SENSEX
NIFTY
GOLD
USD/INR

Weather

25    C
...

ಸಂಘರ್ಷ ಅಂತ್ಯಗೊಳಿಸುವ ಒಪ್ಪಂದ ವಿಳಂಬವಾದರೆ ಖಾರ್ಗ್ ದ್ವೀಪ ನಾಶ: ಟ್ರಂಪ್ ಎಚ್ಚರಿಕೆ

ವಾಷಿಂಗ್ಟನ್, ಮಾ. 30: ಇರಾನ್‌ ನೊಂದಿಗೆ ನಡೆಯುತ್ತಿರುವ ಸಂಘರ್ಷವನ್ನು ಅಂತ್ಯಗೊಳಿಸುವ ಪ್ರಯತ್ನಗಳ ನಡುವೆ, ಶೀಘ್ರದಲ್ಲೇ ಒಪ್ಪಂದ ಕೈಗೊಳ್ಳದಿದ್ದರೆ ಖಾರ್ಗ್ ದ್ವೀಪ ಸೇರಿದಂತೆ ಇರಾನ್‌ ನ ಪ್ರಮುಖ ತೈಲ ಮೂಲಸೌಕರ್ಯಗಳನ್ನು ನಾಶಪಡಿಸುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ. ಟ್ರುತ್ ಸೋಷಿಯಲ್‌ ನಲ್ಲಿ ಪ್ರಕಟಿಸಿದ ತಮ್ಮ ಇತ್ತೀಚಿನ ಪೋಸ್ಟ್‌ ನಲ್ಲಿ, “ಹೊಸ ಮತ್ತು ಹೆಚ್ಚು ಸಮಂಜಸವಾದ ಆಡಳಿತ”ದೊಂದಿಗೆ ಅಮೆರಿಕ ಗಂಭೀರ ಮಾತುಕತೆ ನಡೆಸುತ್ತಿದೆ ಎಂದು ಟ್ರಂಪ್ ತಿಳಿಸಿದ್ದಾರೆ. ಆದರೆ ಒಪ್ಪಂದ ಶೀಘ್ರದಲ್ಲಿ ಸಾಧ್ಯವಾಗದಿದ್ದರೆ ಹಾಗೂ ಹಾರ್ಮುಝ್ ಜಲಸಂಧಿಯನ್ನು ತಕ್ಷಣವೇ ‘ವ್ಯವಹಾರಕ್ಕೆ ಮುಕ್ತಗೊಳಿಸದಿದ್ದರೆ’, ಇರಾನ್‌ನ ವಿದ್ಯುತ್ ಉತ್ಪಾದನಾ ಘಟಕಗಳು, ತೈಲ ಬಾವಿಗಳು ಮತ್ತು ಕಾರ್ಯತಂತ್ರದ ದೃಷ್ಟಿಯಿಂದ ಮಹತ್ವದ ಖಾರ್ಗ್ ದ್ವೀಪವನ್ನು ಸ್ಫೋಟಿಸಿ ಸಂಪೂರ್ಣವಾಗಿ ನಾಶಪಡಿಸುವುದಾಗಿ ಅವರು ಹೇಳಿದ್ದಾರೆ. “ಇವುಗಳನ್ನು ನಾವು ಉದ್ದೇಶಪೂರ್ವಕವಾಗಿ ಇನ್ನೂ ಮುಟ್ಟಿಲ್ಲ. ಆದರೆ ಅಗತ್ಯವಿದ್ದರೆ ಕಠಿಣ ಕ್ರಮ ಕೈಗೊಳ್ಳುತ್ತೇವೆ,” ಎಂದು ಅವರು ಹೇಳಿದ್ದಾರೆ. ಕಳೆದ 47 ವರ್ಷಗಳಲ್ಲಿ ಇರಾನ್ ಕಾರಣದಿಂದ ಮೃತಪಟ್ಟ ಅಮೆರಿಕದ ಸೈನಿಕರು ಮತ್ತು ಇತರರಿಗಾಗಿ ಇದು ಪ್ರತೀಕಾರವಾಗಲಿದೆ ಎಂದು ಟ್ರಂಪ್ ತಿಳಿಸಿದ್ದಾರೆ. ಅಮೆರಿಕವು ಪಾಕಿಸ್ತಾನದ ಮೂಲಕ ಇರಾನ್‌ ಗೆ 15 ಅಂಶಗಳ ಕದನ ವಿರಾಮ ಪ್ರಸ್ತಾವವನ್ನು ಕಳೆದ ವಾರ ಮಂಡಿಸಿದೆ. ಇದರಲ್ಲಿ ಹಾರ್ಮುಝ್ ಜಲಸಂಧಿಯನ್ನು ಪುನಃ ತೆರೆಯುವುದು ಹಾಗೂ ಇರಾನ್‌ ನ ಪರಮಾಣು ಕಾರ್ಯಕ್ರಮದ ಮೇಲೆ ನಿಯಂತ್ರಣ ವಿಧಿಸುವುದು ಸೇರಿವೆ. ಆದರೆ ಟೆಹ್ರಾನ್ ಈ ಪ್ರಸ್ತಾವವನ್ನು ತಿರಸ್ಕರಿಸಿ ಪರ್ಯಾಯ ಸೂಚನೆಗಳನ್ನು ನೀಡಿದೆ. ಇರಾನ್, ತನ್ನ ಮಿತ್ರ ರಾಷ್ಟ್ರಗಳ ಮೇಲೆ ಇಸ್ರೇಲ್ ನಡೆಸುತ್ತಿರುವ ದಾಳಿಗಳನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದೆ. ಜೊತೆಗೆ, ಯುದ್ಧದಿಂದ ಉಂಟಾದ ಹಾನಿಗೆ ಪರಿಹಾರ ಹಾಗೂ ಮಧ್ಯಪ್ರಾಚ್ಯದಿಂದ ಅಮೆರಿಕದ ಸೇನಾ ನೆಲೆಗಳನ್ನು ತೆರವುಗೊಳಿಸುವುದನ್ನೂ ಬೇಡಿಕೆಯಾಗಿ ಮುಂದಿಟ್ಟಿದೆ. ಇಸ್ರೇಲ್ ಈ ಬೇಡಿಕೆಯನ್ನು ಒಪ್ಪಿಕೊಳ್ಳುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ಇದಕ್ಕೂ ಮೊದಲು, ಯುದ್ಧ ಅಂತ್ಯಗೊಳಿಸುವ ಕುರಿತು ಅಮೆರಿಕ ಮತ್ತು ಇರಾನ್ ನಡುವೆ “ಉತ್ತಮ ಮತ್ತು ಫಲಪ್ರದ ಮಾತುಕತೆಗಳು” ನಡೆದಿವೆ ಎಂದು ಟ್ರಂಪ್ ಹೇಳಿದ್ದರು. ಆದರೆ ಇರಾನ್ ಅಧಿಕಾರಿಗಳು ಇದನ್ನು ತಕ್ಷಣವೇ ಖಂಡಿಸಿ, ಯಾವುದೇ ಮಾತುಕತೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ರಾಜತಾಂತ್ರಿಕ ಮಾತುಕತೆಗಳ ಹೆಸರಿನಲ್ಲಿ ಅಮೆರಿಕ ಗೋಪ್ಯವಾಗಿ ನೆಲದ ದಾಳಿಗೆ ಸಿದ್ಧತೆ ನಡೆಸುತ್ತಿದೆ ಎಂದು ಇರಾನ್ ಆರೋಪಿಸಿದೆ. ಹಾರ್ಮುಝ್ ಜಲಸಂಧಿಯನ್ನು ಪುನಃ ತೆರೆಯುವಂತೆ ಒತ್ತಡ ಹೇರುವ ಉದ್ದೇಶದಿಂದ ಖಾರ್ಗ್ ದ್ವೀಪವನ್ನು ಆಕ್ರಮಿಸುವ ಅಥವಾ ದಿಗ್ಬಂಧನ ಮಾಡುವ ಆಯ್ಕೆಯನ್ನೂ ಅಮೆರಿಕ ಪರಿಗಣಿಸುತ್ತಿದೆ ಎಂಬ ವರದಿಗಳು ಹೊರಬಿದ್ದಿವೆ.

ವಾರ್ತಾ ಭಾರತಿ 30 Mar 2026 11:51 pm

ಸೈಬರ್ ವಂಚನೆ ವಿರುದ್ಧ ಕೇಂದ್ರದಿಂದ ಕಠಿಣ ಕ್ರಮ | 83,000ಕ್ಕೂ ಅಧಿಕ ವ್ಯಾಟ್ಸ್‌ಆಪ್ ಖಾತೆಗಳು, ನಕಲಿ ಆ್ಯಪ್‌ಗಳಿಗೆ ನಿರ್ಬಂಧ

ಹೊಸದಿಲ್ಲಿ, ಮಾ. 30: ಹೆಚ್ಚುತ್ತಿರುವ ಡಿಜಿಟಲ್ ಅರೆಸ್ಟ್ ಹಾಗೂ ಹೂಡಿಕೆ ವಂಚನೆ ವಿರುದ್ಧ ಭಾರೀ ಕ್ರಮದ ಭಾಗವಾಗಿ, ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯದ ಸೈಬರ್ ವಿಭಾಗವಾದ ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರವು ಸೈಬರ್ ಅಪರಾಧಿಗಳ ವಿರುದ್ಧ ‘ಡಿಜಿಟಲ್ ದಾಳಿ’ ಆರಂಭಿಸಿದೆ. ಮೂಲಗಳ ಪ್ರಕಾರ, 2025ರ ಆರಂಭದಿಂದ ವಂಚನೆಗಳನ್ನು ನಡೆಸಲು ಬಳಸಲಾಗುತ್ತಿದ್ದ 3,962 ಸ್ಕೈಪ್ ಐಡಿಗಳು ಹಾಗೂ 83,867 ವ್ಯಾಟ್ಸ್‌ಆಪ್ ಖಾತೆಗಳನ್ನು ಸೈಬರ್ ವಿಭಾಗ ನಿರ್ಬಂಧಿಸಿದೆ. ಇದು ದೂರಸಂಪರ್ಕ ಇಲಾಖೆ, ಪೊಲೀಸ್ ಪಡೆ ಹಾಗೂ ದೂರಸಂಪರ್ಕ ಸೇವೆ ಪೂರೈಕೆದಾರರ ಸಮನ್ವಯದಲ್ಲಿ ನಡೆಸಲಾದ ಅತ್ಯಂತ ಪ್ರಬಲ ಕಾರ್ಯಾಚರಣೆಯಾಗಿದೆ. ಇದರಿಂದ ವಂಚಕರು ಬಳಸುತ್ತಿದ್ದ ಡಿಜಿಟಲ್ ಮೂಲಭೂತ ವ್ಯವಸ್ಥೆ ದೊಡ್ಡ ಪ್ರಮಾಣದಲ್ಲಿ ನಿಷ್ಕ್ರಿಯಗೊಂಡಿದೆ. ನ್ಯಾಷನಲ್ ಸೈಬರ್ ಕ್ರೈಮ್ ರಿಪೋರ್ಟಿಂಗ್ ಪೋರ್ಟಲ್ (ಎನ್‌ಸಿಆರ್‌ಪಿ) ವ್ಯವಸ್ಥೆಯ ಮೂಲಕ ಗುರುತಿಸಲಾದ 8.45 ಲಕ್ಷ ಸಿಮ್ ಕಾರ್ಡ್‌ ಗಳು ಹಾಗೂ 2.39 ಲಕ್ಷ ಮೊಬೈಲ್ ಐಎಂಇಐ ಸಂಖ್ಯೆಗಳನ್ನೂ ನಿರ್ಬಂಧಿಸುವ ಮೂಲಕ ಈ ದಾಳಿಯನ್ನು ಮೊಬೈಲ್ ಹಾಗೂ ನೆಟ್‌ವರ್ಕ್ ಭದ್ರತೆಯ ಕಡೆಗೂ ವಿಸ್ತರಿಸಲಾಗಿದೆ. ಆನ್‌ಲೈನ್ ವಂಚನೆಯ ವ್ಯವಸ್ಥೆಯನ್ನು ಇನ್ನಷ್ಟು ನಾಶಗೊಳಿಸಲು ಸಚಿವಾಲಯವು 827 ಹಾನಿಕರ ಮೊಬೈಲ್ ಅಪ್ಲಿಕೇಶನ್‌ಗಳನ್ನು ನಿರ್ಬಂಧಿಸಿದೆ. ಅಲ್ಲದೆ, 1.11 ಲಕ್ಷಕ್ಕೂ ಅಧಿಕ ಸಂದೇಹಾಸ್ಪದ ಆನ್‌ ಲೈನ್ ವಿಷಯವನ್ನು ತೆಗೆದುಹಾಕಲು ಅಥವಾ ನಿರ್ಬಂಧಿಸಲು ಸಹಯೋಗ್ ಪೋರ್ಟಲ್ ಅನ್ನು ಕೂಡ ಬಳಸಿದೆ.

ವಾರ್ತಾ ಭಾರತಿ 30 Mar 2026 11:47 pm

SWR: ಪ್ರಶಾಂತಿ ಎಕ್ಸ್‌ಪ್ರೆಸ್ ರೈಲಿಗೆ ಹೆಚ್ಚುವರಿ ಬೋಗಿ: ರೈಲುಗಳ ನಿಲುಗಡೆಯಲ್ಲಿ ಬದಲಾವಣೆ

ನೈಋತ್ಯ ರೈಲ್ವೆ ವ್ಯಾಪ್ತಿಯಲ್ಲಿ ಪೀಕ್ ಸಮಯದಲ್ಲಿ ಉಂಟಾಗುವ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸಲು ಅಧಿಕಾರಿಗಳು ಮುಂದಾಗಿದ್ದಾರೆ. ಪ್ರಶಾಂತಿ ಡೈಲಿ ಎಕ್ಸ್‌ಪ್ರೆಸ್ ರೈಲಿಗೆ ಬೋಗಿ ಹೆಚ್ಚಿಸಲು ಪೂರ್ವ ಕರಾವಳಿ ರೈಲ್ವೆಯು ನಿರ್ಧರಿಸಿದೆ. ಜೊತೆಗೆ ಚನ್ನಸಂದ್ರ ನಿಲ್ದಾಣದಲ್ಲಿ ನಿಲುಗಡೆ ರದ್ದತಿ ಮುಂದುವರಿಯಲಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಭುವನೇಶ್ವರ-ಕೆಎಸ್‌ಆರ್ ಬೆಂಗಳೂರು ಪ್ರಶಾಂತಿ ಡೈಲಿ ಎಕ್ಸ್‌ಪ್ರೆಸ್ ರೈಲು (18463) ಏಪ್ರಿಲ್ 01

ಒನ್ ಇ೦ಡಿಯ 30 Mar 2026 11:46 pm

Shivamogga | ಆಕರ್ಷಕ ಬಹುಮಾನ, ಸ್ಕೀಮ್ ಹೆಸರಿನಲ್ಲಿ ಸಾರ್ವಜನಿಕರಿಗೆ ಕೋಟ್ಯಂತರ ರೂ. ವಂಚನೆ ಆರೋಪ: ಓರ್ವನ ಬಂಧನ

ಶಿವಮೊಗ್ಗ: ಆಕರ್ಷಕ ಬಹುಮಾನ ಹಾಗೂ ಸ್ಕೀಮ್‌ಗಳ ಹೆಸರಿನಲ್ಲಿ ಸಾರ್ವಜನಿಕರಿಗೆ ಕೋಟ್ಯಂತರ ರೂ. ವಂಚಿಸಿದ ಆರೋಪದಡಿ ಓರ್ವ ವ್ಯಕ್ತಿಯನ್ನು ಹೊಸನಗರ ಪೊಲೀಸರು ಬಂಧಿಸಿದ್ದಾರೆ. ಉಡುಪಿ ಮೂಲದ ಅಬ್ದುಲ್ ರಝಾಕ್ ಬಂಧಿತ ಆರೋಪಿ. ಹೊಸನಗರದ ನಿಖಿಲ್ ಎಂಬವರು ನೀಡಿದ ದೂರಿನನ್ವಯ ಈ ಕ್ರಮ ಕೈಗೊಳ್ಳಲಾಗಿದೆ. ಆರೋಪಿಗಳಾದ ಅಬ್ದುಲ್ ರಝಾಕ್ ಮತ್ತು ಶೇಕ್ ಮುಹಮ್ಮದ್ ಫಝಲ್ 13, 16 ಮತ್ತು 21 ತಿಂಗಳ ವಿವಿಧ ಸ್ಕೀಮ್‌ಗಳನ್ನು ಪರಿಚಯಿಸಿದ್ದರು. ಪ್ರತಿ ತಿಂಗಳು 1,000 ರೂ. ಪಾವತಿಸಿದರೆ ಸ್ಕೀಮ್ ಮುಕ್ತಾಯದ ನಂತರ ಗೃಹೋಪಯೋಗಿ ವಸ್ತುಗಳು ಹಾಗೂ ಆಕರ್ಷಕ ಬಹುಮಾನ ನೀಡುವುದಾಗಿ ಜನರನ್ನು ನಂಬಿಸಿದ್ದರು. ದೂರುದಾರ ನಿಖಿಲ್ ಅವರು ಸುಮಾರು 150 ಕಾರ್ಡುದಾರರನ್ನು ಸಂಪರ್ಕಿಸಿ ಅವರಿಂದ ಸಂಗ್ರಹಿಸಿದ 24 ಲಕ್ಷ ರೂ.ಯನ್ನು ಆರೋಪಿಗಳ ಖಾತೆಗೆ ವರ್ಗಾಯಿಸಿದ್ದರು. ಆದರೆ, ಮೇ 2025ಕ್ಕೆ ಸ್ಕೀಮ್ ಮುಕ್ತಾಯವಾದರೂ ಭರವಸೆ ನೀಡಿದಂತೆ ಯಾವುದೇ ವಸ್ತುಗಳನ್ನಾಗಲಿ ಅಥವಾ ಹಣವನ್ನಾಗಲಿ ಹಿಂತಿರುಗಿಸದೆ ಆರೋಪಿಗಳು ಸತಾಯಿಸುತ್ತಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಇವರಂತೆಯೇ ಸುಮಾರು 7-8 ಜನ ಏಜೆಂಟರ 1,960ಕ್ಕೂ ಹೆಚ್ಚು ಜನರಿಂದ ಸುಮಾರು 3 ಕೋಟಿಗೂ ಅಧಿಕ ಹಣವನ್ನು ಸಂಗ್ರಹಿಸಿ ಪಾವತಿಸಿದ್ದರು. ಆದರೆ, ಅವರಿಗೂ ಯಾವುದೇ ಬಹುಮಾನವನ್ನು ನೀಡಲಿಲ್ಲ ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಹೊಸನಗರ ಪಿಎಸ್ಸೈ ಮತ್ತು ಸಿಬ್ಬಂದಿ ತಂಡ ತಕ್ಷಣ ಕಾರ್ಯ ಪ್ರವೃತ್ತರಾಗಿ ಅಬ್ದುಲ್ ರಝಾಕ್‌ನನ್ನು ಬಂಧಿಸಿದೆ.

ವಾರ್ತಾ ಭಾರತಿ 30 Mar 2026 11:44 pm

ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಯ ಮೊದಲ ಹಂತದ ಪ್ಯಾಕೇಜ್‌ಗೆ ಟೆಂಡರ್‌: ಕಾಮಗಾರಿಯ ವೆಚ್ಚವೆಷ್ಟು? ವಿಧಿಸಿರುವ ಗಡುವೇನು?

Bengaluru Business Corridor Tender- ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ಮುಕ್ತಿ ನೀಡುವ ಮಹತ್ವಾಕಾಂಕ್ಷಿ 'ಬೆಂಗಳೂರು ಬಿಸಿನೆಸ್‌ ಕಾರಿಡಾರ್‌' (PRR) ಯೋಜನೆಯ ಮೊದಲ ಹಂತಕ್ಕೆ ಬಿಡಿಎ ಟೆಂಡರ್ ಕರೆಯಲಾಗಿದೆ. ತುಮಕೂರು ರಸ್ತೆಯ ಮಾದಾವರದಿಂದ ಏರ್ಪೋರ್ಟ್ ಸಮೀಪದ ಬಳ್ಳಾರಿ ರಸ್ತೆವರೆಗಿನ 19.8 ಕಿ.ಮೀ. ಉದ್ದದ ಎಂಟು ಪಥದ ರಸ್ತೆ ನಿರ್ಮಾಣಕ್ಕೆ ₹3348.05 ಕೋಟಿ ಅಂದಾಜಿಸಲಾಗಿದ್ದು, 3 ವರ್ಷಗಳ ಗಡುವು ನೀಡಲಾಗಿದೆ. ಒಟ್ಟು 73.4 ಕಿ.ಮೀ. ಉದ್ದದ ಈ ಬೃಹತ್ ಯೋಜನೆಯು ಮೂರು ಪ್ಯಾಕೇಜ್‌ಗಳನ್ನು ಒಳಗೊಂಡಿದೆ.

ವಿಜಯ ಕರ್ನಾಟಕ 30 Mar 2026 11:35 pm

Uttar Pradesh | ಪತಿಯನ್ನು ಕೊಂದು ರಾತ್ರಿಯಿಡೀ ಮಕ್ಕಳೊಂದಿಗೆ ಶವದ ಪಕ್ಕವೇ ಮಲಗಿದ್ದ ಮಹಿಳೆ!

ಅಮ್ರೋಹಾ, ಮಾ.30: ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯಲ್ಲಿ ಪತಿಯ ಕೊಲೆ ಮಾಡಿದ ಆರೋಪದಲ್ಲಿ ಮಹಿಳೆ, ಆಕೆಯ ಪ್ರಿಯಕರ ಹಾಗೂ ಆತನ ಸ್ನೇಹಿತನನ್ನು ಪೊಲೀಸರು ಬಂಧಿಸಿದ್ದಾರೆ. ತನ್ನ ಮಕ್ಕಳೊಂದಿಗೆ ರಾತ್ರಿಯಿಡೀ ಪತಿಯ ಶವದ ಪಕ್ಕದಲ್ಲಿಯೇ ಮಲಗಿದ್ದ ಮಹಿಳೆ ಬಳಿಕ ದರೋಡೆ ಕಥೆಯನ್ನು ಹೆಣೆದಿದ್ದಳು. ಕೊಲೆಯಾಗಿರುವ ಮೆಹ್ರಾಜ್ ಅಮ್ರೋಹಾದ ಪಿಪಲೌತಿ ಕಲಾ ಗ್ರಾಮದ ನಿವಾಸಿಯಾಗಿದ್ದು, ಗಾರೆ ಕೆಲಸ ಮಾಡುತ್ತಿದ್ದ. ಆತನ ಪತ್ನಿ ರುಹಿ ತನ್ನ ತಂಗಿಯ ಭಾವ ಫರ್ಮಾನ್ ಜೊತೆ ಅನೈತಿಕ ಸಂಬಂಧ ಹೊಂದಿದ್ದು, ಇಬ್ಬರೂ ಜೊತೆಯಾಗಿ ವಾಸವಿರಲು ಬಯಸಿದ್ದರು. ಈ ಸಂಬಂಧ ಮೆಹ್ರಾಜ್‌ ಗೆ ಗೊತ್ತಾದಾಗ ಅದನ್ನು ಬಲವಾಗಿ ವಿರೋಧಿಸಿದ್ದ. ತನ್ನ ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನನ್ನು ಕೊಲ್ಲಲು ಸಂಚು ರೂಪಿಸಿದ್ದ ರುಹಿ, ಆತನ ಊಟದಲ್ಲಿ ಮತ್ತೇರಿಸುವ ಮದ್ದನ್ನು ಸೇರಿಸಿದ್ದಳು. ರಾತ್ರಿ ಫರ್ಮಾನ್ ಹಾಗೂ ಆತನ ಸ್ನೇಹಿತ ಅದ್ನಾನ್ ಅನ್ನು ಮನೆಗೆ ಕರೆಸಿಕೊಂಡಿದ್ದಳು. ಮೆಹ್ರಾಜ್‌ನ ಕೈಕಾಲುಗಳನ್ನು ಕಟ್ಟಿದ ಅವರು ಬಳಿಕ ಹರಿತವಾದ ಚೂರಿಯಿಂದ ಆತನ ಕತ್ತನ್ನು ಸೀಳಿ ಕೊಲೆ ಮಾಡಿದ್ದರು. ಈ ಘೋರ ಕೃತ್ಯದ ಬಳಿಕ ರುಹಿ ತನ್ನ ಮಕ್ಕಳೊಂದಿಗೆ ರಾತ್ರಿಯಿಡೀ ಮೆಹ್ರಾಜ್‌ ನ ಶವದ ಪಕ್ಕದಲ್ಲಿಯೇ ಮಂಚದಲ್ಲಿ ಮಲಗಿದ್ದಳು. ಮರುದಿನ ಬೆಳಿಗ್ಗೆ ಮೆಹ್ರಾಜ್‌ ನ ತಂದೆ ಮಗನ ಮನೆಗೆ ಬಂದಾಗ ಆತ ವರಾಂಡಾದ ಮಂಚದಲ್ಲಿ ಬಿದ್ದಿರುವುದನ್ನು ಕಂಡಿದ್ದರು. ಮೆಹ್ರಾಜ್‌ನ ಕೈಕಾಲುಗಳು ಇನ್ನೂ ಕಟ್ಟಿಹಾಕಿದ ಸ್ಥಿತಿಯಲ್ಲಿಯೇ ಇದ್ದವು. ತನ್ನನ್ನು ರಕ್ಷಿಸಿಕೊಳ್ಳಲು ರುಹಿ ದರೋಡೆ ಕಥೆಯನ್ನು ಹೆಣೆದಿದ್ದಳು. ಆದರೆ ಮೆಹ್ರಾಜ್‌ನ ತಂದೆ ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದರು. ರುಹಿಯನ್ನು ವಶಕ್ಕೆ ತೆಗೆದುಕೊಂಡ ಪೊಲೀಸರು ವಿಚಾರಣೆ ನಡೆಸಿದಾಗ ಕೊಲೆಯ ಹಿಂದಿನ ಸತ್ಯ ಬಯಲಾಗಿತ್ತು. ಆರೋಪಿಗಳಿಂದ ಕೊಲೆಗೆ ಬಳಸಿದ್ದ ಎರಡು ಚೂರಿಗಳು ಮತ್ತು ಎರಡು ಮೊಬೈಲ್ ಫೋನ್‌ ಗಳನ್ನು ವಶಪಡಿಸಿಕೊಂಡಿರುವ ಪೊಲೀಸರು ಅವರನ್ನು ಜೈಲಿಗೆ ತಳ್ಳಿ, ಮುಂದಿನ ತನಿಖೆ ನಡೆಸುತ್ತಿದ್ದಾರೆ.

ವಾರ್ತಾ ಭಾರತಿ 30 Mar 2026 11:30 pm

ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಜನಗಣತಿಗೆ 909 ಗಣತಿ ಸಿಬ್ಬಂದಿ ನೇಮಕ

ಮಮಗಳೂರು, ಮಾ.30:ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಜನಗಣತಿ 2027 ಕಾರ್ಯವನ್ನು ನಡೆಸುವ ಉದ್ದೇಶದಿಂದ ಒಟ್ಟು 909 ಗಣತಿ ಸಿಬ್ಬಂದಿಗಳನ್ನು (enumerators) 7 ಚಾರ್ಜ್ ಅಧಿಕಾರಿಗಳ ಅಧೀನದಲ್ಲಿ ನೇಮಕ ಮಾಡಲಾಗಿದೆ. ಇದಲ್ಲದೆ, ಸ್ವಯಂ ಗಣತಿ ಪ್ರಕ್ರಿಯೆ ಎ.1 ರಿಂದ 15ರವರೆಗೆ ನಡೆಯಲಿದೆ ಎಂದು ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತ ರವಿಚಂದ್ರ ನಾಯಕ್ ತಿಳಿಸಿದ್ದಾರೆ. ನಾಗರೀಕರು ಸುರಕ್ಷಿತ ಒನ್ ಲೈನ್ ಪೋರ್ಟಲ್ (www.sc.census.gov.in) ಮೂಲಕ ವೈಯಕ್ತಿಕವಾಗಿ ತಮ್ಮದೇ ಆದ ಮಾಹಿತಿಗಳನ್ನು ಭರ್ತಿ ಮಾಡಲು ಅನುಕೂಲ ಮಾಡಿ ಕೊಡಲಾಗಿದೆ. ಗಣತಿ ಸಿಬ್ಬಂದಿಗೆ ಕಡ್ಡಾಯ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಕೆಲ ಗಣತಿ ಸಿಬ್ಬಂದಿಗಳು ಸಮಂಜಸವಲ್ಲದ ಕಾರಣಗಳನ್ನು ನೀಡುತ್ತಾ ತರಬೇತಿಗೆ ಗೈರುಹಾಜರಾಗಿರುವುದು ಗಮನಕ್ಕೆ ಬಂದಿದೆ. ಭಾರತದ ಜನಗಣತಿ ಕಾರ್ಯದ ಯಶಸ್ವಿ ಅನುಷ್ಠಾನಕ್ಕೆ ತರಬೇತಿ ಅತ್ಯಂತ ಮಹತ್ವದ್ದಾಗಿದ್ದು, ಇಂತಹ ಗೈರುಹಾಜರಿಯನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ಹೇಳಿದ್ದಾರೆ. ಸಂಬಂಧಿಸಿದ ಎಲ್ಲಾ ಗಣತಿ ಸಿಬ್ಬಂದಿಗಳು ತಮ್ಮ ಕಾರ್ಯಗಳನ್ನು ಜವಾಬ್ದಾರಿಯಿಂದ ನಿರ್ವಹಿಸಲು ಸಿದ್ಧರಾಗಿರ ಬೇಕು. ಎಲ್ಲಾ ಚಾರ್ಜ್ ಅಧಿಕಾರಿಗಳು ತಮ್ಮ ಅಧೀನದಲ್ಲಿರುವ ಗಣತಿ ಸಿಬ್ಬಂದಿಗಳ ಹಾಜರಾತಿಯನ್ನು ಖಚಿತ ಪಡಿಸಿ, ಅಗತ್ಯ ವರದಿಯನ್ನು ಸಲ್ಲಿಸಲು ಸೂಚಿಸಲಾಗಿದೆ.ಈ ಹಿನ್ನೆಲೆಯಲ್ಲಿ, ಭಾರತದ ಜನಗಣತಿ ಕಾಯಿದೆ, 1948 (Census Act, 1948) ಅದರಡಿ ಜಾರಿಯಲ್ಲಿರುವ ನಿಯಮಾವಳಿಗಳ ಪ್ರಕಾರ, ಗೈರುಹಾಜರಾದ ಗಣತಿ ಸಿಬ್ಬಂದಿಗೆ ನೋಟಿಸ್ ನೀಡಲಾಗಿದೆ. ಮುಂದಿನ ತರಬೇತಿಗೆ ಅವರು ಕಡ್ಡಾಯವಾಗಿ ಹಾಜರಾಗಬೇಕಾಗಿದ್ದು ಪಾಲನೆ ಮಾಡದವರ ವಿರುದ್ಧ ಕಾನೂನು ಮತ್ತು ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಆಯುಕ್ತ ರವಿಚಂದ್ರ ನಾಯಕ್ ಎಚ್ಚರಿಸಿದ್ದಾರೆ.

ವಾರ್ತಾ ಭಾರತಿ 30 Mar 2026 11:18 pm

Vaibhav Suryavanshi: ಸಂಜು ಟೀಂ ವಿರುದ್ಧವೇ ಕೇವಲ 15 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ ವೈಭವ್ ಸೂರ್ಯವಂಶಿ

Vaibhav Suryavanshi: ಗುವಾಹಟಿಯಲ್ಲಿ ಸೋಮವಾರ ನಡೆದ ಐಪಿಎಲ್‌ 2026ರ 3ನೇ ಪಂದ್ಯದಲ್ಲಿ ರಾಜಸಸ್ಥಾನ್ ರಾಯಲ್ಸ್‌ ತಂಡವು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿತು. ವೈಭವ್ ಸೂರ್ಯವಂಶಿ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಆರ್‌ಆರ್‌ ತಂಡ ಸಿಎಸ್‌ಕೆ ನೀಡಿದ್ದ 128 ರನ್‌ಗಳ ಗುರಿಯನ್ನು ಕೇವಲ 12.1 ಓವರ್‌ಗಳಲ್ಲಿ ತಲುಪಿತು. ವೈಭವ್ ಸೂರ್ಯವಂಶಿ ಕೇವಲ 17 ಎಸೆತಗಳಲ್ಲಿ

ಒನ್ ಇ೦ಡಿಯ 30 Mar 2026 11:14 pm

ಕೊಕ್ಕಡ| ಕಾಡಾನೆಗಳಿಂದ ದಾಳಿ; ಜನರಲ್ಲಿ ಆತಂಕದ ವಾತಾವರಣ

ಬೆಳ್ತಂಗಡಿ; ತಾಲೂಕಿನ ಕೊಕ್ಕಡ ಗ್ರಾಮ ವ್ಯಾಪ್ತಿಯಲ್ಲಿ ಕಾಡಾನೆಗಳ ಉಪಟಳ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಎರಡು ವಾಹನಗಳ ಮೇಲೆ ಆನೆ ದಾಳಿ ನಡೆಸಿದ್ದು ಗ್ರಾಮಸ್ಥರಲ್ಲಿ ಭಯ ಮೂಡಿಸಿದೆ. ಕೃಷಿ ತೋಟಗಳು, ಮನೆಗಳ ಸುತ್ತಮುತ್ತ ಸಂಚರಿಸುತ್ತಾ ನಿರಂತರ ಹಾನಿ ಮಾಡುತ್ತಿರುವ ಕಾಡಾನೆಗಳು ಇದೀಗ ವಾಹನಗಳ ಮೇಲೂ ದಾಳಿ ನಡೆಸುತ್ತಿರುವುದು ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ. ಮಾ.28ರಂದು ರಾತ್ರಿ ತೆಂಕುಬೈಲು ಪ್ರದೇಶದಲ್ಲಿ ಕಾಡಾನೆ ಸಂಚರಿಸುವ ವೇಳೆ ಯಶವಂತ ಅವರ ತೋಟದ ಕೆಲಸದ ಕಾರ್ಮಿಕನಿಗೆ ಸೇರಿದ ನಿಲ್ಲಿಸಿದ್ದ ಮಾರುತಿ ಕಾರಿನ ಮೇಲೆ ದಾಳಿ ನಡೆಸಿ ಕಾರನ್ನು ಜಖಂಗೊಳಿಸಿದ ಘಟನೆ ನಡೆದಿದೆ. ಅದೇ ರೀತಿ ಮಾ.29ರಂದು ಮುಂಡೂರುಪಳಿಕೆ ಸಮೀಪದ ಸಂಕುಬೈಲು ಪ್ರದೇಶದಲ್ಲಿ ಸೇಸಪ್ಪ ಗೌಡ ಅವರು ನಿಲ್ಲಿಸಿದ್ದ ದ್ವಿಚಕ್ರ ವಾಹನದ ಮೇಲೂ ಕಾಡಾನೆ ದಾಳಿ ನಡೆಸಿ ಹಾನಿಗೊಳಿಸಿದೆ. ಇದಲ್ಲದೆ, ಹಲವು ಕಡೆಗಳಲ್ಲಿ ಬಾಳೆ, ತೆಂಗು, ಅಡಿಕೆ ಹಾಗೂ ಭತ್ತದ ಕೃಷಿ ತೋಟಗಳಿಗೆ ಕಾಡಾನೆಗಳು ನುಗ್ಗಿ ಅಪಾರ ಹಾನಿ ಉಂಟುಮಾಡುತ್ತಿವೆ. ಈ ಹಿನ್ನೆಲೆಯಲ್ಲಿ ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ರಾಘವೇಂದ್ರ ಎಚ್.ಪಿ ಹಾಗೂ ಸಿಬ್ಬಂದಿಗಳು ಘಟನಾ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಉಪ ಅರಣ್ಯ ಸಂರಕ್ಷಣಾಧಿಕಾರಿ ಸುಬ್ಬಯ್ಯ ನಾಯಕ್ ಅವರು ಹಾನಿಗೊಳಗಾದ ಪ್ರದೇಶಗಳಿಗೆ ಎರಡನೇ ಬಾರಿ ಭೇಟಿ ನೀಡಿ ಸಂತ್ರಸ್ತರು ಹಾಗೂ ಸ್ಥಳೀಯರೊಂದಿಗೆ ಮಾತುಕತೆ ನಡೆಸಿ ಸರಕಾರದಿಂದ ದೊರೆಯುವ ಪರಿಹಾರ ಕ್ರಮಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಕಾಡಾನೆಗಳ ಚಲನವಲನಗಳ ಮೇಲೆ ನಿಗಾ ಇಡುವ ಸಲುವಾಗಿ ಎಲಿಫೆಂಟ್ ಟಾಸ್ಕ್ ಫೋರ್ಸ್ ತಂಡವನ್ನು ನಿಯೋಜಿಸಲಾಗಿದ್ದು, ಸುಬ್ಬಯ್ಯ ನಾಯಕ್ ಅವರು ರಾತ್ರಿ ಇಡೀ ತಂಡದೊಂದಿಗೆ ಇದ್ದು ಮಾರ್ಗದರ್ಶನ ನೀಡುತ್ತಿದ್ದಾರೆ. ಕಾಡಾನೆಗಳ ಉಪಟಳದಿಂದ ಜನಜೀವನ ಅಸ್ತವ್ಯಸ್ತವಾಗಿದ್ದು, ಯಾವುದೇ ಅನಾಹುತ ಸಂಭವಿಸುವ ಮೊದಲು ಕಠಿಣ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ನಿರಂತರ ಪಹರೆ, ಶಾಶ್ವತ ಪರಿಹಾರ ಕ್ರಮಗಳು ಹಾಗೂ ಕಾಡಾನೆಗಳ ಚಲನವಲನ ನಿಯಂತ್ರಣಕ್ಕೆ ತಕ್ಷಣದ ಯೋಜನೆ ಜಾರಿಗೊಳಿಸುವಂತೆ ಜನರು ಒತ್ತಾಯಿಸಿದ್ದಾರೆ. ಇದರೊಂದಿಗೆ, ಅರಣ್ಯ ಇಲಾಖೆ ಕೂಡ ಗ್ರಾಮಸ್ಥರಿಗೆ ಮುಂಜಾಗ್ರತಾ ಕ್ರಮವಾಗಿ ಹೆಚ್ಚಿನ ಜಾಗ್ರತೆ ವಹಿಸಲು ಸೂಚನೆ ನೀಡಿದ್ದು, ವಿಶೇಷವಾಗಿ ರಾತ್ರಿ ವೇಳೆ ಮತ್ತು ಕಾಡು ಪ್ರದೇಶಗಳ ಸಮೀಪ ಸಂಚರಿಸುವವರು ಎಚ್ಚರಿಕೆಯಿಂದ ಇರಬೇಕೆಂದು ಮನವಿ ಮಾಡಿದೆ.

ವಾರ್ತಾ ಭಾರತಿ 30 Mar 2026 11:14 pm

IPL 2026: ಸಂಜು ಸ್ಯಾಮ್ಸನ್ 'ಓಪನಿಂಗ್ ಮ್ಯಾಚ್' 'ಮ್ಯಾಜಿಕ್' ದಾಖಲೆಗೆ ಬಿತ್ತು ಬ್ರೇಕ್

Sanju Samson: ಗುವಾಹಟಿಯಲ್ಲಿ ನಡೆಯುತ್ತಿರುವ ಐಪಿಎಲ್‌ 2026ರ ಆವೃತ್ತಿಯ 3ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್‌ ಮುಖಾಮುಖಿಯಾಗಿವೆ. ಸಿಎಸ್‌ಕೆ ಪರ ಆರಂಭಿಕರಾಗಿ ಬ್ಯಾಟಿಂಗ್‌ಗಿಳಿದ ಸಂಜು ಸ್ಯಾಮ್ಸನ್ 7 ಎಸೆತಗಳಲ್ಲಿ ಕೇವಲ 6 ರನ್ ಗಳಿಸಿ ಔಟ್ ಆಗುವ ಮೂಲಕ ಅಭಿಮಾನಿಗಳು ಇಟ್ಟಿದ್ದ ಭರವಸೆಯನ್ನು ಸುಳ್ಳು ಮಾಡಿದರು. ಇಂದಿನ ಪಂದ್ಯದಲ್ಲಿ ಟಾಸ್‌ ಗೆದ್ದ ರಾಜಸ್ಥಾನ್

ಒನ್ ಇ೦ಡಿಯ 30 Mar 2026 10:43 pm

IPL 2026- ಗುವಾಹಟಿಯಲ್ಲಿ ವೈಭವ್ ಸೂರ್ಯವಂಶಿ ಆರ್ಭಟ; ಚೆನ್ನೈ ಸೂಪರ್ ಕಿಂಗ್ಸ್ ಧೂಳೀಪಟ

ಚುಟುಕು ಕ್ರಿಕೆಟ್ ನ ಬಾಲಕ ವೈಭವ್ ಸೂರ್ಯವಂಶಿಯ ಆರ್ಭಟ ಐಪಿಎಲ್ 2026ರಲ್ಲೂ ಮುಂದುವರಿದಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ ಅವರು ಬಾರಿಸಿದ ಸ್ಫೋಟಕ ಅರ್ಧಶತಕದ ನೆರವಿನಿಂದ ರಾಜಸ್ಥಾನ ರಾಯಲ್ಸ್ ತನ್ನ ಸೀಸನ್ ನ ಮೊದಲ ಪಂದ್ಯವನ್ನು 8 ವಿಕೆಟ್ ಗಳಿಂದ ಗೆದ್ದು ಶುಭಾರಂಭ ಮಾಡಿದೆ. ಗುವಾಹಟಿಯ ಬಾರ್ಸಾಪರ ಕ್ರೀಡಾಂಗಣದಲ್ಲಿ ಮಾರ್ಚ್ 30ರ ಸೋಮವಾರದಂದು ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ ನಗದಿತ 20 ಓವರ್ ಗಳಲ್ಲಿ 127 ರನ್ ಗಳಿಗೆ ಆಲೌಟ್ ಆಯಿತು. ಈ ಮೊತ್ತವನ್ನು ರಾಜಸ್ಥಾನ ರಾಯಲ್ಸ್ ತಂಡ ಇನ್ನೂ 47 ಎಸೆತಗಳು ಬಾಕಿ ಉಳಿದಿರುವಂತೆ ಗುರಿ ತಲುಪಿತು. ()

ವಿಜಯ ಕರ್ನಾಟಕ 30 Mar 2026 10:41 pm

ಶಾಸಕರಿಗೆ ಐಪಿಎಲ್ ಪಂದ್ಯಗಳ ಮೂರು ಟಿಕೆಟ್: ಡಿಸಿಎಂ ಡಿ.ಕೆ.ಶಿವಕುಮಾರ್

ಕ್ರೀಡಾಂಗಣದಲ್ಲಿ ಆಸನ ಸಂಖ್ಯೆ ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಸಲು ಸೂಚನೆ

ವಾರ್ತಾ ಭಾರತಿ 30 Mar 2026 10:25 pm

ಮಂಗಳೂರು| ಫಾದರ್ ಮುಲ್ಲರ್‌ನಲ್ಲಿ ‘ನಶಾ ಮುಕ್ತ್ ಭಾರತ್ ಅಭಿಯಾನ’

ಮಂಗಳೂರು: ಮಾದಕ ದ್ರವ್ಯ ಮುಕ್ತ ಸಮಾಜವನ್ನು ನಿರ್ಮಿಸುವ ನಿಟ್ಟಿನಲ್ಲಿ ಫಾದರ್ ಮುಲ್ಲರ್ ನರ್ಸಿಂಗ್ ಕಾಲೇಜಿನ ಮಾನಸಿಕ ಆರೋಗ್ಯ ನರ್ಸಿಂಗ್ ವಿಭಾಗ ಮತ್ತು ರಾಷ್ಟ್ರೀಯ ಸೇವಾ ಯೋಜನೆ ಘಟಕದ ಸಹಯೋಗ ದೊಂದಿಗೆ ಸೋಮವಾರ ಫಾದರ್ ಮುಲ್ಲರ್ ಕನ್ವೆನ್ಷನ್ ಸೆಂಟರ್‌ನಲ್ಲಿ ‘ನಶಾ ಮುಕ್ತ್ ಭಾರತ್ ಅಭಿಯಾನ’ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಜಾಗೃತಿ ಅಭಿಯಾನದಲ್ಲಿ 600ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಬೋಧಕ ಸಿಬ್ಬಂದಿ ಪಾಲ್ಗೊಂಡಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದ ಮಂಗಳೂರು ನಗರ ಸಹಾಯಕ ಪೊಲೀಸ್ ಆಯುಕ್ತೆ ಗೀತಾ ಡಿ. ಕುಲಕರ್ಣಿ ಅವರು ಮಾತನಾಡಿ ‘ಮಾದಕ ದ್ರವ್ಯ ಸೇವನೆಯಿಂದ ಉಂಟಾಗುವ ಕಾನೂನು ಸಂಕಷ್ಟಗಳ ಬಗ್ಗೆ ಪ್ರತಿಯೊಬ್ಬರೂ ಎಚ್ಚರದಿಂದಿರಬೇಕು. ವಿದ್ಯಾರ್ಥಿಗಳು ಸಮಾಜದಲ್ಲಿ ಜಾಗೃತಿ ಮೂಡಿಸುವ ಮೂಲಕ ಈ ಅಭಿಯಾನದ ಹರಿಕಾರರಾಗಬೇಕು ಎಂದು ಅವರು ಕರೆ ನೀಡಿದರು. ಇದೇ ಸಂದರ್ಭದಲ್ಲಿ ನಡೆದ ‘ರೀಲ್ಸ್ ತಯಾರಿಕೆ’ ಸ್ಪರ್ಧೆಯಲ್ಲಿ ವಿಜೇತರಿಗೆ ಅವರು ಬಹುಮಾನ ವಿತರಿಸಿದರು. *ಮಾದಕ ದ್ರವ್ಯ ವಿರೋಧಿ ಪ್ರತಿಜ್ಞೆ:ಫಾದರ್ ಮುಲ್ಲರ್ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ರೆ. ಸಿಸ್ಟರ್ ಪ್ರೊ. ಡಾ. ಧನ್ಯ ದೇವಸ್ಯಾ ಅವರು ವಿದ್ಯಾರ್ಥಿಗಳಿಗೆ ಮಾದಕ ದ್ರವ್ಯ ವಿರೋಧಿ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಗಳ ನಿರ್ದೇಶಕ ರೆ. ಫಾ. ಫಾಸ್ಟಿನ್ ಲ್ಯೂಕಾಸ್ ಲೋಬೊ ಅವರು ಮಾತನಾಡಿ‘ ಮಾದಕ ವ್ಯಸನವು ಒಬ್ಬ ವ್ಯಕ್ತಿಯನ್ನು ಕೇವಲ ಆಲಸಿಯನ್ನಾಗಿ ಮಾಡುವುದಲ್ಲದೆ, ಇಡೀ ಕುಟುಂಬ ಮತ್ತು ಸಮಾಜಕ್ಕೆ ಮಾರಕವಾಗಿ ಪರಿಣಮಿಸುತ್ತದೆ. ಒಮ್ಮೆ ಈ ವ್ಯಸನಕ್ಕೆ ಬಲಿಯಾದರೆ ಅದರಿಂದ ಹೊರಬರುವುದು ಕಷ್ಟ. ವಿದ್ಯಾರ್ಥಿಗಳು ತಮ್ಮ ಶಕ್ತಿಯನ್ನು ವಿದ್ಯಾಭ್ಯಾಸ, ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ವಿನಿಯೋಗಿಸಬೇಕು ಎಂದು ಕಿವಿಮಾತು ಹೇಳಿದರು. *ಆರೋಗ್ಯ ಮಾಹಿತಿ: ಡಾ. ಅನುಪಾ ಅರುಣ್‌ಕುಮಾರ್ ಶೆಣೈ ಅವರು ಮಾದಕ ದ್ರವ್ಯ ಸೇವನೆಯಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲಾಗುವ ಭೀಕರ ಪರಿಣಾಮಗಳ ಬಗ್ಗೆ ಮಾಹಿತಿ ನೀಡಿದರು. ಮೂಕಾಭಿನಯ : ಎನ್‌ಎಸ್‌ಎಸ್ ಸ್ವಯಂಸೇವಕರು ಪ್ರದರ್ಶಿಸಿದ ಮೂಕಾಭಿನಯವು ಮಾದಕ ದ್ರವ್ಯದ ಅಪಾಯಗಳನ್ನು ಪರಿಣಾಮಕಾರಿಯಾಗಿ ಬಿಂಬಿಸಿತು. ರೆ. ಫಾ. ಜಾರ್ಜ್ ಜೀವನ್ ಸಿಕ್ವೇರಾ ಅವರು ಕಾರ್ಯಕ್ರಮದ ತೀರ್ಪುಗಾರರಿಗೆ ಪ್ರಮಾಣಪತ್ರ ಮತ್ತು ಸ್ಮರಣಿಕೆಗಳನ್ನು ನೀಡಿ ಗೌರವಿಸಿದರು. ಈ ಸಮಾರಂಭದಲ್ಲಿ ಕಾಲೇಜಿನ ಉಪಪ್ರಾಂಶುಪಾಲೆ ಡಾ. ಆಗ್ನೆಸ್ ಇ.ಜೆ., ಎನ್‌ಎಸ್‌ಎಸ್ ಸಂಯೋಜಕ ಅಬಿನ್ ಕುರಿಯಾಕೋಸ್, ಕಾರ್ಯಕ್ರಮ ಸಂಯೋಜಕಿ ಆಶಾ ಎ.ವಿ., ವಿಭಾಗ ಮುಖ್ಯಸ್ಥೆ ಸೋನಿಯಾ ಲೋಬೋ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಸಬೀನಾ ಕಾರ್ಯಕ್ರಮ ನಿರೂಪಿಸಿದರು.

