Explained- ದಕ್ಷಿಣ ಆಫ್ರಿಕಾ ವಿರುದ್ಧ ಉತ್ತಮ ಆರಂಭ ಪಡೆದ ಭಾರತ ಎಡವಿದ್ದೆಲ್ಲಿ? ಅಹ್ಮದಾಬಾದ್ ಸೋಲಿಗೆ 7 ಕಾರಣ
India Vs South Africa- ಗೆಲ್ಲಬಹುದಾಗಿದ್ದ ಪಂದ್ಯವನ್ನು ಭಾರತ ಕೆಟ್ಟದಾಗಿ ಸೋತಿದೆ. ಎರಡು ಅತ್ಯುತ್ತಮ ತಂಡಗಳ ಜಟಾಪಟಿಯಲ್ಲಿ ಜಾಣ್ಮೆ ತೋರಿದ ದಕ್ಷಿಣ ಆಫ್ರಿಕಾ ತಂಡ ಪಂದ್ಯವನ್ನು ಸುಲಭವಾಗಿ ಗೆದ್ದಿತು. ಈಗ ಪಂದ್ಯವನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ಭಾರತಕ್ಕೆ ಪಂದ್ಯಕ್ಕೆ ಮರಳಲು ಹಲವು ಅವಕಾಶಗಳಿದ್ದವು ಎಂಬುದು ಸ್ಪಷ್ಟ. ಆದರೆ ಯಾವ ಹಂತದಲ್ಲೂ ಭಾರತದ ಆಟಗಾರರು ಈ ನಿಟ್ಟಿನಲ್ಲಿ ಯಶಸ್ವಿಯಾಗದ್ದು ದಕ್ಷಿಣ ಆಪ್ರಿಕಾ ತಂಡಕ್ಕೆ ಗೆಲುವಿನ ಹಾದಿಯನ್ನು ಸುಗಮಗೊಳಿಸಿತು. ಹಾಗಿದ್ದರೆ ಭಾರತ ತಂಡ ಎಡವಿದ್ದೆಲ್ಲಿ? ಇಲ್ಲಿದೆ ಈ ಬಗ್ಗೆ ವಿಶ್ಲೇಷಣೆ
ಅಧಿಕಾರ ಹಿಂದೂಗಳ ಕೈಯಲ್ಲಿದ್ದರೂ, ಮುಸ್ಲಿಮ್ ರಾಷ್ಟ್ರದ ಸುಳ್ಳು ಹುಟ್ಟುಹಾಕಿದ್ದಾರೆ : ಎಂ.ಜಿ.ಹೆಗಡೆ
ಬೆಂಗಳೂರು : ಇಡೀ ದೇಶದ ಚುಕ್ಕಾಣಿ ಹಿಂದೂಗಳ ಕೈಯಲ್ಲಿದೆ. ಅದರಲ್ಲೂ ಬಿಜೆಪಿ ಪಕ್ಷವೇ ಹೆಚ್ಚಿನ ರಾಜ್ಯಗಳಲ್ಲಿ ಅಧಿಕಾರ ನಡೆಸುತ್ತಿದೆ. ಆದರೂ, ಈ ಆರೆಸ್ಸೆಸ್ ‘ಭಾರತ ಮುಸ್ಲಿಮ್ ರಾಷ್ಟ್ರವಾಗುತ್ತದೆ’ ಎನ್ನುವ ಸುಳ್ಳುಗಳನ್ನು ಹುಟ್ಟುಹಾಕಿದೆ ಎಂದು ಲೇಖಕ ಎಂ.ಜಿ.ಹೆಗಡೆ ಆತಂಕ ವ್ಯಕ್ತಪಡಿಸಿದರು. ಶನಿವಾರ ನಗರದ ಗಾಂಧಿ ಭವನದ ವಿನೋಭಾ ಕೇಂದ್ರದಲ್ಲಿ ಆಯೋಜಿಸಿದ್ದ ತಮ್ಮ ‘ಭಾರತ ಮುಸ್ಲಿಮ್ ರಾಷ್ಟ್ರ ಆಗುವುದೇ?’ ಹೊಸ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಪ್ರಾಸ್ತವಿಕ ಮಾತುಗಳನ್ನಾಡಿದ ಅವರು, ಸಾಮಾಜಿಕ ಜಾಲತಾಣಗಳ ಮೂಲಕ ಮುಸ್ಲಿಮರು ಈ ದೇಶವನ್ನು ಇಸ್ಲಾಮ್ ರಾಷ್ಟ್ರವಾಗಿ ಪರಿವರ್ತನೆ ಮಾಡುತ್ತಾರೆ. ಅದು 2047ರಲ್ಲಿಯೇ ಆಗುತ್ತದೆ ಎಂಬ ಸುಳ್ಳನ್ನು ಸತ್ಯದಂತೆ ಬಿಂಬಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು 1986ರ ನಂತರ ದೇಶದಲ್ಲಿ ಬಿಜೆಪಿ ಹಿಂದುತ್ವ, ಮತೀಯವಾದ ಮುಂದಿಟ್ಟು ರಾಜಕಾರಣ ಮಾಡಿ ಯಶಸ್ವಿಯಾಯಿತು, ಇದಕ್ಕೆ ನಾನೂ ಸಹ ಸಾಕ್ಷಿ. ಘರ್ಷಣೆಯಿಂದ ಮತಗಳು ಕೇಂದ್ರೀಕೃತವಾಗುತ್ತವೆ. ಘರ್ಷಣೆಯಾಗಲು ಸಂಘಟನೆಬೇಕು. ಬಲವಾದ ಸಂಘಟನೆ ರೂಪುಗೊಳ್ಳಲು ಸಂಕಥನ ಸೃಷ್ಟಿಯಾಗಬೇಕು. ಅದಕ್ಕಾಗಿಯೇ, ಲವ್ ಜಿಹಾದ್, ಮತಾಂತರ, ಹಲಾಲ್ ಕುರಿತ ವಿವಾದ ಸೃಷ್ಟಿಸಲಾಯಿತು. ಇದರಲ್ಲಿ ಕೆಲವು ಕೆಲಸ ನಾನೂ ಮಾಡಿದ್ದೇನೆ. ಧೈರ್ಯವಿದ್ದವರು ಸೂಕ್ತ ದಾಖಲೆ ಸಹಿತ ನನ್ನ ಬಳಿ ಕ್ಯಾಮೆರಾ ಮುಂದೆ ಚರ್ಚೆಗೆ ಬನ್ನಿ ಎಂದು ಸವಾಲೆದರು. ಲವ್ ಜಿಹಾದ್ ಎನ್ನುವ ಶಬ್ದ ಸೃಷ್ಟಿಸಿ ಮತ್ತಷ್ಟು ಗೊಂದಲ ಹುಟ್ಟು ಹಾಕುವ ಕೆಲಸ ಸಂಘ ಪರಿವಾರ ಮಾಡುತ್ತಿದೆ. ರಾಜ್ಯದಲ್ಲಿಯೇ ಎಷ್ಟು ಲವ್ ಜಿಹಾದ್ ಪ್ರಕರಣಗಳು ಆಗಿವೆ. ಅದರ ಸತ್ಯತೆ ಏನಾಗಿದೆ ಎಂಬುವುದರ ಕುರಿತು ಶೀಘ್ರದಲ್ಲಿಯೇ ಮತ್ತೊಂದು ದಾಖಲೆ ಜನರ ಮುಂದೆ ಇಡಲಾಗುವುದು. ಆದರೆ, ನಾವು ಇವರ ಷಡ್ಯಂತ್ರಗಳಿಗೆ ಬಲಿಯಾಗದೆ, ನೇರವಾಗಿ ಉತ್ತರಿಸುವ ಕೆಲಸ ಮಾಡಬೇಕಾಗಿದೆ ಎಂದು ಅವರು ಉಲ್ಲೇಖಿಸಿದರು.
ತಳ ಸಮುದಾಯಗಳ ಗುರುತಿಸಿ ಅವಕಾಶಕೊಡುವ ಪ್ರಯತ್ನ ನಡೆಯಬೇಕು : ನಿಕೇತ್ರಾಜ್ ಮೌರ್ಯ
‘ಜಾನಪದ ಸುಗ್ಗಿ ಸಂಭ್ರಮ’ ಕಾರ್ಯಕ್ರಮ
ಯಾದಗಿರಿ | ಅಬ್ಬೆತುಮಕೂರಿನಲ್ಲಿ ಶ್ರೀ ವಿಶ್ವಾರಾಧ್ಯರ ರಥೋತ್ಸವ : ಲಕ್ಷಾಂತರ ಮಂದಿ ಭಾಗಿ
ಯಾದಗಿರಿ : ಕಲ್ಯಾಣ ಕರ್ನಾಟಕದ ಸುಕ್ಷೇತ್ರ ಅಬ್ಬೆತುಮಕೂರಿನ ಸಿದ್ಧಿ ಪುರುಷ ಶ್ರೀ ವಿಶ್ವಾರಾಧ್ಯರ ಅವರ ರಥೋತ್ಸವ ಭಾನುವಾರ ಸಂಜೆ ಲಕ್ಷಾಂತರ ಭಕ್ತರ ಜಯಘೋಷದ ಮಧ್ಯೆ ಸಡಗರ ಸಂಭ್ರಮದಿಂದ ಜರುಗಿತು. ಶಿವರಾತ್ರಿ ನಂತರ ಬಿಸಿಲುಗಾಲ ಆರಂಭವಾದ ಹಿನ್ನೆಲೆಯಲ್ಲಿ ಕಡು ಬಿಸಿಲನ್ನೂ ಲೆಕ್ಕಿಸದೆ ಭಕ್ತರು ತಂಡೋಪತಂಡವಾಗಿ ಅಬ್ಬೆತುಮಕೂರಿನೆಡೆಗೆ ಧಾವಿಸಿದರು. ಬಸ್, ಕಾರು, ಜೀಪು, ಆಟೋಗಳಲ್ಲಿ ಆಗಮಿಸಿದವರು ಒಂದೆಡೆಯಾದರೆ, ಶಹಾಪುರ, ಸುರಪುರ, ಗುರುಮಠಕಲ್, ಸೇಡಂ, ಚಿತ್ತಾಪುರ ಹಾಗೂ ಕಲಬುರಗಿ ಭಾಗಗಳಿಂದ ಅನೇಕ ಭಕ್ತರು ಪಾದಯಾತ್ರೆಯ ಮೂಲಕ ಕ್ಷೇತ್ರಕ್ಕೆ ಆಗಮಿಸಿದರು. ಸೂರ್ಯ ಅಸ್ತಂಗತವಾಗುವ ಹೊತ್ತಿಗೆ ಸುಕ್ಷೇತ್ರದ ಆವರಣದಲ್ಲಿ ಲಕ್ಷಾಂತರ ಭಕ್ತರು ರಥೋತ್ಸವದ ಕ್ಷಣ ಕಣ್ತುಂಬಿಕೊಳ್ಳಲು ಕಾತರರಾಗಿದ್ದರು. ಪೀಠಾಧಿಪತಿ ಡಾ.ಗಂಗಾಧರ ಮಹಾಸ್ವಾಮೀಜಿ ಸಂಜೆ 6.15ಕ್ಕೆ ರಥಾರೋಹಣ ಮಾಡಿ ಚಾಲನೆ ನೀಡುತ್ತಿದ್ದಂತೆ “ವಿಶ್ವಾರಾಧ್ಯ ಮಹಾರಾಜ ಕೀ ಜೈ”, “ಗಂಗಾಧರ ಮಹಾರಾಜ ಕೀ ಜೈ” ಎಂಬ ಜಯಘೋಷಗಳು ಮುಗಿಲುಮುಟ್ಟಿದವು. ಭಕ್ತರು ರಥವನ್ನು ಎಳೆದು ಸಂಭ್ರಮಿಸಿದರು. ಭಕ್ತರು ಕಾರಿಕಾ, ಉತ್ತುತ್ತಿ, ಬಾಳೆಹಣ್ಣುಗಳನ್ನು ರಥದ ಮೇಲೆ ಅರ್ಪಿಸಿ, ಕೈ ಜೋಡಿಸಿ ನಮಿಸಿ ತಮ್ಮ ಇಷ್ಟಾರ್ಥಗಳನ್ನು ಬೇಡಿಕೊಂಡರು. ಕರ್ನಾಟಕದಷ್ಟೇ ಅಲ್ಲ, ಆಂಧ್ರಪ್ರದೇಶ, ತೆಲಂಗಾಣ ಮತ್ತು ಮಹಾರಾಷ್ಟ್ರ ರಾಜ್ಯಗಳಿಂದಲೂ ಭಕ್ತರು ಆಗಮಿಸಿ ದರ್ಶನಾಶೀರ್ವಾದ ಪಡೆದರು. ಶನಿವಾರ ಬೆಳಿಗ್ಗೆ ಶ್ರೀ ವಿಶ್ವಾರಾಧ್ಯರ ಕರ್ತೃ ಗದ್ದುಗೆಗೆ ವಿಶೇಷ ರುದ್ರಾಭಿಷೇಕ ಜರುಗಿತು. ಹನ್ನೊಂದು ದಿನಗಳಿಂದ ಸಾಗಿದ ವಿಶ್ವಾರಾಧ್ಯ ಪುರಾಣ ಹಾಗೂ ಪಲ್ಲಕ್ಕಿ ಉತ್ಸವ ಮೆರವಣಿಗೆ ಮಂಗಳವಾದ್ಯಗಳೊಂದಿಗೆ ಗ್ರಾಮದಲ್ಲಿ ನಡೆಯಿತು. ಸಂಜೆ ಮಠದ ಕೈಲಾಸ ಕಟ್ಟೆಯ ಬಳಿ ಪೀಠಾಧಿಪತಿ ಡಾ. ಗಂಗಾಧರ ಮಹಾಸ್ವಾಮಿಗಳು ಧುನಿ ಪೂಜೆ ನೆರವೇರಿಸಿ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿದರು. ಜಾತ್ರೆಯಲ್ಲಿ ಹಲಗೆ, ಬಾಜಾ-ಭಜಂತ್ರಿ, ಡೊಳ್ಳುಗಳ ಸದ್ದಿನ ನಡುವೆ ಗ್ರಾಮವೆಲ್ಲ ಭಕ್ತಿಮಯ ವಾತಾವರಣದಿಂದ ಕಂಗೊಳಿಸಿತು. ದಾಸೋಹ ಮನೆಗಳಲ್ಲಿ ಭಕ್ತರಿಗೆ ರುಚಿಕರವಾದ ಮಾಲದಿ, ಸಜ್ಜಿ, ಜೋಳದ ರೊಟ್ಟಿ, ವಿವಿಧ ಪಲ್ಯ, ಅನ್ನ-ಸಾರು ಸೇರಿದಂತೆ ಊಟದ ವ್ಯವಸ್ಥೆ ನಿರಂತರವಾಗಿ ನಡೆಯಿತು. ರಥೋತ್ಸವದ ಬಳಿಕ ಭಕ್ತರು ಉಪವಾಸ ಮುಗಿಸಿ ಪ್ರಸಾದ ಸ್ವೀಕರಿಸಿದರು. ಜಾತ್ರೆಯ ಅಂಗಡಿಗಳಲ್ಲಿ ಖರೀದಿಗಾಗಿ ಭಕ್ತರು ಮುಗಿಬಿದ್ದ ದೃಶ್ಯ ಕಂಡುಬಂದಿತು. ಭಜಿ, ಸುಸುಲಾ ಸೇರಿದಂತೆ ವಿವಿಧ ತಿನಿಸುಗಳಿಗೆ ವಿಶೇಷ ಬೇಡಿಕೆ ಕಂಡುಬಂತು. ಪೊಲೀಸ್ ಇಲಾಖೆ ಶಾಂತಿ-ಸುವ್ಯವಸ್ಥೆಗೆ ಅಚ್ಚುಕಟ್ಟಾದ ಬಂದೋಬಸ್ತ್ ಕೈಗೊಂಡಿದ್ದು, ಆರೋಗ್ಯ ಇಲಾಖೆ ಪ್ರಥಮ ಚಿಕಿತ್ಸೆಗಾಗಿ ಸಿದ್ಧವಾಗಿತ್ತು. ವಾಹನ ನಿಲುಗಡೆ ವ್ಯವಸ್ಥೆಯನ್ನು ಸ್ವಯಂಸೇವಕರು ಸಮರ್ಪಕವಾಗಿ ನಿರ್ವಹಿಸಿದರು. ಒಟ್ಟಾರೆ ಭಕ್ತಿ, ಸಡಗರ ಮತ್ತು ಸಂತೋಷಗಳಿಂದ ತುಂಬಿದ ಶ್ರೀ ವಿಶ್ವಾರಾಧ್ಯರ ಜಾತ್ರೆ ಶಾಂತಿಯುತವಾಗಿ ನೆರವೇರಿತು. ಕೊಪ್ಪಳದ ಗವಿಸಿದ್ದೇಶ್ವರ ಮಹಾಸಂಸ್ಥಾನ ಮಠದ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು, ಬೆಂಗಳೂರಿನ ವಿಭೂತಿಪೂರ ಸಂಸ್ಥಾನ ಮಠದ ಡಾ. ಮಹಾಂತಲಿAಗ ಶಿವಾಚಾರ್ಯರು, ಡಾ.ಶಿವಾನಂದ ಮಹಾಸ್ವಾಮಿಗಳು ಸೊನ್ನ, ಮುನೀಂದ್ರ ಸ್ವಾಮಿಜಿ ಹಲಕರ್ಟಿ, ಶಾಂತಮಲ್ಲಿಕಾರ್ಜುನ ಸ್ವಾಮಿಜಿ ಹೆಡಗಿಮದ್ರಾ, ಶ್ರೀ ಸೂಗೂರೇಶ್ವರ ಸ್ವಾಮೀಜಿ ಶಹಾಪೂರ, ಮಳಖೇಡದ ಕಾರ್ತಿಕೇಶ್ವರ ಶಿವಾಚಾರ್ಯರು, ಶ್ರೀ ಶಿವಮೂರ್ತಿ ಸ್ವಾಮೀಜಿ ದೇವಾಪೂರ, ಹೊನ್ನಕೀರಣಗಿಯ ಚಂದ್ರಗುಂಡ ಶಿವಾಚಾರ್ಯರು, ಕುಕನೂರಿನ ಚನ್ನಮಲ್ಲ ಶಿವಾಚಾರ್ಯರು, ಗುಡುಗುಂಟಿಯ ಅಭಿವನ ಗಜದಂಡ ಶಿವಾಚಾರ್ಯರು, ಗೋಲಪಲ್ಲಿಯ ಶ್ರೀ ವರದಾನೇಶ್ವರ ಸ್ವಾಮಿಗಳು ಮುಂತಾದ ಪೂಜ್ಯರು ಪಾಲ್ಗೊಂಡರು. ಕಾನೂನು ಸಚಿವ ಎಚ್.ಕೆ ಪಾಟೀಲ, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಸಣ್ಣ ಕೈಗಾರಿಕೆ ಸಚಿವ ಶರಣಪ್ಪಬಸಪ್ಪಗೌಡ ದರ್ಶಾನಪೂರ, ವೈದ್ಯಕೀಯ ಸಚಿವ ಡಾ ಶರಣಪ್ರಕಾಶ ಪಾಟೀಲ, ಅರಣ್ಯ ಸಚಿವ ಈಶ್ವರ್ ಖಂಡ್ರೆ, ಸಣ್ಣ ನೀರವಾರಿ ಎನ್.ಎಸ್ ಭೋಸರಾಜ ಮತ್ತು ಕ.ಕ.ಅಭಿವೃಧ್ಧಿ ಮಂಡಳಿ ಅಧ್ಯಕ್ಷ ಡಾ ಅಜಯಸಿಂಗ, ಶಾಸಕರಾದ ಚೆನ್ನಾರೆಡ್ಡಿ ಪಾಟೀಲ ತುನ್ನೂರು, ಶರಣಗೌಡ ಕಂದಕೂರು, ರಾಜಾ ವೇಣೂಗೋಪಾಲ ನಾಯಕ, ಬಸವರಾಜ ಮತ್ತಿಮೂಡ, ಅಲ್ಲಮಪ್ರಭು ಪಾಟೀಲ, ಶಿವರಾಜ ಪಾಟೀಲ ಬಸನಗೌಡ ದದ್ದಲ್, ಬಿ.ಜಿ ಪಾಟೀಲ, ಶಶಿಲ್ ನಮೋಶಿ ಡಾ.ಸುಭಾಶ್ಚಂದ್ರ ಕೌಲಗಿ, ಗುರು ಪಾಟೀಲ ಶಿರವಾಳ ನರಸಣಗೌಡ ರಾಯಚೂರು, ಚನ್ನಪ್ಪಗೌಡ ಮೋಸಂಬಿ ಸೇರಿದಂತೆ ಅನೇಕ ಗಣ್ಯರು ಇದ್ದರು.
ಅಮೆರಿಕ ಮತ್ತು ಇರಾನ್ ನಡುವೆ ಮತ್ತೊಂದು ಸುತ್ತಿನ ಮಾತುಕತೆ, ಅಂತಿಮ ಒಪ್ಪಂದಕ್ಕೆ ಸಹಿ ಸಾಧ್ಯತೆ | US Military
ಅಮೆರಿಕ ಹಾಗೂ ಇರಾನ್ ವಿಚಾರವೇ ಇದೀಗ ಜಗತ್ತಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದ್ದು, ಈ ಇಬ್ಬರ ನಡುವೆ ಯುದ್ಧ ನಡೆಯದಂತೆ ತಡೆಯಲು ಎಲ್ಲಾ ರೀತಿಯ ಪ್ರಯತ್ನ ಮಾಡಲಾಗುತ್ತಿದೆ. ಆ ಎಲ್ಲಾ ಪ್ರಯತ್ನಗಳು ಈವರೆಗೂ ವಿಫಲವಾಗಿದ್ದು, ಮಧ್ಯಪ್ರಾಚ್ಯ ಬೂದಿ ಮುಚ್ಚಿದ ಕೆಂಡವಾಗಿದೆ. ಹೀಗೆ ಇದ್ದಾಗ ಏನಾದರೂ ಮಾಡಿ ಅಮೆರಿಕ ಹಾಗೂ ಇರಾನ್ ನಡುವೆ ಶಾಂತಿ ಒಪ್ಪಂದ ಮಾಡಿಸಬೇಕೆಂದು ಪಣತೊಟ್ಟಿರುವ ಮಧ್ಯಪ್ರಾಚ್ಯದ
ಬಳ್ಳಾರಿ | ಗೋಶಾಲೆಯಿಂದ ಸಮಾಧಾನ, ನೆಮ್ಮದಿ ಸಿಗುತ್ತದೆ : ಸಂಸದ ಇ.ತುಕಾರಾಂ
ಬಳ್ಳಾರಿ / ಕಂಪ್ಲಿ : ಗೋಶಾಲೆಯಿಂದ ಮನಸ್ಸಿಗೆ ಸಮಾಧಾನ ಹಾಗೂ ಜೀವನದಲ್ಲಿ ನೆಮ್ಮದಿ ದೊರೆಯುತ್ತದೆ ಎಂದು ಸಂಸದ ಇ.ತುಕಾರಾಂ ಹೇಳಿದರು. ತಾಲೂಕಿನ ದೇವಸಮುದ್ರ ಕ್ರಾಸ್ ಹೊರವಲಯದಲ್ಲಿರುವ ಕಲ್ಯಾಣಚೌಕಿ ಮಠ ಕಾಮಧೇನು ಗೋಶಾಲ ಸೇವಾ ಟ್ರಸ್ಟ್ ಆಶ್ರಯದಲ್ಲಿ ನಡೆಯುತ್ತಿರುವ ಗೋಶಾಲೆ, ಕಲ್ಯಾಣ ಕೃಷಿ ಆಶ್ರಮ ಹಾಗೂ ಗುರುಕುಲ ಶಿಕ್ಷಣ ಉದ್ಘಾಟನಾ ಕಾರ್ಯಕ್ರಮದ ಅಂಗವಾಗಿ ಭಾನುವಾರ ನಡೆದ ವಿಶೇಷ ಪೂಜೆ ಹಾಗೂ ಹೋಮ–ಹವನದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಬಾಲ್ಯದಿಂದಲೂ ಕೃಷಿ ಕಾರ್ಯಗಳ ಜೊತೆಗೆ ಗೋಮಾತೆಯ ಪೂಜೆ ಮಾಡುತ್ತಾ ದಿನನಿತ್ಯದ ಜೀವನ ಸಾಗಿಸುತ್ತಿದ್ದೇವೆ. ಗೋಶಾಲೆ, ಕೃಷಿ ಆಶ್ರಮ ಮತ್ತು ಗುರುಕುಲ ಶಿಕ್ಷಣವು ಪವಿತ್ರ ಕಾರ್ಯಗಳಾಗಿವೆ. ಮನೆಯಲ್ಲಿ ಗೋವುಗಳಿದ್ದರೆ ಆಕ್ಸಿಜನ್ ದೊರೆಯುತ್ತದೆ, ರೋಗಗಳು ಹತ್ತಿರ ಬರುವುದಿಲ್ಲ ಎಂಬ ನಂಬಿಕೆ ಇದೆ ಎಂದು ಹೇಳಿದರು. ವಿಜಯನಗರ ಸೇರಿ ಬಳ್ಳಾರಿ ಲೋಕಸಭಾ ಕ್ಷೇತ್ರದ ಅಭಿವೃದ್ಧಿಗೆ ಈಗಾಗಲೇ ಸುಮಾರು 4600 ಕೋಟಿ ರೂ. ಅನುದಾನ ತಂದು ವಿನಿಯೋಗಿಸಲಾಗಿದೆ. ತಮ್ಮ 5 ಕೋಟಿ ರೂ. ಅನುದಾನದಲ್ಲಿ ಅಂಗವಿಕಲಚೇತನರಿಗೆ ಸೌಲಭ್ಯಗಳು, ಡಿಜಿಟಲ್ ಗ್ರಂಥಾಲಯ ಸೇರಿದಂತೆ ವಿವಿಧ ಸೌಕರ್ಯಗಳನ್ನು ಒದಗಿಸಲಾಗಿದೆ. ರೈಲ್ವೆ ಕ್ಷೇತ್ರದಲ್ಲೂ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಶ್ರೀಕಲ್ಯಾಣಚೌಕಿ ಮಠ ಕಾಮಧೇನು ಗೋಶಾಲಾ ಸೇವಾ ಟ್ರಸ್ಟ್ ಸಂಸ್ಥಾಪಕ ಕೆ.ಎಂ. ಬಸವರಾಜ ಸ್ವಾಮಿ ಅವರು ಸಂಸದ ತುಕಾರಾಂ ಅವರಿಗೆ ಸನ್ಮಾನಿಸಿದರು. ಸಾವಯವ ದವಸ–ಧಾನ್ಯ ಹಾಗೂ ಇತರ ವಸ್ತುಗಳ ಪ್ರದರ್ಶನವನ್ನು ವೀಕ್ಷಿಸಿದ ಸಂಸದರು ಕೆಲವು ವಸ್ತುಗಳನ್ನು ಖರೀದಿ ಮಾಡಿ ವ್ಯಾಪಾರಸ್ಥರಿಗೆ ಪ್ರೋತ್ಸಾಹ ನೀಡಿದರು. ಕಾರ್ಯಕ್ರಮದಲ್ಲಿ ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಪಿ. ಮೂಕಯ್ಯಸ್ವಾಮಿ, ಪುರಸಭೆ ಮಾಜಿ ಅಧ್ಯಕ್ಷ ಎಂ. ಸುಧೀರ್, ಮುಖಂಡರಾದ ಬಿ. ನಾರಾಯಣಪ್ಪ, ಹೊನ್ನಳ್ಳಿ ಗಂಗಾಧರ, ನಾಯಕರ ವೆಂಕೋಬ, ದೊಡ್ಡಬಸಪ್ಪ, ಹನುಮಂತಪ್ಪ, ಜಿ. ಮರೇಗೌಡ, ಸಿದ್ದಯ್ಯ, ಎನ್.ಎಂ. ಪತ್ರಯ್ಯಸ್ವಾಮಿ, ಅಕ್ಕಿ ಜಿಲಾನ್, ಬಳೆ ಮಲ್ಲಿಕಾರ್ಜುನ ಸೇರಿದಂತೆ ಸ್ವಾಮೀಜಿ, ಭಕ್ತರು ಹಾಗೂ ಹಲವರು ಉಪಸ್ಥಿತರಿದ್ದರು.
Ballari | ಧರ್ಮಸ್ಥಳ ಯೋಜನೆಯಿಂದ ಮೆಟ್ರಿ ಗ್ರಾಮದಲ್ಲಿ ಕೆರೆ ಅಭಿವೃದ್ಧಿಗೆ 10 ಲಕ್ಷ ರೂ. ಮಂಜೂರು
ಬಳ್ಳಾರಿ / ಕಂಪ್ಲಿ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ರಾಜ್ಯದಲ್ಲಿ ಈಗಾಗಲೇ ಸುಮಾರು 1043 ಕೆರೆಗಳನ್ನು ಹೂಳು ತೆಗೆಯಿಸಿ ಗ್ರಾಮಗಳಿಗೆ ಹಸ್ತಾಂತರ ಮಾಡಲಾಗಿದೆ. ಇದರ ಕುಡಿಯುವ ನೀರಿನ ಲಭ್ಯತೆ ಹೆಚ್ಚುವುದರ ಜೊತೆಗೆ ಪ್ರಾಣಿ–ಪಕ್ಷಿಗಳಿಗೆ ಅನುಕೂಲವಾಗಿದ್ದು, ಭಾವಿ ಮತ್ತು ಬೋರ್ವೆಲ್ಗಳ ರಿಚಾರ್ಜ್ ಆಗಿ ಅಂತರ್ಜಲ ಮಟ್ಟ ಹೆಚ್ಚಿಸಿ ರೈತರಿಗೆ ಸಹಕಾರಿಯಾಗಿದೆ. ಇದೀಗ ಕಂಪ್ಲಿ ತಾಲೂಕಿನ ಮೆಟ್ರಿ ಗ್ರಾಮದಲ್ಲಿನ ಊಟಿಕೊಳ್ಳದ ಕೆರೆಯನ್ನು ಅಭಿವೃದ್ಧಿಪಡಿಸಲು ಗ್ರಾಮಸ್ಥರು ಹಾಗೂ ಗ್ರಾಮ ಪಂಚಾಯತ್ ವತಿಯಿಂದ ಮನವಿ ಸಲ್ಲಿಸಲಾಗಿತ್ತು. ಈ ಮನವಿಯನ್ನು ಪರಿಶೀಲಿಸಿದ ವೀರೇಂದ್ರ ಹೆಗ್ಗಡೆ ಅವರು ಕೆರೆ ಅಭಿವೃದ್ಧಿಗಾಗಿ ಸುಮಾರು 10 ಲಕ್ಷ ರೂ. ಮಂಜೂರು ಮಾಡಿದ್ದಾರೆ. ಕೆರೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಹೂಳು ತೆಗೆಯುವ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಬಳ್ಳಾರಿ ಜಿಲ್ಲಾ ನಿರ್ದೇಶಕ ರೋಹಿತಾಕ್ಷ ಮಾತನಾಡಿ, “ನಮ್ಮೂರು ನಮ್ಮ ಕೆರೆ” ಕಾರ್ಯಕ್ರಮದಡಿ ರಾಜ್ಯಾದ್ಯಂತ ಕೆರೆಗಳ ಪುನರುಜ್ಜೀವನ ಕಾರ್ಯ ನಡೆಯುತ್ತಿದ್ದು, ಮೆಟ್ರಿ ಗ್ರಾಮಸ್ಥರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಮೆಟ್ರಿ ಗ್ರಾಮ ಪಂಚಾಯತ್ ಅಧ್ಯಕ್ಷೆ ನಾಗಮ್ಮ, ಊಟಿಕೊಳ್ಳದ ಕೆರೆ ಸಮಿತಿ ಅಧ್ಯಕ್ಷ ಗಿರೀಶ್, ಉಪಾಧ್ಯಕ್ಷ ಜಡೆಗೌಡ, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಬೀರಲಿಂಗಪ್ಪ, ಜಿಲ್ಲಾ ಜನಜಾಗೃತಿ ವೇದಿಕೆ ಕೋಶಾಧಿಕಾರಿ ಡಾ. ವೆಂಕಟೇಶ್ ಬರಮಕ್ಕನವರ್, ತಾಲೂಕು ಯೋಜನಾಧಿಕಾರಿ ರಾಘವೇಂದ್ರ, ಕೃಷಿ ಅಧಿಕಾರಿ ಸಂಜುಕುಮಾರ್, ವಲಯ ಮೇಲ್ವಿಚಾರಕ ಅವಿನಾಶ್ ಹಾಗೂ ಸೇವಾ ಪ್ರತಿನಿಧಿಗಳು ಭಾಗವಹಿಸಿದ್ದರು.
Bidar | ರೈತರ ವಿವಿಧ ಬೇಡಿಕೆ ಈಡೇರಿಸಲು ರಾಜ್ಯ ಸರಕಾರಕ್ಕೆ ಪತ್ರ
ಬೀದರ್ : ಸಹಕಾರ ಸಕ್ಕರೆ ಕಾರ್ಖಾನೆಯನ್ನು ಸರ್ಕಾರ ವಹಿಸಿಕೊಂಡು ಪುನರಾರಂಭಿಸಬೇಕು. ಹಾಗೆಯೇ ರೈತರ ಎಲ್ಲ ಸಾಲಗಳು ಸಂಪೂರ್ಣ ಮನ್ನಾ ಮಾಡಬೇಕು ಎಂದು ಒತ್ತಾಯಿಸಿ ಸಂಯುಕ್ತ ಕಿಸಾನ್ ಮೋರ್ಚಾ (ಎಸ್ ಕೆ ಎಂ) ವತಿಯಿಂದ ರಾಜ್ಯ ಸರ್ಕಾರಕ್ಕೆ ಬಹಿರಂಗ ಪತ್ರ ಬಿಡುಗಡೆ ಮಾಡಲಾಯಿತು. ನಗರದ ಲಾಡ್ಜ್ ಆವರಣವೊಂದರಲ್ಲಿ ರವಿವಾರ ಸಂಯುಕ್ತ ಕಿಸಾನ್ ಮೋರ್ಚಾದ ಪದಾಧಿಕಾರಿಗಳು ಸಭೆ ಸೇರಿ ಬಿಡುಗಡೆ ಮಾಡಿದ ಬಹಿರಂಗ ಪತ್ರದಲ್ಲಿ, ಬೀದರ್ ಸಹಕಾರ ಸಕ್ಕರೆ ಕಾರ್ಖಾನೆ ಜಿಲ್ಲೆಯ ರೈತರ ಜೀವನಾಡಿಯಾಗಿದ್ದು, ಸುಮಾರು 25 ಸಾವಿರಕ್ಕೂ ಹೆಚ್ಚು ರೈತರು ಷೇರು ಪಡೆದಿದ್ದಾರೆ. ಕಾರ್ಖಾನೆ ಮುಚ್ಚಿರುವುದರಿಂದ ರೈತರು, ಕಾರ್ಮಿಕರು ಹಾಗೂ ಅವರ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿವೆ. ಸಾವಿರಾರು ಕಾರ್ಮಿಕರು ಉದ್ಯೋಗ ಕಳೆದುಕೊಂಡಿದ್ದಾರೆ. ಸುಮಾರು 32.99 ಕೋಟಿ ರೂ. ಕಾರ್ಮಿಕರ ಸಂಬಳ ಬಾಕಿ ಇದೆ. ಹಾಗೆಯೇ 2 ಕೋಟಿ ರೂ. ಉಪದಾನ ಹಣ ಪಾವತಿಸಬೇಕಿದೆ ಎಂದು ಆರೋಪಿಸಲಾಗಿದೆ. 2024ರ ಡಿಸೆಂಬರ್ನಲ್ಲಿ ನಡೆದ ಸಭೆಯಲ್ಲಿ 2025-26 ಹಂಗಾಮಿ ಸಾಲಿನಲ್ಲಿ ಕಾರ್ಖಾನೆ ಪ್ರಾರಂಭಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದರು. ಆದರೆ ಯಾವುದೇ ಕ್ರಮ ಕೈಗೊಂಡಿಲ್ಲ. ದೇಶ ಕೃಷಿ ಪ್ರಧಾನವಾಗಿದ್ದರೂ ರೈತರಿಗೆ ಸಮರ್ಪಕ ಬೆಲೆ ದೊರೆಯುತ್ತಿಲ್ಲ. ಕನಿಷ್ಠ ಬೆಂಬಲ ಬೆಲೆ ಕುರಿತು ಕಾನೂನು ತರಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಮೋರ್ಚಾದ ಪದಾಧಿಕಾರಿಗಳು ಬ್ಯಾಂಕುಗಳು ರೈತರಿಂದ ದಬ್ಬಾಳಿಕೆ ಮೂಲಕ ಸಾಲ ವಸೂಲಿ ಮಾಡುತ್ತಿರುವುದು ಖಂಡಿಸಿದ್ದಾರೆ. ಬೀದರ್ ಸಹಕಾರ ಸಕ್ಕರೆ ಕಾರ್ಖಾನೆಯನ್ನು ಸರ್ಕಾರ ವಹಿಸಿಕೊಂಡು 2026-27 ಹಂಗಾಮಿನಲ್ಲಿ (ಅಕ್ಟೋಬರ್ 2026) ಪ್ರಾರಂಭಿಸಲು ಬಜೆಟ್ನಲ್ಲಿ ಹಣ ಕಾಯ್ದಿರಿಸಬೇಕು. ಕರ್ನಾಟಕದ ಎಲ್ಲಾ ರೈತರ ಎಲ್ಲಾ ತರಹದ ಸಾಲಗಳನ್ನು ಸಂಪೂರ್ಣ ಮನ್ನಾ ಮಾಡಬೇಕು ಎಂದು ತಮ್ಮ ಬೇಡಿಕೆಗಳು ಮುಂದಿಟ್ಟಿದ್ದಾರೆ. ಈ ಸಂದರ್ಭದಲ್ಲಿ ಎಸ್ ಕೆ ಎಂ ನ ಗೌರವಾಧ್ಯಕ್ಷ ಶಿವರಾಯ ಮುದಾಳೆ, ಮಲ್ಲಿಕಾರ್ಜುನ್ ಸ್ವಾಮಿ, ಎಸ್ ಕೆ ಎಂ ನ ಸಂಚಾಲಕ ಬಾಬುರಾವ್ ಹೊನ್ನಾ, ನಾಗಶೆಟ್ಟಿ ಲಂಜವಾಡ್, ಬಸವರಾಜ್ ಅಷ್ಟೂರೆ, ವಿಠಲ್ ರೆಡ್ಡಿ, ಅರುಣ್ ಪಾಟೀಲ್, ಶಾಂತಮ್ಮ ಮೂಲಗೆ, ವೀರಶೆಟ್ಟಿ ವಟಂಬೆ, ಮಹೇಶ್ ನಾಡಗೌಡ, ನಜೀದ್ ಅಹ್ಮದ್, ಎಂ.ಡಿ. ಖಮರ್ ಪಟೇಲ್, ನನ್ನೆಸಾಬ್, ಎಂ.ಡಿ. ಶಫಾಯತ್ ಅಲಿ, ಜಯಶೀಲಕುಮಾರ್ , ಸೂರ್ಯಕಾಂತ್ ಹಾಗೂ ಕೋಂಡಿಬಾ ಪಾಂಡ್ರೆ ಇದ್ದರು.
ಕೃಷಿ ಲಾಭದಾಯಕ ಕ್ಷೇತ್ರವಾಗಲು ಸಂಶೋಧನೆ–ಮಾರುಕಟ್ಟೆ ಸಂಪರ್ಕ ಅಗತ್ಯ : ಸಚಿವ ಈಶ್ವರ್ ಖಂಡ್ರೆ
ಬೀದರ್ : ಕೃಷಿ ಲಾಭದಾಯಕ ಕ್ಷೇತ್ರವಾಗಲು ಚರ್ಚೆ, ಸಂಶೋಧನೆ, ಮಾರುಕಟ್ಟೆ ಲಭ್ಯತೆ ಹಾಗೂ ಸರ್ಕಾರದ ಯೋಜನೆಗಳು ರೈತರ ಮನೆಬಾಗಿಲಿಗೆ ತಲುಪುವಂತಾಗಬೇಕು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಹೇಳಿದರು. ನಗರದ ನೆಹರು ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕೃಷಿ, ತೋಟಗಾರಿಕೆ ಹಾಗೂ ಮೀನುಗಾರಿಕೆ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ ಉದ್ಯೋಗ ಮೇಳ, ಸಿರಿಧಾನ್ಯ ಮೇಳ, ಫಲ–ಪುಷ್ಪ ಪ್ರದರ್ಶನ ಮತ್ತು ಮತ್ಸ್ಯ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಕೈಗಾರಿಕೆಗಳ ಕೊರತೆಯಿಂದ ಶೇ.75ರಷ್ಟು ಜನ ಕೃಷಿಯ ಮೇಲೆ ಅವಲಂಬಿತರಾಗಿದ್ದಾರೆ. ಪ್ರತಿ ವರ್ಷ ಸುಮಾರು 10 ಲಕ್ಷ ಎಕರೆ ಭೂಮಿಯಲ್ಲಿ ಬಿತ್ತಣೆ ನಡೆಯುತ್ತಿದ್ದು, ಅದರಲ್ಲಿ ಶೇ.50 ಸೋಯಾ, ಶೇ.25 ತೊಗರಿ ಹಾಗೂ ಉಳಿದ ಶೇ.25 ಇತರೆ ಬೆಳೆಗಳು ಬೆಳೆಯಲಾಗುತ್ತಿವೆ. ರೈತರು ಒಂದೇ ಬೆಳೆಗೆ ಸೀಮಿತವಾಗದೆ ಸಿರಿಧಾನ್ಯಗಳಂತಹ ಬೇರೆ ಬೆಳೆಗಳನ್ನು ಬೆಳೆಸಬೇಕು ಎಂದು ಸಲಹೆ ನೀಡಿದರು. ಸಿರಿಧಾನ್ಯಗಳು ಕಡಿಮೆ ನೀರಿನಲ್ಲಿ ಬೆಳೆಯುವ ಶಾಶ್ವತ ಬೆಳೆಗಳಾಗಿದ್ದು, ಹವಾಮಾನ ಬದಲಾವಣೆಯ ಸಂದರ್ಭದಲ್ಲಿಯೂ ಭದ್ರ ಆದಾಯ ನೀಡುತ್ತವೆ. ಜನರು ದೈನಂದಿನ ಆಹಾರದಲ್ಲಿ ಸಿರಿಧಾನ್ಯಗಳನ್ನು ಅಳವಡಿಸಿಕೊಳ್ಳಬೇಕು. ರೈತರು ಮೌಲ್ಯವರ್ಧಿತ ಉತ್ಪನ್ನಗಳತ್ತ ಗಮನಹರಿಸಬೇಕು. ಸರ್ಕಾರದ ಯೋಜನೆಗಳು ಹಾಗೂ ಮಾರುಕಟ್ಟೆಯಲ್ಲಿ ಬೆಂಬಲ ಬೆಲೆ ರೈತರಿಗೆ ಸಿಗುವಂತೆ ಈ ಮೇಳದ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಹೇಳಿದರು. ಕಳೆದ ವರ್ಷದ ಅತೀವೃಷ್ಟಿಯಿಂದ 1.65 ಲಕ್ಷ ಹೆಕ್ಟೇರ್ ಬೆಳೆ ಹಾನಿಯಾಗಿದ್ದು, 1.92 ಲಕ್ಷ ರೂ. ರೈತರಿಗೆ ಒಟ್ಟು 288 ಕೋಟಿ ರೂ. ನೇರವಾಗಿ ಖಾತೆಗೆ ಜಮೆಯಾಗಿದೆ. ಬೆಳೆ ಕಟಾವು ಪ್ರಯೋಗದ ಆಧಾರದ ಮೇಲೆ 100 ಕೋಟಿ ರೂ. ವಿಮೆ ಹಣ ಜಮೆಯಾಗಿದ್ದು, ಇನ್ನೂ 50 ಕೋಟಿ ರೂ. ಬರಲಿದೆ. ಒಟ್ಟು 450 ಕೋಟಿ ರೂ. ರೈತರ ಖಾತೆಗೆ ಜಮೆಯಾಗಿದೆ ಎಂದು ಮಾಹಿತಿ ನೀಡಿದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಗಿರೀಶ್ ಬದೋಲೆ ಮಾತನಾಡಿ, ಉದ್ಯೋಗ ಮೇಳದಲ್ಲಿ 32 ಕಂಪನಿಗಳು ಭಾಗವಹಿಸಿದ್ದು, ಎನ್ಆರ್ಎಲ್ಎಮ್ ಯೋಜನೆಯಡಿ ಜಿ.ಪಿ.ಎಲ್.ಎಫ್ಗಳ ಮೂಲಕ ಗ್ರಾಮಗಳಲ್ಲಿ ಪ್ರಚಾರ ನಡೆಸಿ ಆನ್ಲೈನ್ ನೋಂದಣಿ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು. ಕಾರ್ಯಕ್ರಮಕ್ಕೂ ಮುನ್ನ ನಗರದ ಛತ್ರಪತಿ ಶಿವಾಜಿ ವೃತ್ತದಿಂದ ನೆಹರು ಕ್ರೀಡಾಂಗಣದವರೆಗೆ ನಡೆದ ಸಿರಿಧಾನ್ಯ ನಡಿಗೆಗೆ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಚಾಲನೆ ನೀಡಿದರು. ಮೆರವಣಿಗೆಯಲ್ಲಿ ಸಿರಿಧಾನ್ಯ ಹೊತ್ತ ಮಹಿಳೆಯರು ಗಮನ ಸೆಳೆದರು. ಈ ಸಂದರ್ಭದಲ್ಲಿ ಸಚಿವ ರಹೀಂ ಖಾನ್, ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಾಲಾ ನಾರಾಯಣರಾವ್, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಮಹಾನಗರ ಪಾಲಿಕೆ ಆಯುಕ್ತ ಮುಕುಲ್ ಜೈನ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಮೇಳದ ಅಂಗವಾಗಿ ವಿವಿಧ ಸರ್ಕಾರಿ ಇಲಾಖೆ ಮತ್ತು ಖಾಸಗಿ ಸಂಸ್ಥೆಗಳ ಮಳಿಗೆಗಳು ಸ್ಥಾಪಿಸಲಾಗಿತ್ತು. ಉದ್ಯೋಗ ಮೇಳದಲ್ಲಿ ನೂರಾರು ನಿರುದ್ಯೋಗಿಗಳು ಅರ್ಜಿ ಸಲ್ಲಿಸಿದರು. ವಿವಿಧ ಮೀನಿನ ತಳಿಗಳು, ಹೂ–ಹಣ್ಣು–ತರಕಾರಿಗಳ ಕಲಾಕೃತಿಗಳು ಹಾಗೂ ಕೃಷಿ ಸಂಬಂಧಿತ ವಸ್ತುಗಳ ಪ್ರದರ್ಶನ ಜನರನ್ನು ಆಕರ್ಷಿಸಿತು. ಸಾವಿರಾರು ಮಂದಿ ಮೇಳವನ್ನು ವೀಕ್ಷಿಸಿದರು.
