SENSEX
NIFTY
GOLD
USD/INR

Weather

35    C
...

Kalaburagi | ಪ್ರಧಾನಿ ಮೋದಿಯಿಂದ ನೀತಿ ಸಂಹಿತೆ ಉಲ್ಲಂಘನೆ : ಕೆ. ನೀಲಾ ಆರೋಪ

ಕಲಬುರಗಿ : ಚುನಾವಣಾ ಅವಧಿಯಲ್ಲಿ ಸಾರ್ವಜನಿಕ ಪ್ರಸಾರ ಮಾಧ್ಯಮದ ದುರುಪಯೋಗ ನಡೆದಿದೆ ಎಂದು ಆರೋಪಿಸಿ ಭಾರತ ಕಮ್ಯುನಿಸ್ಟ್ ಪಕ್ಷವು ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದೆ ಎಂದು ಪಕ್ಷದ ಕಲಬುರಗಿ ಜಿಲ್ಲಾ ಕಾರ್ಯದರ್ಶಿ ಕೆ. ನೀಲಾ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಎ.18ರ, 2026ರಂದು ಪ್ರಧಾನಮಂತ್ರಿ ಮೋದಿ ಅವರು ರಾಷ್ಟ್ರವನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ, ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದರೂ ದೂರದರ್ಶನ ಮೂಲಕ ರಾಜಕೀಯ ಸಂದೇಶ ನೀಡಲಾಗಿದೆ. ತಮಿಳುನಾಡು ಮತ್ತು ಪಶ್ಚಿಮ ಬಂಗಾಳ ರಾಜ್ಯ ವಿಧಾನಸಭಾ ಚುನಾವಣೆಗಳು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ, ಈ ರೀತಿಯ ಪ್ರಸಾರವು ಮತದಾರರ ಮೇಲೆ ಪ್ರಭಾವ ಬೀರುವ ಪ್ರಯತ್ನವಾಗಿದೆ ಎಂದು ಸಿಪಿಐ(ಎಂ) ಅಭಿಪ್ರಾಯಪಟ್ಟಿದೆ. ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎಂ. ಎ. ಬೇಬಿ ಅವರು ಚುನಾವಣಾ ಆಯೋಗಕ್ಕೆ ಬರೆದಿರುವ ಪತ್ರದಲ್ಲಿ, “ಸಾರ್ವಜನಿಕ ಪ್ರಸಾರ ಮಾಧ್ಯಮವನ್ನು ರಾಜಕೀಯ ಪ್ರಚಾರಕ್ಕಾಗಿ ಬಳಸಿರುವುದು ಮಾದರಿ ನೀತಿ ಸಂಹಿತೆಯ ಗಂಭೀರ ಉಲ್ಲಂಘನೆಯಾಗಿದೆ” ಎಂದು ಉಲ್ಲೇಖಿಸಿದ್ದಾರೆ. ಪತ್ರದಲ್ಲಿ ಭಾಷಣದ ವಿಷಯವಸ್ತು ಮತ್ತು ಧೋರಣೆ ಸರ್ಕಾರದ ಮಾಹಿತಿ ವಿನಿಮಯಕ್ಕಿಂತ ಹೆಚ್ಚು ರಾಜಕೀಯ ಸ್ವರೂಪ ಹೊಂದಿದ್ದು, ವಿಪಕ್ಷಗಳನ್ನು ಗುರಿಯಾಗಿಸಿಕೊಂಡಿದೆ ಎಂದು ಹೇಳಲಾಗಿದೆ. ಇದೇ ವೇಳೆ, ಮಾದರಿ ನೀತಿ ಸಂಹಿತೆಯ ವಿಭಾಗ 4 ಪ್ರಕಾರ, ಚುನಾವಣಾ ಅವಧಿಯಲ್ಲಿ ಸಾರ್ವಜನಿಕ ಖಜಾನೆಯ ವೆಚ್ಚದಲ್ಲಿ ಮಾಧ್ಯಮಗಳನ್ನು ಬಳಸಿಕೊಂಡು ರಾಜಕೀಯ ಪ್ರಚಾರ ನಡೆಸುವುದು ನಿಷಿದ್ಧವಾಗಿದೆ ಎಂಬುದನ್ನು ತಿಳಿಸಿದ್ದಾರೆ. “ಚುನಾವಣೆಯ ಸಮಯದಲ್ಲಿ ಸಾರ್ವಜನಿಕ ಪ್ರಸಾರ ವೇದಿಕೆಯನ್ನು ಬಳಸುವುದರಿಂದ ಸಮಾನ ಅವಕಾಶಗಳ ತತ್ವಕ್ಕೆ ಧಕ್ಕೆಯುಂಟಾಗುತ್ತದೆ ಮತ್ತು ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣಾ ಪ್ರಕ್ರಿಯೆಗೆ ಹಾನಿಯಾಗುತ್ತದೆ” ಎಂದು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ, ಪ್ರಧಾನಮಂತ್ರಿ ಸೇರಿದಂತೆ ಸಂಬಂಧಿತ ಅಧಿಕಾರಿಗಳ ವಿರುದ್ಧ ತಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ವಾರ್ತಾ ಭಾರತಿ 20 Apr 2026 6:23 pm

ಹುಲಸೂರ್ | ಗಾಳಿ, ಮಳೆಗೆ ಸೌರ ಹೈಮಾಸ್ಟ್ ಕುಸಿತ : ತಪ್ಪಿದ ಅನಾಹುತ

ಹುಲಸೂರ್: ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ ಕೆಕೆಆರ್‌ಡಿಬಿ 2023–24ನೇ ಸಾಲಿನ ಅನುದಾನದಲ್ಲಿ ಸುಮಾರು 14.55 ಲಕ್ಷ ರೂ. ವೆಚ್ಚದಲ್ಲಿ ಸ್ಥಾಪಿಸಲಾದ ಸೌರ ಹೈಮಾಸ್ಟ್ ಕಂಬವು ರವಿವಾರ ಸಂಜೆ ಗುಡುಗು, ಮಿಂಚು ಸಹಿತ ಬಿರುಸಿನ ಗಾಳಿಗೆ ಉರುಳಿ ಬಿದ್ದಿದೆ. ಘಟನೆಯಲ್ಲಿ ಯಾವುದೇ ಅನಾಹುತ ಸಂಭವಿಸದೇ ದೊಡ್ಡ ದುರಂತ ತಪ್ಪಿದಂತಾಗಿದೆ. ರವಿವಾರ ಸಂಜೆ ಸುಮಾರು 5 ಗಂಟೆ ವೇಳೆಗೆ ಏಕಾಏಕಿ ಗಾಳಿ ಹಾಗೂ ಮಳೆಯ ತೀವ್ರತೆ ಹೆಚ್ಚಾದ ಸಂದರ್ಭದಲ್ಲಿ ಹೈಮಾಸ್ಟ್ ಕಂಬವು ವಿದ್ಯುತ್ ಕೇಬಲ್ ಮೇಲೆಯೇ ಬಿದ್ದಿದೆ. ಆ ಸಮಯದಲ್ಲಿ ಆ ಪ್ರದೇಶದಲ್ಲಿ ಜನಸಂಚಾರ ಕಡಿಮೆ ಇದ್ದುದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಇತ್ತೀಚಿನ ದಿನಗಳಲ್ಲಿ ಗಾಳಿ–ಮಳೆಯ ತೀವ್ರತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹೈಮಾಸ್ಟ್ ಕಂಬಗಳ ಗುಣಮಟ್ಟ ಹಾಗೂ ಸ್ಥಾಪನಾ ವಿಧಾನಗಳ ಕುರಿತು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ. ನಿರ್ಮಾಣದಲ್ಲಿ ತಾಂತ್ರಿಕ ದೋಷವಿದೆಯೇ ಅಥವಾ ಭದ್ರತಾ ಕ್ರಮಗಳಲ್ಲಿ ಲೋಪವಿದೆಯೇ ಎಂಬ ಪ್ರಶ್ನೆಗಳು ಉದ್ಭವವಾಗಿವೆ. ಘಟನೆ ಬಳಿಕ ಸಂಬಂಧಿತ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಾನಿಗೊಂಡ ಸೌರ ಹೈಮಾಸ್ಟ್ ಕಂಬವನ್ನು ತೆರವುಗೊಳಿಸುವ ಕಾರ್ಯ ಆರಂಭಗೊಂಡಿದ್ದು, ಮುಂದಿನ ಕ್ರಮಗಳ ಕುರಿತು ಪರಿಶೀಲನೆ ಮುಂದುವರಿದಿದೆ. ಸಾರ್ವಜನಿಕ ಸ್ಥಳಗಳಾದ ಆಸ್ಪತ್ರೆ ಆವರಣದಲ್ಲಿ ಸ್ಥಾಪಿಸಲಾದ ಮೂಲಸೌಕರ್ಯಗಳ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದು, ಇಂತಹ ಅವಘಡಗಳು ಮರುಕಳಿಸದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ವಾರ್ತಾ ಭಾರತಿ 20 Apr 2026 6:20 pm

ಜಾತಿವ್ಯವಸ್ಥೆ ಇರುವವರೆಗೂ ಬಸವ ತತ್ವಗಳು ಪ್ರಸ್ತುತವಾಗಿರುತ್ತವೆ : ಮುಖ್ಯಮಂತ್ರಿ ಸಿದ್ದರಾಮಯ್ಯ

ಬಸವ ಜಯಂತಿ, ʼಬಸವಶ್ರೀʼ ಪ್ರಶಸ್ತಿ ಪ್ರದಾನ ಕಾರ್ಯಕ್ರಮ

ವಾರ್ತಾ ಭಾರತಿ 20 Apr 2026 6:17 pm

ಹುಲಸೂರ್‌ನಲ್ಲಿ 893ನೇ ಬಸವ ಜಯಂತಿ

ಬಸವಣ್ಣ ಸಮಾನತೆಯ ಸಂದೇಶ ಸಾರಿದ ವಿಶ್ವಗುರು : ಶಿವಾನಂದ ಸ್ವಾಮೀಜಿ

ವಾರ್ತಾ ಭಾರತಿ 20 Apr 2026 6:15 pm

ಭಾರತದ ಹಾರ್ಮುಜ್‌ ಕಾರ್ಯತಂತ್ರಕ್ಕೆ ಜೈ ಎಂದ ದಕ್ಷಿಣ ಕೊರಿಯಾ; ಚೀನಾಗೆ ಶುರುವಾಯ್ತು ನಡುಕ!

ಆಗ್ನೇಯ ಏಷ್ಯಾದಲ್ಲಿ ವಿಭಿನ್ನ ಕಾರ್ಯತಂತ್ರದ ಹಿತಾಸಕ್ತಿಯನ್ನು ಹೊಂದಿರುವ ಏಷ್ಯಾದ ಶಕ್ತಿ ಕೇಂದ್ರಗಳಾದ ಭಾರತ, ದಕ್ಷಿಣ ಕೊರಿಯಾ ಮತ್ತು ಚೀನಾ, ಈ ಪಾರುಪತ್ಯ ಸ್ಥಾಪನೆಗಾಗಿ ಪರಸ್ಪರ ಸ್ಪರ್ಧೆ ನಡೆಸುತ್ತಿವೆ. ಆದರೆ ಭಾರತ ಮತ್ತು ದಕ್ಷಿಣ ಕೊರಿಯಾ ನಡುವಿನ ಗಟ್ಟಿ ರಜತಾಂತ್ರಿಕ ಸಂಬಂಧ, ಚೀನಾದ ಆತಂಕವನ್ನು ಹೆಚ್ಚಿಸುತ್ತಲೇ ಇರುತ್ತದೆ. ಅದಕ್ಕೆ ಪೂರಕವಾಗಿ ಬರೋಬ್ಬರಿ ಎಂಟು ವರ್ಷಗಳ ಬಳಿಕ ಭಾರತ ಪ್ರವಾಸ ಕೈಗೊಂಡಿರುವ ದಕ್ಷಿಣ ಕೊರಿಯಾ ಅಧ್ಯಕ್ಷರು, ಜಾಗತಿಕ ವಿಪ್ಲವಗಳಿಗೆ ಭಾರತದ ಬಳಿ ಪರಿಹಾರ ಇದೆ ಎಂದು ಹೇಳಿದ್ದಾರೆ. ಅಧ್ಯಕ್ಷ ಲಿ ಜೇ ಮ್ಯುಂಗ್‌, ಪ್ರಧಾನಿ ಮೋದಿ ಜಂಟಿ ಪತ್ರಿಕಾಗೋಷ್ಠಿ, ಚೀನಾದ ನಿದ್ದೆಗೆಡೆಸಿದೆ.

ವಿಜಯ ಕರ್ನಾಟಕ 20 Apr 2026 6:12 pm

TN Election Prediction: ತಮಿಳುನಾಡಲ್ಲಿ ಟಿವಿಕೆ 3ನೇ ಪ್ರಮುಖ ಪಕ್ಷ, ಯಾರಿಗೆ ಗಲುವು, ಯಾರಿಗೆ ಸೋಲು?

ಚೆನ್ನೈ: ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆ 2026 ಕಣ ರಂಗೇರಿದೆ. ಸ್ಥಳೀಯ ನಾಯಕರು ಮಾತ್ರವಲ್ಲದೆ ಕರ್ನಾಟಕ, ಇತರ ರಾಜ್ಯಗಳ ಸಿಎಂ, ಡಿಸಿಎಂ ಹಾಗೂ ಇತರ ನಾಯಕರು ಭರ್ಜರಿ ಪ್ರಚಾರ ನಡೆಸಿದ್ದಾರೆ. ಸದರಿ ಚುನಾವಣೆಗೆ ಸಂಬಂಧಿಸಿದಂತೆ ಚುನಾವಣೆ ಪೂರ್ವ 'ನಕ್ಕೀರನ್ ಮೆಗಾ ಸಮೀಕ್ಷೆ' ಪ್ರಕಟವಾಗಿದೆ. ಇದರಲ್ಲಿ ದ್ರಾವಿಡ ಮುನ್ನೇತ್ರ ಕಳಗಂ (DMK) ಪಕ್ಷವು ಸಾಕಷ್ಟು ಪ್ರತಿರೋಧದ ನಡುವೆ ಮುನ್ನಡೆ ಸಾಧಿಸಲಿದೆ

ಒನ್ ಇ೦ಡಿಯ 20 Apr 2026 6:06 pm

ಕಲ್ಯಾಣ ಕ್ರಾಂತಿ ಇಂದಿನ ಆಧುನಿಕ ಸಮಾಜಕ್ಕೂ ಪ್ರಸ್ತುತ : ಸಚಿವ ಈಶ್ವರ್ ಖಂಡ್ರೆ

ಬೀದರ್ : 12ನೇ ಶತಮಾನದಲ್ಲಿ ಬಸವಣ್ಣನವರು ನಡೆಸಿದ ಕಲ್ಯಾಣ ಕ್ರಾಂತಿ ಇಂದಿನ ಆಧುನಿಕ ಸಮಾಜಕ್ಕೂ ಅತ್ಯಂತ ಪ್ರಸ್ತುತವಾಗಿದೆ ಎಂದು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯವರ ಸಂಯುಕ್ತಾಶ್ರಯದಲ್ಲಿ ನಗರದ ಡಾ.ಚನ್ನಬಸವ ಪಟ್ಟದೇವರ ರಂಗಮಂದಿರದಲ್ಲಿ ಸೋಮವಾರ ಆಯೋಜಿಸಿದ ಸಾಂಸ್ಕೃತಿಕ ನಾಯಕ ಬಸವಣ್ಣನವರ ಜಯಂತ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಯಾರು ಮೇಲಲ್ಲ, ಯಾರು ಕೀಳಲ್ಲ ಎಂಬ ತತ್ವದಡಿ ಜಾತಿರಹಿತ, ಲಿಂಗಭೇದವಿಲ್ಲದ ಸಮ ಸಮಾಜ ಕಟ್ಟಲು ಬಸವಣ್ಣನವರು ಶ್ರಮಿಸಿದ್ದರು. ಮೌಢ್ಯತೆ, ಕಂದಾಚಾರ ಮತ್ತು ಅಸ್ಪೃಶ್ಯತೆಯ ವಿರುದ್ಧ ಅವರು ಅಂದೇ ಸಮರ ಸಾರಿದ್ದರು. ಇಂದಿಗೂ ಸಮಾಜದಲ್ಲಿ ನೆಲೆಸಿರುವ ಅಸಮಾನತೆಯನ್ನು ಹೋಗಲಾಡಿಸಲು ಬಸವ ತತ್ವವೇ ಮದ್ದಾಗಿದೆ ಎಂದರು. ಜಗತ್ತಿನಲ್ಲಿ ಮೊಟ್ಟಮೊದಲ ಬಾರಿಗೆ ಮಹಿಳೆಯರಿಗೆ ಸಮಾನ ಗೌರವ ಮತ್ತು ಹಕ್ಕನ್ನು ನೀಡಿದ ಕೀರ್ತಿ ಬಸವಣ್ಣನವರಿಗೆ ಸಲ್ಲುತ್ತದೆ. ಆದರೆ, ಇಂದಿನ ದಿನಗಳಲ್ಲಿ ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯ ಮತ್ತು ಅತ್ಯಾಚಾರಗಳನ್ನು ಗಮನಿಸಿದರೆ, ನಾವು ಬಸವ ತತ್ವದಿಂದ ದೂರ ಸರಿಯುತ್ತಿದ್ದೇವೆಯೇ ಎಂಬ ಪ್ರಶ್ನೆ ಕಾಡುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು. ಯುವಜನತೆ ಮತ್ತು ಸಾಮಾಜಿಕ ಮಾಧ್ಯಮಗಳ ಪ್ರಭಾವ ಇಂದಿನ ಯುವ ಪೀಳಿಗೆಯ ವಿದ್ಯಾಭ್ಯಾಸದಲ್ಲಿ ಮುಂಚೂಣಿಯಲ್ಲಿದ್ದರೂ, ದಾರಿ ತಪ್ಪುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಒಂದು ಅಧ್ಯಯನದ ಪ್ರಕಾರ ಶೇ. 30 ರಷ್ಟು ಯುವಕರು ಕೆಟ್ಟ ಚಟಗಳಿಗೆ ಬಲಿಯಾಗುತ್ತಿದ್ದಾರೆ. ಇನ್ನು ಶೇ.30 ರಷ್ಟು ಯುವಜನತೆ ಇಂಟರ್ನೆಟ್, ಫೇಸ್‌ಬುಕ್ ಮತ್ತು ರೀಲ್ಸ್ ಮದದಲ್ಲಿ ಮುಳುಗಿ ಮಾನಸಿಕವಾಗಿ ದುರ್ಬಲರಾಗುತ್ತಿದ್ದಾರೆ. ಇದು ಕುಟುಂಬ ವ್ಯವಸ್ಥೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದ್ದು, ಸಮಾಜ ಈ ಬಗ್ಗೆ ಗಂಭೀರವಾಗಿ ಆಲೋಚಿಸಬೇಕಿದೆ ಎಂದು ಅವರು ಹೇಳಿದರು. ಜಾಗತಿಕ ಯುದ್ಧ ಮತ್ತು ಶಾಂತಿಯ ಅಗತ್ಯ : ಇಸ್ರೇಲ್-ಇರಾನ್, ರಷ್ಯಾ-ಉಕ್ರೇನ್ ಯುದ್ಧಗಳು ಜಗತ್ತಿನಾದ್ಯಂತ ಅಶಾಂತಿಯನ್ನುಂಟು ಮಾಡುತ್ತಿವೆ. ನಮ್ಮ ದೇಶದ ಮಣಿಪುರದಲ್ಲಿ ನಡೆಯುತ್ತಿರುವ ಜನಾಂಗೀಯ ಸಂಘರ್ಷಗಳು ಮನುಕುಲಕ್ಕೆ ಕಪ್ಪುಚುಕ್ಕೆಯಾಗಿವೆ. ಇಂತಹ ಸಂದರ್ಭದಲ್ಲಿ ಬಸವಣ್ಣನವರ 'ಇವನಾರವ ಇವನಾರವ ಎನ್ನದೆ ಇವ ನಮ್ಮವ ಇವ ನಮ್ಮವ' ಎಂಬ ಸಹೋದರತ್ವದ ಸಂದೇಶ ಸಾರುವ ಅವಶ್ಯಕತೆ ಇದೆ. ಆಸ್ತಿ, ಹಣ ಮತ್ತು ಸ್ವಾರ್ಥಕ್ಕಾಗಿ ಸಂಬಂಧಗಳನ್ನು ಕೊಲೆ ಮಾಡುತ್ತಿರುವ ಈ ಕಾಲದಲ್ಲಿ, ನೈತಿಕ ಶಿಕ್ಷಣ ಮತ್ತು ಬಸವಣ್ಣನವರ ಮಾನವೀಯ ಮೌಲ್ಯ ಅಳವಡಿಸಿಕೊಳ್ಳುವುದೊಂದೇ ಸಮಾಜದ ಸಕಲ ಸಮಸ್ಯೆಗಳಿಗೆ ಮದ್ದಾಗಿದೆ ಎಂದು ಅವರು ತಿಳಿಸಿದರು. ನಮ್ಮ ಸರ್ಕಾರ ಅನುಭವ ಪಂಟಪ ನಿರ್ಮಾಣಕ್ಕೆ ಬದ್ಧವಾಗಿದ್ದು, ಈಗಾಗಲೇ 280 ಕೋಟಿ ರೂ. ಬಿಡುಗಡೆ ಮಾಡಿದೆ. ಇನ್ನು 250 ಕೋಟಿ ರೂ. ಬೇಕಾಗುವ ಸಾಧ್ಯತೆ ಇದೆ. ಅಂದುಕೊಂಡದಂತೆ ನಡೆದರೆ ಮುಂದಿನ ಬಸವ ಜಯಂತಿ ಒಳಗಾಗಿ ಅನುಭವ ಮಂಟಪ ಲೋಕಾರ್ಪಣೆಗೊಳಿಸಲಾಗುವುದು. ನಾನು ಮುತುವರ್ಜಿ ವಹಿಸಿ ಬೆಂಗಳೂರಿನಲ್ಲಿ 153 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವ ಸಸ್ಯ ಉದ್ಯಾನವನಕ್ಕೆ ಬಸವೇಶ್ವರ್ ಅವರು ಹೆಸರಿಟ್ಟಿದ್ದೇನೆ ಎಂದರು. ಪೌರಾಡಳಿತ ಹಾಗೂ ಹಜ್ ಖಾತೆ ಸಚಿವ ರಹೀಂ ಖಾನ್ ಅವರು ಮಾತನಾಡಿ, ಬಸವಣ್ಣನವರ ಸಂದೇಶ ಮತ್ತು ವಚನ ಸಿದ್ಧಾಂತಗಳು ಕೇವಲ ಮಾತಿಗೆ ಸೀಮಿತವಾಗದೆ, ನಮ್ಮ ದೈನಂದಿನ ಬದುಕಿನ ಭಾಗವಾಗಬೇಕು. ಜಿಲ್ಲೆಯ ಜನರು ಈ ಬಸವಣ್ಣನವರ ತತ್ವಾರ್ದಶಗಳು ಪಾಲಿಸಿದಾಗ ಮಾತ್ರ ವಿಶ್ವಗುರು ಬಸವಣ್ಣನವರ ಆಶಯಗಳು ಜಗತ್ತಿಗೆ ತಲುಪಲು ಸಾಧ್ಯ ಎಂದು ನುಡಿದರು. ಶಾಸಕ ಶೈಲೇಂದ್ರ ಬೆಲ್ದಾಳೆ, ಚರಮೂರ್ತಿ ಚರಂತೇಶ್ವರ ವಿರಕ್ತಮಠ ಬಸವಬೆಳವಿಯ ಶರಣ ಬಸವ ಮಹಾಸ್ವಾಮಿ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ತಹಶಿಲ್ದಾರ್ ರವೀಂದ್ರ ದಾಮಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ್ ಸಿಂಧೆ, ತಹಸೀಲ್ದಾರ್ ಗ್ರೇಡ್-2 ಜಿಯಾವೋದ್ದಿನ್, ಬಸವ ಜಯಂತಿ ಉತ್ಸವ ಸಮಿತಿಯ ಅಧ್ಯಕ್ಷ ರಾಜನೀಶ್ ವಾಲಿ, ಪ್ರಧಾನ ಕಾರ್ಯದರ್ಶಿ ಶಶಿಧರ್ ಹೊಸಳ್ಳಿ, ಮಹಿಳಾ ಘಟಕದ ಅಧ್ಯಕ್ಷೆ ದೇವಿಕಾ ನಾಗೋರೆ, ಶಿವಶರಣಪ್ಪ ವಾಲಿ, ಶ್ರೀಕಾಂತ್ ಸ್ವಾಮಿ, ಶಾಮಣ್ಣ ಬಾವಗಿ ಹಾಗೂ ಸುರೇಶ್ ಚನ್ನಶೆಟ್ಟಿ ಸೇರಿದಂತೆ ಸಮಾಜದ ಮುಖಂಡರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 20 Apr 2026 5:55 pm

ಕೋಲ್ಕತಾಗೆ ಚೊಚ್ಚಲ ಗೆಲುವಿನ ಸಂಭ್ರಮಾಚರಣೆ ಮಾಡುತ್ತಿರಬೇಕಾದರೆ ವೈಭವ್ ಸೂರ್ಯವಂಶಿ ಕಣ್ಣೀರು! ಬಾಲಕನಿಗೇನಾಯ್ತು?

Vaibhav Suryavanshi In IPL 2026- ಐಪಿಎಲ್ 2026ರ ಕೆಕೆಆರ್ ವಿರುದ್ಧದ ರೋಚಕ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಸೋಲನ್ನಪ್ಪಿದಾಗ, 15 ವರ್ಷದ ಉದಯೋನ್ಮುಖ ತಾರೆ ವೈಭವ್ ಸೂರ್ಯವಂಶಿ ಮೈದಾನದಲ್ಲೇ ಕಣ್ಣೀರಿಟ್ಟ ಭಾವನಾತ್ಮಕ ಘಟನೆ ನಡೆಯಿತು. ಈ ಪಂದ್ಯದಲ್ಲಿ 28 ಎಸೆತಗಳಲ್ಲಿ 46 ರನ್ ಗಳಿಸಿ ತಂಡಕ್ಕೆ ಉತ್ತಮ ಆರಂಭ ನೀಡಿದ್ದರೂ, ವೈಭವ್ ತಂಡದ ಸೋಲಿನಿಂದ ದುಃಖಿತರಾಗಿದ್ದರು. ಕೆಕೆಆರ್ ಕೋಚ್ ದಿಶಾಂತ್ ಯಾಗ್ನಿಕ್ ಅವರಿಗೆ ಸಾಂತ್ವನ ಹೇಳುವ ಮೂಲಕ ಕ್ರೀಡಾಸ್ಫೂರ್ತಿ ಮೆರೆದರು. ಆರೆಂಜ್ ಕ್ಯಾಪ್ ರೇಸ್‌ನಲ್ಲಿರುವ ವೈಭವ್ ಅವರ ಆಟದ ಮೇಲಿರುವ ಬದ್ಧತೆ ಮತ್ತು ಹೋರಾಟದ ಮನೋಭಾವಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ವಿಜಯ ಕರ್ನಾಟಕ 20 Apr 2026 5:55 pm

ರಾಪಿಡೋ ಚಾಲಕನಿಂದ ಯುವತಿಗೆ ರಾತ್ರಿ 12ಕ್ಕೆ ಅಸಭ್ಯ ಸಂದೇಶ; ಸ್ಕ್ರೀನ್‌ ಶಾಟ್‌ ಹಂಚಿಕೊಂಡು ಬೇಸರ; ಕಂಪನಿ ಪ್ರತಿಕ್ರಿಯೆ

ಘಾಜಿಯಾಬಾದ್‌ನಲ್ಲಿ ರಾಪಿಡೋ ಚಾಲಕನೊಬ್ಬ ಪ್ರಯಾಣಿಕ ಯುವತಿಗೆ ವಾಟ್ಸಾಪ್‌ನಲ್ಲಿ ಅಸಭ್ಯ ಸಂದೇಶಗಳನ್ನು ಕಳುಹಿಸಿ ಕಿರುಕುಳ ನೀಡಿದ್ದಾನೆ. ಯುವತಿ ಹಂಚಿಕೊಂಡ ಈ ಕಹಿ ಅನುಭವದ ವಿಡಿಯೋ ವೈರಲ್ ಆದ ನಂತರ, ರಾಪಿಡೋ ಸಂಸ್ಥೆ ಬಹಿರಂಗವಾಗಿ ಕ್ಷಮೆಯಾಚಿಸಿದೆ ಮತ್ತು ಚಾಲಕನ ವರ್ತನೆಯನ್ನು ಅನೈತಿಕ ಎಂದು ಖಂಡಿಸಿದೆ. ಈ ಘಟನೆಯು ಬೈಕ್ ಟ್ಯಾಕ್ಸಿಗಳಲ್ಲಿ ಮಹಿಳೆಯರ ಸುರಕ್ಷತೆ ಮತ್ತು ಖಾಸಗಿತನದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದೆ.

