾಸಿಕ ವಂತಿಗೆ ಬ್ಯಾಂಕ್ ಖಾತೆಯಿಂದ ಆಟೋ-ಡೆಬಿಟ್ ಮೂಲಕ ಕಡಿತಗೊಳ್ಳುತ್ತದೆ. ಫಲಾನುಭವಿಯು 60 ವರ್ಷ ವಯಸ್ಸು ಪೂರ್ಣಗೊಳಿಸಿದ ಬಳಿಕ ತಿಂಗಳಿಗೆ ರೂ. 3,000 ಖಚಿತ ಪಿಂಚಣಿ ಪಡೆಯಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಾರ್ಮಿಕ ಇಲಾಖೆ, ಇಪಿಎಫ್ಒ, ಇಎಸ್ಐಸಿ, ಎಲ್ಐಸಿ ಕಚೇರಿಗಳನ್ನು ಸಂಪರ್ಕಿಸಬಹುದಾಗಿದೆ. ಹಾಗೆಯೇ http://locator.crccloud.in ವೆಬ್ಸೈಟ್ ಮೂಲಕವೂ ಮಾಹಿತಿ ಪಡೆಯಬಹುದು.
DHO ವರ್ಗಾವಣೆ: ನಕಲಿ ಪತ್ರ ಹಂಚುತೀರಲ್ಲ ನಿಮಗೆ ಕನಿಷ್ಠ ಜ್ಞಾನವೂ ಇಲ್ಲವೇ? BJP ನಾಯಕರ ವಿರುದ್ಧ ಆರೋಗ್ಯ ಸಚಿವ ಗರಂ
ಮಂಡ್ಯ ಜಿಲ್ಲಾಧಿಕಾರಿಗಳ ವರ್ಗಾವಣೆಯ ನಕಲಿ ಪತ್ರ ರಾಜಕೀಯವಾಗಿ ಭಾರೀ ಸದ್ದು ಮಾಡುತ್ತಿದೆ. ನಕಲಿ ಪತ್ರ ಹಂಚುತೀರಲ್ಲ ನಿಮಗೆ ಕನಿಷ್ಠ ಜ್ಞಾನವೂ ಇಲ್ಲವೇ? ಎಂದು BJP ನಾಯಕರ ವಿರುದ್ಧ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಗರಂ ಆಗಿದ್ದಾರೆ. ಶಾಸಕ ಸುನೀಲ್ ಕುಮಾರ್ ಅವರಿಗೆ ಸಾಲು ಸಾಲು ಪ್ರಶ್ನೆಗಳನ್ನು ಸಚಿವರು ಮಾಡಿದ್ದಾರೆ.
ಆರೋಗ್ಯಾಧಿಕಾರಿ, ಅಬಕಾರಿ ಇಲಾಖೆಗೆ ನಿಯೋಜನೆ ಸಂಬಂಧ ಸಿಎಂ ಹೆಸರಿನಲ್ಲಿ ಪತ್ರ ವೈರಲ್: ಪೊಲೀಸರಿಗೆ ದೂರು
ಬೆಂಗಳೂರು: ಮಂಡ್ಯ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ. ಮೋಹನ್ ಅವರನ್ನು ಮೈಸೂರು ಅಬಕಾರಿ ಇಲಾಖೆ ಉಪ ಆಯುಕ್ತರನ್ನಾಗಿ ನಿಯೋಜಿಸುವ ಸಂಬಂಧದ ಸಿಎಂ ಹೆಸರಿನಲ್ಲಿ ಪತ್ರವೊಂದು ಜಾಲತಾಣದಲ್ಲಿ ವೈರಲ್ ಆಗಿದೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರನ್ನು ಪತ್ತೆ ಹಚ್ಚಿ ಸದರಿಯವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕೆಂದು ವಿಧಾನಸೌಧ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಶುಕ್ರವಾರ ಈ ಸಂಬಂಧ ಸಿಎಂ ಜಂಟಿ ಕಾರ್ಯದರ್ಶಿ ಅರುಣ್ ಪುರ್ಟಾಡೋ ದೂರು ನೀಡಿದ್ದು, ‘ಅಧಿಕೃತ ಸಂಖ್ಯೆ ಮತ್ತು ದಿನಾಂಕವಿಲ್ಲದ ಈ ಟಿಪ್ಪಣಿಯು ಸಿಎಂ ಸಚಿವಾಲಯದಲ್ಲಿ ಇ-ತಂತ್ರಾಂಶದಲ್ಲಿ ನೊಂದಾಯಿಸಿರುವುದಿಲ್ಲ. ಟಿಪ್ಪಣಿಯನ್ನು ಯಾವುದೇ ಇಲಾಖೆಗೆ ರವಾನಿಸಿರುವುದಿಲ್ಲ. ಅಲ್ಲದೆ, ಯಾವುದೇ ವರ್ಗಾವಣೆ/ನಿಯೋಜನೆ ಆದೇಶ ಹೊರಡಿಸಿರುವುದಿಲ್ಲ. ಆದಾಗ್ಯೂ ಸಿಎಂ ಹಾಗೂ ಸರಕಾರಕ್ಕೆ ಕೆಟ್ಟ ಹೆಸರನ್ನು ತರುವ ದುರುದ್ದೇಶದಿಂದ ಈ ಕೃತ್ಯವನ್ನು ಎಸಗಿದ್ದು, ತಪ್ಪಿತಸ್ಥರನ್ನು ಪತ್ತೆ ಮಾಡಬೇಕೆಂದು ಕೋರಿದ್ದಾರೆ. ಕಮಿಷನ್ ದಂಧೆಗೆ ಕನ್ನಡಿ: ಆರ್.ಅಶೋಕ್ ‘ವರ್ಗಾವಣೆಗೆ ಸಂಬಂಧಿಸಿದ ನಿಯಮಗಳನ್ನು ಗಾಳಿಗೆ ತೂರಿ, ಸ್ವತಃ ಸಿಎಂ ಅವರೇ ಆರೋಗ್ಯಾಧಿಕಾರಿಯನ್ನು ಅಬಕಾರಿ ಡಿಸಿಯಾಗಿ ನಿಯೋಜಿಸುವಂತೆ ಪತ್ರ ಬರೆದು ನಿರ್ದೇಶನ ನೀಡಿರುವುದು ಈ ಸರಕಾರದಲ್ಲಿ ನಡೆಯುತ್ತಿರುವ ವರ್ಗಾವಣೆ ದಂಧೆ, ಅಬಕಾರಿ ಇಲಾಖೆಯ ಕಮಿಷನ್ ದಂಧೆಗೆ ಕನ್ನಡಿ ಹಿಡಿದಿದೆ. ಅದರಲ್ಲೂ ಸಿಎಂ ಅವರೇ ಶಿಫಾರಸ್ಸು ಮಾಡಿದ್ದು, ವರ್ಗಾವಣೆ ಮಾಡಿರುವ ಅಧಿಕಾರಿ ಡಾ.ಮೋಹನ್ ಕೃಷಿ ಸಚಿವ ಚಲುವರಾಯಸ್ವಾಮಿ ಸಂಬಂಧಿ ಎನ್ನುವ ಮಾಹಿತಿ ಇದೆ. ಏನು ನಡೆಯುತ್ತಿದೆ ಸ್ವಾಮಿ ನಿಮ್ಮ ಸರಕಾರದಲ್ಲಿ? ಇದೇನು ಸರಕಾರವೋ? ಅಥವಾ ತುಘಲಕ್ ದರ್ಬಾರೋ? ಎಂದು ವಿಪಕ್ಷ ನಾಯಕ ಆರ್.ಅಶೋಕ್ ಪ್ರಶ್ನಿಸಿದ್ದಾರೆ.
