2019ರ ಲೋಕಸಭಾ ಚುನಾವಣೆ : ಯಾವ ಕ್ಷೇತ್ರದಲ್ಲಿ ಎಷ್ಟು ಮತದಾನವಾಗಿತ್ತು?
2019 Election Voter Turnout : 2019ರ ಲೋಕಸಭಾ ಚುನಾವಣೆಯಲ್ಲೂ ಎರಡು ಹಂತದ ಚುನಾವಣೆ ನಡೆದಿತ್ತು. ಮೊದಲ ಮತ್ತು ಎರಡನೇ ಹಂತದಲ್ಲಿ ತಲಾ ಹದಿನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಬೆಂಗಳೂರು ನಗರ ಭಾಗದ ಕ್ಷೇತ್ರದಲ್ಲಿ ಮತದಾನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿರಲಿಲ್ಲ.
ರಾಜ್ಯದ ಜನರ ತೆರಿಗೆ ಹಣಕ್ಕಾದ ದ್ರೋಹವನ್ನು ಸಮರ್ಥಿಸಿದ ಜೋಶಿಯನ್ನು ಸೋಲಿಸಲೇಬೇಕು : ಸಿಎಂ ಸಿದ್ದರಾಮಯ್ಯ
ಶಿಗ್ಗಾಂವಿ : ರಾಜ್ಯದ ಜನರ ತೆರಿಗೆ ಹಣಕ್ಕೆ ಕೇಂದ್ರದಿಂದ ಆದ ದ್ರೋಹವನ್ನು ಸಮರ್ಥಿಸಿದ ಪ್ರಹ್ಲಾದ್ ಜೋಶಿಯನ್ನು ಈ ಬಾರಿ ಸೋಲಿಸಲೇಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರೆ ನೀಡಿದರು. ಹುಬ್ಬಳ್ಳಿ ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನೋದ್ ಹಸೂಟಿ ಪರವಾಗಿ ಪ್ರಜಾಧ್ವನಿ-2 ಯಾತ್ರೆಯನ್ನು ಉದ್ಘಾಟಿಸಿ ಮಾತನಾಡಿದರು. ನರೇಂದ್ರ ಮೋದಿಯವರು ರಾಜ್ಯಕ್ಕೆ ಮಾಡಿದ ಅನ್ಯಾಯವನ್ನು 10 ವರ್ಷಗಳಲ್ಲಿ ಪ್ರಹ್ಲಾದ್ ಜೋಶಿಯವರು ಒಂದೇ ಒಂದು ದಿನವೂ ಪ್ರಶ್ನಿಸಿಲ್ಲ. ರಾಜ್ಯಕ್ಕೆ 15 ನೇ ಹಣಕಾಸು ಆಯೋಗದಲ್ಲೂ ವಂಚನೆ ಆಯಿತು. ಬರಗಾಲ ಬಂದಾಗಲೂ ಅನುದಾನ ಕೊಡದ ಕೇಂದ್ರ ಸರ್ಕಾರವನ್ನು ಪ್ರಶ್ನಿಸದ, ರಾಜ್ಯದ ಜನರ ಪರವಾಗಿ ನೆಪಕ್ಕೂ ಮಾತನಾಡದ ಪ್ರಹ್ಲಾದ್ ಜೋಶಿಯಿಂದ ನಿಮ್ಮ ಮತಕ್ಕೆ ಗೌರವ ಬಂದಿದೆಯೇ? ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದರು. ರಾಜ್ಯದಲ್ಲಿ ಇಷ್ಟು ಭೀಕರ ಬರಗಾಲ ಇದ್ದರೂ ಕೇಂದ್ರ ಸರ್ಕಾರ ಕರ್ನಾಟಕ ರಾಜ್ಯದ ಪಾಲಿನ ಒಂದೇ ಒಂದು ರೂಪಾಯಿ ಬರ ಪರಿಹಾರವನ್ನು ಬಿಡುಗಡೆ ಮಾಡಲಿಲ್ಲ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ರಾಜ್ಯವನ್ನು ಪ್ರತಿನಿಧಿಸಿದ್ದರೂ ಪ್ರಯೋಜನ ಆಗಲಿಲ್ಲ. ಹೀಗಾಗಿ ಇವರನ್ನು ಸೋಲಿಸಿ ಮನೆಗೆ ಕಳುಹಿಸಿದರೆ ಮಾತ್ರ ನಿಮ್ಮ ಮತಕ್ಕೆ ಗೌರವ ಬರುತ್ತದೆ ಎಂದರು. ಯುವ ಸಜ್ಜನ, ಹೃದಯವಂತ ಮತ್ತು ಸಮಾಜದ ಬಗ್ಗೆ ಕಾಳಜಿ ಇರುವ ಜಾತ್ಯತೀತ ವ್ಯಕ್ತಿತ್ವದ ವಿನೋದ್ ಅಸೂಟಿಯವರು ಈ ಬಾರಿ ಗೆದ್ದೇ ಗೆಲ್ಲುತ್ತಾರೆ. ಇವರ ಗೆಲುವಿಗೆ ನಿಮ್ಮೆಲ್ಲರ ಆಶೀರ್ವಾದ ಇರಲಿ ಎಂದು ಕರೆ ನೀಡಿದರು. ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ , ಮಾಜಿ ಸಚಿವ ವಿನಯ್ ಕುಲಕರ್ಣಿ, ಲೋಕಸಭಾ ಅಭ್ಯರ್ಥಿ ವಿನೋದ್ ಅಸೂಟಿ ಸೇರಿ ಜಿಲ್ಲೆಯ ಶಾಸಕರುಗಳು ಉಪಸ್ಥಿತರಿದ್ದರು.
ಮನೆಯ ಸುತ್ತಮುತ್ತ ಅನಾಮಧೇಯರು ಓಡಾಡಿಕೊಂಡಿದ್ದಾರೆ: ನೇಹಾ ತಂದೆ ನಿರಂಜನ ಹಿರೇಮಠ್ ಆರೋಪ
ನೇಹಾ ಹಿರೇಮಠ ಕೊಲೆ ಪ್ರಕರಣವನ್ನು ಕೈಗೆತ್ತಿಕೊಂಡಿರುವ ಸಿಐಡಿ ಪೊಲೀಸರು ಇದೀಗ ತನಿಖೆ ಚುರುಕುಗೊಳಿಸಿದ್ದಾರೆ. ಹಂತಕ ಫಯಾಜ್ ನನ್ನು ಬುಧವಾರ ನಗರದ ಬಿವಿಬಿ ಕಾಲೇಜಿಗೆ ಕರೆತಂದ ಸಿಐಡಿ ಅಧಿಕಾರಿಗಳ ತಂಡ ವಿಚಾರಣೆ ನಡೆಸಿದ್ದರು. ಗುರುವಾರ ಸಿಐಡಿ ಪೊಲೀಸ್ ವರಿಷ್ಠಾಧಿಕಾರಿ ವೆಂಕಟೇಶ ನೇತೃತ್ವದಲ್ಲಿ ತನಿಖಾ ತಂಡ ಮೃತಪಟ್ಟ ನೇಹಾ ಹಿರೇಮಠ ನಿವಾಸಕ್ಕೆ ಆಗಮಿಸಿ ಮಹತ್ತರ ಮಾಹಿತಿ ಕಲೆ ಹಾಕಿದೆ. ಏತನ್ಮಧ್ಯೆ ಕೊಲೆಯಾದ ನೇಹಾ ಅವರ ತಂದೆ ನಿರಂಜನ್ ಅವರು ಕೆಲ ಅನಾಮಧೇಯರು ಮನೆ ಸುತ್ತಮುತ್ತ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಹಾಸನ | ಆಟೋ ಮೇಲೆ ಕಾಡಾನೆಗಳ ದಾಳಿ ; ಇಬ್ಬರು ಪ್ರಾಣಾಪಾಯದಿಂದ ಪಾರು
ಅರೇಹಳ್ಳಿ : ಬೆಳ್ಳಂಬೆಳಗ್ಗೆ ಕಾಡಾನೆಗಳ ಹಿಂಡು ದಾಳಿ ಮಾಡಿದ ಪರಿಣಾಮ ಆಟೋ ರಿಕ್ಷಾವೊಂದು ಜಖಂ ಗೊಂಡು ಚಾಲಕ ಹಾಗೂ ಪ್ರಯಾಣಿಕ ಮಹಿಳೆ ಗಾಯಗೊಂಡ ಘಟನೆ ಬೇಲೂರು ತಾಲೂಕಿನ ಅರೇಹಳ್ಳಿ ಹೋಬಳಿಯ ಗುಜ್ಜನಹಳ್ಳಿ ತಿರುವಿನ ಮಿಷನ್ ಕಾಡಿನ ಬಳಿ ನಡೆದಿರುವುದಾಗಿ ವರದಿಯಾಗಿದೆ. ಆಟೋ ಚಾಲಕ ಮೋಹನ್ ಅವರು ಪ್ರಯಾಣಿಕರೊಬ್ಬರನ್ನು ಕೂರಿಸಿಕೊಂಡು ಗುಜ್ಜನಹಳ್ಳಿ ಗ್ರಾಮದಿಂದ ಅರೇಹಳ್ಳಿಗೆ ಬರುವಂತಹ ಸಂದರ್ಭದಲ್ಲಿ 5 ಕಾಡಾನೆಗಳು ಮಿಷನ್ ಕಾಡಿನ ತಿರುವಿನ ಬಳಿ ಅಡ್ಡಬಂದಿವೆ ಎನ್ನಲಾಗಿದೆ. ಈ ವೇಳೆ 2 ಕಾಡಾನೆಗಳು ಚಲಿಸುತ್ತಿದ್ದ ಆಟೋ ಮೇಲೆ ದಾಳಿ ಮಾಡಲು ಮುಂದಾದಾಗ ಚಾಲಕ ಆಟೋ ಬಿಟ್ಟು ದೂರ ಹೋಗಿದ್ದಾರೆ. ಪ್ರಯಾಣಿಕ ಮಹಿಳೆ ಮಾತ್ರ ಆಟದಲ್ಲಿ ಕುಳಿತು ಅರಚಾಡಲು ಪ್ರಾರಂಭಿಸಿದ್ದಾರೆ. ಇದರಿಂದ ಸಿಟ್ಟಿಗೆದ್ದ ಕಾಡಾನೆಗಳು ಆಟೋವನ್ನು ರಸ್ತೆಯಿಂದ ತಳ್ಳಿಕೊಂಡು ಚರಂಡಿ ಬಳಿ ಬಿಟ್ಟ ಪರಿಣಾಮ ಆಟೋ ಮುಂಭಾಗ ಜಖಂ ಆಗಿದೆ ಎಂದು ತಿಳಿದು ಬಂದಿದೆ. ಆಟೋದಲ್ಲಿ ಕಿರುಚಾಡುತ್ತಿದ್ದ ಒಂಟಿ ಮಹಿಳೆಯನ್ನು ಪಾರುಮಾಡಲು ತಾವೂ ಕೂಡ ಜೋರಾಗಿ ಕಿರುಚಿದ್ದರಿಂದ ಆನೆಗಳು ಅಲ್ಲಿಂದ ತೆರಳಿವೆ. ಘಟನೆಯಲ್ಲಿ ಶಿವಾನಿಯವರಗೆ ಗಾಯಗಳಾಗಿದ್ದು, ಇಂತಹ ಪ್ರಕರಣಗಳು ನಿರಂತರವಾಗಿ ಸಂಭವಿಸುತ್ತಿರುವುದರಿಂದ ಇಲಾಖೆ ವಿರುದ್ಧ ಸಾರ್ವಜನಿಕರು ಆಕ್ರೋಶ ಹೊರಹಾಕಿ ಬಡ ಆಟೋ ಚಾಲಕ ಮೋಹನ್ ಅವರಿಗೆ ಇಲಾಖೆ ಪರಿಹಾರ ನೀಡಬೇಕೆಂದು ಆಗ್ರಹಿಸಿದ್ದಾರೆ.
ಸುಳ್ಯ: ಜೀಪ್-ಬೈಕ್ ಢಿಕ್ಕಿ; ಸವಾರ ಮೃತ್ಯು
ಸುಳ್ಯ: ಜೀಪು ಮತ್ತು ಬೈಕ್ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಮೃತಪಟ್ಟಿರುವ ಘಟನೆ ಅಜ್ಜಾವರದಲ್ಲಿ ನಡೆದಿದೆ. ಮೃತ ಬೈಕ್ ಸವಾರನನ್ನು ಅಜ್ಜಾವರ ಪಡ್ಡಂಬೈಲು ಕೆಎಫ್ ಡಿಸಿ ಉದ್ಯೋಗಿ ವಿನಾಯಕ ಮೂರ್ತಿ( 52) ಎಂದು ಗುರುತಿಸಲಾಗಿದೆ. ವಿನಾಯಕ ಮೂರ್ತಿ ಹಾಗೂ ಪತ್ನಿ ಮಂಜುಳಾ ಕೆಲಸ ಮುಗಿಸಿ ಮನೆಗೆ ವಾಪಾಸ್ಸಾಗುತ್ತಿರುವಾಗ ಘಟನೆ ನಡೆದಿದೆ ಎನ್ನಲಾಗಿದೆ. ತಕ್ಷಣವೇ ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಲಾಗಿದ್ದರೂ ಗಂಭೀರವಾಗಿ ಗಾಯಗೊಂಡಿದ್ದ ವಿನಾಯಕ ಮೂರ್ತಿ ಮೃತಪಟ್ಟಿದ್ದಾರೆ. ಮಂಜುಳ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಸ್ಥಳಾಂತರಿಸಿರುವುದಾಗಿ ತಿಳಿದುಬಂದಿದೆ. ಮೃತರು ಪತ್ನಿ ಒಬ್ಬ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸುಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕರ್ನಾಟಕದ ಮೊದಲ ಹಂತದ ಚುನಾವಣೆಯಲ್ಲಿ ಗಮನಿಸಲೇಬೇಕಾದ 5 ಅಂಶಗಳು ಇವೇ ನೋಡಿ!
5 Interesting Takeaways In Karnataka Elections : ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಯ ಮತದಾನ ಶುಕ್ರವಾರ ನಡೆಯುತ್ತಿದೆ. 14 ಲೋಕಸಭಾ ಕ್ಷೇತ್ರಗಳಲ್ಲಿ ಶುಕ್ರವಾರ ಮತದಾರರು ತಮ್ಮ ಹಕ್ಕನ್ನು ಚಲಾಯಿಸುತ್ತಿದ್ದಾರೆ. ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡು ಕಾಂಗ್ರೆಸ್ ಅನ್ನು ಎದುರಿಸುತ್ತಿವೆ. ಮೊದಲ ಹಂತದ ಚುನಾವಣೆಯಲ್ಲಿ ಹಲವು ರೋಚಕ ಸಂಗತಿಗಳು ಇದ್ದು, ಅವುಗಳಲ್ಲಿ ಟಾಪ್ 5 ರೋಚಕ ಅಥವಾ ಗಮನಿಸಬೇಕಾದ ಅಂಶಗಳನ್ನು ಇಲ್ಲಿ ನೋಡಬಹುದು.
ಹಾಸನದಲ್ಲಿ ಬಿಜೆಪಿಯ ಕೆಲ ಮುಖಂಡರು, ಮಂಡ್ಯದಲ್ಲಿ ಸುಮಲತಾ ನಮಗೆ ಸಹಕರಿಸುತ್ತಿಲ್ಲ : ಎಚ್.ಡಿ.ದೇವೇಗೌಡ
ಹಾಸನ: ಹಾಸನದಲ್ಲಿ ಕೆಲವು ಬಿಜೆಪಿ ಮುಖಂಡರು ಮತ್ತು ಮಂಡ್ಯದಲ್ಲಿ ಸುಮಲತಾ ಅವರು ನಮಗೆ ಸಹಕಾರ ನೀಡುತ್ತಿಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಬೇಸರ ವ್ಯಕ್ತಪಡಿಸಿದ್ದಾರೆ. ನಗರದ ಹೊರವಲಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದ ಸಂಪತ್ತನ್ನು ಹಂಚುತ್ತೇವೆ ಎಂದು ಕಾಂಗ್ರೆಸ್ನವರು ಜಗಳವಾಡುತ್ತಿದ್ದಾರೆ. ಕಾಂಗ್ರೆಸ್ ಗೆ ಅಧಿಕಾರಕ್ಕೆ ಬರಲು ಶಕ್ತಿಯೇ ಇಲ್ಲ. ಆದರೆ ಮನಸ್ಸಿಗೆ ಬಂದಂತೆ ಮಾತನಾಡುತ್ತಾರೆ ಎಂದು ಟೀಕಿಸಿದರು. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಅವರು ಹಣದ ಹೊಳೆಯನ್ನು ಹರಿಸುತ್ತಿದ್ದಾರೆ. ಆದರೂ ಡಾ.ಮಂಜುನಾಥ್ ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಹುಡಾ ಮಾಜಿ ಅಧ್ಯಕ್ಷ ಕೆ.ಎಂ.ರಾಜೇಗೌಡ, ಮಾಜಿ ಶಾಸಕ ಬಿ.ವಿ.ಕರೀಗೌಡ, ಒಕ್ಕಲಿಗರ ಸಂಘದ ರಾಜ್ಯ ನಿರ್ದೇಶಕ ಸುಮುಖ ರಘು, ಪೂರ್ಣಚಂದ್ರ ತೇಜಸ್ವಿ, ಇತರರು ಉಪಸ್ಥಿತರಿದ್ದರು.
ಈ ಹಿಂದಿಗಿಂತ ಈಗ ಭಾರತ ಹೆಚ್ಚು ಧ್ರುವೀಕರಣಗೊಂಡಿದೆ: ನಟಿ ವಿದ್ಯಾ ಬಾಲನ್
ಮುಂಬೈ: “ಭಾರತವು ಹೆಚ್ಚು ಧ್ರುವೀಕರಣಗೊಂಡಿದೆ ಎಂದು ನನಗೆ ಅನಿಸುತ್ತದೆ. ಒಂದು ದೇಶವಾಗಿ ನಮಗೆ ಈ ಹಿಂದೆ ಧಾರ್ಮಿಕ ಅಸ್ಮಿತೆ ಇರಲಿಲ್ಲ, ಆದರೆ ಈಗ ನನಗೇಕೆ ತಿಳಿದಿಲ್ಲ… ರಾಜಕೀಯ ಮಾತ್ರವಲ್ಲ, ಸಾಮಾಜಿಕ ಜಾಲತಾಣದಲ್ಲಿಯೂ ನಾವು ಕಳೆದು ಹೋಗಿ ಅಸ್ಮಿತೆಗಾಗಿ ಹುಡುಕುತ್ತಿದ್ದೇವೆ,” ಎಂದು ನಟಿ ವಿದ್ಯಾ ಬಾಲನ್ ಹೇಳಿದ್ದಾರೆ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು ಈ ಧ್ರುವೀಕರಣದಲ್ಲಿ ಸಾಮಾಜಿಕ ಜಾಲತಾಣಗಳ ಪಾತ್ರವೂ ಇದೆ ಎಂದಿದ್ದಾರೆ, ಅಷ್ಟೇ ಅಲ್ಲದೆ “ಇದರಿಂದ ನಾವು ಹಿಂದೆಂದಿಗಿಂತಲೂ ಒಂಟಿಯಾಗಿದ್ದೇವೆ ಎಂದರು. ಇವತ್ತು ಜಗತ್ತೇ ಧ್ರುವೀಕರಣಗೊಂಡಿದೆ, ಇದು ಒಂದು ದೇಶದ ವಿಚಾರವಲ್ಲ,” ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ. “ಯಾರಾದರೂ ಧಾರ್ಮಿಕ ಕಟ್ಟಡ ನಿರ್ಮಿಸಲು ದೇಣಿಗೆ ಕೋರಿದರೆ ನಾನು ನೀಡುವುದಿಲ್ಲ, ಆಸ್ಪತ್ರೆ, ಶಾಲೆ ಅಥವಾ ಶೌಚಾಲಯ ನಿರ್ಮಾಣಕ್ಕೆ ನಾನು ಖುಷಿಯಿಂದ ದೇಣಿಗೆ ನೀಡುವೆ ಎಂದು ಹೇಳುತ್ತೇನೆ,” ಎಂದು ವಿದ್ಯಾ ಹೇಳಿದರು. “ನನಗೆ ರಾಜಕೀಯದ ಬಗ್ಗೆ ತುಂಬಾ ಭಯವಿದೆ, ಅವರು ನಮ್ಮನ್ನು ನಿಷೇಧಿಸಬಹುದು ಅಥವಾ ಕಪ್ಪು ಪಟ್ಟಿಗೆ ಸೇರಿಸಬಹುದು,” ಎಂದು ಅವರು ಹೇಳಿದರು.
Fact Check: ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಮುಸ್ಲಿಮರಿಗೆ ಹಲವು ಸವಲತ್ತು? ಬಿಜೆಪಿ ವಾದ ಸತ್ಯವೇ?
Fact Check On Congress Manifesto: ಕಾಂಗ್ರೆಸ್ ಪಕ್ಷ ಪ್ರಣಾಳಿಕೆ ಪ್ರಕಟ ಮಾಡಿದ್ದೇ ತಡ, ಬಿಜೆಪಿ ಈ ಕುರಿತಾಗಿ ಹಲವು ರೀತಿಯ ಆಕ್ಷೇಪ ಎತ್ತಿತ್ತು. ಮುಸ್ಲಿಮರಿಗೆ ಅನುಕೂಲ ಮಾಡಿಕೊಡುವ ರೀತಿಯಲ್ಲಿ ಹಲವು ಯೋಜನೆಗಳನ್ನ, ನೀತಿಗಳನ್ನ ಕಾಂಗ್ರೆಸ್ ಪ್ರಕಟ ಮಾಡಿದೆ ಎಂದು ಬಿಜೆಪಿ ಆಪಾದನೆ ಮಾಡಿತ್ತು. ಈ ಪೈಕಿ ಕರ್ನಾಟಕ ಬಿಜೆಪಿ 6 ಅಂಶಗಳ ಪಟ್ಟಿಯನ್ನೇ ಕೊಟ್ಟಿತ್ತು. ಈ ಆರೂ ಅಂಶಗಳ ಕುರಿತಾಗಿ ಸಮಗ್ರವಾಗಿ ಸತ್ಯಾಂಶ ಹುಡುಕುವ ಯತ್ನ ಮಾಡಲಾಗಿದ್ದು, ಈ ಕುರಿತ ವಿವರ ಇಲ್ಲಿದೆ.
ಸ್ಯಾಮ್ ಪಿತ್ರೊಡಾ ಅವರ ಹೇಳಿಕೆ ವೈಯಕ್ತಿಕ, ಅದಕ್ಕೂ ಕಾಂಗ್ರೆಸ್ ಪಕ್ಷಕ್ಕೂ ಸಂಬಂಧವಿಲ್ಲ : ಡಿ.ಕೆ.ಶಿವಕುಮಾರ್
ಬೆಂಗಳೂರು : ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಡೆತ್ ಟ್ಯಾಕ್ಸ್ ಹಾಕಲ್ಲ, ಬರ್ತ್ ಟ್ಯಾಕ್ಸ್ ಹಾಕಲ್ಲ. ಸ್ಯಾಮ್ ಪಿತ್ರೊಡಾ ಅವರ ಹೇಳಿಕೆ ವೈಯಕ್ತಿಕ, ಅದಕ್ಕೂ ಕಾಂಗ್ರೆಸ್ ಪಕ್ಷಕ್ಕೂ ಸಂಬಂಧವಿಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದ್ದಾರೆ. ಸದಾಶಿವನಗರ ನಿವಾಸದಲ್ಲಿ ಗುರುವಾರ ಮಾಧ್ಯಮಗಳ ಜತೆ ಶಿವಕುಮಾರ್ ಅವರು ಮಾತನಾಡಿದರು. ಈ ವೇಳೆ ಪಿತ್ರಾರ್ಜಿತ ಆಸ್ತಿಯಲ್ಲಿ ಶೇ.50 ಸರ್ಕಾರ ಪಡೆಯಬೇಕು ಎಂಬ ಪಿತ್ರೊಡಾ ಅವರ ಹೇಳಿಕೆ ಬಗ್ಗೆ ಕೇಳಿದಾಗ, ಇದು ಭಾರತ. ಈ ಬಗ್ಗೆ ಜೈರಾಮ್ ರಮೇಶ್ ಅವರು ನಮ್ಮ ಪಕ್ಷದ ಪರವಾಗಿ ಸ್ಪಷ್ಟನೆ ನೀಡಿದ್ದಾರೆ. ಯಾವುದೇ ಡೆತ್ ಟ್ಯಾಕ್ಸ್, ಬರ್ತ್ ಟ್ಯಾಕ್ಸ್ ಇಲ್ಲ. ಈ ದೇಶದ ಪರಂಪರೆ, ಪದ್ಧತಿ ಮುಂದುವರಿಯಲಿದೆ. ಯಾವುದೂ ಕೂಡ ನಮ್ಮ ಪಕ್ಷದಲ್ಲಿ ತೀರ್ಮಾನ ಆಗಿಲ್ಲ. ನಮ್ಮ ದೇಶದಲ್ಲಿ ರಾಜಕಾರಣದಲ್ಲಿ ತಂದೆ ಹಾಗು ಪೂರ್ವಜರ ಹೆಸರಿನಲ್ಲಿ ಚುನಾವಣೆ ಮಾಡುತ್ತಿರುವಾಗ ಅವರ ಆಸ್ತಿ ವರ್ಗಾವಣೆಗೆ ಅವಕಾಶ ನೀಡುತ್ತಾರೆಯೇ?. ನಮ್ಮ ಪ್ರನಾಳಿಕೆಯಲ್ಲಿರುವ ಅಂಶಗಳು ಮಾತ್ರ ಪಕ್ಷದ ನಿಲುವು. ಅದರಿಂದಾಚೆಗಿನ ಅಂಶಗಳಿಗೆ ಪಕ್ಷಕ್ಕೆ ಸಂಬಂಧವಿಲ್ಲ ಎಂದರು. ಸೋಲಿನ ಅರಿವಾಗಿ ಕಾಂಗ್ರೆಸ್ ವಿರುದ್ಧ ಪ್ರಧಾನಿ ಸುಳ್ಳಿನ ಟೀಕೆ: ಪ್ರಧಾನಮಂತ್ರಿಗಳು ದೇಶದೆಲ್ಲೆಡೆ ಪ್ರಚಾರ ಮಾಡುತ್ತಾ ಕರ್ನಾಟಕ ಹಾಗೂ ಕಾಂಗ್ರೆಸ್ ಪಕ್ಷದ ಬಗ್ಗೆ ದಾಳಿ ಮಾಡುತ್ತಿರುವ ಬಗ್ಗೆ ಕೇಳಿದಾಗ, ಪ್ರಧಾನಮಂತ್ರಿಗಳು ಹತಾಶೆಯ ಹೇಳಿಕೆ ನೀಡುತ್ತಿದ್ದಾರೆ. ತಮಿಳುನಾಡು, ಕೇರಳ, ಆಂಧ್ರ ಪ್ರದೇಶ ಹಾಗೂ ತೆಲಂಗಾಣದಲ್ಲಿ ಅವರ ಪಕ್ಷದ ನೆಲೆ ಇಲ್ಲ. ಹೀಗಾಗಿ ಆಂಧ್ರದಲ್ಲಿ ಟಿಡಿಪಿ ಜತೆ ಮೈತ್ರಿ ಮಾಡಿಕೊಂಡಿದ್ದಾರೆ. ಕರ್ನಾಟಕದಲ್ಲಿ ಅವರ ಸರ್ಕಾರ ಇಲ್ಲ. ಕರ್ನಾಟಕದಲ್ಲೂ ಅವರು ಎರಡಂಕಿ ಸ್ಥಾನ ಪಡೆಯಲ್ಲ. ಹೀಗಾಗಿ ಹತಾಶೆಯಿಂದ ಮಂಗಳಸೂತ್ರದ ಬಗ್ಗೆ ಮಾತನಾಡುತ್ತಿದ್ದಾರೆ. ಮೋದಿ ಅವರು ಪ್ರಧಾನಿ ಆದಾಗ 2,800 ರೂಪಾಯಿ ಇದ್ದ ಒಂದು ಗ್ರಾಂ ಚಿನ್ನ ಈಗ 7,500 ಆಗಿದೆ. ನಮ್ಮ ಮಹಿಳೆಯರು ಮಂಗಳಸೂತ್ರ ಹಾಕಲಾಗದಂತೆ ಬಿಜೆಪಿಯವರು ಬೆಲೆ ಏರಿಕೆ ಮಾಡಿದ್ದಾರೆ. ಈ ವಿಚಾರವಾಗಿ ನಾನು ನಮ್ಮ ಪಕ್ಷಕ್ಕೆ ಒಂದು ಸಲಹೆ ನೀಡುತ್ತಿದ್ದೇನೆ. ನಮ್ಮ ದೇಶ, ಧರ್ಮ ಕಾಪಾಡಿಕೊಳ್ಳಬೇಕು ಎಂದು ಹೇಳಿದರು. ಪ್ರಿಯಾಂಕ ಗಾಂಧಿ ಅವರು ಬೆಂಗಳೂರಿನಲ್ಲಿ ನನ್ನ ತಾಯಿ ದೇಶಕ್ಕಾಗಿ ತನ್ನ ಮಾಂಗಲ್ಯಸೂತ್ರ ತ್ಯಾಗ ಮಾಡಿದ್ದಾರೆ ಎಂದು ನೋವಿನಿಂದ ಹೇಳಿದ್ದಾರೆ. ಇದನ್ನು ಮೋದಿ ಅವರು ಅರಿತುಕೊಳ್ಳಬೇಕು. ಅವರ ಸ್ಥಾನದ ಬಗ್ಗೆ ನಮಗೆ ಗೌರವವಿದೆ. ಜನ ಅವರಿಗೆ ಹತ್ತು ವರ್ಷಗಳ ಕಾಲ ಅವಕಾಶ ಮಾಡಿಕೊಟ್ಟಿದ್ದಾರೆ. ಜನ ಕೊಟ್ಟಿರುವ ಗೌರವವನ್ನು ಕಾಪಾಡಿಕೊಳ್ಳಬೇಕು. ಈ ರೀತಿ ದೇಶಕ್ಕೆ ಅಪಮಾನ ಮಾಡಬಾರದು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಎರಡಂಕಿ ಸ್ಥಾನ ಪಡೆಯಲಿದೆ. ಹೀಗಾಗಿ ಬಿಜೆಪಿ ಅವರು ಸುಳ್ಳಿನ ಕಾರ್ಖಾನೆ ಮೂಲಕ ಅಪಪ್ರಚಾರ ಮಾಡುತ್ತಿದ್ದಾರೆ. ಅವರಿಗೆ ನಮ್ಮ ಪ್ರಣಾಳಿಕೆ ಬಗ್ಗೆ ಗೊತ್ತಿಲ್ಲ. ಎಂದು ತಿಳಿಸಿದರು. ಮೊದಲ ಹಂತದ ಚುನಾವಣೆ ನಂತರ ಇಂತಹ ಹೇಳಿಕೆಗಳು ಹೆಚ್ಚಾಗಿರುವ ಬಗ್ಗೆ ಕೇಳಿದಾಗ, ತಮಿಳುನಾಡಿನ ನಮ್ಮ ಸ್ನೇಹಿತರು ನನ್ನ ಭೇಟಿಗೆ ಬಂದಿದ್ದರು. 40ಕ್ಕೆ 40 ಸೀಟು ಕಾಂಗ್ರೆಸ್ ಬೆಂಬಲಿತ ಮೈತ್ರಿಗೆ ಸಿಗಲಿದೆ. ಕೇರಳದಲ್ಲೂ ಇದೇ ವಾತಾವರಣ ಇದೆ ಎಂದು ತಿಳಿಸಿದರು. ಕಾಂಗ್ರೆಸ್ ನಾಯಕರ ಮೇಲೆ ಮಾತ್ರ ಐಟಿ ದಾಳಿ: ಐಟಿ ಅಧಿಕಾರಿಗಳು ಕೇವಲ ಕಾಂಗ್ರೆಸ್ ನಾಯಕರನ್ನು ಗುರಿಯಾಗಿಸಿ ದಾಳಿ ಮಾಡುತ್ತಿದ್ದು, ನಮ್ಮ ನಾಯಕರನ್ನು ಹೆದರಿಸುತ್ತಿದ್ದಾರೆ. ಅವರ ಬಳಿ ಸಿಕ್ಕ ಹಣ ಕಾಂಗ್ರೆಸ್ ಪಕ್ಷ ಹಾಗು ಡಿ.ಕೆ. ಶಿವಕುಮಾರ್ ಅವರ ಹಣ ಎಂದು ಹೇಳಲು ಒತ್ತಾಯ ಮಾಡುತ್ತಿದ್ದಾರೆ. ಇಡೀ ದಿನ ಅವರನ್ನು ಕೂರಿಸಿಕೊಂಡು ಆ ನಾಯಕರು ಚುನಾವಣೆ ಮಾಡದಂತೆ ತಡೆಯುತ್ತಿದ್ದಾರೆ. ಅವರು ಬಿಜೆಪಿಯ ಯಾವುದಾದರೂ ಒಬ್ಬ ನಾಯಕರ ಮನೆಗೆ ಹೋಗಿದ್ದಾರಾ? ಬಿಜೆಪಿ ದುಡ್ಡು ಹಂಚುತ್ತಿರುವುದು ಗೊತ್ತಿಲ್ಲವೆ? ಆದರೂ ಬಿಜೆಪಿ ಏಜೆಂಟರಂತೆ ಕೆಲಸ ಮಾಡುತ್ತಿದ್ದಾರೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಹೆಚ್ಚಿನ ದಾಳಿ ಮಾಡಲಾಗುತ್ತಿದೆ ಎಂದು ತಿಳಿಸಿದರು. ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ: ನಾಳೆ ರಾಜ್ಯದಲ್ಲಿ ಮೊದಲ ಹಂತದ ಚುನಾವಣೆ ನಡೆಯುತ್ತಿದ್ದು, ಕಾಂಗ್ರೆಸ್ ಪಕ್ಷ ನುಡಿದಂತೆ ನಡೆದಿದೆ. ಮುಂದೆಯೂ ಪ್ರತಿಯೊಬ್ಬರ ಬದುಕು ಬದಲಾವಣೆ ತರಲು ಕೆಲಸ ಮಾಡಲಿದೆ. ನಮ್ಮ ಕಾಂಗ್ರೆಸ್ ಪಕ್ಷ ಮಹಾಲಕ್ಷ್ಮಿ ಯೋಜನೆ ಮೂಲಕ ಮಹಿಳೆಯರಿಗೆ ವಾರ್ಷಿಕ 1 ಲಕ್ಷ, 25 ಲಕ್ಷ ವರೆಗೂ ಆರೋಗ್ಯ ವಿಮೆ, ನಿರುದ್ಯೋಗಿಗಳಿಗೆ ವಾರ್ಷಿಕ 1 ಲಕ್ಷ ಶಿಷ್ಯ ವೇತನ, ನಗರದಲ್ಲಿ ಉದ್ಯೋಗ ಖಾತ್ರಿ ಯೋಜನೆ ಜಾರಿ ಮಾಡುತ್ತೇವೆ. ಮತದಾರರು ಈ ಭರವಸೆಗಳ ಬಗ್ಗೆ ಆಲೋಚಿಸಿ ಬೆಂಬಲ ನೀಡಬೇಕು. ಬಿಜೆಪಿ ಸರ್ಕಾರ ನುಡಿದಂತೆ ನಡೆದಿಲ್ಲ. ರಾಜ್ಯಕ್ಕೆ ಖಾಲಿ ಚೊಂಬು ಕೊಟ್ಟಿದ್ದಾರೆ. ಜನರೂ ಇದನ್ನು ಅರ್ಥ ಮಾಡಿಕೊಂಡಿದ್ದಾರೆ ಎಂದು ಮತದಾರರಲ್ಲಿ ಮನವಿ ಮಾಡಿದರು.
Electric Bike: ಸಿಂಗಲ್ ಚಾರ್ಜ್ ಗೆ 220Km ಮೈಲೇಜ್ ಕೊಡುತ್ತೆ ಈ ಬೈಕ್! ಭಾರತದಲ್ಲಿ ಕಡಿಮೆ ಬೆಲೆಗೆ
ಈ MX Moto M16 ಎಲೆಕ್ಟ್ರಿಕ್ ಬೈಕಿನ (MX Moto M16 Electric Bike) ಬೆಲೆ 1.98 ಲಕ್ಷ ರೂಪಾಯಿಗಳ ಎಕ್ಸ್ ಶೋರೂಮ್ ಆಗಿದೆ. ಹೆಚ್ಚುತ್ತಿರುವ ಪೆಟ್ರೋಲ್ ಬೆಲೆ ಹಾಗೂ ಪರಿಸರ ಮಾಲಿನ್ಯದ ಕಾರಣದಿಂದಾಗಿ ನೀವು ಎಲೆಕ್ಟ್ರಿಕ್ ಬೈಕ್ ಅನ್ನು ಖರೀದಿ ಮಾಡಬೇಕು ಎನ್ನುವಂತಹ ಆಸೆ ಇದ್ರೆ ಇದು ಹೇಳಿ ಮಾಡಿಸಿದ ಎಲೆಕ್ಟ್ರಿಕ್ ಬೈಕ್ ಆಗಿದೆ. The post Electric Bike: ಸಿಂಗಲ್ ಚಾರ್ಜ್ ಗೆ 220Km ಮೈಲೇಜ್ ಕೊಡುತ್ತೆ ಈ ಬೈಕ್! ಭಾರತದಲ್ಲಿ ಕಡಿಮೆ ಬೆಲೆಗೆ appeared first on Karnataka Times .