ವಿಜಯ ಕರ್ನಾಟಕ 20 Apr 2026 5:53 pm

Bidar | ಬಸ್–ಪಿಕಪ್ ವಾಹನ ಢಿಕ್ಕಿ; ಚಾಲಕ ಮೃತ್ಯು

ಬೀದರ್: ಭಾಲ್ಕಿ ತಾಲೂಕಿನ ಖಾನಾಪುರ್ ಗ್ರಾಮದ ಹತ್ತಿರ ರವಿವಾರ ಸಾಯಂಕಾಲ ಬಸ್ ಮತ್ತು ಬುಲೆರೋ ಪಿಕಪ್ ವಾಹನದ ನಡುವೆ ಸಂಭವಿಸಿದ ಅಪಘಾತದಲ್ಲಿ ಪಿಕಪ್ ಚಾಲಕ ಮೃತಪಟ್ಟ ಘಟನೆ ನಡೆದಿದೆ. ಮೃತರನ್ನು ಚಿಲ್ಲರ್ಗಿ ಗ್ರಾಮದ ಪ್ರಕಾಶ್ (30) ಎಂದು ಗುರುತಿಸಲಾಗಿದೆ. ಮಾಹಿತಿಯ ಪ್ರಕಾರ, ಪ್ರಕಾಶ್ ಹಾಗೂ ಶಿವಕುಮಾರ್ ಇಬ್ಬರೂ ಬುಲೆರೋ ಪಿಕಪ್ ವಾಹನದಲ್ಲಿ ಮಾವಿನಕಾಯಿ ತುಂಬಿಕೊಂಡು ಲಾತೂರಿಗೆ ತೆರಳುತ್ತಿದ್ದ ವೇಳೆ ಖಾನಾಪುರ್ ಬಳಿ ಮುಂದಿನ ಬಸ್ ತಕ್ಷಣ ಬ್ರೇಕ್ ಹಾಕಿದೆ. ಇದರ ಪರಿಣಾಮವಾಗಿ ಹಿಂದೆ ಬರುತ್ತಿದ್ದ ಪಿಕಪ್ ವಾಹನ ಬಸ್ ಹಿಂಭಾಗಕ್ಕೆ ಢಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಚಾಲಕ ಪ್ರಕಾಶ್ ಹಾಗೂ ಕ್ಲೀನರ್ ಶಿವಕುಮಾರ್ ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದರು. ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯದಲ್ಲೇ ಪ್ರಕಾಶ್ ಮೃತಪಟ್ಟಿದ್ದಾರೆ. ಶಿವಕುಮಾರ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುರಿತು ಧನ್ನೂರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

ವಾರ್ತಾ ಭಾರತಿ 20 Apr 2026 5:51 pm

Narendra Modi: ಬೀದಿ ಬದಿ 10 ರೂಪಾಯಿಗೆ ಕಡ್ಲೆಪುರಿ ಖರೀದಿಸಿದ ಪ್ರಧಾನಿ ಮೋದಿ, ವಿಡಿಯೋ ಭಾರಿ ವೈರಲ್

Narendra Modi: ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣಾ ಪ್ರಚಾರದ ನಡುವೆ ಪ್ರಧಾನಿ ನರೇಂದ್ರ ಮೋದಿ ಅವರು ತೋರಿದ ಸರಳತೆ ಇದೀಗ ಸಖತ್ ಸದ್ದು ಮಾಡುತ್ತಿದೆ. ಸ್ಥಳೀಯರೊಂದಿಗೆ ಸೇರಿ ಅವರು ಬೀದಿ ಬದಿಯಲ್ಲಿನ ಅಂಗಡಿಯೊಂದಕ್ಕೆ ಭೇಟಿ ನೀಡಿ 10 ರೂಪಾಯಿಗೆ ಕಡ್ಲೆಪುರಿ ಖರೀದಿ ಮಾಡಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗಿದೆ. ಜಾರ್ಗ್ರಾಮ್ ಪ್ರವಾಸದ ವೇಳೆ ಅವರು

ಒನ್ ಇ೦ಡಿಯ 20 Apr 2026 5:49 pm

Yadgiri | ಶಹಾಪುರದಲ್ಲಿ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನ ಆರೋಪ : ಪ್ರಕರಣ ದಾಖಲು

ಯಾದಗಿರಿ : ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿರುವ ಘಟನೆ ಜಿಲ್ಲೆಯ ಶಹಾಪುರ ತಾಲೂಕಿನ ಶಾರದಳ್ಳಿ ಗ್ರಾಮದಲ್ಲಿ ನಡೆದಿದೆ. ರವಿವಾರ ಬೆಳಗಿನ ಜಾವ ಸುಮಾರು 4 ಗಂಟೆಗೆ ಬಾಲಕಿ ಬಹಿರ್ದೆಸೆಗೆ ತೆರಳಿದ್ದ ವೇಳೆ ಅಪರಿಚಿತರು ಆಕೆಯನ್ನು ಅಡ್ಡಗಟ್ಟಿ, ಕೈಕಾಲು ಕಟ್ಟಿ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಬಳಿಕ ಯಾವುದೋ ವಾಹನದ ಶಬ್ದ ಕೇಳಿದ ಹಿನ್ನೆಲೆಯಲ್ಲಿ ಆರೋಪಿಗಳು ಬಾಲಕಿಯನ್ನು ಸ್ಥಳದಲ್ಲೇ ಬಿಟ್ಟು ಕಾಲುವೆ ಪಕ್ಕ ಎಸೆದು ಪರಾರಿಯಾಗಿದ್ದಾರೆ ಎನ್ನಲಾಗಿದೆ. ಬೆಳಗ್ಗೆ ಸುಮಾರು 8 ಗಂಟೆಗೆ ಗ್ರಾಮಸ್ಥರು ಬಾಲಕಿಯನ್ನು ಕಂಡು ಪೋಷಕರಿಗೆ ಮಾಹಿತಿ ನೀಡಿದ್ದಾರೆ. ನಂತರ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಬಾಲಕಿಯನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಎಸ್‌ಪಿ ಪೃತ್ವಿಕ್ ಶಂಕರ್ ಅವರು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಬಾಲಕಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರೋಗ್ಯ ಸ್ಥಿರವಾಗಿದೆ. ಅವರ ಹೇಳಿಕೆ ಪಡೆದುಕೊಳ್ಳಲಾಗಿದೆ. ವೈದ್ಯಕೀಯ ಪರೀಕ್ಷಾ ವರದಿ ನಿರೀಕ್ಷೆಯಲ್ಲಿದ್ದೇವೆ. -ಎಸ್.ಎಂ.ಪಾಟೀಲ್, ಪಿಐ ಶಹಾಪುರ ಜಿಲ್ಲೆಯದ್ಯಂತ ಮಹಿಳಾ ದೌರ್ಜನ್ಯ ಪ್ರಕರಣಗಳು ವರದಿಯಾಗುತ್ತಿವೆ. ಆದರೆ, ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದು, ಈ ಪ್ರಕರಣದಲ್ಲಿ ಯಾರೇ ಇದ್ದರು ಸಹ ಅವರನ್ನು ಬಂಧಿಸಿ ಗಲ್ಲುಶಿಕ್ಷೆಗೆ ಗುರಿಪಡಿಸಬೇಕು.  ಪೊಲೀಸರೂ ಯಾವುದೇ ಪ್ರಭಾವಕ್ಕೆ ಒಳಗಾಗದೆ ಆರೋಪಿಗಳನ್ನು ಬಂದಿಸಬೇಕು. -ರಾಯಪ್ಪ ಚಲುವಾದಿ,  ಯುವ ಮುಖಂಡರು

ವಾರ್ತಾ ಭಾರತಿ 20 Apr 2026 5:45 pm

ಕಾಂಗ್ರೆಸ್‌ ಶಾಸಕ ಸತೀಶ್ ಸೈಲ್ ಮಗಳು ಸಾಧ್ವಿ ಇದೀಗ ಮಿಸ್ ಇಂಡಿಯಾ, ಕೀರ್ತಿ ರಾರಾಜಿಸಲಿ ಎಂದು ಶುಭ ಹಾರೈಸಿದ ಸಿದ್ದರಾಮಯ್ಯ

ಕಾಂಗ್ರೆಸ್‌ ಶಾಸಕ ಸತೀಶ್ ಸೈಲ್ ಮಗಳು ಸಾಧ್ವಿ ಇದೀಗ ಮಿಸ್ ಇಂಡಿಯಾ ಆಗಿದ್ದಾರೆ. 61ನೇ ಸಾಲಿನ ಫೆಮಿನಾ ಮಿಸ್ ಇಂಡಿಯಾ ಕಿರೀಟವನ್ನು ಗೆದ್ದು ಸಾಧನೆ ಮಾಡಿದ್ದಾರೆ. ಕೆನಡಾದ ಬ್ರಿಟಿಷ್ ಕೊಲಂಬಿಯಾ ವಿವಿಯಲ್ಲಿ ಅರ್ಥಶಾಸ್ತ್ರ ಮತ್ತು ಅಂತಾರಾಷ್ಟ್ರೀಯ ಸಂಬಂಧಗಳಲ್ಲಿ ಪದವಿ ಪಡೆದಿರುವ ಇವರು, ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಗೋವಾವನ್ನು ಪ್ರತಿನಿಧಿಸಿದ್ದರು. ಮಗಳ ಸಾಧನೆಗೆ ತಂದೆ ಸತೀಶ್ ಶೈಲ್ ಖುಷಿ ವ್ಯಕ್ತಪಡಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರಿಗೆ ಫೋನ್ ಕರೆ ಮಾಡಿ ಈ ವಿಚಾರವನ್ನು ಹಂಚಿಕೊಂಡಿದ್ದರು.

ವಿಜಯ ಕರ್ನಾಟಕ 20 Apr 2026 5:36 pm

ಹೊಸಪೇಟೆ ಸ್ಲಂನಲ್ಲಿ ಬಸವ ಜಯಂತಿ ಆಚರಣೆ

ವಿಜಯನಗರ, ಹೊಸಪೇಟೆ: ಸ್ಲಂ ಜನರ ಸಂಘಟನೆ ಕರ್ನಾಟಕ ವಿಜಯನಗರ ಜಿಲ್ಲಾ ಸಮಿತಿ ವತಿಯಿಂದ ಹೊಸಪೇಟೆಯ ಪ್ರೇಮನಗರ ಸ್ಲಂನಲ್ಲಿ ವಿಶ್ವಗುರು ಜಗಜ್ಯೋತಿ ಬಸವಣ್ಣನವರ ಜಯಂತೋತ್ಸವವನ್ನು ಸರಳವಾಗಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಬಸವ ಬಳಗದ ಉಪಾಧ್ಯಕ್ಷರಾದ ಮಧುರ ಚೆನ್ನ ಶಾಸ್ತ್ರಿ ಅವರು ಬಸವಣ್ಣನವರ ಜೀವನ ಮತ್ತು ತತ್ವಗಳ ಕುರಿತು ಉಪನ್ಯಾಸ ನೀಡಿದರು. 12ನೇ ಶತಮಾನದಲ್ಲೇ ಸಮಾನತೆ, ಜಾತಿಭೇದರಹಿತ ಸಮಾಜ ಮತ್ತು ಕಾಯಕವೇ ಕೈಲಾಸ ಎಂಬ ತತ್ವಗಳನ್ನು ಸಾರಿದ ಮಹಾನ್ ಚಿಂತಕರಾಗಿ ಬಸವಣ್ಣನವರ ಪಾತ್ರವನ್ನು ಅವರು ವಿವರಿಸಿದರು. ಬಸವಣ್ಣನವರು ಕೂಡಲಸಂಗಮದಲ್ಲಿ ಅಧ್ಯಯನ ನಡೆಸಿ, ದೇವರು ಮಾನವನೊಳಗೇ ಇದ್ದಾನೆ ಎಂಬ ಆತ್ಮತತ್ತ್ವವನ್ನು ಬೋಧಿಸಿದರು ಎಂದು ಅವರು ಹೇಳಿದರು. ಸಮಾನತೆ ಮತ್ತು ಕಾಯಕನಿಷ್ಠೆಯ ಮೂಲಕ ಯಾರೇ ಬೇಕಾದರೂ ಶಿವಶರಣರಾಗಬಹುದು ಎಂಬ ಸಂದೇಶ ಇಂದಿಗೂ ಪ್ರಸ್ತುತವಾಗಿದೆ ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ಬಸವಣ್ಣನವರ ವಚನಗಳ ಮೂಲಕ ಸಮಾಜದಲ್ಲಿ ಕ್ರಾಂತಿಕಾರಿ ಬದಲಾವಣೆ ತರಲು ಅವರು ಶ್ರಮಿಸಿದ ವಿಷಯವನ್ನು ಹಾಗೂ ಕನ್ನಡ ಸಾಹಿತ್ಯಕ್ಕೆ ನೀಡಿದ ಕೊಡುಗೆಯನ್ನು ಕೂಡ ಸ್ಮರಿಸಲಾಯಿತು. ಈ ಸಂದರ್ಭದಲ್ಲಿ ಸ್ಲಂ ಸಂಘದ ಉಪಾಧ್ಯಕ್ಷ ತನ್ವೀರ್ ಅಹ್ಮದ್, ಪ್ರಧಾನ ಕಾರ್ಯದರ್ಶಿ ಎನ್.ವೆಂಕಟೇಶ್, ಸಂಘಟನಾ ಕಾರ್ಯದರ್ಶಿ ಗುತ್ತಿ ಕೈಲಾಸ್, ಖಜಾಂಚಿ ಕೃಷ್ಣ, ಮಹಿಳಾ ಘಟಕದ ಅಧ್ಯಕ್ಷೆ ಹುಲಿಗೆಮ್ಮ, ಉಪಾಧ್ಯಕ್ಷೆ ನೂರ್ ಜಹಾನ್ ಹಾಗೂ ಮುಖಂಡರಾದ ಶೇಖ್ ಮೆಹಬೂಬ್ ಬಾಷಾ, ಪಾಂಡು ನಾಯ್ಕ್, ಮಲ್ಲಿ, ನಾಗರಾಜ್, ಮಾಬಾಷ, ಹನೀಫ್‌, ಪದ್ಮಾವತಿ, ಲಕ್ಷ್ಮಿ, ಬಾನು, ಪರ್ವೀನ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. 

ವಾರ್ತಾ ಭಾರತಿ 20 Apr 2026 5:35 pm

Raichur | ಕೇಂದ್ರ ಕೈಗಾರಿಕಾ ಭದ್ರತಾ ಪಡೆಯಿಂದ ಅಗ್ನಿ‌ ಸುರಕ್ಷತಾ ತರಬೇತಿ

ರಾಯಚೂರು: ಕೇಂದ್ರ ಕೈಗಾರಿಕಾ ಭದ್ರತಾ ಪಡೆ (CISF) ವತಿಯಿಂದ ರಾಯಚೂರು ತಾಲೂಕಿನ ರಾಯಚೂರು ಥರ್ಮಲ್ ಪವರ್ ಸ್ಟೇಷನ್ (RTPS) ನಲ್ಲಿ “ಫೈರ್ ಸರ್ವಿಸ್ ವೀಕ್” ಸಮಾರೋಪ ಕಾರ್ಯಕ್ರಮ ಸೋಮವಾರ ಜರುಗಿತು. ಪ್ರತಿ ವರ್ಷ ಏಪ್ರಿಲ್ 14ರಿಂದ 20ರವರೆಗೆ ಆಚರಿಸಲ್ಪಡುವ ಈ ವಾರದ ಉದ್ದೇಶ ಅಗ್ನಿ ಅವಘಡಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಹಾಗೂ ಅಗ್ನಿ ಸುರಕ್ಷತಾ ಕ್ರಮಗಳನ್ನು ಪ್ರಚಾರ ಮಾಡುವುದು. ಈ ಸಂದರ್ಭದಲ್ಲಿ ಕೈಗಾರಿಕಾ ಪ್ರದೇಶಗಳು, ಸರ್ಕಾರಿ ಕಚೇರಿಗಳು ಮತ್ತು ಶಾಲೆಗಳಲ್ಲಿ ಅಗ್ನಿ ಅವಘಡ ಸೇರಿದಂತೆ ತುರ್ತು ಪರಿಸ್ಥಿತಿಯಲ್ಲಿ ಹೇಗೆ ಪ್ರತಿಕ್ರಿಯಿಸಬೇಕು ಎಂಬ ಕುರಿತು ಜಾಗೃತಿ ಮತ್ತು ತರಬೇತಿ ಕಾರ್ಯಕ್ರಮಗಳನ್ನು ನಡೆಸಲಾಯಿತು. ಕಾರ್ಯಕ್ರಮದಲ್ಲಿ RTPS ನ ಕಾರ್ಯನಿರ್ವಾಹಕ ನಿರ್ದೇಶಕ ರಮೇಶ್ ಹೆಚ್.ಆರ್. ಮುಖ್ಯ ಅತಿಥಿಯಾಗಿ ಮಾತನಾಡಿ, ಅಗ್ನಿ ಅವಘಡಗಳ ಸಂದರ್ಭದಲ್ಲಿ ತುರ್ತು ಕ್ರಮಗಳ ಜಾಗೃತಿ ಅತ್ಯಂತ ಮುಖ್ಯ ಎಂದು ಹೇಳಿದರು. ಸಾರ್ವಜನಿಕರು ಇಂತಹ ಸಂದರ್ಭಗಳಲ್ಲಿ ಭಯಪಡದೆ ಪ್ರಾಣ ರಕ್ಷಣೆಗೆ ಆದ್ಯತೆ ನೀಡಬೇಕು ಎಂದು ಅವರು ಸಲಹೆ ನೀಡಿದರು. ಅವರು 1944ರಲ್ಲಿ ಮುಂಬೈ ಬಂದರಿನಲ್ಲಿ ಸಂಭವಿಸಿದ ಭೀಕರ ಸ್ಫೋಟದಲ್ಲಿ ಅನೇಕ ಅಗ್ನಿಶಾಮಕ ಸಿಬ್ಬಂದಿ ಪ್ರಾಣ ತ್ಯಾಗ ಮಾಡಿದ್ದನ್ನು ಸ್ಮರಿಸಿ, ಅವರ ಸೇವೆಯನ್ನು ಗೌರವಿಸುವುದಕ್ಕಾಗಿ ಈ ಅಗ್ನಿ ಸುರಕ್ಷತಾ ವಾರವನ್ನು ಆಚರಿಸಲಾಗುತ್ತದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಸಿಐಎಸ್ಎಫ್ ಸಹಾಯಕ ಕಮಾಂಡಂಟ್ ಸತ್ಯವೀರ್ ಸಿಂಗ್, ಡಿಜಿಎಂ (ಹೆಚ್‌ಆರ್ ಡಿ) ಅಮರೇಶ್ ಎಂ., ಸೂಪರಿಂಟೆಂಡೆಂಟ್ ಎಂಜಿನಿಯರ್ ಮೌನೇಶ್ ಸೇರಿದಂತೆ ಹಲವು ಅಧಿಕಾರಿಗಳು, ಸಿಬ್ಬಂದಿ ಆರ್ ಟಿಪಿಎಸ್ ಅಧಿಕಾರಿಗಳು ಸುಮಾರು 65 ಮಂದಿ ಭಾಗವಹಿಸಿದ್ದರು.

ವಾರ್ತಾ ಭಾರತಿ 20 Apr 2026 5:31 pm

ಇಂಡಿಯನ್ ರೇಸಿಂಗ್ ಲೀಗ್ ನಲ್ಲಿ ಮೂರನೇ ಸ್ಥಾನ ಪಡೆದ ಕಿಚ್ಚ ಸುದೀಪ್ ತಂಡ

ಬೆಂಗಳೂರು: ಇಂಡಿಯನ್ ರೇಸಿಂಗ್ ಲೀಗ್ (IRL) ತನ್ನ 2025-26ರ ಸೀಸನ್‌ನ ಅಧಿಕೃತ ಫಲಿತಾಂಶಗಳನ್ನು ಪ್ರಕಟಿಸಿದೆ. ನವಿ ಮುಂಬೈ ರೇಸ್ ಮುಂದಿನ ಸೀಸನ್‌ಗೆ (ಆಗಸ್ಟ್ 2026) ಮುಂದೂಡಲ್ಪಟ್ಟ ಕಾರಣ, ಗೋವಾ ಸ್ಟ್ರೀಟ್ ರೇಸ್‌ನ ಮುಕ್ತಾಯದೊಂದಿಗೆ ಈ ಸೀಸನ್ ಪೂರ್ಣಗೊಂಡಿದೆ ಎಂದು ಘೋಷಿಸಲಾಗಿದೆ. ನವಿ ಮುಂಬೈ ರೇಸ್ ಈಗ ಆಗಸ್ಟ್ 2026 ರಿಂದ ಆರಂಭವಾಗಲಿರುವ ಇಂಡಿಯನ್ ರೇಸಿಂಗ್ ಲೀಗ್‌ನ ಮುಂದಿನ

ಒನ್ ಇ೦ಡಿಯ 20 Apr 2026 5:29 pm

Kalaburagi | ವಾಡಿ ಪಟ್ಟಣದಲ್ಲಿ ವ್ಯಕ್ತಿಯ ಬರ್ಬರ ಹತ್ಯೆ

ವಾಡಿ : ಬಲರಾಮ ಚೌಕ್‌ನಿಂದ ವಾಡಿ ಪಟ್ಟಣಕ್ಕೆ ಸ್ಕೂಟಿ ಮೇಲೆ ತೆರಳುತ್ತಿದ್ದ ವ್ಯಕ್ತಿಯೊಬ್ಬನನ್ನು ತಡೆದು ಬರ್ಬರವಾಗಿ ಕೊಲೆ ಮಾಡಿದ ಘಟನೆ ಸೋಮವಾರ ಮಧ್ಯಾಹ್ನ ತಾಲೂಕಿನ ವಾಡಿ ಪಟ್ಟಣದಲ್ಲಿ ನಡೆದಿದೆ. ಮೃತರನ್ನು ಭಾಯ್ ಭಾಯ್ ಗ್ರೂಪ್ ಅಧ್ಯಕ್ಷ ಮುಹಮ್ಮದ್‌ ಇರ್ಫಾನ್ (40) ಎಂದು ಗುರುತಿಸಲಾಗಿದೆ. ಇರ್ಫಾನ್ ಬಲರಾಮ ಚೌಕ್‌ನಿಂದ ಸ್ಕೂಟಿ ಮೇಲೆ ವಾಡಿ ಪಟ್ಟಣಕ್ಕೆ ಬರುತ್ತಿದ್ದಾಗ ಎದುರಿನಿಂದ ಬಂದ ಶಿಫ್ಟ್ ಕಾರಿನಲ್ಲಿ ದುಷ್ಕರ್ಮಿಗಳು ಸ್ಕೂಟಿಗೆ ಢಿಕ್ಕಿ ಹೊಡೆದಿದ್ದಾರೆ. ಸ್ಕೂಟಿಯಿಂದ ಬಿದ್ದ ಕ್ಷಣದಲ್ಲೇ ಗುಂಡು ಹಾರಿಸಿ, ಬಳಿಕ ಮಚ್ಚು ಮತ್ತು ಚಾಕುವಿನಿಂದ ದಾಳಿ ನಡೆಸಿ ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ. ಸ್ಥಳಕ್ಕೆ ಡಿವೈಎಸ್ಪಿ ಶಂಕರಗೌಡ ಪಾಟೀಲ, ಸಿಪಿಐ ಎ.ಎಸ್.ಪಾಟೀಲ್, ಪಿಎಸ್ಐ ಕೆ.ತಿರುಮಲೇಶ, ಚಿತ್ತಾಪುರ ಪಿಎಸ್ಐ ಮಂಜುನಾಥ ರೆಡ್ಡಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ದೇಹವನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ವಾರ್ತಾ ಭಾರತಿ 20 Apr 2026 5:21 pm

ಎರಡು ಭಾರತೀಯ ಹಡಗುಗಳ ಮೇಲೆ ಗುಂಡಿನ ದಾಳಿ ಬಳಿಕ ಹೊರ್ಮುಝ್‌ನಲ್ಲಿ ಟ್ಯಾಂಕರ್‌ಗಳಿಗೆ ಹೊಸ ಸಲಹಾಸೂಚಿ

ಹೊಸದಿಲ್ಲಿ: ಶನಿವಾರ ಇಸ್ಲಾಮಿಕ್ ರೆವೊಲ್ಯೂಷನರಿ ಗಾರ್ಡ್ ಕಾರ್ಪ್ಸ್ (ಐಆರ್‌ಜಿಸಿ)ನಿಂದ ಎರಡು ಭಾರತೀಯ ಹಡಗುಗಳ ಮೇಲೆ ಗುಂಡಿನ ದಾಳಿಯ ಬಳಿಕ ಭಾರತೀಯ ನೌಕಾಪಡೆಯು ಹೊರ್ಮುಝ್ ಜಲಸಂಧಿ ಸಮೀಪ ಭದ್ರತೆಯನ್ನು ಹೆಚ್ಚಿಸಿದೆ. ಪರ್ಷಿಯನ್ ಕೊಲ್ಲಿಯಲ್ಲಿನ ಭಾರತೀಯ ಧ್ವಜಧಾರಿ ಹಡುಗಳಿಗೆ ಹೊಸ ಸಲಹಾಸೂಚಿಯನ್ನು ಹೊರಡಿಸಿರುವ ಭಾರತವು ಸುರಕ್ಷತೆಗಾಗಿ ಲಾರಕ್ ದ್ವೀಪದಿಂದ ದೂರವಿರುವಂತೆ ಮತ್ತು ತಾನು ನಿರ್ದೇಶನ ನೀಡಿದಾಗ ಮಾತ್ರ ಸಂಚಾರವನ್ನು ಆರಂಭಿಸುವಂತೆ ಅವುಗಳಿಗೆ ಕಟ್ಟುನಿಟ್ಟಾಗಿ ಸೂಚಿಸಿದೆ. ಹೊರ್ಮುಝ್ ದಾಟಲು ಕಾಯುತ್ತಿರುವ ಎಲ್ಲ ಭಾರತೀಯ ಹಡಗುಗಳ ಸುರಕ್ಷತೆಗೆ ಭಾರತೀಯ ನೌಕಾಪಡೆಯು ಆದ್ಯತೆ ನೀಡುತ್ತಿದೆ ಎಂದು ಬಲ್ಲ ಮೂಲಗಳು India Today ಸುದ್ದಿಸಂಸ್ಥೆಗೆ ತಿಳಿಸಿವೆ. ಈವರೆಗೆ 11 ಭಾರತೀಯ ಹಡಗುಗಲು ಹೊರ್ಮುಝ್ ಜಲಸಂಧಿಯನ್ನು ದಾಟಿವೆ. ಕೊನೆಯದಾಗಿ ‘ದೇಶ ಗರಿಮಾ’ ಟ್ಯಾಂಕರ್ ಎ.18ರಂದು ಜಲಸಂಧಿಯನ್ನು ದಾಟಿದ್ದು,ಅದೇ ದಿನ ಎರಡು ಭಾರತೀಯ ಹಡಗುಗಳಾದ ‘ಜಗ್ ಅರ್ನವ್’ ಮತ್ತು ‘ಸನ್ಮಾರ್ ಹೆರಾಲ್ಡ್’ ಹೊರ್ಮುಝ್ ದಾಟಲು ಪ್ರಯತ್ನಿಸುತ್ತಿದ್ದಾಗ ಇರಾನಿ ಪಡೆಗಳು ಗುಂಡಿನ ದಾಳಿ ನಡೆಸಿದ ಬಳಿಕ ವಾಪಸ್ ತೆರಳಿದ್ದವು. ಜಲಸಂಧಿಯನ್ನು ದಾಟಿದ ಬಳಿಕ ಅರಬಿ ಸಮುದ್ರದಲ್ಲಿ ‘ದೇಶ ಗರಿಮಾ’ಕ್ಕೆ ಭಾರತೀಯ ನೌಕಾಪಡೆಯು ಬೆಂಗಾವಲನ್ನು ಒದಗಿಸಿದ್ದು,ಅದು ಎ.22ರಂದು ಮುಂಬೈಗೆ ಆಗಮಿಸುವ ನಿರೀಕ್ಷೆಯಿದೆ. ಹೊರ್ಮುಝ್ ಜಲಸಂಧಿಯ ಅತ್ಯಂತ ಸಂಕುಚಿತ ಭಾಗದಲ್ಲಿರುವ ಲಾರಕ್ ದ್ವೀಪವು ಇರಾನಿನ ಪ್ರಮುಖ ತೈಲ ಮೂಲಸೌಕರ್ಯವಾಗಿದೆ. ಅದು ಇರಾನಿನ ಇಂಧನ ಕ್ಷೇತ್ರದಲ್ಲಿ ನಿರ್ಣಾಯಕ ಪಾತ್ರವನ್ನು ಹೊಂದಿರುವುದರಿಂದ ಸುತ್ತಲಿನ ಸಾಗರದಲ್ಲೀ ಭಾರೀ ಬಿಗು ಭದ್ರತೆಯನ್ನು ಏರ್ಪಡಿಸಲಾಗಿದೆ ಮತ್ತು ಹೊರ್ಮುಝ್ ಮೂಲಕ ಹಡಗುಗಳ ಸಂಚಾರದ ಮೇಲೆ ಬಂಕರ್‌ಗಳು ಮತ್ತು ರಾಡಾರ್ ವ್ಯವಸ್ಥೆಗಳ ಜಾಲದ ಮೂಲಕ ನಿಕಟ ನಿಗಾಯಿರಿಸಲಾಗಿದೆ. ಈ ದ್ವೀಪದಲ್ಲಿ ಹಲವಾರು ಇರಾನಿ ನೆಲೆಗಳು ಕಾರ್ಯಾಚರಿಸುತ್ತಿದ್ದು,ಹಡಗುಗಳನ್ನು ಗುರಿಯಾಗಿಸಲು ಸಣ್ಣ,ಅತ್ಯಂತ ವೇಗದ ಬೋಟ್‌ಗಳನ್ನು ನಿಯೋಜಿಸುವ ಸಾಮರ್ಥ್ಯವನ್ನು ಹೊಂದಿವೆ. ಪ್ರಸಕ್ತ 14 ಭಾರತಿಯ ಹಡಗುಗಳು ಪರ್ಷಿಯನ್ ಕೊಲ್ಲಿಯಲ್ಲಿ ಬಾಕಿಯಾಗಿದ್ದು,ಹೊರ್ಮುಝ್‌ನ್ನು ದಾಟಲು ಕಾಯುತ್ತಿವೆ. ಭಾರತೀಯ ನೌಕಾಪಡೆಯು ಅವುಗಳೊಂದಿಗೆ ನಿಕಟ ಸಂಪರ್ಕದಲ್ಲಿದೆ. ಪರ್ಷಿಯನ್ ಕೊಲ್ಲಿಯ ಸಮೀಪದಲ್ಲಿ ಭಾರತೀಯ ನೌಕಾಪಡೆಯ ಏಳು ಹಡಗುಗಳನ್ನು ನಿಯೋಜಿಸಲಾಗಿದ್ದು, ಅವು ಹೊರ್ಮುಝ್ ಜಲಸಂಧಿಯನ್ನು ದಾಟುವ ಭಾರತೀಯ ಹಡಗುಗಳಿಗೆ ಬೆಂಗಾವಲು ಒದಗಿಸುತ್ತಿವೆ.

ವಾರ್ತಾ ಭಾರತಿ 20 Apr 2026 5:17 pm

CBSE Result-2026| ಶಾನ್‌ ಮುಹಮ್ಮದ್‌ ಶರೀಫ್‌ಗೆ 584 ಅಂಕ

ಬೆಂಗಳೂರು: ಸಿಬಿಎಸ್‌ಇ 10ನೇ ತರಗತಿಯ ಫಲಿತಾಂಶ ಪ್ರಕಟವಾಗಿದ್ದು, ಜೆಪಿ ನಗರದಲ್ಲಿರುವ ʼMirambika School for New Ageʼ ಇಲ್ಲಿನ ವಿದ್ಯಾರ್ಥಿ ಶಾನ್‌ ಮುಹಮ್ಮದ್‌ ಶರೀಫ್‌ 584 (97.3 ಶೇ.) ಅಂಕ ಪಡೆದು ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.  ವಿದ್ಯಾರ್ಥಿ ಶಾನ್‌ ಮುಹಮ್ಮದ್‌ ಶರೀಫ್‌ ಅವರು ಹಸನ್‌ ಶರೀಫ್‌ ಬರ್ದಿಲ ಮತ್ತು ರಶೀದಾ ಹಸನ್‌ ಶರೀಫ್‌ ಅವರ ಪುತ್ರ. 

ವಾರ್ತಾ ಭಾರತಿ 20 Apr 2026 5:17 pm

Vijayanagara | ಭೀಕರ ರಸ್ತೆ ಅಪಘಾತ : ನಾಲ್ವರು ಮೃತ್ಯು, 21 ಮಂದಿಗೆ ಗಾಯ

ವಿಜಯನಗರ, ಹೊಸಪೇಟೆ : ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ಸೇರಿದಂತೆ ಒಟ್ಟು ನಾಲ್ವರು ಸ್ಥಳದಲ್ಲೇ ಮೃತಪಟ್ಟು, 21 ಮಂದಿ ಗಾಯಗೊಂಡಿರುವ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆ ಹೊರವಲಯದಲ್ಲಿ ನಡೆದಿದೆ. ಮೃತರನ್ನು ಕಿತ್ನೂರು ಗ್ರಾಮದ ನಾಗಪ್ಪ (58), ಅವರ ಪುತ್ರ ಕೊಟ್ರೇಶ್ (28), ಸುಜಾತ (34) ಹಾಗೂ ತಿಮ್ಮಲಾಪುರ ಗ್ರಾಮದ ದುರ್ಗಪ್ಪ (55) ಎಂದು ಗುರುತಿಸಲಾಗಿದೆ. ಇವರು ಬೈಕ್‌ನಲ್ಲಿ ಗಂಗಾವತಿ ಕಡೆಗೆ ಹುಡುಗಿ ನೋಡಲು ತೆರಳುತ್ತಿದ್ದ ವೇಳೆ ಡಣಾಪುರ ಸಮೀಪ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ. ಲಾರಿ ಚಾಲಕನ ಅತಿವೇಗ ಹಾಗೂ ಅಜಾಗರೂಕ ಚಾಲನೆಯಿಂದ ನಿಯಂತ್ರಣ ತಪ್ಪಿದ ವಾಹನ ಮೊದಲು ಬೈಕ್‌ಗೆ ಢಿಕ್ಕಿ ಹೊಡೆದು, ನಂತರ ಕಾರು ಹಾಗೂ ಬಸ್ ಸೇರಿದಂತೆ ಹಲವು ವಾಹನಗಳಿಗೆ ಢಿಕ್ಕಿಯಾಗಿ ಸರಣಿ ಅಪಘಾತಕ್ಕೆ ಕಾರಣವಾಗಿದೆ ಎಂದು ತಿಳಿದುಬಂದಿದೆ. ಅಪಘಾತದ ತೀವ್ರತೆಯಿಂದ ನಾಲ್ವರು ಸ್ಥಳದಲ್ಲೇ ಮರತಪಟ್ಟಿದ್ದು, ಗಾಯಾಳುಗಳಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ. ಅವರನ್ನು ಹೊಸಪೇಟೆ ಹಾಗೂ ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಪ್ರತ್ಯಕ್ಷದರ್ಶಿಗಳ ಪ್ರಕಾರ ಅಪಘಾತದ ದೃಶ್ಯ ಅತ್ಯಂತ ಭೀಕರವಾಗಿದ್ದು, ಮೃತದೇಹಗಳು ಚಿದ್ರವಾಗಿದ್ದರಿಂದ ಸ್ಥಳದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಸ್ಥಳೀಯರು ತಕ್ಷಣ ರಕ್ಷಣಾ ಕಾರ್ಯ ನಡೆಸಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದರು. ಸುದ್ದಿ ತಿಳಿದ ಕೂಡಲೇ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಲಾರಿ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ತನಿಖೆ ಮುಂದುವರಿದಿದೆ.