ವಾರ್ತಾ ಭಾರತಿ 30 Mar 2026 10:24 pm

ವಾಣಿಜ್ಯ ತೆರಿಗೆ ಉಪ ಆಯುಕ್ತ ಲೋಕಾಯುಕ್ತ ಬಲೆಗೆ

ಬೆಂಗಳೂರು: ಹುಬ್ಬಳ್ಳಿ ನಗರದ ವಾಣಿಜ್ಯ ತೆರಿಗೆ ಉಪ ಆಯುಕ್ತರೊಬ್ಬರು ಲಂಚ ಪಡೆಯುವಾಗ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ. ವಾಣಿಜ್ಯ ತೆರಿಗೆ ಇಲಾಖೆಯ ಉಪ ಆಯುಕ್ತ ಭರತ್ ಕುಮಾರ್ ಹೆಗ್ಗಡೆ ದೂರುದಾರ ವಿಶ್ವಜಿತ್ ನಾಯಕ್‍ ಎಂಬವರಿಂದ 6 ಲಕ್ಷ ರೂ., ಲಂಚ ಪಡೆಯುವಾಗ ಸಿಕ್ಕಿಬಿದ್ದಿದ್ದಾರೆ ಎಂದು ಲೋಕಾಯುಕ್ತ ಅಧಿಕಾರಿಗಳು ಹೇಳಿದ್ದಾರೆ. 2019ರಲ್ಲಿ 8 ಟಿಪ್ಪರ್ ಖರೀದಿಸಿದ್ದ ಅಂಕೋಲಾ ಮೂಲದ ವಿಶ್ವಜೀತ್ ನಾಯಕ್ ಅವರ ವಿರುದ್ಧ ತೆರಿಗೆ ವಂಚನೆ ಆರೋಪ ಸಂಬಂಧ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ದೂರು ದಾಖಲಿಸಿ ವಿಚಾರಣೆ ನಡೆಸುತ್ತಿದ್ದರು. ಇತ್ತೀಚಿಗೆ ವಿಚಾರಣೆಗೆ ಹಾಜರಾಗಲು ನಗದು ತೆಗೆದುಕೊಂಡು ಬರುವಂತೆ ಸೂಚಿಸಲಾಗಿತ್ತು. ಇದರ ಬಗ್ಗೆ ಲೋಕಾಗೆ ದೂರು ನೀಡಲಾಗಿತ್ತು. ಬೆಂಗಳೂರು ನಗರ ಲೋಕಾಯುಕ್ತ ಎಸ್ಪಿ ಶಿವಪ್ರಕಾಶ್ ದೇವರಾಜ್, ಡಿವೈಎಸ್ಪಿ ಮಲ್ಲಿಕಾರ್ಜುನ ಚುಕ್ಕಿ ನೇತೃತ್ವದ ತಂಡದಿಂದ ನಡೆದ ಕಾರ್ಯಾಚರಣೆ ವೇಳೆ 6 ಲಕ್ಷ ರೂ., ಲಂಚ ಪಡೆಯುವಾಗ ವಾಣಿಜ್ಯ ತೆರಿಗೆ ಇಲಾಖೆಯ ಉಪ ಆಯುಕ್ತ ಭರತ್ ಕುಮಾರ್ ಹೆಗ್ಗಡೆ ಬಲೆಗೆ ಬಿದ್ದಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆಸಲಾಗಿದೆ ಎಂದು ಲೋಕಾಯುಕ್ತ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ವಾರ್ತಾ ಭಾರತಿ 30 Mar 2026 10:21 pm

IPL 2026- ಶ್ರೇಯಸ್ ಅಯ್ಯರ್ ಗೆ ಶುಭ್ಮನ್ ಗಿಲ್ ಸವಾಲು : ಮುಲ್ಲಾನ್ ಪುರ ಪಿಚ್ ನಲ್ಲಿ ಗೆಲ್ಲೋರು ಯಾರು?

PBKS Vs GT Previw- ಐಪಿಎಲ್ 2026ರ 4ನೇ ಪಂದ್ಯದಲ್ಲಿ ಬಲಿಷ್ಠ ತಂಡಗಳಾದ ಪಂಜಾಬ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ ಮಾರ್ಚ್ 30 ಮಂಗಳವಾರದಂದು ಮುಲ್ಲಾನ್‌ಪುರದಲ್ಲಿ ಮುಖಾಮುಖಿಯಾಗಲಿವೆ. ಶ್ರೇಯಸ್ ಅಯ್ಯರ್ ನೇತೃತ್ವದ ಪಂಜಾಬ್ ತಂಡ ಚೊಚ್ಚಲ ಜಯದ ನಿರೀಕ್ಷೆಯಲ್ಲಿದ್ದರೆ, ಶುಭ್ಮನ್ ಗಿಲ್ ಸಾರಥ್ಯದ ಗುಜರಾತ್ ತಂಡ ಬಟ್ಲರ್ ಮತ್ತು ರಶೀದ್ ಖಾನ್ ಬಲದೊಂದಿಗೆ ಕಣಕ್ಕಿಳಿಯಲಿದೆ. ಇಬ್ಬೂ ತಂಡಗಳು ಸಮಬಲದ ಇತಿಹಾಸ ಹೊಂದಿದ್ದು, ಮುಲ್ಲಾನ್‌ಪುರದ ಬ್ಯಾಟಿಂಗ್ ಸ್ನೇಹಿ ಪಿಚ್‌ನಲ್ಲಿ ಇಬ್ಬನಿಯ ಪ್ರಭಾವದಿಂದ ಟಾಸ್ ಗೆದ್ದವರು ಫೀಲ್ಡಿಂಗ್ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಿದೆ.

ವಿಜಯ ಕರ್ನಾಟಕ 30 Mar 2026 10:18 pm

ಎ.2ರ ವರೆಗೆ ರಾಜ್ಯಾದ್ಯಂತ ಗುಡುಗು, ಸಹಿತ ಮಳೆ ಸಾಧ್ಯತೆ

ಬೆಂಗಳೂರು: ರಾಜ್ಯಾದ್ಯಂತ ಎ.2ರವರೆಗೆ ಒಣ ಹವೆ, ಬಿಸಿಲಿನ ವಾತಾವರಣ ಮುಂದುವರಿಯಲಿದ್ದು, ಗುಡುಗು ಸಹಿತ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳ ಒಂದೆರಡು ಸ್ಥಳಗಳಲ್ಲಿ ಬಿರುಗಾಳಿಯೊಂದಿಗೆ ಗುಡುಗು ಸಹಿತ ಮಳೆಯಾಗಲಿದೆ. ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕೊಪ್ಪಳ, ಬೀದರ್ ಜಿಲ್ಲೆಗಳ ಒಂದೆರಡು ಸ್ಥಳಗಳಲ್ಲಿ ಗುಡುಗು ಸಹಿತ ಗಾಳಿ ಮಳೆಯಾಗುವ ಸಾಧ್ಯತೆಯಿದೆ. ಬಾಗಲಕೋಟೆ, ಕಲಬುರಗಿ, ರಾಯಚೂರು, ವಿಜಯಪುರ, ಯಾದಗಿರಿ ಜಿಲ್ಲೆಗಳಲ್ಲಿ ಒಣ ಹವೆ ಮುಂದುವರಿಯಲಿದೆ ಎಂದು ತಿಳಿಸಿದೆ. ಎ.2ರ ವರೆಗೆ ದಕ್ಷಿಣ ಒಳನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಚಾಮರಾಜನಗರ, ಮೈಸೂರು, ಬೆಂಗಳೂರು ಗ್ರಾಮೀಣ, ಬೆಂಗಳೂರು ನಗರ, ಚಿತ್ರದುರ್ಗ, ದಾವಣಗೆರೆ ಜಿಲ್ಲೆಗಳ ಒಂದೆರಡು ಸ್ಥಳಗಳಲ್ಲಿ ಗುಡುಗು ಸಹಿತ ಭಾರೀ ಗಾಳಿ, ಮಳೆಯಾಗಲಿದೆ. ಬಳ್ಳಾರಿ, ಚಿಕ್ಕಬಳ್ಳಾಪುರ, ಕೋಲಾರ, ಮಂಡ್ಯ, ರಾಮನಗರ, ತುಮಕೂರು, ವಿಜಯನಗರ ಜಿಲ್ಲೆಗಳಲ್ಲಿ ಒಣಹವೆ ಇರಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ವಾರ್ತಾ ಭಾರತಿ 30 Mar 2026 10:18 pm

ಸರಕಾರಿ ಬಸ್‍ಗಳಿಗೆ ಡೀಸೆಲ್ ಕೊರತೆ ಇಲ್ಲ: ಸಚಿವ ರಾಮಲಿಂಗಾರೆಡ್ಡಿ

ಬೆಂಗಳೂರು: ರಸ್ತೆ ಸಾರಿಗೆ ನಿಗಮಗಳ ವ್ಯಾಪ್ತಿಯಲ್ಲಿ ಸಂಚಾರ ಮಾಡುತ್ತಿರುವ ಸರಕಾರಿ ಬಸ್‍ಗಳಿಗೆ ಡೀಸೆಲ್ ಕೊರತೆ ಸಮಸ್ಯೆ ಸದ್ಯಕಿಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟಪಡಿಸಿದ್ದಾರೆ. ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಧ್ಯಪ್ರಾಚ್ಯ ಯುದ್ಧ ಪರಿಣಾಮ ಆದರೂ ತೈಲದಲ್ಲಿ ಸದ್ಯಕ್ಕೆ ತೊಂದರೆ ಕಂಡುಬಂದಿಲ್ಲ. ಹೀಗಾಗಿ, ಕೆಎಸ್ಸಾರ್ಟಿಸಿ ಸೇರಿದಂತೆ ನಾಲ್ಕು ನಿಗಮಗಳ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿರುವ ಸಾರ್ವಜನಿಕ ಸಾರಿಗೆಗೆ ಡೀಸೆಲ್ ಕೊರತೆ ಇಲ್ಲ ಎಂದರು. ಬೆಂಗಳೂರು ಕರಗ ಆಚರಣೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಬೆಂಗಳೂರು ಕರಗ ಎ.1ರಂದು ಮಧ್ಯರಾತ್ರಿ 12-30ಕ್ಕೆ ಆರಂಭವಾಗಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಹ್ವಾನಿಸಲಾಗಿದೆ. ಈ ಬಾರಿಯ ವಿಶೇಷ ಹೆಚ್ಚು ವಿದ್ಯುತ್ ದೀಪಾಲಂಕರ ಹಾಕಿದ್ದೇವೆ. ವಿಧಿವಿಧಾನ ಎಲ್ಲವನ್ನು ಈಗಾಗಲೇ ಆರಂಭಗೊಂಡಿದ್ದು, ನಗರ ಪೊಲೀಸರು ಯಾವುದೇ ರೀತಿ ಸಂಚಾರ ದಟ್ಟಣೆ ಆಗದಂತೆ ನೋಡಿಕೊಳ್ಳುತ್ತಾರೆ ಎಂದರು.

ವಾರ್ತಾ ಭಾರತಿ 30 Mar 2026 10:15 pm

ಬೆಂಗಳೂರು 26 ವರ್ಷದ ಟೆಕ್ಕಿ ಸಂಬಳ 3 ವರ್ಷದಲ್ಲಿ 3 ರಿಂದ 80 ಲಕ್ಷ ರೂ. ಏರಿಕೆ! TCS ನಿಂದ ಗೂಗಲ್‌ವರೆಗೂ 2 ಸೂತ್ರವಷ್ಟೇ

Bengaluru Techie Success Story: ಬೆಂಗಳೂರಿನ ಟೆಕ್ಕಿಯೊಬ್ಬರು ತಮ್ಮ ವೃತ್ತಿ ಜೀವನದಲ್ಲಿ ಕೇವಲ ಮೂರು ವರ್ಷದಲ್ಲಿಯೇ 3 ಲಕ್ಷ ವಾರ್ಷಿಕ ಸಂಬಳದಿಂದ 80 ಲಕ್ಷ ರೂ. ವಾರ್ಷಿಕ ಸಂಬಳ ಪಡೆಯುವ ಮಟ್ಟಕ್ಕೆ ತಲುಪಿಸಿದ್ದಾರೆ. ಸದ್ಯ ಅವರು ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಪೋಸ್ಟ್‌ ಹಂಚಿಕೊಂಡಿದ್ದು, ಟಿಸಿಎಸ್‌ನಿಂದ ಗೂಗಲ್‌ ಸೇರಿದ ತನ್ನ ಯಶಸ್ಸಿನ ಗುಟ್ಟನ್ನು ಹಂಚಿಕೊಂಡಿದ್ದಾರೆ.

ವಿಜಯ ಕರ್ನಾಟಕ 30 Mar 2026 10:06 pm

ಎ. 1ರಂದು ಲತ್ವೀಫೀಸ್ ಅಸೋಸಿಯೇಷನ್ ವತಿಯಿಂದ ಲತ್ವೀಫಿ ಸಂಗಮ

ಮಂಗಳೂರು: ದಾರುಲ್ ಉಲೂಮ್ ಲತ್ವೀಫಿಯಾ ಅರೆಬಿಕ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ರಾಜ್ಯದ ವಿವಿಧ ಭಾಗಗಳಲ್ಲಿ ಸೇವಾ ನಿರತರಾಗಿರುವ ಲತ್ವೀಫಿ ವಿದ್ವಾಂಸರ ಒಕ್ಕೂಟವಾದ ಲತ್ವೀಫೀಸ್ ಅಸೋಸಿಯೇಷನ್ ಕರ್ನಾಟಕ ರಾಜ್ಯ ಸಮಿತಿಯ ವತಿಯಿಂದ ಎ.1ರಂದು ರಾಜ್ಯ ಮಟ್ಟದ ಲತ್ವೀಫಿ ಸಂಗಮ ಹರೇಕಳ ತ್ವೈಬಾ ಮದೀನ ಎಜು ಪಾರ್ಕ್ ನಲ್ಲಿ ನಡೆಯಲಿದೆ. ಲತ್ವೀಫಿಯ್ಯ ಕಾಲೇಜಿನ ಪ್ರಾಂಶುಪಾಲರಾಗಿರುವ ಶೈಖುಲ್ ಹದೀಸ್ ಕೆ.ಸಿ. ಅಬೂಬಕರ್ ಹಝ್ರತ್ ಸಂಗಮದ ನೇತೃತ್ವ ವಹಿಸಲಿದ್ದಾರೆ. ಲತ್ವೀಫೀಸ್ ಕರ್ನಾಟಕ ರಾಜ್ಯಾಧ್ಯಕ್ಷ ಅಬೂಬಕರ್ ಲತ್ವೀಫಿ ಎಣ್ಮೂರು ರವರ ಅಧ್ಯಕ್ಷತೆ ವಹಿಸಲಿದ್ದಾರೆ. ಟಿ.ಟಿ. ಗಫೂರ್ ಲತ್ವೀಫಿ ಕೊಡುವಳ್ಳಿ, ಅಬ್ದುಲ್ ಅಝೀಝ್ ಲತ್ವೀಫಿ ಸಬರಬೈಲು, ಅಬೂಬಕರ್ ಲತ್ವೀಫಿ ಬೇಂಗಿಲ, ಅಬ್ದುರ್ರಹ್ಮಾನ್ ಲತ್ವೀಫಿ ಕನ್ಯಾನ ಮುಂತಾದ ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

ವಾರ್ತಾ ಭಾರತಿ 30 Mar 2026 10:02 pm

ಮಂಗಳೂರು| ವೈದ್ಯಕೀಯ ವಿದ್ಯಾರ್ಥಿ ಆತ್ಮಹತ್ಯೆ

ಮಂಗಳೂರು: ನಗರದ ಅತ್ತಾವರದ ಅಪಾರ್ಟ್‌ಮೆಂಟ್ ಒಂದರ 12ನೇ ಮಹಡಿಯಿಂದ ಹಾರಿ ಎಂಬಿಬಿಎಸ್ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೋಮವಾರ ನಡೆದಿರುವುದು ವರದಿಯಾಗಿದೆ. ಕೋಲ್ಕತ್ತಾ ಮೂಲದ ಸಾರ್ಥಕ್ ಮೌರ್ಯ (23) ಆತ್ಮಹತ್ಯೆ ಮಾಡಿಕೊಂಡಿರುವ ವಿದ್ಯಾರ್ಥಿ ಎಂದು ತಿಳಿದು ಬಂದಿದೆ. ನಗರದ ಖಾಸಗಿ ವೈದ್ಯಕೀಯ ಕಾಲೇಜಿನ 4ನೇ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಯಾಗಿರುವ ಈತ ಸೋಮವಾರ ಮಧ್ಯಾಹ್ನದ ವೇಳೆಗೆ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದುಬಂದಿದ್ದು, ಘಟನೆಗೆ ನೈಜ ಕಾರಣ ತಿಳಿದು ಬಂದಿಲ್ಲ. ಖಾಸಗಿ ಹಾಸ್ಟೆಲ್‌ನಲ್ಲಿ ಉಳಿದುಕೊಂಡು ಶಿಕ್ಷಣ ಪಡೆಯುತ್ತಿದ್ದ ಸಾರ್ಥಕ್ ಅವರು ಸೋಮವಾರ ಮಧ್ಯಾಹ್ನ ಗೆಳತಿ ಉಳಿದುಕೊಂಡಿದ್ದ ಅತ್ತಾವರದ ಅಪಾರ್ಟ್ ಮೆಂಟ್‌ಗೆ ಹೋಗಿದ್ದಾರೆ. ಗೆಳತಿಯ ಮನೆಗೆ ಹೋಗುವ ಬಗ್ಗೆ ಎಂಟ್ರಿ ಮಾಡಿ ಆಕೆ ಇದ್ದ ಹನ್ನೆರಡನೇ ಮಹಡಿ ಕಡೆಗೆ ತೆರಳಿದ್ದಾರೆ. ಆದರೆ ಆಕೆಯ ಮನೆಗೆ ಹೋಗುವ ಬದಲು ವಿರುದ್ಧ ದಿಕ್ಕಿಗೆ ತೆರಳಿ ಮೇಲಿನಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಪಾಂಡೇಶ್ವರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಾರ್ತಾ ಭಾರತಿ 30 Mar 2026 9:54 pm

ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಿ: ಅಧಿಕಾರಿಗಳಿಗೆ ಶಾಸಕ ಬಿ.ಆರ್.ಪಾಟೀಲ್‌ ಸೂಚನೆ

ಆಳಂದ: ತಾಲೂಕಿನಲ್ಲಿ ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಮುಂಜಾಗ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಕೈಗೊಳ್ಳುವಂತೆ ಶಾಸಕ ಬಿ.ಆರ್. ಪಾಟೀಲ್‌ ಅವರು ಟಾಸ್ಕ್ಫೋರ್ಸ್ ಸಭೆಯಲ್ಲಿ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದರು. ಪಟ್ಟಣದ ತಾಪಂ ಕಚೇರಿ ಸಭಾಂಗಣದಲ್ಲಿ ನಡೆದ ಗ್ರಾಪಂ ಹಾಗೂ ಸಂಬಂಧಿತ ಇಲಾಖೆಗಳ ಸಭೆಯಲ್ಲಿ ನೀರು ಪೂರೈಕೆ, ಪಂಚಾಯತ್ ಆಡಳಿತ, ತೆರಿಗೆ ವಸೂಲಾತಿ ಹಾಗೂ ಸಾರ್ವಜನಿಕ ಸಮಸ್ಯೆಗಳ ಕುರಿತು ವಿಸ್ತೃತ ಚರ್ಚೆ ನಡೆಸಿ ಅಗತ್ಯ ಮಾರ್ಗದರ್ಶನ ನೀಡಿದರು. ಸಭೆ ಆರಂಭಕ್ಕೂ ಮುನ್ನ ತೋಟಗಾರಿಕೆ ಇಲಾಖೆಯಿಂದ ಕೆಕೆಆರ್‌ಡಿಬಿ ಅನುದಾನದಡಿ ಎಸ್‌ಸಿ, ಎಸ್‌ಟಿ ವರ್ಗದ 10 ರೈತರಿಗೆ ಉಚಿತ ತರಕಾರಿ ಬೀಜ ಕಿಟ್‌ಗಳನ್ನು ಶಾಸಕರು ವಿತರಿಸಿದರು. ಈ ಸಂದರ್ಭದಲ್ಲಿ ಸಹಾಯಕ ನಿರ್ದೇಶಕ ಸುರೆಂದ್ರನಾಥ ಹೊನ್ನಪಗೊಳ ಉಪಸ್ಥಿತರಿದ್ದರು. ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ (ಪಿಡಿಒ) ನಿರ್ಲಕ್ಷ್ಯವನ್ನು ತೀವ್ರವಾಗಿ ಖಂಡಿಸಿದ ಶಾಸಕರು, ನಾನು ಕರೆ ಮಾಡಿದರೂ ಸ್ವೀಕರಿಸದಿದ್ದರೆ ಸಾಮಾನ್ಯ ಜನರ ಪರಿಸ್ಥಿತಿ ಏನು? ಜವಳಗಾ ಗ್ರಾಮಕ್ಕೆ ಪಿಡಿಒ ಭೇಟಿ ನೀಡದಿರುವುದು ಹಾಗೂ ತಡಕಲ್ ಪಿಡಿಒ ಕರೆಗಳಿಗೆ ಸ್ಪಂದಿಸದಿರುವುದನ್ನು ಉದಾಹರಣೆ ನೀಡಿ ತರಾಟೆಗೆ ತೆಗೆದುಕೊಂಡರು.  ಗ್ರಾಮ ಪಂಚಾಯತ್ ಆಡಳಿತ ಮಂಡಳಿ ಇಲ್ಲದಿರುವ ಪ್ರಸ್ತುತ ಪರಿಸ್ಥಿತಿಯಲ್ಲಿಯೂ ಅಧಿಕಾರಿಗಳು ಜವಾಬ್ದಾರಿಯಿಂದ ಕೆಲಸ ನಿರ್ವಹಿಸಬೇಕು ಎಂದು ಸೂಚಿಸಿದ ಅವರು, ಕಸ ವಸೂಲಿ ಹಾಗೂ ತೆರಿಗೆ ಸಂಗ್ರಹವನ್ನು ಸಮರ್ಪಕವಾಗಿ ಮಾಡಿ, ಅದನ್ನು ಬೇಸಿಗೆ ನೀರಿನ ಸಮಸ್ಯೆ ನಿವಾರಣೆಗೆ ಬಳಸಿಕೊಳ್ಳುವಂತೆ ತಿಳಿಸಿದರು. ತೆರಿಗೆ ವಸೂಲಾತಿ ಕುರಿತು ಮಾತನಾಡಿದ ಶಾಸಕರು, ತಾಲೂಕಿನ 42 ಗ್ರಾಪಂಗಳಲ್ಲಿ ಕೇವಲ 9 ಗ್ರಾಪಂಗಳು ಮಾತ್ರ ಶೇ.100ರಷ್ಟು ವಸೂಲಾತಿ ಸಾಧಿಸಿರುವುದು ಗಮನಾರ್ಹವಾದರೂ, ಉಳಿದವುಗಳಲ್ಲಿ ಕೇವಲ ಶೇ.60ರಷ್ಟೇ ವಸೂಲಾತಿ ಆಗಿರುವುದು ಅಸಮರ್ಪಕ ಎಂದು ಖಂಡಿಸಿ, ತಕ್ಷಣ ವಸೂಲಾತಿ ಹೆಚ್ಚಿಸಲು ಸೂಚಿಸಿದರು. ತಾಪಂ ಇಒ ಮಾನಪ್ಪ ಕಟ್ಟಿಮನಿ ಅವರು ಹೆಬಳಿ ಹಾಗೂ ಜಿಗಡಾ ಗ್ರಾಪಂಗಳಲ್ಲಿ ವಸೂಲಾತಿ ನಿರೀಕ್ಷಿತ ಮಟ್ಟದಲ್ಲಿಲ್ಲ ಎಂದು ಮಾಹಿತಿ ನೀಡಿದರು. ತಾಲೂಕಿನಲ್ಲಿ ನೀರು ಪೂರೈಕೆಗೆ ಅಡ್ಡಿಪಡಿಸುವವರ ವಿರುದ್ಧ ಯಾವುದೇ ಪಕ್ಷಪಾತವಿಲ್ಲದೆ ಪ್ರಕರಣ ದಾಖಲಿಸಲು ಪೊಲೀಸರಿಗೆ ಸೂಚನೆ ನೀಡಿದ ಶಾಸಕರು, ಜನರಿಗೆ ನಿರಂತರ ನೀರು ಸರಬರಾಜು ಖಚಿತಪಡಿಸಬೇಕು ಎಂದು ಹೇಳಿದರು. ಆಳಂದ ಪಟ್ಟಣಕ್ಕೆ ಸಮರ್ಪಕ ನೀರು ಪೂರೈಕೆ ಕುರಿತು ಪುರಸಭೆ ಮುಖ್ಯಾಧಿಕಾರಿ ಸಂಗಮೇಶ ಪನಶೆಟ್ಟಿ ಅವರಿಗೆ ಸೂಚನೆ ನೀಡಲಾಗಿದ್ದು, ಪ್ರಸ್ತುತ ಕಾಮಗಾರಿ ಪೂರ್ಣಗೊಳ್ಳಲು ಇನ್ನೂ ಆರು ತಿಂಗಳು ಬೇಕಾಗುತ್ತದೆ ಎಂದು ಅವರು ತಿಳಿಸಿದರು. ಈ ನಡುವೆ ತಾತ್ಕಾಲಿಕ ವ್ಯವಸ್ಥೆಗಳ ಮೂಲಕ ನೀರು ಸರಬರಾಜು ಸುಗಮಗೊಳಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಲಾಯಿತು. ಸಭೆಯಲ್ಲಿ ಪಂಚಗ್ಯಾರೆoಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶಿವುಪುತ್ರಪ್ಪ ಪಾಟೀಲ್‌, ತಹಶೀಲ್ದಾರ್‌ ಅಣ್ಣಾರಾವ್ ಪಾಟೀಲ್‌, ಪುರಸಭೆ ಮುಖ್ಯಾಧಿಕಾರಿ ಸಂಗಮೇಶ ಪನಶೆಟ್ಟಿ, ತಾಪಂ ಇಒ ಮಾನಪ್ಪ ಕಟ್ಟಿಮನಿ, ಗ್ರಾಮೀಣ ನೀರು ಸರಬರಾಜು ಎಇಇ ಹಾಗೂ ಪ್ರಭಾರ ಜಿಪಂ ಎಇಇ ಸಂಗಮೇಶ ಬಿರಾದಾರ, ತೋಟಗಾರಿಕೆ ಸಹಾಯಕ ನಿರ್ದೇಶಕ ಸುರೆಂದ್ರನಾಥ ಹೊನ್ನಪಗೊಳ, ಪಿಐ ಶರಣಬಸಪ್ಪ ಕೊಡ್ಲಾ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ವಾರ್ತಾ ಭಾರತಿ 30 Mar 2026 9:53 pm

West Bengal | ಒಂದೇ ದಿನದಲ್ಲಿ 250ಕ್ಕೂ ಅಧಿಕ ಸರಕಾರಿ ಅಧಿಕಾರಿಗಳ ವರ್ಗಾವಣೆ; ಚುನಾವಣಾ ಆಯೋಗದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ ಟಿಎಂಸಿ

ಕೋಲ್ಕತಾ, ಮಾ. 30: ವಿಧಾನಸಭೆ ಚುನಾವಣೆ ನಡೆಯಲಿರುವ ಪಶ್ಚಿಮ ಬಂಗಾಳದಲ್ಲಿ ಒಂದೇ ದಿನದಲ್ಲಿ 250ಕ್ಕೂ ಅಧಿಕ ಸರಕಾರಿ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ ಚುನಾವಣಾ ಆಯೋಗದ ವಿರುದ್ಧ ತೃಣಮೂಲ ಕಾಂಗ್ರೆಸ್ ಕಲ್ಕತ್ತಾ ಉಚ್ಚ ನ್ಯಾಯಾಲಯದ ಮೆಟ್ಟಿಲೇರಿದೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸ್ಪರ್ಧಿಸುತ್ತಿರುವ ಭಬಾನಿಪುರ ಸೇರಿದಂತೆ 170 ಪೊಲೀಸ್ ಠಾಣೆಗಳ ಉಸ್ತುವಾರಿ ಅಧಿಕಾರಿಗಳು (ಒಸಿ), 83 ಬ್ಲಾಕ್‌ಗಳ ಬ್ಲಾಕ್ ಅಭಿವೃದ್ಧಿ ಅಧಿಕಾರಿಗಳು (ಬಿಡಿಒ) ಹಾಗೂ ಸಹಾಯಕ ಚುನಾವಣಾಧಿಕಾರಿಗಳನ್ನು (ಎಆರ್‌ಒ) ವರ್ಗಾವಣೆ ಮಾಡಿದ ಬಳಿಕ ತೃಣಮೂಲ ಕಾಂಗ್ರೆಸ್ ಸಂಸದ ಹಾಗೂ ವಕೀಲ ಕಲ್ಯಾಣ್ ಬ್ಯಾನರ್ಜಿ ಅವರು ಭಾರತದ ಚುನಾವಣಾ ಆಯೋಗದ ವಿರುದ್ಧ ಕಲ್ಕತ್ತಾ ಉಚ್ಚ ನ್ಯಾಯಾಲಯದಲ್ಲಿ ಸೋಮವಾರ ಅರ್ಜಿ ಸಲ್ಲಿಸಿದ್ದಾರೆ. ಮುಖ್ಯ ನ್ಯಾಯಮೂರ್ತಿ ಸುಜಾಯ್ ಪೌಲ್ ಅವರ ನ್ಯಾಯಾಲಯದಲ್ಲಿ ಈ ಅರ್ಜಿ ಸಲ್ಲಿಸಲಾಗಿದ್ದು, ಇದರ ವಿಚಾರಣೆ ಮಂಗಳವಾರ ನಡೆಯುವ ಸಾಧ್ಯತೆ ಇದೆ. ಚುನಾವಣಾ ಆಯೋಗ ಅಧಿಕಾರಿಗಳನ್ನು ನಿಯಮಿತವಾಗಿ ವರ್ಗಾವಣೆ ಮಾಡುವ ಮೂಲಕ ತನ್ನ ಕೈಯಿಂದ ಆಡಳಿತಾತ್ಮಕ ಅಧಿಕಾರವನ್ನು ಕಿತ್ತುಕೊಂಡಿದೆ. ಚುನಾವಣಾ ಆಯೋಗ ಬಿಜೆಪಿಯ ಆಣತಿಯಂತೆ ಕಾರ್ಯನಿರ್ವಹಿಸುತ್ತಿದೆ ಎಂದು ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ವಿಧಾನಸಭೆ ಚುನಾವಣೆಗೆ 23 ದಿನಗಳು ಬಾಕಿ ಇರುವಾಗ, ಚುನಾವಣಾ ಆಯೋಗ ಭಾನುವಾರ ರಾಜ್ಯಾದ್ಯಂತ ನಗರ ಹಾಗೂ ಜಿಲ್ಲೆಗಳ 174 ಉಸ್ತುವಾರಿ ಅಧಿಕಾರಿಗಳು, 83 ಬ್ಲಾಕ್ ಅಭಿವೃದ್ಧಿ ಅಧಿಕಾರಿಗಳು ಹಾಗೂ ಸಹಾಯಕ ಚುನಾವಣಾ ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ. ಪಶ್ಚಿಮ ಬಂಗಾಳದ 294 ವಿಧಾನಸಭಾ ಕ್ಷೇತ್ರಗಳಿಗೆ ಎಪ್ರಿಲ್ 23 ಹಾಗೂ ಎಪ್ರಿಲ್ 29ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ.

ವಾರ್ತಾ ಭಾರತಿ 30 Mar 2026 9:41 pm

ಪಶ್ಚಿಮ ಏಶ್ಯಾ ಬಿಕ್ಕಟ್ಟು | ಅಪಾಯಗಳನ್ನು ಎದುರಿಸಲು ಕೇಂದ್ರ ಕ್ರಮ ಕೈಗೊಂಡಿದೆ: ರಾಜ್ಯ ಹಣಕಾಸು ಸಚಿವ ಪಂಕಜ್ ಚೌಧರಿ ಭರವಸೆ

ಹೊಸದಿಲ್ಲಿ, ಮಾ.30: ಪಶ್ಚಿಮ ಏಶ್ಯಾದಲ್ಲಿ ಮುಂದುವರಿದಿರುವ ಬಿಕ್ಕಟ್ಟಿನ ಹಿನ್ನೆಲೆ ದೇಶದ ಆರ್ಥಿಕತೆಗೆ ಉಂಟಾಗಬಹುದಾದ ಬಾಹ್ಯ ಅಪಾಯಗಳನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ ಎಂದು ಕೇಂದ್ರ ಹಣಕಾಸು ರಾಜ್ಯ ಸಚಿವ ಪಂಕಜ್ ಚೌಧರಿ ತಿಳಿಸಿದ್ದಾರೆ. ಲೋಕಸಭೆಯಲ್ಲಿ ಸೋಮವಾರ ಲಿಖಿತ ಉತ್ತರ ನೀಡಿದ ಅವರು, ಬಿಕ್ಕಟ್ಟಿನ ಆರ್ಥಿಕ ಪರಿಣಾಮಗಳನ್ನು ಸರ್ಕಾರ ನಿರಂತರವಾಗಿ ವಿಮರ್ಶಿಸುತ್ತಿದ್ದು, ಪರಿಸ್ಥಿತಿಗೆ ಅನುಗುಣವಾಗಿ ತಕ್ಷಣದ ತಿದ್ದುಪಡಿ ಹಾಗೂ ಅಗತ್ಯ ಕ್ರಮಗಳನ್ನು ಜಾರಿಗೆ ತರುತ್ತಿದೆ ಎಂದು ಹೇಳಿದರು. ಪೂರೈಕೆ ಸರಪಣಿ, ಪೆಟ್ರೋಲ್-ಡೀಸೆಲ್, ರಸಗೊಬ್ಬರ, ಅನಿಲ ಮತ್ತು ಹಣದುಬ್ಬರದ ಮೇಲೆ ಪರಿಣಾಮಗಳನ್ನು ಕಡಿಮೆ ಮಾಡಲು ಏಳು ವಿಶೇಷ ಅಧಿಕಾರಿಗಳ ಗುಂಪುಗಳನ್ನು ರಚಿಸಲಾಗಿದೆ. ಜೊತೆಗೆ, ರಫ್ತು-ಆಮದು ಸೌಲಭ್ಯಗಳನ್ನು ಸಮನ್ವಯಗೊಳಿಸಲು ಹಾಗೂ ಪೂರೈಕೆ ಸರಪಣಿ ಸ್ಥಿರತೆಯನ್ನು ಖಚಿತಪಡಿಸಲು ಅಂತರ್ ಸಚಿವಾಲಯದ ಗುಂಪು ಕಾರ್ಯಾರಂಭಿಸಿದೆ ಎಂದು ಅವರು ತಿಳಿಸಿದರು. ಜಿಡಿಪಿ ಬೆಳವಣಿಗೆ ಮತ್ತು ವಿದೇಶಿ ಹೂಡಿಕೆ ಮೇಲೆ ಬಿಕ್ಕಟ್ಟಿನ ಪರಿಣಾಮದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, “ಈ ಬಿಕ್ಕಟ್ಟಿನ ಅವಧಿ, ತೀವ್ರತೆ ಹಾಗೂ ಜಾಗತಿಕ ಪರಿಸ್ಥಿತಿಯ ಬದಲಾವಣೆಗಳ ಮೇಲೆ ಅದರ ಒಟ್ಟು ಪರಿಣಾಮ ಅವಲಂಬಿತವಾಗಿರುತ್ತದೆ” ಎಂದು ಹೇಳಿದರು.

ವಾರ್ತಾ ಭಾರತಿ 30 Mar 2026 9:36 pm

ಈಸ್ಟರ್ ಪ್ರಯುಕ್ತ ಯಶವಂತಪುರ-ಮಡಗಾಂವ್ ಮಧ್ಯೆ ವಿಶೇಷ ರೈಲು

ಉಡುಪಿ, ಮಾ.30: ಮುಂಬರುವ ಗುಡ್‌ಫ್ರೈಡೇ ಹಾಗೂ ಈಸ್ಟರ್ ಪ್ರಯುಕ್ತ ಜನರ ವಿಶೇಷ ಒತ್ತಡವನ್ನು ನಿಭಾಯಿ ಸಲು ಕೊಂಕಣ ರೈಲ್ವೆಯು ನೈರುತ್ಯ ರೈಲ್ವೆಯ ಸಹಯೋಗದೊಂದಿಗೆ ಯಶವಂತಪುರ- ಮಡಗಾಂವ್ ಹಾಗೂ ಬೆಂಗಳೂರು ಕಂಟೋನ್ಮೆಂಟ್ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲನ್ನು ಓಡಿಸಲು ನಿರ್ಧರಿಸಿದೆ. ರೈಲು ನಂ.06271 ಯಶವಂತಪುರ- ಮಡಗಾಂವ್ ಜಂಕ್ಷನ್ ಎಕ್ಸ್‌ಪ್ರೆಸ್ ವಿಶೇಷ ರೈಲು ಎಪ್ರಿಲ್ 2ರಂದು ಗುರುವಾರ ಮಧ್ಯರಾತ್ರಿ 11:55ಕ್ಕೆ ಯಶವಂತಪುರ ನಿಲ್ದಾಣದಿಂದ ಪ್ರಯಾಣ ಆರಂಭಿಸಲಿದ್ದು, ಮರುದಿನ (ಶುಕ್ರವಾರ) ಸಂಜೆ 5:30ಕ್ಕೆ ಮಡಗಾಂವ್ ತಲುಪಲಿದೆ. ಈ ರೈಲಿಗೆ ಕುಣಿಗಲ್, ಚನ್ನರಾಯಪಟ್ಟಣ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರೋಡ್, ಕಬಕಪುತ್ತೂರು, ಬಂಟ್ವಾಳ, ಸುರತ್ಕಲ್, ಮೂಲ್ಕಿ, ಉಡುಪಿ, ಬಾರಕೂರು, ಕುಂದಾಪುರ, ಮೂಕಾಂಬಿಕಾ ರೋಡ್ ಬೈಂದೂರು, ಭಟ್ಕಳ, ಮುರ್ಡೇಶ್ವರ, ಹೊನ್ನಾವರ, ಕುಮಟ, ಗೋಕರ್ಣ ರೋಡ್, ಅಂಕೋಲ, ಕಾರವಾರ ಹಾಗೂ ಕಾಣಕೋಣ ನಿಲ್ದಾಣಗಳಲ್ಲಿ ನಿಲುಗಡೆ ಇರುತ್ತದೆ. ರೈಲು ನಂ. 06272 ಮಡಗಾಂವ್ ಜಂಕ್ಷನ್-ಬೆಂಗಳೂರು ಕಂಟೋನ್ಮೆಂಟ್ ವಿಶೇಷ ಎಕ್ಸ್‌ಪ್ರೆಸ್ ರೈಲು ಎಪ್ರಿಲ್ 5ರ ರವಿವಾರ ಬೆಳಗ್ಗೆ 11:00ಗಂಟೆಗೆ ಮಡಗಾಂವ್ ಜಂಕ್ಷನ್‌ನಿಂದ ಹೊರಡಲಿದ್ದು, ಮರುದಿನ ಮುಂಜಾನೆ 5:20ಕ್ಕೆ ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣ ತಲುಪಲಿದೆ. ಈ ರೈಲಿಗೆ ಕಾಣಕೋಣ, ಕಾರವಾರ, ಅಂಕೋಲ, ಗೋಕರ್ಣ ರೋಡ್, ಕುಮಟ, ಹೊನ್ನಾವರ, ಮುರ್ಡೇಶ್ವರ, ಭಟ್ಕಳ, ಮೂಕಾಂಬಿಕಾ ರೋಡ್ ಬೈಂದೂರು, ಕುಂದಾಪುರ, ಬಾರಕೂರು, ಉಡುಪಿ, ಮೂಲ್ಕಿ, ಸುರತ್ಕಲ್, ಬಂಟ್ವಾಳ, ಕಬಕಪುತ್ತೂರು, ಸುಬ್ರಹ್ಮಣ್ಯ ರೋಡ್, ಸಕಲೇಶಪುರ, ಹಾಸನ, ಚೆನ್ನರಾಯಪಟ್ಟಣ, ಕುಣಿಗಲ್ ಹಾಗೂ ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ನಿಲ್ದಾಣಗಳಲ್ಲಿ ನಿಲುಗಡೆ ಇರುತ್ತದೆ. ಈ ರೈಲು ಒಟ್ಟು 19 ಬೋಗಿಗಳನ್ನು ಹೊಂದಿರುತ್ತದೆ. ಇವುಗಳಲ್ಲಿ 2 ಟಯರ್ ಎಸಿ-2 ಕೋಚ್, 3ಟಯರ್‌ಎಸಿ- 2ಕೋಚ್, ಸ್ಲೀಪರ್- 9 ಕೋಚ್, ಸಾಮಾನ್ಯ-4 ಕೋಚ್ ಹಾಗೂ ಎಸ್‌ಎಲ್‌ಆರ್-2 ಕೋಚ್ ಇರುತ್ತದೆ. ರೈಲು ನಂ.06272ಕ್ಕೆ ಟಿಕೆಟ್ ಬುಕ್ಕಿಂಗ್ ಎಲ್ಲಾ ಪಿಆರ್‌ಎಸ್‌ನಲ್ಲಿ ಎಪ್ರಿಲ್ ಒಂದರಿಂದ ಪ್ರಾರಂಭ ಗೊಳ್ಳಲಿದೆ. ಇಂಟರ್‌ನೆಟ್ ಹಾಗೂ ಐಆರ್‌ಸಿಟಿಸಿ ವೆಬ್‌ಸೈಟ್‌ಗಳಲ್ಲೂ ಸಹ ಟಿಕೆಟ್‌ಗಳನ್ನು ಕಾದಿರಿಸಬಹುದು ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.

ವಾರ್ತಾ ಭಾರತಿ 30 Mar 2026 9:35 pm

ಭಾರತ ನಕ್ಸಲ್ ಹಿಂಸಾಚಾರದಿಂದ ಮುಕ್ತ: ಅಮಿತ್ ಶಾ

ಹೊಸದಿಲ್ಲಿ, ಮಾ.30: ದೇಶದಲ್ಲಿ ಮಾವೋವಾದಿ ಪಿಡುಗು ನಿರ್ಮೂಲನಗೊಂಡಿದೆ ಮತ್ತು ಅದರ ಕೊನೆಯ ಭದ್ರಕೋಟೆಯಾಗಿದ್ದ ಛತ್ತೀಸ್‌ ಗಡದ ಬಸ್ತರ್ ಈಗ ‘ಅಭಿವೃದ್ಧಿಯ ಪಥದಲ್ಲಿ’ ಮುನ್ನಡೆಯುತ್ತಿದೆ ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಸೋಮವಾರ ಸಂಸತ್ತಿನಲ್ಲಿ ಹೇಳಿದರು. ಮಾವೋವಾದಿ ಹಿಂಸಾಚಾರವನ್ನು ಅಂತ್ಯಗೊಳಿಸಲು ಸರ್ಕಾರವು ಮಾ.31ರ ಗಡುವನ್ನು ಹಾಕಿಕೊಂಡಿದ್ದು, ಅದಕ್ಕೂ ಮುನ್ನ ಲೋಕಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಯಿತು. ಚರ್ಚೆಗೆ ಉತ್ತರಿಸಿದ ಶಾ, ‘ದೇಶದಲ್ಲಿ ನಕ್ಸಲ್‌ ವಾದ ಈಗ ಅಳಿವಿನ ಅಂಚಿನಲ್ಲಿದೆ. ಸಂಪೂರ್ಣ ಪ್ರಕ್ರಿಯೆಯು ಔಪಚಾರಿಕವಾಗಿ ಪೂರ್ಣಗೊಂಡ ಬಳಿಕ ದೇಶಕ್ಕೆ ಈ ಬಗ್ಗೆ ಮಾಹಿತಿ ನೀಡಲಾಗುವುದು. ಆದರೆ ನಾವು ನಕ್ಸಲ್ ಮುಕ್ತರಾಗಿದ್ದೇವೆ ಎಂದು ನಾನು ಹೇಳಬಲ್ಲೆ’ ಎಂದರು. ಇಂದು ಬಸ್ತರ್‌ ನಲ್ಲಿ ನಕ್ಸಲ್‌ವಾದ ಬಹುತೇಕ ನಿರ್ಮೂಲನಗೊಂಡಿದೆ. ಬಸ್ತರ್‌ನಾದ್ಯಂತ ಪ್ರತಿಯೊಂದು ಗ್ರಾಮದಲ್ಲೂ ಶಾಲೆಯನ್ನು ಸ್ಥಾಪಿಸಲು ಅಭಿಯಾನವನ್ನು ಆರಂಭಿಸಲಾಗಿದೆ. ಪ್ರತಿ ತಾಲೂಕು ಮತ್ತು ಪಂಚಾಯತ್‌ಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಜನರಿಗೆ ಆಧಾರ್ ಕಾರ್ಡ್‌ಗಳು ಮತ್ತು ಪಡಿತರ ಚೀಟಿಗಳನ್ನು ನೀಡಲಾಗಿದೆ; ಅವರು ಐದು ಕೆ.ಜಿ. ಆಹಾರ ಧಾನ್ಯಗಳನ್ನು ಪಡೆಯುತ್ತಿದ್ದಾರೆ ಎಂದು ಶಾ ತಿಳಿಸಿದರು. ಬಸ್ತರ್ ಅನ್ನು ‘ಕೆಂಪು ಭಯೋತ್ಪಾದನೆ’ಯ ಕರಾಳ ಛಾಯೆ ಆವರಿಸಿದ್ದರಿಂದ ಆ ಪ್ರದೇಶದ ಜನರು ಹಿಂದುಳಿದಿದ್ದರು; ಹೀಗಾಗಿ ಅಭಿವೃದ್ಧಿಯು ಅವರನ್ನು ತಲುಪಲು ಸಾಧ್ಯವಾಗಿರಲಿಲ್ಲ. ಇಂದು ಆ ಛಾಯೆಯನ್ನು ತೊಲಗಿಸಲಾಗಿದೆ ಮತ್ತು ಬಸ್ತರ್ ಈಗ ಅಭಿವೃದ್ಧಿಯ ಪಥದಲ್ಲಿದೆ ಎಂದರು. ‘ಮಾತುಕತೆಯನ್ನು ಪ್ರತಿಪಾದಿಸುವವರಿಗೆ ನಾನು ಹಲವಾರು ಸಲ ಬಸ್ತರ್‌ ನ ಸಾರ್ವಜನಿಕ ವೇದಿಕೆಗಳಲ್ಲಿ ಹೇಳಿದ್ದನ್ನೇ ಪುನರುಚ್ಚರಿಸಲು ಬಯಸುತ್ತೇನೆ: ನಿಮ್ಮ ಶಸ್ತ್ರಾಸ್ತ್ರಗಳನ್ನು ಕೆಳಗಿಡಿ ಮತ್ತು ಸರ್ಕಾರವು ನಿಮ್ಮ ಪುನರ್ವಸತಿಯನ್ನು ಖಚಿತಪಡಿಸುತ್ತದೆ. ಆದಾಗ್ಯೂ ಅವರು ಶಸ್ತ್ರಾಸ್ತ್ರಗಳನ್ನು ತೊರೆಯಲು ನಿರಾಕರಿಸುತ್ತಾರೆ. ನಮ್ಮ ಸರ್ಕಾರದ ನೀತಿಯು ಸ್ಪಷ್ಟವಾಗಿದೆ; ತಮ್ಮ ಶಸ್ತ್ರಾಸ್ತ್ರಗಳನ್ನು ಒಪ್ಪಿಸುವವರೊಂದಿಗೆ ಮಾತುಕತೆಗೆ ನಾವು ಮುಕ್ತ ಮನಸ್ಸು ಹೊಂದಿದ್ದೇವೆ. ಹಿಂಸೆಯನ್ನು ಆಯ್ಕೆ ಮಾಡಿಕೊಳ್ಳುವವರಿಗೆ ದೃಢವಾದ ಉತ್ತರವನ್ನು ನೀಡಲಾಗುವುದು’ ಎಂದು ಶಾ ನುಡಿದರು. ಆಡಳಿತ ಪಕ್ಷದ ಸದಸ್ಯರು ದೇಶದಲ್ಲಿ ಮಾವೋವಾದದ ಹರಡುವಿಕೆಗೆ ಕಾಂಗ್ರೆಸ್‌ನ 60 ವರ್ಷಗಳ ಆಡಳಿತವನ್ನು ದೂಷಿಸುವುದರೊಂದಿಗೆ ಈ ಚರ್ಚೆಯು ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಹೊಸ ಸಂಘರ್ಷಕ್ಕೆ ಕಾರಣವಾಯಿತು. ಮಾವೋವಾದಿ ಹಿಂಸಾಚಾರವು 20,000 ಯುವಜನರ ಜೀವಗಳನ್ನು ಬಲಿ ಪಡೆದಿದೆ ಮತ್ತು 120 ಮಿಲಿಯನ್ ಜನರನ್ನು ಬಾಧಿಸಿದೆ ಎಂದು ಶಾ ತಿಳಿಸಿದ್ದಾರೆ. ಕಾಂಗ್ರೆಸ್ ಸರ್ಕಾರದ ವೈಫಲ್ಯದಿಂದಾಗಿ ಬುಡಕಟ್ಟು ಹಾಗೂ ಇತರ ಹಲವಾರು ಸಮುದಾಯಗಳು ಅಭಿವೃದ್ಧಿಯಿಂದ ವಂಚಿತರಾಗಿದ್ದರು ಎಂದರು. ಕಳೆದ 75 ವರ್ಷಗಳಲ್ಲಿ 60 ವರ್ಷಗಳ ಕಾಲ ಕಾಂಗ್ರೆಸ್ ಆಡಳಿತ ನಡೆಸಿತ್ತು. ಹಾಗಾದರೆ ಬುಡಕಟ್ಟು ಸಮುದಾಯಗಳು ಅಭಿವೃದ್ಧಿಯಿಂದ ವಂಚಿತಗೊಂಡಿದ್ದು ಹೇಗೆ? ನಕ್ಸಲಿಸಂ ದೇಶದೊಳಗೆ ಕಾಶ್ಮೀರ ಮತ್ತು ಈಶಾನ್ಯ ಭಾರತದಲ್ಲಿನ ಉಗ್ರವಾದಕ್ಕಿಂತ ದೊಡ್ಡ ಸವಾಲನ್ನು ಒಡ್ಡಿದೆ ಎಂದು ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರೇ ಹೇಳಿದ್ದರು. ಅದರ ಹೊರತಾಗಿಯೂ ಕಾಂಗ್ರೆಸ್ ಏನೂ ಮಾಡಲಿಲ್ಲ ಎಂದು ಶಾ ಹೇಳಿದರು.

