SENSEX
NIFTY
GOLD
USD/INR

Weather

29    C
...

ಪಿವಿ ಸಿಂಧುಗೆ ಪುನರಾಗಮನದ ತಿರುವು ಸಿಕ್ಕಿದ್ದು ವಿರಾಟ್ ಕೊಹ್ಲಿ ಜೊತೆಗಿನ ಸಂಭಾಷಣೆ!

ಪಿವಿ ಸಿಂಧು ಜಪಾನ್ ಓಪನ್ ಪ್ರಶಸ್ತಿ ಗೆಲ್ಲುವ ಮೂಲಕ ತಮ್ಮ ವೃತ್ತಿಜೀವನವನ್ನು ಮರುನಿರ್ಮಿಸಿದ್ದಾರೆ. ಕ್ರೀಡೆಯಲ್ಲಿ ಸಂತೋಷವನ್ನು ಮರುಸಂಪಾದಿಸಿದ್ದಾರೆ. ತಮ್ಮ ಮೊದಲ ಸೂಪರ್ 750 ಪ್ರಶಸ್ತಿಯಲ್ಲಿ ಅವರು ಗೆಲುವು ಮತ್ತು ಸಂತೋಷ ಎರಡನ್ನೂ ಸಾಧಿಸಿದ್ದಾರೆ. ರವಿವಾರದಂದು ಜಪಾನ್ ಓಪನ್ ಗೆದ್ದ ಪಿವಿ ಸಿಂಧು ಅವರ ಪುನರಾಗಮನಕ್ಕೆ ಬಹಳ ಹಿಂದೆಯೇ ಬೆಂಗಳೂರಿನಲ್ಲಿ ನಡೆದ ಶಾಂತ ಮತ್ತು ಮೊದಲೇ ಉದ್ದೇಶಿತವಲ್ಲದ ಸಭೆ ಅಡಿಪಾಯ ಹಾಕಿದೆ ಎನ್ನುವುದು ನಿಮಗೆ ಗೊತ್ತೆ? ಆ ಸಭೆಗೆ ಹಿಂದಿನ 24 ತಿಂಗಳುಗಳು ಸಿಂಧು ಅವರಿಗೆ ಬಹಳ ಕ್ರೂರವಾಗಿದ್ದವು. ಒತ್ತಡದ ಮುರಿತಗಳು, ಪ್ಯಾರಿಸ್ ಒಲಿಂಪಿಕ್ಸ್ನಿಂದ ಆರಂಭಿಕ ಘಟ್ಟದಲ್ಲೇ ನಿರ್ಗಮನ ಮೊದಲಾಗಿ ಗೆಲುವು ಮರೀಚಿಕೆಯಾಗಿತ್ತು. ಟೀಕಾಕಾರರು ಸಿಂಧು ಅವರ ಗೆಲುವಿನ ಅವಧಿ ಮುಗಿಯಿತು ಎಂದುಕೊಂಡಿದ್ದರು. ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತೆ ಹತಾಶ ಸ್ಥಿತಿಯಲ್ಲಿ ಟಾಪ್ ಸ್ಥಾನದಿಂದ ಕೆಳಗುರುಳುವ ಏಕಾಂತವನ್ನು ಅರ್ಥಮಾಡಿಕೊಳ್ಳುವವರನ್ನು ಹುಡುಕಿದ ಸಂದರ್ಭದಲ್ಲಿ ವಿರಾಟ್ ಕೊಹ್ಲಿಗೆ ಕರೆ ಮಾಡಿದರು. ‘ಎಕ್ಸ್’ ಪೋಸ್ಟ್ನಲ್ಲಿ ಅವರು ವಿರಾಟ್ ಕೊಹ್ಲಿಗೆ ಇದೀಗ ಧನ್ಯವಾದ ಹೇಳಿದ್ದಾರೆ. “ನನ್ನ ವೃತ್ತಿಜೀವನದ ಅತ್ಯಂತ ಕೆಟ್ಟ ಹಂತದಲ್ಲಿ ನಾನು ಅವರನ್ನು ಸಂಪರ್ಕಿಸಿದೆ. ಗಾಯಗಳು ಹೆಚ್ಚಾಗುತ್ತಿದ್ದವು ಮತ್ತು ಫಲಿತಾಂಶಗಳು ಬರುತ್ತಿರಲಿಲ್ಲ. ನನಗೆ ಅರ್ಥಮಾಡಿಕೊಳ್ಳುವ ಯಾರಾದರೂ ಬೇಕಿದ್ದರು” ಎಂದು ಪೋಸ್ಟ್ನಲ್ಲಿ ವಿವರಿಸಿದ್ದಾರೆ ಸಿಂಧು. ವಿರಾಟ್ ಕೊಹ್ಲಿ ಅವರು ನಿಮಿಷಗಳೊಳಗೆ ಸಿಂಧು ಅವರ ಸಂದೇಶಕ್ಕೆ ಉತ್ತರಿಸಿದರು. ಮರುದಿನವೇ ತಮ್ಮ ಪತಿ ವೆಂಕಟ ದತ್ತ ಸಾಯಿ ಜೊತೆಗೆ ಅವರು ವಿರಾಟ್ ಕೊಹ್ಲಿ ಅವರೊಂದಿಗೆ ಸಂಭಾಷಣೆ ನಡೆಸಿದರು. ಪತಿ ವೆಂಕಟ ದತ್ತ ಸಾಯಿ ಪುನರಾಗಮನದ ಹಂತದುದ್ದಕ್ಕೂ ಸಿಂಧು ಅವರಿಗೆ ಆಧಾರಸ್ತಂಭವಾಗಿದ್ದು, ಡೇಟಾದತ್ತ ಗಮನ ಹರಿಸಿ ಅವರ ಈಗಿನ ತಂಡವನ್ನು ಜೋಡಿಸಿದ್ದರು. Shivani, I have to say this first… you’re such an incredible writer. ❤️ I genuinely love reading everything you write. Also… getting Datta to talk this much genuinely feels like an achievement. He’s usually the one asking all the questions, never answering them. The… https://t.co/Pm2GYpQcoj — PV Sindhu (@Pvsindhu1) July 20, 2026 “ವಿರಾಟ್ ಕೊಹ್ಲಿ ಜೊತೆಗೆ ನಾವೇನು ಮಾತನಾಡಿದ್ದೇವೆ ಎನ್ನುವುದು ನಮ್ಮೊಳಗೇ ಇರುತ್ತದೆ. ಆದರೆ ನನಗೆ ಅಗತ್ಯವಿದ್ದ ಸಂದರ್ಭದಲ್ಲಿ ಅವರು ನಮ್ಮ ಜೊತೆಗಿದ್ದರು. ಅವರು ಹೆಚ್ಚೇನೂ ಹೇಳದೆ ಇದ್ದರೂ, ಅವರು ಹೇಳಿದ ಪ್ರತಿಯೊಂದು ವಾಕ್ಯವೂ ನಮ್ಮ ಜೊತೆಗಿತ್ತು. ಕೆಲವು ಸಂಭಾಷಣೆಗಳು ನಮ್ಮ ದೃಷ್ಟಿಕೋನವನ್ನು ಬದಲಿಸುತ್ತವೆ. ಅಂತಹ ಸಂಭಾಷಣೆ ಅದಾಗಿತ್ತು” ಎಂದು ಸಿಂಧು ಪೋಸ್ಟ್ನಲ್ಲಿ ಬರೆದಿದ್ದಾರೆ. ಕೊಹ್ಲಿ ಅವರ ಸಲಹೆ ಸರಳವಾಗಿತ್ತು. “ಪ್ರಶಸ್ತಿಗಳನ್ನು ಬೆನ್ನಟ್ಟುವುದನ್ನು ನಿಲ್ಲಿಸಿ. ಮತ್ತೆ ಆಟದಲ್ಲಿ ಸಂತೋಷವನ್ನು ಕಂಡುಕೊಳ್ಳಿ!” ಸಿಂಧು ಅದನ್ನು ಅಕ್ಷರಶಃ ಅನುಸರಿಸಿದರು. “ನಾನು ಮರೆತಿದ್ದ ದೊಡ್ಡ ವಿಷಯವೆಂದರೆ ಆಟದಲ್ಲಿ ಸಂತೋಷವನ್ನು ಕಂಡುಕೊಳ್ಳುವುದು. ಇಂದು ನಾನು ನಿಖರವಾಗಿ ಐದೂವರೆಗೆ ಏಳುತ್ತೇನೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ ಟ್ರೋಫಿಗಳು ನನಗೆ ಮುಖ್ಯವಲ್ಲ, ಗೆಲುವೂ ಅಲ್ಲ. ಇನ್ನೂ ಆಳವಾದುದೇನೋ ಬೇಕಿದೆ” ಎಂದು ಅವರು ಪೋಸ್ಟ್ನಲ್ಲಿ ಬರೆದಿದ್ದಾರೆ. ಆದರೆ ಕಳೆದ ರವಿವಾರದಂದು ಅವರು ನಿರೀಕ್ಷಿಸದ ಸಂತೋಷವೂ ದೊರೆತಿದೆ. ಸಿಂಧು ಅವರು ಜಪಾನ್ ನಲ್ಲಿ ಆತಿಥೇಯ ರಾಷ್ಟ್ರದ ಗೆಲುವಿನ ನೆಚ್ಚಿನ ಆಟಗಾರ್ತಿ ಅಕಾನೆ ಯಮಗುಚಿ ಅವರನ್ನು 21-17 ಮತ್ತು 21-17ರ ಸೆಟ್ ಗಳಲ್ಲಿ ಸೋಲಿಸಿ, ಜಪಾನ್ ಓಪನ್ ಗೆದ್ದ ಮೊದಲ ಭಾರತೀಯರೆನ್ನುವ ಖ್ಯಾತಿ ಗಳಿಸಿದ್ದಾರೆ. ಅವರು ಮತ್ತೆ ಮೈದಾನದಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. 11-11 ಮತ್ತು 17-17ರ ಹೋರಾಟದ ಹಂತದಲ್ಲೂ ಗೆಲುವನ್ನು ಸಾಧಿಸಿದರು. ಸ್ಪರ್ಧೆಯ ಸಂದರ್ಭದಲ್ಲಿ ಸಿಂಧು ಒಂದೇ ಕ್ಷಣವೂ ವಿಚಲಿತರಾಗಲಿಲ್ಲ. ಆಟದಲ್ಲಿ ಸಂಪೂರ್ಣವಾಗಿ ಲೀನವಾಗಿದ್ದರು. ವಿರಾಟ್ ಕೊಹ್ಲಿಯನ್ನು ಸಂಪರ್ಕಿಸಿದ ನಂತರ ಅವರು ಡಾ. ದಿನ್ಶಾ ಪಾರ್ಡಿವಾಲ ಅವರನ್ನು ಭೇಟಿಯಾದರು. ಗಾಯಗಳು ಗುಣವಾಗಬೇಕೆಂದರೆ ಸಿಂಧು ಅವರು ಮೂರು ತಿಂಗಳು ಸಂಪೂರ್ಣ ವಿಶ್ರಾಂತಿ ಪಡೆದರು. ಆದರೆ ಮರಳಿ ಮೈದಾನಕ್ಕೆ ಇಳಿಯುವುದು ಯಾವಾಗ ಎಂದು ಅವರು ಪದೇಪದೇ ಕೇಳುತ್ತಿದ್ದರು. ವೈದ್ಯರು ದತ್ತಾ ಅವರಿಗೆ ಒಂದೇ ಮಾತು ಹೇಳಿದರು. “ಮೂರು ವಾರಗಳಲ್ಲಿ ಮರಳಿ ಮೈದಾನಕ್ಕೆ ಇಳಿಯುವುದು ಸಾಧ್ಯವಿಲ್ಲ. ಆಕೆಗೆ ವಿರಾಮದ ಅಗತ್ಯವಿದೆ. ಇಲ್ಲದಿದ್ದರೆ ಸುಸ್ತಾಗಿ ಹೋಗಲಿದ್ದಾರೆ!” “ಆಕೆಯ ಸಂತೋಷವನ್ನು ಮರಳಿ ತರಬೇಕಿದೆ” ಎನ್ನುವ ವಿರಾಟ್ ಕೊಹ್ಲಿ ಅವರ ಮಾತುಗಳು ದತ್ತಾ ಅವರನ್ನು ಕೊರೆಯುತ್ತಲೇ ಇತ್ತು. ನಂತರ ಸಿಂಧು ಅಟ್ಲಾಂಟಾದ ಎಕ್ಸೊಸ್ ಸ್ಪೋರ್ಟ್ಸ್ ಪರ್ಫಾರ್ಮೆನ್ಸ್ ಫೆಸಿಲಿಟಿಯಲ್ಲಿ ಮೂವರು ಅದ್ಭುತ ತರಬೇತುದಾರರಾದ ವೇಯ್ನ್, ಟಿಮ್ ಮತ್ತು ರೇಯನ್ ಅವರೊಂದಿಗೆ ತರಬೇತಿ ಪಡೆದರು. “ನನ್ನ ಸಹೋದರಿ ಅಮು ಅಟ್ಲಾಂಟಾದಲ್ಲಿ ನೆಲೆಸಿದ್ದಾರೆ. ಮೂರು ವಾರಗಳ ಕಾಲ ಸಿಂಧು ಅವರನ್ನು ಆಕೆಯೇ ತರಬೇತಿ ಕೇಂದ್ರಕ್ಕೆ ನಿತ್ಯವೂ ಜೊತೆಗೆ ಕರೆದೊಯ್ಯುತ್ತಿದ್ದರು. ಕುಟುಂಬದ ಜೊತೆಗಿರುವ ಸಂತೋಷವೂ ನಮಗಿತ್ತು” ಎನ್ನುತ್ತಾರೆ ದತ್ತಾ. ದತ್ತಾ ಅವರು ಸಿಂಧು ಅವರಿಗೆ ಹೊಸ ತಂಡವನ್ನು ಕಟ್ಟಿದರು. ಡೇಟಾ ವಿಶ್ಲೇಷಣೆಯಲ್ಲಿ ಹೆಚ್ಚು ನಂಬುವ ದತ್ತಾ, 30ರ ವಯಸ್ಸಿನ ಅಥ್ಲೀಟ್ ಗಳಿಗೆ ನೆರವಾಗುವಂತಹ ಪರಿಣತರನ್ನು ಸಂಪರ್ಕಿಸಿದರು. ಹೀಗೆ ಮೂರನೇ ಬಾರಿ ಮೈದಾನಕ್ಕೆ ಪುನರಾಗಮನದ ಯಶಸ್ಸನ್ನು ಸಿಂಧು ಅವರು ಪ್ರಶಸ್ತಿ ಗೆಲ್ಲುವ ಮೂಲಕ ಸಾಧಿಸಿದ್ದಾರೆ. ಮುಖ್ಯವಾಗಿ ತಮ್ಮ ಫಿಟ್ನೆಸ್, ವೇಗ ಮತ್ತು ಸಾಮರ್ಥ್ಯದಲ್ಲಿದ್ದ ಆತ್ಮವಿಶ್ವಾಸದ ಕೊರತೆಯನ್ನು ಅವರು ನೀಗಿಸಿಕೊಂಡಿದ್ದಾರೆ.

ವಾರ್ತಾ ಭಾರತಿ 21 Jul 2026 3:53 pm

ಒಡೆಸ್ಸಾ ಕರಾವಳಿಯಲ್ಲಿ ಭಾರತೀಯರ ರಕ್ತ ಚೆಲ್ಲಿದ ʻಗೆಳೆಯʼನಿಂದ ಬಂದಿಲ್ಲ Sorry ಸಂದೇಶ; ಬರದಿದ್ದರೆ ಎದುರಾಗಲಿದೆ ಕಷ್ಟ!

ಉಕ್ರೇನ್‌ನ ಒಡೆಸ್ಸಾ ಬಂದರು ಸಮೀಪ ಎಂವಿ ಗೋಲ್ಡನ್‌ ಲಿಯೋ ಹೆಸರಿನ ವಾಣಿಜ್ಯ ಹಡಗು ರಷ್ಯಾದ ಕ್ಷಿಪಣಿ ದಾಳಿಗೆ ತುತ್ತಾಗಿದೆ. ಈ ದಾಳಿಯಲ್ಲಿ ನಾಲ್ವರು ಭಾರತೀಯ ನಾವಿಕರು ಮೃತಪಟ್ಟಿದ್ದಾರೆ. ಭಾರತ ಈ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದು, ರಷ್ಯಾದ ರಾಯಭಾರಿಗೆ ಸಮನ್ಸ್‌ ಜಾರಿ ಮಾಡಿದೆ. ಈ ದಾಳಿಯನ್ನು ಅಸ್ವೀಕಾರ ಎಂದು ಹೇಳಿರುವ ಭಾರತದ ವಿದೇಶಾಂಗ ಸಚಿವಾಲಯ, ಜಾಗತಿಕ ಜಲಸಂಚಾರ ಸ್ವಾತಂತ್ರ್ಯಕ್ಕೆ ಧಕ್ಕೆ ತರದಂತೆ ತಾಕೀತು ಮಾಡಿದೆ. ಈ ಕುರಿತು ಇಲ್ಲಿದೆ ಹೆಚ್ಚಿನ ಮಾಹಿತಿ.