ವಾರ್ತಾ ಭಾರತಿ 20 Apr 2026 5:13 pm

Kotturu | ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ಸಶಕ್ತರಾಗಿದ್ದಾರೆ: ಜಿಲ್ಲಾಧಿಕಾರಿ ಕವಿತಾ ಮನ್ನಿಕೇರಿ

ಕೊಟ್ಟೂರು (ವಿಜಯನಗರ): ಇಂದಿನ ದಿನಗಳಲ್ಲಿ ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ಅತ್ಯುತ್ತಮ ಸಾಧನೆಗೈದು ಸಶಕ್ತರಾಗಿದ್ದಾರೆ ಎಂದು ವಿಜಯನಗರ ಜಿಲ್ಲಾಧಿಕಾರಿ ಕವಿತಾ ಎಸ್‌.ಮನ್ನಿಕೇರಿ ಹೇಳಿದರು. ಪಟ್ಟಣದ ಶ್ರೀ ಚಾನುಕೋಟಿ ಮಠದಲ್ಲಿ ಬಸವ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ಮಹಿಳಾ ಸಬಲೀಕರಣ ಸಮಾವೇಶ ಹಾಗೂ ಕರಕುಶಲ ವಸ್ತುಗಳ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮಹಿಳೆಯರು ಪ್ರತಿಯೊಂದು ಕ್ಷೇತ್ರದಲ್ಲೂ ಸಾಧನೆ ಮಾಡುತ್ತಿರುವ ಹಿನ್ನೆಲೆಯಲ್ಲಿ, ಹೆಣ್ಣು ಮಕ್ಕಳು ಮತ್ತೊಬ್ಬ ಹೆಣ್ಣಿಗೆ ಗೌರವ ನೀಡುವ ಗುಣ ಬೆಳೆಸಿಕೊಳ್ಳಬೇಕು. “ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ” ಎಂಬ ನುಡಿಯಂತೆ, ಹೆಣ್ಣು ಮಕ್ಕಳ ಶಿಕ್ಷಣವನ್ನು ಮಧ್ಯದಲ್ಲಿ ನಿಲ್ಲಿಸದೆ ಉನ್ನತ ಶಿಕ್ಷಣಕ್ಕೆ ಉತ್ತೇಜಿಸಬೇಕು ಎಂದು ಹೇಳಿದರು. ಕುಟುಂಬದಲ್ಲಿಯೂ ಹಾಗೂ ಸಮಾಜದಲ್ಲಿಯೂ ಹೆಣ್ಣುಮಕ್ಕಳ ನಡುವಿನ ಅಸೂಯ ಭಾವನೆ ದೂರವಾಗಬೇಕು. ಚಿಕ್ಕ ವಯಸ್ಸಿನಿಂದಲೇ ಹೆಣ್ಣುಮಕ್ಕಳಿಗೆ ಗೌರವ ಮತ್ತು ಸಮಾನತೆಯ ಮೌಲ್ಯಗಳನ್ನು ಕಲಿಸಬೇಕು ಎಂದು ಅವರು ತಿಳಿಸಿದರು. ಮಹಿಳೆಯರು ಮನೆ ಮತ್ತು ಸಮಾಜ ಎರಡನ್ನೂ ಸಮರ್ಥವಾಗಿ ನಿಭಾಯಿಸುತ್ತಾರೆ. ಕುಟುಂಬ ವ್ಯವಸ್ಥೆ ಸುಗಮವಾಗಿ ಸಾಗಲು ಪುರುಷರೂ ಮಹಿಳೆಯರಿಗೆ ಸಹಕಾರ ನೀಡಬೇಕು ಎಂದು ಹೇಳಿದರು. ಪ್ರಸ್ತಾವಿಕವಾಗಿ ಮಾತನಾಡಿದ ಚಾಳುಕೋಟೆ ಬೆಟ್ಟದ ಪೀಠಾಧ್ಯಕ್ಷರಾದ ಡಾ. ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಮಹಿಳೆಯರು ಸಶಕ್ತರಾದರೆ ಕುಟುಂಬ ಮತ್ತು ಸಮಾಜವನ್ನು ಜವಾಬ್ದಾರಿಯಿಂದ ನಡೆಸಬಹುದು. ಹಿಂದೆ ಮನೆಮಧ್ಯೆ ಸೀಮಿತವಾಗಿದ್ದ ಮಹಿಳೆಯರು ಇಂದು ಎಲ್ಲಾ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷರಾದ ಐ.ಎಂ.ದಾರುಕೇಶ, ಕೊಟ್ಟೂರು ತಾಲೂಕು ದಂಡಾಧಿಕಾರಿ ಅಮರೇಶ್ ಜಿ.ಕೆ., ಸತೀಶ್ ಶೆಟ್ಟಿ, ವೀಣಾ ವಿವೇಕಾನಂದ ಗೌಡ, ಅಡಿಕೆ ಮಂಜುನಾಥ್ ಇತರರು ಇದ್ದರು. ನಾಗರಾಜ್ ಮತ್ತು ಮಲ್ಲಿಕಾರ್ಜುನ್ ಮಠದ ಕಾರ್ಯಕ್ರಮ ನಿರೂಪಿಸಿದರು.

ವಾರ್ತಾ ಭಾರತಿ 20 Apr 2026 5:04 pm

Nuclear Energy: ಮಧ್ಯಪ್ರಾಚ್ಯದ ಯುದ್ಧ ರಹಸ್ಯ ಬಯಲು: ಇರಾನ್ - ಅಮೆರಿಕ ಯುದ್ಧಕ್ಕೆ ಅಮೂಲ್ಯ ಯುರೇನಿಯಂ ಕಾರಣವೇ

Nuclear Energy: ಅಮೆರಿಕ ಹಾಗೂ ಇರಾನ್‌ನ ನಡುವೆ ಯುದ್ಧ ತೀವ್ರ ಸ್ವರೂಪ ಪಡೆದುಕೊಂಡಿದೆ. ವಿಶ್ವದ ಎಲ್ಲಾ ದೇಶಗಳಲ್ಲಿರುವ ಖನಿಜ ಸಂಪತ್ತು ಹಾಗೂ ಅಮೂಲ್ಯ ಲೋಹಗಳ ಮೇಲೆ ಅಮೆರಿಕದ ಕಣ್ಣು ಮೊದಲಿನಿಂದಲೂ ಇದೆ. ಅಮೆರಿಕ ಯಾವುದಾದರೂ ದೇಶಕ್ಕೆ ಸಹಾಯ ಮಾಡುತ್ತಿದೆ ಎಂದರೆ, ಆ ದೇಶದಿಂದ ದೊಡ್ಡದಾದದ್ದು ಏನನ್ನಾದರೂ ಬಯಸುತ್ತಿದೆ ಎಂದೇ ಅರ್ಥ. ಅದರಲ್ಲೂ ಏಕಾಏಕಿ ಇರಾನ್‌ನ ಮೇಲೆ ಅಮೆರಿಕ

ಒನ್ ಇ೦ಡಿಯ 20 Apr 2026 5:03 pm

Harapanahalli | ಸಾಮೂಹಿಕ ವಿವಾಹಗಳಿಂದ ಸಮಾಜದಲ್ಲಿ ಸೌಹಾರ್ದ ಹೆಚ್ಚಳ: ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ

42ನೇ ವರ್ಷದ 30 ಜೋಡಿ ಸಾಮೂಹಿಕ ವಿವಾಹ ಮಹೋತ್ಸವ

ವಾರ್ತಾ ಭಾರತಿ 20 Apr 2026 4:57 pm

''KKRTC ಹೊಸ ಸಾರಿಗೆ ಕೇಂದ್ರ ಕಚೇರಿಗೂ ಮುನ್ನ 'ಪ್ರೀಮಿಯಂ ಸಾರಿಗೆ' ಬಸ್‌ಗಳನ್ನು ಬಿಡಿ''

ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದಲ್ಲಿ ರೈಲು, ರಸ್ತೆ ಸಾರಿಗೆ ವಿಚಾರದಲ್ಲಿ ವರ್ಷಗಳಿಂದಲೂ ಸಾಕಷ್ಟು ಸಮಸ್ಯೆಗಳನ್ನು ಕೇಳುತ್ತಲೇ ಬಂದಿದ್ದೇವೆ. ರಾಜ್ಯ ಸರ್ಕಾರ ಕೆಲವು ಯೋಜನೆಗಳ ಘೋಷಣೆ, ಅನುದಾನ ಹಂಚಿಕೆ ಮಾಡುತ್ತಲೇ ಇದೆ. ಆದರೆ ಈ ಭಾಗದ ಜನರಿಗೆ ಸಂಚಾರ ಸಮಸ್ಯೆಗಳು ಮಾತ್ರ ಕಡಿಮೆ ಆಗಿಲ್ಲ. ಇದೀಗ ರಾಜ್ಯ ಸರ್ಕಾರ 20 ಕೋಟಿ ರೂ.ವೆಚ್ಚದಲ್ಲಿ ನೂತನ ಕಚೇರಿ ನಿರ್ಮಾಣಕ್ಕೆ ಸಿದ್ಧವಾಗಿದೆ.

ಒನ್ ಇ೦ಡಿಯ 20 Apr 2026 4:53 pm

ಹೆಣ್ಣು ಮಗುವಿನ ತಂದೆಯಾದ ಖ್ಯಾತ ನಿರ್ದೇಶಕ ಅಟ್ಲಿ; ಅಭಿನಂದನೆಗಳ ಮಹಾಪೂರ

[…] The post ಹೆಣ್ಣು ಮಗುವಿನ ತಂದೆಯಾದ ಖ್ಯಾತ ನಿರ್ದೇಶಕ ಅಟ್ಲಿ; ಅಭಿನಂದನೆಗಳ ಮಹಾಪೂರ first appeared on Vistara News .

ವಿಸ್ತಾರ ನ್ಯೂಸ್ 20 Apr 2026 4:43 pm

ಚತ್ತೀಸ್‌ಗಢ | ಗುಡ್ಡೆಗಾಡು ಪ್ರದೇಶದಲ್ಲಿ ಖಾಸಗಿ ಜೆಟ್ ಪತನ

ರಾಯ್ಪುರ: ಚತ್ತೀಸ್‌ಗಢದ ಜಶ್ ಪುರ ಜಿಲ್ಲೆಯಲ್ಲಿ ಸೋಮವಾರ ಖಾಸಗಿ ಜೆಟ್‌ವೊಂದು ಗುಡ್ಡೆಗಾಡು ಪ್ರದೇಶದಲ್ಲಿ ಅಪ್ಪಳಿಸಿದ್ದು, ಸಾವುನೋವು ಸಂಭವಿಸಿರುವ ಶಂಕೆ ವ್ಯಕ್ತವಾಗಿದೆ. ಸ್ಥಳೀಯರ ಪ್ರಕಾರ, ಅರಣ್ಯ ಪ್ರದೇಶದಲ್ಲಿ ಮರಕ್ಕೆ ಢಿಕ್ಕಿ ಹೊಡೆದ ನಂತರ ಜೆಟ್ ಪತನಗೊಂಡಿದೆ. ಜಶ್ ಪುರ-ನಾರಾಯಣಪುರ ಪ್ರದೇಶದ ಬೆಟ್ಟದ ಇಳಿಜಾರಿನಲ್ಲಿ ಅಪಘಾತಕ್ಕೀಡಾದ ಜೆಟ್‌ನಿಂದ ದಟ್ಟವಾದ ಹೊಗೆ ಮತ್ತು ಜ್ವಾಲೆಗಳು ಕಾಣಿಸಿಕೊಂಡಿದ್ದು, ದುರಂತಕ್ಕೀಡಾದ ಜೆಟ್‌ನಲ್ಲಿ ಎಷ್ಟು ಮಂದಿ ಇದ್ದರು ಎಂಬುದು ತಿಳಿದುಬಂದಿಲ್ಲ. ಘಟನೆಯ ಹಿನ್ನೆಲೆ ಪೊಲೀಸರು ಮತ್ತು ಅಧಿಕಾರಿಗಳು ಸ್ಥಳಕ್ಕೆ ತೆರಳುತ್ತಿದ್ದಾರೆ.

ವಾರ್ತಾ ಭಾರತಿ 20 Apr 2026 4:43 pm

ಯಾದಗಿರಿಯಲ್ಲಿ ದುರ್ಘಟನೆಗೆ 13 ಬಲಿ: ಪರಿಹಾರ ತಾರತಮ್ಯದ ಬಗ್ಗೆ ಕಂದಕೂರು ಕಿಡಿ, ಸಿದ್ದರಾಮಯ್ಯಗೆ ಪತ್ರ

ಯಾದಗಿರಿಯಲ್ಲಿ ನಡೆದ ಎರಡು ಪ್ರತ್ಯೇಕ ದುರ್ಘಟನೆಗೆ 13 ಮಂದಿ ಬಲಿಯಾಗಿದ್ದಾರೆ. ಆದರೆ ಪರಿಹಾರ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಅವರು ತಾರತಮ್ಯ ಮಾಡಿದ್ದಾರೆ ಎಂದು ಜೆಡಿಎಸ್ ಶಾಸಕರ ಶರಣಗೌಡ ಕಂದಕೂರು ಕಿಡಿಕಾರಿದ್ದಾರೆ. ಈ ಕುರಿತಾಗಿ ಅವರು ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದಿದ್ದಾರೆ. ಮೈಸೂರಿನಲ್ಲಿ ನಡೆದ ಘಟನೆಯಲ್ಲಿ ಪರಿಹಾರ ನೀಡಲಾಗಿದೆ, ಆದರೆ ಯಾದಗಿರಿಯಲ್ಲಿ ಪರಿಹಾರ ನೀಡಿಲ್ಲ. ಈ ತಾರತಮ್ಯ ಯಾಕಾಗಿ ಎಂದು ಅವರು ಪ್ರಶ್ನೆ ಮಾಡಿದ್ದಾರೆ. ಈ ಕುರಿತಾದ ಮತ್ತಷ್ಟು ವಿವರ ಇಲ್ಲಿದೆ.

ವಿಜಯ ಕರ್ನಾಟಕ 20 Apr 2026 4:42 pm

ಪೆಸಿಫಿಕ್‌ನಲ್ಲಿ ದೊಡ್ಡಣ್ಣನ ಮೈತ್ರಿಕೂಟಕ್ಕೆ ಚೀನಾ ಸವಾಲು: US-ಜಪಾನ್ ಜಂಟಿ ಸಮರಾಭ್ಯಾಸದ ನಡುವೆ ಯುದ್ಧನೌಕೆ ನಿಯೋಜಿಸಿದ ಡ್ರ್ಯಾಗನ್!

ಪೆಸಿಫಿಕ್‌ ಮಹಾಸಾಗರದಲ್ಲಿ US ಹಾಗೂ ಫಿಲಿಪೈನ್ಸ್‌ ಜೊತೆಗೂ ಜಪಾನ್‌ ಇದೇ ಮೊದಲಬಾರಿಗೆ ಮಿಲಿಟರಿ ಕವಾಯತುಗಳನ್ನು ನಡೆಸುತ್ತಿದ್ದು, ಇದರಿಂದ ಕೆರಳಿರುವ ಚೀನಾ ಪೆಸಿಫಿಕ್‌ ಮಹಾಸಾಗರದಲ್ಲಿ ಮಿಲಿಟರಿ ಕವಾಯತು ನಡೆಸಲು ಮುಂದಾಗಿದೆ. ಇದು ಸದ್ಯ ಈಗಾಗಲೇ ಜಪಾನ್‌-ಚೀನಾ ನಡುವೆ ತೈವಾನ್‌ ವಿಚಾರಕ್ಕೆ ನಡೆಯುತ್ತಿರುವ ಪ್ರಾದೇಶಿಕ ಉದ್ವಿಗ್ನತೆಯನ್ನು ಮತ್ತಷ್ಟು ಉಲ್ಬಣಗೊಳಿಸುವ ಸಾಧ್ಯತೆಯಿದ್ದು, ಈ ಪ್ರದೇಶದಲ್ಲಿ ಸಂಘರ್ಷದ ಛಾಯೆ ಆವರಿಸಿದೆ.

ವಿಜಯ ಕರ್ನಾಟಕ 20 Apr 2026 4:24 pm

Kerala | ಚಿಕನ್ ಕರಿ ವಿಚಾರಕ್ಕೆ ಜಗಳ: ಸೋದರಳಿಯನಿಂದಲೇ ಹತ್ಯೆಗೀಡಾದ ಮಾವ!

ಪಾಲಕ್ಕಾಡ್: ಚಿಕನ್ ಕರಿ ವಿಚಾರಕ್ಕೆ ನಡೆದ ಜಗಳದಲ್ಲಿ 45 ವರ್ಷದ ವ್ಯಕ್ತಿಯೊಬ್ಬರನ್ನು ಅವರ ಸೋದರಳಿಯನೇ ಹತ್ಯೆಗೈದಿರುವ ಆಘಾತಕಾರಿ ಘಟನೆ ಕೇರಳದ ಪಾಲಕ್ಕಾಡ್ ಜಿಲ್ಲೆಯ ಕೌಂದನೂರ್‌ನಲ್ಲಿ ಸೋಮವಾರ ನಡೆದಿದೆ. ಮೃತ ವ್ಯಕ್ತಿಯನ್ನು ಕೊಳಿಂಜಾಪಾರ ಪೊಲೀಸ್ ಠಾಣೆ ವ್ಯಾಪ್ತಿಯ ಒಳಕಪತಿಯ ಕೌಂದನೂರ್ ಗ್ರಾಮದ ನಿವಾಸಿ ಸೆಂಥಿಲ್ ಕುಮಾರ್ ಎಂದು ಗುರುತಿಸಲಾಗಿದೆ. ಆರೋಪಿಯನ್ನು ಪ್ರಭಾಕರನ್ ಎಂದು ಗುರುತಿಸಲಾಗಿದ್ದು, ಘಟನೆ ನಡೆಯುತ್ತಿದ್ದಂತೆಯೇ ಸ್ಥಳದಿಂದ ಪರಾರಿಯಾಗಿರುವ ಆತ ತಮಿಳುನಾಡಿಗೆ ಕಾಲ್ಕಿತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಅವಿವಾಹಿತರಾಗಿದ್ದ ಮೃತ ಸೆಂಥಿಲ್ ಕುಮಾರ್ ತಮ್ಮ ಸಹೋದರಿ ಹಾಗೂ ಆಕೆಯ ಪುತ್ರ ಪ್ರಭಾಕರನ್‌ನೊಂದಿಗೆ ವಾಸಿಸುತ್ತಿದ್ದರು. ಘಟನೆ ನಡೆದಾಗ ಸೆಂಥಿಲ್ ಕುಮಾರ್ ಹಾಗೂ ಆರೋಪಿ ಪ್ರಭಾಕರನ್ ಇಬ್ಬರೂ ಮದ್ಯ ಸೇವಿಸಿದ್ದರು. ಊಟ ಮಾಡುವಾಗ ಅವರಿಬ್ಬರ ನಡುವೆ ಮಾತಿನ ಚಮಕಿ ನಡೆದಿದೆ ಎಂದು ಹೇಳಲಾಗಿದೆ. ಮೃತ ಸೆಂಥಿಲ್ ಕುಮಾರ್ ಮನೆಯಲ್ಲಿ ಚಿಕನ್ ಕರಿ ಸಿದ್ಧಪಡಿಸಿದ್ದರು. ಆದರೆ, ಅದನ್ನು ಆರೋಪಿ ಪ್ರಭಾಕರನ್‌ನೊಂದಿಗೆ ಹಂಚಿಕೊಂಡಿರಲಿಲ್ಲ. ಹೀಗಾಗಿ ಅವರಿಬ್ಬರ ನಡುವೆ ವಾಗ್ವಾದ ನಡೆಯಿತು ಎಂದು ಎಫ್ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. ತಮ್ಮ ಮನೆಯ ಮುಂದಿನ ರಸ್ತೆಯಲ್ಲಿ ಸೆಂಥಿಲ್ ಕುಮಾರ್‌ರನ್ನು ಅಡ್ಡಗಟ್ಟಿದ ಪ್ರಭಾಕರನ್, ಅವರ ಮೇಲೆ ಬಿಳಿ ಬಣ್ಣದ ಪೈಪ್‌ನಿಂದ ಹಲ್ಲೆ ನಡೆಸಿದ್ದಾನೆ. ಈ ಹಲ್ಲೆಯಲ್ಲಿ ಸೆಂಥಿಲ್ ಕುಮಾರ್ ತಲೆ ಹಾಗೂ ದೇಹದ ಇತರ ಭಾಗಗಳಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಅವರು ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಅವರನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅವರು ಮಾರ್ಗಮಧ್ಯದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸೆಂಥಿಲ್ ಕುಮಾರ್ ಮೇಲೆ ಹಲ್ಲೆ ನಡೆಸುತ್ತಿದ್ದಂತೆಯೇ ಪ್ರಭಾಕರನ್ ಮೋಟರ್ ಬೈಕ್‌ನಲ್ಲಿ ಸ್ಥಳದಿಂದ ಪರಾರಿಯಾಗಿದ್ದಾನೆ. ತಮಿಳುನಾಡು ಪೊಲೀಸರ ನೆರವಿನೊಂದಿಗೆ ಆತನನ್ನು ಪತ್ತೆ ಹಚ್ಚಲು ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಕೊಳಿಂಜಾಪಾರ ಪೊಲೀಸ್ ಠಾಣೆಯಲ್ಲಿ ಹತ್ಯೆಯ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಮರಣೋತ್ತರ ಪರೀಕ್ಷೆಯ ಬಳಿಕ, ಮೃತದೇಹವನ್ನು ಅವರ ಕುಟುಂಬದ ಸದಸ್ಯರಿಗೆ ಹಸ್ತಾಂತರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ವಾರ್ತಾ ಭಾರತಿ 20 Apr 2026 4:23 pm

KRS Dam: ಬೆಂಗಳೂರು, ಮೈಸೂರು, ಮಂಡ್ಯ ಜಿಲ್ಲೆಗಳ ಜೀವನಾಡಿ ಕೆಆರ್‌ಎಸ್‌ನಲ್ಲಿ 100 ಅಡಿಗಿಂತ ಕೆಳಕ್ಕೆ ಕುಸಿದ ನೀರಿನ ಮಟ್ಟ

KRS Dam: ಬೆಂಗಳೂರು, ಮೈಸೂರು ಮತ್ತು ಮಂಡ್ಯ ಜಿಲ್ಲೆಗಳ ಜೀವನಾಡಿಯಾಗಿರುವ ಕೃಷ್ಣರಾಜ ಸಾಗರ (ಕೆಆರ್‌ಎಸ್) ಜಲಾಶಯದ ನೀರಿನ ಮಟ್ಟವು ಭಾರಿ ಪ್ರಮಾಣದಲ್ಲಿ ಕುಸಿತವಾಗಿದೆ. ಪ್ರಸ್ತುತ ನೀರಿನ ಮಟ್ಟವು ಇಂದು (ಏಪ್ರಿಲ್ 20) 100 ಅಡಿಗಿಂತ ಕೆಳಕ್ಕೆ ತಲುಪಿದೆ. ಒಳಹರಿವು ಕಡಿಮೆಯಿದ್ದು, ಹೊರಹರಿವಿನ ಪ್ರಮಾಣ ಹೆಚ್ಚಾಗಿದೆ. ಇದರಿಂದ ಈ ಭಾಗಗಳ ರೈತರು, ಜನರು ಆತಂಕದಲ್ಲಿದ್ದಾರೆ. ಜಲಾಶಯದ ಗರಿಷ್ಠ ಮಟ್ಟ

ಒನ್ ಇ೦ಡಿಯ 20 Apr 2026 4:13 pm

'ಇಲ್ಲೇ ಇರು, ಇಲ್ಲೇ ಆಡು': ಅಫ್ಘಾನಿಸ್ತಾನ ತೊರೆದು ಭಾರತದ ಪೌರತ್ವ ಸ್ವೀಕರಿಸಲು ರಶೀದ್ ಖಾನ್‌ ಗಿತ್ತು ಆಫರ್!

ರಶೀದ್ ಖಾನ್ ಗೆ ಭಾರತವೆಂದರೆ ಅಚ್ಚುಮೆಚ್ಚು. ಭಾರತೀಯರಿಗೂ ಅವರೆಂದರೆ ಬಹಳ ಇಷ್ಟ. ಹಾಗೆಂದು ಇಲ್ಲೇ ಇದ್ದುಬಿಡಿ, ಇಲ್ಲೇ ಆಡಿ ಎಂದು ಹೇಳಿದರೆ ಮಾತ್ರ ಅವರ ಉತ್ತರ ಖಡಕ್ ಆಗಿರುತ್ತದೆ. ನನ್ನ ದೇಶಕ್ಕಾಗಿ ಆಡುವುದೇ ಪರಮ ಗೌರವ, ಅಫ್ಘಾನಿಸ್ತಾನದ ಪರ ಆಡದಿದ್ದರೆ ಮತ್ಯಾವುದೇ ದೇಶದ ಪರ ಆಡುವುದಿಲ್ಲ ಎಂಬ ಅವರ ಖಡಕ್ ನಿಲುವು ಮತ್ತು ತಾಯ್ನಾಡಿನ ಮೇಲಿನ ನಿಷ್ಠೆ ಕ್ರೀಡಾಲೋಕದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ. ಅಫ್ಘಾನಿಸ್ತಾನದ ಸ್ಟಾರ್ ಸ್ಪಿನ್ನರ್ ರಶೀದ್ ಖಾನ್ ತಮ್ಮ ಜೀವನಚರಿತ್ರೆಯಲ್ಲಿ ಭಾರತ ಮತ್ತು ಆಸ್ಟ್ರೇಲಿಯಾದಿಂದ ಪೌರತ್ವದ ಆಫರ್ ಬಂದಿದ್ದನ್ನು ಬಹಿರಂಗಪಡಿಸಿದ್ದಾರೆ.

ವಿಜಯ ಕರ್ನಾಟಕ 20 Apr 2026 4:00 pm

ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟ ಗೊಂದಲ, ಕೋರ್ಟ್ ವಿಚಾರಣೆ ಮುಂದುವರೆದರೆ ಸಮಸ್ಯೆ

ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆಯ ತೃತೀಯ ಭಾಷೆಯ ಮೌಲ್ಯಮಾಪನಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಗ್ರೇಡಿಂಗ್ ಯೋಜನೆಯು ಕಾನೂನು ಸಂಘರ್ಷಕ್ಕೆ ಸಿಲುಕಿದೆ. ಹಿಂದಿ ಸೇರಿದಂತೆ ತೃತೀಯ ಭಾಷೆಗಳಿಗೆ ಅಂಕಗಳ ಬದಲಾಗಿ ಗ್ರೇಡಿಂಗ್ ನೀಡಲು ಸರ್ಕಾರ ನಿರ್ಧರಿಸಿತ್ತು, ಆದರೆ ಇದನ್ನು ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರಿದ ಕಾರಣ ಅಂಕಗಳನ್ನೇ ನೀಡುವಂತೆ ನ್ಯಾಯಾಲಯ ಸೂಚನೆ ನೀಡಿತು. ಈ ಆದೇಶದ ವಿರುದ್ಧ ಸರ್ಕಾರ ಈಗ ಮೇಲ್ಮನವಿ ಸಲ್ಲಿಸಿದ್ದು, ಇದರ ವಿಚಾರಣೆಯು ಏಪ್ರಿಲ್ 21 ರಂದು ನಡೆಯಲಿದೆ.

ವಿಜಯ ಕರ್ನಾಟಕ 20 Apr 2026 3:59 pm

ಐಷಾರಾಮಿ ಪೋರ್ಷೆ ಕಾರ್‌ ಬಳಸಿದ ಬೆಂಗಳೂರು ರಸ್ತೆ ಗುಂಡಿ ಮುಚ್ಚಿದ ಉದ್ಯಮಿ! ಬಾನೆಟ್‌ ಮೇಲೆಯೇ ಸಿಮೆಂಟ್ ಜಲ್ಲಿ ಮಿಶ್ರಣ

ಬೆಂಗಳೂರು ಉದ್ಯಮಿ ಅಖಿಲ್ ಹೇಮಾದ್ರಿ, ತಮ್ಮ ಪೋರ್ಷೆ ಕಾರಿನ ಬಾನೆಟ್ ಮೇಲೆ ಸಿಮೆಂಟ್ ಕಲಸಿ ರಸ್ತೆ ಗುಂಡಿ ಮುಚ್ಚಿದ ವಿಡಿಯೋ ವೈರಲ್ ಆಗಿದೆ. ನಾಗರಿಕ ಜವಾಬ್ದಾರಿಯ ಸಂದೇಶ ನೀಡಿದರೂ, ಐಷಾರಾಮಿ ಕಾರಿನ ಬಳಕೆ ಮತ್ತು ಕಂಪನಿ ಪ್ರಚಾರದ ಅಂಶ ಟೀಕೆಗೆ ಗುರಿಯಾಗಿದೆ. ಇದು ಸಮಾಜ ಸೇವೆಯೇ ಅಥವಾ ಪ್ರಚಾರದ ಗಿಮಿಕ್ ಎಂಬುದು ಚರ್ಚೆಗೆ ಕಾರಣವಾಗಿದೆ.

ವಿಜಯ ಕರ್ನಾಟಕ 20 Apr 2026 3:55 pm

ಆಸ್ತಿ ವಿವಾದ; ಶಿವಮೊಗ್ಗದ ಆನಂದಪುರದಲ್ಲಿ ಕುಟುಂಬವೊಂದರ ಮೇಲೆ ಮಾರಣಾಂತಿಕ ಹಲ್ಲೆ! ಆರೋಪಿಗಳ ವಿರುದ್ಧ ಕ್ರಮಕ್ಕೆ ಮನವಿ

ಶಿವಮೊಗ್ಗದ ಆನಂದಪುರದಲ್ಲಿ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ 20ಕ್ಕೂ ಹೆಚ್ಚು ಜನರ ಗುಂಪೊಂದು ಕುಟುಂಬವೊಂದರ ಮೇಲೆ ಭೀಕರ ದಾಳಿ ಮಾಡಿದ ಆರೋಪ ಕೇಳಿಬಂದಿದೆ. ಹಲ್ಲೆಗೊಳಗಾದ ಮಂಜುನಾಥ್‌ ಎನ್‌ ಮತ್ತವರ ಕುಟುಂಬದ ಸದಸ್ಯರು ಆನಂದಪುರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕುಟುಂಬಸ್ಥರ ದೂರಿನನ್ವಯ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದರೂ, ಆರೋಪಿತರು ಲಕ್ಷ್ಮೀ ನಿವಾಸದತ್ತ ಸುತ್ತ ಪದೇ ಪದೇ ಕಾಣಿಸಿಕೊಳ್ಳುತ್ತಿದ್ದು, ಸೂಕ್ತ ರಕ್ಷಣೆ ಮತ್ತು ತನಿಖೆಯನ್ನು ಚುರುಕುಗೊಳಿಸುವಂತೆ ಭಯದಲ್ಲಿ ದಿನ ದೂಡುತ್ತಿರುವ ಕುಟುಂಬ ಪೊಲೀಸರಲ್ಲಿ ಮನವಿ ಮಾಡಿದೆ

ವಿಜಯ ಕರ್ನಾಟಕ 20 Apr 2026 3:55 pm

ಹ್ಯಾರಿಸ್, ನಲಪಾಡ್ ಗೆ ಇಡಿ ಶಾಕ್: ದಾಳಿ ಹಿಂದಿದ್ಯಾ ಬಿಟ್ ಕಾಯಿನ್ ರಹಸ್ಯ, ಶ್ರೀಕಿ ಸಹವಾಸ ತಂದಿಡ್ತಾ ಸಂಕಷ್ಟ

ಕಾಂಗ್ರೆಸ್ ಶಾಸಕ ಎನ್ ಎ ಹ್ಯಾರಿಸ್ ಮತ್ತು ಅವರ ಪುತ್ರ ಮುಹಮ್ಮದ್ ನಲಪಾಡ್ ಅವರ ಬೆಂಗಳೂರಿನ ನಿವಾಸದ ಮೇಲೆ ಇಡಿ ದಾಳಿ ನಡೆಸಲಾಗಿದೆ. ಸೋಮವಾರ ಬೆಳಗ್ಗೆ ಇಡಿ ಅಧಿಕಾರಿಗಳು ಈ ದಾಳಿ ನಡೆಸಿದ್ದಾರೆ. ಬೆಂಗಳೂರಿನಲ್ಲಿ 17 ಕಡೆಗಳಲ್ಲಿ ದಾಳಿ ನಡೆಸಲಾಗಿದೆ. ಈ ನಡುವೆ ಈ ದಾಳಿಯ ಹಿಂದೆ ಬಿಟ್ ಕಾಯಿನ್ ಕಾರಣ ಎಂಬ ಮಾತುಗಳು ಕೇಳಿಬರುತ್ತಿವೆ. ಹ್ಯಾಕರ್ ಶ್ರೀಕಿ ಮತ್ತು ನಲಪಾಡ್ ನಡುವೆ ಸಂಪರ್ಕ ಇತ್ತು ಎಂಬ ಆರೋಪ ಇದೆ. ಈ ಹಿನ್ನೆಲೆಯಲ್ಲಿ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂಬ ಶಂಕೆ ಇದೆ. ಅಷ್ಟಕ್ಕೂ ಬಿಟ್ ಕಾಯಿನ್ ಹಗರಣ ಏನು? ಶ್ರೀಕಿ ಪ್ರಕರಣ ಏನು? ಎಂಬ ಮಾಹಿತಿ ಇಲ್ಲಿದೆ.

