ವೃತ್ತಿಯಲ್ಲಿ AI ಜೊತೆಗೆ ಕೆಲಸ ಮಾಡುತ್ತಿದ್ದವರಿಗೆ ʼAI ಬ್ರೈನ್ಫ್ರೈʼ ಸಮಸ್ಯೆ!
ಏನಿದು AI ಬ್ರೈನ್ಫ್ರೈ?
'ಐಐಐಟಿ' ಧಾರವಾಡದ ವಿದ್ಯಾರ್ಥಿಗೆ ನಿರಾಳತೆ ತಂದ ‘ಪಿಎಂ ಯಶಸ್ವಿ' ವಿದ್ಯಾರ್ಥಿವೇತನ
ಧಾರವಾಡ : ಧಾರವಾಡದ 'ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಇನ್ಫರ್ಮೇಶನ್ ಟೆಕ್ನಾಲಜಿ'(ಐಐಐಟಿ)ಯ ವಿದ್ಯಾರ್ಥಿಯೊಬ್ಬರು 'ಸದೃಢ ಭಾರತಕ್ಕಾಗಿ ಪಿಎಂ ಯುವ ಸಾಧಕರ ವಿದ್ಯಾರ್ಥಿವೇತನ ಪ್ರಶಸ್ತಿ ಯೋಜನೆ' (ಪಿಎಂ ಯಶಸ್ವಿ) ಅಡಿಯಲ್ಲಿ ನೆರವು ಪಡೆದ ಹಿನ್ನೆಲೆಯಲ್ಲಿ ಪ್ರಧಾನಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ವಿದ್ಯಾರ್ಥಿವೇತನ ಮಂಜೂರಾತಿ ವಿಳಂಬದಿಂದ ಉಂಟಾಗಿದ್ದ ಆರ್ಥಿಕ ಸಂಕಷ್ಟವು ಕುಂದುಕೊರತೆ ನಿವಾರಣೆ ಬಳಿಕ ಬಗೆಹರಿದಿದ್ದು, ವಿದ್ಯಾರ್ಥಿ ರಾಕೇಶ್ ಗಡುಪುಡಿ ಅವರು ಪ್ರಧಾನ ಮಂತ್ರಿ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ ರಾಕೇಶ್ ಅವರು ಈ ಹಿಂದೆ ಪ್ರಧಾನಿಗೆ ಪತ್ರ ಬರೆದು, ತಾವು ಬಡ ಕುಟುಂಬದಿಂದ ಬಂದವರು ಮತ್ತು ತಮ್ಮ ಶಿಕ್ಷಣವನ್ನು ಬೆಂಬಲಿಸಲು ವಿದ್ಯಾರ್ಥಿವೇತನವು ನಿರ್ಣಾಯಕವಾಗಿದೆ ಎಂದು ತಿಳಿಸಿದ್ದರು. ಕಾಲೇಜಿನ ಮೊದಲ ವರ್ಷದಲ್ಲಿ ವಿದ್ಯಾರ್ಥಿವೇತನ ಯೋಜನೆಯ ಬಗ್ಗೆ ತಮಗೆ ತಿಳಿದಿರಲಿಲ್ಲ. ಆದರೆ, ಅದರ ಬಗ್ಗೆ ತಿಳಿದ ನಂತರ ಅವರು ತಮ್ಮ ಎರಡನೇ ವರ್ಷದಲ್ಲಿ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಿದ್ದಾಗಿ ಅವರು ಪತ್ರದಲ್ಲಿ ತಿಳಿಸಿದ್ದರು. ಅರ್ಜಿಯನ್ನು ಸಂಸ್ಥೆಯು ಅನುಮೋದಿಸಿತ್ತಾದರೂ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಅಂತಿಮ ಅನುಮೋದನೆ ಜನವರಿ 2025 ರಿಂದ ಬಾಕಿ ಉಳಿದಿತ್ತು. ಈ ವಿಳಂಬವು ಆರ್ಥಿಕ ಸಂಕಷ್ಟಕ್ಕೆ ಕಾರಣವಾಗುತ್ತಿದೆ ಮತ್ತು ಅಧ್ಯಯನದತ್ತ ಗಮನ ಕೇಂದ್ರೀಕರಿಸುವ ತಮ್ಮ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಪ್ರಧಾನಿಯವರ ನೆರವು ಕೋರಿ ಬರೆದ ಪತ್ರದಲ್ಲಿ ರಾಕೇಶ್ ಅವರು ತಿಳಿಸಿದ್ದರು. ಪ್ರಕ್ರಿಯೆಯಲ್ಲಿನ ವಿಳಂಬದಿಂದಾಗಿ ಅರ್ಹ ವಿದ್ಯಾರ್ಥಿಗಳು ತೊಂದರೆ ಎದುರಿಸದಂತೆ ತ್ವರಿತ ಅನುಮೋದನೆ ನೀಡಬೇಕೆಂದು ಅವರು ವಿನಂತಿಸಿದ್ದರು. ಈ ಸಮಸ್ಯೆ ಪರಿಹಾರವಾದ ಬಳಿಕ ಮತ್ತು ವಿದ್ಯಾರ್ಥಿವೇತನವನ್ನು ಮಂಜೂರು ಮಾಡಿದ ನಂತರ, ರಾಕೇಶ್ ಅವರು ಡಿಸೆಂಬರ್ 2025 ರಲ್ಲಿ ಪ್ರಧಾನಿಯವರಿಗೆ ಮತ್ತೆ ಪತ್ರ ಬರೆದು, ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಅವರು ಬರೆದ ಪತ್ರದಲ್ಲಿ, ದೀರ್ಘಕಾಲದ ಅಭಿಮಾನಿಯಾಗಿ, ಎಲ್ಲರನ್ನೂ ಒಳಗೊಳ್ಳುವ ಭಾರತವನ್ನು ನಿರ್ಮಿಸುವ ನಿಮ್ಮ ದೂರದೃಷ್ಟಿ ಮತ್ತು ಸಮರ್ಪಣೆಯಿಂದ ನಾನು ಸದಾ ಸ್ಫೂರ್ತಿ ಪಡೆದಿದ್ದೇನೆ. ದೇಶದ ಯುವಕರಿಗೆ ನಿಮ್ಮ ಬದ್ಧತೆ ಮತ್ತು ಪಾರದರ್ಶಕ ಆಡಳಿತವು 'ಪಿಎಂ ಕುಂದುಕೊರತೆ ಪೋರ್ಟಲ್'ನಂತಹ ವೇದಿಕೆಗಳ ಮೂಲಕ ಸ್ಪಷ್ಟವಾಗಿದೆ, ಎಂದು ಉಲ್ಲೇಖಿಸಿದ್ದಾರೆ. ಸಮಸ್ಯೆಯ ಪರಿಹಾರದ ನಂತರ, ವಿದ್ಯಾರ್ಥಿವೇತನದ ಬೆಂಬಲವು ತನ್ನ ಮತ್ತು ಕುಟುಂಬಕ್ಕೆ ಅಮೂಲ್ಯವಾಗಿದೆ ಎಂದು ರಾಕೇಶ್ ಪತ್ರದಲ್ಲಿ ತಿಳಿಸಿದ್ದಾರೆ.
ಇಸ್ರೇಲ್ -ಇರಾನ್ ಯುದ್ಧ: ಮಧ್ಯಪ್ರಾಚ್ಯದಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರಲು 60 ವಿಮಾನಗಳ ಕಾರ್ಯಾಚರಣೆ
ಇಸ್ರೇಲ್ - ಇರಾನ್ ನಡುವಿನ ಯುದ್ಧದ ಬಿಸಿ ಮಧ್ಯಪ್ರಾಚ್ಯ ದೇಶಗಳಿಗೆ ತಟ್ಟಿದೆ. ಅಲ್ಲಿ ಸಿಲುಕಿರುವ ಭಾರತೀಯರನ್ನು, ವಾಪಸ್ ಭಾರತಕ್ಕೆ ಕರೆತರುವ ಸಲುವಾಗಿ ಏರ್ ಇಂಡಿಯಾ ಮತ್ತು ಏರ್ ಇಂಡಿಯಾ ಎಕ್ಸ್ಪ್ರೆಸ್ನ 60 ವಿಮಾನಗಳು ಇಂದು ಕಾರ್ಯ ನಿರ್ವಹಿಸಲಿವೆ. ಸೂಕ್ತ ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ಸೇವೆಗಳನ್ನು ನಿರ್ವಹಿಸುತ್ತಿವೆ.
BCCI Reword To Team India- 2026ರ ಟಿ20 ವಿಶ್ವಕಪ್ ಫೈನಲ್ನಲ್ಲಿ ನ್ಯೂಜಿಲೆಂಡ್ ತಂಡವನ್ನು 96 ರನ್ಗಳಿಂದ ಸೋಲಿಸಿ ಸತತ ಎರಡನೇ ಬಾರಿ ಚಾಂಪಿಯನ್ ಆದ ಭಾರತ ತಂಡಕ್ಕೆ ಬಿಸಿಸಿಐ ಇದೀಗ 131 ಕೋಟಿ ರೂಪಾಯಿ ಬಹುಮಾನ ಘೋಷಿಸಿದೆ. ಇದು ಐಸಿಸಿ ನೀಡಿದ ಬಹುಮಾನದ ಮೊತ್ತಕ್ಕಿಂತ 6 ಪಟ್ಟು ಅಧಿಕವಾಗಿದೆ. ಜೊತೆಗೆ 2024ರಲ್ಲಿ ಟಿ20 ವಿಶ್ವಕಪ್ ಗೆದ್ದೀಗ ನೀಡಿದ್ದ ಬಹುಮಾನ ಮೊತ್ತಕ್ಕಿಂತ 6 ಕೋಟಿ ರೂ. ಅಧಿಕವಾಗಿದೆ. ಈ ಮೊತ್ತವನ್ನು ತಂಡದ ಎಲ್ಲಾ ಆಟಗಾರರು, ತರಬೇತುದಾರರು ಮತ್ತು ಸಹಾಯಕ ಸಿಬ್ಬಂದಿಗೆ ಹಂಚಿಕೆ ಮಾಡಲಾಗುತ್ತದೆ.
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ
Suryakumar Yadav: ಟೀಂ ಇಂಡಿಯಾದ ಕ್ರಿಕೆಟ್ ತಂಡದ ನಾಯಕ ಸೂರ್ಯಕುಮಾರ್ ಯಾದವ್ (Suryakumar Yadav) ಈ ವರ್ಷದ 2026 ಟಿ20 ವಿಶ್ವಕಪ್ ಗೆಲ್ಲುವಲ್ಲಿ ಅಸಾಧಾರಣ ಪ್ರತಿಭೆ ತೋರಿಸಿದರು. ಆದರೆ ಮುಂದಿನ ವರ್ಷದ ಟೂರ್ನಿಯ ನಾಯಕತ್ವವು ಬದಲಾಗುವ ಸಾಧ್ಯತೆ ಇದೆ. ಟ್ರೋಫಿ ಗೆದ್ದರು ಐಸಿಸಿ ಸೂರ್ಯಕುಮಾರ್ ಯಾದವ್ ಅವರನ್ನು ಮುಂದಿನ ಟಿ20 ವಿಶ್ವಕಪ್ ಟೂರ್ನ್ಮೆಂಟ್ನಿಂದ ಹೊರಗಿಟ್ಟಿದೆ. ಹೀಗಾಗಿ ಅವರ
12ನೇ ತರಗತಿ ಗಣಿತ ಪ್ರಶ್ನೆಪತ್ರಿಕೆಯಲ್ಲಿ ʼರಿಕ್ರೋಲ್’’ QR ಕೋಡ್ : ಸ್ಪಷ್ಟನೆ ನೀಡಿದ CBSE
ಹೊಸದಿಲ್ಲಿ : ಸಿಬಿಎಸ್ಇ 12ನೇ ತರಗತಿ ಗಣಿತ ಪರೀಕ್ಷೆಯ ಪ್ರಶ್ನೆಪತ್ರಿಕೆಯಲ್ಲಿ ‘‘ರಿಕ್ ರೋಲ್’ ’ (Rickroll) QR ಕೋಡ್ ಇರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೊ ವೈರಲ್ ಬೆನ್ನಲ್ಲೆ ಸಿಬಿಎಸ್ಇ ಸ್ಪಷ್ಟನೆ ನೀಡಿದೆ. ಪ್ರಶ್ನೆಪತ್ರಿಕೆಯಲ್ಲಿ QR ಕೋಡ್ ಸ್ಕ್ಯಾನ್ ಮಾಡಿದಾಗ ಅದು Never Gonna Give You Up ಎಂಬ ಪ್ರಸಿದ್ಧ ಹಾಡಿನ ವೀಡಿಯೊಗೆ ಹೋಗುತ್ತಿರುವುದು ಕಂಡುಬಂದಿದೆ. ಈ ಸಂಗತಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ, ಪ್ರಶ್ನೆಪತ್ರಿಕೆಗಳ ಸುರಕ್ಷತೆ ಬಗ್ಗೆ ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಪ್ರಶ್ನೆಗಳು ಮೂಡಿದೆ. ಈ ಕುರಿತು ಪ್ರತಿಕ್ರಿಯಿಸಿದ ಸಿಬಿಎಸ್ಇ, ಬೋರ್ಡ್ ಪ್ರಶ್ನೆಪತ್ರಿಕೆಯಲ್ಲಿ ಹಲವು ಭದ್ರತಾ ವೈಶಿಷ್ಟ್ಯಗಳನ್ನು ಅಳವಡಿಸಲಾಗಿದೆ ಎಂದು ತಿಳಿಸಿದೆ. ಅವುಗಳಲ್ಲಿ QR ಕೋಡ್ಗಳೂ ಸೇರಿದ್ದು, ಯಾವುದೇ ರೀತಿಯ ಪ್ರಶ್ನೆಪತ್ರಿಕೆ ಸೋರಿಕೆ ಅಥವಾ ಅನುಮಾನಾಸ್ಪದ ಸಂದರ್ಭಗಳಲ್ಲಿ ಅದನ್ನು ಸ್ಕ್ಯಾನ್ ಮಾಡಿ ಪತ್ರಿಕೆಯ ಪ್ರಾಮಾಣಿಕತೆಯನ್ನು ಪರಿಶೀಲಿಸಲು ಅವುಗಳನ್ನು ಬಳಸಲಾಗುತ್ತದೆ ಎಂದು ತಿಳಿಸಿದೆ. ಕೆಲವು ಪ್ರಶ್ನೆ ಪತ್ರಿಕೆಗಳ ಸೆಟ್ಗಳಲ್ಲಿ, QR ಕೋಡ್ಗಳನ್ನು ಸ್ಕ್ಯಾನ್ ಮಾಡುವಾಗ YouTube ವೀಡಿಯೊಗೆ ಲಿಂಕ್ ಆಗಿರುವುದು ಕಂಡುಬಂದಿದೆ ಎಂದು ಮಂಡಳಿ ಒಪ್ಪಿಕೊಂಡಿದೆ. ಆದರೆ ಈ ಸಮಸ್ಯೆಯು ಪ್ರಶ್ನೆ ಪತ್ರಿಕೆಗಳ ಪಾರದರ್ಶಕತೆ ಮೇಲೆ ಪರಿಣಾಮ ಬೀರುವುದಿಲ್ಲ. ಪ್ರಶ್ನೆ ಪತ್ರಿಕೆಗಳು ನಿಜವಾದವು. ಪ್ರಶ್ನೆ ಪತ್ರಿಕೆಗಳ ಸುರಕ್ಷತೆಯಲ್ಲಿ ಯಾವುದೇ ರಾಜಿ ಮಾಡಿಕೊಂಡಿಲ್ಲ ಎಂದು ಸಿಬಿಎಸ್ಇ ಹೇಳಿದೆ.
ಬೇಸಿಗೆಯಲ್ಲಿ ದಾಹ ತಣಿಸುವ ಅರವಟ್ಟಿಗೆ; ಮಲ್ಲಿಕಾರ್ಜುನ ಎನ್. ಈಟೆ ಸೇವೆಗೆ ಮೆಚ್ಚುಗೆ
ಯಾದಗಿರಿ: ಬೇಸಿಗೆಯ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆ ನಗರಕ್ಕೆ ವಿವಿಧ ಕೆಲಸಗಳಿಗಾಗಿ ಬರುವ ರೈತರು, ಕೂಲಿ ಕಾರ್ಮಿಕರು ಹಾಗೂ ಶಾಲಾ ಮಕ್ಕಳ ದಾಹ ತಣಿಸಲು ಉಚಿತವಾಗಿ ಕುಡಿಯುವ ನೀರಿನ ವ್ಯವಸ್ಥೆ ಮಾಡಿರುವ ಯಾದಗಿರಿ ಗ್ರಾಮ ಲೆಕ್ಕಾಧಿಕಾರಿ ಮಲ್ಲಿಕಾರ್ಜುನ ಎನ್. ಈಟೆ ಅವರ ಸೇವೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಕಳೆದ ಆರು ವರ್ಷಗಳಿಂದ ಬೇಸಿಗೆ ಕಾಲದಲ್ಲಿ ನಿರಂತರವಾಗಿ ಅರವಟ್ಟಿಗೆ (ಉಚಿತ ಕುಡಿಯುವ ನೀರು) ವ್ಯವಸ್ಥೆ ಮಾಡುತ್ತಾ ತಣ್ಣೀರು ಒದಗಿಸುತ್ತಿರುವ ಅವರು, ನಗರಕ್ಕೆ ಬರುವ ಬಡಜನರ ದಾಹ ತಣಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಬಿಸಿಲಿನ ತಾಪದಲ್ಲಿ ದೂರದ ಗ್ರಾಮಗಳಿಂದಕೆಲಸದ ನಿಮಿತ್ತ ನಗರಕ್ಕೆ ಬರುವ ರೈತರು, ಕೂಲಿ ಕಾರ್ಮಿಕರು ಹಾಗೂ ಶಾಲಾ ಮಕ್ಕಳು ಇಲ್ಲಿ ನೀರು ಕುಡಿದು ಸ್ವಲ್ಪ ವಿಶ್ರಾಂತಿ ಪಡೆದು ತಮ್ಮ ದಾರಿಯನ್ನು ಮುಂದುವರಿಸುತ್ತಿದ್ದಾರೆ. ಮಾನವೀಯತೆ ಮತ್ತು ಸಮಾಜ ಸೇವೆಯ ಮನೋಭಾವದಿಂದ ಈ ಕಾರ್ಯವನ್ನು ಮುಂದುವರಿಸುತ್ತಿರುವ ಅವರ ಸೇವೆ ಸಮಾಜಕ್ಕೆ ಮಾದರಿಯಾಗಿದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ. ಸಾರ್ವಜನಿಕರ ಕಷ್ಟವನ್ನು ಅರಿತು ಇಂತಹ ಸೇವಾ ಚಟುವಟಿಕೆಗಳನ್ನು ಕೈಗೊಳ್ಳುವುದು ಶ್ಲಾಘನೀಯವಾಗಿದ್ದು, ಇತರರೂ ಇದರಿಂದ ಪ್ರೇರಣೆ ಪಡೆಯಬೇಕು ಎಂದು ನಾಗರಿಕರು ತಿಳಿಸಿದ್ದಾರೆ. ಬೇಸಿಗೆ ಸಮಯದಲ್ಲಿ ದಾಹದಿಂದ ಬಳಲುವವರಿಗೆ ಉಚಿತವಾಗಿ ಕುಡಿಯುವ ನೀರು ನೀಡುವುದು ಪುಣ್ಯದ ಕಾರ್ಯವಾಗಿದ್ದು, ಮಲ್ಲಿಕಾರ್ಜುನ ಎನ್. ಈಟೆ ಅವರ ಈ ಸೇವೆ ಮುಂದುವರಿಯಲಿ ಎಂದು ಸಾರ್ವಜನಿಕರು ಆಶಿಸಿದ್ದಾರೆ. ಪ್ರತಿ ವರ್ಷ ಮಲ್ಲಿಕಾರ್ಜುನ ಎನ್. ಈಟೆ ಅವರು ಅರವಟ್ಟಿಗೆ ನೀರಿನ ಸೇವೆ ಮಾಡುತ್ತಿರುವುದು ಶ್ಲಾಘನೀಯ. ಇದರಿಂದ ನಡೆದುಕೊಂಡು ಹೋಗುವ ಶಾಲೆಯ ಮಕ್ಕಳು ಹಾಗೂ ಕಾರ್ಮಿಕರು ನೀರು ಕುಡಿದು ದಾಹ ತಣಿಸಿಕೊಂಡು ಹೋಗುತ್ತಾರೆ. -ಶಿವಕುಮಾರ ಬೆಳಗುಂದಿ ಅಂಬೇಡ್ಕರ್ ನಗರ ನಿವಾಸಿ ಬೇಸಿಗೆ ಕಾಲದಲ್ಲಿ ದಾಹ ತಣಿಸಲು ಅರವಟ್ಟಿಗೆ ಮೂಲಕ ನೀರು ನೀಡುವುದು ಬಹಳ ಪುಣ್ಯದ ಕಾರ್ಯ. ಇಂತಹ ಸೇವೆಗಳು ಸಮಾಜಕ್ಕೆ ಪ್ರೇರಣೆ ನೀಡುತ್ತವೆ. -ರಮೇಶ್ ಸುಂಗಲಕರ್, ನಗರ ನಿವಾಸಿ ಸಣ್ಣ ಸೇವೆಯಾದರೂ ಜನರಿಗೆ ಉಪಯೋಗವಾಗುವ ಸೇವೆ ಅದು ದೊಡ್ಡ ಸೇವೆಯೇ. ಇತ್ತೀಚಿನ ದಿನಗಳಲ್ಲಿ ದಾನ-ಧರ್ಮ ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ ಇಂತಹ ಕಾರ್ಯಗಳು ಶ್ಲಾಘನೀಯ. -ಬಸವರಾಜ ಹುಂಡೆಕಲ್ಲ್ ಪ್ರತಿ ವರ್ಷವೂ ಉಚಿತ ಕುಡಿಯುವ ನೀರಿನ ಸೇವೆ ಮಾಡುತ್ತಿರುವುದನ್ನು ನೋಡುತ್ತಿದ್ದೇವೆ. ಶಾಲಾ ಮಕ್ಕಳು ಹಾಗೂ ಕಾರ್ಮಿಕರು ತಮ್ಮ ವಾಹನಗಳನ್ನು ನಿಲ್ಲಿಸಿ ನೀರು ಕುಡಿದು ಹೋಗುತ್ತಾರೆ. ಇದು ನಿಜಕ್ಕೂ ಪುಣ್ಯದ ಕೆಲಸ. -ಸಂತೋಷ ಚಟ್ಟೇರಕರ್, ನಿವಾಸಿ
World War: ಮಧ್ಯಪ್ರಾಚ್ಯ ಯುದ್ಧ: ನಮ್ಮ ವ್ಯಾಪಾರಿ ಪ್ರಭುತ್ವದಿಂದ ಭಾರತಕ್ಕೀಗ ದೇವರೇ ಗತಿ: ರಾಜಾರಾಂ ತಲ್ಲೂರು ಬರಹ
US-Israel-Iran War: ಮಧ್ಯಪ್ರಾಚ್ಯದಲ್ಲಿ ಯುದ್ಧದ ತೀವ್ರತೆಯು ಭೀಕರ ಸ್ವರೂಪವನ್ನು ಪಡೆದುಕೊಂಡಿದೆ. ಅಷ್ಟೇ ಅಲ್ಲದೆ ಈ ಯುದ್ಧದ ಪರಿಣಾಮಗಳು ಭಾರತದ ಮೇಲೂ ಬೀಳುವುದಕ್ಕೆ ಪ್ರಾರಂಭವಾಗಿದೆ. ಮಧ್ಯಪ್ರಾಚ್ಯ ಯುದ್ಧ: ಭಾರತಕ್ಕೀಗ ದೇವರೇ ಗತಿ: ಹಿರಿಯ ಪತ್ರಕರ್ತ ರಾಜಾರಾಂ ತಲ್ಲೂರು ಅವರ ಬರಹ ಇಲ್ಲಿದೆ. ನಮ್ಮದೀಗ Force Majeure (ದೇವರೇ ಗತಿ) ಭಾರತ. ವ್ಯಾಪಾರಿಗಳ ಕೈಗೆ ದೇಶವನ್ನು ಕೊಟ್ಟರೆ ಏನಾಗಬಹುದು ಎಂಬುದಕ್ಕೆ
LPG: ಬೆಂಗಳೂರಿಗೆ ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಪೂರೈಕೆ ತಕ್ಷಣವೇ ಆರಂಭಿಸಿ: ಕೇಂದ್ರಕ್ಕೆ ಸಿಎಂ ಸಿದ್ದರಾಮಯ್ಯ ಪತ್ರ
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ಗಳ ತೀವ್ರ ಅಭಾವ ಉಂಟಾಗಿರುವ ಹಿನ್ನೆಲೆಯಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಅವರಿಗೆ ಪತ್ರ ಬರೆದು ಪೂರೈಕೆಯನ್ನು ಸರಿಪಡಿಸುವಂತೆ ಒತ್ತಾಯಿಸಿದ್ದಾರೆ. ಕೇಂದ್ರ ಸರ್ಕಾರದ ಹೊಸ ಆದೇಶದಿಂದಾಗಿ ಬೆಂಗಳೂರಿನ ಹೋಟೆಲ್ ಉದ್ಯಮಕ್ಕೆ ದೊಡ್ಡ ಹೊಡೆತ ಬಿದ್ದಿದೆ ಎಂದು ಅವರು
ಆಹಾರದ ಗುಣಮಟ್ಟ ಕುಸಿತ: ತಗ್ಗಿದ ಕುಕನೂರಿನ ಇಂದಿರಾ ಕ್ಯಾಂಟೀನ್ ಜನಪ್ರಿಯತೆ
ಕುಕನೂರು: ಪಟ್ಟಣದ ಎಪಿಎಂಸಿ ಆವರಣದಲ್ಲಿ (ವಾರ್ಡ್ ನಂ.18) ಕಾರ್ಯನಿರ್ವಹಿಸುತ್ತಿರುವ ಇಂದಿರಾ ಕ್ಯಾಂಟೀನ್ನಲ್ಲಿ ಹೊಸ ಮೆನು ಜಾರಿಯಾಗದೇ ಇರುವುದರಿಂದ ಹಾಗೂ ಆಹಾರದ ಗುಣಮಟ್ಟ-ರುಚಿ ಕುಸಿತದ ಆರೋಪಗಳ ಹಿನ್ನೆಲೆಯಲ್ಲಿ ಜನಸಂದಣಿ ಗಣನೀಯವಾಗಿ ಕಡಿಮೆಯಾಗಿದೆ. ಆರಂಭದ ದಿನಗಳಲ್ಲಿ ಉತ್ತಮ ಸ್ಪಂದನೆ ಪಡೆದಿದ್ದ ಈ ಕೇಂದ್ರದಲ್ಲಿ ಈಗ ಕಡಿಮೆ ಜನ ಬರುತ್ತಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಬಡಜನತೆ, ಕೂಲಿ-ಕಾರ್ಮಿಕರು, ವಿದ್ಯಾರ್ಥಿಗಳು ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಕಡಿಮೆ ದರದಲ್ಲಿ ಪೌಷ್ಟಿಕ ಆಹಾರ ಒದಗಿಸುವ ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿ ಇಂದಿರಾ ಕ್ಯಾಂಟೀನ್ ಆರಂಭದಲ್ಲಿ ಮೆಚ್ಚುಗೆ ಪಡೆದಿತ್ತು. ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಶಾಸಕ ಬಸವರಾಜ್ ರಾಯರೆಡ್ಡಿ ಅವರ ಪ್ರಯತ್ನದಿಂದ ಮೇ 27,2025ರಂದು ಸ್ಥಾಪಿತವಾದ ಈ ಕೇಂದ್ರವು ಹಸಿದ ಹೊಟ್ಟೆಗೆ ಆಶ್ರಯವಾಗಿತ್ತು. ಆದರೆ ನಿರ್ವಹಣಾ ಲೋಪದಿಂದ ಯೋಜನೆಯ ಉದ್ದೇಶ ನಿಧಾನವಾಗಿ ಹಿನ್ನಡೆಯಾಗುತ್ತಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ. ವಾರದ ಏಳು ದಿನ ವಿಭಿನ್ನ ಉಪಾಹಾರ ಮತ್ತು ಊಟ ನೀಡುವಂತೆ ಹೊಸ ಮೆನು ಸಿದ್ಧಪಡಿಸಿ ಚಾರ್ಟ್ ಅಳವಡಿಸಲಾಗಿತ್ತು. ಬೆಳಗ್ಗೆ ಇಡ್ಲಿ-ಉಪ್ಮಾ, ಮಧ್ಯಾಹ್ನ ಮತ್ತು ರಾತ್ರಿ ಮುದ್ದೆ ಅಥವಾ ಚಪಾತಿ ಸೇರಿದಂತೆ ವಿವಿಧ ಪದಾರ್ಥಗಳನ್ನು ನೀಡುವುದಾಗಿ ಪ್ರಕಟಿಸಲಾಗಿತ್ತು. ಆದರೆ ಪ್ರಾಯೋಗಿಕವಾಗಿ ಹಳೆಯ ಪದ್ಧತಿಯೇ ಮುಂದುವರಿದಿದ್ದು, ‘‘ಚಾರ್ಟ್ನಲ್ಲಿ ಹೊಸ ಮೆನು ಇದ್ದರೂ ಅಡುಗೆಮನೆಯಲ್ಲಿ ಅದು ಜಾರಿಯಾಗುತ್ತಿಲ್ಲ’’ ಎಂಬುದು ಸ್ಥಳೀಯರ ಆರೋಪ. ಹೊಸ ಮೆನು ಜಾರಿಯಾಗದಿರುವುದು, ಆಹಾರದ ಗುಣಮಟ್ಟ-ರುಚಿ ಕುಸಿತ, ಸ್ವಚ್ಛತೆಯ ಕೊರತೆ, ಆರ್ಒ ಘಟಕದ ದುರಸ್ತಿ ವಿಳಂಬ, ಸಿಸಿ ಕ್ಯಾಮೆರಾ ಕಾರ್ಯನಿರತವಿಲ್ಲದಿರುವುದು ಹಾಗೂ ಟೋಕನ್ ವಿತರಣಾ ವ್ಯವಸ್ಥೆ ಸ್ಥಗಿತಗೊಂಡಿರುವುದು ಸೇರಿದಂತೆ ಹಲವು ಸಮಸ್ಯೆಗಳು ಮುಂದುವರಿದಿವೆ. ತರಕಾರಿ ಮತ್ತು ದಿನಸಿ ಸಾಮಗ್ರಿಗಳ ಕೊರತೆ, ಹೆಗ್ಗಣಗಳ ಕಾಟ ಹಾಗೂ ನೀರಿನ ಸೋರಿಕೆ ಸಮಸ್ಯೆಗಳು ಆಹಾರ ನೈರ್ಮಲ್ಯ ಬಗ್ಗೆ ಆತಂಕ ಹೆಚ್ಚಿಸಿವೆ ಎಂದು ಸ್ಥಳೀಯರು ದೂರಿದ್ದಾರೆ. ಯೋಜನೆಯ ಮೂಲ ಉದ್ದೇಶ ಸಾರ್ಥಕವಾಗಬೇಕಾದರೆ ತಕ್ಷಣವೇ ಹೊಸ ಮೆನು ಅನುಷ್ಠಾನ, ಆಹಾರದ ಗುಣಮಟ್ಟ ಸುಧಾರಣೆ ಹಾಗೂ ಕಟ್ಟುನಿಟ್ಟಿನ ಮೇಲ್ವಿಚಾರಣೆ ಅಗತ್ಯವೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಸಮಸ್ಯೆಗಳ ಬಗ್ಗೆ ಗಮನಕ್ಕೆ ಬಂದಿದೆ. ಈ ಕುರಿತು ಸಂಬಂಧಿಸಿದ ಗುತ್ತಿಗೆದಾರರೊಂದಿಗೆ ಮಾತನಾಡಲಾಗಿದೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸುತ್ತೇನೆ.ಗುಣಮಟ್ಟ ಮತ್ತು ಸ್ವಚ್ಛತೆಯಲ್ಲಿ ಯಾವುದೇ ತಾತ್ಸಾರ ನಡೆಯದಂತೆ ನೋಡಿಕೊಳ್ಳಲಾಗುವುದು. -ನಾಗೇಶ, ಮುಖ್ಯಾಧಿಕಾರಿ, ಪ.ಪಂ ಆರಂಭದಲ್ಲಿ ಊಟದ ಗುಣಮಟ್ಟ ಚೆನ್ನಾಗಿತ್ತು. ಪ್ರತಿದಿನವೂ ಜನಸಂದಣಿ ಇರುತ್ತಿತ್ತು. ಈಗ ಮೆನು ಸರಿಯಾಗಿ ಜಾರಿಯಾಗುತ್ತಿಲ್ಲ, ರುಚಿಯೂ ಕಳೆದುಕೊಳ್ಳುತ್ತಿದೆ. -ಶಿವಪ್ಪ ಗೋರ್ಲೆಕೊಪ್ಪ, ರೈತ ಕಡಿಮೆ ದರದಲ್ಲಿ ಸಿಗುವುದರಿಂದ ಇಲ್ಲಿ ಬರುತ್ತಿದ್ದೆವು. ಆದರೆ ಗುಣಮಟ್ಟ ಕುಸಿದಿದೆ. ಹೊಸ ಮೆನು ಜಾರಿಯಾದರೆ ಉತ್ತಮ. -ಲಕ್ಷ್ಮಿ, ವಿದ್ಯಾರ್ಥಿನಿ ಕೆಲ ದಿನಗಳಲ್ಲಿ ಊಟ ಸಮರ್ಪಕವಾಗಿಲ್ಲ. ಸ್ವಚ್ಛತೆ ಮೇಲೂ ಹೆಚ್ಚಿನ ಗಮನ ಕೊಡಬೇಕು. -ಹನುಮಂತಪ್ಪ , ಕೂಲಿ ಕಾರ್ಮಿಕ
ಹೊಸದಿಲ್ಲಿ: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷದ ನಡುವೆಯೇ ಸಾಮಾಜಿಕ ಮಾಧ್ಯಮಗಳಲ್ಲಿ ತಪ್ಪು ಮಾಹಿತಿಯ ಹರಡುವಿಕೆ ಹೆಚ್ಚಾಗಿದೆ. ಪರಿಶೀಲಿಸದ ಹೇಳಿಕೆಗಳು ಹಾಗೂ ವಿಡಿಯೋ ಕ್ಲಿಪ್ ಗಳು ವೈರಲ್ ಆಗಿದ್ದು, ಇಸ್ರೇಲ್ ನ ರಾಷ್ಟ್ರೀಯ ಭದ್ರತಾ ಸಚಿವ ಇಟಾಮರ್ ಬೆನ್-ಗ್ವಿರ್ ಹಾಗೂ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಸಹೋದರ ಇಡ್ಡೊ ನೆತನ್ಯಾಹು ಕುರಿತು ಇತ್ತೀಚೆಗೆ ಹಲವು ವದಂತಿಗಳು ವೈರಲ್ ಆಗಿವೆ. ಕೆಲವು ಸಾಮಾಜಿಕ ಮಾಧ್ಯಮ ಖಾತೆಗಳು, ಇಸ್ರೇಲ್ ರಾಜಧಾನಿ ಟೆಲ್ ಅವೀವ್ ನಲ್ಲಿ ಇರಾನ್ ನಡೆಸಿದ ವಾಯುದಾಳಿಯಲ್ಲಿ ಇಡ್ಡೊ ನೆತನ್ಯಾಹು ಸಾವನ್ನಪ್ಪಿದ್ದಾರೆ ಹಾಗೂ ಇಟಾಮರ್ ಬೆನ್-ಗ್ವಿರ್ ಅವರ ನಿವಾಸಕ್ಕೆ ಬೆಂಕಿ ಹೊತ್ತಿಕೊಂಡ ಪರಿಣಾಮ ಅವರು ಗಾಯಗೊಂಡಿದ್ದಾರೆ ಎಂದು ಹೇಳಿಕೊಂಡಿವೆ. ಆದರೆ ಈ ಹೇಳಿಕೆಗಳು ಸುಳ್ಳು ಎಂದು Fact Check ನಿಂದ ತಿಳಿದುಬಂದಿದೆ. ಟೆಲ್ ಅವೀವ್ ನಲ್ಲಿರುವ ಇಟಾಮರ್ ಬೆನ್-ಗ್ವಿರ್ ಅವರ ನಿವಾಸವನ್ನು ವಾಯುದಾಳಿಯಲ್ಲಿ ಗುರಿಯಾಗಿಸಲಾಗಿದೆ ಎಂಬುದಕ್ಕೆ ಯಾವುದೇ ಅಧಿಕೃತ ಮಾಹಿತಿ ಅಥವಾ ವಿಶ್ವಾಸಾರ್ಹ ವರದಿಗಳು ಲಭ್ಯವಾಗಿಲ್ಲ. ಅದೇ ರೀತಿ ಇಡ್ಡೊ ನೆತನ್ಯಾಹು ಮೇಲೆ ದಾಳಿ ನಡೆದಿರುವುದು ಅಥವಾ ಅವರು ಸಾವನ್ನಪ್ಪಿದ್ದಾರೆ ಎಂಬುದಕ್ಕೂ ಯಾವುದೇ ದೃಢೀಕರಣ ಇಲ್ಲ. ಅವರು ಗಾಯಗೊಂಡಿದ್ದಾರೆ ಎಂಬ ಹೇಳಿಕೆಗಳೂ ಸುಳ್ಳಾಗಿವೆ ಎಂದು ವರದಿಗಳು ಸ್ಪಷ್ಟಪಡಿಸಿವೆ. ಕೆಲವು ಸಾಮಾಜಿಕ ಮಾಧ್ಯಮ ಪೋಸ್ಟ್ ಗಳು ಮತ್ತೊಂದು ಆರೋಪವನ್ನೂ ಮಾಡಿವೆ. ಇರಾನಿನ ವಾಯುದಾಳಿಯಿಂದ ಉಂಟಾದ ಗಾಯವನ್ನು ಮರೆಮಾಡಲು ಇಸ್ರೇಲಿ ಮಾಧ್ಯಮಗಳು ಬೆನ್-ಗ್ವಿರ್ ಕಾರು ಅಪಘಾತದಲ್ಲಿ ಗಾಯಗೊಂಡಿದ್ದಾರೆ ಎಂದು ಸುಳ್ಳು ವರದಿ ಮಾಡುತ್ತಿವೆ ಎಂದು ಅವು ಹೇಳುತ್ತವೆ. ಆದರೆ ಇತ್ತೀಚೆಗೆ ಇಂತಹ ಯಾವುದೇ ಘಟನೆ ಸಂಭವಿಸಿದೆ ಎಂಬ ದಾಖಲೆಗಳು ಲಭ್ಯವಾಗಿಲ್ಲ. ಆದರೆ ಎಪ್ರಿಲ್ 2024ರಲ್ಲಿ ಇಸ್ರೇಲ್ನ ರಾಮ್ಲೆ ನಗರದಲ್ಲಿ ಬೆನ್-ಗ್ವಿರ್ ಕಾರು ಅಪಘಾತದಲ್ಲಿ ಭಾಗಿಯಾಗಿದ್ದ ಘಟನೆ ನಡೆದಿತ್ತು. ಅವರು ಪ್ರಯಾಣಿಸುತ್ತಿದ್ದ ವಾಹನವು ರೆಡ್ ಲೈಟ್ ಮೀರಿ ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಎಸ್ಯುವಿ ಪಲ್ಟಿಯಾಗಿತ್ತು. ಈ ಘಟನೆಯಲ್ಲಿ ಬೆನ್-ಗ್ವಿರ್, ಅವರ ಮಗಳು ಹಾಗೂ ವಾಹನದ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದವು ಎಂದು ಆಗ ವರದಿಯಾಗಿತ್ತು. ಆದರೆ ವೈರಲ್ ಪೋಸ್ಟ್ ಗಳು ಹೇಳುವಂತೆ ಇತ್ತೀಚೆಗೆ 49 ವರ್ಷದ ಬೆನ್-ಗ್ವಿರ್ ಯಾವುದೇ ಹೊಸ ಕಾರು ಅಪಘಾತವಾಗಿಲ್ಲ. ಇರಾನ್ ನ ವಾಯುದಾಳಿಗಳ ಕುರಿತು ವರದಿಗಳ ಪ್ರಕಾರ, ಯುಎಸ್–ಇಸ್ರೇಲ್ ಸಂಯುಕ್ತ ವಾಯುದಾಳಿಯಲ್ಲಿ ಆಯತೊಲ್ಲಾ ಅಲಿ ಖಾಮಿನೈ ಹತ್ಯೆಯಾದ ಬಳಿಕ ಫೆಬ್ರವರಿ 28ರಿಂದ ಮಾರ್ಚ್ 4ರವರೆಗೆ ಇಸ್ರೇಲ್ ಮೇಲೆ ಇರಾನ್ ಹಲವು ದಾಳಿ ಪ್ರಯತ್ನಗಳನ್ನು ನಡೆಸಿದೆ. ಈ ಅವಧಿಯಲ್ಲಿ ಇಸ್ರೇಲ್ ವಿರುದ್ಧ ಇರಾನ್ ನಡೆಸಿದ 90 ಕ್ಕೂ ಹೆಚ್ಚು ದಾಳಿ ಪ್ರಯತ್ನಗಳನ್ನು ಎಸಿಎಲ್ಇಡಿ (ACLED) ದತ್ತಾಂಶ ದಾಖಲಿಸಿದೆ. ಸುಮಾರು 20 ನಾಗರಿಕ ಪ್ರದೇಶಗಳು ಹಾನಿಗೊಳಗಾಗಿದ್ದು ಕನಿಷ್ಠ 10 ಸಾವುಗಳು ಸಂಭವಿಸಿರುವುದಾಗಿ ವರದಿಯಾಗಿದೆ. ಇದೇ ವೇಳೆ, ಇರಾನ್ ಗೆ ಹತ್ತಿರವಾಗಿದೆ ಎಂದು ಹೇಳಲಾಗುವ ಫಾರ್ಸ್ ನ್ಯೂಸ್ ಏಜೆನ್ಸಿಯ ವರದಿ ಪ್ರಕಾರ, 500 ಕ್ಕೂ ಹೆಚ್ಚು ಬ್ಯಾಲಿಸ್ಟಿಕ್ ಕ್ಷಿಪಣಿಗಳು ಹಾಗೂ 2000 ಕ್ಕೂ ಹೆಚ್ಚು ಡ್ರೋನ್ ಗಳನ್ನು ಹಾರಿಸಲಾಗಿದೆ. ಅವುಗಳಲ್ಲಿ ಸುಮಾರು 40 ಶೇಕಡಾ ಇಸ್ರೇಲ್ ಅನ್ನು ಗುರಿಯಾಗಿಸಿದ್ದರೆ, ಉಳಿದವು ಮಧ್ಯಪ್ರಾಚ್ಯದಲ್ಲಿರುವ ಅಮೆರಿಕದ ಸೇನಾ ನೆಲೆಗಳನ್ನು ಗುರಿಯಾಗಿಸಿದ್ದವು ಎಂದು ತಿಳಿಸಲಾಗಿದೆ. ಒಟ್ಟಿನಲ್ಲಿ, ಇಟಾಮರ್ ಬೆನ್-ಗ್ವಿರ್ ಗಾಯಗೊಂಡಿದ್ದಾರೆ ಅಥವಾ ಇಡ್ಡೊ ನೆತನ್ಯಾಹು ಸಾವನ್ನಪ್ಪಿದ್ದಾರೆ ಎಂಬ ವೈರಲ್ ಹೇಳಿಕೆಗಳಿಗೆ ಯಾವುದೇ ಅಧಿಕೃತ ದೃಢೀಕರಣ ಇಲ್ಲ. ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಈ ಮಾಹಿತಿಗಳು ತಪ್ಪು ವದಂತಿಗಳಾಗಿವೆ ಎಂದು Fact check ಸ್ಪಷ್ಟಪಡಿಸಿದೆ.