ವಿಜಯ ಕರ್ನಾಟಕ 21 Jul 2026 3:50 pm

CJP ಪ್ರತಿಭಟನಾಕಾರರ ವಿರುದ್ಧ ಪೊಲೀಸ್ ಕ್ರಮಕ್ಕೆ ಖಂಡನೆ: ನಿರ್ದೇಶಕ ಅನುರಾಗ್ ಕಶ್ಯಪ್ ಸೇರಿದಂತೆ ಚಿತ್ರರಂಗದ ಗಣ್ಯರಿಂದ ಖಂಡನೆ

ಹೊಸದಿಲ್ಲಿ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಜು.20ರಂದು ನಡೆದ ‘ಚಲೋ ಸಂಸತ್’ ಪ್ರತಿಭಟನೆಯಲ್ಲಿ ಪ್ರತಿಭಟನಾಕಾರರನ್ನು ಚದುರಿಸಲು ದೆಹಲಿ ಪೊಲೀಸರು ಲಾಠಿ ಪ್ರಹಾರ ನಡೆಸಿ ಅಶ್ರುವಾಯು ಪ್ರಯೋಗ ಮಾಡಿರುವ ಕ್ರಮಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಘಟನೆಯ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ ಪೊಲೀಸ್ ಕ್ರಮದ ವಿರುದ್ಧ ಖಂಡನೆ ವ್ಯಕ್ತವಾಗಿದ್ದು, ಖ್ಯಾತ ಚಲನಚಿತ್ರ ನಿರ್ದೇಶಕ ಅನುರಾಗ್ ಕಶ್ಯಪ್, ಹಾಸ್ಯನಟ ಹಾಗೂ ನಟ ವೀರ್ ದಾಸ್, ನಟ ರಿತೇಶ್ ದೇಶ್ಮುಖ್, ನಟಿ ಜೆನಿಲಿಯಾ ದೇಶ್ಮುಖ್ ಮತ್ತು ನಟಿ ಹುಮಾ ಖುರೇಷಿ ಸೇರಿದಂತೆ ಹಲವು ಚಿತ್ರರಂಗದ ಗಣ್ಯರು ಸಾರ್ವಜನಿಕವಾಗಿ ಖಂಡಿಸಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅನುರಾಗ್ ಕಶ್ಯಪ್, ‘ಪೊಲೀಸ್ ಸಮವಸ್ತ್ರ ಧರಿಸಲು ಆತ್ಮ ಮತ್ತು ಆತ್ಮಸಾಕ್ಷಿಯನ್ನು ಮಾರಿಕೊಳ್ಳಬೇಕು ಎಂಬುದು ನನಗೆ ತಿಳಿದಿರಲಿಲ್ಲ. ಇದು ತಪ್ಪು ಆದೇಶವಾಗಿರುವುದರಿಂದ ನಾನು ಇದನ್ನು ಪಾಲಿಸುವುದಿಲ್ಲ ಎಂದು ಎದ್ದು ನಿಂತು ಹೇಳಬಲ್ಲ ಒಬ್ಬನೇ ಒಬ್ಬ ಪೊಲೀಸ್ ಸಿಬ್ಬಂದಿ ಈ ದೇಶದಲ್ಲಿದ್ದಾರೆಯೇ?’ ಎಂದು ಪ್ರಶ್ನಿಸಿದ್ದಾರೆ. ಸ್ಟ್ಯಾಂಡ್–ಅಪ್ ಕಮೇಡಿಯನ್, ನಟ ಹಾಗೂ ಚಲನಚಿತ್ರ ನಿರ್ಮಾಪಕ ವೀರ್ ದಾಸ್ ಕೂಡ ಪ್ರತಿಭಟನಾಕಾರರ ವಿರುದ್ಧದ ಕ್ರಮವನ್ನು ಟೀಕಿಸಿದ್ದು, ಈ ವಿಚಾರದಲ್ಲಿ ಚಿತ್ರರಂಗದ ಹಲವರ ಮೌನವನ್ನು ಪ್ರಶ್ನಿಸಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ಅವರು, ‘ನೀವು ಭಾರತದ ಕಲಾವಿದರಾಗಿದ್ದು, ಯುವಜನರ ಪರವಾಗಿ ಧ್ವನಿ ಎತ್ತದೆ, ಬಳಿಕ ಅವರಿಗೆ ಟಿಕೆಟ್ ಗಳನ್ನು ಮಾರಾಟ ಮಾಡಲು ಯತ್ನಿಸುವುದು ಶುದ್ಧ ಡೋಂಗಿತನ’ ಎಂದು ಬರೆದಿದ್ದಾರೆ. ‘ಭಾರತೀಯ ಪ್ರೇಕ್ಷಕರು ಕಾಳಜಿ ವಹಿಸುವ ವಿಷಯಗಳಲ್ಲಿ ಮೌನ ಪ್ರೇಕ್ಷಕರಾಗಿದ್ದು, ಬಳಿಕ ಅದೇ ಪ್ರೇಕ್ಷಕರು ನಿಮಗಾಗಿ ಧ್ವನಿ ಎತ್ತಬೇಕು ಹಾಗೂ ನಿಮ್ಮ ಬಗ್ಗೆ ಕಾಳಜಿ ವಹಿಸಬೇಕು ಎಂದು ನಿರೀಕ್ಷಿಸುವುದು ಒಂದು ರೀತಿಯ ವಿಲಾಸಿತನ. ನಿಮ್ಮ ಕೆಲಸವನ್ನು ನೀವೇ ನೋಡಿಕೊಳ್ಳಿ. ಆದರೆ ನನ್ನ ವಿಷಯಕ್ಕೆ ಬಂದಾಗ ಮಾತ್ರ ಬೆಂಬಲಕ್ಕೆ ಬನ್ನಿ ಎಂಬುದು ನಡೆಯುವುದಿಲ್ಲ. ಭಾರತದ ಕಾನ್ಸರ್ಟ್ಗಳ ಆರ್ಥಿಕತೆ ಯುವಜನರು ಒಟ್ಟುಗೂಡುವುದರ ಮೇಲೆ ನಿರ್ಮಾಣವಾಗಿದೆ’ ಎಂದು ಹೇಳಿದ್ದಾರೆ. ‘ಇದು ಈಗ ಕೇವಲ ಯುವಜನರ ಭವಿಷ್ಯದ ಪ್ರಶ್ನೆಯಾಗಿದೆ. ಅವರು ಕಾಳಜಿ ವಹಿಸುವ ವಿಷಯಗಳಿಗೆ ವೇದಿಕೆ ಕಲ್ಪಿಸುವ ಮೂಲಕ ಅವರನ್ನು ಬೆಂಬಲಿಸಬಹುದು’ ಎಂದು ವೀರ್ ದಾಸ್ ಹೇಳಿದ್ದಾರೆ. ಬಾಲಿವುಡ್ ನಟ ರಿತೇಶ್ ದೇಶ್ಮುಖ್ ಮತ್ತು ಅವರ ಪತ್ನಿ, ನಟಿ ಜೆನಿಲಿಯಾ ದೇಶ್ಮುಖ್ ಅವರು ಎಕ್ಸ್ನಲ್ಲಿ ಜಂಟಿ ಹೇಳಿಕೆ ಪ್ರಕಟಿಸಿದ್ದು, ‘ನಾವು ನಮ್ಮ ದೇಶದ ಯುವಜನರೊಂದಿಗೆ ದೃಢವಾಗಿ ನಿಲ್ಲುತ್ತೇವೆ. ಅವರ ಧ್ವನಿಗಳು ಸ್ಪಷ್ಟವಾಗಿ, ಗಟ್ಟಿಯಾಗಿ ಮತ್ತು ಯಾವುದೇ ಭಯವಿಲ್ಲದೆ ಕೇಳಿಸಬೇಕು. ಅವರು ನಮ್ಮ ಪ್ರಜಾಪ್ರಭುತ್ವದ ಹೃದಯಬಡಿತ ಹಾಗೂ ನಮ್ಮ ರಾಷ್ಟ್ರದ ಭವಿಷ್ಯದ ನಿಜವಾದ ಶಿಲ್ಪಿಗಳು. ಅವರ ಮಾತುಗಳನ್ನು ಕೇಳೋಣ, ಅವರನ್ನು ಬೆಂಬಲಿಸೋಣ ಮತ್ತು ಸಶಕ್ತಗೊಳಿಸೋಣ’ ಎಂದು ಹೇಳಿದ್ದಾರೆ. ನಟಿ ಹುಮಾ ಖುರೇಷಿ ಕೂಡ ವಿದ್ಯಾರ್ಥಿಗಳಿಗೆ ಬೆಂಬಲ ಸೂಚಿಸಿದ್ದು, ‘ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಇಷ್ಟೊಂದು ಬಲಪ್ರಯೋಗ ಮತ್ತು ಲಾಠಿ ಪ್ರಹಾರ ನಡೆದಿರುವುದನ್ನು ಕಂಡು ನನಗೆ ತೀವ್ರ ದುಃಖವಾಯಿತು. ಹೆಚ್ಚಿನ ತಾಳ್ಮೆ, ಮಾತುಕತೆ ಮತ್ತು ಆಲಿಸುವಿಕೆಯ ಮೂಲಕ ಈ ಪರಿಸ್ಥಿತಿಯನ್ನು ನಿಭಾಯಿಸಬಹುದಿತ್ತು. ಭಾರತದ ಪ್ರಜೆಗಳಾದ ನಾವು ಈ ಸರ್ಕಾರವನ್ನು ಆಯ್ಕೆ ಮಾಡಿದ್ದೇವೆ. ಇಂದು ನಾವೆಲ್ಲರೂ ಪ್ರಶ್ನೆಗಳನ್ನು ಕೇಳಬೇಕು ಹಾಗೂ ಹೊಣೆಗಾರಿಕೆಯನ್ನು ನಿರೀಕ್ಷಿಸಬೇಕು’ ಎಂದು ಹೇಳಿದ್ದಾರೆ. ಪ್ರತಿಭಟನಾಕಾರರ ವಿರುದ್ಧ ದಿಲ್ಲಿ ಪೊಲೀಸರು ಕೈಗೊಂಡ ಕ್ರಮವನ್ನು ಟೀಕಿಸಿರುವ ಅವರು, ಶಾಂತಿಯುತ ಪ್ರತಿಭಟನೆಗಳ ಸಂದರ್ಭದಲ್ಲಿ ಸಂಯಮ, ಸಂವಾದ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಪಾಲಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ವಾರ್ತಾ ಭಾರತಿ 21 Jul 2026 3:49 pm

Bescom Alert: ಜಯನಗರ, ಜೆಪಿ ನಗರ- ಸಾರಕ್ಕಿ ಸೇರಿದಂತೆ ಹಲವೆಡೆ ಬುಧವಾರ ಇಡೀ ದಿನ ವಿದ್ಯುತ್‌ ವ್ಯತ್ಯಯ

ಜಯನಗರ, ಜೆಪಿ ನಗರ, ಸಾರಕ್ಕಿ ಸೇರಿದಂತೆ ನಗರದ ಹಲವೆಡೆ ವಿದ್ಯುತ್‌ ವ್ಯತ್ಯಯ ಆಗಲಿದೆ. ತುರ್ತು ನಿರ್ವಹಣಾ ಕಾಮಗಾರಿಗಳ ಸಂಬಂಧ ಬೆಸ್ಕಾಂ ಪೂರ್ವ ಮುನ್ಸೂಚನೆಯೊಂದಿಗೆ ಹಲವು ಪ್ರದೇಶಗಳಿಗೆ ಅಲರ್ಟ್ ನೀಡಿದೆ.

ವಿಜಯ ಕರ್ನಾಟಕ 21 Jul 2026 3:45 pm

170ಕ್ಕೂ ಹೆಚ್ಚು ಜನರಿಗೆ ಗಾಯ, 5 FIR ಗಳು: CJP – ಸರಕಾರದ ನಡುವಿನ ಸಂಘರ್ಷದಲ್ಲಿ ಏನೇನಾಯ್ತು?