ವಾರ್ತಾ ಭಾರತಿ 30 Mar 2026 9:34 pm

ಆರಿಫ್ ಕೊಲೆ ಪ್ರಕರಣ: ಶಂಕಿತ ಆರೋಪಿಗಳ ವಿಚಾರಣೆ; ಆರು ಮಂದಿ ಭಾಗಿಯಾಗಿರುವುದು ತನಿಖೆಯಿಂದ ಬೆಳಕಿಗೆ

ಮಂಗಳೂರು: ರೌಡಿ ಶೀಟರ್ ಕಿನ್ಯ ಅಜ್ಜಿನಡ್ಕ ನಿವಾಸಿ ಆರೀಫ್ (40) ಕೊಲೆ ಪ್ರಕರಣದಲ್ಲಿ ಆರು ಮಂದಿ ಭಾಗಿಯಾಗಿರುವುದು ಪೊಲೀಸರ ತನಿಖೆಯಿಂದ ಬೆಳಕಿಗೆ ಬಂದಿದೆ. ಬೆಳಗ್ಗೆ ದಕ್ಕೆ ಮೀನು ಮಾರುಕಟ್ಟೆಗೆ ಬೈಕ್‌ನಲ್ಲಿ ತೆರಳುತ್ತಿದ್ದ ಆರೀಫ್‌ನನ್ನು ತೊಕ್ಕೊಟ್ಟು ಫ್ಲೈ ಓವರ್ ಬಳಿ ತಂಡವೊಂದು ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆಗೈದು ಪರಾರಿಯಾಗಿತ್ತು ಎನ್ನಲಾಗಿದೆ. ಪೊಲೀಸರಿಗೆ ಸವಾಲಾಗಿರುವ ಪ್ರಕರಣದ ತನಿಖೆಯನ್ನು ಮಂಗಳೂರು ಪೊಲೀಸ್ ಆಯುಕ್ತರು ಸಿಸಿಬಿ ಎಸಿಪಿ ತಂಡಕ್ಕೆ ವಹಿಕೊಟ್ಟಿದ್ದಾರೆ. ತನಿಖೆ ಆರಂಭಿಸಿರುವ ಸಿಸಿಬಿ ಪೊಲೀಸರು ಶಂಕಿತ ಆರೋಪಿಗಳನ್ನು ವಿಚಾರಣೆ ಗೊಳಪಡಿಸುತ್ತಿದ್ದು, ಪ್ರಕರಣದಲ್ಲಿ ಭಾಗಿಯಾದ ಆರು ಮಂದಿಯ ವಿವರ ತನಿಖೆಯಿಂದ ಪೊಲೀಸರಿಗೆ ದೊರೆತಿದೆ. ಈ ನಿಟ್ಟಿನಲ್ಲಿ ತನಿಖೆ ಮುಂದುವರಿದಿದೆ. ಆರೋಪಿಗಳಿಗೆ ಕೃತ್ಯ ನಡೆಸಲು ಹಾಗೂ ಅವರು ತಪ್ಪಿಸಿಕೊಳ್ಳಲು ಸಹಾಯ ಮಾಡಿದ ಶಂಕಿತ ಕೆಲವು ವ್ಯಕ್ತಿಗಳನ್ನು ವಿಚಾರಣೆ ನಡೆಸಲಾಗುತ್ತಿದೆ. ಒಂದು ವೇಳೆ ಅರು ಭಾಗಿಯಾಗಿರುವುದು ದೃಢಪಟ್ಟರೆ ಅವರನ್ನು ಸಹ ಬಂಧಿಸಲಾಗು ತ್ತದೆ. ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.

ವಾರ್ತಾ ಭಾರತಿ 30 Mar 2026 9:33 pm

ಮಧ್ಯಪ್ರಾಚ್ಯದಲ್ಲಿನ ಅಮೆರಿಕದ ಕೆಲವು ಸೇನಾ ನೆಲೆಗಳನ್ನು ಇಸ್ರೇಲ್‌ ಗೆ ಸ್ಥಳಾಂತರಿಸಲು ಸಲಹೆ

ಜೆರುಸಲೇಂ, ಮಾ.30: ಈಗ ನಡೆಯುತ್ತಿರುವ ಯುದ್ಧ ಕೊನೆಗೊಂಡ ಬಳಿಕ ಮಧ್ಯಪ್ರಾಚ್ಯದಲ್ಲಿನ ಅಮೆರಿಕದ ಕೆಲವು ಸೇನಾ ನೆಲೆಗಳನ್ನು ತನ್ನ ಪ್ರದೇಶಕ್ಕೆ ಸ್ಥಳಾಂತರಿಸುವ ಪ್ರಸ್ತಾಪವನ್ನು ಅಮೆರಿಕದ ಮುಂದಿಡಲು ಇಸ್ರೇಲ್ ಸಿದ್ಧತೆ ನಡೆಸುತ್ತಿರುವುದಾಗಿ ಭದ್ರತಾ ಮೂಲಗಳನ್ನು ಉಲ್ಲೇಖಿಸಿ ಚಾನೆಲ್ 12 ವರದಿ ಮಾಡಿದೆ. ಪ್ರಸ್ತಾವನೆಯು ಈ ಪ್ರದೇಶದಲ್ಲಿ ಅಮೆರಿಕನ್ ಪಡೆಗಳ ನಿಯೋಜನೆಯ ಬಗ್ಗೆ ಮರುಚಿಂತನೆ ಮಾಡುವ ವಿಶಾಲ ಯೋಜನೆಯ ಭಾಗವಾಗಿದೆ. ಈಗಿನ ಪರಿಸ್ಥಿತಿಯು ಮಧ್ಯಪ್ರಾಚ್ಯದಲ್ಲಿ ಅಮೆರಿಕದ ಮಿಲಿಟರಿ ನಿಯೋಜನೆಯ ನಕ್ಷೆಯನ್ನು ಮರುರೂಪಿಸಲು ಅವಕಾಶವನ್ನು ನೀಡುತ್ತದೆ ಎಂದು ಇಸ್ರೇಲ್‌ ನ ಭದ್ರತಾ ಸಂಸ್ಥೆ ನಂಬಿದೆ. ಮಧ್ಯಪ್ರಾಚ್ಯದಲ್ಲಿರುವ ಅಮೆರಿಕನ್ ಪಡೆಗಳಿಗೆ ಭದ್ರತಾ ಸವಾಲು ಹೆಚ್ಚಿರುವ ಸಮಯದಲ್ಲಿ ಇಸ್ರೇಲ್ ಈ ಪ್ರಸ್ತಾವನೆ ಮುಂದಿರಿಸಿದೆ. ಅಮೆರಿಕದ ಪ್ರಮುಖ ಮಿತ್ರರಾಷ್ಟ್ರವಾಗಿ ಇಸ್ರೇಲ್ ತನ್ನ ಮೌಲ್ಯವನ್ನು ಈಗಾಗಲೇ ತೋರಿಸಿದ್ದು, ಸ್ಥಿರತೆ, ಬಲವಾದ ಕಾರ್ಯಾಚರಣೆ ಹಾಗೂ ಗುಪ್ತಚರ ಬೆಂಬಲವನ್ನು ಒದಗಿಸಿದೆ. ಇಸ್ರೇಲ್‌ನಲ್ಲಿ ಅಮೆರಿಕದ ಸೇನಾನೆಲೆ ಇರುವುದು ಎರಡೂ ದೇಶಗಳಿಗೆ ಕಾರ್ಯತಂತ್ರದ ಪ್ರಯೋಜನವನ್ನು ಒದಗಿಸುತ್ತದೆ ಎಂದು ಪ್ರಸ್ತಾವನೆಯಲ್ಲಿ ಉಲ್ಲೇಖಿಸಿರುವುದಾಗಿ ವರದಿಯಾಗಿದೆ. ಇದೀಗ ನಡೆಯುತ್ತಿರುವ ಯುದ್ಧದಲ್ಲಿ ಇರಾನ್‌ ನ ನಿರಂತರ ದಾಳಿಗೆ ಗುರಿಯಾಗಿರುವ ಯುಎಇ, ಖತರ್ ಮತ್ತು ಬಹ್ರೇನ್‌ ನಲ್ಲಿರುವ ಅಮೆರಿಕದ ಸೇನಾ ನೆಲೆಗಳನ್ನು ಸ್ಥಳಾಂತರಿಸುವ ಅಪೂರ್ವ ಅವಕಾಶ ಒದಗಿರುವುದಾಗಿ ಇಸ್ರೇಲ್‌ನ ಅಧಿಕಾರಿಗಳು ಹೇಳಿದ್ದಾರೆ. ಇದರ ಜೊತೆಗೆ ಇಸ್ರೇಲ್‌ನಲ್ಲಿ ಹೊಸ ನೆಲೆಗಳನ್ನು ಸ್ಥಾಪಿಸುವ ಅಂಶವೂ ಯೋಜನೆಯಲ್ಲಿ ಸೇರಿದೆ. ಇವುಗಳು ಲಾಜಿಸ್ಟಿಕ್ ಕೇಂದ್ರಗಳಾಗಿ ಕಾರ್ಯನಿರ್ವಹಿಸುತ್ತವೆ ಮತ್ತು ಎಫ್-35 ಹಾಗೂ ಎಫ್-16 ಯುದ್ಧವಿಮಾನಗಳನ್ನು ನಿರ್ವಹಿಸುವಲ್ಲಿ ನಿಕಟ ಸಮನ್ವಯತೆ ಇರುತ್ತದೆ. ಪ್ರಸ್ತಾವನೆಯ ಭಾಗವಾಗಿ ಇಸ್ರೇಲ್ ತನ್ನ ಸುಧಾರಿತ ‘ಥಾಡ್’, ಪ್ಯಾಟ್ರಿಯಾಟ್ ಹಾಗೂ ಲೇಸರ್ ಪ್ರತಿಬಂಧಕಗಳನ್ನು ಒಳಗೊಂಡ ವಾಯುರಕ್ಷಣಾ ವ್ಯವಸ್ಥೆಗಳನ್ನು ಮತ್ತು ಗುಪ್ತಚರ ಹಂಚಿಕೆ ಸಾಮರ್ಥ್ಯಗಳನ್ನು ಅಮೆರಿಕಕ್ಕೆ ಒದಗಿಸಲಿದೆ ಎಂದು ವರದಿ ತಿಳಿಸಿದೆ.

ವಾರ್ತಾ ಭಾರತಿ 30 Mar 2026 9:32 pm

Mysuru | ದಾಸವಾಳ ಹೂವು ತಿಂದು ಮಗು ಸಾವು

ಮೈಸೂರು: ಹುಣಸೂರು ತಾಲೂಕಿನ ದೊಡ್ಡ ಹೆಜ್ಜೂರು ಗ್ರಾಮದಲ್ಲಿ ಏಳು ತಿಂಗಳ ಗಂಡು ಮಗು ದಾಸವಾಳದ ಹೂವು ತಿಂದು ಮೃತಪಟ್ಟ ಘಟನೆ ನಡೆದಿದೆ. ಗ್ರಾಮದ ಸುದರ್ಶನ್‌-ನವ್ಯ ದಂಪತಿಯ ಪುತ್ರ ಆರೂವರೆ ತಿಂಗಳ ಚಿನ್ಮಯ್‌ ಗೌಡ ಮೃತಪಟ್ಟ ಮಗು. ಮೊನ್ನೆ ಮನೆಯ ಹೊಸಲಿಗೆ ಪೂಜೆ ಮಾಡಿ ದಾಸವಾಳದ ಹೂ ಇಡಲಾಗಿತ್ತು. ಅಣ್ಣನೊಂದಿಗೆ ಆಟವಾಡುತ್ತಿದ್ದ ಮಗು ಚಿನ್ಮಯ್ ದಾಸವಾಳದ ಹೂವಿನ ಹಸಿರು ತೊಟ್ಟಿನ ಭಾಗವನ್ನು ಕಿತ್ತು ತಿಂದಿದೆ. ಇದನ್ನು ಗಮನಿಸಿದ ಅಣ್ಣ, ಮಗುವಿನ ಬಾಯಿಂದ ತೊಟ್ಟನ್ನು ತೆಗೆಯಲು ಯತ್ನಿಸಿದ್ದಾರೆ. ಆದರೆ, ಹೂವಿನ ಭಾಗ ಮಗುವಿನ ಶ್ವಾಸಕೋಶಕ್ಕೆ ಸಿಕ್ಕಿಕೊಂಡು ಹುಸಿರಾಟದ ಸಮಸ್ಯೆ ಕಾಣಿಸಿಕೊಂಡಿದೆ. ಇದರಿಂದ ಗಾಬರಿಗೊಂಡ ಪೋಷಕರು ಮಗುವನ್ನು ಹನಗೂಡಿನ ಸರಕಾರಿ ಆಸ್ಪತ್ರೆಯಲ್ಲಿ ಪ್ರಾರ್ಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ಫಲಿಸದೆ ಮಗು ಮೃತಪಟ್ಟಿದೆ.

ವಾರ್ತಾ ಭಾರತಿ 30 Mar 2026 9:31 pm

ಇರಾನ್ ಸಂಘರ್ಷ | ಒಂದೇ ದಿನದಲ್ಲಿ ಮುಗಿದ ಪಾಕಿಸ್ತಾನ ಆತಿಥ್ಯದ ಉನ್ನತ ಸಭೆ

ಇಸ್ಲಾಮಾಬಾದ್, ಮಾ.30: ಇರಾನ್ ಯುದ್ಧ ಅಂತ್ಯಗೊಳಿಸುವ ನಿಟ್ಟಿನಲ್ಲಿ ನೀಲ ನಕ್ಷೆಯನ್ನು ರೂಪಿಸುವ ಉದ್ದೇಶದಿಂದ ಪಾಕಿಸ್ತಾನ ಆಯೋಜಿಸಿದ್ದ ನಾಲ್ಕು ರಾಷ್ಟ್ರಗಳ ವಿದೇಶಾಂಗ ಸಚಿವರ ಸಭೆ ನಿಗದಿತ ಅವಧಿಗೂ ಮುನ್ನ ಮೊಟಕುಗೊಂಡಿರುವುದಾಗಿ ವರದಿಯಾಗಿದೆ. ರವಿವಾರ ಮತ್ತು ಸೋಮವಾರ ಇಸ್ಲಾಮಾಬಾದ್‌ನಲ್ಲಿ ಪಾಕಿಸ್ತಾನ ವಿದೇಶಾಂಗ ಸಚಿವರ ನೇತೃತ್ವದಲ್ಲಿ ಟರ್ಕಿ, ಸೌದಿ ಅರೇಬಿಯಾ ಮತ್ತು ಈಜಿಪ್ಟ್ ವಿದೇಶಾಂಗ ಸಚಿವರ ಸಭೆ ನಿಗದಿಯಾಗಿತ್ತು. ಆದರೆ ರವಿವಾರ ತಡರಾತ್ರಿಯೇ ಸಭೆಯನ್ನು ಮುಕ್ತಾಯಗೊಳಿಸಲಾಗಿದೆ. ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದ ನಡುವೆ ಗಡಿಭಾಗದಲ್ಲಿ ಮತ್ತೊಮ್ಮೆ ತೀವ್ರ ಗುಂಡಿನ ಚಕಮಕಿ ಪ್ರಾರಂಭಗೊಂಡ ಬಳಿಕ ಸಭೆಯನ್ನು ತರಾತುರಿಯಲ್ಲಿ ಅಂತ್ಯಗೊಳಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಸಭೆಯ ಬಳಿಕ ನಾಲ್ಕೂ ರಾಷ್ಟ್ರಗಳ ಪ್ರತಿನಿಧಿಗಳು ಮುಸ್ಲಿಂ ಏಕತೆಯನ್ನು ಒತ್ತಿಹೇಳಿದರು ಹಾಗೂ ಹಗೆತನದ ಅಂತ್ಯಕ್ಕೆ ಕರೆ ನೀಡಿದರು. ಅಮೆರಿಕ–ಇರಾನ್ ನಡುವಿನ ರಚನಾತ್ಮಕ ಮಾತುಕತೆಯನ್ನು ಬೆಂಬಲಿಸಿದರು ಎಂದು ವರದಿ ಹೇಳಿದೆ.

ವಾರ್ತಾ ಭಾರತಿ 30 Mar 2026 9:29 pm

‘ಅಡುಗೆ ಅನಿಲ, ಇಂಧನ ತೈಲ ಸಮಸ್ಯೆ’: ಬಹಳ ದೊಡ್ಡ ಪರಿಣಾಮ ಎದುರಿಸಬೇಕಾಗುತ್ತದೆ ಎಂದ ಡಿ.ಕೆ. ಸುರೇಶ್

ಬೆಂಗಳೂರು: ಅಡುಗೆ ಅನಿಲ, ಇಂಧನ ತೈಲ ಸಮಸ್ಯೆ ವಿರುದ್ಧ ಕೋವಿಡ್ ಸಮಯದಲ್ಲಿ ಹೋರಾಡಿದಂತೆ ಹೋರಾಡಬೇಕು ಎಂದು ಪ್ರಧಾನಿ ಮೋದಿ ನೀಡಿರುವ ಸಂದೇಶದ ಕುರಿತು ಪ್ರತಿಕ್ರಿಯಿಸಿರುವ ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್, ಯಾವ ಸಮಸ್ಯೆ ಆಗುತ್ತಿದೆ, ಯಾವ ಸಮಸ್ಯೆ ಆಗುತ್ತಿಲ್ಲ ಎಂದು ಕೇಂದ್ರ ಸರಕಾರಕ್ಕೆ ಗೊತ್ತಿದೆ. ಒಟ್ಟಾರೆಯಾಗಿ ಇದೇ ಪರಿಸ್ಥಿತಿ ಮುಂದುವರಿದರೆ, ಬಹಳ ದೊಡ್ಡ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಹೇಳಿದರು. ಸೋಮವಾರ ಸದಾಶಿವನಗರದಲ್ಲಿರುವ ತಮ್ಮ ನಿವಾಸದ ಬಳಿ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಇಂಧನ ತೈಲ ಬೆಲೆ ಏರಿಕೆ ಬಿಸಿ ಭಾರತಕ್ಕೆ ಈಗಾಗಲೇ ತಟ್ಟಿದ್ದು, ಇನ್ನಷ್ಟು ತಟ್ಟಲಿದೆ. ಕೆಲವು ಉತ್ಪನ್ನಗಳ ಅಭಾವದಿಂದ ದರ ಏರಿಕೆಯಾದರೆ, ಮತ್ತೆ ಕೆಲವು ವಸ್ತುಗಳ ಬೆಲೆಯನ್ನು ಈ ಪರಿಸ್ಥಿತಿಯ ಲಾಭ ಪಡೆಯಲು ಏರಿಕೆ ಮಾಡಲಾಗಿದೆ ಎಂದು ತಿಳಿಸಿದರು. ಹೊಟೇಲ್ ಗಳು ಮಾತ್ರವಲ್ಲ. ಆಮದು ಮಾಡಿಕೊಳ್ಳುತ್ತಿರುವ ಎಲ್ಲ ವಸ್ತುಗಳ ಮೇಲೆ ಇದರ ಪರಿಣಾಮ ಬೀರುತ್ತಿದೆ. ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಅವಲಂಬಿತವಾಗಿರುವ ವಸ್ತುಗಳ ಉತ್ಪಾದನೆ ಕಡಿಮೆಯಾದರೆ ಬೆಲೆ ಏರಿಕೆಯಾಗುತ್ತದೆ. ಮುಂಗಾರು ಆರಂಭವಾಗಿ ಮಳೆ ಬೀಳಲು ಆರಂಭಿಸಿದರೆ ರಸಗೊಬ್ಬರದ ಮೇಲೂ ಇದು ಪರಿಣಾಮ ಬೀರಲಿದೆ. ಇದಕ್ಕೆ ಸರಕಾರ ಸಜ್ಜಾಗಬೇಕು. 3 ತಿಂಗಳಿಗೆ ಆಗುವಷ್ಟು ದಾಸ್ತಾನು ಇರಬಹುದು. ಆದರೆ ಇಡೀ ಋತುವಿಗೆ ಸಾಲುವಷ್ಟು ದಾಸ್ತಾನು ಇಟ್ಟುಕೊಳ್ಳುವುದು ಕಷ್ಟ. ಇದಕ್ಕೆ ಅಗತ್ಯ ತಯಾರಿ ಮಾಡಬೇಕಾಗಿದೆ ಎಂದು ಸುರೇಶ್ ತಿಳಿಸಿದರು. ಅನಿಲ ಬಳಕೆ ಇಳಿಕೆಗೆ ಹಾಲು ಒಕ್ಕೂಟಗಳಿಗೂ ಸೂಚನೆ: ಇದಕ್ಕೆ ಮುನ್ನೆಚ್ಚರಿಕೆ ಕ್ರಮವಾಗಿ ಹೆಚ್ಚು ವಾಹನ ಬಳಸುವುದನ್ನು ತಪ್ಪಿಸಬೇಕು. ನಮ್ಮ ಹಾಲು ಒಕ್ಕೂಟಗಳಿಗೂ ಅನಿಲ ಬಳಕೆ ಪ್ರಮಾಣವನ್ನು ಇಳಿಸುವಂತೆ ಸೂಚನೆ ನೀಡಲಾಗಿದೆ. ನಾವು ಕೂಡ ಅಗತ್ಯವಸ್ತುಗಳ ವ್ಯಾಪ್ತಿಯಲ್ಲಿ ಬರುತ್ತಿದ್ದು, ಇಂತಹ ಸಮಸ್ಯೆಗಳು ಎದುರಾಗಲಿವೆ. ಹೀಗಾಗಿ ಜನ ಈಗಲೇ ಎಚ್ಚೆತ್ತುಕೊಳ್ಳುವುದು ಉತ್ತಮ ಎಂದು ಅವರು ವಿವರಿಸಿದರು. ಹಾಲು ಒಕ್ಕೂಟಗಳಲ್ಲಿ ಸೋಲಾರ್ ಬಳಸಲು ಸಾಧ್ಯವಿಲ್ಲ. ನಾವು ಬಾಯ್ಲರ್ ಗಳ ಮೂಲಕ ಹಬೆ ಸೃಷ್ಟಿಸುತ್ತೇವೆ. ನಮ್ಮಲ್ಲಿ ಯಾರೂ ಎಲೆಕ್ಟ್ರಿಕ್ ಬಾಯ್ಲರ್ ಬಳಸುತ್ತಿಲ್ಲ. ಫರ್ನೆಸ್ ಆಯಿಲ್, ಸೌದೆ ಒಲೆ ಅಥವಾ ಗ್ಯಾಸ್ ಬಳಸಲಾಗುತ್ತಿದೆ. ನಾನು ಅಧಿಕಾರಕ್ಕೆ ಬಂದ ಬಳಿಕ ಡೈರಿಯ ಒಂದು ಭಾಗದಲ್ಲಿ ಸೌದೆ ಒಲೆ ಬಳಸುವ ಅವಕಾಶವಿದ್ದು, ಬಾಯ್ಲರ್ ಗಳನ್ನು ಅದಕ್ಕೆ ಪರಿವರ್ತಿಸಬೇಕು. ಇದು ಒಂದೆರಡು ದಿನಗಳಲ್ಲಿ ಆಗುವ ಪ್ರಕ್ರಿಯೆ ಅಲ್ಲ ಎಂದು ಸುರೇಶ್ ತಿಳಿಸಿದರು. ನೀವು ಕೆಎಂಎಫ್ ಅಧ್ಯಕ್ಷ ಸ್ಥಾನದ ಚುನಾವಣೆ ವಿಳಂಬ ಆಗುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನನಗೆ ಈ ಬಾಗ್ಗೆ ಮಾಹಿತಿ ಇಲ್ಲ. ನಾನು ಪ್ರಬಲ ಆಕಾಂಕ್ಷಿ ಎಂದು ಯಾವಾಗ ಹೇಳಿದ್ದೇನೆ? ನಾನು ಕೆಎಂಎಫ್ ಅಧ್ಯಕ್ಷನಾಗುತ್ತೇನೆ ಎಂದು ಹೇಳಿಲ್ಲವಲ್ಲ. ನನ್ನ ಪರವಾಗಿ ಬೇಡಿಕೆ ಇಡುತ್ತಿರುವವರು ನನಗೆ ಕಾಣಿಸುತ್ತಿಲ್ಲ ಎಂದರು.

ವಾರ್ತಾ ಭಾರತಿ 30 Mar 2026 9:20 pm

ಶಬರಿಮಲೆ ದೇವಾಲಯದ ವಿವಾದದ ಬಗ್ಗೆ ಪ್ರಧಾನಿ ಮೌನ: ರಾಹುಲ್ ಗಾಂಧಿ ಆರೋಪ

ಪತ್ತನಂತಿಟ್ಟ, ಮಾ. 30: ಪ್ರಧಾನಿ ನರೇಂದ್ರ ಮೋದಿ ಅವರು ಕೇರಳ ಭೇಟಿಯ ಸಂದರ್ಭದಲ್ಲಿ ಶಬರಿಮಲೆ ದೇವಾಲಯದ ವಿವಾದದ ಬಗ್ಗೆ ಮೌನವಾಗಿದ್ದರು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೋಮವಾರ ಆರೋಪಿಸಿದ್ದಾರೆ. ಪತ್ತನಂತಿಟ್ಟದ ಅಡೂರಿನಲ್ಲಿ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಎಪ್ರಿಲ್ 9ರಂದು ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಬಿಜೆಪಿ ಹಾಗೂ ಸಿಪಿಐ (ಎಂ)ನ ಸಂಯೋಜನೆಯನ್ನು ಎದುರಿಸುತ್ತಿದೆ ಎಂದು ಅವರು ಹೇಳಿದರು. “ಬಿಜೆಪಿಯಿಂದ ಸಂಪೂರ್ಣವಾಗಿ ಬೆಂಬಲಿತವಾದ ಎಲ್‌ಡಿಎಫ್ ವಿರುದ್ಧ ನಾವು ಚುನಾವಣೆಯಲ್ಲಿ ಹೋರಾಡುತ್ತಿದ್ದೇವೆ. ಒಂದೆಡೆ ಯುಡಿಎಫ್ ಹಾಗೂ ಇನ್ನೊಂದೆಡೆ ಸಿಪಿಐ (ಎಂ)-ಬಿಜೆಪಿಯ ಸಂಯೋಜನೆ ಇದೆ,” ಎಂದು ಅವರು ಹೇಳಿದರು. ರಾಷ್ಟ್ರ ಮಟ್ಟದಲ್ಲಿ ಸವಾಲು ಹಾಕುವ ಶಕ್ತಿ ಇರುವ ಏಕೈಕ ಪಕ್ಷ ಕಾಂಗ್ರೆಸ್ ಎಂದು ಬಿಜೆಪಿಗೆ ತಿಳಿದಿದೆ. ಆದುದರಿಂದ ಅದು ಇಲ್ಲಿ ಯುಡಿಎಫ್ ಅನ್ನು ಬಯಸುವುದಿಲ್ಲ ಎಂದು ಹೇಳಿದರು. ಬಿಜೆಪಿ ಹಾಗೂ ಆರ್‌ಎಸ್‌ಎಸ್ ಜೊತೆ ನಮಗೆ ಭಿನ್ನಾಭಿಪ್ರಾಯಗಳಿವೆ ಎಂದೂ ಹೇಳಿದರು. ವಿರೋಧ ಪಕ್ಷದ ನಾಯಕರು ಕೇಂದ್ರ ತನಿಖಾ ಸಂಸ್ಥೆಗಳಿಂದ ಕ್ರಮಗಳನ್ನು ಎದುರಿಸುತ್ತಿದ್ದಾರೆ. ಆದರೆ, ಕೇರಳದಲ್ಲಿ ಎಲ್‌ಡಿಎಫ್ ನಾಯಕರು ಅಂತಹ ಯಾವುದೇ ಕ್ರಮಗಳನ್ನು ಎದುರಿಸುತ್ತಿಲ್ಲ ಎಂದು ಅವರು ಹೇಳಿದರು. “ನಾನು 36 ಪ್ರಕರಣಗಳನ್ನು ಎದುರಿಸಿದ್ದೇನೆ. ನನ್ನನ್ನು ನಿರಂತರ 55 ಗಂಟೆಗಳ ಕಾಲ ವಿಚಾರಣೆ ನಡೆಸಲಾಗಿದೆ. ಆದರೆ, ಕೇರಳದ ಮುಖ್ಯಮಂತ್ರಿ ಅಥವಾ ಎಲ್‌ಡಿಎಫ್ ನಾಯಕರು ವಿರುದ್ಧ ಅಂತಹ ಯಾವುದೇ ಕ್ರಮಗಳಿಲ್ಲ,” ಎಂದು ಅವರು ಆರೋಪಿಸಿದರು. ಪಾಲಕ್ಕಾಡ್‌ನಲ್ಲಿ ರವಿವಾರ ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿದ ಭಾಷಣವನ್ನು ಉಲ್ಲೇಖಿಸಿದ ರಾಹುಲ್ ಗಾಂಧಿ, ಪ್ರಧಾನಿ ಆಗಾಗ ದೇವಾಲಯಗಳು ಹಾಗೂ ಧರ್ಮದ ಬಗ್ಗೆ ಮಾತನಾಡುತ್ತಾರೆ. ಆದರೆ, ಶಬರಿಮಲೆ ದೇವಾಲಯದ ವಿವಾದದ ಬಗ್ಗೆ ಮೌನವಾಗಿದ್ದಾರೆ ಎಂದು ಹೇಳಿದರು.

ವಾರ್ತಾ ಭಾರತಿ 30 Mar 2026 9:17 pm

ಎ.1ರಿಂದ ಬೆಂಗಳೂರಿನಲ್ಲಿ ರಾಷ್ಟ್ರೀಯ ಜನಗಣತಿ ಆರಂಭ; ಜಿಬಿಎನಿಂದ ಅಗತ್ಯ ಸಿದ್ಧತೆ

ಬೆಂಗಳೂರು: ಕೇಂದ್ರ ಸರಕಾರದ ಸೂಚನೆಯ ಮೇರೆಗೆ ಎ.1ರಿಂದ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯಲ್ಲಿ ರಾಷ್ಟ್ರೀಯ ಜನಗಣತಿ ಆರಂಭವಾಗುತ್ತಿದ್ದು, ಪ್ರಾಧಿಕಾರದ ಐದು ನಗರ ಪಾಲಿಕೆಗಳಲ್ಲಿ ಗಣತಿಗೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಕೇಂದ್ರ ಗೃಹ ಇಲಾಖೆಯು 2027ರ ಜನಗಣತಿಯನ್ನು ಎರಡು ಹಂತಗಳಲ್ಲಿ ನಡೆಸಲು ಉದ್ದೇಶಿಸಿದ್ದು, ಮೊದಲ ಹಂತದಲ್ಲಿ ‘ಮನೆಪಟ್ಟಿ ಮತ್ತು ಮನೆ ಗಣತಿ’ಯನ್ನು ಎ.1ರಿಂದ ಎ.15ವರೆಗೆ 15 ದಿನಗಳ ಕಾಲ ವೆಬ್ ಪೋರ್ಟಲ್ https://se.census.gov.in ಮೂಲಕ ಸ್ವಯಂ-ಗಣತಿಗೆ ಅವಕಾಶ ಕಲ್ಪಿಸಲಾಗಿದೆ. ಪ್ರಾಧಿಕಾರವು ಪ್ರಥಮ ಹಂತದಲ್ಲಿ ಮನೆಪಟ್ಟಿ ಮತ್ತು ಮನೆ ಗಣತಿ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಪೂರ್ವ ಸಿದ್ಧತಾ ಕಾರ್ಯಗಳನ್ನು ಈಗಾಗಲೇ ಕೈಗೊಂಡಿದ್ದು, ನಾಗರಿಕರು ತಮ್ಮ ಮನೆ ಹಾಗೂ ಕುಟುಂಬದ ಮೂಲಭೂತ ಮಾಹಿತಿಯನ್ನು ನಿಖರವಾಗಿ ದಾಖಲಿಸುವುದು ಅತ್ಯಂತ ಮಹತ್ವದ್ದಾಗಿದೆ. ಅದರಂತೆ, ಮನೆಯ ಯಾವುದೇ ಒಬ್ಬ ಸದಸ್ಯ ಸುಮಾರು 15-20 ನಿಮಿಷಗಳ ಅವಧಿಯಲ್ಲಿ ಸ್ವಯಂ-ಗಣತಿ ಮಾಡಿ ಮನೆಯ ವಿವರಗಳನ್ನು ಒದಗಿಸಬಹುದು. ಮೊಬೈಲ್/ಇಮೇಲ್‍ನಲ್ಲಿ ಸ್ವಯಂ-ಗಣತಿ ಐಡಿಯನ್ನು ಪಡೆಯಬಹುದಾಗಿದೆ. ಎರಡನೇ ಹಂತದಲ್ಲಿ ಎ.16ರಿಂದ ಮೇ 15ರವರೆಗೆ ಗಣತಿದಾರರು ಮನೆ-ಮನೆಗೆ ಭೇಟಿ ನೀಡಿ, ‘ಮನೆಪಟ್ಟಿ ಮತ್ತು ಮನೆ ಗಣತಿ’ ಮಾಹಿತಿಯನ್ನು ಸಂಗ್ರಹಿಸಲಿದ್ದಾರೆ. ಗಣತಿದಾರರು ಭೇಟಿ ನೀಡಿದಾಗ, ದೃಢೀಕರಣಕ್ಕಾಗಿ ಸ್ವಯಂ-ಗಣತಿ ಐಡಿಯನ್ನು ಗಣತಿದಾರರೊಂದಿಗೆ ಹಂಚಿಕೊಳ್ಳಬೇಕಾಗಿರುತ್ತದೆ. ಈಗಾಗಲೇ ಐದು ನಗರ ಪಾಲಿಕೆಗಳಲ್ಲಿ ಫೀಲ್ಡ್ ಟ್ರೈನರ್‍ಗಳಿಗೆ, ಚಾರ್ಜ್ ಆಫೀಸರ್ಸ್ ಗಳಿಗೆ, ಕಂದಾಯ ಅಧಿಕಾರಿಗಳಿಗೆ, ಟೆಕ್ನಿಕಲ್ ಅಸಿಸ್ಟೆಂಟ್‍ಗಳಿಗೆ ಮಾಸ್ಟರ್ ಟ್ರೈನರ್‍ಗಳಿಂದ ಅಗತ್ಯ ತರಬೇತಿ ನೀಡಲಾಗಿದೆ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಪ್ರಕಟನೆಯಲ್ಲಿ ತಿಳಿಸಿದೆ.

ವಾರ್ತಾ ಭಾರತಿ 30 Mar 2026 9:13 pm

ಟ್ರಂಪ್ ಪ್ರಸ್ತಾಪಿಸಿರುವ ಶಾಂತಿ ಯೋಜನೆಗೆ ಇರಾನ್ ನಕಾರ

ಅಮೆರಿಕದೊಂದಿಗೆ ನೇರ ಮಾತುಕತೆ ನಡೆದಿಲ್ಲ: ಇರಾನ್ ಸ್ಪಷ್ಟನೆ

ವಾರ್ತಾ ಭಾರತಿ 30 Mar 2026 9:12 pm

ಶೀಘ್ರ ಒಪ್ಪಂದವಾಗದಿದ್ದರೆ ಇರಾನ್‌ ನ ಇಂಧನ ಮೂಲಸೌಕರ್ಯ ಸ್ಫೋಟ: ಟ್ರಂಪ್ ಬೆದರಿಕೆ

ಟೆಹ್ರಾನ್, ಮಾ.30: ನಡೆಯುತ್ತಿರುವ ಯುದ್ಧವನ್ನು ಕೊನೆಗೊಳಿಸಲು ಇರಾನ್‌ನ ‘ಹೆಚ್ಚು ಸಮಂಜಸವಾದ’ ಆಡಳಿತದೊಂದಿಗೆ ಅಮೆರಿಕ ಮಾತುಕತೆ ನಡೆಸುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಹೇಳಿದ್ದು, ಒಂದು ವೇಳೆ ಮಾತುಕತೆ ವಿಫಲವಾದರೆ ಮತ್ತು ಹಾರ್ಮುಝ್ ಜಲಸಂಧಿಯನ್ನು ಮತ್ತೆ ತೆರೆಯದಿದ್ದರೆ ಇರಾನ್‌ ನ ಇಂಧನ ಮೂಲಸೌಕರ್ಯ, ತೈಲ ಬಾವಿಗಳು ಮತ್ತು ಖಾರ್ಗ್ ದ್ವೀಪವನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದಾರೆ. ‘ಇರಾನ್‌ನಲ್ಲಿ ನಮ್ಮ ಮಿಲಿಟರಿ ಕಾರ್ಯಾಚರಣೆಯನ್ನು ಕೊನೆಗೊಳಿಸುವ ಬಗ್ಗೆ ಅಲ್ಲಿನ ಹೊಸ ಮತ್ತು ಹೆಚ್ಚು ಸಮಂಜಸವಾದ ಆಡಳಿತದೊಂದಿಗೆ ಅಮೆರಿಕ ಗಂಭೀರ ಮಾತುಕತೆ ನಡೆಸುತ್ತಿದೆ. ಉತ್ತಮ ಪ್ರಗತಿ ಸಾಧಿಸಲಾಗಿದೆ. ಆದರೆ ಯಾವುದೇ ಕಾರಣಕ್ಕೆ ಶೀಘ್ರದಲ್ಲೇ ಒಪ್ಪಂದ ಸಾಧ್ಯವಾಗದಿದ್ದರೆ ಮತ್ತು ಹಾರ್ಮುಝ್ ಜಲಸಂಧಿ ವ್ಯಾಪಾರಕ್ಕೆ ಮುಕ್ತವಾಗದಿದ್ದರೆ, ನಾವು ಇರಾನ್‌ನಲ್ಲಿ ಇದುವರೆಗೆ ಉದ್ದೇಶಪೂರ್ವಕವಾಗಿ ಸ್ಪರ್ಶಿಸದಿರುವ ಎಲ್ಲಾ ವಿದ್ಯುತ್ ಸ್ಥಾವರಗಳು, ತೈಲ ಬಾವಿಗಳು ಮತ್ತು ಖಾರ್ಗ್ ದ್ವೀಪವನ್ನು ಸ್ಫೋಟಿಸಿ ಬಿಡುತ್ತೇವೆ’ ಎಂದವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.

ವಾರ್ತಾ ಭಾರತಿ 30 Mar 2026 9:10 pm

Bengaluru | ಪರಪ್ಪನ ಅಗ್ರಹಾರಕ್ಕೆ ಸಿಮ್‍ಕಾರ್ಡ್ ತಂದ ಯುವತಿ ಸೆರೆ

ಬೆಂಗಳೂರು: ಕೇಂದ್ರ ಕಾರಾಗೃಹ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿರುವ ವಿಚಾರಣಾಧೀನ ಖೈದಿಯನ್ನು ಭೇಟಿ ಮಾಡಲು ತನ್ನ ಖಾಸಗಿ ಅಂಗದಲ್ಲಿ ಸಿಮ್‍ಕಾರ್ಡ್‍ಗಳನ್ನು ಅಡಗಿಸಿಟ್ಟುಕೊಂಡು ಬಂದಿದ್ದ ಆರೋಪದಡಿ ಯುವತಿಯನ್ನು ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ. ಮಾ.26ರಂದು ಸಂಜೆ 4 ಗಂಟೆ ಸುಮಾರಿನಲ್ಲಿ ಅಸ್ಸಾಂ ಮೂಲದ ರಿತಿಕಾ ರೈ ಎಂಬ ಯುವತಿ ವಿಚಾರಣಾಧೀನ ಖೈದಿಯೊಬ್ಬನನ್ನು ಭೇಟಿ ಮಾಡಲು ಜೈಲು ಬಳಿ ಬಂದಿದ್ದಾರೆ. ಈ ವೇಳೆ ಜೈಲಿನ ಮಹಿಳಾ ಸಿಬ್ಬಂದಿಗೆ ಈ ಯುವತಿ ಮೇಲೆ ಅನುಮಾನ ಬಂದಿದೆ. ತಕ್ಷಣ ಪರಿಶೀಲನೆ ನಡೆಸಿದಾಗ ಆ ಯುವತಿ ಖಾಸಗಿ ಅಂಗದಲ್ಲಿ ಮೊಬೈಲ್ ಸಿಮ್‍ಕಾರ್ಡ್‍ಗಳು ಪತ್ತೆಯಾಗಿವೆ. ಮಹಿಳಾ ಸಿಬ್ಬಂದಿ ಆ ವಸ್ತುಗಳನ್ನು ವಶಕ್ಕೆ ಪಡೆದು ಆಕೆಯನ್ನು ಪರಪ್ಪನ ಅಗ್ರಹಾರ ಠಾಣೆ ಪೊಲೀಸರಿಗೆ ಒಪ್ಪಿಸಿದ್ದಾರೆ. ಜೈಲು ಅಧೀಕ್ಷರು ಈ ಬಗ್ಗೆ ಠಾಣೆಗೆ ದೂರು ನೀಡಿದ್ದು, ಯುವತಿ ವಿರುದ್ಧ ಎಫ್‍ಐಆರ್ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ವಾರ್ತಾ ಭಾರತಿ 30 Mar 2026 9:09 pm

ಸುಳ್ಯ ಮೆಸ್ಕಾಂ ಕಚೇರಿಯಲ್ಲಿ ಗ್ರಾಹಕರು - ಎಇ ನಡುವೆ ಹೊಡೆದಾಟ: ಪ್ರಕರಣ ದಾಖಲು

ಸುಳ್ಯ: ಮೆಸ್ಕಾಂ ಕಚೇರಿಯಲ್ಲಿ ಗ್ರಾಹಕರು ಮತ್ತು ಮೆಸ್ಕಾಂ ಎಇ ನಡುವೆ ಮಾತಿನ ಚಕಮಕಿ ನಡೆದು ಪರಸ್ಪರ ಹಲ್ಲೆ ಮಾಡಿಕೊಂಡಿರುವ ಬಗ್ಗೆ ಇತ್ತಂಡಗಳಿಂದ ಸುಳ್ಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ. ಮೆಸ್ಕಾಂ ಎಇ ಸುಪ್ರೀತ್ ಹಲ್ಲೆ ಮಾಡಿದ್ದಾರೆ ಎಂದು ಗ್ರಾಹಕ ಅಂಬಟಡ್ಕ ನಿವಾಸಿ ಕುಲ್‍ದೀಪ್ ಅವರು ನೀಡಿರುವ ದೂರಿನಲ್ಲಿ ಮಾ 28 ರಂದು ಸಂಜೆಯಿಂದ ರವಿವಾರದವರೆಗೆ ಅಂಬೇಟಡ್ಕ ಪ್ರದೇಶದಲ್ಲಿ ವಿದ್ಯುತ್ ಇಲ್ಲದೇ ಇದ್ದುದರಿಂದ ನೆರೆಮನೆಯ ಸಂದೀಪ್ ಅವರ ಜತೆ ಸುಳ್ಯದ ಕೇರ್ಪಳದಲ್ಲಿರುವ ಮೆಸ್ಕಾಂ ಕಛೇರಿಯ ಬಳಿಗೆ ಹೋಗಿ, ಕಚೇರಿಯ ಹೊರ ಬಾಗದಲ್ಲಿ ನಿಂತಿದ್ದ ಮೆಸ್ಕಾಂ ಸಹಾಯಕ ಇಂಜಿನಿಯರ್ ಸುಪ್ರೀತ್ ಅವರಲ್ಲಿ ನಮ್ಮ ವಠಾರದಲ್ಲಿ ನೆನ್ನೆಯಿಂದ ಕರೆಂಟ್ ಇಲ್ಲ ಯಾವಾಗ ಕರೆಂಟ್ ಬರುತ್ತದೆಂದು ಕೇಳಿದ್ದರು. ಆ ಸಮಯ ಸುಪ್ರೀತ್ ರವರು ನಮ್ಮನ್ನು ಅವಾಚ್ಯ ಶಬ್ದಗಳಿಂದ ಬೈದು ನನ್ನ ಕುತ್ತಿಗೆಯ ಮೇಲೆ ಕೈ ಹಾಕಿ ನನ್ನನ್ನು ದೂಡಿ ಹಾಕಿ ಗಾಯಗೊಳಿಸಿದ್ದು ಈ ಸಮಯ ದಲ್ಲಿ ತಡೆಯಲು ಬಂದ ಸಂದೀಪ್ ಅವರನ್ನು ಕೂಡ ನೆಲಕ್ಕೆ ದೂಡಿ ಹಲ್ಲೆ ನಡೆಸಿದ್ದಾರೆ. ಮತ್ತು ನಮ್ಮ ಕೈಯಲ್ಲಿದ್ದ ನಮ್ಮ ಬೈಕಿನ ಕೀಯನ್ನು ಕಿತ್ತುಕೊಂಡು ದೂರಕ್ಕೆ ಎಸೆದಿದ್ದು ಬಳಿಕ ಬೈಕಿನ ಪೆಟ್ರೋಲ್ ಟ್ಯಾಂಕಿನ ಕೆಳಭಾಗದ ಪೈಪನ್ನು ಚಾಕುವಿನಿಂದ ತುಂಡು ಮಾಡಿದ್ದಾರೆ. ಬಳಿಕ ನಾವು ಸುಳ್ಯ ಸರಕಾರಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆಯನ್ನು ಪಡೆದಿದ್ದೇವೆ. ಗ್ರಾಹಕರೊಂದಿಗೆ ಅವಾಚ್ಯವಾಗಿ ನಡೆಯುತ್ತಿರುವ ಅಧಿಕಾರಿಯ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ತಿಳಿಸಿದ್ದಾರೆ. ಇದೇ ಘಟನೆಗೆ ಸಂಬಂಧಿಸಿದಂತೆ ಸುಳ್ಯ ಮೆಸ್ಕಾಂ ಇಲಾಖೆಯ ಸಹಾಯಕ ಇಂಜಿನಿಯರ್ ಸುಪ್ರೀತ್ ರವರು ಕೂಡ ಸುಳ್ಯ ಠಾಣೆಯಲ್ಲಿ ದೂರು ನೀಡಿದ್ದು ರವಿವಾರ ಸುಳ್ಯ ಕಸಬಾ ಗ್ರಾಮದ ಕೇರ್ಪಳದಲ್ಲಿರುವ ಮೆಸ್ಕಾಂ ಕಛೇರಿಯಲ್ಲಿ ಕರ್ತವ್ಯದಲ್ಲಿರುವ ಸಮಯ ಕುಲದೀಪ್ ಎಂಬವರು ವಿದ್ಯುತ್ ಬಗ್ಗೆ ಚರ್ಚೆ ನಡೆಸಿ ಅವಾಚ್ಯ ಶಬ್ದಗಳಿಂದ ಬೈದು, ಕೈಯಿಂದ ದೈಹಿಕ ಹಲ್ಲೆ ಮಾಡಿದ್ದಾರೆ. ಈ ವೇಳೆ ನಾನು ಮೊಬೈಲ್‍ನಲ್ಲಿ ವಿಡೀಯೋ ಮಾಡಿಕೊಂಡಿದ್ದು ನಂತರ ಕುಲದೀಪ್ ಅವರು ಆತನ ಸ್ನೇಹಿತ ಸಂದೀಪನಿಗೆ ಕರೆ ಮಾಡಿ ಕಚೇರಿಗೆ ಬರಲು ಹೇಳಿದ್ದಾರೆ. ಅಲ್ಲಿಗೆ ಬಂದ ಸಂದೀಪನು ದಾರಿ ಬದಿಯಲ್ಲಿ ಬಿದ್ದಿರುವ ಕಲ್ಲಿನಿಂದ ನನ್ನ ಮೇಲೆ ಹಲ್ಲೆ ಮಾಡಲು ಪ್ರಯತ್ನಿಸಿದ್ದು, ಸರಕಾರಿ ಕರ್ತವ್ಯದಲ್ಲಿರುವ ನನ್ನ ಮೇಲೆ ದೈಹಿಕ ಹಲ್ಲೆ ಮಾಡಿದ್ದಾರೆ. ಬಳಿಕ ನಾನು ಸುಳ್ಯ ಸರಕಾರಿ ಆಸ್ವತ್ರೆಗೆ ಹೋಗಿ ಹೊರ ರೋಗಿಯಾಗಿ ಚಿಕಿತ್ಸೆ ಪಡೆದುಕೊಂಡು ಠಾಣೆಗೆ ಬಂದು ದೂರನ್ನು ನೀಡಲಾಗಿದೆ ಎಂದು ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಸುಳ್ಯ ಪೊಲೀಸರು ಇತ್ತಂಡಗಳಿಂದ ದೂರು ಸ್ವೀಕರಿಸಿ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.