ವಿಜಯ ಕರ್ನಾಟಕ 20 Apr 2026 3:52 pm

Nikhil Kumaraswamy: ಬಿಜೆಪಿಯೊಂದಿಗೆ ಜೆಡಿಎಸ್ ಮೈತ್ರಿ ಮಾತ್ರ, ಈ ವಿಚಾರದಲ್ಲಿ ಬದಲಾವಣೆ ಇಲ್ಲ: ನಿಖಿಲ್ ಕುಮಾರಸ್ವಾಮಿ

Nikhil Kumaraswamy: ಕರ್ನಾಟಕದ ಪ್ರಮುಖ ರಾಜಕೀಯ ಪಕ್ಷಗಳಲ್ಲಿ ಒಂದಾಗಿರುವ ಹಾಗೂ ಪ್ರಾದೇಶಿಕ ಪಕ್ಷವಾದ ಜಾತ್ಯಾತೀತ ಜನತಾದಳ ಬಿಜೆಪಿಯೊಂದಿಗೆ (ಎನ್‌ಡಿಎ ಮೈತ್ರಿಕೂಟವನ್ನು) ಸೇರಿದೆ. ಇದಾದ ನಂತರ ಕರ್ನಾಟಕದಲ್ಲಿ ಮುಸ್ಲಿಂ ನಾಯಕರು ಹಾಗೂ ರಾಜಕಾರಣಿಗಳು, ಮತದಾರರು ಸಹ ಜೆಡಿಎಸ್‌ನಿಂದ ದೂರ ಸರಿದಿದ್ದಾರೆ. ಆದರೆ, ಇದೀಗ ಜೆಡಿಎಸ್ ತನ್ನ ನಿಲುವು ಬದಲಾಯಿಸುತ್ತಿದೆ. ಅದರಲ್ಲೂ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ

ಒನ್ ಇ೦ಡಿಯ 20 Apr 2026 3:39 pm

ಹಣ ವ್ಯರ್ಥ ಮಾಡಿಕೊಳ್ಳಬೇಡಿ : ಮೃತ ಪೋಷಕರ TDS Refund ಪಡೆಯುವುದು ಹೇಗೆ - ಇಲ್ಲಿದೆ ಮಾಹಿತಿ

TDS Refund : ಮೃತ ಪೋಷಕರ ಟಿಡಿಎಸ್ ಮರುಪಾವತಿಯನ್ನು ಸುಲಭವಾದ ಪ್ರಕ್ರಿಯೆಯಿಂದ ಮರಳಿ ಪಡೆಯಬಹುದಾಗಿದೆ. ಆದಾಯ ತೆರಿಗೆ ಇಲಾಖೆಯ ಅಂತರ್ಜಾಲದ ಮೂಲಕ, ಇದನ್ನು ಅಪ್ಲೈ ಮಾಡಬಹುದಾಗಿದೆ. ಮೃತ ಪೋಷಕರ ಉತ್ತರಾಧಿಕಾರಿ ಎನ್ನುವುದಕ್ಕೆ ಕಾನೂನುಬದ್ದವಾದ ದಾಖಲೆಗಳು ಮಾತ್ರ ಇರಬೇಕಾಗುತ್ತದೆ.

ವಿಜಯ ಕರ್ನಾಟಕ 20 Apr 2026 3:39 pm

ಅಪ್ಪನಿಗೆ ಮನೆಯಿಂದ ಕೆಲಸ ಮಾಡಲು ಬಿಡಿ, ಅಮ್ಮನಿಗೆ ಹುಷಾರಿಲ್ಲ: ಪುಟ್ಟ ಬಾಲಕಿಯ ಫೋನ್ ಕರೆ ಬದಲಿಸಿತು ಕಂಪನಿಯ ಕಠಿಣ ನಿಯಮ!

ಬದಲಾಗುತ್ತಿರುವ ಇಂದಿನ ಕಾರ್ಪೊರೇಟ್ ಸಂಸ್ಕೃತಿಯಲ್ಲಿ 'ವರ್ಕ್ ಫ್ರಮ್ ಹೋಮ್' ಕೇವಲ ಒಂದು ಸೌಲಭ್ಯವಾಗಿ ಉಳಿಯದೆ, ಉದ್ಯೋಗಿ ಮತ್ತು ಸಂಸ್ಥೆಯ ನಡುವಿನ ಸಂಬಂಧವನ್ನು ಅಳೆಯುವ ಮಾನದಂಡವಾಗಿ ಮಾರ್ಪಟ್ಟಿದೆ. ಹಲವು ಕಂಪನಿಗಳು ಕಟ್ಟುನಿಟ್ಟಾದ ನಿಯಮಗಳಿಗೆ ಅಂಟಿಕೊಂಡಿರುವ ಈ ಕಾಲದಲ್ಲಿ, ಇತ್ತೀಚೆಗೆ ವೈರಲ್ ಆದ ಘಟನೆಯು ಮಾನವೀಯತೆಯ ಮಹತ್ವವನ್ನು ಎತ್ತಿ ತೋರಿಸುತ್ತದೆ. ತುರ್ತು ಸಂದರ್ಭದಲ್ಲಿ ಉದ್ಯೋಗಿಯೊಬ್ಬರ ಅನಿವಾರ್ಯತೆಯನ್ನು ಅರಿತ ಸಂಸ್ಥೆಯು, ತನ್ನ ಕಠಿಣ ನಿಯಮಗಳನ್ನು ಬದಿಗೊತ್ತಿ ಸಹಾನುಭೂತಿಯಿಂದ ಸ್ಪಂದಿಸಿದ್ದು ಎಲ್ಲರ ಗಮನ ಸೆಳೆದಿದೆ.

ವಿಜಯ ಕರ್ನಾಟಕ 20 Apr 2026 3:38 pm

ಕಲಬುರಗಿಯ ಚಿಂಚೋಳಿಯಲ್ಲಿ ಅಕ್ರಮ ಗಣಿಗಾರಿಕೆ

ಕೆಂಪು ಮಣ್ಣು ಸಾಗಾಟದಲ್ಲಿ ಅಧಿಕಾರಿಗಳ ಶಾಮೀಲು ಆರೋಪ

ವಾರ್ತಾ ಭಾರತಿ 20 Apr 2026 3:34 pm

2023ರಲ್ಲಿ ಅಂಗೀಕಾರಗೊಂಡ ಮಹಿಳಾ ಮೀಸಲಾತಿ ಜಾರಿಗೊಳಿಸಿ: ಶಾಲೆಟ್ ಪಿಂಟೋ

ಮಂಗಳೂರು, ಎ. 20: ಕ್ಷೇತ್ರ ವಿಂಗಡನೆ ರಹಿತವಾಗಿ 2023ರಲ್ಲಿ ಅಂಗೀಕಾರಗೊಂಡಿರುವ ಶೇ. 33 ಮಹಿಳಾ ಮೀಸಲಾತಿಯನ್ನು ಅನುಷ್ಟಾನಗೊಳಿಸಿ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ರಾಜಕೀಯದಲ್ಲಿ ಪ್ರವೇಶಕ್ಕೆ ಅವಕಾಶ ಕಲ್ಪಿಸಬೇಕು ಎಂದು ಕರ್ನಾಟಕ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಡಳಿಯ ಅಧ್ಯಕ್ಷೆ ಶಾಲೆಟ್ ಪಿಂಟೋ ಆಗ್ರಹಿಸಿದ್ದಾರೆ. ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕ್ಷೇತ್ರ ವಿಂಗಡನೆ ಹಾಗೂ ಜನಗಣತಿಯೊಂದಿಗೆ ಜೋಡಿಸಿಕೊಂಡು ಮಹಿಳಾ ಮೀಸಲಾತಿಯನ್ನು ಜಾರಿಗೆ ತರುವ ಕೇಂದ್ರ ಸರಕಾರದ ಕುತಂತ್ರಕ್ಕೆ ಸೋಲಾಗಿರುವುದೇ ಹೊರತು 2023ರಲ್ಲಿ ಅಂಗೀಕಾರಗೊಂಡಿರುವ ಶೇ. 33 ಮೀಸಲಾತಿ ಸರ್ವ ಪಕ್ಷಗಳಿಂದ ಅಂಗೀಕಾರಗೊಂಡಿದೆ. ಅದನ್ನು ಯಥವತ್ತಾಗಿ ಜಾರಿಗೊಳಿಸುವ ಕಾರ್ಯವನ್ನು ಪ್ರಧಾನಿ ಮೋದಿಯವರು ಮಾಡಬೇಕು ಎಂದರು. 80ರ ದಶಕದಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರು ಮಹಿಳೆಯ ಮೀಸಲಾತಿಯ ಕನಸು ಕಂಡಿದ್ದರು. 23-74ನೆ ಸಾಲಿನಲ್ಲಿ ಪಿ.ವಿ. ನರಸಿಂಹ ರಾವ್ ಪ್ರಧಾನಿಯಾಗಿದ್ದಾಗ ಸ್ಥಳೀಯಾಡಳಿತದಲ್ಲಿ ಶೇ. 33 ಮಹಿಳಾ ಮೀಸಲಾತಿಯನ್ನು ಜಾರಿಗೊಳಿಸಿರುವುದು ಕಾಂಗ್ರೆಸ್. ಇದೀಗ ಕ್ಷೇತ್ರ ವಿಂಗಡನೆಯ ಮಹಿಳಾ ಮೀಸಲಾತಿಯ ವಿಧೇಯಕಕ್ಕೆ ಸೋಲಾಗಿರುವ ಬಗ್ಗೆ ಕಾಂಗ್ರೆಸ್ ವಿರುದ್ಧ ಬೊಬ್ಬೆ ಹಾಕುತ್ತಿರುವ ಬಿಜೆಪಿಯ ಮಹಿಳೆಯರು, ಕೇಂದ್ರ ಸರಕಾರಕ್ಕೆ ಈಗಾಗಲೇ ಅಂಗೀಕಾರ ಗೊಂಡಿರುವ ಮಹಿಳಾ ಮೀಸಲಾತಿ ಜಾರಿಗೆ ಒತ್ತಾಯಿಸಲಿ ಎಂದರು. ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವಾಗ ಇಂತಹ ಮಸೂದೆಯನ್ನು ಮಂಡನೆ ಮಾಡುವ ಬಗ್ಗೆ ಚುನಾವಣಾ ಆಯೋಗಕ್ಕೆ ಅರಿವಿಲ್ಲವೇ ಎಂದು ಪ್ರಶ್ನಿಸಿದ ಅವರು, ಕಾಂಗ್ರೆಸ್ ಸರಕಾರ ಹಿಂದೆಯೂ ಮಹಿಳಾ ಮೀಸಲಾತಿ ಪರವಾಗಿದ್ದು, ಈಗಲೂ ಬೆಂಬಲ ನೀಡಲಿದೆ. ಪ್ರಿಯಾಂಕಾ ಗಾಂಧಿಯವರು ಈಗಾಗಲೇ ಕೇಂದ್ರಕ್ಕೆ ಬಹಿರಂಗ ಸವಾಲು ಹಾಕಿದ್ದು, ಮಹಿಳಾ ಮೀಸಲಾತಿ ಜಾರಿಯಾಗುವ ನಮ್ಮ ಕನಸು ನನಸಾಗಬೇಕು. ಸಿದ್ಧರಾಮಯ್ಯ ಸರಕಾರದಲ್ಲಿ ವಿವಿಧ ಯೋಜನೆಗಳ ಮೂಲಕ ಮಹಿಳೆಯರು ಸಬಲರಾಗಿದ್ದಾರೆ. ಮುಂದಿನ ದಿನಗಳಲ್ಲಿ ಮಹಿಳಾ ಮೀಸಲಾತಿ ಮೂಲಕ ರಾಜಕೀಯವಾಗಿ ಎದ್ದು ನಿಲ್ಲಲು ಅವಕಾಶ ಆಗಬೇಕು ಎಂದವರು ಹೇಳಿದರು. ಗೋಷ್ಟಿಯಲ್ಲಿ ಮುಖಂಡರಾದ ನಮಿತಾ ಡಿ ರಾವ್, ಗೀತಾ ಅತ್ತಾವರ, ಸುರೇಖಾ ಚಂದ್ರಹಾಸ್, ಚಂದ್ರಕಲಾ ಜೋಗಿ, ರೂಪ, ಸಾರಿಕಾ, ಉಷಾ ಅಂಚನ್ ಉಪಸ್ಥಿತರಿದ್ದರು.   ‘ನಾರಿಶಕ್ತಿ ಅಧಿನಿಯಮ ವಿಫಲವಾದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿಯವರು ಭ್ರೂಣ ಹತ್ಯೆಯ ಪದ ಬಳಕೆ ಮಾಡಿದ್ದಾರೆ. ಕುತಂತ್ರದ ಮಸೂದೆಗಾಗಿ ಈ ಪದ ಬಳಕೆ ಮಾಡಿರುವುದನ್ನು ನಾವು ಖಂಡಿಸುತ್ತೇವೆ. ವರದಕ್ಷಿಣೆ ರಹಿತ ವಿವಾಹ ಕಾಯ್ದೆ, ಮಹಿಳಾ ಆಯೋಗ ರಚನೆ, ಕೌಟುಂಬಿಕ ದೌರ್ಜನ್ಯ ನಿಷೇಧ ಕಾಯ್ದೆ, ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೂ ಪಾಲು, ಪಾಶ್ ಕಾಯಿದೆ ಮೂಲಕ ಕಾಂಗ್ರೆಸ್ ಸರಕಾರ ಮಹಿಳೆಯರ ಘನತೆಯನ್ನು ಎತ್ತಿಹಿಡಿದಿದೆ. ರಾಜ್ಯದಲ್ಲಿಯೂ ಹಲವಾರು ಯೋಜನೆಗಳ ಮೂಲಕ ಮಹಿಳೆಯರಿಗೆ ಗೌರವ ನೀಡಲಾಗಿದೆ. ಉನ್ನಾವೋ, ಹತ್ರಾಸ್ ಪ್ರಕರಣ, ಯುಪಿಯಲ್ಲಿ ಅತ್ಯಾಚಾರಿ ಆರೋಪಿಗೆ ಬಹಿರಂಗವಾಗಿ ಸನ್ಮಾನ ಮೂಲಕ ಬಿಜೆಪಿ ಮಹಿಳೆಯರ ಆತ್ಮಗೌರವಕ್ಕೆ ಧಕ್ಕೆ ನೀಡಿದೆ. ಮಹಿಳಾ ಮೀಸಲಾತಿ ಎಂಬ ರಾಜಕೀಯ ಸ್ವಾತಂತ್ರ್ಯಕ್ಕೆ ಕ್ಷೇತ್ರ ವಿಂಗಡನೆ, ಗಣತಿ ಎಂಬ ಸಂಕೋಲೆ ಹಾಕಿ ಕಟ್ಟಿ ಹಾಕುವ ಪ್ರಯತ್ನ ಮಾಡಲಾಗಿದೆ. ಕಾಂಗ್ರೆಸ್ 1989ರಿಂದಲೂ ಮಹಿಳಾ ಮೀಸಲಾತಿಗೆ ಪ್ರಯತ್ನಿಸುತ್ತಾ ಬಂದಿದೆ. ಇದೀಗ ಸ್ಪಷ್ಟ ಬಹುಮತದೊಂದಿಗೆ ಸರಕಾರ ಹೊಂದಿರುವ ಬಿಜೆಪಿ 2023ರಲ್ಲಿ ಅಂಗೀಕಾರವಾಗಿರುವ ಶೇ. 33ರ ಮಹಿಳಾ ಮೀಸಲಾತಿಯನು ಮುಂದಿನ ಚುನಾವಣೆಯಲ್ಲಿ ಜಾರಿಗೊಳಿಸಬೇಕು. ಅಲ್ಪಸಂಖ್ಯಾತ, ದಮನಿತ ಮಹಿಳೆಯರಿಗೂ ಸ್ಥಾನಮಾನ ಸಿಗುವಂತಾಗಬೇಕು ಎಂದು ಕೆಪಿಸಿಸಿ ರಾಜ್ಯ ವಕ್ತಾರರಾದ ಯು.ಟಿ.ಫರ್ಝಾನ ಆಗ್ರಹಿಸಿದರು.

ವಾರ್ತಾ ಭಾರತಿ 20 Apr 2026 3:28 pm

ಹೃದಯವಂತ ಸ್ಪೃಶ್ಯಾಸ್ಪೃಶ್ಯ ಸಂಬಂಧಗಳ ರಂಗೋಲಿಯ ಚುಕ್ಕಿ ಗೆರೆಗಳ ಕೂಡಿಸುತ್ತಾ...

ರಂಗೋಲಿ ಹಾಕುವವರು ಬಾಗಿಲಿಗೆ ನೀರು ಚಿಮುಕಿಸಿ, ತೇವ ಮಾಡಿ, ಚುಕ್ಕಿ ಇಟ್ಟು ರಂಗೋಲಿ ಹಾಕುತ್ತಾರೆ. ಯಾಕೆಂದರೆ ರಂಗೋಲಿ ಅಳಿಸಿ ಹೋಗಬಾರದೆಂದು. ಆದರೆ ಪುಟ್ಟ ಪುಟ್ಟ ಮಕ್ಕಳು ಕೈಯಿಂದ ಅಳಿಸುತ್ತಾರೆ. ದೊಡ್ಡ ಮಕ್ಕಳು ಕಾಲಿಂದ ಅಳಿಸುತ್ತಾರೆ. ಅದರಿಂದ ಅವರಿಗೆ ಖುಷಿ ಸಿಗುತ್ತದೆ. ಆದರೆ ಜೀವಪ್ರೀತಿ ಸಂಬಂಧವನ್ನು ಕಟ್ಟುವವರನ್ನು ಸಹಿಸಲಾರದವರು ಅದನ್ನು ಅಳಿಸಲು ಪ್ರಯತ್ನಿಸುತ್ತಾರೆ. ಇದರಲ್ಲಿ ಹೊರಗಿನವರಿಗಿಂತ ನಮ್ಮ ಒಳಗಿನವರ ಪಾಲೇ ಹೆಚ್ಚಿದೆ. ಒಳಮೀಸಲಾತಿ ಎನ್ನುವುದು ಅಸ್ಪಶ್ಯ ಸಮುದಾಯಗಳನ್ನು ಒಳಗೊಳ್ಳುತ್ತಲೇ ಅವಕಾಶ ವಂಚಿತ ಸಮುದಾಯಗಳು ಅವಕಾಶ ಪಡೆಯುವುದು. ಈಗ ಈ ಚೆಂಡು ಸರಕಾರದ ಅಂಗಳದಲ್ಲಿದೆ. ಈ ಸರಕಾರ ಎಲ್ಲಾ ನೊಂದ ಶೋಷಿತ ಸಮುದಾಯಕ್ಕೆ ತಾಯಿಯ ರೂಪದಲ್ಲಿ ನಿಂತು ಇಷ್ಟೊತ್ತಿಗೆ ಒಳಮೀಸಲಾತಿ ಜಾರಿ ಮಾಡಬೇಕಿತ್ತು. ಈ ವಿಳಂಬ ಅನಗತ್ಯ ಗೊಂದಲಗಳಿಗೆ ಕಾರಣವಾಗಿ ದಲಿತ ಸಮುದಾಯಗಳನ್ನೇ ಪರಸ್ಪರ ಎತ್ತಿಕಟ್ಟಿದಂತಾಗಿದ್ದು, ಸಮುದಾಯಗಳ ಅಸಹನೀಯ ಕಿಚ್ಚಿಗೆ ನೇರ ಕಾರಣವಾಗಿದೆ. ಸರಕಾರಕ್ಕೆ ಕಾನೂನುಗಳು ಬೇಕು; ಸಮುದಾಯಗಳಿಗೆ ಸಾಂತ್ವನ ಬೇಕು: ಇವೆರಡನ್ನೂ ಒಳಗೊಂಡು ಸರಕಾರ ಸಮಸ್ಯೆಯನ್ನು ಬಗೆಹರಿಸಬಹುದಿತ್ತು. ಸರಕಾರ ಏಕೋ ತಾನು ದೊಡ್ಡತನ ತೋರಿಸುವಲ್ಲಿ ಸೋತಿದೆ ಎಂದು ಹೇಳಬೇಕು. ಎಲ್ಲಾ ಅಂಕಿ-ಅಂಶಗಳು ಸರ್ಕಾರದ ಒಡಲಲ್ಲೇ ಇದ್ದರೂ, ಈ ಒಡಲ ಉರಿಯನ್ನು ತನ್ನ ಅಂತಃಕರಣದಿಂದ ನೋಡುವಲ್ಲಿ ಕುರುಡಾಗಿರುವುದು ಶೋಷಿತ ಸಮುದಾಯಗಳಿಗೆ ನೋವುಂಟು ಮಾಡಿದೆ. ಇರಲಿ! ಸರಕಾರ ಎಲ್ಲರಿಗೂ ಒಳ್ಳೆಯದು ಮಾಡುತ್ತದೆ ಎಂದು ಕಾಯೋಣ. ತಾಯಿ ಎದೆಯಲ್ಲಿ ಹಾಲಿದ್ದರೂ ಹಸಿದ ಮಗುವಿಗೆ ಹಾಲು ಕೊಡದೇ ಇರುವುದು ತಾಯ್ತನವಲ್ಲ. ಅಂತಿಮವಾಗಿ ಸರಕಾರ ಎಲ್ಲಾ ಬಿಂದುಗಳನ್ನು ಸರಿಪಡಿಸಿ ಒಪ್ಪಿಗೆಯಾಗುವ ಒಂದು ಸರಳರೇಖೆಗಾಗಿ ನಾವು ಕಾಯುತ್ತಿದ್ದೇವೆ. ಇದೆಲ್ಲದರ ನಡುವೆ ಸಮುದಾಯದೊಳಗೆ ಸಣ್ಣದೊಂದು ಬೆಳ್ಳಿಕಿರಣ ಕಾಣಿಸುತ್ತಿದೆ. ನಾವೆಲ್ಲರೂ ಒಂದಾಗೋಣ ಎನ್ನುವ ಕರೆ ನಿಜಕ್ಕೂ ಒಳ್ಳೆಯ ಬೆಳವಣಿಗೆ. ಇದಕ್ಕಾಗಿ ಶ್ರಮಿಸುತ್ತಿರುವವರು ನಮ್ಮ ನಾಡಿನ ಹೆಮ್ಮೆಯ ಲೇಖಕರಾದ ಹಾಡಿನ ರೂಪದಲ್ಲೇ ಜನರ ಎದೆಗಿಳಿದ ಕವಿ, ಸಂಸ್ಕೃತಿ ಚಿಂತಕ ಮತ್ತು ಇವತ್ತಿಗೂ ನಾವೆಲ್ಲಾ ಕಲೆಕ್ಟಿವ್ ಆಗಿರಬೇಕು ಎಂದು ಸದಾ ಚಡಪಡಿಸುವ ಕೋಟಿಗಾನಹಳ್ಳಿ ರಾಮಯ್ಯ ಮತ್ತು ಕೋಲಾರ ಜಿಲ್ಲೆಯ ಇನ್ನೊಬ್ಬ ಹಿರಿಯರಾದ ಗಡ್ಡಂ ವೆಂಕಟೇಶಣ್ಣ . ಇವರೊಂದಿಗೆ ಸಮಾನತೆಯ ಕನಸನ್ನು ಹೊಂದಿದ ಇತರರೂ ಇದ್ದಾರೆ. ನಾವೆಲ್ಲರೂ ಒಂದಾಗೋಣ ಎನ್ನುವ ಮಹತ್ವಾಕಾಂಕ್ಷೆಯ ಸಭೆಯಲ್ಲಿ ಬೌದ್ಧ ಬಂತೇಜಿ ಕೂಡ ಇದ್ದರೆಂದು ಪತ್ರಿಕೆಯಲ್ಲಿ ಓದಿದ್ದೆ. ಇಂತಹ ದುರಿತ ಕಾಲದಲ್ಲಿ ಒಂದಾಗುವ ಮಾತು ಬರಗಾಲದಲ್ಲಿ ಮಳೆ ಬಂದಂತಾಯಿತು. ಡಾ. ಬಾಬಾ ಸಾಹೇಬ್ ಚಿಂತಕರನ್ನು/ಚಿಂತನೆಯನ್ನು ಇನ್ನಿಲ್ಲದಂತೆ ಅವಹೇಳನ ಮಾಡುವ, ಸಂವಿಧಾನವನ್ನೇ ಪಕ್ಕಕ್ಕೆ ಸರಿಸಿ ನಮ್ಮನ್ನು ಯಾರು ತಡೆಯುತ್ತಾರೆ ಎಂದು ಜೆಸಿಬಿಯಂತೆ ನುಗ್ಗುತ್ತಿರುವ ಕೋಮುವಾದಿ ಪಕ್ಷಗಳು ತನ್ನ ನಾಲಗೆಗಳನ್ನು ಹೊಲೆ ಮಾದಿಗರ ಕೇರಿಗೆ ಚಾಚಿ ನುಂಗುತ್ತಿರುವ ಈ ಗಳಿಗೆಯಲ್ಲಿ ನಾವು ಒಂದಾಗದಿದ್ದರೆ, ನಾವು ಉಸಿರಾಡುವುದು ಕಷ್ಟವಾಗುತ್ತದೆ. ಆದ್ದರಿಂದ ಅಂಚಿಗೆ ಎಸೆಯಲ್ಪಟ್ಟ ಈ ಸಮುದಾಯಗಳು ಬಾಬಾ ಸಾಹೇಬರು ಹೇಳಿದ ಕ್ಷುಲ್ಲಕ ಕಾರಣಗಳನ್ನು ಮೀರಿ ಒಂದಾಗಬೇಕಾಗಿರುವುದು ತುಂಬಾ ಅವಶ್ಯವಿದೆ. ಆದರೆ ಬೆರಳಣಿಕೆಯಷ್ಟು ಜನ ಮಾತ್ರ ಈ ಮಾತನ್ನು ದೊಡ್ಡ ದನಿಯಲ್ಲಿ ಮಾತನಾಡುತ್ತಿರುತ್ತಾರೆ. ಆದರೆ ಇದನ್ನು ಜನಸಾಮಾನ್ಯರಿಗೆ ತಲುಪಿಸಲು ಸಾಧ್ಯವಾಗುತ್ತದಾ? ಎನ್ನುವುದು ನನ್ನ ಪ್ರಶ್ನೆ. ಇದನ್ನು ಇಲ್ಲಿಗೆ ನಿಲ್ಲಿಸಿ ಇನ್ನೊಂದು ಮುಖ್ಯ ವಿಷಯಕ್ಕೆ ಬರುತ್ತೇನೆ. ಬಾಬಾ ಸಾಹೇಬರ ಬಹಳ ಮಹತ್ವಾಕಾಂಕ್ಷೆಯ ಕೃತಿ ‘ಬುದ್ಧ ಆಂಡ್ ಹಿಸ್ ದಮ್ಮ’ದ ಮೂಲಕ ಅವರು ತೋರಿದ್ದು ಶೋಷಿತರಿಗೆ ಮತ್ತು ಅಸ್ಪಶ್ಯರಿಗೆ ನಿಜವಾಗಿಯೂ ಬೆಳಕಿರುವುದು ಬೌದ್ಧ ಧರ್ಮದಲ್ಲಿ ಎನ್ನುವ ಮಾರ್ಗವನ್ನು. ಬಾಬಾ ಸಾಹೇಬರು 14-10-1956 ರಂದು ನಾಗಪುರದಲ್ಲಿ 5 ಲಕ್ಷಕ್ಕಿಂತ ಹೆಚ್ಚಿನ ಜನರೊಂದಿಗೆ ಬೌದ್ಧ ದಮ್ಮವನ್ನು ಸ್ವೀಕರಿಸಿದರು. ಭಾರತದಲ್ಲಿ ಬೌದ್ಧ ದಮ್ಮ ಪುನರುತ್ಥಾನಕ್ಕೆ ಕಾರಣರಾದರು. ಪ್ರೀತಿ, ಕರುಣೆ, ಭ್ರಾತೃತ್ವ ಬೌದ್ಧ ದಮ್ಮದ ಜೀವಸತ್ವ. ತನ್ನ ಸಮುದಾಯ ಬುದ್ಧ ಮತ್ತು ಆತನ ತತ್ವಗಳನ್ನು ಅನುಸರಣೆ ಮಾಡಬೇಕೆಂಬುದು ಬಾಬಾ ಸಾಹೇಬರ ಕನಸಾಗಿತ್ತು. ಆದರೆ ಈ ದೇಶದ ಈ ನಾಡಿನ ದಲಿತರು ಎಲ್ಲಿ ನಿಂತಿದ್ದಾರೆ ಎಂದು ಕೇಳಿದರೆ ನಮ್ಮ ದನಿಗಳು ಕ್ಷೀಣಿಸುತ್ತವೆ. ಇದು ನಿಜವಾಗಲೂ ದುಃಖಕರ ಸಂಗತಿ. ಸರಕಾರ ಕಾನೂನುಗಳನ್ನು ಎಷ್ಟು ಉತ್ಸಾಹದಿಂಂದ ಜಾರಿ ಮಾಡುತ್ತದೋ ಅಷ್ಟೇ ಇಚ್ಛಾಶಕ್ತಿಯ ಮೂಲಕ ಕಾರ್ಯರೂಪಕ್ಕೂ ತರಬೇಕು. ಇಲ್ಲದಿದ್ದಲ್ಲಿ ಅದು ಕಾಗದದ ರೂಪದಲ್ಲಿ ಉಳಿದು ಬಿಡುತ್ತದೆ. ಇಲ್ಲಿ ನಾನು ಮುಖ್ಯವಾಗಿ ಮಾತನಾಡಬೇಕಾಗಿರುವುದು ಬೌದ್ಧ ಅಭಿವೃದ್ಧಿ ನಿಗಮದ ಕುರಿತು. ಸರಕಾರ ಒಂದು ಹೆಜ್ಜೆ ಮುಂದಿಟ್ಟು ಮೈಸೂರಿನಲ್ಲಿ ಬೌದ್ಧ ದಮ್ಮದ ಸಮ್ಮೇಳನ ಮಾಡಿತ್ತು. ಆಗ ಮೂರು ದಿನಗಳಲ್ಲಿ ಬೌದ್ಧ ಧರ್ಮದ ಅನುಯಾಯಿಗಳಾಗಬೇಕೆಂದು ಬಯಸುವವರು ಒಂದೂವರೆ ಲಕ್ಷಕ್ಕಿಂತ ಹೆಚ್ಚು ಜನ ಬಂದು ಹೋದರೆಂದು ನಮ್ಮ ನಾಡಿನ ಮಹತ್ವದ ಕವಿ ‘ಡಾ. ಮೂಡ್ನಾಕೂಡು ಚಿನ್ನಸ್ವಾಮಿ’ಯವರು ತಿಳಿಸಿದರು. ಇಷ್ಟೆಲ್ಲಾ ಉತ್ಸಾಹ ಇದ್ದರೂ ಇದರ ಮುಂದಾಳತ್ವವನ್ನು ವಹಿಸಿರುವವರು ಇನ್ನಷ್ಟು ಶ್ರಮ ಹಾಕಿ ಬೌದ್ಧ ಅಭಿವೃದ್ಧಿ ನಿಗಮ ಸ್ಥಾಪನೆ ಆಗಬೇಕು. ಅದರಡಿ ಬೌದ್ಧ ಸಾಹಿತ್ಯ ಅಕಾಡಮಿ ಕೂಡ ಸ್ಥಾಪನೆ ಆಗಬೇಕು ಎಂಬುದು ಎಲ್ಲರ ಹೆಬ್ಬಯಕೆ. ಆದರೆ ಇವೆಲ್ಲವೂ ಆಗಬೇಕೆಂದು ಕ್ರಿಯಾಶೀಲರಾಗಿ ಓಡಾಡುವವರ ಸಂಖ್ಯೆ ವಿರಳ. 70-80ರ ದಶಕದಲ್ಲಿದ್ದ ತೀವ್ರತೆ ಕಡಿಮೆಯಾಗಿದೆ.ಎಲ್ಲವೂ ವ್ಯಕ್ತಿಗತವಾಗಿ ತಾನು ನಾಯಕತ್ವ ವಹಿಸಬೇಕು, ತಾನು ಹೇಳಿದ್ದು ನಡೆಯಬೇಕು ಎನ್ನುವುದು ಎದ್ದು ಕಾಣುತ್ತದೆ. ಹೀಗಾದರೆ ಸಮುದಾಯವನ್ನು ಕಟ್ಟುವುದು ಹೇಗೆ? ನಾವೆಲ್ಲಾ ಒಂದಾಗೋಣ ಎನ್ನುವ ನಿಲುವೇನೋ ಸರಿ, ಆದರೆ ಇದಕ್ಕೆ ಪೂರಕವಾದ ಅಂಶಗಳೇನು? ಆಗೆಲ್ಲಾ ಹಳ್ಳಿ, ಪಟ್ಟಣ, ನಗರ ಎಲ್ಲರೂ ಎಲ್ಲಾ ಕಡೆ ಹೋಗುತ್ತಿದ್ದರು. ಆದರೆ ಈಗ ತನ್ನ ಹೇಳಿಕೆಗಳು ಪತ್ರಿಕೆಗಳಲ್ಲಿ, ಮಾಧ್ಯಮಗಳಲ್ಲಿ ಬರಬೇಕು ಎನ್ನುವುದು ಬಿಟ್ಟು ಜನರ ಬಳಿಗೆ ಹೋಗದಿದ್ದರೆ ನಮ್ಮ ಯಾವ ಕನಸುಗಳು ಚಿಗುರೊಡೆಯುವುದಿಲ್ಲ. ಈ ಲೇಖನ ಬರೆಯುವ ಹೊತ್ತಿನಲ್ಲಿ ಈ ನಾಡಿನ ಸಾಕ್ಷಿ ಪ್ರಜ್ಞೆ ದೇವನೂರು ರವರು ಫೋನ್ ಮಾಡಿದ್ದರು. ಅವರಿಗೆ ಈ ವರ್ಷದ ಪಂಪ ಪ್ರಶಸ್ತಿ ಬಂದಿರುವುದು ಇಡೀ ಕನ್ನಡಿಗರಿಗೆ ಹೆಮ್ಮೆಯ ವಿಷಯ. ದೇವನೂರು ಎಂದರೆ ನಾನೇ ಬರೆದ ಕವಿತೆಯ ಸಾಲುಗಳು ನೆನಪಾಗುತ್ತವೆ; ಸರಳರೇಖೆ ಎಂದರೆ ಸರಳರೇಖೆಯೇ ಮಾತಿಲ್ಲ; ಆಳ, ಅರ್ಥಗಳ ಮೌನವೇ ಎಲ್ಲಾ ಸರಳ ರೇಖೆ ಎಂದರೆ ಅಗಣಿತ ಅಣುಗಳ ಅನಂತ ಚಲನೆ ರೇಖೆಯೆಂದರೆ ಮುಗುಳ್ನಗೆ, ಅಂತಃಕರಣದ ಧ್ಯಾನ ಇದಕ್ಕಿಂತ ಹೆಚ್ಚು ಅಲ್ಲ, ಕಡಿಮೆಯೂ ಅಲ್ಲ ಅಲ್ಲಮಪ್ರಭುವೇ... ಈ ಸಾಲನ್ನು ಹಿಡಿದು ಮುಂದುವರಿಯುವುದು. ದೇವನೂರು ಜೊತೆ ಮಾತನಾಡುತ್ತಾ ಅಭಿನಂದನೆಗಳು ಸರ್ ಎಂದಾಗ ಅದಕ್ಕೆ ಏನೂ ಪ್ರತಿಕ್ರಿಯಿಸದ ದೇವನೂರು ಹುಂ ಎಂದಷ್ಟೇ ಹೇಳಿ, ಚೆನ್ನಾಗಿದ್ದೀರಾ? ಎಂದರು. ನಾನು ಹಳೆಯ ಹೋರಾಟದ ನೆನಪುಗಳನ್ನು ಮೆಲುಕು ಹಾಕುತ್ತಲೇ... ಮತ್ತೆ ಕಟ್ಟುವ ಕನಸಿಗೆ ಒಂದು ಸಭೆ ನಡೆದುದನ್ನು ದೇವನೂರು ರವರಿಗೆ ತಿಳಿಸಿದೆ. ಅದಕ್ಕೆ ದೇವನೂರು ‘‘ಮತ್ತೆ ಕಟ್ಟುವ, ಬಿಗಿಯುವ ಒತ್ತಡ ಹೆಚ್ಚಾದಷ್ಟು ಅದು ಹರಿದು ಹೋಗುತ್ತದೆ. ಇದರ ಬದಲಾಗಿ ಚಿಕ್ಕ ಚಿಕ್ಕವರಲ್ಲಿ ಚಿಗುರಿಸುವ ಕನಸು ಕಾಣಿ ಮತ್ತು ದಲಿತ ಸಂಘರ್ಷ ಸಮಿತಿ ಬಿಟ್ಟು ಅದರ ಆಚೆಗೆ ಎಲ್ಲರನ್ನು ಒಳಗೊಳ್ಳುವ ಹಾಗೇ ಮಾಡಬೇಕು’’ ಎನ್ನುವ ಮಾತು ನನ್ನೆದೆಗೆ ಇಳಿಯಿತು. ಈಗ ಪರಿಸ್ಥಿತಿ ಏನಾಗಿದೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಆದರೂ ಇವತ್ತಿನ ಮನಸ್ಥಿತಿಗಳು ಗೊಂದಲಮಯವಾಗಿದೆ. ಅದರಲ್ಲಿ ಕೆಲವರು ನಾಳೆ ಮತ್ತೆ ಕಟ್ಟುವ ಕನಸುಗಳಿಗಾಗಿ ಹಾತೊರೆಯುತ್ತಿದ್ದಾರೆ. ನನ್ನ ಈ ಲೇಖನದ ಶೀರ್ಷಿಕೆ ಹೃದಯವಂತ ಸ್ಪಶ್ಯ-ಅಸ್ಪಶ್ಯ ಸಂಬಂಧಗಳೇ ಅದಕ್ಕೆ ಉಪಶೀರ್ಷಿಕೆಯಾಗಿ ಚುಕ್ಕಿ ರಂಗೋಲಿ ಹೇಗೆ ಸಂಧಿಸುತ್ತವೋ ಹಾಗೇ ಯಾರಾದರೂ ಇಡೀ ಕರ್ನಾಟಕದೆಲ್ಲೆಡೆ ಚುಕ್ಕಿ ಚುಕ್ಕಿಗಳಾಗಿ ಗೆರೆಗಳನ್ನು ಎಳೆಯುತ್ತಾ ಮತ್ತೆ ಕಟ್ಟುವ ಕನಸು ನನ್ನದು ಹೌದು! ನನ್ನಂತೆ ಯೋಚಿಸುವ ಎಲ್ಲರದು ಹೌದು! ಹೀಗೆ ಇಳಿವಯಸ್ಸಿನಲ್ಲೂ ಅನೇಕರು ಕನವರಿಸುತ್ತಿದ್ದಾರೆ. ಆದರೆ ರಂಗೋಲಿ ಹಾಕುವವರು ಬಾಗಿಲಿಗೆ ನೀರು ಚಿಮುಕಿಸಿ, ತೇವ ಮಾಡಿ, ಚುಕ್ಕಿ ಇಟ್ಟು ರಂಗೋಲಿ ಹಾಕುತ್ತಾರೆ. ಯಾಕೆಂದರೆ ರಂಗೋಲಿ ಅಳಿಸಿ ಹೋಗಬಾರದೆಂದು. ಆದರೆ ಪುಟ್ಟ ಪುಟ್ಟ ಮಕ್ಕಳು ಕೈಯಿಂದ ಅಳಿಸುತ್ತಾರೆ. ದೊಡ್ಡ ಮಕ್ಕಳು ಕಾಲಿಂದ ಅಳಿಸುತ್ತಾರೆ. ಅದರಿಂದ ಅವರಿಗೆ ಖುಷಿ ಸಿಗುತ್ತದೆ. ಆದರೆ ಜೀವಪ್ರೀತಿ ಸಂಬಂಧವನ್ನು ಕಟ್ಟುವವರನ್ನು ಸಹಿಸಲಾರದವರು ಅದನ್ನು ಅಳಿಸಲು ಪ್ರಯತ್ನಿಸುತ್ತಾರೆ. ಇದರಲ್ಲಿ ಹೊರಗಿನವರಿಗಿಂತ ನಮ್ಮ ಒಳಗಿನವರ ಪಾಲೇ ಹೆಚ್ಚಿದೆ. ಆದ್ದರಿಂದ ದೇವನೂರು ಹೇಳಿದ ಹಾಗೇ ಯುವ ಸಮುದಾಯವನ್ನು ತಮ್ಮತ್ತ ಸೆಳೆಯುವ ಚಿಂತನೆಯನ್ನು ಸಾಕಾರಗೊಳಿಸಲು ಪ್ರಯತ್ನಿಸೋಣ.