ವಾಣಿಜ್ಯ ಬಳಕೆಯ ಸಿಲಿಂಡರ್ನಂತೆ, ಗೃಹ ಬಳಕೆ ಸಿಲಿಂಡರ್ ಪೂರೈಕೆ ಪೂರ್ತಿಯಾಗಿ ಸ್ಥಗಿತ ಆಗಿಲ್ಲದೇ ಹೋದರೂ , ಬುಕ್ ಮಾಡಿದ ತಕ್ಷಣ ಸಿಗುತ್ತಿದ್ದ ಸೇವೆಯಲ್ಲಿ ಈಗ ವ್ಯತ್ಯಾಸವಾಗಿದೆ. ಸದ್ಯ 5-6 ದಿನ ವಿಳಂಬವಾಗಿ ಸಿಲಿಂಡರ್ ಸಿಗುತ್ತಿದ್ದು, ಯುದ್ಧ ಪರಿಸ್ಥಿತಿ ಸರಿಯಾಗದೇ ಹೋದಲ್ಲಿ ಅಭಾವ ಉಂಟಾಗಲಿದೆ. ಈಗಾಗಲೇ ಜನ ವಿದ್ಯುತ್ ಸ್ಟವ್ ಖರೀದಿಗೆ ಮುಂದಾಗಿದ್ದಾರೆ.
ಮಂಗಳೂರು : ಕಬ್ಬಡಿ ಆಟಗಾರ್ತಿ ಧನಲಕ್ಷ್ಮಿ ಪೂಜಾರಿಗೆ ನಗದು ಪುರಸ್ಕಾರ
ಮಂಗಳೂರು: ಭಾರತೀಯ ರಾಷ್ಟ್ರೀಯ ಮಹಿಳಾ ಕಬಡ್ಡಿ ತಂಡದ ಭರವಸೆಯ ಆಟಗಾರ್ತಿ ಢಾಕಾದಲ್ಲಿ ನಡೆದ ಮಹಿಳಾ ವಿಶ್ವಕಪ್ ಕಬಡ್ಡಿ ಪಂದ್ಯಾವಳಿಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದ ದ.ಕ ಜಿಲ್ಲೆಯ ಹೆಮ್ಮೆಯ ಕ್ರೀಡಾಪಟು ಧನಲಕ್ಷ್ಮಿ ಪೂಜಾರಿ ಅವರಿಗೆ ಮಂಗಳಾದೇವಿ ಕರ ಸೇವಕರು ಬೋಳಾರ ಟ್ರಸ್ಟ್ ನ ಗೌರವಾಧ್ಯಕ್ಷರಾದ ಜೆಪ್ಪು ಚಿದಾನಂದ ನಾಯ್ಕ್ ದೋಹಾ ಕತಾರ್ ಮತ್ತು ಕತಾರ್ ತುಳು ಒಕ್ಕೂಟದ ಸಹಯೋಗದಲ್ಲಿ ಐದು ಲಕ್ಷ ರೂಪಾಯಿ ನಗದು, ಪುರಸ್ಕಾರ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಸಮಾರಂಭದಲ್ಲಿ ಟ್ರಸ್ಟ್ ವತಿಯಿಂದ ಸಮಾಜದ ವಿವಿಧ ಕ್ಷೇತ್ರದ ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭ ಯಕ್ಷ ಧ್ರುವ ಪಟ್ಲ ಮಂಗಳೂರು ಘಟಕದ ಅಧ್ಯಕ್ಷ ತಾರಾನಾಥ ಶೆಟ್ಟಿ ಬೋಳಾರ, ಚಲನಚಿತ್ರ ನಿರ್ಮಾಪಕ ರವಿ ರೈ ಕಳಸ, ಚಿತ್ರ ನಟ ಶನೀಲ್ ಗೌತಮ್, ಶ್ರೀ ಮಂಗಳಾದೇವಿ ದೇವಸ್ಥಾನದ ಆನುವಂಶಿಕ ಮೊಕ್ತೇಸರರಾದ ಜಿ. ರಘುರಾಮ ಉಪಾಧ್ಯಾಯ, ಎಸ್. ಹರೀಶ್ ಐತಾಳ್, ಎಂ. ಅರುಣ್ ಐತಾಳ್, ಬೋಳಾರ ಹಳೇಕೋಟೆ ಶ್ರೀ ಮಾರಿಯಮ್ಮ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಅಶೋಕ್ ಕುಮಾರ್. ಬಿ, ಮಾಜಿ ಸದಸ್ಯ ವೇಣುಗೋಪಾಲ ಪುತ್ರನ್, ಮ. ನ. ಪಾ ಮಾಜಿ ಮೇಯರ್ ಪ್ರೇಮಾನಂದ ಶೆಟ್ಟಿ, ಮಂಗಳಾದೇವಿ ಕರ ಸೇವಕರು ಬೋಳಾರ ಟ್ರಸ್ಟ್ ನ ಅಧ್ಯಕ್ಷ ದಯಾನಂದ ಬೋಳಾರ್ , ಗೌರವಾಧ್ಯಕ್ಷ ಸೀತಾರಾಮ. ಎ , ಸ್ಥಾಪಕಾಧ್ಯಕ್ಷ ಸಂತೋಷ್ ಶೆಟ್ಟಿ ಬೋಳಾರ, ಸದಸ್ಯರಾದ ಲೋಹಿತ್ ಶೆಟ್ಟಿ, ರಿತೇಶ್ ಯೆಯ್ಯಾಡಿ , ವಿಜೇಶ್ ಬೋಳಾರ , ಚಂದ್ರಶೇಖರ ಉಡುಪಿ ಉಪಸ್ಥಿತರಿದ್ದರು.
ಎಪಿಎಂಸಿಗಳಲ್ಲಿ 70 ಲಕ್ಷ ಕೋಟಿ ರೂ. ವಹಿವಾಟು : ಶಿವಾನಂದ ಪಾಟೀಲ್
ಬೆಂಗಳೂರು : ಪ್ರಸಕ್ತ ಹಣಕಾಸು ವರ್ಷದ ಜನವರಿ ಅಂತ್ಯಕ್ಕೆ ರಾಜ್ಯದ ಎಪಿಎಂಸಿಗಳಲ್ಲಿ ಒಟ್ಟು 71 ಲಕ್ಷ ಕೋಟಿ ರೂ. ವಹಿವಾಟು ನಡೆದಿದ್ದು, 476.65 ಕೋಟಿ ರೂ. ಮಾರುಕಟ್ಟೆ ಶುಲ್ಕ ಸಂಗ್ರಹವಾಗಿದೆ ಎಂದು ಸಕ್ಕರೆ, ಕಬ್ಬು ಅಭಿವೃದ್ಧಿ, ಜವಳಿ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ತಿಳಿಸಿದ್ದಾರೆ. ವಿಧಾನ ಪರಿಷತ್ತಿನಲ್ಲಿ ಮಂಗಳವಾರ ಸದಸ್ಯ ಟಿ.ಶರವಣ ಅವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಸಚಿವರು, ಕಳೆದ ಹಣಕಾಸು ವರ್ಷದಲ್ಲಿ 82 ಲಕ್ಷ ಕೋಟಿ ರೂ. ವಹಿವಾಟು ನಡೆದಿತ್ತು. ಈ ಅವಧಿಯಲ್ಲಿ 498 ಕೋಟಿ ರೂ. ಮಾರುಕಟ್ಟೆ ಶುಲ್ಕ ಸಂಗ್ರಹವಾಗಿದ್ದು, ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ಪ್ರಮಾಣ ಇನ್ನು ಹೆಚ್ಚಾಗಲಿದೆ ಎಂದು ತಿಳಿಸಿದ್ದಾರೆ. ರಾಜ್ಯದಲ್ಲಿ 170 ಎಪಿಎಂಸಿಗಳಿದ್ದು, ಅಂಗಡಿಗಳ ಹಂಚಿಕೆ ಪ್ರಕ್ರಿಯೆ ನಿರಂತರವಾಗಿರುತ್ತದೆ. 141 ಎಪಿಎಂಸಿಗಳಲ್ಲಿ ಅಂಗಡಿ ಹರಾಜು ಬಾಕಿ ಇದ್ದು, ಕ್ರಮ ಕೈಗೊಳ್ಳಲು ಸಮಿತಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ. ವಾಣಿಜ್ಯ ಸ್ವರೂಪದ ಚಿಕ್ಕ ಮಳಿಗೆಗಳನ್ನು 55 ತಿಂಗಳ ಹಂಚಿಕೆ ಅವಧಿ ಮುಕ್ತಾಯವಾದ ನಂತರ ಮತ್ತೆ ಮುಂದುವರಿಸಲು ಅವಕಾಶ ಇಲ್ಲ. ಅಂತಹ ಅಂಗಡಿಗಳನ್ನು ಹೊಸದಾಗಿ ಟೆಂಡರ್ ಕರೆದು ಬೇಡಿಕೆಗೆ ಅನುಗುಣವಾಗಿ ಕ್ರಮ ಕೈಗೊಳ್ಳಲಿದ್ದು, ಬಾಕಿ ಉಳಿಯುವುದಿಲ್ಲ ಎಂದು ತಿಳಿಸಿದ್ದಾರೆ.
ಸದನ ಸ್ವಾರಸ್ಯ: ಸಿದ್ದರಾಮಯ್ಯಗೆ ಡಿಕೆಶಿ ಬೆಂಬಲ ಕೊಡ್ತಾರೆ ಎಂದ್ರೆ ಏನೋ ಒಳ್ಳೆ ಸುದ್ದಿ ಇದೆ!
ವಿಧಾನಸಭೆಯಲ್ಲಿ ರಾಜ್ಯ ಬಜೆಟ್ ಕುರಿತು ವಿರೋಧ ಪಕ್ಷ ಟೀಕೆ ಮಾಡುತ್ತಿದ್ದಾಗ, ಅದಕ್ಕೆ ಪ್ರತಿಯಾಗಿ ಡಿಕೆ ಶಿವಕುಮಾರ್ ತಿರುಗೇಟು ನೀಡಿದ್ದು, ‘ಕೇಂದ್ರ ಬಜೆಟ್ ಅನ್ನೂ ಇದೇ ರೀತಿಯಲ್ಲಿ ಕರೆಯಬಹುದೇ?’ ಎಂದು ಪ್ರಶ್ನಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಪರವಾಗಿ ಮಾತನಾಡಿದ್ದಕ್ಕೆ ಡಿಕೆ ಶಿವಕುಮಾರ್ ಅವರನ್ನ ಅರವಿಂದ್ ಬೆಲ್ಲದ್ ಕಿಚಾಯಿಸಿದರು.
ಬಂಟ್ವಾಳ : ಚಿನ್ನಾಭರಣ ಕಳವು ಪ್ರಕರಣ; ಆರೋಪಿಯ ಬಂಧನ
ಬಂಟ್ವಾಳ : ಐದು ತಿಂಗಳ ಹಿಂದೆ ಕಲ್ಲಡ್ಕ ಸಮೀಪದ ಕುದ್ರೆಬೆಟ್ಟುವಿನ ಸಮುದ್ರ ಹೋಟೇಲ್ ಬಳಿ ನಿಲ್ಲಿಸಿದ್ದ ಬಸ್ ನಿಂದ ಚಿನ್ನಾಭರಣ ಕಳವು ನಡೆಸಿದ ಪ್ರಕರಣದ ಆರೋಪಿಯನ್ನು ಬಂಧಿಸುವಲ್ಲಿ ಬಂಟ್ವಾಳ ನಗರ ಠಾಣಾ ಪೊಲೀಸರ ತಂಡ ಯಶಸ್ವಿಯಾಗಿದ್ದಾರೆ . ಬಂಧಿತ ಆರೋಪಿಯನ್ನು ಮಧ್ಯಪ್ರದೇಶದ ನಿವಾಸಿ ಸಮದ್ ಖಾನ್ (37) ಎಂದು ಗುರುತಿಸಲಾಗಿದೆ. 2025 ರ ನವೆಂಬರ್ 19 ರಂದು ಕಲ್ಲಡ್ಕ ಸಮೀಪದ ಕುದ್ರೆಬೆಟ್ಟುವಿನ ಸಮುದ್ರ ಹೋಟೆಲ್ ಬಳಿ ನಿಲ್ಲಿಸಿದ್ದ ದುರ್ಗಾಂಬಾ ಬಸ್ ನಲ್ಲಿ ಬ್ಯಾಗಿನೊಳಗೆ ಇರಿಸಲಾಗಿದ್ದ ಬ್ರಹ್ಮಾವರ ಮೂಲದ ದಂಪತಿಗಳು ರೂಪಾಯಿ 20 ಲಕ್ಷ ಮೌಲ್ಯದ 180 ಗ್ರಾಂ ಚಿನ್ನಾಭರಣ ಕಳವಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಿರುವ ಬಂಟ್ವಾಳ ನಗರ ಠಾಣಾ ಪೊಲೀಸರು ಚಿನ್ನಾಭರಣಗಳನ್ನು ವಶಪಡಿಸಿಕೊಂಡು, ಆತನನ್ನು ಬಂಟ್ವಾಳ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಕಾಪು: ಮಣಿಪುರದಲ್ಲಿ ಕ್ಷುಲ್ಲಕ ಕಾರಣಕ್ಕೆ ಮಹಿಳೆಯ ಕೊಲೆ; ಇಬ್ಬರು ಆರೋಪಿಗಳು ವಶಕ್ಕೆ
ಕಾಪು, ಮಾ.10: ಕ್ಷುಲ್ಲಕ ಕಾರಣಕ್ಕಾಗಿ ಮಹಿಳೆಯೊಬ್ಬರನ್ನು ಕೊಲೆ ಮಾಡಿರುವ ಘಟನೆ ಮಣಿಪುರ ಗ್ರಾಮದ ಅರಬಿ ಕೆನರಾಡಿ ಎಂಬಲ್ಲಿ ಮಾ.9ರಂದು ರಾತ್ರಿ ವೇಳೆ ನಡೆದಿದೆ. ಕೊಲೆಗೀಡಾದವರನ್ನು ಕೆನರಾಡಿಯ ವನಜಾ ಪೂಜಾರ್ತಿ(60) ಎಂದು ಗುರುತಿಸಲಾಗಿದೆ. ಕೊಲೆ ಆರೋಪಿಗಳಾದ ಸ್ಥಳೀಯ ನಿವಾಸಿ ವಲೇರಿಯನ್ ಮೆಂಡೊನ್ಸಾ ಮತ್ತು ಪ್ರವೀಣ್ ಮೆಂಡೊನ್ಸಾ ಎಂಬವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ವಲೇರಿಯನ್ ಮೆಂಡೊನ್ಸಾ ಮತ್ತು ಪ್ರವೀಣ್ ಮೆಂಡೊನ್ಸಾ ಅಣ್ಣ ತಮ್ಮಂದಿರ ಮಕ್ಕಳಾಗಿದ್ದು, ವನಜಾ ಪೂಜಾರ್ತಿ ಜೊತೆ ಆಗಾಗ್ಗೆ ವಲೇರಿಯನ್ ಮೆಂಡೊನ್ಸಾ ಅವರ ಮನೆಯಲ್ಲಿ ಮದ್ಯ ಸೇವನೆ ಮಾಡು ತ್ತಿದ್ದರು. ಮಾ.9ರಂದು ಸಂಜೆ ವೇಳೆ ಕ್ಷುಲ್ಲಕ ಕಾರಣಕ್ಕಾಗಿ ಇವರಿಬ್ಬರು ವನಜಾ ಪೂಜಾರ್ತಿ ಅವರನ್ನು ಹರಿತವಾದ ಆಯುಧದಿಂದ ಕೊಲೆ ಮಾಡಿರುವುದಾಗಿ ದೂರಲಾಗಿದೆ. ಈ ಘಟನೆ ಮಾ.10ರಂದು ಬೆಳಿಗ್ಗೆ 7ಗಂಟೆಗೆ ಬೆಳಕಿಗೆ ಬಂದಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ್ ನಾಯ್ಕ್, ಕಾಪು ವೃತ್ತ ಪೊಲೀಸ್ ನಿರೀಕ್ಷಕ ಅಝ್ಮತ್ ಅಲಿ, ಕಾಪು ಎಸ್ಸೈ ತೇಜಸ್ವಿ, ಮಣಿಪಾಲ ಕೆಎಂಸಿಯ ಫೋರೆನ್ಸಿಕ್ ತಜ್ಞರು, ಸೋಕೋ ತಂಡ, ಶ್ವಾನ ದಳ ಮತ್ತು ಫಿಂಗರ್ ಪ್ರಿಂಟ್ ವಿಭಾಗದ ತಜ್ಞರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಗಲ್ಫ್ ಈಗ ಎಷ್ಟು ಸೇಫ್? ಅರಬ್ಬರ ನೆಲದಲ್ಲಿನ ಅನಿವಾಸಿ ಕನ್ನಡಿಗರ ಅಂತರಂಗ
ಭಾರತೀಯರಿಗೆ ಕೊಲ್ಲಿ ರಾಷ್ಟ್ರಗಳೆಂದರೆ ವಿಶೇಷ ಸೆಳೆತ. ಯುಎಇಯಲ್ಲಿ 43 ಲಕ್ಷಕ್ಕೂ ಅಧಿಕ ಭಾರತೀಯರಿದ್ದಾರೆ. ಮಧ್ಯಪ್ರಾಚ್ಯ ದೇಶಗಳ ಸಂಘರ್ಷದಿಂದ ಮೊದ ಮೊದಲು ಭಯಗೊಂಡರೂ ಈಗ ಜನಸಾಮಾನ್ಯರಿಗೆ ಯುದ್ಧದ ಬಿಸಿ ತಟ್ಟಿಲ್ಲ. ಅಲ್ಲಿನ ಆಡಳಿತಗಳು ಬಿಟ್ಟಿಲ್ಲ ಎನ್ನುವುದು ಗಮನಿಸಬೇಕಾದ ವಿಚಾರ. ಈ ಬಗ್ಗೆ ಒಂದು ವಿಶೇಷ ವರದಿ ಇಲ್ಲಿದೆ.
ಇರಾನ್ ದಾಳಿಯಲ್ಲಿ ಕಳೆದ 24 ಗಂಟೆಗಳಲ್ಲಿ 191 ಜನರು ಗಾಯಗೊಂಡಿದ್ದಾರೆ : ಇಸ್ರೇಲ್
ಟೆಲ್ ಅವೀವ್ : ಇಸ್ರೇಲ್ ನಲ್ಲಿ ಇರಾನ್ ದಾಳಿಗೆ ಕಳೆದ 24 ಗಂಟೆಗಳಲ್ಲಿ 191 ಜನರು ಗಾಯಗೊಂಡಿದ್ದಾರೆ ಎಂದು ಇಸ್ರೇಲ್ ಹೇಳಿದೆ. ದಿ ಟೈಮ್ಸ್ ಆಫ್ ಇಸ್ರೇಲ್ ಪ್ರಕಾರ, ಯುದ್ಧದಿಂದಾಗಿ ಕಳೆದ 24 ಗಂಟೆಗಳಲ್ಲಿ 191 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಗೆ ದಾಖಲಾದವರಲ್ಲಿ ಸೈನಿಕರು ಮತ್ತು ನಾಗರಿಕರು ಸೇರಿದ್ದಾರೆ. ಅವರಲ್ಲಿ ನಾಲ್ವರ ಸ್ಥಿತಿ ಗಂಭೀರವಾಗಿದೆ ಎಂದು ಇಸ್ರೇಲ್ ಆರೋಗ್ಯ ಸಚಿವಾಲಯ ಹೇಳಿದೆ. ಯುದ್ಧ ಪ್ರಾರಂಭವಾದಾಗಿನಿಂದ ಇಸ್ರೇಲ್ನಲ್ಲಿ 2,339 ಜನರನ್ನು ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ. 95 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಲ್ಲಿ 11 ಜನರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿಸಿದೆ. ಸೋಮವಾರ ಕೇಂದ್ರ ನಗರವಾದ ಯೆಹೂದ್ ಮೇಲೆ ಇರಾನ್ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಒಬ್ಬ ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿದ್ದರು.
ಇಳಿ ವಯಸ್ಸಿನ ದೇವೇಗೌಡ್ರ ಮನಸ್ಸನ್ನು ನಾನು ನೋಯಿಸಲಾರೆ, ನನಗ್ಯಾಕೆ : ಡಿಕೆ ಶಿವಕುಮಾರ್
DK Shivakumar Vs Deve Gowda : ದೆಹಲಿಯಿಂದ ಹಿಂದಿರುಗಿರುವ ಡಿಸಿಎಂ ಡಿಕೆ ಶಿವಕುಮಾರ್, ವಿಧಾನ ಮಂಡಲದ ಬಜೆಟ್ ಅಧಿವೇಶನದಲ್ಲಿ ಭಾಗಿಯಾಗಿದ್ದಾರೆ. ಮೇಕೆದಾಟು, ಆಲಮಟ್ಟಿ ವಿಚಾರಕ್ಕೆ ಸಂಬಂಧಿಸಿದಂತೆ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಹೇಳಿಕೆಗೆ ನಾನು ಪ್ರತಿಕ್ರಿಯಿಸಲಾರೆ, ಅವರ ಈ ವಯಸ್ಸಿನಲ್ಲಿ ಅವರ ಮನಸ್ಸಿಗೆ ನೋವಾಗುವ ಹೇಳಿಕೆಯನ್ನು ನೀಡುವುದಿಲ್ಲ ಎಂದಿದ್ದಾರೆ.
Lingsugur | ವಿದ್ಯಾರ್ಥಿ ನಿಗೂಢ ಸಾವು; ಮೂವರ ವಿರುದ್ಧ ಪ್ರಕರಣ ದಾಖಲು
ಲಿಂಗಸುಗೂರು : ತಾಲೂಕಿನ ಗುಂಡಸಾಗರದ 15 ವರ್ಷದ ವಿದ್ಯಾರ್ಥಿ ಕಾರ್ತಿಕ್ ಬಸವರಾಜಪ್ಪ ಸೂಡಿ ಎಂಬಾತ ನಿಗೂಢವಾಗಿ ಮೃತಪಟ್ಟಿದ್ದು, ಈ ಸಂಬಂಧ ಅದೇ ಗ್ರಾಮದ ಮೂವರ ವಿರುದ್ಧ ಲಿಂಗಸುಗೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರವಿವಾರ ಮದುವೆ ಕಾರ್ಯಕ್ರಮವೊಂದರಲ್ಲಿ ಊಟ ಮುಗಿಸಿದ್ದ ಕಾರ್ತಿಕ್, ಲಿಂಗಸುಗೂರಿಗೆ ಹೋಗಿ ಬರುವುದಾಗಿ ತಿಳಿಸಿದ್ದ. ಆದರೆ, ಕಾರ್ತಿಕ್ನನ್ನು ಆತನ ಮೂವರು ಗೆಳೆಯರು ಮೋಟಾರ್ ಸೈಕಲ್ನಲ್ಲಿ ಕರೆದೊಯ್ದು, ಆತನನ್ನು ಕೊಲೆ ಮಾಡಿ, ಮೃತದೇಹವನ್ನು ಕರಡಕಲ್ಲ ಕೆರೆ ಹತ್ತಿರ ಬಿಸಾಕಿದ್ದಾರೆ ಎಂದು ದೂರಿನಲ್ಲಿ ಪಾಲಕರು ಆರೋಪಿಸಿದ್ದಾರೆ. ಕಾರ್ತಿಕ್ ತಂದೆ ಬಸವರಾಜ ಅಮೀನಪ್ಪ ನೀಡಿದ ದೂರಿನನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಪಿಎಸ್ಐ ಗಂಗಪ್ಪ ಬುರ್ಲಿ ತನಿಖೆ ಕೈಗೆತ್ತಿಕೊಂಡಿದ್ದಾರೆ . ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದೇವೆ. ತನಿಖೆ ನಂತರ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುತ್ತೇವೆ ಪೊಲೀಸ್ ವರಿಷ್ಠಾಧಿಕಾರಿಗಳು, ರಾಯಚೂರು
ಯುದ್ಧದ ಅಂತ್ಯವನ್ನು ಟೆಹ್ರಾನ್ ನಿರ್ಧರಿಸುತ್ತದೆ, ವಾಶಿಂಗ್ಟನ್ ಅಲ್ಲ: ಟ್ರಂಪ್ ಗೆ IRGC ತಿರುಗೇಟು
ಅಮೆರಿಕ-ಇಸ್ರೇಲ್ ದಾಳಿ ನಿಲ್ಲಿಸದ್ದರೆ 1 ಲೀಟರ್ ತೈಲವನ್ನೂ ರಫ್ತು ಮಾಡಲು ಬಿಡಲ್ಲ ಎಂದ ಇರಾನ್
ನೆದರ್ಲ್ಯಾಂಡ್ಸ್ : ರಶ್ಯಾ ಬೆಂಬಲಿತ ಹ್ಯಾಕರ್ಗಳು ಸರಕಾರಿ ಅಧಿಕಾರಿಗಳು, ಸೈನಿಕರು ಮತ್ತು ಪತ್ರಕರ್ತರು ಸೇರಿದಂತೆ ಪ್ರಮುಖರನ್ನು ಗುರಿಯಾಗಿಸಿಕೊಂಡು ದೊಡ್ಡ ಮಟ್ಟದ ಜಾಗತಿಕ ಸೈಬರ್ ದಾಳಿ ಅಭಿಯಾನ ನಡೆಸುತ್ತಿದ್ದಾರೆ ಎಂದು ನೆದರ್ಲ್ಯಾಂಡ್ಸ್ನ ಗುಪ್ತಚರ ಸಂಸ್ಥೆಗಳು ಎಚ್ಚರಿಕೆ ನೀಡಿವೆ. ಸಿಗ್ನಲ್ ಮತ್ತು ವಾಟ್ಸ್ಯಾಪ್ ಖಾತೆಗಳ ಮೂಲಕ ರಷ್ಯಾ ಬೆಂಬಲಿತ ಹ್ಯಾಕರ್ಗಳು ಬಳಕೆದಾರರನ್ನು ಮೋಸಗೊಳಿಸಿ ಅವರ ಪಿನ್ ಕೋಡ್ಗಳನ್ನು ಬಹಿರಂಗಪಡಿಸುವಂತೆ ಮಾಡುತ್ತಾರೆ ಎಂದು ನೆದರ್ಲ್ಯಾಂಡ್ಸ್ನ ಗುಪ್ತಚರ ಸಂಸ್ಥೆಗಳು ಎಚ್ಚರಿಕೆ ನೀಡಿವೆ. ಹ್ಯಾಕರ್ಗಳು ಆರಂಭಿಸಿದ ಚಾಟ್ಗಳಲ್ಲಿ ಬಳಕೆದಾರರನ್ನು ಮೋಸಗೊಳಿಸಿ ಸೆಕ್ಯೂರಿಟಿ ವೆರಿಫೈ ಮತ್ತು ಪಿನ್ಕೋಡ್ಗಳನ್ನು ಹಂಚಿಕೊಳ್ಳುವಂತೆ ಒತ್ತಾಯಿಸಲಾಗುತ್ತದೆ. ಈ ಮಾಹಿತಿಯನ್ನು ಪಡೆದ ಬಳಿಕ ಅವರು ಬಳಕೆದಾರರ ವೈಯಕ್ತಿಕ ಖಾತೆಗಳು ಹಾಗೂ ಚಾಟ್ಗಳಿಗೆ ಪ್ರವೇಶ ಪಡೆಯುತ್ತಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. “ರಷ್ಯಾದ ಹ್ಯಾಕರ್ಗಳು ಸೂಕ್ಷ್ಮ ಮಾಹಿತಿಗೆ ಪ್ರವೇಶ ಪಡೆದಿರುವ ಸಾಧ್ಯತೆಯಿದೆ” ಎಂದು ಜನರಲ್ ಡಚ್ ಇಂಟೆಲಿಜೆನ್ಸಿ ಏಜೆನ್ಸಿ (AIVD) ಮತ್ತು ಡಚ್ ಮಿಲಿಟರಿ ಇಂಟೆಲಿಜೆನ್ಸಿ ಆಂಡ್ ಸೆಕ್ಯೂರಿಟಿ ಸರ್ವೀಸ್ (MIVD) ತಿಳಿಸಿವೆ. ಈ ಸೈಬರ್ ದಾಳಿಗೆ ಗುರಿಯಾಗಿರುವವರಲ್ಲಿ ನೆದರ್ಲ್ಯಾಂಡ್ಸ್ ಸರಕಾರದ ಉದ್ಯೋಗಿಗಳು, ಪತ್ರಕರ್ತರು ಸೇರಿದ್ದಾರೆ ಎಂದು ಗುಪ್ತಚರ ಸಂಸ್ಥೆಗಳು ತಿಳಿಸಿವೆ. ಈ ಕುರಿತು ವಾಟ್ಸ್ಯಾಪ್ ಸಂಸ್ಥೆ ರಾಯಿಟರ್ಸ್ ಗೆ ನೀಡಿದ ಪ್ರತಿಕ್ರಿಯೆಯಲ್ಲಿ, ಬಳಕೆದಾರರು ತಮ್ಮ ಆರು ಅಂಕಿಯ ಪರಿಶೀಲನಾ ಕೋಡ್ ಅನ್ನು ಯಾರೊಂದಿಗೂ ಹಂಚಿಕೊಳ್ಳಬಾರದು ಎಂದು ಎಚ್ಚರಿಕೆ ನೀಡಿದೆ.