ಬೆದರಿಕೆ ಪತ್ರ ಕಳುಹಿಸಿದ ಆರೋಪ; ಸ್ನೇಹಮಯಿ ಕೃಷ್ಣ ವಿರುದ್ಧ ಎಫ್ಐಆರ್
ಬೆಂಗಳೂರು : ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ವಿರುದ್ಧ ಆರೋಪ ಮಾಡಿ ಬಳಿಕ ಕ್ಷಮೆಯಾಚಿಸಿದ್ದ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ವಿರುದ್ಧ ಬೆಂಗಳೂರಿನಲ್ಲಿ ಮತ್ತೊಂದು ಎಫ್ಐಆರ್ ದಾಖಲಾಗಿದೆ. ಪವಿತ್ರಾ ಎಂಬುವರ ಮನೆಗೆ ಬೆದರಿಕೆ ಪತ್ರ ಕಳುಹಿಸಿದ ಆರೋಪದಡಿ ಬಸವೇಶ್ವರ ನಗರ ಠಾಣೆಯಲ್ಲಿ ಸ್ನೇಹಮಯಿ ಕೃಷ್ಣ ವಿರುದ್ಧ ಪ್ರಕರಣ ದಾಖಲಾಗಿದೆ. ಮೈಲಾರಪ್ಪ ಎಂಬವರ ಮೇಲೆ ನೀಡಿರುವ ದೂರು ವಾಪಸ್ ತೆಗೆದುಕೊಳ್ಳಲು ಒತ್ತಡ ಹೇರಿದ್ದಾರೆ ಎಂದು ಆರೋಪಿಸಲಾಗಿದೆ.. ಈ ಬಗ್ಗೆ ಕಳೆದೆರಡು ತಿಂಗಳ ಹಿಂದೆ ದೂರು ಕೊಟ್ಟಿದ್ದು, ಎನ್ಸಿಆರ್ ಕೂಡ ದಾಖಲಾಗಿತ್ತು. ಇದೀಗ ಕೋರ್ಟ್ ಅನುಮತಿ ಪಡೆದು ಸ್ನೇಹಮಯಿ ಕೃಷ್ಣ ವಿರುದ್ಧ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲು ಮಾಡಲಾಗಿದೆ.
ಒಳ ಮೀಸಲಾತಿ ವರದಿ ತಿರಸ್ಕರಿಸಲು ಆಗ್ರಹಿಸಲು ಫೆ.23 ರಂದು ಹುಮನಾಬಾದ್ ಬಂದ್ ಗೆ ಕರೆ
ಹುಮನಾಬಾದ್ : ಒಳ ಮೀಸಲಾತಿ ಕುರಿತು ಎಚ್.ಎನ್.ನಾಗಮೋಹನ್ ದಾಸ್ ವರದಿಯಲ್ಲಿ ದಲಿತ ಬಲಗೈ ಸಮುದಾಯಕ್ಕೆ ಅನ್ಯಾಯವಾಗಿದೆ ಎಂದು ಆರೋಪಿಸಿ, ರಾಜ್ಯಪಾಲರು ವರದಿಯನ್ನು ತಿರಸ್ಕರಿಸಬೇಕು ಎಂದು ಒತ್ತಾಯಿಸಿ ಫೆ.23ರಂದು ಹೊಲೆಯ ಹೋರಾಟ ಸಮಿತಿಯಿಂದ ಹುಮನಾಬಾದ್ ಬಂದ್ಗೆ ಕರೆ ನೀಡಲಾಗಿದೆ. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಮಾತನಾಡಿದ ದಲಿತ ಮುಖಂಡ ಬಾಬು ಟೈಗರ್, ಈ ಹೋರಾಟ ಯಾವುದೇ ಜಾತಿ ಸಮುದಾಯದ ವಿರುದ್ಧವಲ್ಲ. ನಮ್ಮ ಸಮುದಾಯದ ಮೇಲೆ ಆಗಿರುವ ಅನ್ಯಾಯದ ವಿರುದ್ಧವಾಗಿದೆ. ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಈ ಹೋರಾಟ ನಡೆಸಲಾಗುತ್ತಿದೆ ಎಂದು ಹೇಳಿದರು. ರಾಜ್ಯ ಸರ್ಕಾರದಲ್ಲಿರುವ ನಮ್ಮ ಸಮಾಜದ ಶಾಸಕರು ಮತ್ತು ಸಚಿವರಿಗೆ ವರದಿಯಲ್ಲಿನ ಅನ್ಯಾಯ ಕಾಣುತ್ತಿಲ್ಲ ಎಂದು ಕಿಡಿಕಾರಿದರು. ಅಂಕುಶ್ ಗೋಖಲೆ ಮಾತನಾಡಿ, ಒಳ ಮೀಸಲಾತಿಯಿಂದ ಸಣ್ಣ ಪ್ರಮಾಣದಲ್ಲಿ ದೊರೆಯುವ ಸರ್ಕಾರಿ ಉದ್ಯೋಗಗಳಲ್ಲಿ ಮೊದಲ ಆದ್ಯತೆ ಎಡಗೈ ಸಮುದಾಯಕ್ಕೆ ಸಿಗುತ್ತದೆ. ಇದರಿಂದ ಶಿಕ್ಷಣ ಪಡೆದ ನಮ್ಮ ಸಮುದಾಯದ ಯುವಕರಿಗೆ ಅನ್ಯಾಯವಾಗುತ್ತದೆ. ಉದ್ಯೋಗ ವಂಚಿತರಾಗುವ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು. ಬ್ರಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು, ಸಮಾಜದ ನೌಕರರು, ಮಹಿಳೆಯರು, ಕಾರ್ಮಿಕರು ಹಾಗೂ ಯುವಕರು ಹಳ್ಳಿ ಹಳ್ಳಿಗಳಿಂದ ಭಾಗವಹಿಸಬೇಕು ಎಂದು ಕರೆ ನೀಡಿದರು. ಗಜೇಂದ್ರ ಕನಕಟ್ಕರ್ ಮಾತನಾಡಿ, ನಾಗಮೋಹನ ದಾಸ್ ವರದಿ ಜಾರಿಗೆ ಬಂದರೆ ಮುಂದಿನ 40 ವರ್ಷಗಳವರೆಗೆ ನಮ್ಮ ಸಮುದಾಯದವರಿಗೆ ಸರ್ಕಾರಿ ಉದ್ಯೋಗ ಸಿಗುವುದಿಲ್ಲ. ನಾವು ಅತ್ಯಂತ ಕಷ್ಟಪಟ್ಟು ಮುಂದೆ ಬಂದ ಸಮಾಜ. ಯಾವುದೇ ಕುಲ ಕಸುಬು ಇಲ್ಲದೆ ಬಿ. ಆರ್. ಅಂಬೇಡ್ಕರ್ ಅವರಂತೆ ಪರಿಶ್ರಮದಿಂದ ಬೆಳೆಯುತ್ತಿದ್ದೇವೆ. ಪ್ರತಿಯೊಬ್ಬರೂ ಜವಾಬ್ದಾರಿಯುತವಾಗಿ ಪ್ರತಿಭಟನೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಲಕ್ಷ್ಮಿ ಪುತ್ರ ಮಾಳಗೆ, ವೀರಪ್ಪ ಧೂಮ್ಮನಸೂರ್, ಸುರೇಶ್ ಘಾಂಗ್ರೆ, ರವಿ ಹೊಸಳ್ಳಿ, ರಾಹುಲ್ ಉದ್ದಾ, ಗೌತಮ್ ಚೌವ್ಹಾಣ್ ಹಾಗೂ ಶಿವಾನಂದ್ ಹುಣಸಗೇರಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಅಫ್ಘಾನಿಸ್ತಾನ ಗಡಿಯಲ್ಲಿ ಪಾಕ್ ಸೇನೆಯಿಂದ ಕಾರ್ಯಾಚರಣೆ, ಪರಿಸ್ಥಿತಿ ಮತ್ತಷ್ಟು ಸೂಕ್ಷ್ಮ | Pakistan Military
ಪಾಕಿಸ್ತಾನ ತಾನೇ ಬೆಳೆಸಿರುವ ಉಗ್ರರಿಂದಲೇ ನೂರಾರು ಸಮಸ್ಯೆ ಎದುರಿಸುತ್ತಿದ್ದು, ಈಗಾಗಲೇ ಹತ್ತಾರು ಸಾವಿರ ಪ್ರಜೆಗಳು ಪಾಕಿಸ್ತಾನದಲ್ಲಿ ಉಗ್ರರ ಕಾರಣಕ್ಕೆ ಜೀವ ಬಿಟ್ಟಿದ್ದಾರೆ. ಇಷ್ಟಾದರೂ ಬುದ್ಧಿ ಕಲಿಯದ ಪಾಕಿಸ್ತಾನ ಮತ್ತೆ ಮತ್ತೆ ಉಗ್ರರ ಬೆನ್ನಿಗೆ ನಿಲ್ಲುತ್ತಿದ್ದು, ಅದೇ ಉಗ್ರರು ಪಾಕಿಸ್ತಾನದ ಒಳಗೆ ನುಗ್ಗಿ ಭಾರಿ ಹಿಂಸಾಚಾರ ನಡೆಸುತ್ತಿದ್ದಾರೆ. ಮೊನ್ನೆ ಮೊನ್ನೆ ಇಸ್ಲಾಮಾಬಾದ್ ನಗರದ ಮಸೀದಿಯಲ್ಲಿ ಭೀಕರವಾಗಿ ಸ್ಫೋಟವಾಗಿತ್ತು, ಆ
Bidar | ಸಹಕಾರಿ ಸಂಸ್ಥೆಗಳಲ್ಲಿ ಪಾರದರ್ಶಕತೆ ಅಗತ್ಯ : ಗುರುನಾಥ ಜ್ಯಾಂತಿಕರ್
ಬೀದರ್ : ಸಹಕಾರಿ ಸಂಸ್ಥೆಗಳು ಲಾಭದಾಯಕವಾಗಬೇಕಾದರೆ ದುಂದು ವೆಚ್ಚಕ್ಕೆ ಕಡಿವಾಣ ಹಾಕುವುದು, ಪಾರದರ್ಶಕ ಆಡಳಿತ ಮತ್ತು ಆಡಳಿತ ಮಂಡಳಿ ದಿನನಿತ್ಯದ ವ್ಯವಹಾರಗಳ ಮೇಲೆ ನಿಗಾ ವಹಿಸುವುದು ಅತ್ಯವಶ್ಯಕ ಎಂದು ಸಂಯುಕ್ತ ಸಹಕಾರಿಯ ನಿರ್ದೇಶಕ ಗುರುನಾಥ್ ಜ್ಯಾಂತಿಕರ್ ಹೇಳಿದರು. ನಗರದ ಕಲ್ಯಾಣ ಪತ್ತಿನ ಸೌಹಾರ್ದ ಸಹಕಾರಿ ಸಾಮರ್ಥ್ಯ ತರಬೇತಿ ಕೇಂದ್ರದಲ್ಲಿ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿ., ಕಲಬುರಗಿ ಪ್ರಾಂತ ಹಾಗೂ ಬೀದರ್ ಜಿಲ್ಲಾ ಸಂಪರ್ಕ ಕಛೇರಿ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಜಿಲ್ಲೆಯ ನಷ್ಟದಲ್ಲಿರುವ ಸೌಹಾರ್ದ ಸಹಕಾರಿಗಳಿಗಾಗಿ ವ್ಯವಹಾರ ಅಭಿವೃದ್ಧಿ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಗುಣಾತ್ಮಕ ಸಹಕಾರಿಗಳಿಂದ ಮಾತ್ರ ಸದೃಢ ಮತ್ತು ಸಮರ್ಥ ಭಾರತದ ಅಭಿವೃದ್ಧಿ ಸಾಧ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು. ವಿವಿಧ ಉದಾಹರಣೆಗಳ ಮೂಲಕ ಮಾಹಿತಿ ನೀಡಿ, ಸಮಸ್ಯೆಗಳಿಗೆ ಬಲಿಯಾಗದಂತೆ ಮುನ್ನೆಚ್ಚರಿಕೆ ವಹಿಸುವಂತೆ ಕರೆ ನೀಡಿದರು. ಜಿಲ್ಲಾ ಸೌಹಾರ್ದ ಸಹಕಾರಿಗಳ ಒಕ್ಕೂಟದ ನಿರ್ದೇಶಕ ನಾಗಶೆಟ್ಟಿ ಪಾಟೀಲ್ ಮಾತನಾಡಿ, ಸಹಕಾರಿಗಳ ವ್ಯವಹಾರ ಅಭಿವೃದ್ಧಿಗೆ ಅನುಕೂಲವಾಗುವ ಉದ್ದೇಶದಿಂದ ತರಬೇತಿ ಆಯೋಜಿಸಲಾಗಿದ್ದು, ಎಲ್ಲರೂ ಇದರ ಸದುಪಯೋಗ ಪಡೆಯಬೇಕು ಎಂದು ಹೇಳಿದರು. ಜಿಲ್ಲೆಯ 30 ಸೌಹಾರ್ದ ಸಹಕಾರಿಗಳಿಂದ ಸುಮಾರು 60 ಪ್ರತಿನಿಧಿಗಳು ಹಾಗೂ ಸಿಬ್ಬಂದಿ ಭಾಗವಹಿಸಿ ತರಬೇತಿಯ ಪ್ರಯೋಜನ ಪಡೆದರು. ಈ ಸಂದರ್ಭದಲ್ಲಿ ಶ್ರೀಕಾಂತ್ ಸ್ವಾಮಿ, ಜಿಲ್ಲಾ ಸೌಹಾರ್ದ ಅಭಿವೃದ್ಧಿ ಅಧಿಕಾರಿ ರಾಜೇಶ್ ಕೆ.ಎಂ., ಸಂಜಯ್ ಕ್ಯಾಸಾ, ಶಶಿಧರ್ ಎಲೆ ಹಾಗೂ ಡಾ. ಪೃಥ್ವೀರಾಜ್ ಲಕ್ಕಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕಲಬುರಗಿ | 13ನೆಯ ಕಲಬುರಗಿ ಚಿತ್ರಸಂತೆಗೆ ಅದ್ಧೂರಿ ಚಾಲನೆ
ಕಲಬುರಗಿ: ಕಲೆ ಎಂಬುದು ಬದುಕಿನ ಅಭಿವ್ಯಕ್ತಿ. ಜಿಲ್ಲೆಯಲ್ಲಿ ನಾಟಕೋತ್ಸವ ಮತ್ತು ಚಿತ್ರಸಂತೆಗಳು ಏಕಕಾಲದಲ್ಲಿ ನಡೆಯುತ್ತಿರುವುದು ಕಲಾ ಪ್ರೇಮಿಗಳಿಗೆ ಹಬ್ಬದಂತಾಗಿದೆ ಎಂದು ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್ ಹೇಳಿದರು. ನಗರದಲ್ಲಿ ರವಿವಾರ ಕನ್ನಡ ಭವನದ ಆವರಣದಲ್ಲಿರುವ ಬಾಪೂಗೌಡ ದರ್ಶನಾಪುರ ರಂಗಮಂದಿರದಲ್ಲಿ ದೃಶ್ಯಬೆಳಕು ಸಾಂಸ್ಕೃತಿಕ ಸಂಸ್ಥೆ, ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರುಗಳ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ 13ನೇ ಕಲಬುರಗಿ ಚಿತ್ರ ಸಂತೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಜಿಲ್ಲೆಯು ಪ್ರತಿಭೆಗಳ ಗಣಿಯಾಗಿದ್ದು, ಇಲ್ಲಿನ ಕಲಾವಿದರಲ್ಲಿ ಅದ್ಭುತವಾದ ಹುಮ್ಮಸ್ಸು ಮತ್ತು ಕಲಾ ನೈಪುಣ್ಯತೆ ಇದೆ. ಇಂತಹ ವೇದಿಕೆಗಳು ಕಲಾವಿದರ ಪ್ರತಿಭೆಯನ್ನು ಜಗತ್ತಿಗೆ ಪರಿಚಯಿಸಲು ಸಹಕಾರಿಯಾಗುತ್ತವೆ ಎಂದರು. ಹಿರಿಯ ಚಿತ್ರಕಲಾವಿದರು ಮತ್ತು ಚೈತನ್ಯಮಯ ಟ್ರಸ್ಟ್ ನಿರ್ದೇಶಕ ಎ.ಎಸ್ ಪಾಟೀಲ, ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಶರಣಬಸಪ್ಪ ಪಪ್ಪಾ, ಬಿಸಿಲು ಆರ್ಟ ಗ್ಯಾಲರಿ ಮುಖ್ಯಸ್ಥ ವಿ. ಬಿ. ಬಿರಾದಾರ ಮಾತನಾಡಿದರು. ಈ ಸಂದರ್ಭದಲ್ಲಿ ಹಿರಿಯ ಕಲಾವಿದರು ಮತ್ತು ಕರ್ನಾಟಕ ಲಲಿತಕಲ ಅಕಾಡೆಮಿ ಸದಸ್ಯ ಬಸವರಾಜ್ ಎಲ್. ಜಾನೆ, ರೋಟರಿ ಕ್ಲಬ್ ಆಫ್ ಗುಲಬರ್ಗಾ ನಾರ್ಥ ಅಧ್ಯಕ್ಷ ಆನಂದ ದಂಡೋತಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ್ ತೇಗಲತಿಪ್ಪಿ, ಖ್ಯಾತ ವಾಣಿಜ್ಯೋದ್ಯಮಿ ರಾಧೇಶ್ಯಾಮ ಠಾಕೂರ, ದಿ ಆರ್ಟ್ ಇಂಟ್ರಿಗೇಶನ್ ಫೈನ್ ಆರ್ಟ್ ಕಾಲೇಜ್ ಪ್ರಾಚಾರ್ಯ ಎಮ್.ಎಚ್ ಬೆಳಮಗಿ, ಸಂಯೋಜಕ ಡಾ. ಪರಶುರಾಮ್ ಪಿ. ಉಪಸ್ಥಿತರಿದ್ದರು.
ಜೇವರ್ಗಿ | ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅನಿರ್ದಿಷ್ಟಾವಧಿ ಧರಣಿ
ತಾಲೂಕಿನ ಹರನೂರು ಗ್ರಾಮ ಪಂಚಾಯತ್ ಕಚೇರಿ ಮುಂದೆ ರೈತರ ವಿವಿಧ ಜನಪರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕಳೆದ 10 ದಿನಗಳಿಂದ ಹಗಲು–ರಾತ್ರಿ ಅನಿರ್ದಿಷ್ಟ ಕಾಲ ಧರಣಿ ಸತ್ಯಾಗ್ರಹ ಮುಂದುವರಿದಿದೆ. ಕರ್ನಾಟಕ ಪ್ರಾಂತ ರೈತ ಸಂಘದ ಹರನೂರು ಹಾಗೂ ರೇವನೂರು ಗ್ರಾಮ ಘಟಕಗಳ ನೇತೃತ್ವದಲ್ಲಿ ನಡೆಯುತ್ತಿರುವ ಈ ಪ್ರತಿಭಟನೆಯಲ್ಲಿ, ಬೆಳೆ ಪರಿಹಾರ ಸಿಗದೆ ಸಂಕಷ್ಟದಲ್ಲಿರುವ ರೈತರಿಗೆ ತಕ್ಷಣ ಪರಿಹಾರ ಧನ ವಿತರಿಸಬೇಕು ಹಾಗೂ ಬಾಕಿ ಉಳಿದಿರುವ ವಿಮೆ ಹಣ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಲಾಗಿದೆ. ಇತ್ತೀಚೆಗೆ ತೊಗರಿ ಬೆಳೆಗಳಿಗೆ ನಟೆ ರೋಗ, ಗೊಡ್ಡು ರೋಗ ಸೇರಿದಂತೆ ವಿವಿಧ ರೋಗಬಾಧೆಗಳು ಕಾಣಿಸಿಕೊಂಡಿದ್ದು, ರೈತರು ಭಾರೀ ಆರ್ಥಿಕ ನಷ್ಟ ಅನುಭವಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಉತ್ತಮ ಗುಣಮಟ್ಟದ ಸಂಸ್ಕರಿತ ತೊಗರಿ ಬೀಜವನ್ನು ಜೂನ್–ಜುಲೈ ತಿಂಗಳಲ್ಲಿ ಸರ್ಕಾರದಿಂದ ವಿತರಿಸಬೇಕು ಎಂದು ಹೋರಾಟಗಾರರು ಒತ್ತಾಯಿಸಿದ್ದಾರೆ. ರೈತರು ಬೆಳೆಯುವ ಎಲ್ಲಾ ಬೆಳೆಗಳಿಗೆ ನ್ಯಾಯಸಮ್ಮತ ಬೆಂಬಲ ಬೆಲೆ ನಿಗದಿಪಡಿಸಬೇಕು ಹಾಗೂ ಎಂ.ಎಸ್.ಸ್ವಾಮಿನಾಥನ್ ವರದಿ ಜಾರಿಗೆ ತರಬೇಕು. ಕೃಷಿ ಉತ್ಪಾದನಾ ವೆಚ್ಚದ ಆಧಾರದ ಮೇಲೆ ಲಾಭದಾಯಕ ಬೆಲೆ ನೀಡಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಗಿದೆ. 2005ರ ಉದ್ಯೋಗ ಖಾತ್ರಿ ಕಾಯ್ದೆಯನ್ನು ಬಲಪಡಿಸಿ, ಒಂದು ದಿನದ ಕೂಲಿಯನ್ನು 700 ರೂ. ಗೆ ಹೆಚ್ಚಿಸಿ ವರ್ಷಕ್ಕೆ ಕನಿಷ್ಠ 250 ದಿನಗಳ ಕೆಲಸದ ಅವಕಾಶ ಒದಗಿಸಬೇಕು. ಇತ್ತೀಚೆಗೆ ಜಾರಿಗೆ ತಂದಿರುವ ಹೊಸ ಯೋಜನೆಗೆ ಸಂಬಂಧಿಸಿದ ಬದಲಾವಣೆಗಳನ್ನು ಹಿಂಪಡೆಯಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಸುಭಾಷ್ ಹೊಸಮನಿ, ಮಲ್ಕಪ್ಪ ಹರನೂರು, ಶಂಕ್ರಪ್ಪ ಮ್ಯಾಗೇರಿ, ಶ್ರೀಕಾಂತ್ ದಾಸರ್, ಸತೀಶ್ ರಾಜು, ಸಾತ್ ಕೇಡ (ರೇವನೂರು), ಬಸಮ್ಮ ಮ್ಯಾಗೇರಿ, ನಾಗಮ್ಮ ಅನ್ನೂರ್, ಮಲ್ಲಮ್ಮ ಕಟ್ಟಿಮನಿ, ಶಶಿಕಲಾ ಕಟ್ಟಿಮನಿ, ಮಾನಪ್ಪ ಚಳಗೇರಿ, ಉಸ್ಮಾನ್ ಅಲಿ ಇನಾಮ್ದಾರ್ ಸೇರಿದಂತೆ ಹಲವರು ಭಾಗವಹಿಸಿದ್ದರು.
Ind Vs Sa Highlights- ಹರಿಣಗಳ ಎದುರು ಪರದಾಡಿದ ಟೀಂ ಇಂಡಿಯಾ; ಇನ್ನು ಸೆಮಿಫೈನಲ್ ತಲುಪಲು ದಾರಿ ಯಾವುದಯ್ಯಾ?
ಅಹ್ಮದಾಬಾದ್: ಐಸಿಸಿ ನಲ್ಲಿ ಭಾರತದ ಅಜೇಯ ಓಟಕ್ಕೆ ದಕ್ಷಿಣ ಆಫ್ರಿಕಾ ಬ್ರೇಕ್ ಹಾಕಿದೆ. ಈ ಮೂಲಕ 2024ರ ಆವೃತ್ತಿಯ ಫೈನಲ್ ನಲ್ಲಾದ ಸೋಲಿಗೆ ಸೇಡು ತೀರಿಸಿಕೊಂಡಿದೆ. ಪಂದ್ಯದ ಆರಂಭದಲ್ಲಿ ಸಿಕ್ಕ ಯಶಸ್ಸನ್ನು ಗೆಲುವನ್ನಾಗಿ ಪರಿವರ್ತಿಸಲು ಸಾಧ್ಯವಾಗದ ಭಾರತ ತಂಡ 76 ರನ್ ಗಳಷ್ಟು ದೊಡ್ಡ ಅಂತರದಿಂದ ಸೋಲುವ ಮೂಲಕ ಇದೀಗ ಸೆಮಿಫೈನಲ್ ಹಾದಿಯನ್ನು ಕಠಿಣ ಮಾಡಿಕೊಂಡಿದೆ. ಸದ್ಯಕ್ಕೆ ಮುಂದಿನ ಪಂದ್ಯಗಳಲ್ಲಿ ಜಿಂಬಾಬ್ವೆ ಮತ್ತು ವೆಸ್ಟ್ ಇಂಡೀಸ್ ವಿರುದ್ಧ ದೊಡ್ಡ ಗೆಲುವು ಮಾತ್ರ ಭಾರತವನ್ನು ಅಂಕಪಟ್ಟಿಯಲ್ಲಿ ಸುರಕ್ಷಿತವಾಗಿಡಬಹುದು. ಯಾಕೆಂದರೆ ದಕ್ಷಿಣ ಆಪ್ರಿಕಾ ವಿರುದ್ಧ ಭಾರತ ತಂಡ ದೊಡ್ಡ ಅಂತರದಿಂದ ಸೋತಿರುವುದರಿಂದ ರನ್ ರೇಟ್ ಸಹ ಕುಸಿದಿದೆ. ಇದು ಅಂಕಪಟ್ಟಿಯಲ್ಲಿ ದೊಡ್ಡ ವ್ಯತ್ಯಾಸ ತರಬಲ್ಲುದು. ಇನ್ನು ಯಾವುದಾದರೊಂದು ಪಂದ್ಯ ಮಳೆಗೆ ಆಹುತಿಯಾದಲ್ಲಿ ತಂಡ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಲಿದೆ.(ಅಂಕಪಟ್ಟಿ)ಅಹ್ಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಸೂಪರ್ ಸಿಕ್ಸ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ತಂಡ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 187 ರನ್ ಗಳಿಸಿತು. ಇದಕ್ಕುತ್ತರವಾಗಿ ಭಾರತ ತಂಡ 18.5 ಓವರ್ ಗಳಲ್ಲಿ 111 ರನ್ ಗಳಿಗೆ ಆಲೌಟ್ ಆಯಿತು. ಮಧ್ಯಮ ಕ್ರಮಾಂಕದಲ್ಲಿ ಶಿವಂ ದುಬೆ ಉತ್ತಮ ಪ್ರಯತ್ನವನ್ನೇ ನಡೆಸಿದರೂ ಉಳಿದ ಬ್ಯಾಟರ್ ಗಳು ವಿಫಲರಾಗಿದ್ದರಿಂದ ಯಾವುದೇ ರೀತಿಯ ಪ್ರಯೋಜನವಾಗಲಿಲ್ಲ. (). ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಆಯ್ದುಕೊಂಡ ದಕ್ಷಿಣ ಆಫ್ರಿಕಾ ತಂಡ ಭಾರತದ ವೇಗಿಗಳಾದ ಅರ್ಶದೀಪ್ ಸಿಂಗ್ ಮತ್ತು ಜಸ್ಪ್ರೀತ್ ಬುಮ್ರಾ ಅವರು ವಿಪರೀತ ಕಾಟ ನೀಡಿದರು. ಪರಿಣಾಮ 20 ರನ್ ಆಗುವಷ್ಟರಲ್ಲಿಯೇ ದಕ್ಷಿಣ ಆಫ್ರಿಕಾ ತಂಡ 3 ವಿಕೆಟ್ ಗಳನ್ನು ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ಡಿವಾಲ್ಡ್ ಬ್ರೇವಿಸ್ ಮತ್ತು ಡೇವಿಡ್ ಮಿಲ್ಲರ್ ಅವರು 4ನೇ ವಿಕೆಟ್ ಗೆ 97 ರನ್ ಗಳ ಜೊತೆಯಾಟವಾಡಿದ್ದು ಪಂದ್ಯದ ಚಿತ್ರಣವನ್ನೇ ಬದಲಿಸಿತು. ಸಂಕ್ಷಿಪ್ತ ಸ್ಕೋರ್ ದಕ್ಷಿಣ ಆಫ್ರಿಕಾ 20 ಓವರ್ ಗಳಲ್ಲಿ 187/7, ಡಿವಾಲ್ಡ್ ಬ್ರೆವಿಸ್ 45(29), ಡೇವಿಡ್ ಮಿಲ್ಲರ್ (63), ತ್ರಿಸ್ಟನ್ ಸ್ಟಬ್ಸ್ 44(24), ಜಸ್ಪ್ರೀತ್ ಬುಮ್ರಾ 15ಕ್ಕೆ 3, ಅರ್ಶದೀಪ್ ಸಿಂಗ್ 28ಕ್ಕೆ 2 ಭಾರತ 18.5 ಓವರ್ ಗಳಲ್ಲಿ 111ಕ್ಕೆ ಆಲೌಟ್, ಶಿವಂ ದುಬೆ42(37), ಸೂರ್ಯಕುಮಾರ್ ಯಾದವ್ 18(22), ಹಾರ್ದಿಕ್ ಪಾಂಡ್ಯ 18(17), ಮಾರ್ಕೋ ಯಾನ್ಸನ್ 22ಕ್ಕೆ 4, ಕೇಶವ್ ಮಹಾರಾಜ್ 24ಕ್ಕೆ 3, ಕಾರ್ಬಿನ್ ಬಾಷ್ 12ಕ್ಕೆ 2.
Kalaburagi | ಕಲಿಕಾ ಸಾಮರ್ಥ್ಯದೊಂದಿಗೆ ಸಾಧನೆಗೆ ಪ್ರೋತ್ಸಾಹಿಸಿ: ಪ್ರೊ. ರಮೇಶ್ ಲಂಡನಕರ್
ಕಲಬುರಗಿ: ಮಕ್ಕಳಲ್ಲಿ ಕಲಿಕಾ ಸಾಮರ್ಥ್ಯದ ಜೊತೆಗೆ ಗುರಿ ಸಾಧನೆಗೆ ಪ್ರೋತ್ಸಾಹ ನೀಡುವುದು ಶಿಕ್ಷಕರ ಕರ್ತವ್ಯ. ಪಾಠದ ಜೊತೆಗೆ ಓದುವ ಆಸಕ್ತಿ ಮತ್ತು ಆತ್ಮವಿಶ್ವಾಸ ಬೆಳೆಸಬೇಕು ಎಂದು ಗುಲ್ಬರ್ಗಾ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ರಮೇಶ ಲಂಡನಕರ್ ಹೇಳಿದರು. ಗುಲ್ಬರ್ಗಾ ವಿಶ್ವವಿದ್ಯಾಲಯದ ಕನ್ನಡ ಪೂರ್ವ ಪ್ರಾಥಮಿಕ, ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆ ಮಹಾತ್ಮ ಗಾಂಧಿ ಸಭಾಂಗಣದಲ್ಲಿ ಆಯೋಜಿಸಿದ ಶಾಲಾ ವಾರ್ಷಿಕೋತ್ಸವ ಸಮಾರಂಭವನ್ನು ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಪೋಷಕರು ಮನೆಯಲ್ಲಿ ಮಕ್ಕಳ ಕಲಿಕೆ ಮತ್ತು ಅಭ್ಯಾಸದ ಕಡೆಗೆ ಗಮನಹರಿಸಬೇಕು. ಓದಿನಲ್ಲಿ ಆಸಕ್ತಿ, ಕಲಿಕೆಯಲ್ಲಿ ಏಕಾಗ್ರತೆ, ಪರೀಕ್ಷಾ ಸಿದ್ಧತೆ ಕುರಿತು ಮಾರ್ಗದರ್ಶನ ಮಾಡಬೇಕು. ಉತ್ತಮ ಆಲೋಚನೆ ಮೂಲಕ ಶಿಕ್ಷಣದ ಮಹತ್ವವನ್ನು ತಿಳಿಸಬೇಕು ಎಂದರು. ಸಿಂಡಿಕೇಟ್ ಸದಸ್ಯ ಎಸ್.ಪಿ.ಸುಳ್ಳದ ಮಾತನಾಡಿ, ಮಕ್ಕಳು ಕಲಿಕೆ ಸಾಧನೆಯಲ್ಲಿ ಶಿಕ್ಷಕರು ಕಾಳಜಿ ತೋರಿಸಬೇಕು. ಬಡ ಮಕ್ಕಳು ಸರ್ಕಾರಿ ಶಾಲೆಗಳನ್ನೇ ಅವಲಂಬಿಸಿದ್ದಾರೆ. ಅವರ ಉಜ್ವಲ ಭವಿಷ್ಯ ಶಿಕ್ಷಕರ ಕೈಲಿದೆ. ಅಗತ್ಯವಿರುವ ಸೌಲಭ್ಯಗಳನ್ನು ನೀಡುವ ಮೂಲಕ ಶಿಕ್ಷಕರು ಪ್ರೋತ್ಸಾಹ ನೀಡುವ ಮೂಲಕ ಶಾಲಾ ಅಭಿವೃದ್ಧಿ ಕಡೆಗೂ ಆಸಕ್ತಿ ವಹಿಸಬೇಕು ಎಂದರು. ಪ್ರಾಥಮಿಕ ಶಾಲೆಯ ಮುಖ್ಯೋಪಧ್ಯಾಯರಾದ ಪಿ.ಚಂದ್ರಕಲಾ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರೌಢಶಾಲೆ ಮುಖ್ಯೋಪಧ್ಯಾಯ ಸೂರ್ಯಕಾಂತ ಅಮರೆ ಅತಿಥಿ ಗಣ್ಯರನ್ನು ಸ್ವಾಗತಿಸಿ ವಾರ್ಷಿಕ ವರದಿ ಮಂಡಿಸಿದರು. ಹಣಕಾಸು ಅಧಿಕಾರಿ ಜಯಾಂಬಿಕಾ, ಶಾಲಾ ಸುಧಾರಣಾ ಸಮಿತಿ ಸದಸ್ಯರಾದ ಪ್ರೊ. ದೇವಿದಾಸ ಮಾಲೆ ಬಿ.ಎಂ. ರುದ್ರವಾಡಿ, ಪ್ರಾಥಮಿಕ ಮತ್ತು ಪ್ರೌಢ ಶಾಲೆ ಮೇಲುಸ್ತುವಾರಿಗಳಾದ ಡಾ. ಚಂದ್ರಕಾoತ ಬಿರಾದಾರ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸಿಂಡಿಕೇಟ ಸದಸ್ಯರು, ವಿದ್ಯಾವಿಷಯಕ ಪರಿಷತ್ ಸದಸ್ಯರು, ಶಾಲಾ ಸುಧಾರಣಾ ಸಮಿತಿಯ ಸದಸ್ಯರು, ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿ, ವಿದ್ಯಾರ್ಥಿ, ವಿದ್ಯಾರ್ಥಿನಿಯರು, ಪಾಲಕರು, ಪೋಷಕರು, ವಿಶ್ವವಿದ್ಯಾಲಯದ ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿಗಳು ಹಾಗೂ ನಾಗರಿಕರು ಭಾಗವಹಿಸಿದ್ದರು. ಶಿವಕುಮಾರ್ ಸಾವಳಗಿ ಹಾಗೂ ಜಗದೇವಿ ಬಿರಾದಾರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿದರು. ಅಮೃತಾ ಪ್ರಾರ್ಥಿಸಿದರು. ಶಿಕ್ಷಕ ಸೂರ್ಯಕಾಂತ್ ಹದಗಲ್ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.
Kalaburagi | ಕಷ್ಟಗಳನ್ನು ಜಯಿಸಿ ಐಪಿಎಸ್ ಆಗಿದ್ದೇನೆ: ಪೊಲೀಸ್ ಆಯುಕ್ತ ಡಾ.ಶರಣಪ್ಪ ಢಗೆ
ಹಾಗರಗುಂಡಿಗಿಯ ಸರಕಾರಿ ಶಾಲೆಯಲ್ಲಿ ವಾರ್ಷಿಕ ಸ್ನೇಹ ಸಮ್ಮೇಳನ
ಆಳಂದ | ಬಾಹ್ಯಾಕಾಶ-ಏರೋಸ್ಪೇಸ್ ಕ್ಷೇತ್ರದಲ್ಲಿ ಅಪಾರ ಅವಕಾಶ : ಇಸ್ರೋ ವಿಜ್ಞಾನಿ ಡಾ.ಪುನೀತ್
ಆಳಂದ : ಬಾಹ್ಯಾಕಾಶ ತಂತ್ರಜ್ಞಾನ ಮತ್ತು ಏರೋಸ್ಪೇಸ್ ಎಂಜಿನಿಯರಿಂಗ್ ಕ್ಷೇತ್ರಗಳಲ್ಲಿ ಅಪಾರ ಅವಕಾಶಗಳಿದ್ದು, ವಿದ್ಯಾರ್ಥಿಗಳು ಬಾಹ್ಯಾಕಾಶ ಸಂಶೋಧನೆ ಮತ್ತು ನಾವೀನ್ಯತೆಯಲ್ಲಿ ವೃತ್ತಿಜೀವನವನ್ನು ಸಕ್ರಿಯವಾಗಿ ಮುಂದುವರಿಸಿ, ಭಾರತದ ಬಾಹ್ಯಾಕಾಶ ವಿಸ್ತರಣೆಯ ಭಾಗವಾಗಬೇಕು ಎಂದು ಇಸ್ರೋ ವಿಜ್ಞಾನಿ ಹಾಗೂ ಐಇಇಇ ಏರೋಸ್ಪೇಸ್ ಮತ್ತು ಎಲೆಕ್ಟ್ರಾನಿಕ್ ಸಿಸ್ಟಮ್ಸ್ ಸೊಸೈಟಿಯ (ಎಇಎಸ್ಎಸ್) ಜಾಗತಿಕ ಉಪಾಧ್ಯಕ್ಷ ಡಾ.ಪುನೀತ್ ಕುಮಾರ್ ಮಿಶ್ರಾ ಹೇಳಿದರು. ತಾಲೂಕಿನ ಕಡಗಂಚಿ ಬಳಿಯ ಸಿಯುಕೆ (ಸೆಂಟ್ರಲ್ ಯುನಿವರ್ಸಿಟಿ ಆಫ್ ಕರ್ನಾಟಕ) ಆವರಣದಲ್ಲಿ ಆಯೋಜಿಸಿದ್ದ ಐಇಇಇ ಏರೋಸ್ಪೇಸ್ ಮತ್ತು ಎಲೆಕ್ಟ್ರಾನಿಕ್ ಸಿಸ್ಟಮ್ಸ್ ಸೊಸೈಟಿ (ಎಇಎಸ್ಎಸ್) ವಿದ್ಯಾರ್ಥಿ ಶಾಖೆಯ ಉದ್ಘಾಟನಾ ಸಮಾರಂಭ ಹಾಗೂ “ರೇಡಿಯೋ ಫ್ರೀಕ್ವೆನ್ಸಿ ಮತ್ತು ಮೈಕ್ರೋವೇವ್ ಸಿಸ್ಟಮ್ ವಿನ್ಯಾಸ: ಸಿಮ್ಯುಲೇಶನ್ನಿಂದ ಮಾಪನದವರೆಗೆ” ಎಂಬ ವಿಷಯದ ಐದು ದಿನಗಳ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಬಾಹ್ಯಾಕಾಶ ಸಂಶೋಧನೆ, ಉಪಗ್ರಹ ತಂತ್ರಜ್ಞಾನ, ಸಂವಹನ ವ್ಯವಸ್ಥೆಗಳು ಹಾಗೂ ನವೀನ ಸಂಶೋಧನಾ ಕ್ಷೇತ್ರಗಳಲ್ಲಿ ದೇಶದ ಯುವ ಪ್ರತಿಭೆಗಳಿಗೆ ವಿಶಾಲ ಅವಕಾಶಗಳಿದ್ದು, ಪ್ರಾಯೋಗಿಕ ಜ್ಞಾನ ಹಾಗೂ ಕೈಗಾರಿಕಾ ಅನುಭವವನ್ನು ಹೊಂದಿಕೊಳ್ಳುವ ಮೂಲಕ ವಿದ್ಯಾರ್ಥಿಗಳು ಜಾಗತಿಕ ಮಟ್ಟದಲ್ಲಿ ತಮ್ಮ ಗುರುತನ್ನು ಮೂಡಿಸಬಹುದು ಎಂದು ಅವರು ಸಲಹೆ ನೀಡಿದರು. ಅತಿಥಿಗಳಾಗಿ ಭಾಗವಹಿಸಿದ್ದ ಟ್ರೆಲ್ಲಿಸೈನ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ನ ಸ್ಥಾಪಕ ಹಾಗೂ ನಿರ್ದೇಶಕ ಮೆಹ್ತಾ ಎಸ್.ಡಿ. ಮಾತನಾಡಿದರು. ಸಿಯುಕೆಯ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಅವರು ಅಧ್ಯಕ್ಷತೆ ವಹಿಸಿ, ಇಂಜಿನಿಯರಿಂಗ್ ನಿಕಾಯದ ಶೈಕ್ಷಣಿಕ ಹಾಗೂ ಸಂಶೋಧನಾ ಕೊಡುಗೆಗಳನ್ನು ಶ್ಲಾಘಿಸಿದರು. ವಿದ್ಯಾರ್ಥಿಗಳು ‘ವಿಕಸಿತ ಭಾರತ’ ಹಾಗೂ ರಾಷ್ಟ್ರ ನಿರ್ಮಾಣದ ರಾಷ್ಟ್ರೀಯ ದೃಷ್ಟಿಕೋನಕ್ಕೆ ಅನುಗುಣವಾಗಿ ನಾವೀನ್ಯತೆ ಮತ್ತು ಸಂಶೋಧನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು. ಡಾ.ನೃಸಿಂಘ ಪ್ರಧಾನ್ ಕಾರ್ಯಕ್ರಮಕ್ಕೆ ಸ್ವಾಗತಿಸಿ ಉದ್ದೇಶವನ್ನು ವಿವರಿಸಿದರು. ಈ ಸಂದರ್ಭದಲ್ಲಿ ಪ್ರೊ.ಪ್ರಮೋದ್ ಕುಮಾರ್, ಪ್ರೊ.ರಾಜೀವ್ ಜೋಶಿ ಸೇರಿದಂತೆ ಇತರ ಅಧ್ಯಾಪಕರು, ಸಂಶೋಧಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Kerala | ಮೆಟ್ರೋ ಪಿಲ್ಲರ್ ಮೇಲೆ 15 ದಿನದಿಂದ ಸಿಲುಕಿದ್ದ ‘ಸುಭಾಷ್ʼನ ರಕ್ಷಣೆ
ಆರು ಗಂಟೆಗಳ ಯಶಸ್ವಿ ಕಾರ್ಯಾಚರಣೆಯ ʼಕೇರಳ ಸ್ಟೋರಿʼ ವೈರಲ್
ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯಲ್ಲಿ ಮತ್ತೆ ಕಾಡಾನೆ ದಾಳಿಗೆ ಮಹಿಳೆಯೊಬ್ಬರು ಬಲಿಯಾಗಿದ್ದಾರೆ. ಅಲ್ಲದೆ ಕಾಡಾನೆ ದಾಳಿಯಿಂದ ಬಲಿಯಾದ ಮಹಿಳೆಯ ಮೃತದೇಹವನ್ನು ಇರಿಸಿ ಪ್ರತಿಭಟನೆ ನಡೆಸಿದ ವೇಳೆ ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಪ್ರತಿಭಟನಾಕಾರರ ಮೇಲೆ ಪೊಲೀಸರು ಲಘು ಲಾಠಿ ಚಾರ್ಜ್ ನಡೆಸಿದ್ದಾರೆ. ಈ ಘಟನೆ ಇದೀಗ ಜಿಲ್ಲೆಯಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಪ್ರತಿಭಟನೆ ವೇಳೆ ರೈತರು ಹಾಗೂ ಕಾರ್ಮಿಕರ ಮೇಲೆ ಲಘು
ಆಪರೇಶನ್ ಡೆಮಾಲಿಶ್ಮೆಂಟ್: ಭದ್ರತಾಪಡೆಗಳಿಂದ 200ಕ್ಕೂ ಅಧಿಕ ನಕ್ಸಲ್ ಸ್ಮಾರಕಗಳ ಧ್ವಂಸ
ಹೊಸದಿಲ್ಲಿ,ಫೆ.22: ನಕ್ಸಲ್ ಚಟುವಟಿಕೆಗಳ ವಿರುದ್ಧ ಕಾರ್ಯಾಚರಣೆ ನಿರ್ಣಾಯಕ ಹಂತ ತಲುಪಿರುವುದಾಗಿ ಭದ್ರತಾಪಡೆಗಳು ಘೋಷಿಸಿವೆ. ನಕ್ಸಲೀಯರು ತಮ್ಮ ನಾಯಕರ ಸ್ಮರಣಾರ್ಥವಾಗಿ ಹಾಗೂ ನಕ್ಸಲ್ ಸಿದ್ಧಾಂತಗಳನ್ನು ಪ್ರಚಾರ ಮಾಡಲು ಸ್ಥಾಪಿಸಿದ ಸ್ಮಾರಕಗಳನ್ನು ಧ್ವಂಸಗೊಳಿಸುವ ಕಾರ್ಯಾಚರಣೆಯನ್ನು ಭದ್ರತಾ ಪಡೆಗಳು ಇದೀಗ ಆರಂಭಿಸಿರುವುದಾಗಿ ತಿಳಿದುಬಂದಿದೆ. ‘ಆಪರೇಶನ್ ಡೆಮಾಲಿಶ್ಮೆಂಟ್’ ಎಂಬ ಹೆಸರಿನ ಈ ಕಾರ್ಯಾಚರಣೆಯಡಿ ಮಹಾರಾಷ್ಟ್ರ ಹಾಗೂ ಗಡಚಿರೋಳಿ ಜಿಲ್ಲೆಗಳಲ್ಲಿ ಈವರೆಗೆ ಸುಮಾರು 203 ನಕ್ಸಲ್ ಸ್ಮಾರಕಗಳನ್ನು ನಾಶಪಡಿಸಲಾಗಿದೆಯೆಂದು ಭದ್ರತಾಪಡೆಗಳ ಅಧಿಕಾರಿಗಳು ತಿಳಿಸಿದ್ದಾರೆ. ನಕ್ಸಲ್ ಚಟುವಟಿಕೆಗಳಿಂದ ಪೀಡಿತವಾದ ಈ ಎರಡು ರಾಜ್ಯಗಳಲ್ಲಿ ನಕ್ಸಲೀಯರ ಸ್ಮಾರಕಗಳ ಧ್ವಂಸ ಕಾರ್ಯಾಚರಣೆಯು ಅಭೂತಪೂರ್ವ ವೇಗವನ್ನು ಪಡೆದುಕೊಂಡಿತೆಂದು ಅಧಿಕಾರಿಗಳು ತಿಳಿಸಿದ್ದಾರೆ. ಚತ್ತೀಸ್ಗಡದಲ್ಲಿ 2024ರಲ್ಲಿ 8 ಹಾಗೂ 2025ರಲ್ಲಿ 11 ನಕ್ಸಲೀಯ ಸ್ಮಾರಕಗಳನ್ನು ನಾಶಪಡಿಸಲಾಗಿದೆ. ಆದರೆ 2026ನೇ ಇಸವಿಯಲ್ಲಿ ಸುಮಾರು 130 ಸ್ಮಾರಕಗಳನ್ನು ಧ್ವಂಸಗೊಳಿಸಲಾಗಿದ್ದು ಇದರೊಂದಿಗೆ ಕಳೆದ 3 ವರ್ಷಗಳಲ್ಲಿ ನೆಲಸಮಗೊಳಿಸಲಾದ ನಕ್ಸಲ್ ಸ್ಮಾರಕಗಳ ಸಂಖ್ಯೆ 149ಕ್ಕೇರಿದೆ. ಮಹಾರಾಷ್ಟ್ರದಲ್ಲಿ 2023ರಲ್ಲಿ ಒಂದು ಸ್ಮಾರಕವನ್ನು ಧ್ವಂಸಪಡಿಸಲಾಗಿದ್ದರೆ, 2024ರಲ್ಲಿ ಎರಡು ಹಾಗೂ 2025ರಲ್ಲಿ ಏಳು ಸ್ಮಾರಕಗಳನ್ನು ನಾಶಪಡಿಸಲಾಗಿದೆ. 2026ರಲ್ಲಿ ಅಧಿಕಾರಿಗಳು ಇಂತಹ 45 ನಿರ್ಮಾಣಗಳನ್ನು ತೆರವುಗೊಳಿಸಿದ್ದಾರೆ. ಇದರೊಂದಿಗೆ ಮಹಾರಾಷ್ಟ್ರದಲ್ಲಿ ನಾಶಪಡಿಸಲಾದ ನಕ್ಸಲ್ ಸ್ಮಾರಕಗಳ ಸಂಖ್ಯೆ 55ಕ್ಕೇರಿದೆ.