ವಾಡಿ | ಫೆ.15ರಂದು ಶ್ರೀ ಸೇವಾಲಾಲ್ ಜಯಂತಿ
ವಾಡಿ: ಫೆಬ್ರವರಿ 15ರಂದು ಬಂಜಾರಾ (ಲಂಬಾಣಿ) ಸೇವಾ ಸಂಘದ ವತಿಯಿಂದ ಪಟ್ಟಣದಲ್ಲಿ ಸಂತ ಸಂತ ಶ್ರೀ ಸೇವಾಲಾಲ್ ಮಹಾರಾಜ ಅವರ 287ನೇ ಜಯಂತಿ ಸಮಾರಂಭ ಹಾಗೂ ಸರ್ವಧರ್ಮ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ಪೋಮಾ ರಾಠೋಡ ಹಾಗೂ ಬಂಜಾರಾ ಸಮಾಜದ ಅಧ್ಯಕ್ಷ ರಮೇಶ್ ಕಾರಬಾರಿ ತಿಳಿಸಿದ್ದಾರೆ. ಜಂಟಿ ಪತ್ರಿಕಾ ಹೇಳಿಕೆಯಲ್ಲಿ, ಬಂಜಾರಾ ಸಮಾಜದ ಯುವ ಪ್ರತಿಭೆ, ಕಿರುತೆರೆಯ ಸರಿಗಮಪ ಕನ್ನಡ ಸೀಸನ್ 15ರ ರನ್ನರ್ ಅಪ್ ಹಾಗೂ ಬಿಗ್ ಬಾಸ್ ಕನ್ನಡ ವಿಜೇತ ಗಾಯಕ ಹಣಮಂತ ಲಮಾಣಿ ಅವರನ್ನು ವಿಶೇಷ ಅತಿಥಿಯಾಗಿ ಆಹ್ವಾನಿಸಲಾಗಿದೆ ಎಂದು ತಿಳಿಸಿದರು. ಕರ್ನಾಟಕದಲ್ಲಿ ಮೊದಲ ಬಾರಿಗೆ ಸೇವಾಲಾಲ್ ಮಹಾರಾಜರ ಜಯಂತಿಯನ್ನು ಆಚರಿಸಿದ ಕೀರ್ತಿ ವಾಡಿ ಬಂಜಾರಾ ಸಮಾಜಕ್ಕೆ ಸಲ್ಲುತ್ತದೆ. ಈ ವರ್ಷ ಜಯಂತಿ ಸಂಭ್ರಮಕ್ಕೆ 25 ವರ್ಷಗಳು ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಫೆ.14ರಂದು ಬೆಳಗ್ಗೆ 11:30ಕ್ಕೆ ಸಮುದಾಯದ ಗುರುಗಳ ಸಮ್ಮುಖದಲ್ಲಿ ತಾಯಿ ಮರಿಯಮ್ಮ ದೇವಿ ಹಾಗೂ ಸೇವಾಲಾಲ್ ಮಹಾರಾಜರ ಪಲ್ಲಕ್ಕಿ ಉತ್ಸವ ನಡೆಯಲಿದೆ. ಫೆ.15ರಂದು ಬೆಳಗ್ಗೆ 8 ಗಂಟೆಗೆ ಭೋಗ ಪೂಜೆ, 8:30ಕ್ಕೆ ಬೈಕ್ ರ್ಯಾಲಿ, 10:30ಕ್ಕೆ ಸೇವಾಲಾಲ್ ಮಹಾರಾಜರ ಭವ್ಯ ಭಾವಚಿತ್ರ ಮೆರವಣಿಗೆ 84 ತಾಂಡಾಗಳ ಸಾವಿರಾರು ಜನರ ಸಹಭಾಗಿತ್ವದಲ್ಲಿ ಅದ್ದೂರಿಯಾಗಿ ನಡೆಯಲಿದೆ. ಈ ವೇಳೆ ಲಂಬಾಣಿ ಯುವತಿಯರಿಂದ ಸಾಂಪ್ರದಾಯಿಕ ನೃತ್ಯ ಪ್ರದರ್ಶನವೂ ಜರುಗಲಿದೆ ಎಂದು ತಿಳಿಸಿದರು. ಮಧ್ಯಾಹ್ನ 1:30ಕ್ಕೆ ನಡೆಯುವ ಸರ್ವಧರ್ಮ ಸಮ್ಮೇಳನವನ್ನು ಪೌರಾಘಡ ಸೇವಾಲಾಲ್ ಪೀಠದ ಸದ್ಗುರು ಶ್ರೀಬಾಬುಸಿಂಗ್ ಮಹಾರಾಜ್ ಉದ್ಘಾಟಿಸಲಿದ್ದಾರೆ. ಪಂಚಾಯತ್ ರಾಜ್ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ, ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ, ಮಾಜಿ ಸಂಸದ ಡಾ. ಉಮೇಶ ಜಾಧವ್, ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸೈಯದ್ ಮಹಮೂದ್ ಸಾಹೇಬ್, ಬಿಜೆಪಿ ಮುಖಂಡ ಮಣಿಕಂಠ ರಾಠೋಡ ಸೇರಿದಂತೆ ಹಲವು ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಮುಗುಳನಾಗಾಂವ ಯಲ್ಲಾಲಿಂಗ ಪುಣ್ಯಶ್ರಮದ ಶ್ರೀ ಜೇಮಸಿಂಗ್ ಮಹಾರಾಜ್, ಗೊಬ್ಬರ ಮಠದ ಶ್ರೀ ಬಳಿರಾಮ ಮಹಾರಾಜ, ಚಿತ್ತಾಪುರ ಕಂಬಳೇಶ್ವರ ಮಠದ ಶ್ರೀ ಸೋಮಶೇಖರ ಶಿವಾಚಾರ್ಯ, ನಾಲವಾರ ಮಠದ ಶ್ರೀ ತೋಟೇಂದ್ರ ಸ್ವಾಮೀಜಿ, ಹಲಕರಟಿ ಮಠದ ಶ್ರೀ ಮುನೀಂದ್ರ ಶಿವಾಚಾರ್ಯ, ರಾವೂರ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ, ಹಲಕರಟಿ ಸಿದ್ದೇಶ್ವರ ಮಠದ ಶ್ರೀ ರಾಜಶೇಖರ ಸ್ವಾಮೀಜಿ, ಹಲಕರಟಿ ಖದೀರ್ ದರ್ಗಾ ಶರೀಫ್ ಅಬುತುರಾಬ್ ಶಹಾ ಖಾದ್ರಿ, ಅಳ್ಕೊಳ್ಳಿ ಸಾವಿರ ದೇವರ ಮಠದ ಶ್ರೀ ಸಂಗಮನಾಥ ದೇವರು, ದೇವಾಪುರ ಪೀಠದ ಮಾತಾ ಸರಸ್ವತಿ, ವಾಡಿ ಮೆಥೋಡಿಸ್ಟ್ ಚರ್ಚ್ ಫಾದರ್ ಸುಧೀರ ರವಿಕುಮಾರ, ಶ್ರೀ ಠಾಕೂರ ಮಹಾರಾಜ ಸೇರಿದಂತೆ ವಿವಿಧ ಮಠಾಧೀಶರು ಸಾನ್ನಿಧ್ಯ ವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಆದಾಯ ತೆರಿಗೆ ಮರುಪಾವತಿ ಪ್ರಕ್ರಿಯೆಗೆ ಸೂಪರ್ ವೇಗ: ನಿಮ್ಮ ರಿಫಂಡ್ ಸ್ಟೇಟಸ್ ಆನ್ ಲೈನ್ ನಲ್ಲಿ ಚೆಕ್ ಮಾಡುವುದು ಹೇಗೆ?
Income Tax Refund Process- ಕಳೆದ ವರ್ಷ ಸರಿಯಾದ ಸಮಯಕ್ಕೇ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಿದ್ದರೂ ಈವರೆಗೂ ನಿಮಗೆ ರಿಫಂಡ್ ಆಗಿಲ್ಲವೇ? ಚಿಂತಿಸಬೇಡಿ ಆದಾಯ ಇಲಾಖೆ ಇದೀಗ ತೆರಿಗೆ ಮರುಪಾವತಿ ಪ್ರಕ್ರಿಯೆಯನ್ನು ತ್ವರಿತವಾಗಿ ನಡೆಸುತ್ತಿದ್ದು ಕಳೆದ 24 ಗಂಟೆಯಲ್ಲಿ ಬಹುತೇಕ ಮಂದಿಯ ಖಾತೆಗೆ ಮೊತ್ತ ಜಮೆ ಆಗಿದೆ. ಹಂತಹಂತವಾಗಿ ಮರುಪಾವತಿ ಪ್ರಕ್ರಿಯೆ ಜಾರಿಯಲ್ಲಿರುವುದರಿಂದ ಯಾರೂ ಆತಂಕಕ್ಕೀಡಾಗುವ ಅಗತ್ಯವಿಲ್ಲ. ನಿಮ್ಮ ಮರುಪಾವತಿ ಸ್ಟೇಟಸ್ ಆನ ಲೈನ ನಲ್ಲಿಯೇ ಪರಿಶೀಲಿಸಬಹುದು. ಈ ಬಗ್ಗೆ ಇಲ್ಲಿದೆ ಮಾಹಿತಿ.