ದೇಶದಲ್ಲಿ ನಿಜಕ್ಕೂ ಎಲ್ಪಿಜಿ ಕೊರತೆ ಇದೆಯೇ, ಗಾಬರಿ ಬೇಡ ಕೃಷ್ಣ ಭಟ್ ಬರಹ
ಬೆಂಗಳೂರು: ದೇಶದಲ್ಲಿ ಎಲ್ಪಿಜಿ ಕೊರತೆ ಉಂಟಾಗಿದೆ ಎಂಬ ಸುದ್ದಿಗಳು ಇತ್ತೀಚೆಗೆ ಜನರಲ್ಲಿ ಆತಂಕ ಮೂಡಿಸುತ್ತಿದೆ. ಆದರೆ ಈ ಆತಂಕದ ಹಿಂದೆ ನಿಜವಾದ ಕೊರತೆಗಿಂತ ಹೆಚ್ಚು ಗೊಂದಲ ಮತ್ತು ತಪ್ಪಾಗಿ ಅರ್ಥೈಸಿಕೊಂಡಿರುವುದು ಕಾರಣವಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ವಿಶೇಷವಾಗಿ ಈ ಡೊಮೆಸ್ಟಿಕ್ ಮತ್ತು ಇಂಡಸ್ಟ್ರಿಯಲ್ ಬಳಕೆ ನಡುವಿನ ವ್ಯತ್ಯಾಸವನ್ನು ತಪ್ಪಾಗಿ ಅರ್ಥಮಾಡಿಕೊಳ್ಳವುದರಿಂದ ಎಲ್ಪಿಜಿ ಕೊರತೆ ಎಂದು ಊಹಾಪೋಹಳು ಹರಡಿದ್ದು,
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral
ಆಂಧ್ರಪ್ರದೇಶದ ಕಡಪ ಜಿಲ್ಲೆಯ ಕೊಂಡಾಪುರಂ ಮಂಡಲದ ಚಿತ್ರಾವತಿ ಸೇತುವೆಯ ಬಳಿ ಭಾನುವಾರ ರಾತ್ರಿ ಭಾರಿ ಅಪಘಾತವೊಂದು ಸಂಭವಿಸಿದೆ. ಮಹಾರಾಷ್ಟ್ರದ ಪುಣೆಯಿಂದ ಪ್ರಸಿದ್ಧ ಪುಣ್ಯಕ್ಷೇತ್ರ ತಿರುಮಲಕ್ಕೆ ತುಪ್ಪವನ್ನು ಸಾಗಿಸುತ್ತಿದ್ದ ಬೃಹತ್ ಟ್ಯಾಂಕರ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಈ ಅಪಘಾತದ ಪರಿಣಾಮವಾಗಿ, ತಿರುಮಲ ಶ್ರೀವಾರಿ ದೇವಸ್ಥಾನದ ಪ್ರಸಾದಕ್ಕಾಗಿ ಕೊಂಡೊಯ್ಯಲಾಗುತ್ತಿದ್ದ ಬರೋಬ್ಬರಿ 21,000 ಲೀಟರ್ಗೂ ಅಧಿಕ ಮೌಲ್ಯಯುತವಾದ
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ
ಬೆಂಗಳೂರು: ರಾಜಧಾನಿ ಬೆಂಗಳೂರಿನಿಂದ ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಹಾಗೂ ಬೇರೆ ರಾಜ್ಯಗಳ ಪ್ರಮುಖ ನಗರಗಳನ್ನು ಸಂಪರ್ಕಿಸುವ ವಿವಿಧ 07 ವಂದೇ ಭಾರತ್ ಎಕ್ಸ್ಪ್ರೆಸ್ ರೈಲುಗಳ ಸಂಚಾರ ಸಮಯ ಪರಿಷ್ಕರಿಸಲಾಗಿದೆ. ನಿಲ್ದಾಣಗಳಿಗೆ ಬಂದು ಹೋಗುವ ಸಮಯದಲ್ಲಿ ಬದಲಾಗಿದೆ. ಬೆಂಗಳೂರು, ಹುಬ್ಬಳ್ಳಿ, ಬೆಳಗಾವಿ, ದಾವಣಗೆರೆ, ಕಲಬುರಗಿ, ಪುಣೆ, ಕೊಯಮತ್ತೂರು ಮಾರ್ಗದ ಪ್ರಯಾಣಿಕರು ಹೊಸ ಸಮಯ ಗಮನಿಸಿ ಪ್ರಯಾಣದ ಪ್ಲ್ಯಾನ್
ಸದನದಲ್ಲಿ ಕೊಳಚೆ ನೀರು ಪ್ರದರ್ಶನ ಮಾಡಿದ ಜೆಡಿಎಸ್ ಸದಸ್ಯ; ಕಾರಣವೇನು?
ಬೆಂಗಳೂರು : ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಕೆಸಿ ವ್ಯಾಲಿ ಯೋಜನೆಯ ಮೂಲಕ ಬೆಂಗಳೂರಿನ ಕೊಳಚೆ ನೀರನ್ನು ಪೂರೈಕೆ ಮಾಡಲಾಗುತ್ತಿದೆ ಎಂದು ಜೆಡಿಎಸ್ ಸದಸ್ಯ ಸಮೃದ್ಧಿ ಮಂಜುನಾಥ್ ಆರೋಪಿಸಿದಲ್ಲದೆ, ಕೊಳಚೆ ನೀರಿನ ಮಾದರಿ ಬಾಟಲ್ ನಲ್ಲಿ ವಿಧಾನಸಭೆಯಲ್ಲಿ ಪ್ರದರ್ಶಿಸಿದರು. ಮಂಗಳವಾರ ಪ್ರಶ್ನೋತ್ತರ ಕಲಾಪದಲ್ಲಿ ಜೆಡಿಎಸ್ ಸದಸ್ಯ ಸಮೃದ್ಧಿ ಮಂಜುನಾಥ್ ಪ್ರಸ್ತಾಪಿಸಿ, ಬೆಂಗಳೂರಿನ ಕೊಳಚೆ ನೀರನ್ನು ಎರಡು ಹಂತದಲ್ಲಿ ಮಾತ್ರ ಸಂಸ್ಕರಿಸಿ ನೀಡಲಾಗುತ್ತಿದೆ. ಸಂಸ್ಕೃರಿಸಿದ ನೀರಿನಲ್ಲಿ ರಾಸಾಯನಿಕ ಮಿಶ್ರಿತ ನೊರೆ ಕಂಡು ಬರುತ್ತಿದೆ. ಈ ನೀರನ್ನು ಕೆರೆಗೆ ತುಂಬಿಸುವುದರಿಂದ ಕೆರೆಗಳಲ್ಲಿನ ಜಲಚರಗಳಿಗೆ ಹಾನಿ ಆಗುತ್ತಿವೆ. ಈ ನೀರು ಭೂಮಿಗೆ ಇಳಿಯುವುದರಿಂದ ಅಂತರ್ಜಲ ಕಲುಷಿತವಾಗುತ್ತಿದೆ. ಕೃಷಿ ಚಟುವಟಿಕೆಗಳಿಗೆ ಈ ನೀರನ್ನು ಉಪಯೋಗ ಮಾಡುತ್ತಿರುವುದರಿಂದ ಬೆಳೆಗಳು ರೋಗಕ್ಕೆ ತುತ್ತಾಗುತ್ತಿದೆ, ಈ ಬೆಳೆಗಳನ್ನು ಸೇವಿಸುವದರಿಂದ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಉಲ್ಲೇಖಿಸಿದರು. ಈ ವೇಳೆ ಸಚಿವ ಕೃಷ್ಣಭೈರೇಗೌಡ ಅವರು, ಹದಗೆಟ್ಟ ಪರಿಸ್ಥಿತಿಯಲ್ಲಿ ನೀರು ಪೂರೈಕೆ ಮಾಡಿದ್ದೇವೆ. ಏನಾದರೂ ಸಮಸ್ಯೆ ಇದ್ದರೆ ಬಗೆಹರಿಸುತ್ತೇವೆ. ಆದರೆ ಈ ಹಿಂದೆ ಭದ್ರಾ ಮೂಲಕ ನೀರು ಪೂರೈಕೆ ಮಾಡುತ್ತೇವೆ ಎಂದು ಹೇಳಿದವರು ಪೂರೈಕೆ ಮಾಡಿಲ್ಲ. ರಾಜಕೀಯ ಕಾರಣಕ್ಕಾಗಿ ವಿರೋಧ ಮಾಡುವುದರಿಂದ ಅನುಕೂಲ ಇಲ್ಲ. ಯಾವ ರೈತರಿಗೆ ತೊಂದರೆ ಆಗದಂತೆ ನೋಡುತ್ತೇವೆ. ವೈಜ್ಞಾನಿಕ ಆಧಾರದಲ್ಲಿ ಸಾಬೀತಾದರೆ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು. ಶಾಸಕರ ಪ್ರಶ್ನೆಗೆ ಉತ್ತರಿಸಿದ ಸಣ್ಣ ನೀರಾವರಿ ಸಚಿವ ಎನ್.ಎಸ್.ಭೋಸರಾಜ್, ಯಾವ ನೀರು ತಂದಿದ್ದಾರೆ ಗೊತ್ತಿಲ್ಲ ಎಂದರು. ಈ ವೇಳೆ ಗರಂ ಆದ ಸಮೃದ್ದಿ ಮಂಜುನಾಥ್, ಕೈಯಲ್ಲಿದ್ದ ನೀರಿನ ಬಾಟಲಿ ಎಸೆದು ಅಸಮಾಧಾನ ವ್ಯಕ್ತಪಡಿಸಿದರು. ನೀವು ಈ ರೀತಿ ಉತ್ತರ ಕೊಡುವುದು ಸರಿಯಲ್ಲ. ಬೇಕಿದ್ದರೆ ಪರೀಕ್ಷೆ ಮಾಡಿಸಿ ಎಂದು ಗರಂ ಆದರು. ವೈಜ್ಞಾನಿಕ ವರದಿ ಇಲ್ಲದೆ ಆರೋಪ ಮಾಡುವುದು ಸರಿಯಲ್ಲ. ವಿದೇಶದ ತಂಡ ಹಾಗೂ ಕೇಂದ್ರದ ತಂಡ ಬಂದು ಕೆರೆ ನೋಡಿ ಹೊಗಳಿ ಹೋಗಿದ್ದಾರೆ. ಇದನ್ನು ತಮ್ಮಲ್ಲೂ ಅಳವಡಿಸಿಕೊಳ್ಳೋದಾಗಿ ಹೇಳಿದ್ದಾರೆ. ಸುಧಾರಣೆ ತರುವ ಕೆಲಸ ಮಾಡೋಣ. ಆಗಿರೋ ಕೆಲಸಕ್ಕೆ ಕಲ್ಲು ಹಾಕೋದು ಬೇಡ. ಯಾವುದೇ ತಂಡ ಬಂದು ಪರಿಶೀಲನೆ ಮಾಡಲಿ. ಅವರಿಗೆ ನಮ್ಮ ಸರ್ಕಾರ ಸಹಕಾರ ನೀಡಲಿದೆ ಎಂದು ಸಚಿವರು ಹೇಳಿದರು.
ಅತ್ತ ಅಡುಗೆ ಅನಿಲ ಕೊರತೆ: ಇತ್ತ ಬೆಂಗಳೂರಲ್ಲಿ Auto LPG, CNG ದರ ಏಕಾಏಕಿ ಏರಿಕೆ
ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಬಿಸಿ ಬೆಂಗಳೂರಿಗರನ್ನ ತಟ್ಟಲು ಆರಂಭಿಸಿದೆ. ಯುದ್ಧೋನ್ಮಾದದ ಪರಿಣಾಮವಾಗಿ ಅಡುಗೆ ಅನಿಲದ ಬೆಲೆ ಜಾಸ್ತಿ ಆಗಿದೆ. ಅಷ್ಟೇ ಅಲ್ಲ.. ಆಟೋ ಗ್ಯಾಸ್ ಎಲ್ಪಿಜಿ ಹಾಗೂ ಸಿಎನ್ಜಿ ಬೆಲೆಗಳೂ ಗಗನಮುಖಿ ಆಗಿವೆ. ಜೀವನಕ್ಕಾಗಿ ಆಟೋ ಹಾಗೂ ಕ್ಯಾಬ್ ಅನ್ನೇ ನಂಬಿರುವ ಚಾಲಕರಿಗೆ ಇದರಿಂದ ಸಂಕಷ್ಟ ಶುರುವಾಗಿದೆ.
ಬೆಂಗಳೂರು : ಅಡುಗೆ ಅನಿಲದ ಬೆಲೆ ಏರಿಕೆ ಮಾಡುವ ಮೂಲಕ ಮಹಿಳೆಯರಿಗೆ ಉಡುಗೊರೆ ನೀಡಿರುವ ಕೇಂದ್ರ ಸರಕಾರಕ್ಕೆ ಅಭಿನಂದನೆ ಸಲ್ಲಿಸಲು ಬಯಸುವೆ. ಈ ಬಗ್ಗೆ ಮಾತನಾಡಲು ಕೇಂದ್ರದ ಮಾಜಿ ಸಚಿವೆ ಸ್ಮೃತಿ ಇರಾನಿ ಕಾಣಿಸುತ್ತಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ವ್ಯಂಗ್ಯವಾಡಿದ್ದಾರೆ. ವಿಧಾನಸೌಧದಲ್ಲಿ ಮಂಗಳವಾರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಈ ಹಿಂದೆ 10, 20 ರೂಪಾಯಿ ಏರಿಕೆ ಮಾಡಿದರೂ ಸ್ಮೃತಿ ಇರಾನಿ ಹೋರಾಟ ಮಾಡುತ್ತಿದ್ದರು. ಯಾಕೆ ಈಗ ಮಾತಾಡುತ್ತಿಲ್ಲ, ಎಲ್ಲಿ ಕಾಣೆಯಾಗಿದ್ದಾರೆ ಎಂದು ಪ್ರಶ್ನಿಸಿದರು. ಈಗ ಯುದ್ಧ ನಡೆಯುತ್ತಿದ್ದು, ಇದರಿಂದ ಪೆಟ್ರೋಲ್, ಡಿಸೇಲ್, ಗ್ಯಾಸ್ ಬೆಲೆ ಏರಿಕೆಯಾಗುತ್ತಿದೆ. ಈಗಷ್ಟೇ ಸಂಕಷ್ಟ ಶುರುವಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಸಂಕಷ್ಟ ಎದುರಾಗಲಿದೆ. ಕೇಂದ್ರ ಸರಕಾರ ತಕ್ಷಣ ಎಚ್ಚೆತ್ತುಕೊಳ್ಳಬೇಕು. ಗ್ರಾಹಕರ ಹಾಗೂ ಹೋಟೆಲ್ ನವರ ಹಿತದೃಷ್ಟಿಯನ್ನು ಕಾಪಾಡಬೇಕು ಎಂದು ಸಚಿವರು ಹೇಳಿದರು. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾಗಿ ಇವತ್ತಿಗೆ ಆರು ವರ್ಷಗಳಾಗಿದ್ದು, ಅತ್ಯಂತ ಯಶಸ್ವಿ ಅಧ್ಯಕ್ಷ ಎನಿಸಿಕೊಂಡಿದ್ದಾರೆ. ಅವರಿಗೆ ಅಭಿನಂದನೆ ಸಲ್ಲಿಸುವೆ. ಇಂದಿನ ಔತಣಕೂಟದಲ್ಲಿ ಎಲ್ಲರೂ ಭಾಗಿಯಾಗಲಿದ್ದೇವೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು. ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂಬುದೇ ಡಿ.ಕೆ.ಶಿವಕುಮಾರ್ ಅವರ ಕನಸಾಗಿತ್ತು. ಅವರ ಕನಸು ನನಸಾಗಿದೆ. ಮುಂದಿನದ್ದು ಏನೇ ಇದ್ದರೂ ಹೈಕಮಾಂಡ್ ತೀರ್ಮಾನಕ್ಕೆ ಬಿಟ್ಟಿದ್ದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಚಾಮರಾಜನಗರ : ಗ್ಯಾಸ್ ಸಿಲಿಂಡರ್ ಸ್ಫೋಟ; ಇಬ್ಬರಿಗೆ ತೀವ್ರ ಗಾಯ
ಚಾಮರಾಜನಗರ: ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಪಟ್ಟಣದ ವಾರ್ಡ್ ನಂ.16ರ ನಾಯಕರ ಬೀದಿಯಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ. ಪರಮೇಶ್ ಸಿ ಮತ್ತು ಜ್ಯೋತಿ ಗಾಯಗೊಂಡವರು. ಸುಮಾರು 10.30ರ ವೇಳೆಗೆ ಸಿಲಿಂಡರ್ ಸ್ಫೋಟ ಸಂಭವಿಸಿದೆ. ಗಾಯಾಳುಗಳನ್ನು ತಕ್ಷಣ ಚಾಮರಾಜನಗರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.
ಬೆಂಗಳೂರು : ಅಂತರರಾಷ್ಟ್ರೀಯ ಮಹಿಳಾ ದಿನದಂದೆ ಗ್ಯಾಸ್ ಸಿಲಿಂಡರ್ ಬೆಲೆಯನ್ನ ಕೇಂದ್ರ ಸರಕಾರ 60 ರೂಪಾಯಿ ಏರಿಕೆ ಮಾಡಿದೆ. ಬಿಜೆಪಿ ಸಂಸದರುಗಳು ಈ ಬೆಲೆ ಏರಿಕೆ ಬಗ್ಗೆ ಮಾತನಾಡಲಿ. ಎಲ್ಲಾದಕ್ಕೂ ಬಹಳ ವಿಚಿತ್ರವಾಗಿ ದನಿ ಎತ್ತುತ್ತಾರೆ. ಇದರ ಬಗ್ಗೆಯೂ ಮಾತನಾಡಲಿ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ವಾಗ್ದಾಳಿ ನಡೆಸಿದರು. ಸದಾಶಿವನಗರದ ನಿವಾಸದ ಬಳಿ ಮಾಧ್ಯಮಗಳಿಗೆ ಮಂಗಳವಾರ ಪ್ರತಿಕ್ರಿಯೆ ನೀಡಿದರು. ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ ಬಗ್ಗೆ ಕೇಳಿದಾಗ, ಚರ್ಚೆ ನಡೆಸಲು ಕೇಂದ್ರ ಸರಕಾರಕ್ಕೆ ಏಕೆ ಭಯ. ಇದರಲ್ಲಿ ಕೇಂದ್ರ ಸರಕಾರದ ವೈಫಲ್ಯ ಎದ್ದು ಕಾಣುತ್ತದೆ. ಸಂಸತ್ ಅಧಿವೇಶನದಲ್ಲಿ ಈ ವಿಚಾರವನ್ನ ಕೇಂದ್ರ ಸರಕಾರ ಚರ್ಚೆ ಮಾಡಬೇಕು. ಈ ವಿಚಾರ ಚರ್ಚೆ ನಡೆಸಲು ಇವತ್ತಿನ ತನಕ ಅವಕಾಶ ನೀಡುತ್ತಿಲ್ಲ. ಆದ ಕಾರಣಕ್ಕೆ ಇಂಡಿಯಾ ಒಕ್ಕೂಟದ ಪ್ರತಿನಿಧಿಗಳು ಪ್ರತಿಭಟನೆ ಮಾಡುತ್ತಿದ್ದಾರೆ ಎಂದರು. ಹೋಟೆಲ್ ಹಾಗೂ ಇತರೇ ಉದ್ದಿಮೆಗಳು ಇದರಿಂದ ತೊಂದರೆಗೆ ಒಳಗಾಗಿವೆ. ಇದರ ಬಗ್ಗೆ ನಾವು ದನಿ ಎತ್ತಬೇಕಿರುವುದು ನಮ್ಮ ಕರ್ತವ್ಯ. ಕೋಟ್ಯಂತರ ಮಹಿಳೆಯರ ಮೇಲೆ ಇದು ಪರಿಣಾಮ ಬೀರಿದೆ. ಯುದ್ದದ ಪರಿಣಾಮವಾಗಿ ಸೌದಿ ಸೇರಿದಂತೆ ಕೊಲ್ಲಿ ರಾಷ್ಟ್ರಗಳ ಭಾರತೀಯ ಉದ್ಯಮಿಗಳು, ಕೆಲಸಗಾರರ ಮೇಲೆ ಪರಿಣಾಮ ಬೀರಿದೆ ಎಂದರು. ದೇವೇಗೌಡರ ಮನಸ್ಸು ನೋಯಿಸಲು ಇಷ್ಟಪಡುವುದಿಲ್ಲ : ದೇವೇಗೌಡರು ಮೇಕೆದಾಟು, ಎತ್ತಿನಹೊಳೆ ಬಗ್ಗೆ ಮಾತನಾಡುತ್ತಿದ್ದಾರೆ. ಅವರ ಪಕ್ಷದ ಸದಸ್ಯರು ಲೋಕಸಭೆಯಲ್ಲಿ ಮಾತನಾಡುವಂತೆ ಹೇಳಲಿ. ಈ ವಯಸ್ಸಿನಲ್ಲಿ ಅವರ ಮೇಲೆ ವಾಗ್ದಾಳಿ ಮಾಡುವುದು ಸರಿಯಲ್ಲ. ನನಗೆ ಇಷ್ಟವೂ ಇಲ್ಲ. ಈ ವಯಸ್ಸಿನಲ್ಲಿ ಮನಸ್ಸು ನೋಯಿಸುವುದು ಬೇಡ ಎಂದುಕೊಂಡಿರುವೆ. ಅವರೇ ಇವುಗಳಿಗೆ ಪರಿಹಾರ ಸೂಚಿಸಲಿ. ಅದೇ ರೀತಿ ಅವರ ಪಕ್ಷದ ಸದಸ್ಯರುಗಳಿಗೆ ವಿಧಾನಸಭೆಯಲ್ಲಿ ಮಾತನಾಡಲು ಹೇಳಲಿ. ಆಗ ನಾನು ನಮ್ಮ ಕಾಲದಲ್ಲಿ ಏನೇನು ಆಗಿದೆ ಎಂದು ಹೇಳುತ್ತೇನೆ ಎಂದರು. ಕೆಪಿಸಿಸಿ ಅಧ್ಯಕ್ಷರಾಗಿ ಆರು ವರ್ಷ ಪೂರೈಸಿರುವ ಬಗ್ಗೆ ಕೇಳಿದಾಗ, ಶಾಸಕರಿಗೆ ಹಾಗೂ ಬೆಂಗಳೂರಿನಲ್ಲಿರುವ ಎಐಸಿಸಿ ಕಾರ್ಯದರ್ಶಿಗಳಿಗೆ, ಸಂಸದರಿಗೆ ಔತಣಕೂಟ ಏರ್ಪಡಿಸಲಾಗಿದೆ. ನಾನು ಕೆಪಿಸಿಸಿ ಅಧ್ಯಕ್ಷನಾಗಿ ಅಧಿಕಾರವಹಿಸಿಕೊಂಡ ದಿನದಿಂದ ಇಲ್ಲಿಯವರೆಗಿನ ಪ್ರಯಾಣವನ್ನ ಪ್ರತ್ಯೇಕ ಮಾಧ್ಯಮಗೋಷ್ಟಿ ನಡೆಸಿ ವಿವರಿಸುತ್ತೇನೆ ಎಂದರು.
ಬೆಳ್ತಂಗಡಿ : ಎಚ್.ಐ.ಎಫ್ ಪ್ರಾಜೆಕ್ಟ್ ಬೂಂದ್ ವತಿಯಿಂದ 13ನೇ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ
ಬೆಳ್ತಂಗಡಿ: ತಾಲೂಕಿನ ಇಂದಬೆಟ್ಟು ಗ್ರಾಮದಲ್ಲಿ ಹೈಲ್ಯಾಂಡ್ ಇಸ್ಲಾಮಿಕ್ ಫೋರಂ (HIF India) ವತಿಯಿಂದ ನಿರ್ಮಿಸಲಾದ ಶುದ್ಧ ಕುಡಿಯುವ ನೀರಿನ ಘಟಕವನ್ನು ಇಂದಬೆಟ್ಟು ಗ್ರಾಮ ಪಂಚಾಯತ್ ಗ್ರಾಮಾಭಿವೃದ್ಧಿ ಅಧಿಕಾರಿ ರಶ್ಮಿ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಇಂದಬೆಟ್ಟು ಆರೋಗ್ಯ ಕೇಂದ್ರದ ರಂಜಿತ್, ಇಂದಬೆಟ್ಟು ಕಾಂಗ್ರೆಸ್ ಗ್ರಾಮ ಸಮಿತಿ ಅಧ್ಯಕ್ಷ ಚಂದ್ರಶೇಖರ್ ಡಿ. ಸುವರ್ಣ (ಬೆದ್ರಬೆಟ್ಟು), ಗ್ರಾಮ ಪಂಚಾಯತ್ ಮಾಜಿ ಸದಸ್ಯ ಲತೀಶ್ ಸುವರ್ಣ, ಸ್ಥಳೀಯ ಧರ್ಮಗುರು ಸತ್ತಾರ್ ಸಖಾಫಿ, ಇಂದಬೆಟ್ಟು ಮಸ್ಜಿದ್ ಅಧ್ಯಕ್ಷ ಮುತ್ತಲಿಬ್, ಇಂದಬೆಟ್ಟು ರಿಕ್ಷಾ ಮಾಲಕ-ಚಾಲಕ ಸಂಘಟನೆಯ ಪದಾಧಿಕಾರಿ ಹಾರಿಸ್ ಎರ್ಮಲಾ ಹಾಗೂ ಕಿಲ್ಲೂರು ಎಂಜೆಎಂ ಆಡಳಿತ ಸಮಿತಿ ಸದಸ್ಯ ಬದ್ರುದ್ದೀನ್ ಕಿಲ್ಲೂರು ಉಪಸ್ಥಿತರಿದ್ದರು. ಕಿಲ್ಲೂರು ಎಂಜೆಎಂ ಮಸ್ಜಿದ್ ಅಧ್ಯಕ್ಷ ಅಬ್ದುಲ್ ಅಝೀಝ್ ಝುಹ್ರಿ ಕಿಲ್ಲೂರು ಅವರು ದಾನಿಗಳನ್ನು ಪರಿಚಯಿಸಿ, ಅತಿಥಿಗಳನ್ನು ಸ್ವಾಗತಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಧನ್ಯವಾದ ಸಲ್ಲಿಸಿದರು. ಪ್ರಾಜೆಕ್ಟ್ ಬೂಂದ್ ವತಿಯಿಂದ ನಗರದ ಸಾರ್ವಜನಿಕ ಸ್ಥಳಗಳಲ್ಲಿ ವಾಟರ್ ಡಿಸ್ಪೆನ್ಸರ್, ಬಾವಿ, ಬೋರ್ವೆಲ್ ಮುಂತಾದ ನೀರಿನ ಯೋಜನೆಗಳನ್ನು ಹಮ್ಮಿಕೊಂಡು ಇದುವರೆಗೆ 13 ಸ್ಥಳಗಳಲ್ಲಿ ಅಳವಡಿಸಲಾಗಿದೆ ಎಂದು ಪ್ರಾಜೆಕ್ಟ್ ಸಂಚಾಲಕ ನಝೀಮ್ ಎ.ಕೆ. ತಿಳಿಸಿದ್ದಾರೆ.
ಬೆಂಗಳೂರು : ಗ್ರಾಮ ಪಂಚಾಯಿತಿ ಸೇರಿದಂತೆ ಇತರೆ ಚುನಾವಣೆ ಸಂದರ್ಭದಲ್ಲಿ ಮತದಾರ ಮೇಲಿನ ದಬ್ಬಾಳಿಕೆ, ಬೆದರಿಕೆ ಹಾಗೂ ಅನಗತ್ಯ ಪ್ರಭಾವ ಹಾಕುವವರ ವಿರುದ್ಧ ಕ್ರಮ ಕೈಗೊಳ್ಳುವ ʼಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ) ವಿಧೇಯಕ-2026ʼ ವಿಧಾನಸಭೆಯಲ್ಲಿ ಮಂಡಿಸಲಾಯಿತು. ಮಂಗಳವಾರ ವಿಧಾನಸಭೆಯ ಶಾಸನ ರಚನೆ ಕಲಾಪದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಪರವಾಗಿ ಕಾನೂನು, ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ) ವಿಧೇಯಕ-2026 ಮಂಡಿಸಿದರು. ಭಾರತ ಸಂವಿಧಾನದ 326ನೇ ಅನುಚ್ಛೇದದಡಿ ಜನರ ಪ್ರಜಾಸತ್ತಾತ್ಮಕ ಇಚ್ಛೆಯನ್ನು ಪುತಿಬಿಂಬಿಸುವ ಮುಕ್ತ, ನ್ಯಾಯಸಮ್ಮತ ಮತ್ತು ಪಾರದರ್ಶಕ ರೀತಿಯಲ್ಲಿ ಚುನಾವಣೆ ನಡೆಸುವ ಸಲುವಾಗಿ ಈ ವಿಧೇಯಕ ಅಗತ್ಯತೆ ಇದೆ. ಅದರಲ್ಲೂ ಮುಖ್ಯವಾಗಿ ಮತದಾರರ ಮತಪತ್ರದ ಗೌಪ್ಯತೆಯನ್ನು ಖಚಿತವಡಿಸಿಕೊಳ್ಳಲು ಮತ್ತು ಮತದಾರರನ್ನು ದಬ್ಬಾಳಿಕೆ, ಬೆದರಿಕೆ ಮತ್ತು ಅನಗತ್ಯ ಪ್ರಭಾವದಿಂದ ರಕ್ಷಿಸಿ, ಆ ಮೂಲಕ ಪ್ರಜಾಪ್ರಭುತ್ವ ಪ್ರಕ್ರಿಯೆಯ ಪಾವಿತ್ರ್ಯವನ್ನು ಸುರಕ್ಷಿತಗೊಳಿಸಲು ಈ ವಿಧೇಯಕ ತರಲಾಗಿದೆ. ಕುಲದೀಪ್ ನಾಯರ್ ವಿರುದ್ಧ ಒಕ್ಕೂಟ ಸರ್ಕಾರ (2006)ರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ಅನುಷ್ಠಾನಗೊಳಿಸಲು ಹಾಗೂ ಗೌಪ್ಯತೆ ಮತ್ತು ವಾರದರ್ಶಕತೆಗೆ ಆದ್ಯತೆ ನೀಡುವ ಚುನಾವಣಾ ಕಾರ್ಯವ್ಯವಸ್ಥೆಗಳನ್ನು ಬಲಪಡಿಸಲು. ತಿದ್ದುಪಡಿ ಮಾಡುವುದು ಅವಶ್ಯಕವೆಂದು ಪರಿಗಣಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ.
ಟಿ20 ವಿಶ್ವಕಪ್ ಗೆದ್ದ ಭಾರತ ತಂಡಕ್ಕೆ 131 ಕೋಟಿ ರೂ. ನಗದು ಬಹುಮಾನ ಘೋಷಿಸಿದ BCCI
ಅಹಮದಾಬಾದ್: ಐಸಿಸಿ ಪುರುಷರ ಟಿ20 ವಿಶ್ವಕಪ್ ನಲ್ಲಿ ಜಯ ಸಾಧಿಸಿದ ಭಾರತ ತಂಡಕ್ಕೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ BCCI 131 ಕೋಟಿ ರೂ. ನಗದು ಬಹುಮಾನ ಘೋಷಿಸಿದೆ. ಅಹಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ನೇತೃತ್ವದ ಭಾರತ ತಂಡ ನ್ಯೂಝಿಲೆಂಡ್ ತಂಡವನ್ನು ಸೋಲಿಸಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಈ ಬಹುಮಾನ ಮೊತ್ತವು ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ತಂಡವು 2024ರಲ್ಲಿ ಟಿ20 ವಿಶ್ವಕಪ್ ಗೆದ್ದ ನಂತರ ಘೋಷಿಸಲಾಗಿದ್ದ 125 ಕೋಟಿಗಿಂತ ಹೆಚ್ಚಾಗಿದೆ. ಈ ಜಯದೊಂದಿಗೆ ಭಾರತ ತಂಡವು ಟಿ20 ವಿಶ್ವಕಪ್ ಪ್ರಶಸ್ತಿಯನ್ನು ಸತತವಾಗಿ ಗೆದ್ದ ಮೊದಲ ತಂಡವಾಗಿದ್ದು, ಒಟ್ಟು ಮೂರು ಬಾರಿ ಈ ಟ್ರೋಫಿ ಗೆದ್ದ ಮೊದಲ ತಂಡ ಎಂಬ ದಾಖಲೆಯನ್ನೂ ನಿರ್ಮಿಸಿದೆ. ಕಳೆದ ವರ್ಷ ಏಕದಿನ ವಿಶ್ವಕಪ್ ಜಯಿಸಿದ ಭಾರತೀಯ ಮಹಿಳಾ ತಂಡಕ್ಕೂ ಬಿಸಿಸಿಐ 51 ಕೋಟಿ ರೂ. ನಗದು ಬಹುಮಾನ ನೀಡಿತ್ತು. ಪ್ರಸ್ತುತ ಭಾರತವು ಐದು ಪ್ರಮುಖ ಐಸಿಸಿ ಟ್ರೋಫಿಗಳನ್ನು ತನ್ನದಾಗಿಸಿಕೊಂಡಿದೆ. ಪುರುಷರ ಟಿ20 ವಿಶ್ವಕಪ್, ಮಹಿಳಾ ವಿಶ್ವಕಪ್, ಚಾಂಪಿಯನ್ಸ್ ಟ್ರೋಫಿ, ಅಂಡರ್-19 ಪುರುಷರ ಟಿ20 ವಿಶ್ವಕಪ್ ಮತ್ತು ಅಂಡರ್-19 ಮಹಿಳಾ ಟಿ20 ವಿಶ್ವಕಪ್ ಪ್ರಶಸ್ತಿಗಳನ್ನು ಭಾರತ ಗೆದ್ದಿದೆ.
ಹುಬ್ಬಳ್ಳಿಗೂ ತಟ್ಟಿದ ಯುದ್ಧದ ಬಿಸಿ; ಗ್ಯಾಸ್ ಇಲ್ಲದೆ ಮಂಗಳವಾರ ರಾತ್ರಿಯಿಂದಲೇ ಹೋಟೆಲ್ಗಳು ಬಂದ್ ಸಾಧ್ಯತೆ
ಹುಬ್ಬಳ್ಳಿ: ಅಮೆರಿಕ, ಇಸ್ರೇಲ್ ಹಾಗೂ ಇರಾನ್ ದೇಶಗಳ ನಡುವೆ ನಡೆಯುತ್ತಿರುವ ಭೀಕರ ಯುದ್ಧದ ಕರಿನೆರಳು ಇದೀಗ ರಾಜ್ಯದ ವಾಣಿಜ್ಯ ನಗರಿ ಹುಬ್ಬಳ್ಳಿಯ ಮೇಲೂ ಬಿದ್ದಿದೆ. ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಈ ಯುದ್ಧದ ತೀವ್ರತೆಯಿಂದಾಗಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಗಳು ಗಗನಕ್ಕೇರಿವೆ. ಇದರ ನೇರ ಪರಿಣಾಮವಾಗಿ ರಾಜ್ಯದಲ್ಲಿ ವಾಣಿಜ್ಯ ಬಳಕೆಯ ಅಡುಗೆ ಅನಿಲ (Commercial LPG) ಪೂರೈಕೆಯನ್ನು
ಮಧ್ಯಪ್ರಾಚ್ಯ ಯುದ್ಧ: ಪೆಟ್ರೋಲ್ - ಡಿಸೇಲ್ ಸೇರಿದಂತೆ ವಿವಿಧ ವಸ್ತುಗಳ ಸರಬರಾಜು - ಕೇಂದ್ರ ಸರ್ಕಾರದಿಂದ ಮಹತ್ವದ ಆದೇಶ
ನವದೆಹಲಿ:ಪೆಟ್ರೋಲಿಯಂ ಮತ್ತು ಪೆಟ್ರೋಲಿಯಂ ಉತ್ಪನ್ನಗಳು ಮತ್ತು ನೈಸರ್ಗಿಕ ಅನಿಲದ ಲಭ್ಯತೆ, ಪೂರೈಕೆ ಮತ್ತು ಸಮಾನ ವಿತರಣೆಯನ್ನು ನಿಯಂತ್ರಿಸಲು ಭಾರತ ಸರ್ಕಾರವು 1955 ರ ಅಗತ್ಯ ಸರಕುಗಳ ಕಾಯ್ದೆಯನ್ನು ಜಾರಿಗೊಳಿಸಿದೆ. ಮಧ್ಯಪ್ರಾಚ್ಯದಲ್ಲಿ ಯುದ್ಧದ ತೀವ್ರತೆಯು ಭಾರೀ ಹೆಚ್ಚಳವಾಗಿದೆ. ಇದರ ಬಿಸಿಯು ಇದೀಗ ಭಾರತದ ಮೇಲೂ ಆಗಲು ಪ್ರಾರಂಭವಾಗಿದೆ. ಭಾರತದಲ್ಲಿ ವಾಣಿಜ್ಯ ಸಿಲಿಂಡರ್ಗಳ ಮಾರಾಟದ ಮೇಲೆ ಪರಿಣಾಮ ಎದುರಾಗಿದ್ದು, ಇದರೊಂದಿಗೆ
ಮತ್ತೆ ಏರಿದ ಚಿನ್ನ- ಬೆಳ್ಳಿ ದರ; ಇಂದಿನ ದರವೆಷ್ಟು?