ವಾರ್ತಾ ಭಾರತಿ 30 Mar 2026 9:09 pm

ತಬ್ರೀಝ್ ಪೆಟ್ರೋಕೆಮಿಕಲ್ಸ್ ಸ್ಥಾವರಕ್ಕೆ ದಾಳಿ

ಟೆಹ್ರಾನ್, ಮಾ.30: ಇರಾನ್‌ ನ ವಾಯವ್ಯ ಪ್ರಾಂತದಲ್ಲಿರುವ ತಬ್ರೀಝ್ ಪೆಟ್ರೋಕೆಮಿಕಲ್ಸ್ ಕಾಂಪ್ಲೆಕ್ಸ್‌ ನ ಒಂದು ಭಾಗದ ಮೇಲೆ ಸೋಮವಾರ ಬೆಳಿಗ್ಗೆ ವೈಮಾನಿಕ ದಾಳಿ ನಡೆದಿದ್ದು, ಸ್ಥಾವರದಲ್ಲಿ ಬೆಂಕಿ ಕಾಣಿಸಿಕೊಂಡಿರುವುದಾಗಿ ಇರಾನ್‌ ನ ಸುದ್ದಿಸಂಸ್ಥೆ ವರದಿ ಮಾಡಿದೆ. ಅಗ್ನಿಶಾಮಕ ದಳ ಮತ್ತು ರಕ್ಷಣಾ ತಂಡದ ಕಾರ್ಯಾಚರಣೆಯಲ್ಲಿ ಬೆಂಕಿಯನ್ನು ನಂದಿಸಲಾಗಿದ್ದು, ಇಂಜಿನಿಯರ್‌ಗಳು ತಾಂತ್ರಿಕ ಪರಿಣಾಮ ಮತ್ತು ಹಾನಿಯ ಪ್ರಮಾಣವನ್ನು ನಿರ್ಣಯಿಸುತ್ತಿದ್ದಾರೆ ಎಂದು ವರದಿ ತಿಳಿಸಿದೆ. ಪಾಕಿಸ್ತಾನದ ಮಧ್ಯಸ್ಥಿಕೆ ಪ್ರಸ್ತಾಪ ತಿರಸ್ಕರಿಸಿದ ಇರಾನ್ ಟೆಹ್ರಾನ್, ಮಾ.30: ಅಮೆರಿಕ ಮತ್ತು ಇರಾನ್ ನಡುವಿನ ಸಂಭಾವ್ಯ ಮಾತುಕತೆಗೆ ಮಧ್ಯಸ್ಥಿಕೆ ವಹಿಸುವ ಪಾಕಿಸ್ತಾನದ ಪ್ರಸ್ತಾಪವನ್ನು ಇರಾನ್ ತಿರಸ್ಕರಿಸಿರುವುದಾಗಿ ವರದಿಯಾಗಿದೆ. ಸಂಧಾನ ಮಾತುಕತೆಗೆ ಸಿದ್ಧ ಎಂದು ಪಾಕಿಸ್ತಾನ ಬಹಿರಂಗ ಹೇಳಿಕೆ ನೀಡಿದ್ದು, ಮಾತುಕತೆಯಲ್ಲಿ ಪ್ರಸ್ತಾಪಿಸಬೇಕಿರುವ ಅಂಶಗಳ ಬಗ್ಗೆ ಚರ್ಚಿಸಲು ರವಿವಾರ ಮತ್ತು ಸೋಮವಾರ ಇಸ್ಲಾಮಾಬಾದ್‌ ನಲ್ಲಿ ಟರ್ಕಿ, ಸೌದಿ ಅರೇಬಿಯಾ ಮತ್ತು ಈಜಿಪ್ಟ್ ವಿದೇಶಾಂಗ ಸಚಿವರೊಂದಿಗೆ ಸಭೆ ಆಯೋಜಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಇರಾನ್, ‘ಇದೆಲ್ಲಾ ಪಾಕಿಸ್ತಾನದ ಪ್ರಚಾರದ ಗಿಮಿಕ್. ಸಂಧಾನ ಮಾತುಕತೆಯ ಬಗ್ಗೆ ಯಾವುದೇ ಸಲಹೆಯು ಅಕಾಲಿಕವಾಗಿದೆ ಮತ್ತು ಅದನ್ನು ನಾವು ಅನುಮೋದಿಸಿಲ್ಲ’ ಎಂದು ಸ್ಪಷ್ಟಪಡಿಸಿದೆ. ಇರಾನ್ ಮತ್ತು ಗಲ್ಫ್ ರಾಷ್ಟ್ರಗಳೊಂದಿಗಿನ ತನ್ನ ಸಂಬಂಧಗಳನ್ನು ಎತ್ತಿತೋರಿಸಿದ್ದ ಪಾಕಿಸ್ತಾನ, ಅಮೆರಿಕ-ಇರಾನ್ ಮಾತುಕತೆಗೆ ತನ್ನನ್ನು ತಾನು ಸಂಭಾವ್ಯ ಸ್ಥಳವಾಗಿ ಬಿಂಬಿಸಿಕೊಂಡಿತ್ತು. ಆದರೆ ಪಾಕಿಸ್ತಾನದ ಈ ಪಾತ್ರವನ್ನು ಸಾರ್ವಜನಿಕವಾಗಿ ಮೌಲ್ಯೀಕರಿಸಲು ಸಿದ್ಧವಾಗಿಲ್ಲ ಎಂದು ಇರಾನ್ ಸ್ಪಷ್ಟಪಡಿಸಿದ್ದು, ಇಸ್ಲಾಮಾಬಾದ್‌ ನಲ್ಲಿ ನಡೆಯುವ ಮಾತುಕತೆಯಿಂದ ಅಂತರ ಕಾಯ್ದುಕೊಳ್ಳುವುದಾಗಿ ಸೂಚಿಸಿದೆ. ಅಮೆರಿಕ ಮತ್ತು ಇರಾನ್ ಭಾಗವಹಿಸುವಿಕೆಯನ್ನು ಅಧಿಕೃತವಾಗಿ ದೃಢೀಕರಿಸದಿದ್ದರೂ, ಶಾಂತಿ ಮಾತುಕತೆಯನ್ನು ಆಯೋಜಿಸಲು ಪಾಕಿಸ್ತಾನ ಉತ್ಸಾಹ ತೋರಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ರಾಯ್ಟರ್ಸ್ ವರದಿ ಮಾಡಿದೆ.

ವಾರ್ತಾ ಭಾರತಿ 30 Mar 2026 9:08 pm

ಪೋಷಕರನ್ನು ಸಾಕದಿದ್ರೆ ಉದ್ಯೋಗಿಗಳ ಸಂಬಳದಿಂದಲೇ ಶೇ.15 ರಷ್ಟು ಹಣ ಕಡಿತ! ತೆಲಂಗಾಣದಲ್ಲಿ ಐತಿಹಾಸಿಕ ನಿಯಮ ಜಾರಿಗೆ

ವೃದ್ಧ ಪೋಷಕರ ನೆರವಾಗಿಗಾಗಿ ತೆಲಂಗಾಣ ಸರ್ಕಾರವು ಐತಿಹಾಸಿಕ ನಿಯಮವನ್ನು ಜಾರಿಗೆ ತರಲಾಗಿದೆ. ಪೋಷಕರನ್ನು ಸಾಕದ ಉದ್ಯೋಗಿಗಳ ಸಂಬಳ ಕಡಿತ ಮಾಡಲು ನಿರ್ಧರಿಸಲಾಗಿದೆ. ಈ ಸಂಬಂಧಿ ಅಲ್ಲಿನ ಸರ್ಕಾರವು ತೆಲಂಗಾಣ ಉದ್ಯೋಗಿಗಳ ಹೊಣೆಗಾರಿಕೆ ಮತ್ತು ಪೋಷಕರ ಬೆಂಬಲದ ಮೇಲ್ವಿಚಾರಣೆ ಮಸೂದೆ-2026 ಅನ್ನು ಜಾರಿಗೆ ತಂದಿದೆ. ಪೋಷಕರು ಜಿಲ್ಲಾಧಿಕಾರಿಗೆ ದೂರು ನೀಡಿದರೆ ಅವರು ಮಕ್ಕಳ ಮೇಲೆ ಕ್ರಮತಗೆದುಕೊಂಡು ಸಂಬಳದ ಮೊತ್ತ ಜಮೆಗೆ ಕ್ರಮವಹಿಸಲಿದ್ದಾರೆ.

ವಿಜಯ ಕರ್ನಾಟಕ 30 Mar 2026 9:07 pm

ಅಖಿಲ ಭಾರತ ಮಾಸ್ಟರ್ಸ್‌ ಬ್ಯಾಡ್ಮಿಂಟನ್| ಮಂಗಳೂರಿನ ರಯೀಝ್ -ಧಿರೇಶ್ ಜೋಡಿಗೆ ತೃತೀಯ ಸ್ಥಾನ

ಮಂಗಳೂರು: ಅಖಿಲ ಭಾರತ ಮಾಸ್ಟರ್ಸ್‌ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಮಂಗಳೂರಿನ ರಯೀಝ್ -ಧಿರೇಶ್ ಜೋಡಿಗೆ ತೃತೀಯ ಸ್ಥಾನ ಗಳಿಸಿದೆ. ಬ್ಯಾಡ್ಮಿಂಟನ್ ಅಸೋಸಿಯೇಷನ್ ಆಫ್ ಇಂಡಿಯಾ ಸಹಕಾರದೊಂದಿಗೆ ಗೋವಾ ಬಾಡ್ಮಿಂಟನ್ ಅಸೋಸಿಯೇಷನ್ ವತಿಯಿಂದ ಗೋವಾದ ಮನೋಹರ ಪಾರಿಕ್ಕಾರ್ ಒಳಾಂಗಣ ಕ್ರೀಡಾಂಗಣದಲ್ಲಿ ಮಾ.18ರದ 25ರವರೆಗೆ ನಡೆದ ಯೂನೆಕ್ಸ್ ಸನ್ ರೈಸ್ ಅಖಿಲ ಭಾರತ ಮಾಸ್ಟರ್ಸ್ ಬ್ಯಾಡ್ಮಿಂಟನ್ ಚ್ಯಾಂಪಿಯನ್ ಶಿಪ್ 2026 ರಲ್ಲಿ ಮಂಗಳೂರಿನ ಉದ್ಯಮಿ ರಯೀಝ್ ಪಿ.ಸಿ ಮತ್ತು ಧಿರೇಶ್ ಜೋಡಿ 3ನೇ ಸ್ಥಾನದೊಂದಿಗೆ ಕಂಚಿನ ಪದಕಗಳಿಸಿದ್ದಾರೆ. ಅವರು ಅಖಿಲ ಭಾರತ ಮಾಸ್ಟರ್ ಬ್ಯಾಡ್ಮಿಂಟನ್ 2ನೆ ರ್ಯಾಂಕ್ ನ ಆಟಗಾರರಾದ ಆಂದ್ರ ಪ್ರದೇಶದ ಜಯನ್ ಜೇಮ್ಸ್ ಮತ್ತು ಪಿ.ಕೃಷ್ಣನ್ ಅವರನ್ನು ಪರಾಭವಗೊಳಿಸಿ ಸೆಮಿಫೈನಲ್ ಪ್ರವೇಶಿಸಿದರು.ಬಳಿಕ ನಡೆದ ಸೆಮಿ ಫೈನಲ್‌ನಲ್ಲಿ ಮಹಾರಾಷ್ಟ್ರದ ಜೋಡಿಯ ವಿರುದ್ಧ ಪರಾಭವಗೊಂಡು ತೃತೀಯ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು.

ವಾರ್ತಾ ಭಾರತಿ 30 Mar 2026 9:00 pm

ಎ.4ರಿಂದ ಬೊಳ್ಳಾರಗೋಳಿ ಪಂಚ ದೈವಗಳ ನೇಮೋತ್ಸವ

ಸುರತ್ಕಲ್‌: ಕುತ್ತೆತ್ತೂರು-ಸೂರಿಂಜೆ-ಶಿಬರೂರು-ಪಂಜ ಗ್ರಾಮಗಳನ್ನೊಳಗೊಂಡ ಬೊಳ್ಳಾರಗೋಳಿ ಪಂಚ ದೈವಗಳ ನೇಮೋತ್ಸವವು ಎ.4ರಿಂದ 8ರ ವರೆಗೆ ಸೂರಿಂಜೆ ಬೊಳ್ಳಾರಗುತ್ತಿನ ಬಾಕಿಮಾರು ಗದ್ದೆಯಲ್ಲಿ ನಡೆಯ ಲಿದೆ ಎಂದು ಬೊಳ್ಳಾರಗೋಳಿ ಪಂಚ ದೈವಗಳ ನೇಮೋತ್ಸವ ಸಮಿತಿ ಅಧ್ಯಕ್ಷರಾದ ರಾಜೇಂದ್ರ ಶೆಟ್ಟಿ ಕುಡ್ತಿಮಾರುಗುತ್ತು ಮಾಹಿತಿ ನೀಡಿದ್ದಾರೆ. ಸೋಮವಾರ ಸುರತ್ಕಲ್‌ ಖಾಸಗಿ ಹೋಟೆಲ್‌ವೊಂದರಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ನೂರಾರು ವರ್ಷಗಳ ಹಿಂದಿನಿಂದ ನಡೆದುಬಂದಿದ್ದ ಬೊಳ್ಳಾರಗೋಳಿ ಪಂಚ ದೈವಗಳ ನೇಮೋತ್ಸವವು ಕಾರಣಾಂತರಗಳಿಂದ ನಿಂತಿತ್ತು. ಇತ್ತೀಚೆಗೆ ದೈವಗಳ ಸೂಚನೆಯ ಮೇರೆಗೆ 63ವರ್ಷಗಳ ಬಳಿಕ ಪಂಚ ದೈವಗಳ ನೇಮೋತ್ಸವ ನಡೆಯುತ್ತಿದೆ ಎಂದ ಅವರು ವೇದಮೂರ್ತಿ ಶ್ರೀ ಮೂಡಿತ್ತಾಯ ಹಯವದನ ಭಟ್‌ ಕೈಯ್ಯೂರು ಇವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ವಿಧಿ ವಿಧಾನಗಳು ಜರುಗಲಿದ್ದು, ಗಡಿಪ್ರಧಾನರಾದ ಮಿತ್ತೋಡಿ ಅರಸುಮನೆ ಅಶೋಕ ಪೈವ ಹೆಗ್ಡೆ ಕುತ್ತೆತ್ತೂರು - ಸೂರಿಂಜೆ ಎಲ್ಲಾ ಮನೆತನದವರು ಹಾಗೂ ಗ್ರಾಮಸ್ಥರು, ತಿಬಾರಗುತ್ತಿನಾರ್‌ ಊಮೇಶ್‌ ಎನ್‌ .ಶೆಟ್ಟಿ ಹಾಘೂ ಶಿಬರೂರು ಕೊಡೆಮಣಿತ್ತಾಯ ದೈವಸ್ಥಾನಕ್ಕೆ ಸಂಬಂಧಪಟ್ಟ ಗುತ್ತುಮನೆ ತನದವರು ಮತ್ತು ದೇಲಂತಬೆಟ್ಟು ಗ್ರಾಮಸ್ತರು, ಪಂಜದಗುತ್ತು ಮನೆತನ ಹಾಗೂ ಎಲ್ಲಾ ವರ್ಗಗಳ ಗುತ್ತು ಮನೆ ತನದವರು ಹಾಗೂ ಗ್ರಾಮಸ್ತರು ಹಾಗೂ ಬೋಳಾರಗುತ್ತು ಕುಟುಂಬಿಕರರು ಈ ಮಹತ್‌ ಕಾರ್ಯಕ್ಕೆ ಸಂಪೂರ್ಣ ಬೆಂಬಲ, ಸಹಕಾರ ನೀಡುತ್ತಿದ್ದಾರೆ ಎಂದು ಅವರು ನುಡಿದರು. ಎ 2ರಂದು ಸಂಜೆ 3 ಗಂಟೆಗೆ ಪೊನ್ನಗಿರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ ಹೊರೆಕಾಣಿಕೆ ಮೆರವಣಿಗೆ ನಡೆಯ ಲಿದೆ. ಎ.3ರಂದು ಸಂಜೆ 3 ಗಂಟೆಗೆ ಪಂಚ ದೈವಗಳ ಭಂಡಾರ ಆಗಮನವಾಗಲಿದ್ದು, ರಾತ್ರಿ 7ಗಂಟೆಗೆ ಪಂಚ ದೈವಗಳ ದರ್ಶನ ನಡೆಯಲಿವೆ. ಸಂಜೆ 5ರಿಂದ 7ರ ವರೆಗೆ ಶ್ರೀ ದೀನ್‌ ರಾಜ್‌ ಕಳವಾರು ಮತ್ತು ಶಿಷ್ಯವೃಂದ ದಿಂದ ಸಹಸ್ರ ಮಕ್ಕಳ ಕುಣಿತ ಭಜನಾ ಸಂಭ್ರಮ ನಡೆಯಲಿದೆ. ಎ.4ರಂದು ಬೆಳಿಗ್ಗೆ 10 ಗಂಟೆಗೆ ಶಿಬರೂರು ಶ್ರೀ ಉಳ್ಳಾಯ ದೈವದ ನೇಮೋತ್ಸವ, ಮಧ್ಯಾಹ್ನ ಗಂಟೆ 1 ರಿಂದ ಸಾರ್ವಜನಿಕ ಅನ್ನಸಂತರ್ಪಣೆ, ಸಂಜೆ 5ರಿಂದ 7ರವರೆಗೆ ಪೊನ್ನಗಿರಿ ಶ್ರೀ ವಾಶುದೇವ ಭಜನಾ ಮಂಡಳಿಯಿಂದ ಭಜನೆ ರಾತ್ರಿ, 7ರಿಂದ 8:30ರ ವರೆಗೆ ಧಾರ್ಮಿಕ ಕಾರ್ಯಕ್ರಮಗಳು, 8:30ರಿಂದ ಮೂಡುಬಿದಿರೆ ಆಳ್ವಾಸ್‌ ಸಾಂಸ್ಕೃತಿಕ ಪ್ರತಿಷ್ಠಾನದ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಲಾ ವೈಭವ ನಡೆಯಲಿದ್ದು, ರಾತ್ರಿ 10.30ರಿಂದ ಶಿಬರೂರು ಶ್ರೀ ಕೊಡಮಣಿತ್ತಾಯ ದೈವದ ನೇಮೋತ್ಸವ ನಡೆಯಲಿದೆ. ಎ.5ರಂದು ರಾತ್ರಿ 10:30ರಿಂದ ಜಂತಬೆಟ್ಟು ಶ್ರೀ ಬಂಟ-ಸಾರಾಳ ಧೂಮಾವತಿ ದೈವಗಳ ನೇಮೋತ್ಸವ ನಡೆಯಲಿದ್ದು, ಸಂಜೆ 6ರಿಂದ 8ರವರೆಗೆ ಸುದೇಶ್‌ ಹೊಸಬೆಟ್ಟು ಅವರ ಸಾರಥ್ಯದಲ್ಲಿ ಸುರತ್ಕಲ್‌ ಶಿವರಂಜಿನ ಬಳಗದಿಂದ ಭಜನೆ ನಡೆಯಲಿದ್ದು, ರಾತ್ರಿ 2ರಿಂದ ಶ್ರೀ ಕೊಡಪದ ಪಂಜುರ್ಲಿ ನೇಮೋತ್ಸವ ಜರುಗಲಿದೆ. ಎ.6ರಂದು ರಾತ್ರಿ 10:30ರಿಂದ ಕಲ್ಲಂಜ ಬಾಳಿಕೆ ಶ್ರೀ ಕಾಂತೇರಿ ಧೂಮಾವತಿ-ಬಂಟ ದೈವದ ನೇಮೋತ್ಸವ ನಡೆಯಲಿದ್ದು, ರಾತ್ರಿ 7ರಿಂದ ಪೊಳಲಿ ತತ್ವಮಸಿ ಬಳಗದವರಿಂದ ಭಜನೆ ನಡೆಯಲಿದೆ. ಎ.7ರಂದು ರಾತ್ರಿ 10:30ಕ್ಕೆ ಪಂಜ ಪುಂಡುಜಾರಿಗೆ ಶ್ರೀ ಜಾರಂದಾಯ -ಬಂಟ ದೈವಗಳ ನೇಮೋತ್ಸವ ನಡಯಲಿದ್ದು, ಸಂಜೆ 5ರಿಂದ 7ರವರೆಗೆ ಪಕ್ಷಿಕೆರೆ ದಾಸ ಪ್ರಿಯ ಬಳಗದಿಂದ ಭಜನೆ, ರಾತ್ರಿ 7ರಿಂದ 10ರವರೆಗೆ ಚಾ ಪರ್ಕ ಕಲಾವಿದೆರ್‌ ಕುಡ್ಲ ಅಭಿನಯಿಸುವ ತೆಳಿಕೆದ ಬೋಳ್ಳಿ ಡಾ. ದೇವದಾಸ್‌ ಕಾಪಿಕಾಡು ಸಾರಥ್ಯದಲ್ಲಿ ಯಾನೊರಿ ಬರೊಲಿಯಾ ತುಳು ಹಾಸ್ಯ ನಾಟಕ ಜರುಗಲಿದೆ ಎಂದು ಅವರು ಮಾಹಿತಿ ನೀಡಿದರು. ಕಾರ್ಯಕ್ರಮದ ಧಾರ್ಮಿಕ ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೂಲ್ಕಿ ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್‌ ವಹಿಸಲಿದ್ದಾರೆ. ಸ್ವಾಮೀಜಿಗಳು, ಚಲನಚಿತ್ರ ನಟ ರಿಷಬ್‌ ಶೆಟ್ಟಿ ಸೇರಿದಂತೆ ಹಲವು ಸಾಮಾಜಿಕ ರಾಜಕೀಯ, ಧಾರ್ಮಿಕ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು. ಪತ್ರಿಕಾಗೋಷ್ಠಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಬೊಳ್ಳಾರಗೋಳಿ ಪಂಚ ದೈವಗಳ ನೇಮೋತ್ಸವ ಸಮಿತಿ ಅಧ್ಯಕ್ಷರಾದ ರಾಜೇಂದ್ರ ಶೆಟ್ಟಿ ಕುಡ್ತಿಮಾರುಗುತ್ತು, ಗೌರವಾಧ್ಯಕ್ಷರಾದ ಅನಿಲ್ ಶೆಟ್ಟಿ ತೇವು ಸೂರಿಂಜೆ, ಯೋಗೀಶ್ ಶೆಟ್ಟಿ ಮುಂಬೈ, ಕಾರ್ಯಾಧ್ಯಕ್ಷರಾದ ಮನೋಹರ ಶೆಟ್ಟಿ ಸೂರಿಂಜೆ, ಪ್ರಧಾನ ಕಾರ್ಯದರ್ಶಿ ಜಯಪ್ರಕಾಶ್ ಸೂರಿಂಜೆ, ಸ್ವಾಗತ ಸಮಿತಿ ಸಂಚಾಲಕರಾದ ಮೋಹನ್ ದಾಸ್ ಶೆಟ್ಟಿ ಬೊಳ್ಳಾರುಗುತ್ತು, ಮಾಧ್ಯಮ ಸಮಿತಿ ಸಹಸಂಚಾಲಕ ಪುಷ್ಷರಾಜ್ ಶೆಟ್ಟಿ ಮಧ್ಯ ಉಪಸ್ಥಿತರಿದ್ದರು.

ವಾರ್ತಾ ಭಾರತಿ 30 Mar 2026 8:58 pm

ಇರಾನ್–ಇಸ್ರೇಲ್ ಯುದ್ಧ | ಕುವೈತ್ ನಲ್ಲಿ ಮೃತಪಟ್ಟ ಭಾರತೀಯ ಕಾರ್ಮಿಕನಿಗೆ ಸಂತಾಪ ಸೂಚಿಸಿದ ಭಾರತ ಸರಕಾರ

ಹೊಸದಿಲ್ಲಿ, ಮಾ. 30: ಇರಾನ್ ಕ್ಷಿಪಣಿ ದಾಳಿಯಲ್ಲಿ ಕುವೈತ್ ನಲ್ಲಿ ರವಿವಾರ ಭಾರತೀಯ ಕಾರ್ಮಿಕನೊಬ್ಬ ಮೃತಪಟ್ಟಿದ್ದು, ಭಾರತ ಸರಕಾರವು ಸಂತಾಪ ವ್ಯಕ್ತಪಡಿಸಿದೆ. ಕುವೈತ್ ನಲ್ಲಿನ ಭಾರತೀಯ ರಾಯಭಾರ ಕಚೇರಿ ಈ ಕುರಿತು ಪ್ರಕಟಣೆ ನೀಡಿದ್ದು, ಕುವೈತ್ ಪ್ರಾಧಿಕಾರಗಳೊಂದಿಗೆ ನಿಕಟ ಸಂಪರ್ಕದಲ್ಲಿದ್ದೇವೆ. ಮೃತರ ಕುಟುಂಬಕ್ಕೆ ಸಾಧ್ಯವಾದ ಎಲ್ಲ ನೆರವು ಮತ್ತು ಸಹಾಯವನ್ನು ಒದಗಿಸಲಾಗುವುದು ಎಂದು ತಿಳಿಸಿದೆ. ರವಿವಾರ ಕುವೈತ್ನ ವಿದ್ಯುಚ್ಛಕ್ತಿ ಹಾಗೂ ಜಲ ನಿರ್ಲವಣೀಕರಣ ಘಟಕದ ಮೇಲೆ ನಡೆದ ಇರಾನ್ ಕ್ಷಿಪಣಿ ದಾಳಿಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಈ ಕುರಿತು ಕುವೈತ್ ವಿದ್ಯುಚ್ಛಕ್ತಿ, ಜಲ ಮತ್ತು ನವೀಕೃತ ಇಂಧನ ಸಚಿವಾಲಯ ಪ್ರತಿಕ್ರಿಯಿಸಿ, ವಿದ್ಯುಚ್ಛಕ್ತಿ ಮತ್ತು ಜಲ ನಿರ್ಲವಣೀಕರಣ ಘಟಕದ ಸೇವಾ ಕಟ್ಟಡವೊಂದು ದಾಳಿಯಿಂದ ಹಾನಿಗೊಳಗಾಗಿದೆ ಎಂದು ತಿಳಿಸಿದೆ. ಈ ವಿಷಯವನ್ನು ಸರ್ಕಾರಿ ಸುದ್ದಿಸಂಸ್ಥೆ KUNA ವರದಿ ಮಾಡಿದೆ. ಇದು ಭೀಕರ ದಾಳಿ ಎಂದು ಅಧಿಕಾರಿಗಳು ವಿವರಿಸಿದ್ದು, ದಾಳಿ ನಡೆದಿರುವ ನಿಖರ ಘಟಕವನ್ನು ಇದುವರೆಗೆ ಪತ್ತೆಹಚ್ಚಲು ಸಾಧ್ಯವಾಗಿಲ್ಲ ಎಂದು ಹೇಳಿದ್ದಾರೆ.

ವಾರ್ತಾ ಭಾರತಿ 30 Mar 2026 8:57 pm

ಗುಡ್ ಫ್ರೈಡೇ, ಈಸ್ಟರ್ ಪ್ರಯುಕ್ತ ವಿಶೇಷ ರೈಲು ಸಂಚಾರ

ಬೆಂಗಳೂರು: ಗುಡ್ ಫ್ರೈಡೇ ಹಾಗೂ ಈಸ್ಟರ್ ಹಬ್ಬದ ಪ್ರಯುಕ್ತ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಯಂತ್ರಿಸಲು ನೈಋತ್ಯ ರೈಲ್ವೆಯು ಎಸ್‍ಎಸ್‍ಎಸ್ ಹುಬ್ಬಳ್ಳಿ ಮತ್ತು ಕೇರಳದ ಕೊಲ್ಲಂ ನಡುವೆ ಒಂದು ಟ್ರಿಪ್ ವಿಶೇಷ ರೈಲನ್ನು ಓಡಿಸಲಿದೆ. ರೈಲು ಸಂಖ್ಯೆ 07347 ಎಸ್‍ಎಸ್‍ಎಸ್ ಹುಬ್ಬಳ್ಳಿ-ಕೊಲ್ಲಂ ವಿಶೇಷ ಎಕ್ಸ್ ಪ್ರೆಸ್ ರೈಲು ಎ.2ರಂದು ಬೆಳಗ್ಗೆ 7:05ಕ್ಕೆ ಹುಬ್ಬಳ್ಳಿಯಿಂದ ಹೊರಟು, ಎ.3ರಂದು ಬೆಳಗ್ಗೆ 7 ಗಂಟೆಗೆ ಕೊಲ್ಲಂ ತಲುಪಲಿದೆ. ಮರುಪಯಣದಲ್ಲಿ, ರೈಲು ಸಂಖ್ಯೆ 07348 ಕೊಲ್ಲಂ-ಎಸ್‍ಎಸ್‍ಎಸ್ ಹುಬ್ಬಳ್ಳಿ ವಿಶೇಷ ಎಕ್ಸ್‍ಪ್ರೆಸ್ ರೈಲು ಎ.3ರಂದು ಬೆಳಗ್ಗೆ 10:45ಕ್ಕೆ ಕೊಲ್ಲಂನಿಂದ ಹೊರಡಲಿದ್ದು, ಎ.4ರಂದು ಬೆಳಗ್ಗೆ 10:40ಕ್ಕೆ ಹುಬ್ಬಳ್ಳಿ ಆಗಮಿಸಲಿದೆ. ಈ ವಿಶೇಷ ರೈಲು ಮಾರ್ಗಮಧ್ಯೆ ಎಸ್‍ಎಂಎಂ ಹಾವೇರಿ, ರಾಣೇಬೆನ್ನೂರು, ಹರಿಹರ, ದಾವಣಗೆರೆ, ಬೀರೂರು, ಅರಸೀಕೆರೆ, ತುಮಕೂರು, ಎಸ್‍ಎಂವಿಟಿ ಬೆಂಗಳೂರು, ಕೃಷ್ಣರಾಜಪುರಂ, ಬಂಗಾರಪೇಟೆ, ಕುಪ್ಪಂ, ಸೇಲಂ, ಈರೋಡ್, ತಿರುಪ್ಪೂರ್, ಪೆÇೀಡನೂರು, ಪಾಲಕ್ಕಾಡ್, ತ್ರಿಶೂರ್, ಆಲುವಾ, ಎರ್ನಾಕುಲಂ ಟೌನ್, ಕೊಟ್ಟಾಯಂ, ಚಂಗನಾಸೇರಿ, ತಿರುವಲ್ಲಾ, ಚೆಂಗನ್ನೂರ್, ಮಾವೇಲಿಕರ ಮತ್ತು ಕಾಯಂಕುಲಂ ನಿಲ್ದಾಣಗಳಲ್ಲಿ ನಿಲ್ಲಲಿದೆ. ಈ ವಿಶೇಷ ರೈಲು ಒಟ್ಟು 17 ಬೋಗಿಗಳನ್ನು ಹೊಂದಿರಲಿದೆ. ಇದರಲ್ಲಿ ಒಂದು ಎಸಿ 2-ಟೈರ್, ಮೂರು ಎಸಿ 3-ಟೈರ್, 7 ಸ್ಲೀಪರ್ ಕ್ಲಾಸ್, 4 ಸಾಮಾನ್ಯ ದ್ವಿತೀಯ ದರ್ಜೆ ಹಾಗೂ 2 ಎಸ್‍ಎಲ್‍ಆರ್/ಡಿ ಬೋಗಿಗಳು ಇರಲಿವೆ. ಬೆಂಗಳೂರು-ಮಡಗಾಂವ್ ನಡುವೆ ವಿಶೇಷ ರೈಲು ಸಂಚಾರ: ನೈಋತ್ಯ ರೈಲ್ವೆಯು ಯಶವಂತಪುರ, ಮಡಗಾಂವ್ ಮತ್ತು ಬೆಂಗಳೂರು ಕಂಟೋನ್ಮೆಂಟ್ ನಡುವೆ ವಿಶೇಷ ರೈಲುಗಳನ್ನು ಓಡಿಸಲು ನಿರ್ಧರಿಸಿದೆ. ರೈಲು ಸಂಖ್ಯೆ 06271 ಯಶವಂತಪುರ-ಮಡಗಾಂವ್ ವಿಶೇಷ ಎಕ್ಸ್‍ಪ್ರೆಸ್ ಎ.2ರಂದು ರಾತ್ರಿ 11.55ಕ್ಕೆ ಯಶವಂತಪುರದಿಂದ ಹೊರಟು, ಎ.3ರಂದು ಸಂಜೆ 5.30ಕ್ಕೆ ಮಡಗಾಂವ್ ತಲುಪಲಿದೆ. ಹಿಂದಿರುಗುವ ಪ್ರಯಾಣದಲ್ಲಿ, ರೈಲು ಸಂಖ್ಯೆ 06272 ಮಡಗಾಂವ್-ಬೆಂಗಳೂರು ಕಂಟೋನ್ಮೆಂಟ್ ವಿಶೇಷ ಎಕ್ಸ್‍ಪ್ರೆಸ್ ಎ.5ರಂದು ಬೆಳಗ್ಗೆ 11 ಗಂಟೆಗೆ ಮಡಗಾಂವ್ ನಿಂದ ಹೊರಡಲಿರುವ ಈ ರೈಲು, ಎ.6ರಂದು ಬೆಳಗಿನ ಜಾವ 5.20ಕ್ಕೆ ಬೆಂಗಳೂರು ಕಂಟೋನ್ಮೆಂಟ್ ತಲುಪಲಿದೆ. ಈ ವಿಶೇಷ ರೈಲುಗಳು ಮಾರ್ಗಮಧ್ಯೆ ಕುಣಿಗಲ್, ಚನ್ನರಾಯಪಟ್ಟಣ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರೋಡ್, ಕಬಕಪುತ್ತೂರು, ಬಂಟ್ವಾಳ, ಸುರತ್ಕಲ್, ಮುಲ್ಕಿ, ಉಡುಪಿ, ಬಾರ್ಕೂರು, ಕುಂದಾಪುರ, ಬೈಂದೂರು, ಭಟ್ಕಳ, ಮುರ್ಡೇಶ್ವರ, ಹೊನ್ನಾವರ, ಕುಮಟಾ, ಗೋಕರ್ಣ ರೋಡ್, ಅಂಕೋಲಾ, ಕಾರವಾರ ಮತ್ತು ಕಾಣಕೋಣ ನಿಲ್ದಾಣಗಳಲ್ಲಿ ರೈಲು ನಿಲ್ಲಲಿದೆ. ಹಿಂದಿರುಗುವ ಪ್ರಯಾಣದಲ್ಲಿ ರೈಲು ಸಂಖ್ಯೆ 06272 ಯಶವಂತಪುರ ನಿಲ್ದಾಣದಲ್ಲಿ ನಿಲುಗಡೆ ಇರುವುದಿಲ್ಲ. ಎಸ್‍ಎಂವಿಟಿ ಬೆಂಗಳೂರು ನಿಲ್ದಾಣದಲ್ಲಿ ರೈಲು ನಿಲ್ಲಲಿದೆ. ಈ ವಿಶೇಷ ರೈಲು ಒಟ್ಟು 19 ಬೋಗಿಗಳನ್ನು ಹೊಂದಿರಲಿದೆ. ಇದರಲ್ಲಿ ಎರಡು ಎಸಿ 2-ಟೈರ್, ಎರಡು ಎಸಿ 3-ಟೈರ್, 9 ಸ್ಲೀಪರ್ ಕ್ಲಾಸ್, 4 ಸಾಮಾನ್ಯ ದ್ವಿತೀಯ ದರ್ಜೆ ಹಾಗೂ 2 ಎಸ್‍ಎಲ್‍ಆರ್/ಡಿ ಬೋಗಿಗಳು ಇರಲಿವೆ ಎಂದು ಪ್ರಕಟಣೆ ತಿಳಿಸಿದೆ.

ವಾರ್ತಾ ಭಾರತಿ 30 Mar 2026 8:56 pm

ಮಹಿಳಾ ಸಬಲೀಕರಣದಿಂದ ಸುಸ್ಥಿರ ಸಮಾಜ: ಸಿಎ ಶಾಂತಾರಾಮ ಶೆಟ್ಟಿ

ಮಂಗಳೂರು , ಮಾ.30: ಮಹಿಳೆಯರಿಗೆ ಗೌರವ ನೀಡುವುದು ಕೇವಲ ಕರ್ತವ್ಯ ಅಲ್ಲ. ಅದು ನಮ್ಮ ಸಂಸ್ಕಾರ. ಮಹಿಳಾ ಸಬಲೀಕರಣವು ಸುಸ್ಥಿರ ಹಾಗೂ ಸಶಕ್ತ ಸಮಾಜ ನಿರ್ಮಾಣಕ್ಕೆ ಅಡಿಪಾಯವಾಗಿದೆ ಎಂದು ದ.ಕ.ಜಿಲ್ಲಾ ರೆಡ್‌ಕ್ರಾಸ್ ಸಮಿತಿಯ ಚೇರ್ಮನ್ ಸಿಎ ಶಾಂತಾರಾಮ ಶೆಟ್ಟಿ ಹೇಳಿದ್ದಾರೆ. ದ.ಕ.ಜಿಲ್ಲಾ ರೆಡ್‌ಕ್ರಾಸ್ ಸಮಿತಿ ವತಿಯಿಂದ ರೆಡ್‌ಕ್ರಾಸ್ ಶತಮಾನೋತ್ಸವ ಕಟ್ಟಡದ ಪ್ರೇರಣಾ ಸಭಾಂಗಣದಲ್ಲಿ ಸೋಮವಾರ ನಡೆದ ಮಹಿಳಾ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಎಳೆಯ ಮಕ್ಕಳ ಶಿಕ್ಷಣದ ಜತೆ ಮಾನವೀಯ ಸೇವೆಯಲ್ಲಿ ತೊಡಗಿರುವ ಅಂಗನವಾಡಿ ಶಿಕ್ಷಕಿಯರಿಗೆ ಆರೋಗ್ಯ ಶಿಬಿರ ಸಹಿತ ವಿವಿಧ ಸೌಲಭ್ಯ ಒದಗಿಸಲು ಜಿಲ್ಲಾ ರೆಡ್ಕ್ರಾಸ್ ಹೆಚ್ಚಿನ ಆದ್ಯತೆ ನೀಡಲಿದೆ ಎಂದು ಅವರು ತಿಳಿಸಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಉಸ್ಮಾನ್ ಕಾರ್ಯಕ್ರಮ ಉದ್ಘಾಟಿಸಿದರು. ಮಕ್ಕಳ ಅಭಿವೃದ್ಧಿ ಯೋಜನಾಧಿಕಾರಿ ಶ್ವೇತಾ.ಎನ್. ಮುಖ್ಯ ಅತಿಥಿಯಾಗಿದ್ದರು. ನಗರದ 50 ಅಂಗನವಾಡಿಗಳಿಗೆ ರೆಡ್‌ಕ್ರಾಸ್ ವತಿಯಿಂದ ಸಲಕರಣೆಗಳನ್ನು ವಿತರಿಸಲಾಯಿತು. ರೆಡ್‌ಕ್ರಾಸ್ ಜಿಲ್ಲಾ ಸಮಿತಿಯ ಖಜಾಂಜಿ ಗುರುದತ್ ನಾಯಕ್ ಉಪಸ್ಥಿತರಿದ್ದರು. ರೆಡ್‌ಕ್ರಾಸ್ ಜಿಲ್ಲಾ ಸಮಿತಿಯ ಉಪಾಧ್ಯಕ್ಷ ಡಾ.ಸಚ್ಚಿದಾನಂದ ರೈ ಸ್ವಾಗತಿಸಿ, ನಿರ್ದೇಶಕ ಪಿ.ಬಿ.ಹರೀಶ್ ರೈ ವಂದಿಸಿದರು. ಕಾರ್ಯದರ್ಶಿ ಕಿಶೋರ್‌ಚಂದ್ರ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.

ವಾರ್ತಾ ಭಾರತಿ 30 Mar 2026 8:55 pm

ಎಲ್ಲಿಯ ಪಿಂಕ್ ಸಿಟಿ? ಎಲ್ಲಿಯ ಗುವಾಹಟಿ! ರಾಜಸ್ಥಾನ ರಾಯಲ್ಸ್ ತವರಿನ 3 ಪಂದ್ಯ ಬಾರ್ಸಾಪರದಲ್ಲಿ ಆಡುತ್ತಿರುವುದೇಕೆ?

Rajasthan Royals In Guwahati- ಐಪಿಎಲ್ 2026ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಬೆಂಗಳೂರು, ರಾಯಪುರ) ಮತ್ತು ಪಂಜಾಬ್ ಕಿಂಗ್ಸ್ (ಮುಲ್ಲನ್‌ಪುರ, ಧರ್ಮಶಾಲಾ) ಜೊತೆಗೆ ಬಹು ಸ್ಥಳಗಳಲ್ಲಿ ಎರಡು ಕ್ರೀಡಾಂಗಣಗಳಲ್ಲಿ ತಮ್ಮ ತವರು ಪಂದ್ಯಗಳನ್ನು ಆಡುತ್ತಿರುವ ಮೂರನೇ ತಂಡ ರಾಜಸ್ಥಾನ ರಾಯಲ್ಸ್ . ಈ ಬಾರಿ ಆರ್ ಆರ್ ನ 3 ತವರಿನ ಪಂದ್ಯಗಳು ಗುವಾಹಟಿಯ ಬಾರ್ಸಾಪರ ಕ್ರೀಡಾಂಗಣದಲ್ಲಿ ನಡೆಯುತ್ತಿವೆ. ಫ್ರಾಂಚೈಸಿಯ ಅಧ್ಯಕ್ಷ ರಂಜಿತ್ ಬರ್ತಾಕೂರ್ ಅವರು ಅಸ್ಸಾಂನವರಾಗಿರುವುದೇ ಇದರ ಹಿಂದಿರುವ ದೊಡ್ಡ ಕಾರಣವಾಗಿದೆ. ಇನ್ನು ನಾಯಕ ರಿಯಾನ್ ಪರಾಗ್ ಅವರು ಸಹ ಅಸ್ಸಾಂನವರು ಎಂಬುದು ಗಮನಿಸಬೇಕಾದ ಸಂಗತಿಯಾಗಿದೆ.

ವಿಜಯ ಕರ್ನಾಟಕ 30 Mar 2026 8:53 pm

ಮತದಾರರು ಬಿಜೆಪಿಗೆ ಆಶೀರ್ವಾದ ನೀಡಿ ನಮ್ಮ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರನ್ನು ಗೆಲ್ಲಿಸಲಿದ್ದಾರೆ: ಬಿ.ವೈ. ವಿಜಯೇಂದ್ರ

ಬಾಗಲಕೋಟೆ: ಮುಖ್ಯಮಂತ್ರಿಯಾದಿಯಾಗಿ ಯಾರೇ ಇಲ್ಲಿ ಬಂದು ಬೀಡು ಬಿಟ್ಟರೂ ಮತದಾರರು ಬಿಜೆಪಿಗೆ ಆಶೀರ್ವಾದ ನೀಡಿ ನಮ್ಮ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರನ್ನು ಗೆಲ್ಲಿಸಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ಸಿನ ತಂತ್ರ, ಕುತಂತ್ರ ಯಾವುದೂ ನಡೆಯುವುದಿಲ್ಲ. ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಮತದಾರರ ಒಲವು ಬಿಜೆಪಿ ಪರವಾಗಿ ಹೆಚ್ಚಾಗುತ್ತಿದೆ. ಕಾರ್ಯಕರ್ತರು ಉತ್ಸಾಹದಲ್ಲಿದ್ದಾರೆ. ನಮ್ಮ ಅಭ್ಯರ್ಥಿ ಬೆಳಗ್ಗೆ 7ರಿಂದ ಮತಯಾಚನೆ ಮಾಡುತ್ತಿದ್ದಾರೆ. ವಾತಾವರಣ ಬಿಜೆಪಿ ಪರವಾಗಿದೆ ಎಂದು ಹೇಳಿದರು. ಬಾಗಲಕೋಟೆ ಮುಖ್ಯಮಂತ್ರಿಗಳಿಗೆ ರಾಜಕೀಯ ಪುನರ್ ಜನ್ಮ ಕೊಟ್ಟ ಜಿಲ್ಲೆ. ಅಂಥ ಜಿಲ್ಲೆಯನ್ನು ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ಸಿನವರು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ. ಹಾಗಾಗಿ ಅವರು ಇಲ್ಲಿ ಏನೇ ಭಾಷಣ ಮಾಡಿದರೂ ಜನರಿಗೆ ವಾಸ್ತವಿಕ ಸತ್ಯ ಅರ್ಥವಾಗಿದೆ. ವೀರಣ್ಣ ಚರಂತಿಮಠ್ ದೊಡ್ಡ ಅಂತರದಲ್ಲಿ ವಿಜಯ ಶಾಲಿಯಾಗುತ್ತಾರೆ ಎಂದು ಅವರು ತಿಳಿಸಿದರು. ಬಿಜೆಪಿಯಿಂದ ಉಚ್ಛಾಟಿತರಾಗಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಮಾಡುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ವಿಜಯೇಂದ್ರ, ಚರಂತಿಮಠ ಜನಾನುರಾಗಿ. ಯಾರ ವಿರೋಧವನ್ನೂ ಕಟ್ಟಿಕೊಂಡವರಲ್ಲ. ಕಾಂಗ್ರೆಸ್ ಪಕ್ಷದವರೂ ಚರಂತಿಮಠ ಗೆಲ್ಲಬೇಕೆಂದು ಬಯಸುತ್ತಿದ್ದಾರೆ. ಕಾಂಗ್ರೆಸ್ಸಿನವರೇ ಬಯಸುವಾಗ ಅವರು, ಇವರು ಬಯಸುವುದರಲ್ಲಿ ತಪ್ಪೇನಿಲ್ಲ ಎಂದು ನುಡಿದರು. ಸಂಬಳ ವಿಳಂಬ: ಹಿಂದೆ ಬಿಜೆಪಿ ಸರಕಾರ ಕೊಟ್ಟ ಕಾರ್ಯಕ್ರಮಗಳಿಗೆ ಇವತ್ತು ಗುದ್ದಲಿ ಪೂಜೆ ಆಗುತ್ತಿದೆ. ಯಾವುದೇ ರೀತಿ ಅಭಿವೃದ್ಧಿಗೆ ಇವರು ಹಣ ನೀಡಿಲ್ಲ. ಪೊಲೀಸ್ ಇಲಾಖೆ ಸಿಬ್ಬಂದಿ-ಅಧಿಕಾರಿಗಳಿಗೆ ಪ್ರತಿತಿಂಗಳು ಒಂದನೇ ತಾರೀಖಿನಂದು ಸಂಬಳ ಕೊಡಬೇಕು. ರಾಜ್ಯದ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಒಂದೊಂದು ತಿಂಗಳು ತಡ ಆಗುತ್ತಿದೆ ಎಂದು ವಿಜಯೇಂದ್ರ ಆಕ್ಷೇಪಿಸಿದರು. ಶಿವಮೊಗ್ಗ ಕುವೆಂಪು ವಿಶ್ವವಿದ್ಯಾನಿಲಯದ ಅತಿಥಿ ಉಪನ್ಯಾಸಕರಿಗೆ ಸಂಬಳ ಕೊಡದೇ 2 ತಿಂಗಳಾಗಿದೆ. ಬೇರೆ ಬೇರೆ ವಿವಿಗಳಲ್ಲೂ ಇದೇ ಪರಿಸ್ಥಿತಿ ಇದೆ. 17 ಬಜೆಟ್ ಮಂಡಿಸಿದ್ದಾಗಿ ಮುಖ್ಯಮಂತ್ರಿ ಹೇಳುತ್ತಾರೆ. ರಾಜ್ಯದ ಹಣಕಾಸು ಪರಿಸ್ಥಿತಿ ಬಗ್ಗೆ ಅವರು ಶ್ವೇತಪತ್ರ ಹೊರಡಿಸಲಿ ಎಂದು ವಿಜಯೇಂದ್ರ ಆಗ್ರಹಿಸಿದರು.