170ಕ್ಕೂ ಹೆಚ್ಚು ಜನರಿಗೆ ಗಾಯ, 5 FIR ಗಳು: CJP – ಸರಕಾರದ ನಡುವಿನ ಸಂಘರ್ಷದಲ್ಲಿ ಏನೇನಾಯ್ತು? ದಿಲ್ಲಿಯಲ್ಲಿ ಸಂಸತ್ ಭವನತ್ತ ಮಾರ್ಚ್ ನಡೆಸಿದ್ದ 'ಕಾಕ್ರೋಚ್ ಜನತಾ ಪಾರ್ಟಿ' (CJP) ನೇತೃತ್ವದ ಪ್ರತಿಭಟನಾಕಾರರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದ ನಂತರವೂ, ಮಧ್ಯರಾತ್ರಿಯಲ್ಲೂ ಜಂತರ್ ಮಂತರ್ನಲ್ಲಿ ಅಪಾರ ಸಂಖ್ಯೆಯ ಜನರು ನೆರೆದು ಕೇಂದ್ರ ಸರಕಾರ ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ವಿರುದ್ಧ ಘೋಷಣೆಗಳನ್ನು ಕೂಗಿದರು. ಪ್ರತಿಭಟನೆ 24ನೇ ದಿನಕ್ಕೆ ಕಾಲಿಟ್ಟಿದ್ದಂತೆ, ರಾಜಧಾನಿಯಲ್ಲಿ ಮಂಗಳವಾರವೂ ಬಿಗಿ ಭದ್ರತೆ ಮುಂದುವರಿದಿತ್ತು. 'ಸಂಸದ್ ಚಲೋ' ಮೆರವಣಿಗೆಯ ವೇಳೆ ನಡೆದ ಹಿಂಸಾಚಾರದಲ್ಲಿ ಪ್ರತಿಭಟನಾಕಾರರು ಮತ್ತು ಭದ್ರತಾ ಸಿಬ್ಬಂದಿ ಸೇರಿ 170ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. CJPಯ ನಿಲುವೇನು? ಪೊಲೀಸರು ಮತ್ತೆ ಯುವಕರ ಮೇಲೆ ಹಲ್ಲೆ ನಡೆಸಬಹುದು ಎಂಬ ಕಾರಣದಿಂದ ಇನ್ನು ಮುಂದೆ ಮೆರವಣಿಗೆ ನಡೆಸುವುದಿಲ್ಲ ಎಂದು CJP ಸಂಸ್ಥಾಪಕ ಅಭೀಜಿತ್ ದೀಪ್ಕೆ ಘೋಷಿಸಿದ್ದಾರೆ ಎಂದು ರಾಯ್ಟರ್ಸ್ ಸುದ್ದಿಸಂಸ್ಥೆ ವರದಿ ಮಾಡಿದೆ. ಆದರೆ, ಹೋರಾಟವನ್ನು ಮುಂದುವರಿಸುವುದಾಗಿ ಭರವಸೆ ನೀಡಿರುವ ಅವರು, 20ಕ್ಕೂ ಹೆಚ್ಚು ವಿದ್ಯಾರ್ಥಿಗಳ ಸಾವುಗಳಿಗೆ ಕಾರಣರಾಗಿರುವ ಒಬ್ಬ ಧರ್ಮೇಂದ್ರ ಪ್ರಧಾನ್ ಅವರನ್ನು ರಕ್ಷಿಸಲು, ಸರಕಾರವು ಇನ್ನೂ ಹೆಚ್ಚಿನ ಯುವ ವಿದ್ಯಾರ್ಥಿಗಳ ರಕ್ತ ಹರಿಸಲು ಸಿದ್ಧವಾಗಿತ್ತು... ನಾವು ನಿಮಗಾಗಿ ಹೋರಾಟವನ್ನು ಮುಂದುವರಿಸುತ್ತೇವೆ ಎಂದು 'ಎಕ್ಸ್' ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ನಮ್ಮ ಎಲ್ಲ ಬೆಂಬಲಿಗರಲ್ಲಿ, ವಿಶೇಷವಾಗಿ ಪುರುಷ ಪೊಲೀಸ್ ಅಧಿಕಾರಿಗಳಿಂದ ಕ್ರೂರವಾಗಿ ಹಲ್ಲೆಗೊಳಗಾದ ಯುವತಿಯರಲ್ಲಿ ನಾನು ಕ್ಷಮೆ ಯಾಚಿಸುತ್ತೇನೆ. ನಾವು ಪರಿಸ್ಥಿತಿಯನ್ನು ಇನ್ನಷ್ಟು ಉತ್ತಮವಾಗಿ ನಿಭಾಯಿಸಬೇಕಿತ್ತು. ದಿಲ್ಲಿ ಪೊಲೀಸರ ಅಮಾನವೀಯ ಕೃತ್ಯಗಳಿಂದ ನಿಮ್ಮನ್ನು ರಕ್ಷಿಸಲು ನಾನು ಇನ್ನೂ ಹೆಚ್ಚಿನ ಪ್ರಯತ್ನ ಮಾಡಬೇಕಿತ್ತು ಎಂದು ದೀಪ್ಕೆ ಬರೆದುಕೊಂಡಿದ್ದಾರೆ. I apologise to all our supporters, especially the girls who were brutally beaten by male police officers. We could have done better. I could have done better to protect you from the inhumane actions of the Delhi Police. To protect one Dharmendra Pradhan, who is responsible for… — Abhijeet Dipke (@abhijeet_dipke) July 21, 2026 ಪ್ರಧಾನಿ ನರೇಂದ್ರ ಮೋದಿ ಅವರ ರಾಜೀನಾಮೆಗೆ ಪಟ್ಟು ಹಿಡಿದಿರುವ CJP, ಸರಕಾರವು ಸಂಪೂರ್ಣವಾಗಿ ತನಗೆ ತಾನೇ ನಾಚಿಕೆಗೇಡು ಮಾಡಿಕೊಂಡಿದೆ ಎಂದು ಹೇಳಿದೆ. ಅವರಿಗೆ ಇಷ್ಟವಿದ್ದರೆ ರಾಜೀನಾಮೆ ಎಂದೋ ಆಗುತ್ತಿತ್ತು. ಆದರೆ ಬಿಜೆಪಿ ನಾಯಕರೆಲ್ಲರೂ ಅಹಂಕಾರದಲ್ಲಿದ್ದಾರೆ ಎಂದು ಸಂಘಟನೆ ದೂರಿದೆ. ►ಪೊಲೀಸರಿಂದ ಸಿಕ್ಕಿರುವ ಇತ್ತೀಚಿನ ಮಾಹಿತಿ ಏನು? ಈ ಹಿಂಸಾಚಾರವು ನಗರದ ಶಾಂತಿ ಭಂಗಗೊಳಿಸುವ ದೊಡ್ಡ ಸಂಚಿನ ಭಾಗವೇ ಎಂಬುದನ್ನು ತಿಳಿಯಲು ದಿಲ್ಲಿ ಪೊಲೀಸರು ಐದು FIR ಗಳನ್ನು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ದಂಗೆ, ಸರಕಾರಿ ಮತ್ತು ಖಾಸಗಿ ಆಸ್ತಿಗೆ ಹಾನಿ ಹಾಗೂ ಕರ್ತವ್ಯನಿರತ ಸರಕಾರಿ ನೌಕರರ ಮೇಲೆ ಹಲ್ಲೆಗೆ ಸಂಬಂಧಿಸಿದ ವಿಭಾಗಗಳ ಅಡಿಯಲ್ಲಿ ಪಾರ್ಲಿಮೆಂಟ್ ಸ್ಟ್ರೀಟ್, ಬಾರಾಖಂಬಾ ಮತ್ತು ಕನ್ನಾಟ್ ಪ್ಲೇಸ್ ಪೊಲೀಸ್ ಠಾಣೆಗಳಲ್ಲಿ ಅಪರಿಚಿತ ವ್ಯಕ್ತಿಗಳ ವಿರುದ್ಧ FIR ಗಳನ್ನು ದಾಖಲಿಸಲಾಗಿದೆ. ಹಿಂಸಾಚಾರ ಮತ್ತು ಪೊಲೀಸ್ ಸಿಬ್ಬಂದಿಯ ಮೇಲಿನ ದಾಳಿಯಲ್ಲಿ ಭಾಗವಹಿಸಿದವರನ್ನು ಗುರುತಿಸಲು ತನಿಖಾ ತಂಡವು ಮುಖ ಗುರುತಿಸುವ ತಂತ್ರಜ್ಞಾನ (Facial Recognition) ಹೊಂದಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದೆ ಎಂದು ಮೂಲಗಳು ತಿಳಿಸಿವೆ. ತನಿಖೆಯ ಭಾಗವಾಗಿ ನಾವು ಸಾಮಾಜಿಕ ಜಾಲತಾಣಗಳ ಪೋಸ್ಟ್ ಗಳು ಮತ್ತು ಮೊಬೈಲ್ ಫೋನ್ ರೆಕಾರ್ಡಿಂಗ್ಗಳನ್ನು ಪರಿಶೀಲಿಸುತ್ತಿದ್ದೇವೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಪ್ರತಿಭಟನಾಕಾರರು 15ರಿಂದ 20 ಸರಕಾರಿ ವಾಹನಗಳು ಹಾಗೂ ಇತರ ಸರಕಾರಿ ಆಸ್ತಿಪಾಸ್ತಿಗಳಿಗೆ ಹಾನಿ ಉಂಟುಮಾಡುವ ಮೂಲಕ ಸಾರ್ವಜನಿಕ ಆಸ್ತಿಗೆ ಅಪಾರ ನಷ್ಟ ಉಂಟುಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸುಮಾರು 70 ಪ್ರತಿಭಟನಾಕಾರರನ್ನು ವಶಕ್ಕೆ ಪಡೆಯಲಾಗಿದೆ. ►CJP ಜೊತೆಗಿನ ಮಾತುಕತೆ ಕುರಿತು ನಡ್ಡಾ ಹೇಳಿದ್ದೇನು? ಈ ನಡುವೆ, CJP ಜೊತೆಗಿನ ಮಾತುಕತೆ ಚೆನ್ನಾಗಿ ನಡೆಯಿತು ಎಂದು ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಮಂಗಳವಾರ ತಿಳಿಸಿದ್ದಾರೆ ಎಂದು ANI ವರದಿ ಮಾಡಿದೆ. NDA ಸಂಸದೀಯ ಪಕ್ಷದ 'ಮಂಗಳ ಮಿಲನ' ಸಭೆಗೆ ಆಗಮಿಸಿದ ನಡ್ಡಾ, ಸೋಮವಾರದ ಸಭೆಯ ಕುರಿತು ಪ್ರತಿಕ್ರಿಯಿಸಿ, ಎಲ್ಲವೂ ಚೆನ್ನಾಗಿಯೇ ಇತ್ತು, ಯಾವಾಗಲೂ ಚೆನ್ನಾಗಿಯೇ ಇರುತ್ತದೆ ಎಂದು ಉತ್ತರಿಸಿದ್ದಾರೆ. NEET UG 2026ರ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ ಎಂದು ಆರೋಪಿಸಿ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸುತ್ತಾ ಪ್ರತಿಭಟನಾಕಾರರು ಸಂಸತ್ತಿನತ್ತ ಮೆರವಣಿಗೆ ನಡೆಸುತ್ತಿದ್ದಾಗ, ಸೋಮವಾರ ಜೆ.ಪಿ. ನಡ್ಡಾ ಅವರು ತಮ್ಮ ನಿವಾಸದಲ್ಲಿ 'ಕಾಕ್ರೋಚ್ ಜನತಾ ಪಾರ್ಟಿ' ರಾಷ್ಟ್ರೀಯ ವಕ್ತಾರ ಅಶುತೋಷ್ ರಂಕಾ ಮತ್ತು ಮುಖ್ಯ ವಕ್ತಾರ ಸೌರವ್ ದಾಸ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಅದಕ್ಕೂ ಮುನ್ನ, ಮಾತುಕತೆ ನಡೆಸುವ ಪ್ರಸ್ತಾಪ ಸೋಮವಾರ ಬೆಳಿಗ್ಗೆ ಮೊದಲ ಬಾರಿಗೆ ಪ್ರತಿಭಟನಾಕಾರರಿಂದಲೇ ಬಂತು ಎಂದು ನಡ್ಡಾ ಹೇಳಿದ್ದರು. आज सुबह पहली बार प्रदर्शनकारियों की ओर से सरकार के साथ बातचीत करने का प्रस्ताव आया और सुबह 11:50 AM से ही हमारी बातचीत जारी है। सौहार्दपूर्ण वातावरण में मुलाकात हुई। उनके डेलीगेशन के साथ विस्तार से पहले मौखिक चर्चा हुई और उनके द्वारा लगभग 4 बजे मुझे लिखित याचिका दी गई। मैंने… pic.twitter.com/HLCl20RBSp — Jagat Prakash Nadda (@JPNadda) July 20, 2026 ಇಂದು ಬೆಳಿಗ್ಗೆ, ಸರಕಾರದೊಂದಿಗೆ ಮಾತುಕತೆ ನಡೆಸುವ ಪ್ರಸ್ತಾಪ ಮೊದಲ ಬಾರಿಗೆ ಪ್ರತಿಭಟನಾಕಾರರಿಂದ ಬಂತು. ಬೆಳಿಗ್ಗೆ 11:50ರಿಂದ ನಮ್ಮ ಚರ್ಚೆಗಳು ನಡೆಯುತ್ತಿವೆ. ಸೌಹಾರ್ದಯುತ ವಾತಾವರಣದಲ್ಲಿ ಸಭೆ ನಡೆದಿದ್ದು, ಅವರ ನಿಯೋಗದೊಂದಿಗೆ ವಿವರವಾದ ಪ್ರಾಥಮಿಕ ಮಾತುಕತೆ ನಡೆಸಲಾಗಿದೆ. ಸಂಜೆ 4 ಗಂಟೆಯ ಸುಮಾರಿಗೆ ಅವರು ನನಗೆ ಲಿಖಿತ ಮನವಿ ಸಲ್ಲಿಸಿದ್ದಾರೆ. ಪ್ರತಿಭಟನಾಕಾರರು ತಮ್ಮ ಧರಣಿಯನ್ನು ಕೊನೆಗೊಳಿಸಿ, ಪರಿಸ್ಥಿತಿಯನ್ನು ತಿಳಿಗೊಳಿಸಲು ಆಡಳಿತಕ್ಕೆ ಸಹಕರಿಸಬೇಕು ಎಂದು ನಾನು ವಿನಂತಿಸಿದ್ದೇನೆ ಎಂದು ನಡ್ಡಾ 'ಎಕ್ಸ್' ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಸಭೆಯ ಸಮಯದಲ್ಲಿ, ಅವರ ಬೇಡಿಕೆಗಳ ಕುರಿತು ಆಂತರಿಕ ಚರ್ಚೆ ನಡೆಸುವುದಾಗಿ ಸರಕಾರದ ನಾಯಕತ್ವ ಭರವಸೆ ನೀಡಿದೆ. ►ವಿಪಕ್ಷಗಳು ಹೇಳುವುದೇನು? ಮಾತುಕತೆಯ ಪ್ರಸ್ತಾಪವು ಪ್ರತಿಭಟನಾಕಾರರಿಂದಲೇ ಬಂದಿದೆ ಎಂಬ ನಡ್ಡಾ ಅವರ ಹೇಳಿಕೆಯನ್ನು ರಾಜ್ಯಸಭಾ ಸಂಸದ ಕಪಿಲ್ ಸಿಬಲ್ ಮಂಗಳವಾರ ಟೀಕಿಸಿದ್ದಾರೆ. ಉಪವಾಸ ಕುಳಿತಿರುವ ನಮ್ಮ ಮಕ್ಕಳ ಬೇಡಿಕೆಗಳು ಎಲ್ಲರಿಗೂ ತಿಳಿದಿರುವಾಗ, ಅವರ ಮೇಲೆ ಅಶ್ರುವಾಯು ಸಿಂಪಡಿಸಲು ಮತ್ತು ಲಾಠಿಚಾರ್ಜ್ ಮಾಡಲು ಸರಕಾರ ಕಾಯುತ್ತಿತ್ತೇ? ಎಂದು ಅವರು ಪ್ರಶ್ನಿಸಿದ್ದಾರೆ. ಸೋಮವಾರ CJP ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳ ಮೇಲೆ ನಡೆದ ಲಾಠಿಚಾರ್ಜ್ ಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಕ್ಷಮೆಯಾಚನೆಗೆ ಆಗ್ರಹಿಸಿದ್ದಾರೆ. ಈ ಕೃತ್ಯವನ್ನು ಭಾರತೀಯ ಸಂಸ್ಕೃತಿಗೆ ವಿರುದ್ಧವಾದದ್ದು ಎಂದು ಬಣ್ಣಿಸಿರುವ ಲೋಕಸಭೆಯ ವಿರೋಧ ಪಕ್ಷದ ನಾಯಕ, ಪ್ರಧಾನಿ ಮೋದಿ ಅವರ ಮೌನವನ್ನು ಪ್ರಶ್ನಿಸಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇಲ್ಲಿ ನಡೆಯುತ್ತಿರುವುದು, ಅಂದರೆ ಜನರ ಮೇಲೆ ಹಲ್ಲೆ ಮಾಡುತ್ತಿರುವುದು ಸಂಪೂರ್ಣವಾಗಿ ಭಾರತೀಯ ಪದ್ಧತಿಗೆ ವಿರುದ್ಧವಾದದ್ದು. ನಿನ್ನೆ ನಡೆದ ಘಟನೆಗೆ ಮೋದಿ ಕ್ಷಮೆಯನ್ನೂ ಕೇಳಿಲ್ಲ ಎಂದಿದ್ದಾರೆ. ಲಾಠಿಚಾರ್ಜ್ ಕುರಿತು ಸಂಸತ್ತಿನಲ್ಲಿ ಚರ್ಚೆಗೆ ಅವಕಾಶ ನೀಡುವಂತೆ ಕೋರಿ ರಾಹುಲ್ ಗಾಂಧಿ ಅವರು ಇತರ ವಿಪಕ್ಷ ಸಂಸದರೊಂದಿಗೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿಯಾಗಿದ್ದರು. ಆದರೆ, ಚರ್ಚೆಗೆ ತಕ್ಷಣವೇ ಒಪ್ಪದ ಸ್ಪೀಕರ್, ತಾವು ಮೊದಲು ಕೇಂದ್ರ ಸರಕಾರದಿಂದ ಅನುಮತಿ ಪಡೆಯಬೇಕಾಗಿದೆ ಎಂದು ಹೇಳಿರುವುದಾಗಿ ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಸಂಸತ್ತಿನಲ್ಲಿ ಚರ್ಚೆ ನಡೆಸಲು ಸರಕಾರದ ಅನುಮತಿ ಪಡೆಯಬೇಕು ಎಂದು ಸ್ಪೀಕರ್ ನಮಗೆ ಹೇಳುತ್ತಿರುವುದನ್ನು ಒಮ್ಮೆ ಆಲೋಚಿಸಿ. ಅವರು ಬಹಿರಂಗವಾಗಿಯೇ ಈ ಮಾತನ್ನು ಹೇಳುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ಹೇಳಿದ್ದಾರೆ. ಭಾರತದ ಶಿಕ್ಷಣ ಮತ್ತು ಪರೀಕ್ಷಾ ವ್ಯವಸ್ಥೆಯ ಕುರಿತು ವಿದ್ಯಾರ್ಥಿಗಳು ಎತ್ತುತ್ತಿರುವ ಸಮಸ್ಯೆಗಳ ಬಗ್ಗೆ ಮಾತನಾಡಿದ ರಾಹುಲ್ ಗಾಂಧಿ, ಈ ಕಳವಳಗಳು ಕೇವಲ ಶಿಕ್ಷಣಕ್ಕಷ್ಟೇ ಸೀಮಿತವಾಗಿಲ್ಲ, ಅದಕ್ಕಿಂತ ದೊಡ್ಡದಾಗಿವೆ. ದೇಶದ ಪರೀಕ್ಷಾ ವ್ಯವಸ್ಥೆಯು ಅಸ್ತಿತ್ವವನ್ನೇ ಕಳೆದುಕೊಂಡಿದೆ ಮತ್ತು ಗೆದ್ದಲು ಹಿಡಿದು ಟೊಳ್ಳಾಗಿದೆ ಎಂದು ಹೇಳಿದ ಅವರು, ವಿದ್ಯಾರ್ಥಿಗಳ ಬೇಡಿಕೆ ನ್ಯಾಯಯುತವಾಗಿದೆ ಎಂದಿದ್ದಾರೆ. ಇದರಲ್ಲಿ ಯಾವುದೇ ತಪ್ಪಿಲ್ಲ... ಪ್ರಧಾನಿಯವರು ಯಾಕೆ ಮೌನವಾಗಿದ್ದಾರೆ? ಕಾರಣವೇನು? ಅವರು ವಿದ್ಯಾರ್ಥಿಗಳಲ್ಲಿ ಕ್ಷಮೆಯಾಚಿಸಬೇಕು ಮತ್ತು ಈ ಅನಾಹುತವನ್ನು (ಲಾಠಿಚಾರ್ಜ್) ತಕ್ಷಣವೇ ನಿಲ್ಲಿಸಬೇಕು ಎಂದು ಒತ್ತಾಯಿಸಿದರು. ಕೇಂದ್ರ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ ಮಾಜಿ ಕಾಂಗ್ರೆಸ್ ಅಧ್ಯಕ್ಷರು, ವಿದ್ಯಾರ್ಥಿಗಳ ಕಳವಳಗಳನ್ನು ಆಲಿಸಿ ಶಿಕ್ಷಣ ವ್ಯವಸ್ಥೆ ಹಾಗೂ ಪರೀಕ್ಷಾ ಚೌಕಟ್ಟನ್ನು ಸರಿಪಡಿಸುವ ಬದಲು, ಪೊಲೀಸರ ಮೂಲಕ ಅವರ ಮೇಲೆ ದೌರ್ಜನ್ಯ ಎಸಗಲಾಗುತ್ತಿದೆ ಎಂದರು. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ರಾಜೀನಾಮೆಗೆ ಆಗ್ರಹಿಸಿದ ರಾಹುಲ್, ಗೃಹ ಸಚಿವರು ಪ್ರಧಾನಿಗೆ ವರದಿ ಮಾಡುವುದರಿಂದ ಪ್ರಧಾನಿಯವರೂ ಸಹ ಹುದ್ದೆಯಿಂದ ಕೆಳಗಿಳಿಯಬೇಕು. ಧರ್ಮೇಂದ್ರ ಪ್ರಧಾನ್ ಕೇವಲ ಮಧ್ಯವರ್ತಿ, ಅವರು ಖಂಡಿತವಾಗಿಯೂ ರಾಜೀನಾಮೆ ನೀಡಬೇಕು. ಆದರೆ ಅವರು ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿಲ್ಲ, ಗೃಹ ಸಚಿವರು ಮಾಡಿದ್ದಾರೆ. ಹೀಗಾಗಿ ಗೃಹ ಸಚಿವರು ರಾಜೀನಾಮೆ ನೀಡಬೇಕು. ಗೃಹ ಸಚಿವರು ಪ್ರಧಾನಿಗೆ ವರದಿ ಮಾಡುವುದರಿಂದ ಪ್ರಧಾನಿಯವರೂ ರಾಜೀನಾಮೆ ನೀಡಬೇಕು. ದೇಶದಲ್ಲಿ ಏನು ನಡೆಯುತ್ತಿದೆ? ಎಂದು ಪ್ರಶ್ನಿಸಿದರು. ರಾಹುಲ್ ಗಾಂಧಿ ಅವರ ಮಾತನ್ನೇ ಪುನರುಚ್ಚರಿಸಿದ ಸಮಾಜವಾದಿ ಪಾರ್ಟಿ ಮುಖ್ಯಸ್ಥ ಅಖಿಲೇಶ್ ಯಾದವ್, ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಲು ಸರಕಾರ ತನ್ನ ಖಾಸಗಿ ಸೈನ್ಯವನ್ನು ಬಳಸಿಕೊಂಡಿದೆ ಎಂದು ಆರೋಪಿಸಿದ್ದು, ಮೋದಿ ನೇತೃತ್ವದ NDA ಸರಕಾರವನ್ನು ಹಿಟ್ಲರ್ ಆಡಳಿತಕ್ಕೆ ಹೋಲಿಸಿದರು. ಸರಕಾರ ನಿನ್ನೆ ವಿದ್ಯಾರ್ಥಿಗಳ ವಿರುದ್ಧ ಖಾಸಗಿ ಸೈನ್ಯವನ್ನು ಬಳಸಿದೆ. ಹಿಟ್ಲರ್ ತನ್ನ ಸ್ವಂತ ಜನರ ವಿರುದ್ಧ ಖಾಸಗಿ ಸೈನ್ಯವನ್ನು ಬಳಸುತ್ತಿದ್ದ. ಅದೇ ರೀತಿ ಈ ಸರಕಾರವೂ ವಿದ್ಯಾರ್ಥಿಗಳನ್ನು ಹತೋಟಿಯಲ್ಲಿಡಲು ಖಾಸಗಿ ಸೈನ್ಯವನ್ನು ಬಳಸಿದೆ ಎಂದು ಅವರು ಆರೋಪಿಸಿದರು. ತಮ್ಮ ಸಚಿವರು ತಮ್ಮ ರಹಸ್ಯಗಳನ್ನು ಹೊರಹಾಕುತ್ತಾರೆ ಎಂಬ ಭಯದಿಂದ ಕೇಂದ್ರ ಸರಕಾರಕ್ಕೆ ಅವರನ್ನು ವಜಾಗೊಳಿಸಲು ಸಾಧ್ಯವಾಗುತ್ತಿಲ್ಲ ಎಂದು ಯಾದವ್ ಹೇಳಿದರು. ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ಕೂಡ ಕೇಂದ್ರ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಇತ್ತೀಚಿನ ದಿನಗಳಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಸಾಮಾನ್ಯ ಸಂಗತಿಯಾಗಿದೆ. ಈ ಬಗ್ಗೆ ಯಾವುದೇ ಕಠಿಣ ಕ್ರಮ ಕೈಗೊಳ್ಳಲಾಗುತ್ತಿಲ್ಲ ಎಂದರು. ನಾನು ಉತ್ತರ ಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದಾಗಲೂ ಪ್ರಶ್ನೆಪತ್ರಿಕೆ ಸೋರಿಕೆಗಳು ನಡೆಯುತ್ತಿದ್ದವು. ಒಬ್ಬಿಬ್ಬರು ಕೆಳಹಂತದ ಅಧಿಕಾರಿಗಳನ್ನು ಬಂಧಿಸಿ, ಎರಡು ದಿನ ಪೊಲೀಸ್ ಠಾಣೆಯಲ್ಲಿಟ್ಟು ನಂತರ ವಿಷಯವನ್ನು ಅಲ್ಲಿಗೇ ಮುಗಿಸಲಾಗುತ್ತಿತ್ತು. ಯಾರ ವಿರುದ್ಧವೂ ಸೂಕ್ತ ಕ್ರಮ ಜರುಗುತ್ತಿರಲಿಲ್ಲ. ಈ ವಿಚಾರವು ದೇಶದ ಯುವಕರ ಭವಿಷ್ಯಕ್ಕೆ ಸಂಬಂಧಿಸಿದ್ದರಿಂದ ಅತ್ಯಂತ ಗಂಭೀರವಾಗಿದೆ. ತಮ್ಮ ಭವಿಷ್ಯ ಏನಾಗುವುದೋ ಎಂದು ಯುವಕರು ಆತಂಕದಲ್ಲಿದ್ದಾರೆ. ಹೆತ್ತವರು ಸಾಲ ಮಾಡಿ, ಕಷ್ಟಪಟ್ಟು ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದಾರೆ. ತಾವೆಷ್ಟು ಕಷ್ಟಪಡುತ್ತಿದ್ದೇವೆ ಮತ್ತು ಪರಿಸ್ಥಿತಿ ಎಷ್ಟು ಕಠಿಣವಾಗಿದೆ ಎಂದು ವಿದ್ಯಾರ್ಥಿಗಳೇ ಹೇಳುತ್ತಿದ್ದಾರೆ. ಕೋಚಿಂಗ್ ಸೆಂಟರ್ಗಳನ್ನು ನೋಡಿ, ನಾನು ಹಲವು ಕೇಂದ್ರಗಳಿಗೆ ಭೇಟಿ ನೀಡಿದ್ದೇನೆ. ಮಕ್ಕಳು ವ್ಯಾಸಂಗ ಮಾಡುವಾಗ ಅನುಭವಿಸುವ ಒತ್ತಡ ಮತ್ತು ಪರೀಕ್ಷೆಯ ಸಮಯದಲ್ಲಿ ಎದುರಿಸುವ ಆತಂಕ ಹಾಗೂ ಮಾನಸಿಕ ಕಿರುಕುಳ ಪ್ರತಿಯೊಬ್ಬ ಪೋಷಕರಿಗೂ ತಿಳಿದಿದೆ. ಇದು ನಿಜಕ್ಕೂ ಸವಾಲಿನ ಪರಿಸ್ಥಿತಿ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ. ಎಷ್ಟು ಪ್ರತಿಭಟನಾಕಾರರು ಗಾಯಗೊಂಡಿದ್ದಾರೆ? ಬೆಳಿಗ್ಗೆ ಆರಂಭವಾದ ಮೆರವಣಿಗೆಗೆ ಹಲವು ಕಡೆಗಳಲ್ಲಿ ಪೊಲೀಸರು ಬ್ಯಾರಿಕೇಡ್ ಗಳನ್ನು ನಿರ್ಮಿಸಿದ್ದರು. ದಿನವಿಡೀ ಪ್ರತಿಭಟನಾಕಾರರ ಸಂಖ್ಯೆ 12,000ರಿಂದ 50,000ಕ್ಕೆ ಏರಿಕೆಯಾಗುತ್ತಿದ್ದಂತೆ, ವಾಯುವ್ಯದ ಕನ್ನಾಟ್ ಪ್ಲೇಸ್ ಬಳಿಯ ಗೋಲ್ ಡಾಕ್ ಖಾನಾದಿಂದ ಜಂತರ್ ಮಂತರ್ ಮೂಲಕ ಆಗ್ನೇಯದ ಇಂಡಿಯಾ ಗೇಟ್ ವರೆಗೆ ಹರಡಿದ್ದ ಪ್ರತಿಭಟನಾ ಸ್ಥಳಗಳಲ್ಲಿ ಅಶ್ರುವಾಯು ಮತ್ತು ಲಾಠಿಚಾರ್ಜ್ ಬಳಸಲಾಯಿತು. ಸೋಮವಾರ ಸಂಜೆ 5.30ರ ವೇಳೆಗೆ, 90 ಪ್ರತಿಭಟನಾಕಾರರು ಹಾಗೂ 10 ಪೊಲೀಸರು ಸೇರಿದಂತೆ 100ಕ್ಕೂ ಹೆಚ್ಚು ಜನರಿಗೆ ರಾಮ್ ಮನೋಹರ್ ಲೋಹಿಯಾ (RML) ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದಲ್ಲಿ ಚಿಕಿತ್ಸೆ ನೀಡಲಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. RML ಆಸ್ಪತ್ರೆಯ ತುರ್ತು ವಿಭಾಗವು ರೋಗಿಗಳಿಂದ ಭರ್ತಿಯಾದ ನಂತರ, ಇನ್ನೂ ಹಲವರನ್ನು ಲೇಡಿ ಹಾರ್ಡಿಂಗ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ►ಪೊಲೀಸರ ಆರೋಪವೇನು? ಸೋಮವಾರ ಪ್ರತಿಭಟನಾಕಾರರು ಕಲ್ಲುಗಳು ಮತ್ತು ಇತರ ವಸ್ತುಗಳಿಂದ ದಾಳಿ ನಡೆಸಿ ಬೃಹತ್ ಮಟ್ಟದ ಹಿಂಸಾಚಾರ ನಡೆಸಿದ್ದರಿಂದ, ಕೆಲವು ಹಿರಿಯ ಅಧಿಕಾರಿಗಳು ಸೇರಿದಂತೆ 118ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ದಿಲ್ಲಿ ಪೊಲೀಸರು ತಿಳಿಸಿದ್ದಾರೆ. ಈ ಘರ್ಷಣೆಯ ಸಮಯದಲ್ಲಿ ಸುಮಾರು 60 ಪ್ರತಿಭಟನಾಕಾರರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಪ್ರತಿಭಟನಾಕಾರರು ಉಗ್ರ ಮತ್ತು ಹಿಂಸಾತ್ಮಕ ನಡವಳಿಕೆಯನ್ನು ಪ್ರದರ್ಶಿಸಿದರು. ಪೊಲೀಸರು ನೀಡಿದ ಪದೇಪದೇ ಎಚ್ಚರಿಕೆಗಳು ಮತ್ತು ಕಾನೂನುಬದ್ಧ ನಿರ್ದೇಶನಗಳನ್ನು ಲೆಕ್ಕಿಸದೆ, ಅವರು ಚದುರಿಹೋಗಲು ನಿರಾಕರಿಸಿದರು ಹಾಗೂ ಜಾರಿಯಲ್ಲಿದ್ದ ನಿಷೇಧಾಜ್ಞೆಯನ್ನು ಉದ್ದೇಶಪೂರ್ವಕವಾಗಿ ಉಲ್ಲಂಘಿಸಿದರು. ಪ್ರತಿಭಟನಾಕಾರರು ಕಲ್ಲುಗಳು ಮತ್ತು ಇತರ ವಸ್ತುಗಳಿಂದ ಪೊಲೀಸ್ ಸಿಬ್ಬಂದಿಯ ಮೇಲೆ ದಾಳಿ ನಡೆಸಿದರು, ಪೊಲೀಸ್ ಬ್ಯಾರಿಕೇಡ್ಗಳನ್ನು ಮುರಿಯಲು ಯತ್ನಿಸಿದರು, ಪೊಲೀಸ್ ಮತ್ತು ಇತರ ಸರಕಾರಿ ವಾಹನಗಳನ್ನು ಧ್ವಂಸಗೊಳಿಸಿದರು, ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿದರು. ಬೃಹತ್ ಮಟ್ಟದ ಹಿಂಸಾಚಾರಕ್ಕೆ ಇಳಿಯುವ ಮೂಲಕ ಸಾರ್ವಜನಿಕ ಶಾಂತಿ, ಭದ್ರತಾ ವ್ಯವಸ್ಥೆ ಮತ್ತು ಕರ್ತವ್ಯನಿರತ ಪೊಲೀಸ್ ಸಿಬ್ಬಂದಿಯ ಸುರಕ್ಷತೆಗೆ ಗಂಭೀರ ಬೆದರಿಕೆ ಒಡ್ಡಿದರು ಎಂದು ಪೊಲೀಸರು ಹೇಳಿದ್ದಾರೆ.

