SENSEX
NIFTY
GOLD
USD/INR

Weather

28    C
...

ಆಳಂದ: ರಸಗೊಬ್ಬರಕ್ಕಾಗಿ ರೈತರ ಪರದಾಟ

ಆಳಂದ: ತಾಲೂಕಿನ ರುದ್ರವಾಡಿ ಗ್ರಾಮದಲ್ಲಿ ರಸಗೊಬ್ಬರ ಪಡೆಯಲು ರೈತರು ಗಂಟೆಗಟ್ಟಲೆ ಸಾಲಿನಲ್ಲಿ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದ್ದು, ರೈತರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಮುಂಗಾರು ಹಂಗಾಮು ಆರಂಭವಾಗಿರುವ ಹಿನ್ನೆಲೆಯಲ್ಲಿ ಬಿತ್ತನೆ ಕಾರ್ಯ ಚುರುಕುಗೊಳಿಸಲು ರಸಗೊಬ್ಬರ ಖರೀದಿಸಲು ರೈತರು ಹರಸಹಾಸ ಪರದಾಡುವಂತಾಗಿದೆ. ಗ್ರಾಮದ ಪಿಕೆಪಿಎಸ್ ಮೂಲಕ ವಿತರಣೆ ನಡೆಯುತ್ತಿರುವ ಬೀಜ ಗೊಬ್ಬರ ಪಡೆಯಲು ಬೀಜ ದೊರೆತರೆ, ಬೇಕಾದ ರಸಗೊಬ್ಬರ ದೊರೆಯುತ್ತಿಲ್ಲ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ. ಮೂರು-ನಾಲ್ಕು ದಿನಗಳಿಂದಲೂ ಸರಣಿಯಲ್ಲಿ ಗಂಟೆ ಗಟ್ಟಲೆ ಕೇಂದ್ರದ ಎದುರು ನೂರಾರು ರೈತರು ಬೆಳಗ್ಗೆಯಿಂದಲೇ ಸಾಲುಗಟ್ಟಿ ನಿಂತಿರುವ ದೃಶ್ಯ ಸಾಮಾನ್ಯವಾಗಿದೆ. ಮಹಿಳಾ ರೈತರು ಸೇರಿದಂತೆ ಪಿಕೆಪಿಎಸ್ ವ್ಯಾಪ್ತಿಯ ವಿವಿಧ ಗ್ರಾಮಗಳಿಂದ ಬಂದ ರೈತರು ರಸಗೊಬ್ಬರ ಪಡೆಯಲು ಕಾಯುತ್ತಿದ್ದು, ವಿತರಣಾ ಪ್ರಕ್ರಿಯೆ ನಿಧಾನಗತಿ ಹಾಗೂ ಗೊಬ್ಬರ ಕೊರತೆಯಿಂದ ಅಸಮಾಧಾನ ವ್ಯಕ್ತಪಡಿಸಿದರು. ಮುಂಗಾರು ಮಳೆಯ ಹಿನ್ನೆಲೆಯಲ್ಲಿ ಬಿತ್ತನೆಗೆ ಅನುಕೂಲಕರ ವಾತಾವರಣ ನಿರ್ಮಾಣವಾಗಿದ್ದು, ಈ ಸಮಯದಲ್ಲಿ ರಸಗೊಬ್ಬರದ ಅವಶ್ಯಕತೆ ಹೆಚ್ಚಾಗಿದೆ. ಆದರೆ ಬೇಡಿಕೆಗೆ ತಕ್ಕಂತೆ ಪೂರೈಕೆ ಆಗದ ಕಾರಣ ರೈತರು ಹಲವು ಗಂಟೆಗಳ ಕಾಲ ಕಾಯುವಂತಾಗಿದೆ. ಕೆಲವರು ಬೆಳಗ್ಗೆಯಿಂದ ಸಾಲಿನಲ್ಲಿ ನಿಂತರೂ ಗೊಬ್ಬರ ದೊರೆಯುವ ಬಗ್ಗೆ ಅನುಮಾನ ವ್ಯಕ್ತಪಡಿಸಿದರು. ರೈತರು ಮಾತನಾಡಿ, ಕೃಷಿ ಚಟುವಟಿಕೆಗಳ ಮಹತ್ವದ ಸಮಯದಲ್ಲಿ ರಸಗೊಬ್ಬರ ಕೊರತೆ ಎದುರಾಗಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಸರಕಾರ ಮತ್ತು ಸಂಬಂಧಿಸಿದ ಇಲಾಖೆ ಅಧಿಕಾರಿಗಳು ರೈತರ ಅಗತ್ಯವನ್ನು ಮನಗಂಡು ಸಮರ್ಪಕ ಪ್ರಮಾಣದಲ್ಲಿ ರಸಗೊಬ್ಬರ ಪೂರೈಸಬೇಕು ಎಂದು ಒತ್ತಾಯಿಸಿದರು. ಸಮರ್ಪಕ ಗೊಬ್ಬರ ಪೂರೈಸಿ ಅಗತ್ಯ ಪ್ರಮಾಣದ ರಸಗೊಬ್ಬರ ಪೂರೈಕೆ ಮಾಡುವ ಮೂಲಕ ರೈತರ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು. ರೈತರಿಗೆ ಡಿಎಪಿ 20.20.013 ಗೊಬ್ಬರ ಕೊರತೆಯಿದೆ. ಯೂರಿಯಾ ಮಾರಾಟ ಲಭ್ಯವಿಲ್ಲ. ಜನರು ಗೊಬ್ಬರಕ್ಕಾಗಿ ಪರದಾಡುತ್ತಿದ್ದಾರೆ. ಸಕಾಲಕ್ಕೆ ಪಿಕೆಪಿಎಸ್ಗೆ ಅಗತ್ಯ ಮತ್ತು ಸಮಪರ್ಕ ಗೊಬ್ಬರವನ್ನು ದೊರೆಯಬೇಕು. ರೈತರಿಗೆ ನಿರೀಕ್ಷಿತವಾಗಿ ಬೇಡಿದಷ್ಟು ಗೊಬ್ಬರ ದೊರೆಯುತ್ತಿಲ್ಲ. ಬೆಳಿಗ್ಗೆಯಿಂದ ಸಂಜೆಯವರೆಗೆ ಸರಣಿಗೆ ನಿಲ್ಲುವಂತಾಗಿದೆ. ಸರಕಾರ ಕ್ರಮ ಕೈಗೊಳ್ಳಬೇಕು. -ಚಂದ್ರಕಾಂತ ಖೋಬ್ರೆ,  ಕಿಸಾನಸಭಾ ತಾಲೂಕು ಗೌರವ ಅಧ್ಯಕ್ಷರು, ರುದ್ರವಾಡಿ ಗೊಬ್ಬರ ಕೊರತೆಯಿಲ್ಲ ತಾಲೂಕಿನ ಒಟ್ಟು 5 ರೈತ ಸಂಪರ್ಕ ಕೇಂದ್ರ ಹಾಗೂ ಆಯ್ದ ಪಿಕೆಪಿಎಸ್‌ನಲ್ಲಿ ಬಿತ್ತನೆ ಬೀಜ ವಿತರಣೆಗೆ ಕ್ರಮವಹಿಸಲಾಗಿದೆ. ಸರಸಂಬಾ, ನಿರುಗಡಿ, ರುದ್ರವಾಡಿ, ಕಿಣ್ಣಿಸುಲ್ತಾನ ಹೆಚ್ಚುವರಿ ಕೇಂದ್ರಗಳನ್ನಾಗಿ ರಿಯಾಯಿತಿ ದರದಲ್ಲಿ ಬೀಜ ವಿತರಿಸಲಾಗುತ್ತಿದೆ. ಆಳಂದಾ, ರುದ್ರವಾಡಿ, ಕಡಗಂಚಿ, ಮಟಕಿ ಪಿಕೆಪಿಎಸ್‌ಗಳಿಗೆ ಗೊಬ್ಬರ ವಿತರಣೆಗೆ ಅನುಮತಿ ನೀಡಲಾಗಿದೆ. ಗೊಬ್ಬರ ಪೂರೈಕೆಯಲ್ಲಿ ಕೊರತೆಯಿಲ್ಲ. ಆದರೆ ಪಿಕೆಪಿಎಸ್ನವರು ಕಡಿಮೆ ತರಿಸಿದ್ದರಿಂದ ಈ ರೀತಿಯಾಗಿರಬೇಕು. ಮಾರುಕಟ್ಟೆಯಲ್ಲೂ ಲಭ್ಯವಿದೆ. ಅನುಮತಿ ಪಡೆದ ಪಿಕೆಪಿಎಸ್‌ನವರು ಬೇಡಿಕೆಯಷ್ಟು ರಸಗೊಬ್ಬರ ತರಿಸಿಕೊಂಡು ರೈತರಿಗೆ ಪೂರೈಕೆಗೆ ಸೂಚಿಸಲಾಗುವುದು. -ತಿಪ್ಪೇಸ್ವಾಮಿ ವಿ., ಸಹಾಯಕ ಕೃಷಿ ನಿರ್ದೇಶಕ ಆಳಂದ

ವಾರ್ತಾ ಭಾರತಿ 11 Jun 2026 2:21 pm

ಟಿ20 ವಿಶ್ವಕಪ್ ಟೂರ್ನಿ ಆರಂಭಕ್ಕೂ ಮುನ್ನ ಕ್ರಿಕೆಟ್‌ ದೇವರ 'ಆ' ಮಹತ್ವದ ಸಲಹೆ ಸ್ಮರಿಸಿದ ಜೆಮಿಮಾ ರಾಡ್ರಿಗಸ್

Jemimah Rodrigues: ಕ್ರಿಕೆಟ್‌ ಅಭಿಮಾನಿಗಳ ಬಹುನಿರೀಕ್ಷಿತ ಐಸಿಸಿ ಮಹಿಳಾ ಟಿ20 ವಿಶ್ವಕಪ್ 2026ರ ಟೂರ್ನಿ ಶುಕ್ರವಾರ (ಜೂನ್ 12)ದಿಂದ ಆರಂಭವಾಗಲಿದೆ. ಟೀಮ್ ಇಂಡಿಯಾ ಜೂನ್ 14ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ತನ್ನ ಅಭಿಯಾನವನ್ನು ಆರಂಭಿಸಲಿದೆ. ಇದಕ್ಕೂ ಮುನ್ನ ಕಳೆದ ಬಾರಿ ಭಾರತ ಫೈನಲ್‌ ತಲುಪಲು ಪ್ರಮುಖ ಕಾರಣಕರ್ತೆಯಾಗಿದ್ದ ಸ್ಟಾರ್ ಆಟಗಾರ್ತಿ ಜೆಮಿಮಾ ರಾಡ್ರಿಗಸ್ ಸಚಿನ್ ತೆಂಡೂಲ್ಕರ್

ಒನ್ ಇ೦ಡಿಯ 11 Jun 2026 2:16 pm

ದೇವೇಗೌಡ್ರಿಗೆ ರಾಜ್ಯಸಭೆಯಲ್ಲಿ ಮತ್ತೊಂದು ಅವಕಾಶ ಸಿಗಬೇಕಿತ್ತು : ವಯಸ್ಸಾದರೂ, ಚಿನ್ನ ಎಂದಿಗೂ ಚಿನ್ನವೇ!

Deve Gowda for Rajya Sabha : ಮಾಜಿ ಪ್ರಧಾನಿ ಮತ್ತು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರಿಗೆ ಇನ್ನೊಂದು ಅವಕಾಶವನ್ನು ನೀಡಬೇಕಿತ್ತು. ಅವರ ಸದಸ್ಯತ್ವದ ಅವಧಿ ಮುಕ್ತಾಯಗೊಂಡಿದೆ. ರಾಜ್ಯಸಭಾ ಸ್ಥಾನದ ಬಗ್ಗೆ ಮಾತನಾಡಿದ್ದ ದೇವೇಗೌಡ್ರು, ನಾನು ರಾಜ್ಯಸಭಾ ಸ್ಥಾನವನ್ನು ಬಯಸಿರಲಿಲ್ಲ. ರಾಜ್ಯಸಭಾ ಸ್ಥಾನದಿಂದ ನನ್ನ ಮತ್ತು ಪ್ರಧಾನಿ ಮೋದಿಯವರ ಬಾಂಧವ್ಯ ಹಾಳಾಗುವುದಿಲ್ಲ ಎಂದು ಗೌಡ್ರು ಹೇಳಿದ್ದಾರೆ.

ವಿಜಯ ಕರ್ನಾಟಕ 11 Jun 2026 2:12 pm

MT Jalveer :ಒಮಾನ್‌ ಬಳಿ ಭಾರತೀಯ ನಾವಿಕರಿದ್ದ ಮತ್ತೊಂದು ಹಡಗಿನ ಮೇಲೆ ಕ್ಷಿಪಣಿ ದಾಳಿ: ಮಧ್ಯಪ್ರಾಚ್ಯದಲ್ಲಿ ಏನಾಗುತ್ತಿದೆ?

ಮಧ್ಯಪ್ರಾಚ್ಯದಲ್ಲಿ ಸುದೀರ್ಘ ಸಂಘರ್ಷದಲ್ಲಿ ನಿರತವಾಗಿರುವ ಅಮೆರಿಕ ಮತ್ತು ಇರಾನ್‌, ಹಾರ್ಮುಜ್‌ ಜಲಸಂಧಿಯ ಮೇಲೆ ನಿಯಂತ್ರಣ ಸಾಧಿಸಲು ಕಂಡು ಕೇಳರಿಯದ ಯುದ್ಧ ತಂತ್ರಕ್ಕೆ ಮೊರೆ ಹೋಗಿವೆ. ಒಮಾನ್‌ ಕರಾವಳಿ ಬಳಿ ವಾಣಿಜ್ಯ ಹಡಗುಗಳ ಮೇಲೆ ಕ್ಷಿಪಣಿ ದಾಳಿ ನಡೆಸುತ್ತಿರುಯವ ಎರಡೂ ದೇಶಗಳು, ನಾವಿಕರ ಜೀವದೊಂದಿಗೆ ಚೆಲ್ಲಾಟವಾಡುತ್ತಿವೆ. ಎಂಟಿ ಸೆಟ್ಟೆಬೆಲ್ಲೊ ಹಡಗಿನ ಮೇಲೆ ಅಮೆರಿಕದ ಕ್ಷಿಪಣಿ ದಾಳಿಯಲ್ಲಿ ಮೂವರು ಭಾರತೀಯ ನಾವಿಕರು ಸಾವನ್ನಪ್ಪಿದ್ದಾರೆ. ಇದರ ಬೆನ್ನಲ್ಲೇ ಎಂಟಿ ಜಲವೀರ್‌ ಹೆಸರಿನ ಮತ್ತೊಂದು ಹಡಗಿನ ಮೇಲೆ ಕ್ಷಿಪಣಿ ದಾಳಿ ನಡೆಸಲಾಗಿದೆ.

ವಿಜಯ ಕರ್ನಾಟಕ 11 Jun 2026 2:08 pm

ಸಿದ್ದರಾಮಯ್ಯ, ಸತೀಶ್ ಜಾರಕಿಹೊಳಿ ನಡುವೆ ಇದ್ಯಾ ಭಿನ್ನಾಭಿಪ್ರಾಯ, ಗೊಂದಲ ಸೃಷ್ಟಿಗೆ ಯಾರು ಕಾರಣ? ಸಚಿವರ ಸ್ಪಷ್ಟನೆ ಏನು

ಪಕ್ಷಕ್ಕಾಗಿ ಕೆಲಸ ಮಾಡಿದರೆ ಅದಕ್ಕೆ ಕೂಲಿ ಸಿಗುತ್ತದೆ. ಕೆಲಸಕ್ಕೆ ಸಿಕ್ಕ ಕೂಲಿ ಎಂದು ಡಿಕೆ ಶಿವಕುಮಾರ್ ಹೇಳಿಕೆ ಕೊಟ್ಟಿದ್ದರಲ್ಲಿ ತಪ್ಪೇನಿಲ್ಲ. ಅವರು ಗೆಲ್ಲಿಸಿದರೆ ಅವರಿಗೆ ಫಲ ಸಿಗಲಿದೆ. ನನಗೆ ಇನ್ನೂ ವಯಸ್ಸಿದೆ. ಸಿಎಂ ಸ್ಥಾನ ಸಿಗುವ ವಿಚಾರವಾಗಿ ಕಾಯೋಣ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು. ಇನ್ನು ಇದೇ ಸಂದರ್ಭದಲ್ಲಿ ಸಚಿವ ಕೃಷ್ಣಬೈರೇಗೌಡ ಅಸಮಾಧಾನ ವಿಚಾರವಾಗಿ ಮಾತನಾಡಿ, ಖಾತೆಯಲ್ಲಿ ಎಲ್ಲಾ ವಿಭಾಗಗಳು ಒಟ್ಟಿಗೆ ಇದ್ರೆ ಕೆಲಸ ಮಾಡೋಕೆ ಅನುಕೂಲ. ಗೊಂದಲ ಬಗೆಹರಿಸುವುದು ಪಕ್ಷ ಹಾಗೂ ಸರ್ಕಾರದ ಜವಾಬ್ದಾರಿ. ಅವರು ಅದನ್ನ ಬಗೆಹರಿಸ್ತಾರೆ ಎಂದರು.

ವಿಜಯ ಕರ್ನಾಟಕ 11 Jun 2026 1:54 pm

ಕಲಬುರಗಿ: ಅವ್ಯವಸ್ಥೆಗಳ ಆಗರ ಅಲ್ಪಸಂಖ್ಯಾತ ವಸತಿ ಶಾಲೆ

ಚಿಂದಿ ಬೆಡ್, ಮುರಿದ ಬಾಗಿಲು: ದೊಡ್ಡಿಯಂತಹ ಕೋಣೆಯಲ್ಲಿ ವಿದ್ಯಾರ್ಥಿ ಬದುಕು!

ವಾರ್ತಾ ಭಾರತಿ 11 Jun 2026 1:49 pm

Air India Crashಗೆ ಒಂದು ವರ್ಷ: ಗುಜರಾತ್ ರೈತನಿಗೆ ಪ್ರತಿದಿನ ಬರುತ್ತೆ ಪಾಕ್ ಯುವಕನ ಕರೆ

ನಾಳೆ, ಅಂದರೆ 2026ರ ಜೂನ್ 12ಕ್ಕೆ ಭೀಕರ ಏರ್ ಇಂಡಿಯಾ ವಿಮಾನ ದುರಂತ ಸಂಭವಿಸಿ ಭರ್ತಿ ಒಂದು ವರ್ಷ ತುಂಬಲಿದೆ. ಜೂನ್ 12, 2025ರಂದು ನಡೆದ ಈ ದುರಂತದಲ್ಲಿ ನೂರಾರು ಜೀವಗಳು ಗಾಳಿಯಲ್ಲಿ ಲೀನವಾಗಿದ್ದವು. ಈ ಘಟನೆಯ ಮಾಸದ ಗಾಯಗಳ ನಡುವೆಯೇ, ಗಡಿಗಳನ್ನು ಮೀರಿದ ಮಾನವೀಯತೆಯ ಅಪರೂಪದ ಬಾಂಧವ್ಯವೊಂದು ಲಂಡನ್‌ನಿಂದ ಪ್ರತಿದಿನ ಭಾರತಕ್ಕೆ ಹರಿದುಬರುತ್ತಿದೆ. ಈ ದುರಂತದಲ್ಲಿ

ಒನ್ ಇ೦ಡಿಯ 11 Jun 2026 1:32 pm

ಸಂಡೂರು: ಕಳಪೆ ಡಾಂಬರೀಕರಣ ಆರೋಪ : ಕೆಲವೇ ದಿನಗಳಲ್ಲಿ ಗುಂಡಿ ಬಿದ್ದ ರಸ್ತೆ

ಸಂಡೂರು: ಬಳ್ಳಾರಿ ಜಿಲ್ಲೆಯ ಸಂಡೂರು ಪಟ್ಟಣದಲ್ಲಿ ಇತ್ತೀಚೆಗೆ ನಿರ್ಮಿಸಲಾದ ನೂತನ ಡಾಂಬರು ರಸ್ತೆಯ ಗುಣಮಟ್ಟದ ಕುರಿತು ಸಾರ್ವಜನಿಕ ವಲಯದಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದೆ. ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ರಸ್ತೆ ಕೆಲವೇ ದಿನಗಳಲ್ಲಿ ಹಾಳಾಗಿದ್ದು, ಹಲವು ಕಡೆಗಳಲ್ಲಿ ಗುಂಡಿಗಳು ಹಾಗೂ ತಗ್ಗು ಪ್ರದೇಶಗಳು ಉಂಟಾಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಪಟ್ಟಣದ ಪ್ರಮುಖ ಮಾರ್ಗವಾದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ಅರಣ್ಯ ಇಲಾಖೆ ಕಚೇರಿವರೆಗಿನ ರಸ್ತೆಯನ್ನು ಇತ್ತೀಚೆಗೆ ಡಾಂಬರೀಕರಣಗೊಳಿಸಲಾಗಿತ್ತು. ಈ ಹಿಂದೆ ಒಳಚರಂಡಿ ಹಾಗೂ ಕುಡಿಯುವ ನೀರಿನ ಕಾಮಗಾರಿಗಾಗಿ ರಸ್ತೆ ಅಗೆದಿದ್ದು, ಬಳಿಕ ಮರುನಿರ್ಮಾಣ ಮಾಡಲಾಗಿತ್ತು. ಆದರೆ ಕಾಮಗಾರಿ ಪೂರ್ಣಗೊಂಡ ಕೆಲವೇ ದಿನಗಳಲ್ಲಿ ರಸ್ತೆಯ ಹಲವೆಡೆ ಕುಸಿತ ಕಂಡುಬಂದಿದೆ. ವಾಹನ ಸಂಚಾರ ಹೆಚ್ಚಿರುವ ಪ್ರದೇಶಗಳಲ್ಲಿ ರಸ್ತೆ ತಗ್ಗಿ ಗುಂಡಿಗಳು ಉಂಟಾಗಿದ್ದು, ಅವುಗಳನ್ನು ಶಾಶ್ವತವಾಗಿ ದುರಸ್ತಿ ಮಾಡುವ ಬದಲು ಜಲ್ಲಿ ಮತ್ತು ಮಣ್ಣು ತುಂಬಿ ತಾತ್ಕಾಲಿಕವಾಗಿ ತೇಪೆ ಹಾಕಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಇದರಿಂದ ಕಾಮಗಾರಿಯ ಗುಣಮಟ್ಟದ ಬಗ್ಗೆ ಅನುಮಾನ ಮೂಡಿದ್ದು, ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ವಿರುದ್ಧ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಸಾರ್ವಜನಿಕರ ಪ್ರಕಾರ, ರಸ್ತೆ ನಿರ್ಮಾಣದಲ್ಲಿ ಗುಣಮಟ್ಟದ ಮಾನದಂಡಗಳನ್ನು ಪಾಲಿಸದೆ ಕಳಪೆ ಕಾಮಗಾರಿ ನಡೆಸಲಾಗಿದೆ. ಕಾಮಗಾರಿ ಮೇಲ್ವಿಚಾರಣೆ ನಡೆಸಬೇಕಾದ ಅಧಿಕಾರಿಗಳು ಮತ್ತು ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳದಿರುವುದು ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ ಎಂದು ಅವರು ಆರೋಪಿಸಿದ್ದಾರೆ. ಮಳೆಗಾಲ ಆರಂಭವಾಗಿರುವ ಹಿನ್ನೆಲೆಯಲ್ಲಿ ರಸ್ತೆ ಮತ್ತಷ್ಟು ಹದಗೆಡುವ ಸಾಧ್ಯತೆ ಇದ್ದು, ಗುಂಡಿಗಳಲ್ಲಿ ನೀರು ನಿಂತು ವಾಹನ ಸವಾರರು ಹಾಗೂ ಪಾದಚಾರಿಗಳಿಗೆ ಅಪಾಯ ಉಂಟಾಗುವ ಭೀತಿ ಎದುರಾಗಿದೆ. ಆದ್ದರಿಂದ ತಕ್ಷಣ ರಸ್ತೆ ಪರಿಶೀಲನೆ ನಡೆಸಿ, ಕಳಪೆ ಕಾಮಗಾರಿಗೆ ಹೊಣೆಗಾರರ ವಿರುದ್ಧ ಕ್ರಮ ಕೈಗೊಂಡು ಗುಣಮಟ್ಟದ ರಸ್ತೆ ನಿರ್ಮಾಣಕ್ಕೆ ಮುಂದಾಗಬೇಕು. ಸ್ಥಳೀಯ ಶಾಸಕಿ ಅನ್ನಪೂರ್ಣ ತುಕಾರಾಂ, ಸಂಸದರು ಹಾಗೂ ಜಿಲ್ಲಾಡಳಿತ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಗುತ್ತಿಗೆದಾರರ ಜವಾಬ್ದಾರಿಯನ್ನು ನಿಗದಿಪಡಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಸಾರ್ವಜನಿಕರ ತೆರಿಗೆ ಹಣದಲ್ಲಿ ನಿರ್ಮಾಣವಾಗುವ ರಸ್ತೆ ಕೆಲವೇ ದಿನಗಳಲ್ಲಿ ಗುಂಡಿ ಬೀಳುವುದು ಅಭಿವೃದ್ಧಿಯಲ್ಲ, ಅದು ಆಡಳಿತದ ವೈಫಲ್ಯದ ಪ್ರತೀಕವಾಗಿದೆ. ಕಳಪೆ ಕಾಮಗಾರಿಗೆ ಹೊಣೆಗಾರರಾದ ಗುತ್ತಿಗೆದಾರರು ಹಾಗೂ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡು, ಮಳೆಗಾಲದಲ್ಲಿ ಜನರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಗುಣಮಟ್ಟದ ಮತ್ತು ಶಾಶ್ವತ ರಸ್ತೆ ನಿರ್ಮಾಣ ಮಾಡಬೇಕು. -ಎ.ಜಗದೀಶ್, ಸಂಡೂರು ತಾಲೂಕು ಅತಿಥಿ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ

ವಾರ್ತಾ ಭಾರತಿ 11 Jun 2026 1:13 pm

ಆರೆಸ್ಸೆಸ್ v/s ಪ್ರಿಯಾಂಕ್ ಖರ್ಗೆ: ಸೈದ್ಧಾಂತಿಕ ಸಂಘರ್ಷದಲ್ಲಿ ಯಾರ ಕೈ ಮೇಲಾಗಲಿದೆ?

ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಆಡಳಿತಾರೂಢ ಕಾಂಗ್ರೆಸ್ ಮತ್ತು ವಿರೋಧ ಪಕ್ಷವಾದ ಬಿಜೆಪಿ ನಡುವೆ ಸೈದ್ಧಾಂತಿಕ ಮತ್ತು ರಾಜಕೀಯ ಜಟಾಪಟಿ ನಡೆದಿದೆ. ಈ ಸಂಘರ್ಷದ ಸರಣಿಯಲ್ಲಿ ಇತ್ತೀಚೆಗೆ ದೊಡ್ಡ ವಿವಾದ ಸೃಷ್ಟಿಸಿರುವುದು ರಾಜ್ಯದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿರುದ್ಧ ತೆಗೆದುಕೊಂಡಿರುವ ಕಠಿಣ ನಿಲುವು ಮತ್ತು ನೀಡಿರುವ ಎಚ್ಚರಿಕೆ. ದೇಶದ ಅತ್ಯಂತ ಪ್ರಭಾವಿ ಮತ್ತು ದಶಕಗಳಿಂದ ಸಕ್ರಿಯವಾಗಿರುವ ಆರೆಸ್ಸೆಸ್ ಸಂಘಟನೆಯು ಕಾನೂನುಬದ್ಧವಾಗಿ ನೋಂದಾಯಿತ ಸಂಸ್ಥೆಯಲ್ಲ ಎಂಬ ಅಂಶವನ್ನು ಮುನ್ನೆಲೆಗೆ ತರುವ ಮೂಲಕ ಗೃಹ ಸಚಿವರು ರಾಜ್ಯದಲ್ಲಿ ಸಂಘಟನೆಯ ಎಲ್ಲಾ ಘಟಕಗಳು ಮರು-ನೋಂದಣಿ ಮಾಡಿಕೊಳ್ಳಬೇಕು ಅಥವಾ ಸರಕಾರದ ನಿಯಮಾವಳಿಗಳಿಗೆ ಒಳಪಡಬೇಕು ಎಂಬ ಸೂಚನೆಯನ್ನು ನೀಡಿದ್ದಾರೆ ಎಂದು ವರದಿಗಳು ಹರಿದಾಡುತ್ತಿವೆ. ಈ ಬೆಳವಣಿಗೆಯು ಭಾರತೀಯ ರಾಜಕೀಯ ಇತಿಹಾಸದಲ್ಲಿಯೇ ಅಭೂತಪೂರ್ವವಾಗಿದ್ದು, ತೀವ್ರ ಚರ್ಚೆಗಳಿಗೆ ಗ್ರಾಸವಾಗಿದೆ. ಈ ಸಂದರ್ಭದಲ್ಲಿ ಸರಕಾರವೊಂದು ನೂರು ವರ್ಷಗಳ ಇತಿಹಾಸವಿರುವ ಸೈದ್ಧಾಂತಿಕ ಸಂಘಟನೆಯನ್ನು ನಿಯಂತ್ರಿಸಲು ಸಾಧ್ಯವೇ ಎಂಬ ಮೂಲಭೂತ ಪ್ರಶ್ನೆ ಮೂಡುತ್ತದೆ. ಇದರೊಂದಿಗೆ, ದೇಶದ ಇಷ್ಟು ದೊಡ್ಡ ಸಂಘಟನೆ ಇಂದಿಗೂ ಕಾನೂನಿನ ಅಡಿಯಲ್ಲಿ ಔಪಚಾರಿಕವಾಗಿ ನೋಂದಣಿಯಾಗದೆ ಉಳಿದುಕೊಂಡಿರುವುದು ಹೇಗೆ ಮತ್ತು ಇದರ ಹಿಂದೆ ಇರುವ ಕಾನೂನಾತ್ಮಕ ಹಾಗೂ ಸಾಂಸ್ಥಿಕ ರಹಸ್ಯಗಳೇನು ಎಂಬ ಪ್ರಶ್ನೆಗಳೂ ಕಾಡುತ್ತವೆ. ಇವೆಲ್ಲಕ್ಕಿಂತ ಮುಖ್ಯವಾಗಿ, ಗೃಹ ಸಚಿವರ ಈ ನಿಲುವಿನ ಹಿಂದೆ ಕೇವಲ ರಾಜಕೀಯ ಹಿತಾಸಕ್ತಿಗಳಿವೆಯೇ ಅಥವಾ ಸಂವಿಧಾನದ ಆಶಯಗಳನ್ನು ಎತ್ತಿಹಿಡಿಯುವ ನೈಜ ಆಕಾಂಕ್ಷೆ ಇದೆಯೇ ಎಂಬುದು ತೀವ್ರ ವಿಶ್ಲೇಷಣೆಗೆ ಒಳಪಡಬೇಕಾದ ಸಂಗತಿಯಾಗಿದೆ. ಯಾಕೆಂದರೆ ಕಾಂಗ್ರೆಸ್ ಆಗಲಿ, ಪ್ರಿಯಾಂಕ್ ಖರ್ಗೆ ಅವರಾಗಲಿ ಬಿಜೆಪಿ, ಆರೆಸ್ಸೆಸ್ ವಿರುದ್ಧ ಎಷ್ಟು ಕಠಿಣವಾಗಿ ಮಾತಾಡ್ತಾರೋ ಅಷ್ಟೇ ಕಠಿಣ ಕಾನೂನು ಕ್ರಮಕ್ಕೆ ಮುಂದಾದ ನಿದರ್ಶನಗಳು ತೀರಾ ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ. ಕಾಂಗ್ರೆಸ್ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಜರಂಗದಳದಂತಹ ಸಂಘಟನೆಗಳನ್ನು ನಿಷೇಧಿಸುತ್ತೇವೆ ಎಂದು ತನ್ನ ಪ್ರಣಾಳಿಕೆಯಲ್ಲಿ ಹೇಳಿತ್ತು. ಆದರೆ ನಿಷೇಧಿಸುವುದು ಹಾಗಿರಲಿ, ಅದರ ಚಟುವಟಿಕೆಗಳಿಗೆ ಕಡಿವಾಣ ಹಾಕುವುದೂ ಕಾಂಗ್ರೆಸ್ ಸರಕಾರಕ್ಕೆ ಸಾಧ್ಯವಾಗಿಲ್ಲ. ಸಾಧ್ಯವಾಗಿಲ್ಲ ಅನ್ನುವುದಕ್ಕಿಂತಲೂ ಕಾಂಗ್ರೆಸ್ ಆ ನಿಟ್ಟಿನಲ್ಲಿ ಪ್ರಯತ್ನವನ್ನೂ ಮಾಡಿಲ್ಲ ಅಂದರೆ ಹೆಚ್ಚು ಸರಿ. ಇನ್ನು ಪ್ರಿಯಾಂಕ್ ಖರ್ಗೆ - ಕಾಂಗ್ರೆಸ್‌ನಲ್ಲಿ ಆರೆಸ್ಸೆಸ್ ವಿರುದ್ಧ ನೇರಾನೇರ ಸವಾಲು ಹಾಕಿ ಮಾತಾಡುವ ಕೆಲವೇ ಕೆಲವು ಮುಖಂಡರಲ್ಲಿ ಅವರೂ ಒಬ್ಬರು. ಅಷ್ಟರ ಮಟ್ಟಿಗೆ ಅವರಿಗೆ ಸಾಂವಿಧಾನಿಕ ಬದ್ಧತೆ ಇದೆ. ಅವರು ಮಾತಿನಲ್ಲಿ ಖಡಕ್, ಆದರೆ ಕ್ರಮದ ವಿಚಾರ ಬರುವಾಗ ಪ್ರಿಯಾಂಕ್ ಖರ್ಗೆ ಅಷ್ಟೇ ನೇರ, ನಿಷ್ಠುರವಾಗಿ ನಡೆದುಕೊಳ್ಳುತ್ತಾರೆ ಅನ್ನುವುದಕ್ಕೆ ಸಾಕ್ಷ್ಯ ಕಡಿಮೆ ಇದೆ. ಕರ್ನಾಟಕದಲ್ಲಿ ಬಿಜೆಪಿ, ಸಂಘಪರಿವಾರ ಹಾಗೂ ಅದರ ಐಟಿ ಸೆಲ್ ದ್ವೇಷ ಪ್ರಚಾರ ಮಾಡುತ್ತಲೇ ಇದೆ. ಈಗಲೂ ಯಾವುದೇ ಅಡೆತಡೆಯಿಲ್ಲದೆ ಈ ದ್ವೇಷ ಪ್ರಸಾರ ನಡೆಯುತ್ತಿದೆ. ಆದರೆ ಅದನ್ನು ತಡೆಯುವಲ್ಲಿ ಕಾಂಗ್ರೆಸ್ ಸರಕಾರ ಸಂಪೂರ್ಣ ವಿಫಲವಾಗಿದೆ ಮಾಧ್ಯಮಗಳ ವರದಿಗಳ ಪ್ರಕಾರ, ಪ್ರಿಯಾಂಕ್ ಖರ್ಗೆ ಅವರು ಗೃಹ ಸಚಿವರಾಗಿ ಅಧಿಕಾರ ವಹಿಸಿಕೊಂಡ ನಂತರ ಆರೆಸ್ಸೆಸ್ ಮೂಲಗಳಿಂದ ಅವರಿಗೆ ಜೀವ ಬೆದರಿಕೆ ಕರೆಗಳು ಬಂದಿದ್ದವು ಎನ್ನಲಾಗಿದೆ. ಆದರೆ ಈ ಬೆದರಿಕೆಗಳಿಗೆ ಸೊಪ್ಪು ಹಾಕದ ಪ್ರಿಯಾಂಕ್‌ಖರ್ಗೆ, ಸಂಘಟನೆಯ ಸಾಂಸ್ಥಿಕ ಸ್ವರೂಪ ಮತ್ತು ಅದರ ನೆಲೆಗಳನ್ನು ಕಾನೂನಿನ ಚೌಕಟ್ಟಿಗೆ ತರಲು ಮುಂದಾಗಿದ್ದಾರೆ. ಆರೆಸ್ಸೆಸ್ ಭಾರತದ ಕಾನೂನಿನ ಅಡಿಯಲ್ಲಿ, ಅಂದರೆ 1860ರ ಸೊಸೈಟೀಸ್ ನೋಂದಣಿ ಕಾಯ್ದೆಯ ಅಡಿಯಲ್ಲಿ ನೋಂದಾಯಿಸಲ್ಪಟ್ಟ ಅಧಿಕೃತ ಸಂಘಟನೆಯಲ್ಲ ಎಂಬುದು ಇಲ್ಲಿ ಗಮನಾರ್ಹವಾದ ವಿಷಯ. ಆರೆಸ್ಸೆಸ್ ತನ್ನನ್ನು ತಾನು ಕೇವಲ ವ್ಯಕ್ತಿಗಳ ಒಕ್ಕೂಟ ಅಥವಾ ‘ಬಾಡಿ ಆಫ್ ಇಂಡಿವಿಜುವಲ್ಸ್’ ಎಂದು ಕರೆದುಕೊಳ್ಳುತ್ತದೆ. ಈ ರೀತಿಯಾಗಿ ಔಪಚಾರಿಕ ರಚನೆಯನ್ನು ಹೊಂದದೆ ಇರುವುದರಿಂದ, ಅದರ ಆಂತರಿಕ ಹುದ್ದೆಗಳ ಸ್ವರೂಪ, ನಾಯಕರ ಹೊಣೆಗಾರಿಕೆ ಮತ್ತು ಅದರ ಸಾಂಸ್ಥಿಕ ಕಾರ್ಯವೈಖರಿಗಳಿಗೆ ಯಾವುದೇ ಕಾನೂನಾತ್ಮಕ ನೀಲನಕ್ಷೆ ಇಲ್ಲದಂತಾಗಿದೆ. ಇತಿಹಾಸವನ್ನು ಗಮನಿಸಿದರೆ, ಮಹಾತ್ಮಾ ಗಾಂಧೀಜಿಯವರ ಹತ್ಯೆಯ ಸಂದರ್ಭದಲ್ಲಿ, ತುರ್ತು ಪರಿಸ್ಥಿತಿಯ ಅವಧಿಯಲ್ಲಿ ಮತ್ತು ಬಾಬರಿ ಮಸೀದಿ ಧ್ವಂಸದ ಸಮಯದಲ್ಲಿ ಆರೆಸ್ಸೆಸ್ ಅನ್ನು ದೇಶದಲ್ಲಿ ಮೂರು ಬಾರಿ ನಿಷೇಧಿಸಲಾಗಿತ್ತು. ಮೊದಲ ಬಾರಿ ನಿಷೇಧವನ್ನು ಹಿಂಪಡೆಯುವಾಗ ಸಂಘಟನೆಯು ತನ್ನದೇ ಆದ ಸಂವಿಧಾನವನ್ನು ಹೊಂದಿರಬೇಕು ಎಂದು ಅಂದಿನ ಗೃಹ ಸಚಿವರಾಗಿದ್ದ ಸರ್ದಾರ್ ವಲ್ಲಭಭಾಯಿ ಪಟೇಲರು ಷರತ್ತು ವಿಧಿಸಿದ್ದರು. ಆದರೆ ಈ ಸಂವಿಧಾನವು ಕೇವಲ ನಿಷೇಧದಿಂದ ಪಾರಾಗಲು ಸೃಷ್ಟಿಸಿದ ದಾಖಲೆಯಾಗಿದೆಯೇ ಹೊರತು ಇಂದಿಗೂ ಸಾಮಾನ್ಯ ಜನರಿಗಾಗಲಿ ಅಥವಾ ಸ್ವತಃ ಸಂಘಟನೆಯ ಕಾರ್ಯಕರ್ತರಿಗಾಗಲಿ ಲಭ್ಯವಿಲ್ಲ ಮತ್ತು ಎಲ್ಲೂ ಪ್ರಕಟಿಸಲ್ಪಟ್ಟಿಲ್ಲ ಎಂಬ ಟೀಕೆಗಳಿವೆ. ಈ ಇಡೀ ವಿದ್ಯಮಾನದ ಆಳವಾದ ವಿಶ್ಲೇಷಣೆ ಮಾಡಿದಾಗ, ಆರೆಸ್ಸೆಸ್ ಸಂಘಟನೆಯು ಅತ್ಯಂತ ವ್ಯವಸ್ಥಿತವಾದ ಆದರೆ ರಹಸ್ಯವಾದ ಶೈಲಿಯಲ್ಲಿ ಕಾರ್ಯನಿರ್ವಹಿಸುತ್ತದೆ ಎಂಬುದು ಸ್ಪಷ್ಟವಾಗುತ್ತದೆ. ಕಮ್ಯುನಿಸ್ಟ್ ಅಥವಾ ಕಾಂಗ್ರೆಸ್‌ನಂತಹ ರಾಜಕೀಯ ಪಕ್ಷಗಳು ತಮ್ಮ ನಿರ್ಧಾರಗಳು, ಪತ್ರಿಕಾ ಪ್ರಕಟಣೆಗಳು ಮತ್ತು ಸಾಂಸ್ಥಿಕ ವಿವಾದಗಳನ್ನು ಬಹಿರಂಗವಾಗಿ ಚರ್ಚಿಸಿ ಸಾರ್ವಜನಿಕರಿಗೆ ಉತ್ತರದಾಯಿಯಾಗಿರುತ್ತವೆ. ಆದರೆ ಆರೆಸ್ಸೆಸ್ ಯಾವುದೇ ಅಧಿಕೃತ ಲೆಟರ್‌ಹೆಡ್, ಲಿಖಿತ ಸುತ್ತೋಲೆಗಳು ಅಥವಾ ಬಹಿರಂಗ ಪ್ರಕಟಣೆಗಳಿಲ್ಲದೆ ನಾಗಪುರದ ಕೇಂದ್ರ ಕಚೇರಿಯಿಂದ ಹಿಡಿದು ದೇಶದ ಕಟ್ಟಕಡೆಯ ಹಳ್ಳಿಯವರೆಗೂ ತನ್ನ ನಿರ್ಧಾರಗಳನ್ನು ಕೇವಲ ಮೌಖಿಕ ಸಂದೇಶಗಳ ಮೂಲಕ ಅನುಷ್ಠಾನಗೊಳಿಸುವ ಅದ್ಭುತ ನೆಟ್‌ವರ್ಕ್ ಹೊಂದಿದೆ. ಭಾರತದಾದ್ಯಂತ ನಡೆದ ಹಲವಾರು ಕೋಮು ಗಲಭೆಗಳಲ್ಲಿ ಸಂಘಟನೆಯ ಕೈವಾಡವಿದೆ ಎಂದು ವಿವಿಧ ತನಿಖಾ ಆಯೋಗಗಳು ಬೆರಳು ಮಾಡಿವೆಯಾದರೂ, ಯಾವುದೇ ಲಿಖಿತ ಪುರಾವೆಗಳು ಇಲ್ಲದಿರುವುದರಿಂದ ಕಾನೂನಿನ ಅಡಿಯಲ್ಲಿ ಅದನ್ನು ಸಿಲುಕಿಸುವುದು ಅಸಾಧ್ಯವಾಗಿದೆ. ಆರ್ಥಿಕ ದೃಷ್ಟಿಕೋನದಿಂದಲೂ, ಆರೆಸ್ಸೆಸ್ ನೇರವಾಗಿ ಯಾವುದೇ ದೇಣಿಗೆ ಅಥವಾ ವಿದೇಶಿ ಹಣವನ್ನು ತನ್ನ ಹೆಸರಿನಲ್ಲಿ ಸ್ವೀಕರಿಸುವುದಿಲ್ಲ; ಬದಲಿಗೆ ಅದರ ಅಡಿಯಲ್ಲಿರುವ ವಿಶ್ವ ಹಿಂದೂ ಪರಿಷತ್, ಬಜರಂಗದಳದಂತಹ ನೂರಾರು ನೋಂದಾಯಿತ ಸಹವರ್ತಿ ಸಂಘಟನೆಗಳ ಮೂಲಕ ಹಣಕಾಸಿನ ವ್ಯವಹಾರಗಳನ್ನು ನಿಯಂತ್ರಿಸಲಾಗುತ್ತದೆ. ಈ ರಹಸ್ಯ ಮತ್ತು ಅಪಾರದರ್ಶಕ ಸಾಂಸ್ಥಿಕ ಶೈಲಿಯೇ ಸಂಘಟನೆಯ ಅತ್ಯಂತ ದೊಡ್ಡ ಶಕ್ತಿಯಾಗಿದೆ. ಅಲ್ಲದೆ ಸಂಘಟನೆಯ ಒಳಗೆ ಯಾವುದೇ ಪ್ರಜಾಪ್ರಭುತ್ವದ ಮಾದರಿಯ ಚುನಾವಣಾ ಪ್ರಕ್ರಿಯೆಗಳಿಲ್ಲದೆ, ಉತ್ತರಾಧಿಕಾರದ ರೂಪದಲ್ಲಿ ಕೇವಲ ಉನ್ನತ ಜಾತಿಗೆ ಸೇರಿದ ವ್ಯಕ್ತಿಗಳೇ ಸರಸಂಘಚಾಲಕರಾಗಿ ನೇಮಕಗೊಳ್ಳುವ ಸಂಪ್ರದಾಯ ಮುಂದುವರಿದುಕೊಂಡು ಬಂದಿದೆ. ಪ್ರಿಯಾಂಕ್ ಖರ್ಗೆ ಅವರ ಈ ಇತ್ತೀಚಿನ ಕಾನೂನಾತ್ಮಕ ಸವಾಲು ಆರೆಸ್ಸೆಸ್‌ನ ಇಂತಹ ಅಪಾರದರ್ಶಕ ಅಸ್ತಿತ್ವದ ಬುಡಕ್ಕೇ ಕೈಹಾಕುವ ಧೀರ ಪ್ರಯತ್ನವಾಗಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಮುನ್ನವೇ ದ್ವೇಷದ ಅಪರಾಧಗಳನ್ನು ಮತ್ತು ಕೋಮು ಸಂಘರ್ಷಗಳನ್ನು ತಡೆಯುವುದಾಗಿ ಘೋಷಿಸಿತ್ತು, ಅದರಂತೆ ಸರಕಾರವು ದ್ವೇಷದ ಅಪರಾಧ ತಡೆ ಕಾಯ್ದೆಯನ್ನು ಜಾರಿಗೆ ತಂದಿದೆ. ಹಿಜಾಬ್ ವಿವಾದದಂತಹ ತೀವ್ರ ಕೋಮು ಪ್ರಕ್ಷುಬ್ಧತೆಗಳನ್ನು ಕಂಡಿದ್ದ ಕರ್ನಾಟಕದಲ್ಲಿ ಇಂದು ಅಂತಹ ಘಟನೆಗಳು ಗಣನೀಯವಾಗಿ ಕಡಿಮೆಯಾಗಿರುವುದು ಸರಕಾರದ ಕಠಿಣ ನಿಲುವಿಗೆ ಸಾಕ್ಷಿಯಾಗಿದೆ. ಆದರೆ, ಒಂದು ರಾಜ್ಯ ಸರಕಾರವಾಗಿ ಕರ್ನಾಟಕಕ್ಕೆ ಆರೆಸ್ಸೆಸ್ ಅನ್ನು ಸಂಪೂರ್ಣವಾಗಿ ನಿಷೇಧಿಸಲು ಅಥವಾ ರಾಷ್ಟ್ರಮಟ್ಟದ ಅದರ ಕಾರ್ಯವೈಖರಿಯನ್ನು ಸಂಪೂರ್ಣವಾಗಿ ಬದಲಾಯಿಸಲು ಕಾನೂನಿನ ಮಿತಿಗಳಿರುತ್ತವೆ. ಆದ್ದರಿಂದ ಖರ್ಗೆ ಅವರ ಈ ಎಚ್ಚರಿಕೆಯನ್ನು ಕೇವಲ ಒಂದು ಆಡಳಿತಾತ್ಮಕ ಆದೇಶವಾಗಿ ನೋಡುವ ಬದಲು, ಆರೆಸ್ಸೆಸ್‌ನ ಸೈದ್ಧಾಂತಿಕ ಪ್ರಾಬಲ್ಯಕ್ಕೆ ಹಾಕಿದ ಪ್ರಬಲ ರಾಜಕೀಯ ಸವಾಲು ಎಂದು ಪರಿಗಣಿಸಬೇಕಾಗುತ್ತದೆ. ಕರ್ನಾಟಕ ಸರಕಾರದ ಈ ನಡೆ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನದ ಸರ್ವೋಚ್ಚತೆಯನ್ನು ನೆನಪಿಸುವ ಅತ್ಯಂತ ಪ್ರಮುಖವಾದ ಹೆಜ್ಜೆಯಾಗಿದೆ. ಯಾವುದೇ ಸಂಘಟನೆಯು ಕಾನೂನಿಗಿಂತ ಮಿಗಿಲಲ್ಲ ಮತ್ತು ಪ್ರತಿಯೊಂದು ಸಂಸ್ಥೆಯೂ ಸಾರ್ವಜನಿಕವಾಗಿ ಉತ್ತರದಾಯಿಯಾಗಿರಬೇಕು ಎಂಬ ತತ್ವವನ್ನು ಇದು ಪ್ರತಿಪಾದಿಸುತ್ತದೆ. ಪ್ರಿಯಾಂಕ್ ಖರ್ಗೆ ಅವರ ನಿಲುವು ದೇಶದಲ್ಲಿ ದಶಕಗಳಿಂದ ಆಡಳಿತ ನಡೆಸಿದ ಕಾಂಗ್ರೆಸ್ ಸರಕಾರಗಳು ಆರೆಸ್ಸೆಸ್‌ನ ಸಾಂಸ್ಥಿಕ ರಹಸ್ಯದ ವಿರುದ್ಧ ತೆಗೆದುಕೊಳ್ಳಲು ಹಿಂಜರಿದಿದ್ದ ಕಠಿಣ ನಿಲುವನ್ನು ಇಂದು ಮುಂಚೂಣಿಗೆ ತಂದಿದೆ. ಈ ಸೈದ್ಧಾಂತಿಕ ಹೋರಾಟವು ಕೇವಲ ಕರ್ನಾಟಕಕ್ಕೆ ಸೀಮಿತವಾಗಿರದೆ, ಮುಂಬರುವ ದಿನಗಳಲ್ಲಿ ಇಡೀ ದೇಶದ ರಾಜಕೀಯದ ಮೇಲೆ ತೀವ್ರ ಪರಿಣಾಮ ಬೀರುವ ಸಾಧ್ಯತೆಗಳನ್ನು ನಿರಾಕರಿಸುವಂತಿಲ್ಲ.