ಪ್ರಜಾಪ್ರಭುತ್ವದ ಉಳಿವಿಗಾಗಿ, ಸಂವಿಧಾನದ ರಕ್ಷಣೆಗಾಗಿ ಕಾಂಗ್ರೆಸ್ ಗೆ ಮತ ನೀಡಿ: ಅಬ್ದುರ್ರಹ್ಮಾನ್ ಕೋಡಿಜಾಲ್
ಮಂಗಳೂರು: ದೇಶ ಪ್ರಜಾಪ್ರಭುತ್ವದ ಉಳಿವಿಗಾಗಿ, ಸಂವಿಧಾನದ ರಕ್ಷಣೆಗಾಗಿ ಮತ್ತು ದೇಶದ ಸಮಗ್ರ ಅಭಿವೃದ್ಧಿಗಾಗಿ ಪ್ರತಿಯೊಬ್ಬ ಪ್ರಜ್ಞಾವಂತ ಮತದಾರ ತಮ್ಮ ಅಮೂಲ್ಯವಾದ ಮತವನ್ನು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ನೀಡಿ ಗೆಲ್ಲಿಸಬೇಕೆಂದು ಕರ್ನಾಟಕ ರಾಜ್ಯ ವಕ್ಫ್ ಪರಿಷತ್ ಸದಸ್ಯರಾದ ಅಬ್ದುರ್ರಹ್ಮಾನ್ ಕೋಡಿಜಾಲ್ ಮನವಿ ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರಕಾರ ನುಡಿದಂತೆ ನಡೆದಿದೆ. ರಾಜ್ಯ ಸರಕಾರ ಪಂಚ ಗ್ಯಾರಂಟಿಗಳನ್ನು ನೀಡುವ ಮೂಲಕ ಪ್ರತಿಯೊಬ್ಬ ಬಡವನಿಗೆ, ಮಹಿಳೆಗೆ, ಯುವಕರಿಗೆ ಬಹಳಷ್ಟು ಸಹಾಯ ಮಾಡಿರುತ್ತದೆ. ಕೇಂದ್ರದಲ್ಲಿ ಕೂಡ ಕಾಂಗ್ರೆಸ್ ನೇತೃತ್ವದ ಸರಕಾರ ಅಧಿಕಾರ ಬಂದರೆ ದೇಶದ ಜನತೆಗೆ ಪಂಚ ಗ್ಯಾರಂಟಿಗಳನ್ನು ನೀಡುವುದಾಗಿ ಘೋಷಣೆ ಮಾಡಿರುತ್ತದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ದೇಶದ ಜನತೆಗೆ ಯಾವುದೇ ಸಹಾಯ ಮಾಡದೆ ಬರೀ ಸುಳ್ಳು ಭರವಸೆಗಳನ್ನು ಮಾತ್ರ ನೀಡಿರುತ್ತದೆ. ಕೇವಲ ಶ್ರೀಮಂತರಿಗೆ ಮತ್ತು ಬಂಡವಾಳ ಶಾಹಿಗಳಿಗೆ ಮಾತ್ರ ಸಹಾಯ ಮಾಡಿದೆ. ಸ್ವತಂತ್ರ ಭಾರತದ ಇತಿಹಾಸದಲ್ಲಿ ಮೊದಲ ಭಾರಿಗೆ ಪ್ರಧಾನಿಯೊಬ್ಬ ದ್ವೇಷ ಭಾಷಣ ಮಾಡುವ ಮೂಲಕ ಜನಾಂಗೀಯ ದ್ವೇಷವನ್ನು ಹರಡಲು ಪ್ರಧಾನಿ ನರೇಂದ್ರ ಮೋದಿ ಕಾರಣರಾಗಿರುತ್ತಾರೆ. ಇದು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯಾಗಿರುತ್ತದೆ. ಚುನಾವಣಾ ಬಾಂಡ್ ಮತ್ತು ಪ್ರಧಾನ ಮಂತ್ರಿ ಪರಿಹಾರ ಫಂಡ್ ಗಳ ಮೂಲಕ ಬಹಳ ದೊಡ್ಡ ಹಗರಣವನ್ನು ಕೂಡ ಬಿಜೆಪಿ ಸರಕಾರ ಮಾಡಿರುತ್ತದೆ ಎಂದು ಅವರು ಆರೋಪಿಸಿದ್ದಾರೆ. ದಕ್ಷಿಣ ಕನ್ನಡದಿಂದ ಕಾಂಗ್ರೆಸ್ ಅಭ್ಯರ್ಥಿಯಾದ ಪದ್ಮರಾಜ್ ಆರ್ ಪೂಜಾರಿ ಓರ್ವ ಯುವ ನ್ಯಾಯವಾದಿ, ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವಾದರ್ಶಗಳನ್ನು ಮೈಗೂಡಿಸಿಕೊಂಡು ಕೆಲಸ ಮಾಡುವ ಸರ್ವ ಜನಾಂಗದ ಪ್ರೀತಿಗೆ ಪಾತ್ರರಾದ ಅಭ್ಯರ್ಥಿಯಾಗಿರುತ್ತಾರೆ. ದಕ್ಷಿಣ ಕನ್ನಡದ ಪ್ರತಿಯೊಬ್ಬ ಪ್ರಜ್ಞಾವಂತ ಮತದಾರರು ಕೂಡ ಕಾಂಗ್ರೆಸ್ ಪಕ್ಷದ ಹಸ್ತದ ಗುರುತಿಗೆ ಮತ ನೀಡುವ ಮೂಲಕ ಪದ್ಮರಾಜ್ ಆರ್ ಪೂಜಾರಿಯನ್ನು ಪ್ರಚಂಡ ಬಹುಮತದಿಂದ ಗೆಲ್ಲಿಸಬೇಕೆಂದು ಅವರು ಮತದಾರರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ನೇಹಾ ಹೀರೆಮಠ ಕೊಲೆ ಪ್ರಕರಣ ಆರೋಪಿಗೆ ಕಠಿಣ ಶಿಕ್ಷೆ ನೀಡಲು ಸಿಐಡಿ ತನಿಖೆ ಚುರುಕು: ಸಿಎಂ ಸಿದ್ದರಾಮಯ್ಯ
ಬೀದರ್: ಹುಬ್ಬಳಿಯ ನೇಹಾ ಹೀರೆಮಠ ಕೊಲೆ ಪ್ರಕರಣವನ್ನು ಸರ್ಕಾರ ತೀವ್ರವಾಗಿ ಖಂಡಿಸುತ್ತದೆ ಹಾಗೂ ಆರೋಪಿಗೆ ಘೋರ ಶಿಕ್ಷೆ ವಿಧಿಸಲು ಸಿಐಡಿ ತನಿಖೆ ಚುರುಕುಗೊಳಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಅವರು ಗುರುವಾರ ಬೀದರ್ ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ಬಿಜೆಪಿ ಒತ್ತಾಯ ಮಾಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ಬಿಜೆಪಿ ತನ್ನ ಅಧಿಕಾರದ ಅವಧಿಯಲ್ಲಿ ಯಾವುದಾದರೂ ಪ್ರಕರಣವನ್ನು ಸಿಬಿಐ ವಹಿಸಿದೆಯೇ? ಎಂದು ಪ್ರಶ್ನಿಸಿದರು. ನಾನು ಹಿಂದೆ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಪ್ರಕರಣಗಳನ್ನು ಸಿಬಿಐ ಗೆ ವಹಿಸಿದ್ದೇನೆ. ಅವರಿಗೆ ಕೇಳಲು ಯಾವ ನೈತಿಕ ಹಕ್ಕಿದೆ ? ಇದರಲ್ಲಿ ರಾಜಕೀಯ ಮಾಡಬಾರದು. ನೇಹಾ ಹತ್ಯೆ ಆರೋಪಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಸರ್ಕಾರಿ ಅಭಿಯೋಜಕರೊಂದಿಗೆ ಮಾತನಾಡಿದ್ದು, ಸರ್ಕಾರ ಈಗಾಗಲೇ ಆರೋಪಿಯನ್ನು ಬಂಧಿಸಿದೆ., ಸಿಐಡಿ ತನಿಖೆ ನಡೆದಿದ್ದು ಆರೋಪಪಟ್ಟಿಯನ್ನು ತಯಾರಿಸಲಿದೆ ಎಂದರು. ನೇಹಾ ಹತ್ಯೆ ಪ್ರಕರಣದಲ್ಲಿ ರಾಜಕೀಯ ಬೇಡ ನೇಹಾ ತಂದೆಯವರು ತಮ್ಮ ಮಗಳ ಕೊಲೆ ಪ್ರಕರಣದಲ್ಲಿ ಕಾಂಗ್ರೆಸ್ ಪಕ್ಷವೇ ರಾಜಕೀಯ ಮಾಡುತ್ತಿದೆ ಹಾಗೂ ಬಿಜೆಪಿಯವರ ಇದೇ ಧೋರಣೆಯನ್ನು ಹೊಂದಿರುವ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ, ನೇಹಾ ಕೊಲೆ ಅನ್ಯಾಯವಾದುದು. ಅದನ್ನು ನಾವು ಖಂಡಿಸಿದ್ದೇವೆ. ಇತರೆ ಪಕ್ಷಗಳು ಅದನ್ನು ರಾಜಕೀಯವಾಗಿ ಬಳಸಿಕೊಳ್ಳಬಾರದು. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಕೊಡಿಸುವ ಪ್ರಮಾಣಿಕ ಪ್ರಯತ್ನವನ್ನು ಸರ್ಕಾರ ಮಾಡುತ್ತಿದೆ ಎಂದರು. ಮೋದಿ ನೀಡಿದ ಭರವಸೆ ಈಡೇರಿಸಿಲ್ಲ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಜನರ ಆಸ್ತಿ ಕಸಿದುಕೊಂಡು ಸಂಪತ್ತು ಹಂಚುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರು ಟೀಕಿಸುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಮೋದಿಯವರು ನೀಡಿರುವ ಭರವಸೆಗಳನ್ನು ಈಡೇರಿಸಿಲ್ಲ. ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂ. , 2 ಕೋಟಿ ಉದ್ಯೋಗ ಸೃಷ್ಟಿ, ರೈತರ ಆದಾಯ ದ್ವಿಗುಣಗೊಳಿಸುವ ಭರವಸೆಗಳನ್ನು ಈಡೇರಿಸಿದರೇ ? ಅಗತ್ಯ ವಸ್ತುಗಳ ಬೆಲೆಯನ್ನು ಮೋದಿಯವರು ಕಡಿಮೆ ಮಾಡಿದ್ದಾರೆಯೇ ಎಂದು ಸಿಎಂ ಪ್ರಶ್ನಿಸಿದರು. ಮುಸ್ಲಿಮರಿಗೆ 4% ಮೀಸಲಾತಿ ಮುಂದುವರೆದಿದೆ ಕಾಂಗ್ರೆಸ್ ಪಕ್ಷ ಎಸ್ ಸಿ ಎಸ್ ಟಿಗೆ ನೀಡಲಾಗಿರುವ ಮೀಸಲಾತಿಯನ್ನು ಮುಸ್ಲಿಂ ಸಮುದಾಯಕ್ಕೆ ನೀಡಲಿದೆ ಎಂದು ಮೋದಿಯವರು ಹೇಳಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಚಿನ್ನಪ್ಪ ರೆಡ್ಡಿ ಆಯೋಗದ ಶಿಫಾರಸ್ಸಿನಂತೆ ಮುಸ್ಲಿಂ ಸಮುದಾಯಕ್ಕೆ ಶೇಕಡಾ 4 ರಷ್ಟು ಮೀಸಲಾತಿ 1994 ರಿಂದ ಜಾರಿಗೆ ಬಂದಿತ್ತು. ಹಿಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಆಡಳಿತದ ಕಾಲದಲ್ಲಿ ಈ ಮೀಸಲಾತಿಯನ್ನು ಹಿಂಪಡೆದಿದ್ದಕ್ಕೆ ಈ ವರ್ಗ ಸುಪ್ರಿಂ ಕೋರ್ಟ್ ನ ಮೊರೆ ಹೋಗಿದ್ದು. ಆ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ನ ಮುಂದೆ 4% ಮೀಸಲಾತಿಯನ್ನು ಮುಂದುವರೆಸುವುದಾಗಿ ನ್ಯಾಯಾಲಯಕ್ಕೆ ಮುಚ್ಚಳಿಕೆ ಬರೆದುಕೊಟ್ಟಿದ್ದು, ಈ ಮೀಸಲಾತಿಯೇ ಈಗಲೂ ಮುಂದುವರೆಯುತ್ತಿದೆ ಎಂದು ಸಿಎಂ ಮಾಹಿತಿ ನೀಡಿದರು.
ನೀನು ದೇವರ ಮಗು, ಗೆಲ್ಲುತ್ತೀಯ : ಬಿಜೆಪಿ ಅಭ್ಯರ್ಥಿಗೆ ಜನಾರ್ಧನ ಪೂಜಾರಿ ಆಶೀರ್ವಾದ !
Janardhana Poojary Wishing BJP Candidate : ಕರಾವಳಿ ಭಾಗದ ವರ್ಚಸ್ವೀ ಹಿರಿಯ ನಾಯಕ, ಕಾಂಗ್ರೆಸ್ ಮುಖಂಡ ಜನಾರ್ಧನ ಪೂಜಾರಿಯವರು ಬಿಜೆಪಿ ಅಭ್ಯರ್ಥಿ ಕ್ಯಾ. ಬ್ರಿಜೇಶ್ ಚೌಟ ಅವರಿಗೆ ಶುಭ ಕೋರಿದ್ದಾರೆ. ಗೆದ್ದು ಬರುತ್ತೀಯಾ ಎಂದು ಹಾರೈಸಿದ್ದಾರೆ, ಇನ್ನೊಂದು ಕಡೆ ಪೂಜಾರಿಯವರು ಕಾಂಗ್ರೆಸ್ ಅಭ್ಯರ್ಥಿ ಪರ ಮತಯಾಚಿಸಿದ್ದಾರೆ.
DK Shivakumar On Sam Pitroda Statement : ಲೋಕಸಭಾ ಚುನಾವಣಾ ಕಣದಲ್ಲಿ ಸಂಪತ್ತಿನ ಮರುಹಂಚಿಕೆ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ. ಇದರ ನಡುವೆ ಸ್ಯಾಮ್ ಪಿತ್ರೋಡಾ ಹೇಳಿಕೆ ಕಾಂಗ್ರೆಸ್ ಮೇಲೆ ಪರಿಣಾಮ ಬೀರುತ್ತಿದೆ. ಈ ಹಿನ್ನೆಲೆ ಅದರಿಂದ ಕಾಂಗ್ರೆಸ್ ಅಂತರ ಕಾಯ್ದುಕೊಂಡಿದೆ. ಬೆಂಗಳೂರಿನಲ್ಲಿ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ಸ್ಯಾಮ್ ಪಿತ್ರೊಡಾ ಹೇಳಿಕೆಗೂ ಕಾಂಗ್ರೆಸ್ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ. ಅದರ ಬಗ್ಗೆ ಪಕ್ಷದಲ್ಲಿ ಚರ್ಚೆಯಾಗಿಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬರ್ತ್ ಟ್ಯಾಕ್ಸೂ ಇಲ್ಲ, ಡೆತ್ ಟ್ಯಾಕ್ಸೂ ಇಲ್ಲ ಎಂದು ಹೇಳಿದ್ದಾರೆ. ಅದಲ್ಲದೇ ಮೋದಿ ವಿರುದ್ಧ ಕೂಡ ಕಿಡಿಕಾರಿದರು.
ನೀತಿ ಸಂಹಿತೆ ಉಲ್ಲಂಘನೆ: ಬಿಜೆಪಿ, ಕಾಂಗ್ರೆಸ್ಗೆ ಚುನಾವಣಾ ಆಯೋಗದ ನೋಟಿಸ್
ಹೊಸದಿಲ್ಲಿ: ಮಾದರಿ ನೀತಿ ಸಂಹಿತೆ ಉಲ್ಲಂಘನೆಗಳಿಗಾಗಿ ಚುನಾವಣಾ ಆಯೋಗ ಇಂದು ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಕ್ಕೆ ನೋಟಿಸ್ ಜಾರಿಗೊಳಿಸಿದೆ. ಪ್ರಧಾನಿ ಮೋದಿ ದ್ವೇಷದ ಭಾಷಣ ನೀಡಿದ್ದಾರೆಂದು ಕಾಂಗ್ರೆಸ್ ದೂರಿದ್ದರೆ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ವಿಭಜನಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆಂದು ಬಿಜೆಪಿ ದೂರಿತ್ತು. ಎಪ್ರಿಲ್ 29, ಸೋಮವಾರ ಬೆಳಿಗ್ಗೆ 11 ಗಂಟೆಯೊಳಗಾಗಿ ಬಿಜೆಪಿ ಅಧ್ಯಕ್ಷ ಜೆ ಪಿ ನಡ್ಡಾ ಮತ್ತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯೆ ನೀಡಬೇಕೆಂದು ಆಯೋಗ ಸೂಚನೆ ನೀಡಿದೆ.
ಕರ್ನಾಟಕ ಸರ್ಕಾರ ಪತನಕ್ಕೆ ಬಿಜೆಪಿ ಪ್ರಯತ್ನ, ಆದರೆ ಅದು ಅಸಾಧ್ಯ! ಡಿಕೆ ಶಿವಕುಮಾರ್
ಬೆಂಗಳೂರು: ರಾಜ್ಯ ಸರ್ಕಾರವನ್ನು ಪತನಗೊಳಿಸಲು ಬಿಜೆಪಿ ಪ್ರಯತ್ನ ನಡೆಸುತ್ತಿದೆ. ಆದರೆ ಅದು ಅಸಾಧ್ಯ ಎಂದು ಡಿಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದರು. ಬೆಂಗಳೂರಿನ ಸದಾಶಿವನಗರ ನಿವಾಸದಲ್ಲಿ ಗುರುವಾರ ಮಾತನಾಡಿದ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿ ಹತಾಶೆಯಿಂದ ಹೇಳಿಕೆಗಳು ಕೊಡುತ್ತಿದ್ದಾರೆ. ತಮಿಳುನಾಡು, ಆಂದ್ರ, ಕೇರಳದಲ್ಲಿ ಬಿಜೆಪಿ ಪಕ್ಷಕ್ಕೆ ನೆಲೆ ಇಲ್ಲ. ಕರ್ನಾಟಕದಲ್ಲಿ ಮಾತ್ರ ಅವರ ಸರ್ಕಾರ ಇತ್ತು, ಆದರೆ ಅದು ಕಳೆದ ಚುನಾವಣೆಯಲ್ಲಿ ಸೋತಿದೆ ಎಂದರು. ಸರ್ಕಾರ ಪತನಕ್ಕೆ ಪ್ರಯತ್ನ ಆದರೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಪತನ ಮಾಡಿ ಮತ್ತೆ ಬಿಜೆಪಿ ಸರ್ಕಾರ ರಚನೆ ಮಾಡುವ ಪ್ರಯತ್ನ ನಡೆಸುತ್ತಿದೆ. ಆದರೆ ಅದು ಸಾಧ್ಯವಿಲ್ಲ ಎಂದು ಇದೇ ಸಂದರ್ಭದಲ್ಲಿ ಡಿಕೆ ಶಿವಕುಮಾರ್ ಹೇಳಿದರು.ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಡಬಲ್ ಅಂಕೆ ದಾಟುವುದಿಲ್ಲ. ಕಾಂಗ್ರೆಸ್ ಆಡಳಿತಕ್ಕೆ ಬಂದರೆ ಮಂಗಳಸೂತ್ರ ಹಾಕಲು ಇಲ್ಲದ ಹಾಗೆ ಮಾಡುತ್ತಾರೆ ಎಂದು ಪ್ರಧಾನಿ ಮೋದಿ ಆಡಿದ್ದಾರೆ. ಆದರೆ ಇದಕ್ಕೆ ಉತ್ತರವಾಗಿ, ಪ್ರಿಯಾಂಕಾ ಗಾಂಧಿ, ದೇಶದ ಐಕ್ಯತೆಗಾಗಿ ನನ್ನ ತಾಯಿ ಮಂಗಳ ಸೂತ್ರ ಕಳೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ ಎಂದು ತಿರುಗೇಟು ನೀಡಿದರು. ಐಟಿ ದುರ್ಬಳಕೆ ಬಿಜೆಪಿ ಸರ್ಕಾರ ಐಟಿ ಇಲಾಖೆಯನ್ನು ಬಳಕೆ ಮಾಡಿಕೊಂಡು ಕಾಂಗ್ರೆಸ್ ವಿರುದ್ಧ ದಾಳಿ ಮಾಡಿಸುತ್ತಿದ್ದಾರೆ ಎಂದು ಇದೇ ಸಂದರ್ಭದಲ್ಲಿ ಡಿಕೆಶಿ ಆರೋಪ ಮಾಡಿದರು. ಕಾಂಗ್ರೆಸ್ನವರು ರಾಜ್ಯದಲ್ಲಿ ಚುನಾವಣೆಯನ್ನ ಮಾಡಬಾರದು ಎಂಬ ಉದ್ದೇಶದಿಂದ ಈ ರೀತಿ ಮಾಡಲಾಗುತ್ತಿದೆ. ಬಿಜೆಪಿಯವರು ಎಲ್ಲೂ ಹಣ ಹಂಚುತ್ತಿಲ್ಲವೇ? ಎಂದು ಪ್ರಶ್ನಿಸಿದರು. ನಾವು ನುಡಿದಂತೆ ನಡೆದಿದ್ದೇವೆ. ಈ ಕಾರಣಕ್ಕಾಗಿ ರಾಜ್ಯದಲ್ಲಿ ಜನರು ಚುನಾವಣೆಯಲ್ಲಿ ಕಾಂಗ್ರೆಸ್ ಕೈಹಿಡಿಯಲಿದ್ದಾರೆ ಎಂದು ಇದೇ ಸಂದರ್ಭದಲ್ಲಿ ಅವರು ವಿಶ್ವಾಸ ವ್ಯಕ್ತಪಡಿಸಿದರು.
ಮಾಜಿ ಕ್ರಿಕೆಟಿಗ ಸುಬ್ರಮಣ್ಯo ಬದರಿನಾಥ್ (Subramaniam Badrinath) ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿ ವಿಕೆಟ್ ಕೀಪರ್ ಬ್ಯಾಟ್ಸ್ ಮ್ಯಾನ್ ಆಗಿರುವಂತಹ ಡಿಕೆ (Dinesh Karthik) T20 ವರ್ಲ್ಡ್ ಕಪ್ನಲ್ಲಿ ಟೀಮ್ ಇಂಡಿಯಾಗೆ ಸೇರ್ಪಡೆಯಾಗಲು ಸಾಧ್ಯವೇ ಇಲ್ಲ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. The post Dinesh Karthik: ಯಾವುದೇ ಕಾರಣಕ್ಕೂ ದಿನೇಶ್ ಕಾರ್ತಿಕ್ ಅವರನ್ನು T20 ವಿಶ್ವಕಪ್ ಗೆ ಸೆಲೆಕ್ಟ್ ಮಾಡಬೇಡಿ ಎಂದ ಭಾರತದ ಈ ಕ್ರಿಕೆಟಿಗ! appeared first on Karnataka Times .
ಅಸ್ಪಶ್ಯತೆ: ಅಂಬೇಡ್ಕರ್ ಮತ್ತು ಗಾಂಧಿ
ಅಸ್ಪಶ್ಯತೆಯ ಕುರಿತು ಮಹಾತ್ಮಾ ಗಾಂಧೀಜಿಯವರ ಅಭಿಪ್ರಾಯಗಳು ಭಾರತೀಯ ಸಾರ್ವಜನಿಕ ಜೀವನದಲ್ಲಿ ರಾಜಕಾರಣಿ-ಸಂತನೆಂಬ ದ್ವಿಪಾತ್ರದಲ್ಲಿ ಬಿಂಬಿತವಾಗಿವೆ. ಹಿಂದೂಗಳು ಉದ್ದೇಶಪೂರ್ವಕವಾಗಿ ಅಸ್ಪಶ್ಯತೆಯನ್ನು ತಮ್ಮ ಧರ್ಮದ ಭಾಗವೆಂದು ಮತ್ತು ತಮ್ಮ ಸಹೋದರರ ಸಮೂಹವನ್ನು ಸ್ಪರ್ಶಿಸುವುದು ಪಾಪವಲ್ಲ ಎಂದು ಪರಿಗಣಿಸುವುವವರೆಗೂ ಸ್ವರಾಜ್ಯವನ್ನು ಸಾಧಿಸಲಾಗುವುದಿಲ್ಲ ಎಂದು ಅವರು ಆಗಾಗ ಪುನರಾವರ್ತನೆ ಮಾಡುತ್ತಿದ್ದರು. ಶೋಷಣೆಗೆ ಒಳಗಾದ ವರ್ಗಗಳ ಪರವಾಗಿ ಮಾತನಾಡುವುದಾಗಿ ಹೇಳಿದ್ದಕ್ಕಾಗಿ, ಸ್ವರಾಜ್ಯ ಬೇಡಿಕೆಯನ್ನು ವಿರೋಧಿಸಿದ್ದಕ್ಕಾಗಿ ಗಾಂಧೀಜಿ ಬ್ರಿಟಿಷರ ಮೇಲೆ ಕೋಪಗೊಂಡರು. ಏಕೆಂದರೆ ಶೋಷಿತ ವರ್ಗಗಳಿಗೆ ಮೇಲ್ಜಾತಿ ಹಿಂದೂಗಳಿಂದ ರಕ್ಷಣೆ ಬೇಕು ಎಂದು ಅವರು ಭಾವಿಸಿದ್ದರು. ಶೋಷಣೆಗೆ ಒಳಗಾದ ವರ್ಗಗಳಿಗೆ ಪ್ರತ್ಯೇಕ ಮತದಾನದ ವ್ಯವಸ್ಥೆಯನ್ನು ಅವರು ನಿರಾಕರಿಸಿದ್ದರು; ಏಕೆಂದರೆ ಅದು ಹಿಂದೂಗಳ ನಡುವೆ ಹಿಂಸಾಚಾರ ಮತ್ತು ರಕ್ತಪಾತಕ್ಕೆ ಕಾರಣವಾಗುವ ವಿಭಜನೆಯನ್ನು ಸೃಷ್ಟಿಸುತ್ತದೆ ಎಂದು ಅವರು ನಂಬಿದ್ದರು.1921ರ ಅಕ್ಟೋಬರ್ನಲ್ಲಿ ‘ಯಂಗ್ ಇಂಡಿಯಾ’ ಪತ್ರಿಕೆಯಲ್ಲಿ ಬರೆದಂತೆ ಹಿಂದೂಗಳು ಅಸ್ಪಶ್ಯರ ದುರವಸ್ಥೆಯನ್ನು ಸುಧಾರಿಸದಿದ್ದರೆ ವಿದೇಶಿ ಪ್ರಾಬಲ್ಯದ ಗುಲಾಮಗಿರಿಯ ವಿರುದ್ಧ ಹೋರಾಡಲು ಸಾಧ್ಯವಿಲ್ಲ. ರಾಷ್ಟ್ರೀಯ ಆಂದೋಲನದ ಬೆಂಬಲಕ್ಕೆ ಪ್ರತಿಯಾಗಿ ರಾಜಕೀಯ ವಿನಾಯಿತಿಗಳನ್ನು ಅವರಿಗೆ ನೀಡಿದಲ್ಲಿ ಯಾವುದೇ ಅಸ್ಪಶ್ಯತೆ ಸ್ವರಾಜ್ಯದ ಅಧೀನದಲ್ಲಿ ಇರುವುದಿಲ್ಲ. ಸಂಪ್ರದಾಯ ಅಥವಾ ಧರ್ಮದ ಹೆಸರಿನಲ್ಲಿ ವ್ಯಕ್ತಿಗಳ ಅಥವಾ ವರ್ಗಗಳ ಯಾವುದೇ ದುರಹಂಕಾರದ ಶ್ರೇಷ್ಠತೆಯನ್ನು ಕಾನೂನು ಸಹಿಸುವುದಿಲ್ಲ ಎಂದು ಗಾಂಧೀಜಿ ಒತ್ತಿ ಹೇಳಿದ್ದರು. ಧರ್ಮದ ಹೆಸರಿನಲ್ಲಿ ಅಸ್ಪಶ್ಯತೆಯನ್ನು ಶಾಶ್ವತಗೊಳಿಸುವುದು ಹೇಸಿಗೆಯನ್ನು ಹುಟ್ಟಿಸುತ್ತದೆ ಮತ್ತು ವೇದಗಳು ಅನುಮೋದಿಸಿರುವ ಅಸ್ಪಶ್ಯತೆಯ ಪ್ರತಿಪಾದನೆಯು ತಪ್ಪು ಕಲ್ಪನೆ ಎಂದು ಗಾಂಧೀಜಿ ಪುನರುಚ್ಚರಿಸಿದರು. ಆದರೆ ಗಾಂಧೀಜಿ ವರ್ಣಾಶ್ರಮದ ಸಿದ್ಧಾಂತವನ್ನು ಬೆಂಬಲಿಸುತ್ತಾರೆ. ಏಕೆಂದರೆ ಅದು ವಿಭಿನ್ನ ವೃತ್ತಿಗಳಿಗೆ ಸೇರಿದ ಪುರುಷರ ಕರ್ತವ್ಯಗಳನ್ನು ವ್ಯಾಖ್ಯಾನಿಸುತ್ತದೆ ಎಂದು ಅವರು ನಂಬಿದ್ದರು. ಜನ್ಮವನ್ನು ಆಧರಿಸಿದ್ದರೂ ವರ್ಣಾಶ್ರಮ ಗಾಂಧೀಜಿಯವರ ಗ್ರಹಿಕೆಯಂತೆ ಶೂದ್ರ ಕಾರ್ಮಿಕ ಮತ್ತು ಬ್ರಾಹ್ಮಣ ಅಥವಾ ವಿಚಾರವಂತರೆಲ್ಲರೂ ಒಂದೇ ಪ್ರಮಾಣದ ಪರಿಗಣನೆಗೆ ಅರ್ಹರಾಗಿದ್ದಾರೆ. ಅಸ್ಪಶ್ಯತೆಯ ವಿರುದ್ಧ ಪ್ರಬಲರಾಗಿದ್ದು ಶತಮಾನಗಳ ಪೂರ್ವಗ್ರಹಗಳು ಮತ್ತು ಕುರುಡು ಸಾಂಪ್ರದಾಯಿಕತೆಯನ್ನು ಜಯಿಸಲು ಗಾಂಧೀಜಿ ಮೇಲ್ಜಾತಿ ಹಿಂದೂಗಳ ಕಡೆಗೆ ಶಾಂತಿಯುತ, ತಾಳ್ಮೆಯ ಮತ್ತು ಮನವೊಲಿಸುವ ನೀತಿಯನ್ನು ಅಳವಡಿಸಿಕೊಂಡಿದ್ದರು. ಅವರ ಆಶ್ರಮದಲ್ಲಿ ಅಸ್ಪಶ್ಯರನ್ನು ಇತರರೊಂದಿಗೆ ಸಮಾನವಾಗಿ ಪರಿಗಣಿಸಿದ್ದರು ಮತ್ತು ಗಾಂಧೀಜಿ ಅಸ್ಪಶ್ಯ ಹುಡುಗಿಯೊಬ್ಬಳನ್ನು ತಮ್ಮ ಮಗಳಾಗಿ ದತ್ತು ಪಡೆದುಕೊಂಡಿದ್ದರು. ಮೇಲಾಗಿ, ಗಾಂಧೀಜಿ ಮರುಹುಟ್ಟು ಪಡೆದರೆ ಅಸ್ಪಶ್ಯನಾಗಿಯೇ ಹುಟ್ಟುತ್ತೇನೆಂದು ಬಯಸಿದ್ದರು. ಅಸ್ಪಶ್ಯರು ತಾಳ್ಮೆಯಿಂದ ಇರಬೇಕು ಮತ್ತು ಸಮಾಜ ಸುಧಾರಕರಿಗೆ ಸಹಕಾರ, ಗೌರವ ನೀಡಬೇಕು ಎಂದು ಸಲಹೆ ನೀಡಿದ್ದರು. ಅಸ್ಪಶ್ಯರು ಶುಚಿತ್ವ ಮತ್ತು ನೈರ್ಮಲ್ಯವನ್ನು ಕಾಯ್ದುಕೊಳ್ಳುವಂತೆ ಪ್ರೇರೇಪಿಸಿದರು. ಸತ್ತ ಪ್ರಾಣಿಯ ಮಾಂಸ ಮತ್ತು ಉಳಿದ ಕೊಳೆತ ಆಹಾರಗಳನ್ನು ತಿನ್ನಬಾರದು ಮತ್ತು ಮದ್ಯಪಾನ ಹಾಗೂ ಜೂಜಾಟವನ್ನು ತ್ಯಜಿಸುವಂತೆ ಸಲಹೆ ನೀಡಿದರು ಮತ್ತು ಅವರ ಮಕ್ಕಳಿಗೆ ಶಿಕ್ಷಣ ನೀಡುವಂತೆ ಒತ್ತಾಯಿಸಿದರು. ಅಂಬೇಡ್ಕರ್ ಮತ್ತು ಗಾಂಧೀಜಿ ಇಬ್ಬರೂ ಮೊದಲು ಹಿಂದೂಗಳ ಜೊತೆಗೆ ಅಸ್ಪಶ್ಯರನ್ನು ಒಗ್ಗೂಡಿಸಲು ಕೆಲಸ ಮಾಡಲು ಪ್ರಯತ್ನಿಸಿದರು. ಆದರೂ ಅಂಬೇಡ್ಕರ್ ಪ್ರತೀ ಹಳ್ಳಿಯಲ್ಲಿ ಅಸ್ಪಶ್ಯರು ತಮ್ಮ ಹಕ್ಕುಗಳ ಹೋರಾಟಕ್ಕಾಗಿ ಸಂಘಟಿತರಾಗಲು ಕರೆಕೊಟ್ಟರು ಮತ್ತು ಹಿಂದೂ ಮೇಲ್ಜಾತಿಗಳ ವರ್ತನೆಯ ಬದಲಾವಣೆಗೆ ಒತ್ತಾಯಿಸಲು ಶೋಷಣೆಗೆ ಒಳಗಾದ ವರ್ಗಗಳನ್ನು ಪ್ರೋತ್ಸಾಹಿಸಿದರು. ಪೂನಾ ಒಪ್ಪಂದದ ನಂತರ ಅಂಬೇಡ್ಕರ್ ಭ್ರಮ ನಿರಸನರಾದರು. ಮೇಲ್ಜಾತಿ ಹಿಂದೂಗಳು ಮತ್ತು ರಾಷ್ಟ್ರೀಯ ನಾಯಕರ ವರ್ತನೆ ಸಾಕಷ್ಟು ಸುಧಾರಿತವಾಗಿಲ್ಲ ಎಂದು ಭಾವಿಸಿದರು. ಅದರಿಂದ ನೊಂದ ಬಾಬಾ ಸಾಹೇಬರು ಅನುಯಾಯಿಗಳಿಗೆ ‘‘ಧರ್ಮವು ಮನುಷ್ಯನಿಗೆ ಮತ್ತು ಧರ್ಮಕ್ಕಾಗಿ ಮನುಷ್ಯನಲ್ಲ’’ ಎಂದು ಉತ್ತೇಜಿಸಿದರು. ‘‘ನೀವು ಜಗತ್ತಿನಲ್ಲಿ ಸಂಘಟಿತರಾಗಲು, ಬಲಗೊಳ್ಳಲು ಮತ್ತು ಯಶಸ್ವಿಯಾಗಲು ಬಯಸಿದರೆ ಈ ಧರ್ಮವನ್ನು ಬದಲಿಸಿ. ನಿಮ್ಮನ್ನು ಮನುಷ್ಯರೆಂದು ಗುರುತಿಸದ, ಕುಡಿಯಲು ನೀರು ಕೊಡದ ಅಥವಾ ದೇವಸ್ಥಾನಗಳಿಗೆ ಪ್ರವೇಶಿಸಲು ಬಿಡದ ಧರ್ಮ, ಧರ್ಮ ಎನ್ನಲು ಅರ್ಹವಲ್ಲ. ಧರ್ಮ ಬದಲಾವಣೆಗೆ ಮುಂದಾದರೆ ಅವರಿಗೆ ಕಳೆದುಕೊಳ್ಳಲು ಏನೂ ಇಲ್ಲ ಮತ್ತು ಸಾಕಷ್ಟು ಲಾಭವಿದೆ’’ ಎಂದು ಹೇಳಿದರು. ಆದರೂ ಗಾಂಧೀಜಿ ಅಸ್ಪಶ್ಯರನ್ನು ಹಿಂದೂಗಳಿಂದ ಕ್ರಿಶ್ಚಿಯನ್, ಮುಸ್ಲಿಮರು ಅಥವಾ ಇತರ ಯಾವುದೇ ಮತಶ್ರದ್ಧೆಗೆ ನಡೆಯುವ ಮತಾಂತರವನ್ನು ತಡೆಯಲು ಅವರಿಗೆ ನೈತಿಕ ಬೆಂಬಲ ಸಿಗಲಿಲ್ಲ. ಸೆಪ್ಟಂಬರ್ 1936ರಲ್ಲಿ ‘ಹರಿಜನ’ ಪತ್ರಿಕೆಯಲ್ಲಿ ಬರೆಯುತ್ತಾ ‘ಅಸ್ಪಶ್ಯರನ್ನು ತಮ್ಮ ತೆಕ್ಕೆಗೆ ಸೆಳೆಯುವ ಪ್ರಯತ್ನದಲ್ಲಿ ವಿವಿಧ ಧರ್ಮಗಳ ನಾಯಕರು ಪರಸ್ಪರ ಸ್ಪರ್ಧಿಸುವುದನ್ನು ನಿಲ್ಲಿಸಿದರೆ ದೇಶಕ್ಕೆ ಒಳ್ಳೆಯದು’ ಎಂದು ಅವರು ಘೋಷಿಸಿದರು. ನೈತಿಕ ಶಿಕ್ಷಣ, ಉಪದೇಶ ಮತ್ತು ಶಾಂತಿಯುತ ಹೋರಾಟವು ಸಮಸ್ಯೆಯ ವಿರುದ್ಧ ಹೋರಾಡುವ ಸಾಧನಗಳಾಗಬೇಕೆಂದು ಗಾಂಧೀಜಿ ಬೋಧಿಸಿದರು. ಅಸ್ಪಶ್ಯರ ಉಗ್ರತ್ವ ಮತ್ತು ಮೇಲ್ಜಾತಿಗಳ ನಡುವಿನ ವೈರತ್ವ ಮತ್ತು ಅಸಮಾಧಾನದ ಅಪಾಯಗಳಿಂದ ತುಂಬಿತ್ತು. ರಾಜಕೀಯವಾಗಿ ಅವರು ಶೋಷಣೆಗೆ ಒಳಗಾದ ವರ್ಗಗಳ ಚುನಾಯಿತ ಸದಸ್ಯರಿಂದ ಶಾಸನಬದ್ಧ ಸಹ-ಸದಸ್ಯನ ಆಯ್ಕೆಯನ್ನು ಒದಗಿಸುತ್ತಾರೆ ಮತ್ತು ಇಷ್ಟವಿಲ್ಲದಿದ್ದರೂ ಸಾಮಾನ್ಯ ಕ್ಷೇತ್ರಗಳಲ್ಲಿ ಸ್ಥಾನಗಳ ಮೀಸಲಾತಿಯನ್ನು ನೀಡುತ್ತಾರೆ. ಆದರೂ ಅಸ್ಪಶ್ಯರಿಗೆ ಪ್ರತ್ಯೇಕ ಮತದಾನ ನೀಡುವುದು ಸಮಾಜದಲ್ಲಿ ವಿಭಜನೆಯನ್ನು ಉಂಟುಮಾಡುತ್ತದೆ ಎಂದು ಅವರು ಭಯಪಟ್ಟರು. ಈ ಒಡಕನ್ನು ತಪ್ಪಿಸಲು ಅವರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟರು. ಗಾಂಧೀಜಿ ಮತ್ತು ಅಂಬೇಡ್ಕರ್ ನಡುವೆ ಭಿನ್ನಾಭಿಪ್ರಾಯಗಳಿದ್ದರೂ ಅಸ್ಪಶ್ಯತೆ ನಿವಾರಣೆಯ ಕಾರ್ಯದಲ್ಲಿ ಅವರ ಪಾತ್ರಗಳು ಪೂರಕವಾಗಿವೆ. ಅಸ್ಪಶ್ಯತೆ ನಿವಾರಣೆಯನ್ನು ಸ್ವಾತಂತ್ರ್ಯದ ಹೋರಾಟದೊಂದಿಗೆ ಸಂಯೋಜಿಸುವುದು ಮತ್ತು ಅಸ್ಪಶ್ಯತೆಯು ದೇವರ ಇಚ್ಛೆಯಲ್ಲ, ಆದರೆ ಮನುಷ್ಯ ಸೃಷ್ಟಿ ಎಂದು ಮೇಲ್ಜಾತಿ ಹಿಂದೂಗಳಿಗೆ ಮನವರಿಕೆ ಮಾಡುವುದು ಗಾಂಧೀಜಿಯ ಶ್ರೇಷ್ಠ ಸಾಧನೆಗಳು. ಆದ್ದರಿಂದ ಇತರ ಯಾವುದೇ ಸಾಮಾಜಿಕ ಅಸಮರ್ಪಕತೆಯಂತೆಯೇ ಅದನ್ನು ನಿರ್ಮೂಲನೆ ಮಾಡಬೇಕಾಗಿತ್ತು. ಅಂಬೇಡ್ಕರ್ ಅವರು ಗಾಂಧೀಜಿಗೆ ತುಂಬಾ ಸುಧಾರಣಾವಾದಿಯಾಗಿ ಕಂಡಿದ್ದರು. ಆದರೆ ಅಂಬೇಡ್ಕರ್ ಅವರಿಗೆ ಗಾಂಧೀಜಿ ಸಾಕಷ್ಟು ಸುಧಾರಣಾವಾದಿಯಾಗಿ ಕಾಣಲು ಸಾಧ್ಯವಾಗದಿದ್ದರೂ, ಈ ಇಬ್ಬರು ಮಹಾನ್ ನಾಯಕರ ಕೊಡುಗೆಯು ಅವರು ವಾಸಿಸುತ್ತಿದ್ದ ಸಾಮಾಜಿಕ- ಸಾಂಸ್ಕೃತಿಕ, ಆರ್ಥಿಕ ಮತ್ತು ಧಾರ್ಮಿಕ ಪರಿಸರದ ವಿರುದ್ಧವಾಗಿ ನೋಡಿದಾಗ ಮಹತ್ವವನ್ನು ಪಡೆದುಕೊಳ್ಳುತ್ತದೆ. ಮೀಸಲಾತಿಯ ಪರಿಕಲ್ಪನೆ ಮತ್ತು ಶೋಷಿತ ವರ್ಗಗಳಿಗೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸಿದ ಅಂಬೇಡ್ಕರ್ ಅವರಿಗೆ ಅಸ್ಪಶ್ಯತೆಯ ಅನುಭವ ಕಾರಣವಾಗಿದೆ. ಈ ಎಲ್ಲಾ ಸಮುದಾಯಗಳನ್ನು ಸಮಾನತೆಯ ಮಟ್ಟಕ್ಕೆ ತರಬೇಕಾದರೆ ಸಮಾನತೆ ತತ್ವವನ್ನು ಅಳವಡಿಸಿಕೊಳ್ಳುವುದು ಮತ್ತು ಆ ಮಟ್ಟಕ್ಕಿಂತ ಕೆಳಗಿರುವವರಿಗೆ ವಿಶೇಷ ಕೃಪೆ ತೋರುವುದೊಂದೇ ಪರಿಹಾರ ಎಂದವರು ಹೇಳಿದ್ದರು. ಗಾಂಧೀಜಿ ಮತ್ತು ಅಂಬೇಡ್ಕರ್ ನಡುವೆ ಅಸ್ಪಶ್ಯತೆ ಎಂಬ ಕ್ರೂರ ಸ್ಥಿತಿ ಜಿಜ್ಞಾಸೆಗೆ ಒಳಗೊಂಡಿದ್ದು ಸತ್ಯ. ಆದರೆ, ಗಾಂಧೀಜಿ ಅವರ ಜೀವಿತ ಅವಧಿಯಲ್ಲಿಯೇ ಕೊಲ್ಹಾಪುರದ ಸಾಹು ಮಹಾರಾಜ್ ಮತ್ತು ಮೈಸೂರು ಸಂಸ್ಥಾನದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡಿ ಇತಿಹಾಸದಲ್ಲಿ ದಾಖಲಾಗಿದ್ದಾರೆ. ಆದರೆ ಗಾಂಧೀಜಿ ಯಾವತ್ತೂ ಅವರ ಬರಹ ಮತ್ತು ಭಾಷಣಗಳಲ್ಲಿ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದವರ ಬಗ್ಗೆ ದಾಖಲಿಸಿರುವುದು ನನ್ನ ಅರಿವಿಗೆ ಬಂದಿಲ್ಲ.