ಬೀದಿಬದಿ ವ್ಯಾಪಾರಸ್ಥರ ಸಂಘ ಉಳ್ಳಾಲ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ
ಉಳ್ಳಾಲ: ದೇಶದಲ್ಲಿ ಬೀದಿಬದಿ ವ್ಯಾಪಾರಿಗಳಿಗಾಗಿ ಮಾಡಿರುವ ಕಾನೂನು,ನಿಯಮಮಾವಳಿಗಳು ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿದೆ. ಬಡ ಬೀದಿಬದಿ ವ್ಯಾಪಾರಿಗಳ ಮೇಲಿನ ಬುಲ್ಡೋಜರ್ ದಾಳಿಯು ಸರಕಾರಕ್ಕೆ ಶೋಭೆ ತರುವುದಿಲ್ಲ. ಅತ್ಯಂತ ಭ್ರಷ್ಟವಾಗಿರುವ ಲೋಕೋಪಯೋಗಿ ಮತ್ತು ಹೆದ್ದಾರಿ ಇಲಾಖೆಗಳ ದಬ್ಬಾಳಿಕೆ ಎದುರಿಸಲು ಬೀದಿಬದಿ ವ್ಯಾಪಾರಿಗಳು ಸಿದ್ಧರಾಗಿದ್ದಾರೆಂದು ದ.ಕ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘದ ಗೌರವಾಧ್ಯಕ್ಷ ಬಿ.ಕೆ ಇಮ್ತಿಯಾಝ್ ಹೇಳಿದರು. ಲೋಕೋಪಯೋಗಿ ಇಲಾಖೆಯವರು ತೊಕ್ಕೊಟ್ಟುವಿನಿಂದ ನಾಟೆಕಲ್ ವರೆಗಿನ ಬೀದಿಬದಿ ವ್ಯಾಪಾರಿಗಳ ವಿರುದ್ಧ ಬುಲ್ಡೋಜರ್ ಕಾರ್ಯಾಚರಣೆ ನಡೆಸಿರುವುದನ್ನು ಖಂಡಿಸಿ ದ.ಕ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘದ ಉಳ್ಳಾಲ ತಾಲೂಕು ಸಮಿತಿ (ಸಿಐಟಿಯು) ನೇತೃತ್ವದಲ್ಲಿ ತೊಕ್ಕೊಟ್ಟು ಜಂಕ್ಷನ್ ನಲ್ಲಿ ಶುಕ್ರವಾರ ನಡೆದ ಪ್ರತಿಭಟನೆಯನ್ನು ದ್ಧೇಶಿಸಿ ಅವರು ಮಾತನಾಡಿದರು. ಸ್ಥಳೀಯಾಡಳಿತಗಳು ಬೀದಿಬದಿ ವ್ಯಾಪಾರಿಗಳ ಸಮೀಕ್ಷೆ ನಡೆಸದೆ ಅವರ ಕಾನೂನು ಬದ್ಧ ಹಕ್ಕನ್ನು ನಿರಾಕರಿಸಿರು ವುದೇ ಈ ರೀತಿಯ ಬುಲ್ಡೋಜರ್ ದಾಳಿಗಳಿಗೆ ಕಾರಣ ಎಂದು ಆರೋಪಿಸಿದರು. ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಮಾತನಾಡಿ ಬೀದಿಬದಿ ವ್ಯಾಪಾರಿಗಳು ಆರ್ಥಿಕವಾಗಿ ದುರ್ಬಲರಾಗಿದ್ದು ಕೌಶಲ್ಯ ಮತ್ತು ಶಿಕ್ಷಣದಿಂದ ವಂಚಿತರಾದವರಾಗಿದ್ದಾರೆ. ಅಂತಹ ದುರ್ಬಲರ ಮೇಲೆ ಬುಲ್ಡೋಜರ್ ಪ್ರಯೋಗಿಸಿ ಅವರ ಬದುಕನ್ನು ನಾಶ ಮಾಡಲು ಹೊರಟಿರುವುದು ಖೇದಕರ.ಬಡವರ ವಿರುದ್ಧ ನಡೆಸಿರುವ ಇಂತಹ ಕಾರ್ಯಾಚರಣೆಗಳು ಸರಕಾರದ ಸಾಧನೆಯೇ ಎಂದು ಪ್ರಶ್ನಿಸಿದರು. ಹಿರಿಯ ರೈತ ನಾಯಕ ಕೃಷ್ಣಪ್ಪ ಸಾಲಿಯಾನ್,ಡಿವೈಎಫ್ಐ ತಾಲೂಕು ಕಾರ್ಯದರ್ಶಿ ರಿಜ್ವಾನ್ ಹರೇಕಳ,ಸಂಘದ ಅಧ್ಯಕ್ಷ ಮುಝಾಫರ್ ಅಹ್ಮದ್, ಪ್ರಮುಖರಾದ ಶೇಖರ್ ಕುಂದರ್, ಸಿಐಟಿಯು ಜಿಲ್ಲಾ ಮುಖಂಡ ಸುಂದರ ಕುಂಪಲ, ಪ್ರಮೋದಿನಿ ಕಲ್ಲಾಪು, ಅಬ್ದುಲ್ ಖಾದರ್ ವಾಮಂಜೂರು, ಸಿಕಂದರ್ ಬೇಗ್, ವಿನಾಯಕ್ ಶೆಣೈ, ಹರೀಶ್ ಕೆರೆಬೈಲ್ ಮತ್ತಿತರರು ಉಪಸ್ಥಿತರಿದ್ದರು. ಸಂಘದ ಪ್ರ.ಕಾರ್ಯದರ್ಶಿ ಸಂತೋಷ್ ಆರ್.ಎಸ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ತೊಕ್ಕೊಟ್ಟು, ಕುತ್ತಾರು, ದೇರಳಕಟ್ಟೆ, ನಾಟೆಕಲ್, ಕೋಟೆಕಾರ್, ತಲಪಾಡಿ ಭಾಗದ ಹಲವಾರು ಬೀದಿಬದಿ ವ್ಯಾಪಾರಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
Bidar | ಆಮ್ ಆದ್ಮಿ ಪಕ್ಷದ ಪದಾಧಿಕಾರಿಗಳ ನೇಮಕ
ಬೀದರ್ : ಆಮ್ ಆದ್ಮಿ ಪಕ್ಷ ಕರ್ನಾಟಕ ಘಟಕದ ವತಿಯಿಂದ ಬೀದರ್ ಜಿಲ್ಲೆಯಲ್ಲಿ ಹೊಸ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಡಿ.ಜಾವಿದ್ ಹಾಗೂ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದಪ್ಪ ಫೂಲಾರಿ ಅವರು ಪ್ರಕಟಣೆ ಮೂಲಕ ತಿಳಿಸಿದ್ದಾರೆ. ಜಿಲ್ಲಾ ಯುವ ಘಟಕ ಅಧ್ಯಕ್ಷರಾಗಿ ಜಗನ್ನಾಥ್ ಹೂಗಾರ್ ಹಾಗೂ ಜಿಲ್ಲಾ ಉಪಾಧ್ಯಕ್ಷರಾಗಿ ರಾಜಕುಮಾರ್ ಪಾಟೀಲ್ ಬಾವಗಿ ಅವರನ್ನು ನೇಮಕ ಮಾಡಲಾಗಿದೆ. ಪಕ್ಷದ ಬೆಳವಣಿಗೆ ಹಾಗೂ ಸಂಘಟನಾತ್ಮಕ ಬಲವರ್ಧನೆಗಾಗಿ ಇವರನ್ನು ಆಯ್ಕೆ ಮಾಡಲಾಗಿದ್ದು, ಹೊಸದಾಗಿ ಆಯ್ಕೆಯಾದ ಪದಾಧಿಕಾರಿಗಳು ತಕ್ಷಣದಿಂದಲೇ ತಮ್ಮ ಕಾರ್ಯಭಾರವನ್ನು ಸ್ವೀಕರಿಸಿ ಪಕ್ಷದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಸೇವಾಭಾವದಿಂದ ಕಾರ್ಯ ನಿರ್ವಹಿಸಬೇಕು ಎಂದು ತಿಳಿಸಲಾಗಿದೆ. ಈ ಕುರಿತು ಪ್ರಕಟಣೆ ನೀಡಿರುವ ಪ್ರಧಾನ ಕಾರ್ಯದರ್ಶಿ ಎಂ.ಡಿ.ಜಾವಿದ್ ಹಾಗೂ ಜಿಲ್ಲಾ ಘಟಕ ಅಧ್ಯಕ್ಷ ಸಿದ್ದಪ್ಪ ಫೂಲಾರಿ ಅವರು, ಪಕ್ಷದ ಉನ್ನತ ಮಟ್ಟದ ಕಾರ್ಯಚಟುವಟಿಕೆಗಳಿಗೆ ಹೊಸ ಪದಾಧಿಕಾರಿಗಳಿಂದ ಹೆಚ್ಚಿನ ಸಹಕಾರ ದೊರೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಟಿ-20 ವಿಶ್ವಕಪ್| ಐರ್ಲ್ಯಾಂಡ್ ನಾಯಕ ಪೌಲ್ ಸ್ಟಿರ್ಲಿಂಗ್ ಪಂದ್ಯಾವಳಿಯಿಂದ ಔಟ್
ಚೆನ್ನೈ, ಫೆ.13: ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಐರ್ಲ್ಯಾಂಡ್ ಕ್ರಿಕೆಟ್ ತಂಡದ ನಾಯಕ ಪೌಲ್ ಸ್ಟಿರ್ಲಿಂಗ್ ಈಗ ನಡೆಯುತ್ತಿರುವ ಐಸಿಸಿ ಟಿ-20 ವಿಶ್ವಕಪ್ ಪಂದ್ಯಾವಳಿಯಿಂದ ಹೊರಗುಳಿದಿದ್ದಾರೆ. ಐರ್ಲ್ಯಾಂಡ್ ತಂಡಕ್ಕೆ ಸ್ಟಿರ್ಲಿಂಗ್ ಬದಲಿಗೆ ಸ್ಯಾಮ್ ಟೋಪ್ಪಿಂಗ್ರನ್ನು ಸೇರ್ಪಡೆಗೊಳಿಸಲು 2026ರ ಅವೃತ್ತಿಯ ಟಿ-20 ವಿಶ್ವಕಪ್ ಟೂರ್ನಿಯ ಈವೆಂಟ್ ಟೆಕ್ನಿಕಲ್ ಕಮಿಟಿ ಶುಕ್ರವಾರ ಅನುಮೋದನೆ ನೀಡಿದೆ. ಆಸ್ಟ್ರೇಲಿಯ ತಂಡದ ವಿರುದ್ಧ ಬುಧವಾರ ನಡೆದ ವಿಶ್ವಕಪ್ ಪಂದ್ಯದ ವೇಳೆ ಫೀಲ್ಡಿಂಗ್ ಮಾಡುತ್ತಿದ್ದಾಗ ಸ್ಟಿರ್ಲಿಂಗ್ ಮೊಣಕಾಲು ನೋವಿಗೆ ಒಳಗಾಗಿದ್ದರು. ಅದೇ ಪಂದ್ಯದಲ್ಲಿ ಬ್ಯಾಟಿಂಗ್ ವೇಳೆ ಕ್ಷಿಪ್ರವಾಗಿ ಒಂದು ರನ್ ಗಳಿಸುವ ಧಾವಂತದಲ್ಲಿದ್ದಾಗ ನೋವು ಉಲ್ಬಣಗೊಂಡಿತ್ತು. ಹೊಸ ಆಟಗಾರ ಟೋಪ್ಪಿಂಗ್ 15 ಸದಸ್ಯರನ್ನು ಒಳಗೊಂಡ ಐರ್ಲ್ಯಾಂಡ್ ತಂಡವನ್ನು ಶೀಘ್ರವೇ ಸೇರಲಿದ್ದಾರೆ. 20ರ ವಯಸ್ಸಿನ ಎಡಗೈ ಆರಂಭಿಕ ಬ್ಯಾಟರ್ ಕಳೆದ ವರ್ಷ ಅಬುಧಾಬಿಯಲ್ಲಿ ಅಫ್ಘಾನಿಸ್ತಾನ ‘ಎ’ ವಿರುದ್ಧ ಚತುರ್ದಿನ ಪಂದ್ಯದಲ್ಲಿ ಐರ್ಲ್ಯಾಂಡ್ ‘ಎ’ ಪರವಾಗಿ ಆಡಿದ್ದರು. ಐರ್ಲ್ಯಾಂಡ್ ತಂಡವು ಶನಿವಾರ ಕೊಲಂಬೊದಲ್ಲಿ ಒಮಾನ್ ತಂಡದ ವಿರುದ್ಧ ಸೆಣಸಾಡಲಿದೆ.