ವಾರ್ತಾ ಭಾರತಿ 21 Jul 2026 3:45 pm

'ನಮ್ಮನ್ನು ಇದರಲ್ಲಿ ಎಳೆದು ತರಬೇಡಿ': ವಿದ್ಯಾರ್ಥಿಗಳ ಮೇಲಿನ ಪೊಲೀಸ್ ಬಲಪ್ರಯೋಗ ಆರೋಪದ ಅರ್ಜಿಗೆ ತುರ್ತು ವಿಚಾರಣೆ ನಿರಾಕರಿಸಿದ ದೆಹಲಿ ಹೈಕೋರ್ಟ್

ಹೊಸದಿಲ್ಲಿ: ಸಂಸತ್ ಚಲೋ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳ ವಿರುದ್ಧ ದಿಲ್ಲಿ ಪೊಲೀಸರು ಅತಿಯಾದ ಬಲಪ್ರಯೋಗ ನಡೆಸಿದ್ದಾರೆ ಎಂದು ಆರೋಪಿಸಿ ಸಲ್ಲಿಸಲಾದ ಅರ್ಜಿಯನ್ನು ತುರ್ತಾಗಿ ವಿಚಾರಣೆಗೆ ಕೈಗೆತ್ತಿಕೊಳ್ಳಲು ದೆಹಲಿ ಹೈಕೋರ್ಟ್ ಮಂಗಳವಾರ ನಿರಾಕರಿಸಿದೆ. ಪ್ರಕರಣವನ್ನು ಬುಧವಾರ ವಿಚಾರಣೆಗೆ ಪಟ್ಟಿ ಮಾಡುವುದಾಗಿ ನ್ಯಾಯಾಲಯ ತಿಳಿಸಿದೆ. ಮುಖ್ಯ ನ್ಯಾಯಮೂರ್ತಿ ಡಿ.ಕೆ. ಉಪಾಧ್ಯಾಯ ಹಾಗೂ ನ್ಯಾಯಮೂರ್ತಿ ತೇಜಸ್ ಕರಿಯಾ ಅವರಿದ್ದ ವಿಭಾಗೀಯ ಪೀಠದ ಮುಂದೆ ಅರ್ಜಿದಾರರು ತುರ್ತು ವಿಚಾರಣೆಗೆ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಇದೆಲ್ಲದರಲ್ಲೂ ನ್ಯಾಯಾಲಯವನ್ನು ಎಳೆದು ತರಬೇಡಿ ಎಂದು ಹೇಳಿತು. ಸೋಮವಾರ ಸಂಸತ್ ಭವನದತ್ತ ಕಾಕ್ರೋಚ್‌ ಜನತಾ ಪಾರ್ಟಿ(CJP) ನಡೆಸಿದ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳ ವಿರುದ್ಧ ದಿಲ್ಲಿ ಪೊಲೀಸರು ಅತಿಯಾದ ಬಲಪ್ರಯೋಗ ನಡೆಸಿದ್ದಾರೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ. ಪ್ರತಿಭಟನಾಕಾರರ ವಿರುದ್ಧ ಪೊಲೀಸರು ಅನಗತ್ಯವಾಗಿ ಹಾಗೂ ಅತಿಯಾದ ಶಕ್ತಿಯನ್ನು ಬಳಸಿದ್ದು, ಈ ಬಗ್ಗೆ ತುರ್ತು ವಿಚಾರಣೆ ನಡೆಸಬೇಕು ಎಂದು ಅರ್ಜಿದಾರರು ಕೋರಿದ್ದರು. NEET ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಒತ್ತಾಯಿಸಿ ಕಾಕ್ರೋಚ್‌ ಜನತಾ ಪಾರ್ಟಿಯು 21 ದಿನಗಳ ಉಪವಾಸ ಸತ್ಯಾಗ್ರಹ ಆರಂಭಿಸಿತ್ತು. ಈ ಸತ್ಯಾಗ್ರಹಕ್ಕೆ ಬೆಂಬಲ ನೀಡುತ್ತಿದ್ದ ಪರಿಸರ ಕಾರ್ಯಕರ್ತ ಸೋನಮ್ ವಾಂಗ್ಚುಕ್ ಅವರನ್ನು ಶನಿವಾರ ಬಲವಂತವಾಗಿ ಆಸ್ಪತ್ರೆಗೆ ದಾಖಲಿಸಿದ ಬಳಿಕ ಪ್ರತಿಭಟನೆ ತೀವ್ರಗೊಂಡಿತ್ತು. ಅದರ ಮುಂದುವರಿದ ಭಾಗವಾಗಿ ಸೋಮವಾರ ಹೊಸದಿಲ್ಲಿಯ ಜಂತರ್ ಮಂತರ್ ನಲ್ಲಿ ವಿದ್ಯಾರ್ಥಿಗಳು ಮತ್ತು ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಅಶ್ರುವಾಯು ಶೆಲ್ ಗಳನ್ನು ಪ್ರಯೋಗಿಸಿದರು. ಇದಕ್ಕೆ ಪ್ರತಿಯಾಗಿ ಕೆಲವರು ಕಲ್ಲು ತೂರಾಟ ನಡೆಸಿದರು. ಪೊಲೀಸರು ಜನರನ್ನು ಚದುರಿಸಲು ಮುಂದಾದಾಗ ಹಲವರು ಸ್ಥಳದಿಂದ ಓಡಿ ರಕ್ಷಣೆ ಪಡೆದರು. ಪ್ರತಿಭಟನಾಕಾರರು ಮತ್ತು ಭದ್ರತಾ ಸಿಬ್ಬಂದಿ ನಡುವಿನ ಘರ್ಷಣೆಯಲ್ಲಿ ಒಟ್ಟು 178 ಮಂದಿ ಗಾಯಗೊಂಡಿದ್ದಾರೆ ಎಂದು ದಿಲ್ಲಿ ಪೊಲೀಸರು ತಿಳಿಸಿದ್ದಾರೆ. ಇವರಲ್ಲಿ 118 ಮಂದಿ ಪೊಲೀಸ್ ಸಿಬ್ಬಂದಿಯಾಗಿದ್ದು, ಹಿರಿಯ ಅಧಿಕಾರಿಗಳೂ ಸೇರಿದ್ದಾರೆ. ಪ್ರತಿಭಟನಾಕಾರರ ಗುಂಪು 'ಅಶಿಸ್ತಿನ, ಆಕ್ರಮಣಕಾರಿ ಹಾಗೂ ಹಿಂಸಾತ್ಮಕ ವರ್ತನೆ' ಪ್ರದರ್ಶಿಸಿತು ಎಂದು ಪೊಲೀಸರು ಆರೋಪಿಸಿದ್ದಾರೆ. ಸೋಮವಾರ ತಡರಾತ್ರಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ಘರ್ಷಣೆಯ ವೇಳೆ ಸುಮಾರು 60 ಪ್ರತಿಭಟನಾಕಾರರು ಗಾಯಗೊಂಡಿದ್ದಾರೆ ಎಂದು ದಿಲ್ಲಿ ಪೊಲೀಸರು ತಿಳಿಸಿದ್ದಾರೆ. ಇನ್ನೊಂದೆಡೆ, ಪ್ರತಿಭಟನೆಯ ಸಂಘಟಕರು ಪೊಲೀಸರ 'ಉಗ್ರ ವರ್ತನೆ'ಯನ್ನು ತೀವ್ರವಾಗಿ ಖಂಡಿಸಿದ್ದು, ನೂರಾರು ಪ್ರತಿಭಟನಾಕಾರರು ಗಾಯಗೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ಭಾರತೀಯ ಪ್ರಜಾಪ್ರಭುತ್ವದ ಇತಿಹಾಸದಲ್ಲಿ ನಿಜವಾದ ಸಮಸ್ಯೆಗಾಗಿ ಬಂದ ಪ್ರಾಮಾಣಿಕ ವಿದ್ಯಾರ್ಥಿಗಳನ್ನು ದಿಲ್ಲಿ ಪೊಲೀಸರು ಕ್ರೂರವಾಗಿ ಥಳಿಸಿದ ದಿನ ಇದು. ಇದು ನಾಚಿಕೆಗೇಡಿನ ಸಂಗತಿ ಎಂದು CJP ವಕ್ತಾರರು ಹೇಳಿದ್ದಾರೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡುವವರೆಗೆ ತಮ್ಮ ಹೋರಾಟವನ್ನು ಮುಂದುವರಿಸುವುದಾಗಿ ಕಾಕ್ರೋಚ್‌ ಜನತಾ ಪಾರ್ಟಿ ಘೋಷಿಸಿದೆ. ಕೆಲವು ನಿರುದ್ಯೋಗಿ ಯುವಕರನ್ನು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಯವರು ಸಂಬಂಧವಿಲ್ಲದ ಒಂದು ವಿಚಾರಣೆಯ ವೇಳೆ 'ಕಾಕ್ರೋಚ್'ಗಳಿಗೆ ಹೋಲಿಸಿ ಮಾಡಿದ ಹೇಳಿಕೆಯ ಬಳಿಕ ಮೇ ತಿಂಗಳಲ್ಲಿ ಕಾಕ್ರೋಚ್‌ ಜನತಾ ಪಾರ್ಟಿ ಅಸ್ತಿತ್ವಕ್ಕೆ ಬಂದಿತ್ತು. ಆ ಹೇಳಿಕೆಯನ್ನು ಸ್ವೀಕರಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಲಕ್ಷಾಂತರ ಫಾಲೋವರ್ ಗಳನ್ನು ಹೊಂದಿರುವ ವಿಡಂಬನಾತ್ಮಕ ಚಳುವಳಿಯನ್ನಾಗಿ ರೂಪಿಸಿದರು. ವೈದ್ಯಕೀಯ ಕಾಲೇಜುಗಳ ಪ್ರವೇಶ ಪರೀಕ್ಷೆಗಳ ಪ್ರಶ್ನೆ ಪತ್ರಿಕೆ(NEET)ಗಳು ಪದೇ ಪದೇ ಸೋರಿಕೆಯಾಗುತ್ತಿರುವ ಆರೋಪಗಳ ಹಿನ್ನೆಲೆಯಲ್ಲಿ ಈ ಚಳುವಳಿಗೆ ಹೆಚ್ಚಿನ ಬೆಂಬಲ ದೊರಕಿದೆ.

ವಾರ್ತಾ ಭಾರತಿ 21 Jul 2026 3:42 pm

`ಸಂಜು ಸ್ಯಾಮ್ಸನ್, ವೈಭವ್ ಸೂರ್ಯವಂಶಿ ಬಳಿಕ ಈಗ ಕೆಎಲ್ ರಾಹುಲ್ ಗೆ ಅನ್ಯಾಯ': ಗೌತಮ್ ಗಂಭೀರ್‌ಗೆ ಶ್ರೀಕಾಂತ್ ತರಾಟೆ

K Srikkanth On KL Rahul- ಲಾರ್ಡ್ಸ್ ನಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಬೃಹತ್ ಮೊತ್ತ ಬೆನ್ನಟ್ಟುವಾಗ ಕೆ.ಎಲ್. ರಾಹುಲ್ ಅವರನ್ನು 6ನೇ ಕ್ರಮಾಂಕಕ್ಕೆ ಇಳಿಸಿದ್ದಕ್ಕೆ ಗೌತಮ್ ಗಂಭೀರ್ ಹಾಗೂ ಮ್ಯಾನೇಜ್‌ಮೆಂಟ್ ವಿರುದ್ಧ ಕೃಷ್ಣಮಾಚಾರಿ ಶ್ರೀಕಾಂತ್ ತೀವ್ರ ಕಿಡಿಕಾರಿದ್ದಾರೆ. ಸಂಜು ಸ್ಯಾಮ್ಸನ್ ಮತ್ತು ವೈಭವ್ ಸೂರ್ಯವಂಶಿ ಅವರಂತೆಯೇ ರಾಹುಲ್ ವೃತ್ತಿಜೀವನಕ್ಕೂ ಅನ್ಯಾಯ ಮಾಡಲಾಗುತ್ತಿದೆ ಎಂದು ಆರೋಪಿಸಿದ ಅವರು, ರಾಹುಲ್ 4ನೇ ಕ್ರಮಾಂಕದಲ್ಲಿ ಆಡಬೇಕಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.

ವಿಜಯ ಕರ್ನಾಟಕ 21 Jul 2026 3:23 pm

ದಾಂಪತ್ಯದಲ್ಲಿ ಇಂಟರೆಸ್ಟ್‌ ಇಲ್ಲ: ಪತಿಯ ಡಿವೋರ್ಸ್ ಅರ್ಜಿಗೆ ಮದ್ವೆ ಒಪ್ಪಂದವಲ್ಲ, ಪವಿತ್ರ ಸಂಸ್ಕಾರವೆಂದ ಹೈಕೋರ್ಟ್

ಬೆಂಗಳೂರು: ದಾಂಪತ್ಯವೆಂದರೆ ಒಂದು ಬರುತ್ತೆ, ಹೋಗುತ್ತೆ. ಕೊಟ್ಟು ತೆಗೆದುಕೊಳ್ಳುವುದರ ಲೆಕ್ಕವಿಟ್ಟರದು ಮುಗಿಯದ ಕಥೆ. ಆದರೆ, ಪತ್ನಿಯೊಂದಿಗೆ ಸಂಸಾರ ನಡೆಸಲು ಆಸಕ್ತಿಯೇ ಇಲ್ಲವೆಂದು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಪತಿಗೆ ಕರ್ನಾಟಕ ಹೈಕೋರ್ಟ್ ತರಾಟೆ ತೆಗೆದುಕೊಂಡಿದೆ. ಪ್ರೀತಿಸಿ ಮದುವೆಯಾಗಿ, ಇದೀಗ ಜವಾಬ್ದಾರಿ ತೆಗೆದುಕೊಳ್ಳಬೇಕಾದ ಸಮಯದಲ್ಲಿ ಮದುವೆಯಲ್ಲಿ ಆಸಕ್ತಿವಿಲ್ಲವೆಂಬ ಕಾರಣ ನೀಡಿದರೆ ಆಗದೆಂದು ನ್ಯಾಯಪೀಠ ಅಸಾಮಧಾನ ವ್ಯಕ್ತಪಡಿಸಿದೆ. ಏನಿದು ಘಟನೆ ?

ಒನ್ ಇ೦ಡಿಯ 21 Jul 2026 3:22 pm

ಬಿಡದಿ ಭೂಸ್ವಾಧೀನ ವಿವಾದ : ಹೈಕೋರ್ಟ್ ವಜಾಗೊಳಿಸಿದ PIL ನಮ್ಮದಲ್ಲ - ಸ್ಪಷ್ಟನೆ ನೀಡಿದ ಹೋರಾಟಗಾರರು!

Bidadi PIL Dismiss : ಕರ್ನಾಟಕ ಹೈಕೋರ್ಟ್ ಬಿಡದಿ ಟೌನ್‌ಶಿಪ್ ವಿಚಾರಕ್ಕೆ ಸಂಬಂಧಿಸಿದಂತೆ, ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಜಾಗೊಳಿಸಿತ್ತು. ಬಿಡದಿ ಭೂಸ್ವಾಧೀನ ವಿರೋಧಿ ಹೋರಾಟಗಾರರ ಪ್ರಕಾರ, ಸ್ವಾಧೀನದ ಪರ ಇರುವವರು ಇದನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಅಸಲಿಗೆ, ಕೋರ್ಟ್ ವಜಾಗೊಳಿಸಿರುವ ಪಿಐಎಲ್’ಗೂ, ಹೋರಾಟಕ್ಕೂ ಸಂಬಂಧವೇ ಇಲ್ಲ.

ವಿಜಯ ಕರ್ನಾಟಕ 21 Jul 2026 3:16 pm

ಗ್ರಾಮೀಣ ಭಾಗದ ಹಲವು ಬಿಎಲ್‌ಒ-ಮತದಾರರಿಗೆ ಎಸ್‌ಐಆರ್ ಅವಧಿ ವಿಸ್ತರಣೆಯ ಮಾಹಿತಿಯೇ ಇಲ್ಲ

ಬೆಂಗಳೂರು : ಮತಪಟ್ಟಿ ವಿಶೇಷ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯ ಅವಧಿಯನ್ನು ಚುನಾವಣಾ ಆಯೋಗವೂ ಬೂತ್ ಮಟ್ಟದ ಮತಗಟ್ಟೆ ಅಧಿಕಾರಿಗಳು ಮನೆಮನೆ ಭೇಟಿ ಅವಧಿಯನ್ನು ಆ.8ರ ವರೆಗೂ ವಿಸ್ತರಿಸಿದರೂ, ಈ ಕುರಿತು ರಾಜ್ಯದ ಗ್ರಾಮೀಣ ಭಾಗದ ಹಲವು ಬಿಎಲ್‌ಒಗಳಿಗೆ ಮಾಹಿತಿಯೇ ಇಲ್ಲ ಎನ್ನುವುದು ಕಂಡು ಬಂದಿದೆ. ‘ನಾಗರಿಕ ಮತಕಾವಲು ಸಮಿತಿ’ ವತಿಯಿಂದ ರಾಜ್ಯದ ವಿವಿಧ ಭಾಗಗಳ ಬಿಎಲ್‌ಒಗಳೊಂದಿಗೆ ನಡೆಸಿದ ಮಾತುಕತೆಯಲ್ಲಿ, ಅವಧಿ ವಿಸ್ತರಣೆಯ ಕುರಿತು ಯಾವುದೇ ಸ್ಪಷ್ಟ ನಿರ್ದೇಶನ ತಮಗೆ ಲಭ್ಯವಾಗಿಲ್ಲ ಎಂದು ಹಲವರು ತಿಳಿಸಿದ್ದಾರೆ. ಕೆಲವರು ಹಳೆಯ ವೇಳಾಪಟ್ಟಿಯಂತೆ ಮನೆ-ಮನೆಗೆ ತೆರಳಿ ನಮೂನೆಗಳನ್ನು ವಿತರಿಸಿ ಸಂಗ್ರಹಿಸುತ್ತಿದ್ದರೆ, ಇನ್ನೂ ಕೆಲವರಿಗೆ ಹೊಸ ದಿನಾಂಕದ ಬಗ್ಗೆ ಖಚಿತತೆ ಇಲ್ಲದಿರುವುದು ಗೊಂದಲಕ್ಕೆ ಕಾರಣವಾಗಿದೆ ಎಂದು ಕರ್ನಾಟಕ ವಿದ್ಯಾರ್ಥಿ ಸಂಘಟನೆಯ ನಾಯಕ ಭುವನ್ ಕುಮಾರ್ ‘ವಾರ್ತಾಭಾರತಿ’ಗೆ ಮಾಹಿತಿ ನೀಡಿದ್ದಾರೆ. ಎಸ್‌ಐಆರ್‌ನಂತಹ ಮಹತ್ವದ ಪ್ರಕ್ರಿಯೆಯಲ್ಲಿ ದಿನಾಂಕ ವಿಸ್ತರಣೆ ಘೋಷಣೆಯಾದ ತಕ್ಷಣವೇ ಜಿಲ್ಲಾಡಳಿತ, ತಾಲೂಕು ಅಧಿಕಾರಿಗಳು ಹಾಗೂ ಬಿಎಲ್‌ಒಗಳಿಗೆ ಏಕರೂಪದ ಮಾಹಿತಿ ತಲುಪಬೇಕಾಗಿತ್ತು. ಆದರೆ, ಮಾಹಿತಿ ರವಾನೆಯಲ್ಲಿ ಉಂಟಾದ ವಿಳಂಬದಿಂದ ಮತದಾರರಿಗೂ ಗೊಂದಲ ಉಂಟಾಗಿದೆ. ಯಾವ ದಿನಾಂಕದವರೆಗೆ ನಮೂನೆ ಸಲ್ಲಿಸಬಹುದು ಎಂಬ ಪ್ರಶ್ನೆಗೆ ವಿವಿಧ ಪ್ರದೇಶಗಳಲ್ಲಿ ವಿಭಿನ್ನ ಉತ್ತರಗಳು ಕೇಳಿಬರುತ್ತಿವೆ ಎಂದು ಅವರು ತಿಳಿಸಿದ್ದಾರೆ. ಚುನಾವಣಾ ಆಯೋಗದ ಪ್ರತಿಯೊಂದು ಕಾರ್ಯವೂ ಪಾರದರ್ಶಕತೆ ಮತ್ತು ನಿಖರತೆಯೊಂದಿಗೆ ನಡೆಯಬೇಕೆಂಬ ನಿರೀಕ್ಷೆ ಇರುವಾಗ, ನಗರಗಳಲ್ಲಿ ಕೆಲಸ ಮಾಡುತ್ತಿರುವ ಬಿಎಲ್‌ಒಗಳಿಗೆ ಅಧಿಕಾರಿಗಳಿಂದ ಮಾಹಿತಿ ದೊರಕುತ್ತಿದ್ದರೂ, ಗ್ರಾಮೀಣ ಭಾಗದ ಬೂತ್‌ಮಟ್ಟದ ಅಧಿಕಾರಿಗಳಿಗೆ/ ಮತದಾರರಿಗೆ ಸ್ಪಷ್ಟ ಮಾಹಿತಿ ತಲುಪದಿರುವುದು, ಚುನಾವಣಾ ಆಯೋಗದ ಆಡಳಿತಾತ್ಮಕ ಸಮನ್ವಯದ ಕೊರತೆಯನ್ನು ಬಹಿರಂಗಪಡಿಸುತ್ತದೆ. ಇದು ಕೇವಲ ಆಡಳಿತಾತ್ಮಕ ಲೋಪವೇ ಅಥವಾ ಮಾಹಿತಿ ಹಂಚಿಕೆಯ ವ್ಯವಸ್ಥೆಯಲ್ಲಿನ ವೈಫಲ್ಯವೇ? ಎಂದು ಭುವನ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚುನಾವಣಾ ಪ್ರಕ್ರಿಯೆಯ ಮೇಲಿನ ಸಾರ್ವಜನಿಕರ ವಿಶ್ವಾಸ ಉಳಿಸಬೇಕಾದರೆ, ಎಸ್‌ಐಆರ್‌ಗೆ ಸಂಬಂಧಿಸಿದ ಎಲ್ಲ ಬದಲಾವಣೆಗಳ ಬಗ್ಗೆ ಬಿಎಲ್‌ಒಗಳು ಹಾಗೂ ಮತದಾರರಿಗೆ ಒಂದೇ ಸಮಯದಲ್ಲಿ, ಸ್ಪಷ್ಟವಾಗಿ ಮಾಹಿತಿ ತಲುಪಿಸುವ ವ್ಯವಸ್ಥೆ ಅತ್ಯಗತ್ಯವಾಗಿದೆ. ಇಲ್ಲದಿದ್ದರೆ, ಅನಗತ್ಯ ಗೊಂದಲದಿಂದ ಮತದಾರರ ಭಾಗವಹಿಸುವಿಕೆಯ ಮೇಲೆಯೇ ಪರಿಣಾಮ ಬೀರುವ ಸಾಧ್ಯತೆ ಇದೆ ಮತದಾರರೊಬ್ಬರು ಹೇಳಿದ್ದಾರೆ.