ತೈಲ ಬೆಲೆ ಏರಿಕೆಯಿಂದ ಜಾಗತಿಕವಾಗಿ ಮಾರುಕಟ್ಟೆಗಳು ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಹೂಡಿಕೆದಾರರು ಸುರಕ್ಷಿತ ಹೂಡಿಕೆಯತ್ತ ಗಮನ ನೀಡಿದ್ದಾರೆ. ಫೆಬ್ರವರಿಯಲ್ಲಿ ಸ್ಥಿರವಾಗಿದ್ದ ಚಿನ್ನದ ಬೆಲೆ ಮಾರ್ಚ್ ಆರಂಭದಲ್ಲಿ ಏರಿಕೆಯಾಗಿ 17 ಸಾವಿರ ದಾಟಿತ್ತು. ಆದರೆ ನಂತರ ಕಳೆದ ಸೋಮವಾರದಿಂದ ಚಿನ್ನದ ಬೆಲೆ ಕುಸಿತದ ಹಾದಿಯಲ್ಲಿತ್ತು. ಸೋಮವಾರ ದಿಢೀರ್ ಕುಸಿತ ಕಂಡ ಚಿನ್ನದ ಬೆಲೆ ಗ್ರಾಂಗೆ 16,980 ರೂ.ಗೆ ಬಂದು ನಿಂತಿತ್ತು. ಮಂಗಳವಾರ ಮತ್ತೆ ತುಸು ಕುಸಿದಿದೆ. ಬುಧವಾರ ತೀವ್ರವಾಗಿ ಕುಸಿದ ನಂತರ ಗುರುವಾರ ಮತ್ತು ಶುಕ್ರವಾರವೂ ಬೆಲೆಯಲ್ಲಿ ಸ್ವಲ್ಪ ಕುಸಿತ ಕಂಡುಬಂದಿದೆ. ಆದರೆ ವಾರಾಂತ್ಯದಲ್ಲಿ ಚಿನ್ನದ ಬೆಲೆಯಲ್ಲಿ ಹಠಾತ್ ಏರಿಕೆ ಕಂಡುಬಂದಿತ್ತು. ಮಾರ್ಚ್ 09 ಸೋಮವಾರ ಮತ್ತೆ ಕುಸಿದ ಶುದ್ಧ ಚಿನ್ನದ ಬೆಲೆ 16 ಸಾವಿರದ ಮಿತಿಯೊಳಗೆ ನಿಂತಿತ್ತು. ಇದೀಗ ಮಂಗಳವಾರ ಚಿನ್ನದ ಬೆಲೆ ಮತ್ತೆ ಏರಿಕೆಯಾಗಿದೆ. ಚಿನ್ನ-ಬೆಳ್ಳಿ ಬೆಲೆ ಏರಿಕೆಗೆ ಕಾರಣವೇನು? ಅಮೆರಿಕ ಮತ್ತು ಇಸ್ರೇಲ್ ಜೊತೆಗೂಡಿ ಇರಾನ್ ಮೇಲೆ ದಾಳಿ ಮಾಡಿರುವುದು, ಜಾಗತಿಕ ಭೌಗೋಳಿಕ ರಾಜಕೀಯದ ಉದ್ವಿಗ್ನತೆ ಮತ್ತು ಮಧ್ಯಪ್ರಾಚ್ಯದಲ್ಲಿ ಸಂಘರ್ಷದ ವಾತಾವರಣದ ನಡುವೆಯೂ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಕುಸಿದಿದ್ದವು. ಆದರೆ ಇದೀಗ ತೈಲ ಬೆಲೆ ಏರಿಕೆಯಿಂದ ಜಾಗತಿಕವಾಗಿ ಮಾರುಕಟ್ಟೆಗಳು ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಹೂಡಿಕೆದಾರರು ಸುರಕ್ಷಿತ ಹೂಡಿಕೆಯತ್ತ ಗಮನ ನೀಡಿದ್ದಾರೆ. ಯುದ್ಧ ನಿಲುಗಡೆಯ ಬಗ್ಗೆ ಅಮೆರಿಕದ ಅಧ್ಯಕ್ಷರು ಸೂಚನೆ ನೀಡಿರುವುದು ಮತ್ತು ಅಮೆರಿಕದ ಕೇಂದ್ರೀಯ ಬ್ಯಾಂಕ್ ಫೆಡರಲ್ ರಿಸರ್ವ್ ಕೆಲವು ಪ್ರಮುಖ ನೀತಿಗಳನ್ನು ಜಾರಿಗೆ ತರಲು ಸಿದ್ಧರಾಗಿರುವ ಹಿನ್ನೆಲೆಯಲ್ಲಿ ಹೂಡಿಕೆದಾರರು ಚಿನ್ನ- ಬೆಳ್ಳಿಯ ಮೇಲೆ ಹೂಡಿಕೆ ಮಾಡುತ್ತಿದ್ದಾರೆ. ಇಂದಿನ ಚಿನ್ನದ ದರ ಹೇಗಿದೆ? ಮಾರ್ಚ್ 10ರಂದು ಮಂಗಳವಾರ ಬೆಂಗಳೂರಿನ ಮಾರುಕಟ್ಟೆಗಳಲ್ಲಿ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ ಸೋಮವಾರ ಸಂಜೆಯ ಬೆಲೆಗೆ ಹೋಲಿಸಿದರೆ ಪ್ರತಿ ಗ್ರಾಂಗೆ 70 ರೂ. ಏರಿಕೆ ಕಂಡು ಹತ್ತು ಗ್ರಾಂ ಬೆಲೆ 1,62,380 ರೂ. ಗೆ ಬಂದು ನಿಂತಿದೆ. ಆಭರಣ ಚಿನ್ನವಾದ 22 ಕ್ಯಾರೆಟ್ ಬೆಲೆಯು ಗ್ರಾಂಗೆ 65 ರೂ. ಏರಿಕೆಯಾಗಿ ಹತ್ತು ಗ್ರಾಂಗೆ 1,48,850 ರೂ. ಗೆ ತಲುಪಿದೆ. 18 ಕ್ಯಾರೆಟ್ ಚಿನ್ನವು ಪ್ರತಿ ಗ್ರಾಂಗೆ 53 ರೂ. ಏರಿಕೆಯಾಗಿ ಹತ್ತು ಗ್ರಾಂಗೆ 1,21,790 ರೂ. ಗೆ ತಲುಪಿದೆ. ಮಂಗಳೂರಿನಲ್ಲಿ ಚಿನ್ನದ ದರವೆಷ್ಟಿದೆ? ಮಾರ್ಚ್ 10ರಂದು ಮಂಗಳವಾರ ಬೆಳಗಿನ 11 ಗಂಟೆಯ ವಹಿವಾಟಿನಲ್ಲಿ ಮಂಗಳೂರಿನಲ್ಲಿ ಚಿನ್ನದ ಬೆಲೆ ಮತ್ತೆ ಸ್ವಲ್ಪ ಏರಿಕೆಯಾಗಿದೆ. ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ದರ 16,238 (+70) ರೂ. ನಷ್ಟಿದೆ. ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ದರ 14,885 (+65) ರೂ. ಮತ್ತು ಒಂದು ಗ್ರಾಂ 18 ಕ್ಯಾರೆಟ್ ಚಿನ್ನದ ದರ 12,179 (+53) ರೂ. ಬೆಲೆಗೆ ತಲುಪಿದೆ. ಮತ್ತೆ ಏರಿದ ಬೆಳ್ಳಿ ದರ ಫೆಬ್ರವರಿ ಆರಂಭದಿಂದಲೇ ಸತತ ಕುಸಿತ ಕಂಡಿದ್ದ ಬೆಳ್ಳಿ ಫೆಬ್ರವರಿ ಮಧ್ಯಭಾಗದಲ್ಲಿ ಏರು ಹಾದಿಯಲ್ಲಿತ್ತು. ಕಳೆದ ವಾರದ ಆರಂಭದಲ್ಲಿ ಸೋಮವಾರ ಬರೋಬ್ಬರಿ ಗ್ರಾಂಗೆ 35 ರೂ. ಏರಿಕೆಯಾಗಿ ಒಂದು ಕೆಜಿ ಬೆಳ್ಳಿ ಬೆಲೆಯು 3,30,000 ರೂ. ಗೆ ತಲುಪಿತ್ತು. ಆದರೆ ಕಳೆದ ಮಂಗಳವಾರದಿಂದ ಬೆಳ್ಳಿಯ ಬೆಲೆ ಕುಸಿತದ ಹಾದಿಯಲ್ಲಿದೆ. ಮಾರ್ಚ್ 02ರಂದು ಬೆಳ್ಳಿಯ ಬೆಲೆಯಲ್ಲಿ ಮತ್ತೆ ಕುಸಿತ ಕಂಡುಬಂದಿದೆ. ಗ್ರಾಂಗೆ 20 ರೂ. ಕುಸಿತ ಕಂಡು ಒಂದು ಕೆಜಿ ಬೆಳ್ಳಿ ಬೆಲೆಯು 2,95,000 ರೂ. ಗೆ ಬಂದು ನಿಂತಿತ್ತು. ಬುಧವಾರ ಮತ್ತೆ ಪ್ರತಿ ಗ್ರಾಂಗೆ 10 ರೂ. ಕುಸಿದ ಬೆಳ್ಳಿಯ ಬೆಲೆ ಪ್ರತಿ ಕೆಜಿಗೆ 2,85,000 ರೂ. ಗೆ ಬಂದು ನಿಂತಿದೆ. ನಂತರ ಗುರುವಾರ, ಶುಕ್ರವಾರ ಮತ್ತು ಶನಿವಾರ ಇದೇ ಬೆಲೆಗೆ ಸ್ಥಿರವಾಗಿ ನಿಂತಿದೆ. ನಿನ್ನೆ ಸೋಮವಾರ ಮತ್ತೆ ಪ್ರತಿ ಗ್ರಾಂಗೆ 5 ರೂ. ಕುಸಿದ ಬೆಳ್ಳಿ ಪ್ರತಿ ಕೆಜಿಗೆ 2,80,000 ರೂ. ಗೆ ಬಂದು ನಿಂತಿತ್ತು. ಇದೀಗ ಮಂಗಳವಾರ ಪ್ರತಿ ಗ್ರಾಂಗೆ 10 ರೂ. ಏರಿಕೆಯಾಗಿರುವ ಬೆಳ್ಳಿಯ ಬೆಲೆ ಪ್ರತಿ ಕೆಜಿಗೆ 2,90,000 ರೂ.ಗೆ ತಲುಪಿದೆ. ವಿವಿಧ ನಗರಗಳಲ್ಲಿ 1 ಗ್ರಾಮ್ ಚಿನ್ನದ ದರ (ಬೆಳಗಿನ ವಹಿವಾಟು) ಹೇಗಿದೆ? ದಿಲ್ಲಿ: 24 ಕ್ಯಾರೆಟ್ ಚಿನ್ನದ ದರ 16,253 (+ 70) ರೂ., 22 ಕ್ಯಾರೆಟ್ ಚಿನ್ನದ ದರ 14,900 (+ 65) ರೂ. ಮುಂಬೈ: 24 ಕ್ಯಾರೆಟ್ ಚಿನ್ನದ ದರ 16,238 (+70) ರೂ., 22 ಕ್ಯಾರೆಟ್ ಚಿನ್ನದ ದರ 14,885 (+65) ರೂ. ಅಹಮದಾಬಾದ್: 24 ಕ್ಯಾರೆಟ್ ಚಿನ್ನದ ದರ 16,243 (+ 70) ರೂ., 22 ಕ್ಯಾರೆಟ್ ಚಿನ್ನದ ದರ 14,890 (+ 65) ರೂ. ಚೆನ್ನೈ: 24 ಕ್ಯಾರೆಟ್ ಚಿನ್ನದ ದರ 16,418 (+109) ರೂ., 22 ಕ್ಯಾರೆಟ್ ಚಿನ್ನದ ದರ 15,050 (+100) ರೂ. ಕೋಲ್ಕತ್ತಾ: 24 ಕ್ಯಾರೆಟ್ ಚಿನ್ನದ ದರ 16,238 (-125) ರೂ., 22 ಕ್ಯಾರೆಟ್ ಚಿನ್ನದ ದರ 14,885 (+65) ರೂ. ಹೈದರಾಬಾದ್: 24 ಕ್ಯಾರೆಟ್ ಚಿನ್ನದ ದರ 16,238 (+ 70) ರೂ., 22 ಕ್ಯಾರೆಟ್ ಚಿನ್ನದ ದರ 14,885 (+ 65) ರೂ. ಜೈಪುರ: 24 ಕ್ಯಾರೆಟ್ ಚಿನ್ನದ ದರ 16,253 (+ 70) ರೂ., 22 ಕ್ಯಾರೆಟ್ ಚಿನ್ನದ ದರ 14,900 (+ 65) ರೂ. ಚಂಡೀಗಢ: 24 ಕ್ಯಾರೆಟ್ ಚಿನ್ನದ ದರ 16,253 (+ 70) ರೂ., 22 ಕ್ಯಾರೆಟ್ ಚಿನ್ನದ ದರ 14,900 (+ 65) ರೂ. ಲಕ್ನೋ: 24 ಕ್ಯಾರೆಟ್ ಚಿನ್ನದ ದರ 16,253 (+ 70) ರೂ., 22 ಕ್ಯಾರೆಟ್ ಚಿನ್ನದ ದರ 14,900 (+ 65) ರೂ.
ಬೆಂಗಳೂರಿನಲ್ಲಿ ಕ್ರೈಂರೇಟ್ ಇಳಿಕೆಗೆ ಕಾರಣವೇನು : ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಸಂದರ್ಶನ
ಸೂಪರ್ ಕಾಪ್ ಸೀಮಂತ್ ಕುಮಾರ್ ಸಂದರ್ಶನ : ಸಿಲಿಕಾನ್ ವ್ಯಾಲಿ ಬೆಂಗಳೂರಿನಲ್ಲಿನ ಆಗುಹೋಗುಗಳು ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಇತ್ತೀಚೆಗೆ ಡ್ರಗ್ಸ್ ಪ್ರಕರಣವೂ ದೊಡ್ಡ ಸುದ್ದಿಯಾಗಿತ್ತು. ಇನ್ನು, ಎಟಿಎಂ ದರೋಡೆ ಪ್ರಕರಣ ವೈರಲ್ ಆಗಿತ್ತು. ನಗರದಲ್ಲಿ ಕ್ರೈಂ ರೇಟ್ ಇಳಿಕೆಯಾಗಿದ್ದು ಹೇಗೆ ಎನ್ನುವುದರ ಬಗ್ಗೆ ನಗರದ ಪೊಲೀಸ್ ಆಯುಕ್ತರಾದ ಸೀಮಂತ್ ಸಿಂಗ್, ವಿಜಯ ಕರ್ನಾಟಕ ವೆಬ್ ಜೊತೆ ಮಾತನಾಡುತ್ತಾ ವಿವರಿಸಿದ್ದಾರೆ.
ಪ್ರೊ. ಸೋನಾಝರಿಯಾ ಮಿಂಜ್: ಯುನೆಸ್ಕೋ ಗುರುತಿಸಿದ ದೇಶದ ಮೊದಲ ಬುಡಕಟ್ಟು ಮಹಿಳೆ
ಯುನೆಸ್ಕೋದಲ್ಲಿ ಭಾರತದ ಬುಡಕಟ್ಟುಗಳ ಜ್ಞಾನ ಪರಂಪರೆಯ ಬಗ್ಗೆ ಕೈಗೊಳ್ಳಬೇಕೆಂದಿರುವ ಹೊಸ ಯೋಜನೆಗಳ ಬಗ್ಗೆ ಕೇಳಿದಾಗ, ಪ್ರೊ. ಸೋನಾಝರಿಯಾ ಮಿಂಜ್ ಅವರು ‘‘ಮೂಲಭೂತವಾಗಿ ಭಾರತದ ಬುಡಕಟ್ಟುಗಳು ಬದುಕಿ ಉಳಿಯಬೇಕಿದೆ, ಅವರು ಬದುಕುಳಿದರೆ ಉಳಿದದ್ದರ ಬಗ್ಗೆ ಮಾತನಾಡಬಹುದು. ಕಾರಣ ಇಂದು ಅವರ ಬದುಕಿಗೆ ಕಂಟಕ ಬಂದಿದೆ’’ ಎನ್ನುತ್ತಾರೆ. ಇದೀಗ ಅಂತರ್ರಾಷ್ಟ್ರೀಯ ಮಹಿಳಾ ದಿನಾಚರಣೆಯ ಭಾಗವಾಗಿ ಮಹಿಳಾಪರವಾದ ಚರ್ಚೆ ಸಂವಾದಗಳು ನಡೆಯುತ್ತಿವೆ. ಒಂದೆಡೆ ಗಂಡಾಳ್ವಿಕೆಯ ದಮನವೂ, ಮತ್ತೊಂದೆಡೆ ಪುರುಷಪಾರಮ್ಯದ ಸಾಮಾಜಿಕ ಸಂರಚನೆಯನ್ನೇ ಬುಡಮೇಲು ಮಾಡುವ ಹೆಣ್ಣಿನ ಸಾಧನೆಗಳೂ ಜತೆ ಜತೆಗೇ ನಡೆಯುತ್ತಿವೆ. ಈಚೆಗೆ ನಾನು ಯುನೆಸ್ಕೋದ ‘ಟ್ರಾನ್ಸ್ಫಾರ್ಮಿಂಗ್ ಇಂಡಿಜೀನಿಯಸ್ ನಾಲೆಡ್ಜ್ ರಿಸರ್ಚ್ ಗವರ್ನರ್ಸ್ (IKRG) ಆಂಡ್ ರಿಮ್ಯಾಟ್ರಿಯೇಷನ್ ಟು ಅಡ್ವಾನ್ಸ್ ಇಂಡಿಜೀನಿಯಸ್ ರೈಟ್ಸ್ ನಾಲೆಡ್ಜ್ ಸಿಸ್ಟಮ್ ಆಂಡ್ ಸೆಲ್ಪ್ ಡಿಟರ್ಮಿನೇಷನ್’ ಪೀಠದ ಸಹ-ಅಧ್ಯಕ್ಷೆಯಾದ ಪ್ರೊ. ಸೋನಾಝರಿಯಾ ಮಿಂಜ್ ಅವರನ್ನು ಭೇಟಿ ಮಾಡಿದೆ. ದಿಲ್ಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯದ (ಜೆಎನ್ಯು) ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಹಿರಿಯ ಪ್ರಾಧ್ಯಾಪಕಿಯಾಗಿರುವ ಪ್ರೊ. ಸೋನಾಝರಿಯಾ ಮಿಂಜ್ ಅವರು ಯುನೆಸ್ಕೋದ ಈ ಸ್ಥಾನಕ್ಕೆ ಆಯ್ಕೆಯಾದ ಭಾರತದ ಮೊದಲ ಬುಡಕಟ್ಟು ಮಹಿಳೆ. ಜಾರ್ಖಂಡ್ನಲ್ಲಿ ಮೂಲತಃ ದ್ರಾವಿಡ ಭಾಷಾ ಪರಿವಾರದ ಕುರುಖ್ ಭಾಷೆಯನ್ನು ಆಡುವ ಒರಾನ್ ಬುಡಕಟ್ಟಿದೆ. ಮುಂಡಾ ಬುಡಕಟ್ಟಿನವರು ಈ ಸಮುದಾಯವನ್ನು ಒರಾನ್ ಎನ್ನುತ್ತಿದ್ದರು. ಒರಾನ್ ಎಂದರೆ ಅಲೆದಾಡುವವರು ಎಂದರ್ಥ. ಈ ಸಮುದಾಯವನ್ನು ಕುರುಖ್ ಬುಡಕಟ್ಟು ಎಂತಲೂ ಕರೆಯುತ್ತಾರೆ. ಒರಾನ್ ಸಮುದಾಯ ಜಾರ್ಖಂಡ್ ರಾಜ್ಯವನ್ನು ಒಳಗೊಂಡಂತೆ ಪಶ್ಚಿಮ ಬಂಗಾಳ, ಒಡಿಶಾ ಮತ್ತು ಛತ್ತೀಸ್ಗಡದಲ್ಲಿಯೂ ಇದ್ದಾರೆ. ಜಾರ್ಖಂಡ್ ರಾಜ್ಯದಲ್ಲಿ ಸಂತಾಲರ ನಂತರ ದೊಡ್ಡ ಸಮುದಾಯ. 36 ಲಕ್ಷದಷ್ಟು ಜನಸಂಖ್ಯೆ ಇದೆ. ಒರಾನರು ಆರಂಭದಲ್ಲಿ ಕಾಡಿನ ಉತ್ಪನ್ನಗಳನ್ನು ಆಧರಿಸಿ ಬದುಕುತ್ತಿದ್ದರು. ನಂತರದಲ್ಲಿ ದೊಡ್ಡ ಪ್ರಮಾಣದಲ್ಲಿ ಕೃಷಿಕರಾಗಿ ಬದಲಾದರು. ಬ್ರಿಟಿಷ್ ಆಳ್ವಿಕೆಯಲ್ಲಿ ಒರಾನ್ಗಳನ್ನು ಅಸ್ಸಾಂ, ಪಶ್ಚಿಮ ಬಂಗಾಳ, ಬಾಂಗ್ಲಾ ದೇಶದ ಕಾಫಿ ತೋಟಗಳಿಗೆ ಜೀತದಾಳುಗಳನ್ನಾಗಿ ಕರೆದೊಯ್ದಿದ್ದರು. ಈಗಲೂ ಮಾತೃಪ್ರಧಾನ ಸಂಸ್ಕೃತಿಯ ಕುರುಹುಗಳಿರುವ ಬುಡಕಟ್ಟು ಇದಾಗಿದೆ. 1955ರಲ್ಲಿ ಸಿನೆಮಾ ನಿರ್ದೇಶಕ ಋತ್ವಿಕ್ ಘಟಕ್ ಈ ಬುಡಕಟ್ಟು ಜನರ ಜೀವನವನ್ನು ಆಧರಿಸಿ ಬಂಗಾಳಿಯಲ್ಲಿ ‘ಒರಾನ್’ ಎನ್ನುವ ಸಿನೆಮಾ ತೆಗೆದರು. ಈ ಮೂಲಕ ಈ ಸಮುದಾಯ ಹೊರ ಜಗತ್ತಿಗೆ ಹೆಚ್ಚು ಪರಿಚಯವಾಯಿತು. ಇಂದು ಒರಾನ್ ಬುಡಕಟ್ಟಿನಲ್ಲಿ ಅನೇಕರು ಬೇರೆ ಬೇರೆ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ. ರಾಷ್ಟ್ರವನ್ನು ಪ್ರತಿನಿಧಿಸಿದ ಹಲವು ಹಾಕಿ ಕ್ರೀಡಾಪಟುಗಳಿದ್ದಾರೆ, ರಾಜಕಾರಣಿಗಳು, ಅಕಾಡಮಿಷಿಯನ್ಸ್ಗಳ ಸಾಧನೆಗಳನ್ನು ಗುರುತಿಸಬಹುದು. ಇಂತಹ ಬುಡಕಟ್ಟಿನಿಂದ ಹೊರ ಬಂದ ಪ್ರತಿಭೆ ಪ್ರೊ. ಸೋನಾಝರಿಯಾ ಮಿಂಜ್. ಜಾರ್ಖಂಡ್ನ ರಾಂಚಿಯ ಗುಮ್ಲಾ ಜಿಲ್ಲೆಯ ಒರಾನ್ ಬುಡಕಟ್ಟಿನ ಪ್ಯಾರಕ್ಲೆಟಾ ಮತ್ತು ನಿರ್ಮಲ್ ಮಿಂಜ್ ಅವರ ಮಗಳಾಗಿ 1962ರಲ್ಲಿ ಜನಿಸುತ್ತಾರೆ. ಮಿಂಜ್ ದಕ್ಷಿಣ ಭಾರತದ ಬೆಂಗಳೂರು, ಚೆನ್ನೈನಲ್ಲಿ ತಮ್ಮ ವಿದ್ಯಾಭ್ಯಾಸ ಮುಗಿಸಿ ದಿಲ್ಲಿಯ ಜೆಎನ್ಯುನಲ್ಲಿ ಉನ್ನತ ಶಿಕ್ಷಣ ಪೂರೈಸಿ, ಇದೀಗ ಇದೇ ವಿಶ್ವವಿದ್ಯಾನಿಲಯದ ಹಿರಿಯ ಪ್ರಾಧ್ಯಾಪಕರಾಗಿದ್ದಾರೆ. ಜಾರ್ಖಂಡ್ನ ಸಿದೊ ಖ್ಹನು ಮುರ್ಮು ವಿಶ್ವವಿದ್ಯಾನಿಲಯದ ಉಪಕುಲಪತಿಯಾಗಿಯೂ ಆಗಿದ್ದ ಇವರ ಬದುಕಿನ ಪಯಣ ಕುತೂಹಲಕಾರಿಯಾಗಿದೆ. ಸೋನಾಝರಿಯಾ ಮಿಂಜ್ ಅವರ ಬಾಲ್ಯ ಇತರ ಬುಡಕಟ್ಟು ಸಮುದಾಯಗಳ ಮಕ್ಕಳಂತಿರಲಿಲ್ಲ. ಕಾರಣ ತಂದೆ ತಾಯಿ ಎರಡನೇ ತಲೆಮಾರಿನ ವಿದ್ಯಾವಂತರಾಗಿದ್ದರು. ಹಾಗಾಗಿ ಬಾಲಕಿ ಮಿಂಜ್ ಅವರ ಬಾಲ್ಯ ಬುಡಕಟ್ಟುಗಳ ಕಷ್ಟದಿಂದ ಪಾರಾಗಿತ್ತು. ತಂದೆ ನಿರ್ಮಲ್ ಮಿಂಜ್ ಅವರು ಜಾರ್ಖಂಡ್ನ ನಾಗರಿಕ ಸಮುದಾಯಗಳಿಂದ ಬಹಳ ದೂರವಿದ್ದ ದಟ್ಟ ಕಾಡಿನ ಮಧ್ಯದ ಹಳ್ಳಿಯಾದ ಅನ್ವರಟೋಲಿಯ ಒರಾನ್ ಬುಡಕಟ್ಟು ಸಮುದಾಯದಿಂದ ಬಂದವರು. ಮೊದಲಿಗೆ ತನ್ನ ಬುಡಕಟ್ಟು ಪ್ರದೇಶದಿಂದ ರಾಂಚಿಗೆ ಬಂದು ಪ್ರೊಟೆಸ್ಟೆಂಟ್ ಕ್ರಿಶ್ಚಿಯನ್ ವಿದ್ಯಾ ಸಂಸ್ಥೆಗಳಲ್ಲಿ ತನ್ನ ಶಿಕ್ಷಣವನ್ನು ಆರಂಭಿಸಿದರು. ಮಿನ್ನೆಸೋಟದಲ್ಲಿ ಪದವಿ ಪಡೆದರು. ಪಾಟ್ನಾ ಯುನಿವರ್ಸಿಟಿಯಲ್ಲಿ ಎಂ.ಎ. ಮಾಡಿದರು. ಚಿಕಾಗೋ ವಿಶ್ವವಿದ್ಯಾನಿಲಯದಲ್ಲಿ ‘ಗಾಂಧಿ ಮತ್ತು ಹಿಂದೂ ಕ್ರಿಶ್ಚಿಯನ್ ಸಂಬಂಧ’ದ ಕುರಿತು ಪಿಎಚ್.ಡಿ. ಮಾಡಿದರು. ಸೆರಾಂಪೋಲ್ ಕಾಲೇಜಿನಲ್ಲಿ ಅಧ್ಯಾಪಕ ವೃತ್ತಿ ಆರಂಭಿಸಿದರು. ಮುಂದೆ ರಾಂಚಿಯಲ್ಲಿ ಗಾಜ್ನರ್ ಕಾಲೇಜನ್ನು ಸ್ಥಾಪಿಸಿದರು. ಲುಥೆನರ್ ಚರ್ಚಿನಲ್ಲಿ ಬಿಷಪ್ ಆಗಿ ಕೆಲಸ ಮಾಡಿದರು. ಬುಡಕಟ್ಟುಗಳ ಭೂಮಿ ಹಕ್ಕಿಗಾಗಿ, ಶಿಕ್ಷಣಕ್ಕಾಗಿ ಹೋರಾಟ ಮಾಡಿದರು. ಹೀಗೆ ನಿರ್ಮಲ್ ಮಿಂಜ್ ಜಾರ್ಖಂಡ್ ಬುಡಕಟ್ಟುಗಳ ಚರಿತ್ರೆಯಲ್ಲಿ ಬಹಳ ದೊಡ್ಡ ಸ್ಥಾನ ಪಡೆದವರು. ಅಮ್ಮ ಪ್ಯಾರಕ್ಲೆಟಾ ಭೂಗೋಳ ಶಾಸ್ತ್ರದಲ್ಲಿ ಪದವಿ ಪಡೆದಿದ್ದರು. ಸ್ನಾತಕೋತ್ತರ ಪದವಿ ಪೂರ್ಣಗೊಳಿಸಲಾಗದೆ ಉದ್ಯೋಗಕ್ಕಾಗಿ ಜರ್ಮನಿಗೆ ಹೋಗಿದ್ದರು. ಇಂಥವರ ಮಗಳಾಗಿ ಸೋನಾಝರಿಯಾ ಮಿಂಜ್ ಅವರಿಗೆ ಪ್ರಿವಿಲೈಜ್ ಸಿಕ್ಕಿದೆ. ‘ಕ್ರಿಶ್ಚಿಯನ್ ಮಿಷನರಿ ವಿದ್ಯಾ ಸಂಸ್ಥೆಗಳು ನನ್ನ ತಂದೆ ತಾಯಿಯರನ್ನು ಶಿಕ್ಷಣವಂತರನ್ನಾಗಿಸಿದ್ದಕ್ಕೆ ಇಂದು ನಾನು ಈ ಸ್ಥಾನದಲ್ಲಿದ್ದೀನಿ. ಅಪ್ಪನ ಬುಡಕಟ್ಟುಗಳ ಬಗೆಗಿನ ಹೋರಾಟ ಮತ್ತು ಕಾಳಜಿ ನನ್ನನ್ನು ರೂಪಿಸಿದೆ. ಅಂತೆಯೇ ನನ್ನ ಮುಂದಿನ ಕೆಲಸಗಳನ್ನೂ ಅದು ನಿರ್ದೇಶಿಸುತ್ತಿದೆ ಎಂದು ಮಿಂಜ್ ಅವರು ತಂದೆಯ ಬಗ್ಗೆ ಹೇಳುತ್ತಾರೆ. ವಿಶೇಷವೆಂದರೆ ಪ್ರೊ. ಸೋನಾಝರಿಯಾ ಮಿಂಜ್ ಅವರಿಗೆ ಕರ್ನಾಟಕದ ನಂಟಿದೆ. ಬೆಂಗಳೂರಿನ ಕೋರಮಂಗಲದಲ್ಲಿರುವ ಜ್ಯೋತಿ ನಿವಾಸ ಕ್ರಿಶ್ಚಿಯನ್ ವಿದ್ಯಾಸಂಸ್ಥೆಯಲ್ಲಿ 1980-81ರಲ್ಲಿ ಪಿಯುಸಿ ಓದುತ್ತಾರೆ. ಈ ಬಗ್ಗೆ ಕೇಳಿದರೆ ‘‘ಆಗ ಬೆಂಗಳೂರು ಈಗಿನಷ್ಟು ಬ್ಯುಸಿ ಇರಲಿಲ್ಲ. ಆರಾಮಾಗಿ ಓಡಾಡಬಹುದಾಗಿತ್ತು. ಈಗ ಬೆಂಗಳೂರು ಬಹಳ ಬೆಳೆದಿದೆ. ನಾನು ಈಗ ಜ್ಯೋತಿನಿವಾಸ ಕಾಲೇಜಿನ ಎದುರು ನಿಂತರೆ ಬಹುಶಃ ನಾನದನ್ನು ಗುರುತಿಸಲು ಸಾಧ್ಯವಾಗುವುದಿಲ್ಲ’’ ಎನ್ನುತ್ತಾರೆ. ಪ್ರೊ. ಸೋನಾಝರಿಯಾ ಮಿಂಜ್ ಅವರು ಜಾರ್ಖಂಡ್ನ ಸಿದೊ ಕನ್ಹು ಮುರ್ಮು ಬುಡಕಟ್ಟು ವಿಶ್ವವಿದ್ಯಾನಿಲಯದ (2020-2023) ಕುಲಪತಿಯಾಗಿದ್ದರು. ಆಗ ಜಾರ್ಖಂಡ್ನ ರಾಜ್ಯಪಾಲರಾಗಿ ಈಗಿನ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿದ್ದರು. ಬಹುಶಃ ಒಬ್ಬ ಬುಡಕಟ್ಟು ಮಹಿಳೆ ರಾಜ್ಯಪಾಲರಾಗಿದ್ದ ಕಾರಣಕ್ಕೆ ಸೋನಾಝರಿಯಾ ಅವರು ಕುಲಪತಿಯಾಗಿ ಆಯ್ಕೆಯಾಗುತ್ತಾರೆ. 1857ರ ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕೂ ಮೊದಲು 1855 ರಲ್ಲಿಯೇ ಬ್ರಿಟಿಷರ ವಿರುದ್ಧ ಬಂಡಾಯ ಎದ್ದ ಸಿದೋ ಮುರ್ಮು ಮತ್ತು ಕನ್ಹು ಮುರ್ಮು ಎಂಬ ಇಬ್ಬರು ಸಂತಾಲ ಬುಡಕಟ್ಟು ವೀರರ ಹೆಸರಲ್ಲಿ ಈ ವಿಶ್ವವಿದ್ಯಾನಿಲಯ ಸ್ಥಾಪನೆಯಾಗಿದೆ. ಇವರ ಹೋರಾಟದ ಲೆಗಸಿಯನ್ನು ಈ ವಿಶ್ವವಿದ್ಯಾನಿಲಯದ ಮೂಲಕ ಬುಡಕಟ್ಟು ಸಮುದಾಯಗಳಿಗೆ ದಾಟಿಸಲು ಪ್ರೊ. ಸೋನಾಝರಿಯಾ ಮಿಂಜ್ ಪ್ರಯತ್ನಿಸುತ್ತಾರೆ. ಬುಡಕಟ್ಟು ಮತ್ತು ಸ್ಥಳೀಯ ಅಧ್ಯಯನಕ್ಕಾಗಿ ಒಂದು ವಿಶೇಷ ಸಂಶೋಧನಾ ಕೇಂದ್ರವನ್ನೂ, ಪ್ರತ್ಯೇಕ ಬುಡಕಟ್ಟುಗಳ ಕ್ರೀಡಾ ವಿಭಾಗ ತೆರೆಯಲು ರಾಜ್ಯ ಸರಕಾರವನ್ನು ಕೇಳುತ್ತಾರೆ. ಆದರೆ ಇವರ ಯಾವುದೇ ಬೇಡಿಕೆಗಳಿಗೆ ಸರಕಾರ ಸಕಾರಾತ್ಮಕವಾಗಿ ಸ್ಪಂದಿಸುವುದಿಲ್ಲ. ಹೀಗೆ ಸರಕಾರ ಸ್ಪಂದಿಸದಿದ್ದಾಗ, ಒಬ್ಬ ಕುಲಪತಿಯಾಗಿ ತನ್ನ ಅಧಿಕಾರದ ಮಿತಿಯಲ್ಲಿ ಸಾಧ್ಯವಾಗುವುದನ್ನು ಪ್ರಯತ್ನಿಸುತ್ತಾರೆ. ಹಾಗಾಗಿ ಸಂತಾಲ ಸಂಸ್ಕೃತಿ ಕುರಿತ ಎಂ.ಎ. ಸ್ನಾತಕೋತ್ತರ ಪದವಿಯನ್ನು ಆರಂಭಿಸುತ್ತಾರೆ. ಪೂರಕವಾಗಿ ವಿಶ್ವವಿದ್ಯಾನಿಲಯದ ವ್ಯಾಪ್ತಿಯಲ್ಲಿ ಬರುವ ಪದವಿ ಕಾಲೇಜುಗಳಲ್ಲಿ ಸಂತಾಲ ಸಂಸ್ಕೃತಿಯ ವಿಷಯವನ್ನು ಸೇರಿಸುತ್ತಾರೆ. ಹೀಗೆ ಬಿ.ಎ.ನಲ್ಲಿ ಸಂತಾಲ ಸಂಸ್ಕೃತಿ ಓದಿದವರು ಮುಂದೆ ಸಂತಾಲ ಸಂಸ್ಕೃತಿಯ ಸ್ನಾತಕೋತ್ತರ ಪದವಿಗೆ ಬರುತ್ತಾರೆ, ಇವರೇ ಮರಳಿ ಪಾಠ ಮಾಡುವ ಅಧ್ಯಾಪಕರಾಗುತ್ತಾರೆ. ‘‘ಈ ಕೋರ್ಸ್ನಿಂದಾಗಿ ಸಂತಾಲ ಬುಡಕಟ್ಟು ಮಕ್ಕಳಲ್ಲಿ ಹೊಸ ಚೈತನ್ಯ ಬೆಳೆಯಿತು, ಉನ್ನತ ಶಿಕ್ಷಣಕ್ಕೆ ಬರುವ ಹೆದ್ದಾರಿಯೊಂದು ತೆರೆದಂತಾಯಿತು’’ ಎಂದು ವಿವರಿಸುತ್ತಾರೆ. ತಮ್ಮ ಹಲವು ಕನಸುಗಳು ಈಡೇರದ್ದನ್ನು ನೆನೆದು ‘‘ಹೆಸರಿಗೆ ಬುಡಕಟ್ಟು ವಿಶ್ವವಿದ್ಯಾನಿಲಯ, ಆದರೆ ಸರಕಾರ ಬುಡಕಟ್ಟುಗಳನ್ನೇ ಕೇಂದ್ರೀಕರಿಸಿದ ಮೂಲ ಬದಲಾವಣೆ ತರಬಲ್ಲ ಯಾವ ಬದಲಾವಣೆಗೂ ಸ್ಪಂದಿಸುವುದಿಲ್ಲ’’ ಎಂದು ವಿಷಾದ ವ್ಯಕ್ತಪಡಿಸುತ್ತಾರೆ. ಕರ್ನಾಟಕದಲ್ಲಿ ಹೆಚ್ಚು ಬುಡಕಟ್ಟುಗಳಿರುವ ಜಿಲ್ಲೆಗಳಲ್ಲಿ ಒಂದಾದ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಬಳಿ ಬುಡಕಟ್ಟು ಸಮುದಾಯಗಳ ಪಶುಪಾಲನೆಗಾಗಿ ಮೀಸಲಿಟ್ಟ ಕನಿಷ್ಠ ಹದಿನೈದು ಸಾವಿರ ಎಕರೆ ಜಮೀನನ್ನು ಕೇಂದ್ರ ಸರಕಾರ ವಶಪಡಿಸಿಕೊಂಡು ಇಂಡಿಯನ್ ಇನ್ಸ್ಟಿಟೂಟ್ ಆಫ್ ಸೈನ್ಸ್ (ಐಐಎಸ್ಸಿ) ಡಿಫೆನ್ಸ್ ರಿಸರ್ಚ್ ಆಂಡ್ ಡೆವಲಪ್ಮೆಂಟ್ ಆರ್ಗನೈಝೇಷನ್ (ಡಿಆರ್ಡಿಒ) ಘಟಕ ಮತ್ತು ಭಾಭಾ ಅಟೊಮಿಕ್ ರಿಸರ್ಚ್ ಸೆಂಟರ್ (ಬಿಎಆರ್ಸಿ) ಸ್ಥಾಪಿಸಿದ್ದಾರೆ. ಈ ಭಾಗದ ಬುಡಕಟ್ಟುಗಳು ಈ ಸ್ಥಳವನ್ನು ಉಳಿಸಿಕೊಳ್ಳಲು ಹೋರಾಟ ಮಾಡಿದರೂ ಉಳಿಸಿಕೊಳ್ಳಲಾಗಲಿಲ್ಲ. ಇಂತಹ ಸಂದರ್ಭಗಳಲ್ಲಿ ಬುಡಕಟ್ಟುಗಳ ಹೋರಾಟ ಚಳವಳಿ ಹೇಗಿರಬೇಕೆಂದು ಪ್ರೊ. ಸೋನಾಝರಿಯಾ ಮಿಂಜ್ ಅವರನ್ನು ಕೇಳಿದೆ. ಇದಕ್ಕೆ ಅವರು ಕೊಟ್ಟ ಉತ್ತರ ಒಳನೋಟದಿಂದ ಕೂಡಿತ್ತು. ‘‘ಬುಡಕಟ್ಟು ಹೋರಾಟಗಳಲ್ಲಿ ಪ್ರವಾಹದ ಎದುರು ಈಜಲು ಸಾಧ್ಯವಿಲ್ಲ ಅಂತಾದರೆ ಆ ಪ್ರವಾಹದ ಭಾಗವಾಗಲು ಪ್ರಯತ್ನಿಸಬೇಕು. ಕ್ರೀಡಾ ವಸತಿ ಶಾಲೆಗಳಿರುವಂತೆ ಇಲ್ಲಿನ ಬುಡಕಟ್ಟು ಮಕ್ಕಳಿಗಾಗಿ ವಿಜ್ಞಾನ ತಂತ್ರಜ್ಞಾನದ ವಸತಿ ಶಾಲೆ ಆರಂಭಿಸಲು ಬೇಡಿಕೆ ಇಡಬೇಕಿತ್ತು. ಇಲ್ಲಿಯ ವಿಜ್ಞಾನ ತಂತ್ರಜ್ಞಾನ ವಸತಿ ಶಾಲೆಗಳಲ್ಲಿ ಈ ಭಾಗದ ಬುಡಕಟ್ಟು ಮಕ್ಕಳು ಕಲಿಯುವಂತಾಗಬೇಕು. ಇದೇ ಮಕ್ಕಳು ಓದಿ ಮುಂದೆ ಇದೇ ಸಂಸ್ಥೆಗಳಲ್ಲಿ ವಿಜ್ಞಾನಿಗಳಾಗಿ ಬರಬೇಕು. ‘‘ನಮ್ಮ ಭೂಮಿ ವಶಪಡಿಸಿಕೊಂಡದ್ದಕ್ಕಾಗಿ ಹಣ ರೂಪದ ಪರಿಹಾರವೂ ಬೇಡ, ವಾಸಕ್ಕೆ ಮನೆಯೂ ಬೇಡ, ಕಸ ಗುಡಿಸುವಂತಹ ಚಿಲ್ಲರೆ ಕೆಲಸಗಳೂ ಬೇಡ, ನಮ್ಮ ಮಕ್ಕಳಿಗೆ ವಿಜ್ಞಾನ ತಂತ್ರಜ್ಞಾನದ ವಸತಿ ಶಾಲೆ ಕಟ್ಟಿಸಿಕೊಡಿ ಎಂದು ಕೇಳಿ. ಈ ನೆಲೆಯಲ್ಲಿ ಹೊಸ ಹೋರಾಟವನ್ನು ಶುರುಮಾಡಿ’’ ಎನ್ನುತ್ತಾರೆ. ಯುನೆಸ್ಕೋದಲ್ಲಿ ಭಾರತದ ಬುಡಕಟ್ಟುಗಳ ಜ್ಞಾನ ಪರಂಪರೆಯ ಬಗ್ಗೆ ಕೈಗೊಳ್ಳಬೇಕೆಂದಿರುವ ಹೊಸ ಯೋಜನೆಗಳ ಬಗ್ಗೆ ಕೇಳಿದಾಗ, ಪ್ರೊ. ಸೋನಾಝರಿಯಾ ಮಿಂಜ್ ಅವರು ‘‘ಮೂಲಭೂತವಾಗಿ ಭಾರತದ ಬುಡಕಟ್ಟುಗಳು ಬದುಕಿ ಉಳಿಯಬೇಕಿದೆ, ಅವರು ಬದುಕುಳಿದರೆ ಉಳಿದದ್ದರ ಬಗ್ಗೆ ಮಾತನಾಡಬಹುದು. ಕಾರಣ ಇಂದು ಅವರ ಬದುಕಿಗೆ ಕಂಟಕ ಬಂದಿದೆ’’ ಎನ್ನುತ್ತಾರೆ. ಮುಂದುವರಿದು, ‘‘ಇನ್ನೂ ನಾಲ್ಕು ವರ್ಷಗಳ ಕಾಲ (2025ರಿಂದ) ಯುನೆಸ್ಕೋದಲ್ಲಿ ಕೆಲಸ ಮಾಡುವ ಅವಕಾಶವಿದೆ. ನಾನು ನನ್ನ ತಜ್ಞತೆಯ ಕಂಪೂಟರ್ ಸೈನ್ಸ್ನ ನೆಲೆಯಿಂದ ಆರ್ಟಿಫಿಷಿಯಲ್ ಇಂಟಲಿಜೆನ್ಸ್ (ಎಐ) ಆಧರಿಸಿ ಬುಡಕಟ್ಟುಗಳ ಜ್ಞಾನ ಪರಂಪರೆಯನ್ನು ಉಳಿಸುವುದು ಸಾಧ್ಯವೇ? ಬುಡಕಟ್ಟುಗಳ ಭಾಷೆಗಳನ್ನು ಆಧುನಿಕ ತಂತ್ರಜ್ಞಾನದಿಂದ ಮರುಜೀವ ನೀಡಲು ಸಾಧ್ಯವೇ? ಮುಂತಾದ ಯೋಜನೆಗಳನ್ನು ರೂಪಿಸುತ್ತಿದ್ದೇವೆ. ಮುಖ್ಯವಾಗಿ ಭಾರತೀಯ ಬುಡಕಟ್ಟುಗಳನ್ನು ಒಂದು ಬಿಂದುವಿನಲ್ಲಿ ಸಂಧಿಸುವ ನೆಟ್ವರ್ಕಿಂಗ್ ಸಾಫ್ಟ್ವೇರ್ ಗಳನ್ನು ಅಭಿವೃದ್ಧಿ ಪಡಿಸಬೇಕಿದೆ. ಹೀಗೆ ಕನಸುಗಳೇನೋ ಬಹಳ ಇವೆ, ಅವು ಎಷ್ಟರಮಟ್ಟಿಗೆ ಈಡೇರುತ್ತವೆಯೋ ಕಾಯ್ದು ನೋಡಬೇಕಾಗಿದೆ’’ ಎನ್ನುತ್ತಾರೆ.