ವಾರ್ತಾ ಭಾರತಿ 30 Mar 2026 8:51 pm

ಮಧ್ಯಂತರ ಜಾಮೀನು ಮುಗಿದ ಬಳಿಕ ಜೈಲಿಗೆ ವಾಪಸ್ಸಾದ ಶರ್ಜೀಲ್ ಇಮಾಮ್

ಹೊಸದಿಲ್ಲಿ, ಮಾ. 30: ದಿಲ್ಲಿ ಗಲಭೆ ಪ್ರಕರಣದ ಆರೋಪಿ ಶರ್ಜೀಲ್ ಇಮಾಮ್ ಅವರು 10 ದಿನಗಳ ಮಧ್ಯಂತರ ಜಾಮೀನು ಅವಧಿ ಮುಗಿದ ಹಿನ್ನೆಲೆಯಲ್ಲಿ ತಿಹಾರ್ ಜೈಲಿಗೆ ವಾಪಸ್ಸಾದರು. ಮಧ್ಯಂತರ ಜಾಮೀನು ಅವಧಿಯಲ್ಲಿ ಈದ್ ಹಬ್ಬವನ್ನು ಕುಟುಂಬದವರೊಂದಿಗೆ ಕಳೆದ ಅವರು, ಅವಧಿ ಪೂರ್ಣಗೊಂಡ ಬಳಿಕ ನ್ಯಾಯಾಲಯದ ನಿರ್ದೇಶನದಂತೆ ಜೈಲಿಗೆ ಹಿಂತಿರುಗಿದರು. ಈ ಕುರಿತು ಪ್ರತಿಕ್ರಿಯಿಸಿದ ಅವರ ಚಿಕ್ಕಪ್ಪ, “ಈದ್ ಹಬ್ಬದ ಶುಭ ಸಂದರ್ಭದಲ್ಲಿ ಅವರು ಮನೆಗೆ ಬಂದಿದ್ದು ನಮಗೆ ತುಂಬಾ ಸಂತೋಷ ತಂದಿತು. ನ್ಯಾಯಾಲಯಕ್ಕೆ ನನ್ನ ಕೃತಜ್ಞತೆಗಳು. ನ್ಯಾಯಾಲಯ ಯಾವುದೇ ತೀರ್ಮಾನ ಕೈಗೊಂಡರೂ ಅದನ್ನು ನಾವು ಸ್ವೀಕರಿಸುತ್ತೇವೆ. ಅವರು ನಿರಪರಾಧಿ ಎಂಬುದನ್ನು ನಾನು ಹೇಳಲು ಬಯಸುತ್ತೇನೆ,” ಎಂದು ತಿಳಿಸಿದ್ದಾರೆ. VIDEO | Jehanabad: Delhi riots accused Sharjeel Imam is returning to Tihar Jail to surrender after his 10-day interim bail ends. His uncle said, We were all very happy that he returned on the auspicious day of Eid. I was also like to express my gratitude to the court. Whatever… pic.twitter.com/1zcHw8M9aD — Press Trust of India (@PTI_News) March 30, 2026

ವಾರ್ತಾ ಭಾರತಿ 30 Mar 2026 8:50 pm

ಎನ್‌ಎಬಿಎಲ್ ಮಾನ್ಯತೆ ಕುರಿತು ಜಾಗೃತಿ ಕಾರ್ಯಕ್ರಮ

ಉಡುಪಿ, ಮಾ.30: ಕುತ್ಪಾಡಿ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ವತಿಯಿಂದ ನ್ಯಾಷನಲ್ ಅಕ್ರೆಡಿಟೇಷನ್ ಬೋಡರ್ ಫಾರ್ ಟೆಸ್ಟಿಂಗ್ ಅಂಡ್ ಕ್ಯಾಲಿಬ್ರೇಶನ್ ಸಹಯೋಗದಲ್ಲಿ ಎನ್.ಎ.ಬಿ.ಎಲ್. ಮಾನ್ಯತೆ ಕುರಿತು ಜಾಗೃತಿ ಕಾರ್ಯಕ್ರಮವನ್ನು ಇತ್ತೀಚೆಗೆ ಆಯೋಜಿಸಲಾಗಿತ್ತು. ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಡಾ.ಮಮತಾ ಕೆ.ವಿ. ಆರೋಗ್ಯ ಸೇವೆಯ ಗುಣಮಟ್ಟ ಮತ್ತು ಪ್ರಯೋಗಾಲಯದ ಮಾನದಂಡ ಗಳನ್ನು ಉತ್ತಮಗೊಳಿಸುವಲ್ಲಿ ಅಕ್ರೆಡಿಟೇಷನ್ /ಮಾನ್ಯತೆಯ ಮಹತ್ವವನ್ನು ವಿವರಿಸಿದರು. ವೈದ್ಯಕೀಯ ಅಧೀಕ್ಷಕ ಡಾ.ಜಯಕೃಷ್ಣ ನಾಯಕ್, ಉಪ ಪ್ರಾಂಶುಪಾಲ ಡಾ.ನಾಗರಾಜ ಎಸ್., ಸಹ ಡೀನ್ ಡಾ.ರಾಜಲಕ್ಷ್ಮಿ, ಹಾಸನ ಎಸ್‌ಡಿಎಂ ಸಿಎಎಚ್‌ನ ವೈದ್ಯಕೀಯ ಅಧೀಕ್ಷಕ ಡಾ.ಮುರುಳೀಧರ ಪೂಜಾರ್, ಎನ್.ಎ.ಬಿ.ಎಲ್. ಕ್ಯೂಸಿಐಯ ಸಂಯೋಜಕ ಸಂತೋಷ್ ಎಂ., ಕ್ಯೂಸಿಐ ತಜ್ಞ ಡಾ.ನಿತಿನ್ ಕುಮಾರ್ ಯು. ಉಪಸ್ಥಿತರಿದ್ದರು. ಎನ್‌ಎಬಿಎಲ್ ಸಂಯೋಜಕ ಡಾ.ನವೀನ್ಚಂದ್ರ ಸ್ವಾಗತಿಸಿದರು. ರೋಗನಿದಾನ ಹಾಗೂ ವಿಕೃತಿ ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಸದಾನಂದ ಭಟ್ ವಂದಿಸಿದರು. ಕೊನೆಯಲ್ಲಿ ಎನ್‌ಎಬಿಎಲ್ ಆನ್‌ಲೈನ್ ಅರ್ಜಿ ಪ್ರಕ್ರಿಯೆಯ ಪ್ರದರ್ಶನ ನಡೆಯಿತು. ಕಾರ್ಯಕ್ರಮದಲ್ಲಿ ಸುಮಾರು 50ರಷ್ಟು ಪ್ರಯೋಜನಾರ್ಥಿಗಳು ಹಾಗೂ ಪ್ರತಿನಿಧಿಗಳು ಭಾಗವಹಿಸಿದ್ದರು.

ವಾರ್ತಾ ಭಾರತಿ 30 Mar 2026 8:42 pm

ಕಲಬುರಗಿ| ನೀಲಹಳ್ಳಿಯಲ್ಲಿ ನೂತನ ಶಾಲಾ ಕೊಠಡಿಗಳ ಲೋಕಾರ್ಪಣೆ

ಸೇಡಂ: ಗ್ರಾಮೀಣ ಭಾಗದ ಸರಕಾರಿ ಶಾಲೆಗಳನ್ನು ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವಂತೆ ಹೈಟೆಕ್ ಆಗಿ ಅಭಿವೃದ್ಧಿಪಡಿಸುವುದು ಹಾಗೂ ನಮ್ಮ ಭಾಗದ ಮಕ್ಕಳಿಗೆ ಉದ್ಯೋಗಾಧಾರಿತ ತಾಂತ್ರಿಕ ಶಿಕ್ಷಣ ನೀಡುವುದು ಸರಕಾರದ ಸಂಕಲ್ಪವಾಗಿದೆ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಸಚಿವರಾದ ಡಾ.ಶರಣಪ್ರಕಾಶ್‌ ಪಾಟೀಲ್ ಹೇಳಿದರು. ತಾಲೂಕಿನ ನೀಲಹಳ್ಳಿ ಗ್ರಾಮದಲ್ಲಿ ಸರಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ನೂತನವಾಗಿ ನಿರ್ಮಿಸಿದ ಶಾಲಾ ಕೊಠಡಿಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಸಚಿವ ಡಾ.ಶರಣಪ್ರಕಾಶ್‌ ಪಾಟೀಲ್, ನೀಲಹಳ್ಳಿ ಗ್ರಾಮವು ಕೇವಲ ಪ್ರಾಥಮಿಕ ಶಿಕ್ಷಣಕ್ಕೆ ಸೀಮಿತವಾಗದೆ, ತಾಂತ್ರಿಕ ಶಿಕ್ಷಣದ ಕೇಂದ್ರವಾಗಲಿದೆ. ಈಗಾಗಲೇ ಇಲ್ಲಿ ಐಟಿಐ ಕಾಲೇಜು ಕಾರ್ಯನಿರ್ವಹಿಸುತ್ತಿದೆ. ಇದರ ಜೊತೆಗೆ ಸುಮಾರು 74 ಕೋಟಿ ರೂಪಾಯಿ ವೆಚ್ಚದಲ್ಲಿ ಅತ್ಯಾಧುನಿಕ ಜಿಟಿಟಿಸಿ ಡಿಪ್ಲೊಮಾ ಕಾಲೇಜು ನಿರ್ಮಾಣವಾಗುತ್ತಿದೆ. ಇದಕ್ಕಾಗಿ ಈಗಾಗಲೇ 5 ಎಕರೆ ಜಮೀನು ಮಂಜೂರಾಗಿದ್ದು, ಮುಂದಿನ ಒಂದು ತಿಂಗಳೊಳಗೆ ಕಟ್ಟಡ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಗುವುದು ಎಂದರು. ಕೃಷಿಕ ಸಮಾಜದ ರಾಜ್ಯ ಪ್ರತಿನಿಧಿ ಬಸವರಾಜ ಪಾಟೀಲ್‌ ಊಡಗಿ, ಗ್ಯಾರಂಟಿ ಅನುಷ್ಠಾನ ಸಮಿತಿ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಶರಣರೆಡ್ಡಿ ಪಾಟೀಲ್‌, ತಹಶೀಲ್ದಾರ್ ಶ್ರೀಯಾಂಕ್ ಧನಶ್ರೀ, ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ ಎಇಇ ವಿಶ್ವನಾಥ್, ಕೃಷಿ ಸಮಾಜದ ತಾಲೂಕಾಧ್ಯಕ್ಷ ಬಸವರಾಜ ರೇವಗೊಂಡ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ವಿಶ್ವನಾಥ್ ಪಾಟೀಲ್ ಬೋಮ್ನಳ್ಳಿ, ಜಗದೇಪ್ಪ ಪಾಟೀಲ್ ಕೋಂಕನಳ್ಳಿ, ಮಹೇಶ್ ಪಾಟೀಲ್ ತರನಳ್ಳಿ, ಸತೀಶ್ ಪೂಜಾರಿ, ರಾಮಯ್ಯ ಪೂಜಾರಿ, ಚನ್ನಬಸಪ್ಪ ಹಾಗರಗಿ, ಶ್ರೀನಿವಾಸ ಸಂಗಾವಿ, ಶರಣಪ್ಪ ಜಮಾದಾರ, ಶ್ರವಣಕುಮಾರ ಪಂತುಲು, ಮಂಜುನಾಥ ಸಾಹು, ಬಸವರಾಜ ಚಿಂತಾಮಣಿ, ರವಿ ಸಾಹು ಹಾಗೂ ಶ್ರೀನಿವಾಸ ಪ್ಯಾಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.  

ವಾರ್ತಾ ಭಾರತಿ 30 Mar 2026 8:41 pm

ದೇವರ ಸಾಮಿಪ್ಯವನ್ನು ಕಾಣಲು ತಪಸ್ಸು ಕಾಲ ಕ್ರೈಸ್ತರಿಗೆ ಮಾರ್ಗದರ್ಶಿ: ಬಿಷಪ್ ಜೆರಾಲ್ಡ್ ಲೋಬೊ

ಉಡುಪಿ, ಮಾ.30: ಪ್ರಾರ್ಥನೆ, ಉಪವಾಸ, ದಾನ ಧರ್ಮದ ಮೂಲಕ ದೇವರ ಸಾಮಿಪ್ಯವನ್ನು ಕಾಣಲು ತಪಸ್ಸು ಕಾಲ ಕ್ರೈಸ್ತರಿಗೆ ಮಾರ್ಗದರ್ಶಿ ಯಾಗಿದೆ ಎಂದು ಉಡುಪಿ ಕೆಥೊಲಿಕ ಧರ್ಮಪ್ರಾಂತ್ಯದ ಪ್ರೇಷಿತ ಆಡಳಿತಾಧಿಕಾರಿ ಅತಿ ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ ಹೇಳಿದ್ದಾರೆ. ಮಲ್ಪೆ ಯುಬಿಎಂ ಎಬನೇಜರ್ ಚರ್ಚಿನಲ್ಲಿ ರವಿವಾರ ಹೊಸಾನ್ನಾದಿಂದ ಶಿಲುಬೆಯವರೆಗೆ ಧ್ಯೇಯ ವಾಕ್ಯದೊಂದಿಗೆ ಆಯೋಜಿಸಲಾದ ಕ್ರೈಸ್ತ ಐಕ್ಯತಾ ಪ್ರಾರ್ಥನಾ ಕೂಟದಲ್ಲಿ ಭಾಗವಹಿಸಿ ಅವರು ಆಶೀರ್ವಚನ ನೀಡಿದರು. ಪವಿತ್ರ ವಾರದಲ್ಲಿ ಪ್ರಭು ಯೇಸುಕ್ರಿಸ್ತರ ಸಂಕಷ್ಟ, ಮರಣವನ್ನು ಧ್ಯಾನಿಸಲು ಕ್ರೈಸ್ತ ವಿಶ್ವಾಸಿಗಳು ಧ್ಯಾನಿಸುವ ವಿಶೇಷ ಸಮಯವಾಗಿದೆ. ನಮ್ಮ ಜೀವನದಲ್ಲಿ ಕಷ್ಟ, ಸಮಸ್ಯೆಗಳ ಶಿಲುಬೆಗಳನ್ನು ಹೊತ್ತು ಯೇಸು ಸ್ವಾಮಿ ತೋರಿದ ಹಾದಿಯಲ್ಲಿ ಸಾಗಲು ಪವಿತ್ರ ವಾರ ಇನ್ನಷ್ಟು ಸಹಕಾರಿಯಾಗಿದೆ. ಶಿಲುಬೆ ಮೂಲಕ ಲೋಕಕ್ಕೆ ರಕ್ಷಣೆ ತೋರಿದ ಯೇಸು ಸ್ವಾಮಿ ಪ್ರತಿಯೊಬ್ಬರನ್ನು ಹರಸಲಿ ಎಂದು ಅವರು ಹೇಳಿದರು. ಕ್ಯಾಂಪಸ್ ಕ್ರುಸೆಡ್ ಇಂಡಿಯಾ ಮಂಗಳೂರಿನ ಬ್ರದರ್ ರಮೇಶ್, ಸಂತೆಕಟ್ಟೆ ಮೌಂಟ್ ರೋಸರಿ ಚರ್ಚಿನ ಧರ್ಮಗುರು ವಂ.ಡಾ.ರೊಕ್ ಡಿಸೋಜ ದೇವರ ವಾಕ್ಯದ ಮೇಲೆ ಪ್ರಭೋಧನೆ ನೀಡಿದರು. ಯುಬಿಎಂ ಕ್ರಿಸ್ತ ಕಾರುಣ್ಯ ಚರ್ಚ್ ಕಟಪಾಡಿ, ಯುಬಿಎಂ ಜುಬಿಲಿ ಚರ್ಚ್ ಉಡುಪಿ, ಯುಬಿಎಂ ಕ್ರಿಸ್ತ ಕೃಪಾ ಮಣಿಪಾಲ, ಯುಬಿಎಂ ಕ್ರಿಸ್ತ ಶಾಂತಿ ಚರ್ಚ್ ಉದ್ಯಾವರ, ಸಿಎಸ್ ಐ ಎಬನೇಜರ್ ಮಲ್ಪೆ, ಸಂತ ಅನ್ನಮ್ಮ ಚರ್ಚ್ ತೊಟ್ಟಂ ಗಾಯನ ತಂಡಗಳಿಂದ ಸ್ತುತಿಗಾಯನ ಜರಗಿತು. ಕಥೊಲಿಕ್ ಧರ್ಮಗುರುಗಳಾದ ವಂ.ಫರ್ಡಿನಾಂಡ್ ಗೊನ್ಸಾಲ್ವಿಸ್, ವಂ.ವಿನ್ಸೆಂಟ್ ಕ್ರಾಸ್ತಾ, ವಂ.ವಿಲ್ಸನ್ ಡಿಸೋಜ, ವಂ.ಅಶ್ವಿನ್ ಆರಾನ್ಹಾ, ಯುಬಿಎಂ ಚರ್ಚಿನ ವಂ.ಸಂತೋಷ್ ಎ., ವಂ.ಸ್ಟೀಫನ್ ಬಂಡಿ, ವಂ.ರಮೇಶ್ ಮುದಲಗಿ, ವಂ.ಮನೋಜ್ ವೈ.ಎಸ್., ವಂ.ವಿನಯ್ ಸಂದೇಶ್, ಸಭಾ ಹಿರಿಯರಾದ ಡೇನಿಯಲ್ ಜೆ.ಅಮ್ಮನ್ನ, ಸ್ಟಾರ್ವಿನ್ ಅಮ್ಮನ್ನ, ಮೋಹನ್ ಪಿ.ಅಮ್ಮನ್ನ, ಆಸ್ಟಿನ್ ಸಿಲ್ವಾ, ಸದಾನಂದ ಜತ್ತನ್ನ, ರೆನೋಲ್ಡ್ ಸಿ.ಜತ್ತನ್ನ, ಜನರಲ್ ಫಂಡ್ ಸಮಿತಿಯ ಎಡ್ವಿನ್ ಜತ್ತನ್ನ, ಸ್ಯಾಮುವೆಲ್ ಡಿ ಕರ್ಕಡಾ, ಬೆಂಜಮಿನ್ ಜಯಕರ ಮಾಬೆನ್, ನಿಕ್ಷನ್ ಡಿ ಪಾಂಗಾಳಾನ್ನ, ರೆನೋಲ್ಡ್ ಪ್ರವೀಣ್ ಕೋಟ್ಯಾನ್ ಉಪಸ್ಥಿತರಿದ್ದರು. ಕುಮಾರ್ ಸಾಲಿನ್ಸ್ ಸ್ವಾಗತಿಸಿದರು. ಜುವೆಲ್ ವಂದಿಸಿದರು. ತೊಟ್ಟಂ ಚರ್ಚಿನ ಧರ್ಮಗುರು ವಂ.ಡೆನಿಸ್ ಡೆಸಾ ಕಾರ್ಯಕ್ರಮ ನಿರೂಪಿಸಿದರು.

ವಾರ್ತಾ ಭಾರತಿ 30 Mar 2026 8:39 pm

ಭಾರತದ ಖಾಸಗಿ ಬಾಹ್ಯಾಕಾಶ ಕಂಪೆನಿಯ ‘ಅಗಸ್ತ್ಯ-1’ ಬಗ್ಗೆ ನಿಮಗೆ ಗೊತ್ತೇ?

ಇಸ್ರೋ ಸಂಸ್ಥೆಯಲ್ಲಿ ಕೆಲಸ ಮಾಡಿದ ಪರಿಣತ ವಿಜ್ಞಾನಿಗಳು ಗುಜರಾತ್‌ ನಲ್ಲಿ ಖಾಸಗಿ ಬಾಹ್ಯಾಕಾಶ ಕೇಂದ್ರವೊಂದನ್ನು ಸ್ಥಾಪಿಸುತ್ತಿದ್ದಾರೆ. ಗುಜರಾತ್‌ ನ ಸೂರತ್ ಮೂಲದ ಸ್ಟಾರ್ಟಪ್ ಕಂಪನಿ ಭಾರತ್ ಸ್ಪೇಸ್ ವೆಹಿಕಲ್ (ಬಿಎಸ್ವಿ) ಭಾರತದ ಖಾಸಗಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಸುದ್ದಿಯಲ್ಲಿದೆ. ಈ ಸ್ಟಾರ್ಟಪ್ ಕಂಪೆನಿ ದೇಶದ ಅತ್ಯಂತ ವಿಶ್ವಾಸಾರ್ಹ ಖಾಸಗಿ ರಾಕೆಟ್ ನಿರ್ಮಿಸುತ್ತಿದೆ. ಕಂಪನಿಯ ಆರಂಭಿಕ ತಂಡದಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯಲ್ಲಿ 70 ವರ್ಷಗಳಿಗೂ ಹೆಚ್ಚು ಒಟ್ಟು ಅನುಭವ ಹೊಂದಿರುವ ಪರಿಣತರು ಕಾರ್ಯನಿರ್ವಹಿಸುತ್ತಿದ್ದಾರೆ. ಬಿಎಸ್ವಿ ಇದೀಗ ಎರಡು LOX/RP-1 (ದ್ರವ ಆಮ್ಲಜನಕ ಮತ್ತು ಸೀಮೆಎಣ್ಣೆ) ಎಂಜಿನ್‌ ಗಳಿಂದ ಶಕ್ತಿ ಪಡೆದ ‘ಅಗಸ್ತ್ಯ-1’ ಎನ್ನುವ ಎರಡು ಹಂತಗಳ ವಿಸ್ತರಿಸಬಹುದಾದ ರಾಕೆಟ್ ನಿರ್ಮಿಸುತ್ತಿದೆ. ಇದರ ಮೂಲಕ ಬಾಹ್ಯಾಕಾಶಕ್ಕೆ ಅಗ್ಗದ ದರದಲ್ಲಿ ಪ್ರವೇಶ ಒದಗಿಸುವ ವಿಶ್ವಾಸಾರ್ಹ ರಾಕೆಟ್ ವಿನ್ಯಾಸಗೊಳ್ಳುತ್ತಿದೆ. 28 ಮೀಟರ್ ಎತ್ತರದ ಈ ಸ್ಮಾಲ್-ಲಿಫ್ಟ್ ವೆಹಿಕಲ್ (ಕಡಿಮೆ ಭಾರ ಹೊರುವ ರಾಕೆಟ್) ಸಣ್ಣ ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಉದ್ದೇಶ ಹೊಂದಿದೆ. ಇದು 500 ಕೆಜಿ ವರೆಗೆ ಸನ್-ಸಿಂಕ್ರೊನಸ್ ಪೋಲಾರ್ ಆರ್ಬಿಟ್ (SSPO) ಮತ್ತು 800 ಕೆಜಿ ವರೆಗೆ ಕಡಿಮೆ ಇನ್ಕ್ಲಿನೇಶನ್ ಲೋ ಅರ್ತ್ ಆರ್ಬಿಟ್ (LEO)ಗೆ ಉಪಗ್ರಹಗಳನ್ನು ಕಳುಹಿಸುವ ಸಾಮರ್ಥ್ಯ ಹೊಂದಿದೆ. ದ್ರವ ಇಂಧನದಿಂದ ಚಾಲಿತ ‘ಅಗಸ್ತ್ಯ-1’ ಇಸ್ರೋದ ಎಸ್‌ಎಸ್‌ಎಲ್‌ವಿ ಸೇರಿದಂತೆ ಭಾರತದ ಬಹುತೇಕ ಸಣ್ಣ ಉಪಗ್ರಹ ರಾಕೆಟ್‌ಗಳು ಘನ ಪ್ರೊಪೆಲ್ಲೆಂಟ್‌ಗಳಿಂದ ಚಾಲನೆಗೊಳ್ಳುತ್ತವೆ. ಆದರೆ ಬಿಎಸ್ವಿ ದ್ರವ ಬೈಪ್ರೊಪೆಲ್ಲೆಂಟ್ ಎಂಜಿನ್ ಬಳಸುತ್ತಿದೆ. ಘನ ಮೋಟಾರ್‌ಗಳಲ್ಲಿ ಉಡಾವಣೆಯ ದಿನವೇ ಅದರ ಸಾಮರ್ಥ್ಯ ಪರೀಕ್ಷೆಯಾಗುತ್ತದೆ; ಆದರೆ ದ್ರವ ಪ್ರೊಪೆಲ್ಲೆಂಟ್ ಎಂಜಿನ್‌ಗಳನ್ನು ಮುಂಚಿತವಾಗಿ ಪರೀಕ್ಷಿಸಲು ಸಾಧ್ಯ. ದ್ರವ ಎಂಜಿನ್ ಹೊಂದಿರುವ ಬಿಎಸ್ವಿ 10ರಿಂದ 40 ಸೆಕೆಂಡುಗಳ ಹಾಟ್-ಫೈರ್ ಅಕ್ಸೆಪ್ಟೆನ್ಸ್ ಪರೀಕ್ಷೆಗೆ ದ್ವಿತೀಯ ಹಂತದ ಎಂಜಿನ್ ಹೊಂದಿದೆ. ಮೊದಲ ಹಂತದ ಎಂಜಿನ್‌ನ್ನು 3–4 ಸೆಕೆಂಡುಗಳ ಉಡಾವಣೆಗೆ ಮುನ್ನ ಹಾಟ್-ಫೈರ್ ಪರೀಕ್ಷೆಗೆ ಒಳಪಡಿಸಬಹುದು. ‘ಅಗಸ್ತ್ಯ-1’ ನಿರ್ಮಾಣದ ಹಿಂದೆ ಯಾರು? ಸ್ಥಾಪಕ ತಂಡದಲ್ಲಿ ಇಸ್ರೋದ ಲಿಕ್ವಿಡ್ ಪ್ರೊಪಲ್ಷನ್ ಸಿಸ್ಟಮ್ಸ್ ಸೆಂಟರ್ (ಎಲ್ಪಿಎಸ್ಸಿ) ಮಾಜಿ ನಿರ್ದೇಶಕ ಡಾ. ಎನ್. ವೇದಾಚಲಂ ಇದ್ದಾರೆ. ಅವರು ಭಾರತದ ಮೊದಲ ಕ್ರಯೋಜೆನಿಕ್ ಎಂಜಿನ್ ಅನ್ನು 1000 ಸೆಕೆಂಡುಗಳ ಕಾಲ ಯಶಸ್ವಿಯಾಗಿ ಪರೀಕ್ಷಿಸಿದ ತಂಡದ ನೇತೃತ್ವ ವಹಿಸಿದ್ದರು. ಪದ್ಮಶ್ರೀ ಪುರಸ್ಕೃತರಾದ ಅವರು ಡಿಆರ್‌ಡಿಓ ಮತ್ತು ರಕ್ಷಣಾ ಸಚಿವಾಲಯದ ಸಲಹೆಗಾರರೂ ಆಗಿದ್ದಾರೆ. ಸ್ಟಾರ್ಟಪ್‌ ನ ಸಹ-ಸಂಸ್ಥಾಪಕ ಹಾಗೂ ಸಿಟಿಒ ಎಸ್.ವಿ. ಶರ್ಮಾ, ವಿಕ್ರಂ ಸಾರಾಭಾಯಿ ಬಾಹ್ಯಾಕಾಶ ಕೇಂದ್ರದಲ್ಲಿ ಸ್ಟ್ರಕ್ಚರಲ್ ಎಂಜಿನಿಯರಿಂಗ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಅವರು ಎಸ್‌ಎಲ್‌ವಿ-3 ಉಡಾವಣೆ ಸಂದರ್ಭ ಡಾ. ಎಪಿಜೆ ಅಬ್ದುಲ್ ಕಲಾಂ ಅವರ ಅಡಿಯಲ್ಲಿ ಕೆಲಸ ಮಾಡಿದ್ದರು. ಅಲ್ಲದೆ, ಎಎಸ್‌ಎಲ್‌ವಿ, ಪಿಎಸ್‌ಎಲ್‌ವಿ, ಜಿಎಸ್‌ಎಲ್‌ವಿ ಹಾಗೂ ಜಿಎಸ್‌ಎಲ್‌ವಿ ಎಂಕೆ-III ಕಾರ್ಯಕ್ರಮಗಳಲ್ಲೂ ಪಾಲ್ಗೊಂಡಿದ್ದರು. ಸಿಒಒ ಹಾಗೂ ಸಿಎಫ್ಒ ಭವಿನ್ ಪಟೇಲ್ ಐಐಟಿ ಕಾನ್ಪುರದ ಏರೋಸ್ಪೇಸ್ ಎಂಜಿನಿಯರ್ ಆಗಿದ್ದು, ಎಎಸ್‌ಎಲ್‌ವಿ ಮತ್ತು ಪಿಎಸ್‌ಎಲ್‌ವಿ ಉಡಾವಣೆಗಳಲ್ಲಿ ಕೊಡುಗೆ ನೀಡಿದ್ದಾರೆ. ಗುಜರಾತ್ ಭಾರತದ ತೃತೀಯ ಉಡಾವಣಾ ಕೇಂದ್ರವಾಗುವುದೇ? ಗುಜರಾತ್‌ ನ ಗಿರ್ ಸೋಮನಾಥ್ ಜಿಲ್ಲೆಯ ಕೋಡಿನಾರ್ ಸಮೀಪ ಬಿಎಸ್ವಿಯ ಉಡಾವಣಾ ಸಂಕೀರ್ಣವಿದೆ. ದಿಯು ಮತ್ತು ಕೋಡಿನಾರ್ ನಡುವಿನ ಕರಾವಳಿ ಪ್ರದೇಶವು ಮುಕ್ತ ಸಾಗರ ಪ್ರವೇಶ ಹಾಗೂ ವಿಶೇಷ ಉಪಗ್ರಹ ಪಥಗಳಿಗೆ ಅನುಕೂಲಕರ ಉಡಾವಣಾ ಕಾರಿಡಾರ್‌ಗಳನ್ನು ಒದಗಿಸುತ್ತದೆ. ಇಸ್ರೋ ತಮಿಳುನಾಡಿನ ಕುಲಸೇಕರಪಟ್ಟಿಣಂ ಅನ್ನು ಆಯ್ಕೆ ಮಾಡುವ ಮೊದಲು ಈ ಪ್ರದೇಶದ ಪರಿವೀಕ್ಷಣೆ ನಡೆಸಿತ್ತು.

ವಾರ್ತಾ ಭಾರತಿ 30 Mar 2026 8:37 pm

Jharkhand | ರಾಮನವಮಿ ಮೆರವಣಿಗೆಗಳಲ್ಲಿ ಇಬ್ಬರ ಹತ್ಯೆ

ರಾಂಚಿ, ಮಾ.30: ಜಾರ್ಖಂಡ್‌ನ ಹಜಾರಿಬಾಗ್ ಜಿಲ್ಲೆಯಲ್ಲಿ ಪ್ರತ್ಯೇಕ ರಾಮನವಮಿ ಮೆರವಣಿಗೆಗಳಲ್ಲಿ 21 ವರ್ಷದ ಇಬ್ಬರು ಯುವಕರನ್ನು ಕೊಚ್ಚಿ ಹತ್ಯೆಗೈಯಲಾಗಿದೆ. ಈ ಎರಡೂ ಘಟನೆಗಳು ಶನಿವಾರ ಮಧ್ಯರಾತ್ರಿಯ ಸುಮಾರಿಗೆ ಝಂಡಾ ಚೌಕ್‌ ನಲ್ಲಿ ಸಂಭವಿಸಿವೆ. ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಯುವಕರು ಬಳಿಕ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದು, ಈವರೆಗೆ ಯಾರನ್ನೂ ಬಂಧಿಸಲಾಗಿಲ್ಲ ಎಂದು ಪೋಲಿಸರು ತಿಳಿಸಿದ್ದಾರೆ. ಮೃತರನ್ನು ಸಿಲ್ವಾರ್ ಗ್ರಾಮದ ಪ್ರಿನ್ಸ್ ಕುಮಾರ್ ಮತ್ತು ಬಡಾಬಜಾರ್ ಗ್ವಾಲ್ಟೋಲಿ ನಿವಾಸಿ ಅಭಿಷೇಕ್ ಕುಮಾರ್ ಎಂದು ಗುರುತಿಸಲಾಗಿದೆ. ನಗರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಧಾರ್ಮಿಕ ಮೆರವಣಿಗೆಗಳಲ್ಲಿ ಭಾಗವಹಿಸಿದ್ದಾಗ ಅವರ ಮೇಲೆ ದಾಳಿ ನಡೆದಿದೆ. ಪ್ರಿನ್ಸ್ ಮೇಲೆ ಹರಿತವಾದ ಆಯುಧದಿಂದ ದಾಳಿ ನಡೆಸಲಾಗಿದ್ದು, ತೀವ್ರವಾಗಿ ಗಾಯಗೊಂಡಿದ್ದ ಆತ ಬಳಿಕ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಅದೇ ಸ್ಥಳದಲ್ಲಿ ಇನ್ನೊಂದು ಧಾರ್ಮಿಕ ಮೆರವಣಿಗೆ ಹಾದುಹೋಗುತ್ತಿದ್ದಾಗ ಅಪರಿಚಿತ ದುಷ್ಕರ್ಮಿಯೋರ್ವ ಅಭಿಷೇಕ ಕುಮಾರ್ ಹತ್ಯೆಗೈದಿದ್ದಾನೆ. ತೀವ್ರವಾಗಿ ಗಾಯಗೊಂಡಿದ್ದ ಆತನನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತಾದರೂ, ಮಾರ್ಗ ಮಧ್ಯೆಯೇ ಮೃತಪಟ್ಟಿದ್ದಾನೆ ಎಂದು ಪೋಲಿಸರು ತಿಳಿಸಿದ್ದಾರೆ. ಹತ್ಯೆಗಳ ಕುರಿತು ಪೋಲಿಸರು ತನಿಖೆ ನಡೆಸುತ್ತಿದ್ದು, ಈವರೆಗೆ ಯಾರನ್ನೂ ಬಂಧಿಸಲಾಗಿಲ್ಲ ಎಂದು ಸದರ್ ಉಪವಿಭಾಗೀಯ ಪೋಲಿಸ್ ಅಧಿಕಾರಿ ಅಮಿತ್ ಆನಂದ ತಿಳಿಸಿದ್ದಾರೆ.

ವಾರ್ತಾ ಭಾರತಿ 30 Mar 2026 8:21 pm

ಅಫಜಲಪುರ| ಬಿಎಸ್‌ಪಿ ಜಿಲ್ಲಾ ಉಪಾಧ್ಯಕ್ಷರಾಗಿ ಬಸವರಾಜ ಝಳಕಿ ನೇಮಕ

ಅಫಜಲಪುರ: ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬಿ.ಎಸ್.ಪಿ. ಪ್ರಗತಿ ಪರಿಶೀಲನಾ ಸಭೆಯು ಅಫಜಲಪುರ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ಡಾ. ಶಾಂತಮಲ್ಲ ಹೊನ್ನಂಗೂರ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ತಾಲೂಕಿನ ಬಳೂರ್ಗಿ ಗ್ರಾಮದ ಶಾಹು ನಗರದ ಬಸವರಾಜ ಝಳಕಿ ಅವರನ್ನು ಬಿ.ಎಸ್.ಪಿ. ಕಲಬುರಗಿ ಜಿಲ್ಲಾ ಉಪಾಧ್ಯಕ್ಷರಾಗಿ ಹಾಗೂ ಅಫಜಲಪುರ ತಾಲೂಕು ವಿಧಾನಸಭಾ ಕ್ಷೇತ್ರದ ಉಸ್ತುವಾರಿಯಾಗಿ ನೇಮಕ ಮಾಡಲಾಗಿದೆ ಎಂದು ರಾಜ್ಯ ಸಂಯೋಜಕರಾದ ಎಲ್.ಆರ್. ಬೊಸಲೆ ಅವರು ಅಧಿಕೃತವಾಗಿ ಘೋಷಿಸಿದರು. ಬಳಿಕ ಮಾತನಾಡಿದ ಬಸವರಾಜ ಝಳಕಿ, “ಪಕ್ಷವು ನನ್ನ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ನಾನು ಕೃತಜ್ಞನು. ಅಫಜಲಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿ.ಎಸ್.ಪಿ. ಪಕ್ಷವನ್ನು ಬಲಪಡಿಸುವುದಕ್ಕೆ ಸಮರ್ಪಿತವಾಗಿ ಕೆಲಸ ಮಾಡುತ್ತೇನೆ. ಗ್ರಾಮ ಮಟ್ಟದಿಂದ ಸಂಘಟನೆ ಶಕ್ತಿಯನ್ನು ಹೆಚ್ಚಿಸಿ, ಹಿಂದುಳಿದ ವರ್ಗಗಳ ಧ್ವನಿಯಾಗಿ ಕೆಲಸ ಮಾಡುವುದು ನನ್ನ ಪ್ರಮುಖ ಗುರಿಯಾಗಿದೆ. ಪಕ್ಷದ ಸಿದ್ಧಾಂತಗಳನ್ನು ಜನರಿಗೆ ತಲುಪಿಸುವಲ್ಲಿ ನಿಷ್ಠೆಯಿಂದ ಶ್ರಮಿಸುತ್ತೇನೆ” ಎಂದು ಹೇಳಿದರು. ಸಭೆಯಲ್ಲಿ ಬಿ.ಎಸ್.ಪಿ. ರಾಜ್ಯ ಪ್ರಧಾನ ಕಾರ್ಯದರ್ಶಿ ತಿಪ್ಪಣ್ಣ ಕಿನ್ನೂರ, ರಾಜ್ಯ ಕಾರ್ಯದರ್ಶಿ ಡಾ. ಅನೀಲ ಟೆಂಗಳಿ, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಮೈಲಾರಿ ಸೆಳ್ಳಗಿ, ಜಿಲ್ಲಾ ಅಧ್ಯಕ್ಷ ಶಿವಯೋಗಿ ಹಡಗಿಲ್ ಸೇರಿದಂತೆ ಮುಖಂಡರಾದ ಶರಣು ಹೊಸ್ಮನಿ, ಆನಂದ ನಿಲೂರ, ಪ್ರಕಾಶ ಆಲೇಗಾಂವ್, ಭೀಮಾಶಂಕರ ದಪ್ಪೇದಾರ, ಅಬ್ದುಲ್ ಚೌಧರಿ, ಜಗದೀಶ ಪಾಟೀಲ, ಭೀಮಾಶಂಕರ ಕರಜಗಿ, ಆನಂದ ಹಣಮನೂರ ಉಪಸ್ಥಿತರಿದ್ದರು.

ವಾರ್ತಾ ಭಾರತಿ 30 Mar 2026 8:18 pm

ರಾಜ್ಯಸಭೆ: ಒಬಿಸಿ ಮೀಸಲಾತಿ ದುರ್ಬಳಕೆ ಕುರಿತು ಬಿಜೆಪಿ ಸಂಸದನ ಹೇಳಿಕೆ ವಿರೋಧಿಸಿ ಪ್ರತಿಪಕ್ಷದ ಸಭಾತ್ಯಾಗ

ಹೊಸದಿಲ್ಲಿ, ಮಾ.30: ಧರ್ಮದ ಹೆಸರಿನಲ್ಲಿ ಒಬಿಸಿ ಮೀಸಲಾತಿಯ ದುರ್ಬಳಕೆಯಾಗುತ್ತಿದೆ ಎಂಬ ಬಿಜೆಪಿ ಸದಸ್ಯ ಕೆ. ಲಕ್ಷ್ಮಣ ಅವರ ಹೇಳಿಕೆಯನ್ನು ವಿರೋಧಿಸಿ ಸೋಮವಾರ ರಾಜ್ಯಸಭೆಯಲ್ಲಿ ಹಲವಾರು ಪ್ರತಿಪಕ್ಷಗಳು ಸಭಾತ್ಯಾಗ ನಡೆಸಿದವು. ಸಭಾತ್ಯಾಗವನ್ನು ಟೀಕಿಸಿದ ಸದನ ನಾಯಕ ಹಾಗೂ ಕೇಂದ್ರ ಸಚಿವ ಜೆ.ಪಿ. ನಡ್ಡಾ ಅವರು, ಕಾಂಗ್ರೆಸ್ ನಾಯಕತ್ವ ಮತ್ತು ಪ್ರತಿಪಕ್ಷಗಳ ಇಂಡಿಯಾ ಮೈತ್ರಿಕೂಟಕ್ಕೆ ಚರ್ಚೆಗಳಲ್ಲಿ ಆಸಕ್ತಿಯಿಲ್ಲ, ಪ್ರಜಾಸತ್ತಾತ್ಮಕ ಮೌಲ್ಯಗಳು ಅಥವಾ ಸಂವಿಧಾನದ ಬಗ್ಗೆ ಯಾವುದೇ ಗೌರವವಿಲ್ಲ ಎಂದು ಹೇಳಿದರು. ಶೂನ್ಯವೇಳೆಯಲ್ಲಿ ಒಬಿಸಿ ಮೀಸಲಾತಿ ವಿಷಯವನ್ನು ಪ್ರಸ್ತಾಪಿಸಿದ ಲಕ್ಷ್ಮಣ, ಧರ್ಮದ ಹೆಸರಿನಲ್ಲಿ ಅವರ ಕೋಟಾ ದುರ್ಬಳಕೆಯಾಗುತ್ತಿದೆ ಎಂದು ಹೇಳಿದರು. ಕೆಲವು ರಾಜ್ಯಗಳು ಮುಸ್ಲಿಮರಿಗೆ ಮೀಸಲಾತಿಗಳನ್ನು ಒದಗಿಸುತ್ತಿವೆ ಎಂದು ಅವರು ಹೇಳಿ, ಇಂತಹ ಧರ್ಮ-ಆಧಾರಿತ ಮೀಸಲಾತಿಗಳ ಸಮಗ್ರ ಪರಿಶೀಲನೆಗೆ ಆದೇಶಿಸುವಂತೆ ಸರಕಾರವನ್ನು ಕೋರಿದರು. ಲಕ್ಷ್ಮಣ ಮಾತನಾಡುತ್ತಿದ್ದಾಗ ಕೆಲವು ಪ್ರತಿಪಕ್ಷ ಸದಸ್ಯರು ಅವರ ಹೇಳಿಕೆಗಳಿಗೆ ಆಕ್ಷೇಪ ವ್ಯಕ್ತಪಡಿಸಿದರು.ಬಳಿಕ ಬಹುತೇಕ ಎಲ್ಲ ವಿರೋಧ ಪಕ್ಷಗಳು ಸಭಾತ್ಯಾಗ ನಡೆಸಿದವು. ವಿರೋಧ ಪಕ್ಷಗಳು ಸಂವಿಧಾನಕ್ಕೆ ಅಗೌರವ ತೋರಿಸುತ್ತಿವೆ ಮತ್ತು ಸಂಸದೀಯ ಕಾರ್ಯವಿಧಾನಗಳನ್ನು ಗೌರವಿಸುವುದಿಲ್ಲ ಎಂದು ಹೇಳಿದ ನಡ್ಡಾ, ವಿರೋಧ ಪಕ್ಷಗಳು ಮುಸ್ಲಿಮರನ್ನು ಮತ ಬ್ಯಾಂಕ್ ಎಂದು ಪರಿಗಣಿಸಿ ತುಷ್ಟೀಕರಣ ರಾಜಕೀಯದಲ್ಲಿ ತೊಡಗಿವೆ ಎಂದು ಆರೋಪಿಸಿದರು.