ಫೆ.25ರಂದು ಪ್ರಧಾನಿ ಮೋದಿ ಇಸ್ರೇಲ್ಗೆ ಭೇಟಿ: ಬೆಂಜಮಿನ್ ನೆತನ್ಯಾಹು ಘೋಷಣೆ
ಜೆರುಸಲೇಂ, ಫೆ.22: ಭಾರತದ ಪ್ರಧಾನಿ ನರೇಂದ್ರ ಮೋದಿ ಎರಡು ದಿನಗಳ ಭೇಟಿಗಾಗಿ ಫೆಬ್ರವರಿ 25ರಂದು ಇಸ್ರೇಲ್ಗೆ ಆಗಮಿಸುವ ನಿರೀಕ್ಷೆಯಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ರವಿವಾರ ಹೇಳಿದ್ದಾರೆ. ಎರಡು ದಿನಗಳ ಅಧಿಕೃತ ಕಾರ್ಯಕ್ರಮದಲ್ಲಿ ಅವರು ಇಸ್ರೇಲ್ನ ಸಂಸತ್ತನ್ನು ಉದ್ದೇಶಿಸಿ ಮಾತನಾಡುತ್ತಾರೆ. ಅಲ್ಲದೆ ಪ್ರಧಾನಿ ನೆತನ್ಯಾಹು ಮತ್ತು ಅಧ್ಯಕ್ಷ ಇಸಾಕ್ ಹೆರ್ಝಾಗ್ರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ ಎಂದು ಇಸ್ರೇಲ್ ಸರಕಾರದ ಮೂಲಗಳು ಹೇಳಿವೆ.
ಜಮ್ಮುಕಾಶ್ಮೀರ| ಎನ್ಕೌಂಟರ್ನಲ್ಲಿ ಇಬ್ಬರು ಭಯೋತ್ಪಾದಕರ ಹತ್ಯೆ
ಶ್ರೀನಗರ,ಫೆ.22: ಜಮ್ಮುಕಾಶ್ಮೀರದ ಗುಡ್ಡಗಾಡು ಜಿಲ್ಲೆಯಾದ ಕಿಶ್ತವಾರ್ನಲ್ಲಿ ರವಿವಾರ ಭದ್ರತಾಪಡೆಗಳು ನಡೆಸಿದ ಎನ್ಕೌಂಟರ್ನಲ್ಲಿ ಇಬ್ಬರು ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ. ಎನ್ಕೌಂಟರ್ಗೆ ಬಲಿಯಾದ ಇಬ್ಬರು ಭಯೋತ್ಪಾದಕರ ಪೈಕಿ ಒಬ್ಬಾತ ಜೈಶೆ ಮೊಹಮ್ಮದ್ ಗುಂಪಿನ ಕಮಾಂಡರ್ ಸೈಫುಲ್ಲಾನೆಂದು ಶಂಕಿಸಲಾಗಿದೆ. ಭಯೋತ್ಪಾದಕರು ಅವಿತಿರುವ ಬಗ್ಗೆ ಜಮ್ಮುಕಾಶ್ಮೀರ ಪೊಲೀಸರು, ಗುಪ್ತಚರ ದಳ ಹಾಗೂ ಇತರ ಬೇಹುಗಾರಿಕಾ ಮೂಲಗಳಿಂದ ಲಭಿಸಿದ ಗುಪ್ತಚರ ಮಾಹಿತಿಗಳ ಆಧಾರದಲ್ಲಿ ಚಟ್ರೂ ಅರಣ್ಯ ಪ್ರದೇಶದಲ್ಲಿ ಸೇನೆ, ಪೊಲೀಸ್ ಹಾಗೂ ಸಿಆರ್ಪಿಎಫ್ ಪಡೆಗಳು ಆಪರೇಶನ್ ‘ಟ್ರಾಶಿ-I' ಹೆಸರಿನಲ್ಲಿ ಜಂಟಿ ಕಾರ್ಯಾಚರಣೆಯನ್ನು ಆರಂಭಿಸಿದವು ಎಂದು ವಕ್ತಾರರು ತಿಳಿಸಿದ್ದಾರೆ. ಈ ಸಂದರ್ಭ ನಡೆದ ಎನ್ಕೌಂಟರ್ನಲ್ಲಿ ಇಬ್ಬರು ಭಯೋತ್ಪಾದಕರನ್ನು ಹತ್ಯೆಗೈಯಲಾಗಿದೆ ಹಾಗೂ ಸ್ಥಳದಿಂದ ಎರಡು ಎಕೆ47 ರೈಫಲ್ಗಳು ಹಾಗೂ ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ರಕ್ಷಣಾ ವಕ್ತಾರರೊಬ್ಬರು ತಿಳಿಸಿದ್ದಾರೆ. ಎನ್ಕೌಂಟರ್ನಲ್ಲಿ ಬಲಿಯಾಗಿದ್ದಾನೆಂದು ಶಂಕಿಸಲಾದ ಸೈಫುಲ್ಲಾ ಜಮ್ಮುಕಾಶ್ಮೀರದ ಮೋಸ್ಟ್ ವಾಂಟೆಡ್ ಲಿಸ್ಟ್ ನಲ್ಲಿದ್ದ. ಕಳೆದ ಕೆಲವು ವರ್ಷಗಳಿಂದ ಈ ಪ್ರದೇಶದಲ್ಲಿ ಸಕ್ರಿಯನಾಗಿದ್ದ ಆತ, ಭದ್ರತಾ ಪಡೆಗಳ ವಿರುದ್ಧದ ಹಲವಾರು ದಾಳಿಗಳಲ್ಲಿ ಭಾಗಿಯಾಗಿದ್ದನೆನ್ನಲಾಗಿದೆ ಮತ್ತು ಈ ಹಿಂದೆ ಹಲವಾರು ಕಾರ್ಯಾಚರಣೆಗಳ ಸಂದರ್ಭ ತಪ್ಪಿಸಿಕೊಂಡಿದ್ದನೆನ್ನಲಾಗಿದೆ.
ಟಿ-20 ವಿಶ್ವಕಪ್| ಶ್ರೀಲಂಕಾ ವಿರುದ್ಧ ಇಂಗ್ಲೆಂಡ್ಗೆ ಭರ್ಜರಿ ಜಯ
ಕ್ಯಾಂಡಿ, ಫೆ.22: ಆರಂಭಿಕ ಆಟಗಾರ ಫಿಲ್ ಸಾಲ್ಟ್ ಏಕಾಂಗಿ ಹೋರಾಟ(62 ರನ್, 40 ಎಸೆತ, 6 ಬೌಂಡರಿ,2 ಸಿಕ್ಸರ್), ವಿಲ್ ಜಾಕ್ಸ್ (3-22)ಹಾಗೂ ಜೋಫ್ರಾ ಆರ್ಚರ್(2-20) ಮುಂದಾಳತ್ವದ ಶಿಸ್ತುಬದ್ಧ ಬೌಲಿಂಗ್ ದಾಳಿಯ ಬಲದಿಂದ ಇಂಗ್ಲೆಂಡ್ ಕ್ರಿಕೆಟ್ ತಂಡವು ಟಿ-20 ವಿಶ್ವಕಪ್ ಟೂರ್ನಿಯ ಸೂಪರ್-8 ಪಂದ್ಯದಲ್ಲಿ ಆತಿಥೇಯ ಶ್ರೀಲಂಕಾ ತಂಡವನ್ನು 51 ರನ್ಗಳ ಅಂತರದಿಂದ ಮಣಿಸಿದೆ. ಭರ್ಜರಿ ಗೆಲುವಿನೊಂದಿಗೆ ನೆಟ್ ರನ್ರೇಟ್ ಹೆಚ್ಚಿಸಿಕೊಂಡಿರುವ ಇಂಗ್ಲೆಂಡ್ ತಂಡವು ಸೂಪರ್-8ರ ಗ್ರೂಪ್-2ರ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ ತಲುಪಿದೆ. ಪಲ್ಲೆಕೆಲೆ ಇಂಟರ್ನ್ಯಾಶನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ರವಿವಾರ ನಡೆದ ಪಂದ್ಯದಲ್ಲಿ ಟಾಸ್ ಜಯಿಸಿದ ಶ್ರೀಲಂಕಾ ತಂಡವು ಇಂಗ್ಲೆಂಡ್ ತಂಡವನ್ನು ಬ್ಯಾಟಿಂಗ್ಗೆ ಇಳಿಸಿತು. ಲೆಗ್ ಸ್ಪಿನ್ನರ್ ದುನಿತ್ ವೆಲ್ಲಲಗೆ(3-26), ಮಹೀಶ್ ತೀಕ್ಷಣ (2-21)ಹಾಗೂ ದಿಲ್ಶನ್ ಮದುಶಂಕ (2-25)ಅವರು ಇಂಗ್ಲೆಂಡ್ ತಂಡವನ್ನು ನಿಗದಿತ 20 ಓವರ್ಗಳಲ್ಲಿ 9 ವಿಕೆಟ್ಗಳ ನಷ್ಟಕ್ಕೆ 146 ರನ್ಗೆ ನಿಯಂತ್ರಿಸಿದರು. ಗೆಲ್ಲಲು ಸುಲಭ ಸವಾಲು ಪಡೆದಿದ್ದ ಶ್ರೀಲಂಕಾ ತಂಡವು 16.4 ಓವರ್ಗಳಲ್ಲಿ ಕೇವಲ 95 ರನ್ಗೆ ಗಂಟುಮೂಟೆ ಕಟ್ಟಿತು. ನಿರಂತರವಾಗಿ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿದ ಶ್ರೀಲಂಕಾದ ಪರ ನಾಯಕ ದಸುನ್ ಶನಕ(30 ರನ್, 24 ಎಸೆತ, 1 ಬೌಂಡರಿ, 2 ಸಿಕ್ಸರ್)ಸರ್ವಾಧಿಕ ಸ್ಕೋರ್ ಗಳಿಸಿದರು. ಇಂಗ್ಲೆಂಡ್ ವಿರುದ್ಧ ಸತತ 12ನೇ ಪಂದ್ಯವನ್ನು ಸೋತಿರುವ ಲಂಕಾ ತಂಡ ಕಳಪೆ ಪ್ರದರ್ಶನ ಮುಂದುವರಿಸಿದೆ. ಎಂಟನೇ ಕ್ರಮಾಂಕದ ಬ್ಯಾಟರ್ ದುಶನ್ ಹೇಮಂತ(5 ರನ್)ಹಿಟ್ ವಿಕೆಟ್ನಿಂದ ಔಟಾಗಿರುವುದು ಶ್ರೀಲಂಕಾ ತಂಡ ಪಂದ್ಯದಲ್ಲಿ ಪರದಾಟ ನಡೆಸುತ್ತಿರುವುದರ ದ್ಯೋತಕವಾಗಿತ್ತು. ಶ್ರೀಲಂಕಾ ತಂಡ 5.5 ಓವರ್ಗಳಲ್ಲಿ 34 ರನ್ ಗಳಿಸುವಷ್ಟರಲ್ಲಿ ಅಗ್ರ ಕ್ರಮಾಂಕದ ಐವರು ಬ್ಯಾಟರ್ಗಳನ್ನು ಕಳೆದುಕೊಂಡು ಕಳಪೆ ಆರಂಭ ಪಡೆಯಿತು. ಪಥುಮ್ ನಿಸ್ಸಾಂಕ(9 ರನ್), ಕುಶಾಲ್ ಮೆಂಡಿಸ್(4 ರನ್), ಪವನ್ ರತ್ನನಾಯಕೆ(0), ಕಮಿಲ್ ಮಿಶಾರಾ(6 ರನ್)ಹಾಗೂ ದುನಿತ್ ವೆಲ್ಲಲಗೆ(10 ರನ್)ಪೆವಿಲಿಯನ್ಗೆ ಪರೇಡ್ ನಡೆಸಿದರು. ಲಿಯಾಮ್ ಡೌಸನ್ಗೆ ರಿಟರ್ನ್ ಕ್ಯಾಚ್ ನೀಡಿದ ಕಮಿಂದು ಮೆಂಡಿಸ್(13 ರನ್)ನಾಯಕ ಶನಕರೊಂದಿಗೆ ಆರನೇ ವಿಕೆಟ್ಗೆ 18 ರನ್ ಜೊತೆಯಾಟ ನಡೆಸಿದರು. ಇದು ಲಂಕಾ ಇನಿಂಗ್ಸ್ನಲ್ಲಿ ದಾಖಲಾದ ಗರಿಷ್ಠ ಜೊತೆಯಾಟವಾಗಿತ್ತು. ಇಂಗ್ಲೆಂಡ್ ತಂಡದ ಪರವಾಗಿ ಜಾಕ್ಸ್ ಆಲ್ರೌಂಡ್ ಪ್ರದರ್ಶನ(21 ರನ್, 3/22) ನೀಡಿ ಪಂದ್ಯಶ್ರೇಷ್ಠ ಪ್ರಶಸ್ತಿ ಗಿಟ್ಟಿಸಿಕೊಂಡರು. ಆದಿಲ್ ರಶೀದ್(2-13), ಜೋಫ್ರಾ ಆರ್ಚರ್ (2-20)ಹಾಗೂ ಲಿಯಾಮ್ ಡೌಸನ್(2-27)ತಲಾ ಎರಡು ವಿಕೆಟ್ಗಳನ್ನು ಪಡೆದರು. ಇಂಗ್ಲೆಂಡ್ 146/9: ಇದಕ್ಕೂ ಮೊದಲು ಅಮೋಘ ಬೌಲಿಂಗ್ ಸಂಘಟಿಸಿದ ಶ್ರೀಲಂಕಾದ ಬೌಲರ್ಗಳು ಇಂಗ್ಲೆಂಡ್ ತಂಡವನ್ನು 9 ವಿಕೆಟ್ಗಳ ನಷ್ಟಕ್ಕೆ 146 ರನ್ಗೆ ನಿಯಂತ್ರಿಸುವಲ್ಲಿ ಶಕ್ತರಾದರು. ಎಡಗೈ ಸ್ಪಿನ್ನರ್ ವೆಲ್ಲಲಗೆ ಯಶಸ್ವಿ ಪ್ರದರ್ಶನ ನೀಡಿದರೆ, ತೀಕ್ಷಣ ಹಾಗೂ ಮದುಶಂಕ ಪ್ರಮುಖ ವಿಕೆಟ್ಗಳನ್ನು ಕಬಳಿಸಿದರು. ಆರಂಭದಲ್ಲಿ ಪರದಾಟ ನಡೆಸಿದ ಇಂಗ್ಲೆಂಡ್ ತಂಡವು ಪವರ್ಪ್ಲೇ ನಂತರ ಕೇವಲ 37 ರನ್ಗೆ ಎರಡು ವಿಕೆಟ್ಗಳನ್ನು ಕಳೆದುಕೊಂಡಿತು. ಜೋಸ್ ಬಟ್ಲರ್(7 ರನ್) ಹಾಗೂ ಹ್ಯಾರಿ ಬ್ರೂಕ್(14 ರನ್) ಅಲ್ಪ ಮೊತ್ತಕ್ಕೆ ವೆಲ್ಲಲಗೆಗೆ ವಿಕೆಟ್ ಒಪ್ಪಿಸಿದರು. ಇತರ ಬ್ಯಾಟರ್ಗಳಾದ ಟಾಮ್ ಬಾಂಟನ್(6 ರನ್) ಹಾಗೂ ಸ್ಯಾಮ್ ಕರ್ರನ್(11 ರನ್) ಕೂಡ ವೈಫಲ್ಯ ಕಂಡರು. ಆಗ ಫಿಲ್ ಸಾಲ್ಟ್ ಇನಿಂಗ್ಸ್ ಆಧರಿಸಿದರು. ಸಾಲ್ಟ್ ಪ್ರಸಕ್ತ ವಿಶ್ವಕಪ್ನಲ್ಲಿ ಮೊದಲ ಅರ್ಧಶತಕ ಹಾಗೂ ಟಿ-20 ಕ್ರಿಕೆಟ್ನಲ್ಲಿ ಎರಡನೇ ಅರ್ಧಶತಕ ಗಳಿಸಿದರು. 40 ಎಸೆತಗಳಲ್ಲಿ ಏಳು ಬೌಂಡರಿ, 2 ಸಿಕ್ಸರ್ಗಳ ಸಹಿತ 62 ರನ್ ಗಳಿಸಿದ್ದ ಸಾಲ್ಟ್ಗೆ ಸಹ ಆಟಗಾರರಿಂದ ಸರಿಯಾದ ಬೆಂಬಲ ಸಿಗಲಿಲ್ಲ. ಸಾಲ್ಟ್ ಔಟಾದ ನಂತರ ಮತ್ತಷ್ಟು ಹಿನ್ನಡೆ ಕಂಡ ಇಂಗ್ಲೆಂಡ್ ಸಾಧಾರಣ ಮೊತ್ತ ಕಲೆ ಹಾಕಿತು. ಶ್ರೀಲಂಕಾದ ಬ್ಯಾಟರ್ ಹೇಮಂತ್ ಹಿಟ್ವಿಕೆಟ್! ಶ್ರೀಲಂಕಾದಾ ಆಟಗಾರ ದುಶನ್ ಹೇಮಂತ್ ಅವರು ಅಸಾಮಾನ್ಯ ಹಾಗೂ ನಾಟಕೀಯ ರೀತಿಯಲ್ಲಿ ಔಟಾಗುವ ಮೂಲಕ ನೆರೆದಿದ್ದ ತವರು ಪ್ರೇಕ್ಷಕರನ್ನು ದಂಗಾಗಿಸಿದರು. ಇಂಗ್ಲೆಂಡ್ ವಿರುದ್ದ ನಡೆದ ಟಿ-20 ವಿಶ್ವಕಪ್ನ ಸೂಪರ್-8 ಪಂದ್ಯದಲ್ಲಿ ಲಂಕಾ ತಂಡ ಗೆಲುವಿಗೆ 147 ರನ ಗುರಿ ಬೆನ್ನಟ್ಟುತ್ತಿದ್ದಾಗ ಜಮೀ ಓವರ್ಟನ್ ಓವರ್ನಲ್ಲಿ ಹೊಡೆತ ಬಾರಿಸುವ ಭರದಲ್ಲಿ ತನ್ನ ಬ್ಯಾಟ್ ಮೇಲಿನ ಹಿಡಿತವನ್ನು ಕಳೆದುಕೊಂಡ ಹೇಮಂತ್ ಆಕಸ್ಮಿಕವಾಗಿ ತನ್ನದೇ ಸ್ಟಂಪ್ಗೆ ಬಡಿದರು. ಅಪರೂಪದ ಈ ಘಟನೆಯ ವೀಡಿಯೊವು ಸಾಮಾಜಿಕ ಮಾಧ್ಯಮದಲ್ಲಿ ತಕ್ಷಣವೇ ವೈರಲ್ ಆಯಿತು.
ಹೊಸದಿಲ್ಲಿ ಮ್ಯಾರಥಾನ್ | ಮುಂಬೈ ಕನ್ನಡಿಗ ಕಾರ್ತಿಕ್ ಕರ್ಕೇರ ವಿನ್ನರ್
ಹೊಸದಿಲ್ಲಿ, ಫೆ.22: ರಾಷ್ಟ್ರ ರಾಜಧಾನಿಯಲ್ಲಿ ರವಿವಾರ ನಡೆದ 11ನೇ ಆವೃತ್ತಿಯ ಹೊಸದಿಲ್ಲಿ ಮ್ಯಾರಥಾನ್ನಲ್ಲಿ ವೃತ್ತಿಯಲ್ಲಿ ವೈದ್ಯರಾಗಿರುವ, ಮುಂಬೈ ಕನ್ನಡಿಗ ಕಾರ್ತಿಕ್ ಜಯರಾಜ್ ಕರ್ಕೇರ ಅವರು ಪುರುಷರ ವಿಭಾಗದ ಪೂರ್ಣ ಮ್ಯಾರಥಾನ್ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಮಾತ್ರವಲ್ಲ ತನ್ನ ದೇಶದ ಇತರ ಇಬ್ಬರು ರನ್ನರ್ಗಳೊಂದಿಗೆ ಈ ವರ್ಷದ ಏಶ್ಯನ್ ಗೇಮ್ಸ್ ಅರ್ಹತಾ ಮಾನದಂಡವನ್ನು ಮೀರಿದ್ದಾರೆ. ಕಾರ್ತಿಕ್ ಅವರು 42.2 ಕಿಲೋಮೀಟರ್ ದೂರವನ್ನು ಎರಡು ಗಂಟೆ ಹಾಗೂ 13 ನಿಮಿಷಗಳಲ್ಲಿ (02.13.10)ಪೂರ್ಣಗೊಳಿಸಿದರು. ಈ ಮೂಲಕ ಈ ವರ್ಷಾಂತ್ಯದಲ್ಲಿ ಜಪಾನ್ನಲ್ಲಿ ನಡೆಯಲಿರುವ ಏಶ್ಯನ್ ಗೇಮ್ಸ್ ಅರ್ಹತಾ ಸಮಯವನ್ನು ಮೀರಿ ನಿಂತರು. 28ರ ಹರೆಯದ ಕಾರ್ತಿಕ್ ಅವರು ಗೋಪಿ ಥೋನಾಕಲ್(02.13:12)ಹಾಗೂ ಮಾನ್ ಸಿಂಗ್(02.13:15)ರನ್ನು ಹಿಂದಿಕ್ಕಿ ಮೊದಲ ಸ್ಥಾನ ಪಡೆದರು. ಸೆಪ್ಟಂಬರ್ನಲ್ಲಿ ನಡೆಯಲಿರುವ ಏಶ್ಯನ್ ಗೇಮ್ಸ್ನಲ್ಲಿ ಸ್ಪರ್ಧಿಸಲು ಅರ್ಹತೆ ಪಡೆಯಲು 2:15.04 ಸೆಕೆಂಡ್ನಲ್ಲಿ ಗುರಿ ತಲುಪುವ ಅಗತ್ಯವಿತ್ತು. ಮಹಿಳೆಯರ ವಿಭಾಗದ ಮ್ಯಾರಥಾನ್ನಲ್ಲಿ ಥಾಕೋರ್ ನಿರ್ಮಾಬೆನ್(02:41:15)ಮೊದಲ ಸ್ಥಾನ ಪಡೆದರೆ, ಭಾಗೀರಥಿ(02:43:28)ಹಾಗೂ ಅಶ್ವಿನಿ ಜಾಧವ್(02:56:59)ಕ್ರಮವಾಗಿ ಎರಡನೇ, ಮೂರನೇ ಸ್ಥಾನ ಪಡೆದರು. ಹಾಫ್ ಮ್ಯಾರಥಾನ್ನಲ್ಲಿ ಕುಲದೀಪ್ ಕುಮಾರ್(01:08:51)ಮೊದಲ ಸ್ಥಾನ ಪಡೆದರೆ, ರವಿ ಬುಂಬಕ್(01:09:33)ಹಾಗೂ ಮುಹಮ್ಮದ್ ಸಾಹಿಲ್ ಅಣ್ಣಿಗೇರಿ(01:09:41)ಎರಡನೇ ಹಾಗೂ ಮೂರನೇ ಸ್ಥಾನ ಪಡೆದರು. ಮುಂಬೈನಲ್ಲಿ ಹುಟ್ಟಿ ಬೆಳೆದಿರುವ ಕಾರ್ತಿಕ್ ಸದ್ಯ ನಾಸಿಕ್ನ ಡಾ.ವಸಂತರಾವ್ ಪವಾರ್ ಆಸ್ಪತ್ರೆಯಲ್ಲಿ ವೈದ್ಯರಾಗಿ ಕೆಲಸ ಮಾಡುತ್ತಿದ್ದಾರೆ. ‘‘ನನ್ನ ದೇಹ ಬೇಗನೆ ಚೇತರಿಸಿಕೊಳ್ಳಲು ಏನು ಮಾಡಬೇಕೆಂದು ತಿಳಿದುಕೊಳ್ಳುವಲ್ಲಿ ನನ್ನ ಅಧ್ಯಯನವು ನನಗೆ ಸಾಕಷ್ಟು ಸಹಾಯ ಮಾಡಿದೆ. ನಾನು ವೃತ್ತಿಯಲ್ಲಿ ವೈದ್ಯನಾಗಿರುವ ಕಾರಣ ಯಾವುದೇ ಒತ್ತಡವಿಲ್ಲ. ನಾನು ಮೋಜಿಗಾಗಿ ಓಡುತ್ತೇನೆ. ಓಟವನ್ನು ಆನಂದಿಸುತ್ತೇನೆ. ನಿಮ್ಮ ಮಕ್ಕಳು ಒಂದೇ ಸಮಯದಲ್ಲಿ ಶಿಕ್ಷಣ ಹಾಗೂ ಕ್ರೀಡೆ ಎರಡನ್ನೂ ನಿರ್ವಹಿಸಬಹುದು ಎಂದು ಪೋಷಕರಿಗೆ ತಿಳಿಸಲು ಬಯಸುತ್ತೇನೆ’’ ಎಂದು ಕಾರ್ತಿಕ್ ಹೇಳಿದ್ದಾರೆ. ಎಎಫ್ಐ ಪ್ರಮಾಣೀಕೃತ ದೇಶದ ರಾಷ್ಟ್ರೀಯ ಮ್ಯಾರಥಾನ್ ಆಗಿರುವ ಹೊಸದಿಲ್ಲಿ ಮ್ಯಾರಥಾನ್ನಲ್ಲಿ 31 ದೇಶಗಳು, 490 ನಗರಗಳಿಂದ 30,000ಕ್ಕೂ ಹೆಚ್ಚು ಓಟಗಾರರು ಭಾಗವಹಿಸುವುದರೊಂದಿಗೆ ಅತ್ಯಂತ ಯಶಸ್ವಿ ಓಟವೆಂದು ಸಾಬೀತಾಗಿದೆ.
ಬೆಂಗಳೂರಿನಲ್ಲಿ ಫುಟ್ಪಾತ್ ವಾಕ್ ಕಾರ್ಯಕ್ರಮಕ್ಕೆ ಕೃಷ್ಣ ಬೈರೇಗೌಡ ಚಾಲನೆ
ಬೆಂಗಳೂರು, ಫೆ.22: ರವಿವಾರ ಇಲ್ಲಿನ ಕೋಡಿಗೆಹಳ್ಳಿಯಲ್ಲಿ ಪ್ರಾಜೆಕ್ಟ್ ವಾಕಲೂರು ವತಿಯಿಂದ ಆಯೋಜಿಸಿದ್ದ 10ನೇ ಫುಟ್ಪಾತ್ ವಾಕ್ ಕಾರ್ಯಕ್ರಮಕ್ಕೆ ಕಂದಾಯ ಸಚಿವ ಹಾಗೂ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಶಾಸಕ ಕೃಷ್ಣ ಬೈರೇಗೌಡ ಚಾಲನೆ ನೀಡಿದರು. ಬೆಂಗಳೂರು ಉತ್ತರ ನಗರ ಪಾಲಿಕೆಯ ಆಯುಕ್ತ ಪೊಮ್ಮಲ ಸುನಿಲ್ ಕುಮಾರ್ ಹಾಗೂ ಜಂಟಿ ಆಯುಕ್ತರಾದ ಮುಹಮ್ಮದ್ ನಯೀಮ್ ಮೊಮಿನ್ ಸೇರಿದಂತೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಸೇರಿ 120ಕ್ಕೂ ಹೆಚ್ಚು ನಾಗರಿಕರು ಭಾಗವಹಿಸಿದ್ದರು. ವಾಕ್ ಮಾರ್ಗವು ರೈಲ್ವೇ ಪ್ಯಾರಲೆಲ್ ರಸ್ತೆ ಜಂಕ್ಷನ್ನಿಂದ ಆರಂಭವಾಗಿ ಸಹಕಾರನಗರ ಹಾಗೂ ಕೋಡಿಗೆಹಳ್ಳಿ ಮುಖ್ಯರಸ್ತೆಗಳ ಭಾಗಗಳನ್ನು ಒಳಗೊಂಡಂತೆ ಸುಮಾರು 6 ಕಿ.ಮೀ ನಿರಂತರ ಪಾದಚಾರಿ ಮಾರ್ಗವನ್ನು ಒಳಗೊಂಡಿತ್ತು. ನಿಗದಿತ ಮಾರ್ಗದಲ್ಲಿ ನಾಗರಿಕರು ಪಾದಚಾರಿ ಮಾರ್ಗದಲ್ಲಿ ನಡೆದು ಪ್ರಮುಖ ಅಡೆತಡೆಗಳನ್ನು ಗುರುತಿಸುವುದು. ಪಾದಚಾರಿ ಮಾರ್ಗದಿಂದ ರಸ್ತೆ ಮೇಲೆ ಇಳಿಯುವಂತೆ ಮಾಡುವ ಅಡೆತಡೆಗಳನ್ನು ದಾಖಲಿಸಿ ಫೋಟೋ ತೆಗೆದುಕೊಳ್ಳುವಂತೆ ಭಾಗವಹಿಸಿದವರಿಗೆ ಸೂಚಿಸಲಾಯಿತು. ಒಟ್ಟು 6–8 ಸಣ್ಣ ಅಡೆತಡೆಗಳು ಮಾತ್ರ ಕಂಡುಬಂದಿದ್ದು, ಕಸ, ಮೂತ್ರ ವಿಸರ್ಜನೆ ಅಥವಾ ಹಾಳಾದ ಪಾದಚಾರಿ ಮಾರ್ಗಗಳಂತಹ ಸಮಸ್ಯೆಗಳು ಕಂಡುಬರಲಿಲ್ಲ. ಪಾದಚಾರಿ ಮಾರ್ಗಗಳು ಸ್ವಚ್ಛ, ಹಸಿರಿನಿಂದ ಕೂಡಿದ್ದು, ಸುಗಮವಾಗಿ ನಡೆಯಲು ಅನುಕೂಲಕರವಾಗಿವೆ ಎಂದು ಭಾಗವಹಿಸಿದವರು ಅಭಿಪ್ರಾಯಪಟ್ಟರು.
ದುಬೈ ಡಬ್ಲ್ಯುಟಿಎ-1000 ಟೂರ್ನಿ: ಜೆಸ್ಸಿಕಾ ಪೆಗುಲಾ ಮುಡಿಗೆ ಸಿಂಗಲ್ಸ್ ಟ್ರೋಫಿ
ದುಬೈ, ಫೆ.22: ಎಲಿನಾ ಸ್ವಿಟೋಲಿನಾರನ್ನು ನೇರ ಸೆಟ್ಗಳ ಅಂತರದಿಂದ ಸದೆಬಡಿದಿರುವ ಅಮೆರಿಕದ ಆಟಗಾರ್ತಿ ಜೆಸ್ಸಿಕಾ ಪೆಗುಲಾ ನಾಲ್ಕನೇ ಬಾರಿ ಡಬ್ಲ್ಯುಟಿಎ-1000 ಟೂರ್ನಿಯಲ್ಲಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು. ಶನಿವಾರ ನಡೆದ ಮಹಿಳೆಯರ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ ಪೆಗುಲಾ ಅವರು ಎಲಿನಾ ಸ್ವಿಟೋಲಿನಾರನ್ನು 6-2, 6-4 ನೇರ ಸೆಟ್ಗಳ ಅಂತರದಿಂದ ಮಣಿಸಿದರು. ಸ್ವಿಟೋಲಿನಾಗೆ ಮೂರನೇ ಪ್ರಶಸ್ತಿ ಗೆಲ್ಲುವ ಅವಕಾಶ ನಿರಾಕರಿಸಿದರು. ಮಂಗಳವಾರ 32ನೇ ವಯಸ್ಸಿಗೆ ಕಾಲಿಡಲಿರುವ ಪೆಗುಲಾ ಕಳೆದ ಏಳು ಟೂರ್ನಮೆಂಟ್ಗಳಲ್ಲಿ ಪ್ರತೀ ಬಾರಿಯೂ ಕನಿಷ್ಠ ಸೆಮಿ ಫೈನಲ್ ಪಂದ್ಯವನ್ನು ತಲುಪಿದ್ದಾರೆ. ದುಬೈನಲ್ಲಿ ವೃತ್ತಿಜೀವನದ 10ನೇ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಪೆಗುಲಾ ಶುಕ್ರವಾರ ನಡೆದ ಸೆಮಿ ಫೈನಲ್ನಲ್ಲಿ ಅಮಂಡಾ ಅನಿಸಿಮೋವಾರನ್ನು ಮಣಿಸಿದರೆ, ಸ್ವಿಟೋಲಿನಾ ಅವರು ಮೂರು ಗಂಟೆ ನಡೆದ ಮ್ಯಾರಥಾನ್ ಪಂದ್ಯದಲ್ಲಿ ಅಮೆರಿಕದ ಆಟಗಾರ್ತಿ ಕೊಕೊ ಗೌಫ್ರನ್ನು ಮಣಿಸಿದ್ದರು. ಸ್ವಿಟೋಲಿನಾ 2017 ಹಾಗೂ 2018ರಲ್ಲಿ ದುಬೈನಲ್ಲಿ ಚಾಂಪಿಯನ್ ಆಗಿದ್ದರು. 2018ರ ರೋಮ್ ಟೂರ್ನಿಯ ನಂತರ ಮೊದಲ ಬಾರಿ ಡಬ್ಲ್ಯುಟಿಎ-1000 ಟೂರ್ನಿಯಲ್ಲಿ ಫೈನಲ್ಗೆ ತಲುಪಿದ್ದಾರೆ. ಈ ತಿಂಗಳಾರಂಭದಲ್ಲಿ ವಿಶ್ವ ರ್ಯಾಂಕಿಂಗ್ನಲ್ಲಿ ಟಾಪ್-10ಕ್ಕೆ ಮರಳಿರುವ 31ರ ವಯಸ್ಸಿನ ಉಕ್ರೇನ್ ಆಟಗಾರ್ತಿ 2026ರಲ್ಲಿ ಆಡಿರುವ 18 ಪಂದ್ಯಗಳಲ್ಲಿ 15ರಲ್ಲಿ ಜಯ ಸಾಧಿಸಿದ್ದಾರೆ.
ಖತರ್ ಓಪನ್ ಟೆನಿಸ್ ಟೂರ್ನಿ : ಪ್ರಶಸ್ತಿ ಗೆದ್ದ ಕಾರ್ಲೊಸ್ ಅಲ್ಕರಾಝ್
ದೋಹಾ, ಫೆ.22: ಅರ್ಥರ್ ಫಿಲ್ಸ್ರನ್ನು ನೇರ ಸೆಟ್ಗಳ ಅಂತರದಿಂದ ಮಣಿಸಿರುವ ಸ್ಪೇನ್ ಯುವ ಆಟಗಾರ ಕಾರ್ಲೊಸ್ ಅಲ್ಕರಾಝ್ ಖತರ್ ಓಪನ್ ಟೆನಿಸ್ ಟೂರ್ನಿಯಲ್ಲಿ ಪುರುಷರ ಸಿಂಗಲ್ಸ್ ಪ್ರಶಸ್ತಿಯನ್ನು ಎತ್ತಿ ಹಿಡಿದಿದ್ದಾರೆ. ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ಏಳು ಬಾರಿಯ ಗ್ರ್ಯಾನ್ಸ್ಲಾಮ್ ಚಾಂಪಿಯನ್ ಅಲ್ಕರಾಝ್ ಅವರು ಕೇವಲ 50 ನಿಮಿಷದೊಳಗೆ ಫ್ರೆಂಚ್ ಎದುರಾಳಿ ಫಿಲ್ಸ್ರನ್ನು 6-2, 6-1 ನೇರ ಸೆಟ್ಗಳ ಅಂತರದಿಂದ ಮಣಿಸಿದರು. ಈ ಮೂಲಕ ತನ್ನ ವೃತ್ತಿಜೀವನದಲ್ಲಿ 26ನೇ ಪ್ರಶಸ್ತಿಯನ್ನು ಜಯಿಸಿದರು. ಈ ತಿಂಗಳಾರಂಭದಲ್ಲಿ ಆಸ್ಟ್ರೇಲಿಯನ್ ಓಪನ್ ಟ್ರೋಫಿ ಜಯಿಸಿ ಕೇವಲ 22ನೇ ವಯಸ್ಸಿನಲ್ಲಿ ವೃತ್ತಿಜೀವನದ ಎಲ್ಲ ನಾಲ್ಕೂ ಗ್ರ್ಯಾನ್ಸ್ಲಾಮ್ ಪ್ರಶಸ್ತಿ ಗೆದ್ದ ಸಾಧನೆ ಮಾಡಿರುವ ವಿಶ್ವದ ನಂ.1 ಆಟಗಾರ ಅಲ್ಕರಾಝ್ ದೋಹಾದಲ್ಲಿ ನಡೆದಿದ್ದ ಟೂರ್ನಮೆಂಟ್ನಲ್ಲಿ ಪ್ರಶಸ್ತಿ ಜಯಿಸಿ ಸತತ ಗೆಲುವಿನ ಸಂಖ್ಯೆಯನ್ನು 12ಕ್ಕೆ ವಿಸ್ತರಿಸಿದರು.
ಟ್ರಂಪ್ ಅವರ ಫ್ಲೋರಿಡಾದ ರೆಸಾರ್ಟ್ಗೆ ಪ್ರವೇಶಿಸಲು ಯತ್ನಿಸಿದ ವ್ಯಕ್ತಿಯನ್ನು ಗುಂಡಿಕ್ಕಿ ಹತ್ಯೆ
ನ್ಯೂಯಾರ್ಕ್, ಫೆ.22: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಫ್ಲೋರಿಡಾದ ಮಾರ್-ಎ-ಲಾಗೊ ರೆಸಾರ್ಟ್ಗೆ ರವಿವಾರ ಅಕ್ರಮವಾಗಿ ಪ್ರವೇಶಿಸಲು ಪ್ರಯತ್ನಿಸಿದ ಸಶಸ್ತ್ರದಾರಿ ವ್ಯಕ್ತಿಯನ್ನು ಅಮೆರಿಕದ ಗುಪ್ತಚರ ಸೇವೆಯ ಅಧಿಕಾರಿಗಳು ಗುಂಡಿಕ್ಕಿ ಹತ್ಯೆ ನಡೆಸಿರುವುದಾಗಿ ವರದಿಯಾಗಿದೆ. ಸ್ಥಳೀಯ ಕಾಲಮಾನ ರವಿವಾರ ಬೆಳಿಗ್ಗೆ 1:30ಕ್ಕೆ ಘಟನೆ ನಡೆದಿದೆ. ರೆಸಾರ್ಟ್ನ ಉತ್ತರ ಗೇಟ್ನ ಬಳಿ ಸುಮಾರು 20 ವರ್ಷದ ವ್ಯಕ್ತಿಯನ್ನು ಗನ್ ಮತ್ತು ಪೆಟ್ರೋಲ್ ತುಂಬಿದ್ದ ಕ್ಯಾನ್ನೊಂದಿಗೆ ಪತ್ತೆಹಚ್ಚಲಾಗಿದೆ. ಶರಣಾಗುವಂತೆ ಅಧಿಕಾರಿಗಳು ನೀಡಿದ್ದ ಸೂಚನೆಯನ್ನು ಆತ ನಿರ್ಲಕ್ಷಿಸಿದಾಗ ಗುಂಡಿನ ಚಕಮಕಿ ನಡೆದಿದ್ದು ಶಂಕಿತ ವ್ಯಕ್ತಿ ಸ್ಥಳದಲ್ಲೇ ಗಾಯಗೊಂಡಿದ್ದಾನೆ. ಯಾವುದೇ ಅಧಿಕಾರಿಗಳು ಗಾಯಗೊಂಡಿಲ್ಲ ಎಂದು ಗುಪ್ತಚರ ಸೇವಾ ಇಲಾಖೆಯ ಹೇಳಿಕೆ ತಿಳಿಸಿದೆ.
ಮದುವೆ ದಿನವೇ ದುರಂತ: ಜೋಧ್ಪುರದಲ್ಲಿ ಇಬ್ಬರು ಸಹೋದರಿಯರ ಅನುಮಾನಾಸ್ಪದ ಸಾವು
ಜೋಧ್ಪುರ: ಮದುವೆ ಸಂಭ್ರಮದಿಂದ ಕಂಗೊಳಿಸಬೇಕಿದ್ದ ಮನೆ ಕ್ಷಣಾರ್ಧದಲ್ಲಿ ಶೋಕಸಾಗರದಲ್ಲಿ ಮುಳುಗಿರುವ ದುರಂತ ಘಟನೆ ರಾಜಸ್ಥಾನದ ಜೋಧ್ಪುರ ಜಿಲ್ಲೆಯ ಮನೈ ಗ್ರಾಮದಲ್ಲಿ ನಡೆದಿದೆ. ಮದುವೆಗೆ ಸಿದ್ಧರಾಗಿದ್ದ ಇಬ್ಬರು ಸಹೋದರಿಯರು ಸಾವನ್ನಪ್ಪಿರುವ ಘಟನೆ ಕುಟುಂಬಸ್ಥರನ್ನು ಹಾಗೂ ಗ್ರಾಮಸ್ಥರನ್ನು ಬೆಚ್ಚಿಬೀಳಿಸಿದೆ. ಮದುವೆ ದಿನವೇ ಇಬ್ಬರೂ ಸಹೋದರಿಯರ ಈ ಸಾವಿನ ಹಿಂದೆ ಹಲವು ಅನುಮಾನಗಳು ವ್ಯಕ್ತವಾಗಿವೆ. ಶೋಭಾ (25) ಮತ್ತು ವಿಮಲಾ (23)
ಈಡಿಯಿಂದ ಪ್ರಸಕ್ತ ವಿತ್ತವರ್ಷದಲ್ಲಿ 500 ದೋಷಾರೋಪ ಪಟ್ಟಿಗಳ ಸಲ್ಲಿಕೆಗೆ ಗುರಿ ನಿಗದಿ
ಹೊಸದಿಲ್ಲಿ,ಫೆ.22: ಜಾರಿ ನಿರ್ದೇಶನಾಲಯವು ಪ್ರಸಕ್ತ ವಿತ್ತವರ್ಷದಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣಗಳಲ್ಲಿ 500 ದೋಷಾರೋಪ ಪಟ್ಟಿಗಳನ್ನು ಸಲ್ಲಿಸುವ ಗುರಿಯನ್ನು ನಿಗದಿಗೊಳಿಸಿದೆ. ಪ್ರಕರಣವು ದಾಖಲಾದ ಬಳಿಕ ‘ಸಂಕೀರ್ಣ’ ವಿಷಯಗಳಲ್ಲಿ ಹೊರತುಪಡಿಸಿ ಒಂದೆರಡು ವರ್ಷಗಳಲ್ಲಿ ತನಿಖೆಯನ್ನು ಪೂರ್ಣಗೊಳಿಸಬೇಕು ಎಂದು ತನಿಖಾಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಈ.ಡಿ.ರವಿವಾರ ತಿಳಿಸಿದೆ. ಕಳೆದ ವರ್ಷದ ಡಿಸೆಂಬರ್ 19ರಿಂದ 21ರವರೆಗೆ ಗುವಾಹಟಿಯಲ್ಲಿ ಸಂಸ್ಥೆಯ ನಿರ್ದೇಶಕ ರಾಹುಲ್ ನವೀನ್ ಅಧ್ಯಕ್ಷತೆಯಲ್ಲಿ ನಡೆದಿದ್ದ ಈ.ಡಿ.ಯ 34ನೇ ವಲಯಾಧಿಕಾರಿಗಳ ತ್ರೈಮಾಸಿಕ ಸಮ್ಮೇಳನದಲ್ಲಿ ಈ ಕ್ರಮಗಳನ್ನು ಚರ್ಚಿಸಿ ಅಂತಿಮಗೊಳಿಸಲಾಗಿದೆ ಎಂದು ಹೇಳಿಕೆಯು ತಿಳಿಸಿದೆ. ಈ.ಡಿ.ಕಳೆದ ವರ್ಷದಿಂದ ದಿಲ್ಲಿಯ ಹೊರಗೆ ಈ ತ್ರೈಮಾಸಿಕ ಸಮ್ಮೇಳನಗಳನ್ನು ನಡೆಸುತ್ತಿದೆ. ಹಿಂದಿನ ಎರಡು ಸಮ್ಮೇಳನಗಳು ಗುಜರಾತಿನ ಕೇವಡಿಯಾ ಮತ್ತು ಜಮ್ಮುಕಾಶ್ಮೀರದ ಶ್ರೀನಗರದಲ್ಲಿ ನಡೆದಿದ್ದವು. ಈಶಾನ್ಯ ಭಾರತದಲ್ಲಿ ಸಮ್ಮೇಳನವನ್ನು ನಡೆಸುವ ನಿರ್ಧಾರವು ಈ ಪ್ರದೇಶದ ವ್ಯೆಹಾತ್ಮಕ ಮತ್ತು ಕಾರ್ಯಾಚರಣೆ ಪ್ರಾಮುಖ್ಯವನ್ನು ಈ.ಡಿ.ಗುರುತಿಸಿದೆ ಎನ್ನುವುದನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿರುವ ಈ.ಡಿ.,ಇದು ಪ್ರಸಕ್ತ ವಿತ್ತವರ್ಷದ ಕೊನೆಯ ತ್ರೈಮಾಸಿಕ ಸಭೆಯಾಗಿದ್ದರಿಂದ ಮಹತ್ವದ್ದಾಗಿತ್ತು. ಗುರಿಗಳ ಅರ್ಥಪೂರ್ಣ ಸಾಧನೆ,ತನಿಖೆಗಳ ತಾರ್ಕಿಕ ಮುಕ್ತಾಯ,ಸಕಾಲದಲ್ಲಿ ಪ್ರಾಸಿಕ್ಯೂಷನ್ ದೂರುಗಳ ಸಲ್ಲಿಕೆ ಮತ್ತು ಜಪ್ತಿಗಳು ಹಾಗೂ ದಂಡಗಳು ಕಾನೂನುಬದ್ಧವಾಗಿರುವಂತೆ ಮತ್ತು ಕಾರ್ಯಗತಗೊಳ್ಳುವಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದೆ.