ವಾರ್ತಾ ಭಾರತಿ 11 Jun 2026 1:12 pm

ಮನರೇಗಾ ವೇತನ ಅನುಪಾತ ಹೆಚ್ಚಿಸಿ : ಕೇಂದ್ರ ಸರಕಾರಕ್ಕೆ ಈಶ್ವರ್‌ ಖಂಡ್ರೆ ಒತ್ತಾಯ

60:40 ಮಾದರಿ ರಾಜ್ಯಗಳಿಗೆ ಹೊರೆಯಾಗಲಿದೆ; ಕನಿಷ್ಠ 80:20 ಅನುಪಾತ ಜಾರಿಗೆ ಆಗ್ರಹ

ವಾರ್ತಾ ಭಾರತಿ 11 Jun 2026 1:07 pm

ಒಮಾನ್ ಕರಾವಳಿಯಲ್ಲಿ ತೈಲ ಟ್ಯಾಂಕರ್‌ ಮೇಲೆ ಅಮೆರಿಕದಿಂದ ದಾಳಿ; ಇಬ್ಬರು ಭಾರತೀಯ ಸಿಬ್ಬಂದಿ ಮೃತ್ಯು, ಓರ್ವ ನಾಪತ್ತೆ : ವರದಿ

ಹೊಸದಿಲ್ಲಿ: ಒಮಾನ್‌ ಕರಾವಳಿಯ ಸಮೀಪ ಮಂಗಳವಾರ ರಾತ್ರಿ ಸೆಟ್ಟೆಬೆಲ್ಲೊ ತೈಲ ಟ್ಯಾಂಕರ್‌ ಮೇಲೆ ಅಮೆರಿಕ ನಡೆಸಿದ ದಾಳಿಯಲ್ಲಿ ಇಬ್ಬರು ಭಾರತೀಯ ಸಿಬ್ಬಂದಿ ಮೃತಪಟ್ಟಿದ್ದು, ಮತ್ತೊಬ್ಬರು ನಾಪತ್ತೆಯಾಗಿದ್ದಾರೆ ಎಂದು the hindu ವರದಿ ಮಾಡಿದೆ. ಫಾರ್ವರ್ಡ್‌ ಸೀಮೆನ್ಸ್‌ ಯೂನಿಯನ್‌ ಆಫ್‌ ಇಂಡಿಯಾ (FSUI) ಪ್ರಧಾನ ಕಾರ್ಯದರ್ಶಿ ಮನೋಜ್‌ ಯಾದವ್‌ ನೀಡಿದ ಮಾಹಿತಿಯ ಪ್ರಕಾರ, ಮೃತಪಟ್ಟವರನ್ನು ಡೆಕ್‌ ಕೆಡೆಟ್‌ ಆದಿತ್ಯ ಶರ್ಮಾ ಮತ್ತು ಇಂಜಿನ್‌ ಫಿಟ್ಟರ್‌ ಶಿವಾನಂದ್‌ ಚೌರಾಸಿಯಾ ಎಂದು ಗುರುತಿಸಲಾಗಿದೆ. ಮುಖ್ಯ ಇಂಜಿನಿಯರ್‌ ಪಟ್ನಾಲ ಸುರೇಶ್‌ ಅವರ ಸುಳಿವು ಇನ್ನೂ ಲಭ್ಯವಾಗಿಲ್ಲ. ಈ ಘಟನೆಯ ಬಳಿಕ ಭಾರತ ಸರಕಾರ ಬುಧವಾರ ಅಮೆರಿಕದ ಉಪ ಮಿಷನ್‌ ಮುಖ್ಯಸ್ಥ ಜೇಸನ್‌ ಮೀಕ್ಸ್‌ ಅವರನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಕರೆಸಿ ತೀವ್ರ ಆಕ್ಷೇಪ ಮತ್ತು ಪ್ರತಿಭಟನೆಯನ್ನು ವ್ಯಕ್ತಪಡಿಸಿದೆ. ಮಂಗಳವಾರ ಸಂಜೆ ಒಮಾನ್‌ ಕೊಲ್ಲಿಯ ಮೂಲಕ ಸಾಗುತ್ತಿದ್ದ ಸೆಟ್ಟೆಬೆಲ್ಲೊ ಟ್ಯಾಂಕರ್‌ ಮೇಲೆ ‘ನಿಖರ ದಾಳಿ’ ನಡೆಸಲಾಗಿದೆ ಎಂದು ಅಮೆರಿಕದ ಸೆಂಟ್ರಲ್‌ ಕಮಾಂಡ್‌ (CENTCOM) ಹೇಳಿದೆ. ಹಡಗು ಇರಾನ್‌ ನ ತೈಲವನ್ನು ಸಾಗಿಸುತ್ತಿತ್ತು. ಹಡಗಿನ ಸಿಬ್ಬಂದಿ ಅಮೆರಿಕದ ಪಡೆಗಳ ಸೂಚನೆಗಳನ್ನು ಪಾಲಿಸಿರಲಿಲ್ಲ. ಇದರಿಂದ ಟ್ಯಾಂಕರ್‌ ಮೇಲೆ ನಿಖರ ದಾಳಿ ನಡೆಸಲಾಯಿತು ಎಂದು CENTCOM ಹೇಳಿದೆ.

ವಾರ್ತಾ ಭಾರತಿ 11 Jun 2026 1:03 pm

ಹನಿಮೂನಿಗೆ ಅಪ್ಪ-ಅಮ್ಮನ ಕರ್ಕೊಂಡು ಬಂದ ಪತಿ, ಪ್ರೈವೇಸಿ ಇಲ್ಲವೆಂದು ಡಿವೋರ್ಸ್‌ಗೆ ಅಪ್ಲೈ ಮಾಡಿದ ಪತ್ನಿ

ಹನಿಮೂನ್ ಎಂದರೆ ಹೊಸದಾಗಿ ಮದುವೆಯಾದ ದಂಪತಿಗಳು ಪರಸ್ಪರ ಅರ್ಥಮಾಡಿಕೊಳ್ಳಲು ಮತ್ತು ತಮ್ಮ ವೈವಾಹಿಕ ಜೀವನದ ಆರಂಭವನ್ನು ಸಂಭ್ರಮಿಸಲು ಕೈಗೊಳ್ಳುವ ಒಂದು ರೋಮ್ಯಾಂಟಿಕ್ ಪ್ರವಾಸವಾಗಿದೆ. ಆದರೆ ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳುವ ಸಲುವಾಗಿ ಏರ್ಪಡಿಸಿ ಪ್ರವಾಸವೇ ಇದೀಗ ಒಬ್ಬರನ್ನೊಬ್ಬರು ದೂರ ತಳ್ಳುವಂತೆ ಮಾಡಿದೆ. ಮದುವೆಯಾಗಿ ಹೊಸ ಜೀವನದ ಕನಸು ಹೊತ್ತು ಮುಂದುವರಿಯಬೇಕಾದ ನವ ಜೋಡಿ ಇದೀಗ ಒಬ್ಬರಿಗೊಬ್ಬರು ಬೆರಳು ತೋರಿಸುತ್ತಾ ಸಂಸಾರ

ಒನ್ ಇ೦ಡಿಯ 11 Jun 2026 1:01 pm

ದೇಶದ GDPಯಲ್ಲಿ ಶೇ.56ಕ್ಕೆ ಏರಿದ ಔಪಚಾರಿಕ ವಲಯದ ಪಾಲು: GST ಕಡಿತದಿಂದ ಉದ್ಯೋಗ ಸೃಷ್ಟಿ ಮತ್ತು ಆದಾಯ ಹೆಚ್ಚಳದ ನಿರೀಕ್ಷೆ!

ದೇಶದಲ್ಲಿ UPI ಹಾಗೂ GST ವ್ಯವಸ್ಥೆಯಿಂದಾಗಿ ಆರ್ಥಿಕತೆ ಔಪಚಾರಿಕಗೊಳ್ಳುತ್ತಿದ್ದು, GDPಯಲ್ಲಿ ಇದರ ಪಾಲು ಶೇ. 56ಕ್ಕೆ ತಲುಪಿದೆ. ಆದಾಗ್ಯೂ, ಶೇ. 82ರಷ್ಟು ಕಾರ್ಮಿಕರು ಇನ್ನೂ ಅನೌಪಚಾರಿಕ ವಲಯದಲ್ಲೇ ಉಳಿದಿದ್ದಾರೆ. ಉದ್ಯೋಗ ನೇಮಕಾತಿ ಸೇವೆಗಳ ಮೇಲಿನ ಜಿಎಸ್‌ಟಿಯನ್ನು ಶೇ. 18ರಿಂದ ಶೇ. 5ಕ್ಕೆ ಇಳಿಸುವುದರಿಂದ ಹೆಚ್ಚಿನ ಉದ್ಯೋಗಗಳು ಸೃಷ್ಟಿಯಾಗಿ, ದೀರ್ಘಾವಧಿಯಲ್ಲಿ ಸರ್ಕಾರದ ಜಿಎಸ್‌ಟಿ ಆದಾಯ ಮತ್ತು ಸಾಮಾಜಿಕ ಭದ್ರತಾ ವ್ಯಾಪ್ತಿ ಗಣನೀಯವಾಗಿ ಹೆಚ್ಚಲಿದೆ ಎಂದು ಉದ್ಯಮ ವಲಯ ವಿಶ್ಲೇಷಿಸಿದೆ.

ವಿಜಯ ಕರ್ನಾಟಕ 11 Jun 2026 12:52 pm

ಅಯೋಧ್ಯೆ ರಾಮಮಂದಿರ ದೇಣಿಗೆ ಅಕ್ರಮಕ್ಕೆ ಭಾರೀ ಟ್ವಿಸ್ಟ್ : ’ಅವರು ಬಲಾಢ್ಯರು, ಸತ್ಯ ಹೇಳಿದ್ರೆ ನನಗೆ ಸಂಕಷ್ಟ’ - ಬಿಜೆಪಿ ನಾಯಕ

Ayodhya Ram Mandir Fund Irregularities : ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಾಣಕ್ಕೆ ಕೋಟ್ಯಾಂತರ ರೂಪಾಯಿ ಹರಿದು ಬಂದಿತ್ತು. ದೇಣಿಗೆ ಹಣವನ್ನು ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ ಎನ್ನುವ ಆರೋಪವು ದೇಶಾದ್ಯಂತ ದೊಡ್ದ ಚರ್ಚೆಯಲ್ಲಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ, ಬಿಜೆಪಿ ನಾಯಕರೊಬ್ಬರ ಹೇಳಿಕೆ, ಇಡೀ ವಿವಾದಕ್ಕೆ ಹೊಸ ಆಯಾಮವನ್ನು ನೀಡಿದೆ.

ವಿಜಯ ಕರ್ನಾಟಕ 11 Jun 2026 12:34 pm

ತಿಪಟೂರು ಶಾಸಕ ಷಡಕ್ಷರಿಗೆ ಅನಾರೋಗ್ಯ: ದೆಹಲಿಯ ಖಾಸಗಿ ‌ಆಸ್ಪತ್ರೆಗೆ ದಾಖಲಿಸಿ ಐಸಿಯುನಲ್ಲಿ ಚಿಕಿತ್ಸೆ

ತಿಪಟೂರು ಶಾಸಕ ಷಡಕ್ಷರಿ ಅವರ ಆರೋಗ್ಯದಲ್ಲಿ ಏರುಪೇರಾಗಿದೆ. ಖಾಸಗಿ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆ ನೀಡಲಾಗ್ತಿದೆ.

ವಿಜಯ ಕರ್ನಾಟಕ 11 Jun 2026 12:18 pm

22–30% ಎಥೆನಾಲ್‌ ಮಿಶ್ರಿತ ಪೆಟ್ರೋಲ್‌ಗೆ ಅಬಕಾರಿ ಸುಂಕ ರದ್ದುಗೊಳಿಸಿದ ಕೇಂದ್ರ ಸರಕಾರ

ಹೊಸದಿಲ್ಲಿ: 22ರಿಂದ 30ಶೇಕಡಾ ಎಥೆನಾಲ್‌ ಮಿಶ್ರಿತ ಪೆಟ್ರೋಲ್‌ ಮೇಲಿನ ಅಬಕಾರಿ ಸುಂಕವನ್ನು ಕೇಂದ್ರ ಸರಕಾರ ರದ್ದುಗೊಳಿಸಿದೆ. ಪರ್ಯಾಯ ಇಂಧನಗಳ ಬಳಕೆಯನ್ನು ಉತ್ತೇಜಿಸುವುದು ಹಾಗೂ ಆಮದು ಮಾಡಿಕೊಳ್ಳುವ ಕಚ್ಚಾ ತೈಲದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವುದು ಈ ಕ್ರಮದ ಉದ್ದೇಶವಾಗಿದೆ. ಬುಧವಾರ ಹೊರಡಿಸಿದ ಅಧಿಸೂಚನೆಯ ಪ್ರಕಾರ, 22ರಿಂದ 30% ಎಥೆನಾಲ್‌ ಅಂಶ ಹೊಂದಿರುವ ಪೆಟ್ರೋಲ್‌ಗೆ ಅಬಕಾರಿ ಸುಂಕದಿಂದ ವಿನಾಯಿತಿ ನೀಡಲಾಗಿದೆ. ವಿಶ್ವದ ಮೂರನೇ ಅತಿದೊಡ್ಡ ತೈಲ ಆಮದುದಾರ ಹಾಗೂ ಬಳಕೆದಾರ ರಾಷ್ಟ್ರವಾಗಿರುವ ಭಾರತವು, ಇಂಧನ ಭದ್ರತೆಯನ್ನು ಬಲಪಡಿಸುವ ಉದ್ದೇಶದಿಂದ ಪೆಟ್ರೋಲ್‌ ನಲ್ಲಿ ಎಥೆನಾಲ್‌ ಮಿಶ್ರಣದ ಪ್ರಮಾಣವನ್ನು ಹೆಚ್ಚಿಸುತ್ತಿದೆ. ಈ ಹಿನ್ನೆಲೆಯಲ್ಲಿ ಹೊಸ ನಿರ್ಧಾರ ಕೈಗೊಳ್ಳಲಾಗಿದೆ. ಅಬಕಾರಿ ಸುಂಕವು ಇಂಧನ ಸೇರಿದಂತೆ ಕೆಲವು ಸರಕುಗಳ ಮೇಲೆ ಸರಕಾರ ವಿಧಿಸುವ ತೆರಿಗೆಯಾಗಿದೆ. ಈಗ 22ರಿಂದ 30 ಶೇಕಡಾ ಎಥೆನಾಲ್‌ ಮಿಶ್ರಿತ ಪೆಟ್ರೋಲ್‌ ಗೆ ಈ ತೆರಿಗೆ ಅನ್ವಯಿಸುವುದಿಲ್ಲ. ಇದರಿಂದ ಇಂತಹ ಇಂಧನದ ಉತ್ಪಾದನೆ ಮತ್ತು ಪೂರೈಕೆಗೆ ಉತ್ತೇಜನ ಸಿಗುವ ನಿರೀಕ್ಷೆಯಿದೆ. ಆದರೆ, ಪೆಟ್ರೋಲ್‌ ಬಂಕ್‌ಗಳಲ್ಲಿ ಮಾರಾಟವಾಗುವ ಸಾಮಾನ್ಯ ಪೆಟ್ರೋಲ್‌ಗೆ ಸಂಬಂಧಿಸಿದಂತೆ ಯಾವುದೇ ತಕ್ಷಣದ ಬದಲಾವಣೆಗಳನ್ನು ಸರಕಾರ ಘೋಷಿಸಿಲ್ಲ. ಹೀಗಾಗಿ ಗ್ರಾಹಕರ ಮೇಲೆ ಈ ನಿರ್ಧಾರದ ಪರಿಣಾಮ ತಕ್ಷಣ ಗೋಚರಿಸುವ ಸಾಧ್ಯತೆ ಕಡಿಮೆ. ಭಾರತ ತನ್ನ ಇಂಧನ ಅಗತ್ಯಗಳ ಬಹುಪಾಲನ್ನು ಆಮದು ಮಾಡಿಕೊಳ್ಳುವ ಕಚ್ಚಾ ತೈಲದ ಮೂಲಕ ಪೂರೈಸುತ್ತಿದೆ. ಕಬ್ಬು ಹಾಗೂ ಧಾನ್ಯಗಳಂತಹ ಕೃಷಿ ಉತ್ಪನ್ನಗಳಿಂದ ದೇಶದಲ್ಲೇ ಉತ್ಪಾದಿಸುವ ಎಥೆನಾಲ್‌ ಬಳಕೆಯನ್ನು ಹೆಚ್ಚಿಸುವ ಮೂಲಕ ಆಮದು ತೈಲದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಸರಕಾರ ಪ್ರಯತ್ನಿಸುತ್ತಿದೆ. ಎಥೆನಾಲ್‌ ಮಿಶ್ರಣ ಕಾರ್ಯಕ್ರಮದಿಂದ ರೈತರಿಗೆ ಹೆಚ್ಚುವರಿ ಮಾರುಕಟ್ಟೆ ದೊರೆತಿದೆ. ಜೊತೆಗೆ, ತೈಲ ಆಮದು ವೆಚ್ಚ ತಗ್ಗಿಸುವುದು ಮತ್ತು ಇಂಧನ ಸುರಕ್ಷತೆ ಹೆಚ್ಚಿಸುವ ಗುರಿಗೂ ಇದು ನೆರವಾಗಿದೆ. ಹೆಚ್ಚಿನ ಎಥೆನಾಲ್‌ ಅಂಶ ಹೊಂದಿರುವ ಪೆಟ್ರೋಲ್‌ ಬಳಕೆಯನ್ನು ಮತ್ತಷ್ಟು ಉತ್ತೇಜಿಸಲು ಸರಕಾರ ಮುಂದಾಗಿದ್ದು, ಇತ್ತೀಚಿನ ತೆರಿಗೆ ವಿನಾಯಿತಿ ಅದಕ್ಕೆ ಪೂರಕ ಕ್ರಮವಾಗಿದೆ. ಭಾರತದ ಸಾರಿಗೆ ಇಂಧನದಲ್ಲಿ ದೇಶೀಯವಾಗಿ ಉತ್ಪಾದಿಸುವ ಎಥೆನಾಲ್‌ನ ಪಾತ್ರವನ್ನು ಹೆಚ್ಚಿಸುವ ದೀರ್ಘಾವಧಿಯ ಯೋಜನೆಯ ಭಾಗವಾಗಿ ಈ ನಿರ್ಧಾರವನ್ನು ಪರಿಗಣಿಸಲಾಗಿದೆ.

ವಾರ್ತಾ ಭಾರತಿ 11 Jun 2026 12:16 pm

ಶಿವಕುಮಾರ್ ಸಂಪುಟ ‘ಸಂಕಟ’!

ಡಿ.ಕೆ. ಶಿವಕುಮಾರ್ ಅವರಿಗೆ ಸಂಭ್ರಮಾಚರಣೆಗೂ ಅವಕಾಶ ಸಿಕ್ಕಿಲ್ಲ. ಆರಂಭದಲ್ಲೇ ವಿಘ್ನಗಳು ಎದುರಾಗಿವೆ. ಸಚಿವ ಸಹೊದ್ಯೋಗಿಗಳಿಗೆ ಹಂಚಿದ ಖಾತೆಗಳು ಕಾಲಿಗೆ ಸುತ್ತಿಕೊಳ್ಳುತ್ತಿವೆ. ಸಂಪುಟ ಸದಸ್ಯರ ಮನವೊಲಿಸಿ, ಉಳಿದಿರುವ ಎರಡು ವರ್ಷದ ಅವಧಿಗೆ ಉತ್ತಮ ಆಡಳಿತ ಕೊಡುವುದು ಡಿಕೆಶಿ ಮುಂದಿರುವ ಸವಾಲು. ಸಂಪುಟ ವಿಸ್ತರಣೆ-ಖಾತೆ ಹಂಚಿಕೆ ಕಸರತ್ತನ್ನು ಸಮರ್ಥವಾಗಿ ನಿಭಾಯಿಸಿದರೆ ಯುದ್ಧ ಗೆದ್ದಂತೆ ಅಂತೂ ಇಂತೂ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಕುರ್ಚಿಯಲ್ಲಿ ಕೂತಿದ್ದಾಯಿತು. ಅನೇಕ ವರ್ಷಗಳ ಕನಸು ಕೈಗೂಡಿದ್ದಾಯಿತು. ಪಾಪ ಅವರಿಗೆ ಸಂಭ್ರಮಾಚರಣೆಗೂ ಅವಕಾಶ ಸಿಕ್ಕಿಲ್ಲ. ಆರಂಭದಲ್ಲೇ ವಿಘ್ನಗಳು ಎದುರಾಗಿವೆ. ಸಚಿವ ಸಹೊದ್ಯೋಗಿಗಳಿಗೆ ಹಂಚಿದ ಖಾತೆಗಳು ಕಾಲಿಗೆ ಸುತ್ತಿಕೊಳ್ಳುತ್ತಿವೆ. ಸಂಪುಟ ಸದಸ್ಯರ ಮನವೊಲಿಸಿ, ಉಳಿದಿರುವ ಎರಡು ವರ್ಷದ ಅವಧಿಗೆ ಉತ್ತಮ ಆಡಳಿತ ಕೊಡುವುದು ಡಿಕೆಶಿ ಮುಂದಿರುವ ಸವಾಲು. ಸಂಪುಟ ವಿಸ್ತರಣೆ-ಖಾತೆ ಹಂಚಿಕೆ ಕಸರತ್ತನ್ನು ಸಮರ್ಥವಾಗಿ ನಿಭಾಯಿಸಿದರೆ ಯುದ್ಧ ಗೆದ್ದಂತೆ ಡಿಕೆಶಿ ಜತೆ 13 ಸಚಿವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇವರಲ್ಲಿ ಯಾರಿಗೂ ಖುಷಿ ಇದ್ದಂತಿಲ್ಲ. ಒಬ್ಬೊಬ್ಬರಿಗೂ ಒಂದೊಂದು ‘ಸಂಕಟ’. ಡಾ. ಜಿ. ಪರಮೇಶ್ವರ್ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ಸಿಕ್ಕರೂ ತೃಪ್ತಿಯಿಲ್ಲ. ಮುಖ್ಯಮಂತ್ರಿ ಕುರ್ಚಿ ತಪ್ಪಿದ ಕೊರಗು. ತುಮಕೂರು ‘ಸಿದ್ಧಾರ್ಥ ಶಿಕ್ಷಣ ಸಂಸ್ಥೆ’ ಉಪನ್ಯಾಸಕ-ವಿದ್ಯಾರ್ಥಿ ಸಮುದಾಯ ಈಚೆಗೆ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅಂತರಂಗದ ಬೇಗುದಿ ಹೊರ ಹಾಕಿದ್ದಾರೆ. ‘‘ನಾನು 2013ರಲ್ಲಿ ಗೆದ್ದಿದ್ದರೆ ಸಿದ್ದರಾಮಯ್ಯ ಸಿಎಂ ಆಗುತ್ತಿರಲಿಲ್ಲ. ನನ್ನ ಅದೃಷ್ಟವೋ, ಹಣೆಬರಹವೋ ಸೋತಿದ್ದರಿಂದಾಗಿ ಅವರಾದರು. 2018ರ ಚುನಾವಣೆಯಲ್ಲಿ ನಮ್ಮ ಪಕ್ಷ 80 ಸ್ಥಾನ ಗೆದ್ದಿತ್ತು. 30 ಸೀಟು ಪಡೆದಿದ್ದ ಪಕ್ಷದ ಜತೆ ಮೈತ್ರಿ ಏರ್ಪಟ್ಟಿತ್ತು. ಕುಮಾರಸ್ವಾಮಿ ಮುಖ್ಯಮಂತ್ರಿಯಾದರು. ಆಗಲೂ ಅವಕಾಶ ತಪ್ಪಿತು. ಈ ಬಾರಿ ಪ್ರಯತ್ನ ಮಾಡಿದರೂ ಆಗಲಿಲ್ಲ’’ ಎಂದು ಹೇಳಿದ್ದಾರೆ. ಅವರೊಬ್ಬರಲ್ಲ, ಅನೇಕ ಹಿರಿಯ ಕಾಂಗ್ರೆಸ್ ನಾಯಕರಿಗೆ ಈ ಕೊರಗಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೂ ಅವಕಾಶ ವಂಚಿತರು. ವಯಸ್ಸು, ಅನುಭವದಲ್ಲಿ ಪರಮೇಶ್ವರ್ ಅವರಿಗಿಂತಲೂ ಹಿರಿಯರು. ‘‘ಹೈಕಮಾಂಡ್ ಹೇಳಿದರೆ ರಾಜ್ಯಕ್ಕೆ ಮರಳಲು ಸಿದ್ಧ’’ ಎಂದು ಆಪ್ತರ ಬಳಿ ಮನದಾಳದ ಆಸೆ ಹೇಳಿಕೊಂಡಿದ್ದರು. ಬಹಿರಂಗವಾಗಿ ಅವರೆಂದೂ ಬೇಡಿಕೆ ಇಟ್ಟವರಲ್ಲ. ಇನ್ನು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ವಿಷಯಕ್ಕೆ ಬರುವುದಾದರೆ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಸಿಗಲಿಲ್ಲವೆಂಬ ಅಸಮಾಧಾನ. ಜಾರಕಿಹೊಳಿ ಎರಡು ದೋಣಿಗಳಲ್ಲಿ ಕಾಲಿಡಲು ಯತ್ನಿಸಿದರು. ಪಕ್ಷದ ಅಧ್ಯಕ್ಷ ಸ್ಥಾನದ ಮೇಲೂ ಕಣ್ಣಿತ್ತು. ಸಚಿವ ಸ್ಥಾನವೂ ಬೇಕಿತ್ತು. ಸತೀಶ್ ಚಾಣಾಕ್ಷ ರಾಜಕಾರಣಿ. ಸಿದ್ದರಾಮಯ್ಯ ಕುರ್ಚಿಯಿಂದ ಇಳಿಯಬಹುದೆಂದು ಮೊದಲೇ ಗ್ರಹಿಸಿದ್ದರು. ಅಲ್ಲದೆ, ಸಿದ್ದರಾಮಯ್ಯನವರ ನಾಯಕತ್ವದ ವಿರುದ್ಧ ಸಹಿ ಸಂಗ್ರಹ ಮಾಡಿದ್ದರ ಹಿಂದೆ ಇವರ ಪಾತ್ರವೂ ಇತ್ತೆಂಬುದು ಗುಟ್ಟೇನಲ್ಲ. ಆಮೇಲೆ ಅದನ್ನು ಅವರು ನಿರಾಕರಿಸಿದರು. ಸತೀಶ್ ನಡೆಯನ್ನು ಸೂಕ್ಷ್ಮವಾಗಿ ಗ್ರಹಿಸಿದ ಸಿದ್ದರಾಮಯ್ಯ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಬಿ.ಕೆ. ಹರಿಪ್ರಸಾದ್ ಅವರನ್ನು ಬೆಂಬಲಿಸಿದರು. ಜಾರಕಿಹೊಳಿಗೆ ಎರಡು ಹುದ್ದೆ ಕೊಡಲು ಬಯಸದ ಮುಖ್ಯಮಂತ್ರಿ ಶಿವಕುಮಾರ್, ‘ಒಬ್ಬರಿಗೆ ಒಂದೇ ಹುದ್ದೆ’ ಎಂದು ಹೇಳಿದರು. ಬೆಳಗಾವಿಯಿಂದ ಸಚಿವ ಸ್ಥಾನಕ್ಕೆ ಲಕ್ಷ್ಮೀ ಹೆಬ್ಬಾಳಕರ್ ಹಾಗೂ ಲಕ್ಷ್ಮಣ ಸವದಿ ಹೆಸರು ಕೇಳಿಬಂತು. ಬೆಳಗಾವಿ ತಮ್ಮ ಕೈತಪ್ಪಿ ಹೋಗಬಹುದೆಂದು ಭಾವಿಸಿದ ಸತೀಶ್, ಸಚಿವ ಸ್ಥಾನ ಆಯ್ಕೆಮಾಡಿಕೊಂಡರು. ಒಬಿಸಿ ರಾಜಕಾರಣಿಗಳ ಹಾವು-ಏಣಿ ಆಟದಲ್ಲಿ ಸತೀಶ್‌ಗೆ ಹಿನ್ನಡೆಯಾಗಿದ್ದು ಸತ್ಯ. ಪರಮೇಶ್ವರ್ ಅವರಿಗಿಂತ ಮೊದಲು, ‘ಬೆಂಗಳೂರು ನಗರಾಭಿವೃದ್ಧಿ ಖಾತೆ’ಗೆ ಪಟ್ಟು ಹಿಡಿದು ರಾಮಲಿಂಗಾ ರೆಡ್ಡಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಡಿಕೆಶಿ ಮತ್ತು ವರಿಷ್ಠರ ಮನವೊಲಿಕೆ ಬಳಿಕ ವಾಪಸ್ ಪಡೆದಿದ್ದಾರೆ. ಕೆ.ಎಚ್. ಮುನಿಯಪ್ಪ ಆಹಾರ ಮತ್ತು ನಾಗರಿಕ ಸರಬರಾಜು ಬಿಟ್ಟು ಸಮಾಜ ಕಲ್ಯಾಣ ಖಾತೆಗೆ ಹಟ ಮಾಡಿದ್ದರು. ಅಸಮಾಧಾನ ಈಗ ಕೃಷ್ಣ ಬೈರೇಗೌಡರ ಸರದಿ. ಬಿಡಿಎ, ಬಿಎಂಆರ್‌ಡಿಎ ಪ್ರಾಧಿಕಾರಗಳನ್ನು ಬೆಂಗಳೂರು ನಗರಾಭಿವೃದ್ಧಿಯಿಂದ ಬೇರ್ಪಡಿಸುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಹೈಕಮಾಂಡ್ ಮುಂದೆ ಅಸಮಾಧಾನ ಹೊರಹಾಕಿದ್ದಾರೆ. ಇನ್ನು ಕೆ.ಜೆ. ಜಾರ್ಜ್ ಅವರದ್ದು ಮತ್ತೊಂದು ಸಮಸ್ಯೆ. ತಮ್ಮ ಗಮನಕ್ಕೆ ತರದೆ ಕೆಪಿಸಿಗೆ ಅಧಿಕಾರಿಯೊಬ್ಬರನ್ನು ನೇಮಿಸಿದ ಮುಖ್ಯಮಂತ್ರಿ ಕ್ರಮಕ್ಕೆ ಅಸಮ್ಮತಿ ಸೂಚಿಸಿದ್ದಾರೆ. ಹೀಗಾಗಿ, ಡಿಕೆಶಿ ಅವರಿಗೆ ಆರಂಭದಲ್ಲೇ ಅಡ್ಡಿ-ಆತಂಕ ಎದುರಾಗಿವೆ. ಶಿವಕುಮಾರ್ ಇನ್ನು ತಮ್ಮ ಸಂಪುಟವನ್ನು ಪೂರ್ಣ ಪ್ರಮಾಣದಲ್ಲಿ ವಿಸ್ತರಿಸಿಲ್ಲ. ಅವರೂ ಸೇರಿದಂತೆ 14 ಮಂದಿಯ ಸಂಪುಟ ಅಸ್ತಿತ್ವಕ್ಕೆ ಬಂದಿದೆ. ಖಾತೆಗಳ ಹಂಚಿಕೆ ಆಗುತ್ತಿದ್ದಂತೆ ಅಸಮಾಧಾನ ಸ್ಫೋಟಗೊಂಡಿದೆ. ಇನ್ನು 20 ಸ್ಥಾನಗಳು ಖಾಲಿ ಇವೆ. ಅವನ್ನೂ ಭರ್ತಿ ಮಾಡಿ, ಖಾತೆಗಳನ್ನು ಹಂಚಿದರೆ ಇನ್ನೆಷ್ಟು ರಾದ್ಧಾಂತ ಆಗುವುದೋ. ಹೊಸದಾದ ಸಂಪುಟದಲ್ಲಿ ಡಾ. ಯತೀಂದ್ರ, ಯು.ಟಿ. ಖಾದರ್ ಅವರನ್ನು ಹೊರತುಪಡಿಸಿದರೆ ಉಳಿದವರೆಲ್ಲರೂ ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿದ್ದವರು. ಖಾದರ್ ಅವರೂ ಹೊಸಬರಲ್ಲ. 2013ರ ಕಾಂಗ್ರೆಸ್ ಸರಕಾರದಲ್ಲಿ ಸಚಿವರಾಗಿದ್ದವರು. ಖಾತೆ ಹಂಚಿಕೆ ಮುಖ್ಯಮಂತ್ರಿ ಪರಮಾಧಿಕಾರ. ಯಾರೂ ಪ್ರಶ್ನೆ ಮಾಡಲಾಗದು. ಆದರೆ, ಸಿದ್ದರಾಮಯ್ಯ ಸಂಪುಟದಲ್ಲಿ ಡಿಕೆಶಿ ಹೊಂದಿದ್ದ ಖಾತೆಗಳನ್ನು ಒಡೆದು, ಹಂಚುವುದು ಸರಿಯಲ್ಲ. ಮುಖ್ಯಮಂತ್ರಿಯಾಗುವ ಮೊದಲೇ ರಾಮಲಿಂಗಾರೆಡ್ಡಿಗೆ ಬೆಂಗಳೂರು ಅಭಿವೃದ್ಧಿ ಖಾತೆ ಕೊಡುವುದಾಗಿ ಡಿಕೆಶಿ ಭರವಸೆ ನೀಡಿದ್ದರಂತೆ. ಅಂದರೆ, ಮುಖ್ಯಮಂತ್ರಿ ಆಗುವ ಮುನ್ನವೇ ಶಾಸಕರ ಜತೆ ‘ಒಳ ಒಪ್ಪಂದ’ ಆಗಿತ್ತೇ ಎಂಬ ಸಂಶಯ ಬರುತ್ತದೆ. ಹಾಗೇನಾದರೂ ಒಪ್ಪಂದ ಮಾಡಿಕೊಂಡಿದ್ದರೆ ಈಡೇರಿಸಬೇಕಾದ್ದು ಧರ್ಮ. ಹಿಂದೆ, ನಾಯಕತ್ವ ಕಿತ್ತಾಟದ ಸಮಯದಲ್ಲಿ, ‘‘ಸಿದ್ದರಾಮಯ್ಯನವರು ಕೊಟ್ಟ ಮಾತಿನಂತೆ ನಡೆಯುತ್ತಾರೆ’’ ಎಂದು ಡಿಕೆಶಿ ಮತ್ತು ಅವರ ಸೋದರ ಸುರೇಶ್ ಹೇಳಿದ್ದರು. ಅವರಿಗೆ ಕೊಟ್ಟ ಮಾತಿನ ಸೂತ್ರ ಅನ್ವಯಿಸುವುದಾದರೆ ಇವರಿಗೂ ಅನ್ವಯಿಸಬೇಕು. ‘ಕಾಂಗ್ರೆಸ್ ಪಕ್ಷಕ್ಕೆ ಇದು ಯುದ್ಧ ಕಾಲ. ಶಾಂತಿ ಕಾಲವಲ್ಲ’. ನಾಯಕತ್ವದ ಕಿತ್ತಾಟದಲ್ಲೇ ಮೂರು ವರ್ಷ ಕಳೆದುಹೋಯಿತು. ಉಳಿದಿರುವ ಸಮಯದಲ್ಲಿ ‘ನಿದ್ದೆ’ಯಲ್ಲಿರುವ ಸರಕಾರವನ್ನು ಬಡಿದೆಬ್ಬಿಸಿ, ಉತ್ತಮ ಆಡಳಿತ ಕೊಡಬೇಕಾದ ಜವಾಬ್ದಾರಿ ಮುಖ್ಯಮಂತ್ರಿ ಡಿಕೆಶಿ ಅವರ ಮುಂದಿದೆ. ‘ರಾಜ್ಯದಲ್ಲಿ ಮೂರು ವರ್ಷ ಸರಕಾರವೇ ಇರಲಿಲ್ಲ’ ಎಂಬ ಅಭಿಪ್ರಾಯ ಜನಮನದಲ್ಲಿದೆ. ಈ ಅಭಿಪ್ರಾಯ ಬದಲಿಸಿ, ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸುವ ಮೂಲಕ ಪಕ್ಷವನ್ನು ಪುನಃ ಅಧಿಕಾರಕ್ಕೆ ತರುವುದು ಹುಡುಗಾಟದ ವಿಷಯವಲ್ಲ. ಡಿಕೆಶಿ ಮತ್ತು ಅವರ ಮಂತ್ರಿಗಳು ಹಾಗೂ ಶಾಸಕರು ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಸಾಧ್ಯವಾಗಬಹುದು. ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರ ಹೊಡೆತಕ್ಕೆ ಒಂದೊಂದೇ ಪಕ್ಷಗಳು ನೆಲ ಕಚ್ಚುತ್ತಿವೆ. ಬಿಹಾರದಲ್ಲಿ ತೇಜಸ್ವಿ ಯಾದವ್ ನೇತೃತ್ವದ ರಾಷ್ಟ್ರೀಯ ಜನತಾ ದಳ ಚೇತರಿಸಿಕೊಳ್ಳಲಾಗದಷ್ಟು ನೆಲ ಕಚ್ಚಿದೆ. ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನಾಯಕತ್ವದ ತೃಣಮೂಲ ಕಾಂಗ್ರೆಸ್ ಸೋತು ಸೊರಗಿದೆ. ಆ ಪಕ್ಷದ ಸಂಸದರು, ಶಾಸಕರು, ಪಾಲಿಕೆ ಸದಸ್ಯರು ಬಿಜೆಪಿಗೆ ವಲಸೆ ಹೋಗುತ್ತಿದ್ದಾರೆ. ಟಿಎಂಸಿ ಉಳಿಸಿಕೊಳ್ಳುವುದೇ ದೀದಿಗೆ ಕಷ್ಟವಾಗಿದೆ. ಇದೇ ಪರಿಸ್ಥಿತಿ ಮುಂದೆ ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ ಬಂದರೂ ಅಚ್ಚರಿಯೇನಲ್ಲ. ಹಾಗಾಗದಂತೆ ಈಗಲೇ ಪಕ್ಷದ ನಾಯಕರು ಜಾಗೃತರಾಗಬೇಕಿದೆ. ರಾಷ್ಟ್ರೀಯ ಜನತಾ ದಳ ಮತ್ತು ತೃಣಮೂಲ ಕಾಂಗ್ರೆಸ್‌ಗೆ ಪೆಡಂಭೂತವಾಗಿ ಕಾಡಿದ್ದು ‘ವಿಶೇಷ ಮತದಾರರ ಪರಿಷ್ಕರಣೆ’ (ಎಸ್‌ಐಆರ್). ಈ ಭೂತವೀಗ ರಾಜ್ಯಕ್ಕೂ ಕಾಲಿಟ್ಟಿದೆ. ಅದಕ್ಕೆ ಹೆದರಿದರೆ ಇಲ್ಲೂ ಅಧಿಕಾರ ಕಳೆದುಕೊಳ್ಳಬಹುದು. ಪ್ರತೀ ಮತದಾರನ ಹೆಸರಿನ ಮೇಲೂ ಕಾಂಗ್ರೆಸ್ ನಿಗಾ ಇಡಬೇಕು. ಯಾವುದಾದರೂ ಹೆಸರು ಪಟ್ಟಿಯಿಂದ ಹೊರ ಹೋದರೆ ಕಾರಣ ಹುಡುಕಬೇಕು. ಮರಳಿ ಸೇರ್ಪಡೆ ಮಾಡಲು ಶ್ರಮಿಸಬೇಕು. ಸಿದ್ದರಾಮಯ್ಯನವರ ಸಂಪುಟದಲ್ಲಿ ದಕ್ಷವಾಗಿ ಕೆಲಸ ಮಾಡಿದವರನ್ನು ಡಿಕೆಶಿಯವರ ಸಂಪುಟದಲ್ಲಿ ಉಳಿಸಿಕೊಂಡು, ಮಿಕ್ಕವರಿಗೆ ಪಕ್ಷ ಸಂಘಟನೆ ಹೊಣೆ ವಹಿಸಿದ್ದರೆ ಮುಖ್ಯಮಂತ್ರಿಗೆ ಇಷ್ಟೊಂದು ಸಮಸ್ಯೆ ಆಗುತ್ತಿರಲಿಲ್ಲ. ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಯುವ ನಾಯಕತ್ವ ಕುರಿತು ಮಾತಾಡುತ್ತಿದ್ದಾರೆ. ಯುವಕರಿಗೆ ಅವಕಾಶ ಒದಗಿಸಲು ಒಲವು ತೋರಿದ್ದಾರೆ. ಅದು ಮಾತಿನಲ್ಲೇ ಉಳಿದಿದೆ ವಿನಾ ಜಾರಿಯಾಗುತ್ತಿಲ್ಲ. ಡಿಕೆಶಿ ಸಂಪುಟದಲ್ಲಿ ಯುವಕರು ಒಬ್ಬರೂ ಇಲ್ಲ. ಸದ್ಯ, ಪ್ರಿಯಾಂಕ್ ಖರ್ಗೆ ಹಾಗೂ ಯತೀಂದ್ರ ಅವರೇ ಅತ್ಯಂತ ಕಿರಿಯರು. ಅವರನ್ನು ಬಿಟ್ಟರೆ ಕೃಷ್ಣ ಬೈರೇಗೌಡ ಮತ್ತು ಬೈರತಿ ಸುರೇಶ್ ಮಧ್ಯ ವಯಸ್ಸಿನವರು. ಉಳಿದವರು ಹಿರಿಯರು. ಹಿಂದಿನ ಸರಕಾರದಲ್ಲಿ ಕಂದಾಯ ಸಚಿವರಾಗಿ ಕೃಷ್ಣ ಬೈರೇಗೌಡ ಜನ ಮೆಚ್ಚುವಂತೆ ಕೆಲಸ ಮಾಡಿದ್ದಾರೆ. ಕಂದಾಯ ಇಲಾಖೆ ಸುಧಾರಣೆ ಮಾಡಿದ್ದಾರೆ. ಇಲಾಖೆ ದಾಖಲೆ ಡಿಜಿಟಲೀಕರಣದ ಕಡೆ ಗಮನ ಕೊಟ್ಟಿದ್ದಾರೆ. ತಹಶೀಲ್ದಾರ್, ಸಬ್ ರಿಜಿಸ್ಟ್ರಾರ್ ಕಚೇರಿಗಳಿಗೆ ದಿಢೀರ್ ಭೇಟಿ ಕೊಟ್ಟು ಅಧಿಕಾರಿ, ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಆದರೂ ಅಧಿಕಾರಿಗಳ ಅಕ್ರಮಗಳಿಗೆ ಕಡಿವಾಣ ಬಿದ್ದಿಲ್ಲ. ಭ್ರಷ್ಟಾಚಾರ ನಿಂತಿಲ್ಲ. ಅಕ್ರಮ-ಭ್ರಷ್ಟಾಚಾರ ಬೆಳಗಾಗುವುದರೊಳಗೆ ನಿಲ್ಲುವುದಿಲ್ಲ. ಇವು ಆಳವಾಗಿ ಬೇರೂರಿರುವ ಪಿಡುಗುಗಳು. ಕಂದಾಯ, ವಿದ್ಯುತ್, ಪೊಲೀಸ್, ಆರೋಗ್ಯ, ಶಿಕ್ಷಣ, ಆಹಾರ ಮತ್ತು ನಾಗರಿಕ ಪೂರೈಕೆ ಒಳಗೊಂಡು ಕೆಲವು ಇಲಾಖೆಗಳಿಗೆ ಸಾಮಾನ್ಯ ಜನ ಪ್ರತಿನಿತ್ಯ ಎಡತಾಕುತ್ತಾರೆ. ಈ ಇಲಾಖೆಗಳು ಸರಿಯಾಗಿ ಕೆಲಸ ಮಾಡಿದರೆ ಸರಕಾರಕ್ಕೆ ಒಳ್ಳೆಯ ಹೆಸರು ಬರುತ್ತದೆ. ಇಲ್ಲದಿದ್ದರೆ ಹಿಡಿಶಾಪ ಹಾಕುತ್ತಾರೆ. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯನವರ ಸಂಪುಟದಲ್ಲಿ ಸಚಿವರಾಗಿದ್ದವರ ಪ್ರಗತಿ ಪರಿಶೀಲನೆ ನಡೆಯಬೇಕಿತ್ತು. ಸಚಿವರ ದಕ್ಷತೆಯನ್ನು ಒರೆಗೆ ಹಚ್ಚಬೇಕಿತ್ತು. ಈ ಕೆಲಸವನ್ನು ಸಿದ್ದರಾಮಯ್ಯನವರೇ ಮಾಡಬಹುದಿತ್ತು. ಅದೇಕೊ ಅವರು ತಲೆಕೆಡಿಸಿಕೊಳ್ಳಲಿಲ್ಲ. ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾದ ಮೂರ್ನಾಲ್ಕು ದಿನಗಳ ಬಳಿಕ ಡಿಕೆಶಿ ಪ್ರಮಾಣ ವಚನ ತೆಗೆದುಕೊಂಡರು. ಈ ಅವಧಿಯಲ್ಲಿ ಸಚಿವರ ಕಾರ್ಯವೈಖರಿ ಪರಿಶೀಲಿಸಲು ಅವಕಾಶವಿತ್ತು. ಅದಾಗಿದ್ದರೆ ಹೊಸದೊಂದು ಪ್ರಯೋಗ ನಡೆಸಿದಂತಾಗುತ್ತಿತ್ತು. ಸಚಿವರ ಯೋಗ್ಯತೆಗನುಗುಣವಾಗಿ ಖಾತೆ ಕೊಡಬಹುದಿತ್ತು. ಹಿಂದಿನ ಸರಕಾರದಲ್ಲಿದ್ದ ಕೆಲವು ಸಚಿವರು ಹೇಳುವಂಥ ಕೆಲಸ ಮಾಡಿಲ್ಲ. ಈ ಸಚಿವರು ನಿರ್ವಹಿಸಿರುವ ಇಲಾಖೆಗಳಿಗೆ ಅಂಕಗಳನ್ನು ಕೊಟ್ಟರೆ ಸರಾಸರಿಗಿಂತ ಕಡಿಮೆ ಸಿಗುವುದು ಖಚಿತ. ಕೆ.ಎಚ್. ಮುನಿಯಪ್ಪ ಮನಮೋಹನ್‌ಸಿಂಗ್ ನೇತೃತ್ವದ ಯುಪಿಎ- 2 ಸರಕಾರದಲ್ಲಿ ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದರು. ಮಮತಾ ಬ್ಯಾನರ್ಜಿ ರೈಲ್ವೆ ಮಂತ್ರಿ. ಮುನಿಯಪ್ಪನವರಿಗೆ ಫೈಲ್‌ಗಳೇ ಬರುತ್ತಿರಲಿಲ್ಲ. ಈ ಕುರಿತು ಮುನಿಯಪ್ಪ ಮನಮೋಹನ್ ಸಿಂಗ್ ಅವರಿಗೆ ದೂರು ಸಲ್ಲಿಸಿದ್ದರು. ಮಮತಾ ‘ಅಗ್ನಿಕನ್ಯೆ’. ದೂರು ಕೊಟ್ಟರೂ ಸಮಸ್ಯೆ ಬಗೆಹರಿಯಲಿಲ್ಲ. ಕರ್ನಾಟಕದಲ್ಲಿ ಮಾತ್ರ ಖಾತೆ ಹಂಚಿಕೆ ಬಿಕ್ಕಟ್ಟಿಲ್ಲ. ಬೇರೆ ರಾಜ್ಯಗಳಲ್ಲೂ ಇತ್ತು. ಮುಂದೆಯೂ ಇರುತ್ತದೆ. ಈಚೆಗೆ ಪಶ್ಚಿಮ ಬಂಗಾಳದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸರಕಾರದ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರೂ ಖಾತೆ ಹಂಚಿಕೆ ಬಿಕ್ಕಟ್ಟಿಗೆ ಸಿಕ್ಕಿಕೊಂಡಿದ್ದರು. ಈ ತಿಂಗಳ ಒಂದರಂದು 13 ಸಂಪುಟ ದರ್ಜೆ ಸೇರಿದಂತೆ 35 ಸಚಿವರು ಪ್ರಮಾಣ ವಚನ ಸ್ವೀಕರಿಸಿದರೂ ಖಾತೆಗಳ ಹಂಚಿಕೆ ಸಮಸ್ಯೆ ಬಗೆಹರಿಸಲು ಬಿಜೆಪಿ ಹೈಕಮಾಂಡ್ ಮೊರೆ ಹೋಗಬೇಕಾಯಿತು. ಈಗ ಶಿವಕುಮಾರ್ ಅದೇ ಹಾದಿ ತುಳಿದಿದ್ದಾರೆ. ಖಾತೆ ಹಂಚಿಕೆ- ಸಂಪುಟ ವಿಸ್ತರಣೆ ಕುರಿತು ಕಾಂಗ್ರೆಸ್ ವರಿಷ್ಠರ ಜತೆ ಚರ್ಚಿಸಲು ದಿಲ್ಲಿಯ ನಂಬರ್ 24 ಅಕ್ಬರ್ ರಸ್ತೆಗೆ ತೆರಳಿದ್ದಾರೆ. ಕೃಷ್ಣ ಬೈರೇಗೌಡ ಈಗಾಗಲೇ ಅಲ್ಲಿದ್ದಾರೆ. ಶಿವಕುಮಾರ್ ಅಗ್ನಿ ಪರೀಕ್ಷೆಯಲ್ಲಿ ಗೆಲ್ಲುವರೇ? ಭಿನ್ನಮತಕ್ಕೆ ಬ್ರೇಕ್ ಹಾಕುವರೇ ಎಂಬುದನ್ನು ಕಾದು ನೋಡಬೇಕು.

ವಾರ್ತಾ ಭಾರತಿ 11 Jun 2026 12:15 pm

ಪುತ್ತೂರು: ತಲೆಮರೆಸಿಕೊಂಡಿದ್ದ ಪೋಕ್ಸೋ ಪ್ರಕರಣದ ಆರೋಪಿ ಬಂಧನ

ಪುತ್ತೂರು: ಪೋಕ್ಸೋ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ವಾರಂಟ್‌ ಆರೋಪಿಯನ್ನು ಪುತ್ತೂರು ನಗರ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿ, ಪುತ್ತೂರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಪುತ್ತೂರು ತಾಲೂಕಿನ ನರಿಮೊಗರು ನಿವಾಸಿ ನಮನ್ ನಾಯಕ್ (32) ಬಂಧಿತ ಆರೋಪಿ. 2018ರಲ್ಲಿ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಆರೋಪಿ ನಮನ್ ನಾಯಕ್ ವಿರುದ್ದ ಅ.ಕ್ರ  53/2018, 22 0 448 (3 ), 506 (ಪ್ರಾಣ ಬೆದರಿಕೆ), 354 (ಮಹಿಳೆಯ ಮೇಲಿನ ದೌರ್ಜನ್ಯ) ಹಾಗೂ ಪೋಕ್ಸೋ ಕಾಯ್ದೆಯ ಕಲಂ 12ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿತ್ತಾದರೂ, ಆರೋಪಿ ನಮನ್ ನಾಯಕ್ ನ್ಯಾಯಾಲಯಕ್ಕೆ ಹಾಜರಾಗದೆ ದೀರ್ಘಕಾಲದಿಂದ ತಲೆಮರೆಸಿಕೊಂಡಿದ್ದ ಎನ್ನಲಾಗಿದೆ. ನ್ಯಾಯಾಲಯವು ಆರೋಪಿಯ ವಿರುದ್ಧ ವಾರಂಟ್ ಜಾರಿಗೊಳಿಸಿತ್ತು. ತಲೆಮರೆಸಿಕೊಂಡಿದ್ದ ಆರೋಪಿಯ ಪತ್ತೆಗಾಗಿ ಪುತ್ತೂರು ನಗರ ಪೊಲೀಸ್ ಉಪನಿರೀಕ್ಷಕರು ಹಾಗೂ ಸಿಬ್ಬಂದಿಗಳನ್ನೊಳಗೊಂಡ ತಂಡ ಕಾರ್ಯೋನ್ಮುಖವಾಗಿತ್ತು. ಖಚಿತ ಮಾಹಿತಿ ಮೇರೆಗೆ ತನಿಖೆ ನಡೆಸಿದ ಪೊಲೀಸರು, ಬೆಂಗಳೂರಿನ ಕೂಡ್ಲುಪೇಟೆ ಎಂಬಲ್ಲಿ ಅಡಗಿದ್ದ ಆರೋಪಿ ನಮನ್ ನಾಯಕ್‌ನನ್ನು ಬಂಧಿಸಿ ಪುತ್ತೂರಿನ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಧೀಶರು ಆರೋಪಿಗೆ 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದ್ದಾರೆ  

ವಾರ್ತಾ ಭಾರತಿ 11 Jun 2026 12:13 pm

ಒಮಾನ್ ಕರಾವಳಿಯಲ್ಲಿ ಭಾರತೀಯರಿದ್ದ ಹಡಗಿನ ಮೇಲೆ ದಾಳಿ ಖಂಡಿಸಿ US ರಾಜತಾಂತ್ರಿಕನಿಗೆ ಭಾರತದಿಂದ 'ಡಿಮಾರ್ಚ್' ಜಾರಿ!

ಮಧ್ಯಪ್ರಾಚ್ಯದಲ್ಲಿ ಸಂಘರ್ಷ ಉಲ್ಭಣವಾಗುತ್ತಿರುವ ನಡುವೆ ಹೊರ್ಮುಜ್ ಜಲಸಂಧಿಯ ಬಳಿ ಒಮಾನ್‌ ಕರಾವಳಿಯಲ್ಲಿ 24 ಭಾರತೀಯ ಸಿಬ್ಬಂದಿಗಳಿದ್ದ ಸೆಟ್ಟೆಬೆಲ್ಲೊ ವಾಣಿಜ್ಯ ಹಡಗಿನ ಮೇಲೆ ಅಮೆರಿಕಾ ನಡೆಸಿದ ಕ್ಷಿಪಣಿ ದಾಳಿಯನ್ನು ಭಾರತ ತೀವ್ರವಾಗಿ ಖಂಡಿಸಿದೆ. ದಾಳಿಯಲ್ಲಿ ಇಬ್ಬರು ಭಾರತೀಯರು ಮೃತಪಟ್ಟಿದ್ದು, ಓರ್ವ ನಾಪತ್ತೆಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ವಿದೇಶಾಂಗ ಸಚಿವಾಲಯವು ದೆಹಲಿಯಲ್ಲಿನ US ರಾಜತಾಂತ್ರಿಕ ಜೇಸನ್ ಮೀಕ್ಸ್ ಅವರಿಗೆ ಔಪಚಾರಿಕ ಪ್ರತಿಭಟನೆ (Demarche) ಸಲ್ಲಿಸಿದೆ. ಅಲ್ಲದೆ, ಜಲಸಂಧಿಯನ್ನು ಮುಕ್ತಗೊಳಿಸುವಂತೆ ಒತ್ತಾಯಿಸಿದೆ.

ವಿಜಯ ಕರ್ನಾಟಕ 11 Jun 2026 12:05 pm

Keralam | ಕೋಝಿಕ್ಕೋಡ್‌ ಮೂಲದ ವ್ಯಕ್ತಿಯಲ್ಲಿ ನಿಫಾ ವೈರಸ್ ಪತ್ತೆ

ಕೋಝಿಕ್ಕೋಡ್ : ಕೋಝಿಕ್ಕೋಡ್‌ ಸರಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ವ್ಯಕ್ತಿಯೊಬ್ಬರಿಗೆ ನಿಫಾ ವೈರಸ್ ದೃಢಪಟ್ಟಿದ್ದು, ಕೇರಳಂನಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ನಿಫಾ ವೈರಸ್ ಪತ್ತೆ ಹಿನ್ನೆಲೆ ಅಂತಿಮ ದೃಢೀಕರಣಕ್ಕಾಗಿ ಮಾದರಿಗಳನ್ನು ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆಗೆ (NIV) ಕಳುಹಿಸಲಾಗಿದ್ದು, ಫಲಿತಾಂಶವನ್ನು ಶೀಘ್ರದಲ್ಲೇ ನಿರೀಕ್ಷಿಸಲಾಗುತ್ತಿದೆ. ಫೆರೋಕ್‌ ಮೂಲದ ಉದ್ಯಮಿಯಲ್ಲಿ ಸೋಂಕು ಪತ್ತೆಯಾಗಿದ್ದು, ಅವರ ಸಂಪರ್ಕಕ್ಕೆ ಬಂದವರನ್ನು ಪತ್ತೆ ಹಚ್ಚಲು ಮತ್ತು ಪ್ರತ್ಯೇಕಿಸಲು ಆರೋಗ್ಯ ಇಲಾಖೆ ಕ್ರಮಕೈಗೊಂಡಿದೆ.  ನಿಫಾ ವೈರಸ್‌ ಸೋಂಕಿತನ ಸಂಪರ್ಕದಲ್ಲಿದ್ದ ಆರೋಗ್ಯ ಸಿಬ್ಬಂದಿ ಹಾಗೂ ಇತರರಿಗೆ ಕ್ವಾರಂಟೈನ್‌ನಲ್ಲಿ ಇರಲು ಸೂಚಿಸಲಾಗಿದೆ. ಆಸ್ಪತ್ರೆಯಲ್ಲಿ ಎಲ್ಲಾ ಅಗತ್ಯ ಔಷಧಿಗಳ ವ್ಯವಸ್ಥೆಯನ್ನು ಮಾಡಲಾಗಿದ್ದು, ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ ಎಂದು ಆರೋಗ್ಯ ಸಚಿವ ಕೆ. ಮುರಳೀಧರನ್ ಹೇಳಿದ್ದಾರೆ. ನಿಫಾ ವೈರಸ್ ಬಾವಲಿಗಳಿಂದ ಹರಡುತ್ತದೆ ಮತ್ತು ಕೇರಳದಲ್ಲಿ ಈ ಹಿಂದೆಯೂ ಈ ಸೋಂಕು ಪತ್ತೆಯಾಗಿತ್ತು. 

ವಾರ್ತಾ ಭಾರತಿ 11 Jun 2026 12:02 pm

bidar | ಕೊಟ್ಟಿಗೆ ಬಿಲ್‌ ಪಾವತಿಗೆ ಆಗ್ರಹಿಸಿ ತಾಲೂಕು ಪಂಚಾಯತ್‌ ಕಚೇರಿಗೆ ದನಗಳನ್ನು ತಂದು ರೈತನಿಂದ ಪ್ರತಿಭಟನೆ

ಹುಲಸೂರ್: ಕೊಟ್ಟಿಗೆ ನಿರ್ಮಾಣ ಕಾಮಗಾರಿಯ ಬಾಕಿ ಬಿಲ್ ಪಾವತಿಸದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ರೈತರೊಬ್ಬರು ತಮ್ಮ ಜಾನುವಾರುಗಳನ್ನು ನೇರವಾಗಿ ತಾಲೂಕು ಪಂಚಾಯತ್‌ ಕಚೇರಿ ಆವರಣಕ್ಕೆ ತಂದು ನಿಲ್ಲಿಸಿ ವಿನೂತನ ಪ್ರತಿಭಟನೆ ನಡೆಸಿದ ಘಟನೆ ತಾಲೂಕಿನ ಬೇಲೂರ್ ಗ್ರಾಮದಲ್ಲಿ ಗುರುವಾರ ನಡೆದಿದೆ. ಬೇಲೂರ್ ಗ್ರಾಮದ ರೈತ ಅಪ್ಪಾಸಾಬ ಮಡಕೆ ಅವರು, ತಾವು ನಿರ್ಮಿಸಿರುವ ರೈತ ಕೊಟ್ಟಿಗೆಯ ಬಿಲ್ ಹಲವು ವರ್ಷಗಳಿಂದ ಬಾಕಿ ಉಳಿದಿದ್ದು, ಈ ಕುರಿತು ಗ್ರಾಮ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಅಧಿಕಾರಿಗಳ ಗಮನಕ್ಕೆ ಹಲವು ಬಾರಿ ತಂದರೂ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಪ್ರತಿಭಟನೆಗೆ ಮುಂದಾಗಿರುವುದಾಗಿ ತಿಳಿಸಿದ್ದಾರೆ. ಈ ವೇಳೆ ಮಾತನಾಡಿದ ಅವರು, ಕಾಮಗಾರಿ ಪೂರ್ಣಗೊಂಡಿದ್ದರೂ ಕಳೆದ ಮೂರು ವರ್ಷಗಳಿಂದ ಬಿಲ್ ಪಾವತಿಯಾಗಿಲ್ಲ. ಕಚೇರಿಗಳಿಗೆ ಅಲೆದಾಡಿದರೂ ಸಮಸ್ಯೆಗೆ ಪರಿಹಾರ ಸಿಗದ ಕಾರಣ ಜಾನುವಾರುಗಳೊಂದಿಗೆ ಕಚೇರಿ ಎದುರು ಪ್ರತಿಭಟನೆ ನಡೆಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ರೈತರು, ರಸ್ತೆ, ಚರಂಡಿ ಸೇರಿದಂತೆ ವಿವಿಧ ಕಾಮಗಾರಿಗಳ ಹೆಸರಿನಲ್ಲಿ ಬೋಗಸ್ ಬಿಲ್‌ಗಳನ್ನು ಮಾಡಿ ಕೋಟ್ಯಂತರ ರೂಪಾಯಿ ದುರುಪಯೋಗ ಮಾಡಲಾಗಿದೆ. ಆದರೆ ನಿಜವಾದ ಫಲಾನುಭವಿ ರೈತರ ಕೊಟ್ಟಿಗೆಗಳ ಬಿಲ್‌ಗಳನ್ನು ಮಾತ್ರ ಪಾವತಿಸಿಲ್ಲ ಎಂದು ಆರೋಪಿಸಿದರು. ತಾಲೂಕಿನ 40ಕ್ಕೂ ಹೆಚ್ಚು ರೈತರ ಕೊಟ್ಟಿಗೆಗಳ ಬಿಲ್ ಬಾಕಿ ಉಳಿದಿದ್ದು, ಇದರಿಂದ ರೈತರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಬಾಕಿ ಹಣವನ್ನು ತಕ್ಷಣ ಬಿಡುಗಡೆ ಮಾಡಿ ರೈತರಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು. ನಮಗೆ ನ್ಯಾಯ ಸಿಗುವವರೆಗೆ ಪ್ರತಿಭಟನೆ ಮುಂದುವರಿಸುತ್ತೇವೆ ಎಂದು ರೈತ ಅಪ್ಪಾಸಾಬ ಮಡಕೆ ಎಚ್ಚರಿಕೆ ನೀಡಿದ್ದು, ಘಟನೆ ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು ರೈತರೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸುವ ಪ್ರಯತ್ನ ನಡೆಸಿದ್ದಾರೆ.

ವಾರ್ತಾ ಭಾರತಿ 11 Jun 2026 12:00 pm

ಅಮೆರಿಕದ ದಾಳಿಯಲ್ಲಿ ಇಬ್ಬರು ಭಾರತೀಯ ನಾವಿಕರ ಸಾವು, ಓರ್ವ ನಾಪತ್ತೆ; ಒಮಾನ್‌ ಕರಾವಳಿಯಲ್ಲಿ ಹರಿದ ಭಾರತದ ರಕ್ತ!

ಮಧ್ಯಪ್ರಾಚ್ಯದಲ್ಲಿ ಯುದ್ಧ ಈಗ ನ್ಯೂ ನಾರ್ಮಲ್‌ ಆಗಿ ತಿಂಗಳುಗಳೇ ಉರುಳಿವೆ. ಅಮೆರಿಕ ಮತ್ತು ಇರಾನ್‌ ಪರಸ್ಪರ ಬಂದೂಕು ಗುರಿಯಿಟ್ಟು ಬಡಿದಾಡುತ್ತಿವೆ. ಆದರೆ ಇವರಿಬ್ಬರ ರಕ್ತದಾಹಕ್ಕೆ ಈಗ ಭಾರತೀಯರು ಕೂಡ ಗುರಿಯಾಗಿರುವುದು ಆತಂಕಕಾರಿ ಸಂಗತಿ. ಒಮಾನ್‌ ಕರಾವಳಿಯಲ್ಲಿ ಅಮೆರಿಕ ನಡೆಸಿದ ಕ್ಷಿಪಣಿ ದಾಳಿಯಲ್ಲಿ, ಭಾರತೀಯ ನಾವಿಕರೇ ಹೆಚ್ಚಿನ ಸಂಖ್ಯೆಯಲ್ಲಿದ್ದ ಹಡಗು ಸಂಪೂರ್ಣವಾಗಿ ಧ್ವಂಸಗೊಂಡಿದೆ. ಈ ದಾಳಿಯಲ್ಲಿ ಇಬ್ಬರು ಭಾರತೀಯ ನಾವಿಕರು ಸಾವನ್ನಪ್ಪಿದ್ದು, ಓರ್ವ ಮುಖ್ಯ ಇಂಜಿನಿಯರ್‌ ನಾಪತ್ತೆಯಾಗಿದ್ದಾನೆ. ಮಧ್ಯಪ್ರಾಚ್ಯ ಸಂಘರ್ಷಕ್ಕೆ ಭಾರತವೂ ಬೆಲೆ ತೆರಬೇಕಾಗಿ ಬಂದಿದೆ.

ವಿಜಯ ಕರ್ನಾಟಕ 11 Jun 2026 11:55 am

ಖಾತೆ ಕ್ಯಾತೆ-ಸಚಿವಗಿರಿಗೆ ಲಾಬಿ ಮಧ್ಯೆ ಸಿಎಂ ಡಿಕೆ ಶಿವಕುಮಾರ್ ಭವಿಷ್ಯ ನುಡಿದ ನೊಣವಿನಕೆರೆ ಅಜ್ಜಯ್ಯ: ಏನಂದ್ರು?

ಡಿಕೆಶಿಗೆ ಇದ್ದ ಎಲ್ಲಾ ಕಂಟಕ ದೂರ ಆಗಿದ್ದು, ಇನ್ಯಾವುದೇ ಸಮಸ್ಯೆ ಇಲ್ಲ, ಇಲ್ಲವೂ ನಿವಾರಣೆ ಆಗಲಿದೆ. ಅವರಿಗೆ ಗುರು ಆಶೀರ್ವಾದ ಇದೆ ಎಂಬುದಾಗಿ ನೊಣವಿನಕೆರೆ ಅಜ್ಜಯ್ಯ ಭವಿಷ್ಯ ನುಡಿದಿದ್ದಾರೆ. ಡಿಕೆಶಿವಕುಮಾರ್ ಪಾಲಿಸಿಕೊಂಡು ಬಂದಿರುವ ಅಜ್ಜಯ್ಯ ಅವರ ಮಾರ್ಗದರ್ಶನ ಹಾಗೂ ಮಠಕ್ಕೆ ನಡೆದುಕೊಂಡು ಬಂದ ರೀತಿಯೇ ಅವರಿಗೆ ಶುಭವಾಗಿದೆ ಎಂದು ಹೇಳಿದ್ದಾರೆ.

ವಿಜಯ ಕರ್ನಾಟಕ 11 Jun 2026 11:52 am

ಕಾಂಗ್ರೆಸ್ - TMC ವಿಲೀನದ ಊಹಾಪೋಹ ತಳ್ಳಿ ಹಾಕಿದ ಎರಡೂ ಪಕ್ಷಗಳು

90 ನಿಮಿಷಗಳ ಮಾತುಕತೆ ನಡೆಸಿದ ರಾಹುಲ್ ಗಾಂಧಿ –ಅಭಿಷೇಕ್ ಬ್ಯಾನರ್ಜಿ; ಬಿಜೆಪಿ ವಿರುದ್ಧ ಹೋರಾಟಕ್ಕೆ ಸಹಕಾರದ ಚರ್ಚೆ

ವಾರ್ತಾ ಭಾರತಿ 11 Jun 2026 11:42 am

Gold Price Today: ಚಿನ್ನ, ಬೆಳ್ಳಿ ದರ ಭಾರೀ ಕುಸಿತ; ಬೆಂಗಳೂರು ಸೇರಿದಂತೆ ವಿವಿಧ ನಗರಗಳ ನಿಖರ ಬೆಲೆ ಇಲ್ಲಿದೆ

ಚಿನ್ನವು ಕೇವಲ ಆಭರಣವಾಗಿ ಮಾತ್ರವಲ್ಲದೆ, ಆರ್ಥಿಕ ಭದ್ರತೆಯ ಸಂಕೇತವಾಗಿಯೂ ಭಾರತೀಯರ ಜೀವನದಲ್ಲಿ ಬೆರೆತುಹೋಗಿದೆ. ಹಾಗಾಗಿ ಪ್ರತಿದಿನ ಮಾರುಕಟ್ಟೆಯ ದರಗಳ ಬಗ್ಗೆ ತಿಳಿದುಕೊಳ್ಳುವುದು ಅತಿ ಮುಖ್ಯ. ಜಾಗತಿಕ ವಿದ್ಯಮಾನಗಳ ನೇರ ಪರಿಣಾಮ ಭಾರತೀಯ ಚಿನಿವಾರ ಪೇಟೆಯ ಮೇಲೂ ಆಗಿದ್ದು, ಸತತವಾಗಿ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಭಾರಿ ಇಳಿಕೆ ಕಂಡುಬಂದಿದೆ. ಆಭರಣ ಪ್ರಿಯರಿಗೆ ಹಾಗೂ ಹೂಡಿಕೆದಾರರಿಗೆ ಈ ಕುಸಿತ

ಒನ್ ಇ೦ಡಿಯ 11 Jun 2026 11:41 am

ಮತ್ತೆ ಕುಸಿದ ಚಿನ್ನ-ಬೆಳ್ಳಿ ಬೆಲೆ : ಜೂನ್‌ನಲ್ಲಿ ಸತತವಾಗಿ ದರ ಕುಸಿಯುತ್ತಿರುವುದೇಕೆ?

ಕಳೆದ ಕೆಲವು ದಿನಗಳಿಂದ ಚಿನ್ನದ ಬೆಲೆ ತೀವ್ರವಾಗಿ ಕುಸಿಯುತ್ತಿದ್ದು ಖರೀದಿದಾರರಿಗೆ ಸುವರ್ಣಾವಕಾಶ ಬಂದೊದಗಿದೆ. ಪ್ರಬಲವಾದ ಅಮೆರಿಕನ್ ಡಾಲರ್, ಏರುತ್ತಿರುವ ತೈಲ ಬೆಲೆಗಳು ಮತ್ತು ಹೆಚ್ಚಿನ ಬಡ್ಡಿದರಗಳ ಆತಂಕದಿಂದ ಭಾರತದಲ್ಲಿ ಚಿನ್ನ-ಬೆಳ್ಳಿ ಬೆಲೆಗಳು ಕುಸಿದಿವೆ. ಪಶ್ಚಿಮ ಏಷ್ಯಾದ ಭೌಗೋಳಿಕ-ರಾಜಕೀಯ ಬೆಳವಣಿಗೆಗಳು ಮತ್ತೆ ಚಿನ್ನದ ಬೆಲೆ ಮೇಲೆ ಪರಿಣಾಮ ಬೀರಿವೆ. ಅಮೆರಿಕ-ಇರಾನ್ ಯುದ್ಧದ ಹಿನ್ನೆಲೆಯಲ್ಲಿ ಕಳೆದೆರಡು ವಾರಗಳಿಂದ ಚಿನ್ನ ಸತತ ಕುಸಿತದ ಹಾದಿಯಲ್ಲಿತ್ತು. ಯುದ್ಧ ಜಾಗತಿಕವಾಗಿ ಕಚ್ಚಾತೈಲ ಬೆಲೆ ಏರಿಕೆಗೆ ಕಾರಣವಾಗಿದ್ದು, ದೇಶದಲ್ಲಿ ಚಿನ್ನದ ಬೆಲೆಗಳು ಕುಸಿದಿವೆ. ಮೇ ತಿಂಗಳಲ್ಲಿ ಸ್ಥಿರವಾಗಿದ್ದ ಬೆಳ್ಳಿಯ ಬೆಲೆಯೂ ಜೂನ್ ಆರಂಭದಲ್ಲಿ ಕುಸಿಯಲು ಆರಂಭವಾಗಿತ್ತು. ಸೋಮವಾರವೂ ಚಿನ್ನ ಮತ್ತು ಬೆಳ್ಳಿಯ ಬೆಲೆ ಕುಸಿತದೊಂದಿಗೆ ಮಾರುಕಟ್ಟೆ ಆರಂಭವಾಗಿತ್ತು. ಮಂಗಳವಾರ ಚಿನ್ನದ ದರ ಅಲ್ಪ ಮಟ್ಟಿಗೆ ಏರಿಕೆಯಾಗಿತ್ತು. ಇದೀಗ ಬುಧವಾರ ಮತ್ತು ಗುರುವಾರ ಮತ್ತೆ ಚಿನ್ನದ ದರದಲ್ಲಿ ತೀವ್ರ ಕುಸಿತ ದಾಖಲಾಗಿದೆ. ಮತ್ತೆ ಕುಸಿದ ಚಿನ್ನದ ದರ ಜೂನ್ 11ರಂದು ಗುರುವಾರ ಬೆಂಗಳೂರಿನ ಮಾರುಕಟ್ಟೆಗಳಲ್ಲಿ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ ಬುಧವಾರ ಸಂಜೆಯ ಬೆಲೆಗೆ ಹೋಲಿಸಿದರೆ ಪ್ರತಿ ಗ್ರಾಂಗೆ 213 ರೂ. ಕಡಿಮೆಯಾಗಿ ಹತ್ತು ಗ್ರಾಂ ಬೆಲೆ 1,45,640 ರೂ. ಗೆ ಬಂದು ನಿಂತಿದೆ. ಆಭರಣ ಚಿನ್ನವಾದ 22 ಕ್ಯಾರೆಟ್ ಬೆಲೆಯು ಪ್ರತಿ ಗ್ರಾಂಗೆ 195ರೂ. ಕುಸಿದಿದ್ದು, ಹತ್ತು ಗ್ರಾಂಗೆ 1,33,500ರೂ.ಗೆ ತಲುಪಿದೆ. 18 ಕ್ಯಾರೆಟ್ ಚಿನ್ನವು ಪ್ರತಿ ಗ್ರಾಂಗೆ 160 ರೂ. ಕಡಿಮೆಯಾಗಿ, ಹತ್ತು ಗ್ರಾಂಗೆ 1,09,230ರೂ.ಗೆ ತಲುಪಿದೆ. ಮಂಗಳೂರಿನಲ್ಲಿ ಚಿನ್ನದ ದರವೆಷ್ಟಿದೆ? ಜೂನ್ 11ರಂದು ಗುರುವಾರ ಬೆಳಗಿನ 11 ಗಂಟೆಯ ವಹಿವಾಟಿನಲ್ಲಿ ಮಂಗಳೂರಿನಲ್ಲಿ ಚಿನ್ನದ ಬೆಲೆ ಮತ್ತೆ ಕುಸಿತ ಕಂಡಿದೆ. ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ದರ 14,564 (-213) ರೂ.ನಷ್ಟಿದೆ. ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ದರ 13,350 (-195) ರೂ. ಮತ್ತು ಒಂದು ಗ್ರಾಂ 18 ಕ್ಯಾರೆಟ್ ಚಿನ್ನದ ದರ 10,923 (-160)ರೂ. ಬೆಲೆಗೆ ಬಂದು ತಲುಪಿದೆ. ಜೂನ್‌ನಲ್ಲಿ ಕುಸಿದ ಬೆಳ್ಳಿಯ ಮೌಲ್ಯ ಮಾರ್ಚ್ ಮತ್ತು ಏಪ್ರಿಲ್‌ನಲ್ಲಿ 2,55,000ರೂ. ಸುತ್ತ ಮುತ್ತ ಬಂದು ನಿಂತಿದ್ದ ಬೆಳ್ಳಿಯ ಮೌಲ್ಯ ಮೇ ಆರಂಭದಲ್ಲಿ ಪ್ರತಿ ಕೆಜಿಗೆ 2,90,000 ಲಕ್ಷದವರೆಗೂ ಏರಿತ್ತು. ನಂತರ, ಬಹುತೇಕ ತಿಂಗಳಿಡೀ ಬೆಳ್ಳಿಯ ಮೌಲ್ಯ ಪ್ರತಿ ಕೆಜಿಗೆ 2,80,000ರೂ.ಗೆ ಬಂದು ಸ್ಥಿರವಾಗಿತ್ತು. ಕಳೆದ ವಾರವೂ ಅದೇ ಬೆಲೆಗೆ ಸ್ಥಿರವಾಗಿ ನಿಂತಿತ್ತು. ಆದರೆ, ಕಳೆದ ಶುಕ್ರವಾರ ಬೆಳ್ಳಿಯ ಮೌಲ್ಯ ಪ್ರತಿ ಗ್ರಾಂಗೆ 5 ರೂ. ಕಡಿಮೆಯಾಗಿ ಪ್ರತಿ ಕೆಜಿಗೆ 2,75,000 ರೂ.ಗೆ ಬಂದು ತಲುಪಿತು. ಶನಿವಾರ ಬೆಳ್ಳಿಯ ಮೌಲ್ಯ ಪ್ರತಿ ಗ್ರಾಂಗೆ 10 ರೂ. ಕಡಿಮೆಯಾಗಿ ಪ್ರತಿ ಕೆಜಿಗೆ 2,65,000 ರೂ.ಗೆ ಬಂದು ನಿಂತಿತ್ತು. ಸೋಮವಾರ ಮತ್ತೆ ಕುಸಿದಿರುವ ಬೆಳ್ಳಿಯ ದರ ಪ್ರತಿ ಗ್ರಾಂಗೆ 5 ರೂ. ಕಡಿಮೆಯಾಗಿ ಪ್ರತಿ ಕೆಜಿಗೆ 2,60,000 ರೂ.ಗೆ ಬಂದು ತಲುಪಿದೆ. ಮಂಗಳವಾರ ಸ್ಥಿರವಾಗಿದ್ದ ಬೆಳ್ಳಿಯ ದರ ಬುಧವಾರ ಪ್ರತಿ ಗ್ರಾಂಗೆ 10 ರೂ. ಕಡಿಮೆಯಾಗಿ ಪ್ರತಿ ಕೆಜಿಗೆ 2,50,000 ರೂ.ಗೆ ಬಂದು ನಿಂತಿದೆ. ಇದೀಗ ಗುರುವಾರವೂ ಅದೇ ಬೆಲೆಗೆ ಸ್ಥಿರವಾಗಿ ನಿಂತಿದೆ. ವಿವಿಧ ನಗರಗಳಲ್ಲಿ 1 ಗ್ರಾಂ ಚಿನ್ನದ ದರ (ಬೆಳಗಿನ ವಹಿವಾಟು) ಹೇಗಿದೆ? ದಿಲ್ಲಿ: 24 ಕ್ಯಾರೆಟ್ ಚಿನ್ನದ ದರ 14,579 (-213) ರೂ., 22 ಕ್ಯಾರೆಟ್ ಚಿನ್ನದ ದರ 13,365 (-195) ರೂ. ಮುಂಬೈ: 24 ಕ್ಯಾರೆಟ್ ಚಿನ್ನದ ದರ 14,564 (-213) ರೂ., 22 ಕ್ಯಾರೆಟ್ ಚಿನ್ನದ ದರ 13,350 (-195) ರೂ. ಅಹಮದಾಬಾದ್: 24 ಕ್ಯಾರೆಟ್ ಚಿನ್ನದ ದರ 14,569 (-213) ರೂ., 22 ಕ್ಯಾರೆಟ್ ಚಿನ್ನದ ದರ 13,355 (-195) ರೂ. ಚೆನ್ನೈ: 24 ಕ್ಯಾರೆಟ್ ಚಿನ್ನದ ದರ 14,728 (-327) ರೂ., 22 ಕ್ಯಾರೆಟ್ ಚಿನ್ನದ ದರ 13,500 (-300) ರೂ. ಕೋಲ್ಕತ್ತಾ: 24 ಕ್ಯಾರೆಟ್ ಚಿನ್ನದ ದರ 14,564 (-213) ರೂ., 22 ಕ್ಯಾರೆಟ್ ಚಿನ್ನದ ದರ 13,350 (-195) ರೂ. ಹೈದರಾಬಾದ್‌: 24 ಕ್ಯಾರೆಟ್ ಚಿನ್ನದ ದರ 14,564 (-213) ರೂ., 22 ಕ್ಯಾರೆಟ್ ಚಿನ್ನದ ದರ 13,350 (-195) ರೂ. ಜೈಪುರ: 24 ಕ್ಯಾರೆಟ್ ಚಿನ್ನದ ದರ 14,579 (-213) ರೂ., 22 ಕ್ಯಾರೆಟ್ ಚಿನ್ನದ ದರ 13,365 (-195) ರೂ. ಚಂಡೀಗಢ: 24 ಕ್ಯಾರೆಟ್ ಚಿನ್ನದ ದರ 14,579 (-213) ರೂ., 22 ಕ್ಯಾರೆಟ್ ಚಿನ್ನದ ದರ 13,365 (-195) ರೂ. ಲಕ್ನೋ: 24 ಕ್ಯಾರೆಟ್ ಚಿನ್ನದ ದರ 14,579 (-213) ರೂ., 22 ಕ್ಯಾರೆಟ್ ಚಿನ್ನದ ದರ 13,365 (-195) ರೂ.

ವಾರ್ತಾ ಭಾರತಿ 11 Jun 2026 11:37 am

ಸಿದ್ದರಾಮಯ್ಯನವರ ಎಷ್ಟೇ ಒತ್ತಡಕ್ಕೆ ಮಣಿಯದ ಹೈಕಮಾಂಡ್ : ಪರಮಾಪ್ತನ ’ಮಿನಿಸ್ಟರ್’ ಕನಸು ಗಗನಕುಸುಮ?

Dr HC Mahadevappa Ministerial Birth : ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೇತೃತ್ವದ ಹೊಸ ಸರ್ಕಾರ ಅಧಿಕಾರಕ್ಕೆ ಬಂದ ನಂತರ, ಸಿದ್ದರಾಮಯ್ಯನವರ ಸರ್ಕಾರದಲ್ಲಿದ್ದ ಸುಮಾರು ಸಚಿವರಿಗೆ ಸ್ಥಾನ ಸಿಕ್ಕಿರಲಿಲ್ಲ. ಈ ಪೈಕಿ, ಮಾಜಿ ಸಿಎಂನವರ ಪರಮಾಪ್ತ ವಲಯದಲ್ಲಿ ಕಾಣಿಸಿಕೊಳ್ಳುತ್ತಿದ್ದ ಡಾ. ಮಹದೇವಪ್ಪನವರು ಕೂಡಾ. ಇವರಿಗೆ ಹೊಸ ಸಂಪುಟದಲ್ಲಿ ಸ್ಥಾನ ನೀಡಬೇಕು ಎನ್ನುವ ಒತ್ತಡಕ್ಕೆ ಹೈಕಮಾಂಡ್ ಮಣಿದಿಲ್ಲ ಎಂದು ಹೇಳಲಾಗುತ್ತಿದೆ.

ವಿಜಯ ಕರ್ನಾಟಕ 11 Jun 2026 11:23 am

ಮುಂಗಾರು ಎಂಟ್ರಿಯಾದ್ರೂ ಬೆಂಗಳೂರಿನಲ್ಲಿ ರಸ್ತೆ, ಚರಂಡಿ ಕಾಮಗಾರಿಗೆ ಸಿಗಲಿಲ್ಲ ಮುಕ್ತಿ! ಖಾತೆ ಕ್ಯಾತೆಯಲ್ಲಿ ಸಚಿವರು ಬ್ಯುಸಿ

ಬೆಂಗಳೂರಿನಲ್ಲಿ ಮಳೆಗಾಲದಲ್ಲಿ ನಾನಾ ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿದೆ. ನಗರದಲ್ಲಿ ಮಳೆ ಬಂತೆಂದರೆ ಸಾಕು ಅಲ್ಲಿ ಸಮಸ್ಯೆಗಳ ಆಗರವೇ ಕಾಣಿಸಿಕೊಳ್ಳುತ್ತದೆ. ಈಗಾಗಲೇ ರಸ್ತೆ ಗುಂಡಿಯಿಂದ ಜನರು ಪರದಾಟ ನಡೆಸುತ್ತಿದ್ದಾರೆ. ಅನೇಕ ಕಡೆಗಳಲ್ಲಿ ಚರಂಡಿ ಕಾಮಗಾರಿ ಪೂರ್ಣಗೊಂಡಿಲ್ಲ. ಆದರೆ ಪಾಲಿಕೆ ಮಾತ್ರ ಇನ್ನೂ ಎಚ್ಚೆತ್ತುಕೊಂಡಿಲ್ಲ. ಸಮಸ್ಯೆಯನ್ನು ಸೂಚನೆ ನೀಡಿ ಪರಿಹಾರ ಮಾಡಬೇಕಾದ ನಮ್ಮ ಜನಪ್ರತಿನಿಧಿಗಳು ಮಾತ್ರ ಖಾತೆ ಕ್ಯಾತೆಯಲ್ಲಿ ಬ್ಯುಸಿಯಾಗಿದ್ದಾರೆ. ಹಾಗಾದರೆ ಇದು ಹೀಗೆ ಮುಂದುವರಿದರೆ ಮುಂದೆ ಏನೇನು ಅವಾಂತರಗಳು ಸೃಷ್ಟಿಯಾಗಲಿದೆ? ಇಲ್ಲಿದೆ ಮಾಹಿತಿ.

ವಿಜಯ ಕರ್ನಾಟಕ 11 Jun 2026 11:19 am

US-Iran War: ಬಹ್ರೇನ್, ಕುವೈತ್ ಮತ್ತು ಜೋರ್ಡಾನ್‌ನಲ್ಲಿ ಅಮೆರಿಕಾದ 21 ಸೇನಾ ನೆಲೆ ಉಡೀಸ್‌ ಮಾಡಿದ IRGC!

ಮಧ್ಯಪ್ರಾಚ್ಯದಲ್ಲಿ ಸಂಘರ್ಷ ಉಲ್ಭಣಗೊಳ್ಳುತ್ತಿದ್ದು, ಅಮೆರಿಕಾ ದಾಳಿಗೆ ಪ್ರತಿದಾಳಿಯಾಗಿ ಇರಾನ್‌ ಗಲ್ಫ್‌ನಲ್ಲಿ ಕುವೈತ್‌, ಬಹ್ರೇನ್‌, ಜೋರ್ಡಾನ್‌ನಲ್ಲಿನ US ಮಿಲಿಟರಿ ಬೇಸ್‌ಗಳನ್ನು ಗುರಿಯಾಗಿಸಿ ದಾಳಿ ನಡೆಸಿ ಧ್ವಂಸಮಾಡುತ್ತಿದೆ. ಇದರಿಂದಾಗಿ ಸದ್ಯ ಗಲ್ಫ್‌ನಲ್ಲಿ ಆತಂಕದ ವಾತಾವರಣ ಮನೆ ಮಾಡಿದ್ದು, ಕುವೈತ್‌ ತನ್ನ ವಾಯುಪ್ರದೇಶವನ್ನು ಮುಚ್ಚಿದ್ದು, ಜೋರ್ಡಾನ್‌ನಲ್ಲಿನ ತನ್ನ ನಾಗರಿಕರು ಸುರಕ್ಷಿತವಾಗಿರುವಂತೆ US ರಾಯಭಾರ ಕಚೇರಿ ಎಚ್ಚರಿಕೆ ನೀಡಿದೆ. ಇನ್ನು, ಪರಸ್ಪರ ದಾಳಿಯ ನಡುವೆ ಇರಾನ್‌ ಶಾಂತಿ ಒಪ್ಪಂದ ಮಾಡಿಕೊಳ್ಳಬೇಕು ಎಂದು ಟ್ರಂಪ್‌ ಪ್ರಸ್ತಾಪಿಸಿದ್ದು, ದಾಳಿಯನ್ನು ಮುಂದುವರೆಸಲಿದ್ದೇವೆ ಎಂದು ಸಹ ಹೇಳಿಕೊಂಡಿದ್ದಾರೆ. ಇದು ಸದ್ಯ ಪ್ರಾದೇಶಿಕವಾಗಿ ಮತ್ತಷ್ಟು ದಾಳಿಯನ್ನು ಹೆಚ್ಚಿಸಲಿದೆ.

ವಿಜಯ ಕರ್ನಾಟಕ 11 Jun 2026 11:17 am

ಮಧ್ಯಪ್ರಾಚ್ಯ ಬಿಕ್ಕಟ್ಟು ಮತ್ತಷ್ಟು ತೀವ್ರಗೊಳ್ಳುವ ಅಪಾಯ: ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಎಚ್ಚರಿಕೆ

ವಿಶ್ವಸಂಸ್ಥೆ, ಜೂನ್ 11: ಮಧ್ಯಪ್ರಾಚ್ಯವು ಆಳವಾದ ಬಿಕ್ಕಟ್ಟಿನತ್ತ ಸಾಗುತ್ತಿದ್ದು, ಅದರ ಪರಿಣಾಮ ಆ ಪ್ರದೇಶವನ್ನು ಮೀರಿ ಜಗತ್ತಿನ ಇತರ ಭಾಗಗಳ ಮೇಲೆಯೂ ಬೀಳಲಿವೆ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಎಚ್ಚರಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣ X ನಲ್ಲಿ ಪ್ರತಿಕ್ರಿಯಿಸಿರುವ ಅವರು, ‘ಮಧ್ಯಪ್ರಾಚ್ಯವು ಮತ್ತಷ್ಟು ಬಿಕ್ಕಟ್ಟಿಗೆ ಸಿಲುಕುತ್ತಿದೆ. ಇದರ ಪರಿಣಾಮಗಳು ಪ್ರದೇಶದ ಗಡಿಗಳನ್ನು ಮೀರಿ ವಿಸ್ತರಿಸುತ್ತಿವೆ’ ಎಂದು ಹೇಳಿದ್ದಾರೆ. ‘ಈ ವಾರ ನಡೆದ ವ್ಯಾಪಕ ದಾಳಿಗಳು ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿವೆ. ಕದನ ವಿರಾಮ ಜಾರಿಯಲ್ಲಿದ್ದರೂ ಪರಿಸ್ಥಿತಿ ಅತ್ಯಂತ ಸೂಕ್ಷ್ಮವಾಗಿದೆ’ ಎಂದು ತಿಳಿಸಿದ್ದಾರೆ. ‘ಈಗಿನ ಉದ್ವಿಗ್ನತೆಯು ಪೂರ್ಣ ಪ್ರಮಾಣದ ಸಂಘರ್ಷಕ್ಕೆ ತಿರುಗುವ ಅಪಾಯವನ್ನು ನಾವು ನಿರ್ಲಕ್ಷಿಸಬಾರದು’ ಎಂದು ಗುಟೆರೆಸ್ ಹೇಳಿದ್ದಾರೆ. ಎಲ್ಲ ಸಂಬಂಧಿತ ಪಕ್ಷಗಳು ರಾಜತಾಂತ್ರಿಕ ಮಾತುಕತೆಯ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಒತ್ತಾಯಿಸಿರುವ ಅವರು, ‘ಇನ್ನು ಮುಂದೆ ದಾಳಿಗಳು ನಡೆಯಬಾರದು. ಹಿಂಸಾಚಾರಕ್ಕೆ ಅವಕಾಶ ನೀಡಬಾರದು’ ಎಂದು ಹೇಳಿದ್ದಾರೆ.

ವಾರ್ತಾ ಭಾರತಿ 11 Jun 2026 11:16 am

ವೋಟಿಗಾಗಿ ಅಮ್ಮಾ, ಅಮ್ಮಾ! ಬೇರೆಲ್ಲೆಡೆ, ಯಾರಮ್ಮ? ತೊಲಗಮ್ಮಾ!