ಟಿ-20 ವಿಶ್ವಕಪ್ನಿಂದ ಹೊರಗುಳಿದ ಝಿಂಬಾಬ್ವೆ ಬ್ಯಾಟರ್ ಬ್ರೆಂಡನ್ ಟೇಲರ್
ಹೊಸದಿಲ್ಲಿ, ಫೆ.13: ಮಂಡಿರಜ್ಜುನೋವಿನಿಂದ ಬಳಲುತ್ತಿರುವ ಹಿರಿಯ ವಿಕೆಟ್ಕೀಪರ್-ಬ್ಯಾಟರ್ ಬ್ರೆಂಡನ್ ಟೇಲರ್ ಈಗ ನಡೆಯುತ್ತಿರುವ ಟಿ-20 ವಿಶ್ವಕಪ್ ಟೂರ್ನಿಯ ಇನ್ನುಳಿದ ಪಂದ್ಯಗಳಿಂದ ಹೊರಗುಳಿದಿದ್ದು, ಅವರ ಬದಲಿಗೆ ಅಗ್ರ ಸರದಿಯ ಬ್ಯಾಟರ್ ಬೆನ್ ಕರ್ರನ್ ತಂಡವನ್ನು ಸೇರಲಿದ್ದಾರೆ ಎಂದು ಝಿಂಬಾಬ್ವೆ ಕ್ರಿಕೆಟ್ ತಂಡದ ನಾಯಕ ಸಿಕಂದರ್ ರಝಾ ಶುಕ್ರವಾರ ದೃಢಪಡಿಸಿದರು. 40ರ ಹರೆಯದ ಟೇಲರ್ ಪಂದ್ಯಾವಳಿಯಲ್ಲಿ ಝಿಂಬಾಬ್ವೆ ತಂಡ ಒಮಾನ್ ವಿರುದ್ಧ ಆಡಿರುವ ಮೊದಲ ಪಂದ್ಯದ ವೇಳೆ ಮಂಡಿರಜ್ಜು ನೋವಿಗೆ ಒಳಗಾಗಿದ್ದರು. ಈ ಪಂದ್ಯದಲ್ಲಿ 30 ಎಸೆತಗಳಲ್ಲಿ 31 ರನ್ ಗಳಿಸಿದ ನಂತರ ಟೇಲರ್ ಗಾಯಗೊಂಡು ನಿವೃತ್ತಿಯಾಗಿದ್ದರು. ವಿಕೆಟ್ಕೀಪರ್ ಆಗಿ ಮೂರು ಕ್ಯಾಚ್ಗಳನ್ನು ಪಡೆದು ಒಮಾನ್ ತಂಡದ ವಿರುದ್ದ ಜಯ ಸಾಧಿಸಲು ನೆರವಾಗಿದ್ದರು. ಪಂದ್ಯಾವಳಿಯಲ್ಲಿ ಕನಿಷ್ಠ ಇನ್ನೆರಡು ಪಂದ್ಯಗಳನ್ನು ಆಡಲಿರುವ ಝಿಂಬಾಬ್ವೆ ತಂಡಕ್ಕೆ ಕರ್ರನ್ರನ್ನು ಸೇರಿಸಿಕೊಳ್ಳಲಾಗಿದೆ. ಟೆಸ್ಟ್ ಹಾಗೂ ಏಕದಿನ ಪಂದ್ಯಗಳಲ್ಲಿ ಶತಕಗಳನ್ನು ದಾಖಲಿಸಿರುವ ಕರ್ರನ್ ಈ ತನಕ ಟಿ-20 ಕ್ರಿಕೆಟ್ನಲ್ಲಿ ಸ್ಥಾನ ಪಡೆದಿಲ್ಲ. ಕರ್ರನ್ 40 ಟಿ-20 ಇನಿಂಗ್ಸ್ಗಳಲ್ಲಿ 126.1ರ ಸ್ಟ್ರೈಕ್ರೇಟ್ನಲ್ಲಿ ಒಟ್ಟು 872 ರನ್ ಗಳಿಸಿದ್ದಾರೆ. ಆಸ್ಟ್ರೇಲಿಯ ವಿರುದ್ಧದ ಪಂದ್ಯದಲ್ಲಿ ತದಿವಾನಶೆ ಮರುಮಾನಿ ವಿಕೆಟ್ಕೀಪಿಂಗ್ ಮಾಡಿದ್ದಾರೆ. ಆಲ್ರೌಂಡರ್ ಟೋನಿ ಮುನ್ಯೊಂಗಾ ಝಿಂಬಾಬ್ವೆ ತಂಡದ ಆಡುವ 11ರ ಬಳಗಕ್ಕೆ ಟೇಲರ್ ಸ್ಥಾನದಲ್ಲಿ ಆಡಿದ್ದಾರೆ. ಐಸಿಸಿ ಭ್ರಷ್ಟಾಚಾರ ವಿರೋಧಿ ಸಂಹಿತೆಯನ್ನು ಉಲ್ಲಂಘಿಸಿದ ಕಾರಣಕ್ಕೆ ಮೂರೂವರೆ ವರ್ಷ ನಿಷೇಧಕ್ಕೆ ಒಳಗಾಗಿದ್ದ ಟೇಲರ್ 2025ರ ಜುಲೈನಲ್ಲಿ ಅಂತರ್ರಾಷ್ಟ್ರೀಯ ಕ್ರಿಕೆಟಿಗೆ ವಾಪಸಾಗಿದ್ದರು. ಆಗಸ್ಟ್ನಲ್ಲಿ ನ್ಯೂಝಿಲ್ಯಾಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಝಿಂಬಾಬ್ವೆ ತಂಡಕ್ಕೆ ಸೇರಿದ್ದರು. ಕ್ರಿಕೆಟಿಗೆ ಮರಳಿದ ನಂತರ ಎರಡು ಏಕದಿನ ಹಾಗೂ 14 ಟಿ-20 ಪಂದ್ಯಗಳನ್ನಾಡಿದ್ದು, ಒಟ್ಟು 282 ರನ್ ಗಳಿಸಿದ್ದಾರೆ.