Banana Cultivation: ಈ ಸುಲಭ ವಿಧಾನವನ್ನು ಬಾಳೆ ಕೃಷಿಯಲ್ಲಿ ಬಳಸಿದರೆ 20 ಲಕ್ಷಕ್ಕೂ ಅಧಿಕ ಆದಾಯ ಗ್ಯಾರೆಂಟಿ
ಬಾಳೆ ಕೃಷಿ (Banana Cultivation) ಬಹಳ ಲಾಭ ನೀಡುವ ಕೃಷಿಗಳಲ್ಲಿ ಒಂದು ಎನ್ನಬಹುದು. ಮೊದಲ ಬಾರಿಗೆ ಸಸಿ ನೆಡುವಾಗ ನಿಮಗೆ ಖರ್ಚು ಹಾಗೂ ನಿರ್ವಹಣಾ ಕೆಲಸ ಅಧಿಕವಾಗಲಿದೆ. ಒಂದು ಎಕರೆಯಲ್ಲಿ 3000 ದಷ್ಟು ಗಿಡನೆಟ್ಟರೆ ಅದರಲ್ಲಿ 300 ಗಿಡ ಯಾವುದೇ ಕಾರಣಕ್ಕೆ ಫಸಲು ಬಂದಿಲ್ಲ ಎಂದಾದರೂ ಉಳಿದ ಫಸಲು ನಿಮಗೆ ಲಾಭ ನೀಡಲಿದೆ. 3 ಲಕ್ಷ ಖರ್ಚು ಹಿಡಿಯಲಿದ್ದು ವರ್ಷಕ್ಕೆ 20ಲಕ್ಷ ಲಾಭ ಸಿಗಲಿದೆ. The post Banana Cultivation: ಈ ಸುಲಭ ವಿಧಾನವನ್ನು ಬಾಳೆ ಕೃಷಿಯಲ್ಲಿ ಬಳಸಿದರೆ 20 ಲಕ್ಷಕ್ಕೂ ಅಧಿಕ ಆದಾಯ ಗ್ಯಾರೆಂಟಿ appeared first on Karnataka Times .
ಹೊಸದಿಲ್ಲಿ: ಚುನಾವಣಾ ರ್ಯಾಲಿಯೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಾಮ ಮಂದಿರ ನಿರ್ಮಾಣವನ್ನು ಉಲ್ಲೇಖಿಸಿರುವುದು ಧರ್ಮದ ಹೆಸರಿನಲ್ಲಿ ಮತಯಾಚನೆಯಾಗದು. ಸಿಖ್ ತೀರ್ಥಯಾತ್ರೆಯ ಹಾದಿಯಾದ ಕರ್ತಾರ್ಪುರ್ ಸಾಹಿಬ್ ಕಾರಿಡಾರ್ ಅಭಿವೃದ್ಧಿಯನ್ನು ಹಾಗೂ ಸಿಖರ ಪವಿತ್ರ ಗ್ರಂಥವಾದ ಗುರು ಗ್ರಂಥ ಸಾಹಿಬ್ ಪ್ರತಿಗಳನ್ನು ಅಫ್ಗಾನಿಸ್ತಾನದಿಂದ ವಾಪಸ್ ತರಲು ಸರ್ಕಾರದ ಕ್ರಮವನ್ನು ಉಲ್ಲೇಖಿಸಿರುವುದು ಮಾದರಿ ನೀತಿ ಸಂಹಿತೆಯ ಉಲ್ಲಂಘನೆಯಾಗದು ಎಂಬ ತನ್ನ ನಿರ್ಧಾರವನ್ನು ಚುನಾವಣಾ ಆಯೋಗ ಪ್ರಕಟಿಸುವ ನಿರೀಕ್ಷೆಯಿದೆ ಎಂದು indianexpress.com ವರದಿ ಮಾಡಿದೆ. ಮಾದರಿ ನೀತಿ ಸಂಹಿತೆ ಉಲ್ಲಂಘನೆಗಳಿಗಾಗಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ದಾಖಲಾಗಿರುವ ದೂರುಗಳಿಗೆ ಸಂಬಂಧಿಸಿದಂತೆ ತನ್ನ ಮೊದಲ ನಿರ್ಧಾರವನ್ನು ಆಯೋಗ ತಿಳಿಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಸುಪ್ರೀಂ ಕೋರ್ಟ್ ವಕೀಲ ಆನಂದ್ ಎಸ್ ಜೊಂಡಾಲೆ ಎಂಬವರು ಪ್ರಧಾನಿ ಉತ್ತರ ಪ್ರದೇಶದ ಪಿಲಿಭೀತ್ ನಲ್ಲಿ ಎಪ್ರಿಲ್ 9ರಂದು ಮಾಡಿದ ಭಾಷಣ ಉಲ್ಲೇಖಿಸಿ ದೂರು ನೀಡಿದ್ದರು. ಜೊಂಡಾಲೆ ಅವರು ದಿಲ್ಲಿ ಹೈಕೋರ್ಟಿನಲ್ಲಿ ಸಲ್ಲಿಸಿರುವ ಅರ್ಜಿ ಈ ವಾರ ವಿಚಾರಣೆಗೆ ಕೈಗೆತ್ತಿಕೊಳ್ಳಲಾಗುವುದರಿಂದ ಅವರ ದೂರಿನ ಕುರಿತು ತನ್ನ ನಿರ್ಧಾರವನ್ನು ಆಯೋಗ ಶೀಘ್ರ ಪ್ರಕಟಿಸುವ ನಿರೀಕ್ಷೆಯಿದೆ. ಸೆಕ್ಷನ್ 153ಎ ಅಡಿಯಲ್ಲಿ ಮೋದಿ ವಿರುದ್ಧ ವಿವಿಧ ಧರ್ಮಗಳ ನಡುವೆ ದ್ವೇಷ ಪ್ರೋತ್ಸಾಹಿಸಿದ್ದಕ್ಕಾಗಿ ಎಫ್ಐಆರ್ ದಾಖಲಿಸಬೇಕೆಂದು ಆನಂದ್ ತಮ್ಮ ದೂರಿನಲ್ಲಿ ಕೋರಿದ್ದರು. ಆದರೆ ಆಯೋಗದಿಂದ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಅವರು ಎಪ್ರಿಲ್ 15ರಂದು ದಿಲ್ಲಿ ಹೈಕೋರ್ಟ್ ಕದ ತಟ್ಟಿದ್ದರು. ದೂರಿನ ಆಧಾರದಲ್ಲಿ ಪ್ರಧಾನಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ದಿಲ್ಲಿ ಹೈಕೋರ್ಟ್ ಎಪ್ರಿಲ್ 15ರಂದು ಆಯೋಗಕ್ಕೆ ಸೂಚಿಸಿತ್ತು. ರಾಜಸ್ಥಾನದ ರ್ಯಾಲಿಯಲ್ಲಿ ಪ್ರಧಾನಿ ಮುಸ್ಲಿಂ ಸಮುದಾಯವನ್ನು ಉಲ್ಲೇಖಿಸಿ ನೀಡಿದ ಹೇಳಿಕೆಗಳ ವಿರುದ್ಧ ಕಾಂಗ್ರೆಸ್ ಪಕ್ಷ ಕೂಡ ಈಗಾಗಲೇ ಚುನಾವಣಾ ಆಯೋಗಕ್ಕೆ ದೂರು ನೀಡಿ ಕ್ರಮಕ್ಕೆ ಆಗ್ರಹಿಸಿದೆ.
ಈಜುವಾಗಲೇ ಮೃತಪಟ್ಟ ಬೆಂಗಳೂರಿನ ಖ್ಯಾತ ಈಜುಪಟು 78 ವರ್ಷದ ಗೋಪಾಲ್ ರಾವ್
Swimmer Gopal Rao Dies: 1957ರಿಂದಲೂ ಈಜುಗಾರಿಕೆಯ ಮೂಲಕ ಹೆಸರುವಾಸಿಯಾಗಿದ್ದ ಮತ್ತು ಹಿಂದಿನ ತಲೆಮಾರುಗಳಿಂದ ಈಗಿನ ಪೀಳಿಗೆಯವರೆಗಿನ ಈಜುಪಟುಗಳಿಗೆ ಸ್ಫೂರ್ತಿಯಾಗಿದ್ದ ಬೆಂಗಳೂರಿನ ನುರಿತ ಈಜುಪಟು ಗೋಪಾಲ್ ರಾವ್ (78) ಅವರು ನಿಧನರಾಗಿದ್ದಾರೆ. ಶ್ರೀಲಂಕಾದಿಂದ ಭಾರತಕ್ಕೆ ಪಾಕ್ ಜಲಸಂಧಿ ಮೂಲಕ ಈಜುವ ರಿಲೇ ಕಾರ್ಯಕ್ರಮದ ವೇಳೆ ಅವರು ಎದೆ ನೋವಿಗೆ ಒಳಗಾಗಿದ್ದರು. ಕೆಲವೇ ಸಮಯದಲ್ಲಿ ಹೃದಯಸ್ತಂಭನದಿಂದ ಮೃತಪಟ್ಟಿದ್ದಾರೆ.
ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ? ಕುಳಿತಲ್ಲಿಯೇ ಚೆಕ್ ಮಾಡೋದು ಹೇಗೆ? ಇಲ್ಲಿದೆ ಸ್ಟೆಪ್ ಬೈ ಸ್ಟೆಪ್ ಮಾಹಿತಿ
How To Check Name In Voter List : ಕರ್ನಾಟಕದ 28 ಕ್ಷೇತ್ರಗಳ ಪೈಕಿ 14 ಲೋಕಸಭಾ ಕ್ಷೇತ್ರಗಳಲ್ಲಿ ಶುಕ್ರವಾರ ಮತದಾನ ನಡೆಯಲಿದೆ. ದಕ್ಷಿಣ ಕರ್ನಾಟಕದಲ್ಲಿ ಮತದಾರರು ತಮ್ಮ ಹಕ್ಕು ಚಲಾವಣೆಗೆ ಮುಂದಾಗಿದ್ದಾರೆ. ಇದರ ನಡುವೆ ಜನರಿಗೆ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇದೆಯೋ ಇಲ್ವೋ ಎಂಬ ಗೊಂದಲ ಕೂಡ ಇರುತ್ತದೆ. ಆದ್ದರಿಂದ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೋ ಇಲ್ಲವೋ ಎಂಬುದನ್ನು ಕುಳಿತಲ್ಲಿಯೇ ಪರಿಶೀಲಿಸುವುದು ಹೇಗೆ? ಮತದಾನ ಮಾಡುವುದು ಹೇಗೆ? ಎಂಬ ವಿವರ ಇಲ್ಲಿದೆ.
ಬಿಸಿಲ ಧಗೆಗೆ ಬೆಂಗಳೂರು ತತ್ತರ; ಶುಕ್ರವಾರ ಸೂರ್ಯನಿಂದ ದಾಖಲೆ ಸಾಧ್ಯತೆ, ಇತಿಹಾಸದಲ್ಲೇ ಅಧಿಕ ತಾಪಮಾನ ನಿರೀಕ್ಷೆ
Temperature In Bengaluru : ಬೆಂಗಳೂರು ಅಕ್ಷರಶಃ ಬೆಂದಕಾಳೂರು ಆಗಿ ಪರಿವರ್ತನೆಯಾಗಿದ್ದು, ಬಿಸಿಲಿ ಧಗೆಗೆ ಬೆಂಗಳೂರಿಗರು ತತ್ತರಿಸಿದ್ದಾರೆ. ಈ ವಾರ ಪೂರ್ತಿ 36 ಡಿಗ್ರಿ ಸೆಲ್ಸಿಯಸ್ ತಾಪಮಾನದ ಆಸುಪಾಸಿನಲ್ಲಿಯೇ ಬಿಸಿಲು ಇರಲಿದೆ. ಈಗಾಗಲೇ ಮಂಗಳವಾರ ಬೆಂಗಳೂರು ನಗರದ ಇತಿಹಾಸದಲ್ಲಿಯೇ ಏಪ್ರಿಲ್ನಲ್ಲಿ 2ನೇ ಗರಿಷ್ಠ ತಾಪಮಾನ ದಾಖಲಾಗಿದ್ದು, ಶುಕ್ರವಾರ 8 ವರ್ಷಗಳ ದಾಖಲೆ ಮುರಿಯುವ ಸಾಧ್ಯತೆ ಇದೆ. 2016ರಲ್ಲಿ ಬೆಂಗಳೂರಿನಲ್ಲಿ 39.2 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಅದು ಶುಕ್ರವಾರ ಬ್ರೇಕ್ ಆಗುವ ನಿರೀಕ್ಷೆ ಇದ್ದು, ಕಾಕತಾಳೀಯ ಎಂಬಂತೆ ಶುಕ್ರವಾರವೇ ಮತದಾನ ಕೂಡ ನಡೆಯುತ್ತಿದೆ.
Fact Check: ಜ್ಯೂನಿಯರ್ ಎನ್ಟಿಆರ್ ಶರ್ಟ್ ಮೇಲೆ ಟಿಡಿಪಿ ಪಕ್ಷದ ಚಿಹ್ನೆ! ವೈರಲ್ ಫೋಟೋ ಸತ್ಯವೇ?
Fact Check On Jr NTR Viral Photo: ನಟ ಜ್ಯೂನಿಯರ್ ಎನ್ಟಿಆರ್ ಅವರು ತಮ್ಮ ತಾತ ಎನ್ಟಿಆರ್ ಸ್ಥಾಪನೆ ಮಾಡಿದ್ದ ತೆಲುಗು ದೇಶಂ ಪಕ್ಷದ ಪರ 2009ರವರೆಗೆ ಪ್ರಚಾರ ನಡೆಸುತ್ತಿದ್ದರು. ನಂತರದ ದಿನಗಳಲ್ಲಿ ಅವರು ರಾಜಕೀಯದಿಂದ ದೂರವಾಗಿ ಸಿನಿಮಾದತ್ತ ಮಾತ್ರ ಗಮನ ಹರಿಸಿದ್ದರು. ಕಳೆದ ವರ್ಷ ತಮ್ಮ ತಾತನ ಶತಮಾನೋತ್ಸವ ಕಾರ್ಯಕ್ರಮ ಆಯೋಜಿಸಿದ್ದ ಟಿಡಿಪಿ ಪಕ್ಷದ ಕಾರ್ಯಕ್ರಮಕ್ಕೂ ಹಾಜರಾಗಿರಲಿಲ್ಲ. ಆದರೆ, ಇದೀಗ ಅವರು ಟಿಡಿಪಿ ಪರ ಪ್ರಚಾರ ಮಾಡ್ತಿದ್ಧಾರೆ ಅನ್ನೋ ಫೋಟೋ ವೈರಲ್ ಆಗಿದೆ.
ಮತದಾನದ ದಿನವಾದ ಶುಕ್ರವಾರ ರಜೆ ಎಂದು ಮೈಸೂರು ಝೂಗೆ ಹೋಗ್ಬೇಡಿ; ಮೃಗಾಲಯಕ್ಕೂ ಬಿಡುವು
ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಚುನಾವಣೆಯ ಮತದಾನ ಪ್ರಕ್ರಿಯೆಗಾಗಿ ಮೈಸೂರು ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ನಡೆಸಿದೆ. ಜಿಲ್ಲಾದ್ಯಂತ 2202 ಮತಗಳನ್ನು ಸ್ಥಾಪಿಸಲಾಗಿದ್ದು ಒಟ್ಟು 9809 ಸಿಬ್ಬಂದಿಯನ್ನು ನೇಮಿಸಲಾಗಿದೆ. ಎಲ್ಲೆ ಎಲ್ಲೆಡೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು ಸುಗಮ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ. ಇನ್ನು ಮತದಾನದ ದಿನವಾದ ಏಪ್ರಿಲ್ 26 ಶುಕ್ರವಾರದಂದು ರಾಜ್ಯದ ಜನಪ್ರಿಯ ಪ್ರವಾಸಿತಾಣವಾದ ಚಾಮರಾಜೇಂದ್ರ ಮೃಗಾಲಯಕ್ಕೂ ರಜೆ ಇದೆ. ಅದೇ ರೀತಿ ನಗರ ವ್ಯಾಪ್ತಿಯಲ್ಲಿರುವ ಕಾರಂಜಿ ಕೆರೆ ಸಹ ಸಾರ್ವಜನಿಕರ ವೀಕ್ಷಣೆಗೆ ಲಭ್ಯ ಇರುವುದಿಲ್ಲ.
ಪ್ರಧಾನಿಯ ಭಾಷಣವನ್ನು ಟೀಕಿಸಿದ ಅಲ್ಪಸಂಖ್ಯಾತ ಮೋರ್ಚಾ ನಾಯಕ ಬಿಜೆಪಿಯಿಂದ ಉಚ್ಚಾಟನೆ
ಜೈಪುರ್: ರಾಜಸ್ಥಾನದ ಚುನಾವಣಾ ರ್ಯಾಲಿಯಲ್ಲಿ ಇತ್ತೀಚೆಗೆ ಪ್ರಧಾನಿ ನೀಡಿದ ವಿವಾದಾತ್ಮಕ ಹೇಳಿಕೆಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಸ್ಮಾನ್ ಘನಿ ಅವರನ್ನು ಪಕ್ಷದ ವರ್ಚಸ್ಸಿಗೆ ಧಕ್ಕೆ ತಂದಿದ್ದಾರೆ ಎಂಬ ಕಾರಣ ನೀಡಿ ಬುಧವಾರ ಪಕ್ಷದಿಂದ ಉಚ್ಚಾಟಿಸಲಾಗಿದೆ. ರಾಜಸ್ಥಾನದ ಒಟ್ಟು 25 ಕ್ಷೇತ್ರಗಳ ಪೈಕಿ ಬಿಜೆಪಿ ಮೂರರಿಂದ ನಾಲ್ಕು ಕ್ಷೇತ್ರಗಳಲ್ಲಿ ಸೋಲಲಿದೆ ಎಂದು ಅವರು ಹೊಸದಿಲ್ಲಿಯಲ್ಲಿ ಸುದ್ದಿ ವಾಹಿನಿಯೊಂದರ ಜೊತೆ ಮಾತನಾಡುತ್ತಾ ಹೇಳಿದ್ದರಲ್ಲದೆ ಮುಸ್ಲಿಮರ ಕುರಿತಂತೆ ಪ್ರಧಾನಿ ರಾಜ್ಯದ ತಮ್ಮ ಚುನಾವಣಾ ರ್ಯಾಲಿಗಳಲ್ಲಿ ನೀಡಿದ ಹೇಳಿಕೆಗಳನ್ನು ಖಂಡಿಸಿದ್ದರು. ಓರ್ವ ಮುಸ್ಲಿಮನಾಗಿ ತನಗೆ ಪ್ರಧಾನಿ ಹೇಳಿರುವುದು ನಿರಾಸೆ ಮೂಡಿಸಿದೆ, ಬಿಜೆಪಿಗೆ ಮತ ನೀಡಿ ಎಂದು ಮುಸ್ಲಿಮರ ಬಳಿ ಮತಯಾಚನೆಗೆ ಹೋದಾಗ ಸಮುದಾಯದ ಜನರು ಪ್ರಧಾನಿಯ ಹೇಳಿಕೆಗಳನ್ನು ಉಲ್ಲೇಖಿಸಿ ತಮ್ಮಿಂದ ಉತ್ತರಗಳನ್ನು ಬಯಸುತ್ತಾರೆ ಎಂದು ಅವರು ಹೇಳಿದ್ದರು. ಅಷ್ಟೇ ಅಲ್ಲದೆ ರಾಜ್ಯದ ಜಾಟ್ ಸಮುದಾಯ ಬಿಜೆಪಿ ವಿರುದ್ಧ ಆಕ್ರೋಶ ಹೊಂದಿದೆ ಮತ್ತು ಚುರು ಹಾಗೂ ಇತರ ಕ್ಷೇತ್ರಗಳಲ್ಲಿ ಪಕ್ಷದ ವಿರುದ್ಧ ಮತ ಚಲಾಯಿಸಿದೆ ಎಂದು ಅವರು ಹೇಳಿದ್ದರು. ತಾವು ಹೇಳಿದ್ದಕ್ಕೆ ಪಕ್ಷ ತಮ್ಮ ವಿರುದ್ಧ ಕ್ರಮಕೈಗೊಂಡರೆ ತಮಗೆ ಭಯವಿಲ್ಲ ಎಂದೂ ಅವರು ಹೇಳಿದ್ದರು. ಅವರ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಲು ಆರಂಭಿಸಿದಾಗ ಪಕ್ಷದ ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷ ಓಂಕಾರ್ ಸಿಂಗ್ ಕಳಾವತ್ ಅವರನ್ನು ಪಕ್ಷದಿಂದ ಉಚ್ಚಾಟಿಸುವ ನಿರ್ಧಾರ ಕೈಗೊಂಡರು.
ಜೆಇಇ ಮೈನ್: 56 ವಿದ್ಯಾರ್ಥಿಗಳಿಗೆ 100 ಎನ್ ಟಿಎ ಅಂಕ
ಹೊಸದಿಲ್ಲಿ: ಈ ಬಾರಿಯ ಜಂಟಿ ಪ್ರವೇಶ ಪರೀಕ್ಷೆ- ಮೈನ್ (ಜೆಇಇ-ಮೈನ್)-2024ರಲ್ಲಿ ದಾಖಲೆಯ 56 ಅಭ್ಯರ್ಥಿಗಳು ಶೇಕಡ 100 ಪರ್ಸೆಂಟೈಲ್ (100 ಎನ್ಟಿಎ ಅಂಕ) ಗಳಿಸಿದ್ದಾರೆ. ಇದರಲ್ಲಿ ಸಾನ್ವಿ ಜೈನ್ (ಕರ್ನಾಟಕ) ಮತ್ತು ಶಾನ್ಯ ಸಿನ್ಹಾ (ದೆಹಲಿ) ಎಂಬ ಇಬ್ಬರು ಮಹಿಳಾ ಅಭ್ಯರ್ಥಿಗಳು ಸೇರಿದ್ದಾರೆ. ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್ಟಿಎ) ಕಳೆದ ಜನವರಿ ಮತ್ತು ಏಪ್ರಿಲ್ನಲ್ಲಿ ನಡೆದ ಪೇಪರ್ 1 (ಬಿಇ/ಬಿಟೆಕ್) ಫಲಿತಾಂಶವನ್ನು ಬುಧವಾರ ರಾತ್ರಿ ಪ್ರಕಟಿಸಿದೆ. ಈ ಬಾರಿಯ ಫಲಿತಾಂಶದ ಮತ್ತೊಂದು ಪ್ರಮುಖ ಅಂಶವೆಂದರೆ ಜೆಇಇ ಅಡ್ವಾನ್ಸ್ಡ್ ಗೆ ಅರ್ಹತೆ ಪಡೆಯಲು ಐದು ವರ್ಷಗಳಲ್ಲೇ ಗರಿಷ್ಠ ಜೆಇಇ-ಮೈನ್ ಅರ್ಹತಾ ಪರ್ಸೆಂಟೈಲ್ ಈ ಬಾರಿ ದಾಖಲಾಗಿದೆ. ದೇಶದ 23 ಐಐಟಿಗಳಿಗೆ ಪ್ರವೇಶ ಪಡೆಯಲು ಬಯಸುವ ಪ್ರವೇಶ ಪರೀಕ್ಷೆ ಜೆಇಇ ಅಡ್ವಾನ್ಸ್ಡ್ ಕಡ್ಡಾಯವಾಗಿರುತ್ತದೆ. ರಾಜ್ಯವಾರು ತೆಲಂಗಾಣದ ಗರಿಷ್ಠ 15 ಅಭ್ಯರ್ಥಿಗಳು ಗರಿಷ್ಠ ಅಂಕ ಪಡೆದವರ ಪಟ್ಟಿಯಲ್ಲಿದ್ದಾರೆ. ಸತತ ಮೂರನೇ ವರ್ಷ ತೆಲಂಗಾಣ ಅಗ್ರಸ್ಥಾನಿಯಾಗಿದೆ. ಮಹಾರಾಷ್ಟ್ರ ಹಾಗೂ ಆಂಧ್ರಪ್ರದೇಶದಲ್ಲಿ ತಲಾ ಏಳು ಮಂದಿ 100 ಪರ್ಸೆಂಟೈಲ್ ಅಂಕ ಪಡೆದಿದ್ದು, ದೆಹಲಿಯ 6 ಮಂದಿ ಈ ಕೀರ್ತಿ ಸಂಪಾದಿಸಿದ್ದಾರೆ. ಒಟ್ಟು 14.1 ಲಕ್ಷ ಅಭ್ಯರ್ಥಿಗಳ ಪೂಕಿ ಶೇಕಡ 96 ಮಂದಿ ಪರೀಕ್ಷೆ ತೆಗೆದುಕೊಂಡಿದ್ದರು. ಸುಮಾರು 24 ಸಾವಿರ ಸೀಟುಗಳು ಎನ್ಐಟಿಗಳಲ್ಲಿ ಲಭ್ಯವಿದೆ. ಜನವರಿಯ ಜೆಇಇ ಮೈನ್ಸ್ನಲ್ಲಿ 23 ಹಾಗೂ ಎಪ್ರಿಲ್ ಪರೀಕ್ಷೆಯಲ್ಲಿ 33 ಮಂದಿ 100 ಪರ್ಸೆಂಟೈಲ್ ಪಡೆದಿದ್ದಾರೆ. ಈ ಪೈಕಿ 40 ಮಂದಿ ಸಾಮಾನ್ಯ ವರ್ಗಕ್ಕೆ ಸೇರಿದವರಿದ್ದರೆ, ಇತರ ಹಿಂದುಳಿದ ವರ್ಗಗಳ 10 ಮಂದಿ, ಸಾಮಾನ್ಯವರ್ಗದ ಆರ್ಥಿಕ ದುರ್ಬಲರು ಆರು ಮಂದಿ ಇದ್ದಾರೆ. ಎಸ್ಸಿ/ಎಸ್ಟಿ ವರ್ಗದ ಯಾರೂ 100 ಪರ್ಸೆಂಟೈಲ್ ಅಂಕ ಪಡೆದಿದ್ದಾರೆ.
ಇಂತಹ ಹಲ್ಕಾ ಕೆಲಸವನ್ನು ಫಯಾಜ್, ಸಲೀಂ, ಸಲ್ಮಾನೇ ಮಾಡೋದು; ಕಲ್ಲಪ್ಪ, ಮಲ್ಲಪ್ಪ ಮಾಡಲ್ಲ: ಬಸನಗೌಡ ಪಾಟೀಲ್ ಯತ್ನಾಳ್
Basanagouda Patil Yatnal On Neha Murder Case : ಹುಬ್ಬಳ್ಳಿಯ ನೇಹಾ ಹಿರೇಮಠ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿಕಾರಿದ್ದಾರೆ. ಸಿಂದಗಿಯಲ್ಲಿ ನಡೆದ ರೋಡ್ ಶೋನಲ್ಲಿ ಮಾತನಾಡಿದ ಅವರು, ನೇಹಾ ತಾಯಿಯ ಎದುರಿಗೆ ನೇಹಾಳನ್ನು ಫಯಾಜ್ ಕೊಲೆ ಮಾಡಿದ್ದಾನೆ. ಇಂತಹ ಕೆಲಸಗಳನ್ನು ಫಯಾಜ್, ಸಲೀಂ, ಸಲ್ಮಾನ್ ಇಂಥವರೇ ಮಾಡೋದು, ಕಲ್ಲಪ್ಪ, ಮಲ್ಲಪ್ಪನಂತವರು ಹಲ್ಕಾ ಕೆಲಸ ಮಾಡಲ್ಲ ಎಂದರು. ಅದಲ್ಲದೇ ಸಿದ್ದರಾಮಯ್ಯ, ಜಿ ಪರಮೇಶ್ವರ್ ಹಾಗೂ ಶಿವಾನಂದ ಪಾಟೀಲ್ ವಿರುದ್ಧ ವಾಗ್ದಾಳಿ ನಡೆಸಿದರು.