ಭಾಗ - 1 ಮಟನ್‌ಗಿಂತ ಅಗ್ಗದ ದರದಲ್ಲಿ ಸಿಗುತ್ತದೆ ಎಂಬ ಒಂದೇ ಕಾರಣಕ್ಕಾಗಿ ಬೀಫ್‌ಗೆ ಪ್ರಾಶಸ್ತ್ಯ ನೀಡುತ್ತಾ ಬಂದಿದ್ದ ಭಾರತದ ಕೆಲವು ಬೀಫ್ ಭಕ್ಷಕರಿಗೆ ಇತ್ತೀಚೆಗೆ ಜ್ಞಾನೋದಯವಾಗಿದ್ದು, ಅವರು ಆರೆಸ್ಸೆಸ್‌ನ ಹಳೆಯ ಬೇಡಿಕೆಗೆ ತಮ್ಮ ಬೆಂಬಲ ಘೋಷಿಸಿ ಬಿಟ್ಟಿದ್ದಾರೆ. ನಾವಿನ್ನು ಬೀಫ್ ತಿನ್ನುವುದಿಲ್ಲ, ಸರಕಾರವು ದನವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಲಿ ಎಂದು ಆಗ್ರಹಿಸತೊಡಗಿದ್ದಾರೆ. ಈ ಬೆಳವಣಿಗೆಯಿಂದ ‘ಗೋರಕ್ಷಕ’ರೆಲ್ಲಾ ಸಂತುಷ್ಟರಾಗಬೇಕಿತ್ತು. ಪ್ರಸ್ತುತ ಬೇಡಿಕೆ ಕೇಳಿ ಬಂದ ಹೆಚ್ಚಿನ ರಾಜ್ಯಗಳಲ್ಲಿ ಬಿಜೆಪಿ ಸರಕಾರಗಳೇ ಇವೆ. ಗೋರಕ್ಷಕರು ಆ ತಮ್ಮ ಹಳೆಯ ಬೇಡಿಕೆಯನ್ನು ಹೊಸ ಉತ್ಸಾಹದೊಂದಿಗೆ ಪ್ರಸ್ತುತ ಸರಕಾರಗಳ ಮುಂದಿಟ್ಟು, ಆ ನಿಟ್ಟಿನಲ್ಲಿ ಕಾನೂನು ಪ್ರಕ್ರಿಯೆ ಆರಂಭಿಸುವಂತೆ ಕೇಂದ್ರದಲ್ಲಿರುವ ತಮ್ಮದೇ ಸರಕಾರದ ಮೇಲೆ ಒತ್ತಡ ಹೇರಬೇಕಿತ್ತು. ಆದರೆ ನಿಜವಾಗಿ ಆದದ್ದೇನು? ಹಿಂದೊಮ್ಮೆ (2015) ಬಿಜೆಪಿಯ ಕೇಂದ್ರ ಸಚಿವರಾಗಿದ್ದ ಮುಕ್ತಾರ್ ಅಬ್ಬಾಸ್ ನಖ್ವಿ ಎಂಬೊಬ್ಬ ಅಮಿತೋತ್ಸಾಹಿ ನಾಯಕ ತಮ್ಮ ಮಾಲಕರನ್ನು ಮೆಚ್ಚಿಸುವ ಆವೇಶದಲ್ಲಿ ‘‘ಬೀಫ್ ತಿನ್ನ ಬಯಸುವವರು ಪಾಕಿಸ್ತಾನಕ್ಕೆ ಹೋಗಿ’’ ಎಂದಿದ್ದರು. ಆಗ ಅದೇ ಪಕ್ಷ ಮತ್ತು ಅದೇ ಸಂಪುಟದ ಇನ್ನೋರ್ವ ಸದಸ್ಯ ಕಿರಣ್ ರಿಜಿಜು ಈ ನಿಲುವನ್ನು ವಿರೋಧಿಸಿ, ‘‘ನಾನು ಅರುಣಾಚಲ ಪ್ರದೇಶದವನು. ನಾನು ಬೀಫ್ ತಿನ್ನುತ್ತೇನೆ. ನನ್ನನ್ನು ತಡೆಯಲು ಯಾರಿಗೆ ಸಾಧ್ಯವಿದೆ? ಭಾರತ ಒಂದು ಜಾತ್ಯತೀತ ದೇಶ. ಇಲ್ಲಿ ಯಾರೂ ತಮ್ಮ ಆಹಾರಾಭ್ಯಾಸಗಳನ್ನು ಇನ್ನೊಬ್ಬರ ಮೇಲೆ ಹೇರುವುದಕ್ಕೆ ಅವಕಾಶ ಇಲ್ಲ’’ ಎಂದು ಹೇಳಿಕೆ ನೀಡಿದ್ದರು. (ಆ ಬಳಿಕ ಆ ಕುರಿತು ಕೆಲವು ಗೊಂದಲಕಾರಿ ವಿವರಣೆಗಳನ್ನು ಬೇರೆ ನೀಡಿದರು) ಗಮ್ಮತ್ತು ನೋಡಿ: ಬೀಫ್ ಪರ ಮಾತನಾಡಿದ್ದ ಕಿರಣ್ ರಿಜಿಜು ಈಗಲೂ ಮೋದಿ ಸಂಪುಟದಲ್ಲಿ ಸಚಿವರಾಗಿ ಮೆರೆಯುತ್ತಿದ್ದಾರೆ. ಬೀಫ್ ವಿರೋಧಿಸಿದ್ದ ಮುಕ್ತಾರ್ ಅಬ್ಬಾಸ್ ನಖ್ವಿ ಪಾಪ, ಕಳೆದ ಕೆಲವು ವರ್ಷಗಳಿಂದ ಜೋಳಿಗೆ ಎತ್ತಿಕೊಂಡು ಅದೆಲ್ಲಿ ಅಜ್ಞಾತವಾಗಿ ಅಲೆಯುತ್ತಿದ್ದಾರೋ ಗೊತ್ತಿಲ್ಲ! ದನ, ಗೋವು, ಗೋಮಾಂಸ, ಬೀಫ್ ಮುಂತಾದ ವಿಷಯಗಳಲ್ಲಿ ಧರ್ಮರಕ್ಷಕರ ನೈಜ ನಿಲುವು ಏನೆಂಬುದು ಸ್ವತಃ ಅವರದೇ ಪಕ್ಷದಲ್ಲಿ ಸಂಸದರೂ, ರಾಜ್ಯಸಭೆಯಲ್ಲಿ ಪಕ್ಷದ ಉಪನಾಯಕರೂ, ಕೇಂದ್ರ ಸಚಿವರೂ ಆಗಿದ್ದ ನಖ್ವಿಯವರಿಗೆ ಅರ್ಥವಾಗಲಿಲ್ಲ ಅಂದ ಮೇಲೆ ಇತರರ ಕಥೆ ಏನು? ಕೆಲವು ವರ್ಷಗಳ ಹಿಂದೆ ದಿಲ್ಲಿಯಲ್ಲಿ ಸಮಾನ ನಾಗರಿಕ ಕಾನೂನು ಕುರಿತು ಚರ್ಚೆಯೊಂದು ನಡೆಯುತ್ತಿದ್ದಾಗ ಬಿಜೆಪಿ ನಾಯಕರೊಬ್ಬರು ‘‘ಒಂದೊಂದು ಕಡೆ ಒಂದೊಂದು ಕಾನೂನು ಸರಿಯಲ್ಲ. ಒಂದೇ ದೇಶ ಅಂದ ಮೇಲೆ ಎಲ್ಲ ಕಡೆ ಎಲ್ಲರಿಗೆ ಒಂದೇ ಕಾನೂನು ಅನ್ವಯಿಸಬೇಕು’’ ಎಂದು ಪದೇ ಪದೇ ಚೀರಾಡುತ್ತಿದ್ದರು. ಆಗ ಆಪ್ ನಾಯಕರೊಬ್ಬರು ಎದ್ದು ಕೇಳಿದ ಒಂದು ಸರಳ ಪ್ರಶ್ನೆ, ಬಿಜೆಪಿ ನಾಯಕನನ್ನು ತಬ್ಬಿಬ್ಬುಗೊಳಿಸಿತು. ಪ್ರಶ್ನೆ ಹೀಗಿತ್ತು: ‘‘ಸ್ವಾಮೀ, ನಿಮಗೆ ಬೇಕಾದಾಗಲೆಲ್ಲಾ ಒಂದು ದೇಶ - ಒಂದು ಕಾನೂನು ಎನ್ನುವ ನಿಮ್ಮ ಪಕ್ಷ, ಗೋಮಾಂಸದ ವಿಷಯದಲ್ಲಿ ಬೇರೆ ಬೇರೆ ರಾಜ್ಯಗಳಲ್ಲಿ ಬೇರೆಬೇರೆ ನಿಲುವು ತಾಳಿರುವುದೇಕೆ? ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ನಿಮ್ಮ ನಾಯಕರು ಸಂಪೂರ್ಣ ಗೋಮಾಂಸ ನಿಷೇಧ ಅಂತಾರೆ. ಪಕ್ಕದ ಗೋವಾದಲ್ಲಿ ಎಲ್ಲೂ ಯಾರಿಗೂ ಯಾವುದೇ ನಿಷೇಧ ಇಲ್ಲ, ಎಲ್ಲೆಡೆ ಎಲ್ಲರಿಗೆ ಸಮ್ಮತ ಎನ್ನುತ್ತಿದ್ದಾರೆ. ಅತ್ತ ಹರ್ಯಾಣದಲ್ಲಿ, ಸ್ಥಳೀಯರಿಗೆ ಮಾತ್ರ ನಿಷಿದ್ಧ - ವಿದೇಶಿ ಪ್ರವಾಸಿಗರಿಗೆ ಸಮ್ಮತ ಎನ್ನುತ್ತಿದ್ದಾರೆ. ಗೋವಿನ ವಿಷಯದಲ್ಲಿ ದೇಶದೆಲ್ಲೆಡೆ ಒಂದೇ ಧೋರಣೆ ತಾಳಲು ನಿಮಗೇಕೆ ಸಾಧ್ಯವಿಲ್ಲ?’’ ಗೋವಿನ ವಿಷಯದಲ್ಲಿ ಸಾವರ್ಕರ್ ಅಸಂಗತ ‘ಹಿಂದುತ್ವ’ ಎಂಬ ಜನಾಂಗವಾದಿ ಸಿದ್ಧಾಂತದ ಸ್ಥಾಪಕ ವಿ.ಡಿ. ಸಾವರ್ಕರ್ ಅವರು ಮನುವಾದಿ ಅಂಧಭಕ್ತರ ಪರಮಪೂಜ್ಯ, ಪ್ರಾತಃಸ್ಮರಣೀಯ ನಾಯಕರು. ಅವರು ಹಗಲಿರುಳೆನ್ನದೆ, ಭಕ್ತಿಪೂರ್ವಕ ಆ ತಮ್ಮ ಆದರ್ಶಪುರುಷನ ನಾಮ ಜಪಿಸುತ್ತಿರುತ್ತಾರೆ. ಅವರ ಕುರಿತಾದ ಕಹಿಸತ್ಯಗಳನ್ನೆಲ್ಲಾ ಮುಚ್ಚಿಟ್ಟು ಸುಳ್ಳುಗಳ ಕಂತೆಯನ್ನೇ ಸೃಷ್ಟಿಸಿ, ವೀರ ಶೂರ ಎಂದೆಲ್ಲಾ ಸಾವರ್ಕರ್‌ರನ್ನು ವೈಭವೀಕರಿಸುತ್ತಿರುತ್ತಾರೆ. ಆದರೆ ಗೋವು, ಗೋಮಾತೆ, ಗೋಪೂಜೆ, ಗೋಮಾಂಸ ಇತ್ಯಾದಿಗಳ ವಿಷಯದಲ್ಲಿ ಸಾವರ್ಕರ್ ಏನು ಹೇಳಿದ್ದರು? ಎಂದು ಅವರೊಡನೆ ಕೇಳಿ ನೋಡಿ. ಈ ಕುರಿತು ಅವರು ಅಪ್ಪಿತಪ್ಪಿಯೂ ಮಾತನಾಡುವುದಿಲ್ಲ. ಏಕೆಂದರೆ ಗೋವಿನ ಕುರಿತು ಸಾವರ್ಕರ್ ಅವರ ಹೇಳಿಕೆಗಳ ಸ್ವರೂಪ ಆ ಥರ ಇದೆ. ‘‘ಗೋ ಪಾಲನ್ ಹಾವೇ, ಗೋ ಪೂಜನ್ ನಾವ್ಹೇ’’ (ಗೋವನ್ನು ಪೋಷಿಸಿ ಆದರೆ ಗೋವನ್ನು ಪೂಜಿಸಬೇಡಿ) - ಇದು ನಿಜವಾಗಿ, ವಿ.ಡಿ. ಸಾವರ್ಕರ್ ಅವರ ಒಂದು ಮರಾಠಿ ಪ್ರಬಂಧದ ಶೀರ್ಷಿಕೆಯಾಗಿತ್ತು. ಮಹಾರಾಷ್ಟ್ರ ಮೂಲದ ಹಿರಿಯ ರಾಜಕಾರಣಿ ಹಾಗೂ ಸಾವರ್ಕರ್ ಅಭಿಮಾನಿ ಶರದ್ ಪವಾರ್ ತಮ್ಮ ಆತ್ಮಚರಿತ್ರೆ (ಅಪ್ನೀ ಶರತ್ತೊಂ ಪರ್)ಯಲ್ಲಿ ಸಾವರ್ಕರ್ ಅವರ ಇಂತಹ ಅನೇಕ ಮಾತುಗಳನ್ನು ಉದ್ಧರಿಸಿದ್ದಾರೆ. ‘‘ಗೋವು ರೈತನ ಮೇಲೆ ಒಂದು ಹೊರೆಯಾಗಬಾರದು. ಯಾರಾದರೂ ಗೋಮಾಂಸವನ್ನು ತಿನ್ನುತ್ತಾರೆಂದಾದರೆ ನಾನು ಅವರನ್ನು ಅಪರಾಧಿ ಎಂದು ಪರಿಗಣಿಸುವುದಿಲ್ಲ’’ ಎಂದು ಸಾವರ್ಕರ್ ಹೇಳಿರುವುದನ್ನು ಪವಾರ್ ನೆನಪಿಸಿದ್ದಾರೆ. ಒಂದು ಸಂದರ್ಭದಲ್ಲಿ, ಸಾವರ್ಕರ್ ಅವರು ಹಸು ಮತ್ತು ಎಮ್ಮೆಗಳನ್ನು ಆಲದ ಮರ ಮತ್ತು ಅರಳಿ ಮರಗಳಿಗೆ ಹೋಲಿಸಿದ್ದರು. ‘‘ಅವು ಮನುಷ್ಯನಿಗೆ ಉಪಯುಕ್ತವಾಗಿರುವುದರಿಂದ ನಾವು ಅವುಗಳನ್ನು ಪ್ರೀತಿಸುತ್ತೇವೆ. ಆ ಮಟ್ಟಿಗೆ ನಾವು ಅವುಗಳನ್ನು ಪೂಜನೀಯವೆಂದೂ ಪರಿಗಣಿಸಬಹುದು. ಆ ಅರ್ಥದಲ್ಲಿ ಮಾತ್ರ ಅವುಗಳ ರಕ್ಷಣೆ, ಪೋಷಣೆ ಮತ್ತು ಅವುಗಳ ಯೋಗಕ್ಷೇಮ ನೋಡಿಕೊಳ್ಳುವುದು ನಮ್ಮ ಕರ್ತವ್ಯ ಮತ್ತು ನಮ್ಮ ಧರ್ಮವೂ ಹೌದು! ಆದರೆ ಕೆಲವು ಸಂದರ್ಭಗಳಲ್ಲಿ, ಆ ಪ್ರಾಣಿ ಅಥವಾ ಮರವು ಮಾನವಕುಲಕ್ಕೆ ಕಂಟಕವಾದಾಗ, ಅದನ್ನು ಪೋಷಿಸುವ ಅಥವಾ ರಕ್ಷಿಸುವ ಅಗತ್ಯವಿಲ್ಲ, ನಿಜವಾಗಿ ಆಗ ಅದರ ನಾಶವು ಮಾನವೀಯತೆ ಅಥವಾ ರಾಷ್ಟ್ರೀಯತೆಯ ಹಿತಾಸಕ್ತಿಗೆ ಪೂರಕವಾಗಿದ್ದಾಗ, ಅದುವೇ ಮಾನವ ಅಥವಾ ರಾಷ್ಟ್ರೀಯ ಧರ್ಮವಾಗುತ್ತದೆಯಲ್ಲವೇ?’’ ಎಂದು ಸಾವರ್ಕರ್ 1935 ರಲ್ಲಿ ಹೇಳಿದ್ದಾಗಿ ಅವರ ಮರಾಠಿ ಬರಹಗಳ ಸಂಕಲನ ‘ಸಮಗ್ರ ಸಾವರ್ಕರ್ ವಾಙ್ಮಯ’ ಸಂಪುಟ - 2ರಲ್ಲಿ ಉಲ್ಲೇಖಿಸಲಾಗಿದೆ. ಗೋರಕ್ಷಕರಿಗೆ ಸಾವರ್ಕರ್ ನೀಡಿದ ಒಂದು ಉಪದೇಶವನ್ನು ಗಮನಿಸಿ: ‘‘ಗೋ ಸಂರಕ್ಷಣಾ ಚಳವಳಿಯು ಧಾರ್ಮಿಕ ಮೂಢನಂಬಿಕೆಗಳನ್ನು ಅವಲಂಬಿಸುವ ಬದಲು ಸ್ಪಷ್ಟ ಮತ್ತು ಪ್ರಾಯೋಗಿಕವಾದ ಆರ್ಥಿಕ ಹಾಗೂ ವೈಜ್ಞಾನಿಕ ತತ್ವಗಳ ಆಧಾರದಲ್ಲಿ ಬೆಳೆದು ಜನಪ್ರಿಯವಾಗಬೇಕು. ಆಗ ಮಾತ್ರ ಅಮೆರಿಕನ್ನರಂತೆ ನಿಜವಾದ ಗೋರಕ್ಷಣೆಯನ್ನು ಸಾಧಿಸಲು ನಮಗೆ ಸಾಧ್ಯವಾದೀತು.’’ - ಸಮಗ್ರ ಸಾವರ್ಕರ್ ವಾಙ್ಮಯ ಸಂಪುಟ- 3 ಕಾಂಗ್ರೆಸ್ ನೇತಾರ ಶಶಿ ತರೂರ್ ‘‘ಒಂದುವೇಳೆ ಹಿಂದುತ್ವವು ಗೋವಿನ ಕಾಲನ್ನು ಆಧರಿಸಿ ನಿಂತರೆ, ತೀರಾ ಸಣ್ಣ ಬಿಕ್ಕಟ್ಟು ಎದುರಾದಾಗಲೂ ಅದು ಕುಸಿದು ನೆಲಕ್ಕೆ ಉರುಳುವುದು ಖಚಿತ’’ ಎಂಬ ಸಾವರ್ಕರ್ ನುಡಿಮುತ್ತನ್ನು ಹಲವೆಡೆ ಪ್ರಸ್ತಾಪಿಸಿದ್ದಾರೆ. ‘ಗೋರಕ್ಷಕ’ರ ಬಣ್ಣ ಬಯಲು ಮಾಡಿದ  ಶಂಕರಾಚಾರ್ಯರು ಮನುವಾದಿ ಅಂಧಭಕ್ತರು ಹಲವು ದಶಕಗಳಿಂದ ನಮ್ಮ ದೇಶದಲ್ಲಿ ಗೋವಿನ ಹೆಸರಲ್ಲಿ ತೀರಾ ಹೊಲಸು ಮಟ್ಟದ ರಾಜಕೀಯ ನಡೆಸುತ್ತಾ ಬಂದಿದ್ದಾರೆ. ಆ ಹೆಸರಲ್ಲಿ ವ್ಯಾಪಕ ಹಿಂಸಾಚಾರ, ರಕ್ತಪಾತಗಳನ್ನೂ ಆಯೋಜಿಸಿದ್ದಾರೆ. ನೂರಾರು ನರಹತ್ಯೆಗಳನ್ನೂ ನಡೆಸಿದ್ದಾರೆ. ಆದರೆ ಗೋವಿನ ವಿಷಯದಲ್ಲಿ ಅವರ ನಿಜವಾದ ನಿಲುವು ಏನು? ಈ ಕುರಿತು ಎಷ್ಟು ಸಂಶೋಧನೆ ನಡೆಸಿದರೂ ಸ್ಪಷ್ಟ ಉತ್ತರ ಸಿಗುವುದಿಲ್ಲ. ಏಕೆಂದರೆ ಈ ವಿಷಯದಲ್ಲಿ ಅಸ್ಪಷ್ಟತೆ ಮತ್ತು ಗೊಂದಲವೇ ಮನುವಾದಿಗಳ ನೈಜ ನಿಲುವಾಗಿದೆ. ರಾಜಕೀಯ ಅಗತ್ಯ ಮತ್ತು ಅನುಕೂಲಕ್ಕನುಸಾರವಾಗಿ ಬೇರೆಬೇರೆ ಕಡೆ, ಬೇರೆ ಬೇರೆ ಸನ್ನಿವೇಶಗಳಲ್ಲಿ ಬೇರೆಬೇರೆ ಧೋರಣೆ ಅನುಸರಿಸುವುದಕ್ಕೆ ಈ ‘ಯೋಜಿತ ಅಸ್ಪಷ್ಟತೆ’ಯು ಅವರಿಗೆ ನೆರವಾಗುತ್ತದೆ. ಅವರ ದೃಷ್ಟಿಯಲ್ಲಿ ಧರ್ಮ, ದೇವರು, ದೇವಾಲಯ, ಸಂಸ್ಕೃತಿ, ಪರಂಪರೆ ಇತ್ಯಾದಿಗಳಂತೆ ಗೋವು ಕೂಡಾ ವಿವಿಧ ಸ್ವಾರ್ಥಗಳ ಸಾಧನೆಗಾಗಿ ಸಂದರ್ಭಾನುಸಾರ ಬಳಸಬಹುದಾದ ಒಂದು ಆಟಿಕೆ ಅಥವಾ ಅಸ್ತ್ರವೇ ಹೊರತು ಅದು ಅವರ ದೃಷ್ಟಿಯಲ್ಲಿ ತಾಯಿಯಾಗಲಿ, ದೇವರಾಗಲಿ, ಪೂಜಾರ್ಹವಾಗಲಿ, ಪ್ರೀತ್ಯಾರ್ಹವಾಗಲಿ ಖಂಡಿತ ಅಲ್ಲ. ಇದಕ್ಕೆ ಹತ್ತಾರು ಜ್ವಲಂತ ಪುರಾವೆಗಳು ನಮ್ಮ ಮುಂದಿವೆ. ಉದಾ: ಹಿಂದೂ ಸಮಾಜದ ಪ್ರಮುಖ ಧಾರ್ಮಿಕ ನೇತಾರ, ಜ್ಯೋತಿರ್ಮಠದ ಶಂಕರಾಚಾರ್ಯ ಸ್ವಾಮಿ ಶ್ರೀ ಅವಿಮುಕ್ತೇಶ್ವರಾನಂದ ಸರಸ್ವತಿ ಅವರು ಮೊನ್ನೆ (ಜೂನ್ 9) ಆಗ್ರಾದಲ್ಲಿ ಗೋರಕ್ಷಣೆಯ ಕುರಿತು ಮಾತನಾಡುತ್ತಾ, ‘‘ಯೋಗಿ ಆದಿತ್ಯನಾಥ್ ಅವರ ಆಡಳಿತದಲ್ಲಿ ಉತ್ತರ ಪ್ರದೇಶವು ದೇಶದಲ್ಲೇ ಅತ್ಯಧಿಕ ಬೀಫ್ ರಫ್ತು ಮಾಡುವ ರಾಜ್ಯವಾಗಿ ಬಿಟ್ಟಿದೆ. ಯೋಗಿಯಿಂದಾಗಿ ಕೇಸರಿ ವಸ್ತ್ರಕ್ಕೆ ಇದ್ದ ಮರ್ಯಾದೆ ನಷ್ಟವಾಗಿದೆ’’ ಎಂದು ಟೀಕಿಸಿದ್ದರು. ಕಳೆದ ಕೆಲವು ವರ್ಷಗಳಿಂದ ಅವರು ಗೋವಿನ ವಿಷಯದಲ್ಲಿ ಮೋದಿ ಮತ್ತು ಯೋಗಿ ಸರಕಾರಗಳ ವಿರುದ್ಧ ನೇರ ಘರ್ಷಣೆಗೆ ಇಳಿದಿದ್ದಾರೆ. ಗೋವಿನ ಹೆಸರಲ್ಲಿ ಬಿಜೆಪಿಯವರು ಹಿಂದೂ ಸಮಾಜಕ್ಕೆ ಮೋಸ ಮಾಡುತ್ತಿದ್ದಾರೆ ಎಂಬುದು ಅವರ ಪ್ರಮುಖ ಆರೋಪವಾಗಿದೆ. ಕೇಂದ್ರ ಸರಕಾರವು ಗೋವನ್ನು ‘ರಾಷ್ಟ್ರ ಮಾತೆ’ ಎಂದು ಘೋಷಿಸಬೇಕು ಮತ್ತು ಬೀಫ್ ರಫ್ತು ಉದ್ಯಮದ ಮೇಲೆ ಸಂಪೂರ್ಣ ನಿಷೇಧ ಹೇರಬೇಕು ಎಂಬುದು ಶಂಕರಾಚಾರ್ಯರ ಎರಡು ಪ್ರಮುಖ ಬೇಡಿಕೆಗಳಾಗಿವೆ. ಇದಕ್ಕಾಗಿ ಅವರು ದೇಶವ್ಯಾಪಿ ‘ಗೋರಕ್ಷಾ ಯಾತ್ರೆ’ ಯನ್ನೂ ನಡೆಸಿದ್ದಾರೆ. ಪ್ರಸ್ತುತ ಅಭಿಯಾನಕ್ಕೆ ದೇಶದ ಇತರ 3 ಮಂದಿ ಶಂಕರಾಚಾರ್ಯರು ಕೂಡಾ ತಮ್ಮ ಬೆಂಬಲ ಘೋಷಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ. ‘‘ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಗೋವಿಗೆ 14 ವರ್ಷ ವಯಸ್ಸಾಗುವ ತನಕ ಮಾತ್ರ ಅದು ಮಾತೆಯಾಗಿರುತ್ತದೆ. ಆ ಬಳಿಕ ಅದು ಸರಕಾಗಿ ಬಿಡುತ್ತದೆ’’ ಎಂದು ಇತ್ತೀಚೆಗಷ್ಟೇ ಅವರು ವ್ಯಂಗ್ಯವಾಡಿದ್ದರು. 2024ರಲ್ಲಿ ಶಂಕರಾಚಾರ್ಯ ಅವಿಮುಕ್ತೇಶ್ವರಾನಂದ ಸರಸ್ವತಿಯವರು ತಮ್ಮ ರಾಷ್ಟ್ರವ್ಯಾಪಿ ಗೋರಕ್ಷಾಯಾತ್ರೆಯ ಭಾಗವಾಗಿ ನಾಗಾಲ್ಯಾಂಡ್‌ಗೆ ಹೋಗಬಯಸಿದ್ದರು. ಬಿಜೆಪಿಯವರು ಆ ತನ್ನ ಕಾರ್ಯಕ್ರಮಕ್ಕೆ ಅಡ್ಡಗಾಲು ಹಾಕಿದ್ದನ್ನು ಶಂಕರಾಚಾರ್ಯರು ನೆನಪಿಸಿಕೊಳ್ಳುತ್ತಾರೆ. ನಾಗಾಲ್ಯಾಂಡ್‌ನಲ್ಲಿ ದೈನಂದಿನ ಆಹಾರದ ರೂಪದಲ್ಲಿ ದೊಡ್ಡ ಪ್ರಮಾಣದಲ್ಲಿ ಗೋಮಾಂಸ ಬಳಕೆಯಾಗುತ್ತದೆ. ಅಲ್ಲಿ ಗೋರಕ್ಷಣೆಯ ಕುರಿತು ಜಾಗೃತಿ ಮೂಡಿಸುವುದು ಶಂಕರಾಚಾರ್ಯರ ಯೋಜಿತ ಪ್ರವಾಸದ ಉದ್ದೇಶವಾಗಿತ್ತು. ಆದರೆ ಬೇರೆಲ್ಲರಿಗಿಂತ ಹೆಚ್ಚಾಗಿ ಬಿಜೆಪಿಯ ನಾಗಾಲ್ಯಾಂಡ್ ಘಟಕದವರೇ ಅವರ ಪ್ರವಾಸವನ್ನು ವಿರೋಧಿಸಿದ್ದರು. ನಾಗಾಲ್ಯಾಂಡ್ ರಾಜ್ಯದ ಆಡಳಿತ ಬಳಗದ ಭಾಗವಾಗಿರುವ ಬಿಜೆಪಿಯ ರಾಜ್ಯ ಘಟಕವು, ರಾಜ್ಯ ಸರಕಾರಕ್ಕೆ ಒಂದು ಪತ್ರ ಬರೆದು, ಗೋಮಾಂಸ ಭಕ್ಷಣೆಯು ನಾಗಾಲ್ಯಾಂಡ್ ಜನತೆಯ ಸಂಸ್ಕೃತಿಯ ಭಾಗವಾಗಿದ್ದು ಅದರ ವಿರುದ್ಧ ಯಾವುದೇ ಅಭಿಯಾನಕ್ಕೆ ಅವಕಾಶ ನೀಡಬಾರದು ಎಂದು ಆಗ್ರಹಿಸಿತ್ತು. ಆ ಪ್ರಕಾರ ನಾಗಾಲ್ಯಾಂಡ್ ಸರಕಾರವು, ಶಂಕರಾಚಾರ್ಯರ ಪ್ರವಾಸಕ್ಕೆ ನಿರ್ಬಂಧ ಹೇರಿತ್ತು. ಸಾಲದ್ದಕ್ಕೆ ಯೋಗಿ ಆದಿತ್ಯನಾಥ್ ಮತ್ತವರ ಚೇಲಾಗಳು ಶಂಕರಾಚಾರ್ಯರ ವಿರುದ್ಧ ಗಂಭೀರ ಆರೋಪಗಳನ್ನು ಹೊರಿಸಿ ಕೇಸುಗಳನ್ನು ದಾಖಲಿಸಿದ್ದಲ್ಲದೆ, ಅವರ ವಿರುದ್ಧ ತೀರಾ ಅಪಮಾನಾತ್ಮಕ ಮಾತುಗಳನ್ನು ಆಡತೊಡಗಿದರು. ಅವರ ಅನುಯಾಯಿಗಳ ಮೇಲೆ ಪೊಲೀಸ್ ಹಲ್ಲೆ ಕೂಡಾ ನಡೆಯಿತು. ಇದೇ ಕೆಲಸವನ್ನು ಬೇರಾವುದಾದರೂ ಪಕ್ಷದವರು ಮಾಡಿದ್ದರೆ ಬಹುಶಃ ಸಂಘ ಪರಿವಾರದವರು ಶಂಕರಾಚಾರ್ಯರ ವಿರೋಧಿಗಳನ್ನು ಹಿಂದೂ ವಿರೋಧಿ, ದೇಶದ್ರೋಹಿ ಎಂದೆಲ್ಲಾ ಕರೆದು ದೇಶದೆಲ್ಲೆಡೆ ಪ್ರಕ್ಷೋಭೆ ಎಬ್ಬಿಸಿಬಿಡುತ್ತಿದ್ದರು. ಈ ಹಿಂದೆ ದ್ವಾರಕಾ ಮಠದ ದಿವಂಗತ ಶಂಕರಾಚಾರ್ಯ ಸ್ವರೂಪಾನಂದ ಸರಸ್ವತಿಯವರು ಗೋವಿನ ವಿಷಯದಲ್ಲಿ ಬಿಜೆಪಿ ಮತ್ತು ಆರೆಸ್ಸೆಸ್‌ನವರ ಇಬ್ಬಂದಿ ನೀತಿಯನ್ನು ತೀವ್ರವಾಗಿ ಟೀಕಿಸಿದ್ದರು. ಬಿಜೆಪಿಯ ನಾಯಕರೇ ಬೀಫ್ ರಫ್ತು ಮಾಡುವವರು ಎಂದೂ ಅವರು ಆರೋಪಿಸಿದ್ದರು. ದನವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಲು ಹಿಂದೇಟು ‘ದನವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಿ ಆ ಮೂಲಕ ಅದಕ್ಕೆ ಎಲ್ಲ ಬಗೆಯ ಗೌರವ ಮತ್ತು ರಕ್ಷಣೆ ಒದಗಿಸಬೇಕು’ - ಇದು ಆರೆಸ್ಸೆಸ್‌ನವರು ಅದೆಷ್ಟೋ ದಶಕಗಳಿಂದ ಮುಂದಿಡುತ್ತಾ ಬಂದಿರುವ ಒಂದು ಹಳೆಯ ಬೇಡಿಕೆ. ಅದಕ್ಕಾಗಿ ಅವರು ಎಷ್ಟೋ ರಾಷ್ಟ್ರೀಯ ಅಭಿಯಾನ, ಆಂದೋಲನ, ಚಳವಳಿ, ಮುಷ್ಕರ ಇತ್ಯಾದಿ ಏನೇನೆಲ್ಲಾ ನಡೆಸಿದ್ದುಂಟು. 2009ರಲ್ಲಂತೂ ಸಂಘ ಪರಿವಾರದವರು ಈ ಕುರಿತು ರಾಷ್ಟ್ರಮಟ್ಟದಲ್ಲಿ ಒಂದು ದೊಡ್ಡ ಆಂದೋಲನವನ್ನೇ ನಡೆಸಿದ್ದರು. ಇವರ ಭಕ್ತಿ ಮತ್ತು ಸಂವೇದನೆ ಕೇವಲ ಗೋವು, ದನ, ಹಸು ಅಥವಾ ಅವುಗಳ ಕರುಗಳಿಗೆ ಮಾತ್ರ ಸೀಮಿತವಾಗಿರುವುದಿಲ್ಲ. ಅವರು ಸಮಾಜದಲ್ಲಿ ಗೋವಿನ ಮಹಿಮೆಯನ್ನು ವಿವರಿಸುವ ಮತ್ತು ಗೋರಕ್ಷಣೆಯ ಧಾರ್ಮಿಕ ಅಗತ್ಯವನ್ನು ಮನವರಿಕೆ ಮಾಡಿಸುವ ಹೆಸರಲ್ಲಿ ಭಾರೀ ಭಾವೋದ್ವೇಗದ ಭಾಷಣಗಳನ್ನು ಮಾಡಿ ಜನರಲ್ಲಿ ಉನ್ಮಾದವನ್ನು ಬೆಳೆಸುತ್ತಾರೆ. ಆನಂತರ ಗೋವಿಗೆ ಆರೋಪಿಸಲಾದ ಎಲ್ಲ ಪಾವಿತ್ರ್ಯ, ಮಹಿಮೆ, ಗೌರವ ಇತ್ಯಾದಿಗಳನ್ನು ಇತರ ಹಲವು ಜಾತಿಯ ಜಾನುವಾರುಗಳಿಗೂ ವಿಸ್ತರಿಸಿ ಬಿಡುತ್ತಾರೆ. ದನ ಸಾಗಿಸುವವರು ಕೈಗೆ ಸಿಗದೇ ಇದ್ದಾಗ ಎಮ್ಮೆ, ಕೋಣ, ಎತ್ತು ಇತ್ಯಾದಿಗಳನ್ನು ಸಾಗಿಸುವವರನ್ನು ಗುರಿಯಾಗಿಸುತ್ತಾರೆ. ಆರೆಸ್ಸೆಸ್, ವಿಶ್ವ ಹಿಂದೂ ಪರಿಷದ್, ಬಿಜೆಪಿ, ಬಜರಂಗದಳ ಇತ್ಯಾದಿ ಸಂಘಪರಿವಾರದ ಅಧಿಕೃತ ಹಾಗೂ ಅನಧಿಕೃತ ಉಪಸಂಸ್ಥೆಗಳು ಮತ್ತು ವಿವಿಧೆಡೆ ತಮ್ಮ ಅವಶ್ಯಾನುಸಾರ ಅವರು ವಿವಿಧ ಹೆಸರುಗಳೊಂದಿಗೆ ತಾತ್ಕಾಲಿಕ ಉಪಯೋಗಕ್ಕಾಗಿ ಜನ್ಮ ನೀಡುವ ಜಾಗೃತ ಸಮಿತಿ, ರಕ್ಷಾದಳ, ರಕ್ಷಣಾಪಡೆ ಇತ್ಯಾದಿಗಳು ಬೇರೆಬೇರೆ ಕಡೆ, ಬೇರೆಬೇರೆ ಸಂದರ್ಭಗಳಲ್ಲಿ ಮಂಜೂರು ಮಾಡಿದ ಅಥವಾ ಮಂಡಿಸಿದ ನಿರ್ಣಯ, ಠರಾವು, ಗೊತ್ತುವಳಿ, ಬೇಡಿಕೆ ಇತ್ಯಾದಿಗಳಲ್ಲಿ ಹೋರಿ, ಗೂಳಿ, ಎಮ್ಮೆ, ಎತ್ತು ಇತ್ಯಾದಿ ಗೋಪ್ರಜಾತಿಗೆ ಸೇರಿದ ಎಲ್ಲ ಪ್ರಾಣಿಗಳನ್ನು ರಕ್ಷಿಸಬೇಕೆಂಬ ಹಾಗೂ ಅವುಗಳ ವಧೆ, ಮಾರಾಟ, ಸಾಗಾಟ ಇತ್ಯಾದಿಗಳ ಮೇಲೆ ನಿರ್ಬಂಧ ಹೇರಬೇಕೆಂಬ ಆಗ್ರಹ ಕಂಡು ಬರುತ್ತವೆ. ಈ ಪೈಕಿ ಯಾವುದೇ ಪ್ರಾಣಿಯನ್ನು ಅವರು ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ, ಸಮಾಜವನ್ನು ವಿಂಗಡಿಸುವುದಕ್ಕೆ, ವೈಷಮ್ಯ ಹರಡುವುದಕ್ಕೆ ಮತ್ತು ಹಿಂಸೆ ಪ್ರಚೋದಿಸುವುದಕ್ಕೆ ಸಬೂಬಾಗಿ ಬಳಸಿಕೊಳ್ಳುತ್ತಾರೆ. ಭಾರತದಲ್ಲಿ ನವಿಲಿಗೆ 1963ರಿಂದಲೇ ‘ರಾಷ್ಟ್ರೀಯ ಪಕ್ಷಿ’ಯ ಸ್ಥಾನಮಾನ ಪ್ರಾಪ್ತವಿದೆ. 2010ರಲ್ಲಿ ಆನೆಯನ್ನು ನಮ್ಮ ದೇಶದ ‘ರಾಷ್ಟ್ರೀಯ ಪಾರಂಪರಿಕ ಪ್ರಾಣಿ’ ಎಂದು ಘೋಷಿಸಲಾಯಿತು. 1950ರಿಂದ 1972ರ ತನಕ ಸಿಂಹವು ಭಾರತದ ‘ರಾಷ್ಟ್ರೀಯ ಪ್ರಾಣಿ’ ಆಗಿತ್ತು. 1973 ರಲ್ಲಿ ಭಾರತ ಸರಕಾರವು ‘ರಾಯಲ್ ಬೆಂಗಾಲ್ ಟೈಗರ್’ ಅನ್ನು ‘ರಾಷ್ಟ್ರೀಯ ಪ್ರಾಣಿ’ ಎಂದು ಅಂಗೀಕರಿಸಿತು. ಇಲ್ಲಿರುವ ಒಂದು ವಿಪರ್ಯಾಸ ಏನೆಂದರೆ ಸಿಂಹಗಳಂತೆ ಹುಲಿ ಅಥವಾ ಟೈಗರ್‌ಗಳಿಗೂ ದನಗಳ ಜೊತೆ ಒಂದು ವಿಶೇಷ ಸಂಬಂಧ ಇದೆ. ಅವು ಕೂಡಾ ಏಕಪಕ್ಷೀಯವಾಗಿ ದನಗಳನ್ನು ಪ್ರೀತಿಸುತ್ತವೆ. ಅವಕಾಶ ಸಿಕ್ಕಾಗಲೆಲ್ಲಾ ದನಗಳನ್ನು ಮತ್ತು ಆ ಪ್ರಜಾತಿಯ ಎಲ್ಲ ಪ್ರಾಣಿಗಳನ್ನು ಬೇಟೆಯಾಡಿ ಹೊಟ್ಟೆ ತುಂಬಿಸಿಕೊಳ್ಳುತ್ತವೆ. ಭಾರತದಲ್ಲಿ ಈ ರೀತಿ ‘ರಾಷ್ಟ್ರೀಯ ಪ್ರಾಣಿ’ ಎಂಬ ಸ್ಥಾನಮಾನವನ್ನು ದನಕ್ಕೆ ನೀಡುವ ಬದಲು ದನಗಳನ್ನು ಬೇಟೆಯಾಡುವ ಹುಲಿಗಳಿಗೆ ನೀಡಿರುವುದೇಕೆ? ಎಂದು ಗೋರಕ್ಷಕರು ಆಕ್ಷೇಪಿಸಬೇಕಿತ್ತು. ಅದರ ವಿರುದ್ಧ ಆಂದೋಲನ ನಡೆಸಬೇಕಿತ್ತು. ಆದರೆ ಇಲ್ಲಿ ನಡೆಯುತ್ತಿರುವುದೇ ಬೇರೆ. ಇಲ್ಲೀಗ, ದನವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಬೇಕೆಂಬ ಬೇಡಿಕೆಗೆ ಅತ್ಯಧಿಕ ಪ್ರತಿರೋಧವು ತಥಾಕಥಿತ ‘ಗೋರಕ್ಷಕ’ರ ಕಡೆಯಿಂದಲೇ ಬರುತ್ತಿದೆ! ಮಟನ್‌ಗಿಂತ ಅಗ್ಗದ ದರದಲ್ಲಿ ಸಿಗುತ್ತದೆ ಎಂಬ ಒಂದೇ ಕಾರಣಕ್ಕಾಗಿ ಬೀಫ್‌ಗೆ ಪ್ರಾಶಸ್ತ್ಯ ನೀಡುತ್ತಾ ಬಂದಿದ್ದ ಭಾರತದ ಕೆಲವು ಬೀಫ್ ಭಕ್ಷಕರಿಗೆ ಇತ್ತೀಚೆಗೆ ಜ್ಞಾನೋದಯವಾಗಿದ್ದು, ಅವರು ಆರೆಸ್ಸೆಸ್‌ನ ಹಳೆಯ ಬೇಡಿಕೆಗೆ ತಮ್ಮ ಬೆಂಬಲ ಘೋಷಿಸಿ ಬಿಟ್ಟಿದ್ದಾರೆ. ನಾವಿನ್ನು ಬೀಫ್ ತಿನ್ನುವುದಿಲ್ಲ, ಸರಕಾರವು ದನವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಲಿ ಎಂದು ಆಗ್ರಹಿಸತೊಡಗಿದ್ದಾರೆ. ಈ ಬೆಳವಣಿಗೆಯಿಂದ ‘ಗೋರಕ್ಷಕ’ರೆಲ್ಲಾ ಸಂತುಷ್ಟರಾಗಬೇಕಿತ್ತು. ಪ್ರಸ್ತುತ ಬೇಡಿಕೆ ಕೇಳಿ ಬಂದ ಹೆಚ್ಚಿನ ರಾಜ್ಯಗಳಲ್ಲಿ ಬಿಜೆಪಿ ಸರಕಾರಗಳೇ ಇವೆ. ಗೋರಕ್ಷಕರು ಆ ತಮ್ಮ ಹಳೆಯ ಬೇಡಿಕೆಯನ್ನು ಹೊಸ ಉತ್ಸಾಹದೊಂದಿಗೆ ಪ್ರಸ್ತುತ ಸರಕಾರಗಳ ಮುಂದಿಟ್ಟು, ಆ ನಿಟ್ಟಿನಲ್ಲಿ ಕಾನೂನು ಪ್ರಕ್ರಿಯೆ ಆರಂಭಿಸುವಂತೆ ಕೇಂದ್ರದಲ್ಲಿರುವ ತಮ್ಮದೇ ಸರಕಾರದ ಮೇಲೆ ಒತ್ತಡ ಹೇರಬೇಕಿತ್ತು. ಆದರೆ ನಿಜವಾಗಿ ಆದದ್ದೇನು? ಮೇ ಕೊನೆಯ ವಾರ ಬಕ್ರೀದ್ ಇದ್ದ ಹಿನ್ನೆಲೆಯಲ್ಲಿ ದೇಶದೆಲ್ಲೆಡೆ ಗೋಮಾಂಸದ ಕುರಿತು ಬಿರುಸಿನ ಚರ್ಚೆ ಆರಂಭವಾಯಿತು. ಈ ವೇಳೆ ‘ದನವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಬೇಕು’ ಎಂಬ ಕೆಲವು ಮುಸ್ಲಿಮ್ ವಿದ್ವಾಂಸರು ಮತ್ತು ನಾಯಕರ ಕಡೆಯಿಂದ ಬಂದ ಬೇಡಿಕೆ ಎಲ್ಲರ ಗಮನ ಸೆಳೆಯಿತು. ಅವರ ನಿಲುವನ್ನು ದೇಶದ ಹಲವಾರು ವಲಯಗಳು ಮನಸಾರೆ ಸ್ವಾಗತಿಸಿದವು. ಇದನ್ನು ಒಂದು ಹೊಸ ಯುಗದ ಆರಂಭ ಎಂದು ಪರಿಗಣಿಸಿದ ಅನೇಕರು, ಇದರೊಂದಿಗೆ ಒಂದು ಹಳೆಯ ವಿವಾದ ಮುಕ್ತಾಯವಾಗಿ ಬಿಡುತ್ತದೆ ಎಂದು ನಿರೀಕ್ಷಿಸಿದ್ದರು. ಆದರೆ ‘ದನವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಬೇಕು’ ಎಂದು ಹಿಂದಿನಿಂದಲೂ ಒತ್ತಾಯಿಸುತ್ತಾ ಬಂದಿದ್ದ ಗೋರಕ್ಷಕರು ಹಾಗೂ ಧರ್ಮರಕ್ಷಕರೆಂಬ ಮುಖವಾಡ ಧರಿಸಿಕೊಂಡವರು ಮಾತ್ರ ಈ ಸನ್ನಿವೇಶದಲ್ಲಿ ಹಠಾತ್ತನೆ ಪಲ್ಟಿ ಹೊಡೆದು, ಹುಚ್ಚು ಹುಚ್ಚಾಗಿ ವರ್ತಿಸತೊಡಗಿದರು. ‘‘ದನ ಒಂದು ಪ್ರಾಣಿಯೇ ಅಲ್ಲ. ಆದ್ದರಿಂದ ಅದನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ’’ ಎಂಬ ಹೊಸ ರಾಗವೊಂದು ಮೂಡಿಬಂತು. ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೊಡನೆ, ಈ ಬೇಡಿಕೆಯ ಬಗ್ಗೆ ವಿಚಾರಿಸಿದಾಗ ಅವರು ಸಂತೋಷ ಪ್ರಕಟಿಸುವ ಬದಲು, ಪ್ರಸ್ತುತ ಬೇಡಿಕೆ ಮಂಡಿಸಿದವರನ್ನು ನಿಂದಿಸಿ ಮಾತನಾಡತೊಡಗಿದರು. ‘‘ದನವನ್ನು ಪ್ರಾಣಿ ಎಂದು ಕರೆಯುವುದೇ ಒಂದು ರೋಗಗ್ರಸ್ತ ಮಾನಸಿಕತೆ. ದನ ನಮ್ಮ ತಾಯಿ, ಅದನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸುವ ಯಾವ ಅಗತ್ಯವೂ ಇಲ್ಲ. ನಿಜವಾಗಿ, ದನವನ್ನು ಪ್ರಾಣಿ ಎಂದು ಕರೆಯುವುದು ದನಕ್ಕೆ ಮಾಡುವ ಅಪಮಾನ....’’ ಎಂದೆಲ್ಲಾ ವಾದಿಸತೊಡಗಿದರು. ಯೋಗಿಯವರ ಮೂಡ್ ನೋಡಿದರೆ, ಈ ತನಕ ಗೋಮಾಂಸ ತಿನ್ನುವವರು ಮತ್ತು ಸಾಗಿಸುವವರ ವಿರುದ್ಧ ಯುದ್ಧ ನಿರತರಾಗಿದ್ದ ಅವರಿಗೆ ಬೋರ್ ಆಗಿದ್ದು, ದನವನ್ನು ಪ್ರಾಣಿ ಎಂದು ಕರೆಯುವವರ ವಿರುದ್ಧ ಯುದ್ಧ ಸಾರುವ ಹೊಸ ಉತ್ಸಾಹ ಅವರೊಳಗೆ ಚಿಗುರಿದಂತಿತ್ತು! ಅದೇ ವೇಳೆ, ಪ್ರಸ್ತುತ ಬೇಡಿಕೆಯ ಕುರಿತು ಮಾತನಾಡಿದ ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್, ‘‘ದನವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸುವ ಯಾವುದೇ ಯೋಜನೆ ಕೇಂದ್ರ ಸರಕಾರದ ಮುಂದಿಲ್ಲ. ಹಾಗೆಯೇ ದೇಶದ ಎಲ್ಲ ಭಾಗಗಳಲ್ಲಿ ಗೋಹತ್ಯೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸುವ ಯಾವುದೇ ಪ್ರಸ್ತಾವ ಕೂಡಾ ಕೇಂದ್ರ ಸರಕಾರದ ಮುಂದೆ ಇಲ್ಲ’’ ಎಂದು ಸ್ಪಷ್ಟಪಡಿಸಿದರು.

ವಾರ್ತಾ ಭಾರತಿ 11 Jun 2026 10:55 am

ಟಿಎಂಸಿಗೆ ಮತ್ತೊಂದು ಆಘಾತ | ರಾಜ್ಯಸಭಾ ಸದಸ್ಯತ್ವಕ್ಕೆ ಪ್ರಕಾಶ್ ಚಿಕ್ ಬರೈಕ್ ರಾಜೀನಾಮೆ

ಒಂದೇ ವಾರದಲ್ಲಿ ಟಿಎಂಸಿಯ ಮೂವರು ಸಂಸದರು ರಾಜೀನಾಮೆ

ವಾರ್ತಾ ಭಾರತಿ 11 Jun 2026 10:54 am

Karnataka Weather: 4 ದಿನ ತೀವ್ರತೆ ಪಡೆಯಲಿದೆ ಮಳೆ: ಅತಿ ಭಾರಿ ಮಳೆಗೆ ಸಜ್ಜಾಗಬೇಕಿದೆ ಈ 14 ಜಿಲ್ಲೆಗಳು

​ಜೂನ್‌ 14 ರವರೆಗೆ ರಾಜ್ಯದ ಹಲೆಡೆ ಮುಂಗಾರು ಅಬ್ಬರಿಸಲಿದ್ದು, ನಂತರ ಮಳೆ ಕಡಿಮೆಯಾಗಲಿದೆ. ಮುಂದಿನ 4 ದಿನ ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದ್ದು, ಪ್ರದೇಶದಲ್ಲಿ ಆರೆಂಜ್‌ ಅಲರ್ಟ್‌ ಘೋಷಿಸಲಾಗಿದೆ. ಕಲಬುರಗಿ, ಬೀದರ್‌, ವಿಜಯಪುರ, ಬಾಗಲಕೋಟೆ , ಬೆಳಗಾವಿ, ಬಳ್ಳಾರಿ, ತುಮಕೂರು, ಚಿತ್ರದುರ್ಗ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿರುವ ಕಾರಣ ಯಲ್ಲೊ ಅಲರ್ಟ್‌ ಘೋಷಿಸಲಾಗಿದೆ. ಗಂಟೆಗೆ 30ರಿಂದ 40 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ ಎಂದು ಇಲಾಖೆ ಹೇಳಿದೆ. ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಮುಂದುವರಿಯುವ ಸಾಧ್ಯತೆ ಇದೆ.

ವಿಜಯ ಕರ್ನಾಟಕ 11 Jun 2026 10:47 am

ಮೀನಾಕ್ಷಿ ನಟರಾಜನ್ ನಾಮಪತ್ರ ತಿರಸ್ಕಾರ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಕಾಂಗ್ರೆಸ್

ಹೊಸದಿಲ್ಲಿ: ರಾಜ್ಯಸಭಾ ಅಭ್ಯರ್ಥಿ ಮೀನಾಕ್ಷಿ ನಟರಾಜನ್ ಅವರ ನಾಮಪತ್ರ ತಿರಸ್ಕಾರವನ್ನು ಪ್ರಶ್ನಿಸಿ ಕಾಂಗ್ರೆಸ್ ಪಕ್ಷವು ಗುರುವಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ರಾಜ್ಯಸಭೆ ಚುನಾವಣೆಗೆ ನಾಮಪತ್ರ ಸಲ್ಲಿಕೆ ವೇಳೆ ಅಫಿಡವಿಟ್‌ನಲ್ಲಿ ಕೆಲ ಮಾಹಿತಿಯನ್ನು ಗೌಪ್ಯವಾಗಿಟ್ಟಿದ್ದಾರೆ ಎಂದು ಚುನಾವಣಾ ಆಯೋಗ ಕಾಂಗ್ರೆಸ್ ಅಭ್ಯರ್ಥಿ ಮೀನಾಕ್ಷಿ ನಟರಾಜನ್ ಅವರ ನಾಮಪತ್ರವನ್ನು ತಿರಸ್ಕರಿಸಿತ್ತು. ಇದು  ಪ್ರತಿಭಟನೆ ಮತ್ತು ವಿವಾದಕ್ಕೆ ಕಾರಣವಾಗಿತ್ತು.   ಈ ಬಗ್ಗೆ ಕೆ.ಸಿ. ವೇಣುಗೋಪಾಲ್, ರಣದೀಪ್ ಸುರ್ಜೇವಾಲಾ, ಜೈರಾಮ್ ರಮೇಶ್, ದೀಪಾ ದಾಸ್‌ ಮುನ್ಶಿ, ವಿವೇಕ್ ಟಂಖಾ, ಅಭಿಷೇಕ್ ಸಿಂಘ್ವಿ ಮತ್ತು ಮೀನಾಕ್ಷಿ ನಟರಾಜನ್ ಅವರನ್ನೊಳಗೊಂಡ ಕಾಂಗ್ರೆಸ್ ನಿಯೋಗವು ಚುನಾವಣಾ ಆಯೋಗದ ಅಧಿಕಾರಿಗಳನ್ನು ಭೇಟಿ ಮಾಡಿ ತಮ್ಮ ವಾದವನ್ನು ಸಲ್ಲಿಸಿದ್ದರು.  

ವಾರ್ತಾ ಭಾರತಿ 11 Jun 2026 10:38 am

Anekal | ಪೊಲೀಸರ ಮೇಲೆ ಹಲ್ಲೆಗೆ ಯತ್ನ; ರೌಡಿಶೀಟರ್ ಕಾಲಿಗೆ ಗುಂಡು ಹಾರಿಸಿ ಬಂಧನ

ಆನೇಕಲ್: ತಾಲ್ಲೂಕಿನ ಹೆಬ್ಬಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯ ಸಿಂಗೇನಾ ಅಗ್ರಹಾರದ ತೋಪು ಪ್ರದೇಶದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ರೌಡಿಶೀಟರ್ ಒಬ್ಬನ ಮೇಲೆ ಪೊಲೀಸರು ಗುಂಡು ಹಾರಿಸಿ ಬಂಧಿಸಿರುವ ಘಟನೆ ನಡೆದಿದೆ. ಗುಂಡೇಟಿಗೆ ಒಳಗಾದ ಆರೋಪಿಯನ್ನು ಜೀವ (19) ಎಂದು ಗುರುತಿಸಲಾಗಿದ್ದು, ಗಾಯಗೊಂಡ ಆತನನ್ನು ತಕ್ಷಣ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಪೊಲೀಸರ ಮಾಹಿತಿ ಪ್ರಕಾರ, ಜೀವ ಕೊಲೆ, ಸುಲಿಗೆ ಹಾಗೂ ದರೋಡೆ ಸೇರಿದಂತೆ ಹಲವು ಗಂಭೀರ ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ. ಕಳೆದ ವಾರ ಹೆಬ್ಬಗೋಡಿ ಹಾಗೂ ಎಲೆಕ್ಟ್ರಾನಿಕ್ ಸಿಟಿ ವ್ಯಾಪ್ತಿಯಲ್ಲಿ ನಡೆದ ದರೋಡೆ ಪ್ರಕರಣಗಳಲ್ಲಿಯೂ ಈತನ ಹೆಸರು ಕೇಳಿಬಂದಿತ್ತು. ಖಚಿತ ಮಾಹಿತಿ ಮೇರೆಗೆ ಹೆಬ್ಬಗೋಡಿ ಪೊಲೀಸರು ದಾಳಿ ನಡೆಸಿದ ವೇಳೆ, ಆರೋಪಿ ಮಾರಕಾಸ್ತ್ರಗಳಿಂದ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ ಎನ್ನಲಾಗಿದೆ. ಈ ವೇಳೆ ಪೊಲೀಸ್ ಸಿಬ್ಬಂದಿ ನಾಗೇಶ್ ಅವರ ಮೇಲೆ ದಾಳಿ ನಡೆಸಲು ಮುಂದಾದಾಗ, ಪರಿಸ್ಥಿತಿಯನ್ನು ನಿಯಂತ್ರಿಸಲು ಹಾಗೂ ಆತ್ಮರಕ್ಷಣೆಗಾಗಿ ಸಬ್ ಇನ್‌ಸ್ಪೆಕ್ಟರ್ ಅಯ್ಯಪ್ಪ ಅವರು ಫೈರಿಂಗ್ ನಡೆಸಿದ್ದಾರೆ. ಇನ್ಸ್‌ಪೆಕ್ಟರ್ ಸೋಮಶೇಖರ್ ನೇತೃತ್ವದ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ಆರೋಪಿ ಜೀವನ ಕಾಲಿಗೆ ಗುಂಡು ತಗುಲಿದ್ದು, ಬಳಿಕ ಆತನನ್ನು ವಶಕ್ಕೆ ಪಡೆದು ಬಂಧಿಸಲಾಗಿದೆ. ಈ ಕುರಿತು ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ವಾರ್ತಾ ಭಾರತಿ 11 Jun 2026 10:31 am

ಹಾಸನ: ಭಾಷೆಯ ಗಡಿ ದಾಟಿ ಕನ್ನಡ ಕಲಿಯುತ್ತಿರುವ ಬಿಹಾರದ ಮಕ್ಕಳು

ಹಾಸನ: ಶಿಕ್ಷಣವೆಂದರೆ ಕೇವಲ ನಾಲ್ಕು ಗೋಡೆಗಳ ನಡುವೆ ಪಾಠ ಮಾಡುವುದಲ್ಲ, ಬದಲಾಗಿ ಭವಿಷ್ಯದ ಪ್ರಜೆಗಳನ್ನು ರೂಪಿಸುವುದು ಎಂಬುದನ್ನು ಹಾಸನ ಸರ್ಕಾರಿ ಶಾಲೆಯ ಶಿಕ್ಷಕಿಯೊಬ್ಬರು ಸಾಬೀತುಪಡಿಸಿದ್ದಾರೆ. ಉದ್ಯೋಗಾವಕಾಶಗಳನ್ನು ಅರಸಿ ಸಾವಿರಾರು ಕಿಲೋಮೀಟರ್ ದೂರದ ಬಿಹಾರದಿಂದ ಹಾಸನಕ್ಕೆ ವಲಸೆ ಬಂದಿರುವ ಕಾರ್ಮಿಕರ ಮಕ್ಕಳಿಗೆ ಇಲ್ಲಿನ ಭಾಷೆ, ಸಂಸ್ಕೃತಿ ಸಂಪೂರ್ಣ ಹೊಸದು. ಇಂತಹ ಪರಿಸ್ಥಿತಿಯಲ್ಲಿ ಈ ಮಕ್ಕಳಿಗೆ ಕನ್ನಡ ಕಲಿಸಿ, ಅವರನ್ನು

ಒನ್ ಇ೦ಡಿಯ 11 Jun 2026 10:15 am

ಕರ್ನಾಟಕದ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ತಮಿಳುನಾಡು ಸಿಎಂ ವಿಜಯ್ ಭೇಟಿ, ಹಿಂದಿನ ಮುಖ್ಯಮಂತ್ರಿಗಳ ಹಾದಿ ಹಿಡಿದ್ರಾ ದಳಪತಿ?