ವಾಷಿಂಗ್ಟನ್, ಫೆ.22: ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ‘ಟ್ರಂಪ್ 2.0’ ಅವಧಿಯಲ್ಲಿ ಜಾರಿಗೊಂಡ ಜಾಗತಿಕ ಸುಂಕಗಳಿಗೆ ಅಮೆರಿಕದ ಸುಪ್ರೀಂ ಕೋರ್ಟ್ 6–3 ಬಹುಮತದ ತೀರ್ಪಿನ ಮೂಲಕ ತಡೆ ನೀಡಿದೆ. ಸುಂಕ ವಿಧಿಸುವ ಅಧಿಕಾರವು ಕಾಂಗ್ರೆಸ್ ಗೆ ಮಾತ್ರ ಸೇರಿದೆ ಎಂದು ಸ್ಪಷ್ಟಪಡಿಸಿದ ನ್ಯಾಯಪೀಠ, ಅಧ್ಯಕ್ಷೀಯ ಅಧಿಕಾರದ ಮಿತಿಗಳ ಕುರಿತು ಮಹತ್ವದ ನಿರ್ಧಾರ ಪ್ರಕಟಿಸಿದೆ. ಆದರೆ ಈ ತೀರ್ಪಿನ ಕೇಂದ್ರಬಿಂದುವಾಗಿ ಹೊರಹೊಮ್ಮಿದ್ದು ಭಾರತೀಯ ಮೂಲದ ಅಮೆರಿಕನ್ ವಕೀಲ ನೀಲ್ ಕಟ್ಯಾಲ್ ಅವರ ಸಾಂವಿಧಾನಿಕ ವಾದ. ಸುಂಕಗಳಿಂದ ಪ್ರಭಾವಿತ ಸಣ್ಣ ಉದ್ಯಮಗಳನ್ನು ಸಹ-ಸಲಹೆಗಾರ ಸಾರಾ ಆಲ್ಬ್ರೆಕ್ಟ್ ಜೊತೆ ಪ್ರತಿನಿಧಿಸಿದ ಕಟ್ಯಾಲ್, ಸುಂಕಗಳು ಮೂಲತಃ ತೆರಿಗೆಯ ಸ್ವರೂಪದ್ದಾಗಿದ್ದು, ತೆರಿಗೆ ವಿಧಿಸುವ ಅಧಿಕಾರವು ಅಮೆರಿಕ ಕಾಂಗ್ರೆಸ್ಗೆ ಮಾತ್ರ ಸೇರಿದೆ ಎಂದು ನ್ಯಾಯಾಲಯದ ಮುಂದೆ ಸ್ಪಷ್ಟವಾಗಿ ಮಂಡಿಸಿದರು. ವಿದೇಶಾಂಗ ನೀತಿ ಅಥವಾ ಆರ್ಥಿಕ ಕ್ರಮದ ಹೆಸರಿನಲ್ಲಿ ಅಧ್ಯಕ್ಷರು ಸುಂಕಗಳನ್ನು ವಿಧಿಸುವ ಮೂಲಕ ತಮ್ಮ ಸಾಂವಿಧಾನಿಕ ಮಿತಿಗಳನ್ನು ಮೀರಿ ಕಾರ್ಯನಿರ್ವಹಿಸಿದ್ದಾರೆ ಎಂಬುದು ಅವರ ಪ್ರಮುಖ ವಾದವಾಗಿತ್ತು. ತೀರ್ಪಿನ ಬಳಿಕ ಸಾಮಾಜಿಕ ಜಾಲತಾಣ Xನಲ್ಲಿ ಪ್ರತಿಕ್ರಿಯಿಸಿದ ಕಟ್ಯಾಲ್, “ಇಂದು ಅಮೆರಿಕದ ಸುಪ್ರೀಂ ಕೋರ್ಟ್ ಕಾನೂನಿನ ಆಳ್ವಿಕೆ ಮತ್ತು ಅಮೆರಿಕನ್ನರ ಪರವಾಗಿ ನಿಂತಿದೆ. ಅಧ್ಯಕ್ಷರು ಶಕ್ತಿಶಾಲಿಗಳು, ಆದರೆ ನಮ್ಮ ಸಂವಿಧಾನ ಇನ್ನಷ್ಟು ಶಕ್ತಿಶಾಲಿಯಾಗಿದೆ. ಅಮೆರಿಕಾದಲ್ಲಿ ಕಾಂಗ್ರೆಸ್ ಮಾತ್ರ ಜನರ ಮೇಲೆ ತೆರಿಗೆ ವಿಧಿಸಬಹುದು. ಈ ಪ್ರಕರಣವು ಯಾವುದೇ ಒಬ್ಬ ಅಧ್ಯಕ್ಷರ ಬಗ್ಗೆ ಅಲ್ಲ; ಅದು ಅಧ್ಯಕ್ಷೀಯ ಸ್ಥಾನ ಮತ್ತು ಅಧಿಕಾರಗಳ ಪ್ರತ್ಯೇಕತೆಯ ಬಗ್ಗೆ” ಎಂದು ಪೋಸ್ಟ್ ಮಾಡಿದ್ದರು. ►ಸಾಂವಿಧಾನಿಕ ಕಾನೂನು ಕ್ಷೇತ್ರದ ಪ್ರಮುಖ ಧ್ವನಿ ನೀಲ್ ಕಟ್ಯಾಲ್ 1970ರ ಮಾರ್ಚ್ 12ರಂದು ಚಿಕಾಗೋದಲ್ಲಿ ಭಾರತೀಯ ಮೂಲದ ವಲಸಿಗರ ಕುಟುಂಬದಲ್ಲಿ ನೀಲ್ ಕಟ್ಯಾಲ್ ಜನಿಸಿದರು. ಅವರ ತಾಯಿ ಪ್ರತಿಭಾ ಮಕ್ಕಳ ವೈದ್ಯೆ. ತಂದೆ ಸುರೇಂದರ್ ಇಂಜಿನಿಯರ್. ಡಾರ್ಟ್ಮೌತ್ ಕಾಲೇಜು ಮತ್ತು ಯೇಲ್ ಲಾ ಸ್ಕೂಲ್ ನಲ್ಲಿ ಪದವೀಧರರಾದರು. 1990ರ ದಶಕದಲ್ಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಸ್ಟೀಫನ್ ಬ್ರೇಯರ್ ಅವರ ಕಚೇರಿಯಲ್ಲಿ ನೀಲ್ ಕಟ್ಯಾಲ್ ಅವರು ಲಾ ಕ್ಲರ್ಕ್ ಆಗಿ ಸೇವೆ ಸಲ್ಲಿಸಿದರು. ಬಳಿಕ ಹೊಗನ್ & ಹಾರ್ಟ್ಸನ್ ಸಂಸ್ಥೆಯಲ್ಲಿ ಕೆಲಸ ಮಾಡುವಾಗ ಆಗಿನ ವಕೀಲ ಜಾನ್ ರಾಬರ್ಟ್ಸ್ ಅವರೊಂದಿಗೆ ಸಹ ಕಾರ್ಯನಿರ್ವಹಿಸಿದರು. ರಾಬರ್ಟ್ಸ್ ಪ್ರಸ್ತುತ ಅಮೆರಿಕದ ಮುಖ್ಯ ನ್ಯಾಯಮೂರ್ತಿಯಾಗಿದ್ದಾರೆ. 2010ರಲ್ಲಿ ಅಧ್ಯಕ್ಷ ಬರಾಕ್ ಒಬಾಮಾ ಅವರು ನೀಲ್ ಕಟ್ಯಾಲ್ ಅವರನ್ನು ಆಕ್ಟಿಂಗ್ ಸಾಲಿಸಿಟರ್ ಜನರಲ್ ಆಗಿ ನೇಮಿಸಿದರು. ಈ ಹುದ್ದೆಯಲ್ಲಿ ಸೇವೆ ಸಲ್ಲಿಸಿದ ಬಳಿಕ ಅವರು ರಾಷ್ಟ್ರಮಟ್ಟದಲ್ಲಿ ಖ್ಯಾತಿ ಗಳಿಸಿದರು. ಇತ್ತಿಚೆಗೆ ಸುಪ್ರೀಂ ಕೋರ್ಟ್ ನಲ್ಲಿ 50ಕ್ಕೂ ಹೆಚ್ಚು ಪ್ರಕರಣಗಳನ್ನು ವಾದಿಸಿರುವ ಅವರು, ಅಲ್ಪಸಂಖ್ಯಾತ ವಕೀಲರ ಪೈಕಿ ಅತ್ಯಧಿಕ ಪ್ರಕರಣಗಳನ್ನು ವಾದಿಸಿದ ದಾಖಲೆಯನ್ನು ನಿರ್ಮಿಸಿದ್ದಾರೆ. ಈ ಮೂಲಕ 1965ರಲ್ಲಿ ಸಾಲಿಸಿಟರ್ ಜನರಲ್ ಆಗಿ ಸೇವೆ ಸಲ್ಲಿಸಿದ್ದ ಹಾಗೂ ನಂತರ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾದ ಥರ್ಗುಡ್ ಮಾರ್ಷಲ್ ಅವರ ದಾಖಲೆಯನ್ನು ಮೀರಿದ್ದಾರೆ. ಪ್ರಸ್ತುತ ನೀಲ್ ಕಟ್ಯಾಲ್ ಅವರು ಮಿಲ್ಬ್ಯಾಂಕ್ ಎಲ್ಎಲ್ಪಿ ಸಂಸ್ಥೆಯಲ್ಲಿ ಪಾಲುದಾರರಾಗಿದ್ದು, ಜಾರ್ಜ್ಟೌನ್ ವಿಶ್ವವಿದ್ಯಾಲಯದಲ್ಲಿ ಕಾನೂನು ಪ್ರಾಧ್ಯಾಪಕರಾಗಿದ್ದಾರೆ. ►ನೀಲ್ ಕಟ್ಯಾಲ್ ವಾದಿಸಿದ ಪ್ರಮುಖ ಪ್ರಕರಣಗಳು ಟ್ರಂಪ್ ಅವರ 2017ರ ಪ್ರಯಾಣ ನಿಷೇಧ (“ಮುಸ್ಲಿಮರ ಪ್ರಯಾಣ ನಿಷೇಧ”ಎಂದೇ ಕುಖ್ಯಾತ) ಪ್ರಕರಣ, 1965ರ ಮತದಾನದ ಹಕ್ಕು ಕಾಯ್ದೆಯ ಸಾಂವಿಧಾನಿಕತೆಯ ಸಮರ್ಥನೆ ಸೇರಿದಂತೆ ಹಲವು ರಾಷ್ಟ್ರೀಯ ಮಟ್ಟದ ಪ್ರಕರಣಗಳಲ್ಲಿ ಕಟ್ಯಾಲ್ ವಾದಿಸಿದ್ದಾರೆ. ಜಾರ್ಜ್ ಫ್ಲಾಯ್ಡ್ ಹತ್ಯೆ ಪ್ರಕರಣದಲ್ಲಿ ವಿಶೇಷ ಪ್ರಾಸಿಕ್ಯೂಟರ್ ಆಗಿ ಕಾರ್ಯನಿರ್ವಹಿಸಿ, ಪೊಲೀಸ್ ಅಧಿಕಾರಿ ಡೆರೆಕ್ ಚೌವಿನ್ ಅವರಿಗೆ ಶಿಕ್ಷೆಯಾಗುವಂತೆ ಮಾಡುವಲ್ಲಿ ನೀಲ್ ಕಟ್ಯಾಲ್ ಪಾತ್ರ ದೊಡ್ಡದು. 2011ರಲ್ಲಿ ಅವರಿಗೆ ಯುಎಸ್ ನ್ಯಾಯ ಇಲಾಖೆಯಿಂದ ನಾಗರಿಕರಿಗೆ ನೀಡಲಾಗುವ ಅತ್ಯುನ್ನತ ಗೌರವವಾದ ಎಡ್ಮಂಡ್ ಜೆ. ರಾಂಡೋಲ್ಫ್ ಪ್ರಶಸ್ತಿ ಲಭಿಸಿದೆ. 2019ರಲ್ಲಿ ‘ಇಂಪೀಚ್: ದಿ ಕೇಸ್ ಅಗೇನ್ಸ್ಟ್ ಡೊನಾಲ್ಡ್ ಟ್ರಂಪ್’ ಕೃತಿಯನ್ನು ಸಹ ಲೇಖಕರಾಗಿಯೂ ಕೆಲಸ ಮಾಡಿದ್ದಾರೆ. 2024 ಮತ್ತು 2025ರಲ್ಲಿ ಫೋರ್ಬ್ಸ್ ಪ್ರಕಟಿಸಿದ ಅಮೆರಿಕದ ಟಾಪ್ 200 ವಕೀಲರ ಪಟ್ಟಿಯಲ್ಲೂ ಅವರು ಸ್ಥಾನ ಪಡೆದಿದ್ದಾರೆ. ಸೌಜನ್ಯ: indianexpress.com
ಸಿಇಟಿ: ಅರ್ಜಿ ಸಲ್ಲಿಸಲು ಫೆ.27ರವರೆಗೆ ಅವಕಾಶ
ಬೆಂಗಳೂರು : ಇಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ನಡೆಸಲಿದ್ದು, ಪರೀಕ್ಷೆಗೆ ಅರ್ಜಿ ಸಲ್ಲಿಸುವ ಕೊನೆ ದಿನಾಂಕವನ್ನು ಫೆ.27ರವರೆಗೆ ವಿಸ್ತರಿಸಲಾಗಿದೆ. ಈ ಸಂಬಂಧ ಪ್ರಾಧಿಕಾರದ ಆಡಳಿತಾಧಿಕಾರಿ ಇಸ್ಲಾವುದ್ದೀನ್ ಗದ್ಯಾಳ ಪ್ರಕಟನೆ ಹೊರಡಿಸಿದ್ದು, ಇದು ಕೊನೆಯ ಅವಕಾಶವಾಗಿದ್ದು, ಈ ಅವಧಿ ನಂತರ ಪುನಃ ದಿನಾಂಕ ವಿಸ್ತರಣೆ ಇರುವುದಿಲ್ಲ. ಹೀಗಾಗಿ ಅಭ್ಯರ್ಥಿಗಳು ನಿಗದಿತ ಅವಧಿಯೊಳಗೆ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬೇಕು ಎಂದಿದ್ದಾರೆ. ಇದುವರೆಗೂ 3 ಲಕ್ಷಕ್ಕೂ ಹೆಚ್ಚಿನ ಮಂದಿ ಶುಲ್ಕ ಪಾವತಿಸಿ ಅರ್ಜಿ ಸಲ್ಲಿಸಿದ್ದು, ಇನ್ನೂ ಅನೇಕರು ಫೆ.22ರ ಕೊನೆ ದಿನಾಂಕವನ್ನು ವಿಸ್ತರಿಸುವಂತೆ ಕೋರಿದ್ದಾರೆ. ಆ ಪ್ರಕಾರ ಅರ್ಜಿ ಸಲ್ಲಿಸಲು ಫೆ.27 ಹಾಗೂ ಶುಲ್ಕ ಪಾವತಿಗೆ ಮಾ.3ರವರೆಗೆ ಅವಕಾಶ ನೀಡಲಾಗಿದೆ. ಅರ್ಜಿ ಸಲ್ಲಿಸಿರುವವರ ಪೈಕಿ 2.18 ಲಕ್ಷ ಅಭ್ಯರ್ಥಿಗಳ ದಾಖಲೆಗಳ ಪರಿಶೀಲನೆ ಸ್ಯಾಟ್ಸ್ ಮೂಲಕ ಆನ್ಲೈನ್ ನಲ್ಲಿ ಆಗಿದೆ. ಕಾಲೇಜು ಹಂತದಲ್ಲಿ 1.08 ಲಕ್ಷ ಅಭ್ಯರ್ಥಿಗಳ ದಾಖಲೆ ಪರಿಶೀಲನೆ ಮಾಡಲಾಗಿದೆ ಎಂದು ಅವರು ವಿವರಿಸಿದ್ದಾರೆ.
‘ಸಾಮಾಜಿಕ ನ್ಯಾಯ’ದ ಪರ ಯಾವ ನಾಯಕನೂ ಇಲ್ಲ : ವಿ.ಎಸ್.ಉಗ್ರಪ್ಪ
ಎಂ.ಜಿ.ಹೆಗಡೆ ಅವರ ‘ಭಾರತ ಮುಸ್ಲಿಮ್ ರಾಷ್ಟ್ರ ಆಗುವುದೇ?’ ಕೃತಿ ಬಿಡುಗಡೆ
Bengaluru | ಸುಗಂಧ ದ್ರವ್ಯ ಗೋದಾಮಿಗೆ ಬೆಂಕಿ: ಅಪಾರ ನಷ್ಟ
ಬೆಂಗಳೂರು : ಬೆಂಗಳೂರು ಹೊರವಲಯದಲ್ಲಿನ ನೆಲಮಂಗಲ ತಾಲೂಕಿನ ಮಾಕಳಿ ಬಳಿಯ ಸುಗಂಧ ದ್ರವ್ಯಗಳನ್ನು ಸಂಗ್ರಹಿಸಿದ್ದ ಗೋದಾಮಿನಲ್ಲಿ ವಿದ್ಯುತ್ ಶಾರ್ಟ್ ಸಕ್ರ್ಯೂಟ್ನಿಂದ ಬೆಂಕಿ ಅವಘಡ ಸಂಭಿಸಿದ್ದು, ಭಾರಿ ಪ್ರಮಾಣದ ಆಸ್ತಿಪಾಸ್ತಿ ನಷ್ಟವಾಗಿದೆ. ರವಿವಾರ ಬೆಳಗ್ಗೆ 11:30ರ ಸುಮಾರಿಗೆ ಸಂಭವಿಸಿದ ಅಗ್ನಿ ದುರಂತದಿಂದ ಸಂಗ್ರಹಿಸಿದ್ದ ಸುಗಂಧ ದ್ರವ್ಯಗಳು ನಾಶವಾಗಿವೆ. ವೇಗವಾಗಿ ಹರಡಿದ ಬೆಂಕಿ ಕೇವಲ ಒಂದು ಗಂಟೆಯೊಳಗೆ ಅಕ್ಕ ಪಕ್ಕದ ಮೂರರಿಂದ ನಾಲ್ಕು ಗೋದಾಮುಗಳಿಗೆ ವ್ಯಾಪಿಸಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ವರದಿಯಾಗಿದ್ದು, ಬೆಂಕಿಯನ್ನು ನಂದಿಸಲು ಅಗ್ನಿಶಾಮಕ ದಳ ಸಿಬ್ಬಂದಿ ಹರಸಾಹಸ ಪಟ್ಟಿದ್ದಾರೆ. ಅಗ್ನಿ ಅವಘಡದಿಂದಾಗಿ ಯಾವುದೇ ಪ್ರಾಣಹಾನಿ ಸಂಭವಿಸಲಿಲ್ಲವಾದರೂ ಕಾರ್ಮಿಕರಿಗೆ ಗಾಯಗಳಾಗಿವೆ. ವೇರ್ ಹೌಸ್ನಲ್ಲಿ ಕೆಲಸ ಮಾಡುತ್ತಿದ್ದ ನಾಲ್ವರು ಕಾರ್ಮಿಕರಿಗೆ ಸುಟ್ಟ ಗಾಯಗಳಾಗಿದ್ದು, ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಗಾಯಗೊಂಡ ಕಾರ್ಮಿಕರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸ್ಥಳೀಯರೊಬ್ಬರು ಮಾಹಿತಿ ನೀಡಿದ್ದಾರೆ. ಈ ಗೋದಾಮುಗಳಲ್ಲಿ ನಾಯಿಗಳ ಆಹಾರ ಸಂಗ್ರಹಿಸುವ ಪೆಡಿಗ್ರಿ ಗೋದಾಮು ಸೇರಿವೆ ಎನ್ನಲಾಗಿದೆ. ಬೆಂಕಿಯ ಕೆನ್ನಾಲಿಗೆಗೆ ಒಟ್ಟು ಕೋಟ್ಯಂತರ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿವೆ. ವಿಶೇಷವಾಗಿ, ಅಗ್ನಿ ಅವಘಡ ಸಂಭವಿಸಿದ ಸ್ಥಳದ ಪಕ್ಕದಲ್ಲೇ ಎಚ್ಪಿ ಗ್ಯಾಸ್ ಸಿಲಿಂಡರ್ ಸಂಗ್ರಹವಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಅವುಗಳನ್ನು ತಕ್ಷಣವೇ ಸ್ಥಳಾಂತರಿಸಲಾಗಿದೆ. ಈ ಸಂಬಂಧ ಮಾದಕನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಳಂದ |ವಿದ್ಯಾರ್ಥಿಗಳು ನವೋದ್ಯಮಗಳ ಆರಂಭದತ್ತ ಗಮನ ಹರಿಸಿ : ಪ್ರೊ.ಎಸ್.ರಘುನಾಥ ರೆಡ್ಡಿ
ಆಳಂದ: ಉನ್ನತ ಶಿಕ್ಷಣದಲ್ಲಿ ಉದ್ಯಮಶೀಲತಾ ಚಿಂತನೆ ಇಂದಿನ ಅತ್ಯಾವಶ್ಯಕತೆಯಾಗಿದೆ. ವಿದ್ಯಾರ್ಥಿಗಳು ಸಾಂಪ್ರದಾಯಿಕ ವೃತ್ತಿ ಮಾರ್ಗಗಳನ್ನು ಮೀರಿ ನವೋದ್ಯಮಗಳ ಆರಂಭದತ್ತ ಗಮನ ಹರಿಸಿ, ಅದನ್ನು ಪ್ರಭಾವಶಾಲಿ ಮತ್ತು ಗೌರವಾನ್ವಿತ ವೃತ್ತಿಯಾಗಿ ಆಯ್ಕೆ ಮಾಡಿಕೊಳ್ಳಬೇಕು ಎಂದು ಆಂಧ್ರಪ್ರದೇಶದ ಯೋಗಿ ವೇಮನ ವಿಶ್ವವಿದ್ಯಾಲಯದ ವಾಣಿಜ್ಯ ವಿಭಾಗದ ಮುಖ್ಯಸ್ಥ ಪ್ರೊ.ಎಸ್.ರಘುನಾಥ ರೆಡ್ಡಿ ಹೇಳಿದರು. ತಾಲೂಕಿನ ಕಡಗಂಚಿ ಬಳಿಯ ಕರ್ನಾಟಕ ಕೇಂದ್ರ ವಿಶ್ವವಿದ್ಯಾಲಯದ ವಾಣಿಜ್ಯ ಅಧ್ಯಯನ ನಿಕಾಯದ ವಾಣಿಜ್ಯ ವಿಭಾಗವು ಆಯೋಜಿಸಿದ್ದ ‘ನವೋದ್ಯಮ ಪರಿಸರ ವ್ಯವಸ್ಥೆ’ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಉದ್ಯಮಶೀಲತೆ ಕೇವಲ ಆರ್ಥಿಕ ಲಾಭದ ಸಾಧನವಲ್ಲ, ಅದು ಸಮಾಜ ಪರಿವರ್ತನೆಗೆ ಶಕ್ತಿಯಾದ ವೇದಿಕೆಯಾಗಬೇಕೆಂದು ಅಭಿಪ್ರಾಯಪಟ್ಟರು. ಯುವಜನತೆ ಹೊಸ ಆಲೋಚನೆಗಳು, ತಂತ್ರಜ್ಞಾನ ಮತ್ತು ನಾವೀನ್ಯತೆಯ ಮೂಲಕ ಉದ್ಯೋಗ ಸೃಷ್ಟಿಕರ್ತರಾಗಬೇಕೆಂದು ಕರೆ ನೀಡಿದರು. ಸಿಯುಕೆಯ ಇನ್ಕ್ಯುಬೇಷನ್ ಸೆಂಟರ್ನ ನಿರ್ದೇಶಕ ಡಾ.ರಾಜೀವ ಜೋಶಿ ಮಾತನಾಡಿ, ವಿದ್ಯಾರ್ಥಿ ಉದ್ಯಮಿಗಳಿಗೆ ಸೂಕ್ತ ಮಾರ್ಗದರ್ಶನ, ಹಣಕಾಸು ಬೆಂಬಲ ಮತ್ತು ಉದ್ಯಮ ಸಂಪರ್ಕಗಳನ್ನು ಒದಗಿಸುವ ಉದ್ದೇಶದಿಂದ ವಿಶ್ವವಿದ್ಯಾಲಯದಲ್ಲಿ ಇನ್ಕ್ಯುಬೇಷನ್ ಸೆಂಟರ್ ಸ್ಥಾಪಿಸಲಾಗಿದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದು ತಮ್ಮ ಆಲೋಚನೆಗಳನ್ನು ಯಶಸ್ವಿ ಉದ್ಯಮಗಳಾಗಿ ರೂಪಿಸಿಕೊಳ್ಳಬೇಕು ಎಂದರು. ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಕೆಇಡಿಎಂ) ಕಲಬುರಗಿ ಕ್ಲಸ್ಟರ್ನ ಮುಖ್ಯಸ್ಥ ಸುಜಯ ಮುದ್ಗಲ್ ಮಾತನಾಡಿದರು. ಕಲಬುರಗಿಯ ಇಮೈಲ್ ಏಜ್ ಇನಿಶಿಯೇಟಿವ್ ಪ್ರೈವೇಟ್ ಲಿಮಿಟೆಡ್ನ ಸಂಸ್ಥಾಪಕ ಹಾಗೂ ಸಿಇಒ ಶ್ರೀ.ಬಸವರೆಡ್ಡಿ ಎಸ್.ಎಂ. ತಮ್ಮ ಉದ್ಯಮಶೀಲತಾ ಅನುಭವವನ್ನು ಹಂಚಿಕೊಂಡರು. ಅಧ್ಯಕ್ಷತೆಯನ್ನು ಸ್ಕೂಲ್ ಆಫ್ ಬಿಸಿನೆಸ್ ಸ್ಟಡೀಸ್ನ ಡೀನ್ ಪ್ರೊ.ಪಾಂಡುರoಗ ವಿ. ವಹಿಸಿದ್ದರು. ಸಂಯೋಜಕ ಡಾ.ಜಿ.ರಂಗನಾಥಮ ನಿರೂಪಿಸಿ, ಸ್ವಾಗತಿಸಿದರು. ಪ್ರೊ.ಪದ್ಮಶ್ರೀ, ಪ್ರೊ.ಎಂ.ಎ.ಅಸ್ಲಾಂ, ಡಾ.ಮಹೇಂದ್ರ, ಡಾ. ರಾಜಲಿಂಗ, ಅಧ್ಯಾಪಕ ವೃಂದ, ಸಂಶೋಧನಾ ವಿದ್ವಾಂಸರು ಹಾಗೂ ವಿದ್ಯಾರ್ಥಿಗಳು ಭಾರಿ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಲಂಚ ಪ್ರಕರಣದಲ್ಲಿ ಬಿಜೆಪಿ ಶಾಸಕ ಚಂದ್ರು ಲಮಾಣಿಗೆ ನ್ಯಾಯಾಂಗ ಬಂಧನ; ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್
ಲಂಚ ಸ್ವೀಕಾರ ಆರೋಪದಲ್ಲಿ ಲೋಕಾಯುಕ್ತ ಬಲೆಗೆ ಬಿದ್ದ ಶಿರಹಟ್ಟಿ ಕ್ಷೇತ್ರದ ಬಿಜೆಪಿ ಶಾಸಕ ಚಂದ್ರು ಲಮಾಣಿ ಅವರಿಗೆ ಮಾರ್ಚ್ 3ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಈ ಆದೇಶ ಹೊರಡಿಸಿದೆ. ಶಾಸಕ ಲಮಾಣಿ ಹಾಗೂ ಅವರ ಅಧಿಕೃತ ವೈಯಕ್ತಿಕ ಸಹಾಯಕ ಮಂಜುನಾಥ್ ಸೇರಿದಂತೆ ಇನ್ನೋರ್ವ ಸಹಾಯಕನನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಶಿಫ್ಟ್
T20 ವಿಶ್ವಕಪ್ ಸೂಪರ್ 8 | ಭಾರತಕ್ಕೆ 188 ರನ್ ಗಳ ಗುರಿ ನೀಡಿದ ದಕ್ಷಿಣ ಆಫ್ರಿಕಾ
ಅಹ್ಮದಾಬಾದ್, ಫೆ.22: ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ ನ ಸೂಪರ್ 8ರ ಭಾರತದ ವಿರುದ್ಧದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವು 7 ವಿಕೆಟ್ ನಷ್ಟಕ್ಕೆ 187 ರನ್ ಗಳಿಸಿದೆ. ಆ ಮೂಲಕ ಭಾರತಕ್ಕೆ 188 ರನ್ ಗಳ ಗುರಿ ನೀಡಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ದಕ್ಷಿಣ ಆಫ್ರಿಕಾ ತಂಡವು ಆರಂಭದಲ್ಲೇ ಎರಡು ಪ್ರಮುಖ ವಿಕೆಟ್ ಗಳನ್ನು ಕಳೆದುಕೊಂಡು ಹಿನ್ನಡೆ ಅನುಭವಿಸಿತು. ಎರಡನೇ ಓವರ್ ನಲ್ಲಿ ಜಸ್ಪ್ರೀತ್ ಬುಮ್ರಾ ಎಸೆತದಲ್ಲಿ ಕಿಂಟನ್ ಡಿ ಕಾಕ್ 6 ರನ್ ಗಳಿಸಿದ್ದಾಗ ಕ್ಲೀನ್ ಬೌಲ್ಡ್ ಆಗಿ ನಿರ್ಗಮಿಸಿದರು. ಮೂರನೇ ಓವರ್ ನಲ್ಲಿ ತಂಡದ ನಾಯಕ ಏಡನ್ ಮಕ್ರಮ್ ಕೂಡ ಹಾರ್ದಿಕ್ ಪಾಂಡ್ಯಾಗೆ ಕ್ಯಾಚಿತ್ತು ಅರ್ಷದೀಪ್ ಸಿಂಗ್ ಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಹಾದಿ ಹಿಡಿದರು. ನಾಲ್ಕನೇ ಓವರ್ ನಲ್ಲಿ ತಂಡದ ಮೊತ್ತ 20 ಆಗುತ್ತಿದ್ದಂತೆ ರ್ಯಾನ್ ರಿಕೆಲ್ಟನ್ ಅವರು 7 ರನ್ ಪೇರಿಸಿದ್ದಾಗ ಜಸ್ಪ್ರೀತ್ ಬುಮ್ರಾಗೆ ವಿಕೆಟ್ ಒಪ್ಪಿಸಿದರು. ಪವರ್ ಪ್ಲೇನಲ್ಲಿಯೇ ಆಘತ ಅನುಭವಿಸಿದ ದಕ್ಷಿಣ ಆಫ್ರಿಕಾಕ್ಕೆ ನೆರವಾದವರು ಡೇವಿಡ್ ಮಿಲ್ಲರ್. 35 ಎಸೆತ ಎದುರಿಸಿದ ಅವರು 63 ರನ್ ಗಳಿಸಿದರು. ಅದರಲ್ಲಿ 7 ಬೌಂಡರಿ, 3 ಸಿಕ್ಸರ್ ಸೇರಿದ್ದವು.
ಇಸ್ರೇಲ್ ದಾಳಿಗೆ ನಲುಗಿದ ಲೆಬನಾನ್, ಹಿಜ್ಬುಲ್ಲಾ ಮುಖಂಡರು ಅನಾಮಿಕ ಸ್ಥಳಗಳಿಗೆ ಎಸ್ಕೇಪ್... Israel And Lebanon
ಪ್ರಪಂಚ ಈಗ ಮತ್ತೊಂದು ಅವನತಿ ಕಡೆಗೆ ಸಾಗುತ್ತಿರುವ ರೀತಿ ಭಾಸವಾಗುತ್ತಿದ್ದು, ಅದರಲ್ಲೂ ಈಗಿನ ಪರಿಸ್ಥಿತಿ ನೋಡಿದರೆ ಮಧ್ಯಪ್ರಾಚ್ಯ ಏನಾಗುತ್ತೋ ಗೊತ್ತಿಲ್ಲ. ಯಾಕೆ ಈ ಮಾತು ಅಂತಾ ಹೇಳಿದರೆ, ಮಧ್ಯಪ್ರಾಚ್ಯ ಭಾಗದಲ್ಲಿ ಮತ್ತೆ ಮತ್ತೆ ತಿಕ್ಕಾಟ ನಡೆಯುತ್ತಿದೆ. ನಿನ್ನೆಯಷ್ಟೇ ಲೆಬನಾನ್ನ ವಿರುದ್ಧದ ಕಾರ್ಯಾಚರಣೆ ವೇಳೆ ಇಸ್ರೇಲ್ ವಾಯುದಾಳಿ ನಡೆಸಿತ್ತು. ಆ ಮೂಲಕ ಲೆಬನಾನ್ ನೆಲದಲ್ಲಿ ಇರುವ ಹಿಜ್ಬುಲ್ಲಾ ನಾಯಕರಿಗೆ
ದಲಿತರಿಗೆ ಸಿಎಂ ಅವಕಾಶ ತಪ್ಪಿಸಿದ್ದು ಸಿದ್ದರಾಮಯ್ಯ: ಎಚ್.ಡಿ.ಕುಮಾರಸ್ವಾಮಿ ಆರೋಪ
ರಾಯಚೂರು : ರಾಜ್ಯದಲ್ಲಿ ದಲಿತ ಮುಖ್ಯಮಂತ್ರಿ ಆಗುವುದು ಕಾಂಗ್ರೆಸ್ನಿಂದ ಮಾತ್ರ ಎಂದು ಹೇಳಿದ್ದ ಸಿದ್ದರಾಮಯ್ಯ ಅವರೇ ದಲಿತರಿಗೆ ಮುಖ್ಯಮಂತ್ರಿ ಅವಕಾಶ ತಪ್ಪಿಸಿದ್ದಾರೆ ಎಂದು ಕೇಂದ್ರ ಸಚಿವ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದರು. ಮಂತ್ರಾಲಯ ಮಠದಲ್ಲಿ ನಡೆಯುತ್ತಿರುವ ಶ್ರೀ ರಾಘವೇಂದ್ರ ಸ್ವಾಮಿ ಅವರ ಆರಾಧನಾ ಮಹೋತ್ಸವದಲ್ಲಿ ಪಾಲ್ಗೊಂಡು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಲ್ಲಿಕಾರ್ಜುನ ಖರ್ಗೆ ಹಾಗೂ ಜಿ. ಪರಮೇಶ್ವರ ಅವರು ಹಿಂದೆ ಮುಖ್ಯಮಂತ್ರಿಯಾಗಬಹುದಾಗಿತ್ತು. 75 ವರ್ಷಗಳಿಂದ ದಲಿತರಿಗೆ ಸಿಎಂ ಆಗುವ ಅವಕಾಶ ಸಿಗಲಿಲ್ಲವೇ ಎಂದು ಪ್ರಶ್ನಿಸಿದರು. ಮಲ್ಲಿಕಾರ್ಜುನ ಖರ್ಗೆ ಅವರು ಸಿಎಂ ಆಗಬಹುದಾಗಿದ್ದರೂ ಅವರನ್ನು ರಾಷ್ಟ್ರ ರಾಜಕಾರಣಕ್ಕೆ ಕಳುಹಿಸಲಾಯಿತು. ಜಿ. ಪರಮೇಶ್ವರ ಅವರಿಗೂ ಅವಕಾಶ ಇತ್ತು, ಆದರೆ ಇದುವರೆಗೆ ಅದನ್ನು ಬಳಸಲಾಗಿಲ್ಲ ಎಂದು ತಿಳಿಸಿದರು. ರಾಜ್ಯದಲ್ಲಿ ಪ್ರತಿದಿನ ಭ್ರಷ್ಟಾಚಾರ ನಡೆಯುತ್ತಿದ್ದು, ಅದು ಹೆಚ್ಚಳವಾಗಿದೆ. ಅಧಿಕಾರಿಗಳ ವರ್ಗಾವಣೆಯಲ್ಲಿ ಅಧಿಕಾರ ದುರುಪಯೋಗ ಮಾಡಲಾಗುತ್ತಿದೆ ಎಂದು ಆರೋಪಿಸಿದರು. ಒಕ್ಕಲಿಗರಿಗೆ ಮುಖ್ಯಮಂತ್ರಿ ಸ್ಥಾನ ನೀಡುವುದಾಗಿ ಹೇಳಿ ಹೋರಾಟ ನಡೆಯುತ್ತಿದೆ. ಮತ್ತೊಬ್ಬರು ನಾನು ಕುರ್ಚಿ ಬಿಡುವುದಿಲ್ಲ ಎಂದು ಹೇಳುತ್ತಿದ್ದಾರೆ. ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಿಲ್ಲ ಎಂದು ತಿಳಿಸಿದರು.
ಮನ್ ಕೀ ಬಾತ್ನಲ್ಲಿ ಕೇರಳದ ‘ಮಾಮಾಂಗಂ’ ಉತ್ಸವ ಪರಂಪರೆಯನ್ನು ಸ್ಮರಿಸಿದ ಪ್ರಧಾನಿ ಮೋದಿ
ಹೊಸದಿಲ್ಲಿ,ಫೆ.22: ಕೇರಳ ಕುಂಭಮೇಳವೆಂದು ಕರೆಯಲ್ಪಡುವ ಶತಮಾನಗಳಷ್ಟು ಪುರಾತನವಾದ ಮಾಮಾಂಗಂ ಉತ್ಸವ ಪರಂಪರೆಯನ್ನು ಪ್ರಧಾನಿ ನರೇಂದ್ರ ಮೋದಿ ರವಿವಾರ, ಅವರ ಬಾನುಲಿ ಭಾಷಣ ‘ ಮನ್ಕೀ ಬಾತ್’ನಲ್ಲಿ ಪ್ರಸ್ತಾವಿಸಿದ್ದಾರೆ. ಉತ್ತರದಿಂದ ದಕ್ಷಿಣದವರೆಗೆ ನದಿಗಳು ವಿಭಿನ್ನವಾಗಿರಬಹುದು. ಆದರೆ ನಂಬಿಕೆಯ ಹರಿವು ಮಾತ್ರ ಒಂದೇ ರೀತಿಯದ್ದಾಗಿದೆ ಎಂದವರು ಹೇಳಿದ್ದಾರೆ. ‘‘ಉತ್ತರಪ್ರದೇಶದ ಪ್ರಯಾಗ್ರಾಜ್ನಲ್ಲಿ ಕಳೆದ ವರ್ಷ ನಡೆದ ಮಹಾಕುಂಭಮೇಳದ ಅಮೋಘ ದೃಶ್ಯಗಳನ್ನು ಜನರು ಈಗಲೂ ನೆನಪಿಸಿಕೊಳ್ಳುತ್ತಾರೆ. ತ್ರಿವೇಣಿ ಸಂಗಮದ ದಡಗಳಲ್ಲಿ ಜನಸಾಗರವೇ ಹರಿದುಬರುತ್ತಿರುವುದು, ನಂಬಿಕೆಯ ಅಗಾಧವಾದ ಹರಿವು, ಕುಂಭಮೇಳ ಸ್ನಾನದ ಪವಿತ್ರಕ್ಷಣಗಳು, ಇವೆಲ್ಲವೂ ಭಾರತವು ಸನಾತನ ಚೇತನದೊಂದಿಗೆ ಬೆಸೆದುಕೊಂಡಿರುವುದನ್ನು ತೋರಿಸುತ್ತದೆ’’ ಎಂದರು. ‘‘ಅದೇ ಮಹಾಕುಂಭವು ಮಾಘಮಾಸದಲ್ಲಿ, ಅದೇ ರೀತಿಯ ಭಕ್ತಿಯ ಧ್ವನಿಯೊಂದಿಗೆ ಉತ್ತರದಿಂದ ದಕ್ಷಿಣಕ್ಕೆ ಹೊಸ ಗುರುತಿನೊಂದಿಗೆ ಹರಿದುಬರುತ್ತದೆ. ಕೇರಳ ನಾಡಿನಲ್ಲಿ, ಭರತಪುಳ ನದಿಯ ದಡದಲ್ಲಿರುವ ತಿರುನಾವಯದಲ್ಲಿ ಮಾಮಾಂಗಂ ಎಂಬ ಶತಮಾನಗಳಷ್ಟು ಪುರಾತನವಾದ ಪರಂಪರೆಯೊಂದಿದೆ.ಬಹಳಷ್ಟು ಮಂದಿ ಅದನ್ನು ನದಿಯಲ್ಲಿ ಪವಿತ್ರ ಸ್ನಾನ ಮಾಡುವ ಮಹಾಮಾಘ ಉತ್ಸವ ಅಥವಾ ಕೇರಳ ಕುಂಭವೆಂಬುದಾಗಿಯೂ ಕರೆಯುತ್ತಿದ್ದರು’’. ‘‘ ಆದರೆ ಕಾಲಾನಂತರ ಈ ಪರಂಪರೆಯು ಕಣ್ಮರೆಯಾಗಿದೆ. ಸುಮಾರು 250 ವರ್ಷಗಳಿಂದ ಈ ಉತ್ಸವ ಅದ್ದೂರಿಯಾಗಿ ಆಚಣೆಯಾಗುತ್ತಿರಲಿಲ್ಲ. ಆದರೆ ಇಂದು ನಮ್ಮ ದೇಶವು, ಅದರ ಪರಂಪರೆಯನ್ನು , ಇತಿಹಾಸಕ್ಕೆ ಮರುಮಾನ್ಯತೆ ನೀಡುತ್ತಿದೆ. ಈ ಸಲದ ಕೇರಳ ಕುಂಭಮೇಳವು ಯಾವುದೇ ಪ್ರಚಾರವಿಲ್ಲದಿದ್ದರೂ ಯಶಸ್ವಿಯಾಗಿ ನಡೆಯಿತು ಎಂದರು. ಈ ಉತ್ಸವದ ಕುರಿತಾಗಿ ಜನರು ಪರಸ್ಪರ ಮಾತನಾಡಿಕೊಂಡರು, ಕ್ರ ಮೇಣ ವಿಷಯವು ಹರಡುತ್ತಾಹೋಗಿ, ಭಕ್ತಾದಿಗಳು ಪ್ರತಿದಿನವೂ ತಿರುನಾವಯಕ್ಕೆ ಬರತೊಡಗಿದರು. ಮಹಾಕುಂಭಮೇಳವಾಗಿರಲಿ ಅಥವಾ ಕೇರಳಕುಂಭಮೇಳವಾಗಿರಲಿ ಇದು ಕೇವಲ ಸ್ನಾನದ ಉತ್ಸವವವಲ್ಲ, ಇದು ನೆನಪನ್ನು ಉದ್ದೀಪನಗೊಳಿಸುವ ಕ್ಷಣವಾಗಿದೆ. ಇದೊಂದು ಸಂಸ್ಕೃತಿಯ ಪುನರ್ಸ್ಮರಣೆಯಾಗಿದೆ ಎಂದರು.
ಸನಾತನ ಧರ್ಮದ ವಿರುದ್ಧ ‘ಗುರಿಯಿಡುವ’ ಚಿತ್ರಗಳ ನಿರ್ದೇಶಕರ ಮನೆಗೆ ನುಗ್ಗುತ್ತೇವೆ: ಕರ್ಣಿ ಸೇನಾ ಅಧ್ಯಕ್ಷನಿಂದ ಬೆದರಿಕೆ
ಸಂಭಾಲ್,ಫೆ.22: ಚಲನಚಿತ್ರಗಳಲ್ಲಿ ಸನಾತನ ಧರ್ಮದ ವಿರುದ್ಧ ಗುರಿಯಿಡುವ ಚಿತ್ರ ನಿರ್ದೇಶಕರಿಗೆ, ನಿರ್ಮಾಪಕರಿಗೆ ತಕ್ಕ ಪಾಠಕಲಿಸುವುದಾಗಿ ಬಲಪಂಥೀಯ ಹಿಂದುತ್ವವಾದಿ ಸಂಘಟನೆ ಕ್ಷತ್ರಿಯ ಕರ್ಣಿ ಸೇನಾ ಎಚ್ಚರಿಕೆ ನೀಡಿದೆ. ಕ್ಷತ್ರಿಯ ಕರ್ಣಿ ಸೇನಾದ ರಾಷ್ಟ್ರೀಯ ಅಧ್ಯಕ್ಷರಾದ ರಾಜ್ ಶೇಖಾವತ್ ಅವರು ಶನಿವಾರ ರಾತ್ರಿ ಹಾಲ್ಲು ಸರಾಯ್ನಲ್ಲಿರುವ ಚಾಮುಂಡಾ ದೇವಾಲಯದಲ್ಲಿ ಪ್ರಾರ್ಥನೆಯನ್ನು ಸಲ್ಲಿಸಿದ ಆನಂತರ ಸುದ್ದಿಗಾರರ ಜೊತೆ ಮಾತನಾಡುತ್ತಾ, ಶೀಘ್ರದಲ್ಲೇ ಬಿಡುಗಡೆಗೊಳ್ಳಲಿರುವ ಹಿಂದಿ ಚಿತ್ರಗಳಾದ ಯಾದವ್ಜೀ ಕಿ ಲವ್ ಸ್ಟೋರಿ ಹಾಗೂ ‘ಗೂಸ್ಕರ್ ಪಂಡತ್’ ಬಗ್ಗೆ ಆಕ್ಷೇಪವನ್ನು ವ್ಯಕ್ತಪಡಿಸಿದರು. ‘‘ನಮ್ಮ ದೇವರು ಮತ್ತು ಸಂಸ್ಕೃತಿಯ ಬಗ್ಗೆ ಚಿತ್ರಗಳನ್ನು ತಯಾರಿಸುವ ನಮ್ಮ ನಿರ್ಮಾಪಕರು ಹಾಗೂ ನಿರ್ದೇಶಕರ ಮನೆಗಳಿಗೆ ನುಗ್ಗಿ, ಅವರಿಗೆ ಪಾಠ ಕಲಿಸುವ ದಿನ ಬಂದಿದೆ ಎಂದು ಶೇಖಾವತ್ ಹೇಳಿದ್ದಾರೆ. ಕ್ಷತ್ರಿಯ ಹಾಗೂ ಬ್ರಾಹ್ಮಣ ಸಮುದಾಯಗಳನ್ನು ಗುರಿಯಿರಿಸಿದ ಬಳಿಕ ಚಿತ್ರತಯಾರಕರು, ಈಗ ಸಿನೆಮಾ ಮೂಲಕ ಯಾದವ್ ಸಮುದಾಯವನ್ನು ಅಪಮಾನಿಸತೊಡಗಿದ್ದಾರೆ. ಅಭಿವ್ಯಕ್ತಿ ಸ್ವಾತಂತ್ರ್ಯದ ನೆಪದಲ್ಲಿ ಯುವಜನರನ್ನು ತಪ್ಪುದಾರಿಗೆಳೆಯುವ ಹಾಗೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಹ ವಿಷಯಗಳಿರುವ ಚಿತ್ರಗಳನ್ನು ನಿರ್ಮಿಸುತ್ತಿದ್ದಾರೆಂದು ಆರೋಪಿಸಿದರು. ‘‘ ಶೀಘ್ರದಲ್ಲೇ ಮುಂಬೈಗೆ ತೆರಳಿ ಇಂತಹ ಚಿತ್ರಗಳನ್ನು ನಿರ್ಮಿಸುವ ನಿರ್ದೇಶಕರ ಮನೆಗಳಿಗೆ ತೆರಳಿ ಕ್ರಮ ಕೈಗೊಳ್ಳುತ್ತೇವೆ . ಇದಕ್ಕಾಗಿ ಸಿದ್ಧರಿರುವಂತೆ ಕರ್ಣಿ ಸೇನಾದ ಕಾರ್ಯಕರ್ತರಿಗೆ ನಾನು ಸೂಚಿಸಿದ್ದೇನೆ’’ ಎಂದು ಶೇಖಾವತ್ ತಿಳಿಸಿದರು. ಫೆಬ್ರವರಿ 27ರಂದು ತೆರೆಕಾಣಲಿರುವ ಯಾದವ್ಜೀ ಕಿ ಲವ್ ಸ್ಟೋರಿ ಚಿತ್ರದ ವಿರುದ್ಧ ಈಗಾಗಲೇ ಇಡೀ ಯಾದವ್ ಸಮುದಾಯ ಪ್ರತಿಭಟನೆ ನಡೆಸುತ್ತಿದೆ ಎಂದರು. ಯಾದವ್ ಸಮುದಾಯದ ಮಹಿಳೆ ಹಾಗೂ ಮುಸ್ಲಿಂ ವ್ಯಕ್ತಿಯೊಬ್ಬನ ನಡುವಿನ ಪ್ರೇಮಕಥೆಯನ್ನು ಹೊಂದಿರುವ ಯಾದವ್ ಜೀ ಲವ್ಸ್ಟೋರಿ ವಿರುದ್ಧ ಯಾದವ್ ಸಮುದಾಯದ ಕೆಲವು ಸದಸ್ಯರಿಂದ ತೀವ್ರ ಆಕ್ಷೇಪ ವ್ಯಕ್ತಿವಾಗಿದೆ. ಈ ಚಿತ್ರದಿಂದ ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆಯುಂಟಾಗುವ ಅಪಾಯವಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಈ ಮಧ್ಯೆ ನೂತನ ಯುಜಿಸಿ ನಿಯಮಾವಳಿಗಳ ವಿರುದ್ಧ ಮಾರ್ಚ್ 8ರಂದು ದಿಲ್ಲಿಯಲ್ಲಿ ಬೃಹತ್ ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿದೆ ಎಂದವರು ಹೇಳಿದರು. ಯುಜಿಸಿಯ ನಿಯಾವಳಿಯ ಹಿಂತೆಗೆತ ಆಗ್ರಹಿಸಿ ‘ಸ್ವರ್ಣ ಸಮಾಜ ಸಮಿತಿ’ಯನ್ನು ರಚಿಸಲಾಗಿದೆ. ಪ್ರಸಕ್ತ ಕ್ಷತ್ರಿಯ ಕರ್ಣಿ ಸೇನಾವು ಈ ವಿಷಯದ ಬಗ್ಗೆ ರಾಜಕೀಯ ಬೆಂಬಲವನ್ನು ಪಡೆಯಲು ವಿವಿಧ ಸಂಸದರ ಜೊತೆ ಸಂಪರ್ಕದಲ್ಲಿರುವುದಾಗಿ ಶೇಖಾವತ್ ತಿಳಿಸಿದ್ದಾರೆ.