ಅಂಬೇಡ್ಕರ್ರನ್ನು ದ್ವೇಷಿಸಿದ್ದ ಸಂಘಪರಿವಾರ ಹಿಂದುತ್ವವನ್ನು ಸಂಪೂರ್ಣವಾಗಿ ತಿರಸ್ಕರಿಸಿದ್ದ ಅಂಬೇಡ್ಕರ್
ಭಾಗ-2 ಮನುಸ್ಮತಿ ಸುಟ್ಟ ಅಂಬೇಡ್ಕರ್- ಮನುಸ್ಮತಿಯೇ ಸಂವಿಧಾನವೆಂದ ಆರೆಸ್ಸೆಸ್-ಸಾವರ್ಕರ್ ಮೊದಲನೆಯದಾಗಿ ಅವರ 1932ರ ‘ಕಿರ್ಲೋಸ್ಕರ್’ ಲೇಖನವನ್ನು ಗಮನಿಸೋಣ. ಆದರೆ, ಇದಕ್ಕೆ 5 ವರ್ಷಗಳಷ್ಟು ಮುಂಚೆಯೇ, 1927ರ ಡಿಸೆಂಬರ್ನಲ್ಲಿ ಅಂಬೇಡ್ಕರ್ ಅವರು ಮನುಸ್ಮತಿಯನ್ನು ದಲಿತ-ಮಹಿಳಾ-ಮಾನವತೆಯ ವಿರೋಧಿ ಗ್ರಂಥ ಎಂದು ಸುಟ್ಟುಹಾಕಿದ್ದರು ಎಂಬುದನ್ನು ನೆನಪಿನಲ್ಲಿಡೋಣ. ಹಾಗೆಯೇ ಅಸ್ಪಶ್ಯತೆಯ ಮೂಲ ಹಿಂದೂ ಧರ್ಮದಲ್ಲಿದೆಯೆಂದೂ, ಅದರ ಸಾರ ಮನುಸ್ಮತಿಯಲ್ಲಿದೆಯೆಂದೂ, ಹಾಲಿ ಇರುವ ಬ್ರಾಹ್ಮಣಶಾಹಿ ಸಾಮಾಜಿಕ ವ್ಯವಸ್ಥೆಯು ನಿಂತಿರುವುದೇ ಮನುಸ್ಮತಿಯ ನಿರ್ದೇಶನ ಹಾಗೂ ಪ್ರೇರಣೆಗಳಿಂದ ಎಂದೂ ಸ್ಪಷ್ಟ ಪಡಿಸಿದ್ದರು. ಇಂತಹ ಮನುಸ್ಮತಿಯ ಬಗ್ಗೆ ಸಾವರ್ಕರ್ ಅವರು ತಮ್ಮ ‘ಕಿರ್ಲೋಸ್ಕರ್’ ಲೇಖನದಲ್ಲಿ ಹೀಗೆ ಬರೆಯುತ್ತಾರೆ: ‘ವೇದಗಳ ನಂತರದಲ್ಲಿ ನಮ್ಮ ಹಿಂದೂ ರಾಷ್ಟ್ರವು ಅತ್ಯಂತ ಪೂಜನೀಯ ಎಂದು ಗೌರವಿಸುವ ಶಾಸ್ತ್ರಗ್ರಂಥವೆಂದರೆ ಮನುಸ್ಮತಿ. ಇದು ಅನಾದಿ ಕಾಲದಿಂದಲೂ ನಮ್ಮ ಸಂಸ್ಕೃತಿ-ಸಂಪ್ರದಾಯಗಳ, ವಿಚಾರ ಹಾಗೂ ಆಚಾರಗಳ ಆಧಾರಪ್ರಾಯವಾದ ಗ್ರಂಥವಾಗಿದೆ. ಈ ಪುಸ್ತಕವು ನಮ್ಮ ರಾಷ್ಟ್ರವು ಶತಮಾನಗಳಿಂದ ಸಾಧಿಸುತ್ತಿರುವ ಆಧ್ಯಾತ್ಮಿಕ ಹಾಗೂ ದೈವಿಕ ಮುನ್ನಡೆಗಳನ್ನು ಸೂತ್ರೀಕರಿಸಿದೆ. ಇಂದಿಗೂ ಈ ದೇಶದ ಕೋಟ್ಯಂತರ ಜನರ ಜೀವನ ಮತ್ತು ನಡೆಗಳು ಮನುಸ್ಮತಿಯನ್ನೇ ಅನುಸರಿಸುತ್ತದೆ. ಇಂದು ಮನುಸ್ಮತಿಯೇ ಹಿಂದೂ ಕಾನೂನು ಕೂಡಾ ಆಗಿದೆ ಹಾಗೂ ಇದು ಹಿಂದೂ ದೇಶವಾಗಿದೆ’ ಎಂದು ಘೋಷಿಸುತ್ತಾರೆ. (VD Savarkar, ‘Women in Manusmriti’ in Savarkar Samagar (collection of Savarkar’s writings in Hindi), Prabhat, Delhi, vol. 4, p. 415 ಶಂಸುಲ್ ಇಸ್ಲಾಮ್ ಅವರ ‘ಮಿಥ್ಸ್ ಆ್ಯಂಡ್ ಫ್ಯಾಕ್ಟ್ಸ್’ ಪುಸ್ತಕದಲ್ಲಿ ಉಲ್ಲೇಖ) ಆದರೆ ಮನುಸ್ಮತಿಯ ಕಾನೂನುಗಳು ಮತ್ತು ಸೂತ್ರಗಳು ಎಷ್ಟು ಮಹಿಳಾ ವಿರೋಧಿ ಮತ್ತು ಅಸ್ಪಶ್ಯ ವಿರೋಧಿ ಇದೆ ಎಂಬುದನ್ನು ಆ ವೇಳೆಗಾಗಲೇ ಫುಲೆ-ಅಂಬೇಡ್ಕರ್ ಹಾಗೂ ಇನ್ನಿತರ ಬಹುಜನ ಚಿಂತಕರು ಬಯಲು ಮಾಡಿದ್ದರು. ಹೀಗಾಗಿ ಈ ನಿಟ್ಟಿನಲ್ಲಿ ಮನುಸ್ಮತಿಯ ಬಗ್ಗೆ ಎದ್ದಿರುವ ಪ್ರಶ್ನೆಯನ್ನು ಸಾವರ್ಕರ್ ಅವರು ಜಾಣತನದಿಂದ ಬಗೆಹರಿಸುತ್ತಲೇ ಮನುಸ್ಮತಿಯ ಪಾರಮ್ಯವನ್ನು ಎತ್ತಿಹಿಡಿಯುತ್ತಾರೆ. ಅವರ ಪ್ರಕಾರ: ‘‘..ಇಂದಿನ ದೃಷ್ಟಿಯಲ್ಲಿ ನೋಡುವುದಾದರೆ ಯಾವೆಲ್ಲ ವಿಷಯಗಳು ಮನುಸ್ಮತಿಯಲ್ಲಿ ಪ್ರತಿಗಾಮಿ ಎಂದು ಕಂಡುಬರುವುದೋ ಅವುಗಳನ್ನು ಕೈಬಿಡಬೇಕು ಎನ್ನುವುದು ಸರಿ. ಆದರೆ ಅಷ್ಟು ಮಾತ್ರಕ್ಕೆ ಮನುಸ್ಮತಿ ಅಪಾಯಕಾರಿಯೋ ಅಥವಾ ಕಾಲಬಾಹಿರವೋ ಆಗಿಬಿಡುವುದಿಲ್ಲ. ಬ್ಯಬಿಲೋನಿಯಾ, ಈಜಿಪ್ಟ್, ಹೀಬ್ರು, ಗ್ರೀಸ್ ಮತ್ತು ರೋಮನ್ ಸಮಾಜಗಳ ಸಾಮಾಜಿಕ ಸೂತ್ರಗಳಿಗೆ ಹೋಲಿಸಿದಲ್ಲಿ ಮನುಸ್ಮತಿ ಅವೆಲ್ಲಕ್ಕಿಂತ ಎತ್ತರದಲ್ಲಿ ನಿಲ್ಲುತ್ತದೆ. ಅದಕ್ಕಾಗಿ ನಾವು ಅದಕ್ಕೆ ಸಕಲ ಗೌರವಗಳನ್ನೂ ಸಲ್ಲಿಸಬೇಕು’’ ಎಂದು ಮನುಸ್ಮತಿಯನ್ನು ಸುಟ್ಟ ಅಂಬೇಡ್ಕರ್ ಅವರಿಗೆ ನೇರವಾಗಿ ಸವಾಲು ಹಾಕುತ್ತಾರೆ. ಇತರ ನಾಗರಿಕತೆಗಳ ಸಾಮಾಜಿಕ ಸೂತ್ರಗಳಿಗಿಂತ ಮನುಸ್ಮತಿ ಶ್ರೇಷ್ಠವೆಂಬುದು ಸಾವರ್ಕರ್ ಅವರ ವಾದವಾದರೆ, 1950ರಲ್ಲಿ ಮನುಸ್ಮತಿಯನ್ನೂ ಒಳಗೊಂಡಂತೆ ಜಗತ್ತಿನ ಎಲ್ಲಾ ಪುರಾತನ ನಾಗರಿಕತೆಗಳ ಸಾಮಾಜಿಕ ಸೂತ್ರಗಳಿಗಿಂತ ಉನ್ನತವಾದ ಮೌಲ್ಯವನ್ನು ಪ್ರತಿಪಾದಿಸುವ ಅಂಬೇಡ್ಕರ್ ನೇತೃತ್ವದಲ್ಲಿ ತಯಾರಾದ ಭಾರತದ ಸಂವಿಧಾನದ ಬಗ್ಗೆ ಸಾವರ್ಕರ್ ಮತ್ತು ಆರೆಸ್ಸೆಸ್ನ ನಿಲುವು ಏನಾಗಿತ್ತು? 1949ರ ನವೆಂಬರ್ 26ರಂದು ಸಂವಿಧಾನ ಬರಹ ಮುಗಿದು ನಾಡಿಗೆ ಅರ್ಪಣೆಯಾದ ಕೇವಲ ನಾಲ್ಕು ದಿನಗಳ ನಂತರ 1949ರ ನವೆಂಬರ್ 30ರಂದು ಆರೆಸ್ಸೆಸ್ನ ಮುಖಪತ್ರಿಕೆಯಾದ ‘ಆರ್ಗನೈಸರ್’ನಲ್ಲಿ ಸಂವಿಧಾನವನ್ನು ಹೀಗೆಳೆಯುತ್ತಾ ಹೀಗೆ ಬರೆದುಕೊಳ್ಳುತ್ತಾರೆ: ‘‘ಭಾರತದ ಸಂವಿಧಾನದ ಬಗ್ಗೆ ಅತ್ಯಂತ ಹೀನಾಯವಾದದ್ದು ಏನೆಂದರೆ ಅದರಲ್ಲಿ ಭಾರತೀಯವಾದದ್ದು ಏನೂ ಇಲ್ಲ. ವಾಸ್ತವವಾಗಿ ನಮ್ಮ ಮನುಸ್ಮತಿ ಅತ್ಯಂತ ಪ್ರಾಚೀನವಾಗಿದ್ದು ಜಗತ್ತಿನ ಜನರೆಲ್ಲಾ ಸ್ವಪ್ರೇರಿತರಾಗಿ ಅದರ ಬಗ್ಗೆ ಅಪಾರ ಆದರವನ್ನು ವ್ಯಕ್ತಪಡಿಸುತ್ತಾರೆ. ಆದರೆ ನಮ್ಮ ಸಂವಿಧಾನ ಪಂಡಿತರಿಗೆ ಅದು ಏನೂ ಅಲ್ಲ’’ ಎಂದು ಟೀಕಿಸುತ್ತಾರೆ.. ಗೋಳ್ವಾಲ್ಕರ್ ಅವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಅಂಬೇಡ್ಕರ್ ಅವರ ಜಾತಿ ವಿನಾಶ ಯೋಜನೆಯ ವಿರುದ್ಧ ಹೀಗೆ ಕಿಡಿ ಕಾರುತ್ತಾರೆ: ‘‘ಈ ಜಾತಿ ವಿನಾಶದ ಪ್ರತಿಪಾದನೆಗಳು ಭಾರತದ ರಾಜಕೀಯವನ್ನು ಕುಲಗೆಡಿಸುತ್ತಿದೆ. ..ಆದ್ದರಿಂದ ಕೆಲವರು ಭಾವಿಸುವಂತೆ ಆರೆಸ್ಸೆಸ್ ಭಾರತವನ್ನು ಕೇವಲ ಇನ್ನೂರು ವರ್ಷ ಹಿಂದಕ್ಕೆ ತೆಗೆದುಕೊಂಡು ಹೋಗಲು ಬಯಸುತ್ತದೆ ಎಂಬುದು ಸುಳ್ಳು. ವಾಸ್ತವವಾಗಿ ನಾವು ಭಾರತವನ್ನು ಇನ್ನಷ್ಟು ಹಿಂದಕ್ಕೆ, ಕನಿಷ್ಠ ಸಾವಿರ ವರ್ಷದ ಹಿಂದಿನ ಉಜ್ವಲ ಯುಗಕ್ಕೆ ಕೊಂಡೊಯ್ಯಲು ಬಯಸುತ್ತೇವೆ’’ (The Organiser, 26 January 1962) ಅದಕ್ಕೆ ಈ ಸಂಘಪರಿವಾರದ ಈ ಕುಲಪುರೋಹಿತರು ಇನ್ನೂ ಚಿತ್ರವಿಚಿತ್ರವಾದ ಆದರೆ ಅಪಾಯಕಾರಿಯಾದ ವಾದಗಳನ್ನು ಮುಂದಿಡುತ್ತಾರೆ. ಅವರ ಪ್ರಕಾರ: ‘‘ನಮ್ಮ ದೇಶದ ಈಶಾನ್ಯ ಹಾಗೂ ವಾಯುವ್ಯ ಭಾಗಗಳು ಬಹಳ ಸುಲಭವಾಗಿ ಮುಸ್ಲಿಮರ ದಾಳಿಗೆ ತುತ್ತಾಗಲು ಕಾರಣವೇ ಅಲ್ಲಿನ ಸಮಾಜ ವ್ಯವಸ್ಥೆ ಬುದ್ಧನ ಚಿಂತನೆಗಳ ದುಷ್ಪರಿಣಾಮಕ್ಕೆ ಒಳಗಾಗಿ ಜಾತಿ ವ್ಯವಸ್ಥೆಯನ್ನು ಸಡಿಲಗೊಳಿಸಿದ್ದರಿಂದ. ಆದರೆ ಅದಕ್ಕೆ ತದ್ವಿರುದ್ಧವಾಗಿ ಶತಮಾನಗಳ ಕಾಲ ಮುಸ್ಲಿಮರ ನೇರ ಆಧಿಪತ್ಯ ಹಾಗೂ ದಾಳಿಗೆ ಆಹುತಿಯಾಗಿದ್ದರೂ ದಿಲ್ಲಿ ಪ್ರಾಂತಗಳು ಪ್ರಧಾನವಾಗಿ ಹಿಂದೂವಾಗಿಯೇ ಉಳಿದುಕೊಂಡವು. ಅದಕ್ಕೆ ಪ್ರಧಾನ ಕಾರಣ ಅಲ್ಲಿ ಗಟ್ಟಿಯಾಗಿ ಉಳಿದುಕೊಂಡಿದ್ದ ಜಾತಿ ವ್ಯವಸ್ಥೆ ಎನ್ನುವುದನ್ನು ನಾವು ಮರೆಯಬಾರದು.’’ (RSS and Democracy (Delhi: Sampradayikta Virodhi Committee, nd) - ಆನಂದ್ ತೇಲ್ತುಂಬ್ಡೆಯವರು ಸಂಪಾದಿಸಿರುವ ಊIಓಆUಖಿಗಿಂ ಂಓಆ ಆಂಐIಖಿS ಗ್ರಂಥದಲ್ಲಿ ಉಲ್ಲೇಖಿತ) ದಲಿತರು ಸ್ವಧರ್ಮದಲ್ಲೇ ಸಾಯಬೇಕು - ದೀನದಯಾಳ್ ಉಪಾಧ್ಯ ಆರೆಸ್ಸೆಸ್ನ ಮತ್ತೊಬ್ಬ ಗುರುವಾದ ಹಾಗೂ ಮೋದಿಯವರು ಬಹುವಾಗಿ ಉಲ್ಲೇಖಿಸುವ ದೀನ್ ದಯಾಳ್ ಉಪಾಧ್ಯ ಅವರಂತೂ ಇದೇ ಅತ್ಯಂತ ಅಪಾಯಕಾರಿ ಚಿಂತನೆಯನ್ನು ಘೋರವಾದ ಮೃದು ಭಾಷೆಯಲ್ಲಿ ಮುಂದಿಡುತ್ತಾರೆ: ‘‘ಈ ಆಧುನಿಕ ಯುಗದಲ್ಲಿ ಪದೇಪದೇ ಸಮಾನತೆಯ ಮಾತುಗಳನ್ನಾಡುತ್ತೇವೆ. ಆದರೆ ಈ ಸಮಾನತೆಯ ಕಲ್ಪನೆಯನ್ನು ಅತ್ಯಂತ ಎಚ್ಚರದಿಂದ ಬಳಸಬೇಕು. ಪ್ರಾಯೋಗಿಕವಾಗಿ ಮತ್ತು ವಾಸ್ತವ ದೃಷ್ಟಿಕೋನದಿಂದ ನೋಡುವುದಾದರೆ ಯಾವ ಇಬ್ಬರು ಮನುಷ್ಯರೂ ಸಮಾನರಲ್ಲ. ಪ್ರತಿಯೊಬ್ಬ ಮನುಷ್ಯರಿಗೂ ಅವರದೇ ಅದ ವಿಶಿಷ್ಟ ಗುಣಲಕ್ಷಣಗಳಿರುತ್ತವೆ ಮತ್ತು ಪ್ರತಿಯೊಬ್ಬರಿಗೂ ಅವರ ಆಸ್ಥೆ ಮತ್ತು ಗುಣಮಟ್ಟ, ಸಾಮರ್ಥ್ಯಗಳಿಗೆ ತಕ್ಕಂತೆ ಕರ್ತವ್ಯಗಳಿರುತ್ತವೆ ಮತ್ತು ಅವೆಲ್ಲಕ್ಕೂ ಸಮಾನ ಘನತೆಯಿರುತ್ತದೆ. ಇದನ್ನೇ ಸ್ವಧರ್ಮ ಎಂದು ಕರೆಯಲಾಗುತ್ತದೆ. ಸ್ವಧರ್ಮವನ್ನು ಅನುಸರಿಸುವುದೆಂದರೆ ದೇವರನ್ನು ಅನುಸರಿಸಿದಂತೆ. ಆದ್ದರಿಂದ ಪ್ರತಿಯೊಬ್ಬರೂ ಯವುದೇ ಸಂಘರ್ಷಕ್ಕೆ ಕಾರಣವಿಲ್ಲದಂತೆ ಸ್ವಧರ್ಮವನ್ನು ಆಚರಿಸುವುದು ಉತ್ತಮ ಸಮಾಜಕ್ಕೆ ಕಾರಣವಾಗುತ್ತದೆ.’’ ಇದನ್ನು ಮುಂದುವರಿಸಿಯೇ ಮೋದಿಯವರು ಚರಂಡಿ ಸ್ವಚ್ಛಮಾಡುವ ಪೌರಕಾರ್ಮಿಕರು ತಮ್ಮ ವೃತ್ತಿಯಲ್ಲಿ ಘನತೆಯನ್ನು ಮತ್ತು ದೇವರನ್ನು ಕಾಣುವ ಕರ್ಮಯೋಗಿಗಳು ಎಂದು ಬೊಗಳೆಯಾಡಿದ್ದು. (upadhya, P. Bhishikar, Pandit Deendayal Upadhyaya: Ideology and Perception-Concept of the Rashtra, vol. 5) ಬುದ್ಧನೊಬ್ಬ ದೇಶದ್ರೋಹಿ-ಸಾವರ್ಕರ್ ಹೀಗೆ ಈ ಬ್ರಾಹ್ಮಣಶಾಹಿ ತಿಳುವಳಿಕೆ ಆರೆಸ್ಸೆಸ್ ಮತ್ತು ಸಾವರ್ಕರ್ ಅನುಯಾಯಿಗಳ ಕಣಕಣದಲ್ಲೂ ಹರಿಯುತ್ತದೆ. ಅದಕ್ಕೆ ಸಾವರ್ಕರ್ ಮತ್ತು ಆರೆಸ್ಸೆಸ್ನ ಎಲ್ಲಾ ನಾಯಕರಿಗೆ ಸಮಾನತೆಯನ್ನು ಬೋಧಿಸಿದ ಬುದ್ಧನನ್ನು ಕಂಡರೆ ಎಲ್ಲಿಲ್ಲದ ಸಿಟ್ಟು. ಸಾವರ್ಕರ್ ಅವರಂತೂ ತಮ್ಮ ‘Six Glorious Epochs Of Indian History’ ಎಂಬ ತಮ್ಮ ಕೊನೆಯ ಪುಸ್ತಕದಲ್ಲಿ ಬುದ್ಧ ಹಾಗೂ ಬೌದ್ಧ ಧರ್ಮ ಈ ದೇಶದ ಪ್ರಥಮ ದೇಶದ್ರೋಹಿ ಧರ್ಮ ಮತ್ತು ವ್ಯಕ್ತಿ ಎಂದು ಕನಿಷ್ಠ 28 ಸಾರಿ ಹೀಗೆಳೆಯುತ್ತಾರೆ. ಅಷ್ಟು ಮಾತ್ರವಲ್ಲ. 1956ರಲ್ಲಿ ಅಂಬೇಡ್ಕರ್ ಅವರು ಬೌದ್ಧ ಧರ್ಮಕ್ಕೆ ಮರಳಿದಾಗ ಹೇಡಿ ಧರ್ಮಕ್ಕೆ ಸೇರಿದ ಅಂಬೇಡ್ಕರ್ ಎಂದು ಸಾವರ್ಕರ್ ಅಂಬೇಡ್ಕರ್ ಅವರನ್ನು ಹೀಗೆಳೆಯುತ್ತಾರೆ. ಅದಕ್ಕೆ ಪ್ರತಿಯಾಗಿ ಅಂಬೇಡ್ಕರ್ ಸಮಾಲೋಚನೆಯೊಂದಿಗೆ ಪ್ರಕಟವಾಗುತ್ತಿದ್ದ ಪ್ರಬುದ್ಧ ಭಾರತ್ ಪತ್ರಿಕೆಯಲ್ಲಿ ಸಾವರ್ಕರ್ ಅವರ ವೀರ ಎಂಬ ಅಭಿದಾನದ ಔಚಿತ್ಯವನ್ನು ಹಾಗೂ ಅವರ ಶರಣಾಗತಿಯ ಚರಿತ್ರೆಯನ್ನು ನೆನಪಿಸಲಾಗುತ್ತದೆ. (https://thewire.in/.../rss-ambedkar-camaraderie-fictional...) ಹಾಗಿದ್ದರೂ ಸಾವರ್ಕರ್ ಅವರನ್ನು ಅತ್ಯಂತ ದೊಡ್ದ ದಲಿತೋದ್ಧಾರಕ ಎಂದು ಸ್ಥಾಪಿಸಲು ಮೋದಿ ಮತ್ತು ಆರೆಸ್ಸೆಸಿಗರು ಹೇಗೆ ಹಿಂದೂ ಐಕ್ಯತೆ ಸಾಧಿಸಲು ಅಸ್ಪಶ್ಯತೆ ನಿವಾರಣೆಗೆ ಪ್ರಯತ್ನಪಟ್ಟರು ಎಂದು ಹಲವಾರು ಉದಾಹರಣೆಗಳನ್ನು ಕೊಡುತ್ತಾರೆ. ಆದರೆ ಸಾವರ್ಕರ್ ಅವರಾಗಲೀ, ಹೆಡಗೇವಾರ್ ಅವರಾಗಲೀ ಮೇಲ್ಜಾತಿಯವರ ಇಷ್ಟಕ್ಕೆ ವಿರುದ್ಧವಾಗಿ ಯಾವುದೇ ಸುಧಾರಣಾ ಕ್ರಮಗಳನ್ನು ತೆಗೆದುಕೊಳ್ಳುವುದಿಲ್ಲ ಎಂದು ಲಿಖಿತ ಭರವಸೆ ಕೊಟ್ಟಿರುತ್ತಾರೆ. ಉದಾಹರಣೆಗೆ 1939ರ ಹಿಂದೂ ಮಹಾಸಭಾ ಸಮ್ಮೇಳನದಲ್ಲಿ ತಮ್ಮ ಸಂಘವು ಅಸ್ಪಶ್ಯರಿಗೆ ದೇವಸ್ಥಾನಗಳಿಗೆ ಪ್ರವೇಶ ಕಡ್ಡಾಯ ಮಾಡುವ ಯಾವುದೇ ಮಸೂದೆಯನ್ನು ತಾವು ಶಾಸನ ಸಭೆಗಳಲ್ಲಿ ಮಂಡಿಸುವುದಿಲ್ಲವೆಂದು ಭರವಸೆ ನೀಡಿರುತ್ತಾರೆ. 1941ರಲ್ಲೂ ಮತ್ತೊಮ್ಮೆ ಇದೇ ಭರವಸೆಯನ್ನು ಸಾವರ್ಕರ್ ಕೊಡುತ್ತಾರೆ. ಆದ್ದರಿಂದಲೇ ಅಲ್ಲವೇ ಅಂಬೇಡ್ಕರ್ ಅವರು 1951ರಲ್ಲಿ ಆರ್ಪಿಐ ನ ಚುನಾವಣಾ ಪ್ರಣಾಳಿಕೆಯನ್ನು ರೂಪಿಸುವಾಗ ತಮ್ಮ ಪಕ್ಷ ಯಾವ ಕಾರಣಕ್ಕೂ ಅತ್ಯಂತ ಪ್ರತಿಗಾಮಿ ಪಕ್ಷವಾದ ಹಿಂದೂ ಮಹಾಸಭಾ ಮತ್ತು ಆರೆಸ್ಸೆಸ್ ಜೊತೆಗೆ ಯಾವುದೇ ರೀತಿಯ ಮೈತ್ರಿಯನ್ನು ಮಾಡಿಕೊಳ್ಳುವುದಿಲ್ಲ ಎಂದು ಘೋಷಿಸಿದ್ದು.! (ಅಂಬೇಡ್ಕರ್ ಅವರು ಕಮ್ಯುನಿಸ್ಟರೊಂದಿಗೂ ಯಾವುದೇ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಅದೇ ಸಮಯದಲ್ಲಿ ಘೋಷಿಸಿದ್ದರು. ಆದರೆ ಅದು ಮತ್ತೊಂದು ಪ್ರತ್ಯೇಕ ಲೇಖನಕ್ಕೆ ವಸ್ತುವಾಗಬೇಕಾದ ಬ್ರಾಹ್ಮಣಶಾಹಿಯ ದಿಗ್ವಿಜಯದ ಕಾರಣಗಳ ಮತ್ತೊಂದು ಕಥನ)
Loan: ಮನೆ, ವಾಹನ, ಶಿಕ್ಷಣ ಇಂತಹ ಉದ್ದೇಶಕ್ಕೆ ಸಾಲ ಮಾಡಿದ್ದ ಮೊತ್ತ ಖಾಲಿಯಾದರೆ ಟೆನ್ಷನ್ ಬೇಡ! ಭರ್ಜರಿ ಸಿಹಿಸುದ್ದಿ
ಮನೆಗಾಗಿ ಲೋನ್ (Loan) ಮಾಡಿದ್ದರೆ ಆ ಸಾಲದ ಮೊತ್ತ ನಿಮ್ಮ ಅರ್ಧ ಮನೆಕಟ್ಟುವ ವೇಳೆಗಾಗಲೇ ಖಾಲಿ ಆಗಿ ಹೋಗಲಿದೆ. ಅಂತಹ ಸಂಕಷ್ಟ ಸಮಯದಲ್ಲಿ ನೆರವಾಗಲಿರುವುದೇ ಟಾಪ್ ಅಪ್ ಸಾಲ ಎನ್ನಬಹುದು. ಈ ಟಾಪ್ ಅಪ್ ಸಾಲ ಯಾಕಾಗಿ ಪಡೆಯುತ್ತಾರೆ?, ಇದು ನಿಮಗೆ ಹೇಗೆ ನೆರವಾಗಲಿದೆ ಇದನ್ನು ಪಡೆಯುವ ಕ್ರಮ ಹೇಗೆ ಎಂಬ ಅನೇಕ ಅಂಶದ ಬಗ್ಗೆ ಉಪಯುಕ್ತ ಮಾಹಿತಿ ನಿಮಗೆ ಈ ಲೇಖನದ ಮೂಲಕ ನಾವಿಂದು ತಿಳಿಸಲಿದ್ದೇವೆ. The post Loan: ಮನೆ, ವಾಹನ, ಶಿಕ್ಷಣ ಇಂತಹ ಉದ್ದೇಶಕ್ಕೆ ಸಾಲ ಮಾಡಿದ್ದ ಮೊತ್ತ ಖಾಲಿಯಾದರೆ ಟೆನ್ಷನ್ ಬೇಡ! ಭರ್ಜರಿ ಸಿಹಿಸುದ್ದಿ appeared first on Karnataka Times .
ಚುನಾವಣಾ ಪ್ರಚಾರದಿಂದ ದೂರ: ಮೊಮ್ಮಗ ಆದ್ಯವೀರ್ ಜೊತೆ ರಾಜವಂಶಸ್ಥೆ ಪ್ರಮೋದಾ ದೇವಿ ಮೈಸೂರು ಝೂನಲ್ಲಿ ವಿಹಾರ
ಮೈಸೂರು ರಾಜವಂಶಸ್ಥೆ ಪ್ರಮೋದಾ ದೇವಿ ಅವರು ಬುಧವಾರ ಮೈಸೂರು ಮೃಗಾಲಯಕ್ಕೆ ತಮ್ಮ ಮೊಮ್ಮಗ ಆದ್ಯವೀರ್ ಜೊತೆ ವಿಹಾರಕ್ಕೆಂದು ತೆರಳಿದ್ದರು. ಅಲ್ಲಿನ ಪ್ರಾಣಿ ಪಕ್ಷಿಗಳನ್ನು ಮೊಮ್ಮಗನಿಗೆ ಪರಿಚಯಿಸಿ ಸಂತಸಪಟ್ಟರು. ಇದೇ ವೇಳೆ ಅಲ್ಲಿಗೆ ಕುಟುಂಬಸಮೇತರಾಗಿ ಆಗಮಿಸಿದ್ದ ಚಿತ್ರನಟಿ ಮೇಘನಾ ರಾಜ್ ಅವರು ಪ್ರಮೋದಾ ದೇವಿ ಅವರೊಂದಿಗೆ ಉಭಯ ಕುಶಲೋಪರಿ ಮಾತುಕತೆ ನಡೆಸಿದರು. ಪುತ್ರ ಯದುವೀರ್ ಅವರು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಕಣದಲ್ಲಿದಲ್ಲಿದ್ದರೂ ಪ್ರಮೋದಾ ದೇವಿ ಅವರು ಪ್ರಚಾರದಿಂದ ದೂರ ಉಳಿದಿದ್ದರು.
ಸಂಪಾದಕೀಯ | ರಾಜಕೀಯ ಮೈದಾನದಲ್ಲಿ ವೆಂಕಿ ಎಸೆದ ನೋ ಬಾಲ್!
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಉಗ್ರರಿಗಾಗಿ ಕಂಬನಿ ಮಿಡಿದಿದ್ದ ಸೋನಿಯಾ ಗಾಂಧಿ: ಜೆ.ಪಿ.ನಡ್ಡಾ ಆರೋಪ
ಹೊಸದಿಲ್ಲಿ: ಹಿರಿಯ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ 2008ರ ಬಾಟ್ಲಾಹೌಸ್ ಎನ್ ಕೌಂಟರ್ ಬಳಿಕ ಉಗ್ರರಿಗಾಗಿ ಕಂಬನಿ ಮಿಡಿದಿದ್ದರು ಎಂದು ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿದ್ದಾರೆ. ಬಿಹಾರದ ಮಧುಬಾನಿಯಲ್ಲಿ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಅವರು, ಭಾರತವನ್ನು ದುರ್ಬಲಗೊಳಿಸಲು ಪ್ರಯತ್ನಿಸುತ್ತಿರುವ ಶಕ್ತಿಗಳ ಬೆಂಬಲಕ್ಕೆ ಸದಾ ಕಾಂಗ್ರೆಸ್ ಪಕ್ಷ ನಿಂತಿದೆ ಎಂದು ಅವರು ಆಪಾದಿಸಿದ್ದಾರೆ. ದೇಶದ್ರೋಹಿಗಳ ಜತೆ ಸೋನಿಯಾಗಾಂಧಿ ಯಾವ ನಂಟು ಹೊಂದಿದ್ದಾರೆ ಎಂದು ಅವರು ಕಾಂಗ್ರೆಸ್ ಪಕ್ಷವನ್ನು ಪ್ರಶ್ನಿಸಿದರು. ಬಾಟ್ಲಾ ಎನ್ ಕೌಂಟರ್ ಸಂದರ್ಭದಲ್ಲಿ ಉಗ್ರರು ಹತ್ಯೆಗೀಡಾದರು ಮತ್ತು ಸೋನಿಯಾಗಾಂಧಿ ಈ ಸಂದರ್ಭದಲ್ಲಿ ಅತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದರು. ದೇಶದ್ರೋಹಿಗಳ ಜತೆ ನಿಮ್ಮ ಸಂಬಂಧ ಏನು? ನಿಮ್ಮ ಅನುಕಂಪದ ಕಾರಣ ಏನು? ಅವರಲ್ಲಿ ಏನನ್ನು ನೀವು ಇಷ್ಟಪಡುತ್ತೀರಿ? ಎಂದು ವ್ಯಂಗ್ಯವಾಡಿದರು. 2008 ಸೆಪ್ಟೆಂಬರ್ ನಲ್ಲಿ ಬಾಟ್ಲಾಹೌಸ್ ಎನ್ ಕೌಂಟರ್ ಸಂದರ್ಭದಲ್ಲಿ ದೆಹಲಿ ಪೊಲೀಸ್ ಇನ್ ಸ್ಪೆಕ್ಟರ್ ಮೋಹನ್ ಶರ್ಮಾ ಮತ್ತು ಅತ್ಲೀಫ್ ಮತ್ತು ಸಾಜೀದ್ ಎಂಬ ಇಬ್ಬರು ಉಗ್ರರು ಮೃತಪಟ್ಟಿದ್ದರು. ಇಂಡಿಯಾ ಮೈತ್ರಿಕೂಟವನ್ನು ನಡ್ಡಾ ದುಷ್ಟಕೂಟ ಎಂದು ಬಣ್ಣಿಸಿದ ಜೆ ಪಿ ನಡ್ಡಾ ಅವರು, ಕಾಂಗ್ರೆಸ್ ಪಕ್ಷ ದೇಶವನ್ನು ದುರ್ಬಲಗೊಳಿಸುವವರ ಬಗ್ಗೆ ಅನುಕಂಪ ಇರುವವರ ಪರವಾಗಿದೆ. ನೀವು ಅವರನ್ನು ಬೆಂಬಲಿಸುತ್ತೀರಾ ಎಂದು ಪ್ರಶ್ನಿಸಿದರು.
1991ರಲ್ಲಿ ಸಿದ್ದರಾಮಯ್ಯ ಕೊಪ್ಪಳದಲ್ಲಿ ಸೋತಿದ್ದು ಹೇಗೆ? ಅದೊಂದು ಘಟನೆ ಸಿದ್ದುಗೆ ಭಾಗ್ಯದ ಬಾಗಿಲು ತೆಗೆಸಿದ್ದು ಹೇಗೆ?
Siddaramaiah Lost In Koppal In 1991 Lok Sabha Elections : ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ 1991ರಲ್ಲಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ ಸೋಲು ಅನುಭವಿಸಿದ್ದರು. ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಜನತಾದಳದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸಿದ್ದರಾಮಯ್ಯ 1991ರಲ್ಲಿ ಕಾಂಗ್ರೆಸ್ನ ಬಸವರಾಜ್ ಪಾಟೀಲ್ ಅನ್ವರಿ ಅವರ ವಿರುದ್ಧ ಸೋಲು ಅನುಭವಿಸಿದ್ದರು. ರಾಜೀವ್ ಗಾಂಧಿ ಹತ್ಯೆ ಹಿನ್ನೆಲೆ ಅನುಕಂಪದ ಆಧಾರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆ ಚುನಾವಣೆಯಲ್ಲಿ ಗೆದ್ದರು. ಆ ಎಲೆಕ್ಷನ್ನಲ್ಲಿ ಸೋತಿದ್ದಕ್ಕೆ ಸಿದ್ದರಾಮಯ್ಯ ರಾಜ್ಯ ರಾಜಕಾರಣಕ್ಕೆ ಮರಳಿ, ಎರಡು ಸಲ ಮುಖ್ಯಮಂತ್ರಿಯಾದರು.
ಭಾರತದ ಲೋಕಸಭೆಗಾಗಿ ನಡೆಯುವ ಒಂದು ಮಹಾಚುನಾವಣೆಯ ನೂರಕ್ಕೂ ಹೆಚ್ಚು ಕ್ಷೇತ್ರಗಳ ಮೊದಲ ಹಂತ ಮುಗಿದಿದೆ. ಎರಡನೆಯ ಹಂತದ ಚುನಾವಣೆ ಎಪ್ರಿಲ್ 26ರಂದು ನಡೆಯಲಿದೆ. ಮುಂದೆ ಮೇ 7, ಹೀಗೆ ವಿವಿಧ ಹಂತಗಳಲ್ಲಿ ನಡೆದು ಜೂನ್ 4ರಂದು ಫಲಿತಾಂಶ ಹೊರಬೀಳಲಿದೆ. ಅಭ್ಯರ್ಥಿಗಳೂ ಮತದಾರರೂ ನೀರಿನಿಂದ ಹೊರಬರುವ ದುರ್ಯೋಧನರನ್ನು ಕಾದು ಕುಳಿತಿದ್ದಾರೆ.
ಮುಡಿಪು: ಝೆನಿತ್ ಆಂಗ್ಲ ಮಾಧ್ಯಮ ಶಾಲೆಯ ʼಪ್ಲೇ ಸ್ಕೂಲ್ʼ ನ ನೂತನ ಕೊಠಡಿ ಉದ್ಘಾಟನೆ
ಬಂಟ್ವಾಳ: ಮುಂದಿನ ಶೈಕ್ಷಣಿಕ ವರ್ಷದಿಂದ ಆರಂಭವಾಗಲಿರುವ ಮುಡಿಪು ಝೆನಿತ್ ಆಂಗ್ಲ ಮಾಧ್ಯಮ ಶಾಲೆಯ ಪ್ಲೇ ಸ್ಕೂಲ್ ನ ನೂತನ ಕೊಠಡಿಯನ್ನು ಕೆ ಎಸ್ ಆಟ್ಟಕೋಯ ತಂಙಳ್ ಕುಂಬೋಲ್ ಅವರು ಏ.20 ಶನಿವಾರ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಅಲ್-ಅನ್ಸಾರ್ ವಾರಪತ್ರಿಕೆಯ ಸಂಪಾದಕ ಸಿದ್ದೀಕ್ ಮೊಂಟುಗೋಳಿ, ಹಾಗೂ ರಫೀಕ್ ಮಾಸ್ಟರ್ ಅವರು ಪೋಷಕರನ್ನುದ್ದೇಶಿಸಿ ಮಾತನಾಡಿದರು. ಸಮಾರಂಭದಲ್ಲಿ ಗೌಸಿಯ ಜುಮಾ ಮಸೀದಿಯ ಖತೀಬ್, ಸಂಸ್ಥೆಯ ಅಧ್ಯಕ್ಷರಾದ ಅಬ್ದುಲ್ ಮಜೀದ್, ಆಡಳಿತಾಧಿಕಾರಿ ಮೊಯಿದಿನ್ ಕುಂಞಿ, ಟ್ರಸ್ಟಿ ಬಶೀರ್, ನ್ಯಾಯವಾದಿ ಅಸ್ಗರ್ ಮುಡಿಪು, ಸಂಚಾಲಕಿ ನಹಾದ. ಎಂ, ಮುಖ್ಯಶಿಕ್ಷಕಿ ಸಫೂರ ಕೆ.ಇ ಉಪಸ್ಥಿತರಿದ್ದರು.