ವಾರ್ತಾ ಭಾರತಿ 21 Jul 2026 3:10 pm

CJP ಪ್ರತಿಭಟನಾಕಾರರ ವಿರುದ್ಧ ಪೊಲೀಸ್ ಕ್ರಮ; ನಿರ್ದೇಶಕ ಅನುರಾಗ್ ಕಶ್ಯಪ್ ಸೇರಿದಂತೆ ಚಿತ್ರರಂಗದ ಗಣ್ಯರಿಂದ ಖಂಡನೆ

ಹೊಸದಿಲ್ಲಿ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಜು.20ರಂದು ನಡೆದ ‘ಚಲೋ ಸಂಸತ್’ ಪ್ರತಿಭಟನೆಯಲ್ಲಿ ಪ್ರತಿಭಟನಾಕಾರರನ್ನು ಚದುರಿಸಲು ದಿಲ್ಲಿ ಪೊಲೀಸರು ಲಾಠಿ ಪ್ರಹಾರ ನಡೆಸಿ ಅಶ್ರುವಾಯು ಪ್ರಯೋಗ ಮಾಡಿರುವ ಕ್ರಮಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಘಟನೆಯ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ ಪೊಲೀಸ್ ಕ್ರಮದ ವಿರುದ್ಧ ಖಂಡನೆ ವ್ಯಕ್ತವಾಗಿದ್ದು, ಖ್ಯಾತ ಚಲನಚಿತ್ರ ನಿರ್ದೇಶಕ ಅನುರಾಗ್ ಕಶ್ಯಪ್, ಹಾಸ್ಯನಟ ಹಾಗೂ ನಟ ವೀರ್ ದಾಸ್, ನಟ ರಿತೇಶ್ ದೇಶ್ಮುಖ್, ನಟಿ ಜೆನಿಲಿಯಾ ದೇಶ್ಮುಖ್ ಮತ್ತು ನಟಿ ಹುಮಾ ಖುರೇಷಿ ಸೇರಿದಂತೆ ಹಲವು ಚಿತ್ರರಂಗದ ಗಣ್ಯರು ಸಾರ್ವಜನಿಕವಾಗಿ ಖಂಡಿಸಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅನುರಾಗ್ ಕಶ್ಯಪ್, ‘ಪೊಲೀಸ್ ಸಮವಸ್ತ್ರ ಧರಿಸಲು ಆತ್ಮ ಮತ್ತು ಆತ್ಮಸಾಕ್ಷಿಯನ್ನು ಮಾರಿಕೊಳ್ಳಬೇಕು ಎಂಬುದು ನನಗೆ ತಿಳಿದಿರಲಿಲ್ಲ. ಇದು ತಪ್ಪು ಆದೇಶವಾಗಿರುವುದರಿಂದ ನಾನು ಇದನ್ನು ಪಾಲಿಸುವುದಿಲ್ಲ ಎಂದು ಎದ್ದು ನಿಂತು ಹೇಳಬಲ್ಲ ಒಬ್ಬನೇ ಒಬ್ಬ ಪೊಲೀಸ್ ಸಿಬ್ಬಂದಿ ಈ ದೇಶದಲ್ಲಿದ್ದಾರೆಯೇ?’ ಎಂದು ಪ್ರಶ್ನಿಸಿದ್ದಾರೆ. ಸ್ಟ್ಯಾಂಡ್–ಅಪ್ ಕಮೇಡಿಯನ್, ನಟ ಹಾಗೂ ಚಲನಚಿತ್ರ ನಿರ್ಮಾಪಕ ವೀರ್ ದಾಸ್ ಕೂಡ ಪ್ರತಿಭಟನಾಕಾರರ ವಿರುದ್ಧದ ಕ್ರಮವನ್ನು ಟೀಕಿಸಿದ್ದು, ಈ ವಿಚಾರದಲ್ಲಿ ಚಿತ್ರರಂಗದ ಹಲವರ ಮೌನವನ್ನು ಪ್ರಶ್ನಿಸಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ಅವರು, ‘ನೀವು ಭಾರತದ ಕಲಾವಿದರಾಗಿದ್ದು, ಯುವಜನರ ಪರವಾಗಿ ಧ್ವನಿ ಎತ್ತದೆ, ಬಳಿಕ ಅವರಿಗೆ ಟಿಕೆಟ್ ಗಳನ್ನು ಮಾರಾಟ ಮಾಡಲು ಯತ್ನಿಸುವುದು ಶುದ್ಧ ಡೋಂಗಿತನ’ ಎಂದು ಬರೆದಿದ್ದಾರೆ. ‘ಭಾರತೀಯ ಪ್ರೇಕ್ಷಕರು ಕಾಳಜಿ ವಹಿಸುವ ವಿಷಯಗಳಲ್ಲಿ ಮೌನ ಪ್ರೇಕ್ಷಕರಾಗಿದ್ದು, ಬಳಿಕ ಅದೇ ಪ್ರೇಕ್ಷಕರು ನಿಮಗಾಗಿ ಧ್ವನಿ ಎತ್ತಬೇಕು ಹಾಗೂ ನಿಮ್ಮ ಬಗ್ಗೆ ಕಾಳಜಿ ವಹಿಸಬೇಕು ಎಂದು ನಿರೀಕ್ಷಿಸುವುದು ಒಂದು ರೀತಿಯ ವಿಲಾಸಿತನ. ನಿಮ್ಮ ಕೆಲಸವನ್ನು ನೀವೇ ನೋಡಿಕೊಳ್ಳಿ. ಆದರೆ ನನ್ನ ವಿಷಯಕ್ಕೆ ಬಂದಾಗ ಮಾತ್ರ ಬೆಂಬಲಕ್ಕೆ ಬನ್ನಿ ಎಂಬುದು ನಡೆಯುವುದಿಲ್ಲ. ಭಾರತದ ಕಾನ್ಸರ್ಟ್ಗಳ ಆರ್ಥಿಕತೆ ಯುವಜನರು ಒಟ್ಟುಗೂಡುವುದರ ಮೇಲೆ ನಿರ್ಮಾಣವಾಗಿದೆ’ ಎಂದು ಹೇಳಿದ್ದಾರೆ. ‘ಇದು ಈಗ ಕೇವಲ ಯುವಜನರ ಭವಿಷ್ಯದ ಪ್ರಶ್ನೆಯಾಗಿದೆ. ಅವರು ಕಾಳಜಿ ವಹಿಸುವ ವಿಷಯಗಳಿಗೆ ವೇದಿಕೆ ಕಲ್ಪಿಸುವ ಮೂಲಕ ಅವರನ್ನು ಬೆಂಬಲಿಸಬಹುದು’ ಎಂದು ವೀರ್ ದಾಸ್ ಹೇಳಿದ್ದಾರೆ. ಬಾಲಿವುಡ್ ನಟ ರಿತೇಶ್ ದೇಶ್ಮುಖ್ ಮತ್ತು ಅವರ ಪತ್ನಿ, ನಟಿ ಜೆನಿಲಿಯಾ ದೇಶ್ಮುಖ್ ಅವರು ಎಕ್ಸ್ನಲ್ಲಿ ಜಂಟಿ ಹೇಳಿಕೆ ಪ್ರಕಟಿಸಿದ್ದು, ‘ನಾವು ನಮ್ಮ ದೇಶದ ಯುವಜನರೊಂದಿಗೆ ದೃಢವಾಗಿ ನಿಲ್ಲುತ್ತೇವೆ. ಅವರ ಧ್ವನಿಗಳು ಸ್ಪಷ್ಟವಾಗಿ, ಗಟ್ಟಿಯಾಗಿ ಮತ್ತು ಯಾವುದೇ ಭಯವಿಲ್ಲದೆ ಕೇಳಿಸಬೇಕು. ಅವರು ನಮ್ಮ ಪ್ರಜಾಪ್ರಭುತ್ವದ ಹೃದಯಬಡಿತ ಹಾಗೂ ನಮ್ಮ ರಾಷ್ಟ್ರದ ಭವಿಷ್ಯದ ನಿಜವಾದ ಶಿಲ್ಪಿಗಳು. ಅವರ ಮಾತುಗಳನ್ನು ಕೇಳೋಣ, ಅವರನ್ನು ಬೆಂಬಲಿಸೋಣ ಮತ್ತು ಸಶಕ್ತಗೊಳಿಸೋಣ’ ಎಂದು ಹೇಳಿದ್ದಾರೆ. ನಟಿ ಹುಮಾ ಖುರೇಷಿ ಕೂಡ ವಿದ್ಯಾರ್ಥಿಗಳಿಗೆ ಬೆಂಬಲ ಸೂಚಿಸಿದ್ದು, ‘ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಇಷ್ಟೊಂದು ಬಲಪ್ರಯೋಗ ಮತ್ತು ಲಾಠಿ ಪ್ರಹಾರ ನಡೆದಿರುವುದನ್ನು ಕಂಡು ನನಗೆ ತೀವ್ರ ದುಃಖವಾಯಿತು. ಹೆಚ್ಚಿನ ತಾಳ್ಮೆ, ಮಾತುಕತೆ ಮತ್ತು ಆಲಿಸುವಿಕೆಯ ಮೂಲಕ ಈ ಪರಿಸ್ಥಿತಿಯನ್ನು ನಿಭಾಯಿಸಬಹುದಿತ್ತು. ಭಾರತದ ಪ್ರಜೆಗಳಾದ ನಾವು ಈ ಸರ್ಕಾರವನ್ನು ಆಯ್ಕೆ ಮಾಡಿದ್ದೇವೆ. ಇಂದು ನಾವೆಲ್ಲರೂ ಪ್ರಶ್ನೆಗಳನ್ನು ಕೇಳಬೇಕು ಹಾಗೂ ಹೊಣೆಗಾರಿಕೆಯನ್ನು ನಿರೀಕ್ಷಿಸಬೇಕು’ ಎಂದು ಹೇಳಿದ್ದಾರೆ. ಪ್ರತಿಭಟನಾಕಾರರ ವಿರುದ್ಧ ದಿಲ್ಲಿ ಪೊಲೀಸರು ಕೈಗೊಂಡ ಕ್ರಮವನ್ನು ಟೀಕಿಸಿರುವ ಅವರು, ಶಾಂತಿಯುತ ಪ್ರತಿಭಟನೆಗಳ ಸಂದರ್ಭದಲ್ಲಿ ಸಂಯಮ, ಸಂವಾದ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಪಾಲಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ವಾರ್ತಾ ಭಾರತಿ 21 Jul 2026 3:08 pm

ಸೇಡಂ: ಇನ್ಫೋಸಿಸ್ ಕಾಲನಿಯಲ್ಲಿಲ್ಲ ಬೀದಿದೀಪಗಳು!

ಸೇಡಂ: ನಗರದ ಇನ್ಫೋಸಿಸ್ ಕಾಲನಿಯ ಸುಮಾರು 199 ಕುಟುಂಬಗಳು ಕಳೆದ ಹತ್ತು ವರ್ಷಗಳಿಂದ ಬೀದಿದೀಪಗಳಿಲ್ಲದೆ ಕತ್ತಲಿನಲ್ಲೇ ಜೀವನ ಸಾಗಿಸುತ್ತಿದ್ದು, ಮೂಲಸೌಕರ್ಯಗಳ ಕೊರತೆಯಿಂದ ಸ್ಥಳೀಯರು ತೀವ್ರ ಸಂಕಷ್ಟ ಅನುಭವಿಸುತ್ತಿವೆ. ಹಲವು ಬಾರಿ ನಗರಸಭೆಯ ಗಮನಕ್ಕೆ ತಂದರೂ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆತಿಲ್ಲ ಎಂದು ನಿವಾಸಿಗಳು ಆರೋಪಿಸಿದ್ದಾರೆ. ಬಡಾವಣೆಯಲ್ಲಿ ವಿದ್ಯುತ್ ಕಂಬಗಳನ್ನು ಅಳವಡಿಸಲಾಗಿದ್ದರೂ, ಹೆಚ್ಚಿನ ಕಡೆ ಬೀದಿದೀಪಗಳನ್ನು ಅಳವಡಿಸಿಲ್ಲ. ಪರಿಣಾಮ ರಾತ್ರಿ ವೇಳೆ ಇಡೀ ಪ್ರದೇಶ ಕತ್ತಲಲ್ಲಿ ಮುಳುಗುತ್ತದೆ. ಇದರಿಂದಾಗಿ ಮಹಿಳೆಯರು, ಹಿರಿಯ ನಾಗರಿಕರು ಹಾಗೂ ಮಕ್ಕಳು ಮನೆಗಳಿಂದ ಹೊರಬರಲು ಭಯಪಡುತ್ತಿದ್ದಾರೆ. ಸ್ಥಳೀಯ ನಿವಾಸಿ ದೇವದಾಸ್ ರಾಠೋಡ ಮಾತನಾಡಿ, ರಾತ್ರಿ ವೇಳೆಯಲ್ಲಿ ಹಾವು, ಚೇಳು, ಕಪ್ಪೆ ಸೇರಿ ವಿವಿಧ ವಿಷಕಾರಿ ಪ್ರಾಣಿಗಳು ಮನೆಗಳ ಮುಂದೆ ಕಾಣಿಸಿಕೊಳ್ಳುತ್ತಿವೆ. ಕತ್ತಲಿನ ಕಾರಣದಿಂದ ಅಪಾಯದ ಭೀತಿ ಹೆಚ್ಚಿದ್ದು, ನಿವಾಸಿಗಳು ಆತಂಕದಲ್ಲೇ ದಿನ ಕಳೆಯುವಂತಾಗಿದೆ ಎಂದು ದೂರಿದರು. ಗಿಡಗಂಟಿಗಳಿಂದ ಹೆಚ್ಚಿದ ಸಮಸ್ಯೆ ಬಡಾವಣೆಯ ಸುತ್ತಮುತ್ತ ಜಾಲಿಗಿಡ ಹಾಗೂ ಕಂಟೆಗಿಡಗಳು ಬೆಳೆದು ನಿಂತಿರುವುದರಿಂದ ಕತ್ತಲಿನ ವಾತಾವರಣ ಮತ್ತಷ್ಟು ಭೀಕರವಾಗಿರುತ್ತದೆ. ಈ ಕುರಿತು ಹಲವು ಬಾರಿ ನಗರಸಭೆ ಅಧಿಕಾರಿಗಳಿಗೆ ಬೀದಿದೀಪ ಅಳವಡಿಸುವ ಜೊತೆಗೆ ಗಿಡಗಂಟಿಗಳನ್ನು ತೆರವುಗೊಳಿಸುವಂತೆ ಮನವಿ ಸಲ್ಲಿಸಿ, ಒತ್ತಾಯಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕುಡಿಯುವ ನೀರಿನ ವ್ಯವಸ್ಥೆಯೂ ಅಸ್ತವ್ಯಸ್ತ ಬಡಾವಣೆಯ ಬೋರ್‌ವೆಲ್ ಸುತ್ತಲೂ ಗಿಡಗಂಟಿಗಳು ಆವರಿಸಿರುವುದರಿಂದ ಮೋಟಾರ್ ಚಾಲನೆ ಮಾಡಲು ಸಿಬ್ಬಂದಿ ಹಾಗೂ ನಿವಾಸಿಗಳು ಭಯಪಡುತ್ತಿದ್ದಾರೆ. ಸುಮಾರು 199 ಮನೆಗಳಿಗೆ ಕುಡಿಯುವ ನೀರು ಪೂರೈಸುವ ಮೋಟಾರ್ ಹೆಚ್ಚುವರಿ ಒತ್ತಡದಿಂದ ಪದೇ ಪದೇ ದುರಸ್ತಿಗೆ ಬರುತ್ತದೆ. ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ನಿವಾಸಿ ಮರೆಪ್ಪ ಪ್ಯಾಂಟಿ ಒತ್ತಾಯಿಸಿದರು. ಇನ್ಫೋಸಿಸ್ ಕಾಲನಿಯಲ್ಲಿನ ಬೀದಿದೀಪಗಳ ಸಮಸ್ಯೆಯನ್ನು ಪರಿಶೀಲಿಸಿ, ದೀಪಗಳಿಲ್ಲದ ಸ್ಥಳಗಳಲ್ಲಿ ಶೀಘ್ರದಲ್ಲೇ ವಿದ್ಯುತ್ ದೀಪಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು. -ಶ್ರೀಕಾಂತ ನೋಡಲ್ ಎಂಜಿನಿಯರ್, ಸೇಡಂ ನಗರಸಭೆ ಹಲವು ವರ್ಷಗಳಿಂದ ಬೀದಿದೀಪಗಳಿಲ್ಲದೆ ಹಾವು-ಚೇಳುಗಳ ಭೀತಿಯಲ್ಲೇ ಬದುಕುತ್ತಿದ್ದೇವೆ. ಪ್ರತಿದಿನ ರಾತ್ರಿ ಸುರಕ್ಷಿತವಾಗಿ ಬೆಳಗಾಗಲಿ ಎಂದು ದೇವರನ್ನು ಪ್ರಾರ್ಥಿಸುತ್ತ ಮಲಗುತ್ತೇವೆ. ಅಧಿಕಾರಿಗಳು ಬಡವರ ಸಂಕಷ್ಟ ಅರ್ಥಮಾಡಿಕೊಂಡು ಬೀದಿದೀಪಗಳನ್ನು ಅಳವಡಿಸಿ ಅನುಕೂಲ ಮಾಡಿಕೊಡಬೇಕು. -ಭೀಮವ್ವ ಚಿಂತಪಳ್ಳಿ ಇನ್ಫೋಸಿಸ್ ಕಾಲನಿ ನಿವಾಸಿ