Bengaluru | ಎರಡು ತಿಂಗಳಲ್ಲಿ ಬೀದಿಬದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ, ವಾಹನ ವಿತರಣೆ : ಡಿ.ಕೆ.ಶಿವಕುಮಾರ್
ಬೆಂಗಳೂರು, ಫೆ.21 : ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ 30 ಸಾವಿರ ಬೀದಿಬದಿ ವ್ಯಾಪಾರಿಗಳು ನೋಂದಣಿ ಮಾಡಿಸಿಕೊಂಡಿದ್ದು, ಮುಂದಿನ 2 ತಿಂಗಳ ಒಳಗೆ ಅರ್ಹರಿಗೆ ಗುರುತಿನ ಚೀಟಿ ಹಾಗೂ ವಾಹನ ವಿತರಣೆ ಮಾಡಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಜಿಬಿಎ ಕೇಂದ್ರ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಬೀದಿಬದಿ ವ್ಯಾಪಾರಿಗಳಿಗೆ ಕಲ್ಯಾಣ ಯೋಜನೆಗಳಡಿ ತಳ್ಳುವಗಾಡಿ, ತ್ರಿಚಕ್ರ ಹಾಗೂ ನಾಲ್ಕು ಚಕ್ರ ವಾಹನ ನೀಡಲಾಗುವುದು. ಬೀದಿ ವ್ಯಾಪಾರಿಗಳು ಪಾದಚಾರಿ ಮಾರ್ಗದ ಬದಲು ವಾಹನಗಳಲ್ಲಿ ವ್ಯಾಪಾರ ಮಾಡಲು ಸರಕಾರ ನೆರವಾಗುತ್ತದೆ ಎಂದರು. ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆ ಭೂ ಸಂತ್ರಸ್ತರಿಗೆ ಪರಿಹಾರ ರೂಪವಾಗಿ ಕೆಲವು ಕಡೆ ಜಿಬಿಎ ವತಿಯಿಂದ ಟಿಡಿಆರ್ ನೀಡಬೇಕಾಗಿದೆ. ಪಾಲಿಕೆ ವತಿಯಿಂದ ಒಂದು ಕೇಂದ್ರ ಆರಂಭಿಸಿ ಸಂತ್ರಸ್ತರು ಅರ್ಜಿ ಕೊಟ್ಟ ಬಳಿಕ ಕೂಡಲೇ ಸ್ಥಳ ಪರಿಶೀಲನೆ ಮಾಡಿ ಎರಡು ಮೂರು ದಿನಗಳಲ್ಲಿ ಟಿಡಿಆರ್ ನೀಡಲು ತೀರ್ಮಾನಿಸಲಾಗಿದೆ. ಟಿಡಿಆರ್ ವಿನಿಮಯ ಬಗ್ಗೆ ಮುಂದಿನ ಎರಡು ವಾರದಲ್ಲಿ ಮಾಹಿತಿ ನೀಡಲಾಗುವುದು ಎಂದು ಅವರು ಹೇಳಿದರು. ಸಭೆಯಲ್ಲಿ ಜಿಬಿಎ ಚಿಹ್ನೆಯನ್ನು ಅಂತಿಮಗೊಳಿಸಲಾಗಿದ್ದು, ಆಯುಕ್ತರು ಅದನ್ನು ಬಿಡುಗಡೆ ಮಾಡಲಿದ್ದಾರೆ. ಇನ್ನು ಬೆಂಗಳೂರು ದಕ್ಷಿಣ ಪಾಲಿಕೆಯಲ್ಲಿ ಮಾದರಿ ಕಟ್ಟಡ ಅಂತಿಮಗೊಳಿಸಿದ್ದೇವೆ. ಆದಷ್ಟು ಬೇಗ ಟೆಂಡರ್ ಕರೆದು ಗುದ್ದಲಿ ಪೂಜೆ ಮಾಡಿ ಕೆಲಸ ಆರಂಭಿಸಬೇಕು ಎಂದು ಸೂಚಿಸಿದ್ದೇನೆ. ಪ್ರತಿನಿತ್ಯ ಕಾಮಗಾರಿ ಪ್ರಗತಿ ಫೋಟೋ ಸಮೇತ ಮಾಹಿತಿ ರವಾನಿಸಬೇಕು ಎಂದು ಸೂಚಿಸಿದ್ದು, ಅಧಿಕಾರಿಗಳಿಗೆ ಹೊಣೆಗಾರಿಕೆ ನಿಗದಿಪಡಿಸಿದ್ದೇನೆ ಎಂದು ಅವರು ಹೇಳಿದರು. 10 ಲಕ್ಷ ಆಸ್ತಿಗಳ ಸ್ಕ್ಯಾನಿಂಗ್ ಪೂರ್ಣ: ಸುಮಾರು 10 ಲಕ್ಷಕ್ಕೂ ಹೆಚ್ಚು ಜನರು ತಮ್ಮ ಆಸ್ತಿಗಳನ್ನು ಸ್ಕ್ಯಾನ್ ಮಾಡಿಸಿದ್ದು, ಎಪ್ರಿಲ್ ತಿಂಗಳ ಮೂರನೇ ರವಿವಾರದಂದು ಕಾರ್ಯಕ್ರಮವನ್ನು ಆಯೋಜಿಸಿ ಅವರಿಗೆ ಇ ಖಾತಾ ನೀಡಲಾಗುತ್ತದೆ ಎಂದು ಅವರು ಮಾಹಿತಿ ನೀಡಿದರು. ಬೆಂಗಳೂರು ನಗರದಲ್ಲಿ ಬಿ ಯಿಂದ ಎ ಖಾತಾ ಪರಿವರ್ತನೆ ಆರಂಭವಾಗಿದೆ. ಅವರ ಆಸ್ತಿಗಳನ್ನು ಕಂದಾಯ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ಖಾತಾ ಪರಿವರ್ತನೆ ಮಾಡಲಾಗುವುದು. ಎಲ್ಲಾ ಕಂದಾಯ ಜಾಗದಲ್ಲಿ ಮಾಡಲಾಗಿರುವ ಬಡಾವಣೆ ರಸ್ತೆಗಳನ್ನು ಪಾಲಿಕೆ ರಸ್ತೆಗಳನ್ನಾಗಿ ಮಾಡಿದ್ದೇವೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು. ಕಸ ವಿಲೇವಾರಿಗೆ ಜಮೀನು ಖರೀದಿ ಮಾಡಲು ತೀರ್ಮಾನ : ಇನ್ನು ಕಸ ವಿಲೇವಾರಿಗೆ ನಗರದ 40 ಕಿ.ಮೀ ಒಳಗೆ ಗುಡ್ಡ ಪ್ರದೇಶದ ಅಕ್ಕಪಕ್ಕ 100 ಎಕರೆ ಭೂಮಿ ಸಿಕ್ಕರೆ, ಅದನ್ನು ಒಪ್ಪಿತ ಆಧಾರದ ಮೇಲೆ ಖರೀದಿ ಮಾಡಿ ಸ್ವಾಧೀನಪಡಿಸಿಕೊಳ್ಳಲು ಸಿದ್ಧವಿದ್ದೇವೆ. ಈ ಬಗ್ಗೆಯೂ ನಾವು ತೀರ್ಮಾನ ಮಾಡಿದ್ದೇವೆ. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೂ ಸೂಚನೆ ನೀಡಿದ್ದೇವೆ. ಭೂ ಮಾಲಕರು, ರೈತರು, ವ್ಯಾಪಾರಿಗಳು ಮುಂದೆ ಬಂದು ಜಮೀನು ನೀಡಬಹುದು ಇದಕ್ಕೆ ನಾವು ಪ್ರತ್ಯೇಕ ರಸ್ತೆ ಮಾಡಿಕೊಳ್ಳುತ್ತೇವೆ ಎಂದು ಅವರು ತಿಳಿಸಿದರು. ‘ಬೆಂಗಳೂರಿನ ರಸ್ತೆ ಅಭಿವೃದ್ಧಿಗೆ 5,065 ಕೋಟಿ ವೆಚ್ಚ ಮಾಡಲಾಗಿದ್ದು, ಎಪ್ರಿಲ್ ಅಂತ್ಯದ ವೇಳೆಗೆ ಎಲ್ಲಾ ರಸ್ತೆಗಳ ಬ್ಲಾಕ್ ಟಾಪಿಂಗ್ ಹಾಗೂ ವೈಟ್ ಟಾಪಿಂಗ್ ಕಾಮಗಾರಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ’ -ಡಿ.ಕೆ. ಶಿವಕುಮಾರ್, ಉಪಮುಖ್ಯಮಂತ್ರಿ
ಸಿಂಧನೂರು : ಸಾಲಬಾಧೆ ತಾಳಲಾರದೆ ರೈತನೊಬ್ಬ ಕೆರೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರವಿವಾರ ತಾಲೂಕಿನ ರೌಡಕುಂದಾ ಗ್ರಾಮದಲ್ಲಿ ನಡೆದಿದೆ. ಮೃತರನ್ನು ಹನುಮಂತ ವಿರುಪಾಕ್ಷಪ್ಪ ಡಮಾಣಿ (42) ಎಂದು ಗುರುತಿಸಲಾಗಿದೆ. ಗ್ರಾಮದ ಪಕ್ಕದಲ್ಲಿರುವ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಮೃತರಿಗೆ ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ ಇದ್ದಾರೆ. ಮೃತ ರೈತನಿಗೆ ಸರಕಾರಿ ಸ್ವಾಮ್ಯದ ಬ್ಯಾಂಕುಗಳಲ್ಲಿ ಸುಮಾರು 10 ಲಕ್ಷ ರೂ. ಹಾಗೂ ಖಾಸಗಿಯಾಗಿ 10 ರಿಂದ 12 ಲಕ್ಷ ರೂ. ಗಳ ಸಾಲ ಇತ್ತು ಎಂದು ಕುಟುಂಬದ ಮೂಲಗಳು ತಿಳಿಸಿವೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆತ್ಮಹತ್ಯೆಯ ಯೋಚನೆ ಬಂದಾಗ ಅದನ್ನು ನಿಗ್ರಹಿಸಲು ರಾಜ್ಯ ಸರಕಾರದ ಅರೋಗ್ಯ ಇಲಾಖೆಯ ಹೆಲ್ಪ್ ಲೈನ್ 104 ಸಹಾಯ ಮಾಡುತ್ತದೆ. ಅದರ ಜೊತೆಗೆ Tele-MANAS ನ 14416 ಅನ್ನೂ ಸಂಪರ್ಕಿಸಬಹುದು.
ಹೊಸದಿಲ್ಲಿ,ಫೆ.22: ಇಲ್ಲಿ ಎಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರ ಅರೆಬೆತ್ತಲೆ ಪ್ರತಿಭಟನೆಯ ವಿರುದ್ಧ ರವಿವಾರ ತೀವ್ರ ಟೀಕಾಪ್ರಹಾರ ನಡೆಸಿದ ಪ್ರಧಾನಿ ನರೇಂದ್ರ ಮೋದಿಯವರು, ಕಾಂಗ್ರೆಸ್ ಪಕ್ಷವು ತನ್ನ ‘ಗಂದಿ ಔರ್ ನಂಗೀ ರಾಜನೀತಿ (ಕೊಳಕು ಮತ್ತು ನಾಚಿಕೆಯಿಲ್ಲದ ರಾಜಕೀಯ)’ ಗೆ ಜಾಗತಿಕ ಕಾರ್ಯಕ್ರಮವನ್ನು ವೇದಿಕೆಯಾಗಿಸಿಕೊಂಡಿತ್ತು ಎಂದು ಆರೋಪಿಸಿದರು. ನಮೋ ಭಾರತ ರೈಲಿಗೆ ಚಾಲನೆ ನೀಡಿದ ನಂತರ ಮಾಡಿದ ಭಾಷಣದಲ್ಲಿ ಅತಿ ದೊಡ್ಡ ಪ್ರತಿಪಕ್ಷದ ವಿರುದ್ಧ ತನ್ನ ದಾಳಿಯನ್ನು ತೀವ್ರಗೊಳಿಸಿದ ಮೋದಿ ,‘ನಾನು ಕಾಂಗ್ರೆಸ್ ನಾಯಕರನ್ನು ಕೇಳುತ್ತೇನೆ;ದೇಶಕ್ಕೆ ಈಗಾಗಲೇ ನಿಮ್ಮ ನಿಜರೂಪ ತಿಳಿದಿದೆ, ಅದನ್ನು ಇನ್ನಷ್ಟು ಬೆತ್ತಲೆಗೊಳಿಸುವ ಅಗತ್ಯವೇನಿತ್ತು?’ ಎಂದು ಹೇಳಿದರು. ಅರೆಬೆತ್ತಲೆ ಪ್ರತಿಭಟನೆಯ ಬಳಿಕ ಕಾಂಗ್ರೆಸ್ ಪಕ್ಷವು ಆಡಳಿತಾರೂಢ ಬಿಜೆಪಿಯ ತೀಕ್ಷ್ಣ ಖಂಡನೆಯೊಂದಿಗೆ ತನ್ನ ಕೆಲವು ಮಿತ್ರಪಕ್ಷಗಳು ಮತ್ತು ಇತರ ಪ್ರತಿಪಕ್ಷ ನಾಯಕರಿಂದಲೂ ತೀವ್ರ ಟೀಕೆಗಳಿಗೆ ತುತ್ತಾಗಿದೆ. ಕಾಂಗ್ರೆಸ್ನ ಪ್ರಮುಖ ಮಿತ್ರಪಕ್ಷ ಸಮಾಜವಾದಿ ಪಾರ್ಟಿಯ ಮುಖ್ಯಸ್ಥ ಅಖಿಲೇಶ್ ಯಾದವ್ ಅವರೂ ಪ್ರತಿಭಟನೆಯನ್ನು ಖಂಡಿಸಿದ್ದು, ‘ವಿದೇಶಿ ನಿಯೋಗಗಳು ಮತ್ತು ಜಾಗತಿಕ ಪ್ರತಿನಿಧಿಗಳ ಎದುರು ನಮ್ಮ ದೇಶವನ್ನು ಅವಮಾನಿಸುವ ಕೆಲಸವನ್ನು ಅವರು ಮಾಡಬಾರದಿತ್ತು’ ಎಂದು ಹೇಳಿದ್ದಾರೆ. ಈ ನಡುವೆ ಪ್ರತಿಭಟನೆಗೆ ಸಂಬಂಧಿಸಿದಂತೆ ಬಂಧಿತ ಯುವ ಕಾಂಗ್ರೆಸ್ ಕಾರ್ಯಕರ್ತರಾದ ಕೃಷ್ಣ ಹರಿ, ಕುಂದನ ಯಾದವ್, ಅಜಯ್ ಕುಮಾರ್ ಮತ್ತು ನರಸಿಂಗ್ ಅವರ ಜಾಮೀನು ಅರ್ಜಿಗಳನ್ನು ತಿರಸ್ಕರಿಸಿರುವ ಪಟಿಯಾಳಾ ಹೌಸ್ ನ್ಯಾಯಾಲಯವು ಅವರಿಗೆ ಐದು ದಿನಗಳ ಪೋಲಿಸ್ ಕಸ್ಟಡಿಯನ್ನು ವಿಧಿಸಿದೆ.
ಹೊಸದಿಲ್ಲಿ,ಫೆ.22: ಪ್ರಸ್ತಾವಿತ ಮಧ್ಯಂತರ ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ಕಾನೂನು ಅಂಶಗಳನ್ನು ಅಂತಿಮಗೊಳಿಸಲು ಈ ವಾರ ವಾಷಿಂಗ್ಟನ್ನಲ್ಲಿ ನಡೆಯಲಿದ್ದ ತಮ್ಮ ಮುಖ್ಯಸಮಾಲೋಚಕರ ನಡುವಿನ ಪ್ರಮುಖ ಸಭೆಯನ್ನು ಭಾರತ ಮತ್ತು ಅಮೆರಿಕ ಮರುನಿಗದಿಗೊಳಿಸಲಿವೆ ಎಂದು ಸರಕಾರದ ಮೂಲಗಳನ್ನು ಉಲ್ಲೇಖಿಸಿ ಸುದ್ದಿಸಂಸ್ಥೆಯು ರವಿವಾರ ವರದಿ ಮಾಡಿದೆ. ಸಭೆಯನ್ನು ಮುಂದೂಡಲು ಉಭಯ ದೇಶಗಳು ಒಪ್ಪಿಕೊಂಡಿದ್ದು,ಇತ್ತೀಚಿನ ಬೆಳವಣಿಗೆಗಳ ಮೌಲ್ಯಮಾಪನದ ಬಳಿಕ ಪರಸ್ಪರರಿಗೆ ಅನುಕೂಲಕರ ದಿನಾಂಕಗಳ ಬಗ್ಗೆ ನಿರ್ಧರಿಸಲಿವೆ. ಮುಖ್ಯ ಸಮಾಲೋಚಕ ದರ್ಪಣ ಜೈನ್ ನೇತೃತ್ವದ ಭಾರತೀಯ ನಿಯೋಗವು ಅಮೆರಿಕದ ವ್ಯಾಪಾರ ಪ್ರತಿನಿಧಿ ಜೇಮೀಸನ್ ಗ್ರೀರ್ ಜೊತೆಗೆ ಚರ್ಚೆಗಳಿಗಾಗಿ ವಾಷಿಂಗ್ಟನ್ಗೆ ಪ್ರಯಾಣಿಸಲು ಸಜ್ಜಾಗಿತ್ತು. ಭಾರತದೊಂದಿಗೆ ವ್ಯಾಪಾರ ಒಪ್ಪಂದವು ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ. ಮಧ್ಯಂತರ ಒಡಂಬಡಿಕೆಯಡಿ ನಿರ್ಧರಿಸಲಾದ ಶೇ.18 ಸುಂಕಗಳನ್ನು ಪಾವತಿಸುವುದನ್ನು ಭಾರತವು ಮುಂದುವರಿಸಲಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಶುಕ್ರವಾರ ಹೇಳಿದ್ದರು. ಪ್ರಸ್ತಾವಿತ ಒಪ್ಪಂದದಡಿ ಅಮೆರಿಕವು ತನ್ನ ಪ್ರತಿಸುಂಕವನ್ನು ಶೇ.18ಕ್ಕೆ ಇಳಿಸುವುದಕ್ಕೆ ಪ್ರತಿಯಾಗಿ ಹೆಚ್ಚಿನ ಆಮದುಗಳ ಮೇಲಿನ ಸುಂಕಗಳನ್ನು ಕಡಿಮೆ ಮಾಡಲು ಭಾರತವು ಒಪ್ಪಿಕೊಂಡಿತ್ತು. ಆದಾಗ್ಯೂ ಭಾರತದಿಂದ ರಫ್ತಾಗುವ ಕಬ್ಬಿಣ ಮತ್ತು ಉಕ್ಕು,ತಾಮ್ರ ಮತ್ತು ಅಲ್ಯುಮಿನಿಯಂ, ವಾಹನಗಳು ಮತ್ತು ವಾಹನಗಳ ಬಿಡಿಭಾಗಗಳ ಮೇಲಿನ ಶೇ.50 ವಲಯ-ನಿರ್ದಿಷ್ಟ ಸುಂಕಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಸುಂಕಗಳಿಗೆ ಸಂಬಂಧಿಸಿದಂತೆ ಅಮೆರಿಕದ ಸುಪ್ರೀಂ ಕೋರ್ಟ್ನ ಇತ್ತೀಚಿನ ತೀರ್ಪಿಗೆ ಟ್ರಂಪ್ ಆಡಳಿತದ ಪ್ರತಿಕ್ರಿಯೆಯನ್ನು ಭಾರತೀಯ ಅಧಿಕಾರಿಗಳು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಮಧ್ಯಂತರ ವ್ಯಾಪಾರ ಒಪ್ಪಂದಕ್ಕೆ ಇನ್ನೂ ಸಹಿ ಹಾಕಲಾಗಿಲ್ಲ,ಹೀಗಾಗಿ ಬದಲಾವಣೆಗೆ ಅವಕಾಶವಿರಬಹುದು ಎಂದು ಕೆಲವು ಅಧಿಕಾರಿಗಳು ಸುಳಿವು ನೀಡಿದ್ದಾರೆ. ‘ಭಾರತ ಇನ್ನೂ ಒಪ್ಪಂದಕ್ಕೆ ಸಹಿ ಹಾಕಿಲ್ಲ,ಹೀಗಾಗಿ ಚೌಕಾಶಿಗೆ ಕೊಂಚ ಅವಕಾಶವಿರಬಹುದು,ಆದರೆ ಸುಪ್ರೀಂ ಕೋರ್ಟ್ ತೀರ್ಪಿಗೆ ಅಮೆರಿಕ ಸರಕಾರವು ಹೇಗೆ ಪ್ರತಿಕ್ರಿಯಿಸಲಿದೆ ಎನ್ನುವುದನ್ನು ನಾವು ಕಾದು ನೋಡುತ್ತೇವೆ. ತೀರ್ಪಿನ ಸಂಪೂರ್ಣ ಪರಿಣಾಮದ ಬಗ್ಗೆ ಈಗಲೇ ನಿರ್ಧಾರಕ್ಕೆ ಬರುವುದು ಅವಸರವಾಗುತ್ತದೆ’ ಎಂದು ಅಧಿಕಾರಿಯೋರ್ವರು ಹೇಳಿದರು. ಅಮರಿಕದ ಸುಪೀಂ ಕೋರ್ಟ್ ತೀರ್ಪಿನ ಬಳಿಕ ಟ್ರಂಪ್ ಶುಕ್ರವಾರ ಶೇ.10ರಷ್ಟು ಜಾಗತಿಕ ಸುಂಕವನ್ನು ವಿಧಿಸಿದ್ದರು,ಆದರೆ ಶನಿವಾರ ಇದನ್ನು ಶೇ.15ಕ್ಕೆ ಹೆಚ್ಚಿಸಿದ್ದಾರೆ. ಜಾಗತಿಕ ಸುಂಕಗಳು ಕಾನೂನುಬಾಹಿರವಾಗಿವೆ ಮತ್ತು ಸುಂಕಗಳನ್ನು ವಿಧಿಸಲು ಟ್ರಂಪ್ ಅವರಿಗೆ ಯಾವುದೇ ಅಧಿಕಾರವಿಲ್ಲ ಎಂದು ಸುಪ್ರೀಂ ಕೋರ್ಟ್ ತನ್ನ 6-3 ಬಹುಮತದ ತೀರ್ಪಿನಲ್ಲಿ ಎತ್ತಿ ಹಿಡಿದಿದೆ.
ಚಿಕ್ಕಮಗಳೂರು : ಕಾಫಿನಾಡಿನಲ್ಲಿ ಕಾಡಾನೆಗಳ ದಾಳಿ ಮುಂದುವರಿದಿದ್ದು, ರವಿವಾರ ಬೆಳಗ್ಗೆ ಹಾವೇರಿ ಜಿಲ್ಲೆ ಹಾನಗಲ್ನ ಕೂಡ್ಲಿಗಿ ನಿವಾಸಿ ಬೋರಮ್ಮ(33) ಎಂಬ ಕೂಲಿ ಕಾರ್ಮಿಕ ಮಹಿಳೆಯ ಮೇಲೆ ಕಾಡಾನೆ ದಾಳಿ ನಡೆಸಿದ ಪರಿಣಾಮ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಳೆದ ನಾಲ್ಕು ದಿನಗಳ ಅಂತರದಲ್ಲಿ ಇಬ್ಬರನ್ನು ಕಾಡಾನೆ ಬಲಿ ಪಡೆದುಕೊಂಡಿದ್ದು, ಫೆ.17ರಂದು ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ತಿರುವಳ್ಳಿ ಗ್ರಾಮದ ಯಲ್ಲಪ್ಪ (45) ಎಂಬ ಕೂಲಿ ಕಾರ್ಮಿಕನನ್ನು ಕಾಡಾನೆ ತುಳಿದು ಕೊಂದು ಹಾಕಿತ್ತು. ರವಿವಾರ ಚಿಕ್ಕಮಗಳೂರು ತಾಲೂಕಿನ ಹುಣಸೇಹಳ್ಳಿ ಸಮೀಪದ ಪುರ ಗ್ರಾಮದಲ್ಲಿ ನಾಗೇಶ್ಗೌಡ ಎಂಬವರ ಕಾಫಿ ತೋಟದಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಬೋರಮ್ಮ ಎಂಬವರನ್ನು ಕಾಡಾನೆ ತುಳಿದು ಸಾಯಿಸಿದೆ. ಗುಪ್ತವಾಗಿ ಮೃತದೇಹ ಸಾಗಿಸಲು ಮುಂದಾದ ಅಧಿಕಾರಿಗಳನ್ನು ಅಡ್ಡಗಟ್ಟಿದ ಜನರು: ಇತ್ತೀಚೆಗೆ ಯಲ್ಲಪ್ಪ ಅವರನ್ನು ಕಾಡಾನೆ ಸಾಯಿಸಿದ ಸ್ಥಳದಲ್ಲಿಯೇ ಬೋರಮ್ಮರನ್ನು ತುಳಿದು ಸಾಯಿಸಿದೆ. ಯಾರಿಗೂ ತಿಳಿಯದಂತೆ ಬೋರಮ್ಮ ಅವರ ಮೃತದೇಹವನ್ನು ವಾಹನದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಸಾಗಿಸುತ್ತಿದ್ದ ವೇಳೆ ಇದನ್ನು ಅರಿತ ಸ್ಥಳೀಯರು ವಾಹನವನ್ನು ಕಡಬಗೆರೆ ಸಮೀಪ ಅಡ್ಡಗಟ್ಟಿ ಮೃತದೇಹವನ್ನು ವಾಹನದಿಂದ ಇಳಿಸಿದ ಘಟನೆ ನಡೆಯಿತು. ಸ್ಥಳೀಯರಿಂದ ಆಕ್ರೋಶ : ಕಾಡಾನೆ ದಾಳಿಯಿಂದ ಮಲೆನಾಡು ಭಾಗದಲ್ಲಿ ಪದೇ ಪದೇ ಸಾವುಗಳು ಸಂಭವಿಸಿದ್ದು, ಇದರಿಂದ ಆಕ್ರೋಶ ಭರಿತರಾದ ಸ್ಥಳೀಯರು ಬೋರಮ್ಮ ಅವರ ಮೃತದೇಹವನ್ನು ಚಿಕ್ಕಮಗಳೂರು ಶೃಂಗೇರಿ ರಾಜ್ಯ ಹೆದ್ದಾರಿಯ ಕಡಬಗೆರೆ ಎಂಬಲ್ಲಿ ಇಟ್ಟು ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಅರಣ್ಯ ಸಚಿವ ಈಶ್ವರ್ ಬಿ.ಖಂಡ್ರೆ, ಜಿಲ್ಲಾಧಿಕಾರಿ ಸೇರಿದಂತೆ ಉನ್ನತ ಮಟ್ಟದ ಅಧಿಕಾರಿಗಳು ಬರಬೇಕೆಂದು ಪಟ್ಟು ಹಿಡಿದರು. ಸ್ಥಳೀಯ ಶಾಸಕ ಟಿ.ಡಿ.ರಾಜೇಗೌಡ ಅವರು ಪ್ರತಿಭಟನಾ ಸ್ಥಳಕ್ಕೆ ಆಗಮಿಸುತ್ತಿದ್ದಂತೆ ಅವರಿಗೆ ಘೆರಾವ್ ಹಾಕಿದರು. ರಸ್ತೆ ತಡೆ ನಡೆಸಿದ್ದರಿಂದ ಎರಡು ಗಂಟೆಗೂ ಹೆಚ್ಚು ಕಾಲ ವಾಹನ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು. ಕಿಲೋ ಮೀಟರ್ಗಟ್ಟಲೇ ವಾಹನಗಳ ದಟ್ಟಣೆ ಏರ್ಪಟ್ಟಿತ್ತು. ಸರಕಾರಿ ಮತ್ತು ಖಾಸಗಿ ಬಸ್ಗಳು ಸಕಾಲದಲ್ಲಿ ಸಂಚರಿಸಲಾಗದೇ ಪ್ರಯಾಣಿಕರು ಭಾರೀ ಸಮಸ್ಯೆ ಎದುರಿಸಿದರು. ಸ್ಥಳಕ್ಕೆ ಅಧಿಕಾರಿಗಳು ಆಗಮಿಸಿ ಪ್ರತಿಭಟನಾಕಾರರ ಮನವೊಲಿಸಲು ಮುಂದಾದರೂ ಪ್ರಯೋಜನವಾಗಲಿಲ್ಲ. ಅರಣ್ಯ ಸಚಿವರು ಸ್ಥಳಕ್ಕೆ ಬರಬೇಕು, ಕಾಡಾನೆಗಳ ಹಾವಳಿ ನಿಯಂತ್ರಣಕ್ಕೆ ರೈಲ್ವೆ ಕಂಬಿಗಳ ಬ್ಯಾರಿಕೇಡ್ ನಿರ್ಮಿಸಬೇಕೆಂದು ಪಟ್ಟು ಹಿಡಿದ ಪ್ರತಿಭಟನೆಯನ್ನು ಮುಂದುವರೆಸಿದರು. ಇದರಿಂದ ಕೆಲಹೊತ್ತು ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಮೃತದೇಹ ಹೊತ್ತ ಆ್ಯಂಬುಲೆನ್ಸ್ ತಡೆದ ಪ್ರತಿಭಟನಕಾರರು; ಪೊಲೀಸರಿಂದ ಲಘು ಲಾಠಿ ಚಾರ್ಜ್, ಸ್ಥಳದಲ್ಲಿ ಉದ್ವಿಘ್ನ ಪರಿಸ್ಥಿತಿ ಒಂದು ವಾರದ ಅವಧಿಯಲ್ಲಿ ಕಾಡಾನೆ ದಾಳಿಗೆ ಸಿಲುಕಿ ಇಬ್ಬರು ಕೂಲಿಕಾರ್ಮಿಕರು ಮೃತಪಟ್ಟ ಹಿನ್ನಲೆ ಇಲ್ಲಿನ ಸ್ಥಳೀಯರು ಮೃತದೇಹವಿಟ್ಟು ಬಾರೀ ಪ್ರತಿಭಟನೆ ನಡೆಸಿದರು. ರಸ್ತೆ ತಡೆಯನ್ನು ನಡೆಸಿದರು. ಸ್ಥಳಕ್ಕೆ ಅಧಿಕಾರಿಗಳು ಬರುವಂತೆ ಪಟ್ಟುಹಿಡಿದರು. ಸ್ಥಳಕ್ಕೆ ಶಾಸಕ ಟಿ.ಡಿ.ರಾಜೇಗೌಡ, ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ಅಧಿಕಾರಿ ಸೇರಿದಂತೆ ಅಧಿಕಾರಿಗಳು ಆಗಮಿಸಿದ್ದು, ಸಂತ್ರಸ್ತ ಕುಟುಂಬಕ್ಕೆ ಪರಿಹಾರದ ಚೆಕ್ ಹಸ್ತಾಂತರಿಸಿದರು. ನಂತರ ಮೃತದೇಹವನ್ನು ಆ್ಯಂಬುಲೆನ್ಸ್ ವಾಹನದಲ್ಲಿ ಇರಿಸಿ ಮರಣೋತ್ತರ ಪರೀಕ್ಷೆಗೆ ಕೊಂಡೊಯ್ಯವ ವೇಳೆ ನೆರೆದಿದ್ದ ಪ್ರತಿಭಟನಕಾರರು ಆ್ಯಂಬುಲೆನ್ಸ್ ತಡೆದು ಮೃತದೇಹವನ್ನು ಕೆಳಗಿಳಿಸಿದರು. ಈ ವೇಳೆ ಪೊಲೀಸರು ಮತ್ತು ಪ್ರತಿಭಟನಕಾರರ ನಡುವೆ ಮಾತಿನ ಚಕಮಕಿ ಹಾಗೂ ವಾಗ್ವಾದಗಳು ನಡೆದು ಪರಿಸ್ಥಿತಿ ವಿಕೋಪಕ್ಕೆ ತೆರಳುತ್ತಿದ್ದಂತೆ ಸ್ಥಳದಲ್ಲಿದ್ದ ಪೊಲೀಸರು ಪ್ರತಿಭಟನಕಾರರ ಮೇಲೆ ಲಘು ಲಾಠಿ ಪ್ರಹಾರ ನಡೆಸಿದರು. ಸ್ಥಳದಲ್ಲಿದ್ದ ಪ್ರತಿಭಟನಕಾರರು ಚದುರಿದದರು. ಪ್ರತಿಭಟನೆ ನೇತೃತ್ವ ವಹಿಸಿದ್ದ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು. ಈ ವೇಳೆ ಆಕ್ರೋಶ ಭರಿತರಾದ ಪ್ರತಿಭಟನಕಾರರು ಪೊಲೀಸ್ ವಾಹನದ ಸುತ್ತಲು ಮುತ್ತಿಗೆ ಹಾಕಿ ವಾಹನ ತೆರಳದಂತೆ ಅಡ್ಡಹಾಕಿದರು. ಟಯರ್ಗೆ ಬೆಂಕಿ ಹಚ್ಚಲು ಯತ್ನ: ಪ್ರತಿಭಟನೆ ವೇಳೆ ಪೊಲೀಸರು ಮತ್ತು ಪ್ರತಿಭಟನಕಾರರ ನಡೆವೆ ಮಾತಿನ ಚಕಮಕಿ ನಡೆಯುತ್ತಿದ್ದ ವೇಳೆ ವ್ಯಕ್ತಿಯೊಬ್ಬ ಟೈಯರ್ ಗೆ ಬೆಂಕಿಹಚ್ಚಲು ಯತ್ನಿಸಿದ ಘಟನೆ ನಡೆದಿದ್ದು, ಆತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು. ವ್ಯಕ್ತಿಯನ್ನು ಬಿಡುಗಡೆಗೊಳಿಸುವಂತೆ ಪ್ರತಿಭಟನಕಾರರು ಆಗ್ರಹಿಸಿದರು.
Karnataka CM Change Row: ಬಜೆಟ್ ಬಳಿಕ ಏನಾಗುತ್ತೋ ಗೊತ್ತಿಲ್ಲ ಎಂದ ಸಿದ್ದರಾಮಯ್ಯ ಆಪ್ತ ಸತೀಶ್ ಜಾರಕಿಹೊಳಿ
ಕರ್ನಾಟಕ ಸಿಎಂ ಬದಲಾವಣೆ ಚರ್ಚೆ ಮತ್ತೆ ಜೋರಾಗಿದ್ದು, ಸದ್ಯ ಸಿದ್ದರಾಮಯ್ಯ ಆಪ್ತ ಸಚಿವ ಸತೀಶ್ ಜಾರಕಿಹೊಳಿ ಮಹತ್ವದ ಹೇಳಿಕೆ ಕೊಟ್ಟಿದ್ದಾರೆ. ಬಜೆಟ್ ಬಳಿಕ ಏನಾಗುತ್ತದೆಯೋ ಗೊತ್ತಿಲ್ಲ ಎಂದು ಹೇಳಿದ್ದಾರೆ. ಇನ್ನು ಮುಂದಿನ ವಾರ ಹೈಕಮಾಂಡ್ ಜತೆ ಮಾತುಕತೆಗೆ ತೆರಳುತ್ತಿರುವುದಾಗಿ ತಿಳಿಸಿದ್ದಾರೆ. ಇತ್ತ ಸಚಿವ ಮಹಾದೇವಪ್ಪ ಅವರು ದಲಿತ ಸಿಎಂ ಬಗ್ಗೆ ಮಾತನಾಡಿದ್ದಾರೆ.
ರಾಯಚೂರು ಮಹಾನಗರ ಪಾಲಿಕೆ ಆಯುಕ್ತರಿಂದ ನಗರ ಸಂಚಾರ : ಕಾಮಗಾರಿಗಳ ಪರಿಶೀಲನೆ
ರಾಯಚೂರು : ರಾಯಚೂರು ಮಹಾನಗರ ಪಾಲಿಕೆ ಆಯುಕ್ತರಾದ ಜುಬಿನ್ ಮೊಹಾಪಾತ್ರ ಅವರು ಫೆ.20ರಂದು ನಗರದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಪ್ರಗತಿಯಲ್ಲಿರುವ ಹಾಗೂ ಪ್ರಸ್ತಾವಿತ ಅಭಿವೃದ್ಧಿ ಕಾಮಗಾರಿಗಳ ಸ್ಥಳ ಪರಿಶೀಲನೆ ನಡೆಸಿದರು. ಈ ವೇಳೆ ಚಾಲ್ತಿಯಲ್ಲಿರುವ ಯೋಜನೆಗಳನ್ನು ವೇಗಗೊಳಿಸುವುದು ಹಾಗೂ ಭವಿಷ್ಯದ ಅಭಿವೃದ್ಧಿ ಯೋಜನೆಗಳನ್ನು ರೂಪಿಸುವ ಕುರಿತು ಅಧಿಕಾರಿಗಳೊಂದಿಗೆ ಸಮಗ್ರ ಚರ್ಚೆ ನಡೆಸಿ ಅಗತ್ಯ ಮಾರ್ಗದರ್ಶನ ನೀಡಿದರು. ಮೊದಲು ಮಾವಿನಕೆರೆ ಪ್ರದೇಶಕ್ಕೆ ಭೇಟಿ ನೀಡಿದ ಆಯುಕ್ತರು, ಅಲ್ಲಿನ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿದರು. ಸಾರ್ವಜನಿಕ ಸ್ಥಳಗಳಲ್ಲಿನ ಅತಿಕ್ರಮಣಗಳನ್ನು ತಕ್ಷಣ ತೆರವುಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಜೊತೆಗೆ ಮಾವಿನಕೆರೆಯ ಉದ್ಯಾನವನ ಅಭಿವೃದ್ಧಿ ಕಾಮಗಾರಿಯನ್ನು ನಿಗದಿತ ಗುಣಮಟ್ಟದೊಂದಿಗೆ ಶೀಘ್ರ ಪೂರ್ಣಗೊಳಿಸುವಂತೆ ನಿರ್ದೇಶಿಸಿದರು. ಬಳಿಕ ಇಂದಿರಾ ನಗರದಲ್ಲಿ ನೂತನವಾಗಿ ನಿರ್ಮಿಸಲಾದ ಹೈಟೆಕ್ ಸಾರ್ವಜನಿಕ ಶೌಚಾಲಯಕ್ಕೆ ಭೇಟಿ ನೀಡಿ, ಈ ಸೌಲಭ್ಯವನ್ನು ತ್ವರಿತವಾಗಿ ಪ್ರಾರಂಭಿಸಿ ಸ್ಥಳೀಯರಿಗೆ ಲಭ್ಯವಾಗುವಂತೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ನಂತರ ಸ್ವಚ್ಛತಾ ಕಾರ್ಮಿಕರಿಗಾಗಿ ಮೀಸಲಿಟ್ಟಿರುವ ಸ್ಮಶಾನ ಸ್ಥಳದ ಅಭಿವೃದ್ಧಿ ಕಾಮಗಾರಿಯನ್ನು ಪರಿಶೀಲಿಸಿ, ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಕುರಿತು ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಅಂತಿಮವಾಗಿ ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆ ಅಡಿಯಲ್ಲಿ ಪ್ರಸ್ತಾಪಿಸಲಾದ ಅಭಿವೃದ್ಧಿ ಕಾಮಗಾರಿಗಳ ಭಾಗವಾಗಿ ಹೊಸ ರಸ್ತೆ ನಿರ್ಮಾಣ ಮತ್ತು ಅಭಿವೃದ್ಧಿಗಾಗಿ ಸ್ಥಳ ಪರಿಶೀಲನೆ ನಡೆಸಿದರು. ಈ ಯೋಜನೆಯಡಿ ಕೈಗೊಳ್ಳಬೇಕಿರುವ ಕಾಮಗಾರಿಗಳಿಗೆ ಸಮಗ್ರ ಯೋಜನೆ ರೂಪಿಸಿ ಶೀಘ್ರ ಕಾರ್ಯಾರಂಭ ಮಾಡುವಂತೆ ಮಾರ್ಗದರ್ಶನ ನೀಡಿದರು. ನಗರದ ಸಮಗ್ರ ಅಭಿವೃದ್ಧಿ, ಸೌಂದರ್ಯೀಕರಣ ಹಾಗೂ ಜನರಿಗೆ ಮೂಲಭೂತ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಮಹಾನಗರ ಪಾಲಿಕೆ ಬದ್ಧವಾಗಿದೆ ಎಂದು ಆಯುಕ್ತರು ಹೇಳಿದರು. ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಉಪ ಆಯುಕ್ತ ಭರತ್ ಕುಮಾರ್, ಕಂದಾಯ ವಿಭಾಗದ ಉಪ ಆಯುಕ್ತ ಬಿ. ಶರಣಪ್ಪ, ಕಾರ್ಯನಿರ್ವಾಹಕ ಹಾಗೂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಸೇರಿದಂತೆ ವಿವಿಧ ವಿಭಾಗದ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.
Ind Vs Sa Highlights- ಉಪನಾಯಕ ಅಕ್ಷರ್ ಪಟೇಲ್ ಬದಲು ವಾಶಿಂಗ್ಟನ್ ಸುಂದರ್! ಹರಿಣಗಳೆದುರು ಯಾಕೀ ನಿರ್ಧಾರ?
ಅಹ್ಮದಾಬಾದ್: ನಾಯಕ ಸೂರ್ಯಕುಮಾರ್ ಯಾದವ್ ದಕ್ಷಿಣ ಆಫ್ರಿಕಾ ವಿರುದ್ಧ ಸೂಪರ್ 8 ಪಂದ್ಯಕ್ಕೆ ತಂಡವನ್ನು ಪ್ರಕಟಿಸಿದಾಗ ಎಲ್ಲರಿಗೂ ಅಚ್ಚರಿ ಕಾದಿತ್ತು. ಯಾಕೆಂದರೆ ತಂಡದಲ್ಲಿ ಉಪನಾಯಕನಾಗಿರುವ ಸ್ಪಿನ್ ಬೌಲಿಂಗ್ ಆಲ್ರೌಂಡರ್ ಅಕ್ಷರ್ ಪಟೇಲ್ ಅವರ ಬದಲಿಗೆ ಮತ್ತೊಬ್ಬ ಸ್ಪಿನ್ ಬೌಲಿಂಗ್ ಆಲ್ರೌಂಡರ್ ವಾಶಿಂಗ್ಟನ್ ಸುಂದರ್ ಅವರು ಪ್ಲೇಯಿಂಗ್ ಇಲೆವೆನ್ ನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದರು. ಭಾರತ ತಂಡ ತೆಗೆದುಕೊಂಡಿರುವ ಈ ನಿರ್ಧಾರ ಅಚ್ಚರಿಗೆ ಕಾರಣವಾಗಿದೆ. ಅಹ್ಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ದಲ್ಲಿ ದಕ್ಷಿಣ ಆಫ್ರಿಕಾ ನಾಯಕ ಐಡನ್ ಮಾರ್ಕಂ ಅವರು ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ. ಭಾರತ ತಂಡ ತನ್ನ ಪ್ಲೇಯಿಂಗ್ ಇಲೆವೆನ್ ನಲ್ಲಿ ಒಂದು ಮಹತ್ವದ ಬದಲಾವಣೆ ಮಾಡಿಕೊಂಡಿದೆ. ಎಲ್ಲರೂ ಅಭಿಷೇಕ್ ಶರ್ಮಾ ಅಥವಾ ತಿಲಕ್ ವರ್ಮಾ ಅವರನ್ನು ಹೊರಗಿಟ್ಟು ಸಂಜು ಸ್ಯಾಮ್ಸನ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಬಹುದು ಎಂದು ಎಣಿಸಿದ್ದರು. ಆದರೆ ತಂಡದ ಮ್ಯಾನೇಜ್ ಮೆಂಟ್ ಮಾತ್ರ ಅಹ್ಮದಾಬಾದ್ ಪಂದ್ಯಕ್ಕೆ ಗುಜರಾತ್ ನವರೇ ಆದ ಅಕ್ಷರ್ ಪಟೇಲ್ ಅವರನ್ನು ಹೊರಗಿಟ್ಟು ಅಭಿಷೇಕ್ ಶರ್ಮಾ ಅವರನ್ನು ಸೇರಿಸಿಕೊಂಡಿದೆ. ()ಈ ಬಗ್ಗೆ ಟಾಸ್ ಬಳಿಕ ಮಾತನಾಡಿದ ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಅವರು, ಅಕ್ಷರ್ ಪಟೇಲ್ ಅವರನ್ನು ಹೊರಗಿಡುವುದು ಬಹಳ ಕಠಿಣ ನಿರ್ಧಾರ. ಇದು ಕೇವಲ ರಣತಂತ್ರದ ನಿರ್ಧಾರ| ಇದೊಂದು ಬದಲಾವಣೆ ಬಿಟ್ಟರೆ ಬೇರಾವುದೇ ಬದಲಾವಣೆಗಳಿಲ್ಲ ಎಂದು ಸ್ಪಷ್ಟಪಡಿಸಿದರು. ಯಾಕೆ ವಾಶಿಂಗ್ಟನ್ ಸುಂದರ್? ಅಕ್ಷರ್ ಪಟೇಲ್ ಮತ್ತು ವಾಶಿಂಗ್ಟನ್ ಸುಂದರ್ ಅವರಿಬ್ಬರಲ್ಲಿ ವಾಶಿಂಗ್ಟನ್ ಬೌಲಿಂಗ್ ನ ವೈವಿಧ್ಯತೆ ಹರಿಣಗಳಿಗೆ ಹೆಚ್ಚು ತಲೆನೋವಾಗಬಲ್ಲುದು. ದಕ್ಷಿಣ ಆಫ್ರಿಕಾ ಕ್ವಿಂಟನ್ ಡಿ ಕಾಕ್, ರಿಯಾನ್ ರಿಕಲ್ಟನ್, ಡೇವಿಡ್ ಮಿಲ್ಲರ್ ಮತ್ತು ಮಾರ್ಕೊ ಯಾನ್ಸೆಸ್ ಹೀಗೆ ನಾಲ್ಕು ಎಡಗೈ ಬ್ಯಾಟ್ಸ್ಮನ್ಗಳನ್ನು ಹೊಂದಿದೆ. ಆದ್ದರಿಂದ, ಅವರನ್ನು ಆಫ್ ಸ್ಪಿನ್ ದಾಳಿಗಿಳಿಸಿದರೆ ಅನುಕೂಲ. ಅವರು ಚೆಂಡನ್ನು ಹೆಚ್ಚು ತಿರುಗಿಸಬಲ್ಲವರಾಗಿದ್ದರಿಂದ ಯಾವ ಹಂತದಲ್ಲಿ ಬೇಕಾದರೂ ಬೌಲಿಂಗ್ ಗೆ ಇಳಿಸಿ ಹರಿಣಗಳನ್ನು ಕಟ್ಟಿ ಹಾಕಬಹುದು ಎಂಬುದು ಟೀಂ ಇಂಡಿಯಾದ ಲೆಕ್ಕಾಚಾರವಾಗಿದೆ. ಭಾರತ ಪ್ಲೇಯಿಂಗ್ ಇಲೆವೆನ್ ಸೂರ್ಯಕುಮಾರ್ ಯಾದವ್ (ನಾಯಕ), ಅಭಿಷೇಕ್ ಶರ್ಮಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ರಿಂಕು ಸಿಂಗ್, ಶಿವಂ ದುಬೆ, ವಾಷಿಂಗ್ಟನ್ ಸುಂದರ್, ಅರ್ಷದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ, ವರುಣ್ ಚಕ್ರವರ್ತಿ. ದಕ್ಷಿಣ ಆಫ್ರಿಕಾ ಪ್ಲೇಯಿಂಗ್ ಇಲೆವೆನ್ ಏಡೆನ್ ಮಾರ್ಕ್ರಾಮ್ (ನಾಯಕ), ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ರಿಯಾನ್ ರಿಕೆಲ್ಟನ್, ಡೆವಾಲ್ಡ್ ಬ್ರೆವಿಸ್, ಟ್ರಿಸ್ಟಾನ್ ಸ್ಟಬ್ಸ್, ಡೇವಿಡ್ ಮಿಲ್ಲರ್, ಮಾರ್ಕೊ ಜಾನ್ಸೆನ್, ಕಾರ್ಬಿನ್ ಬಾಷ್, ಕೇಶವ್ ಮಹಾರಾಜ್, ಕಗಿಸೊ ರಬಾಡ, ಲುಂಗಿ ಎನ್ಗಿಡಿ.