Budget Car: ಮಾರುಕಟ್ಟೆಗೆ ಲಗ್ಗೆ ಇಡಲಿದೆ ಬಡವರ BMW ಎನ್ನಲಾಗುತ್ತಿರುವ ಈ ಕಾರು! 19Km ಮೈಲೇಜ್ ಕೇವಲ ಇಷ್ಟು ಮಾತ್ರ
ಕಾರು ಎಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ, ಪ್ರತಿ ಕಾರು ಇಷ್ಟ ಪಡಲು ಕೂಡ ಬೇರೆ ಬೇರೆ ತರಹದ ಕಾರಣ ಇರಲಿದೆ. ಆದರೆ ಇಲ್ಲೊಂದು ಲಕ್ಶೂರಿ ಕಾರು (Budget Car)ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು ಅನೇಕರಿಗೆ ಈ ಕಾರು ಬಹಳ ಇಷ್ಟ ಆಗಿದೆ ಎಂದು ಹೇಳಬಹುದು. ಈ ಒಂದು ಕಾರು ಯಾವುದು ಯಾವೆಲ್ಲ ವಿಶೇಷ ಫೀಚರ್ಸ್ ಇದರಲ್ಲಿ ಇರಲಿದೆ ಯಾವ ಕಾರುಗಳಿಗೆ ಪ್ರಬಲ ಪ್ರತಿ ಸ್ಪರ್ಧಿ ಆಗಿ ಈ ಕಾರು ಕೆಲಸ ಮಾಡಲಿದೆ ಎಂಬ ಇತರ ಮಾಹಿತಿ ಇಲ್ಲಿದೆ. The post Budget Car: ಮಾರುಕಟ್ಟೆಗೆ ಲಗ್ಗೆ ಇಡಲಿದೆ ಬಡವರ BMW ಎನ್ನಲಾಗುತ್ತಿರುವ ಈ ಕಾರು! 19Km ಮೈಲೇಜ್ ಕೇವಲ ಇಷ್ಟು ಮಾತ್ರ appeared first on Karnataka Times .
ರಾಜಕೀಯ ಮೈದಾನದಲ್ಲಿ ವೆಂಕಿ ಎಸೆದ ನೋ ಬಾಲ್!
ಕ್ರಿಕೆಟ್ ಬರೀ ಆಟವಲ್ಲ, ಅದೊಂದು ಬೃಹತ್ ಉದ್ಯಮ ಎನ್ನುವ ಟೀಕೆ ಇಂದು ನಿನ್ನೆಯದಲ್ಲ. ಭಾರತದಲ್ಲಿ ಕಾರ್ಪೊರೇಟ್ ಶಕ್ತಿಗಳು ರಾಜಕೀಯವನ್ನು ನಿಯಂತ್ರಿಸ ತೊಡಗಿದ ದಿನದಿಂದ ಕ್ರಿಕೆಟ್ ಬರೇ ಉದ್ಯಮವಾಗಿಯಷ್ಟೇ ಉಳಿದಿಲ್ಲ. ಕ್ರಿಕೆಟ್ ಎಂದರೆ ರಾಜಕೀಯವೂ ಹೌದು. ಬಿಸಿಸಿಐ ಎಂದರೆ ನೂರಾರು ಕೋಟಿ ರೂಪಾಯಿಗಳ ವ್ಯವಹಾರವಾಗಿದ್ದು ಅದನ್ನು ರಾಜಕಾರಣಿಗಳೇ ನಿಯಂತ್ರಿಸುತ್ತಾ ಬರುತ್ತಿದ್ದಾರೆ. ಕ್ರಿಕೆಟ್ನ ಗಂಧಗಾಳಿಯಿಲ್ಲದ ಉದ್ಯಮಿಗಳು, ರಾಜಕಾರಣಿಗಳು ಬಿಸಿಸಿಐಯ ಅತ್ಯುನ್ನತ ಸ್ಥಾನಗಳನ್ನು ನಿಭಾಯಿಸುತ್ತಾ ಬರುತ್ತಿರುವುದು ಇದೇ ಕಾರಣಕ್ಕೆ. ಕ್ರಿಕೆಟ್ ಆಟಕ್ಕೆ ಧರ್ಮವಿಲ್ಲ. ಅದು ಎಲ್ಲ ಗಡಿಗಳನ್ನು ಮೀರಿ ಜನರ ಮನಸ್ಸುಗಳನ್ನು ಬೆಸೆಯುತ್ತದೆ, ಒಂದಾಗಿಸುತ್ತದೆ ಎಂದು ಹೇಳಲಾಗುತ್ತದೆಯಾದರೂ, ಕ್ರಿಕೆಟ್ ತಾರೆಯರು ಮಾತ್ರ ‘ನಮಗೆ ಧರ್ಮ, ಜಾತಿಗಳಿವೆ’ ಎನ್ನುವುದನ್ನು ಆಗಾಗ ಸಾಬೀತು ಪಡಿಸುತ್ತಾ ಬಂದಿದ್ದಾರೆ. ಯಾವಾಗ ಕ್ರಿಕೆಟ್ ತಾರೆಯರು ತಮ್ಮ ನಿವೃತ್ತಿಯ ಬಳಿಕ ರಾಜಕೀಯದ ಕಡೆಗೆ ವಾಲತೊಡಗಿದರೋ ಅಲ್ಲಿಂದ ಕ್ರಿಕೆಟ್ ಕೂಡ ತನ್ನ ಅಳಿದುಳಿದ ಘನತೆಯನ್ನು ಕಳೆದುಕೊಳ್ಳ ತೊಡಗಿತು. ಗೌತಮ್ ಗಂಭೀರ್ರಂತಹ ಆಟಗಾರರು ಬಿಜೆಪಿ ಸೇರಿದ ಬಳಿಕ ನೀಡತೊಡಗಿದ ರಾಜಕೀಯ ಹೇಳಿಕೆಗಳು ಕ್ರೀಡೆಯ ಮೌಲ್ಯಗಳನ್ನು ಗಾಳಿಗೆ ತೂರಿದವು. ಸೋಲುವ ಭಯದಿಂದ ಪ್ರಧಾನಿ ಮೋದಿಯವರು ರಾಜಸ್ಥಾನದಲ್ಲಿ ಆಡುತ್ತಿರುವ ಹತಾಶೆಯ ದ್ವೇಷ ಭಾಷಣಗಳಿಗೆ ದೇಶಾದ್ಯಂತ ಟೀಕೆಗಳು ವ್ಯಕ್ತವಾಗುತ್ತಿವೆ. ಒಬ್ಬ ಪ್ರಧಾನಿ ಆಡುವ ಮಾತುಗಳೇ ಇವು? ಎಂದು ಸ್ವತಃ ಬಿಜೆಪಿಯೊಳಗಿರುವ ನಾಯಕರೇ ಮುಜುಗರ ಪಡುತ್ತಿದ್ದಾರೆ. ಇಂತಹ ಹೊತ್ತಿನಲ್ಲಿ, ಪ್ರಧಾನಿಯ ದ್ವೇಷ ಮಾತುಗಳನ್ನು ಸಮರ್ಥಿಸಲು ಹೋಗಿ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್, ‘ಹಿಟ್ ವಿಕೆಟ್’ ಆಗಿದ್ದಾರೆ. ಪ್ರಧಾನಿಯ ಮಾತುಗಳನ್ನು ಸಮರ್ಥಿಸುವ ಯಾವ ಅನಿವಾರ್ಯವೂ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ಗೆ ಇರಲಿಲ್ಲವಾದರೂ, ತಾವಾಗಿಯೇ ಪ್ರಧಾನಿ ಉಗುಳಿದ ತಟ್ಟೆಗೆ ಹೋಗಿ ಬಾಯಿ ಹಾಕಿದ್ದಾರೆ. ಪ್ರಧಾನಿ ಮೋದಿಯವರು ಕೇವಲ ದ್ವೇಷದ ಮಾತುಗಳನ್ನಷ್ಟೇ ಆಡಿರುವುದಲ್ಲ. ತಮ್ಮ ದ್ವೇಷ ಹಂಚಿಕೆಗಾಗಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಮಾತುಗಳನ್ನು ತಿರುಚಿದ್ದರು. ‘‘ಭಾರತದ ಸಂಪತ್ತಿನಲ್ಲಿ ಈ ದೇಶದ ಮುಸ್ಲಿಮರಿಗೆ ಮೊದಲ ಪಾಲು ಎಂದು ಮನಮೋಹನ್ ಸಿಂಗ್ ಹೇಳಿದ್ದರು. ಕಾಂಗ್ರೆಸ್ ಸರಕಾರ ಆಡಳಿತಕ್ಕೆ ಬಂದರೆ ನುಸುಳುಕೋರರಿಗೆ ಈ ದೇಶದ ಸಂಪತ್ತನ್ನು ಹಂಚಲಿದೆ’’ ಎಂದು ಮೋದಿ ಏಕಕಾಲದಲ್ಲಿ ಸುಳ್ಳಿನ ಪಾತ್ರೆಯಲ್ಲಿ ದ್ವೇಷದ ಮಾತುಗಳನ್ನು ಜನರಿಗೆ ಹಂಚಿದ್ದರು. ಕಾಂಗ್ರೆಸ್ ಪಕ್ಷವು ತನ್ನ ಪ್ರಣಾಳಿಕೆಯಲ್ಲಿ ಹೇಳಿರುವ ಶ್ರೀಮಂತರ ಸಂಪತ್ತನ್ನು ಬಡವರಿಗೆ ಹಂಚುವ ಪ್ರಸ್ತಾವವನ್ನು ಟೀಕಿಸುತ್ತಾ ಅವರು ಮೇಲಿನ ಮಾತುಗಳನ್ನು ಆಡಿದ್ದರು. ಮುಖ್ಯವಾಗಿ ‘ಶ್ರೀಮಂತರ ಸಂಪತ್ತನ್ನು ಬಡವರಿಗೆ ಹಂಚುವುದು’ ಪ್ರಧಾನಿ ಮೋದಿಯವರಿಗೆ ಅಪಥ್ಯವಾಗಿತ್ತು. ಇದರ ವಿರುದ್ಧ ಹೇಳಿಕೆಯನ್ನು ನೀಡಲು ಸಾಧ್ಯವಿಲ್ಲ ಎನ್ನುವ ಕಾರಣಕ್ಕಾಗಿ, ‘ದೇಶದ ಸಂಪತ್ತನ್ನು ನುಸುಳುಕೋರರಿಗೆ ಹಂಚಲು ಕಾಂಗ್ರೆಸ್ ಹೊರಟಿದೆ’ ಎಂದು ವ್ಯಾಖ್ಯಾನಿಸಿದರು. ಈ ದೇಶದ ಎಲ್ಲ ಮುಸ್ಲಿಮರನ್ನು ಅವರು ನುಸುಳುಕೋರರ ಸಾಲಿಗೆ ಸೇರಿಸಿದ್ದರು. ಹಿಂದೂ-ಮುಸ್ಲಿಮ್ ಎಂದು ಜನರನ್ನು ಅವರು ವಿಭಜಿಸಿದರು. ಅನ್ನ ತಿನ್ನುವ ಯಾವನೂ ಪ್ರಧಾನಿಯ ಮಾತುಗಳನ್ನು ಸಮರ್ಥಿಸಲು ಸಾಧ್ಯವಿಲ್ಲ. ಆದರೆ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಮಾತ್ರ ಪ್ರಧಾನಿ ಮೋದಿಯವರ ಮಾತುಗಳನ್ನು ಪ್ರಸಾದದಂತೆ ಸ್ವೀಕರಿಸಿದ್ದಾರೆ. ಈ ಹಿಂದೆ ಸನಾತನ ಧರ್ಮದ ಪರವಾಗಿ ಬ್ಯಾಟಿಂಗ್ ಮಾಡಿದ್ದ ವೆಂಕಟೇಶ್ ಪ್ರಸಾದ್, ಇದೀಗ ದೇಶದ ಸಂಪತ್ತನ್ನು ಶ್ರೀಮಂತರಿಂದ ಬಡವರಿಗೆ ಹಂಚುವುದು ಎಷ್ಟು ಸರಿ ಎಂದು ಕೇಳಿದ್ದಾರೆ. ಅದಕ್ಕೆ ತನ್ನ ಕ್ರಿಕೆಟ್ ಅರ್ಥಶಾಸ್ತ್ರವನ್ನು ಸಮರ್ಥನೆಯಾಗಿ ನೀಡಿದ್ದಾರೆ. ‘ಶ್ರೀಮಂತರ ಸಂಪತ್ತನ್ನು ಬಡವರಿಗೆ ಮರು ಹಂಚಿಕೆ ಮಾಡುವ ಬಗ್ಗೆ ಪಕ್ಷವೊಂದು ಮಾತನಾಡುತ್ತಿರುವುದು ಚಿಂತಾಜನಕವಾಗಿದೆ. ನಾವು ರಾಜಸ್ಥಾನ ರಾಯಲ್ಸ್, ಕೋಲ್ಕತಾ ನೈಟ್ ರೈಡರ್ಸ್, ಸನ್ ರೈಸರ್ಸ್ ಹೈದರಾಬಾದ್ನಿಂದ ನಾಲ್ಕು ಅಂಕಗಳನ್ನು ತೆಗೆದು ಅದನ್ನು ಕೆಳಗಿನ ಹಂತದಲ್ಲಿರುವ ಮೂರು ತಂಡಗಳಿಗೆ ಮರುಹಂಚಿಕೆ ಮಾಡಿ ಅವರು ಪ್ಲೇ ಆಫ್ಗೆ ಬರುವಂತೆ ಮಾಡಬೇಕು ಎಂದು ಹೇಳಿದಂತಾಗುತ್ತದೆ’’ ಎಂದು ಹೇಳಿದ್ದಾರೆ. ಈ ದೇಶದ ಬಡತನ, ಹಸಿವು ಇವೆಲ್ಲದರ ಬಗ್ಗೆ ಪ್ರಾಥಮಿಕ ಅರಿವೂ ಇಲ್ಲದ, ಸಾಮಾಜಿಕ ನ್ಯಾಯಗಳ ಬಗ್ಗೆ ಅಸಹನೆಯಿರುವ ಹಿಂದುತ್ವವಾದಿ ಮಾಜಿ ಕ್ರಿಕೆಟ್ ತಾರೆಯಿಂದ ಇದರಾಚೆಗಿನ ಮಾತುಗಳನ್ನು ನಿರೀಕ್ಷಿಸುವುದು ಕೂಡ ತಪ್ಪಾಗುತ್ತದೆ. ಭಾರತದ ಶೇ. 1ರಷ್ಟು ಜನರ ಬಳಿ ಈ ದೇಶದ ಶೇ. 40ರಷ್ಟು ಸಂಪತ್ತುಗಳು ಶೇಖರಣೆಯಾಗಿವೆೆ ಮತ್ತು ಈ ಅಸಮಾನತೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ ಎಂದು ಆಕ್ಸ್ಫಾಮ್ ವರದಿ ಹೇಳುತ್ತದೆ. ಈ ದೇಶದ ಜನಸಂಖ್ಯೆಯಲ್ಲಿ ಕೊನೆಯ ಸ್ಥಾನದಲ್ಲಿರುವ ಶೇ. 50 ಜನರು ಕೇವಲ ಶೇ. 3ರಷ್ಟು ಸಂಪತ್ತನ್ನು ಮಾತ್ರ ಹೊಂದಿದ್ದಾರೆ. ವಿಪರ್ಯಾಸವೆಂದರೆ, ಈ ದೇಶದ ಶೇ. 10ರಷ್ಟಿರುವ ಶ್ರೆಮಂತರು ಕಟ್ಟುವ ತೆರಿಗೆಗಿಂತ ಆರು ಪಟ್ಟು ಹೆಚ್ಚು ಪರೋಕ್ಷ ತೆರಿಗೆಯನ್ನು ಈ ದೇಶದ ಶೇ. 50ರಷ್ಟಿರುವ ಜನರು ಕಟ್ಟುತ್ತಿದ್ದಾರೆ. ಈ ದೇಶದ ಬಿಲಿಯಾಧಿಪತಿಗಳು ಇನ್ನಷ್ಟು ಶ್ರೀಮಂತರಾಗುತ್ತಿದ್ದಂತೆಯೇ ಇತ್ತ ಈ ದೇಶದ ಬಡವರು ಇನ್ನಷ್ಟು ಬಡವರಾಗುತ್ತಿದ್ದಾರೆ. ಆಕ್ಸ್ಫಾಮ್ ವರದಿಯ ಪ್ರಕಾರ, ಅತಿ ಶ್ರೀಮಂತರ ಮೇಲೆ ಹೆಚ್ಚುವರಿ ತೆರಿಗೆಗಳನ್ನು ವಿಧಿಸುವ ಮೂಲಕ ಸಮಾನತೆಯನ್ನು ಸಾಧಿಸಬಹುದಾಗಿದೆ. ಇದನ್ನೇ ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಹೇಳಿದೆ. ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಯಾದ ಗೌತಮ್ ಅದಾನಿಯ ಲಾಭಗಳ ಮೇಲೆ ಒಂದು ಬಾರಿ ತೆರಿಗೆ ಹಾಕಿದರೆ 1.79 ಲಕ್ಷ ಕೋಟಿ ರೂಪಾಯಿಗಳನ್ನು ಸರಕಾರ ತನ್ನದಾಗಿಸಿಕೊಳ್ಳಬಹುದು. ಇಷ್ಟು ಹಣದಿಂದ ಒಂದು ವರ್ಷಕ್ಕೆ 50 ಲಕ್ಷಕ್ಕೂ ಹೆಚ್ಚು ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕವನ್ನು ಮಾಡಬಹುದು ಎಂದು ವರದಿ ಅಭಿಪ್ರಾಯ ಪಡುತ್ತದೆ. ಶ್ರೀಮಂತರ ಮೇಲೆ ವಿಧಿಸುವ ತೆರಿಗೆಯಿಂದ ಈ ದೇಶದ ಅಪೌಷ್ಟಿಕತೆ, ಅನಾರೋಗ್ಯಗಳನ್ನು ಹೇಗೆ ನಿವಾರಿಸಬಹುದು ಎನ್ನುವುದನ್ನೂ ಆಕ್ಸ್ಫಾಮ್ ತನ್ನ ವರದಿಯಲ್ಲಿ ಹೇಳಿದೆ. ವೆಂಕಟೇಶ್ ಪ್ರಸಾದ್ ಅವರು ವಿವಿಧ ಐಪಿಎಲ್ ಕ್ರಿಕೆಟ್ ತಂಡಗಳ ಅಂಕಗಳನ್ನು ಸಮಾನವಾಗಿ ಹಂಚುವ ಬಗ್ಗೆ ಮಾತನಾಡುತ್ತಿದ್ದಾರೆ. ಅವರು ಮಾತನಾಡಬೇಕಾದುದು ಅಂಕಗಳನ್ನು ಹಂಚುವುದರ ಬಗ್ಗೆಯಲ್ಲ, ಕ್ರಿಕೆಟ್ ತಂಡದಲ್ಲಿ ಪ್ರತಿಭಾವಂತರಿಗೆ ಸಮಾನಪಾಲು ದೊರಕುವಂತೆ ಮಾಡುವುದರ ಬಗ್ಗೆ. ಕ್ರಿಕೆಟ್ ಆಟದಲ್ಲಿ ಮೇಲ್ಜಾತಿಗಳು ತನ್ನ ಪ್ರಾಬಲ್ಯವನ್ನು ಮೆರೆಯುತ್ತಿವೆ. ಶೋಷಿತ ಸಮುದಾಯದಿಂದ ಬಂದ ಪ್ರತಿಭಾವಂತ ಆಟಗಾರರನ್ನು ಬದಿಗೆ ತಳ್ಳಲಾಗುತ್ತಿದೆ. ಈ ಬಗ್ಗೆ ಹಲವು ದಶಕಗಳಿಂದ ಟೀಕೆಗಳು ಕೇಳಿ ಬರುತ್ತಿವೆ. ಆದುದರಿಂದ, ಕ್ರಿಕೆಟ್ನಲ್ಲಿ ಮೇಲ್ಜಾತಿಯ ಪ್ರಾಬಲ್ಯವನ್ನು ಕಿತ್ತುಹಾಕಿ, ಅಲ್ಲಿ ಎಲ್ಲ ಸಮುದಾಯಗಳ ಪ್ರತಿಭಾವಂತ ಆಟಗಾರರಿಗೆ ಸಮಾನ ಅವಕಾಶವನ್ನು ನೀಡುವ ಬಗ್ಗೆ ವೆಂಕಟೇಶ್ ಪ್ರಸಾದ್ ಮಾತನಾಡಬೇಕು. ಇದೇ ಸಂದರ್ಭದಲ್ಲಿ ಈ ದೇಶದ ಇತರೆಲ್ಲ ಕ್ರೀಡೆಗಳನ್ನು ನಿರ್ಲಕ್ಷಿಸಿ ಕ್ರಿಕೆಟನ್ನು ಪ್ರೋತ್ಸಾಹಿಸಲಾಗುತ್ತಿದೆ. ಕ್ರಿಕೆಟ್ ಇತರ ಕ್ರೀಡೆಗಳನ್ನು ಆಪೋಷನ ತೆಗೆದುಕೊಳ್ಳುತ್ತಿದೆ ಎನ್ನುವ ಆರೋಪ ಇಂದು ನಿನ್ನೆಯದಲ್ಲ. ಆದುದರಿಂದ ಕ್ರಿಕೆಟ್ಗೆ ನೀಡುವ ಎಲ್ಲ ರೀತಿಯ ಆರ್ಥಿಕ ನೆರವನ್ನು ಸಮಾನವಾಗಿ ಇತರ ಕ್ರೀಡೆಗಳಿಗೂ ಹಂಚಬೇಕಾಗಿದೆ. ಕ್ರಿಕೆಟ್ ತಾರೆಯರಿಗೆ ನೀಡುವ ಸಂಭಾವನೆ, ಇತರ ಅತ್ಲೀಟ್ಗಳಿಗೂ ಸಿಗಬೇಕಾಗಿದೆ. ವೆಂಕಟೇಶ್ ಪ್ರಸಾದ್ ಈ ಬಗ್ಗೆ ಬಾಯಿ ತೆರೆಯಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಕೇಂದ್ರ ಸರಕಾರ ಇತ್ತೀಚೆಗೆ ಮೇಲ್ಜಾತಿ ಬಡವರಿಗೂ ಶೇ.10 ಮೀಸಲಾತಿಯನ್ನು ಜಾರಿಗೆ ತಂದಿದೆ. ತಮ್ಮ ಕ್ರಿಕೆಟ್ ಅರ್ಥಶಾಸ್ತ್ರವನ್ನು ಈ ಶೇ.10 ಮೀಸಲಾತಿಗೂ ಅನ್ವಯಿಸಿ, ಆ ಮೀಸಲಾತಿಯನ್ನು ರದ್ದುಗೊಳಿಸಲು ಕೇಂದ್ರ ಸರಕಾರವನ್ನು ಒತ್ತಾಯಿಸಬೇಕಾಗಿದೆ.
Subrahmanya Dhareshwara : ಬಡಗು ತಿಟ್ಟು ಯಕ್ಷಗಾನದ ಖ್ಯಾತ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ
ಬೆಂಗಳೂರು: ಬಡಗು ತಿಟ್ಟು ಯಕ್ಷಗಾನದ ಖ್ಯಾತ ಭಾಗವತ, ಉಭಯ ತಿಟ್ಟುಗಳಲ್ಲೂ ಅಪಾರ ಅಭಿಮಾನಿಗಳನ್ನು ಹೊಂದಿರುವ ಅವರು ಗುರುವಾರ ಬೆಳಗ್ಗೆ ನಿಧನರಾಗಿದ್ದಾರೆ. ಬೆಂಗಳೂರಿನ ತಮ್ಮ ಪುತ್ರನ ಮನೆಯಲ್ಲಿದ್ದ ಅವರು ಅಲ್ಪಕಾಲದ ಅಸೌಖ್ಯದಿಂದಾಗಿ ಬೆಳಗ್ಗೆ 430ರ ಸುಮಾರಿಗೆ ಇಹಲೋಕ ತ್ಯಜಿಸಿದರು. ಯಕ್ಷಗಾನ ರಂಗ ಕಂಡ ಅತ್ಯಂತ ಪ್ರಯೋಗಶೀಲ ಭಾಗವತರಾಗಿದ್ದ ಅವರಿಗೆ ಪತ್ನಿ, ಪುತ್ರ, ಪುತ್ರಿ ಇದ್ದಾರೆ. 46 ವರ್ಷಗಳ ಕಾಲ ಯಕ್ಷಗಾನ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ಅವರು ಪೆರ್ಡೂರು, , ಹಿರೇಮಹಾಲಿಂಗೇಶ್ವರ ಮೇಳ, ಶಿರಸಿ ಮೇಳಗಳಲ್ಲಿ ಪ್ರಧಾನ ಭಾಗವತರಾಗಿ ತಿರುಗಾಟ ನಡೆಸಿದ್ದರು. ಬಡಗು ತಿಟ್ಟಿನ ಜನಪ್ರಿಯ ಮೇಳವಾಗಿರುವ ಪೆರ್ಡೂರು ಮೇಳವೊಂದರಲ್ಲೇ 28 ವರ್ಷಗಳ ಕಾಲ ತಿರುಗಾಟ ನಡೆಸಿದ್ದರು.
UPI Payment: ಫೋನ್ ಪೇ, ಗೂಗಲ್ ಪೇ ಯಾವುದೂ ಬೇಡ! ಇಂಟರ್ನೆಟ್ ಇಲ್ಲದ ಸಮಯದಲ್ಲಿ ಹೀಗೆ ಮಾಡಿ
ಆನ್ಲೈನ್ ಪಾವತಿ ಮಾಡುವಂತಹ ಈ ವಿಧಾನ ನರೇಂದ್ರ ಮೋದಿ ಅವರ ಸಾರಥ್ಯದಲ್ಲಿ ಭಾರತ ದೇಶದಲ್ಲಿ ಹೆಚ್ಚಾಗಿ ಬೆಳೆದು ನಿಂತಿದೆ ಎಂದು ಹೇಳಬಹುದಾಗಿದೆ. ಆದರೆ ಇವುಗಳನ್ನು ಬಳಸುವಾಗ ಇಂಟರ್ನೆಟ್ ಇರಬೇಕಾಗಿರುವುದು ಅತ್ಯಂತ ಪ್ರಮುಖವಾಗಿರುತ್ತದೆ ಎಂಬುದು ನಿಮಗೆಲ್ಲರಿಗೂ ತಿಳಿದಿರುವ ವಿಚಾರ. ಆದರೆ ಈಗ ತಿಳಿದು ಬಂದಿರುವ ಮಾಹಿತಿಯ ಪ್ರಕಾರ ನೀವು UPI ಪೇಮೆಂಟ್ಸ್ (UPI Payment) ಗಳನ್ನು ಇಂಟರ್ನೆಟ್ ಇಲ್ಲದೆ ಕೂಡ ಬಳಸಿಕೊಳ್ಳಬಹುದಾಗಿದೆ. ಬನ್ನಿ ಇದರ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿ ಪಡೆದುಕೊಳ್ಳೋಣ. The post UPI Payment: ಫೋನ್ ಪೇ, ಗೂಗಲ್ ಪೇ ಯಾವುದೂ ಬೇಡ! ಇಂಟರ್ನೆಟ್ ಇಲ್ಲದ ಸಮಯದಲ್ಲಿ ಹೀಗೆ ಮಾಡಿ appeared first on Karnataka Times .
2023ರಲ್ಲಿ 28 ಕೋಟಿ ಮಂದಿ ತೀವ್ರ ಹಸಿವಿನಿಂದ ಬಳಲಿದ್ದಾರೆ: ವಿಶ್ವಸಂಸ್ಥೆ ವರದಿ
ಹೊಸದಿಲ್ಲಿ: ಕಳೆದ ವರ್ಷ ವಿಶ್ವದಾದ್ಯಂತ ಆಹಾರ ಭದ್ರತೆ ಮತ್ತಷ್ಟು ಹದಗೆಟ್ಟಿದ್ದು, ಪ್ರಮುಖವಾಗಿ ಗಾಝಾ ಮತ್ತು ಸುಡಾನ್ ಸಂಘರ್ಷದಿಂದಾಗಿ ಒಟ್ಟು 282 ದಶಲಕ್ಷ ಮಂದಿ ತೀವ್ರ ಹಸಿವಿನಿಂದ ಬಳಲಿದ್ದಾರೆ ಎಂದು ವಿಶ್ವಸಂಸ್ಥೆಯ ವರದಿ ಬಹಿರಂಗಪಡಿಸಿದೆ. ವಿಶ್ವಸಂಸ್ಥೆಯ ಅಂಗಸಂಸ್ಥೆಗಳು ಮತ್ತು ಅಭಿವೃದ್ಧಿ ಗುಂಪುಗಳು ಬುಧವಾರ ಬಿಡುಗಡೆ ಮಾಡಿದ ವರದಿಯಲ್ಲಿ ಈ ಅಂಶ ಉಲ್ಲೇಖಿಸಲಾಗಿದೆ. ವ್ಯತಿರಿಕ್ತ ಹವಾಮಾನ ಪರಿಸ್ಥಿತಿ ಮತ್ತು ಆರ್ಥಿಕ ಆಘಾತಗಳು ಕೂಡಾ ಆಹಾರ ಅಭದ್ರತೆಗೆ ಕಾರಣವಾಗಿವೆ. 2022ಕ್ಕೆ ಹೋಲಿಸಿದರೆ ಹಸಿವಿನಿಂದ ಬಳಲುತ್ತಿರುವವರ ಸಂಖ್ಯೆ 22 ದಶಲಕ್ಷದಷ್ಟು ಹೆಚ್ಚಿದೆ ಎಂದು ಆಹಾರ ಭದ್ರತೆ ಮಾಹಿತಿ ಜಾಲ (ಎಫ್ಎಸ್ಐಎನ್) ಬಿಡುಗಡೆ ಮಾಡಿದ ಜಾಗತಿಕ ಆಹಾರ ಸಮಸ್ಯೆ ಕುರಿತ ವರದಿಯಲ್ಲಿ ವಿವರಿಸಲಾಗಿದೆ. 2023ರಲ್ಲಿ ಸತತ ಐದನೇ ವರ್ಷ ತೀವ್ರ ಆಹಾರ ಅಭದ್ರತೆ ಎದುರಿಸುತ್ತಿರುವವರ ಸಂಖ್ಯೆ ಹೆಚ್ಚಳವಾಗಿದ್ದು, ಜೀವಕ್ಕೆ ಅಪಾಯಕಾರಿ ಪ್ರಮಾಣದಲ್ಲಿ ಆಹಾರದ ಅಲಭ್ಯತೆಯನ್ನು ತೀವ್ರ ಅಭದ್ರತೆ ಎಂದು ಪರಿಗಣಿಸಲಾಗುತ್ತದೆ. ಕಳೆದ ವರ್ಷದ ಹೆಚ್ಚಳಕ್ಕೆ ಪ್ರಮುಖ ಕಾರಣ ಭೌಗೋಳಿಕ ಪ್ರದೇಶವನ್ನು ವಿಸ್ತರಿಸಿರುವುದು ಎನ್ನಲಾಗಿದ್ದು, 12 ದೇಶಗಳಲ್ಲಿ ಪರಿಸ್ಥಿತಿ ಹದಗೆಡುತ್ತಿರುವುದನ್ನು ಕೂಡಾ ಕಾರಣವಾಗಿ ಉಲ್ಲೇಖಿಸಲಾಗಿದೆ. ಗಾಝಾದಲ್ಲಿ 6 ಲಕ್ಷ ಮಂದಿ ಸೇರಿದಂತೆ ಸುಮಾರು 7 ಲಕ್ಷ ಮಂದಿ ಕಳೆದ ವರ್ಷ ತೀವ್ರ ಹಸಿವಿನಿಂದ ಬಳಲಿದ್ದಾರೆ. ಯುದ್ಧಪೀಡಿತ ಫೆಲಸ್ತೀನ್ ಪ್ರದೇಶದಲ್ಲಿ ಈ ಸಂಖ್ಯೆ 1.1 ದಶಲಕ್ಷಕ್ಕೆ ಏರಿದೆ. ಈ ಜಾಗತಿಕ ವರದಿಯನ್ನು 2016ರಲ್ಲಿ ಆರಂಭಿಸಿದ ಬಳಿಕ ಇದುವರೆಗೆ ಆಹಾರ ಅಭದ್ರತೆ ಎದುರಿಸುತ್ತಿರುವವರ ಸಂಖ್ಯೆ 108 ದಶಲಕ್ಷದಿಂದ 282 ದಶಲಕ್ಷಕ್ಕೆ ಹೆಚ್ಚಿದೆ.
ಸ್ವಯಂ ಘೋಷಿತ 'ದೇಶ ಭಕ್ತ'ರಿಗೆ ಜಾತಿ ಗಣತಿಯ ನಡುಕ: ನರೇಂದ್ರ ಮೋದಿ ವಿರುದ್ಧ ರಾಹುಲ್ ಗಾಂಧಿ ವ್ಯಂಗ್ಯ
Lok Sabha Elections 2024: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಜಾತಿ ಗಣತಿಯ ಎಕ್ಸ್ರೇ ಬಗ್ಗೆ ಸ್ವಯಂ ಘೋಷಿತ ದೇಶಭಕ್ತರು ಗಾಬರಿಗೊಂಡಿದ್ದಾರೆ ಎಂದು ಹೇಳಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಜಾತಿ ಗಣತಿಯನ್ನು ತಡೆಯುವುದು ಯಾರಿಂದಲೂ ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.
ಕರ್ನಾಟಕದ ಕೆಲವು ಜಿಲ್ಲೆಗಳಿಗೆ ಬಿಸಿಗಾಳಿ: ಹವಾಮಾನ ಇಲಾಖೆ ಎಚ್ಚರಿಕೆ
IMD Warns Heat waves in Karnataka: ಕೆಲವು ದಿನಗಳ ಹಿಂದೆ ವಿವಿಧ ಭಾಗಗಳಲ್ಲಿ ಆರ್ಭಟಿಸಿದ್ದ ವರುಣ ಮತ್ತೆ ತಣ್ಣಗಾಗಿದ್ದಾನೆ. ಅಲ್ಲಲ್ಲಿ ಹಗುರ ಮಳೆಯಾಗುತ್ತಿದ್ದರೂ, ಸೆಕೆಯ ವಾತಾವರಣ ಜನರನ್ನು ಹಿಂಡಿ ಹಿಪ್ಪೆ ಮಾಡುತ್ತಿದೆ. ಈ ನಡುವೆ ಗುರುವಾರದಿಂದ ನಾಲ್ಕು ದಿನ ವಿವಿಧ ಜಿಲ್ಲೆಗಳಲ್ಲಿ ಬಿಸಿ ಗಾಳಿ ಬೀಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಸಾಲ ನೀಡುವ ಆ್ಯಪ್ ಗಳಿಂದ ಕಿರಿಕ್: ತಕ್ಷಣ ಹಣ ಸಿಗುತ್ತದೆ ಎಂದು ಮುಂದುವರಿದರೆ ಮಾನ ಹರಾಜು ಆಗುತ್ತೆ ಜೋಕೆ
ಕಷ್ಟಕಾಲದಲ್ಲಿ ತಕ್ಷಣಕ್ಕೆ ಸಾಲ ಸಿಗುತ್ತದೆ ಎಂದು ಲೋನ್ ಆ್ಯಪ್ ಗಳ ಮೊರೆ ಹೋದಿರೋ ಎಚ್ಚರ. ಸಾಮಾಜಿಕ ಜಾಲತಾಣಗಳಲ್ಲಿ ಬರುವ ಸಂದೇಶಗಳನ್ನು ನೋಡಿ ಆರ್ಥಿಕ ಸಂಕಷ್ಟದಲ್ಲಿ ಇರುವವರು ಇವರನ್ನು ಸಂಪರ್ಕಿಸಿದರೆ ಪ್ರಾರಂಭದಲ್ಲಿ ಚೆನ್ನಾಗಿ ಮಾತನಾಡಿ ಮರುಳು ಮಾಡುತ್ತಾರೆ. ಬಳಿಕ ಒಂದೊಂದಾಗಿಯೇ ಕಿರಿಕ್ ಶುರು ಮಾಡುತ್ತಾರೆ. ನೀವು ಹಣ ಕಟ್ಟಿದರೂ ಹೆಚ್ಚಿನ ಹಣಕ್ಕೆ ಬೇಡಿಕೆಯಿಡುತ್ತಾರೆ. ಹೆಚ್ಚಿನ ಹಣ ಕೊಡಲು ಸಾಧ್ಯವಾಗದೇ ಇದ್ದಾಗ ನಿಮ್ಮ ಫೋಟೋಗಳನ್ನು ಮಾರ್ಪಿಂಗ್ ಮಾಡಿ ಅಶ್ಲೀಲ ಚಿತ್ರಗಳನ್ನಾಗಿಸಿ ವೈರಲ್ ಮಾಡುತ್ತಾರೆ.
40 ಡಿಗ್ರಿ ಸೆಲ್ಸಿಯಸ್ ದಾಟಿದ ತಾಪಮಾನ: ಸರಳ ಮತದಾನಕ್ಕೆ ಚುನಾವಣಾ ಆಯೋಗದಿಂದ ನೆರಳ ಯೋಜನೆ!