ವಾರ್ತಾ ಭಾರತಿ 20 Apr 2026 3:24 pm

ಆಳ್ವಾಸ್‌ನಲ್ಲಿ ಮಹಾವೀರ ಸ್ವಾಮಿ ಜನ್ಮ ಕಲ್ಯಾಣ ಮಹೋತ್ಸವ

ಮೂಡಬಿದಿರೆ, ಎ.20: ಕರಾವಳಿ ಹಾಗೂ ಮಲೆನಾಡಿನ ಸಮಸ್ತ ಜೈನ ಬಾಂಧವರ ಸಹಯೋಗದೊಂದಿಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಭಗವಾನ್ ಮಹಾವೀರ ಸ್ವಾಮಿ ಜನ್ಮ ಕಲ್ಯಾಣ ಮಹೋತ್ಸವವನ್ನು ವಿದ್ಯಾಗಿರಿಯ ಕೃಷಿಸಿರಿ ವೇದಿಕೆಯಲ್ಲಿ ರವಿವಾರ ಹಮ್ಮಿಕೊಳ್ಳಲಾಯಿತು. ಸಭಾ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಹಾಗೂ ರಾಣಿ ಅಬ್ಬಕ್ಕಳ ವಂಶಸ್ಥರಾದ ಮೂಡುಬಿದಿರೆಯ ಚೌಟರ ಅರಮನೆಯ ಅನಿತಾ ಸುರೇಂದ್ರ ಕುಮಾರ್‌ರನ್ನು ಸನ್ಮಾನಿಸಲಾಯಿತು. ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಮಾತನಾಡಿ, ಜೈನ ಧರ್ಮದ ಮೂಲ ತತ್ವಗಳು ನಮ್ಮ ಆತ್ಮಸ್ಥೆ5ಬರ್ಯವನ್ನು ಬಲಪಡಿಸುತ್ತವೆ. ಸ್ವಾಭಿಮಾನದಿಂದ ಬದುಕುವುದು ಜೈನ ಧರ್ಮ ನನಗೆ ಕಲಿಸಿದ ಮಹತ್ವದ ಪಾಠ. ಈ ಮೌಲ್ಯಗಳು ವ್ಯಕ್ತಿತ್ವವನ್ನು ದೃಢಗೊಳಿಸಿ, ಸತ್ಯನಿಷ್ಠೆ ಹಾಗೂ ಆತ್ಮಗೌರವಯುತ ಜೀವನಕ್ಕೆ ದಾರಿ ತೋರಿಸುತ್ತದೆ ಎಂದರು. ಆಳ್ವಾಸ್ ಸಂಸ್ಥೆಯ ಒಳಂಗಣ ಕ್ರೀಡಾಂಗಣಕ್ಕೆ ನನ್ನ ತಂದೆಯ ಹೆಸರು ಇಟ್ಟಿರುವುದು ಮೋಹನ್ ಆಳ್ವರಿಗೆ ನಮ್ಮ ಕುಟುಂಬದ ಮೇಲಿರುವ ಗೌರವವನ್ನು ಸೂಚಿಸುತ್ತದೆ ಎಂದರು. ಕಾರ್ಯಕ್ರಮದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ ಮೋಹನ್ ಆಳ್ವ, ಪಟ್ನಶೆಟ್ಟಿ ಸುದೇಶ್ ಕುಮಾರ್, ಚೌಟರ ಅರಮನೆಯ ಕುಲದೀಪ್ ಎಂ, ಆದರ್ಶ್ ಜೈನ್, ಏರ್ಮಾಳ ಬೀಡು ಸೂರಜ್ ಕುಮಾರ್, ಕುತ್ಯಾರು ಅರಮನೆ ಜಿನೇಶ್ ಬಲ್ಲಾಳ್, ರತ್ನಾಕರ್ ಜೈನ್, ಪಡುಬಿದ್ರಿ ಅರಮನೆಯ ಅರಸರು, ಕೂಳೂರಿನ ಆಶಿಕ್‌ಕುಮಾರ್, ದುಗ್ಗಣ್ಣ ಸಾವಂತ್‌ರು ಪಡ್ಯಾರ್‌ಬೆಟ್ಟಿನ ಜೀವಂಧರ ಕುಮಾರ್, ಉದ್ಯಮಿ ಶ್ರೀಪತಿ ಭಟ್, ಟ್ರಸ್ಟಿ ವಿವೇಕ್ ಆಳ್ವ, ಅವಿಭಜಿತ ದ.ಕ ಹಾಗೂ ಉಡುಪಿ ಜಿಲ್ಲೆಯ ವಿವಿಧ ಅರಸು ಮನೆತನದ ಅರಸರು, ಬೀಡುಮನೆತನದ ಯಜಮಾನರು ಉಪಸ್ಥಿತರಿದ್ದರು. ನಿವೃತ್ತ ಮುಖ್ಯ ಶಿಕ್ಷಕ ಮುನಿರಾಜ ರೆಂಜಾಳ ಹಾಗೂ ಶಿಕ್ಷಕ ನವೀನಚಂದ್ರ ಅಂಬೂರಿ ಕಾರ್ಯಕ್ರಮ ನಿರೂಪಿಸಿದರು.  

ವಾರ್ತಾ ಭಾರತಿ 20 Apr 2026 3:21 pm

ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಸುವರ್ಣಾವಕಾಶ: 2026-27ನೇ ಸಾಲಿನ ಪ್ರತಿಷ್ಠಿತ ಶಾಲೆಗಳ ಪ್ರವೇಶಾತಿಗೆ ಅರ್ಜಿ ಆಹ್ವಾನ

ಬೆಂಗಳೂರು: ಪರಿಶಿಷ್ಟ ಜಾತಿ (SC) ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿ ಮತ್ತು ಉಜ್ವಲ ಭವಿಷ್ಯವನ್ನು ರೂಪಿಸುವ ಮಹತ್ವಾಕಾಂಕ್ಷೆಯೊಂದಿಗೆ ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯು 2026-27ನೇ ಶೈಕ್ಷಣಿಕ ಸಾಲಿಗೆ 'ಪ್ರತಿಷ್ಠಿತ ಶಾಲೆಗಳ ಪ್ರವೇಶಾತಿ'ಗಾಗಿ ಅರ್ಹ ವಿದ್ಯಾರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ಆರ್ಥಿಕವಾಗಿ ಹಿಂದುಳಿದ ಹಾಗೂ ತಳಮಟ್ಟದ ಸಮುದಾಯದ ಮಕ್ಕಳಿಗೆ ರಾಜ್ಯದ ಉನ್ನತ ದರ್ಜೆಯ ಹಾಗೂ ಪ್ರತಿಷ್ಠಿತ ಖಾಸಗಿ

ಒನ್ ಇ೦ಡಿಯ 20 Apr 2026 3:14 pm

ಅಂಬೇಡ್ಕರ್‌ರ ಆಶಯಗಳು ಮತ್ತು ಸಂಜೀವಿನಿ ಸ್ವಸಹಾಯ ಸಂಘಗಳು

ಡಾ.ಬಿ.ಆರ್.ಅಂಬೇಡ್ಕರ್ ಅವರ ಆಶಯಗಳು ಮತ್ತು ಮಹಿಳಾ ಸ್ವಸಹಾಯ ಸಂಘಗಳ (SHGs) ಕಾರ್ಯವೈಖರಿ ಒಂದೇ ನಾಣ್ಯದ ಎರಡು ಮುಖ ಗಳಿದ್ದಂತೆ. ಅಂಬೇಡ್ಕರ್ ಪ್ರತಿ ಪಾದಿಸಿದ ‘ಸಂಘಟಿತರಾಗಿ’ ಎಂಬ ಮಂತ್ರವು ಇಂದು ಮಹಿಳಾ ಸಬಲೀ ಕರಣಕ್ಕೆ ಭದ್ರ ಬುನಾದಿಯಾಗಿದೆ. ಸ್ತ್ರೀ ಪರ ಚಿಂತನೆ ಹೊಂದಿದ್ದ ಅಂಬೇಡ್ಕರ್, ಒಂದು ಸಮಾಜದ ಪ್ರಗತಿಯನ್ನು ಆ ಸಮಾಜದ ಮಹಿಳೆಯರು ಸಾಧಿಸಿರುವ ಪ್ರಗತಿಯ ಆಧಾರದ ಮೇಲೆ ನಾನು ಅಳೆಯುತ್ತೇನೆ ಎಂದಿದ್ದರು. ಮಹಿಳೆಯರಿಗೆ ಆರ್ಥಿಕ ಸ್ವಾತಂತ್ರ್ಯ ಮತ್ತು ಸಾಮಾಜಿಕ ಸಮಾನತೆ ಸಿಗುವವರೆಗೂ ದೇಶದ ಅಭಿವೃದ್ಧಿ ಅಸಾಧ್ಯವೆಂಬುದು ಅವರ ದೃಢ ನಂಬಿಕೆಯಾಗಿತ್ತು. ಆರ್ಥಿಕ ಸ್ವಾವಲಂಬನೆ ಮತ್ತು ಸಬಲೀಕರಣ ಪ್ರತಿ ಮಹಿಳೆಯೂ ಆರ್ಥಿಕ ಸ್ವಾವಲಂಬಿ ಯಾಗುವುದು ಅಂಬೇಡ್ಕರ್‌ರ ಕನಸಾಗಿತ್ತು. ಇಂದು ಸ್ವಸಹಾಯ ಸಂಘಗಳು ಮಹಿಳೆಯರಲ್ಲಿ ಉಳಿತಾಯದ ಮನೋಭಾವವನ್ನು ಬೆಳೆಸುವ ಮೂಲಕ ಅವರನ್ನು ಸಾಲದ ಸುಳಿಯಿಂದ ಮುಕ್ತಗೊಳಿಸುತ್ತಿವೆ. ಹಣಕಾಸಿನ ನೆರವು: ಮಹಿಳೆಯರು ಬೇರೆಯವರನ್ನು ಅವಲಂಬಿಸದೆ ಸ್ವಂತ ಕಾಲಮೇಲೆ ತಾವು ನಿಲ್ಲಬೇಕು ಎನ್ನುವುದು ಅಂಬೇಡ್ಕರ್ ಪ್ರತಿಪಾದನೆಯಾಗಿತ್ತು. ಇಂದು ಬ್ಯಾಂಕ್/ಒಕ್ಕೂಟಗಳ ಮೂಲಕ ಸಾಲ ಸೌಲಭ್ಯ ಪಡೆದು ಮಹಿಳೆಯರು ಸಣ್ಣ ಕೈಗಾರಿಕೆ ಅಥವಾ ಸ್ವಂತ ಉದ್ಯೋಗ ಆರಂಭಿಸಲು ಈ ಸಂಘಗಳು ದಾರಿಯಾಗಿವೆ. ಹಿಂದೆ ಮಹಿಳೆ ಯರು ತುರ್ತು ಅವಶ್ಯಕತೆಗಳಿಗಾಗಿ ಶ್ರೀಮಂತರ ಮನೆ ಮುಂದೆ ಕೈಚಾಚಿ ನಿಲ್ಲಬೇಕಿತ್ತು. ಇದು ಅವರ ಆತ್ಮ ಗೌರವಕ್ಕೆ ಧಕ್ಕೆ ತರುತ್ತಿತ್ತು. ಆದರೆ ಇಂದು ತಮ್ಮದೇ ‘ಸಂಜೀವಿನಿ’ ಒಕ್ಕೂಟಗಳ ಮೂಲಕ ಆರ್ಥಿಕ ನೆರವು ಪಡೆಯುತ್ತಿರುವು ದರಿಂದ, ಅನ್ಯರ ಮುಂದೆ ನಿಲ್ಲುವ ಅನಿವಾರ್ಯ ತಪ್ಪಿದೆ. ಕೌಶಲ್ಯಾಭಿವೃದ್ಧಿ ತರಬೇತಿ: ಅಂಬೇಡ್ಕರ್‌ರ ಆಶಯದಂತೆ ಶಿಕ್ಷಣ ಮತ್ತು ತರಬೇತಿ ಪಡೆದ ಮಹಿಳೆಯರು ಇಂದು ಕೃಷಿ, ಹೈನುಗಾರಿಕೆ ಹಾಗೂ ಕುಶಲಕರ್ಮಿಗಳಾಗಿ ಗುರುತಿ ಸಿಕೊಳ್ಳುತ್ತಿದ್ದಾರೆ. ಹಪ್ಪಳ, ಸಂಡಿಗೆ, ಉಪ್ಪಿನಕಾಯಿ ತಯಾರಿಯಿಂದ ಹಿಡಿದು ದೊಡ್ಡ ಮಟ್ಟದ ಫ್ಯಾಕ್ಟರಿಗಳನ್ನು ನಡೆಸುವವರೆಗೆ ಆರ್ಥಿಕ ಸಬಲೀಕರ ಣದತ್ತ ದೊಡ್ಡ ಹೆಜ್ಜೆ ಇಡುತ್ತಿದ್ದಾರೆ ಸಾಮಾಜಿಕ ಸಂಘಟನೆ ಅಂಬೇಡ್ಕರ್ ‘ಸಂಘಟನೆ’ಗೆ ಹೆಚ್ಚಿನ ಒತ್ತು ನೀಡಿದ್ದರು. ಇಂದು ಗ್ರಾಮ ಮಟ್ಟದಲ್ಲಿ ಮಹಿಳೆಯರು ಸ್ವ ಸಹಾಯ ಗುಂಪುಗಳ ಮೂಲಕ ಸಂಘಟಿತರಾಗಿ ತಮ್ಮ ಹಕ್ಕುಗಳಿಗಾಗಿ ಧ್ವನಿ ಎತ್ತುತ್ತಿದ್ದಾರೆ. ಗ್ರಾಮ ಪಂಚಾಯತ್ ಮತ್ತು ಸ್ಥಳೀಯ ಆಡಳಿತದ ನಿರ್ಧಾರಗಳಲ್ಲಿ ಭಾಗಿಯಾಗುತ್ತಿದ್ದಾರೆ ಹಾಗೂ ಮೂಢನಂಬಿಕೆ ಮತ್ತು ಸಾಮಾಜಿಕ ಅಸಮಾನತೆಯ ವಿರುದ್ಧ ಹೋರಾಡುತ್ತಿದ್ದಾರೆ. ನಾಯಕತ್ವ ಗುಣದ ಬೆಳವಣಿಗೆ: ಸ್ವ ಸಹಾಯ ಸಂಘಗಳು ಕೇವಲ ಹಣಕಾಸಿನ ವಹಿವಾಟಿಗೆ ಸೀಮಿತವಾಗದೆ, ಮಹಿಳೆಯರಲ್ಲಿ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಮತ್ತು ನಾಯಕತ್ವ ಗುಣಗಳನ್ನು ಬೆಳೆಸುತ್ತಿವೆ. ಸಂಜೀವಿನಿ ಸ್ವಸಹಾಯ ಸಂಘದ ಪ್ರತಿನಿಧಿಯಾಗಿ ಹಾಗೂ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟಗಳಲ್ಲಿ ಅಧ್ಯಕ್ಷರಾಗಿ ಸಂಜೀವಿನಿ ಸಂಘಗಳನ್ನು ಮುನ್ನಡೆಸುತ್ತಿರುವುದು, ಅಂಬೇಡ್ಕರ್ ಕಂಡ ಸಮಾನ ಸಮಾಜದ ಕನಸನ್ನು ನನಸು ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಸಂಜೀವಿನಿ (KSRLPS) - ಒಂದು ಆಶಾಕಿರಣ: ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನಾ ಸಂಸ್ಥೆಯ (ಸಂಜೀವಿನಿ) ಯೋಜನೆಗಳು, ಅಂಬೇಡ್ಕರ್‌ರ ಆರ್ಥಿಕ ನ್ಯಾಯದ ತತ್ವಗಳನ್ನು ಗ್ರಾಮೀಣ ಮಟ್ಟದಲ್ಲಿ ಅನುಷ್ಠಾನಗೊಳಿಸುತ್ತಿವೆ. ಇದು ಮಹಿಳೆಯರನ್ನು ಕೇವಲ ‘ಗೃಹಿಣಿ’ಯರಾಗಿ ಉಳಿಸದೆ ‘ಉದ್ಯಮಿ’ಗಳನ್ನಾಗಿ ಪರಿವರ್ತಿಸುತ್ತಿದೆ. ಸಾರಾಂಶ: ಅಂಬೇಡ್ಕರ್‌ರ ಹೋರಾಟ ಕೇವಲ ಒಂದು ವರ್ಗಕ್ಕೆ ಸೀಮಿತವಾಗಿರದೆ, ಇಡೀ ಭಾರತೀಯ ಮಹಿಳಾ ಕುಲದ ಬಿಡುಗಡೆಯ ಹಾದಿಯಾಗಿತ್ತು. ಇಂದು ಆಧುನಿಕ ಭಾರತದಲ್ಲಿ ಮಹಿಳೆಯರು ಗೌರವಯುತವಾಗಿ ಬದುಕುತ್ತಿದ್ದಾರೆ ಎಂದರೆ ಅದಕ್ಕೆ ಅವರು ರೂಪಿಸಿದ ಕಾನೂನು ಮತ್ತು ಸಾಮಾಜಿಕ ಚೌಕಟ್ಟುಗಳೇ ಮುಖ್ಯ ಕಾರಣ. ಅಂಬೇಡ್ಕರ್‌ರ ಕ್ರಾಂತಿಕಾರಿ ಚಿಂತನೆಗಳು ಮತ್ತು ಸ್ವ ಸಹಾಯ ಸಂಘಗಳ ಶಿಸ್ತುಬದ್ಧ ಕಾರ್ಯವೈಖರಿ ಒಂದಾದಾಗ ಮಾತ್ರ ಮಹಿಳೆಯರು ಸರ್ವತೋಮುಖವಾಗಿ ಸಬಲರಾಗಲು ಸಾಧ್ಯ. ಮಹಿಳೆ ಸಬಲಳಾದರೆ ಇಡೀ ಕುಟುಂಬ ಮತ್ತು ರಾಷ್ಟ್ರ ಸಬಲವಾಗುತ್ತದೆ. -ಅವಿನಾಶ್, ಜಿಲ್ಲಾ ವ್ಯವಸ್ಥಾಪಕರು (ಸಂಜೀವಿನಿ ಯೋಜನೆ) ಜಿಪಂ ಉಡುಪಿ.

ವಾರ್ತಾ ಭಾರತಿ 20 Apr 2026 3:13 pm

ಇ-ಕೆವೈಸಿ ಮಾಡಿಸಲು ಏಪ್ರಿಲ್‌ 30ವರೆಗೆ ಗಡುವು ವಿಸ್ತರಣೆ: ರೈತರ ನಿರಾಸಕ್ತಿ ಬೆನ್ನಲ್ಲೇ ಕೃಷಿ ಇಲಾಖೆ ಕ್ರಮ

ಕೃಷಿ ಇಲಾಖೆಯ ಸೌಲಭ್ಯಗಳನ್ನು ಪಡೆದುಕೊಳ್ಳಲು ರೈತರು ಫ್ರೂಟ್ಸ್‌ ತಂತ್ರಾಂಶದಲ್ಲಿ ಇ-ಕೆವೈಸಿ ಪಡೆದುಕೊಳ್ಳುವುದನ್ನು ಕೇಂದ್ರ ಸರಕಾರ ಕಡ್ಡಾಯಗೊಳಿಸಿದೆ. ಆದಾಗ್ಯೂ, ರಾಮನಗರದಲ್ಲಿ ಈ ಕುರಿತು ರೈತರು ನಿರಾಸಕ್ತಿಯನ್ನು ಹೊಂದಿದ್ದು, ಈ ಬೆನ್ನಲ್ಲೇ, ಏ.30ರವರೆಗೆ ಇ-ಕೆವೈಸಿ ಮಾಡಿಸುವ ಗಡುವನ್ನು ವಿಸ್ತರಿಸಲಾಗಿದ್ದು, ಈ ಕಾಲವಧಿಯಲ್ಲಿ ಕಡ್ಡಾಯವಾಗಿ ಇ-ಕೆವೈಸಿ ಮಾಡಿಸಿಕೊಳ್ಳಬೇಕು, ಇಲ್ಲವಾದಲ್ಲಿ ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗಬೇಕಾಗುತ್ತದೆ ಎಂದು ಸೂಚನೆ ನೀಡಿದ್ದಾರೆ. ಈ ಕುರಿತು ಮಾಹಿತಿ ಇಲ್ಲಿದೆ..

ವಿಜಯ ಕರ್ನಾಟಕ 20 Apr 2026 3:13 pm

Raichur | ಬ್ಲೂ ಆರ್ಮಿಯಿಂದ ಬಸವ ಜಯಂತಿ ಆಚರಣೆ

ಬಸವಣ್ಣರ ತತ್ವಗಳನ್ನು ಯುವಕರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು : ಚಂದ್ರಶೇಖರ್