ಮಂಗಳೂರು: ಲ್ಯಾಂಡ್ ಟ್ರೇಡ್ಸ್ ಕಮ್ಯುನಿಟಿ ಕಪ್ - ಸೀಸನ್ 4 ಕ್ರೀಡಾಕೂಟ
ಮಂಗಳೂರು: ಲ್ಯಾಂಡ್ ಟ್ರೇಡ್ಸ್ ಕಮ್ಯುನಿಟಿ ಕಪ್ - ಸೀಸನ್ 4 ಪಾದುವಾ ಹೈಸ್ಕೂಲ್ ಮೈದಾನದಲ್ಲಿ ನಡೆಯಿತು. ಉತ್ಸಾಹಭರಿತ ಜುಂಬಾ ಪ್ರದರ್ಶನದೊಂದಿಗೆ ಕಾರ್ಯಕ್ರಮವು ಪ್ರಾರಂಭಗೊಂಡಿತು. ಪುರುಷರ ಕ್ರಿಕೆಟ್ ಚಾಂಪಿಯನ್ಶಿಪ್ನಲ್ಲಿ ಒಟ್ಟು 6 ತಂಡಗಳು ಸೆಣಸಾಡಿದರೆ, ಮಹಿಳಾ ಥ್ರೋಬಾಲ್ ಚಾಂಪಿಯನ್ಶಿಪ್ನಲ್ಲಿ 3 ತಂಡಗಳು ಸ್ಪರ್ಧಿಸಿದ್ದವು. ಲ್ಯಾಂಡ್ ಟ್ರೇಡ್ಸ್ ಬಿಲ್ಡರ್ಸ್ ಆ್ಯಂಡ್ ಡೆವಲಪರ್ಸ್ ನ ಪರಿಕಲ್ಪನೆಯಿಂದ ಮೂಡಿ ಬಂದ ಮತ್ತು ಏರ್ಪಡಿಸಿದ್ದ ಕಮ್ಯುನಿಟಿ ಕಪ್ ನಲ್ಲಿ ಮಕ್ಕಳು ಸೇರಿದಂತೆ ಎಲ್ಲಾ ವಯೋಮಾನದ ನಿವಾಸಿಗಳು ಭಾಗವಹಿಸಿದ್ದರು. ಸಾಲಿಟೇರ್, ಮೌರಿಷ್ಕಾ ಪ್ಯಾಲೇಸ್, ಸಾಯಿ ಗ್ರ್ಯಾಂಡಿಯರ್, ಹ್ಯಾಬಿಟ್ಯಾಟ್ 154, ನಕ್ಷತ್ರ ಮತ್ತಿತರ ಅಪಾರ್ಟ್ ಮೆಂಟ್ ಗಳ ನಿವಾಸಿಗಳು ಮತ್ತು ಲ್ಯಾಂಡ್ ಟ್ರೇಡ್ಸ್ ಅನ್ನು ಪ್ರತಿನಿಧಿಸುವ ತಂಡಗಳು ಇದರಲ್ಲಿ ಭಾಗವಹಿಸಿದ್ದವು. ವಿವಿಧ ಅಪಾರ್ಟ್ಮೆಂಟ್ ಮಾಲಕರ ಸಂಘಗಳ ಪದಾಧಿಕಾರಿಗಳು ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಟ್ರೋಫಿಗಳನ್ನು ಅನಾವರಣಗೊಳಿಸಿದರು. ಉದ್ಘಾಟನಾ ಸಮಾರಂಭದ ಅಂಗವಾಗಿ ಏಕತೆ ಮತ್ತು ಆಚರಣೆಯನ್ನು ಸಂಕೇತಿಸುವ ಮಕ್ಕಳೊಂದಿಗೆ ಬಲೂನ್ ಗಳನ್ನು ಬಿಡುಗಡೆ ಮಾಡಿದರು. ಈ ಕಾರ್ಯಕ್ರಮದಲ್ಲಿ ಸಾಲಿಟೇರ್ನ ಡಾ. ಪ್ರಸಾದ್, ನಕ್ಷತ್ರದ ರೇಣುಕಾ ಬಂಗೇರ, ಸಾಯಿ ಗ್ರಾಂಡಿಯರ್ನ ಜಯರಾಜ್, ಮೌರಿಷ್ಕಾ ಪ್ಯಾಲೇಸ್ನ ಲಾಯಲ್ ಡಿ'ಸೋಜಾ, ಹ್ಯಾಬಿಟೇಟ್ 154 ರ ಮಾರ್ಟಿನ್ ಡಿ'ಸೋಜಾ ಹಾಗೂ ಶಶೀಂದ್ರ ರೈ (ಎಂ,ಡಿ., ಲ್ಯಾಂಡ್ ಟ್ರೇಡ್ಸ್ ರಿಯಾಲ್ಟಿ) ಮತ್ತು ಕೇಶವ ಅಮೀನ್ (ಸಾಗರ್ ಎಲೆಕ್ಟ್ರಿಕಲ್ಸ್) ಸೇರಿದಂತೆ ಪ್ರಮುಖ ಪ್ರತಿನಿಧಿಗಳು ಭಾಗವಹಿಸಿದ್ದರು. ಪುರುಷರ ಕ್ರಿಕೆಟ್ ಚಾಂಪಿಯನ್ಶಿಪ್ನಲ್ಲಿ ಮೌರಿಷ್ಕಾ ವಾರಿಯರ್ಸ್, ಹ್ಯಾಬಿಟ್ಯಾಟ್ ಫೈಟರ್ಸ್, ಸಾಯಿ ಗ್ರಾಂಡಿಯರ್ ಚಾಲೆಂಜರ್ಸ್, ಸಾಲಿಟೇರ್ ಸ್ಟ್ರೈಕರ್ಸ್, ನಕ್ಷತ್ರ ನೈಟ್ಸ್ ಮತ್ತು ಲ್ಯಾಂಡ್ ಟ್ರೇಡ್ಸ್ ವಾರಿಯರ್ಸ್ ನಡುವೆ ರೋಮಾಂಚಕಾರಿ ಸೆಣಸಾಟ ನಡೆಯಿತು. ಮಹಿಳಾ ಥ್ರೋಬಾಲ್ ಚಾಂಪಿಯನ್ಶಿಪ್ನಲ್ಲಿ, ಮೌರಿಷ್ಕಾ, ನಕ್ಷತ್ರ ಮತ್ತು ಲ್ಯಾಂಡ್ ಟ್ರೇಡ್ಸ್ ತಂಡಗಳು ಗಮನಾರ್ಹವಾದ ಟೀಮ್ ವರ್ಕ್ ಮತ್ತು ಕ್ರೀಡಾ ಮನೋಭಾವವನ್ನು ಪ್ರದರ್ಶಿಸಿದವು. ಈ ಸಂದರ್ಭದಲ್ಲಿ ಮಾತನಾಡಿದ ಲ್ಯಾಂಡ್ ಟ್ರೇಡ್ಸ್ ಬಿಲ್ಡರ್ಸ್ ಆ್ಯಂಡ್ ಡೆವಲಪರ್ಸ್ನ ವ್ಯವಸ್ಥಾಪಕ ನಿರ್ದೇಶಕ ಕೆ. ಶ್ರೀನಾಥ್ ಹೆಬ್ಬಾರ್ ಅವರು ವಿವಿಧ ತಂಡಗಳ ಭಾಗವಹಿಸುವಿಕೆಗೆ ಸಂತೋಷ ವ್ಯಕ್ತಪಡಿಸಿದರು ಮತ್ತು ಇಂತಹ ಸ್ನೇಹಪರ ಕ್ರೀಡಾ ವೇದಿಕೆಗಳು ಸಮುದಾಯಗಳಲ್ಲಿನ ಸಂಬಂಧಗಳನ್ನು ಬಲಪಡಿಸುತ್ತವೆ ಹಾಗೂ ಬಿಲ್ಡರ್ ಮತ್ತು ಅವರ ಗ್ರಾಹಕರ ನಡುವಿನ ಶಾಶ್ವತ ಬಾಂಧವ್ಯವನ್ನು ಬಲಪಡಿಸುತ್ತದೆ ಎಂದು ಹೇಳಿದರು. ಈ ಕಾರ್ಯಕ್ರಮದಲ್ಲಿ ಮಕ್ಕಳು ಮತ್ತು ಪೋಷಕರು ಕೂಡಾ ಉತ್ಸಾಹದಿಂದ ಭಾಗವಹಿಸಿದರು. ಅವರು ವಿಶೇಷ ವಾಗಿ ಆಯೋಜಿಸಲಾದ ಮೋಜಿನ ಆಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. ಮ್ಯೂಸಿಕಲ್ ಚೇರ್ಗಳಂತಹ ಸರಳ ಮತ್ತು ಸಂತೋಷದಾಯಕ ಚಟುವಟಿಕೆಗಳಿಂದ ಹಿಡಿದು ಟಗ್ ಆಫ್ ವಾರ್ ನಂತಹ ಶಕ್ತಿಯುತ ತಂಡದ ಸ್ಪರ್ಧೆಗಳ ವರೆಗಿನ ಕುಟುಂಬ ಸ್ನೇಹಿ ಆಟಗಳು ಒಟ್ಟು ವಾತಾವರಣಕ್ಕೆ ಉತ್ಸಾಹ ಮತ್ತು ನಗುವನ್ನು ಸೇರಿಸಿದವು. ಈ ಚಟುವಟಿಕೆಗಳು ನಿಜವಾಗಿಯೂ ಸ್ಪರ್ಧೆಯನ್ನು ಮೀರಿ ಕುಟುಂಬಗಳನ್ನು ಒಟ್ಟುಗೂಡಿಸುವ ಮತ್ತು ಸಮುದಾಯದೊಳಗಿನ ಬಾಂಧವ್ಯಗಳನ್ನು ಬಲಪಡಿಸುವ ಕಮ್ಯೂನಿಟಿ ಕಪ್ನ ಉತ್ಸಾಹವನ್ನು ಪ್ರತಿಬಿಂಬಿಸಿದವು. ಕಾರ್ಯಕ್ರಮವನ್ನು ಅರ್ಪಣಾ ಮನೋಭಾವದ ಸಂಘಟನಾ ತಂಡವು ಪರಿಣಾಮಕಾರಿಯಾಗಿ ನಿರ್ವಹಿಸಿತು. ಸುಜಿತ್ ಅವರು ಕಾಮೆಂಟರಿ ತಂಡದ ನೇತೃತ್ವ ವಹಿಸಿದ್ದರು, ಕಿರಣ್ ಸಹಕರಿಸಿದರು, ರವಿರಾಜ್ ಸ್ಕೋರರ್ ಆಗಿ ಸೇವೆ ಸಲ್ಲಿಸಿದರು. ಅಂಪೈರ್ಗಳಾಗಿ ವಿರಾಜ್, ಆತ್ಮರಾಜ್ ಮತ್ತು ದಿವಿತ್ ಕಾರ್ಯನಿರ್ವಹಿಸಿದರು. ಪ್ರಾಜೆಕ್ಟ್ ಗಳವಿಭಾಗದ ಜನರಲ್ ಮ್ಯಾನೇಜರ್ ಆದೀಶ್ ಹೆಬ್ಬಾರ್ ಮತ್ತು ನಾಗರಾಜ್ ಕಾಮತ್ ಸ್ವಾಗತಿಸಿದರು, ಪದ್ಮನಾಭ್ ಶೆಟ್ಟಿ, ಜನರಲ್ ಮ್ಯಾನೇಜರ್ , ಅಡ್ಮಿನ್ ಉಪಸ್ಥಿತರಿದ್ದರು. ಎಂಸಿ ಶವಿನಾ ಕಾರ್ಯಕ್ರಮವನ್ನು ನಿರೂಪಿಸಿದರು. ನಕ್ಷತ್ರದ ಡಾ. ರೋಹನ್ ಶೆಟ್ಟಿ ಅವರು ಲ್ಯಾಂಡ್ ಟ್ರೇಡ್ಸ್ ಮತ್ತು ಕೆ. ಶ್ರೀನಾಥ್ ಹೆಬ್ಬಾರ್ ಅವರ ಉಪಕ್ರಮವನ್ನು ಶ್ಲಾಘಿಸಿ ಬಿಲ್ಡರ್ ಮತ್ತು ಅವರ ಗ್ರಾಹಕರ ನಡುವಿನ ಸಂಬಂಧವು ಯೋಜನೆ ಪೂರ್ಣಗೊಂಡ ಬಳಿಕವೂ ಮುಂದುವರಿಯ ಬೇಕು ಎಂಬ ಬಲವಾದ ಸಂದೇಶವನ್ನು ನೀಡುವುದರ ಜತೆಗೆ ಕ್ರೀಡಾ ಮನೋಭಾವವನ್ನು ಉತ್ತೇಜಿಸುವ ಕಾರ್ಯಕ್ರಮ ಇದಾಗಿತ್ತು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಗ್ರಾಹಕರ ಜತೆಗಿನ ಸಂಬಂಧ ಮತ್ತು ಸೇವೆಯನ್ನು ಬಲಪಡಿಸುವಲ್ಲಿ ಬಿಲ್ಡರ್ಗಳ ನಿರಂತರ ಬೆಂಬಲದ ಬಗ್ಗೆ ಅವರು ಭರವಸೆ ನೀಡಿದರು. ಸ್ಪರ್ಧಾತ್ಮಕ ಪಂದ್ಯಗಳು, ಉತ್ಸಾಹಭರಿತ ಭಾಗವಹಿಸುವಿಕೆ ಮತ್ತು ಬಲವಾದ ಸಂಬಂಧಗಳೊಂದಿಗೆ, ಲ್ಯಾಂಡ್ ಟ್ರೇಡ್ಸ್ ಕಮ್ಯುನಿಟಿ ಕಪ್ - ಸೀಸನ್ 4 ಮತ್ತೊಮ್ಮೆ ಅದ್ಭುತ ಯಶಸ್ಸನ್ನು ಸಾಧಿಸಿತು, ಇದು ಮನೆಗಳನ್ನು ಮಾತ್ರವಲ್ಲದೆ ಶಾಶ್ವತ ಸಂಬಂಧಗಳನ್ನು ನಿರ್ಮಿಸುವ ಕಂಪೆನಿಯ ಬದ್ಧತೆಯನ್ನು ಪುನರುಚ್ಚರಿಸಿದೆ ಎಂದು ಲ್ಯಾಂಡ್ ಟ್ರೇಡ್ಸ್ ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ಪೊಲೀಸ್ ಬಂದೋಬಸ್ತ್ನಲ್ಲಿ ಬಂಡೀಪುರ ಸಫಾರಿ ಪುನರಾರಂಭ
ಪರ-ವಿರೋಧದ ನಡುವೆ ಬಂಡೀಪುರ ಸಫಾರಿ ಇಂದು ಪುನಾರಂಭಗೊಂಡಿತು. ಮೂರು ತಿಂಗಳಿಂದ ಸಫಾರಿ ಸ್ಥಗಿತಗೊಂಡಿತ್ತು. ಪುನರಾರಂಭವಾದ ಸಫಾರಿ ವಾಹನಗಳಿಗೆ ಮತ್ತು ಸಮಯಕ್ಕೆ ಮಿತಿ ಹಾಕಲಾಗಿತ್ತು. ಸಫಾರಿ ಪುನರಾರಂಭದ ವೇಳೆ ಪೊಲೀಸ್ ಇಲಾಖೆಯವರು ಮುಂಜಾಗ್ರತ ಕ್ರಮ ಕೈಗೊಂಡಿದ್ದರು. ಬಿಗಿ ಬಂದೋಬಸ್ತ್ ವಹಿಸಲಾಗಿತ್ತು.
ಮಂಗಳೂರು: ಜನರಲ್ಲಿ ಭೀತಿ ಹುಟ್ಟಿಸಿದ ಚಿರತೆ ಸಂಚಾರ
ಮಂಗಳೂರು: ಮರೋಳಿ ಪರಿಸರದಲ್ಲಿ ರವಿವಾರ ಮುಂಜಾನೆ ಕಾಣಿಸಿಕೊಂಡ ಚಿರತೆ ನಗರ ಪ್ರದೇಶದ ಜನರಲ್ಲೂ ಭೀತಿ ಮೂಡಿಸಿದೆ. ಫೆ17ರಿಂದ ಶಕ್ತಿ ನಗರ, ಮರೋಳಿ ಪ್ರದೇಶ ಹಾಗೂ ಇಲ್ಲಿನ ರೈಲು ಹಳಿಯ ಪ್ರದೇಶದಲ್ಲಿ ಪ್ರತಿ ದಿನ ಇಲ್ಲಿನ ನಿವಾಸಿಗಳಿಗೆ ಈ ಚಿರತೆ ಕಾಣಿಸಿಕೊಂಡ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಶಕ್ತಿನಗರದ ಮನೆಯೊಂದರ ಗೇಟ್ ಮೂಲಕ ಚಿರತೆ ಕಾಂಪೌಂಡ್ ಪ್ರವೇಶ ಮಾಡುತ್ತಿರುವ ದೃಶ್ಯ ಸಿ.ಸಿ ಕ್ಯಾಮಾರದಲ್ಲೂ ಸೆರೆಯಾಗಿದೆ. ಮುಂಜಾನೆ ಜನಸಂಚಾರ ಆರಂಭವಾಗುವ ಹೊತ್ತು ಕೊರ್ಡೆಲ್ ಚರ್ಚ್ ಪರಿಸರದಲ್ಲಿ ಚರ್ಚ್ ಗೆ ಹೋಗುವವರಿಗೆ ಈ ಪರಿಸರದಲ್ಲಿ ಕಾಣಿಸಿಕೊಂಡ ಚಿರತೆಯಿಂದಾಗಿ ಭೀತಿ ಉಂಟಾಗಿದೆ. ಈ ಬಗ್ಗೆ ಸ್ಥಳೀಯರು ಅರಣ್ಯ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಚಿರತೆ ಸಂಚರಿಸುತ್ತಿರುವ ಬಗ್ಗೆ ಅರಣ್ಯ ಅಧಿಕಾರಿಗಳು ಖಚಿತ ಪಡಿಸಿದ್ದಾರೆ. ಮಂಗಳೂರು ನಗರ ಪ್ರದೇಶ ನಂತೂರು ಸೂರ್ಯನಾರಾಯಣ ದೇವಸ್ಥಾನದ ಪ್ರದೇಶ, ಕಾರ್ಡೆಲ್ ಚರ್ಚ್ ಪ್ರದೇಶದಲ್ಲಿ ಈ ಚಿರತೆ ಹಗಲು ಹೊತ್ತು ಕಾಣಿಸಿಕೊಂಡಿರುವ ಬಗ್ಗೆ ಅರಣ್ಯಾಧಿಕಾರಿಯ ಗಮನಕ್ಕೆ ತಂದಿರುವ ಇಲ್ಲಿನ ನಾಗರಿಕರು ಅದನ್ನು ಹಿಡಿದು ಜನರ ಭೀತಿಯನ್ನು ದೂರಗೊಳಿ ಸುವಂತೆ ಆಗ್ರಹಿಸಿದ್ದಾರೆ.
ಚಿತ್ತಾಪುರ | ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಎಸ್ಡಿಎಂಸಿ ಸಮಿತಿ ರಚನೆ
ಚಿತ್ತಾಪುರ : ತಾಲೂಕಿನ ಅಲ್ಲೂರ ಕೆ. ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ (ಎಸ್ಡಿಎಂಸಿ) ರಚಿಸಲಾಗಿದೆ ಎಂದು ಮುಖ್ಯಗುರು ಅಂಬಣ್ಣ ತಿಳಿಸಿದ್ದಾರೆ. ಫೆಬ್ರವರಿ 5ರಂದು ನಡೆದ ಪಾಲಕ-ಪೋಷಕರ ಸಭೆಯಲ್ಲಿ ಎಲ್ಲಾ ಪೋಷಕರ ಸರ್ವಾನುಮತದಿಂದ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರನ್ನು ಆಯ್ಕೆ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದರು. ನೂತನ ಪದಾಧಿಕಾರಿಗಳು : ಸಿದ್ದು ಮಾಸಬೊ (ಅಧ್ಯಕ್ಷರು), ರೇಣುಕಾ ಮಲ್ಲಿಕಾರ್ಜುನ್ (ಉಪಾಧ್ಯಕ್ಷರು), ಬಸವರಾಜ್ ಬಣಗಾರ, ಪರಶುರಾಮ, ಪೀರಪ್ಪ ಹಳೇಗಿಡ, ಬಸವರಾಜ ಜಾಡರ್, ಕಾಸಿಂಬೀ ಭಾಷಾ ಖಾನ್, ಮಲ್ಲಮ್ಮ ಬುಸೆರಿ, ರಾಜು ಹೊರಗಿನಮನಿ, ಕವಿತಾ ಕಾಶಿನಾಥ್ ಗುತ್ತೇದಾರ, ದೇವಮ್ಮ ಬೈನರ್, ಮಲ್ಲಪ್ಪ ನಾಟೆಕಾರ್, ಸೂರಪ್ಪ ಗಮಗ, ಉಮಾದೇವಿ ಸಾಬಣ್ಣ ತಳವಾರ್, ದೇವಮ್ಮ ದುರ್ಗಪ್ಪ ನರಬೋಳಿ, ಬಸ್ಸು ಪುರನ್, ಸಾಬವ್ವ ತೇಲಗೂರ, ಅನಂತಮ್ಮ ದೇವಪ್ಪ ಫಿಟ್ಲಿ (ಸದಸ್ಯರು) ಅವರು ಆಯ್ಕೆಯಾಗಿದ್ದಾರೆ. ಈ ಸಂದರ್ಭದಲ್ಲಿ ಶಿಕ್ಷಣ ಪ್ರೇಮಿ ರವೀಂದ್ರ ಬೈನರ್, ಅಂಗನವಾಡಿ ಕಾರ್ಯಕರ್ತೆ ಗಂಗಮ್ಮ ಪರಡಿ, ಸಿಆರ್ಸಿ ವಿಜಯಲಕ್ಷ್ಮಿ ಹೊಸಮನಿ ಹಾಗೂ ಸಹ ಶಿಕ್ಷಕರು ಉಪಸ್ಥಿತರಿದ್ದರು.
ಕಾಳಗಿ | ಕೋಲಿ ಸಮಾಜದ ತಾಲೂಕಾಧ್ಯಕ್ಷರಾಗಿ ಜಗನ್ನಾಥ ತೇಲಿ ಅವಿರೋಧ ಆಯ್ಕೆ
ಕಾಳಗಿ : ತಾಲೂಕು ಕೋಲಿ ಸಮಾಜದ ನೂತನ ಅಧ್ಯಕ್ಷರಾಗಿ ಜಗನ್ನಾಥ ತೇಲಿ ಅವರು ಸಮಾಜದ ಮುಖಂಡರ ಒಮ್ಮತದಿಂದ ರವಿವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ ರಮೇಶ ನಾಮದಾರ ತಿಳಿಸಿದರು. ಪಟ್ಟಣದ ಅಂಬಾ ಭವಾನಿ ಕಲ್ಯಾಣ ಮಂಟಪದಲ್ಲಿ ರವಿವಾರ ಕಾಳಗಿ ತಾಲೂಕು ಕೋಲಿ ಸಮಾಜದ ನೂತನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯನ್ನು ನಿಗದಿಪಡಿಸಲಾಗಿತ್ತು. ತಾಲೂಕು ಕೋಲಿ ಸಮಾಜದ ತಾಲೂಕಾಧ್ಯಕ್ಷ ಸ್ಥಾನಕ್ಕೆ ಸಮಾಜದ ಹಿರಿಯ ಮುಖಂಡರಾದ ಶಿವಶರಣಪ್ಪ ಗುತ್ತೇದಾರ, ಪ್ರಭಾಕರ್ ರಟಕಲ್, ಯುವ ಮುಖಂಡ ಜಗನ್ನಾಥ ತೇಲಿ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು. ಅಂತಿಮವಾಗಿ ಸಮಾಜದ ಹಿರಿಯ ಮುಖಂಡರಾದ ಶಿವಶರಣಪ್ಪ ಗುತ್ತೇದಾರ, ಪ್ರಭಾಕರ್ ರಟಕಲ್ ಅವರು ನಾಮಪತ್ರ ಹಿಂಪಡೆದ್ದರಿಂದ ಚಿಂಚೋಳಿ(ಎಚ್) ಗ್ರಾಮದ ಯುವ ಮುಖಂಡ ಜಗನ್ನಾಥ ತೇಲಿ ಅವರು ನೂತನ ಕೋಲಿ ಸಮಾಜದ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು. ಇದೆ ವೇಳೆ ಕಾಳಗಿ ತಾಲೂಕು ಕೋಲಿ ಸಮಾಜದ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಜಗನ್ನಾಥ ತೇಲಿ ಅವರನ್ನು ಸಮಾಜ ಬಾಂಧವರು ಸನ್ಮಾನಿಸಿ ಅಭಿನಂದಿಸಿದರು. ನಂತರ ನೂತನ ತಾಲೂಕಾಧ್ಯಕ್ಷ ಜಗನ್ನಾಥ ತೇಲಿ ಮಾತನಾಡಿ, ಸಮಾಜದ ಮುಖಂಡರ ಮಾರ್ಗದರ್ಶನದಲ್ಲಿ ಎಲ್ಲರ ವಿಶ್ವಾಸವನ್ನು ಗಳಿಸಿ ಸಮಾಜದ ಅಭಿವೃದ್ಧಿಗೆ ಶ್ರಮಿಸುವುದಾಗಿ ಭರವಸೆ ನೀಡಿದರು. ನಿಕಟ ಪೂರ್ವ ಅಧ್ಯಕ್ಷ ರೇವಣಸಿದ್ದಪ್ಪ ಮುಕರಂಬಿ, ಮುಖಂಡರಾದ ಭೀಮರಾವ ಪಾಟೀಲ್ ವಜ್ಜರಗಾಂವ, ಶಿವಶರಣಪ್ಪ ಗುತ್ತೇದಾರ, ಪ್ರಭಾಕರ ರಟಕಲ್, ಶಿವರಾಯ ಕೋಯಿ, ಸಿದ್ದು ಕೇಶ್ವಾರ, ಜಗನ್ನಾಥ ಚಂದನಕೇರಿ, ಮಲ್ಲು ಮರಗುತ್ತಿ, ನಾಗಣ್ಣ ನಾಚವಾರ ಕಲಗುರ್ತಿ, ಶಿವಕುಮಾರ ಕಮಕನೂರ, ಮಾರುತಿ ನಾಯಕೋಡಿ, ಭೀಮರಾವ ಮಂಗಲಗಿ, ಮಲ್ಕಣ್ಣ ಅಣಕಲ್, ಅಂಬಣ್ಣ ಚಿಂತಪಳ್ಳಿ, ಚಂದ್ರಶೇಖರ ಭಂಕಲಗಿ, ಪ್ರವೀಣ ನಾಮದಾರ, ಶರಣು ಭಂಕಲಗಿ, ಅರಣಕುಮಾರ ಹೆಬ್ಬಾಳ, ಜಗನ್ನಾಥ ಮಗಿ, ನಾಗಣ್ಣ ತಳವಾರ, ಮಲ್ಲಪ್ಪ ಕೊಡದೂರ, ಬಾಬು ನಾಟೀಕರ್, ದಯಾನಂದ ಹೊಸಮನಿ, ಶಿವಶರಣಪ್ಪ ತೆಂಗಳಿ, ಶ್ರೀಶೈಲ್ ತೇಗಲತಿಪ್ಪಿ ಇತರರು ಇದ್ದರು.
ವಿಜಯಪುರ ಸೇರಿ 3 ಜಿಲ್ಲೆಗಳಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಆಸ್ಪತ್ರೆ ನಿರ್ಮಿಸಲಾಗುವುದು: ಸಿಎಂ ಸಿದ್ದರಾಮಯ್ಯ ಘೋಷಣೆ
ಸಿಎಂ ಸಿದ್ದರಾಮಯ್ಯ ಅವರು 3 ಜಿಲ್ಲೆಗಳಿಗೆ ಸರ್ಕಾರಿ ಮೆಡಿಕಲ್ ಕಾಲೇಜು ಘೋಷಣೆ ಮಾಡಿದ್ದಾರೆ. ಜತೆಗೆ ಕಾರವಾರಕ್ಕೆ ಸೂಪರ್ ಸ್ಪೆಷಾಲಿಟಿ ಹಾಸ್ಪಿಟಲ್ ನೀಡಲಾಗುವುದು ಎಂದು ಭರವಸೆ ಕೊಟ್ಟಿದ್ದಾರೆ. ಉತ್ತರ ಕನ್ನಡ ಪ್ರವಾಸ ವೇಳೆ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಪ್ರತಿ ಜಿಲ್ಲೆಗೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸುವ ಗುರಿ ಹೊಂದಿದ್ದೇವೆ ಎಂದರು.
ಚಿತ್ತಾಪುರ | ಮದರಸಾ ತೋಹಿದ್-ಇ-ಅರಾಬಿಕ್ ಎಜುಕೇಷನ್ ಚಾರಿಟೇಬಲ್ ಟ್ರಸ್ಟ್ ಉದ್ಘಾಟನೆ
ಚಿತ್ತಾಪುರ : ತಾಲೂಕಿನ ದಂಡೋತಿ ಗ್ರಾಮದಲ್ಲಿ ಮದರಸಾ ತೋಹಿದ್-ಇ-ಅರಾಬಿಕ್ ಎಜುಕೇಷನ್ ಚಾರಿಟೇಬಲ್ ಟ್ರಸ್ಟ್ ಭಾನುವಾರ ಉದ್ಘಾಟನೆಗೊಂಡಿತು. ಗ್ರಾಮದಲ್ಲಿ ಮಕ್ಕಳ ಶಿಕ್ಷಣದ ಹಿತದೃಷ್ಟಿಯಿಂದ ಟ್ರಸ್ಟ್ ಸ್ಥಾಪನೆಯಾಗಿರುವುದು ಸಂತಸದ ವಿಷಯ ಎಂದು ಮುಖಂಡರು ಅಭಿಪ್ರಾಯಪಟ್ಟರು. ಇದೇ ಸಂದರ್ಭದಲ್ಲಿ ಟ್ರಸ್ಟ್ ಹೆಸರಿಗೆ 1 ಎಕರೆ ಭೂಮಿ ದಾನ ಮಾಡಿದ ಭೂದಾನಿ ಮಹ್ಮದ್ ಖುಮೀರ್ ಭಾವಾ ಸಾಬ್ ಪಠಾಣ್ ಅವರನ್ನು ಟ್ರಸ್ಟ್ ಅಧ್ಯಕ್ಷ ಖಾಜಾ ಪಾಷಾ ಶೇಖ್ ಹುಸೇನ್ ಅವರು ಸನ್ಮಾನಿಸಿದರು. ಮುಖಂಡ ಸೀರಾಜ್ ದರ್ಗಾ ಮಾತನಾಡಿ, ಶಿಕ್ಷಣದ ಅಭಿವೃದ್ದಿಗೆ ಗ್ರಾಮಸ್ಥರು ತೋರಿದ ಸಹಕಾರ ಶ್ಲಾಘನೀಯ. ವಿಶೇಷವಾಗಿ ಭೂಮಿ ದಾನ ಮಾಡಿದ ಮಹ್ಮದ್ ಖುಮೀರ್ ಭಾವಾ ಸಾಬ್ ಪಠಾಣ್ ಅವರ ಸೇವೆ ಸಮಾಜಕ್ಕೆ ಮಾದರಿಯಾಗಿದೆ ಎಂದರು. ಮುಖಂಡ ರಮೇಶ್ ಕವಡೆ ಮಾತನಾಡಿ, ಟ್ರಸ್ಟ್ ಹೆಸರಿಗೆ 1 ಎಕರೆ ಭೂಮಿ ಸರ್ಕಾರದ ನಿಯಮಾನುಸಾರ ನೋಂದಣಿಯಾಗಿದ್ದು, ಮುಂದಿನ ದಿನಗಳಲ್ಲಿ ಈ ಭಾಗದಲ್ಲಿ ಉತ್ತಮ ಶಿಕ್ಷಣ ಸಂಸ್ಥೆ ಆರಂಭವಾಗಲಿದೆ. ಇದಕ್ಕಾಗಿ ಎಲ್ಲರೂ ತನು, ಮನ, ಧನದಿಂದ ಸಹಕರಿಸಬೇಕು ಎಂದು ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ಟ್ರಸ್ಟ್ ಉಪಾಧ್ಯಕ್ಷ ಹಬಿಬೋದ್ದಿನ್ ಡಕಾರೆ, ಕಾರ್ಯದರ್ಶಿ ಬಂಧಗಿಸಾಬ್ ಡೊಂಗಾ, ಮುಖಂಡರಾದ ಐಹ್ಮದ್ ಶೇಖ್ ಹುಸೇನ್, ಇಂಪಿಕಾರ್ ಪಟೇಲ್, ಮುಸ್ತಾಕ್ ಪಠಾಣ್, ಅಬ್ಬಾಸ್ ಅಲಿ ಪಠಾಣ್, ಸಲೀಮ್ ಜಮ್ಮಾನ್, ಶೇಖ್ ಮಹಿಬೂಬ್, ಗೌಸ್ ಐಹ್ಮದ್, ವಾಜೀದ್ ಗುತ್ತೇದಾರ, ಹಮೀದ್ ಜಮ್ಮಾನ್, ಮೈನೊದ್ದಿನ್ ತೊನಸನಳ್ಳಿ, ಮಕ್ಬುಲ್, ಸಾಧೀಬ್ ಗುತ್ತೇದಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು. ರಮೇಶ್ ಕವಡೆ ನಿರೂಪಿಸಿದರು.
ಎಸೆಸೆಲ್ಸಿ ಪರೀಕ್ಷೆ ಕುರಿತು ವಿಶೇಷ ಕಾರ್ಯಾಗಾರ
ಕುಂದಾಪುರ, ಫೆ.22: ಅಂಪಾರಿನ ಸಂಜಯ ಗಾಂಧಿ ಪ್ರೌಢಶಾಲೆಯ ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಜೆಸಿಐ ಹಾಲಾಡಿ ವಾರಾಹಿ ಘಟಕದ ವಿಶೇಷ ಕಾರ್ಯಕ್ರಮದಡಿಯಲ್ಲಿ ಎಸೆಸೆಲ್ಸಿ ಪರೀಕ್ಷೆಯನ್ನು ಎದುರಿಸುವುದು ಹೇಗೆ? ಎಂಬ ಕುರಿತ ವಿಶೇಷ ಕಾರ್ಯಾಗಾರ ನಡೆಯಿತು. ಜೆಸಿಐ ತರಬೇತುದಾರ, ಸ್ಮಾರ್ಟ್ ಕ್ರೀಯೇಶನ್ಸ್ ಎಜುಕೇಶನ್ಸ್ ಟ್ರಸ್ಟ್ ಹೈಕಾಡಿ ಸಂಸ್ಥೆಯ ಅಧ್ಯಕ್ಷ ಕೃಷ್ಣಮೂರ್ತಿ ಹೈಕಾಡಿ, ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಸರಿಯಾದ ಸಿದ್ಧತೆ ಮಾಡುವ ವಿಧಾನಗಳು, ಸಮಯ ನಿರ್ವಹಣೆಯ ಕೌಶಲಗಳು, ಗಮನ ಕೇಂದ್ರೀಕರಣದ ತಂತ್ರಗಳು ಹಾಗೂ ಮನೋಬಲ ವೃದ್ಧಿಸುವ ಚಟುವಟಿಕೆಗಳ ಕುರಿತು ಮಾರ್ಗದರ್ಶನ ನೀಡಿದರು. ಪ್ರಶ್ನೆಪತ್ರಿಕೆ ಬರೆಯುವ ವಿಧಾನ, ಅಂಕ ಗಳಿಸುವ ತಂತ್ರಗಳು ಮತ್ತು ಉತ್ತರ ಮಂಡನೆಯ ಮಹತ್ವ, ಸಂವಾದಾ ತ್ಮಕ ಆಟಗಳು ಮತ್ತು ಉದಾಹರಣೆಗಳ ಮೂಲಕ ಪರೀಕ್ಷೆಯನ್ನು ಹಬ್ಬದಂತೆ ಸ್ವೀಕರಿಸುವ ಧನಾತ್ಮಕ ಮನೋಭಾ ವವನ್ನು ಸಂಪನ್ಮೂಲ ವ್ಯಕ್ತಿಗಳು ಮಕ್ಕಳಲ್ಲಿ ಈ ಕಾರ್ಯಾಗಾರದ ಮೂಡಿಸಿದರು. ಅಧ್ಯಕ್ಷತೆಯನ್ನು ಹಾಲಾಡಿ ವಾರಾಹಿ ಜೆಸಿಐ ಘಟಕದ ಅಧ್ಯಕ್ಷ ಪ್ರದೀಪ್ ಹಾಲಾಡಿ ವಹಿಸಿದ್ದರು. ಶಾಲೆಯ ಮುಖ್ಯೋಪಾಧ್ಯಾಯ ಉದಯ್ ಕುರ್ಮಾ ಬಿ., ಶಿಕ್ಷಕಿಯರಾದ ಗೀತಾ ನಾಯಕ್, ಕಾವ್ಯ, ಸವಿತಾ, ಲೇಡಿ ಜೆಸಿ ಪ್ರೆಸಿಡೆಂಟ್ ಅವಶ್ಯ ಶೆಟ್ಟಿ, ಕಾರ್ಯಕ್ರಮ ನಿರ್ದೇಶಕಿ ಆಶಾ ಬ್ರೈಟ್ ಪರ್ಲ್ ಹಾಲಾಡಿ, ಉಪಾಧ್ಯಕ್ಷ ಕೃಷ್ಣ ಭಟ್ ಹಾಲಾಡಿ, ಸಂಯೋಜಕಿ ದೀಪಾ ಶೆಟ್ಟಿ, ಸಹ ಕಾರ್ಯದರ್ಶಿ ಮಂಜುಳಾ ಶೆಟ್ಟಿ ಉಪಸ್ಥಿತರಿದ್ದರು.
ಪರೀಕ್ಷಾ ಸಮಯದಲ್ಲಿ ನಿರಂತರ ವಿದ್ಯುತ್ ಪೂರೈಕೆ| ಕುಂದಾಪುರ ಗ್ಯಾರಂಟಿ ಸಮಿತಿಯಿಂದ ಮೆಸ್ಕಾಂ ಅಧಿಕಾರಿಗಳಿಗೆ ಸೂಚನೆ
ಕುಂದಾಪುರ, ಫೆ.22: ಕಳೆದ ವರ್ಷ ಪರೀಕ್ಷಾ ಸಮಯದಲ್ಲಿ ನಿರಂತರ ವಿದ್ಯುತ್ ನೀಡಿ, ಓದುವ ಮಕ್ಕಳಿಗೆ ಸಹಕಾರಿಯಾಗಿದೆ. ಅದೇ ರೀತಿ ಈ ಬಾರಿಯೂ ಕೂಡ ಈಗ ಸಿಬಿಎಸ್ಸಿ ಪರೀಕ್ಷೆ ನಡೆಯುತ್ತಿದ್ದು, ಇನ್ನು ಎಸೆಸೆಲ್ಸಿ, ಪಿಯುಸಿ ಪರೀಕ್ಷೆ ಸಹ ಆರಂಭವಾಗಲಿದೆ. ಹೀಗಾಗಿ ವಿದ್ಯುತ್ ಸ್ಥಗಿತಗೊಳಿಸದೇ, ವಿದ್ಯಾರ್ಥಿಗಳ ಅನುಕೂಲಕ್ಕಾಗಿ ನಿರಂತರ ವಿದ್ಯುತ್ ಪೂರೈಕೆ ಒದಗಿಸಬೇಕು ಎಂದು ಕುಂದಾಪುರ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ ಮೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಕುಂದಾಪುರ ತಾಪಂ ಸಭಾಂಗಣದಲ್ಲಿ ಶನಿವಾರ ನಡೆದ ಗ್ಯಾರಂಟಿ ಅನುಷ್ಠಾನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು. ಪಂಚ ಗ್ಯಾರಂಟಿ ಆರಂಭವಾಗಿ 1 ಸಾವಿರ ದಿನವಾಗಿದೆ. ವಿರೋಧಗಳ ನಡುವೆಯೂ ಸರಕಾರ ಗ್ಯಾರಂಟಿಯನ್ನು ಯಥಾವತ್ತಾಗಿ ಅನುಷ್ಠಾನಗೊಳಿ ಸಿದೆ. ಜಿಲ್ಲೆಯಲ್ಲಿ ಕುಂದಾಪುರಕ್ಕೆ ಗರಿಷ್ಠ ಅನುದಾನ ಬಂದಿದೆ. ಹೆಚ್ಚು ಜನರು ಪ್ರಯೋಜನ ಪಡೆದಿದ್ದಾರೆ. ಗ್ಯಾರಂಟಿಯಿಂದ ಯಾರೂ ಸೋಮಾರಿ ಗಳಾಗಿಲ್ಲ. ಯೋಜನೆ ಯಶಸ್ವಿಯಾಗಿದೆ. ಇದರಿಂದ ರಾಜ್ಯದ ಒಟ್ಟಾರೆ ತಲಾದಾಯವೂ ಜಾಸ್ತಿಯಾಗಿದೆ ಎಂದರು. ಯುವನಿಧಿ ನೋಂದಣಿ ಹೆಚ್ಚಿಸಲು 2-3 ಕಾಲೇಜುಗಳಲ್ಲಿ ಶಿಬಿರ ನಡೆಸಲಾಗುವುದು. ಕುಂದಾಪುರ, ಬೈಂದೂರು ಹೋಬಳಿಯಲ್ಲಿ ವಾರದಲ್ಲಿ 2 ಕಡೆ ಅದಾಲತ್, ಮಾಹಿತಿ ಕಾರ್ಯಕ್ರಮ ನಡೆಸಲಾಗುವುದು ಎಂದು ಅವರು ಸಭೆಗೆ ತಿಳಿಸಿದರು. ಪಂಚ ಗ್ಯಾರಂಟಿಯಡಿ ಕುಂದಾಪುರಕ್ಕೆ ಈವರೆಗೆ ಒಟ್ಟು 501.22 ಕೋ.ರೂ. ಅನುದಾನ ಬಂದಿದೆ. ಇದು ಉಡುಪಿ ಜಿಲ್ಲೆಯಲ್ಲಿಯೇ ಗರಿಷ್ಠವಾಗಿದೆ. ಗೃಹಲಕ್ಷ್ಮೀಯಡಿ ಜನವರಿಯಲ್ಲಿ 10.06 ಕೋ.ರೂ., ಒಟ್ಟು 245.33 ಕೋ.ರೂ., ಗೃಹಜ್ಯೋತಿಯಡಿ 4.49 ಕೋ.ರೂ., ಒಟ್ಟು 123.43 ಕೋ.ರೂ., ಅನ್ನಭಾಗ್ಯದಡಿ 2.23 ಕೋ.ರೂ., ಒಟ್ಟು 55.55 ಕೋ.ರೂ., ಯುವನಿಧಿಯಡಿ 39.81 ಲಕ್ಷ ರೂ., ಒಟ್ಟು 3.10 ಕೋ.ರೂ., ಶಕ್ತಿ ಯೋಜನೆಯಡಿ 3 ಕೋ.ರೂ., ಒಟ್ಟು 73.78 ಕೋ.ರೂ. ಅನುದಾನ ಬಂದಿದೆ. ಜನವರಿಯಲ್ಲಿ ಕುಂದಾಪುರಕ್ಕೆ ಒಟ್ಟು 20.20 ಕೋ.ರೂ. ಅನುದಾನ ಬಿಡುಗಡೆಯಾಗಿದೆ ಎಂದು ಹರಿಪ್ರಸಾದ್ ಶೆಟ್ಟಿ ಮಾಹಿತಿ ನೀಡಿದರು. ಸಭೆಯಲ್ಲಿ ವಿವಿಧ ಇಲಾಖಾ ಅಧಿಕಾರಿಗಳು, ಸಮಿತಿ ಸದಸ್ಯರಾದ ವಸುಂಧರ ಹೆಗ್ಡೆ, ಮಂಜು ಕೊಠಾರಿ, ಅರುಣ್ ಹಕ್ಲಾಡಿ, ಅಭಿಜಿತ್ ಪೂಜಾರಿ ಹೇರಿಕುದ್ರು, ಕೋಣಿ ನಾರಾಯಣ ಆರ್ಚಾ, ಚಂದ್ರ ಕಾಂಚನ್, ಸವಿತಾ ಚಿತ್ತೂರು, ಆಶಾ ಕರ್ವಾಲೊ, ಗಣೇಶ್ ಕುಂಭಾಶಿ, ಚಂದ್ರ ಕಾಂಚನ್, ವಾಣಿ ಶೆಟ್ಟಿ, ಜಹೀರ್ ಅಹಮದ್ ಗಂಗೊಳ್ಳಿ, ತಾ.ಪಂ. ಕಾರ್ಯನಿರ್ವ ಹಣಾಧಿಕಾರಿ ಮಹೇಶ್ ಕೆ.ಜಿ. ಉಪಸ್ಥಿತರಿದ್ದರು. ಜನವರಿಯಲ್ಲಿ ಶೆಟ್ರಕಟ್ಟೆಯಲ್ಲಿ ನಡೆದ ಬಸ್ ಅಪಘಾತದಲ್ಲಿ ಗಾಯ ಗೊಂಡವರ ಚಿಕಿತ್ಸೆಗೆ ಸಚಿವ ರಾಮಲಿಂಗಾ ರೆಡ್ಡಿಯವರ ಸೂಚನೆಯಂತೆ ಮಾನವೀಯ ನೆಲೆಯಲ್ಲಿ ಕೆಎಂಸಿಗೆ 21 ಲಕ್ಷ ರೂ. ಹಾಗೂ ಕುಂದಾಪುರದ ಆಸ್ಪತ್ರೆಗೆ 85 ಸಾವಿರ ರೂ. ಹಣವನ್ನು ಕೆಎಸ್ಆರ್ಟಿಸಿಯಿಂದ ನೀಡಲಾಗಿದೆ ಎಂದು ಡಿಪ್ಪೋ ಮ್ಯಾನೇಜರ್ ರಾಜೇಶ್ ತಿಳಿಸಿದರು.