ಸಾಮಾನ್ಯವಾಗಿ ಕಳೆದ ಎರಡು ದಶಕಗಳಿಂದ ಲೋಕಸಭಾ ಚುನಾವಣೆಯು ಪ್ರತಿ ಬಾರಿಯೂ ಬೇಸಿಗೆ ಕಾಲದಲ್ಲಿಯೇ ಬರುತ್ತಿದೆ. ಜನರೂ, ರಾಜಕಾರಣಿಗಳೂ ಅದಕ್ಕೆ ಹೊಂದಿಕೊಂಡಿದ್ದಾರೆ. ಆದರೆ ಈ ಬಾರಿ ಮಾತ್ರ ಹಿಂದೆಂದಿಗಿಂತಲೂ ಹೆಚ್ಚಿಗೆ ತಾಪಮಾನ ಇದೆ. ಬಹುತೇಕ ರಾಜ್ಯದ ಎಲ್ಲೆಡೆಗಳಲ್ಲೂ ಮನೆಯಿಂದ ಹೊರಗೆ ಕಾಲಿಟ್ಟರೆ ಮೈಸುಡುವಂತಹಾ ಬಿಸಿಲಿದೆ. ಸಹಿಸಲಸಾಧ್ಯ ಸೆಕೆಯಿದೆ. ಮಳೆ ಬಾರದ್ದರಿಂದ ಇಳೆ ಅಕ್ಷರಶಃ ಕಾದ ಕಾವಲಿಯಂತಾಗಿದ್ದಾಳೆ. ಇದು ಮತದಾನ ಪ್ರಕ್ರಿಯೆಯ ಮೇಲೂ ಪ್ರಭಾವ ಬೀರುವ ಸಾಧ್ಯತೆ ಇಲ್ಲದಿಲ್ಲ. ಹೀಗಾಗಿ ಚುನಾವಣಾ ಆಯೋಗ ವಿಶೇಷ ಸಿದ್ಧತೆ ಮಾಡಿಕೊಂಡಿದೆ.
ಡಿಕೆ ಸುರೇಶ್ ಆಪ್ತರಿಗೆ ಐಟಿ ಶಾಕ್: ರಾಜಕೀಯ ಪ್ರೇರಿತ ದಾಳಿ ಎಂದು ಕಾಂಗ್ರೆಸ್ ಪ್ರತಿಭಟನೆ
IT Raids on DK Suresh Close Aides: ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿಕೆ ಸುರೇಶ್ ಅವರ ಮತ್ತಷ್ಟು ಆಪ್ತರ ಮನೆಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬುಧವಾರ ದಾಳಿ ನಡೆಸಿ, ದಾಖಲೆಗಳನ್ನು ಪರಿಶೀಲಿಸಿದ್ದಾರೆ. ಈ ವೇಳೆ ಸಾಕಷ್ಟು ನಗದು ಮತ್ತು ಚಿನ್ನಾಭರಣಗಳನ್ನು ಜಪ್ತಿ ಮಾಡಲಾಗಿದೆ.
ಬಹುತೇಕ ಕ್ಷೇತ್ರಗಳಲ್ಲಿ ತುರುಸಿನ ಸ್ಪರ್ಧೆ: ಹಳೆ ಮೈಸೂರು ಭಾಗದಲ್ಲಿ ನಿಕಟ ಪೈಪೋಟಿ
Lok Sabha Elections 2024: ಲೋಕಸಭೆ ಚುನಾವಣೆಯ ಎರಡನೇ ಹಂತದ ಮತ್ತು ಕರ್ನಾಟಕದಲ್ಲಿ ಮೊದಲ ಹಂತದ ಮತದಾನ ಶುಕ್ರವಾರ ನಡೆಯಲಿದೆ. ಹಳೆ ಮೈಸೂರು ಭಾಗದ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ- ಜೆಡಿಎಸ್ ಮೈತ್ರಿ ನಡುವೆ ನಿಕಟ ಪೈಪೋಟಿ ನಡೆಯಲಿದೆ. ಇಲ್ಲಿ ಯಾವುದೇ ಪಕ್ಷಕ್ಕೆ ಸುಲಭದ ತುತ್ತು ಎಂದು ಪರಿಗಣಿಸಲಾಗಿರುವ ಕ್ಷೇತ್ರಗಳ ಸಂಖ್ಯೆ ಬಹಳ ಕಡಿಮೆ.
ಶೃಂಗೇರಿಯಲ್ಲಿ ತುಂಗಾ ನದಿ ಒಡಲಲ್ಲೇ ವ್ಯಾಪಾರ: ವರದಿಗೆ ಭೂಕೋರ್ಟ್ ಆದೇಶ
Illegal Shops in Tunga River Bank: ಶಾರದಾಂಬೆ ನೆಲೆಸಿರುವ ಶೃಂಗೇರಿಯಲ್ಲಿ ತುಂಗಾ ನದಿ ತೀರದಲ್ಲಿಯೇ ಅನಧಿಕೃತವಾಗಿ ಅಂಗಡಿಗಳನ್ನು ನಿರ್ಮಾಣ ಮಾಡಿರುವ ಕುರಿತಾದ ವಿಜಯ ಕರ್ನಾಟಕ ವರದಿ ನ್ಯಾಯಾಲಯದ ಗಮನ ಸೆಳೆದಿದೆ. ಸ್ವಯಂ ಪ್ರೇರಿತ ಪ್ರಕರಣ ದಾಖಲು ಮಾಡಿಕೊಂಡಿರುವ ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯ, ಈ ಬಗ್ಗೆ ವರದಿ ನೀಡುವಂತೆ ಚಿಕ್ಕಮಗಳೂರು ಜಿಲ್ಲಾಡಳಿತಕ್ಕೆ ಸೂಚನೆ ನೀಡಿದೆ.
ನಾಡಗೀತೆ ಪ್ರಕರಣದಲ್ಲಿ ಸರಕಾರದ ಆದೇಶ ಎತ್ತಿಹಿಡಿದ ಹೈಕೋರ್ಟ್ - ಎರಡೂವರೆ ನಿಮಿಷದ ಹಾಡುಗಾರಿಕೆಗೆ ಒಪ್ಪಿಗೆ
ನಾಡಗೀತೆಯನ್ನು ಹಾಡುವ ಶೈಲಿ ಹಾಗೂ ಹಾಡುವ ಕಾಲಾವಧಿಯ ವಿಚಾರವಾಗಿ 2022ರ ಸೆ. 25 ರಂದು ಕರ್ನಾಟಕ ಸರ್ಕಾರ ವಿವಿಧ ಶಾಲಾ ಕಾಲೇಜುಗಳಿಗೆ ಹೊರಡಿಸಿದ್ದ ಆದೇಶವನ್ನು ಕರ್ನಾಟಕ ಹೈಕೋರ್ಟ್ ಎತ್ತಿ ಹಿಡಿದಿದೆ. ಸರ್ಕಾರದ ಆದೇಶವನ್ನು ಪ್ರಶ್ನಿಸಿ ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಏಕಸದಸ್ಯ ಪೀಠ ತಳ್ಳಿಹಾಕಿದೆ. ಕರ್ನಾಟಕ ಶಿಕ್ಷಣ ಕಾಯಿದೆಯಡಿ ನಾಡಗೀತೆ ಕಡ್ಡಾಯಗೊಳಿಸುವ ಅಧಿಕಾರ ರಾಜ್ಯ ಸರಕಾರಕ್ಕಿದೆ ಎಂದು ತೀರ್ಪು ನೀಡಿದೆ.
ಏ. 26ರಂದು ಮತದಾನಕ್ಕೆ 14 ಲೋಕಸಭಾ ಕ್ಷೇತ್ರಗಳ 2. 88ಕೋಟಿ ಮತದಾರರು ತುದಿಗಾಲಲ್ಲಿ!
ಈ ಬಾರಿಯ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಕರ್ನಾಟಕದಲ್ಲಿ ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಏ. 26ರಂದು ಮೊದಲ ಹಂತ ಹಾಗೂ ಮೇ 7ರಂದು ಎರಡನೇ ಹಂತದ ಮತದಾನ ನಡೆಯಲಿದೆ. ಅದರಂತೆ, ಏ. 26ರಂದು ರಾಜ್ಯದ ಒಟ್ಟು 14 ಲೋಕಸಭಾ ಕ್ಷೇತ್ರಗಳ 2.88 ಕೋಟಿ ಮತದಾರರಿಂದ ಹಕ್ಕು ಚಲಾವಣೆಯಾಗಲಿದೆ. ಪ್ರತಿಯೊಂದು ಬೂತ್ ನಲ್ಲಿಯೂ ತುರ್ತು ವೈದ್ಯಕೀಯ ಸೇವೆಗಳನ್ನು ನಿಯೋಜಿಸಲಾಗಿದ್ದು, ಮತದಾನಕ್ಕಾಗಿ ಕ್ಯೂ ನಿಂತಾಗ ಯಾರಿಗಾದರೂ ಬಿಸಿಲಾಘಾತವಾದರೆ ತುರ್ತು ವೈದ್ಯಕೀಯ ಚಿಕಿತ್ಸೆಯೂ ಸಿಗಲಿದೆ.
ಹಾಸನ, ಮಂಡ್ಯದಲ್ಲಿ ‘ಮೈತ್ರಿ’ ಅಸಹಕಾರ - ಮಾಜಿ ಪ್ರಧಾನಿ ದೇವೇಗೌಡರ ಅಸಮಾಧಾನ
ಹಾಸನ ಮತ್ತು ಮಂಡ್ಯ ಲೋಕಸಭಾ ಕ್ಷೇತ್ರಗಳಲ್ಲಿ ಮೈತ್ರಿ ಅಭ್ಯರ್ಥಿಗಳಿಗೆ ಯಾವುದೇ ಸಹಕಾರ ಸಿಗುತ್ತಿಲ್ಲ ಎದಂು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕರ್ನಾಟಕದಲ್ಲಿ ಮೊದಲ ಸುತ್ತಿನ ಮತದಾನಕ್ಕೆ ಇನ್ನೊಂದೇ ದಿನ ಬಾಕಿಯಿದೆ. ಆದರೂ, ಮೈತ್ರಿಯ ಬಗ್ಗೆ ಬಿಜೆಪಿ ಹಾಗೂ ಜೆಡಿಎಸ್ ನಡುವೆ ಇನ್ನೂ ಒಮ್ಮತ ಮೂಡಿಲ್ಲ ಎಂದು ಬೇಸರ ಹೊರಹಾಕಿದ್ದಾರೆ. ಮಂಡ್ಯದಲ್ಲಿ ಸುಮಲತಾ ಅವರು ಕುಮಾರಸ್ವಾಮಿಗೆ ಸಹಾಯ ಮಾಡಿಲ್ಲ. ಹಾಸನದಲ್ಲಿ ಪ್ರಜ್ವಲ್ ರೇವಣ್ಣಗೆ ಬಿಜೆಪಿ ನಾಯಕರು ಸಹಾಯ ಮಾಡಿಲ್ಲ. ಹಾಗಂತ ಅವರು ಸೋಲುತ್ತಾರೆ ಎಂದರ್ಥವಲ್ಲ ಎಂದು ಹೇಳಿದ್ದಾರೆ.
ಹಾರ್ದಿಕ್ ಪಾಂಡ್ಯಗೆ ಕೊಕ್ - ಟಿ20 ವಿಶ್ವಕಪ್ಗೆ ಭಾರತ ತಂಡ ಕಟ್ಟಿದ ವೀರೇಂದ್ರ ಸೆಹ್ವಾಗ್!
Team India Playing 11 for ICC T20 World Cup 2024: ಹದಿನೇಳನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಆಟಗಾರರು ನೀಡುತ್ತಿರುವ ಪ್ರದರ್ಶನ ಗಮನದಲ್ಲಿಟ್ಟು, ಮುಂಬರುವ ಐಸಿಸಿ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಗೆ ಭಾರತ ತಂಡ ಆಯ್ಕೆ ಮಾಡಿಕೊಳ್ಳಬೇಕಾದ 11 ಆಟಗಾರರನ್ನು ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಹೆಸರಿಸಿದ್ದಾರೆ. ಅಮೆರಿಕ ಮತ್ತು ವೆಸ್ಟ್ ಇಂಡೀಸ್ನ ಜಂಟಿ ಆತಿಥ್ಯದಲ್ಲಿ ನಡೆಯಲಿರುವ ಐಸಿಸಿ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿ ಜೂನ್ 1ರಿಂದ 29ರವರೆಗೆ ಆಯೋಜನೆ ಆಗಲಿದೆ.
'4 ಓವರ್ಗಳಿಗೆ 73 ರನ್' : ಐಪಿಎಲ್ನ ಅತ್ಯಂತ ದುಬಾರಿ ಸ್ಪೆಲ್ ಮಾಡಿದ ಮೋಹಿತ್ ಶರ್ಮಾ!
most expensive bowling figures in IPL: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯ ಇತಿಹಾಸದಲ್ಲಿಯೇ ಗುಜರಾತ್ ಟೈಟನ್ಸ್ ವೇಗಿ ಮೋಹಿತ್ ಶರ್ಮಾ ಅತ್ಯಂತ ದುಬಾರಿ ಬೌಲಿಂಗ್ ಸ್ಪೆಲ್ ಮಾಡಿದ್ದಾರೆ. ಬುಧವಾರ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಬೌಲ್ ಮಾಡಿದ ಕೇವಲ ಓವರ್ಗಳಿಗೆ 18.20ರ ಎಕಾನಮಿ ರೇಟ್ನಲ್ಲಿ 73 ರನ್ಗಳನ್ನು ಬಿಟ್ಟುಕೊಟ್ಟಿದ್ದರು. ಆ ಮೂಲಕ ಐಪಿಎಲ್ ಇತಿಹಾಸದಲ್ಲಿಯೇ ಅತ್ಯಂತ ದುಬಾರಿ ಬೌಲಿಂಗ್ ಸ್ಪೆಲ್ ಮಾಡಿದ ಬೌಲರ್ ಎಂಬ ಅನಗತ್ಯ ದಾಖಲೆಯನ್ನು ಹೆಗಲೇರಿಸಿಕೊಂಡಿದ್ದಾರೆ.
ಚಾಂಪಿಯನ್ಸ್ ಟ್ರೋಫಿ ಆಡಲು ಪಾಕಿಸ್ತಾನಕ್ಕೆ ಭಾರತ ತಂಡವನ್ನು ಕಳುಹಿಸಲ್ಲ: ಬಿಸಿಸಿಐ!
Champions Trophy 2025: 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಆಡುವ ಸಲುವಾಗು ಭಾರತ ತಂಡವನ್ನು ತಮ್ಮ ದೇಶಕ್ಕೆ ಕರೆಸಿಕೊಳ್ಳುವ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಪ್ರಯತ್ನಗಳು ವಿಫಲವಾಗುತ್ತಿವೆ. ಇದಕ್ಕಾಗಿ 2023ರ ಏಕದಿನ ವಿಶ್ವಕಪ್ ಟೂರ್ನಿಯ ಅಂತ್ಯದಿಂದಲೂ ಪ್ರಯತ್ನಿಸುತ್ತಿರುವ ಪಿಸಿಬಿ, ಪಾಕಿಸ್ತಾನದ ನೆಲದಲ್ಲಿ ಆಡುವ ಭರವಸೆಯನ್ನು ನೀಡುವಂತೆ ಬಿಸಿಸಿಐಗೆ ಕೇಳುತ್ತಿದೆ. ಆದರೆ ಭಾರತ ತಂಡ ಪಾಕಿಸ್ತಾನಕ್ಕೆ ಹೋಗುವುದು ಬಹುತೇಕ ಅನುಮಾನ ಎಂದು ಕಾಣುತ್ತಿದೆ. ಬಿಸಿಸಿಐ ಮೂಲಗಳ ಪ್ರಕಾರ ಭಾರತ ಯಾವುದೇ ಸಂದರ್ಭದಲ್ಲೂ ಪಾಕಿಸ್ತಾನಕ್ಕೆ ಹೋಗುವುದಿಲ್ಲ ಮತ್ತು ತಟಸ್ಥ ಸ್ಥಳದಲ್ಲಿ ಟೂರ್ನಿಯನ್ನು ಆಯೋಜಿಸುವ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಶಾಸಕ ಉದಯ್ ಗರುಡಾಚಾರ್ಗೆ ಹೈಕೋರ್ಟ್ ಕ್ಲೀನ್ ಚೀಟ್; ಕೆಳ ಹಂತದ ಕೋರ್ಟ್ ವಿಧಿಸಿದ್ದ ಜೈಲು ಶಿಕ್ಷೆ ರದ್ದು!
MLA Uday Garudachar : ಕಳೆದ ಚುನಾವಣೆ ಸಮಯದಲ್ಲಿ ಕ್ರಿಮಿನಲ್ ಪ್ರಕರಣಗಳ ಮರೆ ಮಾಚಿದ ಆರೋಪ ಎದುರಿಸುತ್ತಿದ್ದ ಶಾಸಕ ಉದಯ್ ಗರುಡಾಚಾರ್ಗೆ ಹೈಕೋರ್ಟ್ ಕ್ಲೀನ್ ಚೀಟ್ ನೀಡಿದೆ. ಕಳೆ ಹಂತದ ನ್ಯಾಯಾಲಯ ವಿಧಿಸಿದ್ದ ಜೈಲು ಶಿಕ್ಷೆ, ದಂಡ ಮೊತ್ತವನ್ನು ರದ್ದು ಮಾಡಿದೆ. ಈ ಬಗ್ಗೆ ವಿವರ ಇಲ್ಲಿದೆ.
ನೇಹಾ ಕೊಲೆ ಪ್ರಕಾರಣ: ಕೊಲೆ ಆರೋಪಿ ಫಯಾಜ್ ಕೊಲೆಯಾದ ಸ್ಥಳಕ್ಕೆ ಮಹಜರು
ಹುಬ್ಬಳ್ಳಿಯಲ್ಲಿ ಇತ್ತೀಚೆಗೆ ನಡೆದಿರುವ ನೇಹಾ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಫಯಾಜ್ ನನ್ನು ಏ. 24ರಂದು ಕೊಲೆಯಾದ ಜಾಗಕ್ಕೆ ಕರೆದೊಯ್ದಿದ್ದ ಪೊಲೀಸರು, ಸ್ಥಳ ಮಹಜರು ನಡೆಸಿದರು. ಕೇಂದ್ರ ಕಾರಾಗೃಹದಿಂದ ಆರೋಪಿಯ ಆರೋಗ್ಯ ತಪಾಸಣೆ ನಡೆಸಿದ ಪೊಲೀಸರು ಆನಂತರ ಸಿಐಡಿ ಅಧಿಕಾರಿಗಳು ನೇರವಾಗಿ ಹುಬ್ಬಳ್ಳಿಯ ಬಿವಿಬಿ ಇಂಜಿನಿಯರಿಂಗ್ ಕಾಲೇಜಿಗೆ ಕರೆದೊಯ್ದ ಪೊಲೀಸರು ಅಲ್ಲಿ ಘಟನೆ ನಡೆದಿದ್ದರ ಬಗ್ಗೆ ಸಿಐಡಿ ಅಧಿಕಾರಿಗಳು ಆರೋಪಿಯಿಂದ ಮಾಹಿತಿ ಪಡೆದರು.
ಲೋಕಸಭಾ ಚುನಾವಣಾ ಪ್ರಚಾರ ಸಭೆಯ ವೇದಿಕೆಯಲ್ಲಿ ಪ್ರಜ್ಞೆ ತಪ್ಪಿ ಕುಸಿದು ಬಿದ್ದ ಸಚಿವ ನಿತಿನ್ ಗಡ್ಕರಿ!
Nitin Gadkari Fell Unconscious : ಸಚಿವ ನಿತಿನ್ ಗಡ್ಕರಿ ಅವರು ಸಾರ್ವಜನಿಕ ಸಭೆಯಲ್ಲಿ ಕುಸಿದು ಬಿದ್ದಿದ್ದಾರೆ. ಹೆಚ್ಚಿನ ನಿಗಾ, ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿದೆ>ಈ ಬಗ್ಗೆ ಮಾಹಿತಿ ಇಲ್ಲಿದೆ.
Siddaramaiah On Modi Muslim Reservation Statement : ಪ್ರಧಾನಿ ಮೋದಿ ಅವರು ಕರ್ನಾಟಕದಲ್ಲಿ ದಲಿತರ, ಹಿಂದುಳಿದವರ ಮೀಸಲಾತಿ ಕಿತ್ತು ಮುಸ್ಲಿಮರಿಗೆ ನೀಡಲಾಗುತ್ತಿದೆ ಎಂದು ಹೇಳಿಕೆ ನೀಡಿದ್ದರು. ಈ ಬಗ್ಗೆ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ಇಲ್ಲಿದೆ ಸಿಎಂ ಸ್ಪಷ್ಟನೆ.
ಇದು ಜನಸಾಮಾನ್ಯರ ಚುನಾಚಣೆಯಲ್ಲ ಶ್ರೀಮಂತರ ಚುನಾಚಣೆ: ವಾಟಾಳ್ ನಾಗರಾಜ್
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಹಿರಿಯ ರಾಜಕಾರಣಿ ವಾಟಾಳ್ ನಾಗರಾಜ್ ಅವರು ಸ್ಪರ್ಧಿಸಿದ್ದಾರೆ. ತಮ್ಮ ವಿಭಿನ್ನ ಬಗೆಯ ಹೋರಾಟಗಾರರಿಂದಲೇ ಹೆಸರುವಾಸಿಯಾಗಿರುವ ವಾಟಾಳ್ ಅವರು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಅವರನ್ನು ವಿಜಯ ಕರ್ನಾಟಕ ವೆಬ್ ಮಾತನಾಡಿಸಿತು. ಆ ಸಂದರ್ಭದಲ್ಲಿ ಅವರು, ಇತ್ತೀಚೆಗಿನ ಚುನಾವಣೆಗಳು ಶ್ರೀಮಂತರ ಚುನಾವಣೆಗಳಾಗಿದ್ದು, ಬಡವರ ಅಥವಾ ಜನಸಾಮಾನ್ಯರ ಚುನಾವಣೆಗಳಾಗಿ ಉಳಿದಿಲ್ಲ ಎಂದು ಹೇಳಿದ್ದಾರೆ.
ಸಿದ್ದರಾಮಯ್ಯ ಸರ್ಕಾರ ಗ್ಯಾರಂಟಿ ಕೊಟ್ಟು ಕಿತ್ತುಕೊಂಡಿದ್ದು ಎಲ್ಲೆಲ್ಲಿ : ಪ್ರಲ್ಹಾದ್ ಜೋಶಿ ಕೊಟ್ಟ ಲೆಕ್ಕ
Guarantee Scheme Adjustment : ಸಿದ್ದರಾಮಯ್ಯನವರ ಸರ್ಕಾರ ಗ್ಯಾರಂಟಿಗಳಿಗೆ ದುಡ್ಡು ಹೊಂದಿಸಲು ಏಲ್ಲೆಲ್ಲಿ ದರವನ್ನು ಏರಿಸಿತು ಎನ್ನುವ ಲೆಕ್ಕವನ್ನು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಿವರಿಸಿದ್ದಾರೆ. ಸಿದ್ದರಾಮಯ್ಯ ಸರ್ಕಾರ ಹೇಗೆ ಪಿಕ್ ಪಾಕೆಟ್ ಮಾಡುತ್ತಿದೆ ಎನ್ನುವುದನ್ನು ವಿವರಿಸಿದ್ದಾರೆ.
ಕುಡಿಯುವ ನೀರಿನ ಸಮಸ್ಯೆ| 3 ಗ್ರಾಮಗಳಿಗೆ ಟ್ಯಾಂಕರ್ ನೀರು: ಉಡುಪಿ ಜಿಲ್ಲಾಧಿಕಾರಿ
ಉಡುಪಿ, ಎ.24: ಉಡುಪಿ ಜಿಲ್ಲೆಯ ಸದ್ಯ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಿಲ್ಲ. ಬ್ರಹ್ಮಾವರ ತಾಲೂಕಿನ ಮೂರು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಸಂಬಂಧ ಟ್ಯಾಂಕರ್ ನೀರು ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಡಾ.ವಿದ್ಯಾ ಕುಮಾರಿ ಕೆ. ತಿಳಿಸಿದ್ದಾರೆ. ಕೊಕ್ಕರ್ಣೆ, ಕಳತ್ತೂರು, ಕರ್ಜೆ ಗ್ರಾಪಂ ವ್ಯಾಪ್ತಿಯ ಕೆಲವು ಪ್ರದೇಶಗಳಲ್ಲಿ ನೀರಿನ ಕೊರತೆ ಎದುರಾಗಿದ್ದು, ಅಲ್ಲಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಲು ಕ್ರಮ ತೆಗೆದುಕೊಳ್ಳಲಾಗಿದೆ. ಅದೇ ರೀತಿ ಬೈಂದೂರು ತಾಲೂಕಿನ ಉಪ್ಪುಂದ ಗ್ರಾಪಂ ವ್ಯಾಪ್ತಿಯ ಮನೆಗಳ ಬಾವಿಗಳಲ್ಲಿ ಉಪ್ಪು ನೀರಿನ ಸಮಸ್ಯೆ ಇದ್ದು, ಅಲ್ಲಿಗೂ ಟ್ಯಾಂಕರ್ ವ್ಯವಸ್ಥೆ ಮಾಡಬೇಕಾಗುತ್ತಿದೆ ಎಂದರು. ಕೆಲ ದಿನಗಳ ಹಿಂದೆ ಜಿಲ್ಲೆಯಲ್ಲಿ 62 ಮೀ.ಮೀಟರ್ ಮಳೆಯಾಗಿದೆ. ಉಡುಪಿ ನಗರಕ್ಕೆ ನೀರು ಉಣಿಸುವ ಬಜೆ ಡ್ಯಾಂನಲ್ಲಿ ಸದ್ಯ ನೀರಿನ ಸಂಗ್ರಹ ಇದ್ದು, ಇದು ಮೇ 10ರವರೆಗೆ ಸಾಕಾಗಬಹುದು ಎಂದು ಅಂದಾಜಿಸಲಾಗಿದೆ ಎಂದು ಅವರು ಹೇಳಿದರು.
ಸದ್ಯಕ್ಕೆ ಪೆಟ್ರೋಲ್ ಡೀಸೆಲ್ ವಾಹನ ಖರೀದಿಸಬೇಡಿ! ಹೊರಬಿಟ್ಟು ಊಹಿಸದ ಸಿಹಿಸುದ್ದಿ
ಕೆಲ ನ್ಯೂಸ್ ಪೇಪರ್ಗಳಲ್ಲಿ ಎಲೆಕ್ಟ್ರಿಕ್ ವಾಹನಗಳ (Electric Vehicles) ಮೇಲಿನ ಬೆಲೆ 30% ಕಡಿಮೆಯಾಗಲಿದೆ ಎಂಬ ಮಾಹಿತಿ ಹರಿದಾಡುತ್ತಿದೆ. ಇದಕ್ಕೆ ಮುಖ್ಯ ಕಾರಣ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಉಪಯೋಗಿಸುತ್ತಿರುವ ಬ್ಯಾಟರಿ ಮತ್ತು ಚಿಪ್ಪಿನ ಬೆಲೆಯಲ್ಲಿ ಇಳಿಕೆ ಕಂಡಿರುವುದು. The post ಸದ್ಯಕ್ಕೆ ಪೆಟ್ರೋಲ್ ಡೀಸೆಲ್ ವಾಹನ ಖರೀದಿಸಬೇಡಿ! ಹೊರಬಿಟ್ಟು ಊಹಿಸದ ಸಿಹಿಸುದ್ದಿ appeared first on Karnataka Times .
ಬೆಂಗಳೂರು | ಕಾಂಬೋಡಿಯಾಗೆ 111 ಸಿಮ್ ಕಾರ್ಡ್ಗಳನ್ನು ಕೊರಿಯರ್ ಮಾಡಲು ಯತ್ನಿಸಿದ ವ್ಯಕ್ತಿ ವಿರುದ್ಧ ಎಫ್ಐಆರ್ ದಾಖಲು
ಬೆಂಗಳೂರು : ಖಾಸಗಿ ಕೊರಿಯರ್ ಸೇವೆಯ ಮೂಲಕ 111 ಸಿಮ್ ಕಾರ್ಡ್ಗಳನ್ನು ಕಾಂಬೋಡಿಯಾಗೆ ಕಳುಹಿಸಲು ಯತ್ನಿಸಿದ ಆರೋಪದಡಿ ಚೆನ್ನೈ ಮೂಲದ ವ್ಯಕ್ತಿಯ ವಿರುದ್ಧ ಇಲ್ಲಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿರುವುದಾಗಿ ವರದಿಯಾಗಿದೆ. ಚೆನ್ನೈ ಮೂಲದ ಸೈಯದ್(37) ಎಂಬಾತ ಫೆ.2ರಂದು ಕಾಂಬೋಡಿಯಾಗೆ ಪಾರ್ಸೆಲ್ ಕಳುಹಿಸಲು ಬ್ಲೂ ಡಾರ್ಟ್ ಎಕ್ಸ್ ಪ್ರೆಸ್ ಸೇವೆ ಬಳಸಿದ್ದಾರೆ. ಪಾರ್ಸೆಲ್ಗಳನ್ನು ಸ್ಕ್ಯಾನ್ ಮಾಡುವ ಸ್ಕ್ಯಾನರ್ ಸಿಮ್ ಕಾರ್ಡ್ಗಳು ಇರುವುದನ್ನು ಪತ್ತೆಹಚ್ಚಿದೆ ಎಂದು ಎಫ್ಐಆರ್ ನಲ್ಲಿ ಉಲ್ಲೇಖಸಲಾಗಿದೆ ಎಂದು ಗೊತ್ತಾಗಿದೆ. ಈ ಪ್ರಕರಣವನ್ನು ಹೇಗೆ ನಿಭಾಯಿಸಬೇಕು ಎಂಬುದರ ಕುರಿತು ಕಳೆದ ಎರಡು ತಿಂಗಳಿನಿಂದ ಆಂತರಿಕವಾಗಿ ಚರ್ಚೆ ನಡೆಯುತ್ತಿತ್ತು. ಕೊನೆಗೆ ಪೊಲೀಸರನ್ನು ಸಂಪರ್ಕಿಸಿ ದೂರು ನೀಡಲು ನಿರ್ಧರಿಸಲಾಯಿತು ಎಂದು ವಿಮಾನ ನಿಲ್ದಾಣ ಅಧಿಕಾರಿಗಳು ತಿಳಿಸಿದ್ದಾರೆ. ಆರೋಪಿ ಸೈಯದ್ ವಿರುದ್ಧ ಎ.22ರಂದು ದೂರಸಂಪರ್ಕ ಕಾಯ್ದೆ ಮತ್ತು ಐಪಿಸಿ ಸೆಕ್ಷನ್ 424 ಮತ್ತು 120 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಈ ಬಗ್ಗೆ ತನಿಖೆ ಮುಂದುವರೆಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮಲ್ಪೆ ಬೀಚ್ನಲ್ಲಿ ಪ್ರವಾಸಿಗರು ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಲು ಕರೆ
ಉಡುಪಿ: ಮಲ್ಪೆ ಬೀಚ್ ಪ್ರದೇಶಕ್ಕೆ ಆಗಮಿಸುವ ಪ್ರವಾಸಿಗರು ಹಾಗೂ ಸಾರ್ವಜನಿಕರು ಬೀಚ್ ಪ್ರದೇಶದಲ್ಲಿ ಸೂಚಿಸಿರು ವಂತಹ ಸುರಕ್ಷತಾ ಮಾಹಿತಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಹಾಗೂ ಮದ್ಯಪಾನ ಮಾಡಿ ನೀರಿಗೆ ಇಳಿಯುವುದು, ಕಡಲ ತೀರದ ಅನಧಿ ದೂರದಲ್ಲಿ ಈಜುವುದು ಹಾಗೂ ಅಪಾಯವಿರುವಂತಹ ಸ್ಥಳದಲ್ಲಿ ನೀರಿಗೆ ಇಳಿಯುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿರುತ್ತದೆ. ಈ ಸೂಚನೆಗಳನ್ನು ಉಲ್ಲಂಘಿಸುವ ಪ್ರವಾಸಿಗರ ಮೇಲೆ ದಂಡ ವಿಧಿಸಿ, ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ನಗರಸಭೆ ಪೌರಾಯುಕ್ತರ ಕಚೇರಿ ಪ್ರಕಟಣೆ ತಿಳಿಸಿದೆ.
ಲೋಕಸಭಾ ಚುನಾವಣೆ| ಎ. 25-26ಕ್ಕೆ ಕುಂದಾಪುರ-ಬೆಂಗಳೂರು ಮಧ್ಯೆ ವಿಶೇಷ ರೈಲು ಸಂಚಾರ
ಉಡುಪಿ: ಎ.26ರಂದು ನಡೆಯುವ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಮತದಾನಕ್ಕಾಗಿ ಬೆಂಗಳೂರಿನಲ್ಲಿರುವ ಕರಾವಳಿಯ ಮತದಾರ ರು ಊರಿಗೆ ಬರಲು ಅನುಕೂಲವಾಗುವಂತೆ ಕೊಂಕಣ ರೈಲ್ವೆ ಕುಂದಾಪುರ ಮತ್ತು ಯಶವಂತಪುರಗಳ ನಡುವೆ ಎ.25 ಹಾಗೂ ಎ.26ರಂದು ವನ್ವೇ ವಿಶೇಷ ರೈಲನ್ನು ದಕ್ಷಿಣ-ಪಶ್ಚಿಮ ರೈಲ್ವೆಯ ಸಹಯೋಗದೊಂದಿಗೆ ಓಡಿಸಲು ನಿರ್ಧರಿಸಿದೆ. ರೈಲು ನಂ.06547 ಯಶವಂತಪುರ- ಕುಂದಾಪುರ ವನ್ವೇ ಎಕ್ಸ್ಪ್ರೆಸ್ ವಿಶೇಷ ರೈಲು ಎ.25ರ ರಾತ್ರಿ 11:20ಕ್ಕೆ ಯಶವಂತಪುರ ರೈಲು ನಿಲ್ದಾಣದಿಂದ ಹೊರಡಲಿದ್ದು, ಮರುದಿನ ಎ.26ರ ಬೆಳಗ್ಗೆ 10:45ಕ್ಕೆ ಕುಂದಾಪುರ ತಲುಪಲಿದೆ. ಈ ರೈಲಿಗೆ ನೆಲಮಂಗಲ, ಕುಣಿಗಲ್, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ, ಕಬಕ ಪುತ್ತೂರು, ಬಂಟ್ವಾಳ, ಸುರತ್ಕಲ್, ಮುಲ್ಕಿ, ಉಡುಪಿ ಹಾಗೂ ಬಾರಕೂರು ನಿಲ್ದಾಣಗಳಲ್ಲಿ ನಿಲುಗಡೆ ಇರುತ್ತದೆ. ಅದೇ ರೀತಿ ರೈಲು ನಂ.06548 ಕುಂದಾಪುರ- ಯಶವಂತಪುರ ವನ್ವೇ ಎಕ್ಸ್ಪ್ರೆಸ್ ವಿಶೇಷ ರೈಲು ಎ.26ರ ಶುಕ್ರವಾರ ಬೆಳಗ್ಗೆ 11:20ಕ್ಕೆ ಕುಂದಾಪುರ ದಿಂದ ಪ್ರಯಾಣ ಬೆಳೆಸಲಿದ್ದು ಅದೇ ದಿನ ರಾತ್ರಿ 9:50ಕ್ಕೆ ಯಶವಂತಪುರ ರೈಲು ನಿಲ್ದಾಣ ತಲುಪಲಿದೆ. ಈ ರೈಲಿಗೆ ಬಾರಕೂರು, ಉಡುಪಿ, ಮುಲ್ಕಿ, ಸುರತ್ಕಲ್, ಮಂಗಳೂರು ಜಂಕ್ಷನ್, ಬಂಟ್ವಾಳ, ಕಬಕ ಪುತ್ತೂರು, ಸುಬ್ರಹ್ಮಣ್ಯ, ಸಕಲೇಶಪುರ, ಹಾಸನ ಹಾಗೂ ಕುಣಿಗಲ್ ನಿಲ್ದಾಣಗಳಲ್ಲಿ ನಿಲುಗಡೆ ಇರುತ್ತದೆ. ಈ ರೈಲು ಒಟ್ಟು 21 ಬೋಗಿಗಳೊಂದಿಗೆ ಸಂಚರಿಸಲಿದೆ. ಈ ಕುರಿತು ಹೆಚ್ಚಿನ ಮಾಹಿತಿ ಹಾಗೂ ಸಮಯದ ಕುರಿತು ತಿಳಿಯಲು ವೈಬ್ಸೈಟ್ -www.enquiry.indianrail.gov.in- ಸಂದರ್ಶಿಸಬಹುದು ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.