ವಾರ್ತಾ ಭಾರತಿ 20 Apr 2026 3:10 pm

ರಾಯಚೂರಿನ ಜಿಲ್ಲಾಡಳಿತದಿಂದ ಬಸವ ಜಯಂತೋತ್ಸವ

ಸಮಾನತೆಯ ತತ್ವದ ಪ್ರತಿಪಾದಕ ಬಸವಣ್ಣ: ಶಾಸಕ ಡಾ.ಶಿವರಾಜ ಪಾಟೀಲ್

ವಾರ್ತಾ ಭಾರತಿ 20 Apr 2026 3:05 pm

ಬಯಲು ಸೀಮೆಯಲ್ಲೂ ಕಂಗೊಳಿಸಿದ ಅಡಿಕೆ ಕೃಷಿ

ಚಾಮರಾಜನಗರ: ಸಾಮಾನ್ಯವಾಗಿ ಮಲೆನಾಡು, ಕರಾವಳಿ ಪ್ರದೇಶಗಳಲ್ಲಿ ಅಡಿಕೆ ಕೃಷಿ ಹೆಚ್ಚಾಗಿ ಕಾಣುತ್ತೇವೆ. ಅಂತಹ ಕೃಷಿಯನ್ನು ಬಯಲು ಸೀಮೆಯಲ್ಲಿ ಸಾವಯವದಲ್ಲಿ ಮಾದರಿಯಲ್ಲಿ ಕೃಷಿ ಮಾಡಿ ಯಶಸ್ಸು ಕಂಡಿರುವುದು ಚಾಮರಾಜನಗರ ತಾಲೂಕಿನ ದಡದಹಳ್ಳಿ ಗ್ರಾಮದ ರೈತ. ವಾಣಿಜ್ಯ ಬೆಳೆಯಾಗಿರುವ ಅಡಿಕೆ ಕೃಷಿಯು ಸಾವಯವ ವಿಧಾನದಲ್ಲಿ ಬೆಳೆಯುವ ಮೂಲಕ ರೈತರೊಬ್ಬರು ಗಮನ ಸೆಳೆದಿದ್ದಾರೆ.ಚಾಮರಾಜನಗರ ತಾಲೂಕಿನ ಚಂದಕವಾಡಿ ಹೋಬಳಿಯ ದಡದಹಳ್ಳಿದ ನಿವಾಸಿ, ಹೆಬ್ಬಸೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಗೋವಿಂದರಾಜು ಅಡಿಕೆ ಕೃಷಿಯಲ್ಲಿ ತೊಡಗಿಸಿಕೊಂಡ ಸಾಹಸಿ ರೈತ. ಚಂದಕವಾಡಿ-ದಡದಹಳ್ಳಿಯಿಂದ ಕುಂಬೇಶ್ವರ ಕಾಲನಿಗೆ ಹೋಗುವ ಮಾರ್ಗದಲ್ಲಿರುವ 4 ಎಕರೆ ಜಮೀನಿನಲ್ಲಿ ರಾಸಾಯನಿಕ ಗೊಬ್ಬರ ಬಳಕೆ ಮಾಡದೇ ಅಡಿಕೆ ಕೃಷಿ ಮಾಡುತ್ತಿದ್ದಾರೆ. ಅರ್ಥಾತ್ ಸಾವಯವ ವಿಧಾನದಲ್ಲಿ ಬೇಸಾಯ ಮಾಡುತ್ತಿದ್ದಾರೆ. 4 ವರ್ಷಗಳಿಂದ ಈ ಪದ್ಧತಿ ಅನುಸರಿಸಲು ಆರಂಭಿಸಿ ಇಂದಿಗೆ ಜಮೀನಿನ ಮಣ್ಣಲ್ಲಿ ಫಲವತ್ತತೆ ತುಂಬಿದ್ದಾರೆ. ನಾಟಿ ತಳಿಯ ಸುಮಾರು 3 ಸಾವಿರ ಅಡಿಕೆ ಮರಗಳಿವೆ. ಆಕಾಶದ ಅಗಲಕ್ಕೆ ಮೇಲೆದ್ದು ನಿಂತಿರುವ ಅಡಿಕೆ ಬೆಳೆಗಳು ಆರೋಗ್ಯದಿಂದ ಕೂಡಿವೆ. ಹಸಿರ ಸಿರಿ ತುಂಬಿಕೊಂಡು ಕಂಗೊಳಿಸುತ್ತಿವೆ. ಇದರ ಹಿಂದಿನ ರಹಸ್ಯವೇನೆಂಬ ಪ್ರಶ್ನೆಗೆ ರೈತ ಗೋವಿಂದರಾಜು ಹೇಳುವ ಉತ್ತರವೇ ರಾಸಾಯನಿಕ ಮುಕ್ತ ಕೃಷಿ. ರೋಗಬಾಧೆ ಮುಕ್ತ: ಅಡಿಕೆ ಕೃಷಿಯಲ್ಲಿ ರಾಸಾಯನಿಕ ಔಷಧಿಗಳನ್ನು ಬಳಕೆ ಮಾಡದ ರೈತ ಗೋವಿಂದರಾಜು ವರ್ಷಕ್ಕೆ ಒಮ್ಮೆ ಕೊಟ್ಟಿಗೆ ಗೊಬ್ಬರವನ್ನು ಬೆಳೆಗೆ ಹಾಕುತ್ತಿದ್ದಾರೆ. ಇದಕ್ಕೂ ಮೊದಲು ಗೊಬ್ಬರವನ್ನು ಚೆನ್ನಾಗಿ ಹದ ಮಾಡಿಕೊಂಡು ಎರೆಹುಳುಗಳು, ಸೂಕ್ಷ್ಮಾಣು ಜೀವಿಗಳು ಇರುವಿಕೆಯನ್ನು ಉತ್ತಮಗೊಳಿಸಿಕೊಂಡು, ತೇವಾಂಶವನ್ನೂ ಕೂಡಿಸಿದ ಗೊಬ್ಬರವನ್ನು ಅಡಿಕೆ ಬೆಳೆಯುವ ಸಂಪೂರ್ಣ ಜಮೀನಿಗೆ ಹಾಕುತ್ತಾರೆ. ರೋಟವೇಟರ್‌ನಿಂದ ಮಣ್ಣನ್ನು ಹದಗೊಳಿಸುತ್ತಾರೆ. ಬಳಿಕ 1 ವರ್ಷದವರೆಗೂ ಮತ್ತೆ ಗೊಬ್ಬರ ಹಾಕುವುದಿಲ್ಲ. ಅಡಿಕೆ ಬೆಳೆ ಇಷ್ಟನ್ನೇ ಬಳಸಿ ಕೊಂಡು ಬೆಳವಣಿಗೆ ಕಾಣುತ್ತಿದೆ. ಇದರ ನಡುವೆ ಕಳೆ ಸಸ್ಯಗಳನ್ನು ಬ್ರಷ್ ಕಟರ್‌ನಿಂದ ಕತ್ತರಿಸಿ ಭೂಮಿಯಲ್ಲೇ ಬಿಟ್ಟು ಕೊಳೆಸುತ್ತಾರೆ. ಇದನ್ನೂ ಗೊಬ್ಬರವನ್ನಾಗಿ ಪರಿವರ್ತಿಸುತ್ತಿದ್ದಾರೆ. ಅಡಿಕೆ ಬೆಳೆಯಲ್ಲಿ ಈವರೆಗೂ ರೋಗಬಾಧೆ ಕಾಣಿಸಿಕೊಂಡಿಲ್ಲ. ಅಡಿಕೆ ಬೆಳೆ ಉತ್ತಮವಾಗಿವೆ ಎಂದು ರೈತ ಗೋವಿಂದರಾಜು ಹೇಳುತ್ತಾರೆ. ಆರ್ಥಿಕ ವ್ಯವಸ್ಥೆಯಲ್ಲಿ ಅಡಿಕೆ ಕೃಷಿಯ ಪಾತ್ರ ಮಹತ್ವದ್ದಾಗಿದೆ. ಸಸಿ ನೆಡುವುದರಿಂದ ಹಿಡಿದು ಇಳುವರಿ ತೆಗೆಯುವವರೆಗೆ ಫಸಲನ್ನು ಮಾರುಕಟ್ಟೆಗೆ ತಲುಪಿಸುವವರೆಗೆ ಅಡಿಕೆಗೆ ರಾಸಾಯನಿಕ ಬಳಕೆಯಾಗುವುದನ್ನು ಸಾಮಾನ್ಯವಾಗಿ ಕಾಣಬಹುದು. ಇದೇ ರೀತಿ ದಿನನಿತ್ಯ ಬಳಕೆಯ ಆಹಾರಗಳಿಗೂ ರಾಸಾಯನಿಕ ಬಳಕೆ ಮಾಡಲಾಗುತ್ತದೆ. ಇವುಗಳನ್ನು ಸೇವಿಸಿದರೆ ಆರೋಗ್ಯ ಹಾಳಾಗುತ್ತದೆ ಎನ್ನುವ ಅರಿವಿರುವ ಗ್ರಾಹಕರು ಸಾವಯವ ಉತ್ಪನ್ನಗಳನ್ನು ಬಳಕೆ ಮಾಡುತ್ತಾರೆ. ಈ ಸಾಲಿಗೆ ಸಾವಯವ ಅಡಿಕೆಯೂ ಸೇರ್ಪಡೆಯಾಗುವುದು ಸಂತಸದ ವಿಚಾರ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಸಾವಯವ ವಿಧಾನದಲ್ಲಿ ಅಡಿಕೆ ಕೃಷಿ ಮಾಡುತ್ತಿರುವ ರೈತರು ರಾಸಾಯನಿ ಬಳಕೆ ಮಾಡುವ ರೈತರಿಗಿಂತಲೂ ಉತ್ತಮವಾಗಿ ಕೃಷಿ ಮಾಡುತ್ತಿದ್ದಾರೆ. ಒಳ್ಳೆಯ ಇಳುವರಿ ತೆಗೆಯುತ್ತಿದ್ದಾರೆ. ಅಡಿಕೆ ನಡುವೆ ತೆಂಗು, ತೇಗ ತಮ್ಮ ಜಮೀನಿನಲ್ಲಿರುವ ಅಡಿಕೆ ಬೆಳೆಯ ನಡುವೆ 100 ತೆಂಗು, 15 ತೇಗದ ಮರಗಳಿವೆ. ಅಡಿಕೆ ಎತ್ತರಕ್ಕೆ ಬೆಳೆದ ಪರಿಣಾಮ ಬುಡದಲ್ಲಿ ನೆರಳು ಆವರಿಸಿದ್ದರೂ ತೆಂಗು ಮೇಲೆದ್ದಿವೆ. ತೇಗವೂ ಚೆನ್ನಾಗಿ ಬೆಳೆದು ನಿಂತಿವೆ. 1 ಬೋರ್‌ವೆಲ್ ಇದ್ದು, ಸರಕಾರದಿಂದ ಸಬ್ಸಿಡಿ ಪಡೆದು ಹನಿ ನೀರಾವರಿ ಸೌಲಭ್ಯ ಅಳವಡಿಸಿಕೊಂಡಿದ್ದಾರೆ. ರೈತ ಗೋವಿಂದರಾಜು ಅವರಿಗೆ ಇಲ್ಲಿ ಮಾತ್ರವಲ್ಲದೆ, ಡೊಳ್ಳಿಪುರದಲ್ಲಿ 3 ಎಕರೆ ಜಮೀನಿದೆ. ಈ ಭೂಮಿಯಲ್ಲೂ ಸಾವಯವ ವಿಧಾನದಲ್ಲಿ ಅಡಿಕೆ ಕೃಷಿ ಮಾಡುತ್ತಿದ್ದಾರೆ. ಜತೆಗೆ ಬಾಳೆಯನ್ನೂ ಹಾಕಿದ್ದಾರೆ. ಅಡಿಕೆಯೊಂದಿಗೆ ಬಾಳೆ ಬೆಳೆಯುವುದು ಅತ್ಯುತ್ತಮ ಮಿಶ್ರ ಬೇಸಾಯವಾಗಿದೆ.

ವಾರ್ತಾ ಭಾರತಿ 20 Apr 2026 3:04 pm

ಇಂಡೋಸಾರ್ಸೆನಿಕ್ ಶ್ರೆಲಿಯ ದೇವಾಲಯ-ಗದ್ದುಗೆ

ಮಡಿಕೇರಿಯ ಪ್ರಸಿದ್ಧ ಪ್ರವಾಸಿ ತಾಣ

ವಾರ್ತಾ ಭಾರತಿ 20 Apr 2026 3:00 pm

ಬೆಂಗಳೂರು ನಗರ ವಿಶ್ವವಿದ್ಯಾನಿಲಯದಲ್ಲಿ ವಿಶ್ವಗುರು ಬಸವಣ್ಣನವರ ಜಯಂತಿ ಆಚರಣೆ

ಬೆಂಗಳೂರು : ಡಾ. ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾನಿಲಯದಲ್ಲಿ ನಾಡಿನ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ವಿಚಾರಧಾರೆಯ ಬಗ್ಗೆ ಯುವ ಪೀಳಿಗೆಯಲ್ಲಿ ಹೆಚ್ಚಿನ ಅರಿವು ಮೂಡಿಸಲು ಬಸವ ತತ್ವ ಅಧ್ಯಯನ ಪೀಠ ಸ್ಥಾಪಿಸುವ ಪ್ರಸ್ತಾಪ ಪರಿಶೀಲನೆಯಲ್ಲಿದೆ ಎಂದು ಕುಲಪತಿಗಳಾದ ಪ್ರೊ.ರಮೇಶ್ ಬಿ. ಪ್ರಕಟಿಸಿದ್ದಾರೆ. ಸೆಂಟ್ರಲ್ ಕಾಲೇಜಿನ ಆವರಣದಲ್ಲಿರುವ ರಾಜಾಜಿ ಹಾಲ್ ನಲ್ಲಿ ಆಯೋಜಿಸಲಾಗಿದ್ದ ಬಸವೇಶ್ವರ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅವರು, ಸಮಸಮಾಜ ನಿರ್ಮಾಣದ ಗುರಿ ಸಾಧನೆಯ ನಿಟ್ಟಿನಲ್ಲಿ 12ನೇ ಶತಮಾನದ ಸಮಾಜ ಸುಧಾರಕ ಕಾಯಕಯೋಗಿ ಬಸವಣ್ಣನವರ ಕೊಡುಗೆ ಅನನ್ಯ ಎಂದು ಬಣ್ಣಿಸಿದರು. ಜಾತಿ ಪದ್ಧತಿ, ಕಂದಾಚಾರ ಮತ್ತು ಮೌಢ್ಯತೆಯ ಕೂಪದಲ್ಲಿ ಸಿಲುಕಿದ್ದ ಅಂದಿನ ವ್ಯವಸ್ಥೆಯಲ್ಲಿ ಧಾರ್ಮಿಕ, ಸಾಮಾಜಿಕ, ಆರ್ಥಿಕ ಮತ್ತು ಲಿಂಗ ಸಮಾನತೆಯ ಆಶಯಗಳನ್ನು ದಿಟ್ಟತನದಿಂದ ಎತ್ತಿಹಿಡಿಯುವ ಮೂಲಕ ಬಸವಣ್ಣನವರು ಕ್ರಾಂತಿಕಾರಿ ಪರಿಣಾಮ ಬೀರಿದರೆಂದು ಅವರು ವಿಶ್ಲೇಷಿಸಿದರು. ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಸಿಂಡಿಕೇಟ್ ಸದಸ್ಯರಾದ ಕೆ.ಪಿ.ಪಾಟೀಲ್ ಅವರು, ಅಂತರ್ಜಾತೀಯ ವಿವಾಹದ ಮೂಲಕ ಜಾತಿ ವ್ಯವಸ್ಥೆಯ ವಿರುದ್ಧ ಬಂಡಾಯದ ಕಹಳೆ ಮೊಳಗಿಸಿದ ಬಸವಣ್ಣನವರು ಸಾಮಾಜಿಕ ಸಮಾನತೆಯ ಹರಿಕಾರರೆಂದು ಕೊಂಡಾಡಿದರು. ವೈದಿಕ ಧರ್ಮ ಮತ್ತು ಸಂಸ್ಕೃತಿಯನ್ನು ತಿರಸ್ಕರಿಸಿದ ಬಸವಣ್ಣನವರು ವಚನ ಸಾಹಿತ್ಯದ ಮೂಲಕ ಸಾಮಾಜಿಕ ಜಾಗೃತಿ ಮೂಡಿಸುವ ಮಹತ್ಕಾರ್ಯದಲ್ಲಿ ಮಹಿಳೆಯರೂ ಸೇರಿದಂತೆ ಶೋಷಿತ ಜನವರ್ಗವನ್ನು ತೊಡಗಿಸಿದರೆಂದು ಅವರು ವಿವರಿಸಿದರು. ಕುಲಸಚಿವ (ಮೌಲ್ಯಮಾಪನ) ಪ್ರೊ.ರಮೇಶ. ಬಿ.ಕುಡೇನಟ್ಟಿ, ಹಿರಿಯ ಪ್ರಾಧ್ಯಾಪಕರಾದ ಪ್ರೊ.ಪಿ.ಆರ್.ಚೇತನ, ಸಿಂಡಿಕೇಟ್ ಸದಸ್ಯರಾದ ಡಾ.ಕೃಷ್ಣರಾಮ್, ಶಿವಕುಮಾರ್, ವಿದ್ಯಾವಿಷಯಕ ಪರಿಷತ್ತಿನ ಸದಸ್ಯರಾದ ಡಾ. ಅಬ್ದುಲ್ ಖಾದರ್ ಮತ್ತು ಧರ್ಮೇಂದ್ರ ಕುಮಾರ್ ಉಪಸ್ಥಿತರಿದ್ದರು. ಉಪನ್ಯಾಸಕರಾದ ಡಾ.ಗೋಪಿ. ಎಸ್.ಎಂ. ಕಾರ್ಯಕ್ರಮ ನಿರೂಪಿಸಿದರು. ಡಾ.ಮಂಜು.ಸಿ.ಎನ್. ಮತ್ತು ಡಾ ಪ್ರಭು ವಚನ ಗಾಯನ ಪ್ರಸ್ತುತಪಡಿಸಿದರು. ಡಾ. ತೇಜೇಶ್ವರ್ ಸ್ವಾಗತಿಸಿ ಡಾ ಅಖ್ತರ್ ವಂದಿಸಿದರು.

ವಾರ್ತಾ ಭಾರತಿ 20 Apr 2026 2:57 pm

ಬಂಟ್ವಾಳ ತಾಲೂಕು ಮಟ್ಟದ ಬಸವ ಜಯಂತಿ ಆಚರಣೆ

ಬಂಟ್ವಾಳ: ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಬಂಟ್ವಾಳ ಇದರ ವತಿಯಿಂದ ಬಸವ ಜಯಂತಿ ಕಾರ್ಯಕ್ರಮ ಬಿ.ಸಿ.ರೋಡಿನ ತಾಲೂಕು ಆಡಳಿತ ಸೌಧದ ಸಭಾಂಗಣದಲ್ಲಿ ನಡೆಯಿತು. ಚುನಾವಣಾ ಉಪ ತಹಸೀಲ್ದಾರ್ ನವೀನ್ ಕುಮಾರ್ ಬೆಂಜನಪದವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕೇಂದ್ರ ಸ್ಥಾನೀಯ ಉಪ ತಹಸೀಲ್ದಾರ್ ನರೇಂದ್ರನಾಥ್ ಮಿತ್ತೂರು ಮಾತನಾಡಿ, ಬಸವಣ್ಣನವರು ಸಾಮಾಜಿಕ ಕ್ರಾಂತಿಯ ಹರಿಕಾರರು. ಸಮಾನತೆಯ ಸಮಾಜದ ನಿರ್ಮಾಣಕ್ಕಾಗಿ ಇವರು ನಡೆಸಿದ ಹೋರಾಟ ಯಾವತ್ತೂ ಸ್ತುತ್ಯರ್ಹ. ಬಸವಣ್ಣವರ ದೂರದೃಷ್ಟಿ ಸಮಾಜದ ಎಲ್ಲಾ ಸ್ತರದ ಜನತೆಗೆ ಸಮಾನ ಅವಕಾಶಗಳನ್ನು ಒದಗಿಸಲು ಶ್ರಮಿಸಿತು. ವಚನ ಸಾಹಿತ್ಯದ ಮೂಲಕ ಎಲ್ಲಾ ವರ್ಗದ ಜನರು ಮುನ್ನೆಲೆಗೆ ಬರಲು ಸಾಧ್ಯವಾಯಿತು ಎಂದು ಹೇಳಿದರು. ಈ ಸಂದರ್ಭದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ವಿಷಯ ನಿರ್ವಾಹಕ ವಿಶುಕುಮಾರ್, ತಾಲೂಕು ಕಚೇರಿ ಸಿಬ್ಬಂದಿಗಳು, ಗ್ರಾಮ ಆಡಳಿತಾಧಿಕಾರಿಗಳು, ಗ್ರಾಮ ಸಹಾಯಕರು ಉಪಸ್ಥಿತರಿದ್ದರು. ತಾಲೂಕು ಆಡಳಿತ ಶಾಖೆಯ ವಿಷಯ ನಿರ್ವಾಹಕ ಸೀತಾರಾಮ ಕಮ್ಮಾಜೆ ಸ್ವಾಗತಿಸಿ ವಂದಿಸಿದರು.

ವಾರ್ತಾ ಭಾರತಿ 20 Apr 2026 2:55 pm

ಏಪ್ರಿಲ್ 20ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್‌, ಡೀಸೆಲ್‌ ದರ ಎಷ್ಟಿದೆ ತಿಳಿಯಿರಿ

Petrol, Diesel Price: ಶಕ್ತಿಯ ಮೂಲಗಳು ಎನಿಸಿಕೊಂಡಿರುವ ಪೆಟ್ರೋಲ್ ಮತ್ತು ಡೀಸೆಲ್ ಇಂಧನ ಅತ್ಯವಶ್ಯಕವಾಗಿ ಬೇಕಾಗುವ ಸಂಪನ್ಮೂಲಗಳಾಗಿವೆ. ಹಾಗಾದ್ರೆ, ಬೆಂಗಳೂರು ಸೇರಿದಂತೆ ಕರ್ನಾಟಕದ ಇತರ ಜಿಲ್ಲೆಗಳಲ್ಲಿ ಇಂದು (ಏಪ್ರಿಲ್ 20) ಲೀಟರ್‌ ಪೆಟ್ರೋಲ್‌, ಡೀಸೆಲ್‌ ಬೆಲೆ ಎಷ್ಟಿದೆ ಎಂದು ಇಲ್ಲಿ ತಿಳಿಯಿರಿ. ಇತ್ತೀಚಿನ ದಿನಗಳಲ್ಲಿ ಎಲೆಕ್ಟ್ರಿಕ್‌ ವಾಹನಗಳು ಹೆಚ್ಚಾಗುತ್ತಿವೆ. ಹಾಗಂತ ಇಂಧನದ ಬೇಡಿಕೆ ಏನು ಕಡಿಮೆ ಆಗಿಲ್ಲ.

ಒನ್ ಇ೦ಡಿಯ 20 Apr 2026 2:49 pm

ಸಾಧ್ವಿ ಸೈಲ್ ಮಿಸ್ ವರ್ಲ್ಡ್ ಪ್ರಶಸ್ತಿ ಗೆಲ್ಲಲಿ: ಸಿಎಂ ಸಿದ್ದರಾಮಯ್ಯ ಆಶಯ

[…] The post ಸಾಧ್ವಿ ಸೈಲ್ ಮಿಸ್ ವರ್ಲ್ಡ್ ಪ್ರಶಸ್ತಿ ಗೆಲ್ಲಲಿ: ಸಿಎಂ ಸಿದ್ದರಾಮಯ್ಯ ಆಶಯ first appeared on Vistara News .

ವಿಸ್ತಾರ ನ್ಯೂಸ್ 20 Apr 2026 2:47 pm

ಟ್ರಾಫಿಕ್ ಸಿಗ್ನಲ್‌ಗಳಿಂದ ಸಮಾಜದ ಮುಖ್ಯವಾಹಿನಿಗೆ: ಮಂಗಳಮುಖಿಯರು ಮತ್ತು ಭಿಕ್ಷುಕರ ಬದುಕು ಬದಲಿಸುತ್ತಿದೆ ಕೇಂದ್ರದ ಸ್ಮೈಲ್‌ ಯೋಜನೆ!

ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು 12.02.2022 ರಂದು ಸ್ಮೈಲ್ - ಜೀವನೋಪಾಯ ಮತ್ತು ಉದ್ಯಮಕ್ಕಾಗಿ ಅಂಚಿನಲ್ಲಿರುವ ವ್ಯಕ್ತಿಗಳಿಗೆ ಬೆಂಬಲ ಎಂಬ ಒಂದು ವಿಶೇಷ ಯೋಜನೆಯನ್ನು ಪ್ರಾರಂಭಿಸಿದೆ. ಇದರಲ್ಲಿ ಮಂಗಳಮುಖಿಯರ ಸಮಗ್ರ ಪುನರ್ವಸತಿಗಾಗಿ ಕೇಂದ್ರ ವಲಯ ಯೋಜನೆ ಮತ್ತು ಭಿಕ್ಷಾಟನೆಯಲ್ಲಿ ತೊಡಗಿರುವ ವ್ಯಕ್ತಿಗಳ ಸಮಗ್ರ ಪುನರ್ವಸತಿಗಾಗಿ ಕೇಂದ್ರ ವಲಯ ಯೋಜನೆ ಎಂಬ ಎರಡು ಉಪ ಯೋಜನೆಗಳಿವೆ. ಈ ಯೋಜನೆಯಡಿ ಮಂಗಳಮುಖಿಯರು ಮತ್ತು ಭಿಕ್ಷಾಟನೆಯಲ್ಲಿ ತೊಡಗಿರುವವವರಿಗೆ ಪುನರ್ವಸತಿ, ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವುದು, ಸಮಾಲೋಚನೆ, ಶಿಕ್ಷಣ, ಕೌಶಲ್ಯ ಅಭಿವೃದ್ಧಿ ಸೇರಿದಂತೆ ಅನೇಕ ರೀತಿಯ ನೆರವು ಒದಗಿಸಲಾಗುತ್ತದೆ. ಇಲ್ಲಿದೆ ಸಂಪೂರ್ಣ ಮಾಹಿತಿ.

ವಿಜಯ ಕರ್ನಾಟಕ 20 Apr 2026 2:45 pm

ವಿನಯ್ ಕುಲಕರ್ಣಿ ಪುತ್ರಿಯರ ಭಾವುಕ ಪತ್ರ ವೈರಲ್; 'ಇದು ಕೂಡ ಸಾಗಿ ಹೋಗುತ್ತದೆ' ಎಂದ ವೈಶಾಲಿ, ದೀಪಾಲಿ

ಮಾಜಿ ಸಚಿವ ವಿನಯ್ ಕುಲಕರ್ಣಿಯವರ ಪುತ್ರಿಯರು ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ. ತಂದೆಯ ಪ್ರಾಮಾಣಿಕತೆ ಮತ್ತು ಜನಸೇವೆಯ ಮೇಲೆ ಅಚಲ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕಾನೂನು ಸಂಕಷ್ಟದ ಸಮಯದಲ್ಲಿ ಧೃತಿಗೆಡದೆ, ನ್ಯಾಯಾಂಗದ ಮೇಲೆ ಭರವಸೆ ಇಟ್ಟಿರುವ ಅವರು, ಇದು ಕೂಡ ಸಾಗಿಹೋಗುತ್ತದೆ ಎನ್ನುವ ಮೂಲಕ ಬೆಂಬಲ ನೀಡಿದ ಜನರಿಗೆ ಕೃತಜ್ಞತೆ ಸಲ್ಲಿಸಿ, ಕುಟುಂಬದ ದೃಢ ನಿಲುವನ್ನು ಸಾರಿದ್ದಾರೆ.

ವಿಜಯ ಕರ್ನಾಟಕ 20 Apr 2026 2:44 pm

ಅರಸೀಕೆರೆ : ಕೆರೆಯಲ್ಲಿ ಮುಳುಗುತ್ತಿದ್ದ ಅಳಿಯನನ್ನು ರಕ್ಷಿಸಲು ಹೋಗಿ ಮಾವನೂ ನೀರುಪಾಲು

ಹಾಸನ : ಕೆರೆಯಲ್ಲಿ ಮುಳುಗುತ್ತಿದ್ದ ಅಳಿಯನನ್ನು ರಕ್ಷಿಸಲು ಹೋದ ಮಾವ ಕೂಡ ನೀರುಪಾಲಾದ ಘಟನೆ ಜಿಲ್ಲೆಯ ಅರಸೀಕೆರೆ ತಾಲೂಕಿನ ಎನ್‌.ಹೊಸಳ್ಳಿ ಗ್ರಾಮದಲ್ಲಿ ನಡೆದಿದೆ. ಸೋಮನಹಳ್ಳಿ ಗ್ರಾಮದ ಬಾಲಕ ಪ್ರತೀಕ್ (12) ಶಾಲೆಗೆ ಬೇಸಿಗೆ ರಜೆ ಇದ್ದ ಹಿನ್ನೆಲೆಯಲ್ಲಿ ತನ್ನ ಮಾವ ಪ್ರಭಾಕರ್ (45) ಅವರ ಮನೆಗೆ ಬಂದಿದ್ದ. ಇಂದು ಇಬ್ಬರೂ ಗ್ರಾಮದ ಕೆರೆಯ ದಡದಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ, ಆಕಸ್ಮಿಕವಾಗಿ ಬಾಲಕ ಕಾಲು ಜಾರಿ ಕೆರೆಗೆ ಬಿದ್ದಿದ್ದಾನೆ. ಅಳಿಯ ಮುಳುಗುತ್ತಿರುವುದನ್ನು ಕಂಡು ಗಾಬರಿಗೊಂಡ ಪ್ರಭಾಕರ್ ಕೂಡಲೇ ಆತನನ್ನು ರಕ್ಷಿಸಲು ಕೆರೆಗೆ ಇಳಿದಿದ್ದಾರೆ. ಆದರೆ ದುರದೃಷ್ಟವಶಾತ್ ಅವರಿಗೆ ಈಜು ತಿಳಿದಿರಲಿಲ್ಲ. ಅಳಿಯನನ್ನು ಉಳಿಸಲು ಮಾಡಿದ ಪ್ರಯತ್ನವೇ ಇಬ್ಬರಿಗೂ ಪ್ರಾಣಾಪಾಯವಾಗಿ, ನೀರಿನ ಆಳದಲ್ಲಿ ಸಿಲುಕಿ ಉಸಿರುಗಟ್ಟಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಘಟನೆಯ ಬಗ್ಗೆ ಮಾಹಿತಿ ತಿಳಿದ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಶೋಧ ಕಾರ್ಯಾಚರಣೆ ನಡೆಸಿ ಇಬ್ಬರ ಮೃತದೇಹಗಳನ್ನು ಹೊರತೆಗೆದಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಈ ಸಂಬಂಧ ಗಂಡಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

ವಾರ್ತಾ ಭಾರತಿ 20 Apr 2026 2:44 pm

ಮೋದಿ-ಸಿದ್ದರಾಮಯ್ಯ ಗುಸುಗುಸು: ಇಬ್ಬರೂ ಮಾತನಾಡಿದ ವಿಷಯ ಬಹಿರಂಗ

[…] The post ಮೋದಿ-ಸಿದ್ದರಾಮಯ್ಯ ಗುಸುಗುಸು: ಇಬ್ಬರೂ ಮಾತನಾಡಿದ ವಿಷಯ ಬಹಿರಂಗ first appeared on Vistara News .

ವಿಸ್ತಾರ ನ್ಯೂಸ್ 20 Apr 2026 2:35 pm

ಶಿವಮೊಗ್ಗ : ಶಿಕಾರಿಗೆ ಬಳಸುತ್ತಿದ್ದ 45 ನಾಡ ಬಾಂಬ್‌ಗಳು ವಶಕ್ಕೆ; ಓರ್ವ ಸೆರೆ, ಇಬ್ಬರು ಪರಾರಿ

ಶಿವಮೊಗ್ಗ : ಅಕ್ರಮವಾಗಿ ಕಾಡು ಪ್ರಾಣಿಗಳ ಬೇಟೆಗೆ ಬಳಸುತ್ತಿದ್ದ 45 ನಾಡ ಬಾಂಬ್‌ಗಳು ಹಾಗೂ ಒಂದು ಬೈಕನ್ನು ಜಿಲ್ಲೆಯ ಹೊಸನಗರ ವಲಯ ಅರಣ್ಯಾಧಿಕಾರಿಗಳು ವಶಕ್ಕೆ ಪಡೆದು, ಒಬ್ಬನನ್ನು ಬಂಧಿಸಿದ್ದಾರೆ. ಕಾರ್ಯಾಚರಣೆ ವೇಳೆ ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ. ಎಪ್ರಿಲ್ 19ರಂದು ಹೊಸನಗರ ತಾಲೂಕು ಕೆರೆಹಳ್ಳಿ ಹೋಬಳಿಯ ಹರತಾಳು ಗ್ರಾಮದ ಬಳಿ ಕೋಟೆತಾರಿಗದಿಂದ ಹರತಾಳು ಗ್ರಾಮಕ್ಕೆ ಹೋಗುವ ಮುಖ್ಯ ರಸ್ತೆ ಪಕ್ಕದ ಮೀಸಲು ಅರಣ್ಯದಲ್ಲಿ ಕಾಡು ಪ್ರಾಣಿಗಳ ಬೇಟೆ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಹೊಸನಗರ ವಲಯ ಅರಣ್ಯಾಧಿಕಾರಿಗಳು ದಾಳಿ ನಡೆಸಿದ್ದಾರೆ.  ಈ ವೇಳೆ ಡಾಕಪ್ಪ(55), ಭಾಸ್ಕರ (55) ಹಾಗೂ ನಾಗರಾಜ್ (53) ಎಂಬುವರು ನಾಡ ಬಾಂಬ್ ಇಟ್ಟು ಶಿಕಾರಿಗೆ ಹೊಂಚು ಹಾಕುತ್ತಿರುವುದು ಕಂಡುಬಂದಿದೆ. ಅಧಿಕಾರಿಗಳು ದಾಳಿ ನಡೆಸುತ್ತಿದ್ದಂತೆ, ಭಾಸ್ಕರ್ ಹಾಗೂ ನಾಗರಾಜ್ ಪರಾರಿಯಾಗಿದ್ದು, ಡಾಕಪ್ಪನನ್ನು ಬಂಧಿಸಲಾಗಿದೆ.  ಡಾಕಪ್ಪನನ್ನು ಹೊಸನಗರ ನ್ಯಾಯಾಲಯದ ಮುಂದೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪರಾರಿಯಾಗಿರುವ ಇಬ್ಬರು ಆರೋಪಿಗಳಾದ ಭಾಸ್ಕರ್ ಹಾಗೂ ನಾಗರಾಜ್ ಎಂಬವರ ಹುಡುಕಾಟಕ್ಕೆ ಅರಣ್ಯಾಧಿಕಾರಿಗಳು ಬಲೆ ಬೀಸಿದ್ದಾರೆ. ಕಾರ್ಯಾಚರಣೆಯಲ್ಲಿ ಹೊಸನಗರ ವಲಯ ಅರಣ್ಯಾಧಿಕಾರಿ ಅನಿಲ್ ಕುಮಾರ್ ಎಸ್., ಉಪ ವಲಯ ಅರಣ್ಯಾಧಿಕಾರಿಗಳಾದ ಅನಿಲ್ ಬೆಳ್ಳೆನವರ್, ಭರತ್ ಕುಮಾರ್, ಗಸ್ತು ಅರಣ್ಯ ಪಾಲಕ ಮಂಜುನಾಥ ಡಿ., ಪ್ರಶಾಂತ ಜಿ., ಪುಟ್ಟಸ್ವಾಮಿ ಕೆ.ವಿ., ಗಸ್ತು ಅರಣ್ಯ ಪಾಲಕರು ಹಾಗೂ ಇಲಾಖೆಯ ಇತರ ಸಿಬ್ಬಂದಿ ಭಾಗಿಯಾಗಿದ್ದರು.

ವಾರ್ತಾ ಭಾರತಿ 20 Apr 2026 2:33 pm

ಜಪಾನ್‌ನಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ, 10ಅಡಿ ಎತ್ತರಕ್ಕೆ ಸುನಾಮಿ ಭೀತಿ ಕೂಡಲೇ ಎತ್ತರದ ಸ್ಥಳಕ್ಕೆ ತೆರಳಿ ಎಂದು ನಿವಾಸಿಗಳಿಗೆ ಸೂಚನೆ

ಜಪಾನ್‌ ನ ಈಶಾನ್ಯ ಕರಾವಳಿಯ ಭಾಗದಲ್ಲಿ 7.4ತೀವ್ರತೆಯ ಪ್ರಬಲ ಭೂಕಂಪನವಾಗಿದ್ದು, ಸುಮಾರು 10ಅಡಿಗಳ ವರೆಗೂ ಸುನಾಮಿಯ ಅಲೆಗಳು ಅಪ್ಪಳಿಸುವ ಎಚ್ಚರಿಕೆಯನ್ನು ಜಪಾನ್‌ ಹವಾಮಾನ ಸಂಸ್ಥೆ ನೀಡಿದೆ. ಅಲ್ಲದೆ, ಇದು ಇವಾಟೆ ಪ್ರಾಂತ್ಯ ಮತ್ತು ಹೊಕ್ಕೈಡೊದ ಮೇಲೆ ಪರಿಣಾಮ ಬೀಳುವ ಸಾಧ್ಯತೆಯಿದ್ದು, ಅಲ್ಲಿನ ನಿವಾಸಿಗಳು ತಕ್ಷಣವೇ ಆ ಪ್ರದೇಶದಿಂದ ಎತ್ತರದ ಹಾಗೂ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರವಾಗಬೇಕು ಎಂದು ಸಲಹೆ ನೀಡಿದ್ದು,ತುರ್ತು ಸೇವೆಗಳನ್ನು ಅಲರ್ಟ್‌ ಮಾಡಲಾಗಿದೆ. ಈ ಕುರಿತ ಮಾಹಿತಿ ಇಲ್ಲಿದೆ..