ಟಿ-20 ವಿಶ್ವಕಪ್| ಕೆನಡಾ ವಿರುದ್ಧ ಯುಎಇಗೆ ರೋಚಕ ಜಯ
ಹೊಸದಿಲ್ಲಿ, ಫೆ.13: ಆರಂಭಿಕ ಆಟಗಾರ ಆರ್ಯಾಂಶ್ ಶರ್ಮಾ(ಔಟಾಗದೆ 74, 53 ಎಸೆತ, 6 ಬೌಂಡರಿ, 3 ಸಿಕ್ಸರ್)ಹಾಗೂ ಶುಐಬ್ ಖಾನ್(ಔಟಾಗದೆ 51, 29 ಎಸೆತ, 4 ಬೌಂಡರಿ,4 ಸಿಕ್ಸರ್)ಅರ್ಧಶತಕದ ಕೊಡುಗೆ, ಜುನೈದ್ ಸಿದ್ದೀಕ್ ಅಮೋಘ ಬೌಲಿಂಗ್ ನೆರವಿನಿಂದ ಯುಎಇ ಕ್ರಿಕೆಟ್ ತಂಡವು ಕೆನಡಾ ತಂಡವನ್ನು ಐದು ವಿಕೆಟ್ಗಳ ಅಂತರದಿಂದ ರೋಚಕವಾಗಿ ಮಣಿಸಿತು. ಯುಎಇ ತಂಡ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಆಡಿರುವ 8 ಪಂದ್ಯಗಳ ಪೈಕಿ ಎರಡನೇ ಗೆಲುವು ದಾಖಲಿಸಿತು. ಈ ಮೂಲಕ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿತು. ಶುಕ್ರವಾರ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ‘ಡಿ’ಗುಂಪಿನ ಪಂದ್ಯದಲ್ಲಿ ಗೆಲ್ಲಲು 151 ರನ್ ಗುರಿ ಬೆನ್ನಟ್ಟಿದ ಯುಎಇ ತಂಡವು 19.4 ಓವರ್ಗಳಲ್ಲಿ 5 ವಿಕೆಟ್ಗಳ ನಷ್ಟಕ್ಕೆ 151 ರನ್ ಗಳಿಸಿತು. ಯುಎಇ ತಂಡವು 12.3 ಓವರ್ಗಳಲ್ಲಿ 66 ರನ್ ಸೇರಿಸುವಷ್ಟರಲ್ಲಿ ಅಗ್ರ ಕ್ರಮಾಂಕದ ನಾಲ್ವರು ಬ್ಯಾಟರ್ಗಳನ್ನು ಕಳೆದುಕೊಂಡಿತು. ಆಗ ಜೊತೆಯಾದ ಆರ್ಯಾಂಶ್ ಹಾಗೂ ಶುಐಬ್ ಖಾನ್ ಐದನೇ ವಿಕೆಟ್ಗೆ ಕೇವಲ 43 ಎಸೆತಗಳಲ್ಲಿ 84 ರನ್ ಜೊತೆಯಾಟದಲ್ಲಿ ಭಾಗಿಯಾಗಿ ಯುಎಇ ತಂಡಕ್ಕೆ ಇನ್ನೂ ಎರಡು ಎಸೆತಗಳು ಬಾಕಿ ಇರುವಾಗಲೇ ರೋಚಕ ಜಯ ತಂದುಕೊಟ್ಟರು. 28 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಶುಐಬ್ ಖಾನ್ ಪಂದ್ಯದ ಚಿತ್ರಣ ಬದಲಿಸಿದರು. ನಾಯಕ ಮುಹಮ್ಮದ್ ವಸೀಂ(4 ರನ್), ಅಲಿಶನ್ ಶರಾಫು(5 ರನ್), ಮಯಾಂಕ್ ಕುಮಾರ್(4 ರನ್)ಹಾಗೂ ಹರ್ಷಿತ್ ಕೌಶಿಕ್(5 ರನ್)ಅಲ್ಪ ಮೊತ್ತಕ್ಕೆ ಔಟಾದರು. ಕೆನಡಾದ ಪರವಾಗಿ ಸಾದ್ ಬಿನ್ ಝಾಫರ್(3-14)ಯಶಸ್ವಿ ಪ್ರದರ್ಶನ ನೀಡಿದರು. ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಕೆನಡಾ ತಂಡವು ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ಗಳ ನಷ್ಟಕ್ಕೆ 150 ರನ್ ಗಳಿಸಿತು. 5.1 ಓವರ್ಗಳಲ್ಲಿ 38 ರನ್ ಗಳಿಸುವಷ್ಟರಲ್ಲಿ ಮೂರು ವಿಕೆಟ್ಗಳನ್ನು ಕಳೆದುಕೊಂಡ ಕೆನಡಾ ತಂಡ ಕಳಪೆ ಆರಂಭ ಪಡೆದಿತ್ತು. ಆಗ ಜೊತೆಯಾದ ಹರ್ಷ ಥಾಕರ್(50 ರನ್, 41 ಎಸೆತ, 2 ಬೌಂಡರಿ, 3 ಸಿಕ್ಸರ್)ಹಾಗೂ ನವನೀತ್ ಧಲಿವಾಲ್(34 ರನ್, 28 ಎಸೆತ, 4 ಬೌಂಡರಿ)ನಾಲ್ಕನೇ ವಿಕೆಟ್ಗೆ 58ರನ್ ಸೇರಿಸಿ ತಂಡವನ್ನು ಆಧರಿಸಿದರು. ವಿಕೆಟ್ಕೀಪರ್ ಶ್ರೇಯಸ್ ಮೊವಾ(21 ರನ್, 21 ಎಸೆತ)ತಂಡದ ಮೊತ್ತ 150ಕ್ಕೆ ತಲುಪುವಲ್ಲಿ ನೆರವಾದರು. ಯುಎಇ ತಂಡದ ಪರವಾಗಿ ಜುನೈದ್ ಸಿದ್ದೀಕಿ(5-35)ಐದು ವಿಕೆಟ್ ಗೊಂಚಲು ಕಬಳಿಸಿದರು. ಟಿ-20 ಕ್ರಿಕೆಟ್ನಲ್ಲಿ ಈ ಸಾಧನೆ ಮಾಡಿದ ಯುಎಇ ತಂಡದ ಮೂರನೇ ಬೌಲರ್ ಎನಿಸಿಕೊಂಡರು. ಅಹ್ಮದ್ ರಝಾ(5-19)ಹಾಗೂ ಝುಬೈರ್ (5-21)ಈ ಸಾಧನೆೆ ಮಾಡಿದ್ದ ಇನ್ನಿಬ್ಬರು ಬೌಲರ್ಗಳಾಗಿದ್ದಾರೆ.
ಐಪಿಎಲ್ ಆಯೋಜನೆಗೆ ಸಮಿತಿ ಕ್ರಮ ಕೈಗೊಳ್ಳಲಿದೆ: ಡಾ.ಜಿ. ಪರಮೇಶ್ವರ್
ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯಗಳನ್ನು ನಡೆಸಲು ಈಗಾಗಲೇ ಸಮಿತಿ ರಚನೆ ಮಾಡಲಾಗಿದ್ದು, ಎಲ್ಲವನ್ನು ಸಮಿತಿಯೇ ನಿರ್ವಹಣೆ ಮಾಡಿ, ಕ್ರಮ ಕೈಗೊಳ್ಳಲಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ. ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯಗಳನ್ನ ನಡೆಸಲು ಸಮಿತಿ ರಚನೆ ಮಾಡಿದ್ದೇವೆ. ಐಪಿಎಲ್ ಚೆನ್ನಾಗಿ ನಡೆಸಲು ಸಮಿತಿ ಕ್ರಮ ಕೈಗೊಳ್ಳಲಿದೆ. ಈ ಬಾರಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಕ್ರಮ ವಹಿಸುವಂತೆ ಎಚ್ಚರಿಕೆಯನ್ನು ನೀಡಲಾಗಿದೆ ಎಂದು ಉಲ್ಲೇಖಿಸಿದರು. ಬಿಜೆಪಿ ಶಾಸಕ ಭೈರತಿ ಬಸವರಾಜ್ ಬಂಧನ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಅವರು, ಹೈಕೋರ್ಟ್, ಸುಪ್ರೀಂ ಕೋರ್ಟ್ನಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ವಜಾ ಆಗಿತ್ತು. ಹೀಗಾಗಿ ಭೈರತಿ ಬಸವರಾಜ್ ನಿನ್ನೆ ಶರಣಾಗಿದ್ದಾರೆ. ಈ ಸಂಬಂಧ ಸಿಐಡಿ ಅಧಿಕಾರಿಗಳು ಮುಂದೆ ಕಾನೂನು ರೀತಿ ಕ್ರಮ ಕೈಗೊಳ್ಳುತ್ತಾರೆ ಎಂದರು.
ಯಾದಗಿರಿ | ಚಾಮನಳ್ಳಿ ಚೆಕ್ ಡ್ಯಾಂ ಗೇಟ್ ದುರಸ್ತಿ ಮಾಡದ ಅಧಿಕಾರಿಗಳ ವಿರುದ್ಧ ಉಮೇಶ್ ಮುದ್ನಾಳ್ ಆಕ್ರೋಶ
ಯಾದಗಿರಿ: ತಾಲೂಕಿನ ಹತ್ತಿಕುಣಿ ಜಲಾಶಯದ ಉಪಹಳ್ಳವಾದ ಚಾಮನಳ್ಳಿ ಹಳ್ಳದಲ್ಲಿರುವ ಚೆಕ್ ಡ್ಯಾಂ ಗೇಟ್ಗಳು ಹಾಳಾಗಿದ್ದರೂ ಸಂಬಂಧಿಸಿದ ಅಧಿಕಾರಿಗಳು ದುರಸ್ತಿ ಕಾರ್ಯ ಕೈಗೊಳ್ಳದಿರುವುದನ್ನು ಖಂಡಿಸಿ ಸಾಮಾಜಿಕ ಹೋರಾಟಗಾರ ಉಮೇಶ್ ಮುದ್ನಾಳ್ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಚೆಕ್ ಡ್ಯಾಂ ಗೇಟ್ಗಳು ಜಾಮ್ ಆಗಿರುವುದರಿಂದ ಅವುಗಳನ್ನು ಮೇಲಕ್ಕೆ ಎತ್ತಲು ಸಾಧ್ಯವಾಗುತ್ತಿಲ್ಲ. ಪರಿಣಾಮವಾಗಿ ಪ್ರತಿ ಮಳೆಗಾಲದಲ್ಲಿ ಗೇಟ್ಗಳ ಮೇಲಿಂದ ನೀರು ಹರಿದು ಸಂಪರ್ಕ ಸಂಪೂರ್ಣವಾಗಿ ಕಡಿತಗೊಳ್ಳುತ್ತಿದೆ. ಹಲವು ವರ್ಷಗಳಿಂದ ಈ ಸಮಸ್ಯೆ ಮುಂದುವರಿದಿದ್ದರೂ ಅಧಿಕಾರಿಗಳು ನಿರ್ಲಕ್ಷ್ಯ ತೋರಿಸುತ್ತಿರುವುದು ಅಕ್ಷಮ್ಯವೆಂದು ಅವರು ಆರೋಪಿಸಿದರು. ಚಾಮನಳ್ಳಿ ಹಳ್ಳದಲ್ಲಿನ ಚೆಕ್ ಡ್ಯಾಂನಿಂದ ಹತ್ತಾರು ಗ್ರಾಮಗಳ ರೈತರಿಗೆ ಅನುಕೂಲವಾಗಬೇಕಿತ್ತು. ಆದರೆ ನಿರ್ಲಕ್ಷ್ಯದ ಕಾರಣದಿಂದ ಡ್ಯಾಂ ತನ್ನ ಉದ್ದೇಶವನ್ನು ಸಾಧಿಸಲು ವಿಫಲವಾಗುತ್ತಿದೆ. ಜೊತೆಗೆ ಹಳ್ಳದಲ್ಲಿ ನೀರು ಪಾಚಿಗಟ್ಟಿ, ಅಪಾರ ಪ್ರಮಾಣದಲ್ಲಿ ಹಾಪ್ ಬೆಳೆದು ನಿಂತಿರುವುದರಿಂದ ಅಪಾಯದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಪ್ರತಿ ವರ್ಷ ಎರಡು–ಮೂರು ಸಾವುಗಳು ಸಂಭವಿಸುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ ಎಂದು ಹೇಳಿದರು. ಆದ್ದರಿಂದ ಕೂಡಲೇ ಹಳ್ಳದ ಹೂಳೆತ್ತುವ ಕಾರ್ಯ ಕೈಗೊಳ್ಳಬೇಕು. ಹಳೆಯ ಗೇಟ್ಗಳನ್ನು ತೆರವುಗೊಳಿಸಿ ಹೊಸ ಹೈಡ್ರಾಲಿಕ್ ಗೇಟ್ಗಳನ್ನು ಅಳವಡಿಸಬೇಕು ಎಂದು ಸಂಬಂಧಿತ ಇಲಾಖೆಯ ಅಧಿಕಾರಿಗಳಿಗೆ ಆಗ್ರಹಿಸಿದರು. ಈ ಸಂದರ್ಭದಲ್ಲಿ ರಡ್ಡಿ ಪೂಜಾರಿ ಠಾಣಾಗುಂದಿ, ರಾಜು ಜಾಧವ್ (ಉಮ್ಲಾನಾಯಕ ತಾಂಡಾ), ರಡ್ಡೆಪ್ಪ ಗಂಗಾನಗರ ಸೇರಿದಂತೆ ಹಲವಾರು ರೈತರು ಉಪಸ್ಥಿತರಿದ್ದರು.