ಬಿಜೆಪಿ ಸಾಮಾಜಿಕ ನ್ಯಾಯ, ಬಡವರ ಹಿತಕ್ಕೆ ವಿರುದ್ಧವಾಗಿರುವ ಪಕ್ಷ : ಸಿಎಂ ಸಿದ್ದರಾಮಯ್ಯ
ಬೀದರ್ : ಬಿಜೆಪಿ ಆಡಳಿತದ ಅವಧಿಯಲ್ಲಿ ಸಂವಿಧಾನ ಅಪಾಯದಲ್ಲಿದ್ದು, ಅದನ್ನು ರಕ್ಷಣೆ ಮಾಡಬೇಕಿದೆ. ಪ್ರಜಾಪ್ರಭುತ್ವದ ಉಳಿವಿಗಾಗಿ ಎಲ್ಲರೂ ಚಿಂತನೆ ನಡೆಸಬೇಕು. ದೇಶದ ಭವಿಷ್ಯ ರೂಪಿಸಲು ಇದು ಬಹಳ ಮುಖ್ಯ. ಜನತೆ ವಿಚಾರ ಮಾಡಿ ಯಾವ ಪಕ್ಷಕ್ಕೆ ಅಧಿಕಾರ ಕೊಟ್ಟರೆ ದೇಶದ ಹಿತ ಕಾಪಾಡುತ್ತಾರೆ ಎಂದು ತೀರ್ಮಾನಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು. ಅವರು ಇಂದು ಕೆಪಿಸಿಸಿ ವತಿಯಿಂದ ಶ್ರೀ ರಾಮ ಮಾರ್ಕೆಟ್ ಮೈದಾನದಲ್ಲಿ ಆಯೋಜಿಸಲಾಗಿದ್ದ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಸಾಗರ್ ಖಂಡ್ರೆ ಪರವಾಗಿ ಪ್ರಜಾಧ್ವನಿ -02 ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಬಿಜೆಪಿ ಸಾಮಾಜಿಕ ನ್ಯಾಯದ ವಿರುದ್ಧ, ಬಡವರ ಹಿತಕ್ಕೆ ವಿರುದ್ಧವಾಗಿರುವ ಪಕ್ಷ ನರೇಂದ್ರ ಮೋದಿಯವರು 10 ವರ್ಷಗಳಿಂದ ಪ್ರಧಾನ ಮಂತ್ರಿಯಾಗಿದ್ದಾರೆ. ಈ ಸುದೀರ್ಘ ಅವಧಿಯಲ್ಲಿ ಈ ದೇಶದ ಬಡವರಿಗೆ , ದಲಿತರಿಗೆ, ಹಿಂದುಳಿದವರಿಗೆ, ಅಲ್ಪಸಂಖ್ಯಾತರಿಗೆ ಕಾರ್ಯಕ್ರಮಗಳನ್ನು ಕೊಟ್ಟಿಲ್ಲ. ಈ ವರ್ಗದ ಪರವಾಗಿ ಯಾವತ್ತೂ ಕೆಲಸ ಮಾಡಿಲ್ಲ. ಬಿಜೆಪಿ ಸಾಮಾಜಿಕ ನ್ಯಾಯದ ವಿರುದ್ಧ, ಬಡವರ ಹಿತಕ್ಕೆ ವಿರುದ್ಧವಾಗಿರುವ ಪಕ್ಷ. ಸಂವಿಧಾನ, ಪ್ರಜಾಪ್ರಭುತ್ವಕ್ಕೆ ವಿರೋಧಿಯಾಗಿರುವ ಪಕ್ಷ. ಇದನ್ನು ಜನರು ಗಮನದಲ್ಲಿರಿಸಿಕೊಳ್ಳಬೇಕು ಎಂದು ನುಡಿದರು. ನರೇಂದ್ರ ಮೋದಿ ನೀಡಿದ್ದ ಭರವಸೆಗಳನ್ನು ಒಮ್ಮೆ ನೆನಪಿಸಿಕೊಳ್ಳಿ. ಭರವಸೆಗಳನ್ನು ಈಡೇರಿಸದಿದ್ದ ಮೇಲೆ ಅವರಿಗೆ ಮತ ಕೇಳುವ ನೈತಿಕತೆ ಇಲ್ಲ. ದೇಶದ ಯುವಕರಿಗೆ ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದು ಹೇಳಿ ನಿರುದ್ಯೋಗದ ಸಮಸ್ಯೆಯನ್ನು ಹೆಚ್ಚಿಸಿದ್ದಾರೆ. ರೈತರ ಆದಾಯ ಎರಡು ಪಟ್ಟು ಹೆಚ್ಚಿಸುತ್ತೇವೆ ಎಂದು ಹೇಳಿ, 10 ವರ್ಷಗಳಲ್ಲಿ ಒಂದು ರೂಪಾಯಿ ಕೂಡ ಹೆಚ್ಚಾಗಿಲ್ಲ. ಅದಕ್ಕೆ ಬದಲಾಗಿ ವೆಚ್ಚ ಹೆಚ್ಚಾಗಿದೆ. ಎಲ್ಲಾ ಅಗತ್ಯ ವಸ್ತುಗಳ ಬೆಲೆ ಇಳಿಸುತ್ತೇನೆ ,ಬಡವರ, ಮಧ್ಯಮವರ್ಗದ ಜನರ ಬದುಕು ಹಸನು ಮಾಡುತ್ತೇವೆ, ಅಚ್ಚೇ ದಿನ್ ಬರುತ್ತದೆ ಎಂದು ಹೇಳಿ ಎಲ್ಲಾ ಅಗತ್ಯ ವಸ್ತುಗಳ ಬೆಲೆಯನ್ನು ಹೆಚ್ಚಿಸಿದ್ದಾರೆ. ರೈತರು ಕೆಲವು ತಿಂಗಳಿನಿಂದ ಸಾಲ ಮನ್ನಾ, ಎಂ.ಎಸ್.ಪಿ ಕೊಡಲು ಕಾನೂನು ಮಾಡಬೇಕೆಂದು ಚಳುವಳಿ ಮಾಡುತ್ತಿದ್ದಾರೆ. ರೈತರು ಸತ್ತರೂ ಅವರ ಬೇಡಿಕೆ ಈಡೇರಿಸುವ ಪ್ರಯತ್ನ ಮಾಡಲಿಲ್ಲ ಎಂದು ಆಕ್ರೋಶ ಹೊರಹಾಕಿದರು. 10 ವರ್ಷಗಳಲ್ಲಿ ಬಿಜೆಪಿ ಯಾವ ಭರವಸೆಗಳನ್ನು ಈಡೇರಿಸಿಲ್ಲ : ನರೇಂದ್ರ ಮೋದಿಯವರು ಅವರು 10 ವರ್ಷಗಳಲ್ಲಿ ನೀಡಿದ್ದ ಯಾವ ಭರವಸೆಗಳನ್ನು ಬಗೆಹರಿಸಿಲ್ಲ. ನಾವು ಹಿಂದೆ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ 165 ರಲ್ಲಿ 158 ಭರವಸೆಗಳನ್ನು ಈಡೇರಿಸಿದ್ದಲ್ಲದೇ 30 ಹೊಸ ಯೋಜನೆಗಳನ್ನು ಜಾರಿ ಮಾಡಿದ್ದೇವೆ. 2023 ರಲ್ಲಿ ನಮ್ಮ ಪ್ರಣಾಳಿಕೆಯಲ್ಲಿ ಅನೇಕ ಭರವಸೆ ನೀಡಿ, 82 ಭರವಸೆಗಳನ್ನು ಈಡೇರಿಸಿ 5 ಗ್ಯಾರಂಟಿಗಳನ್ನೂ ಅಧಿಕಾರಕ್ಕೆ ಬಂದ 8 ತಿಂಗಳಲ್ಲಿ ಜಾರಿ ಮಾಡಿದ್ದೇವೆ. 195 ಕೋಟಿ ಮಹಿಳೆಯರು ಶಕ್ತಿ ಯೋಜನೆಯಡಿ ಪ್ರಯಾಣ ಮಾಡಿದ್ದಾರೆ. ಅನ್ನಭಾಗ್ಯ, ಗೃಹಲಕ್ಷ್ಮೀ, ಗೃಹ ಜ್ಯೋತಿ, ಯುವನಿಧಿ ಯೋಜನೆಗಳನ್ನು ಜಾರಿ ಮಾಡಿದ್ದೇವೆ ಎಂದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರೈತರ ಸಾಲ ಸಂಪೂರ್ಣ ಮನ್ನಾ : ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ರೈತರ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಲಾಗುವುದು. ರೈತರು ಬೆಳೆದ ಬೆಳೆಗಳಿಗೆ ನ್ಯಾಯಯುತ ಬೆಲೆ ನೀಡಲು ಎಂ.ಎಸ್.ಪಿ ಯನ್ನು ಕಾನೂನಿನ ಚೌಕಟ್ಟಿಗೆ ತರಲಾಗುವುದು. ನರೇಂದ್ರ ಮೋದಿಯವರು ರೈತರ ಸಾಲ ಮನ್ನಾ ಮಾಡಿಲ್ಲ. ಆದರೆ ಮನ್ ಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ 72000 ಕೋಟಿ ರೂ.ಗಳನ್ನು ಸಾಲಮನ್ನಾ ಮಾಡಿದ್ದಾರೆ . ನಮ್ಮ ಅವಧಿಯಲ್ಲಿ ರಾಜ್ಯ ಸರ್ಕಾರ 50,000 ರೂ.ಗಳ ವರೆಗೆ ಸೊಸೈಟಿಗಳಲ್ಲಿ ಪಡೆದ ಬೆಳೆ ಸಾಲವನ್ನು 27 ಲಕ್ಷ ರೈತರ ಸಾಲ ಮನ್ನಾ ಮಾಡಲಾಗಿತ್ತು. 8165 ಕೋಟಿ ರೂ.ಗಳನ್ನು ಸಾಲ ಮಾಡಿ ಭರಿಸಿತು. ಆದರೆ ನರೇಂದ್ರ ಮೋದಿಯವರು ರೈತರಿಗಾಗಿ ಬೇಡಿಕೆ ಇದ್ದರೂ ಸಾಲ ಮಾಡಿಲ್ಲ. ಆದರೆ ಬಂಡವಾಳಶಾಹಿಗಳು, ಕೈಗಾರಿಕೋದ್ಯಮಿಗಳ 16 ಲಕ್ಷ ಕೋಟಿ ರೂ.ಗಳ ಸಾಲ ಮನ್ನಾ ಮಾಡಿದ್ದಾರೆ. ನರೇಂದ್ರ ಮೋದಿಯವರು ಶ್ರೀಮಂತರ ಪರವಾಗಿ ಇದ್ದಾರೆ ಎಂದರು. ಅದಾನಿ, ಅಂಬಾನಿಗೆ ಸಹಾಯ ಶೇ 30 ಇದ್ದ ಕಾರ್ಪೊರೇಟ್ ತೆರಿಗೆಯನ್ನು ಶೇ 27 ಇಳಿಸಿ, ಅದಾನಿ, ಅಂಬಾನಿಗೆ ಸಹಾಯ ಮಾಡಿದ್ದಾರೆ. ಸಾಮಾನ್ಯ ಜನರ ಪರೋಕ್ಷ ತೆರಿಗೆಯನ್ನು ಶೇ 50ಕ್ಕೆಗೇರಿಸಿದರು. ಬಡವರು ಮಧ್ಯಮ ವರ್ಗದವರ ತೆರಿಗೆ ಹೆಚ್ಚಿಸಿ, ಶ್ರೀಮಂತರ ತೆರಿಗೆಯನ್ನು ಕಡಿಮೆ ಮಾಡಿದ್ದಾರೆ. ಅದಕ್ಕಾಗಿ ಬಿಜೆಪಿಯನ್ನು ತಿರಸ್ಕರಿಸಬೇಕೆಂದು ಕರೆ ನೀಡಿದರು. ಕಿರಿಯ ವಯಸ್ಸಿನ ಸಾಗರ್ ಖಂಡ್ರೆಯವರನ್ನು ನಮ್ಮ ಅಭ್ಯರ್ಥಿಯಾಗಿಸಿದ್ದು, ಅವರಿಗೆ ನಿಮ್ಮ ಮತವನ್ನು ಹಾಬೇಕು ಎಂದು ಮನವಿ ಮಾಡಿದರು. ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ಶಾಸಕ ಬಿ.ಆರ್. ಪಾಟೀಲ್, ಶಾಸಕರಾದ ಅಜಯ್ ಸಿಂಗ್, ಅಭ್ಯರ್ಥಿ ಸಾಗರ್ ಖಂಡ್ರೆ, ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.
IPL 2024: ಆರ್ಸಿಬಿಯ ವೈಫಲ್ಯಕ್ಕೆ ಬಲವಾದ ಕಾರಣ ತಿಳಿಸಿದ ಆರೋನ್ ಫಿಂಚ್!
Aaron Finch on RCB's Failure: ಫಾಫ್ ಡು ಪ್ಲೆಸಿಸ್ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ರಸ್ತುತ ನಡೆಯುತ್ತಿರುವ 2024ರ ಇಂಡಿಯನ್ ಪ್ರಿಮಿಯರ್ ಲೀಗ್ (ಐಪಿಎಲ್) ಟೂರ್ನಿಯಲ್ಲಿ ನೀರಸ ಪ್ರದರ್ಶನ ತೋರುತ್ತಿದೆ. ಇಲ್ಲಿಯವರೆಗೂ ಆಡಿದ 8 ಪಂದ್ಯಗಳಲ್ಲಿ 7 ಪಂದ್ಯಗಳಲ್ಲಿ ಸೋಲುವ ಮೂಲಕ ಟೂರ್ನಿಯ ಪಾಯಿಂಟ್ಸ್ ಟೇಬಲ್ನಲ್ಲಿ ಕೊನೆಯ ಸ್ಥಾನಕ್ಕೆ ಕುಸಿದಿದೆ. ಇದರ ಪರಿಣಾಮವಾಗಿ ಆರ್ಸಿಬಿಗೆ ಪ್ಲೇಆಫ್ ಹಾದಿ ಅತ್ಯಂತ ಕಠಿಣವಾಗಿದೆ. ಇನ್ನುಳಿದ 6ರಲ್ಲಿ ಒಂದರಲ್ಲಿ ಸೋತರೂ ಟೂರ್ನಿಯ ನಾಕ್ಔಟ್ನಿಂದ ಹೊರಬೀಳಲಿದೆ. ಅಂದ ಹಾಗೆ ಆರ್ಸಿಬಿಯ ವೈಫಲ್ಯಕ್ಕೆ ಕಾರಣವೇನೆಂದು ಆರೋನ್ ಫಿಂಚ್ ವಿವರಿಸಿದ್ದಾರೆ.
ಲೋಕಸಭಾ ಚುನಾವಣೆ ಮತದಾನಕ್ಕೆ ಕ್ಷಣಗಣನೆ: ರಾಜ್ಯಾದ್ಯಂತ ಚೆಕ್ ಪೋಸ್ಟ್ಗಳಲ್ಲಿ ಭಾರೀ ಕಣ್ಗಾವಲು!
High Alert In Interstate Checkposts: ರಾಜ್ಯದಲ್ಲಿ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ಇನ್ನೊಂದೇ ದಿನ ಬಾಕಿ. ದೇಶಾದ್ಯಂತ ಈಗಾಗಲೇ ಮೊದಲ ಹಂತದ ಮತದಾನ ನಡೆದಿದ್ದು, ಎರಡನೇ ಹಂತದಲ್ಲಿ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಮತದಾನ ನಡೆಯಲಿದೆ. ಏಪ್ರಿಲ್ 26 ಶುಕ್ರವಾರ ಮತದಾನ ನಡೆಯಲಿರುವ ಹಿನ್ನೆಲೆಯಲ್ಲಿ ಈಗಾಗಲೇ ಅಭ್ಯರ್ಥಿಗಳು ಮನೆ ಮನೆ ಪ್ರಚಾರಕ್ಕೆ ಮುಂದಾಗಿದ್ದಾರೆ. ಇತ್ತ ಅಂತರ್ ಜಿಲ್ಲಾ ಹಾಗೂ ಅಂತಾರಾಜ್ಯ ಚೆಕ್ ಪೋಸ್ಟ್ಗಳಲ್ಲಿ ಅಕ್ರಮ ತಡೆಯಲು ಭಾರೀ ಕಟ್ಟೆಚ್ಚರ ವಹಿಸಲಾಗಿದೆ.
ಬೆಂಗಳೂರು ನಿವಾಸಿಗಳಿಗೆ ಅನಧಿಕೃತ ಒಳಚರಂಡಿ, ನೀರಿನ ಸಂಪರ್ಕವನ್ನು ಅಧಿಕೃತ ಮಾಡಿಕೊಳ್ಳಲು ಕೊನೆಯ ಅವಕಾಶ ನೀಡಿದ ಜಲಮಂಡಳಿ
BWSSB On Unauthorized Sewerage And Water Connections : ಅಕ್ರಮ ನೀರಿನ ಸಂಪರ್ಕ ಹಾಗೂ ಒಳಚರಂಡಿ ಸಂಪರ್ಕ ಪಡೆದವರಿಗೆ ಬೆಂಗಳೂರು ಜಲಮಂಡಳಿ ಕೊನೆಯ ಅವಕಾಶ ನೀಡಿದೆ. ಮೇ 7 ರೊಳಗೆ ಅಕ್ರಮವನ್ನು ಅರ್ಜಿ ಸಲ್ಲಿಸಿ ಸಕ್ರಮ ಮಾಡಿಕೊಳ್ಳಲು ಸೂಚಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ವಿವರ ಇಲ್ಲಿದೆ.
Gold Loan: ಚಿನ್ನದ ಮೇಲೆ ಸಾಲ ಪಡೆಯುವವರಿಗೆ ಗುಡ್ ನ್ಯೂಸ್! ಬದಲಾಯ್ತು ನಿಯಮ
ಚಿನ್ನದ ಮೇಲಿನ ನಗದು ಸಾಲದ ಮಿತಿ ಗರಿಷ್ಠ ಎಂದರೆ ನಾಲ್ಕು ಲಕ್ಷ ರೂಪಾಯಿ ಆಗಲಿದೆ. ಚಿನ್ನದ ಮೇಲಿನ ಸಾಲಕ್ಕೆ (Gold Loan) ಅಸಲು ಪಾವತಿ ಮಾಡುವ ತನಕ ಬಡ್ಡಿ ಕಟ್ಟಿದರೆ ಸಾಕು. ಚಿನ್ನದ ಮೇಲೆ ಸಾಲ ಪಡೆಯುವಾಗ ಬೇರೆ ಯಾವುದೇ ತರನಾಗಿ ಅಡಮಾನ ಅಥವಾ ಗ್ಯಾರೆಂಟಿ ಪಡೆಯುವ ಅಗತ್ಯ ಇಲ್ಲ. ಸಾಲ ಮರುಪಾವತಿ ಮಾಡುವಾಗ ಅಸಲು ಮತ್ತು ಬಡ್ಡಿ ಸೇರಿ ಬರುವ EMI ಮೊತ್ತ ಪಾವತಿ ಮಾಡುವ ಅಗತ್ಯ ಇಲ್ಲ. ಬದಲಿಗೆ ಬಡ್ಡಿ ಮಾತ್ರ ಪಾವತಿ ಮಾಡಬೇಕು. The post Gold Loan: ಚಿನ್ನದ ಮೇಲೆ ಸಾಲ ಪಡೆಯುವವರಿಗೆ ಗುಡ್ ನ್ಯೂಸ್! ಬದಲಾಯ್ತು ನಿಯಮ appeared first on Karnataka Times .
ಪಾತಾಳ ವೆಂಕಟರಮಣ ಭಟ್ಟರಿಗೆ ಕುರಿಯ ಪ್ರಶಸ್ತಿ
ಉಜಿರೆ: ಯಕ್ಷ ಶಾಂತಲಾ ಎಂದೇ ಜನಪ್ರಿಯರಾಗಿದ್ದ ತೆಂಕು, ಬಡಗು ಎರಡೂ ತಿಟ್ಟಿನಲ್ಲಿ ಕಲಾವ್ಯವಸಾಯ ಮಾಡಿದ ಪ್ರಸಿದ್ಧ ಸ್ತ್ರೀವೇಷಧಾರಿ ಪಾತಾಳ ವೆಂಕಟರಮಣ ಭಟ್ ಅವರಿಗೆ ಕುರಿಯ ವಿಠಲ ಶಾಸ್ತ್ರಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಎ.26ರಂದು ಉಪ್ಪಿನಂಗಡಿಯ ಪಾತಾಳದ ದುರ್ಗಾಗಿರಿ ಭಜನ ಮಂದಿರದಲ್ಲಿ ಸುಂಕದಕಟ್ಟೆ ಮೇಳದ ವೇದಿಕೆಯಲ್ಲಿ ನಡೆಯಲಿದೆ ಎಂದು ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನ ಉಜಿರೆ ಇದರ ಸಂಚಾಲಕ ಉಜಿರೆ ಅಶೋಕ್ ಭಟ್ ತಿಳಿಸಿದ್ದಾರೆ. 91ರ ಹರಯದ ಪಾತಾಳ ವೆಂಕಟರಮಣ ಭಟ್ಟರು ಕಾಂಚನ ಮೇಳ, ಸೌಕೂರು ಮೇಳ, ಮೂಲ್ಕಿ ಮೇಳ, ದೀರ್ಘಕಾಲದ ತಿರುಗಾಟ ಧರ್ಮಸ್ಥಳ ಮೇಳದಲ್ಲಿ ನಡೆಸಿದ್ದಾರೆ. ಸ್ತ್ರೀವೇಷಕ್ಕೆ ಪುರುಷವೇಷಕ್ಕೆ ಸಮದಂಡಿಯಾಗುವಂತೆ ಬೇಲೂರು ಶಿಲಾಬಾಲಿಕೆಯರ ಅಂಗಭಂಗಿಗಳನ್ನು ಸ್ವತಃ ಪರಿಶೀಲಿಸಿ ಅಧ್ಯಯನ ಮಾಡಿ ಯಕ್ಷಗಾನ ಸ್ತ್ರೀವೇಷದ ಆಹಾರ್ಯವನ್ನು ನೃತ್ಯವಿನ್ಯಾಸಕ್ಕೆ ಬೇಕಾದಂತೆ ಸಿದ್ಧಪಡಿಸಿದ ಅವರು ಸೌಂದರ್ಯ ಪ್ರಧಾನ ಸ್ತ್ರೀವೇಷದ ಬಣ್ಣಗಾರಿಕೆಯಲ್ಲೂ ಹೊಸತನದ ಆವಿಷ್ಕಾರ ತಂದಿದ್ದರು. ಮಾಯಾ ಮೋಹಿನಿ, ಮಾಯಾ ಪೂತನಿ, ಮಾಯಾ ಅಜಮುಖಿ ಮೊದಲಾದ ಮಾಯಾ ಸ್ತ್ರಿವೇಷದ ಪಾತ್ರಗಳಿಗೆ ವಿಶಿಷ್ಟ ಕಲ್ಪನೆ ನೀಡಿ ಇತರ ಸ್ತ್ರೀವೇಷಗಳಿಗಿಂತ ಭಿನ್ನ ಎಂದು ನಿರೂಪಿಸಿದ್ದರು. ಗರತಿ ಪಾತ್ರಗಳಲ್ಲಿ ಸೈ ಎನಿಸಿದ್ದರು. ಧರ್ಮಸ್ಥಳ ಕ್ಷೇತ್ರ ಮಹಾತ್ಮೆಯ ಅಮ್ಮುದೇವಿ ಮೊದಲಾದ ಪಾತ್ರಗಳಲ್ಲಿ ಹೆಸರು ಗಳಿಸಿದ್ದರು. ರಂಭೆ, ಊರ್ವಶಿ, ಮೇನಕೆ, ಸತ್ಯ ಭಾಮೆ, ಸುಭದ್ರೆ, ದ್ರೌಪದಿ, ಸ್ವಯಂಪ್ರಭೆಯಂತಹ ಪಾತ್ರಗಳಲ್ಲಿ ಪರಕಾಯ ಪ್ರವೇಶದಿಂದ ಪ್ರೇಕ್ಷಕರನ್ನು ಬೆರಗಾಗಿಸಿ ದವರು. ಮಾಸ್ಟರ್ ವಿಠಲ ಅವರ ಶಿಷ್ಯನಾಗಿ ಭರತನಾಟ್ಯ, ಶಿವತಾಂಡವ, ಭಸ್ಮಾಸುರ ಮೋಹಿನಿಯ ನೃತ್ಯಗಳ ಪದಗತಿಯ ಅಭ್ಯಾಸ ಮಾಡಿದ್ದರು. ಮಂಕುಡೆ ಸಂಜೀವ, ಕೋಳ್ಯೂರು ರಾಮಚಂದ್ರ ರಾವ್, ಕರ್ಗಲ್ಲು ಸುಬ್ಬಣ್ಣ ಭಟ್ ಮೊದಲಾದವರ ಸಾಲಿನಲ್ಲಿ ಗುರುತಿಸಿಕೊಂಡವರು. ಯಕ್ಷಗಾನದಿಂದ ದೊರೆತ ಆರ್ಥಿಕ ಸಂಪಾದನೆಯನ್ನು ಈವರೆಗೆ 50 ಮಂದಿ ಕಲಾವಿದರಿಗೆ ತಲಾ 10 ಸಾವಿರ ರೂ.ಗಳಂತೆ ನೀಡಿ ಸಮ್ಮಾನಿಸಿದವರು.
ಬೆಂಗಳೂರು | ಅಗ್ನಿ ಅವಘಡ : 2 ಕೋಟಿ ರೂ. ಮೌಲ್ಯದ ಬಟ್ಟೆ, ಕಾರು, ಬೈಕ್ಗಳು ಬೆಂಕಿಗಾಹುತಿ
ಬೆಂಗಳೂರು : ಇಲ್ಲಿನ ಎಲೆಕ್ಟ್ರಾನಿಕ್ ಸಿಟಿಯ ಸಿಂಗಸಂದ್ರದ ಮಣಿಪಾಲ್ ಕಂಟ್ರಿ ರೋಡ್ನಲ್ಲಿರುವ ಟಿಂಬರ್ ಯಾರ್ಡ್ನಲ್ಲಿ ಅಗ್ನಿ ಅವಘಡ ಸಂಭವಿಸಿ ಸುಮಾರು 2 ಕೋಟಿ ರೂ. ಮೌಲ್ಯದ ಬಟ್ಟೆಗಳು, ಕಾರುಗಳು ಹಾಗೂ 40ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು ಬೆಂಕಿಗಾಹುತಿಯಾಗಿರುವ ಘಟನೆ ವರದಿಯಾಗಿದೆ. ಎ.23ರಂದು ಮಧ್ಯರಾತ್ರಿ 12.30ರ ಸುಮಾರಿಗೆ ಘಟನೆ ನಡೆಸಿದ್ದು, ಬೆಂಕಿ ಅವಘಡದಿಂದ ಕಾರ್ ವಾಶ್ ಸರ್ವಿಸ್ನಲ್ಲಿದ್ದ 2 ಕಾರುಗಳು, ಗ್ಯಾರೇಜ್ನಲ್ಲಿದ್ದ 1 ಬಿಎಂಡಬ್ಲ್ಯೂ ಕಾರು, 1 ಟಾಟಾ ಏಸ್ ವಾಹನ ಸೇರಿದಂತೆ ಸುಮಾರು 40ಕ್ಕೂ ಹೆಚ್ಚು ದ್ವಿಚಕ್ರಗಳು ಗಾರ್ಮೆಂಟ್ಸ್ ಫ್ಯಾಕ್ಟರಿಗೆ ಬೆಂಕಿ ತಗುಲಿ ಬಟ್ಟೆಗಳು ಬೆಂಕಿಗಾಹುತಿಯಾಗಿವೆ. ಅದೃಷ್ಟವಶಾತ್ ಅವಘಡದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಮೊದಲಿಗೆ ಮರದ ಪೀಸ್ಗಳನ್ನು ಇಟ್ಟಿದ್ದ ಟಿಂಬರ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬಳಿಕ, ಲೋವಬಲ್ ಸ್ಪೋರ್ಟ್ ಹೆಸರಿನ ಗಾರ್ಮೆಂಟ್ಸ್ ಕಟ್ಟಡ, ವಾಹನ ವಾಶ್ ಕೇಂದ್ರಕ್ಕೂ ಬೆಂಕಿಯ ಜ್ವಾಲೆ ಹಬ್ಬಿದೆ. ಜತೆಗೆ, ಬಲಭಾಗದಲ್ಲಿದ್ದ ಗ್ಯಾರೇಜ್ಗೂ ಬೆಂಕಿ ಹಬ್ಬಿದೆ ಎಂದು ಪೊಲೀಸರು ಹೇಳಿದ್ದಾರೆ. ಮಾಹಿತಿ ತಿಳಿದು ಘಟನಾ ಸ್ಥಳಕ್ಕೆ ದೌಡಾಯಿಸಿದ ಏಳು ಅಗ್ನಿಶಾಮಕ ದಳದ ವಾಹನಗಳು ಬೆಂಕಿ ನಂದಿಸಿವೆ. ಬೆಂಕಿ ಹೇಗೆ ಕಾಣಿಸಿಕೊಂಡಿತು ಎಂಬುದು ಸದ್ಯಕ್ಕೆ ತಿಳಿದುಬಂದಿಲ್ಲ. ಮೇಲ್ನೋಟಕ್ಕೆ ಶಾರ್ಟ್ ಸಕ್ರ್ಯೂಟ್ನಿಂದ ಬೆಂಕಿ ಕಾಣಿಸಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಬೇಗೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ಕ್ರಮ ಕೈಗೊಂಡಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
Subsidy: ರಾಜ್ಯ ಸರ್ಕಾರದಿಂದ ಮಹಿಳೆಯರಿಗೆ ಸಿಗಲಿದೆ 50,000 ರೂ ಸಹಾಯಧನ, ಯಾರು ಈ ಸೌಲಭ್ಯ ಪಡೆಯಬಹುದು?
ಮಹಿಳೆಯರು ಸ್ವ ಉದ್ಯಮ, ಸಣ್ಣ ಉದ್ಯಮ ಅಂದರೆ ತರಕಾರಿ, ಮೀನು ಮಾರಾಟ, ಪಾರ್ಲರ್ ಇತ್ಯಾದಿ ಉದ್ದಿಮೆಗಾಗಿ 50,000 ರೂ. ಪಡೆದರೆ ಮಹಿಳೆ ಕೇವಲ 25000ಗಳನ್ನು ಪಾವತಿ ಮಾಡಿದರೆ ಸಾಕು. ಇನ್ನೂ 25,000ರೂ. ಸರ್ಕಾರದಿಂದ ಸಬ್ಸಿಡಿ (Subsidy) ಯಾಗಿ ಸಿಗಲಿದೆ. The post Subsidy: ರಾಜ್ಯ ಸರ್ಕಾರದಿಂದ ಮಹಿಳೆಯರಿಗೆ ಸಿಗಲಿದೆ 50,000 ರೂ ಸಹಾಯಧನ, ಯಾರು ಈ ಸೌಲಭ್ಯ ಪಡೆಯಬಹುದು? appeared first on Karnataka Times .
ಕೊಣಾಜೆ: ರಸ್ತೆ ಸ್ವಚ್ಛತೆ ಶ್ರಮದಾನದೊಂದಿಗೆ ಮತದಾನ ಜಾಗೃತಿ ಅಭಿಯಾನ ಸಂಪನ್ನ
ಕೊಣಾಜೆ: ಲೋಕ ಸಭಾ ಚುಣಾವಣೆ2024 ರ ಅಂಗವಾಗಿ ಅಪ್ನಾದೇಶ್ ಮಾದರಿ ಗ್ರಾಮ ಅಭಿಯಾನದಡಿ ಜನ ಶಿಕ್ಷಣ ಟ್ರಸ್ಟ್ ಸಂಯೋಜಿಸಿದ 48 ದಿನಗಳ ಮತದಾರರ ಜಾಗೃತಿ ಅಭಿಯಾನ ಮುಡಿಪುನಲ್ಲಿ ರಸ್ತೆ ಸ್ವಚ್ವತೆ ಶ್ರಮದಾನದೊಂದಿಗೆ ಸಂಪನ್ನಗೊಂಡಿತು. ಮುಡಿಪು- ಇರಾ ಕ್ರಾಸ್ ರಸ್ತೆ ಸ್ವಚ್ಛತೆ ಶ್ರಮದಾನದಲ್ಲಿ ಸ್ಮೈಲ್ ಸ್ಕಿಲ್ ಸ್ಕೂಲ್ ವಿದ್ಯಾರ್ಥಿನಿಯರು, ಸ್ವಚ್ಚತಾ ಸೇನಾನಿಗಳು ಭಾಗವಹಿಸಿ ದ್ವಿಪಥ ರಸ್ತೆ ಬದಿಗಳಲ್ಲಿ ಬಿದ್ದಿದ್ದ ತ್ಯಾಜ್ಯಗಳನ್ನು ಸಂಗ್ರಹಿಸಿ, ವಿಂಗಡಿಸಿ ಬಾಳೆಪುಣಿ ಸ್ವಚ್ಚ ಸಂಕೀರ್ಣದ ಮೂಲಕ ನಿರ್ವಹಿಸಲಾಯಿತು. ಶ್ರಮದಾನದೊಂದಿಗೆ ಮತದಾನ ಜಾಗೃತಿ ಘೋಷಣೆ, ಗೀತೆಗಳ ಮೂಲಕ ಮತದಾನದ ಮಹತ್ವದ ಸಂದೇಶ ನೀಡಲಾಯಿತು. ನರೇಗ ಮಾಜಿ ಒಂಬುಡ್ಸ್ ಮೆನ್ ಶೀನ ಶೆಟ್ಟಿಮತದಾನದ ಪ್ರತಿಜ್ನವಿಧಿ ಭೋಧಿಸಿ ರಾಷ್ಟ್ರಿಯ ಪಂಚಾಯತ್ ರಾಜ್ ದಿನಾಚರಣೆಯ ಸಂದೇಶ ನೀಡುವುದರೊಂದಿಗೆ ಕಸಮುಕ್ತ ಸ್ವಚ್ಚ ಪಂಚಾಯತ್ ಪರಿವರ್ತನೆಗೆ ಸಾಮೂಹಿಕ ಸಂಕಲ್ಪ ದೊಂದಿಗೆ ಪ್ರಮಾಣಿಕವಾಗಿ ಶ್ರಮಿಸುವುದು ಅಗತ್ಯವೆಂದರು.ಕುರ್ನಾಡು ಪಂ. ಅಭಿವೃಧ್ಧಿ ಅಧಿಕಾರಿ ಕೇಶವ, ಸ್ವಚ್ಚ ವಾಹಿನಿ ಸಾರಥಿ ವಿದ್ಯಾ, ಸ್ಚಚ್ಚ ಸೇನಾನಿಗಳಾದ ಇಸ್ಮಯಿಲ್ ಕಣಂತೂರು, ಶಮ ಪ್ರಕಾಶ್ ನಡುಪದವು ನವಗ್ರಾಮ, ರಝಿಯ, ಕಾಂತಿಮತಿ, ಸುಗಂಧಿ ಅನುಭವಗಳನ್ನು ಹಂಚಿಕೊಂಡರು. ಸ್ಮೈಲ್ ಸ್ಕಿಲ್ ಸ್ಕೂಲ್ ನ ಪ್ರಜ್ನ, ಶಮಿಕ, ಓಫಿಯ ತಂಡ ಮತದಾನದ ಜಾಗೃತಿ ಗೀತೆಗಳನ್ನು ಹಾಡಿದರು. ಜನ ಶಿಕ್ಷಣದ ನಿರ್ದೇಶಕರು ಅಭಿಯಾನದ ಆಶಯಗಳ ಬಗ್ಗೆ ಪ್ರಾಸ್ತಾವಿಕ ಮತನ್ನಾಡಿದರು. ವಿಜೇತ್ ಸಹಕರಿಸಿದರು.
25 ಸಾವಿರ ಕೋಟಿ ರೂ. ಸಹಕಾರ ಬ್ಯಾಂಕ್ ಹಗರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್!
Ajit Pawar Wife Gets Clean Chit: ಮಹಾರಾಷ್ಟ್ರ ರಾಜ್ಯದ ಸಹಕಾರ ಬ್ಯಾಂಕ್ ಹಗರಣದಲ್ಲಿ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರ ಹೆಸರು ಕೇಳಿ ಬಂದಿತ್ತು. ಆದರೆ, ಸಾಲ ನೀಡಿಕೆ ಹಾಗೂ ಸಕ್ಕರೆ ಕಾರ್ಖಾನೆ ಮಾರಾಟ ವಿಚಾರದಲ್ಲಿ ನಡೆದ ಹಣಕಾಸಿನ ವಹಿವಾಟಿನ ವಿಚಾರದಲ್ಲಿ ಪವಾರ್ ಕುಟುಂಬದ ವಿರುದ್ಧ ಯಾವುದೇ ಅಪರಾಧಿಕ ಆರೋಪ ಹೊರಿಸಲು ಸಾಧ್ಯವಿಲ್ಲ ಎಂದು ಮುಂಬೈ ಪೊಲೀಸರು ಅಭಿಪ್ರಾಯಪಟ್ಟಿದ್ದಾರೆ. ಇತ್ತ ವಿಪಕ್ಷಗಳು ಮಾತ್ರ ಇದು ಬಿಜೆಪಿ 'ವಾಷಿಂಗ್ ಮಷಿನ್' ಎಂದಿವೆ.
ತಂಗಿಗೆ ಟಿವಿಯನ್ನು ಗಿಫ್ಟ್ ಕೊಡಲು ಮುಂದಾಗಿದ್ದ ಅಣ್ಣನನ್ನೇ ಕೊಂದ ಹೆಂಡತಿ ಮನೆಯವರು! ಏನ್ ಕಾಲ ಬಂತಪ್ಪ
Husband Killed By Wife In UP : ಯಾವ್ಯಾವ ಕಾರಣಕ್ಕೆ ಒಬ್ಬ ವ್ಯಕ್ತಿಯ ಪ್ರಾಣ ತೆಗೆಯುತ್ತಾರೆ ಅಂದ್ರೇ ಊಹಿಸಲು ಆಗಲ್ಲ. ಉತ್ತರ ಪ್ರದೇಶದಲ್ಲಿ ಇದೇ ರೀತಿ ಘಟನೆ ನಡೆದಿದ್ದು, ತನ್ನ ತಂಗಿ ಮದುವೆಗೆ ಗಿಫ್ಟ್ ಕೊಡಲು ಮುಂದಾಗಿದ್ದ ಅಣ್ಣನನ್ನು ಆತನ ಹೆಂಡತಿಯ ಮನೆಯವರೇ ಸಾಯಿಸಿದ್ದಾರೆ. ತನ್ನ ತಂಗಿಗೆ ಚಿನ್ನದ ಉಂಗುರ ಹಾಗೂ ಟಿವಿ ಕೊಡಲು ಚಂದ್ರಪ್ರಕಾಶ್ ಮಿಶ್ರಾ ಎಂಬಾತ ಮುಂದಾಗಿದ್ದ. ಅದು ಆತನ ಪತ್ನಿಗೆ ಗೊತ್ತಾಗಿ ಜಗಳವಾಗಿದ್ದು, ಬಳಿಕ ತನ್ನ ಸಹೋದರರನ್ನು ಕರೆದುಕೊಂಡು ಬಂದು ಆತನನ್ನು ಹೊಡೆಸಿ ಸಾಯಿಸಿದ್ದಾಳೆ.