ವಿಜಯ ಕರ್ನಾಟಕ 20 Apr 2026 2:19 pm

Delhi | ಪಾರ್ಕಿಂಗ್ ವಿಚಾರಕ್ಕೆ ಜಗಳ: ವ್ಯಕ್ತಿಯ ಕೊಲೆಯಲ್ಲಿ ಅಂತ್ಯ

ಹೊಸದಿಲ್ಲಿ: ವಾಹನ ಪಾರ್ಕಿಂಗ್ ವಿಚಾರದಲ್ಲಿ ಉಂಟಾದ ಜಗಳದಲ್ಲಿ 34 ವರ್ಷದ ವ್ಯಕ್ತಿಯೊಬ್ಬರನ್ನು ಗುಂಡಿಕ್ಕಿ ಹತ್ಯೆಗೈದಿರುವ ಘಟನೆ ಸೋಮವಾರ ಮುಂಜಾನೆ ಪೂರ್ವ ದಿಲ್ಲಿಯ ಪ್ರೀತ್ ವಿಹಾರ್ ನಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತ ವ್ಯಕ್ತಿಯನ್ನು ಪಂಕಜ್ ನಯ್ಯರ್ ಎಂದು ಗುರುತಿಸಲಾಗಿದೆ. ಪಂಕಜ್ ನಯ್ಯರ್, ಅವರ ಸಹೋದರ ಪಾರಸ್ ಹಾಗೂ ಆರೋಪಿ ಗೌರವ್ ಶರ್ಮ ಮತ್ತಿತರರ ನಡುವೆ ವಾಹನ ಪಾರ್ಕಿಂಗ್ ವಿಚಾರದಲ್ಲಿ ಮಾತಿನ ಚಕಮಕಿ ನಡೆದಿದ್ದು, ಇದು ಪಂಕಜ್ ನಯ್ಯರ್ ಹತ್ಯೆಯಲ್ಲಿ ಅಂತ್ಯಗೊಂಡಿದೆ. ಈ ಮಾತಿನ ಚಕಮಕಿಯ ವೇಳೆ ಪಂಕಜ್ ನಯ್ಯರ್ ಎದೆಗೆ ಗೌರವ್ ಶರ್ಮ ಗುಂಡಿಕ್ಕಿದ್ದಾನೆ ಎಂದು ಆರೋಪಿಸಲಾಗಿದೆ. ಘಟನೆ ಸಂಬಂಧ ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್ ಗಳು ಹಾಗೂ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಯನ್ನು ಆದಷ್ಟೂ ಶೀಘ್ರವಾಗಿ ಬಂಧಿಸಲು ಪ್ರಯತ್ನಗಳು ಮುಂದುವರಿದಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ವಾರ್ತಾ ಭಾರತಿ 20 Apr 2026 2:19 pm

ಏಪ್ರಿಲ್ 24ಕ್ಕೆ ವಿಶೇಷ ಸಂಪುಟ ಸಭೆ: ಸರ್ಕಾರ ಕೈಗೊಳ್ಳುತ್ತಾ ಒಳ ಮೀಸಲಾತಿ ಬಗ್ಗೆ ಮಹತ್ವದ ನಿರ್ಧಾರ?

ಒಳ ಮೀಸಲಾತಿ ವಿಚಾರ ರಾಜ್ಯ ಸರ್ಕಾರಕ್ಕೆ ದೊಡ್ಡ ತಲೆನೋವು ಉಂಟು ಮಾಡಿದೆ. ಒಳ ಮೀಸಲಾತಿ ವಿಚಾರವಾಗಿ ಚರ್ಚಿಸಿ ನಿರ್ಧಾರ ಕೈಗೊಳ್ಳಲು ಸಚಿವ ಸಂಪುಟ ಸಭೆಯನ್ನು ಕರೆಯಲಾಗಿತ್ತು. ಆದರೆ, ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಉಪ ಚುನಾವಣೆ ಹಿನ್ನೆಲೆಯಲ್ಲಿ ಸಚಿವ ಸಂಪುಟ ಸಭೆಯನ್ನು ಮುಂದೂಡಲಾಗಿತ್ತು. ಇದೀಗ ಶುಕ್ರವಾರ ಏಪ್ರಿಲ್ 24 ರಂದು ಸಚಿವ ಸಂಪುಟ ಸಭೆ ಕರೆಯಲಾಗಿದೆ. ಸಭೆಯಲ್ಲಿ ಒಳ ಮೀಸಲಾತಿ ಕುರಿತಾಗಿ ಮಹತ್ವದ ನಿರ್ಧಾರ ಸಾಧ್ಯತೆ ಇದೆ. ಈ ಕುರಿತಾದ ಮತ್ತಷ್ಟು ವಿವರ ಇಲ್ಲಿದೆ.

ವಿಜಯ ಕರ್ನಾಟಕ 20 Apr 2026 2:17 pm

ಹೆಚ್ಚುತ್ತಿರುವ ಅಪಘಾತ: SC ಮಧ್ಯ ಪ್ರವೇಶ - ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಮಹತ್ವದ 12 ಸೂಚನೆ

SC Guidelines to NHAI and State Government : ರಾಷ್ಟ್ರೀಯ ಹೆದ್ದಾರಿಯಲ್ಲಿ ಹೆಚ್ಚುತ್ತಿರುವ ಅಪಘಾತಗಳ ಬಗ್ಗೆ ಸರ್ವೋಚ್ಚ ನ್ಯಾಯಾಲಯ ತೀವ್ರ ಕಳವಳವನ್ನು ವ್ಯಕ್ತ ಪಡಿಸಿದೆ. ರಾಜಸ್ಥಾನದ ಫೆಲೋಡಿ ಮತ್ತು ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯಲ್ಲಿ ಸಂಭವಿಸಿದ ರಸ್ತೆ ಅಪಘಾತದ ಹಿನ್ನಲೆಯಲ್ಲಿ, ಸ್ವಯಂಪ್ರೇರಿತವಾಗಿ, ಕೋರ್ಟ್ ಪ್ರಕರಣ ದಾಖಲಿಸಿಕೊಂಡಿದೆ ಮತ್ತು ಹೆದ್ದಾರಿ ಪ್ರಾಧಿಕಾರಕ್ಕೆ ಹನ್ನೆರಡು ಸೂಚನೆಯನ್ನು ನೀಡಿದೆ.

ವಿಜಯ ಕರ್ನಾಟಕ 20 Apr 2026 2:07 pm

ಡಿವೋರ್ಸ್‌ ಸಂಭ್ರಮಿಸಿದ್ದಕ್ಕೆ ಸಿಕ್ಕಾಪಟ್ಟೆ ಟ್ರೋಲ್‌: ಖಿನ್ನತೆಗೆ ಒಳಗಾಗಿ ಕಣ್ಣೀರಿಟ್ಟ ಮೀರತ್ ಮಹಿಳೆ

ಇತ್ತೀಚೆಗೆ ಮೀರತ್‌ನ ಕುಟುಂಬವೊಂದು ತಮ್ಮ ಮಗಳ ವಿಚ್ಛೇದನವನ್ನು ಬ್ಯಾಂಡ್-ಬಾಜಾ ಮತ್ತು ಮೆರವಣಿಗೆಯ ಮೂಲಕ ಸಂಭ್ರಮಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಆದರೆ, ಈ ಸಂಭ್ರಮದ ಬೆನ್ನಲ್ಲೇ ಡಿವೋರ್ಸ್‌ ಪಡೆದಿದ್ದ ಆ ಸಂತ್ರಸ್ತ ಮಹಿಳೆ ಪ್ರಣೀತಾ ವಸಿಷ್ಠ ಅವರು ನೆಟ್ಟಿಗರಿಂದ ಟ್ರೋಲ್‌ಗೆ ಗುರಿಯಾಗಿದ್ದು, ತೀವ್ರ ಮಾನಸಿಕ ನೋವನ್ನು ಅನುಭವಿಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಟ್ರೋಲಿಂಗ್‌ನಿಂದ ಖಿನ್ನತೆ ಈ ಬಗ್ಗೆ ಮನಬಿಚ್ಚಿ

ಒನ್ ಇ೦ಡಿಯ 20 Apr 2026 2:07 pm

ಸೀಲು, ಸಹಿ ಇಲ್ಲದ ಚೆಕ್ ಬೌನ್ಸ್ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು; ಮೆಮೊ ಕೂಡ ಪುರಾವೆ

ಚೆಕ್ ಬೌನ್ಸ್ ಪ್ರಕರಣಗಳಲ್ಲಿ ಸೀಲು ಸಹಿಯಿಲ್ಲದ ಕಂಪ್ಯೂಟರ್ ಆಧಾರಿತ ಬ್ಯಾಂಕ್ ರಿಟರ್ನ್ ಮೆಮೊಗಳು ಮಾನ್ಯ ಪುರಾವೆಗಳೆಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಎಲೆಕ್ಟ್ರಾನಿಕ್ ಕ್ಲಿಯರಿಂಗ್ ವ್ಯವಸ್ಥೆಯಲ್ಲಿ ಇವು ಕಡ್ಡಾಯವಲ್ಲ ಎಂದು ನ್ಯಾಯಮೂರ್ತಿ ವಿ. ಶ್ರೀಶಾನಂದ ಅವರ ಪೀಠವು ಸ್ಪಷ್ಟಪಡಿಸಿದೆ. ತಾಂತ್ರಿಕ ನೆಪಗಳನ್ನು ಒಡ್ಡಿ ಚೆಕ್ ಬೌನ್ಸ್ ದೂರುಗಳನ್ನು ವಜಾಗೊಳಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಈ ಮೂಲಕ ಸ್ಪಷ್ಟಪಡಿಸಿದೆ.

ವಿಜಯ ಕರ್ನಾಟಕ 20 Apr 2026 2:02 pm

ಧಾರ್ಮಿಕ ಮತಾಂತರ, ಮಹಿಳೆಯರಿಗೆ ಕಿರುಕುಳ ಆರೋಪ: ನಾಗ್ಪುರದ ಎನ್‌ಜಿಒ ಮುಖ್ಯಸ್ಥ ಬಂಧನ

ನಾಸಿಕ್‌ನ ಟಿಸಿಎಸ್ ಘಟಕದಲ್ಲಿ ಇತ್ತೀಚೆಗಷ್ಟೇ ಕೇಳಿಬಂದಿದ್ದ ಮತಾಂತರ ಮತ್ತು 'ಲವ್ ಜಿಹಾದ್' ಆರೋಪಗಳ ಬೆನ್ನಲ್ಲೇ ನಾಗ್ಪುರದಲ್ಲಿ ಸಾಮಾಜಿಕ ಸೇವಾ ಸಂಸ್ಥೆ ನಡೆಸುತ್ತಿದ್ದ ವ್ಯಕ್ತಿಯೊಬ್ಬರು ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ ಮತ್ತು ಮತಾಂತರಗೊಳ್ಳುವಂತೆ ಬಲವಂತಪಡಿಸಿದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದಾರೆ.

ವಿಜಯ ಕರ್ನಾಟಕ 20 Apr 2026 1:57 pm

ಮಣಿಪಾಲ | ಕೆಎಂಎಫ್ ಹಳೆಯ ಹಾಲು ಸಂಸ್ಕರಣಾ ಘಟಕದಲ್ಲಿ ಬೆಂಕಿ ಅವಘಡ

ಮಣಿಪಾಲ: ಮಣಿಪಾಲದ ಈಶ್ವರ ನಗರದಲ್ಲಿರುವ ಕೆಎಂಎಫ್ ನ ಹಳೆಯ ಹಾಲು ಸಂಸ್ಕರಣಾ ಘಟಕದಲ್ಲಿ ಬೆಂಕಿ ಅಕಸ್ಮಿಕ ಸಂಭವಿಸಿದ್ದು ತಕ್ಷಣ ಆಗಮಿಸಿದ ಅಗ್ನಿಶಾಮಕ ದಳದವರು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇಂದು ಬೆಳಿಗ್ಗೆ 11 ಗಂಟೆ ಸುಮಾರಿಗೆ ಘಟಕದಲ್ಲಿ ವೆಡ್ಡಿಂಗ್ ಮಾಡುತ್ತಿರುವ ಸಂದರ್ಭದಲ್ಲಿ ಅದರ ಬೆಂಕಿಯ ಕಿಡಿ ಅಲ್ಲೆ ಸಮೀಪದಲ್ಲಿದ್ದ ಆಯಿಲ್ ಗೆ ತಗುಲಿ ಬೆಂಕಿ ಕಾಣಿಸಿಕೊಂಡಿತ್ತೆನ್ನಲಾಗಿದೆ. ಇದರಿಂದ ಬೆಂಕಿ ಅಲ್ಲಿನ ಬಾಯ್ಲರ್ ಗೂ ವಿಸ್ತರಿಸಿತು. ಕೂಡಲೇ ಆಗಮಿಸಿದ ಉಡುಪಿ ಅಗ್ನಿಶಾಮಕ ದಳದವರು ಒಂದು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ ಇದರಿಂದ ಅಪಾರ ನಷ್ಟವಾಗಿದೆ ಎಂದು ತಿಳಿದುಬಂದಿದೆ.    

ವಾರ್ತಾ ಭಾರತಿ 20 Apr 2026 1:43 pm

8 ವರ್ಷಗಳ ಬಳಿಕ ಭಾರತಕ್ಕೆ ದಕ್ಷಿಣ ಕೊರಿಯಾ ಅಧ್ಯಕ್ಷರ ಭೇಟಿ: 2030ರ ವೇಳೆಗೆ ವಾಣಿಜ್ಯ ಸಂಬಂಧ $50 ಬಿಲಿಯನ್ ತಲಪುವ ಗುರಿ!

ಸುಮಾರು 8 ವರ್ಷಗಳ ಬಳಿಕ ದ.ಕೊರಿಯಾದ ಅಧ್ಯಕ್ಷರು ಭಾರತ ಪ್ರವಾಸ ನಡೆಸುತ್ತಿದ್ದು, ದ.ಕೊರಿಯಾ ಅಧ್ಯಕ್ಷ ಲಿ ಜೇ ಮಿಯಾಂಗ್‌ ಏ.20ರಂದು ದೆಹಲಿಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಸಭೆ ನಡೆಸಲಿದ್ದಾರೆ. ಇದಕ್ಕೂ ಮೊದಲು ಅವರು ಭಾರತ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ದೇಶವೆಂದು ಬಣ್ಣಿಸಿದ್ದು, ಉಭಯದೇಶಗಳ ದ್ವಿಪಕ್ಷೀಯ ಸಂಬಂಧದಿಂದ ಅನೇಕ ಲಾಭವಾಗಲಿದೆ ಎಂದು ತಿಳಿಸಿದ್ದಾರೆ. ಇನ್ನು, ಇವರ ಪ್ರವಾಸ ಉಭಯದೇಶಗಳ ನಡುವಿನ ಹಲವು ವಾಣಿಜ್ಯ ಕ್ಷೇತ್ರಗಳಲ್ಲಿ ಸಂಬಂಧ ವೃದ್ದಿಗೊಳಿಸುವ ಮೂಲಕ ದ್ವಿಪಕ್ಷೀಯ ವಾಣಿಜ್ಯ ಸಂಬಂಧವನ್ನು 2030ರ ವೇಳೆಗೆ $50ಬಿಲಿಯನ್‌ ಡಾಲರ್‌ ಮಾಡುವ ನಿಟ್ಟನಲ್ಲಿ ಕೇಂದ್ರಿತವಾಗಿದೆ. ಈ ಕುರಿತ ಮಾಹಿತಿ ಇಲ್ಲಿದೆ..

ವಿಜಯ ಕರ್ನಾಟಕ 20 Apr 2026 1:42 pm

Bidar | ಬಿಸಿಲಿನ ಝಳಕ್ಕೆ ಯುವಕ ಕುಸಿದು ಬಿದ್ದು ಮೃತ್ಯು

ಬೀದರ್: ಕಮಲನಗರ ತಾಲೂಕಿನ ಡಿಗ್ಗಿ ಗ್ರಾಮದ ರಸ್ತೆ ಬಳಿ ಬಿಸಿಲಿನ ತೀವ್ರತೆಗೆ ಯುವಕನೊಬ್ಬ ಕುಸಿದು ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಉತ್ತರ ಪ್ರದೇಶದ ಮಿರ್ಜಾಪುರ್ ಪಲ್ಲಾ ಗ್ರಾಮದ ನಿವಾಸಿ ಮುಹಮ್ಮದ್‌ ಸಮೀರ್ (20) ಮೃತ ಯುವಕ ಎಂದು ತಿಳಿದು ಬಂದಿದೆ. ಕೆಲಸದ ನಿಮಿತ್ತ ಕೆಲ ದಿನಗಳ ಹಿಂದೆ ಕಮಲನಗರಕ್ಕೆ ಬಂದಿದ್ದನು ಎನ್ನಲಾಗಿದೆ. ಎ.14ರಂದು ಬೆಳಿಗ್ಗೆ ತರಕಾರಿ ತರಲು ತೆರಳಿದ್ದ ಸಮೀರ್, ಮನೆಗೆ ವಾಪಸ್ಸಾಗುವ ವೇಳೆ ಬಿಸಿಲಿನ ಝಳದಿಂದ ತಲೆತಿರುಗಿ ಸಮೀಪದ ಮೆಕಾನಿಕ್ ಅಂಗಡಿಯಲ್ಲಿ ನೀರು ಕುಡಿದು ವಿಶ್ರಾಂತಿ ಪಡೆದಿದ್ದನು. ಬಳಿಕ ಮನೆಗೆ ತೆರಳುವಾಗ ಡಿಗ್ಗಿ ಗ್ರಾಮದ ರಸ್ತೆ ಬಳಿ ಕುಸಿದು ಬಿದ್ದು ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ. ಬಿಸಿಲಿನ ಪರಿಣಾಮವೇ ಸಾವಿಗೆ ಕಾರಣ ಎಂದು ಮೃತನ ತಂದೆ ಲಯಿಕ್ ಅಹ್ಮದ್ ದೂರು ನೀಡಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕಮಲನಗರ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿದೆ.

ವಾರ್ತಾ ಭಾರತಿ 20 Apr 2026 1:27 pm

ಕಾವೇರಿ ನದಿಯಲ್ಲಿ ಮುಳುಗಿ ಇಬ್ಬರು ಮಕ್ಕಳು ಸೇರಿ ಆರು ಮಂದಿ ಸಾವು: ಇನ್ನಿಬ್ಬರ ಸ್ಥಿತಿ ಗಂಭೀರ

ಮೈಸೂರು ಜಿಲ್ಲೆಯ ಕೆ.ಆರ್‌. ನಗರದ ಬಳಿ ನಡೆದ ಘಟನೆಯಲ್ಲಿ ಆರು ಮಂದಿ ಕಾವೇರಿ ನದಿಯ ಪಾಲಾಗಿದ್ದಾರೆ. ದರ್ಗಾಕ್ಕೆ ಭೇಟಿ ನೀಡಲು ಬಂದಿದ್ದವರು ನದಿಯಲ್ಲಿ ಈಜಲು ಹೋಗಿ ಅಥವಾ ಕಾಲು ಜಾರಿ ಈ ದುರಂತ ಸಂಭವಿಸಿದೆ. ಒಂದೇ ಗುಂಪಿನ ಆರು ಮಂದಿ ಸಾವನ್ನಪ್ಪಿರುವುದು ಆ ಕುಟುಂಬಗಳಲ್ಲಿ ಶೋಕ ಮಡುಗಟ್ಟುವಂತೆ ಮಾಡಿದೆ.

ವಿಜಯ ಕರ್ನಾಟಕ 20 Apr 2026 1:26 pm

Vaibhav: ತಂದೆ ಕನಸನ್ನ ಪೂರೈಸುವುದೇ ನನ್ನ ಮುಖ್ಯ ಗುರಿ, ಪ್ರತಿಸ್ಪರ್ಧಿಗಳಿಗೆ ವೈಭವ್ ಸೂರ್ಯವಂಶಿ ಖಡಕ್ ಎಚ್ಚರಿಕೆ

Vaibhav Sooryavanshi: ಐಪಿಎಲ್ 2026ರಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಪರ ಆಡುತ್ತಿರುವ 15 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ ಅವರು ತಮ್ಮ ಅದ್ಭುತ ಬ್ಯಾಟಿಂಗ್ ಶೈಲಿಯಿಂದ ಇಡೀ ಕ್ರಿಕೆಟ್ ಲೋಕದ ಗಮನ ಸೆಳೆದಿದ್ದಾರೆ. ಕ್ರೀಸ್‌ನಲ್ಲಿ ನಿಂತರೆ ಎದುರಾಳಿ ಬೌಲರ್‌ಗಳ ಮೇಲೆ ಆಕ್ರಮಣಕಾರಿ ಸವಾರಿ ಮಾಡುವ ಇವರು, ಬೌಂಡರಿ, ಸಿಕ್ಸರ್‌ಗಳ ಮೂಲಕ ರನ್ ಮಳೆ ಹರಿಸುತ್ತಿದ್ದಾರೆ. ಈ

ಒನ್ ಇ೦ಡಿಯ 20 Apr 2026 1:17 pm

ಬಸವಣ್ಣನವರನ್ನು ಒಂದು ಸಮುದಾಯಕ್ಕೆ ಸೀಮಿತಗೊಳಿಸಬಾರದು: ಸಚಿವ ಸತೀಶ್‌ ಜಾರಕಿಹೊಳಿ

[…] The post ಬಸವಣ್ಣನವರನ್ನು ಒಂದು ಸಮುದಾಯಕ್ಕೆ ಸೀಮಿತಗೊಳಿಸಬಾರದು: ಸಚಿವ ಸತೀಶ್‌ ಜಾರಕಿಹೊಳಿ first appeared on Vistara News .

ವಿಸ್ತಾರ ನ್ಯೂಸ್ 20 Apr 2026 1:12 pm

ಹಾರ್ಮುಝ್ ಬಳಿ ಇರಾನ್‌ನ ಹಡಗನ್ನು ವಶಪಡಿಸಿಕೊಂಡ ಅಮೆರಿಕ: ಪ್ರತೀಕಾರದ ಪ್ರತಿಜ್ಞೆ ಮಾಡಿದ ಇರಾನ್

ಟೆಹ್ರಾನ್: ಹಾರ್ಮುಝ್ ಜಲಸಂಧಿ ಬಳಿ ಇರಾನ್ ಧ್ವಜ ಹೊತ್ತ ಸರಕು ಸಾಗಣೆ ಹಡಗನ್ನು ಅಮೆರಿಕದ ಪಡೆಗಳು ವಶಪಡಿಸಿಕೊಂಡ ನಂತರ ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆ ಮತ್ತೆ ಹೆಚ್ಚಾಗಿದೆ. ಈ ಬೆಳವಣಿಗೆಯು, ಕದನ ವಿರಾಮ, ಶಾಂತಿ ಮಾತುಕತೆ ಕುರಿತ ರಾಜತಾಂತ್ರಿಕ ಪ್ರಯತ್ನಗಳಿಗೆ ಹೊಸ ಅನಿಶ್ಚಿತತೆಯನ್ನು ಉಂಟುಮಾಡಿದೆ. “ಇರಾನ್ ಬಂದರುಗಳ ಮೇಲೆ ಹೇರಲಾದ ದಿಗ್ಬಂಧನವನ್ನು ಜಾರಿಗೊಳಿಸುವ ಅಮೆರಿಕದ ಯುದ್ಧನೌಕೆಯ ಪುನರಾವರ್ತಿತ ಎಚ್ಚರಿಕೆಗಳನ್ನು ನಿರ್ಲಕ್ಷಿಸಿದ ಟೌಸ್ಕಾ ಎಂಬ ಹಡಗನ್ನು ಒಮಾನ್ ಕೊಲ್ಲಿಯಲ್ಲಿ ಎಂಜಿನ್ ಮೇಲೆ ದಾಳಿ ನಡೆಸಿ ನಿಷ್ಕ್ರಿಯಗೊಳಿಸಲಾಗಿದೆ. ಈಗ ಹಡಗಿನಲ್ಲಿರುವ ಸರಕುಗಳ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಯುಎಸ್ ಸೆಂಟ್ರಲ್ ಕಮಾಂಡ್ ಈ ಕುರಿತ ಕಾರ್ಯಾಚರಣೆಯ ವಿಡಿಯೋವನ್ನು ಬಿಡುಗಡೆ ಮಾಡಿದೆ. ಹಡಗಿಗೆ ನೀಡಿದ ಎಚ್ಚರಿಕೆಗಳು ಹಾಗೂ ಎಂಜಿನ್ ನಿಷ್ಕ್ರಿಯಗೊಳಿಸಲು ತೆಗೆದುಕೊಂಡ ಕ್ರಮವು ವೀಡಿಯೊದಲ್ಲಿ ಸೆರೆಯಾಗಿದೆ. ಅಮೆರಿಕದ ಈ ಕ್ರಮವನ್ನು ಇರಾನ್ “ಸಮುದ್ರ ದರೋಡೆ” ಎಂದು ಕರೆದಿದ್ದು, ಪ್ರತಿಕಾರ ನೀಡುವುದಾಗಿ ಪ್ರತಿಜ್ಞೆ ಮಾಡಿದೆ. ಈ ಸಶಸ್ತ್ರ ದರೋಡೆ ಹಾಗೂ ಅಮೆರಿಕದ ಮಿಲಿಟರಿ ದಾಳಿ ವಿರುದ್ಧ ಇರಾನ್ ಸಶಸ್ತ್ರ ಪಡೆಗಳು ಶೀಘ್ರದಲ್ಲೇ ಪ್ರತೀಕಾರ ತೀರಿಸಲಿದೆ ಎಂದು ಇರಾನ್ ಮಿಟರಿಯ ವಕ್ತಾರ ಖತಮ್ ಅಲ್ ಅನ್ಬಿಯಾ ಹೇಳಿದ್ದಾರೆ. ಇದರ ಬೆನ್ನಲ್ಲೆ ಅಮೆರಿಕದ ಮಿಲಿಟರಿ ಹಡಗುಗಳ ಮೇಲೆ ಇರಾನ್ ಡ್ರೋನ್ ದಾಳಿ ನಡೆಸಿದೆ ಎಂದು ವರದಿಯಾಗಿದೆ. ಈ ಬಗ್ಗೆ ಅಮೆರಿಕ ದೃಢಪಡಿಸಿಲ್ಲ.

ವಾರ್ತಾ ಭಾರತಿ 20 Apr 2026 1:11 pm

ಇಡಿ ದಾಳಿ; ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ: ಸಚಿವೆ ಶೋಭಾ ಕರಂದ್ಲಾಜೆ

[…] The post ಇಡಿ ದಾಳಿ; ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ: ಸಚಿವೆ ಶೋಭಾ ಕರಂದ್ಲಾಜೆ first appeared on Vistara News .

ವಿಸ್ತಾರ ನ್ಯೂಸ್ 20 Apr 2026 1:08 pm

Kalaburagi | ಜಮಗಾ (ಜೆ) ಗ್ರಾಮದಲ್ಲಿ ಡಾ.ಬಾಬಾಸಾಹೇಬ್‌ ಅಂಬೇಡ್ಕರ್ ಅವರ 135ನೇ ಜಯಂತೋತ್ಸವ ಆಚರಣೆ

ಕಲಬುರಗಿ: ಆಳಂದ ತಾಲ್ಲೂಕಿನ ಜಮಗಾ (ಜೆ) ಗ್ರಾಮದಲ್ಲಿ ಸಂವಿಧಾನ ಶಿಲ್ಪಿ ಬಿ.ಆರ್.ಅಂಬೇಡ್ಕರ್ ಅವರ 135ನೇ ಜಯಂತೋತ್ಸವವನ್ನು ಭಕ್ತಿಭಾವದಿಂದ ಆಚರಿಸಲಾಯಿತು. ಕಾರ್ಯಕ್ರಮವನ್ನು ಗಣ್ಯರು ಬುದ್ಧ, ಬಸವ ಹಾಗೂ ಅಂಬೇಡ್ಕರ್ ಅವರ ಭಾವಚಿತ್ರಗಳಿಗೆ ಮಾಲಾರ್ಪಣೆ ಮಾಡಿ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಗ್ರಾಮದ ಹಿರಿಯ ಮುಖಂಡ ಕಲ್ಯಾಣರಾವ ದೊಡ್ಡಮನಿ ಪ್ರಸ್ತಾವಿಕ ಭಾಷಣ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಹಿರಿಯ ದಲಿತ ಮುಖಂಡ ಚನ್ನವೀರ ಕಾಳೆಕಿಂಗೆ, ಹಿಂದಿನ ಕಾಲದ ಸಾಮಾಜಿಕ ವ್ಯವಸ್ಥೆಯಲ್ಲಿ ದಲಿತ ಸಮುದಾಯಕ್ಕೆ ನ್ಯಾಯ ಸಿಗಲಿಲ್ಲ. ಆದರೆ ಅಂಬೇಡ್ಕರ್ ರಚಿಸಿದ ಸಂವಿಧಾನದಿಂದಲೇ ಇಂದು ಸಮಾನತೆ ಮತ್ತು ಘನತೆಯ ಬದುಕು ಸಾಧ್ಯವಾಗಿದೆ ಎಂದು ಹೇಳಿದರು. ಅಂಬೇಡ್ಕರ್ ಅವರು ಮಹಿಳೆಯರ ಹಕ್ಕುಗಳಿಗೂ ಹೆಚ್ಚಿನ ಮಹತ್ವ ನೀಡಿದ್ದು, ಹಿಂದುಳಿದ ವರ್ಗಗಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಅವಕಾಶಗಳನ್ನು ಕಲ್ಪಿಸಿದ ಮಹಾನ್ ನಾಯಕರು ಎಂದು ಹೇಳಿದರು. ಅಂಬೇಡ್ಕರ್ ಸಂವಿಧಾನ ರಚಿಸದೇ ಇದ್ದಿದ್ದರೆ ಹಿಂದುಳಿದ ವರ್ಗಗಳ ಸ್ಥಿತಿ ಇನ್ನಷ್ಟು ದುಸ್ಥಿತಿಯಲ್ಲಿರುತ್ತಿತ್ತು. ಇಂದು ಶಿಕ್ಷಣ ಮತ್ತು ಅರ್ಹತೆಯಿಂದ ಉತ್ತಮ ಹುದ್ದೆಗಳನ್ನು ಪಡೆಯಲು ಸಾಧ್ಯವಾಗಿರುವುದು ಅವರ ಕೊಡುಗೆ ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಬಾಬುರಾವ್ ಅರುಣೋದಯ, ಸಿದ್ದರಾಮ ನಡಗೇರಿ, ಸುಭಾಸ್ ಚಕ್ರವರ್ತಿ, ಬಬ್ರುವಾಹನ ಶರಣಬಸಪ್ಪ ಬುಸನೂರ ಭಾಗವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಜೀವ ಕುಮಾರ್ ಆರೆ ವಹಿಸಿದ್ದರು. ಸ್ವಾಗತ ಭಾಷಣವನ್ನು ಪ್ರಥ್ವಿರಾಜ ಆರೆ ನೆರವೇರಿಸಿದ್ದು, ದಿಗಂಬರ ಇಮ್ಮುನ್ ಕಾರ್ಯಕ್ರಮ ನಿರೂಪಣೆ ಮಾಡಿದರು. ಜೈಭೀಮ್ ತರುಣ ಸಂಘದ ಸದಸ್ಯರು ಹಾಗೂ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಇದೇ ವೇಳೆ ಎಸೆಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸಿ ಉತ್ತೀರ್ಣರಾದ ವಿದ್ಯಾರ್ಥಿಗಳು ಹಾಗೂ ಸರಕಾರಿ ಸೇವೆ ಪಡೆದ ಯುವಕನಿಗೆ ಸನ್ಮಾನಿಸಲಾಯಿತು.

ವಾರ್ತಾ ಭಾರತಿ 20 Apr 2026 1:07 pm

ಶಾಸಕ ಹಾರಿಸ್ ನಿವಾಸದ ಮೇಲೆ ಈಡಿ ದಾಳಿ; ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿದೆ : ಶೋಭಾ ಕರಂದ್ಲಾಜೆ

ಬೆಂಗಳೂರು: ಬಿಟ್ ಕಾಯಿನ್ ಮೂಲಕ ಬೇರೆ ಬೇರೆ ದೇಶಗಳಲ್ಲಿ ರಾಜಕಾರಣಿಗಳು ಹೂಡಿಕೆ ಮಾಡಿದ್ದಾರೆ. ವಿಶೇಷವಾಗಿ ಕಾಂಗ್ರೆಸ್ ರಾಜಕಾರಣಿಗಳು ಹೂಡಿಕೆ ಮಾಡಿದ್ದಾರೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಆರೋಪಿಸಿದರು. ಬಿಡಿಎ ಅಧ್ಯಕ್ಷ ಹಾಗೂ ಶಾಸಕ ಎನ್.ಎ.ಹಾರಿಸ್ ಅವರ ಮನೆ ಮೇಲೆ ಈಡಿ ದಾಳಿ ಕುರಿತು ಅವರು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ನಿರಂತರವಾಗಿ ಕಾಂಗ್ರೆಸ್ ಆರ್ಥಿಕ ಅಪರಾಧಗಳನ್ನು ಮಾಡುತ್ತಲೇ ಬರುತ್ತಿದೆ. ಇದರಲ್ಲಿ ಬಿಟ್ ಕಾಯಿನ್ ಸಹ ಒಂದು. ಬಿಟ್ ಕಾಯಿನ್ ನಲ್ಲಿ ಹೂಡಿಕೆ ಆಗಿದೆ ಎಂಬ ಮಾಹಿತಿ ಆಧರಿಸಿ ದಾಳಿ ನಡೆದಿದೆ ಎಂದರು. ತಪ್ಪು ಮಾಡಿದವರಿಗೆ ಶಿಕ್ಷೆ ಆಗಬೇಕು. ಯಾವುದೇ ನಿಖರ ಮಾಹಿತಿ ಇಲ್ಲದೆ ದಾಳಿ ನಡೆದಿಲ್ಲ. ಎಲ್ಲದರಲ್ಲೂ ಕಾಂಗ್ರೆಸ್ ನವರು ತಪ್ಪಿಸಿಕೊಳ್ಳುತ್ತಾರೆ. ರಾಜ್ಯದಲ್ಲಿನ ಹಣವನ್ನು ಲೂಟಿ ಮಾಡಿ ಬೇರೆ ದೇಶಗಳಿಗೆ ಸಾಗಿಸಿ, ಅಲ್ಲಿ ಹೂಡಿಕೆ ಮಾಡುತ್ತಾರೆ. ಕಾಂಗ್ರಸ್ ಸರ್ಕಾರ ಭ್ರಷ್ಟ ಸರ್ಕಾರ ಎಂದು ಹೇಳಿದರು.