ಬೆಳ್ತಂಗಡಿ| ನ್ಯಾಯಾಲಯಕ್ಕೆ ಹಾಜರಾಗದೆ 13 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಸೆರೆ
ಬೆಳ್ತಂಗಡಿ; ನ್ಯಾಯಾಲಯಕ್ಕೆ ಹಾಜರಾಗದೆ ಕಳೆದ 13 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೂಂಜಾಲಕಟ್ಟೆ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ ಆಲ್ವಿನ್ ರಾಡ್ರಿಗಸ್(53) ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ 2013ರಲ್ಲಿ ಮಡಂತ್ಯಾರು ನಿವಾಸಿ ಚಿತ್ರಶೇಖರ್ ಎಂಬವರ ಮೇಲೆ ಹಲ್ಲೆ ನಡೆಸಿದ್ದು ಈ ಬಗ್ಗೆ ಪೂಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಆರೋಪಿ ನ್ಯಾಯಾಲಯಕ್ಕೆ ಹಾಜರಾಗದೆ ಕಳೆದ 13ವರ್ಷಗಳಿಂದ ತಲೆ ಮರೆಸಿಕೊಂಡಿದ್ದ. ಈತನನ್ನು ಪೊಲೀಸರು ಬೆಂಗಳೂರಿನ ಸಂಪಿಗೆ ರಾಮನಗರದಲ್ಲಿ ಬಂಧಿಸಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.
ಯಾದಗಿರಿ | ಅಂಬಿಗರ ಚೌಡಯ್ಯ ನಿಗಮಕ್ಕೆ 500 ಕೋಟಿ ರೂ. ಅನುದಾನಕ್ಕೆ ಮನವಿ
ಯಾದಗಿರಿ ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮಕ್ಕೆ 2026–27ನೇ ಸಾಲಿನಲ್ಲಿ 500 ಕೋಟಿ ರೂ. ಅನುದಾನ ಮಂಜೂರು ಮಾಡುವಂತೆ ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬುರಾವ್ ಚಿಂಚನಸೂರ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ವಿಧಾನಸೌಧದಲ್ಲಿ ಶುಕ್ರವಾರ ಭೇಟಿ ಮಾಡಿ ಮನವಿ ಸಲ್ಲಿಸಿದರು. ಕೋಲಿ, ಕಬ್ಬಲಿಗ, ಬೆಸ್ತ, ಅಂಬಿಗ, ಮೊಗವೀರ, ಕಬ್ಬೇರ, ಗಂಗಾಮಾತಸ್ತ ಸೇರಿದಂತೆ 37 ಪರ್ಯಾಯ ಪದಗಳನ್ನು ಒಳಗೊಂಡ ಸಮುದಾಯಗಳ ಆರ್ಥಿಕ ಹಾಗೂ ಶೈಕ್ಷಣಿಕ ಉತ್ತೇಜನಕ್ಕಾಗಿ ನಿಗಮ ಸ್ಥಾಪಿಸಲಾಗಿದೆ ಎಂದು ಅವರು ವಿವರಿಸಿದರು. ವಿಶೇಷವಾಗಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಈ ಸಮುದಾಯದ ಜನಸಂಖ್ಯೆ ಹೆಚ್ಚು ಇದ್ದು, ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದ ಸ್ಥಿತಿಯಲ್ಲಿದ್ದಾರೆ ಎಂದು ತಿಳಿಸಿದರು. ವಿದ್ಯಾರ್ಥಿಗಳಿಗೆ ಶಿಕ್ಷಣ ಸಾಲ, ಸ್ವಯಂ ಉದ್ಯೋಗ ಯೋಜನೆಗಳು ಸೇರಿದಂತೆ ವಿವಿಧ ಸೌಲಭ್ಯಗಳಿಗೆ ಹೆಚ್ಚಿನ ಬೇಡಿಕೆ ಇದೆ. 2025–26ರವರೆಗೆ ವಿವಿಧ ಯೋಜನೆಗಳಡಿ 35,248 ಅರ್ಜಿಗಳು ಸ್ವೀಕರಿಸಲಾಗಿದ್ದು, ಎಲ್ಲ ಅರ್ಹರಿಗೆ ಸಾಲ ಮತ್ತು ಸೌಲಭ್ಯ ಒದಗಿಸಲು ಹೆಚ್ಚಿನ ಅನುದಾನ ಅಗತ್ಯವಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ. ಈ ಹಿನ್ನೆಲೆಯಲ್ಲಿ 2026–27ನೇ ಸಾಲಿಗೆ 500 ಕೋಟಿ ರೂ. ಅನುದಾನ ಮಂಜೂರು ಮಾಡುವಂತೆ ಸರ್ಕಾರವನ್ನು ಕೋರಲಾಗಿದೆ. ಸಮುದಾಯದ ಸಮಗ್ರ ಅಭಿವೃದ್ಧಿಗಾಗಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.
ಫೆ.15ರಂದು ಮಹಾಶಿವರಾತ್ರಿ ಅಂಗವಾಗಿ ಮುರ್ಡೇಶ್ವರಕ್ಕೆ 16ನೇ ಪಾದಯಾತ್ರೆ
ಭಟ್ಕಳ: ಮಹಾಶಿವರಾತ್ರಿ ಅಂಗವಾಗಿ ಪ್ರಸಿದ್ಧ ಮುರ್ಡೇಶ್ವರ ಶಿವ ದೇವಸ್ಥಾನಕ್ಕೆ 16ನೇ ವಾರ್ಷಿಕ ಪಾದಯಾತ್ರೆ ಫೆ.15ರಂದು ನಡೆಯಲಿದೆ. ಈ ಬಾರಿ 10 ಸಾವಿರಕ್ಕೂ ಹೆಚ್ಚು ಭಕ್ತರು ಭಾಗವಹಿಸುವ ನಿರೀಕ್ಷೆಯಿದೆ. ಭಟ್ಕಳದ ರಂಜನ್ ಇಂಡೇನ್ ಗ್ಯಾಸ್ ಏಜೆನ್ಸಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಏಜೆನ್ಸಿ ಮಾಲಕಿ ಶಿವಾನಿ ಶಾಂತರಾಮ್ ಈ ಮಾಹಿತಿ ನೀಡಿದರು. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಅವರು ಮನವಿ ಮಾಡಿದರು. 15 ವರ್ಷಗಳ ಹಿಂದೆ ಕೆಲವೇ ಭಕ್ತರೊಂದಿಗೆ ಆರಂಭವಾದ ಈ ಪಾದಯಾತ್ರೆ ವರ್ಷದಿಂದ ವರ್ಷಕ್ಕೆ ಭವ್ಯವಾಗಿ ರೂಪುಗೊಂಡಿದೆ ಎಂದು ಅವರು ತಿಳಿಸಿದರು. ಪ್ರತಿವರ್ಷ ಮಹಾಶಿವರಾತ್ರಿ ದಿನದಂದು ನಡೆಯುವ ಈ ಪಾದ ಯಾತ್ರೆ ಭಟ್ಕಳದ ಚೋಳೇಶ್ವರ ದೇವಸ್ಥಾನದಿಂದ ಆರಂಭವಾಗಿ ಮುರ್ಡೇಶ್ವರ ದೇವಸ್ಥಾನಕ್ಕೆ ತೆರಳಿ ದರ್ಶನ ಪಡೆಯುವ ಮೂಲಕ ಪೂರ್ಣಗೊಳ್ಳುತ್ತದೆ. ಫೆ. 15ರಂದು ಬೆಳಿಗ್ಗೆ 4 ಗಂಟೆಗೆ ಚೋಳೇಶ್ವರ ದೇವಸ್ಥಾನದಿಂದ ಪಾದಯಾತ್ರೆ ಪ್ರಾರಂಭವಾಗಲಿದೆ. ಹಿಂದಿನ ವರ್ಷಗಳಂತೆ ಮಹಿಳೆಯರು ಹಾಗೂ ಮಕ್ಕಳನ್ನೂ ಒಳಗೊಂಡು ಸಾವಿರಾರು ಭಕ್ತರು ಭಾಗವಹಿಸಲಿದ್ದಾರೆ. ಬೈಂದೂರು, ಶಿರೂರು ಮತ್ತು ಹೊನ್ನಾವರ ಭಾಗಗಳಿಂದಲೂ ಭಕ್ತರು ಸೇರುವ ನಿರೀಕ್ಷೆಯಿದೆ. ಕಾರ್ಯಕ್ರಮ ಸುಗಮವಾಗಿ ನಡೆಯಲು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪೊಲೀಸ್ ಹಾಗೂ ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಸಂಘಟನೆಗಳು ಸಹಕಾರ ನೀಡಲಿವೆ. ಪಾದಯಾತ್ರಿಕರಿಗೆ ‘ಕ್ರೀಯಾಶೀಲ ಗೆಳೆಯರ ಬಳಗ’ ವತಿಯಿಂದ ನಿಂಬೆಹಣ್ಣು ಪಾನೀಯ ವ್ಯವಸ್ಥೆ ಮಾಡಲಾಗಿದೆ. ಮಾರ್ಗ ಮಧ್ಯೆ ಆಹಾರ ಪ್ಯಾಕೆಟ್, ಹಣ್ಣು ಹಾಗೂ ಕುಡಿಯುವ ನೀರು ವಿತರಿಸಲಾಗುತ್ತದೆ. ಮುರ್ಡೇಶ್ವರ ತಲುಪಿದ ಬಳಿಕ ದೇವಾಲಯದ ವತಿಯಿಂದ ಶೀಘ್ರ ದರ್ಶನಕ್ಕೆ ವಿಶೇಷ ವ್ಯವಸ್ಥೆ ಹಾಗೂ ಉಪಾಹಾರದ ವ್ಯವಸ್ಥೆಯನ್ನೂ ಮಾಡಲಾಗಿದೆ.