ದೇಶವನ್ನು ಮಾವೋವಾದಿ ವ್ಯವಸ್ಥೆಗೆ ನೂಕಲು ಕಾಂಗ್ರೆಸ್ ಹೊರಟಿದೆ : ಪ್ರಹ್ಲಾದ್ ಜೋಶಿ
ಹುಬ್ಬಳ್ಳಿ : ಕಾಂಗ್ರೆಸ್ ಪಕ್ಷ ದೇಶವನ್ನು ಒಂದು ರೀತಿ ಮಾವೋವಾದಿ ವ್ಯವಸ್ಥೆಗೆ ನೂಕಲು ಹೊರಟಂತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ. ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆ ಮತ್ತು ಆ ನಾಯಕರ ಭಾಷಣ ಕೇಳಿದರೆ ಇದು ಸ್ಪಷ್ಟವಾಗುತ್ತಿದೆ. ಮಾವೋವಾದಿ ವ್ಯವಸ್ಥೆ ಜಗತ್ತಿನಲ್ಲೆ ವಿಫಲತೆ ಕಂಡಿದೆ. ಆದರೆ, ಕಾಂಗ್ರೆಸ್ ಭಾರತದಲ್ಲಿ ಅದನ್ನು ತರಲು ಹೊರಟಂತಿದೆ. ಜನ ಎಚ್ಚರದಿಂದ ಇರಬೇಕು ಎಂದು ಹೇಳಿದರು. ಕಾಂಗ್ರೆಸ್ ಪಕ್ಷ ದೇಶದ ಎಲ್ಲ ವರ್ಗದ ಜನರ ಆಸ್ತಿ ಕಸಿದುಕೊಳ್ಳುವ ಹುನ್ನಾರ ಅದರ ಪ್ರಣಾಳಿಕೆಯಲ್ಲಿ ಇದ್ದಂತಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲ ವರ್ಗದ ಜನರ ಆಸ್ತಿ ಸರ್ವೇ ಮಾಡುವುದಾಗಿ ಹೇಳಿದೆ. ಅಂದರೆ, ಯಾರಲ್ಲಿ 2 ಮನೆ, 2 ವಾಹನ ಇರುವುದೋ ಅವರಿಂದ ಒಂದೊಂದು ಕಸಿದುಕೊಳ್ಳುವ ಸಂಚು ಅದು ಎಂದು ಅವರು ಆರೋಪಿಸಿದರು. ಬಡವರಿಗೆ ಏನು ಬೇಕೋ ಅದನ್ನು ಮಾಡುವುದು ಸರಕಾರದ ಕರ್ತವ್ಯ. ಆದರೆ, ಕಾಂಗ್ರೆಸ್ ಆ ನೆಪದಲ್ಲಿ ಎಲ್ಲ ವರ್ಗದವರನ್ನು ಟಾರ್ಗೆಟ್ ಮಾಡುತ್ತಿದೆ. ಕಾಂಗ್ರೆಸ್ ಪಕ್ಷಕ್ಕೆ ದೇಶಕ್ಕೆ, ಬಡವರಿಗೆ ನಿಜವಾಗಿ ಒಳಿತು ಮಾಡಬೇಕೆಂಬ ಮನಸಿಲ್ಲ. ತುಷ್ಟೀಕರಣದ ಪರಾಕಾಷ್ಠೆ ತಲುಪಿದ್ದಾರೆ ಎಂದು ಪ್ರಹ್ಲಾದ್ ಜೋಶಿ ಹೇಳಿದರು. ಸಿಎಂಗೆ ನಿಜವಾದ ಕಾಳಜಿಯಿಲ್ಲ: ಸಿಎಂ ಸಿದ್ದರಾಮಯ್ಯ ಅವರಿಗೆ ನೇಹಾ ಕುಟುಂಬದ ಮೇಲೆ ನಿಜವಾದ ಕಾಳಜಿಯಿಲ್ಲ. ಇದ್ದಿದ್ದರೆ ಘಟನೆ ನಡೆದ ದಿನವೇ ನೇರವಾಗಿ ಕಾರ್ಪೊರೇಟರ್ ನಿರಂಜನ್ ಅವರಿಗೆ ಕರೆ ಮಾಡಿ ಅವರ ಧಾಟಿ, ಭಾಷೆಯಲ್ಲೆ ಸಾಂತ್ವನ, ಧೈರ್ಯ ನೀಡಿತ್ತಿದ್ದರು ಎಂದು ಅವರು ತಿಳಿಸಿದರು. ನೇಹಾ ಮನೆಗೆ ಸಚಿವರಾದ ಸಂತೋಷ್ ಲಾಡ್, ಲಕ್ಷ್ಮಿ ಹೆಬ್ಬಾಳ್ಕರ್ ಭೇಟಿ ನೀಡಿದಾಗಲೆ ಸಿಎಂ ಫೋನ್ ನಲ್ಲಿ ಮಾತನಾಡಬಹುದಿತ್ತು. ಆದರೆ, ಎಚ್.ಕೆ.ಪಾಟೀಲ್ ಅವರನ್ನು ಕಳಿಸಿ, ತಾವು ಫೋನ್ ನಲ್ಲಿ ಸಾಂತ್ವನ ಹೇಳಬೇಕಿತ್ತೆ? ಎಂದು ಪ್ರಶ್ನಿಸಿದ ಅವರು, ನೇಹಾ ಹತ್ಯೆ ಬಗ್ಗೆ ಹಳ್ಳಿ ಹಳ್ಳಿಗಳಲ್ಲಿ ಪ್ರತಿ ಮನೆಯ ಮಾತಾಗಿದೆ. ಸರಕಾರದ ನಡೆ ಬಗ್ಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ ಎಂದರು.
ರಾಜ್ಯದಲ್ಲಿ ಮೊದಲ ಹಂತದ ಲೋಕಸಭೆ ಚುನಾವಣೆ ಬಹಿರಂಗ ಪ್ರಚಾರಕ್ಕೆ ತೆರೆ: ಇನ್ನೇನಿದ್ದರೂ ಮನೆ ಮನೆ ಪ್ರಚಾರ
ಅಂತೂ ರಾಜ್ಯದಲ್ಲಿ ಲೋಕಸಭಾ ಚುನಾವಣೆಯ ಮೊದಲ ಹಂತದ ಬಹಿರಂಗ ಪ್ರಚಾರ ಬುಧವಾರ ಸಂಜೆ 6 ಗಂಟೆಗೆ ಕೊನೆಗೊಂಡಿದೆ. ಆದರೆ ಮನೆ ಮನೆ ಪ್ರಚಾರಕ್ಕೆ ಮಾತ್ರ ಅವಕಾಶ ಇದೆ. ಹೀಗಾಗಿ ಅಭ್ಯರ್ಥಿಗಳು ಮತ್ತು ಪಕ್ಷಗಳ ಕಾರ್ಯಕರ್ತರು, ಬೆಂಬಲಿಗರು ಇದೀಗ ಕೊನೆಯ ಕ್ಷಣದಲ್ಲಿ ಮತದಾರರ ಮನವೊಲಿಕೆೆಗ ಮುಂದಾಗಿದ್ದಾರೆ. ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಈ ಅವಧಿಯಲ್ಲಿ ಮನೆ ಮನೆಗೆ ತೆರಳಿ ಮತ ಯಾಚಿಸಲು ಕೇವಲ 5 ಮಂದಿಗಷ್ಟೇ ಅವಕಾಶ ಇದೆ. ಕ್ಷೇತ್ರದಲ್ಲಿ ಮತದಾರರಲ್ಲದ ರಾಜಕಾರಣಿಗಳಿಗೂ ಉಳಿದುಕೊಳ್ಳಲು ಅವಕಾಶ ಇರುವುದಿಲ್ಲ.
ದ.ಕ. ಜಿಲ್ಲೆಯ ಕೋಮು ಸಾಮರಸ್ಯಕ್ಕಾಗಿ ಮತ ನೀಡಿ: ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್
ಮಂಗಳೂರು: ಕಳೆದ 33 ವರ್ಷಗಳಿಂದ ದ.ಕ. ಜಿಲ್ಲೆ, ಸಾಮರಸ್ಯದ ತುಳುನಾಡು ಕೋಮುಸೂಕ್ಷ್ಮ ಪ್ರದೇಶವೆಂಬ ಹಣೆಪಟ್ಟಿಯೊಂದಿಗೆ ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿದೆ. ಮತ್ತೆ ಜಿಲ್ಲೆಯನ್ನು ಸಾಮರಸ್ಯದ ನಾಡಾಗಿಸಲು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ತನ್ನನ್ನು ಗೆಲ್ಲಿಸಬೇಕೆಂದು ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪದ್ಮರಾಜ್ ಆರ್. ಅವರು ಮತದಾರರಿಗೆ ಮನವಿ ಮಾಡಿದ್ದಾರೆ. ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ದ.ಕ. ಜಿಲ್ಲೆಯಲ್ಲಿ ಪರಸ್ಪರ ಪ್ರೀತಿ ಹಂಚುವ ಮೂಲಕ ಚುನಾವಣೆ ಎದುರಿಸುವ ನಿಟ್ಟಿನಲ್ಲಿ ಪ್ರಚಾರ ಕಾರ್ಯ ನಡೆಸಲಾಗಿದೆ. ಅಭಿವೃದ್ಧಿ ವಿಚಾರವನ್ನು ಮುಂದಿಟ್ಟು ಮತ ಯಾಚಿಸಲಾಗಿದೆ. ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲೂ ಪ್ರಚಾರ ಕಾರ್ಯ ನಡೆಸಿದ್ದು, ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದರು. ಕಾಂಗ್ರೆಸ್ ಈ ದೇಶವನ್ನು ಕಟ್ಟುವಲ್ಲಿ ಆರಂಭದಿಂದ ಮಾಡಿದ ತ್ಯಾಗ, ಸಾಧನೆಗಳ ಜತೆಗೆ ಕರ್ನಾಟಕ ರಾಜ್ಯ ಸರಕಾರ ಕಳೆದ ವಿಧಾನಸಭಾ ಚುನಾವಣೆಯ ವೇಳೆ ಘೋಷಿಸಿದ ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿರುವುದನ್ನು ಮುಂದಿಟ್ಟು ಮತ ಯಾಚನೆ ಮಾಡಲಾಗಿದೆ. ಬಿಜೆಪಿಯ ದ್ವೇಷ ರಾಜಕಾರಣ, ಜಾತಿ ಧರ್ಮಗಳ ನಡುವೆ ವಿಷಬೀಜ ಬಿತ್ತಿ ಅಮಾಯಕ ರನ್ನು ಆಸ್ಪತ್ರೆಗೆ ಸೇರುವಂತೆ ಮಾಡಿದ, ಪೋಷಕರನ್ನು ಅನಾಥವಾಗಿಸಿರುವ, ಯುವಕರು ಜೈಲು ಪಾಲಾಗುವಂತೆ ಮಾಡಿದ ವಿಷಯಗಳ ಬಗ್ಗೆ ಮತದಾರರಿಗೆ ಮನವರಿಕೆ ಮಾಡಲಾಗಿದೆ. ಜನ ಪ್ರಬುದ್ಧರಾಗಿದ್ದಾರೆ. ಹಾಗಾಗಿ ಈ ಬಾರಿ ಕಾಂಗ್ರೆಸ್ ಜಿಲ್ಲೆಯಲ್ಲಿ ಸತತ ಸೋಲಿನ ಸರಪಳಿಯಿಂದ ಹೊರಬಂದು ಜಯಗಳಿಸಲಿದೆ ಎಂದು ಪದ್ಮರಾಜ್ ವಿಶ್ವಾಸ ವ್ಯಕ್ತಪಡಿಸಿದರು. ಜಿಲ್ಲೆಯಲ್ಲಿ ಕಾಂಗ್ರೆಸ್ ಗೆಲುವಿನ ಸೂಚನೆಯ ಹಿನ್ನೆಲೆಯಲ್ಲಿ ಬಿಜೆಪಿ ತನ್ನ ಎಂದಿನ ಚಾಳಿಯಂತೆ ಅಪಪ್ರಚಾರ ನಡೆಸಿದೆ. ಆದರೆ ಅದ್ಯಾವುದಕ್ಕೂ ಕಿವಿಗೊಡದೆ, ದ್ವೇಷಸಾಧಿಸದೆ ಪ್ರೀತಿಯಿಂದ ಚುನಾವಣೆ ಎದುರಿಸಬೇಕೆಂಬುದು ನನ್ನ ಕಳಕಳಿಯ ಮನವಿ. ಈ ಬಾರಿ ಕಾಂಗ್ರೆಸ್ ಪರ ಮತಯಾಚನೆಗಾಗಿ ಹಿಂದೆಂಗಿಂತಲೂ ಪರಿಶ್ರಮದಿಂದ ದುಡಿದಿರುವ ಕಾರ್ಯಕರ್ತರು ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದಿದ್ದಾರೆ. ಪಕ್ಷದಿಂದ ಮುಂದೆಯೂ ಕಾರ್ಯಕರ್ತರನ್ನು ಗುರುತಿಸುವ ಕಾರ್ಯ ಆಗಲಿದೆ ಎಂದವರು ಹೇಳಿದರು. ಬಡ ವರ್ಗದ ಮಹಿಳೆಯರಿಗೆ ತಲಾ 1 ಲಕ್ಷರೂ. ವಾರ್ಷಿಕ ಗ್ಯಾರಂಟಿ, ರೈತರ ಸಾಲಮನ್ನಾ, ಶಿಕ್ಷಣ ಸಾಲ ಮನ್ನಾ ಸೇರಿ ದಂತೆ ಕೇಂದ್ರದಲ್ಲಿ ಕಾಂಗ್ರೆಸ್ ಘೋಷಿಸಿರುವ ಹೊಸ ಗ್ಯಾರಂಟಿಗಳ ಬಗ್ಗೆಯೂ ಪ್ರಚಾರ ವೇಳೆ ಮತದಾರರಿಗೆ ಮನವರಿಕೆ ಮಾಡಲಾಗಿದೆ. 33 ವರ್ಷಗಳಲ್ಲಿ ಜಿಲ್ಲೆಯಲ್ಲಿ ಬಿಜೆಪಿಯಿಂದ ಆಗಿರುವ ಅಭಿವೃದ್ಧಿ , ಸಾಧನೆ ಶೂನ್ಯ ಎಂದು ಹೇಳಿದ ಪದ್ಮರಾಜ್, ಪ್ರಚೋದನಕಾರಿ ಭಾಷಣಗಳ ಮೂಲಕ ಯುವಕರನ್ನು ಕಾನೂನುಬಾಹಿರ ಕೆಲಸ ಮಾಡುವಂತೆ ಮಾಡಿ ಅವರು ಜೈಲು ಸೇರುವಂತೆ ಮಾಡಿ ಅವರ ಪೋಷಕರನ್ನು ಅನಾಥವಾಗಿಸಿರುವುದೇ ಬಿಜೆಪಿಯ ಸಾಧನೆ. ಇದು ಬಿಜೆಪಿಯ ದೇಶಪ್ರೇಮವೇ ಎಂದು ಪ್ರಶ್ನಿಸಿದರು. ಕಾಂಗ್ರೆಸ್ನಿಂದ ರಾಜ್ಯದಲ್ಲಿ ಅನುಷ್ಟಾನಗೊಂಡಿರುವ ಗ್ಯಾರಂಟಿ ಯೋಜನೆಗಳು ಹಾಗೂ ಈಗಾಗಲೇ ಕೇಂದ್ರ ಮಟ್ಟ ದಲ್ಲಿಯೂ ಕಾಂಗ್ರೆಸ್ ಘೋಷಣೆ ಮಾಡಿರುವ ಗ್ಯಾರಂಟಿ ಯೋಜನೆಗಳಿಂದಾಗಿ ಬಿಜೆಪಿಯ ಮತದಾರರು ಕೂಡಾ ಮತಯಾ ಚನೆಯ ಸಂದರ್ಭ ನಗುಮುಖದಿಂದಲೇ ಮಾತನಾಡಿಸಿರುವ ರೀತಿ ಬದಲಾವಣೆಯನ್ನು ಬಯಸಿರುವುದು ಸ್ಫಷ್ಟವಾಗಿದೆ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪದ್ಮರಾಜ್ ಪ್ರತಿಕ್ರಿಯಿಸಿದರು. ಗೋಷ್ಟಿಯಲ್ಲಿ ಕಾಂಗ್ರೆಸ್ ಮುಖಂಡರಾದ ಐವನ್ ಡಿಸೋಜಾ, ಶಶಿಧರ ಹೆಗ್ಡೆ, ಪ್ರವೀಣ್ ಚಂದ್ರ ಆಳ್ವ, ಮಹಾಬಲ ಮಾರ್ಲ, ನೀರಜ್ಪಾಲ್, ಶುಭೋದಯ ಆಳ್ವ, ವಿಕಾಸ್ ಶೆಟ್ಟಿ, ಶಾಹುಲ್ ಹಮೀದ್, ಜಿತೇಂದ್ರ, ಮುಹಮ್ಮದ್, ಸವಾದ್ ಸುಳ್ಯ ಮೊದಲಾವದರು ಉಪಸ್ಥಿತರಿದ್ದರು. ತುಳುನಾಡಿನ ಸಂಸ್ಕೃತಿ, ದೈವದೇವರು, ಕಂಬಳ, ಯಕ್ಷಗಾನ, ಜನಪದ ಕ್ರೀಡೆಗಳಿಗೆ ಪ್ರವಾಸಿಗರನ್ನು ಆಕರ್ಷಿಸುವ ಶಕ್ತಿ ಇದೆ. ಮುಂಬೈನಂತೆ ಮಂಗಳೂರು ನಗರವೂ ರಾತ್ರಿ ಹೊತ್ತಿನಲ್ಲೂ ವಾಣಿಜ್ಯ ನಗರಿಯಾಗಿ ಆರ್ಥಿಕವಾಗಿ ಸದೃಢವಾಗುವ ಎಲ್ಲಾ ಅರ್ಹತೆಯನ್ನು ಪಡೆದಿದೆ. ಆದರೆ ಬಿಜೆಪಿಯ ಧರ್ಮಾಧಾರಿತ ದ್ವೇಷದಿಂದಾಗಿ ಇಲ್ಲಿ ಕಾಂಗ್ರೆಸ್ ಅವಧಿಯಲ್ಲಿ ಆಗಿದ್ದಂತಹ ಬೃಹತ್ ಕೈಗಾರಿಕಾ ಘಟಕಗಳು, ಏರ್ಪೋರ್ಟ್, ಬಂದರು, ರೈಲ್ವೇ, ಹೆದ್ದಾರಿ ಹೊರತುಪಡಿಸಿ, ಬಿಜೆಪಿ ಅವಧಿಯಲ್ಲಿ ಅಂತಹ ಯಾವುದೇ ಕೊಡುಗೆ ಜಿಲ್ಲೆಗೆ ದೊರಕಿಲ್ಲ. ಇಲ್ಲಿನ ವಿದ್ಯಾವಂತರು ಉದ್ಯೋಗಕ್ಕಾಗಿ ಪರದೇಶವನ್ನು ಅವಲಂಬಿಸಿದ ಕಾರಣ, ಅವರ ಪೋಷಕರು ಇಲ್ಲಿ ಮಕ್ಕಳಿಂದ ದೂರವಾಗುವಂತಾಗಿದೆ. ಅದಕ್ಕೆಲ್ಲಾ ಪರಿಹಾರವಾಗಿ ಜಿಲ್ಲೆಯಲ್ಲಿ ಸೂಕ್ತ ಹೂಡಿಕೆ, ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಲಾಗುವುದು. ಈ ನಿಟ್ಟಿನಲ್ಲಿ ಇಲ್ಲಿಂದ ಹೊರ ರಾಷ್ಟ್ರಗಳಿಗೆ ಉದ್ಯೋಗಕ್ಕಾಗಿ ಹೋಗಿ ಅಲ್ಲಿ ಸಲಹಾಗಾರರಾಗಿರುವ, ಇಲ್ಲಿನ ವಿವಿಧ ವಿಭಾಗಗಳ ತಜ್ಞರನ್ನು ಒಗ್ಗೂಡಿಸಿ ಜಿಲ್ಲೆಯ ಅಭಿವೃದ್ಧಿ ನಿಟ್ಟಿನಲ್ಲಿ ನೀಲನಕ್ಷೆಯೊಂದನ್ನು ತಯಾರಿಸಿ ಜಿಲ್ಲೆಯ ಅಭಿವೃದ್ಧಿ ಒತ್ತು ನನ್ನ ಗುರಿ ಎಂದು ಪದ್ಮರಾಜ್ ಆರ್. ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
Karnataka Trains: ಮೈಸೂರು ಬೆಳಗಾವಿ ಎಕ್ಸ್ಪ್ರೆಸ್ ಸೇರಿ 6 ರೈಲುಗಳಿಗೆ ಹೆಚ್ಚುವರಿ ಬೋಗಿ ಜೋಡಣೆ; ಯಾವೆಲ್ಲಾ?
Additional Coach Arrangement Mysore Trains : ಮೈಸೂರಿನಿಂದ ಇತರೆ ಊರುಗಳಗೆ ತೆರಳುವ 6 ಪ್ರಮುಖ ರೈಲುಗಳಿಗೆ ಹೆಚ್ಚುವರಿ ಬೋಗಿಗಳನ್ನು ಜೋಡಿಸಲಾಗುತ್ತಿದೆ. ಬೇಸಿಗೆ ಹಿನ್ನೆಲೆ ಪ್ರಯಾಣಿಕರ ದಟ್ಟಣೆ ತಪ್ಪಿಸುವ ಉದ್ದೇಶದಿಂದ ಸ್ಲೀಪಕ್ ಕ್ಲಾಸ್ ಬೋಗಿ ಅಳವಡಿಸಲಾಗುತ್ತಿದೆ ಎಂದು ನೈರುತ್ಯ ರೈಲ್ವೆ ಮಾಹಿತಿ ನೀಡಿದೆ. ಹೆಚ್ಚಿನ ವಿವರ ಇಲ್ಲಿದೆ.
ಶೀಘ್ರದಲ್ಲೇ ಬರಲಿದೆ ಟಾಟಾ ಗ್ರೂಪ್ಗೆ ಸೇರಿದ ಮತ್ತೊಂದು ಕಂಪನಿಯ ಬೃಹತ್ ಐಪಿಒ
ಟಾಟಾ ಗ್ರೂಪ್ ಶೀಘ್ರದಲ್ಲೇ ಮತ್ತೊಂದು ಆರಂಭಿಕ ಸಾರ್ವಜನಿಕ ಷೇರು ಕೊಡುಗೆ ತೆರೆಯಲು ಸಜ್ಜಾಗಿದೆ. ಟಾಟಾದ ಹಣಕಾಸು ಸೇವಾ ಘಟಕವಾದ 'ಟಾಟಾ ಕ್ಯಾಪಿಟಲ್' ತನ್ನ ಐಪಿಒಗೆ ಸಿದ್ಧತೆಯನ್ನು ಆರಂಭಿಸಿದೆ. ಟಾಟಾ ಕ್ಯಾಪಿಟಲ್ನಲ್ಲಿ ಟಾಟಾ ಸನ್ಸ್ ಶೇಕಡಾ 95ರಷ್ಟು ಷೇರನ್ನು ಹೊಂದಿದೆ. ಈ ಹಿನ್ನೆಲೆಯಲ್ಲಿ ಐಪಿಒಗಾಗಿ ಬ್ಯಾಂಕರ್ಗಳನ್ನು ನೇಮಿಸಿಕೊಳ್ಳಲು ಟಾಟಾ ಸನ್ಸ್ ಎದುರುನೋಡುತ್ತಿದೆ.
ಮೇ 31ರೊಳಗೆ ನಿಮ್ಮ ವಾಹನಕ್ಕೆ HSRP ನಂಬರ್ ಪ್ಲೇಟ್ ಅಳವಡಿಸಿ, ಇಲ್ಲವಾದಲ್ಲಿ ಖಚಿತ ದಂಡದ ಬಿಸಿ!
ನೀವಿನ್ನೂ ನಿಮ್ಮ ವಾಹನಕ್ಕೆ HSRP ನಂಬರ್ ಪ್ಲೇಟ್ ಅಳವಡಿಸಿಲ್ಲವೇ? ಹಾಗಿದ್ದರೆ ಕೂಡಲೇ ನೋಂದಾಯಿಸಿ. ಈಗಾಗಲೇ ನಿಗದಿಪಡಿಸಿರುವ ಗಡುವನ್ನು 2 ಬಾರಿ ವಿಸ್ತರಿಸಿರುವ ಸಾರಿಗೆ ಇಲಾಖೆ ಇನ್ನೊಮ್ಮೆ ವಿಸ್ತರಿಸುವ ಸಾಧ್ಯತೆ ಇಲ್ಲ. ಹೀಗಾಗಿ ಮೇ 31ರೊಳಗೆ ನಂಬರ್ ಪ್ಲೇಟ್ ಅಳವಡಿಸದ ವಾಹನಗಳಿಗೆ ದಂಡ ವಿಧಿಸುವ ಬಗ್ಗೆ ಇಲಾಖೆ ಚಿಂತನೆ ನಡೆಸುತ್ತಿದ್ದು ಸರ್ಕಾರದ ಆದೇಶಕ್ಕಾಗಿ ಕಾಯುತ್ತಿದೆ. ಪ್ರಾರಂಭದಲ್ಲಿ 500 ರೂ ದಂಡ ಮತ್ತು ಬಳಿಕ 1000 ರೂ ದಂಡ ವಿಧಿಸುವ ಸಾಧ್ಯತೆ ಇದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಡಿ.ಕೆ.ಸುರೇಶ್ ಆಪ್ತರ ಮನೆ ಮೇಲೆ ಐಟಿ ದಾಳಿ : ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರತಿಭಟನೆ
ಬೆಂಗಳೂರು: ಕಾಂಗ್ರೆಸ್ ಸಂಸದ ಡಿ.ಕೆ. ಸುರೇಶ್ ಅವರ ಆಪ್ತರಾದ ಗಂಗಾಧರ್ ಹಾಗೂ ಇತರರ ಮನೆ ಮೇಲೆ ಐಟಿ ದಾಳಿ ನಡೆದಿದ್ದು, ಇದು ಚುನಾವಣೆ ಸಮಯದಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಕಟ್ಟಿಹಾಕುವ ಪ್ರಯತ್ನ ಎಂದು ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಕೋಣನಕುಂಟೆ ಬ್ಲಾಕ್ ನಲ್ಲಿರುವ ಮಾಜಿ ಕಾರ್ಪೊರೇಟರ್ ಗಂಗಾಧರ್ ಮನೆ ಮುಂದೆ ಕಾಂಗ್ರೆಸ್ ಕಾರ್ಯಕರ್ತರು ಬುಧವಾರ ಧರಣಿ ನಡೆಸಿ ಬಿಜೆಪಿ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಬಲಿಷ್ಠವಾಗಿ ಕಟ್ಟುತ್ತಿದ್ದೇವೆ. ಬಿಜೆಪಿಗೆ ಸೋಲಿನ ಭಯ ಕಾಡುತ್ತಿದೆ. ಹೀಗಾಗಿ ಕಾಂಗ್ರೆಸ್ ಮುಖಂಡರು ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳ ಮನೆ ಮೇಲೆ ಐಟಿ ದಾಳಿಗಳು ನಡೆಯುತ್ತಿವೆ. ಗಂಗಾಧರ್ ಅವರು ಹಣಕಾಸಿನ ವಿಚಾರದಲ್ಲಿ ಅನುಕೂಲಸ್ಥರು. ಸಾಕಷ್ಟು ಜಮೀನು ಇದೆ. ಬೇರೆ ಪಕ್ಷದಲ್ಲಿ ಇವರಿಗಿಂತ ಶ್ರೀಮಂತರು ಇದ್ದಾರೆ. ಅವರ ಮನೆಗಳ ಮೇಲೆ ದಾಳಿಯಾಗಿಲ್ಲ. ಕೇವಲ ಕಾಂಗ್ರೆಸ್ ನಾಯಕರ ಮೇಲೆ ದಾಳಿ ನಡೆಯುತ್ತಿದೆ. ಡಿ.ಕೆ ಸುರೇಶ್ ಹಾಗೂ ಡಿ.ಕೆ. ಶಿವಕುಮಾರ್ ಅವರ ಆಪ್ತರನ್ನು ಗುರಿಯಾಗಿಸಿ ದಾಳಿ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ಹೊರಹಾಕಿದರು. ಗಂಗಾಧರ್ ಅವರ ಜತೆಗೆ ಗೊಟ್ಟಿಗೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀಧರ್, ಸುರೇಶ್ ಅವರ ಆಪ್ತ ಸಹಾಯಕ ಸುಜಯ್, ಚಂದ್ರು, ಲಕ್ಷ್ಮಣ್, ಬಾಬು ಸೇರಿದಂತೆ ಹಲವರ ಮನೆ ಮೇಲೆ ದಾಳಿ ಮಾಡಲಾಗಿದೆ.
ಪ್ರಧಾನಿ ಮೋದಿ ಅಸಾಧ್ಯವನ್ನು ಸಾಧಿಸಿದ್ದಾರೆ: ಚುನಾವಣೆ ಹೊತ್ತಲ್ಲಿ ಹಾಡಿ ಹೊಗಳಿದ ಜೆಪಿ ಮೋರ್ಗಾನ್ ಸಿಇಒ
JPMorgan CEO Appreciates PM Modi Govt: ಬಡತನ, ವಿಪರೀತ ಜನಸಂಖ್ಯೆ ಇರುವ ದೇಶದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಸರ್ಕಾರ ಅಸಾಧ್ಯವನ್ನು ಸಾಧಿಸಿದೆ ಎಂದು ಜೆಪಿ ಮೋರ್ಗಾನ್ ಸಂಸ್ಥೆಯ ಸಿಇಒ ಜೇಮೀ ಡಿಮನ್ ಅವರು ಹಾಡಿ ಹೊಗಳಿಸಿದ್ದಾರೆ. 400 ದಶಲಕ್ಷ ಮಂದಿಯನ್ನು ಬಡತನದಿಂದ ಹೊರ ತರಲಾಗಿದೆ. ಅಷ್ಟೇ ಪ್ರಮಾಣದ ಮಂದಿಗೆ ಶೌಚಾಲಯ ನಿರ್ಮಿಸಿ ಕೊಡಲಾಗಿದೆ. ಬ್ಯಾಂಕ್ ಖಾತೆ ಮಾಡಿಸಲಾಗಿದೆ. ಜನರು ಆನ್ಲೈನ್ನಲ್ಲಿ ಹಣಕಾಸು ವಹಿವಾಟು ನಡೆಸ್ತಿದ್ದಾರೆ ಅಂತಾ ಜೇಮೀ ಡಿಮನ್ ಹೇಳಿದ್ದಾರೆ.
IPL 2024: ಎಂಎಸ್ ಧೋನಿ ನೀಡಿದ್ದ ಸಲಹೆಯನ್ನು ರಿವೀಲ್ ಮಾಡಿದ ಮಾರ್ಕಸ್ ಸ್ಟೋಯ್ನಿಸ್!
Marcus Stoinis reveals MS Dhoni's advice: ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯ ಪಂದ್ಯದಲ್ಲಿ ಲಖನ ಸೂಪರ್ ಜಯಂಟ್ಸ್ ತಂಡ 6 ವಿಕೆಟ್ಗಳ ಗೆಲುವು ಪಡೆದಿತ್ತು. 211 ರನ್ಗಳ ಗುರಿಯನ್ನು ಹಿಬಾಲಸಿದ್ದ ಲಖನೌ ಪರ ಮಾರ್ಕಸ್ ಸ್ಟೋಯ್ನಿಸ್ (124*) ಸ್ಪೋಟಕ ಶತಕ ಸಿಡಿಸಿದ್ದರು. ಆ ಮೂಲಕ ಎಲ್ಎಸ್ಜಿ ಗೆಲುವಿನಲ್ಲಿ ಮಹತ್ತರ ಪಾತ್ರವನ್ನು ವಹಿಸಿದ್ದರು. ಅಂದ ಹಾಗೆ ಪಂದ್ಯದ ಬಳಿಕ ಮಾತನಾಡಿದ್ದ ಮಾರ್ಕಸ್ ಸ್ಟೋಯ್ನಿಸ್, ಎಂಎಸ್ ಧೋನಿ ನೀಡಿದ್ದ ಮಹತ್ವದ ಸಲಹೆಯನ್ನು ಬಹಿರಂಗಪಡಿಸಿದ್ದಾರೆ.
ಕೋಟಕ್ ಬ್ಯಾಂಕ್ಗೆ ಆರ್ಬಿಐ ನಿರ್ಬಂಧ, ಹೊಸ ಗ್ರಾಹಕರ ಆನ್ಲೈನ್ ಸೇರ್ಪಡೆ, ಕ್ರೆಡಿಟ್ ಕಾರ್ಡ್ ವಿತರಣೆಗೆ ಬ್ರೇಕ್
ಖಾಸಗಿ ರಂಗದ ಪ್ರಮುಖ ಬ್ಯಾಂಕ್ ಕೋಟಕ್ ಮಹೀಂದ್ರಾ ಬ್ಯಾಂಕ್ಗೆ ಭಾರತೀಯ ರಿಸರ್ವ್ ಬ್ಯಾಂಕ್ ಬುಧವಾರ ಹಲವು ನಿರ್ಬಂಧಗಳನ್ನು ಹೇರಿದೆ. ಆನ್ಲೈನ್ ಮತ್ತು ಮೊಬೈಲ್ ಬ್ಯಾಂಕಿಂಗ್ ಚಾನೆಲ್ಗಳ ಮೂಲಕ ಹೊಸ ಗ್ರಾಹಕರನ್ನು ಸೇರ್ಪಡೆ ಮಾಡಿಕೊಳ್ಳದಂತೆ ಹಾಗೂ ಹೊಸದಾಗಿ ಕ್ರೆಡಿಟ್ ಕಾರ್ಡ್ ನೀಡದಂತೆ ಕೇಂದ್ರೀಯ ಬ್ಯಾಂಕ್ ನಿರ್ಬಂಧ ವಿಧಿಸಿದೆ.
ನಾವು ಚುನಾವಣಾ ನಿಯಂತ್ರಣ ಪ್ರಾಧಿಕಾರವಲ್ಲ, ಸಂಶಯದ ಆಧಾರದಲ್ಲಿ ಕ್ರಮ ತಗೊಳೋಕೆ ಆಗಲ್ಲ : ಸುಪ್ರೀಂ ಕೋರ್ಟ್
Supreme Court On EVM VVPAT Case : ಇವಿಎಂ ಹಾಗೂ ವಿವಿಪ್ಯಾಟ್ ಸ್ಲಿಪ್ಗಳ ಸಂಪೂರ್ಣ ಪರಿಶೀಲನೆಗೆ ಕೋರಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಅಂತ್ಯಗೊಳಿಸಿದ್ದು, ತೀರ್ಪನ್ನು ಕಾಯ್ದಿರಿಸಿದೆ. ಈ ವೇಳೆ ಸುಪ್ರೀಂ ಕೋರ್ಟ್ ನಾವು ಚುನಾವಣಾ ನಿಯಂತ್ರಣ ಪ್ರಾಧಿಕಾರವಲ್ಲ, ಅದಲ್ಲದೇ ಸಾಂವಿಧಾನಿಕ ಸಂಸ್ಥೆಗೆ ಹೀಗೆ ಕೆಲಸ ಮಾಡಬೇಕು ಎಂದು ನಿರ್ದೇಶಿಸಲು ಸಾಧ್ಯವಿಲ್ಲ ಎಂದು ಹೇಳಿದೆ. ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅವರ ವಾದಕ್ಕೆ ಪ್ರತಿಕ್ರಿಯಿಸಿರುವ ಸುಪ್ರೀಂ ಕೋರ್ಟ್, ಕೇವಲ ಅನುಮಾನದ ಆಧಾರದ ಮೇಲೆ ಕ್ರಮ ಕೈಗೊಳ್ಳಲು ಆಗಲ್ಲ ಎಂದು ಹೇಳಿದೆ.
ಲೋಕಸಭಾ ಚುನಾವಣೆ: ವೋಟು ಹಾಕಲು ಹೋಗ್ತಿದ್ದೀರಾ? ಹಾಗಾದ್ರೆ ಇವುಗಳಲ್ಲಿ ಯಾವುದಾದರೊಂದು ದಾಖಲೆ ನಿಮ್ಮಲ್ಲಿದ್ದರೆ ಸಾಕು!
Documents Required For Voting : ಮತದಾನ ಮಾಡಲು ವೋಟರ್ ಐಡಿ ಸಿಗ್ತಿಲ್ವಾ? ಹಾಗಾದರೆ ಇತರೆ ದಾಖಲೆಗಳು ನಡೆಯುತ್ತಾ? ಯಾವೆಲ್ಲಾ ದಾಖಲೆಗಳನ್ನು ತೆಗೆದುಕೊಂಡು ಹೋಗಿ ಮತದಾನ ಮಾಡಬಹುದು? ಮತದಾನ ಸಮಯ ಏನು? ಮತದಾನದ ದಿನ ಯಾವ ಬೆರಳಿಗೆ ಶಾಯಿ ಹಾಕುತ್ತಾರೆ? ಇಲ್ಲಿದೆ ಸಂಪೂರ್ಣ ಮಾಹಿತಿ.