LPG ಇಂಧನ ಪೂರೈಕೆಯಲ್ಲಿ ವ್ಯತ್ಯಯ | ಮುಂಬೈನ ಶೇ.20 ರಷ್ಟು ಹೋಟೆಲ್ಗಳು , ರೆಸ್ಟೋರೆಂಟ್ಗಳು ಬಂದ್
ಮುಂಬೈ : ವಾಣಿಜ್ಯ ಎಲ್ಪಿಜಿ ಪೂರೈಕೆಯಲ್ಲಿನ ಅಡಚಣೆಗಳಿಂದಾಗಿ ಮುಂಬೈನಲ್ಲಿ ಸುಮಾರು 20% ಹೋಟೆಲ್ಗಳು ಮತ್ತು ರೆಸ್ಟೋರೆಂಟ್ಗಳು ಮುಚ್ಚಲ್ಪಟ್ಟಿವೆ ಎಂದು ನಗರದ ಹೋಟೆಲ್ ಮತ್ತು ರೆಸ್ಟೋರೆಂಟ್ ಅಸೋಸಿಯೇಷನ್ ʼAHARʼ ತಿಳಿಸಿದೆ. ಅನಿಲ ಪೂರೈಕೆ ಪರಿಸ್ಥಿತಿ ಸುಧಾರಿಸದಿದ್ದರೆ ಮುಂದಿನ ಎರಡು ದಿನಗಳಲ್ಲಿ ನಗರದ 50% ಹೋಟೆಲ್ಗಳು ಮುಚ್ಚಲ್ಪಡಬಹುದು ಎಂದು ಸಂಘವು ಎಚ್ಚರಿಸಿದೆ. AHAR ಪ್ರಕಾರ, ಹೋಟೆಲ್ಗಳ ಕಾರ್ಯಚರಣೆಯು ಪ್ರಸ್ತುತ ಲಭ್ಯವಿರುವ ಎಲ್ಪಿಜಿ ಸಂಗ್ರಹದ ಪ್ರಮಾಣದ ಮೇಲೆ ಅವಲಂಬಿತವಾಗಿರುತ್ತದೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ, ಮುಂಬರುವ ದಿನಗಳಲ್ಲಿ ಮುಂಬೈನ ಅರ್ಧದಷ್ಟು ಹೋಟೆಲ್ಗಳು ಮುಚ್ಚಲ್ಪಡಬಹುದು ಎಂದು ಸಂಘವು ಹೇಳಿದೆ. ಆದರೆ, ಹೋಟೆಲ್ಗಳನ್ನು ಸಾಮೂಹಿಕವಾಗಿ ಮುಚ್ಚುವ ಬಗ್ಗೆ ಸಂಘವು ಯಾವುದೇ ಅಧಿಕೃತ ನಿರ್ಧಾರವನ್ನು ತೆಗೆದುಕೊಂಡಿಲ್ಲ ಎಂದು AHAR ಸ್ಪಷ್ಟಪಡಿಸಿದೆ.
ಚಾಮರಾಜನಗರ : ಶಾರ್ಟ್ ಸರ್ಕ್ಯೂಟ್ನಿಂದ ವೃತ್ತ ನಿರೀಕ್ಷಕರ ಕಚೇರಿಯಲ್ಲಿ ಬೆಂಕಿ; ಅಪಾರ ಹಾನಿ
ಕಂಪ್ಯೂಟರ್, ಕಡತಗಳು ಭಸ್ಮ
ಮಲೆನಾಡಿನಲ್ಲಿ ಚಡ್ಡಿ ಗ್ಯಾಂಗ್ ಭಯ, ಪೊಲೀಸರನ್ನು ನಂಬಿ ಮಲಗೋದು ಹೇಗೆ? ಸದನದಲ್ಲಿ ವ್ಯಕ್ತವಾದ ಆತಂಕ
ಮಲೆನಾಡಿನಲ್ಲಿ ಚಡ್ಡಿ ಗ್ಯಾಂಗ್ ಅಂತ ಇದೆ. ಈ ಗ್ಯಾಂಗ್ ಜನಸಾಮಾನ್ಯರ ನಿದ್ದೆಗೆಡಿಸಿದೆ. ಮನೆಯಲ್ಲಿ ಒಬ್ಬಂಟಿಗರು ಇದ್ದರೆ, ಅವರ ಮನೆಗಳನ್ನೇ ಟಾರ್ಗೆಟ್ ಮಾಡುತ್ತಾರೆ. ಇದು ಆತಂಕಕಾರಿ ವಿಷಯ ಎಂದು ವಿಧಾನಸಭೆಯಲ್ಲಿ ಶಿವಮೊಗ್ಗ ನಗರ ಶಾಸಕ ಚನ್ನಬಸಪ್ಪ ಆತಂಕ ವ್ಯಕ್ತಪಡಿಸಿದರು.
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ; “ಹವಾಮಾನ ಬದಲಾವಣೆ – ಮಹಿಳೆಯರ ಮೇಲೆ ಪರಿಣಾಮ” ಚರ್ಚಾಗೋಷ್ಠಿ
ಕಲಬುರಗಿ: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಗುಲ್ಬರ್ಗಾ ವಿಶ್ವವಿದ್ಯಾಲಯದ ಪ್ರಾಣಿಶಾಸ್ತ್ರ ವಿಭಾಗದ ಹಳೆಯ ವಿದ್ಯಾರ್ಥಿಗಳ ವತಿಯಿಂದ “ಹವಾಮಾನ ಬದಲಾವಣೆ- ಮಹಿಳೆಯರ ಮೇಲಿನ ಪರಿಣಾಮ” ವಿಷಯದ ಕುರಿತು ವಿಶೇಷ ಚರ್ಚಾಗೋಷ್ಠಿಯನ್ನು ಆಯೋಜಿಸಲಾಯಿತು. ಕಾರ್ಯಕ್ರಮದಲ್ಲಿ ವಿಭಾಗದ ಏಳು ಮಂದಿ ಹಳೆಯ ವಿದ್ಯಾರ್ಥಿಗಳು ಭಾಗವಹಿಸಿ ಹವಾಮಾನ ಬದಲಾವಣೆ ಮಹಿಳೆಯರ ಜೀವನದ ವಿವಿಧ ಕ್ಷೇತ್ರಗಳ ಮೇಲೆ ಬೀರುವ ಪರಿಣಾಮಗಳ ಕುರಿತು ಚರ್ಚಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಪ್ರಾಣಿಶಾಸ್ತ್ರ ವಿಭಾಗದ ಉಪನ್ಯಾಸಕಿ ಕೆ.ಎಸ್. ಐಶ್ವರ್ಯ ಅವರು, ಹವಾಮಾನ ಬದಲಾವಣೆಯ ಪರಿಣಾಮಗಳು ಮಹಿಳೆಯರ ಮೇಲೆ ಹೆಚ್ಚು ಕಾಣಿಸಿಕೊಳ್ಳುತ್ತಿವೆ. ಜಾಗತಿಕ ಮಟ್ಟದಲ್ಲಿ ಲಿಂಗ ಅಸಮಾನತೆ ಇನ್ನೂ ಮುಂದುವರೆದಿದ್ದು, ಮಹಿಳೆಯರು ಪುರುಷರಿಗಿಂತ ಕಡಿಮೆ ಸಂಪತ್ತನ್ನು ಹೊಂದಿರುವುದು ಹಲವು ವರದಿಗಳಿಂದ ತಿಳಿದುಬಂದಿದೆ ಎಂದು ಹೇಳಿದರು. ಮಹಿಳೆಯರು ಬಡವರ್ಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಗುರುತಿಸಿಕೊಳ್ಳುವುದರಿಂದ ಹವಾಮಾನ ಬದಲಾವಣೆಯ ಪರಿಣಾಮಗಳಿಗೆ ಹೆಚ್ಚು ಒಳಗಾಗುತ್ತಾರೆ ಎಂದು ಅವರು ತಿಳಿಸಿದರು. ಹವಾಮಾನ ಬದಲಾವಣೆ ಮಹಿಳೆಯರ ಮೇಲೆ ಆರ್ಥಿಕವಾಗಿ ಮಾತ್ರವಲ್ಲದೆ ಆರೋಗ್ಯದ ದೃಷ್ಟಿಯಿಂದಲೂ ಪರಿಣಾಮ ಬೀರುತ್ತದೆ. ಬರ, ತೀವ್ರ ಶಾಖದ ಅಲೆಗಳು ಹಾಗೂ ಇತರ ಪ್ರಕೃತಿ ವಿಪತ್ತುಗಳ ಸಂದರ್ಭಗಳಲ್ಲಿ ಮಹಿಳೆಯರು ನಾನಾ ಆರೋಗ್ಯ ಸಮಸ್ಯೆಗಳಿಗೆ ಒಳಗಾಗುವ ಸಾಧ್ಯತೆ ಹೆಚ್ಚಿದೆ ಎಂದು ಅಭಿಪ್ರಾಯಪಟ್ಟರು. ಮಹಿಳೆಯರು ತಮ್ಮ ಆರೋಗ್ಯಕ್ಕೆ ಆದ್ಯತೆ ನೀಡಬೇಕು, ಆರೋಗ್ಯ ವಿಮೆ ಪಡೆದುಕೊಳ್ಳಬೇಕು, ತುರ್ತು ನಿಧಿಯನ್ನು ನಿರ್ಮಿಸಬೇಕು ಹಾಗೂ ಪರಸ್ಪರ ಬೆಂಬಲಿಸುವ ಸಮುದಾಯಗಳನ್ನು ರೂಪಿಸಬೇಕು ಎಂದು ಐಶ್ವರ್ಯ ಅವರು ಸಲಹೆ ನೀಡಿದರು. ಮಹಿಳೆಯರ ಹಕ್ಕುಗಳಿಗಾಗಿ ಧ್ವನಿಯನ್ನು ಎತ್ತಿ ಸಮಾಜದಲ್ಲಿ ಜಾಗೃತಿ ಮೂಡಿಸುವುದು ಅಗತ್ಯ ಎಂದು ಕರೆ ನೀಡಿದರು. ಚರ್ಚಾಗೋಷ್ಠಿಯಲ್ಲಿ ಡಾ. ನಂದಿನಿ ವಿಠಲರಾವ್, ಶ್ರೀದೇವಿ ಭಂಡಾರಿಮಠ, ಲಕ್ಷ್ಮಿ ಪೂಜಾರಿ, ಡಾ. ಅನಿತಾ ಹರ್ವಾಲ್, ಕರುಣಾ ಇಂಗಿನ್ ಹಾಗೂ ಅಶ್ವಿನಿ ರಾಥೋಡ್ ಭಾಗವಹಿಸಿ ಮಹಿಳೆಯರು ಪ್ರಕೃತಿಯೊಂದಿಗೆ ಮರುಸಂಪರ್ಕ ಸಾಧಿಸುವುದು ಹಾಗೂ ಹವಾಮಾನ ಸವಾಲುಗಳನ್ನು ಎದುರಿಸಲು ಸ್ಥಿತಿಸ್ಥಾಪಕತೆಯನ್ನು ಬಲಪಡಿಸುವ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
Haryana | ನಿರ್ಮಾಣ ಹಂತದ ಕಟ್ಟಡದ ಗೋಡೆ ಕುಸಿದು ಬಿದ್ದು 7 ಮಂದಿ ಕಾರ್ಮಿಕರು ಮೃತ್ಯು
ಗುರುಗ್ರಾಮ: ಹರ್ಯಾಣದ ಗುರುಗ್ರಾಮದ ಸಿಧ್ರಾವಲಿ ಪ್ರದೇಶದಲ್ಲಿ ನಿರ್ಮಾಣ ಹಂತದ ಕಟ್ಟಡದ ಗೋಡೆ ಕುಸಿದು ಬಿದ್ದು 7 ಮಂದಿ ಕಾರ್ಮಿಕರು ಮೃತಪಟ್ಟಿದ್ದಾರೆ ಮತ್ತು ಐವರು ಗಾಯಗೊಂಡಿದ್ದಾರೆ. ಗೋಡೆ ಕುಸಿದು ಸುಮಾರು 12 ರಿಂದ 15 ಕಾರ್ಮಿಕರು ಅವಶೇಷಗಳ ಅಡಿಯಲ್ಲಿ ಸಿಲುಕಿದ್ದರು. ಮಾಹಿತಿ ತಿಳಿದ ಕೂಡಲೇ ಸ್ಥಳೀಯ ಪೊಲೀಸರು ಮತ್ತು ಎಸ್ಡಿಆರ್ಎಫ್ ತಂಡಗಳು ಸ್ಥಳಕ್ಕೆ ತೆರಳಿ ರಕ್ಷಣಾ ಕಾರ್ಯಾಚರಣೆಯನ್ನು ನಡೆಸಿದೆ. ಕಾರ್ಮಿಕರನ್ನು ಅವಶೇಷಗಳಡಿಯಿಂದ ರಕ್ಷಿಸಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಲ್ಲಿ ಏಳು ಮಂದಿ ಮೃತಪಟ್ಟಿದ್ದಾರೆ. ನಾಲ್ವರು ಕಾರ್ಮಿಕರು ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕಾರ್ಮಿಕರ ಮೃತದೇಹವನ್ನು ಸರಕಾರಿ ಜಿಲ್ಲಾಸ್ಪತ್ರೆಯಲ್ಲಿ ಇರಿಸಲಾಗಿದ್ದು, ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರಿನ ಐತಿಹಾಸಿಕ ಹಲಸೂರು ಕೆರೆ ಪುನಶ್ಚೇತನ: ಬರೋಬ್ಬರಿ 4 ಕೋಟಿ ವೆಚ್ಚ
ಬೆಂಗಳೂರಿನ ಹಲಸೂರು ಕೆರೆಗೆ ಅದರದ್ದೇ ವೈಭವದ ಇತಿಹಾಸ ಇದೆ. ಈಗ ಅದೇ ಕೆರೆಯ ಗತವೈಭವವನ್ನ ಮರುಕಳಿಸಲು ಪುನಶ್ಚೇತನ ಕಾರ್ಯ ಕೈಗೊಳ್ಳಲಾಗಿದೆ. ಹಲಸೂರು ಕೆರೆಯ ಅಭಿವೃದ್ಧಿಗಾಗಿ 4 ಕೋಟಿ ವೆಚ್ಚದಲ್ಲಿ ಕಾಮಗಾರಿ ಭರದಿಂದ ಸಾಗುತ್ತಿದೆ.
New Rent Rules : 2ತಿಂಗಳ ಡೆಪಾಸಿಟ್, ವರ್ಷಕ್ಕೊಮ್ಮೆ ಬಾಡಿಗೆ ಏರಿಕೆ - ವೈರಲ್ ಸುದ್ದಿಯ ಫ್ಯಾಕ್ಟ್’ಚೆಕ್
New Rent Rules : ಭಾರತ ಸರ್ಕಾರ ಹೊಸ ಬಾಡಿಗೆ ನೀತಿಯನ್ನು ಜಾರಿಗೆ ತಂದಿದೆ ಎನ್ನುವ ಸುದ್ದಿ ವೈರಲ್ ಆಗುತ್ತಿದೆ. ಹೊಸ ಬಾಡಿಗೆ ನಿಯಮದ ಪ್ರಕಾರ, ಬಾಡಿಗೆದಾರರಿಗೆ ಇದರಿಂದ ಲಾಭವಾಗಲಿದೆ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಹರಡುತ್ತಿದೆ. ಹಾಗಾದರೆ, ಈ ಸುದ್ದಿ ನಿಜವೇ, ಇದರ ಸತ್ಯಾಸತ್ಯತೆ ಏನು ಎನ್ನುವ ಫ್ಯಾಕ್ಟ್ ಚೆಕ್ ಇಲ್ಲಿದೆ.
ರಾಷ್ಟ್ರೀಯ ಹೆದ್ದಾರಿ 69 ರ ವಿಸ್ತರಣೆಗೆ ಅಡ್ಡಿ ವಿಚಾರ : ರೈಲ್ವೆ ಇಲಾಖೆಯ ಜಾಗ ತಕರಾರಿಗೆ ಬ್ರೇಕ್!
ಶಿಡ್ಲಘಟ್ಟ ವೃತ್ತದಿಂದ ಅಣಕನೂರುವರೆಗಿನ ರಸ್ತೆ ವಿಸ್ತರಣೆ ಆಧಾರದ ಮೇಲೆ ಶಿಡ್ಲಘಟ್ಟ ವೃತ್ತವನ್ನು ಎಷ್ಟು ವಿಸ್ತರಣೆ ಮಾಡಬೇಕು ಎಂಬುದು ನಿರ್ಧಾರ ವಾಗುವುದರಿಂದ ಸಾಕಷ್ಟು ಗೊಂದಲವಿತ್ತು. ಆದರೆ ಈಗ ರೈಲ್ವೆ ಇಲಾಖೆ ಹೆಸರಲ್ಲಿ ಜಾಗವೇ ಇಲ್ಲಎಂಬ ಅಂಶ ಬಹಿರಂಗಗೊಂಡಿದ್ದು, ಈಗಲಾದರೂ ಈ ಗೊಂದಲಕ್ಕೆ ಮುಕ್ತಿ ಸಿಗಬಹುದೆಂಬ ನಿರೀಕ್ಷೆಯಲ್ಲಿದ್ದಾರೆ ರಸ್ತೆ ಬದಿಯ ಆಸ್ತಿಗಳ ಮಾಲೀಕರು.
ನ್ಯಾಯಾಂಗದ ಕುರಿತ ಅಧ್ಯಾಯ ವಿವಾದ | ಬೇಷರತ್ ಕ್ಷಮೆಯಾಚಿಸಿದ NCERT
ಹೊಸದಿಲ್ಲಿ : 8ನೇ ತರಗತಿ ಪಠ್ಯಪುಸ್ತಕದಲ್ಲಿ ʼನ್ಯಾಯಾಂಗದಲ್ಲಿನ ಭ್ರಷ್ಟಾಚಾರʼ ಕುರಿತ ಅಧ್ಯಾಯ ಪ್ರಕಟಿಸಿದ್ದ ಎನ್ಸಿಇಆರ್ಟಿ ಇದೀಗ ಬೇಷರತ್ ಕ್ಷಮೆಯಾಚಿಸಿದೆ ಮತ್ತು ಪುಸ್ತಕವನ್ನು ಸಂಪೂರ್ಣವಾಗಿ ಹಿಂಪಡೆದುಕೊಳ್ಳಲಾಗಿದೆ ಎಂದು ತಿಳಿಸಿದೆ. ಎನ್ಸಿಇಆರ್ಟಿ 8ನೇ ತರಗತಿಯ ಸಾಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ನ್ಯಾಯಾಂಗ ಭ್ರಷ್ಟಾಚಾರ ಕುರಿತು ಅಧ್ಯಾಯ ಪ್ರಕಟವಾಗಿತ್ತು. ಈ ಸುಪ್ರೀಂ ಕೋರ್ಟ್ ಈ ಬಗ್ಗೆ ತೀವ್ರವಾದ ಆಕ್ಷೇಪವನ್ನು ವ್ಯಕ್ತಪಡಿಸಿ ಪಠ್ಯಪುಸ್ತಕವನ್ನು ನಿಷೇಧಿಸಿತ್ತು. ಎನ್ಸಿಇಆರ್ಟಿ ಪ್ರಕಟಿಸಿದ “Exploring Society: India and Beyond” ಎಂಬ ಪಠ್ಯಪುಸ್ತಕದಲ್ಲಿ “The Role of Judiciary in our Society” ಎಂಬ ಶೀರ್ಷಿಕೆಯ ನಾಲ್ಕನೇ ಅಧ್ಯಾಯದಲ್ಲಿ ನ್ಯಾಯಾಂಗ ವ್ಯವಸ್ಥೆಯ ಕುರಿತು ವಿವಾದಾತ್ಮಕ ವಿಷಯಗಳು ಒಳಗೊಂಡಿದ್ದವು. ಈ ಕುರಿತು ಪ್ರಕಟಣೆ ನೀಡಿದ ಎನ್ಸಿಇಆರ್ಟಿ “ಆ ಅಧ್ಯಾಯದ ಪ್ರಕಟಣೆ ಕುರಿತು ನಿರ್ದೇಶಕರು ಮತ್ತು ಸದಸ್ಯರು ಬೇಷರತ್ ಕ್ಷಮೆಯಾಚಿಸುತ್ತೇವೆ. ಸಂಪೂರ್ಣವಾಗಿ ಪುಸ್ತಕವನ್ನು ಹಿಂತೆಗೆದುಕೊಳ್ಳಲಾಗಿದ್ದು, ಈಗ ಅದು ಲಭ್ಯವಿಲ್ಲ” ಎಂದು ತಿಳಿಸಿದೆ.
Gold Rate Rise: ಚಿನ್ನದ ಬೆಲೆ ಮತ್ತೆ ಹೆಚ್ಚಳ: ಚಿನ್ನದ ಬೆಲೆಯಲ್ಲಿ 700 ರೂ, ಕೆಜಿ ಬೆಳ್ಳಿಗೆ 10 ಸಾವಿರ ಹೆಚ್ಚಳ
ಡಾಲರ್ ಮೌಲ್ಯ ಹೆಚ್ಚಳದಿಂದ ಇಳಿಕೆಯಾಗಿದ್ದ ಚಿನ್ನ ಬೆಳ್ಳಿ ಬೆಲೆ ಇಂದು ಮತ್ತೆ ಹೆಚ್ಚಳ ಕಂಡಿದೆ. ಮಧ್ಯಪ್ರಾಚ್ಯ ಸಂಘರ್ಷದಿಂದಾಗಿ ಬೆಲೆ ಏರಿಳಿತ ಸಹಜ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಡಿಕೆಶಿ ಕೆಪಿಸಿಸಿ ಸಾರಥ್ಯಕ್ಕೆ 6 ವರ್ಷ: ಯಶಸ್ಸು ಮತ್ತು ವೈಫಲ್ಯಗಳ ನಡುವೆ ಸಾಗಿದ ಟ್ರಬಲ್ ಶೂಟರ್ ಪಯಣ ಹೇಗಿತ್ತು?
ಡಿಸಿಎಂ ಡಿಕೆ ಶಿವಕುಮಾರ್ ಕೆಪಿಸಿಸಿ ಚುಕ್ಕಾಣಿ ಹಿಡಿದ ಬಳಿಕ ಕ್ವೀನ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಒಂದಿಷ್ಟು ಬದಲಾವಣೆ ಆಗುವುದು ಸತ್ಯ. ಕಾಂಗ್ರೆಸ್ ಪಕ್ಷದ ಸಾಂಪ್ರದಾಯಿಕ ಶೈಲಿಯ ಹೊರತಾಗಿ ಭಿನ್ನದಾರಿಯ ಮೂಲಕ ಕೆಪಿಸಿಸಿಗೆ ಹೊಸ ಬಣ್ಣ ಬಳಿಯುವ ಪ್ರಯತ್ನವನ್ನು ಡಿಕೆಶಿ ನಡೆಸಿದ್ದಾರೆ.
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ
Prakash Raj: ಪ್ರಧಾನಿ ನರೇಂದ್ರ ಮೋದಿ ಅವರು ವಿದೇಶಕ್ಕೆ ಅಧಿಕೃತ ಭೇಟಿ ನೀಡುವ ಸಂದರ್ಭದಲ್ಲಿ ಅಥವಾ ವಿದೇಶಿ ರಾಷ್ಟ್ರದ ಮುಖ್ಯಸ್ಥರು ಭಾರತಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ ಸಹಿ ಹಾಕುವ ಕೆಲವು ನಿರ್ದಿಷ್ಟ ಅಂತರರಾಷ್ಟ್ರೀಯ ದಾಖಲೆಗಳಿಗೆ ಇನ್ನು ಮುಂದೆ ಸಚಿವ ಸಂಪುಟದ ಪೂರ್ವ ಅನುಮೋದನೆ ಅಗತ್ಯವಿಲ್ಲ ಎಂದು ಟ್ರಿಬ್ಯೂನ್ ವರದಿ ಮಾಡಿದೆ. ಈ ವಿಚಾರವು ಇದೀಗ ತೀವ್ರ ಚರ್ಚೆಗೆ
ಇರಾನ್ ಹಾಗೂ ಇಸ್ರೇಲ್ ಸಂಘರ್ಷ ನಿಲ್ಲಿಸಲು ಪ್ರಧಾನಿ ನರೇಂದ್ರ ಮೋದಿಯವರ ಒಂದು ಫೋನ್ ಕಾಲ್ ಸಾಕು: ಯುಎಇ ರಾಯಭಾರಿ
ಅರಬ್ ರಾಷ್ಟ್ರಗಳ ಮೇಲಾಗುತ್ತಿರುವ ಅನಗತ್ಯ ದಾಳಿಗಳನ್ನು ನಿಲ್ಲಿಸಲು ಹಾಗೂ ಇರಾನ್0ಇಸ್ರೇಲ್ ನಡುವಿನ ಯುದ್ಧ ಕೊನೆಗಾಣಿಸಲು ಪ್ರಧಾನಿ ನರೇಂದ್ರ ಮೋದಿಯವರ ಒಂದೇ ಒಂದು ಫೋನ್ ಕಾಲ್ ಸಾಕು ಎಂದು ಯುಎಇ ರಾಯಭಾರಿ ಅಭಿಪ್ರಾಯ ಪಟ್ಟಿದ್ದಾರೆ.
ಬಳ್ಳಾರಿ ಹಾಸ್ಟೆಲ್ ಹಲ್ಲೆ ಪ್ರಕರಣ: ತಲೆಮರೆಸಿಕೊಂಡಿದ್ದ ಅಪ್ರಾಪ್ತ ಆರೋಪಿ ಪೊಲೀಸ್ ವಶಕ್ಕೆ
ಬಳ್ಳಾರಿ: ಬಳ್ಳಾರಿಯ ಗುರುಕುಲ ಇಂಟರ್ನ್ಯಾಷನಲ್ ಶಾಲೆಯ ಹಾಸ್ಟೆಲ್ನಲ್ಲಿ ಶನಿವಾರ ರಾತ್ರಿ ನಡೆದ ಗಲಾಟೆಯಲ್ಲಿ ಒಬ್ಬ ವಿದ್ಯಾರ್ಥಿ ಮೃತಪಟ್ಟು, ಏಳು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದರು. ಈ ಘಟನೆಗೆ ಕಾರಣ ಎನ್ನಲಾದ ಅಪ್ರಾಪ್ತ ವಿದ್ಯಾರ್ಥಿ ತಲೆಮರೆಸಿಕೊಂಡಿದ್ದನು. ಇದೀಗ 36 ಗಂಟೆಗಳ ನಿರಂತರ ಕಾರ್ಯಾಚರಣೆಯ ನಂತರ ಬಳ್ಳಾರಿ ಪೊಲೀಸರು ಆತನನ್ನು ಪತ್ತೆಹಚ್ಚಿ ವಶಕ್ಕೆ ಪಡೆದಿದ್ದಾರೆ. ಸೋಮವಾರ ಬಳ್ಳಾರಿಯಲ್ಲಿ ಕರೆಯಲಾಗಿದ್ದ ಜಂಟಿ ಸುದ್ದಿಗೋಷ್ಠಿಯನ್ನು
ಮಧ್ಯಪ್ರಾಚ್ಯ ಸಂಘರ್ಷ | ಇರಾನ್ನ ಶಾಲೆ, ವಸತಿ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಅಮೆರಿಕದಿಂದ ಕ್ಷಿಪಣಿ ದಾಳಿ
ಟೆಹ್ರಾನ್ : ಇರಾನ್ನಲ್ಲಿ ಶಾಲೆ ಮತ್ತು ವಸತಿ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಅಮೆರಿಕ ಮತ್ತೆ ದಾಳಿ ಮಾಡಿರುವ ಬಗ್ಗೆ Aljazeera ವರದಿ ಮಾಡಿದೆ. ಇರಾನ್ನ ಖೊಮೇನ್ ನಗರದಲ್ಲಿರುವ ಡಾ. ಹಫೀಝ್ ಖೊಮೇನಿ ಶಾಲೆ ಮೇಲೆ ಅಮೆರಿಕ ಕ್ಷಿಪಣಿ ದಾಳಿ ನಡೆಸಿದೆ ಎಂದು ಇರಾನ್ನ Mehr news agency ವರದಿ ಮಾಡಿದೆ. ಶಾಲೆಯನ್ನು ಗುರಿಯಾಗಿಸಿಕೊಂಡು ನಡೆದ ದಾಳಿಯಲ್ಲಿ ಸುತ್ತಮುತ್ತಲಿನ ಅನೇಕ ಮನೆಗಳಿಗೆ ಕೂಡ ಹಾನಿಯಾಗಿರುವುದಾಗಿ ವರದಿಯು ಉಲ್ಲೇಖಿಸಿದೆ. ದಾಳಿಯಲ್ಲಿ ಮೃತಪಟ್ಟವರ ಬಗ್ಗೆ ತಕ್ಷಣಕ್ಕೆ ಯಾವುದೇ ಮಾಹಿತಿಗಳು ಲಭ್ಯವಾಗಿಲ್ಲ. ಈ ಮೊದಲು ದಕ್ಷಿಣ ಇರಾನ್ನ ಮಿನಾಬ್ ನಗರದಲ್ಲಿರುವ ಬಾಲಕಿಯರ ಶಾಲೆಯ ಮೇಲೆ ಅಮೆರಿಕ ನಡೆಸಿದ್ದ ಕ್ಷಿಪಣಿ ದಾಳಿಯಲ್ಲಿ ಕನಿಷ್ಠ 170 ಮಂದಿ ಮೃತಪಟ್ಟಿದ್ದರು. ಅವರಲ್ಲಿ ಹೆಚ್ಚಿನವರು ಮಕ್ಕಳಾಗಿದ್ದರು.