ವಾರ್ತಾ ಭಾರತಿ 30 Mar 2026 8:18 pm

ಕಲಬುರಗಿ| ರಟಕಲ್ ವಿರಕ್ತ ಮಠದಲ್ಲಿ ಪಟ್ಟಾಧಿಕಾರ ಮಹೋತ್ಸವ: ಪೋಸ್ಟರ್ ಬಿಡುಗಡೆ

ಕಲಬುರಗಿ: ಕಾಳಗಿ ತಾಲೂಕಿನ ಸುಕ್ಷೇತ್ರ ರಟಕಲ್‌ನ ವಿರಕ್ತ ಮಠದಲ್ಲಿ ನಿಯೋಜಿತ ಉತ್ತರಾಧಿಕಾರಿಯಾದ ಪೂಜ್ಯ ಶ್ರೀ ನೀಲಕಂಠ ದೇವರವರ ಪಟ್ಟಾಧಿಕಾರ ಮಹೋತ್ಸವದ ಅಂಗವಾಗಿ ಸೋಮವಾರ ವಾಲ್ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ನೆರವೇರಿತು. ಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪೂಜ್ಯಶ್ರೀ ಡಾ. ಶಿವಾನಂದ ಮಹಾಸ್ವಾಮಿಗಳು (ಹುಲಸೂರು ಮಠ), ಪೂಜ್ಯಶ್ರೀ ಚಿಕ್ಕ ಗುರುನಂಜೇಶ್ವರ ಮಹಾಸ್ವಾಮಿಗಳು (ಭರತನೂರ), ಪೂಜ್ಯಶ್ರೀ ರೇವಣಸಿದ್ದ ಶಿವಾಚಾರ್ಯರು (ರಟಕಲ್), ವಿರಕ್ತಮಠದ ನಿಯೋಜಿತ ಉತ್ತರಾಧಿಕಾರಿ ಪೂಜ್ಯಶ್ರೀ ನೀಲಕಂಠ ದೇವರು, ಶ್ರೀ ಸಿದ್ದ ಶಿವಯೋಗಿ ರೇವಣಸಿದ್ದ ಶರಣರು (ಗೌರಿಗುಡ್ಡ) ದಿವ್ಯ ಸಾನಿಧ್ಯ ವಹಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು, ಬಸವಾದಿ ಶರಣರ ವಚನ ಪರಂಪರೆಯನ್ನು ಮುಂದುವರಿಸುತ್ತಿರುವ ಮಠಗಳು ಸಮಾಜದಲ್ಲಿ ಜ್ಞಾನ ದಾಸೋಹ ಮತ್ತು ಅನ್ನದಾಸೋಹಗಳ ಮೂಲಕ ಮಹತ್ವದ ಸೇವೆ ಸಲ್ಲಿಸುತ್ತಿವೆ ಎಂದು ಅಭಿಪ್ರಾಯಪಟ್ಟರು. ರಟಕಲ್ ಶ್ರೀ ಮುರಗೇಂದ್ರ ಶಿವಯೋಗಿಗಳ ವಿರಕ್ತ ಮಠವು ಭಕ್ತರ ಪಾಲಿಗೆ ಕಾಮಧೇನು-ಕಲ್ಪವೃಕ್ಷದಂತಿದ್ದು, ಸಂಕಷ್ಟದಲ್ಲಿರುವವರಿಗೆ ಆಶ್ರಯ ನೀಡುತ್ತಿರುವ ಪುಣ್ಯದ ತಾಣವಾಗಿದೆ ಎಂದು ಹೇಳಿದರು. ಮಠದ ಐತಿಹಾಸಿಕ ಪರಂಪರೆಯನ್ನು ಸ್ಮರಿಸಿದ ಅವರು, ಲಿಂ. ಶ್ರೀ ರುದ್ರಮುನಿ ಶಿವಯೋಗಿಗಳು, ಲಿಂ. ಶ್ರೀ ಮುರಗೇಂದ್ರ ಶಿವಯೋಗಿಗಳು, ಲಿಂ. ಶ್ರೀ ನೀಲಕಂಠ ಮಹಾಸ್ವಾಮಿಗಳು ಹಾಗೂ ಲಿಂ. ಶ್ರೀ ಸಿದ್ಧರಾಮ ಮಹಾಸ್ವಾಮಿಗಳ ಸೇವೆಯನ್ನು ಸ್ಮರಿಸಿದರು. ಪಟ್ಟಾಧಿಕಾರ ಸ್ವಾಗತ ಸಮಿತಿಯ ಅಧ್ಯಕ್ಷರಾದ ಚಿಂಚೋಳಿ ಶಾಸಕ ಡಾ.ಅವಿನಾಶ್‌ ಜಾಧವ್‌, ವಿಧಾನ ಪರಿಷತ್ ಸದಸ್ಯ ಜಗದೇವ ಗುತ್ತೇದಾರ್, ವಿಜಯಕುಮಾರ್‌ ಚೆಂಗಟಿ, ಶಿವರಾಜ್ ಪಾಟೀಲ್ ಗೋಣಗಿ, ಚಿಂತನ ರಾಥೋಡ, ಬಸವರಾಜ್ ಚೌಕಾ, ಸಿದ್ದಯ್ಯ ಸ್ವಾಮಿ ಕಿಣ್ಣಿ, ಮಲ್ಲಣ್ಣ ಬೈರಪ, ಮಲೆನಾಥ ಮುಚ್ಚಟ್ಟಿ, ಸಂತೋಷ್ ಹಂದ್ರಳ್ಳಿ, ರಾಚಯ್ಯ ಕಿಣ್ಣಿ, ಚಂದ್ರಕಾಂತ ಭೀಮಳ್ಳಿ, ಚಂದ್ರಕಾಂತ್ ಸೀಗಿ, ಶರಣು ಬೈರಪ್, ಮಾನಶೆಟ್ಟಿ ಸೀಗಿ, ನೀಲಕಂಠ ಪಾಟೀಲ್, ರವಿ ಬುಳ್ಳ, ಆಕಾಶ್ ಸಾಲಿಮಠ, ವಿನೋದ್ ಸಿಗಿ, ವೀರೇಶ್ ಬುಕ್ಕಟಗಿ, ಬಸವರಾಜ್ ತಳವಾರ್, ರವಿ ಕೆಣ್ಣಿ, ರಸೂಲ್ ಕೋರಬಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 30 Mar 2026 8:14 pm

ರಾಯಚೂರು| ಯುವತಿ ಅನುಮಾನಾಸ್ಪದವಾಗಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

ಪತಿ ಮತ್ತು ಅತ್ತೆ ವಿರುದ್ಧ ವರದಕ್ಷಿಣೆ ಕಿರುಕುಳ, ಕೊಲೆ ಆರೋಪ

ವಾರ್ತಾ ಭಾರತಿ 30 Mar 2026 8:07 pm

ಚಿನ್ನಸ್ವಾಮಿಯಲ್ಲಿ ಕನ್ನಡಿಗ ಅನಿಲ್ ಕುಂಬ್ಳೆ ಹೆಸರಿಗೆ ಅವಮಾನ: ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾದ 'ತುದಿ' ಪದ

Anil Kumble Stand: ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೆಎಸ್‌ಸಿಎ, ಭಾರತೀಯ ಕ್ರಿಕೆಟ್ ದಿಗ್ಗಜರಾದ ಅನಿಲ್ ಕುಂಬ್ಳೆ ಮತ್ತು ರಾಹುಲ್ ದ್ರಾವಿಡ್ ಅವರ ಹೆಸರನ್ನು ಸ್ಟ್ಯಾಂಡ್‌ಗಳಿಗೆ ನಾಮಕರಣ ಮಾಡುವ ಮೂಲಕ ಗೌರವಿಸಿತ್ತು. ಆದರೆ, ಇದೀಗ ಕುಂಬ್ಳೆ ಅವರ ಸ್ಟ್ಯಾಂಡ್‌ನಲ್ಲಿ 'ತುದಿ' ಎಂಬ ಅಕ್ಷರ ಕಂಡುಬಂದಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ಒನ್ ಇ೦ಡಿಯ 30 Mar 2026 8:04 pm

ಮಹಿಳೆಯರಿಗೆ ಉನ್ನತ ಶಿಕ್ಷಣಕ್ಕೆ ಆದ್ಯತೆ ಅಗತ್ಯ: ರಾಜೇಶ್ ಪ್ರಸಾದ್

ಮಂಗಳೂರು, ಮಾ.30: ಸಮಾಜದಲ್ಲಿ ಮಹಿಳೆಯರು ಪುರುಷರಿಗಿಂತ ಹೆಚ್ಚಿನ ಬುದ್ದಿಮತ್ತೆಯನ್ನು ಹೊಂದಿದ್ದು, ಅವರಿಗೆ ಉನ್ನತ ಶಿಕ್ಷಣ, ಸೌಲಭ್ಯಗಳನ್ನು ನೀಡುವ ಮೂಲಕ ಸಮಾನ ಪ್ರಾತಿನಿಧ್ಯ ಕಲ್ಪಿಸಬೇಕು ಎಂದು ಚಂಡಿಗಢ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಎಚ್.ರಾಜೇಶ್ ಪ್ರಸಾದ್ ಹೇಳಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಮರಾಟಿ ಸಮಾಜ ಸೇವಾ ಸಂಘ ಮಂಗಳೂರು ಹಾಗೂ ಮರಾಟಿ ಮಹಿಳಾ ವೇದಿಕೆ ಸಹಯೋಗ ದಲ್ಲಿ ರವಿವಾರ ಬಾಳಂ ಭಟ್ ಸಭಾಂಗಣದಲ್ಲಿ ನಡೆದ ಮರಾಟಿ ಮಹಿಳಾ ಸಂಭ್ರಮ 2026 ಉದ್ಘಾಟಿಸಿ, ಅವರು ಮಾತನಾಡಿದರು. ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದ ಸಮಾಜದ ಮಹಿಳೆಯರು ಮುಖ್ಯವಾಹಿನಿಗೆ ಬರಬೇಕಾಗಿದೆ. ವೇದಗಳ ಕಾಲದಲ್ಲಿ ಮಹಿಯರಿಗಿದ್ದ ಅಗ್ರ ಸ್ಥಾನಮಾನ ಕ್ಷೀಣಿಸುತ್ತಾ ಬಂದಿದೆ. ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಕಲ್ಪಿಸಿದ ಸ್ಥಾನಮಾನ ಇಂದಿಗೂ ಸಿಗದೇ ಇರುವುದು ಬೇಸರದ ಸಂಗತಿ ಎಂದರು. ಮರಾಟಿ ಸಮುದಾಯದಲ್ಲೂ ಮಹಿಳೆಯರು ಕೆಳಸ್ತರದಲ್ಲಿದ್ದಾರೆ. ಒಟ್ಟಾರೆಯಾಗಿ ಮಹಿಳೆಯರು ಪ್ರತಿಯೊಂದು ಕ್ಷೇತ್ರದಲ್ಲೂ ಸ್ಥಾನ ಪಡೆದಿದ್ದರೂ ಪ್ರಮಾಣ ಕಡಿಮೆ ಇದೆ. ಮಹಿಳೆಯರ ಸಂಘಟನೆ ಬಲಿಷ್ಠವಾಗಬೇಕು. ಪ್ರತಿ ಸಂಘಟನೆ, ಸಂಸ್ಥೆಗಳಲ್ಲಿ ಶೇ.50ರಷ್ಟು ಸ್ಥಾನಮಾನ ಸಿಗಬೇಕು. ಗಂಡು ಮಕ್ಕಳಷ್ಟೇ ಹೆಣ್ಣು ಮಕ್ಕಳಿಗೂ ಶಿಕ್ಷಣ ಸೇರಿದಂತೆ ಇತರ ಹಕ್ಕುಗಳು ಸಿಗುವಂತಾಗಬೇಕು ಎಂದು ರಾಜೇಶ್ ಪ್ರಸಾದ್ ನುಡಿದರು. ರಾಜ್ಯ ಮರಾಟಿ ಒಕ್ಕೂಟದ ಅಧ್ಯಕ್ಷ ಡಾ.ಕೆ.ಸುಂದರ ನಾಯ್ಕ ಮುಖ್ಯ ಅತಿಥಿಯಾಗಿದ್ದರು. ಮರಾಟಿ ಸಮಾಜ ಬಾಂಧವರು ಒಗ್ಗಟ್ಟಾಗಿ ಕೆಳ ಸ್ತರದಲ್ಲಿರುವವರನ್ನು ಮೇಲೆತ್ತಲು ಶ್ರಮಿಸಬೇಕು. ಕಾರ್ಯಕ್ರಮಗಳಲ್ಲಿ ತೊಡಗಿಸಿ ಕೊಳ್ಳುವ ಮೂಲಕ ಒಕ್ಕೂಟಕ್ಕೆ ಶಕ್ತಿ ತುಂಬಬೇಕು ಎಂದರು. ಜಿಲ್ಲಾ ಮರಾಟಿ ಸಮಾಜ ಸೇವಾ ಸಂಘದ ಅಧ್ಯಕ್ಷ ಸುಂದರ ನಾಯ್ಕ ವಿಟ್ಲ ಅಧ್ಯಕ್ಷತೆ ವಹಿಸಿದ್ದರು. ಕೆನರಾ ಬ್ಯಾಂಕ್ ನಿವೃತ್ತ ಮಹಾ ಪ್ರಬಂಧಕ ಕೆ.ರಾಮ ನಾಯ್ಕ, ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಸಹಾಯಕ ಪ್ರಾಧ್ಯಾಪಕಿ ಡಾ.ರಶ್ಮಿ ಎಂ., ಉದ್ಯಮಿ ಶೋಭಾ ಗೋಪಾಲನ್ ಅತಿಥಿಗಳಾಗಿ ಶುಭ ಹಾರೈಸಿದರು. ಈ ಸಂದರ್ಭ ರಾಜೇಶ್ ಪ್ರಸಾದ್, ಡಾ.ಕೆ.ಸುಂದರ ನಾಯ್ಕ, ಕೆ.ರಾಮ ನಾಯ್ಕ, ತಾಲೂಕು ಘಟಕಗಳ ಅಧ್ಯಕ್ಷರು,ಪದಾಧಿಕಾರಿಗಳು ಹಾಗೂ ಸಾಧಕರನ್ನು ಸನ್ಮಾನಿಸಲಾಯಿತು. ವಿಚಾರಗೋಷ್ಠಿ: ಮಹಿಳಾ ನಾಯಕತ್ವ-ಮಾನಸಿಕ ಒತ್ತಡದ ನಿಭಾವಣೆ ವಿಷಯದಲ್ಲಿ ಕಾಸರಗೋಡಿನ ಮಾನಸಿಕ ತಜ್ಞೆ ಡಾ.ಜೋತ್ಸ್ನಾ, ಉದ್ಯೋಗ, ಸ್ವಸಹಾಯ ಸಂಘ-ಸುರಕ್ಷಾ ಯೋಜನೆಗಳು, ಕಾನೂನುಗಳ ಬಗ್ಗೆ ಪುತ್ತೂರಿನ ವಕೀಲ ಮಂಜುನಾಥ ನಾಯ್ಕ, ಮಹಿಳೆ-ಕುಟುಂಬ-ವೃತ್ತಿ-ಆರೋಗ್ಯ ವಿಷಯದಲ್ಲಿ ಬೆಳ್ತಂಗಡಿ ತಾಲೂಕು ಆಸ್ಪತ್ರೆಯ ತಜ್ಞೆ ಡಾ.ರಶ್ಮಿ ಎನ್. ಅವರು ಮಾಹಿತಿ ನೀಡಿದರು. ಮರಾಟಿ ಸಮಾಜ ಸೇವಾ ಸಂಘದ ಪ್ರ.ಕಾರ್ಯದರ್ಶಿ ಸೂರ್ಯಕಾಂತ್ ನಾಯ್ಕ, ಖಜಾಂಚಿ ಕೃಷ್ಣಮೂರ್ತಿ ಡಿ., ಉಪಾಧ್ಯಕ್ಷ ವಿ.ಪಿ.ನಾಯ್ಕ, ಉಪಾಧ್ಯಕ್ಷೆ ಲೀಲಾ ಚಂದ್ರಶೇಖರ್, ಸಾಂಸ್ಕೃೃತಿಕ ಕಾರ್ಯದರ್ಶಿ ಪ್ರೇಮಾ ಮಾಧವ ನಾಯ್ಕ, ಸಂಘಟನಾ ಕಾರ್ಯದರ್ಶಿ ಪರಮೇಶ್ವರ ನಾಯ್ಕ ಎನ್., ಕಾರ್ಯಕ್ರಮ ಸಂಯೋಜಕರಾದ ರಾಜೇಶ್ವರಿ ರವಿಪ್ರಸಾದ್, ಮಹಾಲಿಂಗ ನಾಯ್ಕ ಆಸ್ಟಿನ್ವಾಲ್ ಮೊದಲಾದವರು ಉಪಸ್ಥಿತರಿದ್ದರು. ಶಾಲಿನಿ ಮಹಾಲಿಂಗ ನಾಯ್ಕ ಸ್ವಾಗತಿಸಿದರು. ಮರಾಟಿ ಮಹಿಳಾ ವೇದಿಕೆಯ ಅಧ್ಯಕ್ಷೆ ಶಾರದಾ ದಾಮೋದರ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ವನಿತಾ ಸುಂದರ ನಾಯ್ಕ ವಂದಿಸಿದರು. ಪ್ರಕಾಶ್ ನಾಯ್ಕ ಕಾರ್ಯ ಕ್ರಮ ನಿರೂಪಿಸಿದರು. ಬಳಿಕ ಮಹಿಳಾ ವೇದಿಕೆಯ ಸದಸ್ಯೆಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. 

ವಾರ್ತಾ ಭಾರತಿ 30 Mar 2026 7:59 pm

ಮಂಗಳೂರಿನಲ್ಲಿ ಹಜ್ ಭವನ, ಹಜ್ ಯಾತ್ರೆಗೆ ನೇರ ವಿಮಾನ ಸೌಲಭ್ಯಕ್ಕೆ ಎಸ್‌ಡಿಪಿಐ ಆಗ್ರಹ

ಮಂಗಳೂರು, ಮಾ.30: ಮಂಗಳೂರಿನಲ್ಲಿ ಹಜ್ ಭವನ ಕೂಡಲೇ ನಿರ್ಮಿಸಬೇಕು ಮತ್ತು ಮಂಗಳೂರಿನಿಂದ ಹಜ್‌ ಯಾತ್ರೆ ಕೈಗೊಳ್ಳುವವರಿಗೆ ನೇರ ವಿಮಾನ ಸೌಲಭ್ಯ ಒದಗಿಸುವಂತೆ ಎಸ್‌ಡಿಪಿಐ ಮಂಗಳೂರು ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ಅನ್ವರ್ ಸಾದಾತ್ ಎಸ್ ಸರಕಾರವನ್ನು ಆಗ್ರಹಿಸಿದ್ದಾರೆ. ನಗರದ ಎಸ್‌ಡಿಪಿಐ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಬದುಕಿನಲ್ಲಿ ಒಮ್ಮೆಯಾದರೂ ಹಜ್ ನಿರ್ವಹಿಸಬೇಕೆನ್ನುವುದು ಮುಸ್ಲಿಂ ಸಮುದಾಯದ ಪ್ರತಿಯೊಬ್ಬನ ದೊಡ್ಡ ಕನಸಾಗಿದೆ. ಹಜ್‌ಗೆ ಹೋಗುವವರಿಗೆ ಅನುಕೂಲಕ್ಕಾಗಿ ಹಿಂದೆ ಮಂಗಳೂರಿನಿಂದ ನೇರ ವಿಮಾನ ಸೌಲಭ್ಯ ಇತ್ತು. ಕೊರೋನ ಬಳಿಕ ಅದು ರದ್ಧಾಗಿದೆ. ಆನಂತರ ಈ ತನಕ ಆರಂಭಗೊಂಡಿಲ್ಲ. ಮುಸ್ಲಿಂ ಸಮುದಾಯದ ಜನಪ್ರತಿನಿಧಿ ಗಳ ಇಚ್ಛಾಶಕ್ತಿಯ ಕೊರತೆಯಿಂದಾಗಿ ಹಜ್ ಯಾತ್ರಿಕರಿಗೆ ಇಂತಹ ಸೌಲಭ್ಯ ಇಲ್ಲದಾಗಿದೆ ಎಂದರು. ಮಂಗಳೂರಿನಿಂದ ನೇರ ವಿಮಾನ ಸೌಲಭ್ಯ ಇಲ್ಲದ ಕಾರಣದಿಂದಾಗಿ ಹಜ್ ಯಾತ್ರಿಕರು ಬೆಂಗಳೂರಿಗೆ ಹೋಗಿ ಅಲ್ಲಿ ನಾಲ್ಕೈದು ದಿನ ಉಳಿದುಕೊಂಡು ಯಾತ್ರೆಗೆ ಸಂಬಂಧಿಸಿದ ಎಲ್ಲ ತಯಾರಿಸಿ ಮುಗಿಸಿಬಳಿಕ ವಿಮಾನ ಹತ್ತ ಬೇಕಾಗಿದೆ. ಈ ಕಾರಣದಿಂದಾಗಿ ಮಂಗಳೂರು ಸೇರಿದಂತೆ ಸುತ್ತಮತ್ತಲಿನ ಜಿಲ್ಲೆಗಳಿಂದ ಹಜ್ ಯಾತ್ರೆ ಕೈಗೊಳ್ಳು ವವರಿಗೆ ಇದೀಗ ಪ್ರತಿವರ್ಷ ಸಮಸ್ಯೆ ಎದುರಿಸುವಂತಾಗಿದೆ.ಅದರಲ್ಲೂ ಹಜ್ ಯಾತ್ರೆ ಕೈಗೊಳ್ಳುವ ಹಿರಿಯ ನಾಗರಿಕರು ಇನ್ನಷ್ಟು ಸಮಸ್ಯೆ ಎದುರಿಸಬೇಕಾಗಿದೆ ಎಂದರು. ಹಿಂದೆ ಹಜ್‌ಭವನ ನಿರ್ಮಾಣಕ್ಕೆ ಸೂಕ್ತ ಸರಕಾರಿ ಜಮೀನು ಇಲ್ಲ ಎಂಬ ಕಾರಣವನ್ನು ಮುಂದಿಡಲಾಗುತ್ತಿತ್ತು. ಆದರೆ ಈಗ ಹಜ್ ಭವನ ನಿರ್ಮಾಣಕ್ಕೆ ಕಾಂಗ್ರೆಸ್ ಮುಖಂಡ ಇನಾಯತ್ ಅಲಿ ಅವರು ಸೂಕ್ತ ಜಾಗವನ್ನು ಹಜ್ ಕಮಿಟಿಗೆ ನೀಡಿದ್ದಾರೆ. ಸರಕಾರದ ಹೆಸರಿಗೆ ಅಧಕೃತವಾಗಿ ಜಮೀನು ಹಸ್ತಾಂತರವಾಗಿದೆ. ಸರಕಾರ 10 ಕೋಟಿ ರೂ. ಅನುದಾನವನ್ನು ಬಜೆಟ್‌ನಲ್ಲಿ ಮೀಸಲಿರಿಸಿದೆ. ಹೀಗಿದ್ದರೂ ಹಜ್ ಭವನ ನಿರ್ಮಾಣಕ್ಕೆ ಟೆಂಡರ್ ಪ್ರಕ್ರಿಯೆ ನಡೆದಿಲ್ಲ . ಈ ನಿಟ್ಟಿನಲ್ಲಿ ಸರಕಾರಕ್ಕೆ ಒತ್ತಡ ಹಾಕಲು ಮುಸ್ಲಿಂ ಸಮುದಾಯದಲ್ಲಿ ಪ್ರಭಾವಿ ನಾಯಕರು, ಸಚಿವರು , ಶಾಸಕರು ಇದ್ದಾರೆ. ಆದರೆ ಅವರು ಸರಕಾರದ ಗಮನ ಸೆಳೆಯುವ ನಿಟ್ಟಿನಲ್ಲಿ ಆಸಕ್ತಿ ವಹಿಸುತ್ತಿಲ್ಲ ಎಂದು ದೂರಿದರು. ಮಂಗಳೂರಿನಲ್ಲಿ ಕೂಡಲೇ ಹಜ್ ಭವನ ನಿರ್ಮಾಣಕ್ಕೆ ಸರಕಾರ ಕ್ರಮಕೈಗೊಳ್ಳಬೇಕು ಎಂದ ಅವರು ಮಂಗಳೂರಿ ನಲ್ಲಿ ಹಜ್ ಭವನ ಮತ್ತು ನೇರ ವಿಮಾನ ಸೌಲಭ್ಯ ವ್ಯವಸ್ಥೆ ಕಲ್ಪಿಸುವುದರಿಂದ ದ.ಕ ಜಿಲ್ಲೆಯವರಿಗೆ ಮಾತ್ರವಲ್ಲ ಉಡುಪಿ, ಕೊಡಗು, ಚಿಕ್ಕಮಗಳೂರು ಸೇರಿದಂತೆ ಸುತ್ತ ಮುತ್ತಲಿನ ಜಿಲ್ಲೆಗಳಿಂದ ಹಜ್ ಯಾತ್ರೆ ಕೈಗೊಳ್ಳುವವರಿಗೆ ತುಂಬಾ ಅನುಕೂಲವಾಗಲಿದೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಎಸ್‌ಡಿಪಿಐ ಮಂಗಳೂರು ನಗರ ಜಿಲ್ಲಾ ಉಪಾಧ್ಯಕ್ಷ ಅಶ್ರಫ್ ಅಡ್ಡೂರು , ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಮಾಲ್ ಜೋಕಟ್ಟ್ಟೆ, ಗ್ರಾಮಾಂತರ ಜಿಲ್ಲಾ ಕಾರ್ಯದರ್ಶಿ ಶಾಕಿರ್ ಅಳಕೆಮಜಲು ಉಪಸ್ಥಿತರಿದ್ದರು.

ವಾರ್ತಾ ಭಾರತಿ 30 Mar 2026 7:57 pm

ಯತ್ನಾಳ್‌ ಅವರಿಗೆ ಸ್ವಾಭಿಮಾನ, ಮಾನ ಮರ್ಯಾದೆ ಇದ್ದರೆ, ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸಲಿ: ಸಚಿವ ಎಂ.ಬಿ. ಪಾಟೀಲ್‌ ಸವಾಲು

ವಿಜಯಪುರ : ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರು, ಮಾತು ಎತ್ತಿದರೆ ಸಾಕು ಯಡಿಯೂರಪ್ಪ ಕುಟುಂಬ, ವಿಜಯೇಂದ್ರ ಎಂದು ವಾಗ್ದಾಳಿ ನಡೆಸುವ ಅವರು ಈಗ ವಿಜಯೇಂದ್ರ ನೇತೃತ್ವದಲ್ಲಿ ಬಿಜೆಪಿ ಚುನಾವಣೆಗೆ ಹೇಗೆ ಬೆಂಬಲ ನೀಡುತ್ತಾರೆ? ಈ ಯತ್ನಾಳರಿಗೆ ಸ್ವಾಭಿಮಾನ, ಮಾನ ಮರ್ಯಾದೆ ಇದ್ದರೆ ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸಲಿ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಡಾ.ಎಂ.ಬಿ. ಪಾಟೀಲ್ ವಾಗ್ದಾಳಿ ನಡೆಸಿದ್ದಾರೆ. ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕ ಯತ್ನಾಳ್ ಅವರು ಸ್ವಾಭಿಮಾನ, ಮರ್ಯಾದೆ ಇದ್ದರೆ ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸಲಿ, ವಿಜಯೇಂದ್ರ ನೇತೃತ್ವದಲ್ಲಿ ಬಿಜೆಪಿ ಚುನಾವಣೆ ಎದುರಿಸುತ್ತಿದೆ. ವಿಜಯೇಂದ್ರ ಉಳಿಸೋ ಕೆಲಸ ಮಾಡುತ್ತಾರೆಂದರೆ ಮಾಡಲಿ, ಆದರೆ ಯತ್ನಾಳ ಏನೇ ಮಾಡಿದರೂ ನಾವೇ ಗೆಲ್ಲುತ್ತೇವೆ, ದಾವಣಗೆರೆ ಹಾಗೂ ಬಾಗಲಕೋಟೆ ಉಪ ಚುನಾವಣೆಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಸೋತರೆ ವಿಜಯೇಂದ್ರ ಬಿಜೆಪಿ ರಾಜ್ಯಾದ್ಯಕ್ಷ ಸ್ಥಾನದಿಂದ ನಿಶ್ಚಿತವಾಗಿ ಬದಲಾಗುತ್ತಾರೆ. ವಿಜಯೇಂದ್ರ ಬದಲಾವಣೆ ಆಗೋದು ಯತ್ನಾಳಗೆ ಬೇಕಾಗಿದೆಯೋ, ಇಲ್ಲವೋ? ಅವರು ಅರ್ಥ ಮಾಡಿಕೊಳ್ಳಲಿ ಯತ್ನಾಳ್ ಉದ್ದೇಶ ವಿಜಯೇಂದ್ರ ಉಳಿಸುವುದೇ ಆಗಿದ್ದರೆ ಮಾತು ಮಾತಿಗೆ ಯಡಿಯೂರಪ್ಪ ಮಗ ಎಂದು ಹೇಳುವುದೇಕೆ ಎಂದು ಪ್ರಶ್ನಿಸಿದರು. ಉಪಚುನಾವಣೆಯಲ್ಲಿ ಪ್ರಚಾರ ಮಾಡಿ ವಾಪಸ್ ಬಿಜೆಪಿ ಹೋಗುವ ಯೋಚನೆ ಯತ್ನಾಳರಲ್ಲಿದೆ, ಈ ಉಪ ಚುನಾವಣೆಯಲ್ಲಿ ಬಿಜೆಪಿ ಪರವಾಗಿ ಪ್ರಚಾರ ಮಾಡಿದ್ದೇನೆ ಎಂದು ಹೇಳಿ ಮತ್ತೆ ಬಿಜೆಪಿ ನಾಯಕರಿಗೆ ಕೈವೊಡ್ಡಿ ಪಕ್ಷಕ್ಕೆ ಮರಳುವ ಪ್ಲಾನ್ ಮಡುತ್ತಿದ್ದಾರೆ ಅಷ್ಟೇ ಎಂದು ಹೇಳಿದರು.

ವಾರ್ತಾ ಭಾರತಿ 30 Mar 2026 7:53 pm

ಕಬಕ - ಪುತ್ತೂರು ರೈಲು ನಿಲ್ದಾಣ ಸುಸಜ್ಜಿತ ಶೆಲ್ಟರ್ 2.91 ಕೋಟಿ ರೂ. ಮಂಜೂರು: ಸಂಸದ ಬ್ರಿಜೇಶ್ ಚೌಟ

ಮಂಗಳೂರು, ಮಾ.30: ಕಬಕ - ಪುತ್ತೂರು ರೈಲು ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಹೆಚ್ಚಿನ ಮೂಲಸೌಕರ್ಯ ಒದಗಿಸಲು 2.91 ಕೋಟಿ ರೂ. ಮೊತ್ತದ ಅಭಿವೃದ್ದಿ ಕಾಮಗಾರಿ ಯೋಜನೆಗೆ ಮಂಜೂರಾತಿ ದೊರೆತಿದೆ ಎಂದು ದಕ್ಷಿಣ ಕನ್ನಡ ಸಂಸದ ಬ್ರಿಜೇಶ್ ಚೌಟ ತಿಳಿಸಿದ್ದಾರೆ. ಈ ಯೋಜನೆಯಡಿ ಕಬಕ ಪುತ್ತೂರು ನಿಲ್ದಾಣದ ಪ್ಲಾಟ್‌ಫಾರ್ಮ್ ನಂ. 1ರಲ್ಲಿ 2.91ಕೋಟಿ ರೂ. ವೆಚ್ಚದಲ್ಲಿ ಶೆಲ್ಟರ್ ನಿರ್ಮಾಣಕ್ಕೆ ಮಂಜೂರಾತಿ ಸಿಕ್ಕಿದೆ. ಪ್ರಸ್ತುತ ಈ ನಿಲ್ದಾಣದಲ್ಲಿ ಪ್ರಯಾಣಿಕರ ತಂಗುದಾಣಕ್ಕೆ ಕೇವಲ 531 ಚ. ಮೀಟರ್ ಉದ್ದದ ಶೆಲ್ಟರ್ ಇದೆ. ಇದೀಗ ಈ ಯೋಜನೆಯಡಿ 3392 ಚ.ಮೀಟರ್ ವಿಸ್ತೀರ್ಣದ ಶೆಲ್ಟರ್ ನಿರ್ಮಾಣಕ್ಕೆ ಅನುದಾನ ದೊರಕಿದೆ. ಅದರಂತೆಯೇ ಶೆಲ್ಟರ್ ನಿರ್ಮಾಣಕ್ಕೆ ಸ್ಥಳ ಗುರುತು ಮಾಡುವ ಪ್ರಕ್ರಿಯೆ ಮುಗಿದಿದ್ದು ಶೀಘ್ರದಲ್ಲೇ ಕಾಮಗಾರಿ ಆರಂಭವಾಗಲಿದೆ. ಈ ಕಾಮಗಾರಿ ಪೂರ್ಣಗೊಂಡರೆ ಕಬಕ- ಪುತ್ತೂರು ರೈಲ್ವೇ ಸ್ಟೇಶನ್‌ ನಲ್ಲಿ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಚೌಟ ಹೇಳಿದ್ದಾರೆ. ಇದರೊಂದಿಗೆ ನಿಲ್ದಾಣದಲ್ಲಿ ಪ್ರಯಾಣಿಕರು ಸುಲಭವಾಗಿ ಓಡಾಡಲು ಅನುಕೂಲವಾಗುವಂತೆ ನಿಲ್ದಾಣದಲ್ಲಿ ಸದ್ಯ ಇರುವ ಮೇಲ್ಸೇತುವೆಗೆ ಪ್ಲಾಟ್‌ಫಾರ್ಮ್ ನಂ. 2 ಮತ್ತು 2 ರ ಬಳಿ ಒಟ್ಟು 2 ಲಿಫ್ಟ್ ವ್ಯವಸ್ಥೆ ಅಳವಡಿಸುವ ಪ್ರಸ್ತಾವನೆ ಇದೆ. ಇದಕ್ಕೆ ಅಂದಾಜು 1.33 ಕೋಟಿ ರೂ. ವೆಚ್ಚ ನಿರೀಕ್ಷಿಸಲಾಗಿದ್ದು, ಪ್ರಸ್ತುತ ಈ ಯೋಜನೆಯು ರೈಲ್ವೆ ಕೇಂದ್ರ ಕಚೇರಿಯಲ್ಲಿ ಪರಿಶೀಲನೆ ಹಂತದಲ್ಲಿದೆ ಎಂದು ಸಂಸದರು ತಿಳಿಸಿದ್ದಾರೆ. ಕಬಕ ಪುತ್ತೂರು ರೈಲು ನಿಲ್ದಾಣದ ಅಭಿವೃದ್ದಿಯ ಅಗತ್ಯತೆಯನ್ನು ಮನಗಂಡಿದ್ದ ಸಂಸದ ಬ್ರಿಜೇಶ್ ಚೌಟ ಅವರು, 2024ರ ನವೆಂಬರ್ ನಲ್ಲಿ ನೈಋತ್ಯ ರೈಲ್ವೆಯ ಜನರಲ್ ಮ್ಯಾನೇಜರ್‌ಗೆ ಪತ್ರ ಬರೆದು ಶೆಲ್ಟರ್ ವಿಸ್ತರಿಸಲು ಕ್ರಮ ಕೈಗೊಳ್ಳುವಂತೆ ಕೋರಿದ್ದರು. ಈ ಭಾಗದ ಪ್ರಯಾಣಿಕರು ಬೇಸಿಗೆಯಲ್ಲಿ ತೀವ್ರ ಬಿಸಿಲಿನಿಂದ ಹಾಗೂ ಮಳೆಗಾಲ ದಲ್ಲಿ ನೆನೆಯುತ್ತಾ ರೈಲು ಹತ್ತಬೇಕಾದ ಕಷ್ಟಕರ ಪರಿಸ್ಥಿತಿಯನ್ನು ಅವರು ರೈಲ್ವೆ ಇಲಾಖೆ ಗಮನಕ್ಕೆ ತಂದಿದ್ದರು.

ವಾರ್ತಾ ಭಾರತಿ 30 Mar 2026 7:53 pm

ಕಲಬುರಗಿ ಹೆಲ್ತ್ ಹಬ್‌ಗೆ ಅಡಿಪಾಯ ಹಾಕಿದ್ದೇವೆ: ಡಾ.ಶರಣಪ್ರಕಾಶ್‌ ಪಾಟೀಲ್‌

ಕಲಬುರಗಿ: ಮಧುಮೇಹಿ ರೋಗಿಗಳ ಚಿಕಿತ್ಸೆಗೆ ಬೆಂಗಳೂರು ಹೊರತುಪಡಿಸಿ ಕಲಬುರಗಿ ಮತ್ತು ಮೈಸೂರಿನಲ್ಲಿ ಇನ್ಸ್ಟಿಟ್ಯೂಟ್ ಆಫ್ ಡಯಾಬೆಟಾಲೋಜಿ ಘಟಕ ಸ್ಥಾಪಿಸಲಾಗುತ್ತಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್‌ ಪಾಟೀಲ್‌ ಹೇಳಿದರು. ಸೋಮವಾರ ಇಲ್ಲಿನ ಜಿಮ್ಸ್ ಆಸ್ಪತ್ರೆಯ ಆವರಣದಲ್ಲಿ ಫೂಟ್ ಸೆಕ್ಯೂರ್, ಸ್ಟ್ರೇಟ್ ಏಡ್ ಸಂಸ್ಥೆ ಹಾಗೂ ಕಲಬುರಗಿಯ ಜಿಮ್ಸ್ ಆಸ್ಪತ್ರೆ ಸಂಯುಕ್ತಾಶ್ರಯದಲ್ಲಿ ಪ್ಯಾನ್ ಇಂಡಿಯಾ ಮಧುಮೇಹಿಗಳ ಆರೋಗ್ಯ - ಜಾಗೃತಿ, ಸಲಹೆ ಮತ್ತು ಸ್ಕ್ರೀನಿಂಗ್ (ಪ್ರಯಾಸ್) ಅಭಿಯಾನಕ್ಕೆ ಚಾಲನೆ‌ ನೀಡಿ ಮಾತನಾಡಿದ ಡಾ.ಶರಣಪ್ರಕಾಶ್‌ ಪಾಟೀಲ್‌, ಗುಲ್ಬರ್ಗಾ ವಿ.ವಿ.ಕ್ಯಾಂಪಸ್ ಆವರಣದಲ್ಲಿ ಡಯಾಬೆಟಾಲೋಜಿ ಘಟಕದ ಪ್ರಗತಿಯ ಕಾರ್ಯ ನಡೆಸುತ್ತಿದೆ. ಹೀಗೆ ಅನೇಕ ಕೆಲಸಗಳು ಮಾಡುವ ಮೂಲಕ ಕಲಬುರಗಿ ಹೆಲ್ತ್ ಹಬ್ಗೆ ಅಡಿಪಾಯ ಹಾಕಿದ್ದೇವೆ ಎಂದರು. ಜಿಮ್ಸ್ ಆವರಣದಲ್ಲಿ ತಾಯಿ-ಮಕ್ಕಳ ಅಸ್ಪತ್ರೆ, ಕ್ರಿಟಿಕಲ್‌ ಕೇರ್ ಯುನಿಟ್, 200 ಹಾಸಿಗೆಯ ಕ್ಯಾನ್ಸರ್ ಆಸ್ಪತ್ರೆ ಸ್ತಾಪಿಸಲಾಗುತ್ತಿದೆ. ಬರ್ನ್ಸ್ ಯೂನಿಟ್ ಉದ್ಗಾಟನೆಗೆ ಸಿದ್ಧಗೊಂಡಿದೆ. 371 ಹಾಸಿಗೆ ಸಾಮರ್ಥ್ಯದ ಜಯದೇವ ಆಸ್ಪತ್ರೆ ನಡೆಯುತ್ತಿದೆ. ಇದಲ್ಲದೆ ಗುಲ್ಬರ್ಗಾ ವಿ.ವಿ. ಅವರಣದಲ್ಲಿ ನಿಮ್ಹಾನ್ಸ್ ಶಾಖೆ, ಇಂದಿರಾಗಾಂಧಿ ಮಕ್ಕಳ‌ ಆಸ್ಪತ್ರೆ ಘಟಕ ನಿರ್ಮಾಣ ಕಾರ್ಯ ಸಹ ಪ್ರಗತಿಯಲ್ಲಿವೆ ಎಂದು ಡಾ.ಶರಣಪ್ರಕಾಶ ಪಾಟೀಲ್‌ ತಿಳಿಸಿದರು. ಡಾ.ಸಂಜಯ್ ಶರ್ಮಾ‌ ಮತ್ತು ಡಾ.ಪವನ್ ಅವರು ಮಧುಮೇಹಿ ರೋಗಿಗಳ ಪಾದಗಳ ಆರೋಗ್ಯ - ಜಾಗೃತಿ, ಸಲಹೆ ಮತ್ತು ಸ್ಕ್ರೀನಿಂಗ್ ಪ್ರಯಾಸ್ ಅಭಿಯಾನ ಕೈಗೊಂಡಿರುವುದು ತುಂಬಾ ಉಪಯುಕ್ತವಾಗಿದೆ. ಸಂಚಾರಿ ಚಿಕಿತ್ಸೆ ವಾಹನದಲ್ಲಿ ಜಿಲ್ಲಾ ಮತ್ತು ತಾಲೂಕು ಕೇಂದ್ರಕ್ಕೆ ಹೋಗಿ ಸಂಚಾರಿ ವಾಹನದಲ್ಲಿಯೇ ತಪಾಸಣೆ ಮಾಡಿ ರೋಗಿಗಳಿಗೆ ಯಾವ ರೀತಿಯ ಪಾದರಕ್ಷೆ ಧರಿಸಬೇಕು, ಪಾದ ಆರೋಗ್ಯದ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಇದಕ್ಕೆ ತಕ್ಕಂತೆ‌‌ ಸಂಚಾರಿ ವಾಹನ ಅಗತ್ಯ ವೈದ್ಯಕೀಯ ಸಲಕರಣೆಗಳೊಂದಿಗೆ ಸಜ್ಜುಗೊಳಿಸಿದೆ ಎಂದರು. ಇತ್ತೀಚೆಗೆ ಮಂಡಿಸಲಾದ 2026-27ನೇ ಸಾಲಿನ ಆಯವ್ಯಯದಲ್ಲಿ ಕಲಬುರಗಿ ಐ.ವಿ.ಎಫ್. ಸೆಂಟರ್ ಸ್ಥಾಪಿಸಲು ಘೋಷಿಸಿದ್ದು, ಅದನ್ನು ಸಹ ಇಲ್ಲಿ ಸ್ಥಾಪಿಸಲಾಗುತ್ತದೆ. ಇದಲ್ಲದೆ ಮಲ್ಟಿ ಸ್ಕಿಲ್ ಡೆವಲೆಪಮೆಂಟ್ ಸೆಂಟರ್ ಜೊತೆಗೆ ಕೌಶಲ್ಯಾಭಿವೃದ್ಧಿ ಇಲಾಖೆಯಿಂದ ಸ್ಕಿಲ್‌ ಲ್ಯಾಬ್ ಕಲಬುರಗಿಯಲ್ಲಿ ಸ್ಥಾಪನೆಗೆ ಘೋಷಣೆ ಮಾಡಲಾಗಿದ್ದು, ಸ್ಕ್ನೈಡರ್ ಸಂಸ್ಥೆಯ ಸಹಯೋಗದಿಂದ ಪ್ರತಿ ವರ್ಷ 1,000 ಜನ ನಿರುದ್ಯೋಗಿಗಳಿಗೆ ಕೌಶಲ್ಯ ತರಬೇತಿ ನೀಡುವುದರ ಜೊತೆಗೆ ಪ್ಲೇಸ್ ಮೆಂಟ್ ಸಹ ನೀಡಲಾಗುತ್ತದೆ ಎಂದು ಡಾ.ಶರಣಪ್ರಕಾಶ್‌ ಪಾಟೀಲ್ ತಿಳಿಸಿದರು. ಫೂಟ್ ಸೆಕ್ಯೂರ್ ಸಂಸ್ಥೆಯ ವೈದ್ಯರಾದ ಡಾ.ಸಂಜಯ್‌ ಶರ್ಮಾ ಮಾತನಾಡಿ, ವಿಶ್ವದಲ್ಲಿ ಡಯಾಬಿಟಿಸ್ ರೋಗಿಗಳ ಸಂಖ್ಯೆ ಕ್ಯಾನ್ಸರ್ ಗಿಂತ ಹೆಚ್ಚಾಗಿದೆ. ಇದರ ಮೋಟಾಲಿಟಿ ರೇಟ್ ಸಹ ಹೆಚ್ಚಾಗಿದೆ. ಪಾದದ ಆರೋಗ್ಯದ ಕುರಿತು ಮುಂಜಾಗ್ರತೆ ವಹಿಸಿದಲ್ಲಿ ಶೇ.80ರಷ್ಟು ಪ್ರಕರಣದಲ್ಲಿ ಕಾಲು, ಬೆರಳುಗಳನ್ನು ಕಳೆದುಕೊಳ್ಳುವುದನ್ನು ತಡೆಯಬಹುದು. ಈ ನಿಟ್ಟಿನಲ್ಲಿ ಪ್ಯಾನ್ ಇಂಡಿಯಾ ಪ್ರಯಾಸ್ ಜಾಗೃತಿ ಮಹತ್ವದ್ದಾಗಿದೆ. ಅದು ಕಲಬುರಗಿಯಂತಹ ಟೈರ್ 2 ಸಿಟಿನಿಂದಲೆ‌ ಆರಂಭಿಸಿರುವುದು ಸಂತಸ‌ ತಂದಿದೆ ಎಂದರು. ನಂತರ ಸಚಿವ ಡಾ.ಶರಣಪ್ರಕಾಶ ಪಾಟೀಲ್‌ ಅವರು, ಪ್ಯಾನ್ ಇಂಡಿಯಾ ಮಧುಮೇಹ ಪಾದಗಳ ಆರೋಗ್ಯ - ಜಾಗೃತಿ, ಸಲಹೆ ಮತ್ತು ಸ್ಕ್ರೀನಿಂಗ್ (ಪ್ರಯಾಸ್) ಅಭಿಯಾನಕ್ಕೆ ಚಾಲನೆ‌ ನೀಡಿದರು. ಕಾರ್ಯಕ್ರಮದಲ್ಲಿ ಫೂಟ್ ಸೆಕ್ಯೂರ್ ಸಂಸ್ಥೆಯ ವೈದ್ಯ ಡಾ. ಪವನ ಬೆಲ್ಲಹಳ್ಳಿ, ಯಾದಗಿರಿ ವೈದ್ಯಕೀಯ ಕಾಲೇಜಿನ ನಿರ್ದೇಶಕ ಡಾ.ಸಂದೀಪ್‌, ಜಿಲ್ಲಾ ಶಸ್ತ್ರಜ್ಞೆ ಡಾ. ಅಸ್ನಾ ರುಕಿಯಾ ರಬಾ, ರೋಟರಿ ಕ್ಲಬ್ ಅಧ್ಯಕ್ಷ ಡಾ.ಅನಂತ‌ ಚಿಂಚೋಳಿ, ಅಭ್ಯುದಯ ಸಂಸ್ಥೆಯ ಡಾ.ಭೀಮಾಶಂಕರ ಟೆಂಗಳಿ ಇದ್ದರು. ಜಿಮ್ಸ್ ನಿರ್ದೇಶಕ‌ ಡಾ.ಉಮೇಶ ಎಸ್.ಆರ್ ಸ್ವಾಗತಿಸಿದರು. ಉಪ ವೈದ್ಯಕೀಯ ಅಧೀಕ್ಷಕ ಡಾ.ರೇವಣಸಿದ್ದ ಬಿ. ವಂದಿಸಿದರು. ಮಡಿವಾಳಪ್ಪ ನಿರೂಪಿಸಿದರು. ಜಿಮ್ಸ್ ವೈದ್ಯಕೀಯ ಅಧೀಕ್ಷಕ ಡಾ.ಶಿವಕುಮಾರ್‌ ಸಿ.ಆರ್ ಪ್ರಸ್ತಾವಿಕವಾಗಿ ಮಾತನಾಡಿ ಪ್ರಯಾಸ್ ಅಭಿಯಾನದ ಕುರಿತು ವಿವರಣೆ ನೀಡಿದರು.

ವಾರ್ತಾ ಭಾರತಿ 30 Mar 2026 7:51 pm

ಪಾಕಿಸ್ತಾನದ ಮಧ್ಯಸ್ಥಿಕೆ ಆಫರ್‌ ತಿರಸ್ಕರಿಸಿದ ಇರಾನ್‌; ಬ್ರೋಕರ್‌ ಆಗಲು ಹೋಗಿ ಜೋಕರ್‌ ಆದ‌ ಶೆಹಬಾಜ್ ಷರೀಫ್!

ಜಾಗತಿಕ ವೇದಿಕೆಯಲ್ಲಿ ತನ್ನ ಅಸ್ತಿತ್ವ ಸಾಬೀತುಪಡಿಸಲು ಅನವಶ್ಯಕ ಪ್ರಯತ್ನದಲ್ಲಿ ಮುಳುಗಿರುವ ಪಾಕಿಸ್ತಾನ, ಸಂಘರ್ಷದಲ್ಲಿ ನಿರತವಾಗಿರುವ ಅಮೆರಿಕ ಮತ್ತು ಇರಾನ್‌ ನಡುವೆ ಸಂಧಾನವೇರ್ಪಡಿಸಲು ಮಧ್ಯಸ್ಥಿಕೆವಹಿಸುವದಾಗಿ ಹೇಳಿಕೆ ನೀಡಿತ್ತು. ಆದರೆ ಪಾಕಿಸ್ತಾನದ ಆಶಯಗಳಿಗೆ ತಣ್ಣೀರು ಎರಚಿರುವ ಇರಾನ್‌, ಅಮೆರಿಕದ ಜೊತೆಗೆ ಸಂಧಾನ ಮಾತುಕತೆಗಳ ಸಾಧ್ಯತೆಯನ್ನು ಸ್ಪಷ್ಟವಾಗಿ ತಳ್ಳಿಹಾಕಿದೆ. ಇರಾನ್‌ ಈ ಹೇಳಿಕೆಯಿಂದ ಪಾಕಿಸ್ತಾನ ಮತ್ತೊಮ್ಮೆ ಜಾಗತಿಕ ಮಟ್ಟದಲ್ಲಿ ಅಪಹಾಸ್ಯಕ್ಕೆ ಗುರಿಯಾಗಿದೆ. ಪಾಕಿಸ್ತಾನದ ಮಧ್ಯಸ್ಥಿಕೆ ಆಫರ್‌ ಬಗ್ಗೆ ಇರಾನ್‌ ಹೇಳಿದ್ದೇನು? ಇಲ್ಲಿದೆ ಹೆಚ್ಚಿನ ಮಾಹಿತಿ.

ವಿಜಯ ಕರ್ನಾಟಕ 30 Mar 2026 7:50 pm

’ಮನ್ ಕೀ ಬಾತ್’ ನೇರಪ್ರಸಾರದ ಸಾಮೂಹಿಕ ವೀಕ್ಷಣೆ

ಉಡುಪಿ, ಮಾ.30: ಬಿಜೆಪಿ ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾದ ಸಂಯೋಜನೆಯಲ್ಲಿ ರವಿವಾರ ಉಡುಪಿ ಕಕ್ಕುಂಜೆಯ ಪಾಸ್ಟರಲ್ ಸೆಂಟರ್ ’ಅನುಗ್ರಹ’ದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ 132ನೇ ’ಮನ್ ಕೀ ಬಾತ್’ ಕಾರ್ಯಕ್ರಮದ ನೇರ ಪ್ರಸಾರದ ಸಾಮೂಹಿಕ ವೀಕ್ಷಣೆಯು ಉಡುಪಿ ಜಿಲ್ಲಾ ಕೆಥೋಲಿಕ್ ಧರ್ಮ ಪ್ರಾಂತ್ಯದ ವಿವಿಧ ಧರ್ಮಗುರುಗಳ ಉಪಸ್ಥಿತಿಯಲ್ಲಿ ಜರಗಿತು. ಈ ಸಂದರ್ಭದಲ್ಲಿ ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ, ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಯಶ್ಪಾಲ್ ಎ.ಸುವರ್ಣ, ಕಿರಣ್ ಕುಮಾರ್ ಕೊಡ್ಗಿ, ಗುರುರಾಜ್ ಗಂಟಿಹೊಳೆ, ಸುರೇಶ್ ಶೆಟ್ಟಿ ಗುರ್ಮೆ, ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಭಾರತೀಶ್, ಬಿಜೆಪಿ ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷ ರುಡಾಲ್ಫ್ ಡಿಸೋಜ, ರಾಜ್ಯ ಕಾರ್ಯದರ್ಶಿ ಜೆಸಲ್ ಡಿಸೋಜ, ಬಿಜೆಪಿ ಉಡುಪಿ ನಗರಾಧ್ಯಕ್ಷ ದಿನೇಶ್ ಅಮೀನ್, ಉಡುಪಿ ನಗರಸಭೆಯ ನಿಕಟಪೂರ್ವ ಅಧ್ಯಕ್ಷ ಪ್ರಭಾಕರ ಪೂಜಾರಿ, ಜಿಲ್ಲಾ ಕೆಥೋಲಿಕ್ ಸಭಾ ಅಧ್ಯಕ್ಷ ಮೆಲ್ವಿನ್ ಶಿರ್ವ, ನಿಕಟಪೂರ್ವ ಅಧ್ಯಕ್ಷ ರೊನಾಲ್ಡ್ ಡಿ ಅಲ್ಮೇಡಾ ಉದ್ಯಾವರ, ಮಾಜಿ ಅಧ್ಯಕ್ಷ ಸಂತೋಷ್ ಕರ್ನೋಲಿಯೋ, ಲೆಸ್ಲಿ ಅರೋಜಾ ತೊಟ್ಟಟ, ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾ ಉಪಾಧ್ಯಕ್ಷರಾದ ಮೈಕಲ್ ಡಿಸೋಜ, ಜೆರಾಲ್ಡ್ ಸೂಡ, ಪ್ರಧಾನ ಕಾರ್ಯದರ್ಶಿ ಅಪ್ಸರ್ ಉಚ್ಚಿಲ, ಶೇಖ್ ಆಸಿಫ್ ಕಟಪಾಡಿ, ಕೋಶಾಧಿಕಾರಿ ಗ್ಲೆನ್ ಮೋನಿಸ್, ಪ್ರಮುಖರಾದ ಸಲೀಂ ಅಂಬಾಗಿಲು, ಬಾಲಕೃಷ್ಣ ಶೆಟ್ಟಿ, ರಶ್ಮಿತಾ ಬಿ.ಶೆಟ್ಟಿ, ನವೀನ್ ಡಿಸೋಜ, ಅನಿಲ್ ಅಂಬಲಪಾಡಿ, ಜಸಿಂತಾ, ಜಾನ್ಸನ್, ಮೆಲ್ವಿನ್ ಉಪಸ್ಥಿತರಿದ್ದರು. ’ಮನ್ ಕೀ ಬಾತ್’ ಜಿಲ್ಲಾ ಸಂಚಾಲಕ ಶಿವಕುಮಾರ್ ಅಂಬಲಪಾಡಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ವಾರ್ತಾ ಭಾರತಿ 30 Mar 2026 7:46 pm

ಬಡಕುಟುಂಬಕ್ಕೆ ನಿರ್ಮಿಸಲಾದ ವಾತ್ಸಲ್ಯ ಮನೆ ಹಸ್ತಾಂತರ

ಕುಂದಾಪುರ, ಮಾ.30: ಹೆಮ್ಮಾಡಿ ಸಮೀಪದ ಕಟ್ಬೇಲ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ದೇವಲ್ಕುಂದ ಗ್ರಾಮದ ಕೊಲ್ಲೂರು ಮುಖ್ಯ ರಸ್ತೆಯ ಹತ್ತಿರದಲ್ಲೇ ಇರುವ ಪುಟ್ಟ ಜೋಪಡಿಯಲ್ಲಿದ್ದ ರಾಜು ಹಾಗೂ ಲಕ್ಷ್ಮೀ ದಂಪತಿಗೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ, ಬಿಸಿ ಟ್ರಸ್ಟ್ ನೇತೃತ್ವದಲ್ಲಿ ಜ್ಞಾನವಿಕಾಸ ಕಾರ್ಯಕ್ರಮದ ಮೂಲಕ ನಿರ್ಮಿಸಲಾದ ವಾತ್ಸಲ್ಯ ಮನೆ ಹಸ್ತಾಂತರ ಕಾರ್ಯಕ್ರಮ ಸೋಮವಾರ ನಡೆಯಿತು. ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಉದ್ಘಾಟಿಸಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಕಳೆದ 24 ವರ್ಷಗಳಲ್ಲಿ ಕುಂದಾಪುರದಲ್ಲಿ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ವಾತ್ಸಲ್ಯದ ಮನೆ ಮಾದರಿ ಕಾರ್ಯಕ್ರಮ. ಸಮಾಜಮುಖಿ ಕಾರ್ಯಕ್ರಮಕ್ಕೆ ಧರ್ಮಸ್ಥಳವೇ ಮಾದರಿ ಎಂದರು. ಕುಂದಾಪುರ ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ಉಮೇಶ್ ಶೆಟ್ಟಿ ಶಾನ್ಕಟ್ಟು, ಕೃಷಿ ಉತ್ಪನ್ನ ಮಾರುಕಟ್ಟೆ ಕುಂದಾಪುರದ ಮಾಜಿ ಉಪಾಧ್ಯಕ್ಷ ಶರತ್ ಕುರ್ಮಾ ಶೆಟ್ಟಿ ಬಾಳಿಕೆರೆ, ನೀರಾಮಯ ಸೊಸೈಟಿ ವಂಡ್ಸೆ ಅಧ್ಯಕ್ಷ ಉದಯ ಕುರ್ಮಾ ಶೆಟ್ಟಿ ಅಡಿಕೆಕೊಡ್ಲು, ಶಶಿಧರ ಶೆಟ್ಟಿ ಮಾತನಾಡಿದರು. ಜನಜಾಗೃತಿ ವೇದಿಕೆ ಜಿಲ್ಲಾ ಸದಸ್ಯರಾದ ಸುಬ್ರಹ್ಮಣ್ಯ ಶೆಟ್ಟಿ, ಶೋಭಾ ಜಿ. ಪುತ್ರನ್, ಬಗ್ವಾಡಿ ಮಹಿಷಮರ್ದಿನಿ ದೇವಸ್ಥಾನದ ಆಡಳಿತ ಮೊಕ್ತೇಸರ ಉದಯ ಕುರ್ಮಾ ಹಟ್ಟಿಯಂಗಡಿ, ವಂಡ್ಸೆ ತಿರುಮಲ ವೆಂಕಟರಮಣ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶ್ರೀಧರ ಶೆಟ್ಟಿ, ಕಟ್ ಬೆಲ್ತೂರು ಗ್ರಾಪಂ ಆಡಳಿತಾಧಿಕಾರಿ ಸಂದೇಶ್ ನಾಯಕ್, ಪ್ರಮುಖರಾದ ಡಾ. ಅತುಲ್ ಕುಮಾರ್ ಶೆಟ್ಟಿ, ನಾಗಪ್ಪ ಕೊಠಾರಿ, ವಿ.ಕೆ.ಶಿವರಾಮ ಶೆಟ್ಟಿ, ವೆಂಕಟೇಶ್ ಶೆಟ್ಟಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕುಂದಾಪುರ ಯೋಜನಾಧಿಕಾರಿ ಉಮೇಶ್ ಶೆಟ್ಟಿ ಎಚ್., ವಲಯ ಮೇಲ್ವಿಚಾರಕ ಚಂದ್ರ ಮಧುವನ, ಜ್ಞಾನವಿಕಾಸ ಸಮನ್ವಯಾಧಿಕಾರಿ ರೇಣುಕಾ, ಪ್ರಗತಿ ಬಂಧು ಸ್ವ-ಸಹಾಯ ಸಂಘದ ಅಧ್ಯಕ್ಷರು, ಸದಸ್ಯರು, ಸೇವಾಪ್ರತಿನಿಧಿಗಳು ಉಪಸ್ಥಿತರಿದ್ದರು.