C. Joseph Vijay: ತಮಿಳುನಾಡಿನ ನೂತನ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ಜೂನ್ 12ರಂದು ಕರ್ನಾಟಕದ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ. ಸಿಎಂ ಆಗಿ ಅಧಿಕಾರ ವಹಿಸಿಕೊಂಡ ನಂತರ ಅವರು ಧಾರ್ಮಿಕ ಕ್ಷೇತ್ರಕ್ಕೆ ಭೇಟಿ ನೀಡುತ್ತಿರುವುದೆ ಇದೇ ಮೊದಲು ಎಂದು ಮೂಲಗಳಿಂದ ತಿಳಿದುಬಂದಿದೆ. ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಿರುವ

ಒನ್ ಇ೦ಡಿಯ 11 Jun 2026 10:13 am

Jordan | ಅಮೆರಿಕದ ನೆಲೆಗಳ ಮೇಲೆ ಇರಾನ್‌ನಿಂದ ಕ್ಷಿಪಣಿ ದಾಳಿ; 18 ಪ್ರಮುಖ ಕೇಂದ್ರಗಳನ್ನು ಗುರಿಯಾಗಿಸಲಾಗಿದೆ ಎಂದ IRGC

ಟೆಹ್ರಾನ್: ಜೋರ್ಡಾನ್‌ನಲ್ಲಿರುವ ಅಮೆರಿಕದ ವಾಯುನೆಲೆಗಳು, ಯುದ್ಧ ವಿಮಾನಗಳು ಹಾಗೂ ಈ ಪ್ರದೇಶದಲ್ಲಿನ ಅಮೆರಿಕದ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ಕ್ಷಿಪಣಿ ದಾಳಿ ನಡೆಸಿರುವುದಾಗಿ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC ) ಹೇಳಿದೆ ಎಂದು Aljazeera ವರದಿ ಮಾಡಿದೆ. ಅಮೆರಿಕದ ಮಿಲಿಟರಿಯ F–35, F–15 ಮತ್ತು F–16 ಯುದ್ಧ ವಿಮಾನಗಳು, ಜೋರ್ಡಾನ್‌ ನ ಅಲ್–ಅಝ್ರಾಕ್ ವಾಯುನೆಲೆ ಹಾಗೂ ಅಲ್ಲಿನ ನಿಯಂತ್ರಣ ಕೇಂದ್ರದಲ್ಲಿ ಅಮೆರಿಕದ ಪಡೆಗಳು ಬಳಸುತ್ತಿರುವ ಪ್ರಮುಖ ಸೌಲಭ್ಯಗಳನ್ನು ಗುರಿಯಾಗಿಸಿ 12 ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಉಡಾಯಿಸಲಾಗಿದೆ ಎಂದು IRGC ತಿಳಿಸಿದೆ. ಇರಾನ್‌ ನ ಏರೋಸ್ಪೇಸ್ ಪಡೆ ಮತ್ತು ನೌಕಾಪಡೆಯು ಜಂಟಿಯಾಗಿ ಎರಡು ಹಂತಗಳಲ್ಲಿ ಕಾರ್ಯಾಚರಣೆ ನಡೆಸಿದ್ದು, ಅಮೆರಿಕದ ಪಡೆಗಳಿರುವ 18 ಪ್ರಮುಖ ಕೇಂದ್ರಗಳ ಮೇಲೆ ದಾಳಿ ನಡೆಸಲಾಗಿದೆ ಎಂದು Tasnim news agency ವರದಿ ಮಾಡಿದೆ. ಇರಾನ್ ಮೇಲಿನ ಅಮೆರಿಕದ ಇತ್ತೀಚಿನ ದಾಳಿಗಳಿಗೆ ಪ್ರತೀಕಾರವಾಗಿ ಈ ಕಾರ್ಯಾಚರಣೆ ನಡೆಸಲಾಗಿದೆ ಎಂದು IRGC ಹೇಳಿದೆ. ಅಮೆರಿಕದ ಕ್ರಮಗಳ ವಿರುದ್ಧ ತೀವ್ರ ಎಚ್ಚರಿಕೆ ನೀಡಿರುವ IRGC ಏರೋಸ್ಪೇಸ್ ಫೋರ್ಸ್ ಮುಖ್ಯಸ್ಥ ಮಜೀದ್ ಮೌಸಾವಿ, ‘ಪವಿತ್ರ ಹಾರ್ಮುಝ್ ಜಲಸಂಧಿಯನ್ನು ಅಸುರಕ್ಷಿತಗೊಳಿಸಲು ನೀವು ಯತ್ನಿಸುತ್ತಿದ್ದೀರಾ? ಹಾಗಿದ್ದರೆ, ಇರಾನ್ ಈ ಪ್ರದೇಶವನ್ನೇ ನಿಮಗೆ ನರಕವನ್ನಾಗಿ ಮಾಡಲಿದೆ. ಈ ಪ್ರದೇಶದಲ್ಲಿರುವ ಅಮೆರಿಕದ ಪಡೆಗಳ ಧೈರ್ಯಕ್ಕೆ ಇದು ನಮ್ಮ ಪ್ರತಿಕ್ರಿಯೆ’ ಎಂದು ಹೇಳಿದ್ದಾರೆ ಎಂದು Tasnim ವರದಿ ಮಾಡಿದೆ.

ವಾರ್ತಾ ಭಾರತಿ 11 Jun 2026 10:10 am

Gold Rate Fall : ಚಿನ್ನದ ಬೆಲೆ ಮತ್ತೆ ಕುಸಿತ: 1.33 ಲಕ್ಷ ರೂ.ಗೆ ಆಭರಣ ಚಿನ್ನ, ಬೆಳ್ಳಿ ಬೆಲೆ ಇಂದು ತಟಸ್ಥ

ಚಿನ್ನದ ದರ ಮತ್ತೆ ಭಾರಿ ಇಳಿಕೆಯಾಗಿದೆ. ನಿನ್ನೆ ಒಂದೇ ದಿನಕ್ಕೆ 4 ಸಾವಿರಕ್ಕೂ ಹೆಚ್ಚು ಇಳಿಕೆಯಾಗಿದ್ದ ಬೆಲೆ ಇಂದು ಮತ್ತೆ 2 ಸಾವಿರ ರೂ ಕುಸಿದಿದೆ. ಬೆಳ್ಳಿ ಬೆಲೆ ಮಾತ್ರ ತಟಸ್ಥವಾಗಿದೆ. ಚಿನ್ನದ ದರ ನಿರಂತರವಾಗಿ ಕುಸಿಯುತ್ತಿದ್ದು, ಕಳೆದ 10 ದಿನದಲ್ಲಿ 10 ಗ್ರಾಂ ಬೆಲೆಯಲ್ಲಿ ಬರೋಬ್ಬರಿ 10580 ರೂ ಇಳಿಕೆಯಾಗಿದೆ.

ವಿಜಯ ಕರ್ನಾಟಕ 11 Jun 2026 9:59 am

ನ್ಯೂಸ್‌ಕ್ಲಿಕ್‌, ಪ್ರಬೀರ್ ಪುರ್ಕಾಯಸ್ಥ ವಿರುದ್ಧದ FIR, ED ಪ್ರಕರಣ ರದ್ದು

‘ಕಾನೂನಿನ ಪ್ರಕ್ರಿಯೆಯ ಸಂಪೂರ್ಣ ದುರುಪಯೋಗ’ ಎಂದು ದಿಲ್ಲಿ ಹೈಕೋರ್ಟ್‌

ವಾರ್ತಾ ಭಾರತಿ 11 Jun 2026 9:54 am

ಮತ್ತೊಂದು ವಿವಾದಕ್ಕೆ ಸಾಕ್ಷಿಯಾದ ಫಿಫಾ ವಿಶ್ವಕಪ್: ಮೆಸ್ಸಿ ಸೇರಿದಂತೆ ಅರ್ಜೆಂಟೀನಾ ಆಟಗಾರರ ಪಾಸ್‌ಪೋರ್ಟ್ ಮಾಹಿತಿ ಸೋರಿಕೆ

ಬ್ಯೂನಸ್ ಐರಿಸ್/ಅಲಬಾಮಾ : ಖ್ಯಾತ ಫುಟ್ಬಾಲ್ ತಾರೆ ಲಿಯೊನೆಲ್ ಮೆಸ್ಸಿ ಹಾಗೂ ಅವರ ಅರ್ಜೆಂಟೀನಾ ಸಹ ಆಟಗಾರರ ಪಾಸ್‌ಪೋರ್ಟ್ ಮಾಹಿತಿಗಳು ಸೋರಿಕೆಯಾಗಿದ್ದು, ಇದರೊಂದಿಗೆ ಫಿಫಾ ವಿಶ್ವಕಪ್ ಫುಟ್ಬಾಲ್ ಟೂರ್ನಿ ಮತ್ತೊಂದು ವಿವಾದಕ್ಕೆ ಗುರಿಯಾಗಿದೆ. ಭದ್ರತಾ ಪ್ರಮಾದದಿಂದಾಗಿ ಮೆಸ್ಸಿ ಸೇರಿದಂತೆ ಅರ್ಜೆಂಟೀನಾ ತಂಡದ ಎಲ್ಲ ಆಟಗಾರರ ಪಾಸ್‌ಪೋರ್ಟ್ ಮಾಹಿತಿಗಳು ಮಂಗಳವಾರ ಐಸ್ಲೆಂಡ್ ವಿರುದ್ಧ ನಡೆದ ವಿಶ್ವಕಪ್ ಅಭ್ಯಾಸ ಪಂದ್ಯದ ವೇಳೆ ಸೋರಿಕೆಯಾಗಿವೆ ಎಂದು ರಾಯ್ಟರ್ಸ್ ವರದಿ ಮಾಡಿದೆ. ಪಾಸ್‌ಪೋರ್ಟ್ ಸಂಖ್ಯೆಯನ್ನು ಅಧಿಕೃತ ಟೀಮ್‌ಶೀಟ್‌ನಲ್ಲಿ ಪಟ್ಟಿ ಮಾಡಲಾಗಿದ್ದು, ಮಾಧ್ಯಮಕ್ಕೆ ಮತ್ತು ಸಾರ್ವಜನಿಕರಿಗೆ ಅದನ್ನು ಬಿಡುಗಡೆ ಮಾಡುವ ಮುನ್ನ ಅದನ್ನು ಮಬ್ಬುಗೊಳಿಸಬೇಕಿತ್ತು. ಆದರೆ ಅಲಬಾಮಾದ ಜೋರ್ಡನ್-ಹೇರ್ ಸ್ಟೇಡಿಯಂನಲ್ಲಿ ಈ ಸಂಖ್ಯೆಗಳನ್ನು ಮರೆಮಾಚದೇ ಪ್ರಕಟಿಸಲಾಗಿತ್ತು. ಆದರೆ, ಐಸ್ಲೆಂಡ್ ಆಟಗಾರರು ಟೀಮ್‌ಶೀಟ್‌ಗೆ ತಮ್ಮ ಪಾಸ್‌ಪೋರ್ಟ್ ಸಂಖ್ಯೆಗಳನ್ನು ಸಲ್ಲಿಸಿರಲಿಲ್ಲ. ರಾಯ್ಟರ್ಸ್ ಈ ಸಂಬಂಧ ಅರ್ಜೆಂಟೀನಾ ಫುಟ್ಬಾಲ್ ಫೆಡರೇಷನ್ ಮತ್ತು ಫಿಫಾದ ಅಭಿಪ್ರಾಯವನ್ನು ಕೋರಿದೆ. ಇದಕ್ಕೂ ಮುನ್ನ ಅಮೆರಿಕದ ವಿಮಾನ ನಿಲ್ದಾಣದಲ್ಲಿ ಸೆನೆಗಲ್ ಆಟಗಾರರಿಗೆ ತೀವ್ರ ಭದ್ರತಾ ತಪಾಸಣೆಗಳನ್ನು ನಡೆಸಿದ ಬಗೆಗಿನ ವಿಡಿಯೊ ವಿವಾದಕ್ಕೆ ಕಾರಣವಾಗಿತ್ತು. ಸ್ಯಾಡಿಯೊ ಮಾನೆ ಮತ್ತು ಕಲಿಡು ಕುಲಿಬಲಿಯಂಥ ದಿಗ್ಗಜರನ್ನು ಹೊಂದಿದ್ದ ತಂಡದ ಆಟಗಾರರನ್ನು ತೀವ್ರ ತಪಾಸಣೆಗೆ ಗುರಿಪಡಿಸಲಾಗಿದೆ ಎಂಬ ವಿಡಿಯೊ ವಿವಾದಕ್ಕೆ ಕಾರಣವಾಗಿತ್ತು. ಸ್ಪೇನ್‌ನಂಥ ತಂಡಗಳಿಗೆ ಇಂತಹ ತಪಾಸಣೆ ಮಾಡಿರಲಿಲ್ಲ ಎಂದು ಜಾಲತಾಣ ಬಳಕೆದಾರರು ಆಕ್ಷೇಪಿಸಿದ್ದರು.

ವಾರ್ತಾ ಭಾರತಿ 11 Jun 2026 9:40 am

ಅಧಿಕಾರ ಕಳೆದುಕೊಂಡರೂ ಮುಗಿದಿಲ್ಲ ಸಿದ್ದರಾಮಯ್ಯ ಹವಾ: ಮಾಜಿ ಸಿಎಂ ಮನೆ ತುಂಬ ಜನವೋ ಜನ!

ಅಧಿಕಾರ ಕಳೆದುಕೊಂಡ ಸಿದ್ದರಾಮಯ್ಯ ಒಬಂಟ್ಟಿಯಾಗಿದ್ದಾರಾ? ಇಲ್ಲಾ, ಸಿಎಂ ಸ್ಥಾನದಿಂದ ಕೆಳಗೆ ಇಳಿದರೂ ಸಿದ್ದರಾಮಯ್ಯ ಮನೆ ತುಂಬ ಜನರು ಸೇರಿಕೊಂಡಿದ್ದಾರೆ. ಕ್ಷೇತ್ರ ಕಾರ್ಯಕರ್ತರು, ಅಭಿಮಾನಿಗಳು, ಸಚಿವರು, ಶಾಸಕರು ಸಿದ್ದರಾಮಯ್ಯ ಮನೆಗೆ ನಿತ್ಯ ಬರುತ್ತಿದ್ದಾರೆ. ಕೆಲವು ಮಾತನಾಡಿಸಿಕೊಂಡು ಹೋಗುತ್ತಿದ್ದರೆ, ಮತ್ತೆ ಕೆಲವರು ಸಮಸ್ಯೆ ಪರಿಹಾರಕ್ಕಾಗಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡುತ್ತಿದ್ದಾರೆ. ಇತ್ತೀಚೆಗೆ ಸಿದ್ದರಾಮಯ್ಯ ಒಬ್ಬರೇ ನಡೆದುಕೊಂಡು ಹೋಗುತ್ತಿರುವ ವಿಡಿಯೋ ವೈರಲ್ ಆಗಿತ್ತು. ಇದು ಸಾಕಷ್ಟು ಚರ್ಚೆಗೆ ಎಡೆ ಮಾಡಿಕೊಟ್ಟಿತ್ತು. ಆದರೆ ವಾಸ್ತವ ಬೇರೆ ಇದೆ.

ವಿಜಯ ಕರ್ನಾಟಕ 11 Jun 2026 9:30 am

CET 2026 ಫಲಿತಾಂಶದಲ್ಲಿ ಕನ್ನಡ ಮಾಧ್ಯಮಕ್ಕೆ ಹಿನ್ನಡೆ: ಕೇವಲ 12 ಜನರಿಗೆ ಟಾಪ್ 1000 ರ‍್ಯಾಂಕ್‌, ದ.ಕನ್ನಡದ ಇಬ್ಬರಿಗಷ್ಟೇ ಸ್ಥಾನ!

ಈ ಬಾರಿಯ ಸಿಇಟಿ ಫಲಿತಾಂಶದಲ್ಲಿ ರಾಜ್ಯದ ಸರ್ಕಾರಿ ಪಿಯು ಕಾಲೇಜು, ಕನ್ನಡ ಮಾಧ್ಯಮ ಹಾಗೂ ಗ್ರಾಮೀಣ ವಿದ್ಯಾರ್ಥಿಗಳ ಸಾಧನೆ ಕುಸಿದಿದ್ದು, ಎಂಜಿನಿಯರಿಂಗ್ ವಿಭಾಗದ ಟಾಪ್ 1000 ರ‍್ಯಾಂಕ್‌ಗಳಲ್ಲಿ ಕೇವಲ 12 ಸರ್ಕಾರಿ ಕಾಲೇಜು ಹಾಗೂ 9 ಕನ್ನಡ ಮಾಧ್ಯಮದ ವಿದ್ಯಾರ್ಥಿಗಳು ಮಾತ್ರ ಸ್ಥಾನ ಪಡೆದಿದ್ದಾರೆ. ಇನ್ನು, ಟಾಪ್‌ 1000 ರ‍್ಯಾಂಕ್‌ನಲ್ಲಿ ದಕ್ಷಿಣ ಕನ್ನಡದಿಂದ ಕೇವಲ ಇಬ್ಬರಿಗಷ್ಟೇ ಸ್ಥಾನ ದೊರೆತಿದೆ. ಈ ಹಿನ್ನೆಲೆಯಲ್ಲಿ ಇಲಾಖೆಯು ಫಲಿತಾಂಶದ ಸಮಗ್ರ ವಿಶ್ಲೇಷಣೆ ನಡೆಸಿ ಗುಣಮಟ್ಟ ಸುಧಾರಣೆಗೆ ಕ್ರಮ ಕೈಗೊಳ್ಳಲು ಮುಂದಾಗಿದೆ. ಹಾಗಾದ್ರೆ, ಈ ಬಾರಿಯ ಸಿಇಟಿ ಪರೀಕ್ಷೆಗಳಲ್ಲಿ ಸರ್ಕಾರಿ ವಿದ್ಯಾರ್ಥಿಗಳ ಫಲಿತಾಂಶ ಹೇಗಿದೆ ಎಂಬ ವಿವರ ಇಲ್ಲಿದೆ..

ವಿಜಯ ಕರ್ನಾಟಕ 11 Jun 2026 9:27 am

ಎನ್‌ಸಿಪಿ, ಶಿವಸೇನೆ ಹಾದಿಯಲ್ಲಿ ಟಿಎಂಸಿ: 28 ಸಂಸದರಲ್ಲಿ 19 ಮಂದಿ ಬಂಡಾಯಕ್ಕೆ ಬೆಂಬಲ

ಹೊಸದಿಲ್ಲಿ: ತೃಣಮೂಲ ಕಾಂಗ್ರೆಸ್ ಅಧಿನಾಯಕಿ ಮಮತಾ ಬ್ಯಾನರ್ಜಿ ಹಲವು ರಾಜಕೀಯ ಯುದ್ಧಗಳ ಪೈಕಿ ಅತ್ಯಂತ ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿದ್ದು, ಪಕ್ಷದ ಒಟ್ಟು 28 ಸಂಸದರ ಪೈಕಿ 19 ಮಂದಿಯ ಬೆಂಬಲ ಅಂದರೆ ಮೂರನೇ ಎರಡರಷ್ಟು ಬೆಂಬಲ ತಮಗೆ ಇದೆ ಎಂದು ಮಮತಾ ಬ್ಯಾನರ್ಜಿ ವಿರುದ್ಧ ಬಂಡಾಯ ಸಾರಿರುವ ಬಣ ಹೇಳಿಕೊಂಡಿದೆ. ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಭಿನ್ನಮತೀಯ ಶಾಸಕರ ಗುಂಪು ಪ್ರತ್ಯೇಕ ಆಸನ ವ್ಯವಸ್ಥೆಗೆ ಮಾಡಿಕೊಂಡ ಮನವಿಯಂತೆ ಸಂಸತ್ ನಲ್ಲಿ ಕೂಡಾ ಪ್ರತ್ಯೇಕ ಪ್ರಾತಿನಿಧ್ಯ ಕೋರಲು ಈ ಬಣ ಮುಂದಾಗಿದೆ. ಮಮತಾ ಬ್ಯಾನರ್ಜಿ ಮತ್ತು ಅಭಿಷೇಕ್ ಬ್ಯಾನರ್ಜಿಯವರ ನಿಷ್ಠರಾಗಿದ್ದ ಸಾಯೊನಿ ಘೋಷ್ ಹಾಗೂ ಮೂವರು ಮುಸ್ಲಿಂ ಸಂಸದರು ಕೂಡಾ ಭಿನ್ನಮತೀಯ ಪಾಳಯದಲ್ಲಿ ಗುರುತಿಸಿಕೊಂಡಿದ್ದಾರೆ. ಬಿಜೆಪಿ ಜತೆ ವಿಲೀನಗೊಳ್ಳಲು ಈ ಸಂಸದರು ಮುಂದಾಗಿದ್ದು, ತಮ್ಮದೇ ಅಧಿಕೃತ ಟಿಎಂಸಿ ಎಂಬ ಈ ಬಣದ ಪ್ರತಿಪಾದನೆಯು ಅನರ್ಹತೆಯ ಭೀತಿಯಿಂದ ಪಾರಾಗಲು ನೆರವಾಗಲಿದೆ. ಮಹಾರಾಷ್ಟ್ರದಲ್ಲಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಬಣ ಹಾಗೂ ಅಜಿತ್ ಪವಾರ್ ನೇತೃತ್ವದ ಎನ್ಸಿಪಿ ಬಣ ಇದೇ ತಂತ್ರ ಅನುಸರಿಸಿದ್ದವು. ಎರಡೂ ಪ್ರಕರಣಗಳಲ್ಲಿ ಆ ಬಳಿಕ ಚುನಾವಣಾ ಆಯೋಗ, ಈ ಭಿನ್ನಮತೀಯ ಬಣಗಳನ್ನೇ ನೈಜ ಪಕ್ಷ ಎಂದು ಮಾನ್ಯ ಮಾಡಿತ್ತು ಹಾಗೂ ಇವು ಬಿಜೆಪಿ ಮಿತ್ರಪಕ್ಷಗಳಾಗಿ ಗುರುತಿಸಿಕೊಂಡಿವೆ. ಆದರೆ ಮುಸ್ಲಿಂ ಸಂಸದರು ಕೂಡಾ ಈ ಬಣದ ಭಾಗವಾಗಿರುವುದರಿಂದ ಬಿಜೆಪಿಯಿಂದ ಅಂತರ ಕಾಯ್ದುಕೊಳ್ಳವ ಬಗ್ಗೆಯೂ ಚಿಂತನೆ ನಡೆದಿದೆ. ಭಿನ್ನರ ಗುಂಪು ಪಕ್ಷದ ಅಧಿಕೃತ ಹೆಸರು ಮತ್ತು ಚಿಹ್ನೆ ತಮಗೆ ಸೇರಬೇಕು ಎಂದು ಹಕ್ಕು ಮಂಡಿಸಬಹುದಾಗಿದೆ. ಇದು ತೃಣಮೂಲ ನಾಯಕಿಯ ಸಂಕಷ್ಟಗಳನ್ನು ಮತ್ತಷ್ಟು ಸಂಕೀರ್ಣಗೊಳಿಸಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ವಾರ್ತಾ ಭಾರತಿ 11 Jun 2026 9:26 am

ಬಿಸಿಲು ನಾಡನ್ನು ‘ಕೂಲ್ ರಾಯಚೂರು’ ಮಾಡಲು ಪಾಲಿಕೆ ಪಣ

ರಾಯಚೂರು: ಬಿಸಿಲುನಾಡು ಎಂದೇ ಖ್ಯಾತವಾಗಿರುವ ರಾಯಚೂರು ನಗರವನ್ನು ಹಸಿರು ಹೊದಿಕೆಯಿಂದ ಆವರಿಸಲು ಮಹಾನಗರ ಪಾಲಿಕೆ ಮಹತ್ವಾಕಾಂಕ್ಷಿ ಯೋಜನೆ ರೂಪಿಸಿದೆ. ನಗರ ವ್ಯಾಪ್ತಿಯಲ್ಲಿ ಒಂದು ಲಕ್ಷ ಗಿಡಗಳನ್ನು ನೆಟ್ಟು ‘ಗ್ರೀನ್ ರಾಯಚೂರು’ ನಿರ್ಮಿಸುವ ಗುರಿ ಹೊಂದಿರುವ ಪಾಲಿಕೆ, ನಗರದ ಹೊರವಲಯದ ಯಕ್ಲಾಸಪೂರ ಘನತ್ಯಾಜ್ಯ ನಿರ್ವಹಣಾ ಘಟಕದಲ್ಲಿ 50 ಸಾವಿರ ಸಸಿಗಳ ಮಿಯಾವಾಕಿ (ಮಿನಿ ಅರಣ್ಯ) ನಿರ್ಮಾಣಕ್ಕೆ ಸಜ್ಜಾಗಿದೆ. ರಾಯಚೂರು ಜಿಲ್ಲೆಯಲ್ಲಿ ಕಲ್ಲು-ಬಂಡೆಗಳ ಪ್ರದೇಶ ಹೆಚ್ಚಿರುವುದರಿಂದ ಅರಣ್ಯ ಅಭಿವೃದ್ಧಿಗೆ ಪೂರಕ ವಾತಾವರಣ ಕಡಿಮೆಯಿದೆ. ಈ ಹಿನ್ನೆಲೆಯಲ್ಲಿ ವಿವಿಧ ಸರಕಾರೇತರ ಸಂಸ್ಥೆಗಳು (ಎನ್‌ಜಿಒ), ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್) ನಿಧಿ ಹಾಗೂ ಸಾರ್ವಜನಿಕ ಸಹಭಾಗಿತ್ವದ ಮೂಲಕ ನಗರವನ್ನು ಸ್ವಚ್ಛ ಮತ್ತು ಹಸಿರು ನಗರವನ್ನಾಗಿ ರೂಪಿಸಲು ಪಾಲಿಕೆ ಮುಂದಾಗಿದೆ. ಘನತ್ಯಾಜ್ಯ ಘಟಕದಲ್ಲಿ ಮಿಯಾವಾಕಿ ಅರಣ್ಯ ಬೇಸಿಗೆಯಲ್ಲಿ 45 ಡಿಗ್ರಿ ಸೆಲ್ಸಿಯಸ್‌ವರೆಗೆ ತಾಪಮಾನ ದಾಖಲಾಗುವ ರಾಯಚೂರಿನಲ್ಲಿ ಜನ ಮತ್ತು ಜಾನುವಾರುಗಳು ತೀವ್ರ ಬಿಸಿಗಾಳಿಗೆ ತತ್ತರಿಸುವುದು ಸಾಮಾನ್ಯ. ಜಿಲ್ಲೆಯಲ್ಲಿನ ಅರಣ್ಯ ಪ್ರದೇಶ ಕೇವಲ ಶೇ.2ರಷ್ಟೇ ಇರುವುದರಿಂದ ಪರಿಸರದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆ ಆಯುಕ್ತ ಜುಬೀನ್ ಮೊಹಾಪಾತ್ರ ಅವರ ನೇತೃತ್ವದಲ್ಲಿ ನಗರದಲ್ಲಿ ಒಂದು ಲಕ್ಷ ಸಸಿಗಳನ್ನು ನೆಡುವ ಯೋಜನೆ ಜಾರಿಗೊಳ್ಳುತ್ತಿದೆ. ಯಕ್ಲಾಸಪೂರ ಬಡಾವಣೆಯ ಘನತ್ಯಾಜ್ಯ ನಿರ್ವಹಣಾ ಘಟಕದಲ್ಲಿ ಸಂಗ್ರಹವಾಗಿದ್ದ ಕಸವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಿ, ಜಪಾನ್ ಮಾದರಿಯ ಮಿಯಾವಾಕಿ ಅರಣ್ಯ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಇದಕ್ಕಾಗಿ ಇಲ್ಲಿ 24 ಬಗೆಯ ಸ್ಥಳೀಯ ಜಾತಿಯ ಸುಮಾರು 50 ಸಾವಿರ ಸಸಿಗಳನ್ನು ನೆಡಲಾಗುತ್ತಿದೆ. ವಿವಿಧ ಪ್ರದೇಶಗಳಲ್ಲಿ ಹಸಿರೀಕರಣ ಉಳಿದ 50 ಸಾವಿರ ಸಸಿಗಳನ್ನು ಯಕ್ಲಾಸಪೂರದ ನೂತನ ಜಿಲ್ಲಾಡಳಿತ ಭವನದ ಒಂದು ಎಕರೆ ಪ್ರದೇಶದಲ್ಲಿ 11 ಸಾವಿರ, ಮಾವಿನಕೆರೆ, ಕಾಕಿನಕೆರೆ, ಮನ್ಸಲಾಪುರ, ಮರ್ಚೇಡ್ ಕೆರೆಗಳ ಸುತ್ತಮುತ್ತ, ರಾಂಪೂರು ಶುದ್ಧೀಕರಣ ಘಟಕ, ದೇವಸುಗೂರು ಸಮೀಪದ ಚಿಕ್ಕಸುಗೂರು ಕುಡಿಯುವ ನೀರಿನ ಘಟಕ ಹಾಗೂ ನಗರದ ಪ್ರಮುಖ ರಸ್ತೆ ವಿಭಜಕಗಳಲ್ಲಿ ನೆಡಲು ಯೋಜಿಸಲಾಗಿದೆ. ಈ ಕಾರ್ಯ ಯಶಸ್ವಿಯಾಗಲು ಒಂದೆರಡು ವರ್ಷವಾಗಬಹುದು. ಯೋಜನೆ ಯಶಸ್ವಿಯಾಗಿ ಅನುಷ್ಠಾನಗೊಂಡರೆ ಮುಂದಿನ ವರ್ಷಗಳಲ್ಲಿ ನಗರ ತಾಪಮಾನದಲ್ಲಿ 3ರಿಂದ 4 ಡಿಗ್ರಿ ಸೆಲ್ಸಿಯಸ್‌ವರೆಗೆ ಇಳಿಕೆಯಾಗುವ ನಿರೀಕ್ಷೆ ವ್ಯಕ್ತವಾಗಿದೆ. ಎಸ್‌ಪಿಎಂಸಿಐಎಲ್‌ನಿಂದ 1.5 ಕೋಟಿ ರೂ. ನೆರವು ಕೇಂದ್ರ ಸರಕಾರದ ಹಣಕಾಸು ಸಚಿವಾಲಯದ ಅಧೀನದಲ್ಲಿರುವ ಭಾರತ ಭದ್ರತಾ ಮುದ್ರಣ ಹಾಗೂ ನಾಣ್ಯ ತಯಾರಿಕಾ ನಿಗಮ ಲಿಮಿಟೆಡ್ (ಎಸ್‌ಪಿಎಂಸಿಐಎಲ್) ಸಂಸ್ಥೆ 1.5 ಕೋಟಿ ರೂ.ಆರ್ಥಿಕ ನೆರವು ನೀಡಿದೆ. ಈ ಅನುದಾನದಡಿ ಮಿಯಾವಾಕಿ ಅರಣ್ಯ ಹಾಗೂ ಜಿಲ್ಲಾಡಳಿತ ಭವನದಲ್ಲಿ 11 ಸಾವಿರ ಸಸಿ ನೆಡುವ ಕಾರ್ಯ ಕೈಗೊಳ್ಳಲಾಗಿದೆ. ಜೂನ್ 4ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ‘ಏಕ್ ಪೇಡ್ ಮಾಂ ಕೆ ನಾಮ್’ ಅಭಿಯಾನದ ಅಂಗವಾಗಿ ಜಿಲ್ಲಾಡಳಿತ ಭವನದಲ್ಲಿ ಹಸಿರುಕರಣ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದರು. ಕೇಂದ್ರ ಹಣಕಾಸು ಇಲಾಖೆಯ ಎಸ್‌ಪಿಎಂಸಿಐಎಲ್ ಸಂಸ್ಥೆ ಇತ್ತೀಚೆಗೆ ಸ್ಥಾಪನೆ ಮಾಡಲಾಗಿದೆ. ಮುಖ್ಯವಾಗಿ ಇದು ಕರೆನ್ಸಿ ನೋಟುಗಳು, ನಾಣ್ಯಗಳು, ಅಂಚೆ ಚೀಟಿಗಳು, ಪಾಸ್ಪೋರ್ಟ್ಗಳು ಮತ್ತು ಇತರೆ ಭದ್ರತಾ ದಾಖಲೆಗಳ ಮುದ್ರಣ ಹಾಗೂ ತಯಾರಿಕೆಯನ್ನು ನಿರ್ವಹಿಸುತ್ತದೆ. ಇದು ಭಾರತ ಸರಕಾರದ ಹಣಕಾಸು ಸಚಿವಾಲಯದ ಆಡಳಿತ ನಿಯಂತ್ರಣದಲ್ಲಿರುವ ಸಾರ್ವಜನಿಕ ವಲಯದ ಸಂಸ್ಥೆಯಾಗಿದ್ದು,. ಈಗ ರಾಯಚೂರು ನಗರದಲ್ಲಿ ಅರಣ್ಯ ಬೆಳೆಸಿ ಪರಿಸರ ಸಂರಕ್ಷಣೆಗೆ ಮುಂದಾಗಿದ್ದು ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದೆ. ಮಿ   ಯಾವಾಕಿ ಅರಣ್ಯ ಎನ್ನುವುದು ಜಪಾನ್ ಸಸ್ಯಶಾಸ್ತ್ರಜ್ಞ ಡಾ. ಅಕಿರಾ ಮಿಯಾವಾಕಿ ಅವರು ಅಭಿವೃದ್ಧಿಪಡಿಸಿದ ಕ್ರಾಂತಿಕಾರಿ ವಿಧಾನವಾಗಿದ್ದು, ಬಹಳ ಕಡಿಮೆ ಜಾಗದಲ್ಲಿ ಮತ್ತು ಕಡಿಮೆ ಸಮಯದಲ್ಲಿ ಅತ್ಯಂತ ದಟ್ಟವಾದ ಕಾಡನ್ನು ಬೆಳೆಯಬಹುದಾಗಿದೆ. ಗಿಡದಿಂದ ಗಿಡಗಳ ಮಧ್ಯೆ ಮಧ್ಯಮ ಹಾಗೂ ಚಿಕ್ಕ ಗಾತ್ರದ ಸಸಿಗಳನ್ನು ಹಾಕಿ ಬೆಳೆಸಬಹುದಾಗಿದೆ. ಆದಷ್ಟು ಸ್ಥಖೀಯವಾಗಿ ಸಿಗುವ ಸಸಿಗಳನ್ನೇ ಮಿಯಾವಾಕಿ ಪದ್ದತಿಯಲ್ಲಿ ಹಾಕಲಾಗುತ್ತದೆ. ಜಪಾನ್ ಮಾದರಿಯಾಗಿದ್ದರೂ ರಾಜ್ಯದ ಕಲಬುರಗಿ ಹಾಗೂ ಕೆಲವೆಡೆ ಪ್ರಯೋಗ ಮಾಡಿ ಯಶಸ್ವಿಯಾಗಿದ್ದಾರೆ. ಈಗ ರಾಯಚೂರು ನಗರದಲ್ಲಿ ನಿರ್ಮಾಣ ಮಾಡುತ್ತಿದ್ದು ಬಿಸಿಲಿನಿಂದ ಬೆಂಡಾದ ಜನರಿಗೆ ಸ್ವಲ್ಪ ನೆಮ್ಮದಿಯ ಉಸಿರಾಡಲು ಸಹಾಯವಾಗಲಿದೆ. ಕಸದ ಗುಡ್ಡೆಯಿಂದ ಗಬ್ಬು ನಾರುತ್ತಿದ್ದ ಯಕ್ಲಾಸಪೂರು ಬಡಾವಣೆಯ ತ್ಯಾಜ್ಯ ನಿರ್ವಹಣಾ ಘಟಕದಲ್ಲಿ ಮಿಯಾವಾಕಿ ನಿರ್ಮಿಸಲು ಮುಂದಾಗಿದ್ದು ಹೊಂಗೆ, ಬೇವು, ಆಲದ ಮರ, ನೇರಳೆ ಸೇರಿ ಸ್ಥಳೀಯವಾಗಿ ಸಿಗುವ 24 ಬಗೆಯ 50 ಸಾವಿರ ಗಿಡಗಳನ್ನು ಹಾಕಲಾಗುತ್ತಿದೆ. ಮಿಯಾವಾಕಿ ವ್ಯವಸ್ಥೆಯನ್ನು ಹಲವೆಡೆ ಮಾಡಿ ಸೈ ಎನಿಸಿಕೊಂಡಿರುವ ‘ಗ್ರೀನ್ ಹೀರೋ ಆಫ್ ಇಂಡಿಯಾ’ ಬಿರುದು ಪಡೆದ ಡಾ. ಆರ್.ಕೆ. ನಾಯರ್ ಅವರೇ ಮುತುವರ್ಜಿ ವಜಿಸಿದ್ದಾರೆ. ದೇಶದ ನಾನಾ ಕಂಪನಿಗಳ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ಹಣದ ಸಹಾಯವೂ ಪಡೆಯಲಾಗುತ್ತಿದೆ. ರಾ ಯಚೂರು ನಗರವನ್ನು ಹಸಿರು ನಗರವಾಗಿ ಪರಿವರ್ತಿಸಲು ಹೆಜ್ಜೆ ಇಟ್ಟಾಗಿದೆ. ಮಿಯಾ ವಾಕಿ ಅರಣ್ಯ, ಬೀದಿ ಬದಿ ಸಸಿ, ಗಿಡಗಳನ್ನು ನೆಟ್ಟು ಪೋಷಿಸಲಾಗುತ್ತಿದೆ. ನಗರದಲ್ಲಿನ ಡಿವೈಡರ್ ಮಧ್ಯೆ ಜಾಲಿ ಹಾಕಿ ಸಸಿಗಳನ್ನು ನೆಟ್ಟು ಗಿಡಗಳನ್ನು ಬೆಳೆಸಲು ಯೋಚಿಸಿದ್ದೇವೆ. ಇದಕ್ಕಾಗಿ ಗೋಶಾಲಾ ರಸ್ತೆ, ಆರ್‌ಟಿಒ, ಗಂಜ್ ರಸ್ತೆಯಲ್ಲಿ ಡಿವೈಡರ್ ಅಗಲೀಕರಣ ಕಾರ್ಯ ನಡೆಯುತ್ತಿದೆ. ಯಕ್ಲಾಸಪೂರು ಘನತ್ಯಾಜ್ಯ ಘಟಕವನ್ನು ಮಿನಿ ಫಾರೆಸ್ಟ್ ಮಾಡಲಾಗುವುದು, 1.5 ಕೋಟಿ ರೂ. ಎಸ್ ಪಿಎಂಸಿಐಎಲ್ ಸಂಸ್ಥೆ ಆರ್ಥಿಕ ನೆರವು ನೀಡಿದ್ದು ಉಳಿದಂತೆ ರಾಯಚೂರಿನ 23ಕ್ಕೂ ಹೆಚ್ಚಿನ ಎನ್‌ಜಿಒಗಳು ಸಹಕಾರ ನೀಡಲಿದ್ದಾರೆ. ರಾಯಚೂರಿನಲ್ಲಿ ಶೇ. 30 ಪ್ರಮಾಣದಷ್ಟು ಅರಣ್ಯ ಬೆಳೆಸುವ ಗುರಿಯಿದ್ದು ಇದಕ್ಕೆ 3 ಕೋಟಿ ರೂ. ಬೇಕಾಗಬಹುದು. ಜುಬೀನ್ ಮೊಹಾಪಾತ್ರ, ರಾಯಚೂರು ಮಹಾನಗರ ಪಾಲಿಕೆಯ ಆಯುಕ್ತರು

ವಾರ್ತಾ ಭಾರತಿ 11 Jun 2026 9:15 am

ಎಥೆನಾಲ್ ಮಿಶ್ರಿತ ಪೆಟ್ರೋಲ್ ಮೇಲಿನ ಅಬಕಾರಿ ಸುಂಕ ರದ್ದು: ಗ್ರಾಹಕರಿಗೆ ಸಿಗುತ್ತಾ ಬೆಲೆ ಇಳಿಕೆಯ ಗಿಫ್ಟ್?

ನವದೆಹಲಿ: ಪರಿಸರ ಸ್ನೇಹಿ ಸಾರಿಗೆ ವ್ಯವಸ್ಥೆಗೆ ಉತ್ತೇಜನ ನೀಡುವ ಹಾಗೂ ವಾಹನ ಸವಾರರಿಗೆ ಹೊರೆಯಾಗಿರುವ ಇಂಧನ ದರವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಬುಧವಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಹೆಚ್ಚಿನ ಪ್ರಮಾಣದ ಎಥೆನಾಲ್ ಬೆರೆಸಿದ ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು ಸಂಪೂರ್ಣವಾಗಿ ರದ್ದುಪಡಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಈ ಹೊಸ ನಿಯಮವು ದೇಶದ ಇಂಧನ ಮತ್ತು

ಒನ್ ಇ೦ಡಿಯ 11 Jun 2026 9:10 am

ಹೇಮಾವತಿ ಎಕ್ಸ್‌ಪ್ರೆಸ್‌ ಕೆನಾಲ್‌ ವಿವಾದಕ್ಕೆ ಮರುಹುಟ್ಟು ನೀಡಿದ ಹೊಸ ಸರಕಾರ! ಸಿಎಂ ಡಿಕೆಶಿ ಕನಸಿನ ಯೋಜನೆಗೆ ಡಿಸಿಎಂ ಪರಂ ಅಸ್ತು?

ಡಿಕೆ ಶಿವಕುಮಾರ್ ಸಿಎಂ ಆಗ್ತಿದ್ದಂತೆ ವಿವಾದಿತನ ಯೋಜನೆ ಎಕ್ಸ್‌ಪ್ರೆಸ್ ಕೆನಾಲ್‌ ಮತ್ತೆ ಮುನ್ನಲೆಗೆ ಬಂದಿದೆ. ಡಿಸಿಎಂ ಕೂಡಾ ಇದಕ್ಕೆ ಕೈಜೋಡಿಸಿದ್ದಾರೆ. ತುಮಕೂರಿನಿಂದ ಮಾಗಡಿಗೆ ನೀರು ಕೊಂಡೊಯ್ಯುವ ಈ ಯೋಜನೆಗೆ ತುಮಕೂರು ಜನರ ಭಾರಿ ವಿರೋಧವಿದೆ. ಇಂದಿನಿಂದ ಮತ್ತೆ ಹೋರಾಟದ ರೂಪುರೇಷೆಗಳು ಸಿದ್ಧ ಆಗಲಿವೆ.

ವಿಜಯ ಕರ್ನಾಟಕ 11 Jun 2026 8:49 am

ಬಿಸಿಲ ತಾಪಕ್ಕೆ ಬಿಯರ್‌ ಮೊರೆ ಹೋದ ಬೆ.ಗ್ರಾಮಾಂತರ ಜನ: ಕೇವಲ 2 ತಿಂಗಳಲ್ಲೇ ಭರ್ಜರಿ 2.82ಲಕ್ಷ ಲೀ. ಬಿಯರ್‌ ಬಿಕರಿ!

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 40 ಡಿಗ್ರಿ ತಲುಪಿದ್ದ ಭೀಕರ ಬೇಸಿಗೆ ಬಿಸಿಲಿನ ಹಿನ್ನೆಲೆಯಲ್ಲಿ ಆ ಬೇಗೆಯನ್ನು ತಾಳಿಕೊಳ್ಳಲು ಅಲ್ಲಿನ ಜನ ಬಿಯರ್‌ ಮೊರೆ ಹೋಗಿದ್ದು, ಏಪ್ರಿಲ್ ಮತ್ತು ಮೇ ತಿಂಗಳಲ್ಲಿ 2,82,554 ಲೀಟರ್ ಬಿಯರ್ ಭರ್ಜರಿ ಮಾರಾಟವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಜಿಲ್ಲೆಯಲ್ಲಿ ಶೇ.33.30ರಷ್ಟು (70,582 ಲೀಟರ್ ಹೆಚ್ಚುವರಿ) ವಹಿವಾಟು ಏರಿಕಾಯಾಗಿದ್ದು, ಜಿಲ್ಲೆಯ ನಾಲ್ಕು ತಾಲೂಕುಗಳ ಪೈಕಿ ಹೊಸಕೋಟೆಯಲ್ಲಿ ಅತಿ ಹೆಚ್ಚು ಮಾರಾಟ ದಾಖಲಾಗಿದೆ. ಈ ಕುರಿತ ಮಾಹಿತಿ ಇಲ್ಲಿದೆ.

ವಿಜಯ ಕರ್ನಾಟಕ 11 Jun 2026 8:48 am

ಜನಾಕ್ರೋಶಕ್ಕೆ ಮಣಿದ ಪಾಲಿಕೆ, ಬನ್ನೇರುಘಟ್ಟ ರಸ್ತೆ ಗುಂಡಿಗಳಿಗೆ ಸಿಕ್ತು ತಾತ್ಕಾಲಿಕ ಪರಿಹಾರ: ಸಂಪೂರ್ಣ ದುರಸ್ತಿ ಭಾಗ್ಯ ಯಾವಾಗ?

ಬನ್ನೇರುಘಟ್ಟ ರಸ್ತೆ ಗುಂಡಿಗಳಿಗೆ ತಾತ್ಕಾಲಿಕ ಪರಿಹಾರ ಸಿಗುತ್ತಿದೆ. ಕಳೆದ ಅನೇಕ ತಿಂಗಳುಗಳಿಂದ ಈ ರಸ್ತೆಯಲ್ಲಿ ಓಡಾಡುತ್ತಿದ್ದ ಜನರು ಸಮಸ್ಯೆ ಅನುಭವಿಸುತ್ತಿದ್ದರು. ಜನಾಕ್ರೋಶಕ್ಕೆ ಕೊನೆಗೂ ಬೆಂಗಳೂರು ದಕ್ಷಿಣ ಪಾಲಿಕೆ ಅಧಿಕಾರಿಗಳು ಮಣಿದಿದ್ದಾರೆ. ಇದೀಗ ಕಳೆದ ಎರಡು ದಿನಗಳಿಂದ ರಸ್ತೆಯ ಗುಂಡಿ ಮುಚ್ಚುವ ಕೆಲಸಕ್ಕೆ ಚಾಲನೆ ನೀಡಲಾಗಿದೆ. ಆದರೆ ಇದು ತಾತ್ಕಾಲಿಕ ಪರಿಹಾರ ಅಷ್ಟೇ ಎಂಬುವುದು ಮುಖ್ಯವಾಗಿದೆ. ಉಳಿದಂತೆ ಈ ರಸ್ತೆಗೆ ಸಂಪೂರ್ಣ ದುರಸ್ತಿ ಭಾಗ್ಯ ಯಾವಾಗ? ಸಿಗಲಿದೆ ಎಂಬುವುದು ಸದ್ಯಕ್ಕೆ ಕಾದುನೋಡಬೇಕಾಗಿದೆ.