ಪ್ರವಾಸಿ ಕೂಟ ವಿಟ್ಲ (ರಿ) ಬಹರೈನ್ ಘಟಕದಿಂದ ತುರ್ತು ರಕ್ತದಾನ ಶಿಬಿರ
ಬಹರೈನ್ : ಪ್ರವಾಸಿ ಕೂಟ ವಿಟ್ಲ (ರಿ) ಬಹರೈನ್ ಘಟಕದ ವತಿಯಿಂದ ಮಾನವೀಯ ಸೇವೆಯ ಭಾಗವಾಗಿ ಬಹರೈನ್ನ ಸರ್ಕಾರಿ ಆಸ್ಪತ್ರೆಯಾದ ಸಲ್ಮಾನಿಯ ಮೆಡಿಕಲ್ ಕಾಂಪ್ಲೆಕ್ಸ್ನಲ್ಲಿ ಮಾ.9 ರಂದು ತುರ್ತು ರಕ್ತದಾನ ಶಿಬಿರವನ್ನು ಆಯೋಜಿಸಲಾಯಿತು. ಪ್ರವಾಸಿ ಕೂಟ ವಿಟ್ಲ (ರಿ) ಬಹರೈನ್ ಘಟಕದ ಅಧ್ಯಕ್ಷ ಶಾಫಿ ಕಂಬಳಬೆಟ್ಟು ಅವರ ನೇತೃತ್ವದಲ್ಲಿ ನಡೆದ ಈ ಶಿಬಿರದಲ್ಲಿ ಅನೇಕ ಸ್ವಯಂಸೇವಕರು ಹಾಗೂ 300 ಕ್ಕೂ ಹೆಚ್ಚು ರಕ್ತದಾನಿಗಳು ಉತ್ಸಾಹದಿಂದ ಭಾಗವಹಿಸಿ ರಕ್ತದಾನ ಮಾಡಿದರು. ಆಸ್ಪತ್ರೆಯಲ್ಲಿ ತುರ್ತು ಪರಿಸ್ಥಿತಿಯಲ್ಲಿ ರೋಗಿಗಳಿಗೆ ಅಗತ್ಯವಿರುವ ರಕ್ತದ ಕೊರತೆಯನ್ನು ನೀಗಿಸುವ ಉದ್ದೇಶದಿಂದ ಈ ಶಿಬಿರವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಪ್ರವಾಸಿ ಕೂಟ ವಿಟ್ಲ (ರಿ) ಸದಸ್ಯರೊಂದಿಗೆ ಇತರ ಸಂಘಟನೆಗಳ ಪ್ರತಿನಿಧಿಗಳೂ ಭಾಗವಹಿಸಿ ಸಹಕಾರ ನೀಡಿದರು. ಮುಂದಿನ ದಿನಗಳಲ್ಲಿಯೂ ಇಂತಹ ಸೇವಾ ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸುವ ಉದ್ದೇಶವಿದೆ ಎಂದು ಸಂಘಟಕರು ತಿಳಿಸಿದ್ದಾರೆ. ಪ್ರವಾಸಿ ಕೂಟ ವಿಟ್ಲ (ರಿ) ಬಹರೈನ್ ಘಟಕವು ವಿವಿಧ ಸಮಾಜಸೇವಾ ಚಟುವಟಿಕೆಗಳ ಮೂಲಕ ಅನಿವಾಸಿ ಕನ್ನಡಿಗರ ನಡುವೆ ಮಾನವೀಯ ಮೌಲ್ಯಗಳನ್ನು ಬಲಪಡಿಸುವ ಕಾರ್ಯವನ್ನು ನಿರಂತರವಾಗಿ ನಡೆಸುತ್ತಿದೆ ಎಂದು ತಿಳಿಸಿದರು.
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ
ಬೆಂಗಳೂರು: ಸಮವಸ್ತ್ರ, ಶೂ, ಬಿಸಿ ಊಟ ಸೇರಿದಂತೆ ಹಲವಾರು ಆಕರ್ಷಕ ಸೌಲಭ್ಯಗಳನ್ನು ಒದಗಿಸುತ್ತಿದ್ದರೂ, ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಪ್ರಮಾಣ ವರ್ಷದಿಂದ ವರ್ಷಕ್ಕೆ ಗಣನೀಯವಾಗಿ ಕಡಿಮೆಯಾಗುತ್ತಿರುವುದು ರಾಜ್ಯ ಸರ್ಕಾರದ ಕಳವಳಕ್ಕೆ ಕಾರಣವಾಗಿದೆ. ಸೋಮವಾರ ನಡೆದ ವಿಧಾನ ಪರಿಷತ್ ಅಧಿವೇಶನದಲ್ಲಿ ಬಿಜೆಪಿ ಸದಸ್ಯ ನಿರಾಣಿ ಹನುಮಂತ್ ರುದ್ರಪ್ಪ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಪ್ರಾಥಮಿಕ ಹಾಗೂ ಪ್ರೌಢ
TN Election Opinion Poll: ಬಿಜೆಪಿ ಮೈತ್ರಿಕೂಟಕ್ಕೆ ಅಲ್ಪ ಮುನ್ನಡೆ ಸಿಕ್ಕರೂ, ನಿರ್ಣಾಯಕ ಪಟ್ಟದಲ್ಲಿ ’ಇತರರು’
Opinion Poll On TN Election : ಮುಂದಿನ ತಿಂಗಳು ನಡೆಯಲಿರುವ ತಮಿಳುನಾಡು ವಿಧಾನಸಭಾ ಚುನಾವಣೆಯ ಓಪಿನಿಯಲ್ ಪೋಲ್’ ಫಲಿತಾಂಶವೊಂದು ಹೊರಬಿದ್ದಿದೆ. ಈ ಫಲಿತಾಂಶದಲ್ಲಿ ಬಿಜೆಪಿ - ಎಐಎಡಿಎಂಕೆ ಮೈತ್ರಿಕೂಟಕ್ಕೆ ಕೊಂಚ ಮುನ್ನಡೆ ಸಿಕ್ಕರೂ, ಅದು ಅಧಿಕಾರದ ಗದ್ದುಗೇರುವಷ್ಟರ ಮಟ್ಟಿಗೆ ಸೀಟು ಸಿಗುವುದಿಲ್ಲ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.
ಅಡುಗೆ ಅನಿಲದ ಅಕ್ರಮ ದಾಸ್ತಾನು ತಡೆಯಲು ಮತ್ತು ಎಲ್ಲರಿಗೂ ಸಮಾನವಾಗಿ ಗ್ಯಾಸ್ ವಿತರಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ದೇಶೀಯ ಎಲ್ಪಿಜಿ ಸಿಲಿಂಡರ್ (LPG Cylinder) ಮರು ಬುಕಿಂಗ್ ಅವಧಿಯನ್ನು ಹೆಚ್ಚಿಸಿದೆ. ಸಿಲಿಂಡರ್ ರಿಫಿಲ್ ಬುಕ್ಕಿಂಗ್ ಮಾಡಲು ಇರುವ ಕನಿಷ್ಠ ಕಾಯುವ ಅವಧಿಯನ್ನು 21ರಿಂದ 25 ದಿನಗಳಿಗೆ ಹೆಚ್ಚಿಸಲಾಗಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ. ಈ ಕ್ರಮದಿಂದ ಸಿಲಿಂಡರ್ಗಳ
ಒಂದೇ ದಿನ 1,407 ಮೈಸೂರು ಸಿಲ್ಕ್ ಸೀರೆ ಮಾರಾಟ: ದಾಖಲೆಯ 7.13 ಕೋಟಿ ರೂಪಾಯಿ ವಹಿವಾಟು
ಮೈಸೂರು ಸಿಲ್ಕ್ ಸೀರೆ ಅಂದ್ರೆ ಯಾರಿಗ್ತಾನೆ ಇಷ್ಟ ಇಲ್ಲ ಹೇಳಿ? ತೀರಾ ಸಾಫ್ಟ್ ಆಗಿರುವ ಮೈಸೂರು ಸಿಲ್ಕ್ ಸೀರೆ ಬಹುತೇಕರಿಗೆ ಅಚ್ಚುಮೆಚ್ಚು. ಅದರಲ್ಲೂ ಕೆಂಪು ಬಣ್ಣದ ಚಿನ್ನದ ಝರಿ ಇರುವ ಮೈಸೂರು ಸಿಲ್ಕ್ ಸೀರೆ ಖರೀದಿಸಲು ಮಹಿಳೆಯರು ಕ್ಯೂ ನಿಲ್ಲುತ್ತಾರೆ. ಇಂತಿಪ್ಪ ಮೈಸೂರು ಸಿಲ್ಕ್ ಸೀರೆಗಳು 'ಮಹಿಳಾ ದಿನಾಚರಣೆ'ಯಂದು ದಾಖಲೆಯ ವಹಿವಾಟು ನಡೆಸಿವೆ.
ಕುಕ್ಕುಟೋದ್ಯಮಕ್ಕೆ ಯುದ್ಧದ ಹೊಡೆತ; ಮೊಟ್ಟೆ ಬೆಲೆ ಇಳಿಕೆ
ಕುಕ್ಕುಟೋದ್ಯಮ ಒಂದೆಡೆ ಯುದ್ಧ ಹಾಗೂ ಇನ್ನೊಂದೆಡೆ ಸುಡು ಬಿಸಿಲಿನ ತಾಪಕ್ಕೆ ಸಿಲುಕಿ ತತ್ತರಿಸುತ್ತಿದೆ. ಕೋಳಿ ಮೊಟ್ಟೆ ಬೆಲೆ ಇಂದು 4.60 ರೂ.ಗೆ ಇಳಕೆಯಾಗಿದೆ. ಸುಮಾರು 70 ರಿಂದ 80 ಪೈಸೆ ಕಡಿಮೆ ಬೆಲೆಗೆ ಮಾರಾಟ ಮಾಡುವ ಸ್ಥಿತಿ ತಲುಪಿ ಫೌಲ್ಟ್ರಿ ಮಾಲೀಕರು ಗಣನೀಯ ಪ್ರಮಾಣದ ನಷ್ಟ ಅನುಭವಿಸುವಂತಾಗಿದೆ.
ಸುಳ್ಯ : ಜಯನಗರ ಜನ್ನತುಲ್ ಉಲೂಮ್ ಮಸ್ಜಿದ್–ಮದ್ರಸ ಆಶ್ರಯದಲ್ಲಿ ಸೌಹಾರ್ದ ಇಫ್ತಾರ್ ಸಂಗಮ
ಸುಳ್ಯದ ಜನತೆಯ ಪ್ರೀತಿಗೆ ನಾನು ಎಂದಿಗೂ ಚಿರಋಣಿ: ಹೆಚ್. ಎಂ. ನಂದಕುಮಾರ್
ರಾಜ್ಯ ಬಜೆಟ್ನಲ್ಲಿ ಭದ್ರಾಕ್ಕೆ ಹೆಚ್ಚೇನೂ ಇಲ್ಲ ; ಕಾಮಗಾರಿಗಳು ಪೂರ್ಣ ನಿಂತು ಹೋಗುವ ಭಯ
ಭದ್ರಾ ಮೇಲ್ದಂಡೆ ವಿಷಯದಲ್ಲಿ ಕಾಂಗ್ರೆಸ್ ಸರಕಾರ ಮೊದಲಿನಿಂದಲೂ ಕಡೆಗಣನೆಯ ದೃಷ್ಟಿಕೋನವನ್ನೇ ಹೊಂದಿದೆ. ಕಾಂಗ್ರೆಸ್ ಸರಕಾರ ಇದ್ದಾಗ ಬಿಡುಗಡೆ ಮಾಡಿದ ಅನುದಾನದ ಪ್ರಮಾಣಕ್ಕೂ, ಬಿಜೆಪಿ ಸರಕಾರ ಇದ್ದಾಗ ಮಾಡಿದ ಅನುದಾನದ ಪ್ರಮಾಣಕ್ಕೂ ಅಂಕಿ ಅಂಶಗಳನ್ನು ಹೋಲಿಕೆ ಮಾಡಿದಾಗ ಇದು ಕಣ್ಣಿಗೆ ರಾಚುತ್ತದೆ. ಇದನ್ನೇ ಮೊನ್ನೆ ಸಿರಿಗೆರೆ ಶ್ರೀಗಳ ಸಮ್ಮುಖದಲ್ಲಿ ನಡೆದ ರೈತ ಮುಖಂಡರ ಸಭೆಯಲ್ಲೂ ಸಂಸದ ಗೋವಿಂದ ಕಾರಜೋಳ ಸ್ಪಷ್ಟಪಡಿಸಿದ್ದಾರೆ.
ಬಹರೈನ್ ನಲ್ಲಿ ಸಿಲುಕಿದ ಭಾರತೀಯರ ರಕ್ಷಣೆಗೆ ಕ್ರಮ; ಸೌದಿ ಮೂಲಕ ಸ್ವದೇಶಕ್ಕೆ
ಹೊಸದಿಲ್ಲಿ: ಮಧ್ಯಪ್ರಾಚ್ಯ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಬಹರೈನ್ ವಿಮಾನ ನಿಲ್ದಾಣ ಫೆಬ್ರುವರಿ 28ರಿಂದಲೇ ಕಾರ್ಯಾಚರಣೆ ಸ್ಥಗಿತಗೊಳಿಸಿರುವುದರಿಂದ ಅತಂತ್ರರಾಗಿರುವ ಭಾರತೀಯರ ರಕ್ಷಣೆಗೆ ರಾಯಭಾರ ಕಚೇರಿ ಮುಂದಾಗಿದ್ದು, ಸೌದಿ ಅರೇಬಿಯಾ ಮೂಲಕ ಅವರನ್ನು ಸುರಕ್ಷಿತವಾಗಿ ಭಾರತಕ್ಕೆ ವಾಪಾಸು ಕರೆತರಲು ಕ್ರಮ ಕೈಗೊಂಡಿದೆ. ರಿಯಾದ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿ, ಅತಂತ್ರರಾಗಿರುವ ಭಾರತೀಯರಿಗೆ ವೈಯಕ್ತಿಕ ಟ್ರಾನ್ಸಿಸ್ಟ್ ವೀಸಾ ಅನುಮೋದನೆಯನ್ನು ಸೌದಿ ಸರ್ಕಾರದಿಂದ ಪಡೆಯುತ್ತಿದೆ. ಬಹರೈನ್ ಭಾರತೀಯ ರಾಯಭಾರ ಕಚೇರಿಯಿಂದ ಬಂದ ಟ್ರಾನ್ಸಿಸ್ಟ್ ವೀಸಾ ಮನವಿಗಳನ್ನು ರಿಯಾದ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ಕಳುಹಿಸಲಾಗುತ್ತಿದೆ. ಅತಂತ್ರರಾಗಿರುವ ಭಾರತೀಯರಿಗೆಅದರಲ್ಲೂ ಮುಖ್ಯವಾಗಿ ಪ್ರವಾಸಿ ವೀಸಾ ಮತ್ತು ಅಲ್ಪಾವಧಿ ವೀಸಾ ಹೊಂದಿರುವವರಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ಬಹರೈನ್ ನಲ್ಲಿರುವ ಭಾರತೀಯ ರಾಯಭಾರಿ ವಿನೋದ್ ಕೆ.ಜಾಕೋಬ್ ಹೇಳಿದ್ದಾರೆ. ಬಹರೈನ್ ನಲ್ಲಿ ಅತಂತ್ರರಾಗಿರುವ ಭಾರತೀಯರಿಗೆ ಸದ್ಯಕ್ಕೆ ಉಳಿದಿರುವ ಏಕೈಕ ಕಾರ್ಯಸಾಧು ಮಾರ್ಗವೆಂದರೆ ಸೌದಿಯ ಮೂಲಕ ವಾಪಸ್ಸಾಗುವುದು. ಸೌದಿ ಟ್ರಾನ್ಸಿಸ್ಟ್ ವೀಸಾಗೆ ಮನವಿ ಮಾಡಿದವರು ಭಾರತ ಪ್ರಯಾಣಕ್ಕೆ ದೃಢೀಕೃತ ವಿಮಾನ ಟಿಕೆಟ್ ಹೊಂದಿರುವುದು ಹೀಗೆ ಕೆಲ ನಿರ್ದಿಷ್ಟ ಪೂರ್ವ ಷರತ್ತುಗಳನ್ನು ಪಾಲಿಸಬೇಕು. ಸೌದಿ ಟ್ರಾನ್ಸಿಸ್ಟ್ ವೀಸಾಗಳು 72-96 ಗಂಟೆಯ ಅವಧಿಯದ್ದಾಗಿದ್ದು, ಈ ಅವಧಿಯೊಳಗೆ ಪ್ರಯಾಣಿಕರು ದೇಶ ಬಿಡಬೇಕು ಎಂದು ಸ್ಪಷ್ಟಪಡಿಸಲಾಗಿದೆ. ನೆರೆಯ ಕತಾರ್ ಇನ್ನೊಂದೆಡೆ ಭಾರತ ಸೇರಿದಂತೆ ವಿವಿಧೆಡೆಗಳಿಗೆ ಹಲವು ವಿಮಾನಗಳನ್ನು ಆರಂಭಿಸಿದೆ. ಆದರೆ ಅಗತ್ಯಕ್ಕಿಂತ ಕಡಿಮೆ ಇರುವುದರಿಂದ ಸೌದಿಯ ಮೂಲಕ ಪ್ರಯಾಣಿಸುವುದು ಭಾರತೀಯರಿಗೆ ಪ್ಲಾನ್ ಬಿ ಆಯ್ಕೆಯಾಗಿದೆ. ಇದರಿಂದ ಟ್ರಾನ್ಸಿಸ್ಟ್ ವೀಸಾಗಳನ್ನು ಪಡೆಯುವ ಧಾವಂತ ಹೆಚ್ಚಿದೆ.
'ಯುದ್ಧ ಶೀಘ್ರ ಕೊನೆಗೊಳ್ಳುತ್ತದೆ' : ಚಾಲಾಕಿತನ ತೋರಿಸಿದ್ರೆ ಇರಾನ್ ಸರ್ವನಾಶ ಎಂದ ಡೊನಾಲ್ಡ್ ಟ್ರಂಪ್
ಅಮೆರಿಕ ದಾಳಿ ಮಾಡಿ, ಇರಾನ್ನ ನೌಕಾನೆಲೆ, ವಾಯುನೆಲೆ ಧ್ವಂಸಮಾಡಿ, ಸಂಪರ್ಕ ಕಡಿತಗೊಳಿಸಿದೆ, ಈಗ ಕೆಲವೇ ಅಸ್ತ್ರಗಳು ಇರಾನ್ ಬಳಿ ಉಳಿದಿವೆ, ಒಂದುವೇಳೆ ಅಮೆರಿಕ ಇದನ್ನು ಆರಂಬಿಸಿರದಿದ್ದರೆ, ಸ್ವತಃ ಇರಾನೇ ಅಮೆರಿಕ ಹಾಗೂ ಇಸ್ರೇಲ್ ಮೇಲೆ ದಾಳಿ ಮಾಡ್ತಿತ್ತು ಎಂದು ಟ್ರಂಪ್ ಹೇಳಿದ್ದಾರೆ.
ʼಒಂದು ಧರ್ಮಕ್ಕೆ ಸೇರಿದ್ದಲ್ಲʼ: ವಿಶ್ವಕಪ್ ಟ್ರೋಫಿ ದೇವಾಲಯಕ್ಕೆ ಒಯ್ದ ಬಗ್ಗೆ ಮಾಜಿ ಆಟಗಾರ ಅಸಮಾಧಾನ
ಹೊಸದಿಲ್ಲಿ: ಭಾರತ ಟಿ20 ಕ್ರಿಕೆಟ್ ತಂಡದ ನಾಯಕ ಸೂರ್ಯಕುಮಾರ್ ಯಾದವ್, ಕೋಚ್ ಗೌತಮ್ ಗಂಭೀರ್ ಮತ್ತು ಐಸಿಸಿ ಅಧ್ಯಕ್ಷ ಜಯ್ ಶಾ ಅವರು ರವಿವಾರ ಗೆದ್ದ ವಿಶ್ವಕಪ್ ಟಿ20 ಟ್ರೋಫಿಯನ್ನು ಅಹ್ಮದಾಬಾದ್ ನ ಹಿಂದೂ ದೇವಾಲಯಕ್ಕೆ ಒಯ್ದ ಕ್ರಮವನ್ನು ತೃಣಮೂಲ ಕಾಂಗ್ರೆಸ್ ಸಂಸದ ಹಾಗೂ ಮಾಜಿ ಕ್ರಿಕೆಟಿಗ ಕೀರ್ತಿ ಆಜಾದ್ ಪ್ರಶ್ನಿಸಿದ್ದಾರೆ. ಏಕೆ ಮಸೀದಿಗೆ ಒಯ್ದಿಲ್ಲ? ಏಕೆ ಚರ್ಚ್ ಗೆ ಒಯ್ದಿಲ್ಲ? ಏಕೆ ಗುರುದ್ವಾರಕ್ಕೆ ಒಯ್ದಿಲ್ಲ? ಈ ಟ್ರೋಫಿ ಎಲ್ಲ ಧರ್ಮಗಳ 140 ಕೋಟಿ ಮಂದಿಗೆ ಸೇರಿದ್ದು. ಇದು ಒಂದು ಧರ್ಮದ ವಿಜಯದ ಸಂಕೇತವಲ್ಲ! ಎಂದು ಎಕ್ಸ್ ಪೋಸ್ಟ್ ನಲ್ಲಿ ಆಜಾದ್ ಹೇಳಿದ್ದಾರೆ. ಕೀರ್ತಿ ಆಜಾದ್ 1983ರ ಏಕದಿನ ವಿಶ್ವಕಪ್ ಗೆದ್ದ ತಂಡದ ಸದಸ್ಯರು. ಒಂದು ಧರ್ಮಕ್ಕೆ ಇದನ್ನು ಸೀಮಿತಗೊಳಿಸುವುದು ನಾಚಿಕೆಗೇಡು ಎಂದು ಅವರು ಟೀಕಿಸಿದ್ದಾರೆ. 1983ರಲ್ಲಿ ಕಪಿಲ್ ದೇವ್ ನೇತೃತ್ವದಲ್ಲಿ ತಂಡ ವಿಶ್ವಕಪ್ ಗೆದ್ದಾಗ, ತಂಡದಲ್ಲಿ ಹಿಂದೂ, ಮುಸ್ಲಿಂ, ಸಿಕ್ಖ್ ಹಾಗೂ ಕ್ರಿಶ್ಚಿಯನ್ನರು ಕೂಡಾ ತಂಡದಲ್ಲಿದ್ದರು. ನಾವು ನಮ್ಮ ಧಾರ್ಮಿಕ ತವರು ಎನಿಸಿದ ಇಂಡಿಯಾ, ಭಾರತ, ಹಿಂದೂಸ್ತಾನಕ್ಕೆ ಅದನ್ನು ಒಯ್ದೆವು ಎಂದು ಬಣ್ಣಿಸಿದ್ದಾರೆ. ಈ ತಂಡ ಭಾರತವನ್ನು ಪ್ರತಿನಿಧಿಸುತ್ತದೆ. ಸೂರ್ಯಕುಮಾರ್ ಯಾದವ್ ಅಥವಾ ಜಯ್ ಶಾ ಕುಟುಂಬವನ್ನು ಪ್ರತಿನಿಧಿಸುವುದಿಲ್ಲ ಎಂದು ಹೇಳಿದ್ದಾರೆ. ಜತೆಗೆ ಹಿಂದೂಯೇತರ ಕ್ರಿಕೆಟಿಗರನ್ನೂ ಉಲ್ಲೇಖಿಸಿದ್ದಾರೆ. ಮೊಹ್ಮದ್ ಸಿರಾಜ್ ಎಂದೂ ಅದನ್ನು ಮಸೀದಿಗೆ ಒಯ್ದಿಲ್ಲ. ಸಂಜು ಸ್ಯಾಮ್ಸನ್ ಚರ್ಚ್ ಗೆ ಒಯ್ದಿಲ್ಲ..ಸಂಜು ಕೊಡುಗೆ ದೊಡ್ಡದು ಹಾಗೂ ಆತ ಸರಣಿಶ್ರೇಷ್ಠ ಎಂದು ವಿಶ್ಲೇಷಿಸಿದ್ದಾರೆ.
Karnataka Weather: ಕಲಬುರಗಿ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ 39 ಡಿಗ್ರಿ ದಾಟಿದ ತಾಪಮಾನ
ಬೆಂಗಳೂರು: ರಾಜ್ಯದಲ್ಲಿ ಬಿಸಿಲ ತಾಪ ಏರುತ್ತಿದ್ದು, ಕಳೆದ 24 ಗಂಟೆಗಳಲ್ಲಿ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚಿನ ತಾಪಮಾನ ದಾಖಲಾಗಿದೆ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ. ಬಿಸಿಲ ನಾಡು ಕಲಬುರಗಿಯಲ್ಲಿ ರಾಜ್ಯದಲ್ಲೇ ಅತಿ ಹೆಚ್ಚು ಅಂದರೆ 39.4 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗುವ ಮೂಲಕ ಜನರಲ್ಲಿ ಆತಂಕ ಮೂಡಿಸಿದೆ. ಬೀದರ್ನಲ್ಲಿ ರಾಜ್ಯದ ಅತಿ ಕಡಿಮೆ
ಕ್ರಿಮಿನಲ್ ಗಳಿಗೆ 'ಆಪರೇಷನ್ ಸುರಕ್ಷಾ' ದುಸ್ವಪ್ನ
ಡ್ರಗ್ಸ್ ಜಾಲದ ವಿರುದ್ಧ ಸಮರೋಪಾದಿಯಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಹೀಗಾಗಿಯೇ ಕೆಲ ವರ್ಷಗಳ ಹಿಂದೆ ಸ್ಥಗಿತಗೊಂಡಿದ್ದ ವ್ಯಸನಿಗಳ ವಿರುದ್ಧದ ಕಾನೂನು ಕ್ರಮವನ್ನು ಪುನರಾರಂಭಿಸಲಾಗಿದೆ. ಸುರಕ್ಷಾ ಕಾರ್ಯಾಚರಣೆ ವೇಳೆಯೇ ಡ್ರಗ್ಸ್ ಮಾರಾಟದಲ್ಲಿ ತೊಡಗಿದ್ದ 28 ಕ್ಕೂ ಹೆಚ್ಚು ಪೆಡ್ಲರ್ಗಳು ಸಿಕ್ಕಿಬಿದ್ದಿದ್ದಾರೆ. ಕೇರಳ, ಒಡಿಶಾ ಸೇರಿದಂತೆ ಸ್ಥಳೀಯ ಪೆಡ್ಲರ್ಗಳು ಈ ಪಟ್ಟಿಯಲ್ಲಿದ್ದಾರೆ.
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ
Abhishek Sharma: ಟಿ20 ವಿಶ್ವಕಪ್ 2026 ಫೈನಲ್ ಪಂದ್ಯದಲ್ಲಿ ಭಾರತದ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಅವರು ಸಿಡಿಸಿದ ಸ್ಫೋಟಕ ಅರ್ಧಶತಕದ ಹಿಂದೆ ಒಂದು ಕುತೂಹಲಕಾರಿ ಕಥೆಯಿದೆ. ಸತತ ವೈಫಲ್ಯಗಳಿಂದ ಬಳಲುತ್ತಿದ್ದ ಅಭಿಷೇಕ್ ಶರ್ಮಾ, ಫೈನಲ್ ಪಂದ್ಯದಲ್ಲಿ ಲಯಕ್ಕೆ ಮರಳಲು ಶಿವಂ ದುಬೆಯ ಬ್ಯಾಟ್ ಅನ್ನು ಬಳಸಿದ್ದು ಇದೀಗ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ.
\ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ\: ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ
T20 World Cup 2026: ಟಿ20 ವಿಶ್ವಕಪ್ 2026ರ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ 96 ರನ್ಗಳ ಭರ್ಜರಿ ಜಯ ಸಾಧಿಸಿದ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ, ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ಗಳಾದ ಅಭಿಷೇಕ್ ಶರ್ಮಾ ಮತ್ತು ಇಶಾನ್ ಕಿಶನ್ ಅವರ ನಡುವಿನ ಹಾಸ್ಯಮಯ ಕ್ಷಣಗಳು ಈಗ ಎಲ್ಲರ ಗಮನ ಸೆಳೆಯುತ್ತಿವೆ. ಈ ನಿರ್ಣಾಯಕ ಕದನದಲ್ಲಿ ಇವರಿಬ್ಬರೂ ಭಾರತದ
ಮನುಕುಲದ ಘಾತಕ ಬಿಳಿ ರಂಜಕ ಬಾಂಬ್ ಆತಂಕ: ಇರಾನ್ ಮೇಲಿನ ಯುದ್ಧೋನ್ಮಾದದಲ್ಲಿ ಇಸ್ರೇಲ್ ಬ್ಲಂಡರ್
ಮಧ್ಯಪ್ರಾಚ್ಯದಲ್ಲಿ ಯುದ್ಧ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ, ಯುದ್ಧೋನ್ಮಾದ ಹೆಚ್ಚಾಗುತ್ತಿದ್ದಂತೆ, ಕಾನೂನುಗಳನ್ನೂ ಮೀರಿ ಮನುಕುಲಕ್ಕೆ ತೀವ್ರ ಅಪಾಯ ತಂದೊಡ್ಡಬಲ್ಲ , ಬಿಳಿ ರಂಜಕದ ಬಾಂಬ್ ಕೂಡಾ ಇಸ್ರೇಲ್ ಪ್ರಯೋಗಿಸುತ್ತಿದೆ ಎಂಬುದು ಆಘಾತಕಾರಿಯಾಗಿದೆ.
ಬೆಂಗಳೂರಿನ ಕೊಳಚೆ ನೀರು, ಕೈಗಾರಿಕೆ ತ್ಯಾಜ್ಯ ನೀರು ಹರಿದು ವಿಷಯುಕ್ತವಾಘಿರುವ ವೃಷಭಾವತಿ ವ್ಯಾಲಿ ನೀರಿನಿಂದ ಈಗಾಗಲೇ ಕೋಲಾರ, ಚಿಕ್ಕಬಳ್ಳಾಪುರದಲ್ಲಿ ಸಾಕಷ್ಟು ಸಮಸ್ಯೆಗಳಾಗಿದ್ದು, ಬೆಂಗಳೂರು ಗ್ರಾಮಾಂತರದಲ್ಲಿ ಕೆರೆ ತುಂಬಿಸುವ ಯೋಜನೆಗೆ ಭಾರಿ ವಿರೋಧ ವ್ಯಕ್ತವಾಗಿದೆ. 3 ನೇ ಹಂತದಲ್ಲಿ ಸಂಸ್ಕರಣೆ ಆಗದಿದ್ದರೆ, ಇದರ ಒಂದು ಹನಿ ನೀರೂ ಬೇಡ ಎಂದು ವಿರೋಧ ವ್ಯಕ್ತವಾಗಿದೆ.
ಹಾರ್ಮುಜ್ ಜಲಸಂಧಿಯಲ್ಲಿ ಇರಾನ್ ಬೆದರಿಕೆ ಅಂತ್ಯಕ್ಕೆ ತಲುಪಿದೆ: ಟ್ರಂಪ್
“ಹಡಗಿನ ಮೇಲೆ ದಾಳಿ ಮಾಡಿದರೆ ಪರಿಣಾಮಗಳು ಗಂಭೀರವಾಗಿರುತ್ತವೆ”
ಬಲವಂತವಾಗಿ ಸಗಣಿ ತಿನ್ನಿಸಿದ್ದನ್ನು FIR ನಿಂದ ಕೈಬಿಟ್ಟ ಪೊಲೀಸರು!
Bahrain ಮೇಲೆ ಇರಾನ್ ನಿಂದ ಮುಂದುವರಿದ ದಾಳಿ; ಕನಿಷ್ಠ ಓರ್ವ ಮೃತ್ಯು
ಮನಾಮ: ಬಹ್ರೇನ್ ರಾಜಧಾನಿ ಮನಾಮದಲ್ಲಿನ ವಸತಿ ಕಟ್ಟಡವನ್ನು ಗುರಿಯಾಗಿಸಿಕೊಂಡು ಇರಾನ್ ನಡೆಸಿದ ದೊಡ್ಡ ಮಟ್ಟದ ದಾಳಿಯಲ್ಲಿ ಒಬ್ಬರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ಬಹ್ರೇನ್ ನ ಆಂತರಿಕ ಸಚಿವಾಲಯವು ತಿಳಿಸಿದೆ ಎಂದು Aljazeera ವರದಿ ಮಾಡಿದೆ. ಈ ಘಟನೆ ಕುರಿತು ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ ಎಂದು ಬಹ್ರೇನ್ ಅಧಿಕಾರಿಗಳು ತಿಳಿಸಿದ್ದಾರೆ.
ರಮಝಾನ್ ನಲ್ಲಿ ಸಾವಿರಾರು ಕೋಟಿ ಝಕಾತ್; ಬಡಕುಟುಂಬಗಳ ಬದುಕಿಗೆ ಆಶಾಕಿರಣ
ಹೊಸದಿಲ್ಲಿ: ಪವಿತ್ರ ರಮಝಾನ್ ತಿಂಗಳಲ್ಲಿ ಮುಸ್ಲಿಮರು ನೀಡುವ ಝಕಾತ್ ದೇಣಿಗೆಗಳು ಭಾರತದಲ್ಲಿ ಶಿಕ್ಷಣ, ಕಾನೂನು ನೆರವು ಮತ್ತು ಆರ್ಥಿಕವಾಗಿ ದುರ್ಬಲ ಕುಟುಂಬಗಳಿಗೆ ಬೆಂಬಲ ಒದಗಿಸುವ ಪ್ರಮುಖ ಸಾಮಾಜಿಕ ನೆರವಿನ ಮೂಲವಾಗುತ್ತಿವೆ. ಸಮುದಾಯ ಸಂಘಟನೆಗಳ ಅಂದಾಜಿನ ಪ್ರಕಾರ, ದೇಶದಲ್ಲಿ ಪ್ರತಿ ವರ್ಷ ಝಕಾತ್ ರೂಪದಲ್ಲಿ ಸುಮಾರು 10,000 ಕೋಟಿ ರೂ.ಯಿಂದ 40,000 ಕೋಟಿ ರೂ.ವರೆಗೆ ದೇಣಿಗೆ ಸಂಗ್ರಹವಾಗಬಹುದು. ರಮಝಾನ್ ತಿಂಗಳು ಮುಸ್ಲಿಮರಿಗೆ ಉಪವಾಸ, ಪ್ರಾರ್ಥನೆ ಮತ್ತು ದಾನಕ್ಕೆ ವಿಶೇಷ ಮಹತ್ವ ಹೊಂದಿದೆ. ಈ ಅವಧಿಯಲ್ಲಿ ಅನೇಕರು ತಮ್ಮ ಝಕಾತ್ ಕರ್ತವ್ಯವನ್ನು ನೆರವೇರಿಸುತ್ತಾರೆ. ಝಕಾತ್ ಇಸ್ಲಾಂ ಧರ್ಮದಲ್ಲಿ ಕಡ್ಡಾಯವಾದ ದಾನ ಪದ್ಧತಿಯಾಗಿದ್ದು, ಆರ್ಥಿಕವಾಗಿ ಸಮರ್ಥರಾದ ಮುಸ್ಲಿಮರು ತಮ್ಮ ಸಂಪತ್ತಿನ ಒಂದು ಭಾಗವನ್ನು ಅಗತ್ಯವಿರುವವರಿಗೆ ನೀಡಬೇಕೆಂಬ ನಿಯಮವನ್ನು ಒಳಗೊಂಡಿದೆ. ►ಝಕಾತ್ ಎಂದರೇನು? ಝಕಾತ್ ಇಸ್ಲಾಂ ಧರ್ಮದ ಐದು ಸ್ತಂಭಗಳಲ್ಲಿ ಒಂದಾಗಿದೆ. ಸಮಾಜದಲ್ಲಿ ಸಂಪತ್ತು ಸಮನಾಗಿ ಹರಿದಾಡಿ ದುರ್ಬಲ ವರ್ಗಗಳಿಗೂ ತಲುಪಬೇಕು ಎಂಬ ಉದ್ದೇಶದಿಂದ ಈ ವ್ಯವಸ್ಥೆ ರೂಪಿಸಲಾಗಿದೆ. ಸಾಮಾನ್ಯವಾಗಿ ವ್ಯಕ್ತಿಯ ಉಳಿತಾಯ, ಆಸ್ತಿ ಮತ್ತು ಸಂಗ್ರಹಿಸಿದ ಸಂಪತ್ತಿನ ಮೇಲೆ ಶೇಕಡಾ 2.5ರಷ್ಟು ಝಕಾತ್ ನೀಡಲಾಗುತ್ತದೆ. ಈ ದಾನ ನೀಡುವ ಹೊಣೆಗಾರಿಕೆ ‘ನಿಸಾಬ್’ ಎಂದು ಕರೆಯಲಾಗುವ ಕನಿಷ್ಠ ಸಂಪತ್ತಿನ ಮಿತಿಯನ್ನು ಮೀರಿದವರ ಮೇಲೆ ಅನ್ವಯಿಸುತ್ತದೆ. ನಿಸಾಬ್ ಮೌಲ್ಯವನ್ನು ಚಿನ್ನ ಅಥವಾ ಬೆಳ್ಳಿಯ ಬೆಲೆಯ ಆಧಾರದ ಮೇಲೆ ಲೆಕ್ಕ ಹಾಕಲಾಗುತ್ತದೆ. 87.5 ಗ್ರಾಂ ಚಿನ್ನ ಅಥವಾ 612.36 ಗ್ರಾಂ ಬೆಳ್ಳಿಯ ಮೌಲ್ಯಕ್ಕೆ ಸಮಾನವಾದ ಸಂಪತ್ತನ್ನು ಹೊಂದಿರುವವರು ಝಕಾತ್ ನೀಡಬೇಕಾಗುತ್ತದೆ. ಭಾರತದಲ್ಲಿ ಸುಮಾರು 17.18 ಕೋಟಿ ಮುಸ್ಲಿಮರು ಇದ್ದು, ಇದು ದೇಶದ ಒಟ್ಟು ಜನಸಂಖ್ಯೆಯ ಶೇಕಡಾ 14.2ರಷ್ಟಾಗಿದೆ. ಇವರು ನೀಡುವ ಝಕಾತ್ ಮೊತ್ತವು ಗಣನೀಯ ಪ್ರಮಾಣದಲ್ಲಿದೆ. ಆದರೆ ನಿಖರ ಅಂಕಿಅಂಶಗಳು ಲಭ್ಯವಿಲ್ಲ. 2005ರಲ್ಲಿ ‘ಝಕಾತ್ ಫೌಂಡೇಶನ್ ಆಫ್ ಇಂಡಿಯಾ’ ಆಯೋಜಿಸಿದ್ದ ಸಮ್ಮೇಳನದಲ್ಲಿ ಮಂಡಿಸಲಾದ ಅಧ್ಯಯನ ಪ್ರಬಂಧವು ವಿವಿಧ ಧಾರ್ಮಿಕ ಸಮುದಾಯಗಳ ಮನೆಮನೆ ಆದಾಯದ ದತ್ತಾಂಶವನ್ನು ಆಧರಿಸಿ ಝಕಾತ್ ಮೊತ್ತವನ್ನು ವರ್ಷಕ್ಕೆ ಸುಮಾರು 10,000 ಕೋಟಿ ರೂ. ಎಂದು ಅಂದಾಜಿಸಿತ್ತು. ಆದರೆ ಸಮುದಾಯ ಕಾರ್ಯಕರ್ತರ ಪ್ರಕಾರ, ಆದಾಯದ ಏರಿಕೆ ಮತ್ತು ಜನಸಂಖ್ಯೆಯ ಹೆಚ್ಚಳದ ಹಿನ್ನೆಲೆಯಲ್ಲಿ ಈ ಮೊತ್ತವು ಈಗ ಗಮನಾರ್ಹವಾಗಿ ಹೆಚ್ಚಿರಬಹುದು. ಪ್ರಸ್ತುತ ವರ್ಷಕ್ಕೆ 10,000 ಕೋಟಿ ರೂ.ವಿನಿಂದ 40,000 ಕೋಟಿ ರೂ.ವರೆಗೆ ಝಕಾತ್ ಸಂಗ್ರಹವಾಗುವ ಸಾಧ್ಯತೆ ಇದೆ. ವಿಶೇಷವಾಗಿ ರಮಝಾನ್ ಸಮಯದಲ್ಲಿ ಹೆಚ್ಚಿನವರು ತಮ್ಮ ಕರ್ತವ್ಯವನ್ನು ನೆರವೇರಿಸಲು ಮುಂದಾಗುತ್ತಾರೆ. ►ಸಂಘಟಿತ ಉಪಕ್ರಮಗಳತ್ತ ಒಲವು ಈ ದತ್ತಿ ನಿಧಿಗಳ ಹೆಚ್ಚಿನ ಭಾಗವನ್ನು ಸಾಮಾನ್ಯವಾಗಿ ಅನೌಪಚಾರಿಕವಾಗಿ ಅಥವಾ ಸಣ್ಣ ಪ್ರಮಾಣದಲ್ಲಿ ವಿತರಿಸಲಾಗುತ್ತದೆ. ಇದರಿಂದ ಅದರ ದೀರ್ಘಕಾಲೀನ ಪರಿಣಾಮ ಸೀಮಿತವಾಗುತ್ತದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಶಿಕ್ಷಣ, ಬಡತನ ನಿರ್ಮೂಲನೆ ಮತ್ತು ಕಾನೂನು ನೆರವು ಮುಂತಾದ ಸಮಸ್ಯೆಗಳನ್ನು ಪರಿಹರಿಸುವ ಗುರಿಯೊಂದಿಗೆ ಝಕಾತ್ ಅನ್ನು ಸಂಘಟಿತ ಉಪಕ್ರಮಗಳ ಮೂಲಕ ಬಳಸುವ ಪ್ರಯತ್ನಗಳು ಹೆಚ್ಚುತ್ತಿವೆ. ಮುಂಬೈ ಮೂಲದ ‘ಮುಸ್ಲಿಂ ವೃತ್ತಿಪರರ ಸಂಘ’ವು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವು ನೀಡಲು ರಾಷ್ಟ್ರವ್ಯಾಪಿ ಅಭಿಯಾನವನ್ನು ಆರಂಭಿಸಿದೆ. ಈ ಯೋಜನೆಯಡಿ 10,000 ರೂ. ದೇಣಿಗೆಯ ಮೂಲಕ ಒಂದು ವಿದ್ಯಾರ್ಥಿಯ ಒಂದು ವರ್ಷದ ಶಿಕ್ಷಣವನ್ನು ಪ್ರಾಯೋಜಿಸಲು ದಾನಿಗಳನ್ನು ಪ್ರೋತ್ಸಾಹಿಸಲಾಗುತ್ತಿದೆ. ಭಾರತದ 200ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಸುಮಾರು 10,000 ವಿದ್ಯಾರ್ಥಿಗಳಿಗೆ ನೆರವು ನೀಡುವುದು ಈ ಉಪಕ್ರಮದ ಗುರಿಯಾಗಿದೆ. ಪರಿಶೀಲನಾ ಪ್ರಕ್ರಿಯೆಯ ಮೂಲಕ ವಿದ್ಯಾರ್ಥಿಗಳನ್ನು ಗುರುತಿಸಲಾಗುತ್ತದೆ ಮತ್ತು ಹಣವನ್ನು ನೇರವಾಗಿ ಶಿಕ್ಷಣ ಸಂಸ್ಥೆಗಳಿಗೆ ವರ್ಗಾಯಿಸಲಾಗುತ್ತದೆ. ಇದರಿಂದ ಶಾಲಾ ಶುಲ್ಕ ಹಾಗೂ ಸಂಬಂಧಿತ ಶಿಕ್ಷಣ ವೆಚ್ಚಗಳಿಗೆ ನೆರವು ದೊರೆಯುತ್ತದೆ. “ಪ್ರತಿ ವರ್ಷ ಭಾರತದಲ್ಲಿ ದೊಡ್ಡ ಪ್ರಮಾಣದ ಹಣ ಝಕಾತ್ ರೂಪದಲ್ಲಿ ವಿತರಿಸಲಾಗುತ್ತದೆ. ಆದರೆ ಹಣ ಚದುರಿಹೋಗಿರುವುದರಿಂದ ಅದರ ಪರಿಣಾಮ ಸೀಮಿತವಾಗುತ್ತದೆ. ಸಮುದಾಯ ಸಂಸ್ಥೆಗಳು ಈ ಕೊಡುಗೆಗಳನ್ನು ಸಂಘಟಿತ ಕಾರ್ಯಕ್ರಮಗಳ ಮೂಲಕ ಬಳಸಿದಾಗ, ನೆರವು ಹೆಚ್ಚು ಅಗತ್ಯವಿರುವವರನ್ನು ತಲುಪುತ್ತದೆ ಮತ್ತು ದೀರ್ಘಕಾಲೀನ ಪರಿಣಾಮ ಉಂಟಾಗುತ್ತದೆ,” ಎಂದು ಮುಸ್ಲಿಂ ವೃತ್ತಿಪರರ ಸಂಘದ ಸ್ಥಾಪಕ ಅಧ್ಯಕ್ಷ ಆಮಿರ್ ಇದ್ರಿಸಿ ಹೇಳಿದ್ದಾರೆ. ►ಕಾನೂನು ನೆರವಿಗೂ ಝಕಾತ್ ಬಳಕೆ ಶಿಕ್ಷಣದ ಜೊತೆಗೆ ನ್ಯಾಯಕ್ಕೆ ಪ್ರವೇಶವನ್ನು ವಿಸ್ತರಿಸಲು ಝಕಾತ್ ನಿಧಿಗಳನ್ನು ಬಳಸುವ ಪ್ರಯತ್ನಗಳೂ ನಡೆಯುತ್ತಿವೆ. ಮುಂಬೈ ಮೂಲದ ‘ಗ್ಲೋಬಲ್ ಕೇರ್ ಫೌಂಡೇಶನ್’ ನಂತಹ ಸಂಸ್ಥೆಗಳು ಜಾಮೀನು ಅಥವಾ ಕಾನೂನು ನೆರವು ಪಡೆಯಲು ಸಾಧ್ಯವಾಗದ ವಿಚಾರಣಾಧೀನ ಕೈದಿಗಳೊಂದಿಗೆ ಕೆಲಸ ಮಾಡುತ್ತಿವೆ. ಸಂಸ್ಥೆಯ ಮಾಹಿತಿ ಪ್ರಕಾರ, 2025ರಲ್ಲಿ ಮುಂಬೈ, ಪುಣೆ ಮತ್ತು ನಾಸಿಕ್ ಜೈಲುಗಳಿಂದ 490ಕ್ಕೂ ಹೆಚ್ಚು ವಿಚಾರಣಾಧೀನ ಕೈದಿಗಳಿಗೆ ಕಾನೂನು ಹಾಗೂ ಆರ್ಥಿಕ ನೆರವು ನೀಡಿ ಬಿಡುಗಡೆಗೊಳ್ಳಲು ಸಹಾಯ ಮಾಡಲಾಗಿದೆ. ಮುಂಬೈ, ಗೋವಂಡಿ ಮತ್ತು ಮುಂಬ್ರಾದಲ್ಲಿ ಕಾನೂನು ನೆರವು ಕೇಂದ್ರಗಳನ್ನು ನಡೆಸುವ ಮೂಲಕ ಕುಟುಂಬಗಳಿಗೆ ಮಾರ್ಗದರ್ಶನ ನೀಡಲಾಗುತ್ತಿದೆ. ‘ಜಮಿಯತ್ ಉಲಮಾ ಇ ಹಿಂದ್’ ನಡೆಸುವ ಉಪಕ್ರಮಗಳ ಮೂಲಕವೂ ಕೈದಿಗಳಿಗೆ ಕಾನೂನು ಸಹಾಯ ಒದಗಿಸಲು ಝಕಾತ್ ಹಣವನ್ನು ಬಳಸಲಾಗುತ್ತಿದೆ. “ಇಸ್ಲಾಮಿಕ್ ಬೋಧನೆಗಳು ಝಕಾತ್ ಪಡೆಯಬಹುದಾದ ಹಲವು ವರ್ಗಗಳನ್ನು ಗುರುತಿಸುತ್ತವೆ. ಜೈಲಿನಲ್ಲಿರುವ ಅಥವಾ ಸಂಕಷ್ಟದಲ್ಲಿರುವವರೂ ಅದರಲ್ಲಿ ಸೇರಿದ್ದಾರೆ. ಅನೇಕ ವಿಚಾರಣಾಧೀನ ಕೈದಿಗಳು ಶಿಕ್ಷೆಗೆ ಒಳಗಾದ ಕಾರಣದಿಂದಲ್ಲ, ತಮ್ಮ ಪ್ರಕರಣಗಳನ್ನು ಮುಂದುವರಿಸಲು ಅಥವಾ ಕಾನೂನು ಪ್ರತಿನಿಧಿಯನ್ನು ಪಡೆಯಲು ಹಣದ ಕೊರತೆಯಿಂದ ಜೈಲಿನಲ್ಲಿ ಉಳಿಯುತ್ತಾರೆ. ಇಂತಹ ಸಂದರ್ಭಗಳಲ್ಲಿ ಝಕಾತ್ ನಿಧಿಗಳು ಅವರಿಗೆ ನ್ಯಾಯ ಪಡೆಯಲು ಮಹತ್ವದ ಪಾತ್ರ ವಹಿಸುತ್ತವೆ,” ಎಂದು ಜಮಿಯತ್ ಉಲಮಾ ಐ ಹಿಂದ್ನ ಕಾನೂನು ಸಲಹೆಗಾರ ವಕೀಲ ಶಾಹಿದ್ ನದೀಮ್ ಹೇಳಿದ್ದಾರೆ. ಸಂಸ್ಥೆಯ ಪ್ರಕಾರ, ಇಂತಹ ಬೆಂಬಲದ ಮೂಲಕ 500ಕ್ಕೂ ಹೆಚ್ಚು ಆರ್ಥಿಕವಾಗಿ ಹಿಂದುಳಿದ ಕೈದಿಗಳಿಗೆ ಕಾನೂನು ನೆರವು ಒದಗಿಸಲಾಗಿದ್ದು, ಅವರಲ್ಲಿ ಹಲವರು ನಂತರ ಜಾಮೀನು ಅಥವಾ ಖುಲಾಸೆಯಾಗಿದ್ದಾರೆ. ►ಸಮುದಾಯ ಬೆಂಬಲ ಮಹಾರಾಷ್ಟ್ರ ಸೇರಿದಂತೆ ದೇಶದ ಇತರ ಭಾಗಗಳಲ್ಲಿ ಆರ್ಥಿಕ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ನೆರವಾಗಲು ಸಮುದಾಯ ಸಂಘಟನೆಗಳು ಝಕಾತ್ ಅನ್ನು ಹೆಚ್ಚು ಸಂಘಟಿತ ರೀತಿಯಲ್ಲಿ ಸಂಗ್ರಹಿಸಿ ವಿತರಿಸುವ ಉಪಕ್ರಮಗಳನ್ನು ಆರಂಭಿಸಿವೆ. ಕೆಲವು ಸಂದರ್ಭಗಳಲ್ಲಿ ಝಕಾತ್ ನೆರವು ಪಡೆದ ಫಲಾನುಭವಿಗಳು ತಮ್ಮ ಪರಿಸ್ಥಿತಿ ಸುಧಾರಿಸಿದ ಬಳಿಕ ಮತ್ತೆ ಸಮಾಜಕ್ಕೆ ಕೊಡುಗೆ ನೀಡಲು ಮುಂದಾಗುತ್ತಾರೆ. ಇದರಿಂದ ಸಮುದಾಯದೊಳಗೆ ಪರಸ್ಪರ ಬೆಂಬಲದ ಸರಪಳಿ ನಿರ್ಮಾಣವಾಗುತ್ತಿದೆ. “ಹಲವು ಸಂದರ್ಭಗಳಲ್ಲಿ ಝಕಾತ್ ನೆರವಿನಿಂದ ಶಿಕ್ಷಣ ಪಡೆದ ವಿದ್ಯಾರ್ಥಿಗಳು ನಂತರ ಆರ್ಥಿಕವಾಗಿ ಸ್ಥಿರರಾದ ಬಳಿಕ ಮತ್ತೆ ಕೊಡುಗೆ ನೀಡಲು ಮುಂದಾಗುತ್ತಾರೆ. ಹಲವಾರು ಫಲಾನುಭವಿಗಳು ತಮ್ಮ ಪರಿಸ್ಥಿತಿ ಸುಧಾರಿಸಿದ ನಂತರ ಇತರರಿಗೆ ಸಹಾಯ ಮಾಡಲು ಹಿಂತಿರುಗುತ್ತಿರುವುದನ್ನು ನಾವು ನೋಡಿದ್ದೇವೆ. ತಕ್ಷಣದ ಸಂಕಷ್ಟವನ್ನು ಪರಿಹರಿಸುವುದರ ಜೊತೆಗೆ, ಝಕಾತ್ ಜವಾಬ್ದಾರಿಯ ಭಾವನೆ ಬೆಳೆಸುತ್ತದೆ ಮತ್ತು ಸಮುದಾಯದಲ್ಲಿ ಪರಸ್ಪರ ಬೆಂಬಲದ ಸಂಸ್ಕೃತಿಯನ್ನು ಉತ್ತೇಜಿಸುತ್ತದೆ,” ಎಂದು ಅಗತ್ಯವಿರುವವರಿಗೆ ಝಕಾತ್ ಹಣವನ್ನು ಸಂಗ್ರಹಿಸಿ ವಿತರಿಸುವ ‘ಬೈತುಲ್ ಮಾಲ್’ ಸಂಘಟನೆಯ ಸದಸ್ಯ ಇಮ್ತಿಯಾಜ್ ಶೇಖ್ ತಿಳಿಸಿದ್ದಾರೆ. ಸೌಜನ್ಯ: indianexpress.com
ಇರಾನ್ ನ ನೂತನ ಸರ್ವೋಚ್ಚ ನಾಯಕರ ನೇಮಕ ನಿರಾಸೆ ತಂದಿದೆ: ಟ್ರಂಪ್
ಮುಂದಿನ ಟಾರ್ಗೆಟ್ ಆಗುವರೇ ಎಂಬ ಪ್ರಶ್ನೆಗೆ ಉತ್ತರಿಸಲು ನಿರಾಕರಣೆ
ಇರಾನ್ ಸಂಪೂರ್ಣವಾಗಿ ಸೋಲುವವರೆಗೆ ದಾಳಿ ಮುಂದುವರಿಕೆ: ಡೊನಾಲ್ಡ್ ಟ್ರಂಪ್ ಘೋಷಣೆ
‘ಆಪರೇಷನ್ ಮಿಡ್ನೈಟ್ ಹ್ಯಾಮರ್’ | ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅಮೆರಿಕ ಅಧ್ಯಕ್ಷ
ಇರಾನ್ ನ ಪೂರ್ವ ಟೆಹ್ರಾನ್ ನಲ್ಲಿ ಭಾರೀ ದಾಳಿ; ಕನಿಷ್ಠ 40 ಮೃತ್ಯು
ಟೆಹ್ರಾನ್: ಇರಾನ್ ರಾಜಧಾನಿ ಟೆಹ್ರಾನ್ ನ ಪೂರ್ವ ಭಾಗದಲ್ಲಿರುವ ವಸತಿ ಕಟ್ಟಡಗಳನ್ನು ಗುರಿಯಾಗಿಸಿ ನಡೆದ ದಾಳಿಯಲ್ಲಿ ಕನಿಷ್ಠ 40 ಮಂದಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು Aljazeera ವರದಿ ಮಾಡಿದೆ. ದಾಳಿಯ ಪರಿಣಾಮವಾಗಿ ರಾಜಧಾನಿಯಲ್ಲಿ ಭಾರೀ ಸ್ಫೋಟದ ಶಬ್ದಗಳು ಕೇಳಿಬಂದಿದ್ದು, ಕೆಲವೇ ನಿಮಿಷಗಳ ಅಂತರದಲ್ಲಿ ದೊಡ್ಡ ಸ್ಫೋಟ ಸಂಭವಿಸಿರುವುದಾಗಿ ಸ್ಥಳೀಯ ಮೂಲಗಳು ತಿಳಿಸಿವೆ. ಆದರೆ ಸ್ಫೋಟದ ನಿಖರ ಗುರಿ ಅಥವಾ ಅದರ ಪರಿಣಾಮದ ಕುರಿತು ಇನ್ನೂ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ನಗರದಲ್ಲಿ ದಿನವಿಡೀ ಉದ್ವಿಗ್ನ ಪರಿಸ್ಥಿತಿ ಮುಂದುವರಿದಿದ್ದು, ಪ್ರತಿ ಒಂದು ಅಥವಾ ಎರಡು ಗಂಟೆಗಳಿಗೊಮ್ಮೆ ಸ್ಫೋಟಗಳ ಶಬ್ದಗಳು ಕೇಳಿಬರುತ್ತಿವೆ ಎಂಬ ವರದಿಗಳು ತಿಳಿಸಿವೆ. ಇದರಿಂದ ಜನರಲ್ಲಿ ಆತಂಕ ಹೆಚ್ಚಾಗಿದೆ. ಇದಷ್ಟೇ ಅಲ್ಲದೆ, ಇಸ್ಫಹಾನ್ ಸೇರಿದಂತೆ ಇರಾನ್ ನ ಇತರ ಪ್ರಮುಖ ನಗರಗಳನ್ನೂ ಗುರಿಯಾಗಿಸಲಾಗಿದೆ. ಪರಮಾಣು ಸೌಲಭ್ಯಗಳಿಗೆ ಸಮೀಪದಲ್ಲಿರುವುದರಿಂದ ಇಸ್ಫಹಾನ್ ಪ್ರದೇಶದಲ್ಲಿ ಕಳವಳ ಹೆಚ್ಚಾಗಿದೆ. ಅಲ್ಲಿನ ಗವರ್ನರ್ ಕಚೇರಿಯ ಮೇಲೆ ದಾಳಿ ಮಾಡಲಾಗಿದೆ ಎಂಬ ವರದಿಗಳೂ ಬಂದಿವೆ. ಯುನೆಸ್ಕೋ ವಿಶ್ವ ಪಾರಂಪರ್ಯ ತಾಣವಾಗಿ ನೋಂದಾಯಿಸಲ್ಪಟ್ಟಿರುವ ಪುರಾತನ ಅರಮನೆ ಮೇಲೂ ಬಾಂಬ್ ದಾಳಿ ನಡೆದಿದ್ದು, ಆ ಕಟ್ಟಡಕ್ಕೆ ತೀವ್ರ ಹಾನಿಯಾಗಿದೆ ಎಂದು ವರದಿಗಳು ತಿಳಿಸಿವೆ.
ಮನೆ ಹಂಚಿಕೆಯಲ್ಲಿ ಮುಸ್ಲಿಮರಿಗೆ ಅನ್ಯಾಯ : ಶಾಸಕ ಬಿ.ಎನ್.ರವಿಕುಮಾರ್
ಬೆಂಗಳೂರು : ವಸತಿ ಇಲಾಖೆಯಡಿ ಮನೆಗಳ ಹಂಚಿಕೆ ಪ್ರಕ್ರಿಯೆಯಲ್ಲಿ ಪದೇ ಪದೇ ಮುಸ್ಲಿಮರಿಗೆ ಅನ್ಯಾಯ ಆಗುತ್ತಿದೆ ಎಂದು ವಿಧಾನಸಭೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ಕ್ಷೇತ್ರದ ಜೆಡಿಎಸ್ ಶಾಸಕ ಬಿ.ಎನ್.ರವಿಕುಮಾರ್ ಧ್ವನಿ ಎತ್ತಿದ ಪ್ರಸಂಗ ಜರುಗಿತು. ಸೋಮವಾರ ವಿಧಾನಸಭೆಯ ಪ್ರಶೋತ್ತರ ಕಲಾಪದಲ್ಲಿ ವಿಷಯ ಪ್ರಸ್ತಾಪ ಮಾಡಿದ ಬಿ.ಎನ್.ರವಿಕುಮಾರ್ ಅವರು, ವಸತಿ ಇಲಾಖೆಯ ವಿವಿಧ ನಿಗಮಗಳಿಂದ ಕ್ಷೇತ್ರದ ಮುಸ್ಲಿಮರಿಗೆ ಯಾವ ರೀತಿಯಲ್ಲಿ ಸಮಸ್ಯೆ ಆಗುತ್ತಿದೆ ಎಂದು ಸದನದ ಗಮನ ಸೆಳೆದರು. ವಸತಿ ಇಲಾಖೆಯ ನಿಗಮಗಳಿಂದ ವಿವಿಧ ಯೋಜನೆಗಳ ಅಡಿಯಲ್ಲಿ ವಸತಿ ರಹಿತರಿಗೆ ಮನೆಗಳನ್ನು ವಿತರಣೆ ಮಾಡಲಾಗುತ್ತಿದೆ. ಆದರೆ ಫಲಾನುಭವಿಗಳ ಆಯ್ಕೆ ಮಾಡುವಲ್ಲಿ ನಿಯಮಗಳನ್ನು ಪಾಲಿಸಿಲ್ಲ.ಅದರಲ್ಲೂ, ಶಿಡ್ಲಘಟ್ಟದಲ್ಲಿ ಮುಸ್ಲಿಮರಿಗೆ ಅನ್ಯಾಯವಾಗಿದೆ. 75 ಮನೆಗಳು ಬೇರೆಯವರಿಗೆ ಕೊಡಲಾಗಿದೆ. ಈ ಸಮಸ್ಯೆ ಬಗೆಹರಿಸಬೇಕು ಎಂದು ಸರಕಾರಕೆಕ ಮನವಿ ಮಾಡಿದರು. ಇದಕ್ಕೆ ಉತ್ತರ ನೀಡಿದ ವಸತಿ ಸಚಿವ ಝಮೀರ್ ಅಹ್ಮದ್ ಖಾನ್, ಕೇಂದ್ರ ಪುರಸ್ಕೃತ ಯೋಜನೆಗ ಅಡಿಯಲ್ಲಿ ಫಲಾನುಭವಿಗಳ ಆಯ್ಕೆಯು ಖಾಯಂ ನಿರೀಕ್ಷಣಾ ಪಟ್ಟಿ ಮೂಲಕ ಕ್ರಮಾಂಕವಾರು ಆಯ್ಕೆ ಮಾಡಲಾಗುತ್ತಿದೆ ಎಂದು ಉಲ್ಲೇಖಿಸಿದರು. ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರಕ್ಕೆ 500 ಮನೆಗಳನ್ನು ನೀಡಿದ್ದೇವೆ. 75 ಮನೆಗಳು ಶಾಸಕರ ವಿವೇಚನೆ ಇಂದ ನೀಡುವುದಾಗಿದೆ. ಈ ಸಂಬಂಧಿಸಿದಂತೆ ಚರ್ಚಿಸಲು ನಾಳೆ ಸಭೆ ಕರೆಯಲಾಗಿದೆ. ಸಭೆಗೆ ಶಾಸಕರೂ ಬರಬಹುದು. ಚರ್ಚೆ ನಡೆಸಿ ಸಮಸ್ಯೆ ಬಗೆಹರಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.
ಅಝೀಂ ಪ್ರೇಮ್ಜಿ ವಿವಿ ವಿದ್ಯಾರ್ಥಿಗಳ ಮೇಲಿನ ಪ್ರಕರಣ ಹಿಂಪಡೆಯಲು ಸಾಹಿತಿ, ಚಿಂತಕರು ಆಗ್ರಹ
ಬೆಂಗಳೂರು : ಅಝೀಂ ಪ್ರೇಮ್ ಜಿ ವಿಶ್ವ ವಿದ್ಯಾನಿಲಯದ ‘ಸ್ಪಾರ್ಕ್ ರೀಡಿಂಗ್ ಸರ್ಕಲ್’ ವಿದ್ಯಾರ್ಥಿಗಳ ಮೇಲೆ ವಿಶ್ವ ವಿದ್ಯಾನಿಲಯವು ದಾಖಲಿಸಿರುವ ಕ್ರಿಮಿನಲ್ ಪ್ರಕರಣವನ್ನು ತಕ್ಷಣವೇ ಕೈಬಿಡಬೇಕು ಎಂದು ಸಾಹಿತಿ, ಚಿಂತಕರು, ಕಲಾವಿದರು ಹಾಗೂ ಸಾಮಾಜಿಕ ಕಾರ್ಯಕರ್ತರು ಆಗ್ರಹಿಸಿದ್ದಾರೆ. ಸೋಮವಾರ ಈ ಕುರಿತು ಅಝೀಂ ಪ್ರೇಮ್ ಜಿ ವಿಶ್ವ ವಿದ್ಯಾನಿಲಯದ ಕುಲಪತಿಗಳಿಗೆ ಪತ್ರ ಬರೆದಿರುವ ಹಿರಿಯ ಸಾಹಿತಿಗಳಾದ ಡಾ.ಜಿ.ರಾಮಕೃಷ್ಣ, ರಾಜೇಂದ್ರ ಚೆನ್ನಿ, ಡಾ.ಸಿದ್ದನಗೌಡ ಪಾಟೀಲ, ಡಾ.ಬಂಜಗೆರೆ ಜಯಪ್ರಕಾಶ್, ಡಾ.ದು.ಸರಸ್ವತಿ, ವಿಮಲಾ ಕೆ.ಎಸ್.ಅವರು, ಕರ್ನಾಟಕದ ಶೈಕ್ಷಣಿಕ, ಸಾಹಿತ್ಯ ಮತ್ತು ಸಾಂಸ್ಕೃತಿಕ ವಲಯದ ಪ್ರತಿನಿಧಿಗಳಾದ ನಾವು, ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯು ತನ್ನದೇ ವಿದ್ಯಾರ್ಥಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿರುವ ಕ್ರಮವನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದು ತಿಳಿಸಿದ್ದಾರೆ. ವಿಶ್ವ ವಿದ್ಯಾನಿಲಯವೊಂದು ತನ್ನದೇ ಆದ ಆಂತರಿಕ ಪ್ರಕ್ರಿಯೆಗಳನ್ನು ನಡೆಸುವಂತಹ ಹಕ್ಕನ್ನು ಹೊಂದಿದ್ದರೂ ವಿದ್ಯಾರ್ಥಿ-ಯುವಜನರು ಒಂದು ಚರ್ಚೆಯನ್ನು ಹಮ್ಮಿಕೊಂಡಿದ್ದ ಒಂದೇ ಕಾರಣಕ್ಕೆ ಅವರ ಮೇಲೆ ‘ಭಾರತೀಯ ನ್ಯಾಯ ಸಂಹಿತೆ' ಮತ್ತು ‘ಐಟಿ ಕಾಯ್ದೆ' ಅಡಿಯಲ್ಲಿ ಮೊಕದ್ದಮೆ ದಾಖಲಿಸುವುದು ಅತ್ಯಂತ ಅತಿರೇಕದ ಕ್ರಮವಾಗಿದೆ ಎಂದು ತಿಳಿಸಿದ್ದಾರೆ. ಶಿಕ್ಷಣ ಸಂಸ್ಥೆಗಳು, ಅದರಲ್ಲಿಯೂ ಮುಖ್ಯವಾಗಿ ವಿಶ್ವ ವಿದ್ಯಾನಿಲಯಗಳು ಚರ್ಚೆ ಮತ್ತು ಸಂವಾದಗಳ ಮೂಲಕ ವಿದ್ಯಾರ್ಥಿಗಳಲ್ಲಿ ಸಮಾಜದ ಮತ್ತು ಪ್ರಭುತ್ವದ ಧೋರಣೆಗಳನ್ನು ವಿಮರ್ಶಿಸುವಂತೆ ಹುರಿದುಂಬಿಸುವ ವಲಯಗಳಾಗಬೇಕು. ಹೀಗಿರುವಾಗ, ಗೂಂಡಾ ಪಡೆಗಳು ವಿಶ್ವವಿದ್ಯಾಲಯದೊಳಗೆ ನುಗ್ಗಿದ್ದೂ ಅಲ್ಲದೇ ದಾಂಧಲೆ ನಡೆಸಿ, ನಿಮ್ಮದೇ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿರುವಂತಹ ಸಂದರ್ಭದಲ್ಲಿ ಅವರ ಮೇಲೆ ಕಾನೂನು ಕ್ರಮ ಜರುಗಿಸಿ, ವಿದ್ಯಾರ್ಥಿಗಳಲ್ಲಿ ಧೈರ್ಯ ತುಂಬಬೇಕಿದ್ದ ವಿಶ್ವವಿದ್ಯಾಲಯದ ಅಧಿಕಾರಿ ವರ್ಗ ವಿದ್ಯಾರ್ಥಿ-ವಿದ್ಯಾರ್ಥಿನಿಯರ ಮೇಲೆಯೇ ಎಫ್ಐಆರ್ ದಾಖಲಿಸಿದೆ. ಈ ಮೂಲಕ ವಿಶ್ವವಿದ್ಯಾಲಯವು ತಾನು ಪಠ್ಯಕ್ರಮದಲ್ಲಿ ಪ್ರತಿಪಾದಿಸುವ ವಿಮರ್ಶಾತ್ಮಕ ಚಿಂತನೆ ಮತ್ತು ಸಾಮಾಜಿಕ ನ್ಯಾಯದ ಆಶಯಗಳನ್ನೇ ಹತ್ತಿಕ್ಕಲು ಮುಂದಾಗಿದೆ ಎಂದು ಹೇಳಿದ್ದಾರೆ. ವಿಶ್ವವಿದ್ಯಾಲಯವು ಗೂಂಡಾಗಳ ಬಗ್ಗೆ ಮೃದು ಧೋರಣೆ ತೋರುತ್ತಿದ್ದು, ವಿಶ್ವವಿದ್ಯಾಲಯದ ಆವರಣಕ್ಕೆ ಅಕ್ರಮವಾಗಿ ನುಗ್ಗಿ, ಆಸ್ತಿಪಾಸ್ತಿ ಹಾನಿ ಮಾಡಿ, ಭದ್ರತಾ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ ಹೊರಗಿನ ವ್ಯಕ್ತಿಗಳ ಮೇಲೆ ಕೇವಲ ಜಾಮೀನು ಲಭ್ಯವಿರುವ ಪ್ರಕರಣಗಳನ್ನು ದಾಖಲಿಸಲಾಗಿದೆ. ಆದರೆ, ಈ ಹಿಂದೆ ನಡೆದ ಘಟನೆಗಳ ಬಗ್ಗೆ ಚರ್ಚೆ-ಸಂವಾದ ನಡೆಸಲು ಮುಂದಾದ ನಿಮ್ಮದೇ ವಿದ್ಯಾರ್ಥಿಗಳ ಮೇಲೆ ಜಾಮೀನು ರಹಿತ ಪ್ರಕರಣಗಳನ್ನು ದಾಖಲಿಸಿದ್ದೀರಿ. ಈ ನಿಲುವಿನಿಂದಾಗಿ ವಿಶ್ವವಿದ್ಯಾಲಯವು ವಿದ್ಯಾರ್ಥಿಗಳ ನಡೆಯನ್ನು ಹೊರಗಿನಿಂದ ಬಂದ ಗೂಂಡಾಗಳಿಗೆ ಸಮೀಕರಿಸಿದಂತಾಗಿದೆ. ಹಾಗಾಗಿ, ಭಿನ್ನಾಭಿಪ್ರಾಯಗಳಿಗೆ ಮತ್ತು ಸಂವಾದಕ್ಕೆ ನಿಮ್ಮ ವಿಶ್ವ ವಿದ್ಯಾನಿಲಯದಲ್ಲಿ ಸ್ಥಾನವಿಲ್ಲ ಎಂಬ ಸಂದೇಶವನ್ನು ಕರ್ನಾಟಕದ ಜನತೆಗೆ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ. ಕೂಡಲೇ ‘ಸ್ಪಾರ್ಕ್ ರೀಡಿಂಗ್ ಸರ್ಕಲ್'ನ ಭಾಗವಾಗಿರುವ ವಿದ್ಯಾರ್ಥಿ-ವಿದ್ಯಾರ್ಥಿನಿಯರ ಮೇಲೆ ದಾಖಲಿಸಿರುವ ಪೊಲೀಸ್ ದೂರನ್ನು ತಕ್ಷಣವೇ ಹಿಂಪಡೆಯಬೇಕು. ಈ ಮೂಲಕ ವಿಶ್ವವಿದ್ಯಾಲಯವು ವಿದ್ಯಾರ್ಥಿ-ವಿದ್ಯಾರ್ಥಿನಿಯರ, ಪೋಷಕರ ವಿಶ್ವಾಸವನ್ನು ಮರಳಿ ಗಳಿಸುತ್ತದೆ ಮತ್ತು ಶೈಕ್ಷಣಿಕ ಸ್ವಾತಂತ್ರ್ಯದ ಬದ್ಧತೆಯನ್ನು ಎತ್ತಿಹಿಡಿಯುತ್ತದೆ ಎಂದು ನಾವು ನಂಬಿದ್ದೇವೆ ಎಂದು ತಿಳಿಸಿದ್ದಾರೆ.
ಆರೆಸೆಸ್ಸ್ ನಿಷೇಧಿಸಲು ಸಾಧ್ಯವಿಲ್ಲ : ಸಚಿವ ಸತೀಶ್ ಜಾರಕಿಹೊಳಿ
ಬೆಂಗಳೂರು : ‘ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು(ಆರೆಸೆಸ್ಸ್) ಯಾರೂ ನಿಷೇಧ ಮಾಡಿಲ್ಲ, ಯಾರೂ ನಿಷೇಧ ಮಾಡಲು ಆಗುವುದಿಲ್ಲ’ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ. ಸೋಮವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಆರೆಸೆಸ್ಸ್ ಸಂಘಟನೆ ನಿಷೇಧಕ್ಕೂ ಮತ್ತು ಅದರ ಕಾರ್ಯ ಚಟುವಟಿಕಗಳನ್ನು ನಿರ್ಬಂಧಿಸುವುದಕ್ಕೂ ವ್ಯತ್ಯಾಸವಿದೆ. ನಮ್ಮ ಸರಕಾರ ಅಥವಾ ಬೇರೆ ಯಾವುದೇ ಸರಕಾರವೂ ಆರೆಸೆಸ್ಸ್ ಅನ್ನು ನಿಷೇಧಿಸುವ ಬಗ್ಗೆ ಎಲ್ಲಿಯೂ ಹೇಳಿಲ್ಲ ಎಂದು ನುಡಿದರು.