ವಾರ್ತಾ ಭಾರತಿ 30 Mar 2026 7:45 pm

Thalapathy Vijay Assets: ನಾಮಪತ್ರ ಸಲ್ಲಿಸಿದ ವಿಜಯ್, ಇವರ ಒಟ್ಟು ಆಸ್ತಿ ಎಷ್ಟು? ಇಲ್ಲಿದೆ ಮಾಹಿತಿ

ಚೆನ್ನೈ: ತಮಿಳುನಾಡಿನ ಖ್ಯಾತ ನಟ ಮತ್ತು ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಸಂಸ್ಥಾಪಕ ದಳಪತಿ ವಿಜಯ್ (ಜೋಸೆಫ್ ವಿಜಯ್) ಅವರು ಮೊದಲ ಚುನಾವಣೆ ಎದುರಿಸಲು ಸಜ್ಜಾಗಿದ್ದಾರೆ. 52 ವರ್ಷದ ವಿಜಯ್ ಪೆರಂಬೂರು ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದಾರೆ. ಉಮೇದುವಾರಿಕೆ ಸಲ್ಲಿಕೆ ವೇಳೆ ಅವರು ಚುನಾವಣಾ ಅಫಿಡವಿಟ್‌ನಲ್ಲಿ ತಮ್ಮ ಒಟ್ಟು ಆಸ್ತಿಯ ವಿವರಗಳನ್ನು ಘೋಷಿಸಿದ್ದಾರೆ. ಸದ್ಯ ಅವರ ಆಸ್ತಿ

ಒನ್ ಇ೦ಡಿಯ 30 Mar 2026 7:43 pm

ಜಗತ್ತಿಗೆ ಅಹಿಂಸೆ ಮತ್ತು ಶಾಂತಿ ಸಂದೇಶ ನೀಡಿದ ಮಹಾವೀರರು: ಮಹಾವೀರ ಜಯಂತಿಯಲ್ಲಿ ಎಂ.ಎ.ಗಫೂರ್

ಉಡುಪಿ, ಮಾ.30: ಜೈನಧರ್ಮದ 24ನೇ ತೀರ್ಥಂಕರರಾಗಿ ಲೋಕ ಕಲ್ಯಾಣಕ್ಕೆ ಮುಂದಾದ ಮಹಾವೀರರು, ಪಂಚತತ್ವದಡಿಯಲ್ಲಿ ಸಮಾಜವನ್ನು ಕಟ್ಟುವ ಪ್ರಾಮಾಣಿಕ ಪ್ರಯತ್ನ ನಡೆಸಿದ್ದಾರೆ. ಅಲ್ಲದೇ ಅವರು ಇಡೀ ಜಗತ್ತಿಗೆ ಶಾಂತಿ ಹಾಗೂ ಅಹಿಂಸೆಯ ಸಂದೇಶವನ್ನು ನೀಡಿದ್ದಾರೆ ಎಂದು ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ.ಗಫೂರ್ ಹೇಳಿದ್ದಾರೆ. ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜೈನ್‌ಮಿಲನ್ ಉಡುಪಿ ಜಿಲ್ಲೆ ಇವರ ಸಹಯೋಗದಲ್ಲಿ ನಡೆದ ಭಗವಾನ್ ಮಹಾವೀರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು. ಬಿಹಾರದಲ್ಲಿ ಜನಿಸಿದ ಮಹಾವೀರರು ನೀಡಿದ ಸಂದೇಶ ಹಾಗೂ ಅವರು ತೋರಿದ ಸನ್ಮಾರ್ಗದಂತೆ ಸತ್ಯ ಮತ್ತು ಅಹಿಂಸೆಯ ಪಾಲನೆಯ ಮೂಲಕ ಸಾಮರಸ್ಯದ ಸಮಾಜವನ್ನು ಕಟ್ಟುವಂತಾಗಬೇಕು ಎಂದು ಹಾರೈಸಿದರು. ಇಂದಿನ ಜಗತ್ತು ಎದುರಿಸುತ್ತಿರುವ ಅನೇಕ ಸಮಸ್ಯೆಗಳ ನಿವಾರಣೆಗಾಗಿ ದಾರ್ಶನಿಕರ ಚಿಂತನೆಗಳನ್ನು ದಾರಿದೀಪ ವಾಗಿಸಬೇಕು. ಪ್ರತಿಯೊಬ್ಬರು ಅವರ ಆದರ್ಶಗಳನ್ನು ಪಾಲಿಸುವಂತಾಗಬೇಕು. ಭಗವಾನ್ ಮಹಾವೀರರ ತತ್ವಗಳು ಇಂದಿನ ಸಂಘರ್ಷಮಯ ಕಾಲಘಟ್ಟದಲ್ಲಿ ವಿಶ್ವಕ್ಕೆ ಮಾದರಿಯಾಗಿವೆ ಎಂದರು. ಕಾರ್ಯಕ್ರಮದಲ್ಲಿ ಶ್ವೇತಾ ಜೈನ್ ಅವರು ಭಗವಾನ್ ಮಹಾವೀರರ ಕುರಿತು ವಿಶೇಷ ಉಪನ್ಯಾಸ ನೀಡಿದರು. ರಶ್ಮಿ ಸಾಗರ್ ಅವರು ಜಿನಾ ಸ್ಮತಿ ಯನ್ನು ಪ್ರಸ್ತುತ ಪಡಿಸಿದರು. ಈ ಸಂದರ್ಭದಲ್ಲಿ ಯೋಗರಾಜ್ ಶಾಸ್ತ್ರೀ ಇವರನ್ನು ಸನ್ಮಾನಿಸಲಾಯಿತು. ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಜೈನ್ ಮಿಲನ್ ಅಧ್ಯಕ್ಷ ಡಾ. ನಿತಿನ್ ಪಾಟೀಲ್, ಭಾರತೀಯ ಜೈನ್ ಮಿಲನ್‌ನ ಕಾರ್ಯದರ್ಶಿ ಪ್ರಸನ್ನ ಹಾಗೂ ಇತರರು ಉಪಸ್ಥಿತರಿದ್ದರು. ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರೆ, ರಾಮಾಂಜಿ ಕಾರ್ಯಕ್ರಮ ನಿರೂಪಿಸಿ, ನಿತಿನ್ ವಂದಿಸಿದರು.

ವಾರ್ತಾ ಭಾರತಿ 30 Mar 2026 7:42 pm

ಕಲಬುರಗಿ|ಮ್ಯಾಟ್ರಿಕ್ಸ್ ಆಗ್ರೋ ಕಂಪೆನಿ ಏಕಾಏಕಿ ಬಂದ್; ಕಾರ್ಮಿಕರಿಗೆ ನ್ಯಾಯ ಒದಗಿಸುವಂತೆ ಸಚಿವರಿಗೆ ಮನವಿ

ಚಿಂಚೋಳಿ: ತಾಲೂಕಿನ ಪೋಲಕಪಳ್ಳಿ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ‘ಮ್ಯಾಟ್ರಿಕ್ಸ್ ಆಗ್ರೋ ಪ್ರೈವೇಟ್ ಲಿಮಿಟೆಡ್’ ಕಂಪೆನಿಯು ಕಾರ್ಮಿಕ ಕಾಯ್ದೆಗಳನ್ನು ಉಲ್ಲಂಘಿಸಿ ಏಕಾಏಕಿ ಬಂದ್ ಆಗಿರುವ ಘಟನೆಗೆ ಸಂಬಂಧಿಸಿದಂತೆ ಕಾರ್ಮಿಕರಿಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿ, ಮಾರುತಿ ಗಂಜಗೇರಿ ನೇತೃತ್ವದಲ್ಲಿ ಕಾರ್ಮಿಕರ ನಿಯೋಗವು ವಿಕಾಸಸೌಧದಲ್ಲಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರಿಗೆ ಮನವಿ ಸಲ್ಲಿಸಿತು. ಸುಮಾರು 13 ರಿಂದ14 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ಈ ಕಂಪೆನಿಯು ಫೆಬ್ರವರಿ 5ರ ಮಧ್ಯರಾತ್ರಿ ಯಾವುದೇ ಮುನ್ಸೂಚನೆ ನೀಡದೆ ನೋಟಿಸ್ ಅಂಟಿಸಿ ಬಂದ್ ಮಾಡಲಾಗಿದೆ. ಇದರ ಪರಿಣಾಮವಾಗಿ ದಶಕಕ್ಕೂ ಹೆಚ್ಚು ಕಾಲ ಕಂಪೆನಿಯನ್ನು ನಂಬಿ ಜೀವನ ಸಾಗಿಸುತ್ತಿದ್ದ ಸುಮಾರು 120 ಕಾರ್ಮಿಕ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಕಳೆದ 4 ರಿಂದ 5 ತಿಂಗಳುಗಳಿಂದ ಸಂಬಳ ನೀಡದೆ ಸತಾಯಿಸಲಾಗುತ್ತಿದೆ. ಇದರಿಂದ ಮಕ್ಕಳ ಶಾಲಾ ಮತ್ತು ಕಾಲೇಜು ಶುಲ್ಕಗಳನ್ನು ಕಟ್ಟಲು ಸಾಧ್ಯವಾಗದೆ ಕುಟುಂಬಗಳು ಆರ್ಥಿಕ ಸಂಕಷ್ಟ ಅನುಭವಿಸುತ್ತಿವೆ ಎಂದು ಮುಖಂಡರು ಹೇಳಿದ್ದಾರೆ. ಕಂಪೆನಿ ಆರಂಭವಾದಾಗಿನಿಂದಲೇ ಕಾರ್ಮಿಕರಿಗೆ ಇಪಿಎಫ್ (EPF) ಹಾಗೂ ಬೋನಸ್ ಸೌಲಭ್ಯಗಳನ್ನು ನೀಡಲಾಗಿಲ್ಲ ಎಂಬ ಗಂಭೀರ ಆರೋಪವೂ ಕೇಳಿಬಂದಿದೆ. ಸರಕಾರದಿಂದ ಕೋಟಿಗಟ್ಟಲೆ ಸಬ್ಸಿಡಿ ಪಡೆದಿದ್ದರೂ, ಕಾರ್ಮಿಕರ ಹಿತಾಸಕ್ತಿಯನ್ನು ಕಡೆಗಣಿಸಿ ಕಂಪೆನಿ ದೌರ್ಜನ್ಯ ನಡೆಸುತ್ತಿದೆ ಎಂದು ಕಾರ್ಮಿಕರು ಆರೋಪಿಸಿದ್ದಾರೆ. ಕಾರ್ಮಿಕರ ಅಹವಾಲು ಆಲಿಸಿದ ಸಚಿವ ಸಂತೋಷ್ ಲಾಡ್ ಅವರು ತಕ್ಷಣವೇ ಕಾರ್ಮಿಕ ಆಯುಕ್ತರಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಮಾಹಿತಿ ಪಡೆದರು. ಕಾರ್ಮಿಕ ಕಾಯ್ದೆ ಉಲ್ಲಂಘಿಸಿರುವ ಕಂಪೆನಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಹಾಗೂ ತಕ್ಷಣವೇ ಪ್ರಕರಣ ದಾಖಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಈ ವೇಳೆ ಹನುಮಂತ ಗೌರಿ, ಅಣವಾರ ದೌಲಪ್ಪ, ಚಿಮ್ಮಾಯಿದಲಾಯಿ, ಸಿದ್ದಪ್ಪ ಕೇಶ್ವಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 30 Mar 2026 7:38 pm

ದಳಪತಿ ವಿಜಯ್ ಆಸ್ತಿ ವಿವರ ಬಹಿರಂಗ; ಷಟ್ಶತ ಕೋಟ್ಯಾಧೀಶ್ವರ - 1 ರೂ. ಸಾಲ ಇಲ್ಲ; ಪತ್ನಿ ಹೆಸರಲ್ಲೂ ಕೋಟಿ ಕೋಟಿ

ಟಿವಿಕೆ ಪಕ್ಷದ ಸಂಸ್ಥಾಪಕ ದಳಪತಿ ವಿಜಯ್ ಅವರು ತಮಿಳುನಾಡು ವಿಧಾನಸಭಾ ಚುನಾವಣೆಗೆ ಸ್ಪರ್ಧೆ ಮಾಡಿದ್ದು, ಪೆರಂಬೂರ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.ಸದ್ಯ ಚುನಾವಣಾ ಆಯೋಗದಿಂದ ಆಸ್ತಿ ಬಹಿರಂಗವಾಗಿದ್ದು, ನೂರಾರು ಕೋಟಿ ಒಡೆಯ ವಿಜಯ್‌ ಎಂದು ತಿಳಿದುಬಂದಿದೆ. ಅವರ ಒಟ್ಟು ಆಸ್ತಿ ಮೌಲ್ಯ 624 ಕೋಟಿ ರೂ. ಆಗಿದ್ದು, ಪದವಿ ಉತ್ತೀರ್ಣರಾಗಿಲ್ಲ ಎಂದು ಉಲ್ಲೇಖಿಸಿದ್ದಾರೆ.

ವಿಜಯ ಕರ್ನಾಟಕ 30 Mar 2026 7:35 pm

ಶಾಸಕರು IPL ಉಚಿತ ಟಿಕೆಟ್ ಕೇಳುವುದು ತಪ್ಪು: ಡಿ.ಕೆ. ಸುರೇಶ್

ಬೆಂಗಳೂರು: ಶಾಸಕರು ಉಚಿತವಾಗಿ ಐಪಿಎಲ್ ಟಿಕೆಟ್ ಕೇಳಿರುವುದು ತಪ್ಪು. ಪಂದ್ಯ ವೀಕ್ಷಣೆ ಮಾಡುವ ಆಸೆ ಇರುವವರು ವೈಯಕ್ತಿಕವಾಗಿ ಹಣ ಕೊಟ್ಟು ಹೋಗಿ ನೋಡಲಿ ಎಂದು ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ಅಭಿಪ್ರಾಯ ವ್ಯಕ್ತಪಡಿಸಿದರು. ಸೋಮವಾರ ಸದಾಶಿವನಗರದಲ್ಲಿರುವ ತಮ್ಮ ನಿವಾಸದ ಬಳಿ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, RCB ಸಂಭ್ರಮಾಚರಣೆ ವೇಳೆ ನಡೆದ ದುರ್ಘಟನೆ ಸಂದರ್ಭದಲ್ಲಿ ಯಾರು ಯಾವ ರೀತಿ ವಾಗ್ದಾಳಿ ಮಾಡಿದ್ದರು, ಪದ ಬಳಸಿದ್ದರು ಎಂದು ತೆಗೆದು ನೋಡಲಿ. ಬಿಜೆಪಿ ಶಾಸಕರು ಕೂಡ ಐಪಿಎಲ್ ಟಿಕೆಟ್ ಪಡೆದಿದ್ದಾರೆ. ಐಪಿಎಲ್ ರಾಷ್ಟ್ರವನ್ನು ಪ್ರತಿನಿಧಿಸುವ ಪಂದ್ಯಾವಳಿ ಅಲ್ಲ. ವಾಣಿಜ್ಯ ಉದ್ದೇಶಿತ ಪಂದ್ಯಾವಳಿ. ಇವುಗಳ ಬಗ್ಗೆ ಜನಪ್ರತಿನಿಧಿಗಳು ಹೆಚ್ಚು ಗಮನಹರಿಸುವುದು ಒಳ್ಳೆಯದಲ್ಲ ಎಂದು ಹೇಳಿದರು. ಬೆಂಗಳೂರಿನ ನಾಲ್ಕು ಕಡೆ ಕ್ರೀಡಾಂಗಣಗಳನ್ನು ನಿರ್ಮಿಸಬೇಕು: ಚಿನ್ನಸ್ವಾಮಿ ಕ್ರೀಡಾಂಗಣ ಬೇರೆಡೆ ಸ್ಥಳಾಂತರ ಮಾಡಬೇಕು ಎಂಬ ಚರ್ಚೆ ನಡೆಯುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಈಗಾಗಲೇ ನಾನು ಆಯ್ಕೆ ಮಾಡಿ, ಸೂಚಿಸಿದ ಜಾಗದಲ್ಲಿ ಹೊಸ ಕ್ರೀಡಾಂಗಣ ಮಾಡಲು ಸರಕಾರ ಮನ್ನಣೆ ನೀಡಿದೆ. ಸೂರ್ಯ ಸಿಟಿಯಲ್ಲಿ ಕ್ರೀಡಾಂಗಣ ಮಾಡುವ ಬಗ್ಗೆ ಪ್ರಸ್ತಾವನೆ ಸಲ್ಲಿಸಿದ್ದು ನಾನೇ. ಬೆಂಗಳೂರಿನ ನಾಲ್ಕು ದಿಕ್ಕಿನಲ್ಲಿ ನಾಲ್ಕು ಕ್ರೀಡಾಂಗಣ ಮಾಡಬೇಕು ಎಂದು ತಿಳಿಸಿದರು. ಕಂಠೀರವ ಕ್ರೀಡಾಂಗಣ, ಕೆಎಸ್‍ಸಿಎ, ಫುಟ್ಬಾಲ್ ಕ್ರೀಡಾಂಗಣ ಹೊರತಾಗಿ ಬೇರೆ ಯಾವುದೆ ಕ್ರೀಡಾಂಗಣವಿಲ್ಲ. ಇಷ್ಟು ದೊಡ್ಡ ಜನಸಂಖ್ಯೆ ಇರುವ ನಗರದಲ್ಲಿ ಯುವಕರಿಗೆ ಕ್ರೀಡೆಯಲ್ಲಿ ಪ್ರೋತ್ಸಾಹ ನೀಡಬೇಕಾದರೆ ನಾಲ್ಕು ದಿಕ್ಕಿನಲ್ಲಿ ಕ್ರೀಡಾಂಗಣ ನಿರ್ಮಿಸಬೇಕು ಎಂದು ಸಲಹೆ ನೀಡಿದ್ದೆ. ನಾನು ಲೋಕಸಭೆ ಸದಸ್ಯನಾಗಿದ್ದಾಗ, ನನ್ನದೇ ಕ್ಷೇತ್ರದ ಸೂರ್ಯ ಸಿಟಿಯಲ್ಲಿ 100 ಎಕರೆ ಮೀಸಲಿಡಬೇಕು ಎಂದು ಹೇಳಿದ್ದೆ. ನಂತರ ಅದನ್ನು ಮೀಸಲಿಟ್ಟು, ಯೋಜನೆ ಅನುಮೋದನೆ ಪಡೆಯಲಾಗಿತ್ತು ಎಂದು ಸುರೇಶ್ ಹೇಳಿದರು. ಈ ಬಗ್ಗೆ ನಾನು ಸಚಿವ ಝಮೀರ್ ಅಹ್ಮದ್, ರಾಜೀವ್ ಗಾಂಧಿ ವಸತಿ ನಿಗಮದ ಅಧ್ಯಕ್ಷ ಶಿವಲಿಂಗೇಗೌಡರನ್ನು ಭೇಟಿ ಮಾಡಿದ್ದೇನೆ ಹಾಗೂ ಆನೇಕಲ್ ಶಾಸಕ ಶಿವಣ್ಣ ಜೊತೆ ಚರ್ಚೆ ಮಾಡಿದ್ದೇನೆ. ಈಗ ಈ ಯೋಜನೆಗೆ ಸಚಿವ ಸಂಪುಟ ಸಭೆಯಲ್ಲೂ ಅನುಮೋದನೆ ನೀಡಲಾಗಿದೆ. 50-60 ಎಕರೆ ಪ್ರದೇಶದಲ್ಲಿ ಅತ್ಯುತ್ತಮ ಕ್ರೀಡಾಂಗಣ ಆಗಲಿದೆ ಎಂದು ಅವರು ತಿಳಿಸಿದರು. ಬಿಡಿಎ ಮೂಲಕ ಶಿವರಾಮ ಕಾರಂತ ಬಡಾವಣೆಯಲ್ಲೂ ಕ್ರೀಡಾಂಗಣ ಮಾಡಬೇಕು ಎಂದು ಉಪಮುಖ್ಯಮಂತ್ರಿಗೆ ಮನವಿ ಮಾಡಿದ್ದೇನೆ. ಅಲ್ಲೂ 40 ಎಕರೆ ಮೀಸಲಿಡಲಾಗಿದೆ. ಬಿಡದಿಯಲ್ಲೂ ಸುಸಜ್ಜಿತ ಕ್ರೀಡಾಂಗಣ ನಿರ್ಮಾಣಕ್ಕೆ ಜಾಗ ಮೀಸಲಿಡಲು ಸಂಬಂಧಪಟ್ಟವರ ಜತೆ ಚರ್ಚೆ ಮಾಡುವೆ ಎಂದು ಸುರೇಶ್ ತಿಳಿಸಿದರು. ದ್ವಿಭಾಷಾ ನೀತಿ ತೀರ್ಮಾನ ಉತ್ತಮ: ದ್ವಿಭಾಷಾ ನೀತಿ ತೀರ್ಮಾನದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಮಕ್ಕಳ ಮೇಲೆ ಮೂರು ಭಾಷೆಗಳ ಕಲಿಕೆ ಒತ್ತಡ ಹಾಕಿದರೆ, ಅವರ ಕಲಿಕೆ ಹಾಗೂ ಗ್ರಹಿಕೆ ಕಡಿಮೆಯಾಗುತ್ತದೆ. ಈ ದೃಷ್ಟಿಯಿಂದ ಶಿಕ್ಷಕರು ಕೈಗೊಂಡಿರುವ ತೀರ್ಮಾನ ಉತ್ತಮವಾಗಿದೆ. ಮಕ್ಕಳು ಎರಡು ಭಾಷೆ ಕಡ್ಡಾಯವಾಗಿ ಕಲಿಯಬೇಕು ಎಂಬುದು ಉತ್ತಮ ನಿರ್ಧಾರ. ಮೂರು ಭಾಷೆ ಕಲಿಯುವುದು ಅವರವರ ವೈಯಕ್ತಿಕ ಅಭಿಲಾಷೆ ಎಂದು ತಿಳಿಸಿದರು. ಬಿಜೆಪಿ ನಾಯಕರು ಈ ನಿರ್ಧಾರ ಟೀಕೆ ಮಾಡುತ್ತಿರುವ ಬಗ್ಗೆ ಕುರಿತು ಪ್ರತಿಕ್ರಿಯಿಸಿದ ಅವರು, ಸರಕಾರ ಯಾವುದೆ ತೀರ್ಮಾನ ಕೈಗೊಂಡರೂ ವಿರೋಧ ಮಾಡಬೇಕು ಎಂಬುದೊಂದೆ ಬಿಜೆಪಿ ನಾಯಕರ ಗುರಿ. ಅವರ ಕೇಂದ್ರ ನಾಯಕರನ್ನು ಮೆಚ್ಚಿಸಲು, ಮನವೊಲಿಸಲು ಹಿಂದಿ ಪರವಾಗಿರಬೇಕು. ಬಿಜೆಪಿ ನಾಯಕರು ತಮ್ಮ ಕೇಂದ್ರ ನಾಯಕರಿಗೆ ಕನ್ನಡವನ್ನು ಎಲ್ಲ ರಾಜ್ಯಗಳಲ್ಲಿ ಅಳವಡಿಸಿಕೊಳ್ಳುವಂತೆ ಮಾಡಬೇಕು ಎಂದು ಮನವರಿಕೆ ಮಾಡಬೇಕು ಎಂದು ತಿಳಿಸಿದರು. ತ್ರಿಭಾಷಾ ನೀತಿ ಜಾರಿಗೆ ತಂದಿದ್ದು ಕಾಂಗ್ರೆಸ್, ಈ ನಿರ್ಧಾರ ರಾಜಕೀಯವೆ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಅವತ್ತಿನ ಪರಿಸ್ಥಿತಿ ಬೇರೆ, ಈಗಿನ ಪರಿಸ್ಥಿತಿ ಬೇರೆ. ಇಂದು ಗುಣಮಟ್ಟದ ಅಗತ್ಯವಿದ್ದು, ಎರಡು ಭಾಷೆಗಳಲ್ಲಿ ಕಲಿಕೆ ಆಗಬೇಕು. ಕನ್ನಡವನ್ನು ಪ್ರಧಾನ ಭಾಷೆಯಾಗಿಟ್ಟುಕೊಂಡು ಉಳಿದ ಮತ್ತೊಂದು ಭಾಷೆ ಆಯ್ಕೆ ಮಾಡಿಕೊಳ್ಳುವ ಅವಕಾಶ ನೀಡಲಾಗಿದ್ದು, ಇದು ಪೋಷಕರು ಹಾಗೂ ವಿದ್ಯಾರ್ಥಿಗಳಿಗೆ ಬಿಟ್ಟ ವಿಚಾರ ಎಂದರು.

ವಾರ್ತಾ ಭಾರತಿ 30 Mar 2026 7:14 pm

ವಿಜಯನಗರ| ಜಿಲ್ಲೆಯ ವಿವಿಧೆಡೆ ಬೈಕ್‌ ಕಳ್ಳತನ ನಡೆಸುತ್ತಿದ್ದ ಆರೋಪಿಯ ಬಂಧನ: 12.81 ಲಕ್ಷ ಮೌಲ್ಯದ 14 ಬೈಕ್‌ಗಳು ವಶಕ್ಕೆ

ವಿಜಯನಗರ: ಜಿಲ್ಲೆಯ ವಿವಿಧೆಡೆ ಬೈಕ್‌ಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿದ ಪೊಲೀಸರು 12 ಲಕ್ಷ 81 ಸಾವಿರ ಮೌಲ್ಯದ ವಿವಿಧ ಕಂಪೆನಿಗಳ 14 ಬೈಕ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ಫೆಬ್ರವರಿ 15ರಂದು ವೆಂಕಟೇಶ್ ಎಂಬವರ ಬೈಕ್‌ ಕಳ್ಳತನವಾಗಿತ್ತು. ಈ ಸಂಬಂಧ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.  ಮಾರ್ಚ್ 30ರ ಬೆಳಗಿನ ಜಾವ ಕನಕದಾಸ ವೃತ್ತದಲ್ಲಿ ಗಸ್ತು ಸಂದರ್ಭದಲ್ಲಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದಾಗ  ಆತ ಬೈಕ್‌ ಕಳ್ಳತನ ನಡೆಸಿರುವುದನ್ನು ಒಪ್ಪಿಕೊಂಡಿದ್ದಾನೆ.   ಬಂಧಿತನನ್ನು ಮುನಿರಾಬಾದ್ ನಿವಾಸಿ ಮೆಹಬೂಬ್ (37) ಎಂದು ಗುರುತಿಸಲಾಗಿದೆ. ಆತ ಹೊಸಪೇಟೆ, ಮುನಿರಾಬಾದ್, ಬಳ್ಳಾರಿ, ಗದಗ, ಸಂಡೂರು, ಗಂಗಾವತಿ, ಕಂಪ್ಲಿ ಹಾಗೂ ಮಂಡ್ಯ ಸೇರಿದಂತೆ ವಿವಿಧೆಡೆ ಬೈಕ್‌ಗಳನ್ನು ಕಳ್ಳತನ ಮಾಡಿರುವುದು  ವಿಚಾರಣೆಯ ವೇಳೆ ಬಹಿರಂಗವಾಗಿದೆ.  ಪೊಲೀಸರು ಬಂಧಿತನಿಂದ 14 ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ.   ಈ ಕಾರ್ಯಾಚರಣೆಯಲ್ಲಿ ಪಿಎಸ್‌ಐ ಪರಮೇಶ್ವರಪ್ಪ, ರಾಜಶೇಖರ್ ಹಾಗೂ ಸಿಬ್ಬಂದಿಗಳಾದ ರಾಘವೇಂದ್ರ, ಲಿಂಗರಾಜ್, ಚಂದ್ರಶೇಖರ್, ಕೊಟ್ರೇಶ್, ಪಕ್ಕೀರಪ್ಪ, ದೇವೇಂದ್ರ ಮತ್ತು ಶಿವಪ್ಪಜಿ ಭಾಗವಹಿಸಿದ್ದರು.

ವಾರ್ತಾ ಭಾರತಿ 30 Mar 2026 7:03 pm

ಛೂ ಬಾಣ | ಪಿ. ಮಹಮ್ಮದ್ ಕಾರ್ಟೂನ್

ವಾರ್ತಾ ಭಾರತಿ 30 Mar 2026 7:00 pm

Telangana | ದ್ವೇಷ ಭಾಷಣ ಮಸೂದೆಗೆ ವಿಪಕ್ಷಗಳಿಂದ ತೀವ್ರ ವಿರೋಧ: ಆಯ್ಕೆ ಸಮಿತಿಗೆ ರವಾನೆ

ಹೈದರಾಬಾದ್, ಮಾ.30:  ಕಾಂಗ್ರೆಸ್ ನೇತೃತ್ವದ ತೆಲಂಗಾಣ ಸರ್ಕಾರ ಮಂಡಿಸಿದ ದ್ವೇಷ ಭಾಷಣ ಮತ್ತು ದ್ವೇಷಾಪರಾಧ ನಿಯಂತ್ರಣ ಮಸೂದೆ, 2026ಗೆ ವಿಪಕ್ಷಗಳಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆ, ಮಸೂದೆಯನ್ನು ಪರಿಶೀಲನೆಗಾಗಿ ಆಯ್ಕೆ ಸಮಿತಿಗೆ ಒಪ್ಪಿಸಲಾಗಿದೆ. ಮುಖ್ಯಮಂತ್ರಿ ರೇವಂತ್ ರೆಡ್ಡಿ ಪರವಾಗಿ ಐಟಿ ಹಾಗೂ ಕೈಗಾರಿಕಾ ಸಚಿವ ಡಿ. ಶ್ರೀಧರ್ ಬಾಬು ಅವರು ಈ ಮಸೂದೆಯನ್ನು ವಿಧಾನಸಭೆಯಲ್ಲಿ ಮಂಡಿಸಿದರು. ದ್ವೇಷ ಭಾಷಣಗಳನ್ನು ತಡೆಗಟ್ಟುವುದು ಹಾಗೂ ಪದೇ ಪದೇ ಇಂತಹ ಅಪರಾಧ ಮಾಡುವವರನ್ನು ಕಟ್ಟುನಿಟ್ಟಾಗಿ ಶಿಕ್ಷಿಸುವ ಉದ್ದೇಶದಿಂದ ಮಸೂದೆ ತರಲಾಗಿದೆ. ಆದರೆ ಬಿಜೆಪಿ, ಎಐಎಂಐಎಂ ಮತ್ತು ಸಿಪಿಐ ಪಕ್ಷಗಳು ಮಸೂದೆಗೆ ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ, ಸದನವು ಸರ್ವಾನುಮತದಿಂದ ಇದನ್ನು ಆಯ್ಕೆ ಸಮಿತಿಗೆ ರವಾನಿಸುವ ನಿರ್ಣಯ ಕೈಗೊಂಡಿತು. ಜನರು ಹಾಗೂ ವಿವಿಧ ಗುಂಪುಗಳ ನಡುವೆ ದ್ವೇಷ ಮತ್ತು ಅಸೌಹಾರ್ದತೆಯನ್ನು ಪ್ರಚೋದಿಸುವ ಚಟುವಟಿಕೆಗಳನ್ನು ಸಮಗ್ರವಾಗಿ ತಡೆಯುವುದು, ನಿಯಂತ್ರಿಸುವುದು ಹಾಗೂ ಶಿಕ್ಷಿಸುವುದು ಈ ಕರಡು ಶಾಸನದ ಮುಖ್ಯ ಉದ್ದೇಶವಾಗಿದೆ. ಮಸೂದೆ ಪ್ರಕಾರ ದ್ವೇಷಾಪರಾಧಗಳನ್ನು ಗಂಭೀರ ಹಾಗೂ ಜಾಮೀನುರಹಿತ ಅಪರಾಧಗಳಾಗಿ ಪರಿಗಣಿಸಲಾಗಿದ್ದು, ಇಂತಹ ಪ್ರಕರಣಗಳ ವಿಚಾರಣೆಯನ್ನು ಪ್ರಥಮ ದರ್ಜೆಯ ನ್ಯಾಯಿಕ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ನಡೆಸಲು ಅವಕಾಶ ನೀಡಲಾಗಿದೆ. ಪ್ರಸ್ತುತ ಜಾರಿಯಲ್ಲಿರುವ ಕಾನೂನು ವ್ಯವಸ್ಥೆಗಳು ಆಧುನಿಕ ದ್ವೇಷಾಪರಾಧಗಳ ಬದಲಾಗುತ್ತಿರುವ ಸ್ವರೂಪವನ್ನು ಸಮರ್ಪಕವಾಗಿ ನಿಭಾಯಿಸಲು ಸಾಲುತ್ತಿಲ್ಲ ಎಂಬ ಅಭಿಪ್ರಾಯವನ್ನು ಮಸೂದೆಯ ಉದ್ದೇಶ ಮತ್ತು ಕಾರಣಗಳ ವಿವರಣೆಯಲ್ಲಿ ವ್ಯಕ್ತಪಡಿಸಲಾಗಿದೆ. ಮಸೂದೆ ಪ್ರಕಾರ, ದ್ವೇಷ ಭಾಷಣವೆಂದರೆ ಯಾವುದೇ ರೀತಿಯ ಪೂರ್ವಾಗ್ರಹದಿಂದ ವ್ಯಕ್ತಿ, ವರ್ಗ ಅಥವಾ ಜನಸಮೂಹದ ವಿರುದ್ಧ ದ್ವೇಷ ಅಥವಾ ಅಸೌಹಾರ್ದತೆ ಹುಟ್ಟುಹಾಕುವ ಉದ್ದೇಶದಿಂದ ಮಾತು, ಬರಹ, ಚಿಹ್ನೆ, ದೃಶ್ಯ ಮಾಧ್ಯಮ ಅಥವಾ ಎಲೆಕ್ಟ್ರಾನಿಕ್ ಸಂವಹನದ ಮೂಲಕ ಪ್ರಸಾರವಾಗುವ ವಿಷಯ ಎಂದು ವ್ಯಾಖ್ಯಾನಿಸಲಾಗಿದೆ. ಅದೇ ರೀತಿ, ದ್ವೇಷದ ಭಾವನೆಯಿಂದ ಅಥವಾ ಕೆಟ್ಟ ಉದ್ದೇಶದಿಂದ ಇಂತಹ ವಿಷಯಗಳನ್ನು ಹರಡುವ ಕ್ರಿಯೆಯನ್ನು ‘ದ್ವೇಷಾಪರಾಧ’ ಎಂದು ಮಸೂದೆಯಲ್ಲಿ ನಿರ್ದಿಷ್ಟಪಡಿಸಲಾಗಿದೆ. ಶಿಕ್ಷೆಗಳ ಕುರಿತು, ಮೊದಲ ಬಾರಿಗೆ ಅಪರಾಧ ಮಾಡುವವರಿಗೆ ಒಂದು ವರ್ಷದಿಂದ ಏಳು ವರ್ಷಗಳವರೆಗೆ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 50,000 ರೂ. ದಂಡ ವಿಧಿಸುವ ಪ್ರಾವಧಾನ್ಯವಿದೆ. ಪುನರಾವರ್ತಿತ ಅಪರಾಧಿಗಳಲ್ಲಿ ಶಿಕ್ಷೆಯನ್ನು ಕನಿಷ್ಠ ಎರಡು ವರ್ಷಗಳಷ್ಟು ಹೆಚ್ಚಿಸಿ ಗರಿಷ್ಠ 10 ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ 1 ಲಕ್ಷ ರೂ. ವರೆಗೆ ದಂಡ ವಿಧಿಸಲು ಅವಕಾಶ ನೀಡಲಾಗಿದೆ. ಇದಲ್ಲದೆ, ಅಪರಾಧದ ತೀವ್ರತೆಯನ್ನು ಆಧರಿಸಿ ಸಂತ್ರಸ್ತರಿಗೆ ನ್ಯಾಯಾಲಯದಿಂದ ಸೂಕ್ತ ಪರಿಹಾರ ನೀಡುವ ವ್ಯವಸ್ಥೆಯನ್ನೂ ಮಸೂದೆಯಲ್ಲಿ ಒಳಗೊಂಡಿದೆ.

ವಾರ್ತಾ ಭಾರತಿ 30 Mar 2026 6:59 pm

Belagavi | ಹಿಡಕಲ್ ಜಲಾಶಯ ಹಿನ್ನೀರಿನಲ್ಲಿ ಈಜಲು ಹೋದ ಇಬ್ಬರು ಬಾಲಕರು ನೀರಿನಲ್ಲಿ ಮುಳುಗಿ ಮೃತ್ಯು

ಬೆಳಗಾವಿ: ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಳೇಗುಡನಟ್ಟಿ ಗ್ರಾಮದ ಬಳಿ ಇರುವ ಹಿಡಕಲ್ ಜಲಾಶಯದ ಹಿನ್ನೀರಿನಲ್ಲಿ ಈಜಲು ಹೋದ ಇಬ್ಬರು ಬಾಲಕರು ಸೋಮವಾರ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಸಂಭವಿಸಿದೆ. ಮೃತರನ್ನು ಕೃಷ್ಣಾ ವಿಠಲ ಖಾನಾಪುರೆ (14) ಹಾಗೂ ಪ್ರಜ್ವಲ ಗೋಕಾಕ (14) ಎಂದು ಗುರುತಿಸಲಾಗಿದೆ. ಇವರು ದಾದಾಬಾನಟ್ಟಿ ಆರ್‌.ಸಿ. ಸೆಂಟರ್ ಗ್ರಾಮದ ನಿವಾಸಿಗಳಾಗಿದ್ದಾರೆ. ಶಾಲೆಗಳಿಗೆ ರಜೆ ಇರುವ ಹಿನ್ನೆಲೆಯಲ್ಲಿ ಐವರು ಬಾಲಕರು ಹಳೇಗುಡನಟ್ಟಿ ಗ್ರಾಮದ ದೇವಸ್ಥಾನದ ಬಳಿಯ ಹಿನ್ನೀರಿನಲ್ಲಿ ಈಜಲು ತೆರಳಿದ್ದರು. ಈ ವೇಳೆ ಐವರ ಪೈಕಿ ಮೂವರು ಪ್ರಾಣಾಪಾಯದಿಂದ ಪಾರಾಗಿದ್ದು, ಇಬ್ಬರು ಬಾಲಕರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ವಾರ್ತಾ ಭಾರತಿ 30 Mar 2026 6:53 pm

ಬಾಗಲಕೋಟೆಯಲ್ಲಿ ಸಿದ್ದರಾಮಯ್ಯ ಬೀಡುಬಿಟ್ಟರೂ ಜನರ ಆಶೀರ್ವಾದ ಬಿಜೆಪಿಗೆ: ಬಿ.ವೈ.ವಿಜಯೇಂದ್ರ ವಿಶ್ವಾಸ

ಬಾಗಲಕೋಟೆ ಮುಖ್ಯಮಂತ್ರಿಗಳಿಗೆ ರಾಜಕೀಯ ಪುನರ್ ಜನ್ಮ ಕೊಟ್ಟ ಜಿಲ್ಲೆ; ಅಂಥ ಜಿಲ್ಲೆಯನ್ನು ಮುಖ್ಯಮಂತ್ರಿಗಳು ಮತ್ತು ಕಾಂಗ್ರೆಸ್ಸಿನವರು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ. ಹಾಗಾಗಿ ಅವರು ಇಲ್ಲಿ ಏನೇ ಭಾಷಣ ಮಾಡಿದರೂ ಜನರಿಗೆ ವಾಸ್ತವಿಕ ಸತ್ಯ ಅರ್ಥವಾಗಿದೆ. ವೀರಣ್ಣ ಚರಂತಿಮಠ್ ಅವರು ದೊಡ್ಡ ಅಂತರದಲ್ಲಿ ವಿಜಯಶಾಲಿಯಾಗುತ್ತಾರೆ ಎಂದು ಮತ್ತೊಂದು ಪ್ರಶ್ನೆಗೆ ಬಿವೈ ವಿಜಯೇಂದ್ರ ಉತ್ತರಿಸಿದರು. ಹಣಬಲ, ತೋಳ್ಬಲ ಬಳಸಿ ಅಧಿಕಾರ ದುರ್ಬಳಕೆ ಮಾಡಿಕೊಂಡು ದಬ್ಬಾಳಿಕೆ ಮಾಡಲು ಕಾಂಗ್ರೆಸ್ ಪಕ್ಷ ಹುನ್ನಾರ ನಡೆಸುತ್ತಿದೆ. ಆದರೆ, ಇಲ್ಲಿನ ಪ್ರಜ್ಞಾವಂತ ಮತದಾರರು ಬಿಜೆಪಿ ಗೆಲ್ಲಿಸಲು ನಿರ್ಧರಿಸಿದ್ದಾರೆ ಎಂದರು.

ವಿಜಯ ಕರ್ನಾಟಕ 30 Mar 2026 6:50 pm

ವಿಜಯನಗರ| ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯ ಬಂಧನ: 1,524 ಗ್ರಾಂ ಗಾಂಜಾ ವಶ

ವಿಜಯನಗರ: ಹೊಸಪೇಟೆ ಗ್ರಾಮೀಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದಆರೋಪಿಯನ್ನು ಬಂಧಿಸಿದ ಪೊಲೀಸರು 1,524 ಗ್ರಾಂ ಗಾಂಜಾವನ್ನು ವಶಕ್ಕೆ ಪಡೆದಿದ್ದಾರೆ. ಗ್ರಾಮೀಣ ಪೊಲೀಸ್ ಠಾಣೆಯ ಪಿ.ಐ ಹಾಗೂ ಸಿಬ್ಬಂದಿಗಳು ಆನಂತಶಯನಗುಡಿ ಮತ್ತು ನಾಗೇನಹಳ್ಳಿ ಗ್ರಾಮಗಳಲ್ಲಿ ಗಸ್ತು ತಿರುಗುತ್ತಿದ್ದ ವೇಳೆ ನಾಗೇನಹಳ್ಳಿ ಸಿಸಿ ರಸ್ತೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿದ್ದಾರೆ.   ಬಂಧಿತ ಆರೋಪಿಯನ್ನು ಮನೋಜ್ ಜಿ. ಎಂದು ಗುರುತಿಸಲಾಗಿದೆ. ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ಸಂಬಂಧ ಹೊಸಪೇಟೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಕುರಿತು ಪೊಲೀಸರು ಹೆಚ್ಚಿನ ತನಿಖೆಯನ್ನು ನಡೆಸುತ್ತಿದ್ದಾರೆ.  

ವಾರ್ತಾ ಭಾರತಿ 30 Mar 2026 6:48 pm

ರೋಡ್ ರೇಜ್‌ | ಗುರಿ ತಪ್ಪಿದ ಗುಂಡಿನೇಟಿಗೆ ವಾಕಿಂಗ್ ಮಾಡುತ್ತಿದ್ದ ನಿವೃತ್ತ ಬ್ರಿಗೇಡಿಯರ್ ಮೃತ್ಯು

ಡೆಹ್ರಾಡೂನ್, ಮಾ. 30: ರಸ್ತೆ ಮೇಲಿನ ವಾಗ್ವಾದ ರೋಡ್ ರೇಜ್ ಹಿಂಸಾಚಾರಕ್ಕೆ ತಿರುಗಿ, ತಮ್ಮಷ್ಟಕ್ಕೆ ವಾಕಿಂಗ್ ಮಾಡುತ್ತಿದ್ದ ನಿವೃತ್ತ ಬ್ರಿಗೇಡಿಯರ್ ವಿ.ಕೆ. ಜೋಶಿ (70) ಅವರಿಗೆ ಗುರಿ ತಪ್ಪಿದ ಗುಂಡೇಟು ತಗುಲಿ, ಬಲಿಯಾದ ಘಟನೆ ಸೋಮವಾರ ಬೆಳಿಗ್ಗೆ ಉತ್ತರಾಖಂಡದ ಡೆಹ್ರಾಡೂನ್ ನ ರಾಜ್‌ ಪುರ ರಸ್ತೆಯಲ್ಲಿ ನಡೆದಿದೆ. ರಾಜ್‌ ಪುರ ನಿವಾಸಿಯಾಗಿದ್ದ ಜೋಶಿ ಅವರು ಬೆಳಿಗ್ಗೆ 6.45ರಿಂದ 7 ಗಂಟೆಯ ನಡುವೆ ತಮ್ಮ ನಿಯಮಿತ ನಡಿಗೆಗೆ ಹೊರಟಿದ್ದರು. ಇದೇ ವೇಳೆ ಜನನಿಬಿಡ ರಾಜ್‌ ಪುರ ರಸ್ತೆಯಲ್ಲಿ ಎರಡು ಕಾರುಗಳ ನಡುವೆ ಉಂಟಾದ ರೋಡ್ ರೇಜ್ ಘಟನೆ ಹಿಂಸಾಚಾರಕ್ಕೆ ತಿರುಗಿದೆ ಎಂದು ನಗರ ಎಸ್‌ಪಿ ಪ್ರಮೋದ್ ಕುಮಾರ್ ತಿಳಿಸಿದ್ದಾರೆ.  ಒಂದು ಎಸ್‌ಯುವಿಯಲ್ಲಿ ಪ್ರಯಾಣಿಸುತ್ತಿದ್ದವರು ದಿಲ್ಲಿ ನೋಂದಾಯಿತ ಮತ್ತೊಂದು ಎಸ್‌ಯುವಿಯನ್ನು ಹಿಂದಿಕ್ಕಲು ಯತ್ನಿಸಿದರೂ ವಿಫಲವಾದ ಹಿನ್ನೆಲೆಯಲ್ಲಿ ಕೋಪಗೊಂಡು ಅದನ್ನು ಬೆನ್ನಟ್ಟಿದ್ದಾರೆ. ಬೆನ್ನಟ್ಟುವ ಸಂದರ್ಭದಲ್ಲೇ ಆರೋಪಿಗಳು ಪಿಸ್ತೂಲ್‌ ನಿಂದ ಗುಂಡು ಹಾರಿಸಿದ್ದು, ದಿಲ್ಲಿ ಎಸ್‌ಯುವಿಯ ಟೈರ್‌ ಗಳನ್ನು ಗುರಿಯಾಗಿಸಿಕೊಂಡಿದ್ದರು ಎನ್ನಲಾಗಿದೆ.  ಈ ವೇಳೆ ಗುರಿ ತಪ್ಪಿದ ಒಂದು ಗುಂಡು ಜೋಶಿ ಅವರಿಗೆ ತಗುಲಿದ್ದು, ಅವರು ಸ್ಥಳದಲ್ಲೇ ಕುಸಿದು ಬಿದ್ದರು. ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದರು ಎಂದು ತಿಳಿದು ಬಂದಿದೆ.  ಗುಂಡಿನ ದಾಳಿಯ ನಂತರ ದಿಲ್ಲಿ SUV ರಸ್ತೆಬದಿಯ ಮರಕ್ಕೆ ಡಿಕ್ಕಿ ಹೊಡೆದಿದೆ. ಬಳಿಕ ಆರೋಪಿಗಳು ತಮ್ಮ ವಾಹನವನ್ನು ನಿಲ್ಲಿಸಿ, ಕಾರಿನೊಳಗಿದ್ದ ಇಬ್ಬರ ಮೇಲೆ ಹಲ್ಲೆ ನಡೆಸಿ ವಾಹನವನ್ನು ಹಾನಿಗೊಳಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ ಎನ್ನಲಾಗಿದೆ.  ಆರೋಪಿಗಳು ತಮ್ಮ ಕಾರನ್ನು ಸ್ವಲ್ಪ ದೂರದಲ್ಲಿ ಬಿಟ್ಟು ಓಡಿಹೋಗಿರುವುದು ಪತ್ತೆಯಾಗಿದೆ. ಈ ಸಂಬಂಧ ಎಫ್‌ಐಆರ್ ದಾಖಲಿಸಿಕೊಂಡಿರುವ ಪೊಲೀಸರು, ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿದ್ದು, ಆರೋಪಿಗಳ ಪತ್ತೆಗೆ ಶೋಧ ಕಾರ್ಯ ಮುಂದುವರಿಸಿದ್ದಾರೆ ಎಂದು ತಿಳಿದು ಬಂದಿದೆ. 70 ವರ್ಷ ವಯಸ್ಸಿನ ನಿವೃತ್ತ ಬ್ರಿಗೇಡಿಯರ್ ವಿ.ಕೆ. ಜೋಶಿ ಅವರು ಸುಮಾರು ಮೂರು ದಶಕಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ, ಯುದ್ಧ ಹಾಗೂ ದಂಗೆ ನಿಗ್ರಹ ಕಾರ್ಯಾಚರಣೆಗಳಲ್ಲಿ ಪಾಲ್ಗೊಂಡಿದ್ದರು. ಆದರೆ ನಗರ ಪ್ರದೇಶದಲ್ಲಿ ನಡೆದ ಗುಂಪುಗಳ ನಡುವಿನ ರೋಡ್ ರೇಜ್ ಘರ್ಷಣೆಯ ಸಂದರ್ಭದಲ್ಲಿ ಗುರಿ ತಪ್ಪಿದ ಗುಂಡು ತಗುಲಿ ಅವರು ಮೃತಪಟ್ಟಿದ್ದಾರೆ.