ಕಲಬುರಗಿ ನಾಟಕೋತ್ಸವ : ಮನ ಸೆಳೆದ ಕರಿಮಾಯಿ ನಾಟಕ
ಕಲಬುರಗಿ : ನಗರದ ಡಾ.ಎಸ್.ಎಂ.ಪಂಡಿತ್ ರಂಗಮಂದಿರದಲ್ಲಿ ಆರಂಭವಾದ “ಕಲಬುರಗಿ ನಾಟಕೋತ್ಸವ - 26”ರ ಮೊದಲ ದಿನವೇ ಪ್ರೇಕ್ಷಕರಿಂದ ಭರ್ಜರಿ ಸ್ಪಂದನೆ ವ್ಯಕ್ತವಾಯಿತು. ಸ್ಪಂದನ ಬೆಂಗಳೂರು ಕಲಾತಂಡ ಅಭಿನಯಿಸಿದ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ್ ಕಂಬಾರ ಅವರ ಮೂಲ ಕೃತಿಯಾದ ‘ಕರಿಮಾಯಿ’ ನಾಟಕವು ಉದ್ಘಾಟನಾ ಪ್ರದರ್ಶನವಾಗಿ ವೇದಿಕೆಗೆ ಬಂದಿದೆ. ಹಿರಿಯ ರಂಗಕರ್ಮಿ ಹಾಗೂ ಚಿತ್ರನಟಿ ಬಿ. ಜಯಶ್ರೀ ಅವರ ನಿರ್ದೇಶನ ಮತ್ತು ಹಿನ್ನಲೆ ಮೇಳದ ಗಾಯನ ನಾಟಕಕ್ಕೆ ವಿಶೇಷ ಮೆರುಗು ನೀಡಿತು. ಮುಖ್ಯಪಾತ್ರದಲ್ಲಿ ರಂಗಭೂಮಿ, ಸಿನಿಮಾ ಹಾಗೂ ಕಿರುತೆರೆ ಖ್ಯಾತ ನಟ ರಮೇಶ್ ಪಂಡಿತ್ ಸೇರಿದಂತೆ ಹಲವು ಪರಿಚಿತ ಮುಖಗಳು ಅಭಿನಯಿಸಿ ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸಿದರು. ಜಾನಪದ ಮಹಾಕಾವ್ಯದ ಅನಾವರಣ : ‘ಕರಿಮಾಯಿ’ ಕೇವಲ ನಾಟಕವಲ್ಲ. ಉತ್ತರ ಕರ್ನಾಟಕದ ಜಾನಪದ ಸೊಗಡಿನೊಂದಿಗೆ ಸಾಗುವ ಒಂದು ಮಹತ್ವದ ರಂಗಕೃತಿ. ಶಿವಪುರ ಎಂಬ ಕಾಲ್ಪನಿಕ ಗ್ರಾಮದ ಸುತ್ತ ನಡೆಯುವ ಕಥೆ, ಗ್ರಾಮದ ದೇವತೆ ‘ಕರಿಮಾಯಿ’ಯ ನಂಬಿಕೆ, ಆಚರಣೆ ಮತ್ತು ಸಂಪ್ರದಾಯಗಳನ್ನೇ ಕೇಂದ್ರವಾಗಿಸಿಕೊಂಡಿದೆ. ಸಂಪ್ರದಾಯ ಹಾಗೂ ಆಧುನಿಕತೆಯ ನಡುವಿನ ಸಂಘರ್ಷ, ಹಳೆಯ ತಲೆಮಾರಿನ ನಂಬಿಕೆಗಳು ಮತ್ತು ಹೊಸ ತಲೆಮಾರಿನ ತರ್ಕಬದ್ಧ ಚಿಂತನೆಗಳ ತಾಕರಾರು ನಾಟಕದಲ್ಲಿ ಪರಿಣಾಮಕಾರಿಯಾಗಿ ಮೂಡಿಬಂದಿವೆ. ಹಳ್ಳಿ ರಾಜಕೀಯ, ಅಧಿಕಾರದ ಹಪಾಹಪಿ ಹಾಗೂ ಅದರ ಸಾಮಾನ್ಯ ಜನರ ಬದುಕಿನ ಮೇಲಿನ ಪರಿಣಾಮವನ್ನು ಕಂಬಾರರು ಆಳವಾಗಿ ಚಿತ್ರಿಸಿದ್ದಾರೆ. ನಾಟಕದುದ್ದಕ್ಕೂ ಜಾನಪದ ಹಾಡುಗಳು, ಲಾವಣಿಗಳು ಹಾಗೂ ಗ್ರಾಮ್ಯ ಭಾಷೆಯ ಬಳಕೆ ಪ್ರೇಕ್ಷಕರನ್ನು ವಿಭಿನ್ನ ಲೋಕಕ್ಕೆ ಕರೆದೊಯ್ಯುತ್ತದೆ. ವಿಶೇಷವಾಗಿ ಬಿ. ಜಯಶ್ರೀಯವರ ಧ್ವನಿ ಮತ್ತು ಹಿನ್ನಲೆ ಸಂಗೀತ ಮನಮಿಡಿಯುವಂತಿತ್ತು. ಬಯಲಾಟ ಮತ್ತು ಸಣ್ಣಾಟಗಳ ತಂತ್ರಗಳನ್ನು ಬಳಸಿ, ಸೂತ್ರಧಾರರ ಪಾತ್ರಗಳ ಮೂಲಕ ಕಥೆಯನ್ನು ಮುನ್ನಡೆಸಿರುವ ನಿರ್ದೇಶನ ಶೈಲಿ ಗಮನ ಸೆಳೆದಿತು. ಒಟ್ಟಿನಲ್ಲಿ ‘ಕರಿಮಾಯಿ’ ನಾಟಕವು ಬದಲಾಗುತ್ತಿರುವ ಕಾಲಘಟ್ಟದಲ್ಲಿ ಮನುಷ್ಯ ಮೌಲ್ಯಗಳ ಕುಸಿತ ಮತ್ತು ಮೂಲ ಬೇರುಗಳಿಂದ ದೂರವಾಗುತ್ತಿರುವ ಸಾಮಾಜಿಕ ಸ್ಥಿತಿಗತಿಗಳನ್ನು ಪ್ರತಿಬಿಂಬಿಸುವ ಚಿಂತನಾತ್ಮಕ ಕೃತಿ ಎಂಬುದಾಗಿ ಪ್ರೇಕ್ಷಕರ ಅಭಿಪ್ರಾಯ ವ್ಯಕ್ತವಾಯಿತು.
ಕೆಂಪುಕೋಟೆ ಬಳಿ ಭಯೋತ್ಪಾದಕ ದಾಳಿಗೆ ಸಂಚು ಆರೋಪ; ಬಂಧಿತರಲ್ಲಿ ಆರು ಜನರು ಬಾಂಗ್ಲಾದೇಶಿಗಳು: ದಿಲ್ಲಿ ಪೋಲಿಸ್
ಹೊಸದಿಲ್ಲಿ: ಕೆಂಪುಕೋಟೆ ಬಳಿ ಲಷ್ಕರೆ ತಯ್ಯಿಬಾದಿಂದ ಸಂಭಾವ್ಯ ಭಯೋತ್ಪಾದಕ ದಾಳಿ ಕುರಿತು ಭದ್ರತಾ ಏಜೆನ್ಸಿಗಳ ಎಚ್ಚರಿಕೆ ಬಳಿಕ ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಿಂದ ಬಂಧಿತ ಎಂಟು ಜನರ ಪೈಕಿ ಆರು ಜನರು ಬಾಂಗ್ಲಾದೇಶಿಗಳಾಗಿದ್ದಾರೆ ಎಂದು ದಿಲ್ಲಿ ಪೋಲಿಸರು ರವಿವಾರ ತಿಳಿಸಿದ್ದಾರೆ. ಬಂಧಿತರು ಪಾಕಿಸ್ತಾನದ ಐಎಸ್ಐ ಮತ್ತು ಬಾಂಗ್ಲಾದೇಶದ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ಆರೋಪಿಸಲಾಗಿದೆ. AI ಇಂಪ್ಯಾಕ್ಟ್ ಶೃಂಗಸಭೆಯ ಸಂದರ್ಭದಲ್ಲಿ ಹಲವಾರು ಮೆಟ್ರೋ ನಿಲ್ದಾಣಗಳಲ್ಲಿ ‘ಫ್ರೀ ಕಾಶ್ಮೀರ’ ಪೋಸ್ಟರ್ ಗಳು ಕಾಣಿಸಿಕೊಂಡ ಬಳಿಕ ದಿಲ್ಲಿ ಪೋಲಿಸರು ಆರೋಪಿಗಳ ಬೆನ್ನು ಹತ್ತಿದ್ದರು. ಬಂಧಿತರ ಪೈಕಿ ಮುಹಮ್ಮದ್ ಶಾಬಾತ್, ಮಿಝ್ನೂರ್ ರಹಮಾನ್, ಉಮರ್, ಲಿಟನ್, ಶಾಹಿದ್ ಮತ್ತು ಉಜ್ಜಲ್ ಅವರು ತಮಿಳುನಾಡಿನ ತಿರುಪ್ಪುರದಲ್ಲಿನ ಗಾರ್ಮೆಂಟ್ ಫ್ಯಾಕ್ಟರಿಗಳಲ್ಲಿ ಕೆಲಸ ಮಾಡುತ್ತಿದ್ದರು. ದಿಲ್ಲಿ ಪೋಲಿಸ್ರ ವಿಶೇಷ ಘಟಕ ಮತ್ತು ತಮಿಳುನಾಡು ಪೋಲಿಸರು ಶನಿವಾರ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಅವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೂರು ಫ್ಯಾಕ್ಟರಿಗಳ ಮೇಲೆ ದಾಳಿ ನಡೆಸಲಾಗಿತ್ತು. ಉತ್ತುಕೂಲಿಯಲ್ಲಿ ಇಬ್ಬರು, ತಿರುಮುರುಗನ್ಪೂಂಡಿಯಲ್ಲಿ ಒಬ್ಬ ಮತ್ತು ಪಲ್ಲದಂನಿಂದ ಮೂವರನ್ನು ಬಂಧಿಸಲಾಗಿದೆ. ಅವರಲ್ಲಿ ಹೆಚ್ಚಿನವರು ವರ್ಷಗಳ ಹಿಂದೆ ಅಕ್ರಮವಾಗಿ ಪಶ್ಚಿಮ ಬಂಗಾಳ–ಬಾಂಗ್ಲಾದೇಶ ಗಡಿಯನ್ನು ದಾಟಿ ನಂತರ ತಮಿಳುನಾಡಿಗೆ ಸೇರಿಕೊಂಡಿದ್ದರು. ಅವರು ಹೊಂದಿದ್ದ ಆಧಾರ್ ಕಾರ್ಡ್ಗಳು ನಕಲಿ ಎನ್ನುವುದು ಪತ್ತೆಯಾಗಿದೆ ಎಂದು ಪೋಲಿಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ದಿಲ್ಲಿಯಲ್ಲಿ ಪೋಸ್ಟರ್ಗಳನ್ನು ಅಂಟಿಸಿದ ಬಳಿಕ ಆರೋಪಿಗಳು ತಮಿಳುನಾಡು ಮತ್ತು ಪಶ್ಚಿಮ ಬಂಗಾಳಕ್ಕೆ ಪರಾರಿಯಾಗಿದ್ದರು. ಬಂಧಿತ ಆರು ಜನರ ಮೊಬೈಲ್ ಗಳಲ್ಲಿದ್ದ ಸಂದೇಶಗಳ ಆಧಾರದಲ್ಲಿ ಇತರ ಇಬ್ಬರನ್ನು ಶನಿವಾರ ರಾತ್ರಿ ಪಶ್ಚಿಮ ಬಂಗಾಳದಿಂದ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆರೋಪಿಗಳು ಎನ್ ಕ್ರಿಪ್ಟೆಡ್ ಆ್ಯಪ್ ಗಳನ್ನು ಬಳಸಿಕೊಂಡು ಹಲವಾರು ರಾಜ್ಯಗಳಲ್ಲಿನ ಜನರೊಂದಿಗೆ ಸಂಪರ್ಕದಲ್ಲಿದ್ದರು ಎನ್ನುವುದು ಆರಂಭಿಕ ತನಿಖೆಯಲ್ಲಿ ಗೊತ್ತಾಗಿದೆ ಎಂದು ತಿಳಿಸಿದ್ದಾರೆ. ಎಲ್ಲ ಎಂಟು ಆರೋಪಿಗಳನ್ನು ದಿಲ್ಲಿಗೆ ಕರೆತಂದು ವಿಚಾರಣೆ ನಡೆಸಲಾಗುತ್ತಿದೆ. ಅವರು ಐಎಸ್ಐ ಮತ್ತು ಬಾಂಗ್ಲಾದೇಶದ ಕೆಲವು ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದ್ದರು ಎನ್ನುವುದನ್ನು ಪ್ರಾಥಮಿಕ ತನಿಖೆಗಳು ಸೂಚಿಸಿವೆ. ಅವರ ಬಳಿಯಿಂದ 16ಕ್ಕೂ ಹೆಚ್ಚು ಮೊಬೈಲ್ ಸಿಮ್ ಕಾರ್ಡ್ ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೋಲಿಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
8 ತಿಂಗಳು ಕಳೆದರೂ ಕೆಲ ಎಸ್ಸಿಎಸ್ಟಿ ಕುಟುಂಬಗಳಿಗೆ ಸಿಗದ ಕಾರ್ಡ್!
ಉಡುಪಿ ನಗರಸಭೆಯ ವಿಮಾ ಯೋಜನೆ ಅವ್ಯವಸ್ಥೆ ಬಗ್ಗೆ ಆಕ್ರೋಶ
Raichur | ಸಾರ್ವಜನಿಕ ಶಿಕ್ಷಣ ಉಳಿಸುವ ಜವಾಬ್ದಾರಿ ನಮ್ಮದು: ಸಂಸದ ಜಿ.ಕುಮಾರನಾಯಕ
ನಮ್ಮ ಶಾಲೆ ನಮ್ಮ ಹಕ್ಕು; ಶೈಕ್ಷಣಿಕ ಅವಲೋಕನ ಕಾರ್ಯಾಗಾರ
Karwar Super Specialty Hospital: ಮುಂದಿನ ಆಯವ್ಯಯದಲ್ಲಿ ಕಾರವಾರದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಂಜೂರು ಮಾಡುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಉತ್ತರ ಕನ್ನಡ ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಕಾರವಾರ ಲೋಕೋಪಯೋಗಿ ಇಲಾಖೆ ಆಯೋಜಿಸಲಾಗಿದ್ದ ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಆವರಣದಲ್ಲಿ ನಿರ್ಮಿಸಿರುವ 450 ಹಾಸಿಗೆಗಳ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ
ಲೋಕಾಯುಕ್ತದಂತಹ ಸಾಂವಿಧಾನಿಕ ಸಂಸ್ಥೆಗಳ ವಿಚಾರದಲ್ಲಿ ಸರ್ಕಾರ ಹಸ್ತಕ್ಷೇಪ ಮಾಡುವುದಿಲ್ಲ: ಡಿ.ಕೆ.ಶಿವಕುಮಾರ್
ಕಾರವಾರದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಕಟ್ಟಡ ಉದ್ಘಾಟನಾ ಸಮಾರಂಭ
ಜೂನ್ ಒಳಗಡೆ ಸ್ಥಳೀಯ ಸಂಸ್ಥೆಗಳ ಚುನಾವಣೆ : ಸಿಎಂ ಸಿದ್ದರಾಮಯ್ಯ
ಮಂಜಗುಣಿ - ಗಂಗಾವಳಿ ಸೇತುವೆ ಲೋಕಾರ್ಪಣೆ
ಸಿರವಾರ | ಕನ್ನಡ ನಾಡಿಗೆ ಹೊಸಮನಿ ಪ್ರಕಾಶನ ಸಂಸ್ಥೆಯ ಕೊಡುಗೆ ಅಪಾರ: ವಿರೂಪಾಕ್ಷಿ
ʼಹೊಸಮನಿ ಬಯಲಾಟʼ ಪ್ರಶಸ್ತಿ ಪ್ರಧಾನ ಸಮಾರಂಭ
ಹಿಂದೂ ಕಾರ್ಯಕರ್ತರನ್ನು ಬಂಧಿಸಲು ಹೊರಟರೆ ನಾವು ಸುಮ್ಮನಿರಲ್ಲ: ಶ್ರೀರಾಮುಲು
ಶಿವಾಜಿ ಜಯಂತಿ ಮೆರವಣಿಗೆಯಲ್ಲಿನ ಕಲ್ಲು ತೂರಾಟ ಘಟನೆಗೆ ಸಂಬಂಧಿಸಿದಂತೆ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳದೇ ಹಿಂದೂ ಕಾರ್ಯಕರ್ತರ ಮೇಲೆ ಕ್ರಮ ಕೈಗೊಳ್ಳಲು ಮುಂದಾಗಿರುವುದನ್ನು ಮಾಜಿ ಸಚಿವ ಬಿ.ಶ್ರೀರಾಮುಲು ಖಂಡಿಸಿದ್ದಾರೆ. ಪೊಲೀಸರು ಈ ರೀತಿ ಮಾಡುವುದು ಸರಿಯಲ್ಲ. ಬಿಜೆಪಿ ಪಕ್ಷ ಕಾಂಗ್ರೆಸ್ ಸರಕಾರದ ವಿರುದ್ಧ ರಾಜ್ಯ ಮಟ್ಟದಲ್ಲಿ ಹೋರಾಟ ಮಾಡಬೇಕಾಗುತ್ತದೆ ಎಂದು ಹೇಳಿದರು.
ಅಂತಿಮ ಲೀಗ್ ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ ಸೋಲನುಭವಿಸಿದ್ದ ಶ್ರೀಲಂಕಾ ಇದೀಗ ಸೂಪರ್ 8 ಹಂತದಲ್ಲಿ ಇಂಗ್ಲೆಂಡ್ ವಿರುದ್ಧ 51 ರನ್ ಗಳಿಂದ ಮುಗ್ಗರಿಸಿದೆ. ನಿಧಾನಗತಿಯ ಪಿಚ್ ನಲ್ಲಿ ಎಲ್ಲಾ ತಂಡಗಳನ್ನು ಒದ್ದಾಡುವಂತೆ ಮಾಡಿದ್ದ ಲಂಕನ್ನರು ಇದೀಗ ತಮ್ಮ ಬಲೆಯಲ್ಲಿ ತಾವೇ ಬಿದ್ದಿದ್ದಾರೆ. ಇದೀಗ ಸೆಮಿಫೈನಲ್ ಹಂತಕ್ಕೇರಬೇಕಾದರೆ ದಸುನ್ ಶನಕ ಬಳಕ ಗುಂಪಿನಲ್ಲಿರುವ ಇನ್ನೆರಡು ತಂಡಗಳಾದ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ಅನ್ನು ಸೋಲಿಸಲೇಬೇಕಾಗಿದೆ. ಇನ್ನು ಒಂದು ಪಂದ್ಯ ಸೋತರೆ ಅಥವಾ ಮಳೆಯಿಂದಾಗಿ ರದ್ದಾದಲ್ಲೂ ಶ್ರೀಲಂಕಾ ಟೂರ್ನಿಯಿಂದ ಖಚಿತ ಎಂಬಂತಾಗಿದೆ. ಪೆಲ್ಲೆಕೆಲೆಯಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡ ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ ಗೆ 146 ರನ್ ಪೇರಿಸಿತು. ಇದಕ್ಕುತ್ತರವಾಗಿ ಶ್ರೀಲಂಕಾ ತಂಡ 16.4 ಓವರ್ ಗಳಲ್ಲಿ 95 ರನ್ ಗಳಿಸುವಷ್ಟರಲ್ಲಿ ಸರ್ವಪತನ ಕಂಡಿತು. () ದಸುನ್ ಶನಕ ಏಕಾಂಗಿ ಹೋರಾಟ ಶ್ರೀಲಂಕಾ ಪರ ಮಧ್ಯಮ ಕ್ರಮಾಂಕದಲ್ಲಿ ನಾಯಕ ದಸುನ್ ಶನುಕ ಅವರನ್ನು ಹೊರತುಪಡಿಸಿದರೆ ಬೇರಾವ ಬ್ಯಾಟರ್ ಸಹ ಇಂಗ್ಲೆಂಡ್ ದಾಳಿಗೆ ಪ್ರತಿರೋಧ ತೋರಲಿಲ್ಲ. ಶನಕ ಅರು 24 ಎಸೆತಗಳಿಂದ 1 ಬೌಂಡರಿ ಮತ್ತು 2 ಸಿಕ್ಸರ್ ಗಳಿದ್ದ 30 ರನ್ ಗಳನ್ನು ಗಳಿಸಿದರು. ಉತ್ತಮ ಲಯದಲ್ಲಿದ್ದಂತೆ ಕಂಡುಬಂದ ಅವರು ಆದಿಲ್ ರಶೀದ್ ಅವರ ಎಸೆತವನ್ನು ಸಿಕ್ಸರ್ ಗೆತ್ತುವ ಪ್ರಯತ್ನದಲ್ಲಿ ಎಡವಿ ಬಂಟನ್ ಗೆ ಕ್ಯಾಚ್ ನೀಡಿದರು. ಅಲ್ಲಿಗೆ ಲಂಕಾದ ಹೋರಾಟ ಮುಗಿಯುತು. ಇಂಗ್ಲೆಂಡ್ ಪರ ವಿಲ್ ಜಾಕ್ಸ್ 3, ಜೋಫ್ರಾ ಆರ್ಚರ್, ಲಿಯಾಮ್ ಡಾಸನ್, ಆದಿಲ್ ರಶೀದ್ ತಲಾ 2 ವಿಕೆಟ್ ಪಡೆದರು. ಉಳಿದೊಂದು ವಿಕೆಟ್ ಜಾಮಿ ಓವರ್ಟನ್ ಪಡೆದರು. ಇದಕ್ಕೂ ಮೊದಲು ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಶ್ರೀಲಂಕಾ ತಂಡದ ಬೌಲರ್ ಗಳು ಇಂಗ್ಲೆಂಡ್ ಅನ್ನು ಸಾಧಾರಣ ಮೊತ್ತಕ್ಕೆ ಅದುಮಿತು. ಆರಂಭಿಕ ಫಿಲ್ ಸಾಲ್ಟ್(40 ಎಸೆತದಲ್ಲಿ 62) ಅವರನ್ನು ಹೊರತುಪಡಿಸಿದರೆ ಬೇರಾವ ಬ್ಯಾಟರ್ ಸಹ ಹೆಚ್ಚು ಹೊತ್ತು ಕ್ರೀಸಿನಲ್ಲಿ ಕಳೆಯಲು ಸಾಧ್ಯವಾಗಲಿಲ್ಲ. ಅಂತಿಮ ಓವರ್ ಗಳಲ್ಲಿ ವಿಲ್ ಜಾಕ್ಸ್ ಅವರು ಕೆಲ ಬೌಂಡರಿಗಳನ್ನು ಹೊಡೆದರಷ್ಟೇ. ಶ್ರೀಲಂಕಾ ಪರ ಧುನಿತ್ ವೆಲ್ಲಲಗೆ 3, ಮಹೀಶ್ ತೀಕ್ಷಣ ಮತ್ತು ದಿಲ್ಶಾನ್ ಮದುಶಂಕ ಅವರು ತಲಾ 2 ವಿಕೆಟ್ ಕಬಳಿಸಿದರು. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಸರ್ವಾಂಗೀಣ ಪ್ರದರ್ಶನ ತೋರಿದ ಇಂಗ್ಲೆಂಡ್ ನ ವಿಲ್ ಜಾಕ್ಸ್ ಅವರು ಅರ್ಹವಾಗಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಸಂಕ್ಷಿಪ್ತ ಸ್ಕೋರ್ ಇಂಗ್ಲೆಂಡ್ 20 ಓವರ್ ಗಳಲ್ಲಿ 146/9, ಫಿಲ್ ಸಾಲ್ಟ್ 62(40), ವಿಲ್ ಜಾಕ್ಸ್ 21(14), ಹ್ಯಾರಿ ಬ್ರೂಕ್ 14(7), ದುನಿತ್ ವೆಲ್ಲಲಗೆ 26ಕ್ಕೆ3, ದಿಲ್ಶಾನ್ ಮಧುಶಂಕ 25ಕ್ಕೆ 2, ಮಹೀಶ್ ತೀಕ್ಣಣ ಶ್ರೀಲಂಕಾ 16.4 ಓವರ್ ಗಳಲ್ಲಿ 95/10, ದಶುನ್ ಶನಕ 30(24), ಕಮಿಂಡು ಮೆಂಡಿಸ್ 13(11), ಮಹೀಶ್ ತೀಕ್ಣಣ 10(8), ವಿಲ್ ಜಾಕ್ಸ್ 22ಕ್ಕೆ 3, ಜೋಫ್ರಾ ಆರ್ಚರ್ 20ಕ್ಕೆ 2, ಲಿಯಾಮ್ ಡಾಸನ್ 27ಕ್ಕೆ 2, ಆದಿಲ್ ರಶೀದ್ 13ಕ್ಕೆ 2.
ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಯ ಉಚಿತ ಶಿಕ್ಷಣ ಸೌಲಭ್ಯದ ಪ್ರವೇಶ ಪರೀಕ್ಷೆ
ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಂಗ ಸಂಸ್ಥೆ, ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಯ 2026-27ನೇ ಸಾಲಿನ, 6ರಿಂದ 9ನೇ ತರಗತಿಯ ಸಂಪೂರ್ಣ ಉಚಿತ ಶಿಕ್ಷಣ ಸೌಲಭ್ಯಕ್ಕೆ ನಡೆಸುವ ಪ್ರವೇಶ ಪರೀಕ್ಷೆಯಲ್ಲಿ 20,146 ವಿದ್ಯಾರ್ಥಿಗಳು ಮೂಡುಬಿದಿರೆಯ ವಿದ್ಯಾಗಿರಿ ಹಾಗೂ ಪುತ್ತಿಗೆ ಆವರಣದಲ್ಲಿ ರವಿವಾರ ಹಾಜರಾದರು. ರಾಜ್ಯಾದ್ಯಂತ ಹಾಗೂ ಕರ್ನಾಟಕದ ಗಡಿ ಪ್ರದೇಶ ಕೇರಳದ ಕಾಸರಗೋಡು, ಮಹಾರಾಷ್ಟ್ರದ ಗಡಿ ಪ್ರದೇಶವೂ ಸೇರಿದಂತೆ 32 ಶೈಕ್ಷಣಿಕ ಜಿಲ್ಲೆಗಳ 23,141 ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದು, 20146 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾದರು. 6ನೇ ತರಗತಿಗೆ 16,014, 7ನೇ ತರಗತಿಗೆ 1,374, 8ನೇ ತರಗತಿಗೆ 1,983 ಹಾಗೂ 9ನೇ ತರಗತಿಗೆ 775 ವಿದ್ಯಾರ್ಥಿಗಳು ಪ್ರವೇಶ ಪರೀಕ್ಷೆ ಬರೆದರು. ಬೆಳಗಾವಿ ಜಿಲ್ಲೆಯಿಂದ 7353 ವಿದ್ಯಾರ್ಥಿಗಳು, ಬಾಗಲಕೋಟೆ ಜಿಲ್ಲೆಯಿಂದ 4080 ಹಾಗೂ ವಿಜಯಪುರದಿಂದ ಕ್ರಮವಾಗಿ 2961 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾದರು. ಪರೀಕ್ಷಾ ಅರ್ಜಿ ಸಲ್ಲಿಕಾ ವ್ಯವಸ್ಥೆಯು ಕಳೆದ 3 ವರ್ಷದಿಂದ ಪ್ರತಿಭಾನ್ವಿತ ಮಕ್ಕಳನ್ನು ತಲುಪುವ ನಿಟ್ಟಿನಲ್ಲಿ ಆನ್ಲೈನ್ ನಲ್ಲಿ ಅರ್ಜಿ ನಮೂನೆಯನ್ನು ಕ್ಯೂಆರ್ ಕೋಡ್ ಸಹಿತವಾಗಿ ವ್ಯವಸ್ಥೆಗೊಳಿಸಿಲಾಗಿತ್ತು. ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳನ್ನು ಅರ್ಜಿ ಸಲ್ಲಿಸಿದ್ದರಿಂದ 5 ಕೇಂದ್ರಗಳಲ್ಲಿ ಪರೀಕ್ಷಾ ಕೊಠಡಿ ವ್ಯವಸ್ಥೆ ಮಾಡಲಾಗಿತ್ತು. ಆಳ್ವಾಸ್ ವಿದ್ಯಾಗಿರಿ ಹಾಗೂ ಪುತ್ತಿಗೆ ಕ್ಯಾಂಪಸ್ನ ಯಶೋಕಿರಣ ಬ್ಲಾಕ್, ಜಗನ್ನೋಹನ ಬ್ಲಾಕ್, ಕಾಮರ್ಸ್ ಬ್ಲಾಕ್, ಆಳ್ವಾಸ್ ಪದವಿ ಕಾಲೇಜು ಮತ್ತು ಆಳ್ವಾಸ್ ಆಂಗ್ಲ ಮಾಧ್ಯಮ ಶಾಲೆ ಪ್ರವೇಶ ಪರೀಕ್ಷೆ ನಡೆಸಲಾಗಿದೆ. 6 ಮತ್ತು 9ನೇ ತರಗತಿಯವರೆಗೆ ಎಲ್ಲಾ ಪಠ್ಯ ವಿಷಯಗಳು ಸೇರಿದಂತೆ ತಾರ್ಕಿಕ ಸಾಮರ್ಥ ಆಧಾರಿತವಾಗಿ 150 ಅಂಕಗಳಿಗೆ 2.30 ಗಂಟೆಗಳ ಕಾಲ ಪರೀಕ್ಷೆ ನಡೆದಿದೆ. ಪ್ರಾಥಮಿಕ ಹಂತದಲ್ಲಿ ಒಎಮ್ ಆರ್ ಆಧಾರಿತ ಬಹು ಆಯ್ಕೆ ಮಾದರಿ ಪ್ರಶ್ನೆ ಪತ್ರಿಕೆಯನ್ನು ಸ್ಪರ್ಧಾತ್ಮಕ ಪರೀಕ್ಷೆ ಯಂತೆ ಪ್ರಶ್ನೆ ಪ್ರತ್ರಿಕೆಗಳನ್ನು ಎ,ಬಿ,ಸಿ,ಡಿ,ಇ ಸಿರೀಸ್ ನಲ್ಲಿ ನೀಡಲಾಗಿದೆ. ವಿದ್ಯಾರ್ಥಿಯ ಚಿಂತನಾ ಸಾಮರ್ಥವನ್ನು ಗುರುತಿಸಿದ ನಂತರ, ಸಂಸ್ಥೆ ನಿಗದಿ ಪಡಿಸಿದ ಮಾನದಂಡ ಗಳಿಸಿದವರು ಮುಖ್ಯ ಹಂತಕ್ಕೆ ಆಯ್ಕೆಯಾಗಲಿದ್ದಾರೆ. ಮುಖ್ಯ ಹಂತದಲ್ಲಿ ಬರವಣಿಗೆ ಆಧಾರಿತ ಪರೀಕ್ಷೆ ಇದ್ದು ವಿದ್ಯಾರ್ಥಿಗಳ ಕಲಿಕಾ ಸಾಮರ್ಥವನ್ನು ಮತ್ತು ಕೌಶಲ್ಯ ಗಳನ್ನು ಗಮನಿಸಿ ಸಂದರ್ಶನ ಹಂತಕ್ಕೆ ಆಯ್ಕೆ ಮಾಡಲಾಗುತ್ತದೆ. ಸಂದರ್ಶನ ಹಂತದಲ್ಲಿ ಶಿಕ್ಷಣ ತಜ್ಞರು ಮತ್ತು ವಿಷಯ ತಜ್ಞರಿದ್ದ ತಂಡವನ್ನು ರಚಿಸಲಾಗಿದ್ದು ಖುದ್ದು ತಂಡದ ಮುಖ್ಯಸ್ಥರಾಗಿ ಸಂಸ್ಥೆಯ ಅಧ್ಯಕ್ಷರಾದ ಡಾ.ಎಂ. ಮೋಹನ ಆಳ್ವರವರು ಸಂದರ್ಶನವನ್ನು ನಡೆಸಿ ವಿದ್ಯಾರ್ಥಿಗಳ ಕಲಿಕಾ ಸಾಮರ್ಥ, ಭಾಷಾ ಸಾಮರ್ಥ ಮತ್ತು ಆಳ್ವಾಸ್ನ ಕಲಿಕಾ ವ್ಯವಸ್ಥೆಗಳಿಗೆ ಪೂರಕವಾಗಿರುವವರನ್ನು, ಜೊತೆಗೆ ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿರುವ ಪಾಲಕರ ಮಕ್ಕಳಿಗೆ, ತಂದೆ ತಾಯಿಯವರನ್ನು ಕಳೆದುಕೊಂಡ ಮಕ್ಕಳಿಗೆ ಸಮಾಜದ ಅತ್ಯಂತ ಹಿಂದುಳಿದ ವರ್ಗಗಳಿಗೆ ವಿಶೇಷ ಆದ್ಯತೆಯನ್ನು ನೀಡಿ ದಾಖಲಾತಿ ವ್ಯವಸ್ಥೆಯನ್ನು ಮಾಡಲಾಗುತ್ತದೆ. ಈಗಾಗಲೇ ಕ್ರೀಡಾ ಹಾಗೂ ಸಾಂಸ್ಕೃತಿಕ ವಿಭಾಗದ ಪ್ರತಿಭಾನ್ವಿತ ವಿದ್ಯಾರ್ಥಿಗಳ ಆಯ್ಕೆ ಪ್ರಕ್ರಿಯೆಗಾಗಿ ಪತ್ರಿಕಾ ಪ್ರಕಟಣೆ ನೀಡಿದ್ದು, ಕ್ರೀಡಾ ಮತ್ತು ಸಾಂಸ್ಕೃತಿಕ ವಿಭಾಗದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಕನ್ನಡ ಮಾಧ್ಯಮ ಶಾಲೆಯಲ್ಲಿ ವಿಶೇಷ ಆದ್ಯತೆಯನ್ನು ನೀಡಿ ಪ್ರತ್ಯೇಕ ಆಯ್ಕೆ ಶಿಬಿರಗಳನ್ನು ನಡೆಸಿ ಆಯ್ಕೆ ಮಾಡಲಾಗುತ್ತದೆ. 35,000ಕ್ಕೂ ಅಧಿಕ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರು ಆಗಮಿಸಿದ್ದರೂ ಬಹಳ ಅಚ್ಚುಕಟ್ಟಿನ ವ್ಯವಸ್ಥೆಯೊಂದಿಗೆ ಪರೀಕ್ಷೆ ನಡೆಸಲಾಯಿತು. ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳಿಗೆ ಆಳ್ವಾಸ್ ಸಂಸ್ಥೆಯ ವತಿಯಿಂದ, ವ್ಯವಸ್ಥಿತ ಶೌಚಾಲಯದೊಂದಿಗೆ ಉಚಿತ ತಂಗುವ ವ್ಯವಸ್ಥೆ ಕಲ್ಪಿಸಲಾಗಿತ್ತು. ಕನ್ನಡ ಮಾಧ್ಯಮದ ಉಚಿತ ಶಿಕ್ಷಣ ಸೌಲಭ್ಯದಡಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಶಿಕ್ಷಣ ಶುಲ್ಕ, ವಿದ್ಯಾರ್ಥಿನಿಲಯ, ಪಠ್ಯಪುಸ್ತಕ ಸಂಪೂರ್ಣ ಉಚಿತವಾಗಿ ನೀಡಲಾಗುತ್ತದೆ. ಶಾಲಾ ಶಿಕ್ಷಣದೊಂದಿಗೆ ವಿದ್ಯಾರ್ಥಿಗಳಿಗೆ ಬಾಲ್ಯದಲ್ಲಿಯೇ ಸ್ಪರ್ಧಾತ್ಮಕವಾದ ಬುದ್ಧಿಮತ್ತೆ ಜತೆಗೆ ಸುಸಂಸ್ಕೃತವಾದ ಮನಸ್ಸನ್ನು ಕಟ್ಟುವ ವಿವಿಧ ಚಟುವಟಿಕೆಗಳನ್ನು ಕಲಿಸಲಾ ಗುತ್ತದೆ. ಸದ್ಯ ಇಡೀ ಕನ್ನಡ ಮಾಧ್ಯಮ ಶಾಲೆಯಲ್ಲಿ 6ರಿಂದ 10ನೇ ತರಗತಿಯವರೆಗೆ 750ಕ್ಕೂ ಅಧಿಕ ಮಕ್ಕಳಿದ್ದು, ಉಚಿತ ವಸತಿ, ಊಟ ವ್ಯವಸ್ಥೆಯಲ್ಲಿ ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ. ಈವರೆಗೆ 10ನೇ ತರಗತಿಯಿಂದ 1862 ವಿದ್ಯಾರ್ಥಿಗಳು ಮುಗಿಸಿದ್ದು ಸಮಾಜದಲ್ಲಿ ವಿವಿಧ ಕ್ಷೇತ್ರಗಳಲ್ಲಿ, ವೈದ್ಯಕೀಯ, ಇಂಜಿನಿಯರಿಂಗ್, ಕಾನೂನು ಇನ್ನಿತರ ಪದವಿಗಳೊಂದಿಗೆ ಸಾಧಕ ವಿದ್ಯಾರ್ಥಿಗಳಾಗಿ ಮೂಡಿ ಬಂದಿದ್ದಾರೆ. ವಾರ್ಷಿಕ ಓರ್ವ ವಿದ್ಯಾರ್ಥಿಗೆ ಸಂಸ್ಥೆಯ ವತಿಯಿಂದ 1 ಲಕ್ಷದ 30 ಸಾವಿರ ವ್ಯಯಿಸಲಾಗುತ್ತಿದ್ದು, ಒಟ್ಟು 10 ಕೋಟಿಗೂ ಮಿಕ್ಕು ಹಣವನ್ನು ಸಂಸ್ಥೆ ವಾರ್ಷಿಕವಾಗಿ ವ್ಯಯಿಸುತ್ತಿದೆ.
ಕುಂದಾಪುರ, ಫೆ.22: ದೇವಲ್ಕುಂದ ಗ್ರಾಮದ ಬಗ್ವಾಡಿ ಚಕ್ರ ನದಿಯ ಬದಿ ಹಾಡಿಯಲ್ಲಿ ಫೆ.21ರಂದು ಬೆಳಗ್ಗೆ ಜುಗಾರಿ ಆಡುತ್ತಿದ್ದ ನಾಲ್ಕು ಮಂದಿಯನ್ನು ಕುಂದಾಪುರ ಗ್ರಾಮಾಂತರ ಪೊಲೀಸರು ವಶಕ್ಕೆ ಪಡೆದು ಕೊಂಡಿದ್ದಾರೆ. ಗುಡುಗುಡಿ(ಗರಗರ ಮಂಡಲ) ಜುಗಾರಿ ಆಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು, ನೂಜಾಡಿಯ ಹರೀಶ್(41), ರಾಘವೇಂದ್ರ(37), ಬಗ್ವಾಡಿಯ ಗಣೇಶ ಎನ್.(31), ದೇವಲ್ಕುಂದ ಗ್ರಾಮದ ಪ್ರವೀಣ್ ಎಂ.(32) ಎಂಬವರನ್ನು 7,630ರೂ. ನಗದು ಸಹಿತ ವಶಕ್ಕೆ ಪಡೆದುಕೊಂಡಿದ್ದಾರೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Yadgiri | ಕುರಿ ಕಳ್ಳತನಕ್ಕೆ ಯತ್ನ: ಕಳ್ಳನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಗ್ರಾಮಸ್ಥರು
ಯಾದಗಿರಿ : ಜಿಲ್ಲೆಯ ಗುರುಮಠಕಲ್ ತಾಲ್ಲೂಕಿನ ಚಂಡರಕ್ಕಿ ಗ್ರಾಮದಲ್ಲಿ ಕುರಿ ಕಳ್ಳತನಕ್ಕೆ ಯತ್ನಿಸುತ್ತಿದ್ದ ವ್ಯಕ್ತಿಯನ್ನು ಗ್ರಾಮಸ್ಥರು ರೆಡ್ ಹ್ಯಾಂಡ್ ಆಗಿ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ. ರಾತ್ರಿ ವೇಳೆ ಕುರಿ ಕಳ್ಳತನ ಮಾಡಲು ಬಂದಿದ್ದ ಶಂಕಿತ ವ್ಯಕ್ತಿ ಗ್ರಾಮಸ್ಥರ ಅನುಮಾನಕ್ಕೆ ಸಿಲುಕಿ ಸಿಕ್ಕಿಬಿದ್ದಿದ್ದಾನೆ. ತಕ್ಷಣವೇ ಕೆಲವರು ಆತನನ್ನು ಹಿಡಿದು ವಿದ್ಯುತ್ ಕಂಬಕ್ಕೆ ಕಟ್ಟಿ ಹೊಡೆದಿರುವುದಾಗಿ ತಿಳಿದುಬಂದಿದೆ. ಮಾಹಿತಿ ತಿಳಿದ ಬಳಿಕ ಗುರುಮಠಕಲ್ ಪೊಲೀಸ್ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಶಂಕಿತನನ್ನು ವಶಕ್ಕೆ ಪಡೆದು ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಗುರುಮಠಕಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕುರಿ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಾಗಿತ್ತು. ಈ ಹಿನ್ನೆಲೆ ಗ್ರಾಮಸ್ಥರು ಶಂಕಿತನನ್ನು ಸ್ವತಃ ಹಿಡಿದು ಪೊಲೀಸರಿಗೆ ಒಪ್ಪಿಸಿರುವುದು ಗಮನಾರ್ಹವಾಗಿದೆ. ಈ ಘಟನೆ ಸಂಬಂಧ ಗುರುಮಠಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಮಾಸೆಬೈಲು, ಫೆ.22: ಹೊಸಂಗಡಿ ಗ್ರಾಮದ ಭಾಗೀಮನೆ ಎಂಬಲ್ಲಿ ತೊಂಬಟ್ಟು ವಾರಾಹಿ ಹೊಳೆಯಲ್ಲಿ ಮುಳುಗಿ ತೀವ್ರವಾಗಿ ಅಸ್ವಸ್ಥಗೊಂಡಿದ್ದ ಯುವಕನೋರ್ವ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಬಗ್ಗೆ ವರದಿಯಾಗಿದೆ. ಮೃತರನ್ನು ಉಳ್ಳೂರು-74 ಗ್ರಾಮದ ಭುಜಂಗ ಶೆಟ್ಟಿ ಬಡ್ಡ(65) ಎಂಬವರ ಮಗ ಸುಧೀರ(26) ಎಂದು ಗುರುತಿಸಲಾ ಗಿದೆ. ಇವರು ಫೆ.15ರಂದು ತೊಂಬಟ್ಟು ವಾರಾಹಿ ಹೊಳೆಗೆ ಈಜಾಡಲು ಹೋಗಿದ್ದು ಈಜು ಸರಿಯಾಗಿ ಬಾರದೇ ಹೊಳೆಯ ನೀರಿನಲ್ಲಿ ಆಕಸ್ಮಿಕವಾಗಿ ಮುಳಗಿ ದ್ದರೆನ್ನಲಾಗಿದೆ. ಕೂಡಲೇ ಇವರನ್ನು ರಕ್ಷಿಸಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಿದ್ದು, ತೀವ್ರವಾಗಿ ಅಸ್ವಸ್ಥಗೊಂಡಿದ್ದ ಸುಧೀರ್ ಫೆ.21ರಂದು ಮಧ್ಯಾಹ್ನ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರೆಂದು ತಿಳಿದುಬಂದಿದೆ. ಈ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳ್ಳಿತೆರೆಯಿಂದ ಮುಖ್ಯಮಂತ್ರಿ ಕುರ್ಚಿವರೆಗೆ: ತಮಿಳುನಾಡಿನ ರಾಜಕೀಯದಲ್ಲಿ ಸಿನಿಮಾರಂಗದ ಪ್ರಭಾವ
ತಮಿಳು ಸಿನಿಮಾ ಮಂದಿರಗಳಲ್ಲಿ ಮೊಳಗಿದ ಚಪ್ಪಾಳೆಗಳು ಕೇವಲ ತೆರೆಗೆ ಸೀಮಿತವಾಗಿರಲಿಲ್ಲ. ಅವು ಮತಪೆಟ್ಟಿಗೆಗಳವರೆಗೆ, ವಿಧಾನಸಭೆಗಳವರೆಗೆ ಮತ್ತು ಚೆನ್ನೈನ ಫೋರ್ಟ್ ಸೈಂಟ್ ಜಾರ್ಜ್ನ ಮುಖ್ಯಮಂತ್ರಿಗಳ ಕಾರ್ಯಾಲಯದವರೆಗೂ ಪ್ರತಿಧ್ವನಿಸಿವೆ. ಭಾರತದ ಅನೇಕ ರಾಜ್ಯಗಳಲ್ಲಿ ಸಿನಿಮಾ ತಾರೆಗಳು ರಾಜಕೀಯಕ್ಕೆ ಕಾಲಿಡುತ್ತಾರೆ. ಆದರೆ ತಮಿಳುನಾಡಿನಲ್ಲಿ ಸಿನಿಮಾ ತಾರೆಯೇ ಆಡಳಿತಗಾರರಾಗಿ ಹೊರಹೊಮ್ಮಿದ ಉದಾಹರಣೆಗಳು ಸಾಕಷ್ಟಿವೆ. ಈ ಪಯಣ ಆಕಸ್ಮಿಕವಾಗಿಯೂ ಅಲ್ಲ, ತಕ್ಷಣವೂ ಅಲ್ಲ, ಶತಮಾನಕ್ಕಿಂತಲೂ
ಕೇರಳದಲ್ಲಿ ಎಸ್ಐಆರ್ ಅಂತಿಮ ಪಟ್ಟಿ ಬಿಡುಗಡೆ: 9 ಲಕ್ಷ ಮಂದಿ ಹೊರಗೆ
ಕೇರಳದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಅಂತಿಮಗೊಂಡಿದ್ದು, ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ. ಅಂತಿಮ ಪಟ್ಟಿಯಿಂದ ಸುಮಾರು ಒಂಬತ್ತು ಲಕ್ಷ ಜನರನ್ನು ಹೊರಗಿಡಲಾಗಿದೆ. 2.69 ಕೋಟಿ ಮಂದಿಯ ಹೆಸರು ಉಳಿದುಕೊಂಡಿದೆ. ಇದೇ ಅಂತಿಮವಲ್ಲ. ಜನರು ತಮ್ಮ ಹೆಸರುಗಳನ್ನು ಪಟ್ಟಿಗೆ ಸೇರಿಸಲು ಇನ್ನೂ ಅವಕಾಶವಿದೆ.
T20 World Cup- ಮೋದಿ ಮನ್ ಕೀ ಬಾತ್ ನಲ್ಲಿ ವಿವಿಧ ತಂಡಗಳಲ್ಲಿರುವ ಭಾರತ ಮೂಲದ ಕ್ರಿಕೆಟಿಗರ ಪ್ರಶಂಸೆ! ಏನು ಕಾರಣ?
ಇದೀಗ ಭಾರತ ಮತ್ತು ಶ್ರೀಲಂಕಾದಲ್ಲಿ ನಡೆಯುತ್ತಿರುವ ಐಸಿಸಿ ಟಿ20 ವಿಶ್ವಕಪ್ ನಲ್ಲಿ ಆಡುತ್ತಿರುವ ತಂಡಗಳನ್ನು ಗಮನಿಸಿದಲ್ಲಿ ಬಹುತೇಕ ತಂಡಗಳಲ್ಲಿ ಭಾರತ ಮೂಲದ ಆಟಗಾರರಿರುವುದು ಗಮನಕ್ಕೆ ಬಾರದೇ ಇರದು. ಅಮೆರಿಕ, ಕೆನಡಾ, ಒಮಾನ್, ನಮೀಬಿಯ, ಯುಎಇ ತಂಡಗಳಲ್ಲಂತೂ ಬಹುತೇಕ ಭಾರತೀಯ ಆಟಗಾರರದ್ದೇ ಕಲರವ. ಈ ಕಲರವ ಇದೀಗ ಪ್ರಧಾನಿ ಮೋದಿ ಅವರ ಮನ್ ಕೀ ಬಾತ್ ನಲ್ಲೂ ಪ್ರತಿಧ್ವನಿಸಿದೆ. ವಿಶ್ವಕಪ್ ನಲ್ಲಿ ಆಡುತ್ತಿರುವ ವಿವಿಧ ತಂಡಗಳಲ್ಲಿರುವ ಭಾರತ ಮೂಲದ ಆಟಗಾರರ ದೊಡ್ಡ ಪಟ್ಟಿಯನ್ನೇ ನೀಡಿದ್ದಾರೆ ಪ್ರಧಾನಿ ಮೋದಿ! ಜೊತೆಗೆ ಈ ಸಕಾರಾತ್ಮಕ ಬೆಳವಣಿಗೆಯ ವಿಶೇಷತೆಯೇನು ಎಂಬುದನ್ನೂ ವಿವರಿಸಿದ್ದಾರೆ.