ವಿಜಯ ಕರ್ನಾಟಕ 11 Jun 2026 8:18 am

ಸರ್ಕಾರಿ ಆಸ್ಪತ್ರೆಗಳಿಗೆ 3000ಕ್ಕೂ ಹೆಚ್ಚು ವೈದ್ಯರು, ನರ್ಸ್‌ಗಳ ಭರ್ಜರಿ ನೇಮಕಾತಿಗೆ ಸಚಿವ ಯು.ಟಿ.ಖಾದರ್ ಚಾಲನೆ

ಬೆಂಗಳೂರು: ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಅವರು ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಆಡಳಿತಾತ್ಮಕ ಚುರುಕು ಮುಟ್ಟಿಸಿದ್ದಾರೆ. ರಾಜ್ಯದ ಆರೋಗ್ಯ ಕ್ಷೇತ್ರದಲ್ಲಿ ಬದಲಾವಣೆಗಳನ್ನು ತರಲು ಮುಂದಾಗಿರುವ ಅವರು, ಸಾರ್ವಜನಿಕರಿಗೆ ತಕ್ಷಣವೇ ಗುಣಮಟ್ಟದ ವೈದ್ಯಕೀಯ ಸೇವೆ ಸಿಗುವಂತೆ ಮಾಡಲು ಕಾರ್ಯಪ್ರವೃತ್ತರಾಗಿದ್ದಾರೆ. ಸರ್ಕಾರಿ ಆಸ್ಪತ್ರೆಗಳಲ್ಲಿ ದೀರ್ಘಕಾಲದಿಂದ ಕಾಡುತ್ತಿದ್ದ ವೈದ್ಯರು ಹಾಗೂ ಸಿಬ್ಬಂದಿಗಳ ತೀವ್ರ ಕೊರತೆಯ ಸಮಸ್ಯೆಗೆ

ಒನ್ ಇ೦ಡಿಯ 11 Jun 2026 8:14 am

ಆಧುನಿಕ ʼಫ್ಲೋಟಿಂಗ್‌ ಸೌರ ಯೋಜನೆʼ ಪರಿಚಯಿಸಿದ ಕೇಂದ್ರ ಸರ್ಕಾರ : ಏನಿದು ಯೋಜನೆ, ಹೇಗೆ ವರ್ಕ್ ಆಗುತ್ತೆ?

Floating Solar Project - How It Works : ದೇಶದ ತೇಲುವ ಸೌರ ಸಾಮರ್ಥ್ಯವನ್ನು 102 GWp ಗಿಂತ ಅಧಿಕ ಎಂಬುದನ್ನು ವರದಿಯೊಂದು ಅಂದಾಜಿಸಿದೆ. ಶುದ್ಧ ಇಂಧನ ಪರಿವರ್ತನೆ ಗುರಿಗೆ ನೈಸರ್ಗಿಕ ಸಂಪನ್ಮೂಲಗಳನ್ನು ಪರಿಣಾಮಕಾರಿ ರೀತಿಯಲ್ಲಿ ಬಳಸಿಕೊಳ್ಳುವ ಫ್ಲೋಟಿಂಗ್ ಸೌರ ಯೋಜನೆಯನ್ನು ಕೇಂದ್ರ ಸರ್ಕಾರ ಪರಿಚಯಿಸಿದೆ. ಇದು, ಪಾರದರ್ಶಕತೆ ಮತ್ತು ದಕ್ಷತೆಯನ್ನು ಹೆಚ್ಚಿಸುತ್ತದೆ ಎನ್ನುವುದು ಕೇಂದ್ರ ಸರ್ಕಾರದ ಅಭಿಪ್ರಾಯವಾಗಿದೆ.

ವಿಜಯ ಕರ್ನಾಟಕ 11 Jun 2026 8:09 am

ಉಡುಪಿಯಲ್ಲಿ‌ ಟ್ಯಾಟೋ- 313 ಗ್ಯಾಂಗ್‌ನ ಇಬ್ಬರ ಬಂಧನ: ಮುಸುಕು ಧರಿಸಿ ಮನೆಗಳ್ಳತನ ಮಾಡ್ತಿದ್ದ ಖದೀಮರು ಚಿನ್ನಾಭರಣ ಸಹಿತ ಲಾಕ್!

ಅಂತಾರಾಜ್ಯ ಮಟ್ಟದಲ್ಲಿ ರೈಲ್ವೇ ನಿಲ್ದಾಣಗಳ ಬಳಿಯ ನಿವಾಸಗಳನ್ನು ಟಾರ್ಗೆಟ್‌ ಮಾಡಿ ಮುಸುಕು ಧರಿಸಿ ಮನೆಗಳ್ಳತನ ಮಾಡ್ತಿದ್ದ ಟ್ಯಾಟೋ 313 ಗ್ಯಾಂಗ್‌ನ ಇಬ್ಬರು ಖದೀಮರನ್ನು ಮಣಿಪಾಲದಲ್ಲಿ ಪೊಲೀಸರು ಚಿನ್ನಾಭರಣ ಸಹಿತ ಬಂಧಿಸಿದ್ದಾರೆ. ಬಂಧಿತರನ್ನು ಬೆಂಗಳೂರಿನ ದರ್ಶನ್‌ ಹಾಗೂ ದಾವಣಗೆರೆಯ ಚಂದ್ರು ಗುರುತಿಸಿದ್ದು, ಕೈಯಲ್ಲಿ ಟ್ಯಾಟೋ 313 ಹಚ್ಚೆ ಹಾಕಿಸಿಕೊಂಡಿದ್ದಾರೆ. ಇನ್ನು, ಆರೋಪಿಗಳಿಂದ 7.90 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

ವಿಜಯ ಕರ್ನಾಟಕ 11 Jun 2026 8:08 am

ಮತ್ತೆ ಅಮೆರಿಕ ದಾಳಿ: ಹಾರ್ಮುಝ್ ಜಲಸಂಧಿ ಮುಚ್ಚಿದ ಇರಾನ್

ಟೆಹರಾನ್: ಇರಾನ್ ನ ಒಳಪ್ರದೇಶಗಳನ್ನು ಗುರಿ ಮಾಡಿ ಅಮೆರಿಕ ಬುಧವಾರ ಮತ್ತೆ ದಾಳಿ ನಡೆಸಿದ ಬೆನ್ನಲ್ಲೇ ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದಾಗಿ ಇರಾನ್ ಘೋಷಿಸಿದೆ. ವಾಣಿಜ್ಯ ಹಡಗುಗಳು ಮತ್ತು ತೈಲ ಟ್ಯಾಂಕರ್ ಗಳು ಸೇರಿದಂತೆ ಎಲ್ಲ ಸಂಚಾರಗಳಿಗೆ ಈ ಆಯಕಟ್ಟಿನ ಹಾಗೂ ಪ್ರಮುಖ ಜಲಮಾರ್ಗವನ್ನು ಮುಚ್ಚಲಾಗಿದೆ ಎಂದು ಇರಾನ್ ನ ಅಗ್ರ ಜಂಟಿ ಮಿಲಿಟರಿ ಕಮಾಂಡ್ ಹೇಳಿಕೆ ನೀಡಿದೆ. ಇದನ್ನು ದಾಟಲು ಪ್ರಯತ್ನಿಸುವ ಹಡಗುಗಳ ಮೇಲೆ ಗುಂಡು ಹಾರಿಸಲಾಗುವುದು ಎಂದು ಎಚ್ಚರಿಕೆ ನೀಡಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆದೇಶದ ಮೇರೆಗೆ ಹೊಸ ದಾಳಿಯನ್ನು ಅಮೆರಿಕ ಸೇನೆ ನಡೆಸಿದ ಬೆನ್ನಲ್ಲೇ ಈ ಘೋಷಣೆ ಹೊರಬಿದಿದ್ದಿದೆ. ಇರಾನ್‌ನಾದ್ಯಂತ ಸ್ಫೋಟಗಳು ಸಂಭವಿಸಿದ್ದು, ವಾಯು ರಕ್ಷಣಾ ಚಟುವಟಿಕೆ ತೀವ್ರಗೊಂಡಿದೆ. ಹಾರ್ಮುಝ್ ಜಲಸಂಧಿಯ ಸುತ್ತಮುತ್ತಲು ಕೂಡಾ ಇರಾನ್ ಹಾಗೂ ಅಮೆರಿಕ ಪಡೆಗಳ ನಡುವೆ ಸಂಘರ್ಷ ನಡೆಯುತ್ತಿದೆ ಎಂದು ಇರಾನ್ ನ ಸರ್ಕಾರಿ ಮಾಧ್ಯಮ ವರದಿ ಮಾಡಿದೆ. ಕಾರ್ಯಾಚರಣೆ ಆರಂಭಕ್ಕೆ ಮುನ್ನ ಅಮೆರಿಕದ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಅವರು ಇರಾನ್ ವಿರುದ್ಧ ಅಮೆರಿಕ ಸೇನೆ ಕ್ರಮ ಕೈಗೊಳ್ಳುತ್ತದೆ ಎಂದು ಎಚ್ಚರಿಕೆ ನೀಡಿದ್ದರು. ಒಂದು ರಾತ್ರಿಯಿಂದಾಚೆಗೆ ಈ ದಾಳಿ ಮುಂದುವರಿಯಲಿದೆ ಎಂಬ ಸುಳಿವು ನಿಡಿದ್ದರು. ಫ್ಲೋರಿಡಾದ ಥಂಪಾದಲ್ಲಿರುವ ಅಮೆರಿಕದ ಸೆಂಟ್ರಲ್ ಕಮಾಂಡ್ ಕೇಂದ್ರ ಕಚೇರಿಯಲ್ಲಿ ಮಾತನಾಡಿದ ಹೆಗ್ಸೆತ್, ರಾತ್ರಿ ನಡೆಯುವ ಈ ದಾಳಿ ಪ್ರಬಲವಾಗಿರುತ್ತವೆ; ಇದು ಸ್ಪಷ್ಟ. ಅದು ನಾಳೆ ರಾತ್ರಿಯೂ ಸಂಭವಿಸಬಹುದು. ಅದು ಪ್ರಬಲ ಹಾಗೂ ಸ್ಪಷ್ಟವಾಗಿರುತ್ತದೆ ಎಂದು ಹೇಳಿದರು. ಇರಾನ್ ನ ನೆಲೆಗಳನ್ನು ಗುರಿ ಮಾಡಿ ದಾಳಿ ನಡೆಸಲಾಗುತ್ತದೆ ಹಾಗೂ ಈ ದಾಳಿ ಅಮೆರಿಕದ ಮಿಲಿಟರಿ ಗುರಿಗಳನ್ನು ಮತ್ತಷ್ಟು ಸಾಧಿಸಲು ಅನುವಾಗುತ್ತದೆ ಮತ್ತು ಅಮೆರಿಕದ ರಾಜತಾಂತ್ರಿಕ ನಿಲುವನ್ನು ಬಲಗೊಳಿಸುತ್ತದೆ ಎಂದು ಅವರು ಪ್ರತಿಪಾದಿಸಿದ್ದಾರೆ.

ವಾರ್ತಾ ಭಾರತಿ 11 Jun 2026 8:01 am

IAS officers transfer: ರಾಜ್ಯದಲ್ಲಿ 6 ಹಿರಿಯ ಅಧಿಕಾರಿಗಳ ವರ್ಗಾವಣೆ, ಯಾರಿಗೆ ಯಾವ ಹುದ್ದೆ? ಇಲ್ಲಿದೆ ಡಿಟೇಲ್ಸ್

ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಹೊಸ ಸಚಿವ ಸಂಪುಟ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ರಾಜ್ಯ ಸರ್ಕಾರದ ಆಡಳಿತ ಯಂತ್ರದಲ್ಲಿ ಪ್ರಮುಖ ಬದಲಾವಣೆಗಳು ಆರಂಭವಾಗಿವೆ. ಆಡಳಿತವನ್ನು ಮತ್ತಷ್ಟು ಚುರುಕುಗೊಳಿಸುವ ಮತ್ತು ಇಲಾಖೆಗಳ ಸಮನ್ವಯತೆಯನ್ನು ಹೆಚ್ಚಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರವು ಬುಧವಾರ ಆರು ಹಿರಿಯ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಹಾಗೂ ಅವರಿಗೆ ಹೆಚ್ಚುವರಿ ಜವಾಬ್ದಾರಿಗಳನ್ನು ವಹಿಸಿ ಹೊಸದಾಗಿ

ಒನ್ ಇ೦ಡಿಯ 11 Jun 2026 7:41 am

ಬೆಂಗಳೂರಲ್ಲಿ ನಕ್ಷೆ ಮಂಜೂರಾತಿ ನಿಯಮ ಉಲ್ಲಂಘಿಸಿ ಅನಧಿಕೃತ ಕಟ್ಟಡಗಳ ನಿರ್ಮಾಣ; 8 ಅಧಿಕಾರಿಗಳಿಗೆ ತನಿಖೆಯ ಉರುಳು

ಬೆಂಗಳೂರಿನಲ್ಲಿ ನಕ್ಷೆ ಮಂಜೂರಾತಿ ಉಲ್ಲಂಘಿಸಿ ಅಕ್ರಮ ಕಟ್ಟಡ ನಿರ್ಮಾಣಕ್ಕೆ ಸಹಕರಿಸಿದ ಬಿಬಿಎಂಪಿಯ 8 ಅಧಿಕಾರಿಗಳ ವಿರುದ್ಧ ನಗರಾಭಿವೃದ್ಧಿ ಇಲಾಖೆಯ ಮುಖ್ಯ ಕಾರ್ಯದರ್ಶಿ ತನಿಖೆಗೆ ಆದೇಶಿಸಿದ್ದಾರೆ. ನಿವೃತ್ತ ಜಿಲ್ಲಾ ಸೆಷನ್ಸ್ ನ್ಯಾಯಾಧೀಶರ ನೇತೃತ್ವದಲ್ಲಿ ವಿಚಾರಣೆ ನಡೆಯಲಿದ್ದು, ಜುಲೈ 9 ರಂದು ಹಾಜರಾಗಲು 5 ಮಂದಿ ನಿವೃತ್ತರ ಅಧಿಕಾರಿಗಳು ಸೇರಿದಂತೆ ಒಟ್ಟು 8 ಅಧಿಕಾರಿಗಳಿಗೆ ಅಂತಿಮ ನೋಟಿಸ್ ಜಾರಿ ಮಾಡಲಾಗಿದೆ. ಈ ಕುರಿತ ಮಾಹಿತಿ ಇಲ್ಲಿದೆ..

ವಿಜಯ ಕರ್ನಾಟಕ 11 Jun 2026 7:09 am

ರಾಜ್ಯಾದ್ಯಂತ ನೈಋತ್ಯ ಮುಂಗಾರು ಆರ್ಭಟ: ಈ ಜಿಲ್ಲೆಗಳಿಗೆ ರೆಡ್‌ ಅಲರ್ಟ್ ಘೋಷಣೆ, ಮನೆಯಿಂದ ಹೊರ ಬರುವ ಮುನ್ನ ಎಚ್ಚರ

ನೈಋತ್ಯ ಮುಂಗಾರು ಕರ್ನಾಟಕದಾದ್ಯಂತ ಸಂಪೂರ್ಣವಾಗಿ ಆವರಿಸಿದ್ದು, ರಾಜ್ಯದಲ್ಲಿ ಮಳೆಯ ಅಬ್ಬರ ಜೋರಾಗಿದೆ. ಭಾರತೀಯ ಹವಾಮಾನ ಇಲಾಖೆ ನೀಡಿರುವ ಮುನ್ಸೂಚನೆಯ ಪ್ರಕಾರ, ಇಂದು (ಜೂನ್ 11, 2026) ರಾಜ್ಯದ ಕರಾವಳಿ, ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಮುಂಗಾರು ಚುರುಕುಗೊಂಡಿರುವ ಹಿನ್ನೆಲೆಯಲ್ಲಿ ಮುಂದಿನ ಮೂರು-ನಾಲ್ಕು ದಿನಗಳ ಕಾಲ ಇದೇ ವಾತಾವರಣ ಮುಂದುವರಿಯಲಿದೆ

ಒನ್ ಇ೦ಡಿಯ 11 Jun 2026 6:59 am

ಡ್ರಗ್ಸ್‌ , ಸೈಬರ್‌ ಕ್ರೈಂಗೆ ಬ್ರೇಕ್ ಹಾಕಲು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪ್ಲಾನ್:‌ 2 ವಾರದಲ್ಲಿ ನೀಲನಕ್ಷೆ ಸಿದ್ದಪಡಿಸಲು ಅಧಿಕಾರಿಗಳಿಗೆ ಸೂಚನೆ!

ರಾಜ್ಯದಲ್ಲಿ ಮಾದಕ ವಸ್ತು ಮಾರಾಟ, ಸೈಬರ್ ಅಪರಾಧ ಹಾಗೂ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಹೊಸ ನೀಲನಕ್ಷೆ ಸಿದ್ಧಪಡಿಸಲು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಹೊರ ರಾಜ್ಯಗಳ ಡ್ರಗ್ಸ್ ಜಾಲ ತಡೆಯಲು ಗಡಿಗಳಲ್ಲಿ ಹೆಚ್ಚಿನ ಟೆಸ್ಟಿಂಗ್ ಕಿಟ್ ಒದಗಿಸಲಾಗುವುದು ಹಾಗೂ ಸೈಬರ್ ಕ್ರೈಂ ತಡೆಗೆ ಗೃಹ ಇಲಾಖೆ, ಐಟಿ-ಬಿಟಿ ಹಾಗೂ ಇ-ಆಡಳಿತ ಇಲಾಖೆಗಳನ್ನು ಒಗ್ಗೂಡಿಸಿ ಸಮಗ್ರ ನೀತಿ ತರಲಾಗುವುದು ಎಂದು ತಿಳಿಸಿದ್ದಾರೆ. ಇದರ ಜೊತೆಗೆ ಬೆಂಗಳೂರಿನ ಟ್ರಾಫಿಕ್‌ ಸಮಸ್ಯೆ ಸರಿಪಡಿಸಲು ಬೆಂಗಳೂರು ಅರ್ಬನ್‌ ಮೊಬಿಲಿಟಿ ಮಿಷನ್‌ ತಂಡ ರಚಿಸುವುದಾಗಿ ತಿಳಿಸಿದ್ದಾರೆ.

ವಿಜಯ ಕರ್ನಾಟಕ 11 Jun 2026 6:35 am

ಬೆಂಗಳೂರಲ್ಲಿ ತ್ಯಾಜ್ಯ ನಿರ್ವಹಣೆ ಕೊರತೆ: ರಸ್ತೆಯಲ್ಲೇ ಕಸ ವರ್ಗಾವಣೆ ಪ್ರಕ್ರಿಯೆಯಿಂದ ಬೀದಿ ಬೀದಿಯಲ್ಲೂ ದುರ್ನಾತ!

ಬೆಂಗಳೂರಿನಲ್ಲಿ ಗುತ್ತಿಗೆದಾರರು ಹಾಗೂ BSWML ನಡುವಿನ ಕಿತ್ತಾಟದ ಮಧ್ಯೆ ತ್ಯಾಜ್ಯ ನಿರ್ವಹಣಾ ವ್ಯವಸ್ಥೆ ಕೊರತೆ ಎದುರಾಗಿದ್ದು, ಪ್ರತಿದಿನ ಚಿಕ್ಕ ಆಟೋ ಟಿಪ್ಪರ್‌ಗಳಲ್ಲಿ ಸಂಗ್ರಹಿಸುವ ಕಸವನ್ನು ನಗರದ ಪ್ರಮುಖ ರಸ್ತೆಗಳು ಹಾಗೂ ಜನವಸತಿ ಪ್ರದೇಶಗಳ ರಸ್ತೆಯ ಮೇಲೆಯೇ ದೊಡ್ಡ ಕಾಂಪ್ಯಾಕ್ಟರ್‌ಗಳಿಗೆ ವರ್ಗಾಯಿಸುತ್ತಿದ್ದು, ಈ ವೇಳೆ ಸರಿಯಾದ ನಿರ್ವಹಣೆಯಿಲ್ಲದೆ, ಲಿಚೆಟ್‌ ಹರಿದು ಇಡೀ ಪ್ರದೇಶವೇ ದುರ್ನಾತದಿಂದ ತುಂಬುವ ಪರಿಸ್ಥಿತಿ ಎದುರಾಗಿದೆ. ಇದರ ಜೊತೆಗೆ ರಸ್ತೆ ಬದಿಯಲ್ಲೇ ಈ ಪ್ರಕ್ರಿಯೆಗಳು ನಡೆಯುವುದರಿಂದ ಈಗಾಗಲೇ ಟ್ರಾಫಿಕ್‌ ಸಮಸ್ಯೆಯಿಂದ ಕೂಡಿರುವ ನಗರದಲ್ಲಿ ಮತ್ತಷ್ಟು ಸಂಚಾರದಟ್ಟಣೆ ಹೆಚ್ಚಾಗುತ್ತಿದೆ. ಇತ್ತ, ಅಧಿಕಾರಿಗಳು ಸಮಸ್ಯೆ ಸರಿಯಾಗಿದೆ ಎಂದು ಸಬೂಬು ನೀಡುತ್ತಿದ್ದರೂ ಈ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಈ ಕುರಿತ ವರದಿ ಇಲ್ಲಿದೆ..

ವಿಜಯ ಕರ್ನಾಟಕ 11 Jun 2026 6:00 am

ಕೂಡ್ಲೂರಿನಲ್ಲಿ ಜನ-ಜಾನುವಾರುಗಳಿಗೆ ತೊಂದರೆ ನೀಡ್ತಿದ್ದ ಹುಲಿ ಕೊನೆಗೂ ಸೆರೆ: ತೆಂಗಿನ ತೋಟದಲ್ಲಿ ಇರಿಸಿದ್ದ ಬೋನಿಗೆ ಬಿದ್ದ ಹುಲಿರಾಯ!

ಹುಣಸೂರಿನ ಕೂಡ್ಲೂರು ಸೇರಿ ಸುತ್ತಮುತ್ತಲ ಗ್ರಾಮದ ಜನ-ಜಾನುವಾರುಗಳಿಗೆ ತೊಂದರೆ ನೀಡುತ್ತಿದ್ದ ಹುಲಿರಾಯ ಕೊನೆಗೂ ಸೆರೆಯಾಗಿದ್ದಾನೆ. ಹತ್ತಾರು ಜಾನುವಾರಗಳನ್ನು ಸಾಯಿಸಿದ್ದ ಹುಲಿಯನ್ನು ಸೆರೆಹಿಡಿಯಲು ಸುಮಾರು ತಿಂಗಳ ಕಾಲ ತೆಂಗಿನತೋಟವೊಂದರಲ್ಲಿ ಮೇಕೆಯನ್ನು ಕಟ್ಟಿಹಾಕಿ ಬೋನ್ನನ್ನು ಇರಿಸಲಾಗಿದ್ದು, ಕೊನೆಗೆ ಜೂನ್.10ರಂದು ಈ ಹುಲಿ ಅದನ್ನು ಬೇಟೆಯಾಡಲು ಬಂದು ಸೆರೆಸಿಕ್ಕಿದೆ. ಸದ್ಯ ಇನ್ನು, ಕೆಲವು ಹುಲಿಗಳು ಇದ್ದಾವೆ ಎಂದು ಸ್ಥಳೀಯರು ತಿಳಿಸಿದ್ದು, ಈ ಕುರಿತು ಕಾರ್ಯಾಚರಣೆ ನಡೆಸಲಾಗುತ್ತಿದೆ.

ವಿಜಯ ಕರ್ನಾಟಕ 11 Jun 2026 5:34 am

Mudigere | ಬಾಲಕಿಗೆ ಲೈಂಗಿಕ ದೌರ್ಜನ್ಯ; ಐವರು ಆರೋಪಿಗಳ ಬಂಧನ

ಮೂಡಿಗೆರೆ : ಅಪ್ರಾಪ್ತ ವಯಸ್ಸಿನ ಬಾಲಕಿಯೋರ್ವಳಿಗೆ ಬ್ಲಾಕ್ ಮೇಲ್ ಮಾಡಿ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ 5 ಮಂದಿಯ ವಿರುದ್ಧ ಗೋಣಿಬೀಡು ಪೊಲೀಸರು ಪೋಕ್ಸೋ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ. ಕುಶಾ (27), ನಿತೇಶ್ (31), ಸಚಿನ್ (28), ಚಂದ್ರಶೇಖರ್ (31) ಎಂಬ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಇನ್ನೋರ್ವ ಆರೋಪಿ ಸುರೇಶ (52) ನ್ಯಾಯಾಲಯದೆದುರು ಶರಣಾಗಿದ್ದಾನೆ. ಲೈಂಗಿಕ ದೌರ್ಜನ್ಯಕ್ಕೊಳಗಾದ ಬಾಲಕಿಯು ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಲೈಂಗಿಕ ದೌರ್ಜನ್ಯ ನಡೆಸಿ ಜೈಲು ಸೇರಿರುವ ಯುವಕರು, ಬಾಲಕಿಯ ಫೋಟೊವನ್ನು ಮೊಬೈಲ್‌ನಲ್ಲಿ ತೆಗೆದು ಬ್ಲಾಕ್ ಮೇಲ್ ಮಾಡಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆಂದು ಆರೋಪಿಸಿ ಬಾಲಕಿ ಗೋಣಿಬೀಡು ಪೊಲೀಸರಿಗೆ ದೂರು ನೀಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆರೋಪಿಗಳನ್ನು ಬಂಧಿಸಿದ್ದಾರೆ

ವಾರ್ತಾ ಭಾರತಿ 10 Jun 2026 11:41 pm

ಖಾಸಗಿ ಜಮೀನಿನಲ್ಲಿ ಒಳಚರಂಡಿ ಪೈಪ್‌ಲೈನ್ ಗೆ ಭೂಸ್ವಾಧೀನ- ಪರಿಹಾರ ಅನಗತ್ಯ: BWSSB ವಿಶೇಷ ಅಧಿಕಾರ ಎತ್ತಿಹಿಡಿದ ಹೈಕೋರ್ಟ್!

Karnataka High Court Order- ಖಾಸಗಿ ಜಮೀನುಗಳನ್ನು ಸ್ವಾಧೀನಪಡಿಸಿಕೊಳ್ಳದೆ ಮತ್ತು ಪರಿಹಾರ ನೀಡದೆ ಒಳಚರಂಡಿ ಪೈಪ್‌ಲೈನ್ ಅಳವಡಿಸಲು ಜಲಮಂಡಳಿಗೆ ಅಧಿಕಾರ ನೀಡುವ 'ಬಿಡಬ್ಲ್ಯೂಎಸ್‌ಎಸ್‌ಬಿ ಕಾಯಿದೆ 1964'ರ ಕಲಂ 77ರ ಸಾಂವಿಧಾನಿಕ ಸಿಂಧುತ್ವವನ್ನು ಹೈಕೋರ್ಟ್ ಎತ್ತಿಹಿಡಿದಿದೆ. ಹೆಣ್ಣೂರು ಮತ್ತು ನಾಗವಾರ ವ್ಯಾಪ್ತಿಯ ಜಮೀನು ಮಾಲೀಕರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಪೀಠ ವಜಾಗೊಳಿಸಿದೆ. ಬೃಹತ್ ನಗರದ ಸಾರ್ವಜನಿಕ ಆರೋಗ್ಯ ಮತ್ತು ನೈರ್ಮಲ್ಯದ ದೃಷ್ಟಿಯಿಂದ ಈ ವಿಶೇಷ ಅಧಿಕಾರ ಅನಿವಾರ್ಯವಾಗಿದ್ದು, ಪೈಪ್‌ಲೈನ್ ಅಳವಡಿಕೆಯಿಂದ ಜಮೀನಿನ ಮಾಲೀಕತ್ವ ಬದಲಾಗುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ವಿಜಯ ಕರ್ನಾಟಕ 10 Jun 2026 11:38 pm

ಕರ್ನಾಟಕದ ಸರ್ವತೋಮುಖ ಪ್ರಗತಿಗೆ ಕೈಜೋಡಿಸಲು ಅಧಿಕಾರಿಗಳಿಗೆ ಸಿಎಂ ಡಿ.ಕೆ.ಶಿವಕುಮಾರ್ ಕರೆ

ಹೊಸದಿಲ್ಲಿ: ನಿಮ್ಮ ಶಕ್ತಿ ಅದಮ್ಯ. ನೀವು ಮನಸ್ಸು ಮಾಡಿದರೆ ಅಭಿವೃದ್ಧಿ ರಥ ಮುನ್ನುಗ್ಗುತ್ತದೆ. ಹೀಗಾಗಿ ಕರ್ನಾಟಕದ ಸರ್ವತೋಮುಖ ಪ್ರಗತಿಗೆ ಕೈಜೋಡಿಸಿ ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ಐಎಎಸ್, ಐಪಿಎಸ್, ಐಎಫ್ಎಸ್ ಅಧಿಕಾರಿಗಳಿಗೆ ಕರೆ ನೀಡಿದರು. ಕರ್ನಾಟಕ ಭವನದಲ್ಲಿ ಅಧಿಕಾರಿಗಳ ಜತೆ ಬುಧವಾರ ರಾತ್ರಿ ಏರ್ಪಡಿಸಿದ್ದ ಔತಣಕೂಟ ಸಂವಾದದಲ್ಲಿ ಅವರು ಈ ಮನವಿ ಮಾಡಿದರು. ನಿಮ್ಮಲ್ಲಿ ಅಪಾರ ಜ್ಞಾನ ಸಂಪತ್ತಿದೆ. ಸಾಮರ್ಥ್ಯ ಇದೆ. ನಿಮ್ಮಲ್ಲಿರುವ ಆಗಾಧ ಪ್ರತಿಭೆಯನ್ನು ಕರ್ನಾಟಕದ ಪ್ರಗತಿಗೆ ವಿನಿಯೋಗಿಸಿ. ನಿಮಗೆ ಬೇಕಾದ ಸಹಕಾರವನ್ನು ಸರಕಾರ ನೀಡಲಿದೆ ಎಂದು ಸಿಎಂ ಅವರು ತಿಳಿಸಿದರು. ಕೇಂದ್ರ ಸರಕಾರದ ಅನೇಕ ಯೋಜನೆಗಳ ಲಾಭ ರಾಜ್ಯಕ್ಕೆ ದೊರೆಯುವಂತೆ ಮಾಡುವಲ್ಲಿ ನಿಮ್ಮ ಸಹಕಾರ ಬಹುಮುಖ್ಯ. ಕರ್ನಾಟಕದಲ್ಲಿರುವ ನಿಮ್ಮದೇ ಸಹೋದ್ಯೋಗಿಗಳ ಜತೆ ನಿರಂತರ ಸಂಪರ್ಕ, ಸಮಾಲೋಚನೆ ನಡೆಸಿ ಅಭಿವೃದ್ಧಿ ಯೋಜನೆಗಳನ್ನು ರೂಪಿಸಿ. ಬಾಕಿ ಇರುವ ಯೋಜನೆಗಳ ತ್ವರಿತ ಅನುಷ್ಠಾನಕ್ಕೆ ಕ್ರಮಕೈಗೊಳ್ಳಿ ಎಂದು ಹೇಳಿದರು. ನೀವು 35 ವರ್ಷ ಸೇವೆಯಲ್ಲಿರುತ್ತಿರಿ. ನಾವು ರಾಜಕಾರಣಿಗಳು ಐದು ವರ್ಷಕ್ಕೊಮ್ಮೆ ಹಗ್ಗಜಗ್ಗಾಟ ನಡೆಸುತ್ತೇವೆ. ಆದರೆ ಒಂದು ಸರಕಾರಕ್ಕೆ ಉತ್ತಮ ಹೆಸರು ತರುವ ಶಕ್ತಿ ನಿಮ್ಮ ಕೈಯಲ್ಲೇ ಇದೆ. ನಾನು ಅಧಿಕಾರಕ್ಕಾಗಿ ಅಧಿಕಾರ ಮಾಡುವವನಲ್ಲ. ಏನಾದರೂ ಸಾಧನೆ ಮಾಡಬೇಕೆಂಬ ಛಲಕ್ಕೆ ಅಧಿಕಾರ ಬಳಸುವವನು. ನಿಮ್ಮ ಸಹಕಾರ ಇದ್ದರೆ ಸಾಧನೆ ಅಸಾಧ್ಯವಲ್ಲ ಎಂದರು.

ವಾರ್ತಾ ಭಾರತಿ 10 Jun 2026 11:32 pm

ಆರ್.ಅಶೋಕ್ ʼಕಸ ಮಾಫಿಯಾʼ ಗ್ಯಾಂಗಿನ ಏಜೆಂಟ್ ಆಗಿ ಮಾತನಾಡುತ್ತಿದ್ದಾರೆ : ಸಿಎಂ ಡಿ.ಕೆ.ಶಿವಕುಮಾರ್ ತಿರುಗೇಟು

ಹೊಸದಿಲ್ಲಿ: “ವಿರೋಧ ಪಕ್ಷದ ನಾಯಕರಾದ ಆರ್. ಅಶೋಕ್ ಅವರು ಬೆಂಗಳೂರು ಕಸ ಮಾಫಿಯಾ ಗ್ಯಾಂಗಿನ ಏಜೆಂಟರಾಗಿ ಮಾತನಾಡುತ್ತಿದ್ದಾರೆ. ಈ ಮಾಫಿಯಾ ನಿಯಂತ್ರಿಸಬೇಕು ಎಂದು ನಾನು ಈ ಹಿಂದೆ ಅವರೊಂದಿಗೆ ಚರ್ಚೆ ಮಾಡಿದ್ದೆ. ಈಗ ಅಶೋಕ್ ಅವರು ಮಾಫಿಯಾದ ವಕ್ತಾರರಾಗಿರುವುದು ನನಗೆ ಆಶ್ಚರ್ಯವಾಗಿದೆ” ಎಂದು ಸಿಎಂ ಡಿ.ಕೆ. ಶಿವಕುಮಾರ್ ಅವರು ತಿರುಗೇಟು ನೀಡಿದರು. ದಿಲ್ಲಿಯಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಬುಧವಾರ ಪ್ರತಿಕ್ರಿಯೆ ನೀಡಿದರು. ಕಸದ ಟೆಂಡರ್ ನಲ್ಲಿ 10 ಸಾವಿರ ಕೋಟಿ ಕಿಕ್ ಬ್ಯಾಕ್ ಪಡೆಯಲಾಗಿದೆ ಎಂಬ ವಿರೋಧ ಪಕ್ಷದ ನಾಯಕರಾದ ಆರ್.ಅಶೋಕ್ ಅವರ ಆರೋಪದ ಬಗ್ಗೆ ಕೇಳಿದಾಗ, “ಅವರಿಗೆ ಏನೇನು ಕಸ ಬೇಕೋ ಲಾರಿಯಲ್ಲಿ ತುಂಬಿ ಕಳುಹಿಸಿಕೊಡೋಣ. ಈ ಹಿಂದೆ ಕುಮಾರಸ್ವಾಮಿ ಅವರು ಇದನ್ನೇ ಮಾತನಾಡಿದ್ದರು. ಬೆಂಗಳೂರಿನಲ್ಲಿ ದೊಡ್ಡ ಕಸದ ಲಾಭಿ ಇದೆ. ಅವರ ಕಾಲದಲ್ಲಿ ಯಾಕೆ ಕಸದ ಟೆಂಡರ್ ಮಾಡಲು ಆಗಲಿಲ್ಲ? ಈ ಹಿಂದೆ 14-15 ಜನರಿಗೆ ಕಸದಿಂದ ಇಂಧನ ಉತ್ಪಾದನೆಗೆ ಅವಕಾಶ ನೀಡಿದ್ದೆವು. ಒಬ್ಬರೂ ಯಶಸ್ವಿಯಾಗಿರಲಿಲ್ಲ. ನಾನು ಈ ನಿರ್ಧಾರ ಕೈಗೊಳ್ಳುವ ಮುನ್ನ ದೆಹಲಿ, ಹೈದರಾಬಾದ್, ಚೆನ್ನೈ ಗೆ ಹೋಗಿ ನೋಡಿದ್ದೇನೆ” ಎಂದು ತಿಳಿಸಿದರು. ಯಾವ ತನಿಖೆ ಬೇಕಾದರೂ ಮಾಡಿಸಲಿ “ಈಗ ಕಸ ವಿಲೇವಾರಿಗೆ 6 ಸಾವಿರ ಕೋಟಿ ಬಂಡವಾಳ ಹೂಡಿಕೆ ಮಾಡುತ್ತಾರೆ. ನಮ್ಮಲ್ಲಿ ಎಲ್ಲೂ ಜಾಗ ಲಭ್ಯವಾಗಲಿಲ್ಲ. ಹೀಗಾಗಿ ದೊಡ್ಡಬಳ್ಳಾಪುರದಲ್ಲಿ ಜಾಗ ಖರೀದಿ ಮಾಡಲು ತೀರ್ಮಾನಿಸಲಾಗಿದೆ. ಇನ್ನು ನೈಸ್ ಬಿಟ್ಟಿರುವ ಜಾಗ ಪಡೆದಿದ್ದೇವೆ. ಬೇರೆ ಕಡೆ ಯಾರಾದರೂ ಜಾಗ ಕೊಡಲು ಸಿದ್ಧರಿದ್ದರೆ ಮುಂದೆ ಬನ್ನಿ ಎಂಬ ಕರೆಯನ್ನು ನೀಡಿದ್ದೇನೆ. ಲಿಂಬಾವಳಿ ಅವರು ಕಸ ಸಾಗಿಸುವುದನ್ನೇ ನಿಲ್ಲಿಸಿದ್ದರು. ನಾವು ಶಾಸಕರ ಒತ್ತಡದ ಮೇರೆಗೆ 800 ಕೋಟಿ ಅನುದಾನ ನೀಡಿದ್ದೇವೆ. ಕಸದಿಂದ ಗ್ಯಾಸ್ ಹಾಗೂ ವಿದ್ಯುತ್ ಉತ್ಪಾದನೆ ಆಗಬೇಕು. ಅವರು ಯಾವ ತನಿಖೆ ಬೇಕಾದರೂ ಮಾಡಲಿ. ಎಲ್ಲಾದರೂ ವರದಿ ನೀಡಲಿ. 36 ಸಾವಿರ ಕೋಟಿ ಅಲ್ಲ, ಕೇವಲ 10 ಕೋಟಿ ಹಣ ದುರ್ಬಳಕೆಯಾದರೂ ತನಿಖೆ ಮಾಡಿಸಲಿ, ಎದುರಿಸಲು ನಾನು ಸಿದ್ಧ” ಎಂದರು. ನಾನು ಸಿಎಂ ಆಗಿರುವುದನ್ನು ಸಹಿಸಲಾಗದೇ ಅಸೂಯೆ ರಾಜಕೀಯ ರಾಜ್ಯಪಾಲರನ್ನು ಭೇಟಿಯಾಗಿದ್ದಾರೆ ಎಂದು ಕೇಳಿದಾಗ, “ನಾನು ಮುಖ್ಯಮಂತ್ರಿಯಾಗಿರುವುದನ್ನು ಅವರಿಂದ ತಡೆದುಕೊಳ್ಳಲು ಆಗುತ್ತಿಲ್ಲ. ಅವರ ಪಕ್ಷ, ಬೇರೆ ಪಕ್ಷಗಳಲ್ಲಿ ಏನಾಗುತ್ತಿದೆ ಎಂದು ನನಗೆ ಗೊತ್ತಿದೆ. ಅವರಿಗೆ ಏನು ಒತ್ತಡವಿದೆಯೋ ಮಾತನಾಡಿಸುತ್ತಿದ್ದಾರೆ. ಮಾತನಾಡಿಸಲಿ ಯಾವ ತೊಂದರೆಯೂ ಇಲ್ಲ. ಕಳೆದ ಹತ್ತು ಹನ್ನೆರಡು ವರ್ಷಗಳಿಂದ ಕಸದ ಟೆಂಡರ್ ಕರೆಯಲು ಬಿಟ್ಟಿಲ್ಲ ಎಂದು ಅವರ ಶಾಸಕರುಗಳೇ ನಮಗೆ ಹೇಳಿದ್ದಾರೆ. ಪ್ರತಿಯೊಂದಕ್ಕೂ ನ್ಯಾಯಾಲಯದ ಮೆಟ್ಟಿಲೇರಲಾಗುತ್ತಿತ್ತು. ಕೊನೆಗೆ ನ್ಯಾಯಾಲಯ ಸರ್ಕಾರದ ತೀರ್ಮಾನ ಸರಿಯಾಗಿದೆ ಎಂದು ತೀರ್ಮಾನ ಮಾಡಿದೆ. ಈಗ ಕೋರ್ಟ್ ತೀರ್ಮಾನ ಆಗಿದ್ದರೂ ನಾನು ಒಂದು ಸಮಿತಿ ರಚನೆ ಮಾಡಿಸಿ ತನಿಖೆ ಮಾಡಿಸಿದ್ದೆ. ಅವರು ಅಸೂಯೆ ರಾಜಕೀಯ ಮಾಡುತ್ತಿದ್ದಾರೆ. ನಮ್ಮ ಪಾರದರ್ಶಕತೆ, ಕಾರ್ಯವೈಖರಿ ಸಹಿಸಲು ಅವರಿಂದ ಸಾಧ್ಯವಾಗುತ್ತಿಲ್ಲ” ಎಂದು ಹರಿಹಾಯ್ದರು. ದೆಹಲಿಯಲ್ಲಿ ಕಾಂಗ್ರೆಸ್ ನಾಯಕರ ಭೇಟಿ ಬಗ್ಗೆ ಕೇಳಿದಾಗ, “ನಾಳೆ ನೀತಿ ಆಯೋಗದ ಸಭೆ ಇದೆ. ಎಲ್ಲಾ ರಾಜ್ಯಗಳ ಸಿಎಂ ಕರೆಯಲಾಗಿದ್ದು, ನಾನು ಮೊದಲ ಬಾರಿಗೆ ನೀತಿ ಆಯೋಗದ ಸಭೆಯಲ್ಲಿ ಭಾಗವಹಿಸಲು ದೆಹಲಿಗೆ ಬಂದಿರುವೆ. ಇಂದು ನಮ್ಮ ರಾಷ್ಟ್ರೀಯ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಅವರನ್ನು ಭೇಟಿ ಮಾಡಿದ್ದೇನೆ. ಅಲ್ಲದೇ ಯುವ ಕಾಂಗ್ರೆಸ್, ಮಹಿಳಾ ಕಾಂಗ್ರೆಸ್ ಹಾಗೂ ಎನ್ಎಸ್ ಯುಐ ಕಚೇರಿಗೆ ಭೇಟಿ ನೀಡಿದ್ದೆ. ಅವರೆಲ್ಲ ನಮ್ಮ ಪಕ್ಷದ ಆಧಾರಸ್ತಂಭಗಳು. ನಾನು ರಾಜಕೀಯವಾಗಿ ಬೆಳೆದಿದ್ದು ಎನ್ಎಸ್ ಯುಐ ಹಾಗೂ ಯುವ ಕಾಂಗ್ರೆಸ್ ಮೂಲಕ” ಎಂದು ತಿಳಿಸಿದರು. ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರ ಭೇಟಿ ವೇಳೆ ಮಾಡಲಾದ ಚರ್ಚೆ ಬಗ್ಗೆ ಕೇಳಿದಾಗ, “ನಾನು ಎಲ್ಲವನ್ನು ಹೇಳಲು ಆಗುವುದಿಲ್ಲ. ನಾನೊಬ್ಬ ಕಾಂಗ್ರೆಸ್ ಕಾರ್ಯಕರ್ತ, ರಾಜ್ಯದ ಮುಖ್ಯಮಂತ್ರಿ. ನಾನು ಏನು ಮಾತನಾಡಬೇಕೋ ಮಾತನಾಡಿದ್ದೇನೆ. ಅದನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಲು ಸಾಧ್ಯವಿಲ್ಲ” ಎಂದು ಹೇಳಿದರು. ನಮ್ಮ ಗ್ಯಾರಂಟಿ ಯೋಜನೆಗಳು ರಾಜ್ಯದ ಮತದಾರರಿಗೆ, ಅರ್ಹ ಫಲಾನುಭವಿಗಳಿಗೆ : ಗೃಹಲಕ್ಷ್ಮಿ ಯೋಜನೆ ಪರಿಷ್ಕರಣೆ ಬಗ್ಗೆ ಕೇಳಿದಾಗ, “ಮೃತಪಟ್ಟಿರುವ ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳ ಹೆಸರಿನಲ್ಲಿ ಬೇರೆಯವರು ಹಣ ಪಡೆಯುತ್ತಿದ್ದಾರೆ. ಬೇರೆಯವರ ದೂರವಾಣಿ ಸಂಖ್ಯೆ ನೀಡಿದ್ದಾರೆ. ಹೀಗಾಗಿ ನಾವು ಪರಿಶೀಲನೆ ಮಾಡುತ್ತಿದ್ದೇವೆ. ಯೋಜನೆ ಫಲಾನುಭವಿಗಳನ್ನು ಕಡಿತಗೊಳಿಸುವ ಯಾವ ಉದ್ದೇಶವೂ ಇಲ್ಲ. ಅರ್ಹರಿಗೆ ಯೋಜನೆ ತಲುಪಬೇಕು ಎಂಬುದು ನಮ್ಮ ಉದ್ದೇಶ” ಎಂದು ತಿಳಿಸಿದರು. “ಕೆಲವರು ಗೃಹಲಕ್ಷ್ಮಿ ಯೋಜನೆಯಲ್ಲಿ 200 ಯೂನಿಟ್ ವರೆಗೂ ಉಚಿತ ವಿದ್ಯುತ್ ಪಡೆಯುತ್ತಿದ್ದು, ಅಂಗಡಿಗೆ ಬಳಸುತ್ತಿದ್ದಾರೆ. ಒಬ್ಬರ ಹೆಸರಿನಲ್ಲಿ ಆರು ಮೀಟರ್ ಗಳಿವೆ. ವಾಸದ ಮನೆಗಳಿಗೆ ಈ ಯೋಜನೆ ಪಡೆದರೆ ಅಭ್ಯಂತರವಿಲ್ಲ. ಬಾಡಿಗೆ ಮನೆಯಲ್ಲಿ ಇರುವವರು ಒಂದು ಅಫಿಡವಿಟ್ ಸಲ್ಲಿಸಲಿ. ನಾವು ಈ ಯೋಜನೆ ಜಾರಿಗೆ ತಂದಿರುವುದು ಕರ್ನಾಟಕ ರಾಜ್ಯದ ಮತದಾರರಿಗೆ” ಎಂದು ಸ್ಪಷ್ಟಪಡಿಸಿದರು.

ವಾರ್ತಾ ಭಾರತಿ 10 Jun 2026 11:17 pm

Kalaburagi | ಸಂಚಾರ ನಿಯಮ ಉಲ್ಲಂಘನೆ ದಂಡದ ಬಾಕಿ ಮೊತ್ತ ಪಾವತಿಗೆ ಶೇ.50 ರಷ್ಟು ರಿಯಾಯಿತಿ

ಕಲಬುರಗಿ: ಪೊಲೀಸ್ ಇಲಾಖೆಯ ಸಂಚಾರಿ ಇ-ಚಲನ್ (E-Challan) ಹಾಗೂ ಸಾರಿಗೆ ಇಲಾಖೆಯಲ್ಲಿ ಬಾಕಿ ಇರುವ ಪ್ರಕರಣಗಳ ದಂಡದ ಮೊತ್ತಕ್ಕೆ ಶೇ.50 ರಷ್ಟು ರಿಯಾಯಿತಿ ನೀಡಲಾಗಿದ್ದು, ವಾಹನ ಚಾಲಕರು ಹಾಗೂ ವಾಹನ ಮಾಲೀಕರು ಈ ಸೌಲಭ್ಯದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮನವಿ ಮಾಡಿದೆ. ಈ ಕುರಿತು ಪ್ರಕಟಣೆ ನೀಡಿರುವ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರು, ಮೇ 2026ರ ಮೊದಲು ಪೊಲೀಸ್ ಇಲಾಖೆಯ ಇ-ಚಲನ್ ವ್ಯವಸ್ಥೆಯಲ್ಲಿ ದಾಖಲಾಗಿದ್ದು ಇನ್ನೂ ಬಾಕಿ ಇರುವ ಪ್ರಕರಣಗಳ ದಂಡದ ಮೊತ್ತದಲ್ಲಿ ಶೇ.50 ರಷ್ಟು ರಿಯಾಯಿತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ. ಅದೇ ರೀತಿ, ಸಾರಿಗೆ ಇಲಾಖೆಯಲ್ಲಿ 1991ರಿಂದ 2022ರ ಅವಧಿಯಲ್ಲಿ ದಾಖಲಾಗಿ ಇನ್ನೂ ಪಾವತಿಯಾಗದಿರುವ ಪ್ರಕರಣಗಳ ದಂಡದ ಮೊತ್ತಕ್ಕೂ ಶೇ.50 ರಷ್ಟು ರಿಯಾಯಿತಿ ಅನ್ವಯವಾಗಲಿದೆ ಎಂದು ತಿಳಿಸಿದ್ದಾರೆ. ಈ ವಿಶೇಷ ಸೌಲಭ್ಯದಡಿ ಬಾಕಿ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲು ಜೂನ್ 21, 2026ರಿಂದ ಜುಲೈ 10, 2026ರವರೆಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಅಂದರೆ ಒಟ್ಟು 20 ದಿನಗಳ ಕಾಲಾವಕಾಶ ನೀಡಲಾಗಿದೆ. ಆದ್ದರಿಂದ ವಾಹನ ಚಾಲಕರು, ವಾಹನ ಮಾಲೀಕರು ಹಾಗೂ ಸಾರ್ವಜನಿಕರು ಈ ಅವಕಾಶವನ್ನು ಬಳಸಿಕೊಂಡು ಬಾಕಿ ಇರುವ ದಂಡಗಳನ್ನು ರಿಯಾಯಿತಿ ದರದಲ್ಲಿ ಪಾವತಿಸಿ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳುವಂತೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮನವಿ ಮಾಡಿದೆ.