ದೈವ ಪಾತ್ರದ ಅಪಹಾಸ್ಯ; ರಣವೀರ್ ಸಿಂಗ್ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಸರ್ಕಾರಕ್ಕೆ ಕೊನೇ ಅವಕಾಶ ನೀಡಿದ ಹೈಕೋರ್ಟ್
ಬೆಂಗಳೂರು : ಕಾಂತಾರ ಚಾಪ್ಟರ್-1 ಚಿತ್ರದ ದೈವಪಾತ್ರಗಳನ್ನು ಅಪಹಾಸ್ಯ ಮಾಡಿ, ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದಲ್ಲಿ ದಾಖಲಾಗಿರುವ ಕ್ರಿಮಿನಲ್ ಪ್ರಕರಣ ರದ್ದು ಕೋರಿ ಬಾಲಿವುಡ್ ನಟ ರಣವೀರ್ ಸಿಂಗ್ ಸಲ್ಲಿಸಿರುವ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಸರ್ಕಾರಕ್ಕೆ ಹೈಕೋರ್ಟ್ ಅಂತಿಮ ಅವಕಾಶ ನೀಡಿದೆ. ಪ್ರಕರಣ ಸಂಬಂಧ ನಗರದ ಮ್ಯಾಜಿಸ್ಟ್ರೇಟ್ ಕೋರ್ಟ್ನಲ್ಲಿ ದಾಖಲಾಗಿರುವ ಖಾಸಗಿ ದೂರು ಹಾಗೂ ಹೈಗ್ರೌಂಡ್ಸ್ ಠಾಣೆ ಪೊಲೀಸರು ದಾಖಲಿಸಿರುವ ಎಫ್ಐಆರ್ ರದ್ದು ಕೋರಿ ರಣವೀರ್ ಸಿಂಗ್ ಸಲ್ಲಿಸಿರುವ ಕ್ರಿಮಿನಲ್ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು. ಪ್ರಕರಣದ ಖಾಸಗಿ ದೂರುದಾರರಾದ ಪ್ರಶಾಂತ್ ಮೆಥಲ್ ಪರ ವಕೀಲರು ಅರ್ಜಿಗೆ ಆಕ್ಷೇಪಣೆ ಸಲ್ಲಿಸಿರುವುದಾಗಿ ನ್ಯಾಯಪೀಠಕ್ಕೆ ತಿಳಿಸಿದರು. ಹೈಗ್ರೌಂಡ್ಸ್ ಠಾಣೆ ಪೊಲೀಸರ ಪರ ರಾಜ್ಯ ಹೆಚ್ಚುವರಿ ಸರ್ಕಾರಿ ಅಭಿಯೋಜಕ ಬಿ.ಎನ್. ಜಗದೀಶ್ ಅವರು ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡುವಂತೆ ಕೋರಿದರು. ಇದನ್ನು ಪರಿಗಣಿಸಿದ ನ್ಯಾಯಪೀಠ, ಆಕ್ಷೇಪಣೆ ಸಲ್ಲಿಕೆಗೆ ಇದೇ ಕೊನೆಯ ಅವಕಾಶ ನೀಡುತ್ತಿರುವುದಾಗಿ ತಿಳಿಸಿ ವಿಚಾರಣೆಯನ್ನು ಮಾರ್ಚ್ 17ಕ್ಕೆ ಮುಂದೂಡಿತು. ಜತೆಗೆ, ರಣವೀರ್ ಸಿಂಗ್ ವಿರುದ್ಧ ಬಲವಂತದ ಕ್ರಮಕೈಗೊಳ್ಳದಂತೆ ಪೊಲೀಸರಿಗೆ ಸೂಚಿಸಿ ಫೆಬ್ರವರಿ 24ರಂದು ಹೊರಡಿಸಿದ್ದ ಮಧ್ಯಂತರ ಆದೇಶವನ್ನು ಅರ್ಜಿಯ ಮುಂದಿನ ವಿಚಾರಣೆವರೆಗೆ ವಿಸ್ತರಿಸಿತು.
ಮಧ್ಯಪ್ರಾಚ್ಯದಲ್ಲಿ ಸಿಲುಕಿದ 230 ಕನ್ನಡಿಗರು : ಮುನೀಶ್ ಮೌದ್ಗಿಲ್
ಬೆಂಗಳೂರು : ಇತ್ತೀಚೆಗೆ ಮಧ್ಯಪ್ರಾಚ್ಯದ ವಿವಿಧ ದೇಶಗಳಿಂದ ಸುಮಾರು 278 ಜನರು ಸುರಕ್ಷಿತವಾಗಿ ಕರ್ನಾಟಕ ರಾಜ್ಯಕ್ಕೆ ಮರಳಿದ್ದು, ಸುಮಾರು 230 ಕನ್ನಡಿಗರು ಮಧ್ಯಪ್ರಾಚ್ಯದ ವಿವಿಧ ದೇಶಗಳಲ್ಲಿ ಸಿಲುಕಿದ್ದಾರೆ ಎಂದು ವಿಪತ್ತು ನಿರ್ವಹಣೆ, ಭೂಮಿ ಮತ್ತು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮುನೀಶ್ ಮೌದ್ಗಿಲ್ ಮಾಹಿತಿ ನೀಡಿದ್ದಾರೆ. ಸೋಮವಾರ ಸಂಬಂಧ ಪ್ರಕಟನೆ ಹೊರಡಿಸಿರುವ ಅವರು, ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿಗಳು ಎಲ್ಲ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿ, ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಸಿಲುಕಿರುವ ಭಾರತೀಯರನ್ನು ಸುರಕ್ಷಿತ ಕರೆ ತರುವ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ. ಹಾಗೆಯೇ ಆ ಪ್ರದೇಶದಲ್ಲಿ ಸಿಲುಕಿರುವ ಕನ್ನಡಿಗರ ಪಟ್ಟಿಯನ್ನು ಹಂಚಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸೌದಿ ಅರೇಬಿಯಾ ಸೇರಿ ಇತರ ವಿಮಾನ ನಿಲ್ದಾಣಗಳಲ್ಲಿ ವಿಮಾನ ಯಾನಗಳು ಭಾಗಶಃ ಪುನರಾರಂಭವಾಗುತ್ತಿವೆ. ಭಾರತೀಯ ಮತ್ತು ವಿದೇಶಿ ವಿಮಾನಯಾನ ಸಂಸ್ಥೆಗಳು ಕಾರ್ಯಾಚರಣೆಯನ್ನು ನಡೆಸುತ್ತಿದ್ದು, ಅಲ್ಲಿರುವ ಭಾರತೀಯ ಪ್ರಜೆಗಳು ಹಿಂತಿರುಗಿ ಬರಲು ಅನುಕೂಲವಾಗುವಂತೆ ವಿಮಾನ ಹಾರಾಟದ ಆವರ್ತನವನ್ನು ಹೆಚ್ಚಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಆದರೆ ಕತಾರ್ನಲ್ಲಿ ವಿಮಾನ ಗಡಿಗಳನ್ನು ಸ್ಥಗಿತ ಮಾಡಿದ್ದಾರೆ. ಹೀಗಾಗಿ ಅಲ್ಲಿನ ಅನೇಕರು ಸೌದಿ ಅರೇಬಿಯಾದ ಮೂಲಕ ಭಾರತಕ್ಕೆ ಬರಲು ಪ್ರಯತ್ನಿಸುತ್ತಿದ್ದಾರೆ. ಆದುದರಿಂದ ದೋಹಾದಲ್ಲಿರುವ ಭಾರತದ ರಾಯಭಾರ ಕಚೇರಿಯು ಅಲ್ಲಿನ ಕನ್ನಡಗರಿಗೆ ಅರೇಬಿಯಾದ ಮೂಲಕ ಭಾರತಕ್ಕೆ ಬರಲು ಅನುಕೂಲವಾಗುವಂತೆ ವೀಸಾವನ್ನು ಒದಗಿಸಬೇಕು ಎಂದು ರಾಜ್ಯ ಸರಕಾರವು ಕೇಂದ್ರ ಸರಕಾರಕ್ಕೆ ಮನವಿ ಮಾಡಿದೆ ಎಂದು ಮುನೀಶ್ ಮೌದ್ಗಿಲ್ ಹೇಳಿದ್ದಾರೆ. ಇನ್ನು ರಾಜ್ಯಮಟ್ಟದಲ್ಲಿ ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ ಮತ್ತು ಎಲ್ಲ ಜಿಲ್ಲಾ ತುರ್ತು ಕಾರ್ಯಾಚರಣೆ ಕೇಂದ್ರಗಳು ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲು ದಿನದ 24ಗಂಟೆಗಳ ಕಾಲವೂ ಕಾರ್ಯನಿರ್ವಹಿಸುತ್ತಿವೆ. ಹಾಗೆಯೇ ಪೀಡಿತ ವ್ಯಕ್ತಿಗಳು ಮತ್ತು ಅವರ ಕುಟುಂಬಗಳಿಗೆ ನೆರವು ನೀಡಲು ಕೇಂದ್ರಗಳ ಶ್ರಮಿಸುತ್ತಿವೆ. ಹೀಗಾಗಿ ಕರ್ನಾಟಕದ ಜನರು ಮಧ್ಯಪ್ರಾಚ್ಯದ ಸ್ಥಳೀಯ ಸರಕಾರಗಳು ಹೊರಡಿಸಿದ ಮಾರ್ಗಸೂಚಿಗಳು ಮತ್ತು ಸಲಹೆಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು. ಭಾರತೀಯ ರಾಯಭಾರ ಕಚೇರಿಗಳ ಸಂಪರ್ಕದಲ್ಲಿ ಇರಬೇಕು ಎಂದು ಅವರು ಸಲಹೆ ನೀಡಿದ್ದಾರೆ.
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ
Abhiskeh Sharma: ಭಾರತ ತಂಡ ಟಿ20 ವಿಶ್ವಕಪ್ ಗೆಲುವಿನ ಬೆನ್ನಲ್ಲೇ, ಸ್ಟಾರ್ ಓಪನರ್ ಅಭಿಷೇಕ್ ಶರ್ಮಾ ಅವರು ಪಂದ್ಯದ ನಂತರದ ಪತ್ರಿಕಾಗೋಷ್ಠಿಯಲ್ಲಿ ತೋರಿದ ಸರಳತೆ ಮತ್ತು ಪ್ರಾಮಾಣಿಕತೆ ಎಲ್ಲರ ಮನಗೆದ್ದಿದೆ. ಅವರ ಹೇಳಿಕೆ ಇದೀಗ ಸಾಮಾಜಿಕ ಜಾಲಯಾಣದಲ್ಲಿ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ. ಪಂದ್ಯದ ಬಳಿಕ ನಡೆದ ಮಾಧ್ಯಮ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಭಿಷೇಕ್ ಶರ್ಮಾ, ತುಂಬಾ ಸಮಯದ ನಂತರ
ಕೊಪ್ಪಳ | ಊಟದಲ್ಲಿ ಜಿರಳೆ ಪತ್ತೆ ಆರೋಪ: ಹಾಸ್ಟೆಲ್ ವಿದ್ಯಾರ್ಥಿಗಳಿಂದ ಪ್ರತಿಭಟನೆ
ಕೊಪ್ಪಳ: ರಾತ್ರಿಯ ಊಟದಲ್ಲಿ ಜಿರಳೆ ಪತ್ತೆಯಾಗಿದೆ ಎಂದು ಆರೋಪಿಸಿ ಎಸ್ಸಿ–3 ಹಾಸ್ಟಲ್ ವಿದ್ಯಾರ್ಥಿಗಳು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ. ಈ ವೇಳೆ ಎಸ್ಸಿ–2 ಹಾಸ್ಟಲ್ನಲ್ಲಿನ ಅವ್ಯವಸ್ಥೆ ಹಾಗೂ ವಾರ್ಡನ್ ಮತ್ತು ಸಿಬ್ಬಂದಿಗಳ ಬೇಜವಾಬ್ದಾರಿ ವರ್ತನೆ ಕುರಿತು ವಿದ್ಯಾರ್ಥಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳಿಗೆ ಬಾಳೆಹಣ್ಣು ನೀಡದಿರುವುದು, ಕೊಳೆತ ತರಕಾರಿಯಿಂದ ಅಡುಗೆ ತಯಾರಿಸುವುದು, ಸರಿಯಾಗಿ ಬೇಯದ ಊಟ ಬಡಿಸುವುದು ಸೇರಿದಂತೆ ಹಲವು ಸಮಸ್ಯೆಗಳು ಇರುವುದಾಗಿ ಅವರು ಆರೋಪಿಸಿದರು. ಈ ಸಮಸ್ಯೆಗಳನ್ನು ತಕ್ಷಣ ಪರಿಹರಿಸಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಯಾರಾದರೂ ಸಮಸ್ಯೆಗಳ ಬಗ್ಗೆ ಮಾತನಾಡಿದರೆ “ನಿಮ್ಮ ಫೈಲ್ ತೆಗೆದುಕೊಂಡು ಬನ್ನಿ, ಹಾಸ್ಟಲ್ನಿಂದ ಅಮಾನತು ಮಾಡುತ್ತೇನೆ” ಎಂದು ಬೆದರಿಕೆ ಹಾಕಲಾಗುತ್ತಿದೆ ಎಂದು ವಿದ್ಯಾರ್ಥಿಗಳು ದೂರಿದರು. ಸ್ಥಳಕ್ಕೆ ಭೇಟಿ ನೀಡಿದ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರು ಮಾತನಾಡಿ, ವಾರ್ಡನ್ಗಳ ಕೊರತೆ ಇರುವುದರಿಂದ ಸಮಸ್ಯೆಗಳು ಉಂಟಾಗಿವೆ. ಸಾಧ್ಯವಾದಷ್ಟು ಉತ್ತಮ ಅಡುಗೆ ವ್ಯವಸ್ಥೆ ಮಾಡಲು ಪ್ರಯತ್ನಿಸುತ್ತೇವೆ. ಸಾಧ್ಯವಾಗದಿದ್ದರೆ ನಿಮಗೆ ದೊರೆಯಬೇಕಾದ ಹಣವನ್ನು ನೀಡುತ್ತೇವೆ ಎಂದು ಹೇಳಿದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ವಿದ್ಯಾರ್ಥಿಗಳು ವಾರ್ಡನ್ ಬಸವರಾಜ ಅವರನ್ನು ವರ್ಗಾವಣೆ ಮಾಡಬೇಕು ಹಾಗೂ ಹಾಸ್ಟಲ್ನಲ್ಲಿ ಮೂಲ ಸೌಕರ್ಯಗಳನ್ನು ಒದಗಿಸಬೇಕು ಎಂದು ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಉಪ ನಿರ್ದೇಶಕರು “ತಮಗೆ ಬೇಕಾದ್ದು ಮಾಡಿಕೊಳ್ಳಿ” ಎಂದು ಹೇಳಿದರೆಂದು ಆರೋಪಿಸಿದ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿ ಧರಣಿಗೆ ಮುಂದಾದರು. ವಿದ್ಯಾರ್ಥಿಗಳ ಆಕ್ರೋಶ ಹೆಚ್ಚುತ್ತಿದ್ದಂತೆ ಉಪ ನಿರ್ದೇಶಕ ಅಜ್ಜಪ್ಪ ಸೋಲಗಾಡ ಅವರು ಸ್ಥಳದಿಂದ ತೆರಳಿದರು. ಆದರೂ ವಿದ್ಯಾರ್ಥಿಗಳು ಧರಣಿಯನ್ನು ಮುಂದುವರಿಸಿದರು.
ಅಮೆರಿಕ ಷೇರು ಮಾರುಕಟ್ಟೆ ಮುಕ್ತಾಯದ ಬಳಿಕ ಟ್ರಂಪ್ ಸುದ್ದಿಗೋಷ್ಠಿ; ಮಹತ್ವ ಘೋಷಣೆ ಸಾಧ್ಯತೆ
ವಾಷಿಂಗ್ಟನ್, ಮಾ. 9: ಅಮೆರಿಕ ಷೇರು ಮಾರುಕಟ್ಟೆ ಮುಕ್ತಾಯದ ಬಳಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸುದ್ದಿಗೋಷ್ಠಿ ನಡೆಸುವುದಾಗಿ ಘೋಷಿಸಿದ್ದಾರೆ. ಸ್ಥಳೀಯ ಸಮಯದ ಪ್ರಕಾರ ಸಂಜೆ 5:30ಕ್ಕೆ ನಡೆಯಲಿರುವ ಈ ಸುದ್ದಿಗೋಷ್ಠಿ ಭಾರತೀಯ ಸಮಯದ ಪ್ರಕಾರ ಮಾರ್ಚ್ 10ರಂದು ಮುಂಜಾನೆ 3 ಗಂಟೆಗೆ ಆರಂಭವಾಗಲಿದೆ. “ಇಂದು ಅನೇಕ ಪ್ರಮುಖ ಸಭೆಗಳು ಮತ್ತು ದೂರವಾಣಿ ಕರೆಗಳು ನಡೆಯುತ್ತಿವೆ,” ಎಂದು ಟ್ರಂಪ್ ತಮ್ಮ ಟ್ರೂತ್ ಸೋಶಿಯಲ್ ನಲ್ಲಿ ತಿಳಿಸಿದ್ದಾರೆ. ರಿಪಬ್ಲಿಕನ್ ಪಕ್ಷದ ನಿಧಿ ಸಂಗ್ರಹಣಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಲಿದ್ದಾರೆ ಎಂದು ಹೇಳಿದ್ದಾರೆ. ಸುದ್ದಿಗೋಷ್ಠಿಯ ವಿಷಯವೇನು ಎಂಬುದನ್ನು ಅಧ್ಯಕ್ಷರು ಸ್ಪಷ್ಟಪಡಿಸಿಲ್ಲ. ಆದರೆ ಅಮೆರಿಕದ ಷೇರು ಮಾರುಕಟ್ಟೆ ಮುಕ್ತಾಯವಾದ ಬಳಿಕವೇ ಕಾರ್ಯಕ್ರಮವನ್ನು ನಿಗದಿಪಡಿಸಿರುವುದು ಗಮನಾರ್ಹವಾಗಿದೆ. ತೈಲ ಬೆಲೆಗಳು ಏರಿಕೆಯಾದ ಹಿನ್ನೆಲೆಯಲ್ಲಿ ಸೋಮವಾರ ಅಮೆರಿಕದ ಷೇರು ಮಾರುಕಟ್ಟೆಗಳು ಕುಸಿದಿವೆ. ಇದರ ನಡುವೆ ನಡೆಯುತ್ತಿರುವ ಯುದ್ಧವು ಜಾಗತಿಕ ಮಾರುಕಟ್ಟೆಗಳಿಗೆ ತೈಲ ಮತ್ತು ಅನಿಲದ ಪ್ರಮುಖ ಪೂರೈಕೆಯನ್ನು ಅಲ್ಲೋಲ ಕಲ್ಲೋಲ ಮಾಡಿದೆ. ಸಂಘರ್ಷದ ಪರಿಣಾಮವಾಗಿ ವಿದೇಶಿಯರು ವ್ಯಾಪಾರ ಕೇಂದ್ರಗಳಿಂದ ಪಲಾಯನ ಮಾಡುತ್ತಿರುವ ವರದಿಗಳು ಕೇಳಿಬಂದಿವೆ. ಮಿಲಿಟರಿ ನೆಲೆಗಳು, ಸರ್ಕಾರಿ ಕಟ್ಟಡಗಳು, ತೈಲ ಹಾಗೂ ನೀರಿನ ಆಗರಗಳು, ಹೋಟೆಲ್ ಗಳು ಮತ್ತು ಕನಿಷ್ಠ ಒಂದು ಶಾಲೆ ಸೇರಿದಂತೆ ಹಲವು ಸ್ಥಳಗಳಿಗೆ ಬಾಂಬ್ ದಾಳಿಗಳು ನಡೆದಿದ್ದು, ಲಕ್ಷಾಂತರ ಜನರು ಆಶ್ರಯ ಪಡೆಯುವಂತಾಗಿದೆ ಎಂದು Aljazeera ವರದಿ ಮಾಡಿದೆ.
ವಾಷಿಂಗ್ಟನ್, ಮಾ. 9: ಅಮೆರಿಕದ ಜಾರ್ಜಿಯಾ ರಾಜ್ಯದ ಫೋರ್ಸಿತ್ ಕೌಂಟಿಯಲ್ಲಿ ಭಾರತೀಯ ಮೂಲದ ಅಮೆರಿಕದ ಕುಟುಂಬಗಳ ಸಂಖ್ಯೆ ವೇಗವಾಗಿ ಹೆಚ್ಚುತ್ತಿರುವುದನ್ನು ಟೀಕಿಸಿದ MAGA(Make America Great Again) ಬೆಂಬಲಿಗರೊಬ್ಬರ ಸಾಮಾಜಿಕ ಮಾಧ್ಯಮ ಪೋಸ್ಟ್ ಆನ್ ಲೈನ್ ನಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಸ್ಥಳೀಯ ಉದ್ಯೋಗಗಳು, ವಸತಿ ಮಾರುಕಟ್ಟೆಗಳು ಮತ್ತು ಶಾಲೆಗಳಲ್ಲಿ ಭಾರತೀಯರು ಪ್ರಾಬಲ್ಯ ಸಾಧಿಸುತ್ತಿದ್ದಾರೆ ಎಂದು ಆರೋಪಿಸಿರುವ ಅವರು, ಇದಕ್ಕೆ H-1B ವೀಸಾವೇ ಕಾರಣ ಎಂದು ಹೇಳಿದ್ದಾರೆ. ‘ಕೇಟ್’ ಎಂದು ಗುರುತಿಸಲಾದ ಬಳಕೆದಾರರು ಮಾಡಿದ ಪೋಸ್ಟ್ನಲ್ಲಿ, ಫೋರ್ಸಿತ್ ಕೌಂಟಿಯಲ್ಲಿ ಈಗ ಸುಮಾರು 35,000 ಭಾರತೀಯ ಮೂಲದ ಅಮೆರಿಕದ ಕುಟುಂಬಗಳು ವಾಸಿಸುತ್ತಿದ್ದು, ಇದು ಸ್ಥಳೀಯ ಜನಸಂಖ್ಯಾಯ ಸ್ವರೂಪವನ್ನೇ ಬದಲಾಯಿಸುತ್ತಿದೆ ಎಂದು ಹೇಳಲಾಗಿದೆ. ಕಂಪೆನಿಗಳು ಅಮೆರಿಕನ್ನರ ಬದಲಿಗೆ ವಿದೇಶಿ ಕಾರ್ಮಿಕರನ್ನು ನೇಮಿಸಿಕೊಳ್ಳುತ್ತಿವೆ ಎಂದು ಅವರು ಆರೋಪಿಸಿದ್ದು, ಅಮೆರಿಕದ ವಲಸೆ ವ್ಯವಸ್ಥೆ ಅಮೆರಿಕನ್ನರನ್ನು ಕಡೆಗಣಿಸಿ, ವಲಸಿಗರಿಗೆ ದೇಶದಲ್ಲೇ ಜೀವನ ಕಟ್ಟಿಕೊಳ್ಳಲು ಅವಕಾಶ ನೀಡುತ್ತಿದೆ ಎಂದು ಹೇಳಿದ್ದಾರೆ. “ಅಟ್ಲಾಂಟಾ ಮತ್ತು ಆಲ್ಫರೆಟ್ಟಾ ಮೂಲದ ಕಂಪೆನಿಗಳು ಪ್ರತ್ಯೇಕವಾಗಿ ವಿದೇಶಿ ಕಾರ್ಮಿಕರನ್ನು ನೇಮಿಸಿಕೊಳ್ಳುತ್ತಿವೆ. ಈಗ ದೇಶದ ಪ್ರತಿಯೊಂದು ಕೌಂಟಿಯೂ ಇದೇ ರೀತಿ ಮಾಡಲಿದೆ. ನಾವು ಅಮೆರಿಕವನ್ನು ಕಳೆದುಕೊಳ್ಳುವುದು ಹೀಗೆಯೇ,” ಎಂದು ಅವರು ತಮ್ಮ ಪೋಸ್ಟ್ ನಲ್ಲಿ ತಿಳಿಸಿದ್ದಾರೆ. ಈ ಪೋಸ್ಟ್ ಬಳಿಕ ಸಾಮಾಜಿಕ ಮಾಧ್ಯಮದಲ್ಲಿ ಹಲವರು ಇದೇ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದ್ದು, ಕೆಲವರು ದೇಶದಲ್ಲಿ ಹೆಚ್ಚುತ್ತಿರುವ ಭಾರತೀಯ ಮೂಲದ ಅಮೆರಿಕನ್ನರ ಸಂಖ್ಯೆಯನ್ನು ಟೀಕಿಸುವುದರ ಜೊತೆಗೆ ಅವರನ್ನು ಗಡೀಪಾರು ಮಾಡಬೇಕೆಂದು ಕೂಡ ಕರೆ ನೀಡಿದ್ದಾರೆ. “ಈ ವಿಷಯದ ಬಗ್ಗೆ ಸಾಕಷ್ಟು ಮಾತನಾಡಲಾಗುವುದಿಲ್ಲ. ತೆರಿಗೆದಾರರು ತಮ್ಮ ಮಕ್ಕಳ ಶಿಕ್ಷಣಕ್ಕಾಗಿ ಹಣ ಪಾವತಿಸುತ್ತಿರುವಾಗಲೇ ಅವರ ಉದ್ಯೋಗಗಳು ಕಳೆದುಹೋಗುತ್ತಿವೆ. ಇಷ್ಟು ಜನರನ್ನು ದೇಶಕ್ಕೆ ಒಳಗೆ ಬಿಡಲು ನಾವು ಮತ ಚಲಾಯಿಸಿಲ್ಲ,ಅವರು ತಮ್ಮ ದೇಶಗಳಿಗೆ ಹಿಂದಿರುಗಬೇಕು,” ಎಂದು ಒಬ್ಬ ಬಳಕೆದಾರರು ಬರೆದಿದ್ದಾರೆ. “ನ್ಯೂಜೆರ್ಸಿಯಲ್ಲಿಯೂ ಇದೇ ಸಮಸ್ಯೆ ಇದೆ. ಅಮೆರಿಕನ್ನರನ್ನು ಇಲಾಖೆಗಳು, ಕಂಪೆನಿಗಳು ಮತ್ತು ಇಡೀ ಕೈಗಾರಿಕೆಗಳಿಂದ ಹೊರಗಿಡಲಾಗುತ್ತಿದೆ. ಅಮೆರಿಕನ್ನರ ವಿರುದ್ಧ ತಾರತಮ್ಯ ನಡೆಯುತ್ತಿದೆ. ಇದು ಆಕ್ರೋಶವನ್ನುಂಟುಮಾಡುತ್ತದೆ,” ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. “ಭಾರತದ ಜನರು ಭಾರತದಲ್ಲೇ ಏಕೆ ಉಳಿಯಲು ಸಾಧ್ಯವಿಲ್ಲ?” ಎಂದು ಮತ್ತೊಬ್ಬ ಬಳಕೆದಾರರು ಪ್ರಶ್ನಿಸಿದ್ದಾರೆ. ►‘ಲಿಟಲ್ ಇಂಡಿಯಾ’ವಾಗಿ ರೂಪಾಂತರವಾಗುತ್ತಿರುವ ಫೋರ್ಸಿತ್ ಕೌಂಟಿ ಜಾರ್ಜಿಯಾ ರಾಜ್ಯದ ಈಶಾನ್ಯ ಭಾಗದಲ್ಲಿರುವ ಫೋರ್ಸಿತ್ ಕೌಂಟಿಯಲ್ಲಿ ಪ್ರೌಢಶಾಲೆಗಳಿಂದ ಹಿಡಿದು ಕಚೇರಿಗಳವರೆಗೆ ಹಲವಾರು ಸಾರ್ವಜನಿಕ ಸ್ಥಳಗಳ ಸಭಾಂಗಣಗಳು ಮತ್ತು ಕಾರ್ಯಸ್ಥಳಗಳಲ್ಲಿ ಭಾರತೀಯ ಮೂಲದ ಅಮೆರಿಕನ್ನರ ಉಪಸ್ಥಿತಿ ಗಮನಾರ್ಹವಾಗಿ ಹೆಚ್ಚಾಗಿದೆ. ಒಮ್ಮೆ ಬಹುಪಾಲು ಶ್ವೇತ ವರ್ಣೀಯ ಜನಸಂಖ್ಯೆ ಹೊಂದಿದ್ದ ಹಾಗೂ 1912ರಲ್ಲಿ ಆಫ್ರಿಕನ್-ಅಮೆರಿಕನ್ ಜನಸಂಖ್ಯೆಯನ್ನು ಹೊರಹಾಕಿದ ಇತಿಹಾಸಕ್ಕಾಗಿ ಪ್ರಸಿದ್ಧವಾಗಿದ್ದ ಈ ಕೌಂಟಿಯಲ್ಲಿ, 2010ರಿಂದ ವಲಸಿಗರ ಹೆಚ್ಚಿದ ಪ್ರವಾಹದೊಂದಿಗೆ ಜನಸಂಖ್ಯಾ ಸ್ವರೂಪದಲ್ಲಿ ದೊಡ್ಡ ಬದಲಾವಣೆ ಕಂಡುಬಂದಿದೆ. ಈ ಕೌಂಟಿ ಈಗ ಜಾರ್ಜಿಯಾ ರಾಜ್ಯದಲ್ಲಿ ಅತ್ಯಧಿಕ ಭಾರತೀಯ-ಅಮೆರಿಕನ್ ಜನಸಂಖ್ಯೆ ಹೊಂದಿರುವ ಪ್ರದೇಶಗಳಲ್ಲಿ ಒಂದಾಗಿರುವುದು ಅನೇಕ ಸ್ಥಳೀಯ ಅಮೆರಿಕನ್ನರಿಗೆ ಅಚ್ಚರಿಯುಂಟ ಮಾಡಿದೆ. usafacts.org ಮಾಹಿತಿಯ ಪ್ರಕಾರ, 2010ರಿಂದ 2022ರವರೆಗೆ ಕೌಂಟಿಯ ಏಷ್ಯನ್ ಜನಸಂಖ್ಯೆ ಮೂರು ಪಟ್ಟು ಹೆಚ್ಚಾಗಿದೆ. ಇತ್ತೀಚಿನ ಜನಗಣತಿ ಆಧಾರಿತ ಅಂದಾಜುಗಳ ಪ್ರಕಾರ, ಸುಮಾರು 35,000 ಭಾರತೀಯ-ಅಮೆರಿಕನ್ನರು ಫೋರ್ಸಿತ್ ಕೌಂಟಿಯಲ್ಲಿ ವಾಸಿಸುತ್ತಿದ್ದಾರೆ. ಜನಸಂಖ್ಯೆಯಷ್ಟೇ ಅಲ್ಲ, ಅವರ ಸಂಸ್ಕೃತಿಯೂ ಸ್ಥಳೀಯ ಶಾಲೆಗಳು ಮತ್ತು ಸಮುದಾಯ ಕಾರ್ಯಕ್ರಮಗಳಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ. ಗಾಳಿಪಟ ಹಾರಿಸುವಿಕೆ ಮತ್ತು ಗರ್ಬಾ ಹಬ್ಬಗಳನ್ನು ಸಹ ಅಧಿಕೃತವಾಗಿ ಸಂಭ್ರಮದಿಂದ ಇಲ್ಲಿ ಆಚರಿಸಲಾಗುತ್ತಿದೆ. ಸ್ಥಳೀಯರಿಗೆ ಇದು ಹೊಸ ಸಂಸ್ಕೃತಿಯನ್ನು ಅರಿಯುವ ಅವಕಾಶ ಒದಗಿಸುತ್ತಿದೆ. “ಕಳೆದ ವರ್ಷ ಲ್ಯಾಂಬರ್ಟ್ ಶಾಲೆಯಲ್ಲಿ ನಾವು ದೊಡ್ಡ ಗರ್ಬಾ ರಾತ್ರಿಯನ್ನು ಯೋಜಿಸಿದ್ದೆವು. ಅದು ನನ್ನ ಸ್ವಂತ ಸಂಸ್ಕೃತಿಯೊಂದಿಗೆ ಮನೆಯಲ್ಲಿರುವ ಅನುಭವ ನೀಡಿತು. ಜೊತೆಗೆ ಅದನ್ನು ಭಾರತೀಯರಲ್ಲದ ಮತ್ತು ವಿಭಿನ್ನ ಹಿನ್ನೆಲೆಯವರೊಂದಿಗೆ ಹಂಚಿಕೊಳ್ಳಲು ಸಾಧ್ಯವಾಯಿತು,” ಎಂದು ಲ್ಯಾಂಬರ್ಟ್ ಶಾಲೆಯ ವಿದ್ಯಾರ್ಥಿನಿ ಸ್ನೇಹಾ ರಾಮಿನೇನಿ NRI ಪಲ್ಸ್ ಗೆ ತಿಳಿಸಿದ್ದಾರೆ. “ನಾನು ಈ ಕಾರ್ಯಕ್ರಮಗಳಿಗೆ ನಿಜವಾಗಿಯೂ ಹೋಗುತ್ತೇನೆ,” ಎಂದು ಭಾರತೀಯರಲ್ಲದ ವಿದ್ಯಾರ್ಥಿನಿ ಕಾಸಿಯಾ ರೊಮಾಂಚಿಕ್ ಹೇಳಿದ್ದಾರೆ. “ನನಗೆ ಅದರ ಬಗ್ಗೆ ತಿಳಿದಿರುವ ಯಾರೊಂದಿಗಾದರೂ ಹೋಗುವುದು ಉತ್ತಮ. ಅವರು ಅದನ್ನು ನನಗೆ ಪರಿಚಯಿಸಬಹುದು,” ಎಂದು ಅವರು ಹೇಳಿದ್ದಾರೆ. ವಿದ್ಯಾರ್ಥಿಗಳು ಈ ಸಾಂಸ್ಕೃತಿಕ ವಿನಿಮಯವನ್ನು ಸ್ವೀಕರಿಸುತ್ತಿದ್ದರೂ, ದೇಶದಲ್ಲಿ ಕಾನೂನುಬದ್ಧವಾಗಿ ವಾಸಿಸುವ ಭಾರತೀಯ-ಅಮೆರಿಕನ್ನರ ಸಂಖ್ಯೆಯ ಬಗ್ಗೆ ಈಗಾಗಲೇ ಅಸಮಾಧಾನ ವ್ಯಕ್ತಪಡಿಸುತ್ತಿರುವ MAGA ಬೆಂಬಲಿಗರಿಗೆ ಫೋರ್ಸಿತ್ ಕೌಂಟಿ ಎಚ್ಚರಿಕೆಯ ಸಂಕೇತವಾಗಿ ಕಾಣುತ್ತಿದೆ. ವಿಪರ್ಯಾಸವೆಂದರೆ, ಇದೇ ಕೌಂಟಿಯಲ್ಲಿ 1987ರಲ್ಲಿ ನಾಗರಿಕ ಹಕ್ಕುಗಳ ಹೋರಾಟಗಾರ ಜೆಸ್ಸಿ ಜಾಕ್ಸನ್ ‘ಬ್ರದರ್ಹುಡ್ ಮಾರ್ಚ್’ ನಡೆಸಿದ್ದರು. ಆಗ ಕೌಂಟಿಯ ಜನಾಂಗೀಯ ತಾರತಮ್ಯ ಮತ್ತು ಹಿಂಸಾಚಾರದ ಇತಿಹಾಸವನ್ನು ಅವರು ಪ್ರತಿಭಟಿಸಿದ್ದರು. ಇಂದು ಇದೇ ಫೋರ್ಸಿತ್ ಕೌಂಟಿ ಜನಸಂಖ್ಯಾ ಸ್ವರೂಪದಲ್ಲಿ ಸಂಪೂರ್ಣ ವಿಭಿನ್ನ ಚಿತ್ರಣ ನೀಡುತ್ತಿದ್ದು, ಆಧುನಿಕ ಅಮೆರಿಕದ ಬದಲಾಗುತ್ತಿರುವ ಸಾಮಾಜಿಕ ಮುಖವನ್ನು ಪ್ರತಿಬಿಂಬಿಸುವ ಪ್ರದೇಶವಾಗಿ ಪರಿಣಮಿಸಿದೆ. ಸೌಜನ್ಯ: timesofindia
LPG ಸಿಲಿಂಡರ್ ಪೂರೈಕೆ ಸ್ಥಗಿತ: ಬೆಂಗಳೂರಿನ ಹಲವು ಹೋಟೆಲ್ಗಳು ಮಂಗಳವಾರದಿಂದ ಬಂದ್! ಊಟ ತಿಂಡಿಗೆ ಸಮಸ್ಯೆ
ಇಸ್ರೇಲ್ ಇರಾನ್ ಯುದ್ಧ ಹಿನ್ನೆಲೆ ಹೋಟೆಲ್ಗಳಿಗೆ ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ಗಳ ಪೂರೈಕೆ ಸ್ಥಗಿತವಾಗಿದೆ. ಈ ಹಿನ್ನೆಲೆ ಬೆಂಗಳೂರಿನ ಹೋಟೆಲ್ಗಳನ್ನು ಬಂದ್ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಗ್ಯಾಸ್ ಇಲ್ಲದೆ ನಾವು ಅಡುಗೆ ಮಾಡುವುದು ಅಸಾಧ್ಯ ಎಂದು ಹೋಟೆಲ್ ಮಾಲೀಕರ ಸಂಘ ತಿಳಿಸಿದೆ. ಇದರಿಂದ ನಗರದ ಲಕ್ಷಾಂತರ ಮಂದಿಗೆ ಊಟ ತಿಂಡಿ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ.
ಹಾರ್ಮುಜ್ ಜಲಸಂಧಿಯಲ್ಲಿ ವಾಣಿಜ್ಯ ಹಡಗುಗಳಿಗೆ ಬೆಂಗಾವಲು ಕಾರ್ಯಾಚರಣೆ: ಫ್ರಾನ್ಸ್ ಯೋಜನೆ
ಅಮೆರಿಕ-ಇಸ್ರೇಲ್ ಹೊತ್ತಿಸಿದ ಬೆಂಕಿಯ ನಡುವೆ ಪರಿಸ್ಥಿತಿ ಗಂಭೀರ ಎಂದ ಇರಾನ್
ವಿರಾಟ್ ಕೊಹ್ಲಿಯ ದಶಕದ ಹಳೆಯ ದಾಖಲೆ ಅಳಿಸಿದ ಸಂಜು ಸ್ಯಾಮ್ಸನ್
T20 World Cup: 2026ರ ಐಸಿಸಿ ಟಿ20 ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ಅಧಿಪತ್ಯ ಸಾಧಿಸುವುದರ ಜೊತೆಗೆ, ವೈಯಕ್ತಿಕ ದಾಖಲೆಗಳ ಪುಟದಲ್ಲೂ ಹೊಸ ಇತಿಹಾಸ ಸೃಷ್ಟಿಯಾಗಿದೆ. ಸ್ಟಾರ್ ಬ್ಯಾಟರ್ ಸಂಜು ಸ್ಯಾಮ್ಸನ್, ವಿಶ್ವಕಪ್ನ ಒಂದೇ ಆವೃತ್ತಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಆಟಗಾರ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ಈ ಮೂಲಕ ಕೊಹ್ಲಿ ದಾಖಲೆ ಮುರಿದಿದ್ದಾರೆ. ಈವರೆಗೆ ಭಾರತದ

29 C