ಯಾದಗಿರಿ | ಕೇಂದ್ರ ಸರಕಾರದಿಂದ ಜನವಿರೋಧಿ ಆಡಳಿತ : ಡಾ.ಭೀಮಣ್ಣ ಮೇಟಿ ಆರೋಪ
ಯಾದಗಿರಿ: ಕೇಂದ್ರದ ಬಿಜೆಪಿ ಸರ್ಕಾರದ ಜನವಿರೋಧಿ ಆಡಳಿತದಿಂದ ದೇಶದ ಜನತೆ ಸಂಪೂರ್ಣವಾಗಿ ಬೇಸತ್ತು ಹೋಗಿದ್ದಾರೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ರಾಜ್ಯ ಉಪಾಧ್ಯಕ್ಷ ಡಾ.ಭೀಮಣ್ಣ ಮೇಟಿ ಹೇಳಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿ ಉದ್ಯಮಿಗಳ ಪರ ಆಡಳಿತ ನಡೆಸಿರುವುದೇ ಅವರ ದೊಡ್ಡ ಸಾಧನೆಯಾಗಿದೆ. ಮುಂದಿನ ದಿನಗಳಲ್ಲಿ ಇದೇ ವಿಚಾರ ಅವರಿಗೆ ಹಿನ್ನಡೆಯಾಗಿ ಪರಿಣಮಿಸಲಿದೆ ಎಂದು ಅಭಿಪ್ರಾಯಪಟ್ಟರು. ಯುವಕರು ಉದ್ಯೋಗವಿಲ್ಲದೆ ಸಂಕಷ್ಟದಲ್ಲಿದ್ದಾರೆ. ಕಾರ್ಮಿಕರ ಸಮಸ್ಯೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಕೈಗಾರಿಕಾ ವಲಯ ಸಂಪೂರ್ಣವಾಗಿ ಶ್ರೀಮಂತರ ಪಾಲಾಗಿದ್ದು, ಕೇಂದ್ರದ ಬಿಜೆಪಿ ಆಡಳಿತ ದಿಕ್ಕುತೋಚದ ಸ್ಥಿತಿಗೆ ತಲುಪಿದೆ. ದೇಶದ ಜನರು ಸಂಕಷ್ಟದಲ್ಲೇ ಜೀವನ ನಡೆಸುತ್ತಿದ್ದಾರೆ ಎಂದರು. ಕೃಷಿ ಕ್ಷೇತ್ರವನ್ನು ಸಬಲೀಕರಣಗೊಳಿಸಲು ಕೇಂದ್ರ ಸರ್ಕಾರ ಯಾವುದೇ ಹೊಸ ಯೋಜನೆಗಳನ್ನು ರೂಪಿಸುತ್ತಿಲ್ಲ. ಅನ್ನದಾತರ ಸ್ಥಿತಿ ಗಂಭೀರವಾಗಿದೆ. ಕೈಗಾರಿಕೆಗಳ ಹೆಸರಿನಲ್ಲಿ ಅನಿಯಂತ್ರಿತವಾಗಿ ಭೂಮಿ ಸ್ವಾಧೀನಪಡಿಸಿಕೊಳ್ಳುವ ಕ್ರಮ ಹಲವಾರು ಅನುಮಾನಗಳಿಗೆ ಕಾರಣವಾಗಿದೆ ಎಂದು ಹೇಳಿದರು. ದೇಶದಲ್ಲಿ ನಿರುದ್ಯೋಗ ಸಮಸ್ಯೆ ತೀವ್ರಗೊಂಡಿದೆ. ವರ್ಷಕ್ಕೆ ಕೋಟ್ಯಂತರ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ ಯುವಕರನ್ನು ಇದೀಗ ಸಂಕಷ್ಟಕ್ಕೆ ತಳ್ಳಿದ್ದಾರೆ ಎಂದು ಟೀಕಿಸಿದರು. ಜನರು ಬೀದಿಗಿಳಿದು ಹೋರಾಟ ನಡೆಸುವ ಪರಿಸ್ಥಿತಿ ಉಂಟಾಗುವ ಮುನ್ನವೇ ಕೇಂದ್ರ ಸರ್ಕಾರ ಎಚ್ಚೆತ್ತುಕೊಳ್ಳುವುದು ಅಗತ್ಯ ಎಂದು ಅವರು ಎಚ್ಚರಿಕೆ ನೀಡಿದರು.
ಮೂಡುಬಿದಿರೆ ತಾಲೂಕು ದ್ವಿತೀಯ ಸಾಹಿತ್ಯ ಸಮ್ಮೇಳನ: ಸವಾ೯ಧ್ಯಕ್ಷರಾಗಿ ಅಬ್ದುಲ್ ಹಮೀದ್ ಪಕ್ಕಲಡ್ಕ
ಮೂಡುಬಿದಿರೆ: ತಾಲೂಕು ದ್ವಿತೀಯ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಿರಿಯ ಸಾಹಿತಿ ಮಿಜಾರಿನ ಅಬ್ದುಲ್ ಹಮೀದ್ ಪಕ್ಕಲಡ್ಕ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ (ಕ.ಸಾ.ಪ) ಮೂಡುಬಿದಿರೆ ತಾಲೂಕು ಅಧ್ಯಕ್ಷ ಕೆ. ವೇಣುಗೋಪಾಲ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಫೆ.21ರಂದು ಕಡಂದಲೆಯ ಶ್ರೀ ನಾರಾಯಣಗುರು ಸಭಾಭವನದಲ್ಲಿ ತಾಲೂಕು ಸಾಹಿತ್ಯ ಸಮ್ಮೇಳನ ನಡೆಯಲಿದೆ. ಮಂಗಳೂರು ತಾಲೂಕಿನ ಕಂಕನಾಡಿ ಗ್ರಾಮದ ಪಕ್ಕಲಡ್ಕದ ಅಹಮ್ಮದ್ ಕೆ.ಪಿ. ಹಾಗೂ ಫಾತಿಮಾ ದಂಪತಿಯ ಪುತ್ರರಾಗಿ 1947ರಲ್ಲಿ ಜನಿಸಿದ ಅಬ್ದುಲ್ ಹಮೀದ್ ಪಕ್ಕಲಡ್ಕ ಅವರು ಬಿ.ಕಾಂ ಪದವೀಧರರು. 1968ರಲ್ಲಿ ರಾಜ್ಯ ಸರ್ಕಾರದ ಅರಣ್ಯ ಇಲಾಖೆಯಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ವೃತ್ತಿ ಜೀವನ ಆರಂಭಿಸಿದ ಅವರು, ನಂತರ ಪ್ರಥಮ ದರ್ಜೆ ಸಹಾಯಕ ಹಾಗೂ ಅಧೀಕ್ಷಕರಾಗಿ ಪದೋನ್ನತಿ ಪಡೆದು 37 ವರ್ಷಗಳ ಸೇವೆಯ ನಂತರ 2005ರಲ್ಲಿ ನಿವೃತ್ತರಾದರು. ಸಾಹಿತ್ಯ ಕ್ಷೇತ್ರದಲ್ಲೂ ತಮ್ಮದೇ ಗುರುತು ಮೂಡಿಸಿರುವ ಅವರು ಸಣ್ಣಕಥಾ ರಚನೆಯಲ್ಲಿ ವಿಶೇಷ ಆಸಕ್ತಿ ಹೊಂದಿ ದ್ದಾರೆ. ‘ಪಾದದಡಿಯ ಸ್ಪರ್ಗ’, ‘ಬಿಳಿಗೋಡೆ’, ‘ಅಲೆಮಾರಿ’, ‘ಭ್ರಮೆ’, ‘ಒಂಟಿತೆಪ್ಪ’, ‘ನೆನಪುಗಳು ಸಾಯುವುದಿಲ್ಲ’, ‘ಮೋಹಕ್ಷಯ’ ಮತ್ತು ‘ಹಾದಿಯೇ ಇಲ್ಲದ ಹಾದಿ’ ಎಂಬ ಎಂಟು ಕಥಾಸಂಕಲನಗಳನ್ನು ಪ್ರಕಟಿಸಿದ್ದಾರೆ. ‘ಪಾದದಡಿಯ ಸ್ಪರ್ಗ’ ಕೃತಿ ಶ್ರೀಮತಿ ಝುಬೇದ ಗುರುಪುರ ಅವರಿಂದ ‘ಕಾಲಡಿರೆ ಸ್ವರ್ಗ’ ಎಂಬ ಹೆಸರಿನಲ್ಲಿ ಬ್ಯಾರಿ ಭಾಷೆಗೆ ಅನುವಾದಗೊಂಡಿದೆ. ‘ಭ್ರಮೆ’ ಕಥಾಸಂಕಲನಕ್ಕೆ ವರ್ಧಮಾನ ಉದಯೋನ್ಮುಖ ಪ್ರಶಸ್ತಿ (2017), ‘ಅಲೆಮಾರಿ’ ಸಂಕಲನಕ್ಕೆ ಪಿ. ಲಂಕೇಶ್ ಪ್ರಶಸ್ತಿ ಹಾಗೂ ಮುಸ್ಲಿಂ ಸಾಹಿತ್ಯ ಪ್ರಶಸ್ತಿ (2009), ‘ಒಂಟಿತೆಪ್ಪ’ ಸಂಕಲನಕ್ಕೆ ನಿರತ ಸಾಹಿತ್ಯ ಪ್ರಶಸ್ತಿ (2020) ಮತ್ತು ಬಾಂಧವ್ಯ ಕಥಾ ಪುರಸ್ಕಾರ (2020) ಲಭಿಸಿದೆ. ಅಲ್ಲದೆ, ಬ್ಯಾರಿ ಸಾಹಿತ್ಯ ಅಕಾಡೆಮಿಯಿಂದ ನೀಡುವ ಬ್ಯಾರಿ ಭಾಷಾ ಕಥಾ ಸ್ಪರ್ಧಾ ಪುರಸ್ಕಾರ (2020)ವೂ ಇವರಿಗೆ ಸಂದಿದೆ. ಕೃಷಿ ಆಸಕ್ತಿಯ ಜೊತೆಗೆ ಯೋಗ ಮತ್ತು ಧ್ಯಾನವನ್ನು ಜೀವನದಲ್ಲಿ ಅಳವಡಿಸಿಕೊಂಡಿರುವ ಅಬ್ದುಲ್ ಹಮೀದ್ ಪಕ್ಕಲಡ್ಕ ಅವರು ಸಾಹಿತ್ಯ ಮತ್ತು ಜೀವನ ಮೌಲ್ಯಗಳ ಸಂಗಮವಾಗಿ ಕಾಣಿಸಿಕೊಂಡಿದ್ದಾರೆ.
ಶಿವಮೊಗ್ಗ - ಹುಬ್ಬಳ್ಳಿಯ ಪ್ರಮುಖ ರೈಲುಗಳು ರದ್ದು, ಹಲವು ರೈಲುಗಳ ವೇಳಾಪಟ್ಟಿಯಲ್ಲಿ ಬದಲಾವಣೆ
ಶಿವಮೊಗ್ಗ ಹಾಗೂ ಹುಬ್ಬಳ್ಳಿಗೆ ತೆರಳುವ ಹಲವು ರೈಲುಗಳ ಸಂಚಾರವನ್ನು ಭಾರತೀಯ ರೈಲ್ವೆಯು ರದ್ದುಪಡಿಸಿದೆ. ನಾಲ್ಕು ಪ್ರಮುಖ ರೈಲುಗಳ ಸಂಚಾರವನ್ನು ಬದಲಾಯಿಸಲಾಗಿದ್ದರೆ, ಎರಡು ಪ್ರಮುಖ ರೈಲುಗಳ ಸಂಚಾರವು ವಿಳಂಬವಾಗಲಿದೆ. ಒಟ್ಟಾರೆ ಯಾವ ಮಾರ್ಗದ ಹಾಗೂ ಯಾವ ಪ್ರಮುಖ ರೈಲುಗಳ ಸಂಚಾರದಲ್ಲಿ ಬದಲಾವಣೆ ಆಗಲಿದೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ. ರಾಷ್ಟ್ರೀಯ ಹೆದ್ದಾರಿ- 206ರಲ್ಲಿ ಲೆವೆಲ್ ಕ್ರಾಸಿಂಗ್ ಸಂಖ್ಯೆ 128
ರಾಯಚೂರು ವಿಮಾನ ನಿಲ್ದಾಣ ಕಾಮಗಾರಿ ಶೇ.31ರಷ್ಟು ಪೂರ್ಣ : ನಂಜಯ್ಯನಮಠ
ರಾಯಚೂರು: ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಭೂತ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಭೂತ ಸೌಕರ್ಯ ಅಭಿವೃದ್ಧಿ ನಿಗಮ ಅಧ್ಯಕ್ಷ ಎಸ್.ಜಿ. ನಂಜಯ್ಯನಮಠ ಅವರು ಫೆ.13ರಂದು ರಾಯಚೂರು ಜಿಲ್ಲೆಗೆ ಭೇಟಿ ನೀಡಿ, ಯರಮರಸ್ ಸಮೀಪದ ವಿಮಾನ ನಿಲ್ದಾಣ ಕಾಮಗಾರಿ ಸ್ಥಳವನ್ನು ಪರಿಶೀಲಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಟ್ಟಾರೆ 322 ಎಕರೆ ವಿಸ್ತೀರ್ಣ ಪ್ರದೇಶದಲ್ಲಿ ರಾಯಚೂರು ವಿಮಾನ ನಿಲ್ದಾಣ ಕಾಮಗಾರಿ ನಡೆಯುತ್ತಿದೆ. ಈಗಾಗಲೇ ಶೇ.31ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಮುಂದಿನ ಎರಡೂವರೆ ತಿಂಗಳಲ್ಲಿ ರನ್ವೇ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು. ಈ ವರ್ಷ ಮಳೆ ನಿರಂತರವಾಗಿ ಸುರಿದ ಪರಿಣಾಮ ರನ್ವೇ ಕಾಮಗಾರಿ ಸ್ವಲ್ಪ ಮಂದಗತಿಯಲ್ಲಿ ಸಾಗಿತ್ತು. ಆದರೂ ಒಟ್ಟಾರೆ ಮುಂದಿನ ಒಂದೂವರೆ ವರ್ಷದೊಳಗೆ ಸಂಪೂರ್ಣ ಕಾಮಗಾರಿ ಪೂರ್ಣಗೊಳಿಸುವ ಗುರಿ ಹೊಂದಿದ್ದೇವೆ ಎಂದರು. ಇನ್ನೂ ಮೂರು ತಿಂಗಳ ಬಳಿಕ ಮತ್ತೆ ರಾಯಚೂರಿಗೆ ಭೇಟಿ ನೀಡಿ ಪ್ರಗತಿ ಪರಿಶೀಲಿಸುವುದಾಗಿ ಹೇಳಿದರು. ಏಗನೂರು ಗ್ರಾಮದಲ್ಲಿ 30 ಮನೆಗಳನ್ನು ಸ್ಥಳಾಂತರಿಸಲು ಮೂರು ಎಕರೆ ಜಮೀನು ಮೀಸಲಿಡಲಾಗಿದ್ದು, ದಂಡ ಗ್ರಾಮದಲ್ಲಿನ 108 ಮನೆಗಳನ್ನು ಸ್ಥಳಾಂತರಿಸಲು ಆರು ಎಕರೆ ಜಮೀನಿನಲ್ಲಿ ಲೇಔಟ್ ಕಾರ್ಯ ಪ್ರಗತಿಯಲ್ಲಿದೆ ಎಂದು ತಿಳಿಸಿದರು. ವಿಮಾನ ನಿಲ್ದಾಣ ಕಾಮಗಾರಿಗೆ ಸಂಬಂಧಿಸಿದಂತೆ ಸ್ಥಳಾಂತರವಾಗುವ ಎರಡು ಗ್ರಾಮಗಳ ನಿವಾಸಿಗಳಿಗೆ ಅವರ ಮನೆಗಳ ಮೌಲ್ಯಕ್ಕೆ ಅನುಗುಣವಾಗಿ ಪರಿಹಾರಧನ ನೀಡಲಾಗಿದೆ ಎಂದು ಅವರು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ರಾಜು ಬಂಡಿಕೇರಿ, ರಾಜು ಹರಿಳಯ್ಯಮಠ ಹಾಗೂ ಲೋಕೋಪಯೋಗಿ ಇಲಾಖೆಯ ಅಭಿಯಂತರ ಮಹೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಬರವಣಿಗೆಯಿಂದ ನನಗೆ ಬಿಡುಗಡೆಯ ಭಾವ: ಸುಬ್ರಾಯ ಚೊಕ್ಕಾಡಿ
‘ಮುನಿಸು ತರವೇ’ ಕವಿಗೆ ಪ್ರೊ.ಎಸ್ವಿಪಿ ಪ್ರಶಸ್ತಿ ಪ್ರದಾನ

20 C