ಟಾಸ್ಕ್ಪೋರ್ಸ್ ರಚನೆ ಪ್ರಸ್ತಾವಕ್ಕೆ ಕೇಂದ್ರದಿಂದ ತಕ್ಷಣ ಅನುಮೋದನೆ: ಸಂಸದ ಕೋಟ ಭರವಸೆ
ಚಿಕ್ಕಮಗಳೂರು ಕಾಡಾನೆ ದಾಳಿಗೆ ಮಹಿಳೆ ಮೃತ್ಯು ಪ್ರಕರಣ
ಪಿಎಂ ಕಿಸಾನ್ ಪ್ರೋತ್ಸಾಹಧನ ಪಡೆಯಲು ಕೇಂದ್ರದ ರೈತರ ಗುರುತಿನ ಸಂಖ್ಯೆ ಕಡ್ಡಾಯ
ಬೆಂಗಳೂರು: ಕೇಂದ್ರ ಸರಕಾರದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿದಿ ಯೋಜನೆಯಡಿಯಲ್ಲಿ 6 ಸಾವಿರ ರೂ.ಗಳ ಪ್ರೋತ್ಸಾಹಧನವನ್ನು ಪಡೆದುಕೊಳ್ಳಲು, ರಾಜ್ಯ ಸರಕಾರದ ಪ್ರೂಟ್ಸ್ ತಂತ್ರಾಂಶದ ಗುರುತಿನ ಸಂಖ್ಯೆಯಂತೆ ಕೇಂದ್ರ ಸರಕಾರದ ಅಗ್ರಿಸ್ಟ್ಯಾಕ್ ಯೋಜನೆ ಅಡಿ ಗುರುತಿನ ಸಂಖ್ಯೆ ಹೊಂದುವುದನ್ನು ಕಡ್ಡಾಯಗೊಳಿಸಿದೆ. ಈಗಾಗಲೇ ರಾಜ್ಯ ಸರಕಾರದ ಪ್ರೂಟ್ಸ್ ತಂತ್ರಾಂಶದಿಂದ ದತ್ತಾಂಶವನ್ನು ಹಂಚಿಕೆ ಮಾಡಿ ಕೆಲವು ಫಲಾನುಭವಿಗಳಿಗೆ ಕೇಂದ್ರ ಸರಕಾರದ ರೈತರ ಗುರುತಿನ ಸಂಖ್ಯೆಯನ್ನು ಸೃಜಿಸಲಾಗಿರುತ್ತದೆ. ಆದರೆ ಹೆಚ್ಚಿನ ಪಿಎಂ ಕಿಸಾನ್ ಫಲಾನುಭವಿಗಳಿಗೆ ಕೇಂದ್ರದ ರೈತರ ಗುರುತಿನ ಸಂಖ್ಯೆಯನ್ನು ಸೃಜನೆ ಮಾಡಬೇಕಾಗಿರುತ್ತದೆ. ಇದಕ್ಕಾಗಿ ರೈತರ ಇ-ಕೆವೈಸಿ ಎಲೆಕ್ಟ್ರಾನಿಕ್ ಒಪ್ಪಿಗೆ ಹಾಗೂ ಒಟಿಪಿ ಆಧಾರಿತ ಮೊಬೈಲ್ ಸಂಖ್ಯೆ ಆಧಾರ್ ಇ-ಸೈನ್ ದೃಢೀಕರಣವು ಕಡ್ಡಾಯವಾಗಿರುತ್ತದೆ. ಈ ಸಂಬಂಧ ರೈತರು ತಮ್ಮ ಹೆಸರಿನಲ್ಲಿರುವ ಎಲ್ಲ ಸರ್ವೆ ನಂಬರಿನ ಜಮೀನಿನ ವಿವರಗಳನ್ನು ಪ್ರೂಟ್ಸ್ ತಂತ್ರಾಂಶದಲ್ಲಿ ಸೇರ್ಪಡೆ ಮಾಡುವುದು ಮತ್ತು ಎಲ್ಲ ಜಮೀನಿನ ವಿವರಗಳನ್ನು ದಾಖಲಿಸಿರುವುದಾಗಿ ಪೋಷಣೆಯನ್ನೂ ಸಹ ಒಟಿಪಿ ಆಧಾರದ ಮೇಲೆ ಮಾಡಬೇಕಾಗಿರುತ್ತದೆ. ಕೇಂದ್ರದ ಗುರುತಿನ ನೋಂದಣಿ ಆಗದೆ ಇರುವ ಪಟ್ಟಿಯು ರೈತ ಸಂಪರ್ಕ ಕೇಂದ್ರಗಳಲ್ಲಿ ಲಭ್ಯವಿದ್ದು, ಅಂತಹ ರೈತರು ತಮ್ಮ ಆಧಾರ್ ಕಾರ್ಡ್ಗೆ ಜೋಡಣೆಯಾಗಿರುವ ಮೊಬೈಲ್ ನಂಬರಿನ ಮೊಬೈಲ್ನ್ನು ಮತ್ತು ಪ್ರೂಟ್ಸ್ ತಂತ್ರಾಂಶದಲ್ಲಿ ಜೋಡಣೆಯಾಗಿರುವ ಮೊಬೈಲ್ ನಂಬರಿನ ಮೊಬೈಲ್ನ್ನು ತೆಗೆದುಕೊಂಡು ರೈತ ಸಂಪರ್ಕ ಕೇಂದ್ರ ಹಾಗೂ ತೋಟಗಾರಿಕೆ ಇಲಾಖೆ ಕಚೇರಿಗಳಿಗೆ ಭೇಟಿ ನೀಡಿ, ಮೇಲಿನ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿಕೊಂಡು ಕೇಂದ್ರದ ಗುರುತಿನ ಸಂಖ್ಯೆಯನ್ನು ಪಡೆದುಕೊಳ್ಳಬೇಕಾಗಿರುತ್ತದೆ. ಇದಾದ ನಂತರವೇ ಮುಂದಿನ ಕಂತಿನ ಪಿಎಂ ಕಿಸಾನ್ ಯೋಜನೆಯ ಪ್ರೋತ್ಸಾಹಧನ ಪಾವತಿಸಲು ಕೇಂದ್ರ ಸರಕಾರಕ್ಕೆ ಸಾಧ್ಯವಾಗುತ್ತದೆ. ಈ ಪ್ರಕ್ರಿಯೆ 2019ರ ಫೆ.1ರ ಪೂರ್ವದಲ್ಲಿ ಜಮೀನು ಹೊಂದಿರುವ ರೈತರಿಗೆ ಮಾತ್ರ ಅನ್ವಯವಾಗುತ್ತದೆ. ಈ ದಿನಾಂಕದ ನಂತರ ಪಿ.ಎಂ.ಕಿಸಾನ್ತ್ಸಾಪ್ರೋಹಧನ ಪಡೆಯುತ್ತಿರುವ ರೈತರು ತಮ್ಮ ಹೆಸರಿನಲ್ಲಿರುವ ಜಮೀನನ್ನು ಮಾರಾಟ ಮಾಡಿದ್ದಲ್ಲಿ, ಅವರ ಹೆಸರಿನಲ್ಲಿ ಹಾಲಿ ಯಾವುದೇ ಜಮೀನು ಇಲ್ಲದಂತಹ ರೈತರಿಗೆ ಪಿ.ಎಂ.ಕಿಸಾನ್ ಪ್ರೋತ್ಸಾಹಧನ ಪಾವತಿಯನ್ನು ನಿಲ್ಲಿಸಲಾಗಿದೆ ಎಂದು ಬೆಂಗಳೂರು ನಗರ ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಖಾಲಿ ಇರುವ ಕರ್ನಾಟಕ ಒನ್ ಕೇಂದ್ರಗಳಿಗೆ ಅರ್ಜಿ ಆಹ್ವಾನ
ಬೆಂಗಳೂರು: ರಾಜ್ಯ ಸರಕಾರದ ವಿವಿಧ ಇಲಾಖೆಗಳ ಸೇವೆಗಳು ಒಂದೇ ಸೂರಿನಡಿ ಒದಗಿಸಲು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕರ್ನಾಟಕ ಒನ್ ಫ್ರಾಂಚೈಸಿ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಜಿಲ್ಲೆಯಲ್ಲಿ ನಗರ ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ ಖಾಲಿ ಇರುವ ಕರ್ನಾಟಕ ಒನ್ ಕೇಂದ್ರಗಳನ್ನು ಸ್ಥಾಪಿಸಲು ಆನ್ ಲೈನ್ ಮುಖಾಂತರ ಅರ್ಜಿ ಆಹ್ವಾನಿಸಲಾಗಿದೆ. ಆನೇಕಲ್ ತಾಲೂಕಿನ ಆನೇಕಲ್, ಅತ್ತಿಬೆಲೆ, ಬೊಮ್ಮಸಂದ್ರ, ಚಂದಾಪುರ, ಜಿಗಣಿ, ಹೆಬ್ಬುಗೂಡಿ. ಬೆಂಗಳೂರು ಉತ್ತರ ತಾಲೂಕಿನ ಚಿಕ್ಕಬಾಣವಾರ, ಮಾದನಾಯಕನಹಳ್ಳಿ. ಬೆಂಗಳೂರು ದಕ್ಷಿಣ ತಾಲೂಕಿನ ಕೋನಪ್ಪನ ಅಗ್ರಹಾರ, ದೊಡ್ಡತೋಗೂರು ಮತ್ತು ಯಲಹಂಕ ತಾಲೂಕಿನ ಹುಣಸಮಾರನಹಳ್ಳಿ ಇಲ್ಲಿ ಖಾಲಿ ಇರುವ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕರ್ನಾಟಕ ಒನ್ ಕೇಂದ್ರಗಳನ್ನು ಸ್ಥಾಪಿಸಬಹುದು. ಅಭ್ಯರ್ಥಿಗಳು ವೆಬ್ಸೈಟ್ https://www.karnatakaone.gov.in/public/ franchiseeTerms ನಲ್ಲಿ ಮಾ.2ರೊಳಗೆ ಅರ್ಜಿಯನ್ನು ಸಲ್ಲಿಸಬಹುದು. ಇನ್ನು ಯಾವುದೇ ರೀತಿಯಲ್ಲಿ ಸಲ್ಲಿಸುವ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ ಪ್ರಕಟನೆ ತಿಳಿಸಿದೆ.
'ಬಾಯಿ ಮುಚ್ಚಿಕೊಂಡಿದ್ದರೆ ಒಳ್ಳೆದು' - ಇಕ್ಬಾಲ್ ಹುಸೇನ್ ಸೇರಿ 3 ಶಾಸಕರಿಗೆ ಡಿಕೆ ಶಿವಕುಮಾರ್ ಎಚ್ಚರಿಕೆ
ಡಿಕೆ ಶಿವಕುಮಾರ್ ಫೆಬ್ರವರಿ 26 ಕ್ಕೆ ದೆಹಲಿಯಲ್ಲಿ ಹೈಕಮಾಂಡ್ ಜತೆ ಮಾತುಕತೆ ನಡೆಸಲಿದ್ದಾರೆ ಎಂದು ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಹೇಳಿದ್ದರು. ಈ ಹೇಳಿಕೆಗೆ ಡಿಕೆ ಶಿವಕುಮಾರ್ ಗರಂ ಆಗಿದ್ದಾರೆ. ಇಕ್ಬಾಲ್ ಹುಸೇನ್, ಶಿವಗಂಗಾ ಬಸವರಾಜ್, ರವಿ ಗಣಿಗ ಸೇರಿ 3 ಶಾಸಕರು ಬಾಯಿ ಮುಚ್ಚಿಕೊಂಡಿದ್ದರೆ ಉತ್ತಮ ಎಂದು ಹೇಳಿದ್ದಾರೆ.
ಪ್ರಕೃತಿಯ ಮುನ್ಸೂಚನೆ: ಈ ಏಳು ಪ್ರಾಣಿಗಳು ಹವಾಮಾನ ಬದಲಾವಣೆಯನ್ನು ಸೂಚಿಸುತ್ತವೆ ಎಂದು ನಿಮಗೆ ಗೊತ್ತೆ?
ಪ್ರಾಣಿಗಳಿಂದ ಸಿಗುವ ಪ್ರತಿ ಮುನ್ಸೂಚನೆಗಳಿಗೆ ವೈಜ್ಞಾನಿಕ ಪುರಾವೆಗಳಿಂದ ಬೆಂಬಲಿತವಾಗಿಲ್ಲದೆ ಇದ್ದರೂ, ಅನೇಕ ಪ್ರಾಣಿಗಳು ಪರಿಸರ ಸಂವೇದನೆ ಮತ್ತು ಅಸ್ತಿತ್ವ ಉಳಿಸಿಕೊಳ್ಳುವ ಪ್ರವೃತ್ತಿಯಿಂದ ಪ್ರತಿಕ್ರಿಯಿಸುತ್ತವೆ. ಶತಮಾನಗಳಿಂದ ಜನರು ಬದಲಾಗುತ್ತಿರುವ ಹವಾಮಾನದ ಚಿಹ್ನೆಗಳಿಗಾಗಿ ಪ್ರಕೃತಿಯನ್ನು ಗಮನಿಸುತ್ತಿದ್ದಾರೆ. ಉಪಗ್ರಹಗಳು, ರಾಡಾರ್ ಮತ್ತು ಮುನ್ಸೂಚನೆ ಮಾದರಿಗಳ ಮೊದಲು ಜನರು ಹವಾಮಾನದ ವರದಿಗಾಗಿ ಪ್ರಾಣಿಗಳ ಮೇಲೆ ಅವಲಂಬಿತರಾಗಿದ್ದರು. ಪ್ರಾಣಿಗಳು ಪರಿಸರದ ಬದಲಾವಣೆಗಳಿಗೆ ಸಹಜವಾಗಿ ಪ್ರತಿಕ್ರಿಯಿಸುತ್ತವೆ. ಪ್ರಾಣಿಗಳಿಂದ ಸಿಗುವ ಪ್ರತಿ ಮುನ್ಸೂಚನೆಗಳಿಗೆ ವೈಜ್ಞಾನಿಕ ಪುರಾವೆಗಳಿಂದ ಬೆಂಬಲಿತವಾಗಿಲ್ಲದೆ ಇದ್ದರೂ, ಅನೇಕ ಪ್ರಾಣಿಗಳು ಜೀವಶಾಸ್ತ್ರೀಯ, ಪರಿಸರ ಸಂವೇದನೆ ಮತ್ತು ಅಸ್ತಿತ್ವ ಉಳಿಸಿಕೊಳ್ಳುವ ಪ್ರವೃತ್ತಿಯಿಂದ ಪ್ರತಿಕ್ರಿಯಿಸುತ್ತವೆ. ಇಲ್ಲಿ ಅಂತಹ ಕೆಲವು ಪ್ರಾಣಿಗಳು ಮತ್ತು ಅವುಗಳ ಬದಲಾಗುವ ಪ್ರವೃತ್ತಿಗೆ ಕಾರಣಗಳನ್ನು ನೀಡಲಾಗಿದೆ. ಸಾಂದರ್ಭಿಕ ಚಿತ್ರ |Photo Credit : Wikipedia ► ಕಪ್ಪೆಗಳು ಪ್ರಕೃತಿಯಲ್ಲಿ ಮಳೆ ಬರುವುದನ್ನು ಘೋಷಿಸುವವರು ಕಪ್ಪೆಗಳು. ಅನೇಕ ಪ್ರದೇಶಗಳಲ್ಲಿ ಮಳೆ ಬರುವ ಮೊದಲು ಕಪ್ಪೆಗಳು ಕಿರುಚುತ್ತಿರುತ್ತವೆ. ಈ ಕಪ್ಪೆಗಳ ಕೂಗಿನಿಂದ ಜನರು ಮಳೆ ಬರುವ ಸಮಯವಾಗಿದೆ ಎಂದು ಕಂಡುಕೊಳ್ಳುತ್ತಾರೆ. ಏಕೆ ಸಂಭವಿಸುತ್ತದೆ: ಕಪ್ಪೆಗಳು ವಾತಾವರಣದ ಒತ್ತಡದಲ್ಲಿನ ಬದಲಾವಣೆಗಳು ಮತ್ತು ಹೆಚ್ಚುತ್ತಿರುವ ಆರ್ದ್ರತೆಗೆ ಪ್ರತಿಕ್ರಿಯಿಸುತ್ತವೆ. ಮಳೆ ಬೀಳುವ ಸ್ವಲ್ಪ ಮೊದಲು ಕಪ್ಪೆಗಳು ಕೂಗಲಾರಂಭಿಸುವುದು ಸಾಮಾನ್ಯವಾಗಿ ಕಂಡುಬರುವ ನಡವಳಿಕೆ. ತೇವಾಂಶವಿರುವ ಪರಿಸ್ಥಿತಿಗಳು ಸಂತಾನೋತ್ಪತ್ತಿಗೆ ಪೂರಕವಾಗಿರುತ್ತವೆ. ಹೀಗಾಗಿ ಹೆಚ್ಚು ಅಬ್ಬರದಲ್ಲಿ ಮತ್ತು ಆಗಾಗ್ಗೆ ಕೂಗಲು ಕಾರಣವಾಗುತ್ತದೆ. ಸಾಂದರ್ಭಿಕ ಚಿತ್ರ |Photo Credit : Wikipedia ► ಪಕ್ಷಿಗಳು ಆಗಸದ ಆರಂಭಿಕ ಎಚ್ಚರಿಕೆಯ ಗಂಟೆ ಪಕ್ಷಿಗಳಾಗಿರುತ್ತವೆ. ಮುಖ್ಯವಾಗಿ ಕೃಷಿ ಸಮುದಾಯಗಳಲ್ಲಿ ಪಕ್ಷಿಗಳ ನಡವಳಿಕೆ ಅನೇಕ ಗಾದೆಮಾತುಗಳಿಗೆ ಪ್ರೇರಣೆ ನೀಡಿವೆ. ಕೆಳಮಟ್ಟದಲ್ಲಿ ಸ್ವಾಲೋಗಳು: ಸ್ವಾಲೋ ಅಥವಾ ಕವಲುತೋಕೆ ಪಕ್ಷಿಗಳು ಹೆಚ್ಚಿನ ಆರ್ದ್ರತೆಯಲ್ಲಿ ನೆಲಕ್ಕೆ ಹತ್ತಿರದಲ್ಲಿ ಸುಳಿದಾಡುವುದರಿಂದ ಮಳೆ ಸನ್ನಿಹಿತವಾಗುತ್ತಿದೆ ಎಂದು ಕೃಷಿಕರಿಗೆ ತಿಳಿದುಬರುತ್ತದೆ. ಪಕ್ಷಿಗಳು ಹಠಾತ್ ಮೌನ ಅಥವಾ ಅನಿಯಮಿತವಾಗಿ ಹಾರಾಡಿದಲ್ಲಿ ಸಮೀಪಿಸುತ್ತಿರುವ ಚಂಡಮಾರುತದ ಸಂಭಾವ್ಯ ಚಿಹ್ನೆಯನ್ನು ಸೂಚಿಸುತ್ತದೆ ಏಕೆ ಸಂಭವಿಸುತ್ತದೆ: ಪಕ್ಷಿಗಳು ವಾಯುಭಾರ ಒತ್ತಡ (ಬಾರೋಮೆಟ್ರಿಕ್ ಪ್ರೆಶರ್) ಮತ್ತು ಗಾಳಿಯ ದಿಕ್ಕಿನ ಬಗ್ಗೆ ಹೆಚ್ಚು ಸೂಕ್ಷ್ಮವಾಗಿರುತ್ತವೆ. ಹೀಗಾಗಿ ಹವಾಮಾನ ಬದಲಾವಣೆಯ ಸಹಜವಾದ ಸೂಚಕಗಳಾಗಿರುತ್ತವೆ. ಸಾಂದರ್ಭಿಕ ಚಿತ್ರ |Photo Credit : Wikipedia ► ಬೆಕ್ಕುಗಳು ಬೆಕ್ಕುಗಳು ಚಂಡಮಾರುತದ ಶಾಂತ ಸಂವೇದಕಗಳಾಗಿರುತ್ತವೆ. ಬೆಕ್ಕುಗಳು ಸಮೀಪಿಸುತ್ತಿರುವ ಮಳೆ ಅಥವಾ ಬಿರುಗಾಳಿಗಳನ್ನು ಗ್ರಹಿಸುತ್ತವೆ ಎಂದು ಭಾವಿಸಲಾಗಿದೆ. ಅಂತಹ ಹವಾಮಾನ ಬದಲಾವಣೆಯ ಸಂದರ್ಭದಲ್ಲಿ ಅವಿಶ್ರಾಂತವಾಗಿರುತ್ತವೆ, ಅಂಟಿಕೊಂಡಿರುತ್ತವೆ ಅಥವಾ ಅಡಗಿರುತ್ತವೆ, ಏಕೆ ಸಂಭವಿಸುತ್ತವೆ: ಅವುಗಳ ಮೀಸೆಗಳು ಗಾಳಿಯ ಒತ್ತಡದ ಸೂಕ್ಷ್ಮ ಬದಲಾವಣೆಗಳನ್ನು ಗ್ರಹಿಸಬಹುದು. ಬೆಕ್ಕುಗಳು ಪರಿಸರದಲ್ಲಿ ಸ್ಥಿರ ವಿದ್ಯುತ್ ಗೆ (ಸ್ಟಾಟಿಕ್ ಎಲೆಕ್ಟ್ರಿಸಿಟಿ) ಅತ್ಯಂತ ಸೂಕ್ಷ್ಮವಾಗಿರುತ್ತವೆ. ಹೀಗಾಗಿ ಬೆಕ್ಕುಗಳ ಈ ವರ್ತನೆ ಗುಡುಗು ಸಹಿತ ಮಳೆಯ ಮೊದಲು ಹೆಚ್ಚಾಗುತ್ತದೆ. ಸಾಂದರ್ಭಿಕ ಚಿತ್ರ |Photo Credit : Wikipedia ► ಹಸುಗಳು ಹಸುಗಳು ನಿಶ್ಚಲವಾಗಿ ನಿಲ್ಲುವ ಮೂಲಕ ಮಳೆಯ ಮುನ್ಸೂಚನೆ ನೀಡುತ್ತವೆ. ಮಳೆಗೆ ಮೊದಲು ಹಸುಗಳು ಮಲಗುತ್ತವೆ ಎಂಬುದು ಹಳೆಯ ನಂಬಿಕೆ. ಏಕೆ ಸಂಭವಿಸುತ್ತದೆ: ಹೆಚ್ಚುತ್ತಿರುವ ತೇವಾಂಶ ಮತ್ತು ತಂಪಾದ ಗಾಳಿಯ ಒತ್ತಡವು ಹೆಚ್ಚಾಗಿ ಹುಲ್ಲನ್ನು ತೇವಗೊಳಿಸುತ್ತದೆ ಮತ್ತು ಹಸುಗಳು ಒಣ ಮತ್ತು ಬೆಚ್ಚಗಿನ ಸ್ಥಳಗಳನ್ನು ರಕ್ಷಿಸಲು ಮಲಗಿಬಿಡುತ್ತವೆ. ಆರ್ದ್ರತೆ ಹೆಚ್ಚಾದಾಗ ಅವು ಕಡಿಮೆ ಸಕ್ರಿಯವಾಗಿರಬಹುದು. ಸಾಂದರ್ಭಿಕ ಚಿತ್ರ |Photo Credit : Wikipedia ► ಇರುವೆಗಳು ಮಳೆ ಅಥವಾ ಬಿರುಗಾಳಿಗೆ ಮೊದಲು ಇರುವೆಗಳು ತಮ್ಮ ದಿಬ್ಬಗಳನ್ನು ಬಲಪಡಿಸುತ್ತವೆ. ದೊಡ್ಡ ಪ್ರಮಾಣದಲ್ಲಿ ಒಟ್ಟುಗೂಡಿ ತಮ್ಮ ಮನೆಗಳನ್ನು ಬಲಪಡಿಸುತ್ತವೆ. ಏಕೆ ಸಂಭವಿಸುತ್ತದೆ: ಇರುವೆಗಳು ವಾಯುಭಾರ ಒತ್ತಡದಲ್ಲಿನ ಕುಸಿತವನ್ನು ಪತ್ತೆ ಮಾಡುತ್ತವೆ ಮತ್ತು ಪ್ರವಾಹ ತಡೆಗಟ್ಟಲು ತಮ್ಮ ಗೂಡುಗಳನ್ನು ಸರಿಹೊಂದಿಸುತ್ತವೆ. ಮನೆಯ ಸುತ್ತಮುತ್ತ ಇರುವೆಗಳು ಹಠಾತ್ ದಾರಿ ಮಾಡಿಕೊಂಡು ಸಾಗುತ್ತಿದ್ದರೆ ಮಳೆಯ ಮುನ್ಸೂಚನೆಯಾಗಿರಬಹುದು. ಸಾಂದರ್ಭಿಕ ಚಿತ್ರ |Photo Credit : Wikipedia ► ಶಾರ್ಕ್ ಗಳು ಶಾರ್ಕ್ ಗಳು ಒತ್ತಡದ ಕುಸಿತಗಳ ಅರಿವು ಪಡೆಯುವ ಸೂಕ್ಷ್ಮತೆ ಹೊಂದಿರುತ್ತವೆ. ಸಾಗರದಲ್ಲಿ ಪ್ರಮುಖ ಬಿರುಗಾಳಿ ಅಥವಾ ಚಂಡಮಾರುತ ಬೀಸುವ ಮೊದಲು ಶಾರ್ಕ್ಗಳು ಆಳವಾದ ನೀರಿನಲ್ಲಿ ಈಜುವುದನ್ನು ಗಮನಿಸಲಾಗಿದೆ. ಏಕೆ ಸಂಭವಿಸುತ್ತದೆ: ಶಾರ್ಕ್ಗಳು ಲೊರೆಂಜಿನಿ ಆಂಪ್ಯುಲೆ ಎನ್ನುವ ಸಂವೇದನಾ ಅಂಗಗಳನ್ನು ಹೊಂದಿವೆ. ಅದರಿಂದಾಗಿ ಸಣ್ಣ ವಿದ್ಯುದೀಯ ಮತ್ತು ನೀರಿನ ಒತ್ತಡ ಬದಲಾವಣೆಗಳನ್ನು ಪತ್ತೆ ಮಾಡಲು ಸಾಧ್ಯವಾಗುತ್ತದೆ. ಹೀಗಾಗಿ ಅಪಾಯಕಾರಿ ಪರಿಸ್ಥಿತಿಗಳಿಂದ ತಪ್ಪಿಸಿಕೊಳ್ಳುತ್ತವೆ. ಸಾಂದರ್ಭಿಕ ಚಿತ್ರ |Photo Credit : Wikipedia ► ಜೇನುನೊಣಗಳು ಹವಾಮಾನ ಸಂಬಂಧಿತ ಆಹಾರ ಹುಡುಕುವುದರಲ್ಲಿ ಸಿದ್ಧಹಸ್ತರು. ಜೇನುನೊಣಗಳು ಬಿಸಿಲು ಮತ್ತು ಮಳೆಯನ್ನು ಸೂಚಿಸುವ ಪ್ರಕೃತಿಯ ಮೊದಲ ಸೂಚಕಗಳು. ಜೇನುನೊಣಗಳು ಜೇನುಗೂಡಿನ ಸಮೀಪ ಅಥವಾ ಕೆಳಗೆ ಹಾರಿದರೆ ಮಳೆ ಸಮೀಪಿಸುತ್ತದೆ ಎಂದು ತಿಳಿದುಕೊಳ್ಳಬೇಕು. ಏಕೆ ಸಂಭವಿಸುತ್ತದೆ: ಜೇನುನೊಣಗಳು ತೇವಾಂಶ ಮತ್ತು ಸಂಚಾರದ ಸಾಮರ್ಥ್ಯದ ಆಧಾರದ ಮೇಲೆ ತಮ್ಮ ಆಹಾರ ಹುಡುಕುತ್ತವೆ. ಗಾಳಿ ಅಥವಾ ಮಳೆಯ ಪರಿಸ್ಥಿತಿಯಲ್ಲಿ ಆಹಾರ ಹುಡುಕುವುದು ಕಷ್ಟವಾದ ಕಾರಣ ಗೂಡಿನ ಸುತ್ತಲೂ ಹಾರಾಡುತ್ತವೆ. ಕೃಪೆ: indianexpress.com
ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಅವರ ಆಪ್ತ ಕಾರ್ಯದರ್ಶಿ ಪುತ್ರ ಆತ್ಮಹತ್ಯೆ
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಆಪ್ತ ಕಾರ್ಯದರ್ಶಿ ಚಂದ್ರು ಅವರ ಪುತ್ರ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶನಿವಾರ ನಡೆದಿದೆ. ಬೆಂಗಳೂರಿನ ಸಂಜಯ ನಗರದ ಲೊಟ್ಟೆಗೊಲ್ಲಹಳ್ಳಿಯ ನಿವಾಸದಲ್ಲಿಯೇ ಹೇಮಂತ್ (22) ಆತ್ಮಹತ್ಯೆ ಮಾಡಿಕೊಂಡಿದ್ದು, ಡಿಪ್ಲೊಮಾ ವ್ಯಾಸಂಗ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಸಂಜಯ ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಎಂ.ಎಸ್.ರಾಮಯ್ಯ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿ ತನಿಖೆ ಕೈಗೊಂಡಿದ್ದಾರೆ. ಆತ್ಮಹತ್ಯೆಯ ಯೋಚನೆ ಬಂದಾಗ ಅದನ್ನು ನಿಗ್ರಹಿಸಲು ರಾಜ್ಯ ಸರಕಾರದ ಅರೋಗ್ಯ ಇಲಾಖೆಯ ಹೆಲ್ಪ್ ಲೈನ್ 104 ಸಹಾಯ ಮಾಡುತ್ತದೆ. ಅದರ ಜೊತೆಗೆ Tele-MANAS ನ 14416 ಅನ್ನೂ ಸಂಪರ್ಕಿಸಬಹುದು.
Mandya | ಕಾರು ಅಪಘಾತ: ಮಾಜಿ ಶಾಸಕ ಕೆ.ಸುರೇಶ್ಗೌಡಗೆ ಗಾಯ
ಮಂಡ್ಯ: ಕಾರು ಅಪಘಾತದಲ್ಲಿ ನಾಗಮಂಗಲದ ಮಾಜಿ ಶಾಸಕ ಕೆ.ಸುರೇಶ್ಗೌಡ ಹಾಗೂ ಚಾಲಕ ಶೇಖರ್ ತೀವ್ರವಾಗಿ ಗಾಯಗೊಂಡಿರುವ ಘಟನೆ ಶನಿವಾರ ತಡರಾತ್ರಿ ತಾಲೂಕಿನ ಬಸರಾಳು ಗ್ರಾಮದ ಸಮೀಪ ನಡೆದಿದೆ. ಮದ್ದೂರು ತಾಲೂಕು ಕೊಪ್ಪ ಸಮೀಪ ಮದುವೆ ಮುಗಿಸಿಕೊಂಡು ನಾಗಮಂಗಲಕ್ಕೆ ಬರುತ್ತಿದ್ದಾಗ ಬಸರಾಳು-ಕೊಪ್ಪ ರಸ್ತೆಯ ಬಂತೆಕೊಪ್ಪಲು ಬಳಿ ಚಾಲಕನ ನಿಯಂತ್ರಣ ತಪ್ಪಿದ ಕಾರು, ಉರುಳಿ ಈ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ. ಚಾಲಕ ಶೇಖರ್ ಗಂಭೀರವಾಗಿ ಗಾಯಗೊಂಡಿದ್ದು, ಸುರೇಶ್ ಗೌಡ ಅವರ ಕೈ ಬೆರಳುಗಳು ಮುರಿದಿವೆ ಎನ್ನಲಾಗಿದೆ. ಅವರು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ. ಬಸರಾಳು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
HD Kumaraswamy vs Siddaramaiah: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರ ನಡುವೆ ವಾಕ್ಸಮರ ಮುಂದುವರಿದಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಎಚ್.ಡಿ ಕುಮಾರಸ್ವಾಮಿ ಅವರು ಸಾಮಾಜಿಕ ನ್ಯಾಯಸಂಹಾರಿ ಎಂದು ಟೀಕಿಸಿದ್ದಾರೆ. ಎಚ್.ಡಿ ಕುಮಾರಸ್ವಾಮಿ ಹೇಳಿದ್ದೇನು ಎನ್ನುವ ವಿವರ ನೋಡೋಣ. ಸಿದ್ದರಾಮಯ್ಯನವರೇ, ನಾನು ಸುತ್ತಿಬಳಸಿ ಮಾತನಾಡಲ್ಲ. ನೇರವಾಗಿ ವಿಷಯಕ್ಕೇ ಬರುತ್ತೇನೆ. ಸಿದ್ದರಾಮಯ್ಯನವರು ಕುರ್ಚಿಗಾಗಿ ಜಾತಿ
Belagavi | ಮಾರಕಾಸ್ತ್ರಗಳಿಂದ ಕೊಚ್ಚಿ, ಮರ್ಮಾಂಗ ಕತ್ತರಿಸಿ ವ್ಯಕ್ತಿಯ ಭೀಕರ ಹತ್ಯೆ
ಬೆಳಗಾವಿ : ಜಿಲ್ಲೆಯ ಕಿತ್ತೂರು ತಾಲೂಕಿನ ಹಿರೇನಂದಿಹಳ್ಳಿ ಗ್ರಾಮದಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಹತ್ಯೆ ಮಾಡಲಾದ ವ್ಯಕ್ತಿಯ ಮೃತದೇಹ ಮೆಕ್ಕೆಜೋಳದ ಗದ್ದೆಯಲ್ಲಿ ಪತ್ತೆಯಾಗಿದೆ. ಮೃತರನ್ನು ಅದೇ ಗ್ರಾಮದ ಕಲ್ಮೇಶ್ ಕೋಟಿ (50) ಎಂದು ಗುರುತಿಸಲಾಗಿದೆ. ಅವರು ತುಮಕೂರಿನಲ್ಲಿ ಹೋಮ್ ಕೇರ್ ನೌಕರರಾಗಿದ್ದು, ಸುಮಾರು ಹತ್ತು ದಿನಗಳ ಹಿಂದೆಯಷ್ಟೇ ಸ್ವಗ್ರಾಮಕ್ಕೆ ಬಂದಿದ್ದರು. ನಾಲ್ಕು ದಿನಗಳ ಹಿಂದೆ ನಡೆದಿರುವ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ದುಷ್ಕರ್ಮಿಗಳು ಕಲ್ಮೇಶ್ ಅವರನ್ನು ಮಾರಕಾಸ್ತ್ರಗಳಿಂದ ಕ್ರೂರವಾಗಿ ಹತ್ಯೆಗೈದು, ಬಳಿಕ ಮರ್ಮಾಂಗ ಕತ್ತರಿಸಿ ವಿಕೃತಿ ಮೆರೆದಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್ ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಗಳ ಪತ್ತೆಗಾಗಿ ವಿಶೇಷ ತಂಡ ರಚಿಸಲಾಗಿದ್ದು, ಕಿತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Mann Ki Baat | ʼಡಿಜಿಟಲ್ ಅರೆಸ್ಟ್ʼ ವಂಚನೆಯ ಬಗ್ಗೆ ಎಚ್ಚರದಿಂದಿರಿ: ಜನತೆಗೆ ಪ್ರಧಾನಿ ಮೋದಿ ಕರೆ
ಹೊಸದಿಲ್ಲಿ: ಆನ್ ಲೈನ್ ಹಣಕಾಸು ವಂಚನೆ ಮತ್ತು ಡಿಜಿಟಲ್ ಅರೆಸ್ಟ್ ವಂಚನೆಗಳ ಬಗ್ಗೆ ಎಚ್ಚರದಿಂದಿರಿ ಎಂದು ರವಿವಾರ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಆಕಾಶವಾಣಿಯಲ್ಲಿ ಪ್ರಸಾರವಾಗುವ ಮಾಸಿಕ ‘ಮನ್ ಕಿ ಬಾತ್’ನಲ್ಲಿ ದೇಶದ ಜನತೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಭಾರತ ಹೇಗೆ ಕೃತಕ ಬುದ್ಧಿಮತ್ತೆ (AI) ವಲಯದಲ್ಲಿ ತನ್ನ ಛಾಪು ಮೂಡಿಸಿದೆ ಹಾಗೂ ಕೃತಕ ಬುದ್ಧಿಮತ್ತೆ ನೆರವಿನಿಂದ ದೇಶದಲ್ಲಿ ಪ್ರಾಣಿಗಳನ್ನು ಹೇಗೆ ಉಪಚರಿಸಲಾಗುತ್ತಿದೆ ಮತ್ತು ರೈತರು ಹೇಗೆ ತಮ್ಮ ಜಾನುವಾರುಗಳು ಹಾಗೂ ಹೈನುಗಾರಿಕೆಯ ಮೇಲೆ ನಿಗಾ ವಹಿಸಿದ್ದಾರೆ ಎಂಬುದನ್ನು ಎಐ ಶೃಂಗಸಭೆ ಎತ್ತಿ ತೋರಿಸಿತು ಎಂದೂ ಅವರು ಹೇಳಿದ್ದಾರೆ. ಇತ್ತೀಚೆಗೆ ಮುಕ್ತಾಯಗೊಂಡ ಎಐ ಶೃಂಗಸಭೆಯನ್ನು ಉಲ್ಲೇಖಿಸಿದ ಪ್ರಧಾನಿ ಮೋದಿ, ಈ ಶೃಂಗಸಭೆಯಲ್ಲಿ ಎರಡು ಉತ್ಪನ್ನಗಳು ವಿಶ್ವದಾದ್ಯಂತ ಆಗಮಿಸಿದ್ದ ನಾಯಕರನ್ನು ಪ್ರಭಾವಿತಗೊಳಿಸಿದವು ಎಂದು ಹೇಳಿದರು. ಮೊದಲನೆಯದಾಗಿ, ಪ್ರಾಣಿಗಳನ್ನು ಉಪಚರಿಸಲು ಹೇಗೆ ಕೃತಕ ಬುದ್ಧಿಮತ್ತೆ ನೆರವಾಗುತ್ತಿದೆ ಹಾಗೂ ಕೃತಕ ಬುದ್ಧಿಮತ್ತೆಯ ನೆರವಿನಿಂದ ರೈತರು ಹೇಗೆ ತಮ್ಮ ಜಾನುವಾರುಗಳ ಹಾಗೂ ಹೈನುಗಾರಿಕೆಯ ಮೇಲೆ ನಿಗಾವಹಿಸಿದ್ದಾರೆ ಎಂಬುದನ್ನು ಅಮುಲ್ ಬೂತ್ ತೋರಿಸಿತು ಎಂದು ಅವರು ಪ್ರತಿಪಾದಿಸಿದರು. ಎರಡನೆಯದು, ನಮ್ಮ ಭಾರತೀಯ ಸಂಸ್ಕೃತಿಗೆ ಸಂಬಂಧಿಸಿದ್ದು ಎಂದು ಅವರು ತಿಳಿಸಿದರು. “ಕೃತಕ ಬುದ್ಧಿಮತ್ತೆಯ ನೆರವಿನಿಂದ ನಮ್ಮ ದೇಶ ಹೇಗೆ ಪುರಾತನ ಜ್ಞಾನ ಮತ್ತು ಹಸ್ತಪ್ರತಿಗಳನ್ನು ಸಂರಕ್ಷಿಸಿದೆ ಹಾಗೂ ಅವು ಇಂದಿನ ತಲೆಮಾರಿಗೆ ಹೊಂದುವಂತೆ ಅಳವಡಿಸಿಕೊಳ್ಳಲಾಗುತ್ತಿದೆ ಎಂಬುದನ್ನು ಕಂಡು ಬೇರೆ ದೇಶಗಳಿಂದ ಆಗಮಿಸಿದ್ದ ನಾಯಕರು ಸೋಜಿಗಗೊಂಡಿದ್ದಾರೆ” ಎಂದು ಅವರು ಹೇಳಿದರು. ಹೊಸ ದಿಲ್ಲಿಯಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ಎಐ ಶೃಂಗಸಭೆಯಲ್ಲಿ ಹಲವು ದೇಶಗಳ ಮುಖ್ಯಸ್ಥರು, ಕೃತಕ ಬುದ್ಧಿಮತ್ತೆ ವಲಯದಲ್ಲಿನ ಹಲವು ಜಾಗತಿಕ ನಾಯಕರು, ಶಿಕ್ಷಣ ತಜ್ಞರು ಮತ್ತು ಸಂಶೋಧಕರು, ಜಾಗತಿಕ ತಾಂತ್ರಿಕ ದೈತ್ಯ ಕಂಪನಿಗಳ ಮುಖ್ಯಸ್ಥರು ಪಾಲ್ಗೊಂಡಿದ್ದರು.
Raichur | ರಾಶಿ ಸಿರಿಂಜ್ಗಳು, ಕೆಮ್ಮಿನ ಸಿರಪ್ ತಿಪ್ಪೆಯಲ್ಲಿ ಪತ್ತೆ; ಡಿಎಚ್ಒ ಭೇಟಿ, ಪರಿಶೀಲನೆ
ರಾಯಚೂರು : ನಗರದ ಎಲ್ಬಿಎಸ್ ನಗರ ಬಡಾವಣೆಯಿಂದ ಜಲಾಲ್ ನಗರಕ್ಕೆ ಹೋಗುವ ರಸ್ತೆಯ ಸ್ಮಶಾನದ ಬಳಿಯಲ್ಲಿ ಇನ್ನೂ ಅವಧಿ ಮುಗಿಯದ ಕಫ್ ಸಿರಪ್, ಸಿರಿಂಜ್ ಸೇರಿ ಅನೇಕ ವೈದ್ಯಕೀಯ ವಸ್ತುಗಳು ತಿಪ್ಪೆಯಲ್ಲಿ ಬಿಸಾಡಿದ ಘಟನೆ ನಡೆದಿದೆ. ರಾಶಿ ರಾಶಿ ಸಿರಿಂಜ್, ಚಿಕ್ಕ ಮಕ್ಕಳ ಕೆಮ್ಮಿನ ಸಿರಪ್ ಕಂಡು ಸ್ಥಳೀಯ ಯುವಕರು ಆರೋಗ್ಯ ಇಲಾಖೆಯ ಗಮನಕ್ಕೆ ತಂದಿದ್ದಾರೆ. ಇಲ್ಲಿನ ರಿಮ್ಸ್ ಆಸ್ಪತ್ರೆ, ನಮ್ಮ ಕ್ಲಿನಿಕ್ ಸೇರಿ ಸರಕಾರಿ ಆಸ್ಪತ್ರೆಗಳಲ್ಲಿ ಹೊರ ರೋಗಿಗಳಿಗೆ ಔಷಧಿ ಒಂದು ಕೊಟ್ಟರೆ ಮತ್ತೊಂದು ಹೊರಗೆ ತೆಗೆದುಕೊಳ್ಳಲು ಆಸ್ಪತ್ರೆಯ ವೈದ್ಯರು ಚೀಟಿ ಬರೆದು ಕೊಡುತ್ತಾರೆ. ಆದರೆ, ಸ್ಮಶಾನದ ಬಳಿ ತಿಪ್ಪೆಯಲ್ಲಿ ಔಷಧಿ ಬಿಸಾಕಿ ಹಾಳು ಮಾಡಿದ್ದು ಖಂಡನೀಯ. ಕೂಡಲೇ ಇದರ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯ ನಿವಾಸಿ ಈರೇಶ ಒತ್ತಾಯಿಸಿದರು. ಆರೋಗ್ಯಾಧಿಕಾರಿ ಭೇಟಿ: ಸಾರ್ವಜನಿಕರಿಂದ ಮಾಹಿತಿ ಪಡೆದು ಸ್ಥಳಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಸುರೇಂದ್ರ ಬಾಬು ಅವರು ಔಷಧ ನಿಯಂತ್ರಕ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಜೊತೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಔಷಧಿಗಳು ಎಲ್ಲಿಂದ, ಹೇಗೆ ಬಂದಿದೆ ಎಂಬುವುದರ ಬಗ್ಗೆ ತನಿಖೆ ನಡೆಸಿ, ಸರಕಾರಿ ಆಸ್ಪತ್ರೆಯಿಂದ ಹೊರಗೆ ಬಂದಿದ್ದಲ್ಲಿ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಬಳಿಕ ಆರೋಗ್ಯ ಇಲಾಖೆಯ ಸಿಬ್ಬಂದಿ ಚೀಲಗಳಲ್ಲಿ ಸಿರಿಂಜ್ ಹಾಗೂ ಕಫ್ ಸಿರಪ್, ಔಷಧಿಗಳನ್ನು ತೆರವುಗೊಳಿಸಿದ್ದಾರೆ.
ಬೆಂಗಳೂರು ಉತ್ತರ ಪಾಲಿಕೆ: ಸ್ವಚ್ಛ ಸರ್ವೇಕ್ಷಣ ಉತ್ತಮ ರ್ಯಾಂಕಿಂಗ್ಗೆ ಪಣ
ಬೆಂಗಳೂರು ನಗರವನ್ನು ಸ್ವಚ್ಚ ಹಾಗೂ ಸುಂದರವಾಗಿಸಬೇಕು. ಸ್ವಚ್ಛ ಸರ್ವೇಕ್ಷಣ ಉತ್ತಮ ರ್ಯಾಂಕಿಂಗ್ ಪಡೆಯಬೇಕು ಎನ್ನುವ ಗುರಿಯೊಂದಿಗೆ ಒಂದಷ್ಟು ಕ್ರಮಕ್ಕೆ ಮುಂದಾಗಲಾಗಿದೆ. ಮನೆಗಳಲ್ಲೇ ಕಸ ವಿಂಗಡಣೆ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ. ಘನತ್ಯಾಜ್ಯ ಇಲಾಖೆಯ ಅಧಿಕಾರಿಗಳಿಗೆ ಬೆಂಗಳೂರು ಉತ್ತರ ನಗರ ಪಾಲಿಕೆಯ ಆಯುಕ್ತರಾದ ಪೊಮ್ಮಲ ಸುನೀಲ್ ಕುಮಾರ್ ಅವರು ಖಡಕ್ ಸೂಚನೆ ನೀಡಿದ್ದಾರೆ.
`ಈಗಾಗಲೇ ಬೆತ್ತಲಾಗಿರುವ ಕಾಂಗ್ರೆಸ್ ಗೆ ಬಟ್ಟೆ ಕಳಚುವ ಅವಶ್ಯಕತೆ ಏನಿತ್ತು?': ಎಐ ಸಮ್ಮಿಟ್ ಪ್ರತಿಭಟನೆಗೆ ಮೋದಿ ತರಾಟೆ
PM Modi Slams Congress- ಜಾಗತಿಕ ಎಐ ಸಮ್ಮೇಳನ ನಡೆಯುತ್ತಿದ್ದ ಜಾಗಕ್ಕೆ ತೆರಳಿ ಕಾಂಗ್ರೆಸ್ ನಡೆಸಿದ್ದ ಪ್ರತಿಭಟನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ. ಇದು ಕಾಂಗ್ರೆಸ್ ಪಕ್ಷದ ಕೊಳಕು ಮನಸ್ಥಿತಿ ಮತ್ತು ಬೆತ್ತಲೆ ರಾಜನೀತಿಗೆ ಹಿಡಿದ ಕೈಗನ್ನಡಿ ಎಂದು ಟೀಕಿಸಿದ್ದಾರೆ. ಇದು ಬಿಜೆಪಿ ಕಾರ್ಯಕ್ರಮವಲ್ಲ ಎಂಬುದನ್ನು ಸೈದ್ಧಾಂತಿಕವಾಗಿ ದಿವಾಳಿ ಆಗಿರುವ ಕಾಂಗ್ರೆಸಿಗರು ಅರ್ಥೈಸಿಕೊಳ್ಳಬೇಕಿತ್ತು. ಈಗಾಗಲೇ ಬೆತ್ತಲಾಗಿರುವ ನೀವು ಬಟ್ಟೆ ಬಿಟ್ಟೆ ಕಳಚುವ ಅಗತ್ಯ ಏನಿತ್ತು ಎಂದು ವ್ಯಂಗ್ಯವಾಡಿದ್ದಾರೆ.

21 C