ವಾರ್ತಾ ಭಾರತಿ 21 Jul 2026 3:04 pm

₹80 ಲಕ್ಷದ ಎರಡು ಫ್ಲ್ಯಾಟ್‌ಗಳ ಮಾಲೀಕ; ಆದರೂ ಉಬರ್‌ ಓಡಿಸುತ್ತಿರುವುದೇಕೆ? ಹೃದಯಾಘಾತದ ಬಳಿಕ ಬದಲಾಯ್ತು ಜೀವನ

ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಕೆಲವರು ಎದುರಿಸುವ ರೀತಿಯೇ ಭಿನ್ನ. ಸಾಲು ಸಾಲು ಸಂಕಷ್ಟಗಳನ್ನು ದಾಟಿಕೊಂಡು ಹೊಸ ಜೀವನ ರೂಪಿಸಿಕೊಳ್ಳುವುದು ಸುಲಭದ ಮಾತಲ್ಲ. ದೆಹಲಿ ಮೂಲದ ಹಿರಿಯರೊಬ್ಬರು ಎಲ್ಲವನ್ನೂ ಗಳಿಸಿ, ಕಳೆದುಕೊಂಡು ಮತ್ತೆ ಹೊಸದಾಗಿ ಜೀವನ ಪ್ರಾರಂಭಿಸಿದ್ದಾರೆ. ಹೌದು ದೆಹಲಿ ಮೂಲದ ಹಿರಿಯರೊಬ್ಬರ ಜೀವನದ ಅನುಭವ ಹಾಗೂ ಈಗ ಅವರು ಎದುರಿಸುತ್ತಿರುವ ಸವಾಲಿನ ಬಗ್ಗೆ ಇನ್‌ಸ್ಟಾಗ್ರಾಮ್ ಮೀಡಿಯಾದಲ್ಲಿ ಹೆಚ್ಚು

ಒನ್ ಇ೦ಡಿಯ 21 Jul 2026 3:02 pm

ಶಿವಾಜಿನಗರದಲ್ಲಿ ಫುಟ್‌ಪಾತ್ ಅತಿಕ್ರಮಣ ತೆರವಿಗೆ ಮುಂದಾದ ಅಧಿಕಾರಿಗಳ ಮೇಲೆ ಹಲ್ಲೆ: 5 ಮಂದಿ ಆರೋಪಿಗಳು ಪೊಲೀಸ್ ವಶಕ್ಕೆ

ಶಿವಾಜಿನಗರದಲ್ಲಿ ಫುಟ್‌ಪಾತ್ ಅತಿಕ್ರಮಣ ತೆರವಿಗೆ ಮುಂದಾದ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ ಘಟನೆ ವರದಿಯಾಗಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ( ಜಿಬಿಎ) ಅಧಿಕಾರಿಗಳು ಫುತ್ ಪಾತ್ ಅತಿಕ್ರಮಣ ತೆರವು ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಈ ಪ್ರಸಂಗ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ 5 ಮಂದಿ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ನಮ್ಮ‌ ಕರ್ನಾಟಕ ಸೇನೆ ಸಂಘಟನೆಯ ಬಸವರಾಜ್ ಪಡುಕೋಟೆ ಎಂಬವವನ ನೇತೃತ್ವದಲ್ಲಿ ಗುಂಪು ಕಟ್ಟಿ ಹಲ್ಲೆ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಮತ್ತಷ್ಟು ವಿವರ ಇಲ್ಲಿದೆ.

ವಿಜಯ ಕರ್ನಾಟಕ 21 Jul 2026 3:01 pm

ಆರ್ಟ್‌ ಆಫ್‌ ಲಿವಿಂಗ್‌ 290 ಎಕರೆ ಭೂ ಒತ್ತುವರಿ ಆರೋಪ; ತನಿಖೆಗೆ SIT ರಚಿಸಿ ಸರ್ಕಾರ ಆದೇಶ - 11 ಅಧಿಕಾರಿಗಳಿಗೆ ಜವಾಬ್ದಾರಿ

ಬೆಂಗಳೂರು ದಕ್ಷಿಣ ತಾಲ್ಲೂಕಿನ ಕಗ್ಗಲಿಪುರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ 'ಆರ್ಟ್ ಆಫ್ ಲಿವಿಂಗ್' ಹಾಗೂ ಅದರ ಅಂಗಸಂಸ್ಥೆಗಳು ಸುಮಾರು 290 ಎಕರೆಗೂ ಅಧಿಕ ಸರ್ಕಾರಿ ಜಮೀನು ಒತ್ತುವರಿ ಮಾಡಿರುವ ಆರೋಪದ ತನಿಖೆಗಾಗಿ ಕರ್ನಾಟಕ ಸರ್ಕಾರವು 'ವಿಶೇಷ ತನಿಖಾ ತಂಡ'ವನ್ನು (ಎಸ್‌ಐಟಿ) ರಚಿಸಿದೆ. ಪ್ರಾದೇಶಿಕ ಆಯುಕ್ತರ ಅಧ್ಯಕ್ಷತೆಯ ಈ ಸಮಿತಿಯು ನಿಯಮಗಳ ಉಲ್ಲಂಘನೆಯನ್ನು ಪರಿಶೀಲಿಸಿ, ಮೂರು ತಿಂಗಳೊಳಗೆ ಸರ್ಕಾರಕ್ಕೆ ಅಂತಿಮ ವರದಿ ಸಲ್ಲಿಸಲಿದೆ.

ವಿಜಯ ಕರ್ನಾಟಕ 21 Jul 2026 2:58 pm

ʼಚಲೋ ಸಂಸತ್ʼ ಪ್ರತಿಭಟನಾಕಾರರ ವಿರುದ್ಧ ಪೊಲೀಸ್ ಕ್ರಮ ಖಂಡಿಸಿ ಸಂಸತ್ ಎದುರು AAP ಸಂಸದರ ಪ್ರತಿಭಟನೆ

ಹೊಸದಿಲ್ಲಿ: ಜುಲೈ 20ರಂದು ನಡೆದ ಕಾಕ್ರೋಚ್‌ ಜನತಾ ಪಾರ್ಟಿ(CJP)ಯ ಚಲೋ ಸಂಸದ್ ಪ್ರತಿಭಟನಾ ಮೆರವಣಿಗೆಯ ವೇಳೆ ಪ್ರತಿಭಟನಾಕಾರರ ವಿರುದ್ಧ ಪೊಲೀಸರು ನಡೆಸಿದ ಬಲಪ್ರಯೋಗವನ್ನು ಖಂಡಿಸಿ ಆಮ್ ಆದ್ಮಿ ಪಕ್ಷದ (AAP) ರಾಜ್ಯಸಭಾ ಸದಸ್ಯರು ಮಂಗಳವಾರ ಸಂಸತ್ ಭವನದ ಎದುರು ಪ್ರತಿಭಟನೆ ನಡೆಸಿದರು. ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್ ನೇತೃತ್ವದಲ್ಲಿ ಸಂಸತ್ ಭವನದ ಮುಂಭಾಗದ ಮೆಟ್ಟಿಲುಗಳ ಮೇಲೆ ನಿಂತು ಸದಸ್ಯರು ಘೋಷಣೆಗಳನ್ನು ಕೂಗುವ ಮೂಲಕ ಪ್ರತಿಭಟನೆ ನಡೆಸಿದರು. ಹಲವು ನಿಮಿಷಗಳ ಕಾಲ ಪ್ರತಿಭಟನೆ ಮುಂದುವರಿಯಿತು. ಪ್ರತಿಭಟನೆಯ ವೇಳೆ, ‘ಸೋನಮ್ ವಾಂಗ್ಚುಕ್ಗೆ ಉತ್ತರಿಸಿ, ಲಾಠಿಚಾರ್ಜ್ ಬಗ್ಗೆ ಉತ್ತರಿಸಿ, ನರೇಂದ್ರ ಮೋದಿ ಉತ್ತರಿಸಿ’, ‘ಹಿಟ್ಲರ್ ಶಾಹಿ ನಡೆಯಲ್ಲ’, ‘ಪ್ರಜಾಪ್ರಭುತ್ವದ ಮೇಲೆ ಲಾಠಿಚಾರ್ಜ್ ನಡೆಯಲ್ಲ’ ಎಂಬ ಘೋಷಣೆಗಳನ್ನು ಕೂಗಿ, ಜುಲೈ 20ರಂದು ನಡೆದ ಪ್ರತಿಭಟನೆಯಲ್ಲಿ ಪೊಲೀಸರ ಕ್ರಮವನ್ನು ಖಂಡಿಸಿದರು. ʼಚಲೋ ಸಂಸತ್ʼ ಪ್ರತಿಭಟನಾ ಮೆರವಣಿಗೆಯ ವೇಳೆ ನಡೆದ ಪೊಲೀಸ್ ಬಲಪ್ರಯೋಗದ ಕುರಿತು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಬೇಕು ಹಾಗೂ ಘಟನೆಯ ಬಗ್ಗೆ ಉತ್ತರಿಸಬೇಕು ಎಂದು AAP ರಾಜ್ಯಸಭಾ ಸದಸ್ಯರು ಆಗ್ರಹಿಸಿದರು.

ವಾರ್ತಾ ಭಾರತಿ 21 Jul 2026 2:56 pm

ಮಾತನಾಡುವ ಅಪರಾಧ ಎಸಗೋಣ, ಬನ್ನಿ

  ಉರ್ದು ಕವಿ ರಾಜಿಂದರ್ ಪಾಲ್ ಸಿಂಗ್ ಹರ್ಯಾಣದ ಪಂಜಾಬ್‌ನ ಅಂಬಾಲಾ ದವರು. ಅವರ ಕಾವ್ಯನಾಮ - ಸದಾ ಅಂಬಾಲವಿ. ಕೆಲವು ವರ್ಷಗಳ ಹಿಂದೆ ಅವರು ಬರೆದ ‘‘ಆವೋ ಕೆ ಅಬ್ ತೊ ಜುರ್ ಅತೆ ಜುರ್ಮೆ ಸುಖನ್ ಕರೇಂ’’ ಎಂಬ ಶೀರ್ಷಿಕೆಯ ಘಝಲ್ ಸಾಮಾಜಿಕ ಹೋರಾಟಗಾರರಿಗೆ ಹೊಸ ಹುಮ್ಮಸ್ಸು ನೀಡಿತ್ತು. ಈ ಹಾಡು ಖ್ಯಾತ ಗಾಯಕ ಉಸ್ತಾದ್ ಗುಲಾಂ ಅಬ್ಬಾಸ್ ಖಾನ್ ಅವರ ಮಧುರ ಧ್ವನಿಯಲ್ಲಿ ಮೊಳಗಿದಾಗ ಮತ್ತಷ್ಟು ವಿಶಾಲ ವಲಯವನ್ನು ತಲುಪಿತ್ತು. ಇನ್ನಾದರೂ ಮಾತನಾಡುವ ಅಪರಾಧ ಎಸಗೋಣ, ಬನ್ನಿ, ಪರಿಣಾಮಗಳ ಚಿಂತೆ ಬಿಟ್ಟು, ಉದ್ಯಾನ ರಕ್ಷಿಸೋಣ! ಹೂವುಗಳು ಛಿದ್ರವಾಗಿವೆ, ಮೊಗ್ಗುಗಳು ಬಾಡಿವೆ, ಸುಮ್ಮನಿದ್ದು ಇನ್ನೆಷ್ಟು ಕಾಲ ಈ ಕ್ರೌರ್ಯ ಸಹಿಸೋಣ? ಇಲ್ಲಿ ನಿಷಿದ್ಧವಾಗಿದೆ ಚಲನೆ, ಚಕಾರಕ್ಕೂ ಇದೆ ನಿರ್ಬಂಧವಿಲ್ಲಿ, ಉದ್ಯಾನದ ಈ ಕರಾಳ ವ್ಯವಸ್ಥೆಯಲ್ಲಿ ಇನ್ನೆಷ್ಟು ನರಳೋಣ? ಬರಹ, ಭಾಷಣಗಳ ಸೇವೆ ಸಾಕು, ಧಾರಾಳವಾಯಿತು, ಇನ್ನಾದರೂ ಗಲ್ಲು, ಸರಪಣಿಗಳ ಸೇವೆ ಆರಂಭಿಸೋಣ, ಮೌಢ್ಯಗಳ ಕತ್ತಲೆಯನು ಬುಡಸಹಿತ ಕಿತ್ತೊಗೆದು, ನಾಡಿನಲಿ ಸತ್ಯದ, ಜ್ಞಾನದ, ದೀಪವನು ಬೆಳಗೋಣ, ಶವಗಳ ರಾಶಿಯ ಮೇಲೆ ರಾಜಕೀಯದ ಆಟವಾಡುವ, ಕಟುಕರ ಕಾಟದಿಂದ ನಾಡಿಗೆ ಮುಕ್ತಿ ಕೊಡಿಸೋಣ! ಋಷಿಗಳ ನಾಡಿನಲಿ ಮೆರೆದಿದೆ ಲೂಟಿಕೋರರ ಆಡಳಿತ, ಬನ್ನಿ, ಗಂಗೆ-ಯಮುನೆಯ ನಾಡನು ಮುಕ್ತಗೊಳಿಸೋಣ ರಕ್ತಸಿಕ್ತವಾಗಿಬಿಟ್ಟಿದೆ ಈ ನಮ್ಮ ನೆಚ್ಚಿನ ಕಲ್ಪವೃಕ್ಷ ಮತ್ತೆ ಈ ನಾಡಿನಲಿ ಶಾಂತಿಯ ಸ್ವರ್ಗವನು ಕಟ್ಟೋಣ! ನಮ್ಮವರ ವಿರುದ್ಧ ನಮ್ಮ ಜಗಳ ಇನ್ನೆಷ್ಟು ಕಾಲ ಮಿತ್ರರೇ, ಹಳೆಯ ಎಲ್ಲ ಕಲಹ ನಿಲ್ಲಿಸಿ, ಪರಮಾಪ್ತರಾಗೋಣ! ಒಂಟಿಯಾಗಿ ಸೋಲಿಸಲಾಗದು ದೈತ್ಯ ಶತ್ರುವನು, ಬನ್ನಿ ಎಲ್ಲರೂ ಜೊತೆಯಾಗಿ, ವೈರಿಯ ಮುಗಿಸೋಣ! ದಮನಿತನ ಪರ ಹೋರಾಟವೇ ನೈಜ ಧರ್ಮಯುದ್ಧ, ಪ್ರಾಣದ ಬಲಿ ಅರ್ಪಿಸಲು, ಬನ್ನಿ, ಸಿದ್ಧರಾಗೋಣ! ಹೋರಾಟದ ಹುಮ್ಮಸ್ಸು ತಣಿಯದಿರಲಿ ಎಂದೆಂದೂ, ಹನಿ ನೆತ್ತರು ಉಳಿದಿರುವ ತನಕವೂ ಕಾದುತ್ತಲೇ ಇರೋಣ!