ವಾರ್ತಾ ಭಾರತಿ 10 Jun 2026 10:57 pm

ಅಫಜಲಪುರ | ರೈತನ ಮೇಲಿನ ಹಲ್ಲೆ ಪ್ರಕರಣಕ್ಕೆ ಎಫ್‌ಐಆರ್ ದಾಖಲಿಸಿ : ರೈತ ಸಂಘಗಳ ಆಗ್ರಹ

ಜೂ.15ರಂದು ರಸ್ತೆ ತಡೆ ಹೋರಾಟದ ಎಚ್ಚರಿಕೆ

ವಾರ್ತಾ ಭಾರತಿ 10 Jun 2026 10:53 pm

Kalaburagi | ರೋಟರಿ ಕ್ಲಬ್ಸ್ ವತಿಯಿಂದ ಫಲಾನುಭವಿಗಳಿಗೆ ಹೊಲಿಗೆ ಯಂತ್ರಗಳ ವಿತರಣೆ

ಕಲಬುರಗಿ : ಸಮಾಜದ ಆರ್ಥಿಕವಾಗಿ ಹಿಂದುಳಿದ ಮಹಿಳೆಯರ ಸ್ವಾವಲಂಬನೆಗೆ ಉತ್ತೇಜನ ನೀಡುವ ಉದ್ದೇಶದಿಂದ ರೋಟರಿ ಕ್ಲಬ್ಸ್ ಆಫ್ ಗುಲ್ಬರ್ಗಾ ನೇತೃತ್ವದಲ್ಲಿ ನಗರದ ರೋಟರಿ ಕ್ಲಬ್ ಪಾಲ್ ಹ್ಯಾರಿಸ್ ಆಡಿಟೋರಿಯಂನಲ್ಲಿ ಫಲಾನುಭವಿಗಳಿಗೆ ಹೊಲಿಗೆ ಯಂತ್ರಗಳ ವಿತರಣಾ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಎಸ್‌ಬಿಐ ಆರ್‌ಸೆಟಿ ಕಲಬುರಗಿಯ ನಿರ್ದೇಶಕರಾದ ನಂದಕಿಶೋರ್ ಮಳಖೇಡಕರ್ ಭಾಗವಹಿಸಿ ಫಲಾನುಭವಿಗಳಿಗೆ ಹೊಲಿಗೆ ಯಂತ್ರಗಳನ್ನು ವಿತರಿಸಿ, ಮಹಿಳೆಯರು ಸ್ವಯಂ ಉದ್ಯೋಗದ ಮೂಲಕ ಆರ್ಥಿಕವಾಗಿ ಸದೃಢರಾಗಬೇಕು ಎಂದು ಅವರು ಕರೆ ನೀಡಿದರು. ಗೌರವ ಅತಿಥಿಗಳಾಗಿ ಆರ್‌ಟಿಎನ್. ಮಣಿಲಾಲ್ ಶಾ (ಪಿಡಿಜಿ), ಆರ್‌ಟಿಎನ್. ಡಾ. ಗೌತಮ್ ಜಹಗೀರದಾರ (ಪಿಡಿಜಿ), ಆರ್‌ಟಿಎನ್. ಮಾಣಿಕ್ ಪವಾರ್ (ಪಿಡಿಜಿ) ಹಾಗೂ ಆರ್‌ಟಿಎನ್. ಸಿಎ ಮಾಣಿಕ್ ಮಂಡಕನಳ್ಳಿ (ಎಜಿ, ವಲಯ XI) ಉಪಸ್ಥಿತರಿದ್ದರು. ರೋಟರಿ ಕ್ಲಬ್ ಆಫ್ ಗುಲ್ಬರ್ಗಾ, ರೋಟರಿ ಕ್ಲಬ್ ಆಫ್ ಗುಲ್ಬರ್ಗಾ ನಾರ್ತ್, ರೋಟರಿ ಕ್ಲಬ್ ಆಫ್ ಗುಲ್ಬರ್ಗಾ ಮಿಡ್‌ಟೌನ್, ರೋಟರಿ ಕ್ಲಬ್ ಆಫ್ ಗುಲ್ಬರ್ಗಾ ಸನ್‌ಸಿಟಿ, ರೋಟರಿ ಕ್ಲಬ್ ಆಫ್ ಗುಲ್ಬರ್ಗಾ ಸೌತ್ ಹಾಗೂ ರೋಟರಿ ಕ್ಲಬ್ ಆಫ್ ದಿ ರೋಸ್‌ಗಳ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ವಿವಿಧ ರೋಟರಿ ಕ್ಲಬ್‌ಗಳ ಅಧ್ಯಕ್ಷರು, ಕಾರ್ಯದರ್ಶಿಗಳು, ಸದಸ್ಯರು ಹಾಗೂ ಫಲಾನುಭವಿಗಳು ಉಪಸ್ಥಿತರಿದ್ದು, ನಂತರ ಫೆಲೋಶಿಪ್ ಕಾರ್ಯಕ್ರಮ ನಡೆಯಿತು.

ವಾರ್ತಾ ಭಾರತಿ 10 Jun 2026 10:43 pm

Air India ದುರಂತಕ್ಕೆ ವರ್ಷ | ಗಡಿ ದಾಟಿದ ಮನುಷ್ಯತ್ವ; ಲಂಡನ್ ನಿಂದ ಪ್ರತಿದಿನ ಬರುತ್ತದೆ ಒಂದು ಕರೆ...

‘ಕೈಸೆ ಹೋ ಆಪ್? ಟೀಕ್ ಹೋ?’ ಎಂದು ವಿಚಾರಿಸುವ ಪಾಕಿಸ್ತಾನಿ ಸಹೋದ್ಯೋಗಿ; ಮಗನನ್ನು ಕಳೆದುಕೊಂಡ ಗುಜರಾತ್ ರೈತ ಕುಟುಂಬಕ್ಕೆ ಸಾಂತ್ವನದ ಆಸರೆ

ವಾರ್ತಾ ಭಾರತಿ 10 Jun 2026 10:40 pm

Kalaburagi | ಜೂ.21ರಂದು ವಿಶ್ವ ಯೋಗ ದಿನಾಚರಣೆ

ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಯೋಗ ಅತ್ಯಂತ ಪರಿಣಾಮಕಾರಿ : ರಾಯಪ್ಪ ಹುಣಸಗಿ

ವಾರ್ತಾ ಭಾರತಿ 10 Jun 2026 10:39 pm

ಸ್ಥಗಿತಗೊಂಡಿದ್ದ ಕಲಬುರಗಿ- ಬೆಂಗಳೂರಿಗೆ ವಿಮಾನ ಸೇವೆ ಪುನಾರಂಭ; ಹೀಗಿತ್ತು ಮೊದಲ ದಿನ!

ಹಲವು ತಿಂಗಳುಗಳಿಂದ ಸ್ಥಗಿತಗೊಂಡಿದ್ದ ಕಲಬುರಗಿ–ಬೆಂಗಳೂರು ನಡುವಿನ 'ಸ್ಟಾರ್ ಏರ್' ವಿಮಾನ ಸೇವೆಗೆ ಬುಧವಾರ ಅಧಿಕೃತ ಚಾಲನೆ ನೀಡಲಾಗಿದೆ. ಕಲಬುರಗಿಯಲ್ಲಿ ಶಾಸಕರಾದ ಕನೀಜ್ ಫಾತಿಮಾ ಮತ್ತು ಎಂ.ವೈ.ಪಾಟೀಲ ಚಾಲನೆ ನೀಡಿದರೆ, ಬೆಂಗಳೂರಿನಲ್ಲಿ ಕೆಕೆಆರ್‌ಡಿಬಿ ಅಧ್ಯಕ್ಷ ಡಾ.ಅಜಯ್‌ಸಿಂಗ್ ಚಾಲನೆ ನೀಡಿದರು. ಕಲ್ಯಾಣ ಕರ್ನಾಟಕ ಭಾಗದ ವಿಮಾನ ಸೇವೆಗಾಗಿ ಕೆಕೆಆರ್‌ಡಿಬಿ ಶೇ.80 ರಷ್ಟು (₹22.76 ಕೋಟಿ) ಆರ್ಥಿಕ ನೆರವು ನೀಡಿದೆ. ಮೊದಲ ದಿನವೇ ಪ್ರಯಾಣಿಕರಿಂದ ಭರ್ಜರಿ ರೆಸ್ಪಾನ್ಸ್ ಸಿಕ್ಕಿದ್ದು, ಪರಿಸ್ಥಿತಿ ಸುಧಾರಿಸಿದರೆ ಮುಂದೆ ಕಲಬುರಗಿ–ಮುಂಬೈ ನಡುವೆಯೂ ವಿಮಾನ ಸೇವೆ ಆರಂಭಿಸಲು ಸಂಸ್ಥೆ ಯೋಜಿಸಿದೆ.

ವಿಜಯ ಕರ್ನಾಟಕ 10 Jun 2026 10:31 pm

Kalaburagi | ಬಿಸಿಎಂ ಮಹಿಳಾ ಹಾಸ್ಟೆಲ್‌ನಲ್ಲಿ ಮದ್ಯದ ಪಾರ್ಟಿ : ವೀಡಿಯೋ ವೈರಲ್ !

ಹಳೆಯ ವಿಡಿಯೋ ಎಂದು ಇಲಾಖೆಯಿಂದ ಸ್ಪಷ್ಟನೆ

ವಾರ್ತಾ ಭಾರತಿ 10 Jun 2026 10:30 pm

ಕೆನಡಾದಲ್ಲಿ ಭಾರತೀಯನ ಹತ್ಯೆ; ಶಂಕಿತ ವಶಕ್ಕೆ

ಒಂಟಾರಿಯೊ, ಜೂ.10: ಕೆನಡಾದ ಒಂಟಾರಿಯೊ ಪ್ರಾಂತೀಯ ಪೊಲೀಸ್ ಇಲಾಖೆಯ ಅಧಿಕಾರಿ, ಭಾರತೀಯ ಮೂಲದ ತರುಣ್ ಬಾಲಿ ಕರ್ತವ್ಯ ನಿರ್ವಹಣೆಯ ಸಂದರ್ಭ ಮೃತಪಟ್ಟಿದ್ದು, ಈ ಘಟನೆಗೆ ಸಂಬಂಧಿಸಿ ಓರ್ವ ಶಂಕಿತನನ್ನು ವಶಕ್ಕೆ ಪಡೆದಿರುವುದಾಗಿ ಸಿಟಿವಿ ನ್ಯೂಸ್ ಬುಧವಾರ ವರದಿ ಮಾಡಿದೆ. ಪ್ರಕರಣವೊಂದರ ವಿಚಾರಣೆಗೆಂದು ಮಂಗಳವಾರ ಒಂಟಾರಿಯೋ ಪ್ರಾಂತದ ಹಸ್ರ್ಟ್ ನಗರಕ್ಕೆ ತೆರಳಿದ್ದ ಬಾಲಿ ಗಂಭೀರ ಗಾಯಗೊಂಡ ಸ್ಥಿತಿಯಲ್ಲಿ ಕಂಡುಬಂದಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಘಟನೆಯ ಬಗ್ಗೆ ತನಿಖೆ ನಡೆಯುತ್ತಿದ್ದು ಪೊಲೀಸರು ಸಾರ್ವಜನಿಕರಿಂದ ಮಾಹಿತಿಗಾಗಿ ಮನವಿ ಮಾಡಿದ್ದಾರೆ.

ವಾರ್ತಾ ಭಾರತಿ 10 Jun 2026 10:22 pm

Manipur | 6 ನಾಗಾ ಒತ್ತೆಯಾಳುಗಳು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

ಇಂಫಾಲ: ಮೇ 13ರಂದು ಸಶಸ್ತ್ರ ಕುಕಿ ಗುಂಪುಗಳಿಂದ ಅಪಹರಿಸಲ್ಪಟ್ಟಿದ್ದಾರೆ ಎನ್ನಲಾದ ನಾಗಾ ಸಮುದಾಯದ ಆರು ಜನರ ಮೃತದೇಹ ಪತ್ತೆಯಾಗಿವೆ ಎಂದು ಮಣಿಪುರ ಪೊಲೀಸರು ಬುಧವಾರ ತಿಳಿಸಿದ್ದಾರೆ. ಅಪಹರಣಕ್ಕೊಳಗಾಗಿದ್ದ 14 ಕುಕಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲಾಗಿದೆ ಎದು ಯುನೈಟೆಡ್ ನಾಗಾ ಕೌನ್ಸಿಲ್ ದೃಢಪಡಿಸಿದ ಒಂದು ದಿನದ ನಂತರ ಈ ಘಟನೆ ನಡೆದಿದೆ. ಮಣಿಪುರ ಪೊಲೀಸ್, ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಮತ್ತು ಅಸ್ಸಾಂ ರೈಫಲ್ಸ್‌ನ ಸುಮಾರು 450 ಸಿಬ್ಬಂದಿ ಶ್ವಾನ ದಳ ಹಾಗೂ ವಿಧಿ ವಿಜ್ಞಾನ ತಜ್ಞರ ತಂಡಗಳ ನೆರವಿನಿಂದ ನಡೆಸಿದ ಸುಮಾರು 24 ಗಂಟೆಗಳ ಶೋಧ ಕಾರ್ಯಾಚರಣೆ ಬಳಿಕ ಬುಧವಾರ ಅಪರಾಹ್ನ 6 ನಾಗಾ ಪುರುಷರ ಮೃತದೇಹ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಾರ್ತಾ ಭಾರತಿ 10 Jun 2026 10:20 pm

ಅಫ್ಘಾನಿಸ್ತಾನ | ಪಾಕಿಸ್ತಾನದ ವೈಮಾನಿಕ ದಾಳಿಯಲ್ಲಿ 19 ಮಂದಿ ಮೃತ್ಯು; 14 ಜನರಿಗೆ ಗಾಯ

ಕಾಬೂಲ್, ಜೂ.10: ಅಫ್ಘಾನಿಸ್ತಾನವನ್ನು ಗುರಿಯಾಗಿಸಿ ಮಂಗಳವಾರ ತಡರಾತ್ರಿ ಪಾಕಿಸ್ತಾನ ನಡೆಸಿದ ವೈಮಾನಿಕ ದಾಳಿಯಲ್ಲಿ 11 ಮಕ್ಕಳು ಸೇರಿದಂತೆ ಕನಿಷ್ಠ 19 ಮಂದಿ ಮೃತಪಟ್ಟಿದ್ದು, ಇತರ 14 ಮಂದಿ ಗಾಯಗೊಂಡಿರುವುದಾಗಿ ತಾಲಿಬಾನ್ ಮುಖ್ಯ ವಕ್ತಾರ ಝಬಿಹುಲ್ಲ ಮುಜಾಹಿದ್ ಹೇಳಿದ್ದಾರೆ. ಗಡಿಪ್ರದೇಶದ ಬಳಿಯ ಖೋಸ್ಟ್, ಕುನಾರ್ ಮತ್ತು ಪಕ್ತಿಕಾ ಪ್ರಾಂತಗಳನ್ನು ಗುರಿಯಾಗಿಸಿ ವೈಮಾನಿಕ ದಾಳಿ ನಡೆದಿದ್ದು 11 ಮಕ್ಕಳು, ಓರ್ವ ಮಹಿಳೆ ಸೇರಿದಂತೆ 19 ಮಂದಿ ಮೃತಪಟ್ಟಿದ್ದಾರೆ. ಖೋಸ್ಟ್ ಪ್ರಾಂತದ ಸ್ಪೆರಾ ಜಿಲ್ಲೆಯಲ್ಲಿ ಮನೆಯೊಂದರ ಮೇಲೆ ನಡೆದ ದಾಳಿಯಲ್ಲಿ 9 ಮಂದಿ ಮೃತಪಟ್ಟಿದ್ದು ಇತರ 10 ಮಂದಿ ಗಾಯಗೊಂಡಿದ್ದರೆ. ಪಕ್ತಿಕಾ ಪ್ರಾಂತದ ಬರ್ಮಲ್ ಜಿಲ್ಲೆಯಲ್ಲಿ ಮನೆಯನ್ನು ಗುರಿಯಾಗಿಸಿ ನಡೆದ ಮತ್ತೊಂದು ದಾಳಿಯಲ್ಲಿ ಮೂವರು, ಪ್ರತ್ಯೇಕ ದಾಳಿಯಲ್ಲಿ 7 ಮಂದಿ ಮೃತಪಟ್ಟಿರುವುದಾಗಿ ಮೂಲಗಳನ್ನು ಉಲ್ಲೇಖಿಸಿ ಎಎಫ್‍ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.

ವಾರ್ತಾ ಭಾರತಿ 10 Jun 2026 10:19 pm

ಉಪ್ಪಿನಂಗಡಿ: ರಸ್ತೆ ವಿಭಜಕಕ್ಕೆ ಢಿಕ್ಕಿ ಹೊಡೆದ ಕಾರು; ಚಾಲಕ ಮೃತ್ಯು, ಮೂವರಿಗೆ ಗಾಯ

ಉಪ್ಪಿನಂಗಡಿ:  ಮಾಣಿ ಸಮೀಪ ಗಡಿಯಾರ ಎಂಬಲ್ಲಿ ಕಾರೊಂದು ರಸ್ತೆ ವಿಭಜಕಕ್ಕೆ ಢಿಕ್ಕಿ ಹೊಡೆದು ಚಾಲಕ ಮೃತಪಟ್ಟು, ಇತರ 3 ಮಂದಿ ಗಂಭೀರ ಸ್ವರೂಪದ ಗಾಯಗೊಂಡ ಘಟನೆ ಬುಧವಾರ ನಡೆದಿದೆ. ಮೃತ ವ್ಯಕ್ತಿಯನ್ನು ಸಕಲೇಶಪುರ ನಿವಾಸಿ ಲಕ್ಷ್ಮೀಕಾಂತ್ (21) ಎಂದು ಗುರುತಿಸಲಾಗಿದ್ದು, ಕಾರಿನಲ್ಲಿದ್ದ ಸಕಲೇಶಪುರ ಪರಿಸರದ ರಂಜಿತ್, ದರ್ಶನ್, ಶೋಭಾ ಎಂಬವರು ಗಂಭೀರ ಸ್ವರೂಪದ ಗಾಯಗೊಂಡಿದ್ದು, ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರು ಸಕಲೇಶಪುರ ಕಡೆಗೆ ಹೋಗುವಾಗ ತಾಂತ್ರಿಕ ಸಮಸ್ಯೆಯಿಂದ ಚಾಲಕನ ನಿಯಂತ್ರಣ ಕಳೆದುಕೊಂಡ ಕಾರು ಡಿವೈಡರ್‍ಗೆ ಡಿಕ್ಕಿ ಹೊಡೆದು ಈ ಅವಘಢ ಸಂಭವಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಪುತ್ತೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ವಾರ್ತಾ ಭಾರತಿ 10 Jun 2026 10:17 pm

ಜೋಕಟ್ಟೆ: ಯುವಕನ ಮೃತದೇಹ ಪತ್ತೆ

ಪಣಂಬೂರು: ಇಲ್ಲಿನ ಜೋಕಟ್ಟೆಯಲ್ಲಿ ಯುವಕನೋರ್ವನ ಮೃತದೇಹ ಬುಧವಾರ ಬೆಳಗ್ಗೆ ಪತ್ತೆಯಾಗಿದೆ. ಮೃತ ಯುವಕ ಉತ್ತರ ಭಾರತ ಮೂಲದವನೆಂದು ಅಂದಾಜಿಸಲಾಗಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭಿಸಬೇಕಿದೆ. ಎಂಆರ್ ಪಿಎಲ್ ನಿಂದ ಸುರತ್ಕಲ್ ತೆರಳುವ ರಸ್ತೆಯಲ್ಲಿನ ಜೋಕಟ್ಟೆ ತೆರಳುವ ಸಣ್ಣ ಮೇಲ್ಸೇತುವೆ ಬಳಿಯ ಚರಂಡಿಯಲ್ಲಿ ಮೃತದೇಹ ಪತ್ತೆಯಾಗಿದೆ. ಮೃತದೇಹದಿಂದ ಒಂದೂವರೆ ಮೀಟರ್ ದೂರದಲ್ಲಿರುವ ಮನೆಯೊಂದರ ಗೇಟ್ ಬಳಿ ರಕ್ತದ ಕಲೆಗಳು ಪತ್ತೆಯಾಗಿದ್ದು, ಸ್ಥಳೀಯರು ಕೊಲೆ ಶಂಕೆ ವ್ಯಕ್ತಪಡಿಸಿದ್ದಾರೆ. ಪಣಂಬೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ವಾರ್ತಾ ಭಾರತಿ 10 Jun 2026 10:11 pm

ಕಲಬುರಗಿ–ಬೆಂಗಳೂರು ವಿಮಾನ ಸೇವೆ ಪುನರಾರಂಭ: ಕೆಕೆಆರ್‌ಡಿಬಿಯಿಂದ ಮಹತ್ವದ ಆರ್ಥಿಕ ನೆರವು

ಬೆಂಗಳೂರು/ಕಲಬುರಗಿ : ಕಲಬುರಗಿ, ಬೀದರ್ ಹಾಗೂ ರಾಜ್ಯ ರಾಜಧಾನಿ ಬೆಂಗಳೂರಿನ ನಡುವಿನ ವಿಮಾನ ಸೇವೆಗಳು ಅಧಿಕೃತವಾಗಿ ಪುನರಾರಂಭಗೊಂಡಿದ್ದು, ಈ ಸೇವೆ ಮರು ಆರಂಭಗೊಳ್ಳಲು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ನೀಡಿರುವ ಆರ್ಥಿಕ ನೆರವು ಪ್ರಮುಖ ಪಾತ್ರ ವಹಿಸಿದೆ ಎಂದು ಕೆಕೆಆರ್‌ಡಿಬಿ ಅಧ್ಯಕ್ಷ ಹಾಗೂ ಶಾಸಕ ಡಾ.ಅಜಯ್ ಸಿಂಗ್ ತಿಳಿಸಿದ್ದಾರೆ. ಬುಧವಾರ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ಸ್ಟಾರ್ ಏರ್‌ನ ಮೊದಲ ವಿಮಾನಕ್ಕೆ ಕೇಕ್ ಕತ್ತರಿಸುವ ಮೂಲಕ ಶುಭ ಹಾರೈಸಿದ ಅವರು, ಈ ಭಾಗದ ಜನರ ಬಹುಕಾಲದ ಬೇಡಿಕೆ ಈಡೇರಿದ ಸಂತಸ ವ್ಯಕ್ತಪಡಿಸಿದರು. ಕೈಗಾರಿಕೋದ್ಯಮಿಗಳು, ವ್ಯಾಪಾರಸ್ಥರು ಹಾಗೂ ಸಾರ್ವಜನಿಕರ ನಿರಂತರ ಒತ್ತಾಯದ ಹಿನ್ನೆಲೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಕಲ್ಯಾಣ ಕರ್ನಾಟಕ ಭಾಗದ ಆರ್ಥಿಕ, ಕೈಗಾರಿಕಾ ಮತ್ತು ಸಾಮಾಜಿಕ ಅಭಿವೃದ್ಧಿಗೆ ವಿಮಾನ ಸಂಪರ್ಕ ಮಹತ್ತರ ಕೊಡುಗೆ ನೀಡಲಿದ್ದು, ಹೂಡಿಕೆ ಆಕರ್ಷಣೆಗೆ ಇದು ಪೂರಕವಾಗಲಿದೆ ಎಂದು ಅವರು ಹೇಳಿದರು. 2022ರ ನವೆಂಬರ್‌ನಲ್ಲಿ ಆರಂಭಗೊಂಡಿದ್ದ ಈ ವಿಮಾನ ಸೇವೆ ಕೆಲವು ತಾಂತ್ರಿಕ ಕಾರಣಗಳಿಂದ ಸ್ಥಗಿತಗೊಂಡಿತ್ತು. ಬಳಿಕ ಸಚಿವರಾದ ಎಂ.ಬಿ. ಪಾಟೀಲ್, ಪ್ರಿಯಾಂಕ್ ಖರ್ಗೆ, ಈಶ್ವರ್ ಖಂಡ್ರೆ, ರಹೀಮ್ ಖಾನ್ ಹಾಗೂ ಡಾ.ಶರಣಪ್ರಕಾಶ್ ಪಾಟೀಲ್ ಅವರೊಂದಿಗೆ ಚರ್ಚಿಸಿ ಸೇವೆಯನ್ನು ಪುನರಾರಂಭಿಸಲು ಗಂಭೀರ ನಿರ್ಧಾರ ಕೈಗೊಳ್ಳಲಾಯಿತು ಎಂದು ತಿಳಿಸಿದರು. 28.44 ಕೋಟಿ ರೂ. ಅನುದಾನ : ಕಲಬುರಗಿ ಹಾಗೂ ಬೀದರ್ ವಿಮಾನ ಸೇವೆಗಳ ಸುಗಮ ಕಾರ್ಯಾಚರಣೆಗಾಗಿ ತಲಾ 14.22 ಕೋಟಿ ರೂ. ಅನುದಾನದ ಅಗತ್ಯವಿದ್ದು, ಒಟ್ಟು ವೆಚ್ಚದ ಶೇಕಡ 80ರಷ್ಟು ಮೊತ್ತವನ್ನು ಕೆಕೆಆರ್‌ಡಿಬಿ ಭರಿಸುತ್ತಿದೆ. ಉಳಿದ ಶೇ.20ರಷ್ಟು ಅನುದಾನವನ್ನು ರಾಜ್ಯ ಸರ್ಕಾರದ ಬೃಹತ್ ಕೈಗಾರಿಕಾ ಇಲಾಖೆಯಿಂದ ಒದಗಿಸಲಾಗಿದೆ. ಪ್ರತಿ ವರ್ಷ ವಿಮಾನಯಾನ ಸಂಸ್ಥೆಗಳು ಸೇವೆ ಮುಂದುವರಿಸಲು ಅಗತ್ಯವಿರುವ ಆರ್ಥಿಕ ಬೆಂಬಲದ ವ್ಯವಸ್ಥೆಯನ್ನು ಸರ್ಕಾರ ಮತ್ತು ಮಂಡಳಿ ಒಟ್ಟಾಗಿ ನಿರ್ವಹಿಸುತ್ತಿದ್ದು, ಈ ಕ್ರಮದಿಂದ ವಿಮಾನ ಸೇವೆ ನಿರಂತರವಾಗಿ ಲಭ್ಯವಾಗುವ ವಿಶ್ವಾಸ ವ್ಯಕ್ತಪಡಿಸಲಾಗಿದೆ. ಕಲಬುರಗಿ–ಬೆಂಗಳೂರು ವಿಮಾನ ಸಂಪರ್ಕದಿಂದ ಕೇವಲ ಕಲಬುರಗಿ ಜಿಲ್ಲೆಗೆ ಮಾತ್ರವಲ್ಲದೆ, ಕಲ್ಯಾಣ ಕರ್ನಾಟಕದ ಆರು ಜಿಲ್ಲೆಗಳ ಜನತೆಗೆ ಅನುಕೂಲವಾಗಲಿದೆ. ಜೊತೆಗೆ ನೆರೆಯ ಮಹಾರಾಷ್ಟ್ರ ಹಾಗೂ ತೆಲಂಗಾಣ ರಾಜ್ಯಗಳ ಪ್ರಯಾಣಿಕರೂ ಇದರ ಪ್ರಯೋಜನ ಪಡೆಯಲಿದ್ದಾರೆ. ಪ್ರಾದೇಶಿಕ ಅಭಿವೃದ್ಧಿಗೆ ಮತ್ತಷ್ಟು ವೇಗ ನೀಡುವ ಉದ್ದೇಶದಿಂದ ಕೆಕೆಆರ್‌ಡಿಬಿ ವತಿಯಿಂದ ‘ಪಾಲಿಸಿ ಪ್ಲಾನಿಂಗ್ ಡೇಟಾ ಅನಾಲಿಟಿಕ್ಸ್ ವಿಂಗ್’ (Policy Planning Data Analytics Wing) ಆರಂಭಿಸಲಾಗುತ್ತಿದೆ ಎಂದು ಡಾ.ಅಜಯ್ ಸಿಂಗ್ ತಿಳಿಸಿದರು. ಪ್ರಖ್ಯಾತ ಅರ್ಥಶಾಸ್ತ್ರಜ್ಞ ಪ್ರೊ.ಗೋವಿಂದ್ ರಾವ್ ಅವರ ಸಲಹೆಯಂತೆ ಆರಂಭವಾಗುತ್ತಿರುವ ಈ ಘಟಕವು ಪ್ರವಾಸೋದ್ಯಮ, ಕೈಗಾರಿಕೆ, ಕೃಷಿ ಹಾಗೂ ಜವಳಿ ಕ್ಷೇತ್ರಗಳಿಗೆ ಸಂಬಂಧಿಸಿದ ನೀತಿಗಳ ರೂಪಿಕರಣ ಮತ್ತು ಅನುಷ್ಠಾನಕ್ಕೆ ನೆರವಾಗಲಿದೆ ಎಂದು ಹೇಳಿದರು. ಬೆಂಗಳೂರು ದೇಶದ ಸಿಲಿಕಾನ್ ವ್ಯಾಲಿ. ಕಲ್ಯಾಣ ಕರ್ನಾಟಕ ಭಾಗವು ಹಿಂದುಳಿದ ಪ್ರದೇಶ ಎಂಬ ಹಣೆಪಟ್ಟಿಯಿಂದ ಹೊರಬರಬೇಕಾದರೆ ಹೆಚ್ಚಿನ ಕೈಗಾರಿಕೆಗಳು ಬರಬೇಕು. ಅದಕ್ಕಾಗಿ ವೇಗವಾದ ಮತ್ತು ವಿಶ್ವಾಸಾರ್ಹ ಸಂಪರ್ಕ ವ್ಯವಸ್ಥೆ ಅಗತ್ಯ. ಕಲಬುರಗಿ–ಬೆಂಗಳೂರು ವಿಮಾನ ಸೇವೆ ಈ ದಿಸೆಯಲ್ಲಿ ಮಹತ್ವದ ಹೆಜ್ಜೆಯಾಗಿದೆ ಎಂದು ಡಾ.ಅಜಯ್ ಸಿಂಗ್ ಹೇಳಿದರು. ಈ ವಿಮಾನ ಸೇವೆ ಪುನರಾರಂಭಕ್ಕೆ ಸಹಕರಿಸಿದ Star Air ಹಾಗೂ ರಾಜ್ಯ ಸರ್ಕಾರಕ್ಕೆ ಅವರು ಅಭಿನಂದನೆ ಸಲ್ಲಿಸಿದರು. ವಿಮಾನ ಸಂಪರ್ಕದ ಮೂಲಕ ಹೂಡಿಕೆ, ಉದ್ಯೋಗ ಮತ್ತು ಪ್ರವಾಸೋದ್ಯಮ ಕ್ಷೇತ್ರಗಳಲ್ಲಿ ಹೊಸ ಅವಕಾಶಗಳು ಸೃಷ್ಟಿಯಾಗಿ, ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಬಲ ಸಿಗಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

ವಾರ್ತಾ ಭಾರತಿ 10 Jun 2026 10:08 pm

ಕಟ್ಟೆಚ್ಚರ: 12 ಅಣ್ವಸ್ತ್ರ ಸಿಡಿತಲೆಗಳನ್ನು ಸನ್ನದ್ಧ ಸ್ಥಿತಿಯಲ್ಲಿಟ್ಟ ಭಾರತ!

ಬಾಹ್ಯಾಕಾಶ, ರಕ್ಷಣಾ ಮತ್ತು ಜಾಗತಿಕ ರಾಜಕೀಯ ವಿಶ್ಲೇಷಕರಾದ ಗಿರೀಶ್ ಲಿಂಗಣ್ಣ ಅವರ ವಿಶೇಷ ಬರಹ ಇಲ್ಲಿದೆ. ತನ್ನ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ, ಭಾರತ ತನ್ನ ಕೆಲವು ಪರಮಾಣು ಶಸ್ತ್ರಾಸ್ತ್ರಗಳನ್ನು 'ನಿಯೋಜಿತ' ಸ್ಥಿತಿಯಲ್ಲಿ ಇರಿಸಿದೆ. ಜಾಗತಿಕ ಆಯುಧಗಳು, ಯುದ್ಧಗಳು, ಮತ್ತು ಜಗತ್ತಿನಾದ್ಯಂತ ಆಯುಧ ನಿಯಂತ್ರಣದ ಕುರಿತು ಗಮನ ಹರಿಸುವ ಸಿಪ್ರಿ ಸಂಸ್ಥೆಯಿಂದ ಈ ಸುದ್ದಿ ಬಂದಿದೆ. ಸೋಮವಾರ

ಒನ್ ಇ೦ಡಿಯ 10 Jun 2026 10:05 pm

ಮೂಡುಬಿದಿರೆ: ಇನ್ನರ್ ವೀಲ್ ಕ್ಲಬ್ ಮಾಜಿ ಅಧ್ಯಕ್ಷೆ ರಸಿಕಾ ಕಂಬಳಿ ನಿಧನ

ಮೂಡುಬಿದಿರೆ: ಇಲ್ಲಿನ ಇನ್ನರ್ ವೀಲ್ ಕ್ಲಬ್ ಮಾಜಿ ಅಧ್ಯಕ್ಷೆ ಪೆರಿಂಜೆಗುತ್ತು ರಸಿಕಾ ಕಂಬಳಿ( 67) ಅನಾರೋಗ್ಯದಿಂದ ಬುಧವಾರ ನಿಧನ ಹೊಂದಿದರು. ಜೈನ್ ಮಿಲನ್ ವಲಯ ನಿರ್ದೇಶಕ ಜಯರಾಜ್ ಕಂಬಳಿ ಅವರ ಪತ್ನಿಯಾಗಿರುವ ಅವರು ಪತಿ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ. ಇನ್ನರ್ ವ್ಹೀಲ್ ಕ್ಲಬ್ ನ ಸ್ಥಾಪಕ ಸದಸ್ಯೆಯಾಗಿದ್ದ ಅವರು ಜೈನ್ ಮಿಲನ್ ನ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ.

ವಾರ್ತಾ ಭಾರತಿ 10 Jun 2026 10:05 pm

Uttar Pradesh | ಜನನಿಬಿಡ ಮಾರುಕಟ್ಟೆಯಲ್ಲಿ ತಂದೆ- ಮಗನ ಗುಂಡಿಕ್ಕಿ ಹತ್ಯೆ

ಲಕ್ನೋ, ಜೂ. 10: ಉತ್ತರಪ್ರದೇಶದ ಬಾಗಪತ್ ಜಿಲ್ಲೆಯ ಜನನಿಬಿಡ ಮಾರುಕಟ್ಟೆಯಲ್ಲಿ ವ್ಯಾಪಾರಿ ಮತ್ತು ಅವರ ಪುತ್ರನನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆಗೈದ ಘಟನೆ ನಡೆದಿದೆ. ಈ ಘಟನೆಯ ನಂತರ ಉಂಟಾದ ಗೊಂದಲದ ನಡುವೆ ದಾಳಿಕೋರಲ್ಲಿ ಓರ್ವನನ್ನು ಗುಂಡಿಕ್ಕೆ ಹತ್ಯೆಗೈಯಲಾಗಿದೆ. ಮೃತರನ್ನು ಸೋಹನ್‌ಲಾಲ್ ಅಗ್ರವಾಲ್ ಮತ್ತು ಅವರ ಪುತ್ರ ವಿಕಾಸ್ ಅಗ್ರವಾಲ್ ಎಂದು ಗುರುತಿಸಲಾಗಿದೆ. ಮಂಗಳವಾರ ಸಂಜೆ ಸುಮಾರು 5:30ಕ್ಕೆ ಅವರ ಅಂಗಡಿಗೆ ಬಂದ ಮುಸುಕು ಹಾಕಿದ್ದ ಬಂದೂಕುಧಾರಿಗಳು ಅವರನ್ನು ಗುರಿಯಾಗಿಸಿ ದಾಳಿ ನಡೆಸಿದ್ದಾರೆ. ಪೊಲೀಸರ ಪ್ರಕಾರ, ದಾಳಿಕೋರರು ತಂದೆ ಹಾಗೂ ಅವರ ಮಗನ ಮೇಲೆ ಅತ್ಯಂತ ಹತ್ತಿರದಿಂದ ಹಲವು ಸುತ್ತು ಗುಂಡು ಹಾರಿಸಿದ್ದಾರೆ. ಗ್ರಾಹಕರು ಮತ್ತು ವ್ಯಾಪಾರಿಗಳ ಸಮ್ಮಖದಲ್ಲೇ ಈ ದಾಳಿ ನಡೆದಿದ್ದು, ಅನಂತರ ದಾಳಿಕೋರರು ಓಡಿ ಹೋಗಿದ್ದಾರೆ. ಸಮೀಪದ ಅಂಗಡಿಯಲ್ಲಿದ್ದ ಸೋಹನ್‌ಲಾಲ್ ಅವರ ಸಹೋದರ ದೀಪಕ್ ಮತ್ತು ಇತರ ಸ್ಥಳೀಯರು ಕೂಡಲೇ ಹೊರಗೆ ಧಾವಿಸಿದ್ದಾರೆ. ಕೆಲವರು ಗಾಯಗೊಂಡ ಸಂತ್ರಸ್ತರಿಗೆ ನೆರವು ನೀಡಿದರೆ, ಇನ್ನು ಕೆಲವರು ದಾಳಿಕೋರರನ್ನು ಬೆನ್ನಟ್ಟಿದ್ದಾರೆ. ಕೋಪೋದ್ರಿಕ್ತರಾದ ಸ್ಥಳೀಯರು ದಾಳಿಕೋರರಲ್ಲಿ ಓರ್ವನಾದ ವರುಣ್ ಲೋಹಾರಿಯನ್ನು ಹಿಡಿದು ಥಳಿಸಿದ್ದಾರೆ. ಆನಂತರ ಆತನನ್ನು ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ, ಆತ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ವರುಣ್ ಲೋಹಾರಿಗೆ ಗುಂಡು ಹಾರಿಸಿದವರು ಯಾರು ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆತ ಪೆಟ್ರೋಲ್ ಪಂಪ್ ಬಳಿ ಕುಸಿದು ಬಿದ್ದ ನಂತರದ ದೃಶ್ಯಗಳು ಮೊಬೈಲ್ ಫೋನ್ ವೀಡಿಯೊದಲ್ಲಿ ಸೆರೆಯಾಗಿದ್ದು, ಅದು ವೈರಲ್ ಆಗಿದೆ. ಆ ದೃಶ್ಯಾವಳಿಯಲ್ಲಿ ಎರಡು ಬಾರಿ ಗುಂಡು ಹಾರಿಸಿದ ಸದ್ದು ಕೇಳಿಸುತ್ತಿದ್ದು, ಜನಸಮೂಹದಲ್ಲಿದ್ದ ಯಾರಾದರೂ ಆರೋಪಿಯ ಮೇಲೆ ಗುಂಡು ಹಾರಿಸಿದ್ದಾರೆಯೇ ಎಂದು ತನಿಖಾಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ದಶಕಕ್ಕೂ ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಈ ಕೊಲೆಗಳು ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಪರಾರಿಯಾದ ಇಬ್ಬರು ಆರೋಪಿಗಳನ್ನು ಪತ್ತೆ ಹಚ್ಚಲು ಪೊಲೀಸರು ಹತ್ತು ತಂಡಗಳನ್ನು ರಚಿಸಿದ್ದಾರೆ.

ವಾರ್ತಾ ಭಾರತಿ 10 Jun 2026 9:56 pm

ಗುರುಪುರ ಗ್ರಾ.ಪಂ. ವ್ಯಾಪ್ತಿಯ 3 ಮನೆಗಳಿಗೆ ನುಗ್ಗಿದ ಮಳೆ ನೀರು; ಅವೈಜ್ಞಾನಿಕ ಕಾಮಗಾರಿ ಆರೋಪ

ಬಜ್ಪೆ: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಗುರುಪುರ ಗ್ರಾಮ ಪಂಚಾಯತ್‌ ವ್ಯಾಪ್ತಿಯ 3ಮನೆಗಳಿಗೆ ಮಳೆ ನೀರು ತುಂಬಿದ್ದು, ನೂಯಿಯ ಮುಹಮ್ಮದ್‌ ಅಶ್ರಫ್‌, ಹಾಜರಮ್ಮ ಹಾಗೂ ಶಮೀರ್‌ ಎಂಬವರ ಮನೆಗಳಿಗೆ ಬುಧವಾರ ಸುರಿದ ಮಳೆಯ ನೀರು ನುಗ್ಗಿದೆ. ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕಾಗಿ 20ಅಡಿ ಎತ್ತರಕ್ಕ ಮಣ್ಣು ಹಾಕಿ ರಸ್ತೆ ನಿರ್ಮಾಣ ಮಾಡಲಾಗಿದೆ. ಅದಕ್ಕೂ ಮೊದಲು ಇಲ್ಲಿ ದೊಡ್ಡ ಚರಂಡಿ ವ್ಯವಸ್ಥೆ ಇತ್ತು. ಹೆದ್ದಾರಿ ಮಾಡುವ ಸಂದರ್ಭ ಅದನ್ನು ಮುಚ್ಚು ಸಣ್ಣ ಕೊಳವೆ ಹಾಕಿ ಚರಂಡಿ ನಿರ್ಮಿಸಿ ಹೆದ್ದಾರಿ ಪ್ರಾಧಿಕಾರಿ ಕೈತೊಳೆದುಕೊಂಡಿದೆ. ಈ ಭಾಗದಲ್ಲಿ ಸುತ್ತಲಿನ ನೀರು ಇದೇ ಚರಂಡಿ ಯಾಗಿ ಹೋಗುತ್ತಿತ್ತು. ಆದರೆ ಈಗ ನೀರು ಸರಾಗವಾಗಿ ಹರಿಯಲು ಸಾಧ್ಯವಾಗದೇ ಈ ಸಮಸ್ಯೆ ಎದರುರಾಗಿದೆ ಎಂದು ಜಲ ದಿಗ್ಭಂನಕ್ಕೊಳಗಾದ ಮನೆಯವರು ಆರೋಪಿಸುತ್ತಿದ್ದಾರೆ. ಕಳೆದ ವರ್ಷದಿಂದ ಈ ಸಮಸ್ಯೆ ಆರಂಭಗೊಂಡಿದ್ದು, ಅಂದಿನ ಜಿಲ್ಲಾಧಿಕಾರಿ ಸೂಕ್ತ ರೀತಿಯಲ್ಲಿ ನೀರುಹರಿದು ಹೋಗುವಂತೆ ಮಾಡಬೇಕೆಂದು ಹೆದ್ದಾರಿ ಪ್ರಾಧಿಕಾರಕ್ಕೆ ಸೂಚನೆ ನೀಡಿದ್ದರು. ಇತ್ತೀಚೆಗೆ ಜಿಲ್ಲಾಧಿಕಾರಿ, ಆಯುಕ್ತರ ಸಭೆಗಳಲ್ಲೂ ಅಧಿಕಾರಿಗಳು ಈ ವಿಚಾಋವನ್ನು ಪ್ರಸ್ತಾಪಿಸಿದ್ದರು. ಅಲ್ಲೂ ಅವರು ಮಳೆ ನೀರು ಸರಾಗ ಹರಿದು ಹೋಗಲು ಅವಕಾಶ ನೀಡುವಂತೆ ಹೆದ್ದಾರಿ ಪ್ರಾಧಿಕಾರಕ್ಕೆ ಸೂಚನೆ ನೀಡಿದ್ದರು. ಜೂನ್‌ 2ರಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದ ಎಸಿ ಅವರೂ ಹೆದ್ದಾರಿ ಪ್ರಾಧಿಕಾರಿಕ್ಕೆ ಸೂಚನೆ ನೀಡಿದ್ದರು. ಆದರೂ, ಹೆದ್ದಾರಿ ಪ್ರಾಧಿಕಾರಿ ಸಮಸ್ಯೆಗಳನ್ನು ಪರಿಹರಿಸಲು ಮುಂದಾಗುತ್ತಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ. ಹೆದ್ದಾರಿ ಪ್ರಾಧಿಕಾರದ ಅವೈಜ್ಞಾನಿಕ ಕಾಮಗಾರಿಗಳಿಂದಾಗಿ ಗುರುಪುರು ಗ್ರಾಮ ಪಂಚಾಯತ್‌ ವ್ಯಾಪ್ತಿಯ ಹಲವೆಡೆ ಮಳೆಗಾಲದಲ್ಲಿ ಸಮಸ್ಯೆಗಳಾಗುತ್ತಿವೆ. ಕೈಕಂಬ ಜಂಕ್ಷನ್‌ ನಲ್ಲೂ ಅವೈಜ್ಞಾನಿಕವಾಗಿ ಹೆದ್ದಾರಿ ನಿರ್ಮಾಣ ಮಾಡಲಾ ಗಿದೆ ಹೊತರು ಅದಕ್ಕೂ ಮುನ್ನ ನಿರ್ಮಿಸಬೇಕಿದ್ದ ಮೂಲಸೌಕರ್ಯಗಳಲ್ಲಿ ಒಂದಾದ ಚರಂಡಿ ವ್ಯವಸ್ಥೆ ಮಾಡಿಲ್ಲ. ಇದರಿಂದಾಗಿ ಅಲ್ಲೂ ಮಳೆ ನೀರು ರಸ್ತೆಯಲ್ಲೇ ಹರಿದು ಪೇಟೆಯ ಪಕ್ಕದಲ್ಲಿರುವ ಅಂಗಡಿಗಳಿಗೆ ನುಗ್ಗಿ ಅಪಾರ ನಷ್ಟ ಸಂಭವಿಸಿತ್ತು. ಮಳೆನೀರಿನಿಂದ ಮುಳುಗಿರುವ ಮನೆಗಳಿರುವ ಪ್ರದೇಶ ಹೆದ್ದಾರಿ ಪ್ರಾಧಿಕಾರಕ್ಕೆ ಸೇರಿರುವ ನಿವೇಶನ ಆಗಿರುವ ಕಾರಣಕ್ಕೆ ನಮಗೇನು ಮಾಡಲು ಸಾಧ್ಯವಿಲ್ಲ. ಹೆದ್ದಾರಿ ಪ್ರಾಧಿಕಾರಕ್ಕೆ ನೋಟೀಸ್‌ ನೀಡಲೂ ಮನಗೆ ಬರುವುದಿಲ್ಲ. ಹೆದ್ದಾರಿ ಪ್ರಾಧಿಕಾರಕ್ಕೆ ದೂರು ನೀಡಲಾಗಿದೆ. ಅಲ್ಲದೆ, ಗ್ರಾಮ ಪಂಚಾಯತ್‌ ತಮ್ಮ ಮೇಲಾಧಿಕಾರಿಗಳಿಗೆ ಈ ಬಗ್ಗೆ ಪತ್ರದ ಮೂಲಕ ಮನವಿ ಸಲ್ಲಿಸಿ ಸೂಕ್ರ ಕ್ರಮಕೈಗೊಳ್ಳುವಂತೆ ವಿನಂತಿಸಲಾಗಿತ್ತು. ಅದರಂತೆ ಸ್ಥಳಕಕ್ಕೆ ಬಂದಿದ್ದ ಎಸಿ ಅವರು ಮಳೆ ನೀರು ಸುಸೂತ್ರವಾಗಿ ಹರಿದು ಹೋಗುವಂತೆ ಚರಂಡಿಗಳನ್ನು ರಚಿಸಬೇಕೆಂದು ಸೂಚನೆ ನೀಡಿದ್ದರು. ಆದರೂ ಹೆದ್ದಾರಿಯವರು ಯಾವುದೇ ಕೆಲಸ ಮಾಡಿಲ್ಲ. ಇದರಿಂದಾಗಿ ಮನೆಗಳು ಮುಳುಗು ವಂತಾಗಿದೆ. ಹೊಸ ಹೆದ್ದಾರಿಯಲ್ಲಿ ಬಿರುಕುಬಿಟ್ಟಿದ್ದು, ಕುಸಿಯುವ ಭಿತಿ ಇದೆ ಎಂದು ಗುರುಪುರು ಗ್ರಾಮ ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಪಂಕಜ ಶೆಟ್ಟಿ ಅವರು ತಮ್ಮ ಅಸಹಾಯಕತೆ ತೋರ್ಪಡಿಸಿದ್ದಾರೆ. ಸದ್ಯ ಹೆದ್ದಾರಿ ನಿರ್ಮಾಣಕ್ಕೂ ಮುನ್ನ ಇದ್ದ ಚರಂಡಿಯಂತೆ ಬೃಹದಾಕಾರಾವಾದ ಚರಂಡಿಯನ್ನು ನಿರ್ಮಿಸಬೇಕು. ಮನೆಯೊಳಗೆ ಮಳೆ ನೀರು ಹರಿದು ಲಕ್ಷಾಂತರ ರೂ. ನಷ್ಟ ಸಂಭವಿಸಿದೆ. ಇದನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಥವಾ ಜಿಲ್ಲಾಡಳಿತ ಭರಿಸಬೇಕು ಎಂದು ಜನರು ಒತ್ತಾಯಿಸಿದ್ದಾರೆ. ಸದಸ್ಯ ಮಳೆಯಿಂದಾಗಿ ಮುಳುಗಿರುವ ಮನೆಗಳಿಗೆ ನೋಟಿಸ್‌ ನೀಡಲಾಗಿದೆ. ಶೀಘ್ರ ಮನೆಗಳನ್ನು ಬಿಟ್ಟು ಅಡ್ಡೂರು ಶಾಲೆಯಲ್ಲಿ ಮಾಡಲಾಗಿರುವ ಗಂಜಿ ಕೇಂದ್ರಗಳಿಗೆ ಸ್ಥಳಾಂತರಗೊಳ್ಳುವಂತೆ ಮನವಿ ಮಾಡಲಾಗಿದೆ. ಗಂಜಿ ಕೇಂದ್ರದಲ್ಲಿ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ. ಇನ್ನು ಮಳೆಯಿಂದ ತೊಂದರೆಗೊಳಗುವ, ಗುಡ್ಡ, ಮನೆ ಜರಿ ಯುವ ಭೀತಿ ಇರುವವರೂ ಪಂಚಾಯತ್‌ ಗೆ ಮಾಹಿತಿ ನೀಡಿ ಗಂಜಿಕೇಂದ್ರಗಳಲ್ಲಿ ಉಳಿದುಕೊಳ್ಳಬಹುದು. - ಪಂಕಜಾ ಶೆಟ್ಟಿ,  ಗುರುಪುರು ಗ್ರಾಮ ಪಂಚಾಯತ್‌ ಪಿಡಿಒ‌ ಹೊಸ ಹೆದ್ದಾರಿಯನ್ನು 20ಅಡಿ ಎತ್ತರ ಮಾಡಿ ನಿರ್ಮಿಸಲಾಗಿದೆ. ಅವರು ನಿರ್ಮಾಣ ಮಾಡಿರುವ ಸಣ್ಣ ಮೋರಿ ಯಲ್ಲಿ ನೀರು ಸರಾಗವಾಗಿ ಹರಿದುಹೋಗುತ್ತಿಲ್ಲ. ಕಳೆದ ವರ್ಷ ನಮ್ಮ ಮನೆ ಕುಸಿದಿತ್ತು. ಆಗಲೇ ಹೆದ್ದಾರಿ ಪ್ರಾಧಿಕಾರ ಮತ್ತು ಮಣ್ಣುತುಂಬಿಸಿರುವ ಸ್ಥಳೀಯರೊಬ್ಬರಿಗೆ ಮನವಿ ಮಾಡಿ ನೀರು ಸರಾಗವಾಗಿ ಹರಿದುಹೋಗುವಂತೆ ಮಾಡಲು ವಿನಂತಿಸಲಾಗಿತ್ತು. ವತ್ಷಕಳೆದು ಮತ್ತೊಮ್ಮೆ ಮಳೆಗಾಲ ಆರಂಭಗೊಂಡು ಮನೆಗಳು ಜಲಾವೃತ ಗೊಂಡಿದ್ದರೂ ಯಾರೊಬ್ಬರೂ ಕ್ಯಾರೇ ಎನ್ನುತ್ತಿಲ್ಲ. ಈಗಿರುವ ಸಣ್ಣ ಮೋರಿಯನ್ನು ತೆಗೆದು 6ಅಡಿ ಎತ್ತರದಲ್ಲಿ ಚರಂಡಿ ನಿರ್ಮಾಣ ಮಾಡಬೇಕು. ಒಟ್ಟಾರೆಯಾಗಿ ಜಿಲ್ಲಾಡಳಿತ ಮಧ್ಯ ಪ್ರವೇಶಿಸಿ ಶೀಘ್ರ ನಮ್ಮ ಸಮಸ್ಯೆ ಪರಿಹಾರಿಸಬೇಕು. - ಮುಹಮ್ಮದ್‌ ಇಂಮ್ತಿಯಾಝ್‌, ಸಂತ್ರಸ್ತ  ಹೆದ್ದಾರಿ ಪ್ರಾಧಿಕಾರದಿಂದ ಯಾವುದೇ ತೊಂದರೆಗಳಾಗಿಲ್ಲ. ಮಳೆ ನೀರು ತುಂಬಿರುವ ಪಕ್ಕದಲ್ಲಿ ಮಣ್ಣು ಹಾಕಿರುವ ಕಾರಣ ಈ ಸಮಸ್ಯೆ ಎದುರಾಗಿದೆ. ಕೈಕಂಬದಲ್ಲೂ ಜನರು ಪ್ರತಿಭಟನೆ ಮಾಡಿದ ಪರಿಣಾಮ ಕಾಮಗಾರಿ ತಡ ವಾಗಿದೆ. ನಮ್ಮ ಕೆಲಸ ಸರಿಯಾದ ರೀತಿಯಲ್ಲಿ ಮಾಡಿದ್ದೇವೆ. ನಮ್ಮಿಂದ ಯಾವುದೇ ತಪ್ಪುಗಳಾಗಿಲ್ಲ. ಖಾಸಗಿಯ ವರಿಂದಾಗುವ ತೊಂದರೆಗಳಿಗೆ ನಾವು ಜವಾಬ್ದಾರರಲ್ಲ. - ಜಾವೆದ್‌, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿ ನಾವು 9 ವರ್ಷಗಳಿಂದ ಇಲ್ಲಿ ವಾಸವಾಗಿದ್ದೇವೆ. ಕಲೆದ ವರ್ಷದಿಂದ ನಮಗೆ ಸಮಸ್ಯೆಗಾಲಗುತ್ತಿವೆ. ಮಳೆ ನೀರು ಗದ್ದೆಯಲ್ಲಿ ಹರಿದುಹೋಗುತ್ತಿತ್ತು. ಅದಕ್ಕೆ ಅಡ್ಡಲಾಗಿ ಹೆದ್ದಾರಿ ನಿರ್ಮಾಣ ಮಾಡಿದ್ದಾರೆ. ದೊಡ್ಡ ಚರಂಡಿಯ ಬದಲಾಗಿ ಸಣ್ಣ ಕೊಳವೆ ಚರಂಡಿ ನಿರ್ಮಾಣ ಮಾಡಲಾಗಿದೆ. ಕಳೆದ ಬಾರಿ ನಾವು ಬಾಡಿಗೆ ಮನೆ ಮಾಡಿ ದಿನಕಳೆದಿದ್ದೆವು. ಈ ಬಾರಿ ನಮ್ಮಲ್ಲಿ ಹಣವಿಲ್ಲ. ಯಾವುದೇ ಕಾರಣಕ್ಕೂ ಮನೆಬಿಟ್ಟು ಗಂಜಿಕೇಂದ್ರಗಳಿಗೆ ನಾವು ಹೋಗಲ್ಲ. ಸರಕಾರ, ಜಿಲ್ಲಾಧಿಕಾರಿಗಳು ನಮ್ಮ ಸಮಸ್ಯೆಗೆ ಶೀಘ್ರ ಪರಿಹಾರ ನೀಡಬೇಕು. - ಝೀನತ್‌, ಸಂತ್ರಸ್ತೆ

ವಾರ್ತಾ ಭಾರತಿ 10 Jun 2026 9:46 pm

ಲಂಡನ್ ನೈಟ್‌ಕ್ಲಬ್ ಗಲಾಟೆ: ಬೆನ್ ಸ್ಟೋಕ್ಸ್, ಗಸ್ ಅಟ್ಕಿನ್ಸನ್ ಗೆ ಇಂಗ್ಲೆಂಡ್ ಟೆಸ್ಟ್ ತಂಡದಿಂದ ಅಧಿಕೃತ ಗೇಟ್ ಪಾಸ್!