ವಾರ್ತಾ ಭಾರತಿ 20 Apr 2026 1:02 pm

ಟ್ವಿಟರ್ ನಲ್ಲಿ ಶೂರ, ಕೆಲಸದಲ್ಲಿ ಶೂನ್ಯ!: ಸಚಿವ ಪ್ರಿಯಾಂಕ್‌ ಖರ್ಗೆ ವಿರುದ್ಧ ವಿಪಕ್ಷ ನಾಯಕ ಆರ್.ಅಶೋಕ್‌ ವಾಗ್ದಾಳಿ

[…] The post ಟ್ವಿಟರ್ ನಲ್ಲಿ ಶೂರ, ಕೆಲಸದಲ್ಲಿ ಶೂನ್ಯ!: ಸಚಿವ ಪ್ರಿಯಾಂಕ್‌ ಖರ್ಗೆ ವಿರುದ್ಧ ವಿಪಕ್ಷ ನಾಯಕ ಆರ್.ಅಶೋಕ್‌ ವಾಗ್ದಾಳಿ first appeared on Vistara News .

ವಿಸ್ತಾರ ನ್ಯೂಸ್ 20 Apr 2026 1:00 pm

ಏರ್ ಇಂಡಿಯಾ, ಲೆನ್ಸ್‌ಕಾರ್ಟ್‌ನಿಂದ 'ಬಿಂದಿ, ಸಿಂಧೂರ' ಬ್ಯಾನ್ ! ಕಂಪನಿಗಳು ಹೇಳಿದ್ದೇನು?

ಜನಪ್ರಿಯ ಕನ್ನಡಕ ಮಾರಾಟ ಸಂಸ್ಥೆ ಲೆನ್ಸ್‌ಕಾರ್ಟ್ ತನ್ನ ಉದ್ಯೋಗಿಗಳಿಗೆ ಬಿಂದಿ (ಕುಂಕುಮ) ಧರಿಸುವುದನ್ನು ನಿಷೇಧಿಸಿದ ಸ್ಟೈಲ್ ಗೈಡ್‌ನಿಂದಾಗಿ ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಗುರಿಯಾದ ಬೆನ್ನಲ್ಲೇ, ಇದೀಗ ಪ್ರತಿಷ್ಠಿತ ವಿಮಾನಯಾನ ಸಂಸ್ಥೆ ಏರ್ ಇಂಡಿಯಾ ಕೂಡ ಇದೇ ರೀತಿಯ ಮಾರ್ಗಸೂಚಿಗಳನ್ನು ಹೊರಡಿಸಿ ವಿವಾದಕ್ಕೆ ಸಿಲುಕಿದೆ. ಏರ್ ಇಂಡಿಯಾದ ಕ್ಯಾಬಿನ್ ಸಿಬ್ಬಂದಿಗಾಗಿ ರೂಪಿಸಲಾದ ಆಂತರಿಕ ವೇಷಭೂಷಣ ಮತ್ತು ಅಲಂಕಾರ (ಗ್ರೂಮಿಂಗ್)

ಒನ್ ಇ೦ಡಿಯ 20 Apr 2026 12:58 pm

ಎನ್ಎ ಹ್ಯಾರಿಸ್ ಮೇಲೆ ಇಡಿ ದಾಳಿ: ‘ಬಿಟ್‌ಕಾಯಿನ್ ಹಗರಣದ ಬಿಜೆಪಿ ನಾಯಕರ ಮೇಲೆ ದಾಳಿ ಯಾಕಿಲ್ಲ?’ ಪ್ರಿಯಾಂಕ್ ಖರ್ಗೆ ನೇರ ಪ್ರಶ್ನೆ

ಎನ್ಎ ಹ್ಯಾರಿಸ್ ಹಾಗೂ ಮುಹಮ್ಮದ್ ನಲಪಾಡ್ ನಿವಾಸದ ಮೇಲೆ ಬಿಟ್ ಕಾಯಿನ್‌ಗೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳ ದಾಳಿಯ ಬೆನ್ನಲ್ಲೇ ರಾಜಕೀಯ ಚರ್ಚೆಗಳು ಶುರುವಾಗಿವೆ. ಬಿಟ್‌ಕಾಯಿನ್ ಹಗರಣದ ಬಿಜೆಪಿ ನಾಯಕರ ಮೇಲೆ ದಾಳಿ ಯಾಕಿಲ್ಲ? ಎಂದು ಸಚಿವ ಪ್ರಿಯಾಂಕ್ ಖರ್ಗೆ ನೇರವಾಗಿ ಪ್ರಶ್ನೆ ಮಾಡಿದ್ದಾರೆ. ಬಿಟ್ ಕಾಯಿನ್ ವಿಚಾರವಾಗಿ ಈ ಹಿಂದೆ ಪ್ರಿಯಾಂಕ್ ಖರ್ಗೆ ಅವರು ಬಿಜೆಪಿ ಸರ್ಕಾರದ ವಿರುದ್ಧ ಆರೋಪ ಮಾಡಿದ್ದರು. 2023ರ ವಿಧಾನಸಭೆ ಚುನಾವಣೆಯಲ್ಲೂ ಇದು ಚರ್ಚೆಗೆ ಗ್ರಾಸವಾಗಿತ್ತು.

ವಿಜಯ ಕರ್ನಾಟಕ 20 Apr 2026 12:44 pm

ಹುಬ್ಬಳ್ಳಿಯಲ್ಲಿ ಇಳಿಯಬೇಕಿದ್ದ ವಿಮಾನ ಬೆಂಗಳೂರಿನಲ್ಲಿ ತುರ್ತು ಲ್ಯಾಂಡಿಂಗ್ : ಪ್ರಯಾಣಿಕರಿಂದ ಆಕ್ರೋಶ

ನಾವು ಜೀವಂತವಾಗಿ ಉಳಿಯುತ್ತೇವೋ ಇಲ್ಲವೋ ಎಂದು ಭಯಗೊಂಡಿದ್ದೆವು : ಪ್ರಯಾಣಿಕ ಜಯಕುಮಾರ್

ವಾರ್ತಾ ಭಾರತಿ 20 Apr 2026 12:42 pm

SRH ಅಭಿಮಾನಿಯ ಬ್ಲ್ಯಾಕ್‌ ಮ್ಯಾಜಿಕ್‌ ವಿರುದ್ಧ CSK ದೂರು?; ಲಲಿತ್‌ ಮೋದಿ ಹೇಳಿದ ಫ್ರಾಂಚೈಸಿ ಮಾಲೀಕನೊಬ್ಬನ ʻನಿಂಬೆಹಣ್ಣುʼ ಕಥೆ!

ಐಪಿಎಲ್‌ ಪಂದ್ಯಾವಳಿಗಳಲ್ಲಿ ಬ್ಲ್ಯಾಕ್‌ ಮ್ಯಾಜಿಕ್‌ ನಡೆಯುತ್ತಾ? ಕಳೆದ ಶನಿವಾರ (ಏ.18) ನಡೆದ CSK vs SRH ಪಂದ್ಯದಲ್ಲಿ, SRH ಅಭಿಮಾನಿಯೋರ್ವನ ನಿಂಬೆಹಣ್ಣು ಮಂತ್ರ ಈಗ ಇಂತದ್ದೊಂದು ಪ್ರಶ್ನೆಯನ್ನು ಹುಟ್ಟುಹಾಕಿದೆ. ಆದರೆ ಐಪಿಎಲ್‌ ಮಾಜಿ ಚೇರ್‌ಮನ್‌ ಲಲಿತ್‌ ಮೋದಿ ಅವರು ಫ್ರಾಂಚೈಸಿ ಮಾಲೀಕರೊಬ್ಬರು ಎದುರಾಳಿ ತಂಡದ ಡ್ರೆಸ್ಸಿಂಗ್‌ ಕೋಣೆಯಲ್ಲಿ ನಿಂಬೆಹಣ್ಣು ಮಂತ್ರಿಸಿ ಇಡುತ್ತಿದ್ದರ ಬಗ್ಗೆ ತಮ್ಮ ಎಕ್ಸ್‌ ಪೋಸ್ಟ್‌ನಲ್ಲಿ ಉಲ್ಲೇಖ ಮಾಡಿದ್ದಾರೆ. ಇದು ಈಗ ಸೆನ್ಸೆಷನ್‌ ಸೃಷ್ಟಿಸಿದೆ. ಇಲ್ಲಿದೆ ಸಂಪೂರ್ಣ ಮಾಹಿತಿ.

ವಿಜಯ ಕರ್ನಾಟಕ 20 Apr 2026 12:41 pm

ಪ್ರಧಾನಿ ಮೋದಿಯವರು ಸಿಎಂ ಕಿವಿಯಲ್ಲಿ ಹೇಳಿದ ಗುಟ್ಟೇನು? ಮೈಸೂರಲ್ಲಿ ವಿಷಯ ಬಹಿರಂಗಪಡಿಸಿದ ಸಿಎಂ ಸಿದ್ದರಾಮಯ್ಯ

ಮಹಿಳಾ ಮೀಸಲಾತಿ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಮೈಸೂರಲ್ಲಿ ಮಾತನಾಡಿದ್ದು, ಪ್ರಧಾನಿ ಮೋದಿ ಭೇಟಿ ವೇಳೆಯ ವಿಚಾರವನ್ನು ಹೇಳಿದ್ದಾರೆ.

ವಿಜಯ ಕರ್ನಾಟಕ 20 Apr 2026 12:40 pm

ಪ್ರಧಾನಿ ಮೋದಿಯವರು ಸಿಎಂ ಕಿವಿಯಲ್ಲಿ ಹೇಳಿದ ಗುಟ್ಟೇನು? ಮೈಸೂರಲ್ಲಿ ವಿಷಯ ಬಹಿರಂಗಪಡಿಸಿದ ಸಿಎಂ ಸಿದ್ದರಾಮಯ್ಯ

ಮಹಿಳಾ ಮೀಸಲಾತಿ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಮೈಸೂರಲ್ಲಿ ಮಾತನಾಡಿದ್ದು, ಪ್ರಧಾನಿ ಮೋದಿ ಭೇಟಿ ವೇಳೆಯ ವಿಚಾರವನ್ನು ಹೇಳಿದ್ದಾರೆ.

ವಿಜಯ ಕರ್ನಾಟಕ 20 Apr 2026 12:40 pm

ಅಲ್ಪ ಮಟ್ಟಿಗೆ ಕುಸಿದ ಚಿನ್ನ; ಇಂದಿನ ದರವೆಷ್ಟು?

ಹಾರ್ಮುಝ್ ಜಲಸಂಧಿಯ ಸುತ್ತಲಿನ ಹೊಸ ಉದ್ವಿಗ್ನತೆಗಳು ತೈಲ ಬೆಲೆಗಳನ್ನು ಏರಿಸಿದ ಕಾರಣ ಹಣದುಬ್ಬರದ ಬಗ್ಗೆ ಆತಂಕಗಳು ಹೆಚ್ಚಾಗಿವೆ. ಅಮೆರಿಕ ಮತ್ತು ಇರಾನ್ ನಡುವಿನ ಸಂಭಾವ್ಯ ಶಾಂತಿ ಮಾತುಕತೆಯ ಆಶಾವಾದದ ನಡುವೆ ಚಿನ್ನದ ಬೆಲೆಗಳು ಅಲ್ಪ ಮಟ್ಟಿಗೆ ಏರಿದ್ದವು. ಆದರೆ ಶುಕ್ರವಾರ ಮಾರುಕಟ್ಟೆ ಮುಚ್ಚುವ ಕ್ಷಣದಲ್ಲಿ ಚಿನ್ನದ ಬೆಲೆಗಳು ಸ್ವಲ್ಪ ಕುಸಿದಿದ್ದವು. ನಂತರ ಶನಿವಾರ ಅಲ್ಪ ಮಟ್ಟಿಗೆ ಏರಿಕೆ ಕಂಡಿವೆ. ಆದರೆ ಸೋಮವಾರ ಮಾರುಕಟ್ಟೆ ದುರ್ಬಲವಾಗಿ ಪ್ರಾರಂಭವಾಯಿತು. ಅಮೆರಿಕ ಮತ್ತು ಇರಾನ್ ನಡುವೆ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಕದನ ವಿರಾಮದ ಆಶಾವಾದ ಕಡಿಮೆಯಾಗಿದೆ. ಹೀಗಾಗಿ ಡಾಲರ್ ಸೂಚ್ಯಂಕ ಬಲಗೊಂಡಿದೆ. ಅಮೆರಿಕನ್ ಡಾಲರ್ ಬಲವಾಗಿ ಪ್ರಾರಂಭವಾದ ಕಾರಣ ಚಿನ್ನ-ಬೆಳ್ಳಿಯ ಬೆಲೆ ಕುಸಿದಿವೆ. ಅದೇ ಸಮಯದಲ್ಲಿ ಹಾರ್ಮುಝ್ ಜಲಸಂಧಿಯ ಸುತ್ತಲಿನ ಹೊಸ ಉದ್ವಿಗ್ನತೆಗಳು ತೈಲ ಬೆಲೆಗಳನ್ನು ಏರಿಸಿದ ಕಾರಣ ಹಣದುಬ್ಬರದ ಬಗ್ಗೆ ಆತಂಕಗಳು ಹೆಚ್ಚಾಗಿವೆ. ಇವೆಲ್ಲವೂ ಚಿನ್ನದ ಬೆಲೆಗಳು ಕುಸಿತದಿಂದ ದಿನವನ್ನು ಪ್ರಾರಂಭಿಸಲು ಕಾರಣವಾಗಿವೆ. ಇಂದಿನ ಚಿನ್ನದ ದರ ಹೇಗಿದೆ? ಎಪ್ರಿಲ್ 20ರಂದು ಸೋಮವಾರ ಬೆಂಗಳೂರಿನ ಮಾರುಕಟ್ಟೆಗಳಲ್ಲಿ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ ಶನಿವಾರ ಸಂಜೆಯ ಬೆಲೆಗೆ ಹೋಲಿಸಿದರೆ ಪ್ರತಿ ಗ್ರಾಂಗೆ 49 ರೂ. ಕಡಿಮೆಯಾಗಿ ಹತ್ತು ಗ್ರಾಂ ಬೆಲೆ 1,55,290 ರೂ. ಗೆ ಬಂದು ನಿಂತಿದೆ. ಆಭರಣ ಚಿನ್ನವಾದ 22 ಕ್ಯಾರೆಟ್ ಬೆಲೆಯು ಪ್ರತಿ ಗ್ರಾಂಗೆ 45 ರೂ. ಕಡಿಮೆಯಾಗಿ ಹತ್ತು ಗ್ರಾಂಗೆ 1,42,350 ರೂ. ಗೆ ತಲುಪಿದೆ. 18 ಕ್ಯಾರೆಟ್ ಚಿನ್ನವು ಪ್ರತಿ ಗ್ರಾಂಗೆ 37 ರೂ. ಕುಸಿದು, ಹತ್ತು ಗ್ರಾಂಗೆ 1,16,470 ರೂ. ಗೆ ತಲುಪಿದೆ. ಮಂಗಳೂರಿನಲ್ಲಿ ಚಿನ್ನದ ದರವೆಷ್ಟಿದೆ? ಎಪ್ರಿಲ್ 20ರಂದು ಸೋಮವಾರ ಬೆಳಗಿನ 11 ಗಂಟೆಯ ವಹಿವಾಟಿನಲ್ಲಿ ಮಂಗಳೂರಿನಲ್ಲಿ ಚಿನ್ನದ ಬೆಲೆ ಮತ್ತೆ ಕಡಿಮೆಯಾಗಿದೆ. ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ದರ 15,529 (-49) ರೂ. ನಷ್ಟಿದೆ. ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ದರ 14,235 (-45) ರೂ. ಮತ್ತು ಒಂದು ಗ್ರಾಂ 18 ಕ್ಯಾರೆಟ್ ಚಿನ್ನದ ದರ 11,647 (-37) ರೂ. ಬೆಲೆಗೆ ತಲುಪಿದೆ. ಬೆಳ್ಳಿಯ ದರದಲ್ಲಿ ಸ್ಥಿರತೆ ಮಾರ್ಚ್ ಆರಂಭದಲ್ಲಿ ಹೆಚ್ಚು ಏರಿಳಿತ ಕಾಣದೆ ಸ್ಥಿರವಾಗಿದ್ದ ಬೆಳ್ಳಿಯ ದರ, ಮಾರ್ಚ್ 09ರ ನಂತರ ಸ್ವಲ್ಪ ಕುಸಿತದ ಹಾದಿಯಲ್ಲಿತ್ತು. ಏಪ್ರಿಲ್ ಆರಂಭದಲ್ಲಿ 2,50,000 ರೂ. ಗೆ ಬಂದು ತಲುಪಿದ ನಂತರ ಕಳೆದ ವಾರಾಂತ್ಯದಲ್ಲಿ ಪ್ರತಿ ಕೆಜಿಗೆ 2,60,000 ರೂ.ಗೆ ಸ್ಥಿರವಾಗಿ ನಿಂತಿತ್ತು. ಕಳೆದ ಶನಿವಾರ ಪ್ರತಿ ಗ್ರಾಂಗೆ 10 ರೂ. ಏರಿಕೆಯಾಗಿ ಪ್ರತಿ ಕೆಜಿಗೆ 2,75,000 ಕ್ಕೆ ಬಂದು ತಲುಪಿದೆ. ಇದೀಗ ಸೋಮವಾರವೂ ಅದೇ ದರದಲ್ಲಿ ಸ್ಥಿರವಾಗಿದೆ. ವಿವಿಧ ನಗರಗಳಲ್ಲಿ 1 ಗ್ರಾಮ್ ಚಿನ್ನದ ದರ (ಬೆಳಗಿನ ವಹಿವಾಟು) ಹೇಗಿದೆ? ದಿಲ್ಲಿ: 24 ಕ್ಯಾರೆಟ್ ಚಿನ್ನದ ದರ 15,544 (-49) ರೂ., 22 ಕ್ಯಾರೆಟ್ ಚಿನ್ನದ ದರ 14,250 (-45) ರೂ. ಮುಂಬೈ: 24 ಕ್ಯಾರೆಟ್ ಚಿನ್ನದ ದರ 15,529 (-49) ರೂ., 22 ಕ್ಯಾರೆಟ್ ಚಿನ್ನದ ದರ 14,235 (-45) ರೂ. ಅಹಮದಾಬಾದ್: 24 ಕ್ಯಾರೆಟ್ ಚಿನ್ನದ ದರ 15,534 (-49) ರೂ., 22 ಕ್ಯಾರೆಟ್ ಚಿನ್ನದ ದರ 14,240 (-45) ರೂ. ಚೆನ್ನೈ: 24 ಕ್ಯಾರೆಟ್ ಚಿನ್ನದ ದರ 15,600 (-66) ರೂ., 22 ಕ್ಯಾರೆಟ್ ಚಿನ್ನದ ದರ 14,300 (-60) ರೂ. ಕೋಲ್ಕತ್ತಾ: 24 ಕ್ಯಾರೆಟ್ ಚಿನ್ನದ ದರ 15,529 (-49) ರೂ., 22 ಕ್ಯಾರೆಟ್ ಚಿನ್ನದ ದರ 14,235 (-45) ರೂ. ಹೈದರಾಬಾದ್: 24 ಕ್ಯಾರೆಟ್ ಚಿನ್ನದ ದರ 15,529 (-49) ರೂ., 22 ಕ್ಯಾರೆಟ್ ಚಿನ್ನದ ದರ 14,235 (-45) ರೂ. ಜೈಪುರ: 24 ಕ್ಯಾರೆಟ್ ಚಿನ್ನದ ದರ 15,544 (-49) ರೂ., 22 ಕ್ಯಾರೆಟ್ ಚಿನ್ನದ ದರ 14,250 (-45) ರೂ. ಚಂಡೀಗಢ: 24 ಕ್ಯಾರೆಟ್ ಚಿನ್ನದ ದರ 15,544 (-49) ರೂ., 22 ಕ್ಯಾರೆಟ್ ಚಿನ್ನದ ದರ 14,250 (-45) ರೂ. ಲಕ್ನೋ: 24 ಕ್ಯಾರೆಟ್ ಚಿನ್ನದ ದರ 15,544 (-49) ರೂ., 22 ಕ್ಯಾರೆಟ್ ಚಿನ್ನದ ದರ 14,250 (-45) ರೂ.

ವಾರ್ತಾ ಭಾರತಿ 20 Apr 2026 12:31 pm

US-ಇರಾನ್ ನಡುವಿನ 2ನೇ ಸುತ್ತಿನ ಮಾತುಕತೆಗೆ ಇಸ್ಲಾಮಾಬಾದ್‌ ಸಜ್ಜು; ಈ ಬಾರಿಯಾದ್ರೂ ಸಂಧಾನ ಆಗುತ್ತಾ?

ಇಸ್ಲಾಮಾಬಾದ್‌ ನಲ್ಲಿ ಅಮೆರಿಕಾ-ಇರಾನ್‌ ನಡುವಿನ ಮೊದಲ ಸುತ್ತಿನ ಶಾಂತಿ ಮಾತುಕತೆಗಳು ವಿಫಲವಾದ ಬೆನ್ನಲ್ಲೆ, ಇದೀಗ ಮತ್ತೆ ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ಉಭಯದೇಶಗಳ ನಡುವೆ 2ನೇ ಸುತ್ತಿನ ಮಾತುಕತೆಗೆ ವೇದಿಕೆ ಸಿದ್ದವಾಗಿದ್ದು, ಈ ಕುರಿತು ಅಮೆರಿಕಾ ಅಧಿಕೃತವಾಗಿ ಹೇಳಿಕೆ ನೀಡಿದೆ. ಆದರೆ, ಇರಾನ್‌ ಈವರೆಗೂ ಈ ಕುರಿತು ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ, ಅಲ್ಲದೆ, ಈ ಮಾತುಕತೆಯಲ್ಲಿ ಇರಾನ್‌ ನಿಯೋಗ ಭಾಗಿಯಾಗುವ ಸಾಧ್ಯತೆಗಳ ಕುರಿತು ಇರಾನ್‌ ಮಾಧ್ಯಮಗಳು ಸಂಶಯ ವ್ಯಕ್ತಪಡಿಸಿವೆ. ಈ ಕುರಿತ ಮಾಹಿತಿ ಇಲ್ಲಿದೆ..

ವಿಜಯ ಕರ್ನಾಟಕ 20 Apr 2026 12:22 pm

3 ಮಸೂದೆಗೆ ಹಿನ್ನಡೆ : ಅಮಿತ್ ಶಾ ಸಭೆಯಲ್ಲಿ ಸ್ಟಾಲಿನ್-ಅಖಿಲೇಶ್ ಅಂದು ಒಪ್ಪಿಗೆ, ಇಂದು ವಿರೋಧ?

HD Kumaraswamy on Ammendment bill : ಲೋಕಸಭೆಯಲ್ಲಿ ಮೂರು ಮಸೂದೆಗಳ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಯಾವುದೇ ಗೊಂದಲಕ್ಕೆ ಅವಕಾಶವಿಲ್ಲದಂತೆ ಅಂಕಿ-ಅಂಶಗಳ ಸಮೇತ ಮನಮುಟ್ಟುವಂತೆ ಹೇಳಿದರು. ಹಾಗಿದ್ದರೂ ಕಾಂಗ್ರೆಸ್‌ ಪಕ್ಷವು ತನ್ನ ಪ್ರತಿಷ್ಠೆಗಾಗಿ ತಾನೂ ದಾರಿ ತಪ್ಪಿದ್ದಲ್ಲದೆ, ತನ್ನ ಮಿತ್ರಪಕ್ಷಗಳನ್ನು ಕೂಡ ದಿಕ್ಕುತಪ್ಪಿಸಿತು. ಈಗ ದಕ್ಷಿಣದ ರಾಜ್ಯಗಳಿಗೆ ಆಗುತ್ತಿರುವ ಅನ್ಯಾಯವನ್ನು ಯಾರು ಸರಿಪಡಿಸುತ್ತಾರೆ? ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ವಿಜಯ ಕರ್ನಾಟಕ 20 Apr 2026 12:22 pm

ಯುಎಇ ಮೂಲದ ಯಶ್ ರಾಜ್ ಪುಂಜಾಗಿದೆ ಕರ್ನಾಟಕದ ನಂಟು; ಇಲ್ಲಿದೆ ಆರ್‌ಆರ್‌ ಸೇರಿದ ಹೊಸ ಪ್ರತಿಭೆಯ ರೋಚಕ ಕಥೆ

Yash Raj Punja:ಐಪಿಎಲ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವು ಮೊದಲಿನಿಂದಲೂ ಹೊಸ ಪ್ರತಿಭೆಗಳನ್ನು ಹುಡುಕಿ ಹೊರತರುವಲ್ಲಿ ಹೆಸರುವಾಸಿಯಾಗಿದೆ. ಆ ಪಟ್ಟಿಗೆ ಈಗ ಸೇರ್ಪಡೆಯಾಗಿರುವ ಹೊಸ ಹೆಸರು ಯಶ್ ರಾಜ್ ಪುಂಜಾ. ಮೂಲತಃ ಅಬುಧಾಬಿಯವರಾದ ಇವರಿಗೆ ಕರ್ನಾಟಕದ ನಂಟಿದೆ. ಹಾಗಾದ್ರೆ ಈ ಆಟಗಾರನ ಬಗ್ಗೆ ಕೆಲವು ಆಸಕ್ತಿದಾಯಕ ವಿಷಯಗಳನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ಐಪಿಎಲ್‌ 2026ರ ಮಿನಿ ಹರಾಜಿನ ವೇಳೆ

ಒನ್ ಇ೦ಡಿಯ 20 Apr 2026 12:19 pm

Ramangar Bus Tragedy: ಹೆದ್ದಾರಿಯಲ್ಲಿ ಬಸ್ ಅಪಘಾತ, 15 ಸಾವು, 20 ಮಂದಿಗೆ ಗಾಯ

Ramanagar Highway Tradegy: ಭಾರತ ಅಕ್ರಮಿತ ಜಮ್ಮು ಮತ್ತು ಕಾಶ್ಮೀರ ವ್ಯಾಪ್ತಿಯ ಉಧಂಪುರ ಜಿಲ್ಲೆಯಲ್ಲಿ ಧಾರುಣ ಘಟನೆಯೊಂದು ನಡೆದಿದೆ. ಇಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಪ್ರಯಾಣಿಕರು ತುಂಬಿದ್ದ ಬಸ್ ಉರುಳಿಬಿದ್ದ ಪರಿಣಾಮ ಸುಮಾರು 15 ಮಂದಿ ಮೃತಪಟ್ಟಿದ್ದಾರೆ. 20 ಮಂದಿಗೆ ಗಾಯಗಳಾಗಿವೆ ಎಂದು ವರದಿ ಆಗಿದೆ. ಹೆದ್ದಾರಿ ರಸ್ತೆಯು ತಿರುವುಗಳಿಂದ ಕೂಡಿದ್ದು, ಬಸ್ ಚಾಲಕನ ನಿಯಂತ್ರಣ ತಪ್ಪಿ

ಒನ್ ಇ೦ಡಿಯ 20 Apr 2026 12:18 pm

ಪಕ್ಷಾಂತರ ತಡೆ ಕಾಯ್ದೆ ಮೌಲ್ಯಮಾಪನ; ಒಡಿಶಾದಲ್ಲಿ ಸ್ಪೀಕರ್‌ಗಳ ಮಹತ್ವದ ಸಭೆ: ಯು.ಟಿ. ಖಾದರ್

ಮಂಗಳೂರು, ಎ.20: ಪಕ್ಷಾಂತರ ನಿಷೇಧ ತಿದ್ದುಪಡಿ ಕಾಯ್ದೆಯ ಮೌಲ್ಯಮಾಪನ ಹಾಗೂ ಬಲವರ್ಧನೆಗೆ ಸಂಬಂಧಿಸಿದಂತೆ ಲೋಕಸಭಾ ಸ್ಪೀಕರ್ ಮೂಲಕ ನೇಮಕಗೊಂಡ 5 ರಾಜ್ಯಗಳ ವಿಧಾನಸಭಾ ಅಧ್ಯಕ್ಷರ ಸಮಿತಿ ಸಭೆ ಒಡಿಶಾದ ಭುವನೇಶ್ವರದಲ್ಲಿ ಎ.22, 23ರಂದು ನಡೆಯಲಿದೆ ಎಂದು ಕರ್ನಾಟಕ ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಈ ಹಿಂದೆ ಮುಂಬಯಿಯಲ್ಲಿ ಒಂದು ಸಭೆ ನಡೆದಿತ್ತು. ಇದೀಗ ಎರಡನೇ ಸಭೆ ಒಡಿಶಾದಲ್ಲಿ ನಡೆಯಲಿದೆ. ಈ ಸಭೆಯಲ್ಲಿ ಒಡಿಶಾ, ಸಿಕ್ಕಿಂ, ಮಹಾರಾಷ್ಟ್ರ, ನಾಗಾಲ್ಯಾಂಡ್, ಕರ್ನಾಟಕ ಸೇರಿದಂತೆ 5 ರಾಜ್ಯಗಳ ಸ್ಪೀಕರ್‌ಗಳು ಭಾಗವಹಿಸಲಿದ್ದಾರೆ. ಒಂದು ವರ್ಷದ ಒಳಗೆ ಈ ಸಮಿತಿ ಲೋಕಸಭಾ ಅಧ್ಯಕ್ಷರಿಗೆ ವರದಿ ನೀಡಬೇಕಾಗಿದೆ ಎಂದು ಯು.ಟಿ. ಖಾದರ್ ತಿಳಿಸಿದ್ದಾರೆ. ಶಾಸಕ ವಿನಯ ಕುಲಕರ್ಣಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿದ್ದರೂ, ಅಧಿಕೃತ ಸೂಚನೆ ಬಂದ ಬಳಿಕ ಅವರ ವಿಧಾನಸಭಾ ಅಧಿಕಾರದ ಬಗ್ಗೆ ತೀರ್ಮಾನಿಸಲಾಗುವುದು ಎಂದು ಯು.ಟಿ. ಖಾದರ್ ತಿಳಿಸಿದ್ದಾರೆ. ಲೋಕಸಭೆಯಲ್ಲಿ ಸಂವಿಧಾನ ತಿದ್ದುಪಡಿ ಮಸೂದೆ ಬಹುಮತವಿಲ್ಲದೆ ಬಿದ್ದುಹೋದ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಯು.ಟಿ. ಖಾದರ್ ಮಾತನಾಡುತ್ತಾ, ಸಂವಿಧಾನಬದ್ಧ ತೀರ್ಮಾನಗಳು ಹಾಗೂ ಚರ್ಚೆಗಳ ಮೂಲಕ ಯಾವುದೇ ಪ್ರದೇಶದ ಜನರು, ಸಮುದಾಯಗಳಿಗೆ ಅನ್ಯಾಯವಾಗಬಾರದು ಎನ್ನುವುದು ಮುಖ್ಯ ಎಂದು ಹೇಳಿದರು.

ವಾರ್ತಾ ಭಾರತಿ 20 Apr 2026 12:08 pm

ಶಾಸಕ ಎನ್.ಎ.ಹಾರಿಸ್ ಅವರ ನಿವಾಸದ ಮೇಲೆ ಈಡಿ ದಾಳಿ

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹಾಗೂ ಶಾಸಕ ಎನ್.ಎ.ಹಾರಿಸ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ (ಈಡಿ) ಅಧಿಕಾರಿಗಳು ಸೋಮವಾರ ಬೆಳಿಗ್ಗೆ ದಾಳಿ ನಡೆಸಿದ್ದಾರೆ. ನಗರದ ವಿವಿಧ ಸ್ಥಳಗಳನ್ನು ಸೇರಿ ಹಲವು ಕಡೆಗಳಲ್ಲಿ ಈಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಇದಲ್ಲದೆ, ಹ್ಯಾರಿಸ್ ಅವರ ಪುತ್ರ ಮುಹಮ್ಮದ್ ನಲಪಾಡ್ ಅವರ ಮನೆಯ ಮೇಲೂ ಈಡಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ದಾಳಿಗೆ ಸ್ಪಷ್ಟ ಕಾರಣವೇನು ಎಂಬುದು ಇನ್ನೂ ಅಧಿಕೃತವಾಗಿ ಬಹಿರಂಗವಾಗಿಲ್ಲ.

ವಾರ್ತಾ ಭಾರತಿ 20 Apr 2026 12:03 pm