ವಾರ್ತಾ ಭಾರತಿ 30 Mar 2026 6:43 pm

ಡಿವೋರ್ಸ್ ಬಳಿಕ 9 KM ದೀಡ ನಮಸ್ಕಾರ ಹಾಕಿ ದೇವರಿಗೆ Thank You ಹೇಳಿದ 25 ವರ್ಷದ ಯುವಕ! ವಿಡಿಯೋ ವೈರಲ್‌

ಡಿವೋರ್ಸ್ ಬಳಿಕ ಯುವಕನೊಬ್ಬ 9 ಕಿ.ಮೀ ದೀಪ ನಮಸ್ಕಾರ ಹಾಕಿ ಧನ್ಯವಾದ ಹೇಳಿದ್ದಾನೆ. ಉತ್ತರ ಪ್ರದೇಶದ ಬಸ್ತಿ ಜಿಲ್ಲೆಯ ನರ್ಖೋರಿಯಾ ಗ್ರಾಮದಲ್ಲಿ ಘಟನೆ ನಡೆದಿದೆ. ಜೋಗೇಶ್ ಎಂಬ ಯುವಕ 3 ವರ್ಷದ ಹಿಂದೆ ಮದುವೆಯಾಗಿದ್ದು, ನಿತ್ಯ ಜಗಳದಿಂದ ಬೇಸತ್ತು ವಿಚ್ಛೇದನ ಪಡೆದುಕೊಂಡಿದ್ದರು. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ವಿಜಯ ಕರ್ನಾಟಕ 30 Mar 2026 6:41 pm

ಕೊಹ್ಲಿ ಭಾಯ್‌ಗೆ ಮೈದಾನದಲ್ಲಿ ಕೆಣಕ್ಬೇಡಿ, ತುಂಬಾ ಸಮಯ ನಿಲ್ಲಲು ಬಿಡಬೇಡಿ; ಎಸ್‌ಆರ್‌ಎಸ್‌ ಸಹ ಆಟಗಾರರಿಗೆ ಇಶಾನ್ ಎಚ್ಚರಿಕೆ ಸಂದೇಶ

RCB Vs SRH: ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ (ಮಾರ್ಚ್ 28) ನಡೆದ ಐಪಿಎಲ್ 2026ರ ಉದ್ಘಾಟನಾ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ವಿರುದ್ಧ ಸನ್ ರೈಸರ್ಸ್ ಹೈದರಾಬಾದ್ ಹೀನಾಯ ಸೋಲು ಕಂಡಿತು. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರ ಅಬ್ಬರದ ಬ್ಯಾಟಿಂಗ್ ಆರ್‌ಸಿಬಿ ತಂಡಕ್ಕೆ ಸುಲಭವಾಗಿ ಗೆಲುವು ತಂದುಕೊಟ್ಟಿತು. ಇದರ ಬೆನ್ನಲ್ಲೇ ಎಸ್‌ಆರ್‌ಎಚ್‌ ನಾಯಕ ಇಶಾನ್

ಒನ್ ಇ೦ಡಿಯ 30 Mar 2026 6:23 pm

ಬೆಂಗಳೂರು ಫೋಟೋಗ್ರಾಫಿಕ್‌ ಕ್ಲಬ್‌ ಆಯೋಜಿಸಿದ್ದ ಛಾಯಾಚಿತ್ರ ಸ್ಪರ್ಧೆಯಲ್ಲಿ ಭರತ್‌ ಕಂದಕೂರ್‌ಗೆ ಪ್ರಶಸ್ತಿ

ಕೊಪ್ಪಳ: ಬೆಂಗಳೂರು ಫೋಟೋಗ್ರಾಫಿಕ್‌ ಕ್ಲಬ್‌ ಆಯೋಜಿಸಿದ್ದ 'ಕರ್ನಾಟಕದ ಜಾತ್ರೆ ಮತ್ತು ಉತ್ಸವಗಳು’ ಕುರಿತ ಛಾಯಾಚಿತ್ರ ಸ್ಪರ್ಧೆಯಲ್ಲಿ ಕೊಪ್ಪಳದ ಛಾಯಾಗ್ರಹಕ ಭರತ್ ಕಂದಕೂರ ಅವರಿಗೆ ಬಹುಮಾನ ಲಭಿಸಿದೆ. ದೊಡ್ಡಬಳ್ಳಾಪುರದ ಸುಧೀರ್‌ ಭಜನೆ ಹಟ್ಟಿ ಅವರ ಕೊಪ್ಪಳದ ಗವಿಸಿದ್ದೇಶ್ವರ ಜಾತ್ರೆ ಚಿತ್ರ (ಪ್ರಥಮ ಸ್ಥಾನ), ದೊಡ್ಡಬಳ್ಳಾಪುರದ ಬಿ.ಎನ್‌.ಉಮಾಶಂಕರ್‌ ಅವರ ಗೋಕಾಕದ ಭಂಡಾರ ಜಾತ್ರೆ ಚಿತ್ರ (ದ್ವಿತೀಯ ಸ್ಥಾನ), ‘ಪ್ರಜಾವಾಣಿ’ಯ ಕೊಪ್ಪಳ ಛಾಯಾಗ್ರಾಹಕ ಭರತ್ ಕಂದಕೂರ ಅವರ ಅಂಜನಾದ್ರಿ ಬೆಟ್ಟದ ಹನುಮ ಮಾಲೆ ಚಿತ್ರ (ತೃತೀಯ ಸ್ಥಾನ) ಪಡೆದಿವೆ. ಮುಂದಿನ ವರ್ಷದ ಛಾಯಾಚಿತ್ರ ಸ್ಪರ್ಧೆಗೆ 'ಕನಾಟಕದ ಹಬ್ಬ ಮತ್ತು ಆಚರಣೆಗಳು' ಎನ್ನುವ ವಿಷಯ ಆಯ್ಕೆ ಮಾಡಲಾಗಿದ್ದು, ಛಾಯಾಗ್ರಾಹಕರು ಭಾಗಿಯಾಗಬಹುದು ಎಂದು ಕ್ಲಬ್‌ ಅಧ್ಯಕ್ಷ ಟಿ.ಕೆಂಪಣ್ಣ ತಿಳಿಸಿದ್ದಾರೆ. ಪ್ರಶಸ್ತಿಯು ನಗದು ಹಾಗೂ ಪುರಸ್ಕಾರ ಒಳಗೊಂಡಿದ್ದು ಏಪ್ರಿಲ್‌ ಎರಡನೇ ವಾರದಲ್ಲಿ ಬೆಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

ವಾರ್ತಾ ಭಾರತಿ 30 Mar 2026 6:20 pm

ಭಾರತದ ಟೆಕ್ ಉದ್ಯಮದ ಮೇಲೆ ಪಶ್ಚಿಮ ಏಷ್ಯಾ ಯುದ್ಧದ ಕಾರ್ಮೋಡ; ಬೆಂಗಳೂರನ್ನು ಕಾಡಲಿದೆ ಹೀಲಿಯಂ ಕ್ರಂಚ್‌? ಲ್ಯಾಪ್‌ಟಾಪ್‌, ಮೊಬೈಲ್‌ ತುಟ್ಟಿ?

ದೂರದಲ್ಲೆಲ್ಲೋ ನಡೆಯುತ್ತಿರುವ ಮಧ್ಯಪ್ರಾಚ್ಯ ಯುದ್ಧ ಕರ್ನಾಟಕದ ಮೇಲೆ ಏನು ತಾನೆ ಪರಿಣಾಮ ಬೀರಬಲ್ಲದು ಎಂದುಕೊಂಡವರ ಸಂಖ್ಯೆಗೇನೂ ಕಮ್ಮಿಯಿಲ್ಲ. ಆದರೆ ಅಸಲಿಗೆ ಮಧ್ಯಪ್ರಾಚ್ಯದ ಯುದ್ಧ ರಾಜಧಾನಿ ಬೆಂಗಳೂರಿನ ಮೇಲೆ ಏನೆಲ್ಲಾ ಪರಿಣಾಮ ಬೀರುತ್ತಿದೆ ಎಂಬುದನ್ನು ನಾವು ಅರಿಯಲೇಬೇಕು. ಹೀಲಿಯಂ ಕೊರತೆ ಬೆಂಗಳೂರಿನ ಟೆಕ್‌ ಕಂಪನಿಗಳನ್ನು ಕಾಡುವ ಸಾಧ್ಯತೆ ಇದೆ. ಆದರೆ ಈ ಕುರಿತು ಮಾತನಾಡಿರುವ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್‌, ಭಾರತದ ಟೆಕ್‌ ಉದ್ಯಮದ ಮೇಲೆ ಪೂರೈಕೆ ಸರಪಳಿಯ ಕೊರತೆಯಿಂದಾಗಿ ಯಾವುದೇ ನಕಾರಾತ್ಮಕ ಪರಿಣಾಮ ಬೀರಿಲ್ಲ ಎಂದು ಹೇಳಿದ್ದಾರೆ. ಇಲ್ಲಿದೆ ಮಾಹಿತಿ.

ವಿಜಯ ಕರ್ನಾಟಕ 30 Mar 2026 6:20 pm

Vastu Plants: ಮನೆಯಲ್ಲೇ ಐಶ್ವರ್ಯ ಹೆಚ್ಚಿಸಬೇಕಾ? ಈ 5 ಸಸ್ಯಗಳನ್ನು ಬೆಳೆಸಿ

ವಾಸ್ತು ಶಾಸ್ತ್ರದ ಪ್ರಕಾರ ನಮ್ಮ ಮನೆಯಲ್ಲಿ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ ಆರ್ಥಿಕ ಸಮೃದ್ದಿಯನ್ನು ಸುಧಾರಿಸಲು ಕೆಲವು ಸಸ್ಯಗಳನ್ನು ಬೆಳೆಸುವುದು ಉತ್ತಮ ಎಂದು ತಜ್ಞರು ಹೇಳುತ್ತಾರೆ. ಜೀವನದಲ್ಲಿ ಸಣ್ಣಪುಟ್ಟ ಸಮಸ್ಯೆಗಳು ಎದುರಾಗುವದರಿಂದ ಹಿಡಿದು ಹಣಕಾಸು ತೊಂದರೆಗಳವರೆಗೆ ಸರಿಯಾದ ವಾಸ್ತು ಶಾಸ್ತ್ರದ ವಿಧಾನಗಳನ್ನು ಅನುಸರಿಸಿದರೆ ಅದಕ್ಕೆ ಪರಿಹಾರವನ್ನು ಕಂಡು ಕೊಳ್ಳಬಹುದು ಎಂದು ಹೇಳಲಾಗಿದೆ. ವಿಶೇಷವಾಗಿ ಈ ಐದು ಸಸ್ಯಗಳನ್ನು

ಒನ್ ಇ೦ಡಿಯ 30 Mar 2026 6:19 pm

ತಿಂಗಳಿಗೆ 3 ಕೆಜಿ ಇಳಿಸುವ ಡಯಟ್ ಯೋಜನೆ ಬಗ್ಗೆ ಗೊತ್ತೆ?

ನಿಮ್ಮ ಬೆಳಗನ್ನು ಬದಲಿಸಿ

ವಾರ್ತಾ ಭಾರತಿ 30 Mar 2026 6:17 pm

ಪೆಟ್ರೋಲ್, ಡೀಸೆಲ್ ಬೆಲೆ ಸ್ಥಿರ: ಕಚ್ಚಾ ತೈಲದ ಬೆಲೆ ಏರಿಕೆ ಭಾರತದಲ್ಲಿ ಇಂಧನ ದರಗಳ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ?

ಅಮೆರಿಕ-ಇರಾನ್ ಯುದ್ಧ ಮತ್ತು ಹಾರ್ಮುಝ್ ಜಲಸಂಧಿಯ ಮೂಲಕ ಸಾಗಣೆ ಸಮಸ್ಯೆಗಳ ನಡುವೆ, ಪ್ರಪಂಚದಾದ್ಯಂತದ ದೇಶಗಳು ಪೆಟ್ರೋಲ್, ಡೀಸೆಲ್, ಅನಿಲ ಬೆಲೆಗಳನ್ನು ಹೆಚ್ಚಿಸುವಂತೆ ಅಥವಾ ಪಡಿತರ ಕ್ರಮಗಳನ್ನು ಘೋಷಿಸುವಂತೆ ಒತ್ತಾಯಿಸಲ್ಪಟ್ಟಿವೆ. ಜಾಗತಿಕ ಕಚ್ಚಾ ತೈಲ ಬೆಲೆಗಳು ಬ್ಯಾರೆಲ್‌ಗೆ ಸುಮಾರು 120 ಡಾಲರ್ ಗೆ ಏರಿದ್ದರೂ ಭಾರತದಲ್ಲಿ, ಇಲ್ಲಿಯವರೆಗೆ ಸರ್ಕಾರಿ ಸ್ವಾಮ್ಯದ ಸಂಸ್ಕರಣಾಗಾರಗಳು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಹೆಚ್ಚಿಸಿಲ್ಲ. ಕಳೆದ ವಾರ, ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ಮೇಲೆ ಅಬಕಾರಿ ಸುಂಕ ಕಡಿತವನ್ನು ಘೋಷಿಸಿತು, ಇದು ಗ್ರಾಹಕರನ್ನು ಬೆಲೆ ಏರಿಕೆಯಿಂದ ಕಾಪಾಡುವುದರ ಜತೆಗೆ ತೈಲ ಮಾರುಕಟ್ಟೆ ಕಂಪನಿಗಳಿಗೆ ಹೊಡೆತವನ್ನು ಕಡಿಮೆ ಮಾಡಿತು. ದೇಶೀಯ ಪೂರೈಕೆಯನ್ನು ಬಲಪಡಿಸಲು, ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಲೀಟರ್‌ಗೆ 10 ರೂ.ಗಳಷ್ಟು ಕಡಿಮೆ ಮಾಡಿದೆ. ಅದೇ ವೇಳೆ ಡೀಸೆಲ್ ಮೇಲೆ ಲೀಟರ್‌ಗೆ 21.50 ರೂ. ಮತ್ತು ವಿಮಾನ ಟರ್ಬೈನ್ ಇಂಧನದ ಮೇಲೆ ಲೀಟರ್‌ಗೆ 29.50 ರೂ.ಗಳ ರಫ್ತು ಸುಂಕವನ್ನು ಪರಿಚಯಿಸಿದೆ. ಪೆಟ್ರೋಲ್, ಡೀಸೆಲ್ ದರ ಹೇಗಿದೆ? ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯಿಂದಾಗಿ ಹೆಚ್ಚುತ್ತಿರುವ ಕಳವಳಗಳ ನಡುವೆಯೇ ಸೋಮವಾರ ಜಾಗತಿಕ ತೈಲ ಬೆಲೆಗಳಲ್ಲಿ ಏರಿಕೆಯ ಹೊರತಾಗಿಯೂ, ಭಾರತದ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್‌ನ ಚಿಲ್ಲರೆ ಬೆಲೆಗಳು ಬದಲಾಗದೆ ಉಳಿದಿವೆ. ಹೊಸದಿಲ್ಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 94.77 ರೂ ಮತ್ತು ಡೀಸೆಲ್ ಲೀಟರ್‌ಗೆ 87.67 ರೂ ಆಗಿದೆ. ಮುಂಬೈನಲ್ಲಿ, ಪೆಟ್ರೋಲ್ ಲೀಟರ್‌ಗೆ 103.54 ರೂ ಮತ್ತು ಡೀಸೆಲ್ ಬೆಲೆ ಲೀಟರ್‌ಗೆ 90.03 ರೂ.ಗಳಲ್ಲಿ ಬದಲಾಗದೆ ಉಳಿದಿದೆ. ಅಬಕಾರಿ ಸುಂಕ ಕಡಿತದೊಂದಿಗೆ, ಪೆಟ್ರೋಲ್ ಮತ್ತು ಡೀಸೆಲ್‌ನ ಚಿಲ್ಲರೆ ಬೆಲೆಗಳು ಬದಲಾಗದೇ ಉಳಿದಿವೆ. ಅಬಕಾರಿ ಸುಂಕ ಕಡಿತವು ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್, ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಮೇಲಿನ ಆರ್ಥಿಕ ಹೊರೆಯನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ. ಈ ಕಂಪನಿಗಳು ದೇಶೀಯವಾಗಿ ಇಂಧನವನ್ನು ತಮ್ಮ ಪೂರೈಕೆ ವೆಚ್ಚಕ್ಕಿಂತ ಗಮನಾರ್ಹವಾಗಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿವೆ. ಜಾಗತಿಕ ಕಚ್ಚಾ ತೈಲ ಮಟ್ಟದಲ್ಲಿ, ಪೆಟ್ರೋಲ್ ಲೀಟರ್‌ಗೆ ಸುಮಾರು 26 ರೂ. ಮತ್ತು ಡೀಸೆಲ್ ಲೀಟರ್‌ಗೆ 81.90 ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಪ್ರತಿ ಲೀಟರ್‌ಗೆ ರೂ. 10 ಅಬಕಾರಿ ಸುಂಕ ಕಡಿತವು ಈ ನಷ್ಟದ ಒಂದು ಭಾಗವನ್ನು ಸರಿದೂಗಿಸಿದ್ದು, ಪಂಪ್ ಬೆಲೆಗಳನ್ನು ಬದಲಾಯಿಸದೆ ನಿರಂತರ ಪೂರೈಕೆಯನ್ನು ಸಾಧ್ಯವಾಗಿಸುತ್ತದೆ. ಪ್ರಸ್ತುತ ಬಿಕ್ಕಟ್ಟು ಪ್ರಾರಂಭವಾದಾಗಿನಿಂದ ದಕ್ಷಿಣ ಮತ್ತು ಆಗ್ನೇಯ ಏಷ್ಯಾದಾದ್ಯಂತ ಇಂಧನ ಬೆಲೆಗಳು ಶೇ. 30 ರಿಂದ 50 ರಷ್ಟು ಏರಿಕೆಯಾಗಿವೆ, ಉತ್ತರ ಅಮೆರಿಕಾದಲ್ಲಿ ಇಂಧನ ಸುಮಾರು ಶೇ. 30 ಮತ್ತು ಯುರೋಪಿನಲ್ಲಿ ಸುಮಾರು ಶೇ. 20 ರಷ್ಟು ಹೆಚ್ಚಾಗಿದೆ. ಏತನ್ಮಧ್ಯೆ, ಹಾರ್ಮುಜ್ ಜಲಸಂಧಿಯಲ್ಲಿನ ಅಡಚಣೆಯ ನಂತರ ಇಂಧನ ಮತ್ತು ಅನಿಲದ ಸ್ಥಿರ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರ ತಮ್ಮ ಪ್ರಯತ್ನಗಳನ್ನು ತೀವ್ರಗೊಳಿಸಿದೆ. ಇಂಧನ ಅಭಾವದ ಬಗ್ಗೆ ಭಯಭೀತರಾಗಿ ಜನರು ಖರೀದಿ ಮಾಡುವುದು ಬೇಡ ಎಂದು ಸರ್ಕಾರ ಸಾರ್ವಜನಿಕರಲ್ಲಿ ಮನವಿ ಮಾಡಿದೆ. ದೇಶೀಯ ಸಂಸ್ಕರಣಾಗಾರಗಳು ಸಾಕಷ್ಟು ಕಚ್ಚಾ ದಾಸ್ತಾನುಗಳೊಂದಿಗೆ ಹೆಚ್ಚಿನ ಸಾಮರ್ಥ್ಯದ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿದ್ದು ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಸರಬರಾಜುಗಳು ಸಮರ್ಪಕವಾಗಿವೆ ಎಂದು ತೈಲ ಸಚಿವಾಲಯ ರವಿವಾರ ಅಧಿಕೃತ ಹೇಳಿಕೆ ನೀಡಿದೆ. ಇಂಧನ ಮಳಿಗೆಗಳು ಸಹಜ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿವೆ, ಆದರೂ ತಪ್ಪು ಮಾಹಿತಿಯಿಂದಾಗಿ ಕೆಲವು ಪ್ರದೇಶಗಳಲ್ಲಿ ಬೇಡಿಕೆಯಲ್ಲಿ ಏರಿಕೆಗೆ ಕಾರಣವಾಯಿತು. ವದಂತಿಗಳಿಂದಾಗಿ ಕೆಲವು ರಾಜ್ಯಗಳಲ್ಲಿನ ಕೆಲವು ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಜನರು ಭಯಭೀತರಾಗಿ ಇಂಧನ ಖರೀದಿ ಮಾಡಿದ್ದಾರೆ. ಇದರ ಪರಿಣಾಮವಾಗಿ ಹೆಚ್ಚಿನ ಮಾರಾಟ ಮತ್ತು ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಭಾರೀ ಜನಸಂದಣಿ ಉಂಟಾಗಿದೆ. ಆದಾಗ್ಯೂ, ದೇಶದ ಎಲ್ಲಾ ಪೆಟ್ರೋಲ್ ಪಂಪ್‌ಗಳಲ್ಲಿ ಸಾಕಷ್ಟು ಪೆಟ್ರೋಲ್ ಮತ್ತು ಡೀಸೆಲ್ ಸ್ಟಾಕ್‌ಗಳು ಲಭ್ಯವಿದೆ ಎಂದು ಸಚಿವಾಲಯ ತಿಳಿಸಿದೆ. ಎಲ್‌ಪಿಜಿ, ಎಲ್‌ಎನ್‌ಜಿ ಲಭ್ಯತೆ: ನೈಸರ್ಗಿಕ ಅನಿಲ ವಿಭಾಗದಲ್ಲಿ, ಅಗತ್ಯ ವಲಯಗಳಿಗೆ ಆದ್ಯತೆಯ ಹಂಚಿಕೆಯನ್ನು ನೀಡಲಾಗಿದೆ. ಪೈಪ್ಡ್ ನೈಸರ್ಗಿಕ ಅನಿಲ (PNG) ಮತ್ತು CNG ಗ್ರಾಹಕರ ಕಡೆಗೆ ಸಂಪೂರ್ಣ ಪೂರೈಕೆಯನ್ನು ನಿರ್ದೇಶಿಸಲಾಗಿದೆ, ಆದರೆ ಕೈಗಾರಿಕಾ ಮತ್ತು ವಾಣಿಜ್ಯ ಬಳಕೆದಾರರು ತಮ್ಮ ಸಾಮಾನ್ಯ ಬಳಕೆಯ ಸುಮಾರು 80 ಪ್ರತಿಶತವನ್ನು ಪಡೆಯುತ್ತಿದ್ದಾರೆ. ಹೆಚ್ಚುವರಿ ಎಲ್‌ಎನ್‌ಜಿ ಸರಕುಗಳನ್ನು ಸಂಗ್ರಹಿಸುವ ಪ್ರಯತ್ನಗಳ ಜೊತೆಗೆ, ರಸಗೊಬ್ಬರ ಘಟಕಗಳನ್ನು ಶೇಕಡಾ 70 ರಿಂದ 75 ರಷ್ಟು ಮಟ್ಟದಲ್ಲಿ ಪೂರೈಸಲಾಗುತ್ತಿದೆ. ಅನುಮೋದನೆಗಳನ್ನು ಸರಳೀಕರಿಸುವ ಮೂಲಕ ಮತ್ತು ಎಲ್‌ಪಿಜಿ ಯಿಂದ ಪೈಪ್ಡ್ ನೈಸರ್ಗಿಕ ಅನಿಲಕ್ಕೆ ಪರಿವರ್ತನೆಗೊಳ್ಳಲು ಪ್ರೋತ್ಸಾಹಿಸುವ ಮೂಲಕ ನಗರ ಅನಿಲ ಜಾಲಗಳ ವಿಸ್ತರಣೆಯನ್ನು ವೇಗಗೊಳಿಸಲಾಗುತ್ತಿದೆ ಎಂದು ಸಚಿವಾಲಯ ಹೇಳಿದೆ. ಮಾರ್ಚ್‌ನಲ್ಲಿ 2,90,000 ಕ್ಕೂ ಹೆಚ್ಚು ಹೊಸ ಪಿಎನ್‌ಜಿ ಸಂಪರ್ಕಗಳನ್ನು ಸೇರಿಸಲಾಯಿತು. ಇಂದ್ರಪ್ರಸ್ಥ ಗ್ಯಾಸ್, ಮಹಾನಗರ ಗ್ಯಾಸ್, GAIL ಗ್ಯಾಸ್ ಮತ್ತು BPCL ನಂತಹ ಕಂಪನಿಗಳು ಅಳವಡಿಕೆಯನ್ನು ವೇಗಗೊಳಿಸಲು ಪ್ರೋತ್ಸಾಹಕಗಳನ್ನು ನೀಡುತ್ತಿವೆ. ಎಲ್‌ಪಿಜಿ ಪೂರೈಕೆಯು ಭೌಗೋಳಿಕ ರಾಜಕೀಯ ಬೆಳವಣಿಗೆಗಳಿಂದ ಪ್ರಭಾವಿತವಾಗಿದ್ದರೂ, ಕೊರತೆಗಳಿಲ್ಲದೆ ವಿತರಣೆ ಮುಂದುವರೆದಿದೆ. ದೈನಂದಿನ ಮರುಪೂರಣ ವಿತರಣೆಗಳು 55 ಲಕ್ಷ ಸಿಲಿಂಡರ್‌ಗಳನ್ನು ಮೀರಿದೆ. ಕಾಳಸಂತೆಯಲ್ಲಿನ ಖರೀದಿಗಳನ್ನು ತಪ್ಪಿಸಲು ಮೇಲ್ವಿಚಾರಣಾ ಕ್ರಮಗಳನ್ನು ಬಿಗಿಗೊಳಿಸಲಾಗಿದೆ. ವಾಣಿಜ್ಯ ಎಲ್‌ಪಿಜಿ ಪೂರೈಕೆಯು ಬಿಕ್ಕಟ್ಟಿನ ಪೂರ್ವದ ಮಟ್ಟಕ್ಕಿಂತ ಸುಮಾರು 70 ಪ್ರತಿಶತಕ್ಕೆ ಚೇತರಿಸಿಕೊಂಡಿದ್ದು, ಆತಿಥ್ಯ, ಆಹಾರ ಸೇವೆಗಳು ಮತ್ತು ಪ್ರಮುಖ ಕೈಗಾರಿಕಾ ಬಳಕೆದಾರರಿಗೆ ಆದ್ಯತೆ ನೀಡಲಾಗಿದೆ. ಹೆಚ್ಚುವರಿಯಾಗಿ, ರಾಜ್ಯಗಳಿಗೆ ಸೀಮೆಎಣ್ಣೆ ಹಂಚಿಕೆಯನ್ನು ಹೆಚ್ಚಿಸಲಾಗಿದೆ. ಸಂಗ್ರಹಣೆ ಮತ್ತು ಕಾಳಸಂತೆಯ ವಿರುದ್ಧ ಜಾರಿ ಕ್ರಮವನ್ನು ಹೆಚ್ಚಿಸಲಾಗಿದೆ. ಸುಮಾರು 2,900 ತಪಾಸಣೆಗಳನ್ನು ನಡೆಸಲಾಗಿದ್ದು, ಇತ್ತೀಚೆಗೆ ಸುಮಾರು 1,000 ಸಿಲಿಂಡರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಮೇಲ್ವಿಚಾರಣೆಯನ್ನು ಹೆಚ್ಚಿಸಲು, ದೈನಂದಿನ ಪರಿಶೀಲನೆ ನಡೆಸಲು, ತಪ್ಪು ಮಾಹಿತಿಯನ್ನು ಎದುರಿಸಲು ಮತ್ತು ಅನಿಲ ಮೂಲಸೌಕರ್ಯಕ್ಕಾಗಿ ಅನುಮೋದನೆಗಳನ್ನು ತ್ವರಿತಗೊಳಿಸಲು ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಲಾಗಿದೆ. ವದಂತಿಗಳನ್ನು ನಂಬಬೇಡಿ. ಪೆಟ್ರೋಲ್, ಡೀಸೆಲ್ ಮತ್ತು ಎಲ್‌ಪಿಜಿ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರ ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದೆ. ಭಯಭೀತರಾಗಿ ಪೆಟ್ರೋಲ್, ಡೀಸೆಲ್ ಖರೀದಿ ಮತ್ತು ಎಲ್‌ಪಿಜಿ ಬುಕಿಂಗ್ ಅನ್ನು ತಪ್ಪಿಸಿ ಎಂದು ಸರ್ಕಾರ ನಾಗರಿಕರಲ್ಲಿ ವಿನಂತಿಸಿದೆ. ಕೈಗಾರಿಕಾ ಡೀಸೆಲ್, ಪ್ರೀಮಿಯಂ ಪೆಟ್ರೋಲ್ ಬೆಲೆ ಏರಿಕೆ: ಚಿಲ್ಲರೆ ಇಂಧನ ಬೆಲೆಗಳು ಸ್ಥಿರವಾಗಿದ್ದರೂ, ಸರ್ಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿಗಳುಗಳು ಈ ತಿಂಗಳ ಆರಂಭದಲ್ಲಿ ಕೈಗಾರಿಕಾ ಡೀಸೆಲ್ ಮತ್ತು ಪ್ರೀಮಿಯಂ ಪೆಟ್ರೋಲ್ ಬೆಲೆಯನ್ನು ಹೆಚ್ಚಿಸಿದವು. ವಾಣಿಜ್ಯ ಸಂಸ್ಥೆಗಳಿಗೆ ಬೃಹತ್ ಪ್ರಮಾಣದಲ್ಲಿ ಮಾರಾಟವಾಗುವ ಕೈಗಾರಿಕಾ ಡೀಸೆಲ್ ಬೆಲೆಯನ್ನು ಲೀಟರ್‌ಗೆ ರೂ21.92 ರಷ್ಟು ಹೆಚ್ಚಿಸಲಾಗಿದೆ, ಇದು ಗಮನಾರ್ಹ 25% ಹೆಚ್ಚಳವಾಗಿದೆ. ಏತನ್ಮಧ್ಯೆ, ಪ್ರೀಮಿಯಂ ಪೆಟ್ರೋಲ್ ಬೆಲೆಯನ್ನು ಲೀಟರ್‌ಗೆ ರೂ.2 ರಷ್ಟು ಹೆಚ್ಚಿಸಲಾಗಿದೆ. ಇಂದಿನ ಬ್ರೆಂಟ್ ಕಚ್ಚಾ ತೈಲದ ಬೆಲೆ: ಸೋಮವಾರ ಬೆಳಿಗ್ಗೆ ಬ್ರೆಂಟ್ ಕಚ್ಚಾ ತೈಲವು ಪ್ರತಿ ಬ್ಯಾರೆಲ್‌ಗೆ ಶೇ.2.4 ರಷ್ಟು ಏರಿಕೆಯಾಗಿ 115.33 ಡಾಲರ್ ಗೆ ತಲುಪಿದೆ. ಇದು ಅದರ ಮಾಸಿಕ ಏರಿಕೆಯನ್ನು ಶೇಕಡಾ 59 ಕ್ಕೆ ತಲುಪಿಸಿದೆ. ಇದು 1990 ರಲ್ಲಿ ಇರಾಕ್ ಕುವೈತ್ ಮೇಲೆ ಆಕ್ರಮಣ ಮಾಡಿದಾಗ ಕಂಡುಬಂದ ಏರಿಕೆಗಿಂತ ಹೆಚ್ಚಾಗಿದೆ. ರಾಯಿಟರ್ಸ್ ಪ್ರಕಾರ, ಯುಎಸ್ ಕಚ್ಚಾ ತೈಲವು ಶೇ.3 ರಷ್ಟು ಹೆಚ್ಚಾಗಿ 102.52 ಡಾಲರ್ ಗೆ ತಲುಪಿದೆ. ಫೆಬ್ರವರಿ ಅಂತ್ಯದಲ್ಲಿ ಇರಾನ್ ಮೇಲೆ ಅಮೆರಿಕ-ಇಸ್ರೇಲ್ ದಾಳಿಯ ನಂತರ, ಬ್ರೆಂಟ್ ಕಚ್ಚಾ ತೈಲ ಬೆಲೆಗಳು ಶೇಕಡಾ 50 ಕ್ಕಿಂತ ಹೆಚ್ಚು ಏರಿಕೆಯಾಗಿದ್ದು, ಪೂರೈಕೆ ಮತ್ತು ಮಾರುಕಟ್ಟೆ ಸ್ಥಿರತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಈ ಏರಿಕೆಯ ಹೊರತಾಗಿಯೂ, ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಸ್ಥಿರವಾಗಿವೆ. ಭಾರತದಲ್ಲಿ ಇಂಧನ ಬೆಲೆಗಳನ್ನು ಜಾಗತಿಕ ಕಚ್ಚಾ ತೈಲ ಬೆಲೆಗಳು ಮತ್ತು ಕರೆನ್ಸಿ ಚಲನವಲನಗಳ ಆಧಾರದ ಮೇಲೆ ಮೂರು ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಇಂಡಿಯನ್ ಆಯಿಲ್ ಕಾರ್ಪೊರೇಷನ್ (IOC), ಭಾರತ್ ಪೆಟ್ರೋಲಿಯಂ (BPCL) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ (HPCL) ಪ್ರತಿದಿನ ಪರಿಷ್ಕರಿಸುತ್ತವೆ. ಆದಾಗ್ಯೂ, ಅವರು ಇಲ್ಲಿಯವರೆಗೆ ಚಿಲ್ಲರೆ ಬೆಲೆಗಳಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ. ಭಾರತದಲ್ಲಿ ಇಂಧನ ಬೆಲೆಗಳ ಮೇಲೆ ಯಾವ ಅಂಶಗಳು ಪರಿಣಾಮ ಬೀರುತ್ತವೆ?: ಭಾರತದಲ್ಲಿ ಇಂಧನ ಬೆಲೆಗಳ ಮೇಲೆ ಹಲವಾರು ಅಂಶಗಳು ಪರಿಣಾಮ ಬೀರುತ್ತವೆ. ಜಾಗತಿಕ ಕಚ್ಚಾ ತೈಲ ಬೆಲೆ ಇದರಲ್ಲಿ ಪ್ರಮುಖ ಅಂಶ. ಏಕೆಂದರೆ ಕಚ್ಚಾ ತೈಲವು ಪೆಟ್ರೋಲ್ ಮತ್ತು ಡೀಸೆಲ್‌ಗೆ ಮುಖ್ಯ ಕಚ್ಚಾ ವಸ್ತುವಾಗಿದೆ. ಭಾರತವು ತನ್ನ ಹೆಚ್ಚಿನ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುವುದರಿಂದ ಅಮೆರಿಕನ್ ಡಾಲರ್ ವಿರುದ್ಧ ರೂಪಾಯಿ ಮೌಲ್ಯವೂ ಮುಖ್ಯವಾಗಿದೆ. ರೂಪಾಯಿ ದುರ್ಬಲಗೊಂಡರೆ, ಇಂಧನ ಬೆಲೆಗಳು ಹೆಚ್ಚಾಗಬಹುದು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಧಿಸುವ ತೆರಿಗೆಗಳು ಇಂಧನ ಬೆಲೆಗಳಲ್ಲಿ ಹೆಚ್ಚಿನ ಪಾಲನ್ನು ಹೊಂದಿವೆ, ಅದಕ್ಕಾಗಿಯೇ ದರಗಳು ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತವೆ. ಸಾರಿಗೆ ವೆಚ್ಚಗಳು ಮತ್ತು ಬೇಡಿಕೆ-ಪೂರೈಕೆ ಪರಿಸ್ಥಿತಿಗಳು ಸಹ ಅಂತಿಮ ಬೆಲೆಗಳನ್ನು ನಿರ್ಧರಿಸುವಲ್ಲಿ ಪಾತ್ರವಹಿಸುತ್ತವೆ.

ವಾರ್ತಾ ಭಾರತಿ 30 Mar 2026 6:14 pm

ರಂಗೇರಿದ ಉಪ ಚುನಾವಣಾ ಆಖಾಡ: ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆಯಲ್ಲಿ ಕೈ, ಕಮಲ ಅಬ್ಬರ

ರಾಜ್ಯದಲ್ಲಿ ಎರಡು ಉಪ ಚುನಾವಣೆ ಅಖಾಡಗಳು ರಂಗೇರಿವೆ. ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಬಾಗಲಕೋಟೆ ಚುನಾವಣಾ ಅಖಾಡದಲ್ಲಿ ಸ್ವತಃ ಸಿಎಂ ಸಿದ್ದರಾಮಯ್ಯ ಪ್ರಚಾರ ನಡೆಸುತ್ತಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಅವರ ಪರವಾಗಿ ಸಿದ್ದರಾಮಯ್ಯ ಪ್ರಚಾರ ನಡೆಸಿದರು. ಮತ್ತೊಂದು ಕಡೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ವೀರಪ್ಪ ಚರಂತಿಮಠ ಪರವಾಗಿ ಪ್ರಚಾರ ನಡೆಸಿದ್ದಾರೆ. ಈ ಕುರಿತಾದ ಮತ್ತಷ್ಟು ವಿವರ ಇಲ್ಲಿದೆ.

ವಿಜಯ ಕರ್ನಾಟಕ 30 Mar 2026 6:10 pm

Hindi Language: ಹಿಂದಿ ಭಾಷೆ ರದ್ದು, ಎಸ್‌ಎಸ್‌ಎಲ್‌ಸಿ ಮಕ್ಕಳ ಬದುಕಿಗೆ ಕಲ್ಲು:ಆರ್ ಅಶೋಕ್

ಬೆಂಗಳೂರು: ರಾಜ್ಯದಲ್ಲಿ ದ್ವಿಭಾಷಾ ನೀತಿ ಭಾಗವಾಗಿ ಎಸ್‌ಎಸ್‌ಎಲ್‌ಸಿಯಲ್ಲಿ ಹಿಂದಿ ಪರೀಕ್ಷೆಯ ಅಂಕಗಳನ್ನು ಪರಿಗಣಿಸದಿರಲು ತೀರ್ಮಾನಿಸಲಾಗಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಹೇಳಿಕೆಗೆ ವಿಪಕ್ಷ ಬಿಜೆಪಿ ಕೆಂಡವಾಗಿದೆ. 'ತೃತೀಯ ಭಾಷೆ ಹಿಂದಿಯನ್ನು ರದ್ದು ಮಾಡುವ ಮೂಲಕ ಕಾಂಗ್ರೆಸ್‌ ಸರ್ಕಾರ ಮಕ್ಕಳ ಬದುಕಿಗೆ ಕಲ್ಲು ಹಾಕಿದೆ. ಕನ್ನಡದ ಮೇಲಿನ ಪ್ರೀತಿಯಿಂದ ಸರ್ಕಾರ ಈ ತೀರ್ಮಾನ ಮಾಡಿಲ್ಲ. ಇದು

ಒನ್ ಇ೦ಡಿಯ 30 Mar 2026 6:10 pm

ದಾವಣಗೆರೆ ದಕ್ಷಿಣಕ್ಕೆ ಪಂಚ ಗ್ಯಾರಂಟಿಯಿಂದ ಖರ್ಚಾದ ಹಣವೆಷ್ಟು, ಅಂಕಿ- ಅಂಶಗಳ ಜೊತೆ ಮತ ಕೇಳಿದ ಕಾಂಗ್ರೆಸ್ ಶಾಸಕ!

284 ಬೂತ್ ಗಳಲ್ಲೂ ಗ್ಯಾರಂಟಿ ಸಮಿತಿ ವತಿಯಿಂದ ಪ್ರಚಾರ ಕೈಗೊಳ್ಳಬೇಕು. ಗ್ಯಾರಂಟಿಗಳು ಕಾಂಗ್ರೆಸ್ ಗೆ ಶಕ್ತಿ ನೀಡಿದೆ. ರಾಜ್ಯ ಸರ್ಕಾರ ಪಂಚಗ್ಯಾರಂಟಿ ಯೋಜನೆಗಳಿಗಾಗಿ ಇಲ್ಲಿಯವರೆಗೆ 1.31 ಲಕ್ಷ ಕೋಟಿ ರೂ. ಹಣ ವ್ಯಯ ಮಾಡಿದೆ. ಇದನ್ನು ಜನತೆಗೆ ತಿಳಿಸುವ ಕೆಲಸ ಸಮಿತಿ ಸದಸ್ಯರ ಮೇಲಿದೆ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ.ರೇವಣ್ಣ ಹೇಳಿದರು. ದಾವಣಗೆರೆ ದಕ್ಷಿಣದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಗ್ಯಾರಂಟಿ ಯೋಜನೆಗಳನ್ನು ಮುಂದಿಟ್ಟು ಮತದಾರರನ್ನು ಸೆಳೆಯಲು ಕರೆ ನೀಡಿದರು.

ವಿಜಯ ಕರ್ನಾಟಕ 30 Mar 2026 5:58 pm

ಹೊಗೇನಕಲ್ ಫಾಲ್ಸ್‌ನಲ್ಲಿ ದುರಂತ: ನೀರುಪಾಲಾಗಿದ್ದ ವ್ಯಕ್ತಿಯ ಮೃತದೇಹ ಪತ್ತೆ

ಹನೂರು: ತಾಲೂಕಿನಲ್ಲಿ ಇರುವ ಹೊಗೇನಕಲ್ ಫಾಲ್ಸ್ ಬಳಿ ರವಿವಾರ ಸಂಜೆ ಈಜಲು ನೀರಿಗೆ ಇಳಿದು ನೀರುಪಾಲಾಗಿದ್ದ ವ್ಯಕ್ತಿಯ ಮೃತದೇಹ ಸೋಮವಾರ ಬೆಳಗ್ಗೆ ಪತ್ತೆಯಾಗಿದೆ. ಮೃತರನ್ನು ಲಿಂಗರಾಜು (42) ಎಂದು ಗುರುತಿಸಲಾಗಿದ್ದು, ಅವರು ನೀರಿನ ಸುಳಿಗೆ ಸಿಲುಕಿ ಕಾಣೆಯಾಗಿದ್ದರು. ಯಳಂದೂರು ತಾಲೂಕು ಗುಂಬಳ್ಳಿ ಗ್ರಾಮದ ನಿವಾಸಿಯಾಗಿದ್ದ ಅವರು ಕುಟುಂಬದೊಂದಿಗೆ ಪ್ರವಾಸಕ್ಕೆ ಬಂದಿದ್ದರು. ನುರಿತ ಈಜುಗಾರರ ತಂಡ ನಿರಂತರವಾಗಿ ಶೋಧ ಕಾರ್ಯಾಚರಣೆ ನಡೆಸಿ, ಸೋಮವಾರ ಬೆಳಗ್ಗೆ ಮೃತದೇಹವನ್ನು ಪತ್ತೆಹಚ್ಚಿದರು. ಹನೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ, ಕುಟುಂಬಸ್ಥರಿಗೆ ಮೃತದೇಹವನ್ನು ಹಸ್ತಾಂತರಿಸಲಾಯಿತು.

ವಾರ್ತಾ ಭಾರತಿ 30 Mar 2026 5:51 pm

ಐಪಿಎಲ್‌ ಕ್ರಿಕೆಟ್ ನೋಡಲು ಶಾಸಕರಿಗೆ 3 ಉಚಿತ ಟಿಕೆಟ್‌! ಕೆಎಸ್ ಸಿಎಗೆ ಸೂಚನೆ ಕೊಟ್ಟ ಡಿಕೆಶಿ

ಐಪಿಎಲ್‌ ಕ್ರಿಕೆಟ್ ಪಂದ್ಯಾಟ ವೀಕ್ಷಿಸಲು ಶಾಸಕರಿಗೆ ಮೂರು ಟಿಕೆಟ್ ನೀಡಲು ತೀರ್ಮಾನ ಮಾಡಲಾಗಿದೆ. ಇತರ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಾಟಗಳಿಗೆ 2 ಟಿಕೆಟ್ ಉಚಿತವಾಗಿ ನೀಡಿದರೆ, ಎರಡು ಟಿಕೆಟ್ ಹಣ ಕೊಟ್ಟು ಖರೀದಿ ಮಾಡಬೇಕು. ಯಾರಿಗೆ ಟಿಕೆಟ್ ಬೇಕು ಅವರು ಸ್ಪೀಕರ್ ಯು.ಟಿ ಖಾದರ್ ಅವರಿಗೆ ಪತ್ರವನ್ನು ಬರೆಯಬೇಕು. ಸ್ಪೀಕರ್ ಕಚೇರಿಯಿಂದ ಟಿಕೆಟ್ ಕೊಂಡುಕೊಳ್ಳಲು ಆದ್ಯತೆಯ ಮೇಲೆ ಅವಕಾಶ ಮಾಡಿಕೊಡುತ್ತೇವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಅವರು ತಿಳಿಸಿದ್ದಾರೆ. ಮತ್ತಷ್ಟು ಮಾಹಿತಿ ಇಲ್ಲಿದೆ.

ವಿಜಯ ಕರ್ನಾಟಕ 30 Mar 2026 5:35 pm

IPL 2026- ವಾಂಖೆಡೆ ಕ್ರೀಡಾಂಗಣದ ಗ್ಯಾಲರಿಯಲ್ಲಿ ಪ್ರಪೋಸ್ ಮಾಡುವಾಗ ಕಳೆದುಹೋದ ಉಂಗುರ; ಒಂದು ಕ್ಷಣ ಗೊಂದಲ

KKR Vs MI Match- ವಾಂಖೆಡೆ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್ ತಂಡ ಭಾನುವಾರದಂದು ಕೋಲ್ಕತಾ ನೈಟ್ ರೈಡರ್ಸ್ ಅನ್ನು 6 ವಿಕೆಟ್ ಗಳಿಂದ ಗೆದ್ದು ಬೀಗಿತಷ್ಟೇ. ಆದರೆ ಪಂದ್ಯ ನಡೆಯುತ್ತಿದ್ದಾಗ ಗ್ಯಾಲರಿಯಲ್ಲಿದ್ದ ಎಲ್ಲ ಪ್ರೇಕ್ಷಕರ ಗಮನ ಜೋಡಿಯೊಂದರ ಮೇಲಿತ್ತು. ಎಲ್ಲರೂ ನೋಡುನೋಡುತ್ತಿದ್ದಂತೆಯೇ ಕೆಕೆಆರ್ ತಂಡವನ್ನು ಪ್ರೀತಿಸುವ ಹುಡುಗಿಗೆ ಎಂಐ ಬೆಂಬಲಿಗನೊಬ್ಬ ಪ್ರಪೋಸ್ ಮಾಡಿಯೇ ಬಿಟ್ಟ. ಈ ಸಂದರ್ಭದಲ್ಲಿ ರಿಂಗ್ ಕಳೆದುಹೋಗಿ ಸಣ್ಣ ಗೊಂದಲವೇರ್ಪಟ್ಟಿತ್ತು. ಆದರೆ ಕ್ಷಣಾರ್ಧದಲ್ಲೇ ಎಲ್ಲವೂ ಸರಿಯಾಗಿ ಸುಖಾಂತವಾಯಿತು.

ವಿಜಯ ಕರ್ನಾಟಕ 30 Mar 2026 5:28 pm