London Night Club Incident- ಲಂಡನ್‌ನ ನೈಟ್‌ಕ್ಲಬ್‌ವೊಂದರಲ್ಲಿ ಮಧ್ಯರಾತ್ರಿ ಕರ್ಫ್ಯೂ ನಿಯಮ ಉಲ್ಲಂಘಿಸಿ ಗಲಾಟೆಗೆ ಒಳಗಾದ ಆರೋಪದ ಮೇಲೆ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಮತ್ತು ಗಸ್ ಅಟ್ಕಿನ್ಸನ್ ಅವರನ್ನು ನ್ಯೂಜಿಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಿಂದ ಇಸಿಬಿ ಅಮಾನತುಗೊಳಿಸಿದೆ. ಸ್ಟೋಕ್ಸ್ ಅಲಭ್ಯತೆಯಲ್ಲಿ 4 ವರ್ಷಗಳ ಬಳಿಕ ಅನುಭವಿ ಆಟಗಾರ ಜೋ ರೂಟ್ ತಂಡವನ್ನು ಮುನ್ನಡೆಸಲಿದ್ದಾರೆ. ಮೊದಲ ಟೆಸ್ಟ್ ಗೆಲುವಿನ ಬಳಿಕ ಚೆಲ್ಸಿಯಾದ ಕ್ಲಬ್‌ನಲ್ಲಿ ರಗ್ಬಿ ಆಟಗಾರರೊಂದಿಗೆ ನಡೆದ ಗಲಾಟೆ ಇಸಿಬಿ ತನಿಖೆಗೆ ಕಾರಣವಾಗಿದ್ದು, ಸ್ಟೋಕ್ಸ್ ನಾಯಕತ್ವ ಹಾಗೂ ಟೆಸ್ಟ್ ವೃತ್ತಿಜೀವನವೇ ಈಗ ಸಂಕಷ್ಟಕ್ಕೆ ಸಿಲುಕಿದೆ.

ವಿಜಯ ಕರ್ನಾಟಕ 10 Jun 2026 9:37 pm

ಬೈಂದೂರು: ಪ್ರಾಕೃತಿಕ ವಿಕೋಪ ನಿರ್ವಹಣೆಗೆ ಕಂಟ್ರೋಲ್ ರೂಂ

ಉಡುಪಿ, ಜೂ.10: ಭಾರತೀಯ ಹವಾಮಾನ ಇಲಾಖೆ / ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಬೆಂಗಳೂರು ಹಾಗೂ ಜಿಲ್ಲಾ ವಿಪತ್ತು ಪ್ರಾಧಿಕಾರದ ಅಧ್ಯಕ್ಷರ ಸೂಚನೆಯಂತೆ ಬೈಂದೂರು ತಾಲೂಕು ವಿಪತ್ತು ನಿರ್ವಹಣಾ ಪ್ರಾಧಿಕಾರವು ಮುಂಜಾಗ್ರತಾ ಕ್ರಮವಾಗಿ ಸಾರ್ವಜನಿಕರಿಗೆ ತಾಲೂಕಿನಲ್ಲಿ ಪ್ರಾಕೃತಿಕ ವಿಕೋಪ ಸಂಭವಿಸಿದ್ದಲ್ಲಿ, ತಾಲೂಕು ವಿಪತ್ತು ನಿರ್ವಹಣಾ ಸಹಾಯವಾಣಿ ಕೇಂದ್ರದ ದೂ.ಸಂಖ್ಯೆ: 08254-251657ಗೆ ಕರೆ ಮಾಡಿ ಮಾಹಿತಿ ನೀಡುವಂತೆ ಬೈಂದೂರು ತಾಲೂಕು ತಹಶೀಲ್ದಾರರ ಪ್ರಕಟಣೆ ತಿಳಿಸಿದೆ.

ವಾರ್ತಾ ಭಾರತಿ 10 Jun 2026 9:36 pm

ಗೃಹ ಶುಶ್ರೂಷೆ ತರಬೇತಿಗೆ ಅರ್ಜಿ ಅಹ್ವಾನ

ಮಣಿಪಾಲ, ಜೂ.10: ಗ್ರಾಮೀಣ ಪ್ರದೇಶದ ಯುವತಿಯರಿಗೆ ಮೂರು ದಿನಗಳ (ಜೂ.29ರಿಂದ ಜುಲೈ 1ರವರೆಗೆ) ಗೃಹ ಶುಶ್ರೂಷೆ ಮತ್ತು ಆರೈಕೆ ವ್ಯಕ್ತಿತ್ವ ವಿಕಸನದ ಬಗ್ಗೆ ಉಚಿತ ತರಬೇತಿಯನ್ನು ಮಣಿಪಾಲದ ಭಾರತೀಯ ವಿಕಾಸ ಟ್ರಸ್ಟ್‌ನಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ. ಇದಕ್ಕಾಗಿ ಆಸಕ್ತ ಯುವತಿಯರಿಂದ ಆರ್ಜಿಗಳನ್ನು ಅಹ್ವಾನಿಸಲಾಗಿದೆ. ಯುವತಿಯರಿಗೆ ತಮ್ಮ ಆರೋಗ್ಯವನ್ನು ಕಾಪಾಡುವುದರ ಜೊತೆಗೆ ತಮ್ಮ ಮನೆಯವರಿಗೆ ಹಾಗೂ ತಮ್ಮ ಸುತ್ತಮುತ್ತಲಿನವರಿಗೂ ಸೇವೆಯನ್ನು ನೀಡಲು ತರಬೇತಿ ಸಹಕಾರಿಯಾಗುತ್ತದೆ. ತರಬೇತಿಗೆ ವಯೋಮಿತಿಯು 18ರಿಂದ 45 ವರ್ಷಗಳು. ವಿದ್ಯಾರ್ಹತೆ ಎಸೆಸೆಲ್ಸಿ ಮೇಲ್ಪಟ್ಟು ಇರಬೇಕು. ಅಭ್ಯರ್ಥಿ ಗಳು ಬಿವಿಟಿ ಕಚೇರಿಯ ದೂರವಾಣಿ: 0820-2570263/8970891031 ಮೂಲಕ ತಮ್ಮ ಹೆಸರನ್ನು ಜೂನ್ 24ರ ಒಳಗೆ ನೋಂದಾಯಿಸಿಕೊಳ್ಳಬಹುದು ಎಂದು ಬಿವಿಟಿಯ ಪ್ರಕಟನೆ ತಿಳಿಸಿದೆ.

ವಾರ್ತಾ ಭಾರತಿ 10 Jun 2026 9:35 pm

ಉಡುಪಿ: ಬಿರುಸು ಪಡೆಯದ ಮುಂಗಾರು

ಉಡುಪಿ, ಜೂ.10: ಮುಂಗಾರು ಜಿಲ್ಲೆಗೆ ಕಾಲಿರಿಸಿ ಕೆಲವು ದಿನಗಳು ಕಳೆದರೂ ಮಳೆ ಇನ್ನೂ ಬಿರುಸು ಪಡೆದು ಕೊಂಡಿಲ್ಲ. ದಿನವಿಡೀ ಸಾಧಾರಣ ಮಳೆ ಇಂದೂ ಮುಂದುವರಿದಿದ್ದು, ಹಗಲಿನಲ್ಲಿ ಮಳೆ ವಿಶ್ರಾಂತಿ ಪಡೆದು ಸಂಜೆಯ ಬಳಿಕ ಅಲ್ಲಲ್ಲಿ ಸಾಮಾನ್ಯ ಪ್ರಮಾಣದಲ್ಲಿ ಸುರಿಯುತ್ತಿದೆ. ಗಾಳಿ-ಮಳೆಯಿಂದ ಜಿಲ್ಲೆಯಲ್ಲಿ ಎರಡು ಮನೆಗಳಿಗೆ ಹಾನಿಯಾದ ಪ್ರಕರಣ ವರದಿಯಾಗಿದೆ. ಬೈಂದೂರು ತಾಲೂಕು ಕಂಬದಕೋಣೆಯ ಚಂದು ಎಂಬವರ ಮನೆಯ ಮೇಲೆ ಮರ ಬಿದ್ದು ಅಪಾರ ನಷ್ಟ ಸಂಭವಿಸಿದೆ. ಅದೇ ರೀತಿ ಕಾಪು ತಾಲೂಕು ಮೂಡಬೆಟ್ಟು ಗ್ರಾಮದ ಸುಧಾಕರ ಪೂಜಾರಿ ಎಂಬವರ ಮನೆ ಗಾಳಿ-ಮಳೆಗೆ ಭಾಗಶ: ಹಾನಿಗೊಳ ಗಾಗಿದ್ದು 40,000ದಷ್ಟು ನಷ್ಟದ ಅಂದಾಜು ಮಾಡಲಾಗಿದೆ. ಕಳೆದ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ ಸರಾಸರಿ 17.7ಮಿ.ಮೀ. ಮಳೆಯಾಗಿದೆ.ಕಾರ್ಕಳದಲ್ಲಿ 28.4, ಕಾಪುವಿನಲ್ಲಿ 22.0, ಬ್ರಹ್ಮಾವರದಲ್ಲಿ 20.4, ಹೆಬ್ರಿಯಲ್ಲಿ 17.1, ಕುಂದಾಪುರದಲ್ಲಿ 13.4 ಹಾಗೂ ಬೈಂದೂರಿ ನಲ್ಲಿ 5.2ಮಿ.ಮೀ. ಮಳೆಯಾದ ವರದಿ ಬಂದಿದೆ. ಹವಾಮಾನ ಇಲಾಖೆ ಇಂದು ಸಹ ಮೀನುಗಾರರಿಗೆ ಮುನ್ನೆಚ್ಚರಿಕೆಯನ್ನು ನೀಡಿದೆ. ಜೂ.13ರವರೆಗೆ ಅರಬಿ ಸಮುದ್ರದಲ್ಲಿ ಗಂಟೆಗೆ 45ರಿಂದ 55ಕಿ.ಮೀ. ವೇಗದ ಗಾಳಿ ಬೀಸುವ ಸಾಧ್ಯತೆ ಇರುವುದರಿಂದ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ತಿಳಿಸಿದೆ.

ವಾರ್ತಾ ಭಾರತಿ 10 Jun 2026 9:34 pm

ದಾವಣಗೆರೆ ಸಾಮೂಹಿಕ ಅತ್ಯಾಚಾರ ಪ್ರಕರಣ: ವಿಮ್ ಖಂಡನೆ

ಮಂಗಳೂರು: ದಾವಣಗೆರೆ ಜಿಲ್ಲೆಯಲ್ಲಿ ಮಹಿಳೆಯ ಮೇಲಿನ ಸಾಮೂಹಿಕ ಅತ್ಯಾಚಾರ ನಡೆದಿರುವುದು ಅತ್ಯಂತ ಗಂಭೀರ ಹಾಗೂ ಆತಂಕಕಾರಿ ಬೆಳವಣಿಗೆಯಾಗಿದೆ. ಇಂತಹ ಅಮಾನವೀಯ ಮತ್ತು ಪೈಶಾಚಿಕ ಕೃತ್ಯಗಳು ಸಮಾಜದ ನೈತಿಕ ಮೌಲ್ಯಗಳಿಗೆ ಕಳಂಕವಾಗಿದ್ದು, ಮಹಿಳೆಯರ ಸುರಕ್ಷತೆ ಕುರಿತು ಮತ್ತೊಮ್ಮೆ ಯಕ್ಷಪ್ರಶ್ನೆಯನ್ನು ಎತ್ತಿವೆ ಎಂದು ವಿಮೆನ್ ಇಂಡಿಯಾ ಮೂವ್ಮೆಂಟ್ ರಾಜ್ಯಾಧ್ಯಕ್ಷೆ ಫಾತಿಮಾ ನಸೀಮಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಮಹಿಳೆ ಭಯವಿಲ್ಲದೆ ಬದುಕುವ ಮತ್ತು ಸಂಚರಿಸುವ ಹಕ್ಕು ಹೊಂದಿದ್ದಾಳೆ. ಆದರೆ ಇಂತಹ ಘಟನೆಗಳು ಮಹಿಳೆ ಯರ ಭದ್ರತೆ ಮತ್ತು ಗೌರವಕ್ಕೆ ದೊಡ್ಡ ಸವಾಲಾಗಿ ಪರಿಣಮಿಸುತ್ತಿವೆ. ಪ್ರಕರಣಕ್ಕೆ ಸಂಬಂಧಿಸಿದ ಆರೋಪ ಗಳು ಮತ್ತು ಘಟನೆಗೆ ಸಂಬಂಧಿಸಿದ ವಿಡಿಯೋ ಚಿತ್ರೀಕರಣದ ಮಾಹಿತಿಗಳು ಹೊರಬಂದಿದ್ದರೆ, ಅದು ಇನ್ನಷ್ಟು ಕಳವಳ ಕಾರಿ ಸಂಗತಿಯಾಗಿದೆ. ಈ ಪ್ರಕರಣದ ತನಿಖೆ ಸಂಪೂರ್ಣ ನಿಷ್ಪಕ್ಷಪಾತ, ಪಾರದರ್ಶಕ ಮತ್ತು ವೃತ್ತಿಪರ ರೀತಿಯಲ್ಲಿ ನಡೆಯಬೇಕು. ಆರೋಪಿಗಳು ಯಾರೇ ಆಗಿರಲಿ, ಅವರ ಸಾಮಾಜಿಕ, ಆರ್ಥಿಕ ಅಥವಾ ರಾಜಕೀಯ ಹಿನ್ನೆಲೆಯನ್ನು ಪರಿಗಣಿಸದೆ ಕ್ರಮ ಕೈಗೊಳ್ಳಬೇಕು. ಯಾವುದೇ ರೀತಿಯ ರಾಜಕೀಯ ಒತ್ತಡ, ಪ್ರಭಾವ ಅಥವಾ ಹಸ್ತಕ್ಷೇಪಕ್ಕೆ ಅವಕಾಶ ನೀಡದೆ ಸತ್ಯಾಂಶವನ್ನು ಹೊರತರುವ ಜವಾಬ್ದಾರಿ ತನಿಖಾ ಸಂಸ್ಥೆಗಳ ಮೇಲಿದೆ ಎಂದರು. ಸಂತ್ರಸ್ತೆಗೆ ಅಗತ್ಯವಾದ ವೈದ್ಯಕೀಯ, ಕಾನೂನು ಹಾಗೂ ಮಾನಸಿಕ ನೆರವು ಒದಗಿಸುವುದರ ಜೊತೆಗೆ, ಶೀಘ್ರ ನ್ಯಾಯ ದೊರಕುವಂತೆ ಸರಕಾರ ಮತ್ತು ಸಂಬಂಧಿತ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ನ್ಯಾಯ ವಿಳಂಬ ನೆಯೇ ಅತ್ಯಾಚಾರಗಳು ಮರುಕಳಿಸಲು ಕಾರಣ. ಆದ್ದರಿಂದ ತ್ವರಿತ ನ್ಯಾಯ ಒದಗಿಸಬೇಕು. ಮಹಿಳೆಯರ ಸುರಕ್ಷತೆ ಕೇವಲ ಭಾಷಣಗಳು, ಘೋಷಣೆಗಳು ಅಥವಾ ಭರವಸೆಗಳಿಗೆ ಸೀಮಿತವಾಗದೆ ಕಾನೂನು ಜಾರಿಯ ಕಟ್ಟುನಿಟ್ಟಿನ ಕ್ರಮಗಳು ಮತ್ತು ಸಮಾಜದ ಜಾಗೃತಿಯ ಮೂಲಕ ಕಾರ್ಯರೂಪದಲ್ಲಿ ಕಾಣಿಸಬೇಕು. ಇಂತಹ ಘಟನೆಗಳು ಮರುಕಳಿಸದಂತೆ ಸರಕಾರ, ಕಾನೂನು ವ್ಯವಸ್ಥೆ ಹಾಗೂ ಸಮಾಜ ಒಗ್ಗಟ್ಟಿನಿಂದ ಕೆಲಸ ನಿರ್ವಹಿಸಬೇಕು ಎಂದು ಫಾತಿಮಾ ನಸೀಮಾ ತಿಳಿಸಿದ್ದಾರೆ.

ವಾರ್ತಾ ಭಾರತಿ 10 Jun 2026 9:32 pm

ರಸ್ತೆ ಡಿವೈಡರ್‌ಗಳ ಫ್ಲೆಕ್ಸ್, ಬ್ಯಾನರ್ ತೆರವಿಗೆ ದ.ಕ.ಜಿಲ್ಲಾಧಿಕಾರಿ ಸೂಚನೆ

ಮಂಗಳೂರು : ದ.ಕ.ಜಿಲ್ಲೆಯ ಎಲ್ಲಾ ರಸ್ತೆಗಳ ಡಿವೈಡರ್‌ಗಳ ಮೇಲೆ ಅಳವಡಿಸಿರುವ ಫ್ಲೆಕ್ಸ್, ಬ್ಯಾನರ್‌ಗಳನ್ನು ತೆರವುಗೊಳಿಸಲು ದ.ಕ.ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ. ಮಂಗಳೂರು ಮಹಾನಗರ ಪಾಲಿಕೆ ಸಹಿತ ಜಿಲ್ಲೆಯ ಎಲ್ಲಾ ನಗರ ಸ್ಥಳೀಯಾಡಳಿತ ಸಂಸ್ಥೆ ಹಾಗೂ ಗ್ರಾಪಂ ವ್ಯಾಪ್ತಿಯ ರಸ್ತೆಯ ಡಿವೈಡರ್‌ಗಳ ಮೇಲೆ ಅಪಾಯಕಾರಿ ಹಾಗೂ ಅನಧಿಕೃತ ಫ್ಲೆಕ್ಸ್, ಬ್ಯಾನರ್‌ಗಳನ್ನು ಅಳವಡಿಸ ಲಾಗಿದೆ. ಇದರಿಂದ ರಸ್ತೆ ದಾಟುವವರಿಗೆ ಮತ್ತು ವಾಹನಿಗರಿಗೆ ಸಮಸ್ಯೆಯಾಗಿದೆ. ಅಪಘಾತಕ್ಕೂ ಕಾರಣವಾಗಿದೆ. ಈ ಬಗ್ಗೆ ಈಗಾಗಲೆ ಜಿಲ್ಲಾಡಳಿತಕ್ಕೆ ಸಾಕಷ್ಟು ದೂರುಗಳೂ ಬಂದಿವೆ. ರಸ್ತೆ ಸುರಕ್ಷಾ ಸಮಿತಿಯ ಸಭೆಯಲ್ಲೂ ವಿಸ್ತೃತ ಚರ್ಚೆ ನಡೆದಿದೆ. ಹಾಗಾಗಿ ತಕ್ಷಣ ಎಲ್ಲಾ ಫ್ಲೆಕ್ಸ್ ಬ್ಯಾನರ್‌ಗಳನ್ನು ತೆರವುಗೊಳಿಸಬೇಕು. ಇಲ್ಲದಿದ್ದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.

ವಾರ್ತಾ ಭಾರತಿ 10 Jun 2026 9:29 pm

ರೋಗಿಗಳಿಗೆ ಎದುರಾಗುವ ಸಮಸ್ಯೆಗಳ ತ್ವರಿತ ಪರಿಹಾರಕ್ಕೆ ಸಹಾಯವಾಣಿ ಆರಂಭಕ್ಕೆ ಚಿಂತನೆ : ಯು.ಟಿ.ಖಾದರ್

ಬೆಂಗಳೂರು : ಸರಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವ ರೋಗಿಗಳಿಗೆ ಎದುರಾಗುವ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಲು ಆರೋಗ್ಯ ಸೌಧದಲ್ಲಿ ಸಹಾಯವಾಣಿ ಅನ್ನು ಆರಂಭಿಸಲಾಗುವುದು ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ. ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಯಾವುದೇ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ, ಔಷಧಿ ಲಭ್ಯತೆ ಸಮಸ್ಯೆ ಎದುರಾದರೆ ನೇರವಾಗಿ ಕಚೇರಿಗೆ ಅಥವಾ ಇಲಾಖೆಯ ಕಾರ್ಯದರ್ಶಿಗಳ ಕಚೇರಿಗೆ ಕರೆ ಮಾಡಿ ತಿಳಿಸಿದರೆ ಅದನ್ನು ಸರಿಪಡಿಸಲಾಗುವುದು. ಇದಕ್ಕಾಗಿ ಸಹಾಯವಾಣಿ ತೆರೆಯಲು ಯೋಜಿಸಿದ್ದೇವೆ ಎಂದರು. ರೋಗಿಗಳಿಂದ ದೂರು ಬಂದ ಆಸ್ಪತ್ರೆಗಳ ವಿರುದ್ಧ ಆರೋಗ್ಯ ಇಲಾಖೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ದೂರುಗಳು ಸಾಬೀತಾದಲ್ಲಿ ಸಂಬಂಧಿತ ಅಧಿಕಾರಿಗಳು, ವೈದ್ಯರು ಅಥವಾ ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.

ವಾರ್ತಾ ಭಾರತಿ 10 Jun 2026 9:27 pm

KCET 2026 ಅಭ್ಯರ್ಥಿಗಳೇ ಗಮನಿಸಿ: ಆಯ್ಕೆ ಭರ್ತಿ ಪ್ರಕ್ರಿಯೆ ತಡೆಹಿಡಿದ KEA

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ವತಿಯಿಂದ ನಡೆಯುವ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (KCET) ಪ್ರವೇಶಾತಿ ಕೌನ್ಸೆಲಿಂಗ್ ಪ್ರಕ್ರಿಯೆಯಲ್ಲಿ ಆಯ್ಕೆ ಭರ್ತಿ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಮುಂದೂಡಿದೆ. ಸೀಟ್ ಮ್ಯಾಟ್ರಿಕ್ಸ್ ಇನ್ನೂ ಅಂತಿಮಗೊಳ್ಳದ ಕಾರಣ ಈ ವಿಳಂಬ ಉಂಟಾಗಿದೆ ಎಂದು ಪ್ರಾಧಿಕಾರ ತಿಳಿಸಿದೆ. ಪ್ರಾಧಿಕಾರದ ಕೆಸಿಇಟಿ 2026 ವೆಬ್ ಆಧಾರಿತ ಆಯ್ಕೆ ನಮೂದ ಇಂದು ಜೂನ್ 10

ಒನ್ ಇ೦ಡಿಯ 10 Jun 2026 9:25 pm

Fact Check - ವಿಜಯ್ ನೇತೃತ್ವದ ತಮಿಳುನಾಡು ಸರ್ಕಾರ ಅದಾನಿ ಸ್ಮಾರ್ಟ್ ಮೀಟರ್ ಯೋಜನೆಯನ್ನು ರದ್ದುಗೊಳಿಸಿದೆಯೇ?

ತಮಿಳುನಾಡಿನಲ್ಲಿ ಸಿ. ಜೋಸೆಫ್ ವಿಜಯ್ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ, ಅವರು ದೊಡ್ಡ ರಾಜಕೀಯ ಹೆಜ್ಜೆಯನ್ನಿಟ್ಟು ಅದಾನಿ ಎನರ್ಜಿ ಸೊಲ್ಯೂಷನ್ಸ್ ಸಂಸ್ಥೆಯ 20,000 ಕೋಟಿ ರೂಪಾಯಿ ವೆಚ್ಚದ ಸ್ಮಾರ್ಟ್ ಮೀಟರ್ ಯೋಜನೆಯನ್ನು ರದ್ದುಗೊಳಿಸಿದ್ದಾರೆ ಎಂಬ ಸುದ್ದಿಯೊಂದು ಇನ್ಸ್ಟಾಗ್ರಾಮ್ ನಲ್ಲಿ ವ್ಯಾಪಕವಾಗಿ ವೈರಲ್‌ ಆಗಿದೆ. ಈ ಟೆಂಡರ್ ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗಿದ್ದ ಬೃಹತ್ ವಿದ್ಯುತ್ ಸ್ಮಾರ್ಟ್ ಮೀಟರಿಂಗ್ ಯೋಜನೆಯ ಭಾಗವಾಗಿತ್ತು. ‘ವರ್ಲ್ಡ್ 24X’ ಎಂಬ ಇನ್ಸ್ಟಾಗ್ರಾಮ್ ಖಾತೆಯು, ತಮಿಳುನಾಡಿನಲ್ಲಿ ವಿಜಯ್ ಅವರು ಸರ್ಕಾರ ರಚಿಸಿದ ನಂತರ, ಗೌತಮ್ ಅದಾನಿ ಅವರ 20,000 ಕೋಟಿ ರೂ.ಮೊತ್ತದ ಸ್ಮಾರ್ಟ್ ಮೀಟರ್ ಯೋಜನೆಯನ್ನು ರದ್ದುಗೊಳಿಸುವ ಮೂಲಕ ಭಾರಿ ರಾಜಕೀಯ ನಿರ್ಧಾರ ಕೈಗೊಂಡಿದ್ದಾರೆ ಎಂಬ ಸುದ್ದಿ ಇನ್ಸ್ಟಾಗ್ರಾಮ್ ನಲ್ಲಿ ವೈರಲ್‌ ಆಗಿದೆ ಎಂದು ಬರೆದುಕೊಂಡಿದೆ. ಇದೇ ರೀತಿಯ ಪ್ರತಿಪಾದನೆಯನ್ನು ‘Indian In Current’ ಮತ್ತು ‘Chakia Live 24’ ಸೇರಿದಂತೆ ಇನ್ನು ಹಲವು ಸಾಮಾಜಿಕ ಮಾಧ್ಯಮ ಖಾತೆಗಳು ಕೂಡ ಮಾಡಿವೆ. ►ಫ್ಯಾಕ್ಟ್ ಚೆಕ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗುತ್ತಿರುವ ಈ ಸುದ್ದಿಯ ಬಗ್ಗೆ ಗೂಗಲ್ ಸರ್ಚ್ನಲ್ಲಿ adani smart meter tamilnadu DMK ಎಂಬ ಕೀವರ್ಡ್ ಗಳನ್ನು ಹುಡುಕಿದಾಗ, ಮೊದಲಿಗೆ ಕಾಣಿಸುವ AI Overviewನಲ್ಲಿ, ಅದಾನಿ ಎನರ್ಜಿ ಸೊಲ್ಯೂಷನ್ಸ್ ಲಿಮಿಟೆಡ್ (AESL) ಅತ್ಯಂತ ಕನಿಷ್ಠ ಬಿಡ್ಡರ್ ಆಗಿದ್ದರೂ, DMK ನೇತೃತ್ವದ ತಮಿಳುನಾಡು ಸರ್ಕಾರವು ಸ್ಮಾರ್ಟ್ ಮೀಟರ್ ಗಳ ಖರೀದಿ ಮತ್ತು ಅಳವಡಿಕೆಗೆ ಸಂಬಂಧಿಸಿದ ನಾಲ್ಕೂ ಜಾಗತಿಕ ಟೆಂಡರ್ ಗಳನ್ನು ರದ್ದುಗೊಳಿಸಿತು ಎಂದು ಉಲ್ಲೇಖಿಸಲಾಗಿದೆ. ಅದಾನಿ ಸಮೂಹವು ನಮೂದಿಸಿದ್ದ ದರಗಳು ಒಪ್ಪಿಕೊಳ್ಳಲು ಸಾಧ್ಯವಾಗದಷ್ಟು ಹೆಚ್ಚಾಗಿದ್ದವು ಎಂಬ ಕಾರಣವನ್ನು ನೀಡಿ ಟ್ಯಾಂಗೆಡ್ಕೊ (TANGEDCO) ಈ ಟೆಂಡರ್ಗಳನ್ನು ವಜಾಗೊಳಿಸಿತು ಎಂಬ ಮಾಹಿತಿಯೂ ಅಲ್ಲಿ ಕಾಣಿಸುತ್ತದೆ. ಈ ಸುದ್ದಿಯ ಮೂಲಗಳು Telangana Today ಮತ್ತು The Indian Express ಎಂಬುದನ್ನೂ ಅಲ್ಲಿ ಉಲ್ಲೇಖಿಸಲಾಗಿದೆ. The Indian Express ಪತ್ರಿಕೆ 2024 ಡಿಸೆಂಬರ್ 31ರಂದು ಪ್ರಕಟಿಸಿದ ‘In a blow to Adani, Tamil Nadu scraps smart meter tender in shadow of row’ ಎಂಬ ವರದಿ( https://indianexpress.com/article/political-pulse/blow-adani-tamil-nadu-scraps-smart-meter-tender-9753701 /)ಯಲ್ಲಿ, ಅದಾನಿ ಎನರ್ಜಿ ಸೊಲ್ಯೂಷನ್ಸ್ ಲಿಮಿಟೆಡ್ (AESL) ಅತ್ಯಂತ ಕನಿಷ್ಠ ಬಿಡ್ಡರ್ ಆಗಿದ್ದರೂ, DMK ನೇತೃತ್ವದ ತಮಿಳುನಾಡು ಸರ್ಕಾರವು ಸ್ಮಾರ್ಟ್ ಮೀಟರ್ ಗಳ ಖರೀದಿಗಾಗಿ ಕರೆದಿದ್ದ ಜಾಗತಿಕ ಟೆಂಡರ್ ಅನ್ನು ರದ್ದುಗೊಳಿಸಿದೆ ಎಂದು ವರದಿ ಮಾಡಿದೆ. Business Standard ಪತ್ರಿಕೆಯು 2025ರ ಜನವರಿಯಲ್ಲಿ ಪ್ರಕಟಿಸಿದ ವರದಿ ( https://www.business-standard.com/india-news/dmk-cancels-smart-meter-tender-adani-bid-controversy-125010100298_1.html )ಯೂ ಇದೇ ಮಾಹಿತಿಯನ್ನು ದೃಢಪಡಿಸುತ್ತದೆ. ಅಂದರೆ, ಅದಾನಿ ಸಂಸ್ಥೆಗೆ ಸಂಬಂಧಿಸಿದ ಪ್ರಮುಖ ಸ್ಮಾರ್ಟ್ ಮೀಟರ್ ಟೆಂಡರ್ ಅನ್ನು ವಾಸ್ತವವಾಗಿ ರದ್ದುಗೊಳಿಸಿದ್ದು ಅಂದಿನ DMK ನೇತೃತ್ವದ ತಮಿಳುನಾಡು ಸರ್ಕಾರ. ಆದ್ದರಿಂದ, ವಿಜಯ್ ಅವರು ಈ ಯೋಜನೆಯನ್ನು ರದ್ದುಗೊಳಿಸಿದರು ಎಂಬ ವಾದವು ಸಂಪೂರ್ಣವಾಗಿ ದಾರಿ ತಪ್ಪಿಸುವಂತದ್ದಾಗಿದೆ. ►ಏನಿದು ಯೋಜನೆ? ಕೇಂದ್ರ ಸರ್ಕಾರದ ‘ಪುನಶ್ಚೇತನಗೊಂಡ ವಿತರಣಾ ವಲಯ ಯೋಜನೆ’ (RDSS) ಅಡಿಯಲ್ಲಿ ಈ ಯೋಜನೆಯನ್ನು ಜಾರಿಗೊಳಿಸಲಾಗುತ್ತಿತ್ತು. ತಮಿಳುನಾಡಿನಲ್ಲಿ ಸುಮಾರು 82 ಲಕ್ಷ ಸ್ಮಾರ್ಟ್ ವಿದ್ಯುತ್ ಮೀಟರ್ ಗಳನ್ನು ಅಳವಡಿಸುವ ಉದ್ದೇಶವನ್ನು ಇದು ಹೊಂದಿತ್ತು. ಇದಕ್ಕೆ ಕೇಂದ್ರ ಸರ್ಕಾರದಿಂದ ಸುಮಾರು 19,000 ಕೋಟಿ ರೂ. ಹಣಕಾಸಿನ ನೆರವು ಸಿಗಬೇಕಿತ್ತು. ಇಡೀ ರಾಜ್ಯದ ಸ್ಮಾರ್ಟ್ ಮೀಟರ್ ಕೆಲಸವನ್ನು ಒಂದೇ ಕಂಪೆನಿಗೆ ನೀಡುವ ಬದಲಾಗಿ, ಆಗಸ್ಟ್ 2023ರಲ್ಲಿ ರಾಜ್ಯದ ವಿದ್ಯುತ್ ಪ್ರಸರಣ ನಿಗಮವಾದ ಟ್ಯಾಂಗೆಡ್ಕೊ (TANGEDCO) ಯೋಜನೆಯನ್ನು ನಾಲ್ಕು ಭೌಗೋಳಿಕ ಪ್ಯಾಕೇಜ್ ಗಳಾಗಿ ವಿಂಗಡಿಸಿತು. ಪ್ಯಾಕೇಜ್–1ರಲ್ಲಿ ಚೆನ್ನೈ ಸೇರಿದಂತೆ ಪ್ರಮುಖ ನಗರಗಳು ಮತ್ತು ಹೆಚ್ಚಿನ ಆದಾಯ ತರುವ ವಲಯಗಳು ಸೇರಿದ್ದವು. ಉಳಿದ ಪ್ಯಾಕೇಜ್ ಗಳಲ್ಲಿ ಇತರ ವಿತರಣಾ ವಲಯಗಳನ್ನು ಸೇರಿಸಲಾಗಿತ್ತು. ಈ ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದ ಅದಾನಿ ಎನರ್ಜಿ ಸೊಲ್ಯೂಷನ್ಸ್, ಪ್ಯಾಕೇಜ್–1ಕ್ಕೆ ಎಲ್ಲ ಕಂಪೆನಿಗಳಿಗಿಂತ ಕಡಿಮೆ ದರವನ್ನು ನಮೂದಿಸಿ ಅತ್ಯಂತ ಕನಿಷ್ಠ ಬಿಡ್ಡರ್ ಆಗಿ ಹೊರಹೊಮ್ಮಿತ್ತು. ಈ ಪ್ಯಾಕೇಜ್ ಚೆನ್ನೈ, ಕಾಂಚೀಪುರಂ ಮತ್ತು ಚೆಂಗಲ್ಪಟ್ಟು ಸೇರಿದಂತೆ ಪ್ರಮುಖ ಪ್ರದೇಶಗಳಲ್ಲಿ 82 ಲಕ್ಷಕ್ಕೂ ಹೆಚ್ಚು ಸ್ಮಾರ್ಟ್ ಮೀಟರ್ ಗಳನ್ನು ಅಳವಡಿಸುವ ಕಾರ್ಯವನ್ನು ಒಳಗೊಂಡಿತ್ತು. ಆದರೆ, ಟೆಂಡರ್ ನಂತರದ ಮೌಲ್ಯಮಾಪನ ಪ್ರಕ್ರಿಯೆಯ ಬಳಿಕ ತಮಿಳುನಾಡು ಸರ್ಕಾರವು ಈ ಟೆಂಡರ್ ಅನ್ನು ರದ್ದುಗೊಳಿಸಿತು. ಅದಾನಿ ಕಂಪೆನಿಯು ಅತ್ಯಂತ ಕನಿಷ್ಠ ದರವನ್ನು ನಮೂದಿಸಿದ್ದರೂ ಸಹ, ಪ್ರತಿ ಮೀಟರ್ಗೆ ತಗಲುವ ವೆಚ್ಚ ಮತ್ತು ದೀರ್ಘಕಾಲೀನ ಸೇವಾ ವೆಚ್ಚಗಳು ಅತಿಯಾಗಿವೆ ಎಂದು ರಾಜ್ಯ ವಿದ್ಯುತ್ ನಿಗಮವು ಅಧಿಕೃತವಾಗಿ ತಿಳಿಸಿತು. ವೆಚ್ಚವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ನಡೆದ ಮಾತುಕತೆಗಳು ವಿಫಲವಾಗಿದ್ದವು. ಕೇವಲ ಅದಾನಿ ಪ್ಯಾಕೇಜ್ ಮಾತ್ರವಲ್ಲದೆ, ಆಗಸ್ಟ್ 2023ರಲ್ಲಿ ಹೊರಡಿಸಲಾಗಿದ್ದ ನಾಲ್ಕೂ ಟೆಂಡರ್ಗಳನ್ನು ಆಡಳಿತಾತ್ಮಕ ಕಾರಣಗಳು ಹಾಗೂ ವೆಚ್ಚದ ಆತಂಕಗಳನ್ನು ಉಲ್ಲೇಖಿಸಿ ರದ್ದುಗೊಳಿಸಲಾಗಿತ್ತು. ಸ್ಟಾಲಿನ್ ನೇತೃತ್ವದ ಸರ್ಕಾರ ಟೆಂಡರ್ ಅನ್ನು ಹಿಂಪಡೆಯಲು ಅದಾನಿ ಸಮೂಹಕ್ಕೆ ಸಂಬಂಧಿಸಿದಂತೆ ಅಮೆರಿಕದಲ್ಲಿ ಕೇಳಿಬಂದಿದ್ದ ಭ್ರಷ್ಟಾಚಾರದ ಆರೋಪಗಳು ಹಾಗೂ ವಿವಾದಗಳೂ ಕಾರಣವಾಗಿದ್ದವು ಎಂದು ವರದಿಗಳು ಉಲ್ಲೇಖಿಸಿವೆ. ಟ್ಯಾಂಗೆಡ್ಕೊ ಈ ಹಿಂದಿನ ಸ್ಮಾರ್ಟ್ ಮೀಟರ್ ಟೆಂಡರ್ ರದ್ದುಗೊಳಿಸಿದ ನಂತರ, ಸರ್ಕಾರವು ಮರು ಟೆಂಡರ್ ಕರೆಯುವ ಯೋಜನೆಯನ್ನು ಸೂಚಿಸಿತ್ತು. ಆದರೆ, ಇತ್ತೀಚಿನ ಬೆಳವಣಿಗೆಯ ಪ್ರಕಾರ, ಹೊಸದಾಗಿ ಚುನಾಯಿತವಾಗಿರುವ ಸರ್ಕಾರವು ಈ ಯೋಜನೆಯನ್ನು ಸಂಪೂರ್ಣವಾಗಿ ಕೈಬಿಡಲು ನಿರ್ಧರಿಸಿದೆ. ಡೈಲಿ ತಂತಿ ಪತ್ರಿಕೆಯ ವರದಿಯ ಪ್ರಕಾರ ( https://www.dtnext.in/news/tamilnadu/tvk-govt-to-abandon-rs-20000-crore-worth-smart-meter-project ),, ವಿದ್ಯುತ್ ನಿಗಮದಲ್ಲಿನ ದುರುಪಯೋಗದ ಆರೋಪಗಳ ಹಿನ್ನೆಲೆಯಲ್ಲಿ ತಮಿಳುನಾಡಿನ ವಿಜಯ್ ನೇತೃತ್ವದ ಸರ್ಕಾರವು ಈ ಯೋಜನೆಯನ್ನು ಕೈಬಿಡಲು ತೀರ್ಮಾನಿಸಿದೆ. ಇದಕ್ಕೆ ಮತ್ತೊಂದು ಪ್ರಮುಖ ಕಾರಣವೆಂದರೆ, ಸರ್ಕಾರವು ಈಗಾಗಲೇ ಸಬ್ಸಿಡಿ ಮತ್ತು ಉಚಿತ ವಿದ್ಯುತ್ ಗಾಗಿ ಭಾರಿ ಮೊತ್ತವನ್ನು ವ್ಯಯಿಸುತ್ತಿದ್ದು, ಇದರ ಜೊತೆಗೆ ದುಬಾರಿ ವೆಚ್ಚದ ಸ್ಮಾರ್ಟ್ ಮೀಟರ್ ಯೋಜನೆಯನ್ನು ಜಾರಿಗೊಳಿಸಿದರೆ ಹಣಕಾಸಿನ ಒತ್ತಡ ಮತ್ತಷ್ಟು ಹೆಚ್ಚಾಗಲಿದೆ ಎಂಬ ಆತಂಕವಾಗಿದೆ. ಹೀಗಾಗಿ, ತಮಿಳಗ ವೆಟ್ರಿ ಕಳಗಂ (TVK) ನೇತೃತ್ವದ ಸರ್ಕಾರವು ವಿದ್ಯುತ್ ಇಲಾಖೆಯ ಮೇಲಿನ ಭ್ರಷ್ಟಾಚಾರದ ಆರೋಪಗಳು ಮತ್ತು ಹಣಕಾಸಿನ ಕಾರಣಗಳನ್ನು ಉಲ್ಲೇಖಿಸಿ ಸ್ಮಾರ್ಟ್ ಮೀಟರ್ ಯೋಜನೆಯನ್ನು ಕೈಬಿಟ್ಟಿದೆ. ತಮಿಳುನಾಡಿನಲ್ಲಿ ಅದಾನಿ ಸಂಸ್ಥೆಯ 20,000 ಕೋಟಿ ವೆಚ್ಚದ ಸ್ಮಾರ್ಟ್ ಮೀಟರ್ ಯೋಜನೆಯನ್ನು ರದ್ದುಗೊಳಿಸಿದ್ದು ವಿಜಯ್ ಸರ್ಕಾರ ಎಂಬ ಸಾಮಾಜಿಕ ಮಾಧ್ಯಮಗಳ ಪ್ರತಿಪಾದನೆ ದಾರಿ ತಪ್ಪಿಸುವಂತದ್ದಾಗಿದೆ. ವರದಿಗಳ ಪ್ರಕಾರ, ಈ ಸ್ಮಾರ್ಟ್ ಮೀಟರ್ ಯೋಜನೆಯ ಟೆಂಡರ್ ಅನ್ನು ವೆಚ್ಚದ ಕಾರಣಗಳನ್ನು ನೀಡಿ ಈ ಹಿಂದೆಯೇ DMK ನೇತೃತ್ವದ ತಮಿಳುನಾಡು ಸರ್ಕಾರ ರದ್ದುಗೊಳಿಸಿತ್ತು. ಪ್ರಸ್ತುತ ಹೊಸ ಸರ್ಕಾರವು ಇಡೀ ಯೋಜನೆಯನ್ನೇ ಕೈಬಿಟ್ಟಿದ್ದರೂ, ಅದಾನಿ ಟೆಂಡರ್ ರದ್ದತಿಯ ಸಂಪೂರ್ಣ ಶ್ರೇಯಸ್ಸನ್ನು ವಿಜಯ್ ಸರ್ಕಾರಕ್ಕೆ ಮಾತ್ರ ನೀಡುವುದು ತಪ್ಪು ಮಾಹಿತಿಯಾಗಿದೆ.

ವಾರ್ತಾ ಭಾರತಿ 10 Jun 2026 9:24 pm

ಮಂಗಳೂರು: ನರೇಂದ್ರ ಮೋದಿ ದೀರ್ಘಾವಧಿ ಪ್ರಧಾನಿ ಹಿನ್ನೆಲೆ; ವಿಶೇಷ ರಂಗ ಪೂಜೆ

ಮಂಗಳೂರು,ಜೂ.10: ಪ್ರಧಾನಿ ನರೇಂದ್ರ ಮೋದಿಯ 4,399 ದಿನಗಳ ಆಡಳಿತ ಹಾಗೂ ದೇಶದ ದೀರ್ಘಾವಧಿಯ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ಹಿನ್ನೆಲೆಯಲ್ಲಿ ಬಿಜೆಪಿ ಮಂಗಳೂರು ನಗರ ದಕ್ಷಿಣ ಮಂಡಲದ ವತಿಯಿಂದ ಕದ್ರಿ ದೇವಸ್ಥಾನದಲ್ಲಿ ಬುಧವಾರ ವಿಶೇಷ ರಂಗ ಪೂಜೆ ನಡೆಯಿತು. ಈ ಸಂದರ್ಭ ಶಾಸಕ ವೇದವ್ಯಾಸ ಕಾಮತ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪ್ರೇಮಾನಂದ ಶೆಟ್ಟಿ, ಯತೀಶ್ ಆರ್ವರ್, ಮಂಡಲದ ಅಧ್ಯಕ್ಷ ರಮೇಶ್ ಕಂಡೆಟ್ಟು, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಮಂಜುಳಾ ರಾವ್, ಯುವ ಮೋರ್ಚಾ ಜಿಲ್ಲಾಧ್ಯಕ್ಷ ನಂದನ್ ಮಲ್ಯ, ಮಾಜಿ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ವಿಧಾನ ಪರಿಷತ್ ಮಾಜಿ ಸದಸ್ಯ ಮೋನಪ್ಪ ಭಂಡಾರಿ, ಪಕ್ಷದ ಮುಖಂಡರಾದ ಸಂಜಯ್ ಪ್ರಭು, ನಿತಿನ್ ಕುಮಾರ್, ರಾಜ್‌ಗೋಪಾಲ್ ರೈ ಮತ್ತಿತರರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 10 Jun 2026 9:14 pm