ವಾರ್ತಾ ಭಾರತಿ 21 Jul 2026 2:53 pm

ಕಾಸರಗೋಡು: ರಷ್ಯಾ ಕ್ಷಿಪಣಿ ದಾಳಿಯಲ್ಲಿ ಮೃತಪಟ್ಟ ಅಖಿಲ್ ನಿವಾಸಕ್ಕೆ ಜಿಲ್ಲಾಧಿಕಾರಿ ಅರ್ಜುನ್ ಪಾಂಡ್ಯನ್ ಭೇಟಿ

ಕಾಸರಗೋಡು: ಉಕ್ರೇನ್‌ನ ಒಡೆಸ್ಸಾ ಕರಾವಳಿಯಲ್ಲಿ ರಷ್ಯಾ ಇತ್ತೀಚೆಗೆ ನಡೆಸಿದ ಭೀಕರ ಕ್ಷಿಪಣಿ ದಾಳಿಯಲ್ಲಿ ಮೃತಪಟ್ಟ ಕಾಸರಗೋಡು ಮೂಲದ ಮರ್ಚೆಂಟ್ ನೇವಿ ಉದ್ಯೋಗಿ ಅಖಿಲ್ ಜೋಯನ್ (26) ರವರ ವೆಳ್ಳರಿಕುಂಡ್‌ನಲ್ಲಿರುವ ನಿವಾಸಕ್ಕೆ ಕಾಸರಗೋಡು ಜಿಲ್ಲಾಧಿಕಾರಿ ಅರ್ಜುನ್ ಪಾಂಡ್ಯನ್ ಅವರು ಮಂಗಳವಾರ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ದಾಳಿಯ ಸುದ್ದಿ ತಿಳಿಯುತ್ತಿದ್ದಂತೆ ತೀವ್ರ ಆಘಾತಕ್ಕೊಳಗಾಗಿರುವ ಕುಟುಂಬಕ್ಕೆ ಧೈರ್ಯ ತುಂಬಿದ ಜಿಲ್ಲಾಧಿಕಾರಿಗಳು, ಅಖಿಲ್ ಅವರ ಪಾರ್ಥಿವ ಶರೀರವನ್ನು ಆದಷ್ಟು ಬೇಗ ತಾಯ್ನಾಡಿಗೆ ತರಲು ಜಿಲ್ಲಾಡಳಿತವು ಎಲ್ಲಾ ರೀತಿಯ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಭರವಸೆ ನೀಡಿದರು. ಸರ್ಕಾರದಿಂದಲೇ ಸಂಪೂರ್ಣ ವೆಚ್ಚ: ಪಾರ್ಥಿವ ಶರೀರವನ್ನು ಭಾರತಕ್ಕೆ ಮರಳಿ ತರುವ ಪ್ರಕ್ರಿಯೆಗಾಗಿ ಜಿಲ್ಲಾಡಳಿತವು ನೋರ್ಕಾ ಇಲಾಖೆ, ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮತ್ತು ರಾಯಭಾರ ಕಚೇರಿಯೊಂದಿಗೆ ನಿರಂತರ ಸಂಪರ್ಕದಲ್ಲಿದೆ ಎಂದು ಜಿಲ್ಲಾಧಿಕಾರಿ ಅರ್ಜುನ್ ಪಾಂಡ್ಯನ್ ತಿಳಿಸಿದರು. ಈ ಸಂಪೂರ್ಣ ಪ್ರಕ್ರಿಯೆಯ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ಅವರು ಇದೇ ವೇಳೆ ಸ್ಪಷ್ಟಪಡಿಸಿದರು.

ವಾರ್ತಾ ಭಾರತಿ 21 Jul 2026 2:48 pm

ವಿವಾದಕ್ಕೆ ಕಾರಣವಾದ ಶಾಶ್ವತ ನಿವಾಸಿ ಪ್ರಮಾಣ ಪತ್ರ ವಿತರಣೆ! ಸರ್ಕಾರದ ವಿರುದ್ಧ ಅಧಿಕಾರ ದುರುಪಯೋಗದ ಆರೋಪ

ಒಂದು ಕಡೆ ಬಾಂಗ್ಲಾದೇಶದವರು, ಬೇರೆ ರಾಜ್ಯದವರು‌ ಹೆಚ್ಚಿದ್ದಾರೆ. ಅಂತಹವರಿಗೆ ಯೋಜನೆಗಳನ್ನು, ಆಧಾರ್ ಕಾರ್ಡ್‌ಗಳನ್ನು ಕೊಡುತ್ತಿದ್ದೀರಿ ಎಂದು ಬಿಜೆಪಿಯವರು ಅನೇಕ ಬಾರಿ ಸದನದಲ್ಲಿ ಆರೋಪಗಳನ್ನು ಮಾಡಿದ್ದಾರೆ. ನಾನು ಗೃಹ ಸಚಿವನಾಗಿದ್ದಾಗ ಅನೇಕ ಬಾರಿ ಉತ್ತರವನ್ನು ಕೊಟ್ಟಿದ್ದೇನೆ. ನಾವು ಇದನ್ನು ಅಧಿಕೃತ ಮಾಡಬೇಕು. ಹತ್ತು ವರ್ಷ ಈ ರಾಜ್ಯದಲ್ಲಿ ಅವರು ಇದ್ದಾರೆ ಎಂದು ಪುರಾವೆಗಳು ಸಿಕ್ಕಿದರೆ ಅವರಿಗೆ ಕೊಡುತ್ತೇವೆ. ಬಾಂಗ್ಲಾದೇಶದವರಿಗೆ ನಾವು ಹೆಣ್ಣು ಕೊಡುವುದಕ್ಕಾಗುತ್ತಾ? ಇಲ್ಲವಲ್ಲ. ನಾವು ಕೇಂದ್ರ ಸರ್ಕಾರದ ವಿರುದ್ಧ ಹೋಗುತ್ತಿಲ್ಲ, ಕಾನೂನು ಪ್ರಕಾರವೇ ಹೋಗುತ್ತಿದ್ದೇವೆ ಎಂದು ಡಿಸಿಎಂ ಡಾ ಜಿ ಪರಮೇಶ್ವರ್ ತಿರುಗೇಟು ನೀಡಿದ್ದಾರೆ.

ವಿಜಯ ಕರ್ನಾಟಕ 21 Jul 2026 2:40 pm

West Bengal | ಮಮತಾ ಹುತಾತ್ಮರಿಗೆ ದ್ರೋಹ ಎಸಗಿದ್ದಾರೆ: ದಿಲೀಪ್ ಘೋಷ್ ವಾಗ್ದಾಳಿ

ಕೋಲ್ಕತ್ತಾ, ಜು. 21: ಹುತಾತ್ಮರ ದಿನಾಚರಣೆಯನ್ನು ರಾಜಕೀಯ ಕಾರ್ಯಕ್ರಮವನ್ನಾಗಿ ಪರಿವರ್ತಿಸುವ ಮೂಲಕ ತೃಣಮೂಲ ಕಾಂಗ್ರೆಸ್ (TMC) ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು ಹುತಾತ್ಮರು ಮತ್ತು ಅವರ ಕುಟುಂಬಗಳಿಗೆ ದ್ರೋಹ ಎಸಗಿದ್ದಾರೆ ಎಂದು ಪಶ್ಚಿಮ ಬಂಗಾಳದ ಸಚಿವ ದಿಲೀಪ್ ಘೋಷ್ ಮಂಗಳವಾರ ಆರೋಪಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ಕೇವಲ ಪ್ರತಿಭಟನೆಯ ವೇದಿಕೆಯಲ್ಲ; ಇದು ಹುತಾತ್ಮರ ವೇದಿಕೆ. ಇಂದು ಅಲ್ಲಿ ಕಾರ್ಯಕ್ರಮ ನಡೆಯುತ್ತಿರುವಾಗ ಇಡೀ ರಾತ್ರಿ ಏಕೆ ಅಲ್ಲಿ ಕುಳಿತಿದ್ದೀರಿ? ರಾತ್ರಿ ಅಥವಾ ಬೆಳಿಗ್ಗೆ ಪ್ರತಿಭಟನೆ ನಡೆಸುವುದರಿಂದ ಯಾವುದೇ ವ್ಯತ್ಯಾಸವಾಗುವುದಿಲ್ಲ. ಅಲ್ಲಿ ಯಾರೂ ಇಲ್ಲ. ನೀವು ಹುತಾತ್ಮರಿಗೆ ದ್ರೋಹ ಎಸಗಿದ್ದೀರಿ. ಹುತಾತ್ಮರ ಕುಟುಂಬಗಳ ಸದಸ್ಯರಿಗೂ ದ್ರೋಹ ಎಸಗಿದ್ದೀರಿ. ಈಗ ಸಾರ್ವಜನಿಕರಿಗೂ ದ್ರೋಹ ಮಾಡುತ್ತಿದ್ದೀರಿ. ಅದಕ್ಕಾಗಿಯೇ ನೀವು ಏಕಾಂಗಿಯಾಗಿ ನಿಂತಿದ್ದೀರಿ. ಅದಕ್ಕಾಗಿಯೇ ಈ ಪರಿಸ್ಥಿತಿಯನ್ನು ಎದುರಿಸುತ್ತಿದ್ದೀರಿ ಎಂದು ವಾಗ್ದಾಳಿ ನಡೆಸಿದರು. 1993ರ ಜುಲೈ 21ರಂದು ನಡೆದಿದ್ದ ಪೊಲೀಸರ ಗೋಲಿಬಾರ್ ನಲ್ಲಿ ಮೃತಪಟ್ಟವರ ಕುಟುಂಬಗಳಿಗೆ ದೊರಕಬೇಕಿದ್ದ ಪರಿಹಾರವನ್ನು ನಿರಾಕರಿಸಲಾಗಿದೆ ಎಂದೂ ಅವರು ಆರೋಪಿಸಿದರು. ನ್ಯಾಯಾಲಯವು ಹುತಾತ್ಮರ ಕುಟುಂಬಗಳಿಗೆ 25 ಲಕ್ಷ ರೂ. ಪರಿಹಾರ ನೀಡುವಂತೆ ಆದೇಶಿಸಿದ್ದರೂ, ಅಧಿಕಾರಿಗಳು ಕೇವಲ 2 ಲಕ್ಷ ರೂ. ಮಾತ್ರ ವಿತರಿಸಿದ್ದಾರೆ. ಉಳಿದ ಹಣವನ್ನು ತಮ್ಮ ಜೇಬು ತುಂಬಿಸಿಕೊಂಡಿದ್ದಾರೆ. ಹುತಾತ್ಮರ ಕುಟುಂಬಗಳಿಗೆ ದ್ರೋಹ ಎಸಗಿರುವುದರಿಂದಲೇ ನೀವು ಇಂದು ಸಂಕಷ್ಟಕ್ಕೆ ಸಿಲುಕಿದ್ದೀರಿ ಎಂದು ಟೀಕಿಸಿದರು. 1993ರ ಜುಲೈ 21ರಂದು ನಡೆದಿದ್ದ ಪೊಲೀಸರ ಗೋಲಿಬಾರ್ ಗೆ ಕಾರಣರಾದವರು ಬಳಿಕ ಸಚಿವರು, ಸಂಸದರು ಮತ್ತು ಶಾಸಕರಂತಹ ಅಧಿಕಾರದ ಸ್ಥಾನಗಳಿಗೆ ಏರಿದರು. ಆದರೆ, ಹುತಾತ್ಮರ ಕುಟುಂಬಗಳು ಮಾತ್ರ ನಿರಂತರವಾಗಿ ವಂಚನೆಗೆ ಒಳಗಾಗಿವೆ ಎಂದು ಅವರು ಆರೋಪಿಸಿದರು. 1993ರಲ್ಲಿ ಎಡರಂಗ ಸರ್ಕಾರದ ವಿರುದ್ಧ ಯುವ ಕಾಂಗ್ರೆಸ್ ನಡೆಸಿದ್ದ ಪ್ರತಿಭಟನೆಯ ವೇಳೆ ಪೊಲೀಸರ ಗೋಲಿಬಾರ್ ನಲ್ಲಿ 13 ಮಂದಿ ಕಾರ್ಯಕರ್ತರು ಮೃತಪಟ್ಟಿದ್ದರು. ಅವರ ಸ್ಮರಣಾರ್ಥ ಜುಲೈ 21 ಅನ್ನು ಪಶ್ಚಿಮ ಬಂಗಾಳದಲ್ಲಿ ಪ್ರತಿವರ್ಷ ಹುತಾತ್ಮರ ದಿನಾಚರಣೆಯಾಗಿ ಆಚರಿಸಲಾಗುತ್ತಿದೆ.

ವಾರ್ತಾ ಭಾರತಿ 21 Jul 2026 2:04 pm

ಬೆಂಗಳೂರು ದಕ್ಷಿಣ ಶೈಕ್ಷಣಿಕ ಜಿಲ್ಲೆಯ ಹೆಸರು ಬದಲಾವಣೆ! ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ; ತಕ್ಷಣದಿಂದ ಜಾರಿಗೆ

ರಾಮನಗರ ಜಿಲ್ಲೆಯನ್ನು 'ಬೆಂಗಳೂರು ದಕ್ಷಿಣ' ಎಂದು ಮರುನಾಮಕರಣ ಮಾಡಿದ ಹಿನ್ನೆಲೆಯಲ್ಲಿ, ಆಡಳಿತಾತ್ಮಕ ಗೊಂದಲ ನಿವಾರಿಸಲು ಶಾಲಾ ಶಿಕ್ಷಣ ಇಲಾಖೆಯು ತನ್ನ 'ಬೆಂಗಳೂರು ದಕ್ಷಿಣ ಶೈಕ್ಷಣಿಕ ಜಿಲ್ಲೆ'ಯನ್ನು 'ಬೆಂಗಳೂರು ಕೇಂದ್ರ ಶೈಕ್ಷಣಿಕ ಜಿಲ್ಲೆ' ಎಂದು ಮರುನಾಮಕರಣ ಮಾಡಿ ಆದೇಶಿಸಿದೆ. ಇನ್ನು ಮುಂದೆ ಇಲಾಖೆಯ ಎಲ್ಲಾ ಅಧಿಕೃತ ದಾಖಲೆಗಳು ಮತ್ತು ತಂತ್ರಾಂಶಗಳಲ್ಲಿ ಈ ಹೊಸ ಹೆಸರುಗಳನ್ನೇ ಕಡ್ಡಾಯವಾಗಿ ಬಳಸಲು ಸರ್ಕಾರ ಸೂಚಿಸಿದೆ.

ವಿಜಯ ಕರ್ನಾಟಕ 21 Jul 2026 2:01 pm

ನೀವು ಸೇವಿಸುವ ಇನ್ಸ್ಟಂಟ್ ನೂಡಲ್ಸ್ ಸುರಕ್ಷಿತವೆ? ಆರೋಗ್ಯ ತಜ್ಞರು ಪರೀಕ್ಷಿಸಿ ಬಳಸಲು ಸಲಹೆ ನೀಡಿದ್ದಾರೆ!

2026 ಜುಲೈನಲ್ಲಿ ಎರಡು ಗ್ರಾಹಕ ಆಯೋಗಗಳು ಅವಧಿ ಮೀರಿದ ಇನ್ಸ್ಟಂಟ್ ನೂಡಲ್ಸ್ ವಿಚಾರದಲ್ಲಿ ಅಂಗಡಿಗಳಿಗೆ ದಂಡ ವಿಧಿಸಿವೆ. ಈ ಬಗ್ಗೆ ಆರೋಗ್ಯ ತಜ್ಞರು ಏನು ಹೇಳುತ್ತಾರೆ? ಇನ್ಸ್ಟಂಟ್ ನೂಡಲ್ಸ್ ಇದೀಗ Gen Z ಮತ್ತು ಮಿಲೇನಿಯಲ್ ಗಳ ಪ್ರಿಯ ಆಹಾರ. ತ್ವರಿತ ಆಹಾರ ಬೇಕು ಎಂದು ಅನಿಸಿದಾಗ ಕೈಗೆಟಕುವಂತಿರುತ್ತದೆ. ಆದರೆ ಇನ್ಸ್ಟಂಟ್ ನೂಡಲ್ಸ್ ಬಳಸುವ ಮೊದಲು ಪ್ಯಾಕ್ನ ಹಿಂದೆ ಇರುವ ಮುಕ್ತಾಯ ಅವಧಿಯನ್ನು (Expiration Date) ಗಮನಿಸಲೇಬೇಕು. ಏಕೆಂದರೆ ಇತ್ತೀಚೆಗೆ ಕನಿಷ್ಠ ಎರಡು ಗ್ರಾಹಕ ನ್ಯಾಯಾಲಯ ಪ್ರಕರಣಗಳು ಪ್ಯಾಕ್ ಮಾಡಿದ ಆಹಾರ ಸುರಕ್ಷತೆ, ಪೂರೈಕೆ ಸರಪಳಿ ನಿರ್ಲಕ್ಷ್ಯ ಮತ್ತು ಕ್ಷೇಮದ ಬಗ್ಗೆ ಚರ್ಚೆಯನ್ನು ಬೆಳಕಿಗೆ ತಂದಿವೆ. ಹಿಮಾಚಲ ಪ್ರದೇಶದ ಕಾಂಗ್ರಾದಲ್ಲಿ ವ್ಯಕ್ತಿಯೊಬ್ಬರು ಪ್ರಮುಖ ರಿಟೇಲ್ ಔಟ್ಲೆಟ್ ಒಂದರಿಂದ ಸ್ಪೈಸಿ ಕೊರಿಯನ್ ಇನ್ಸ್ಟಂಟ್ ನೂಡಲ್ಸ್ ಪ್ಯಾಕೆಟ್ ಖರೀದಿಸಿದರು. ಅದರ ಒಂದು ಭಾಗ ತಿಂದ ಕೂಡಲೇ ಅವರ ಅಪ್ರಾಪ್ತ ಮಗಳು ವಾಂತಿ ಮಾಡಲು ಪ್ರಾರಂಭಿಸಿ ತೀವ್ರವಾಗಿ ಅಸ್ವಸ್ಥಳಾದಳು. ಪ್ಯಾಕೆಟ್ ಪರೀಕ್ಷಿಸಿದಾಗ ಉತ್ಪನ್ನವು ಮೂರು ತಿಂಗಳ ಹಿಂದೆಯೇ ಅವಧಿ ಮೀರಿರುವುದು ಕುಟುಂಬಕ್ಕೆ ತಿಳಿದುಬಂದಿದೆ. ಕಾಂಗ್ರಾ ಜಿಲ್ಲಾ ಗ್ರಾಹಕ ಆಯೋಗವು ಚಿಲ್ಲರೆ ವ್ಯಾಪಾರಿಗೆ 20,000 ರೂ. ದಂಡ ವಿಧಿಸಿತು. ಅವಧಿ ಮೀರಿದ ದಾಸ್ತಾನುಗಳನ್ನು ತೆರವುಗೊಳಿಸಲು ವಿಫಲರಾದರೆ ಅದು ಚಿಲ್ಲರೆ ಅಂಗಡಿಯ ನಿರ್ಲಕ್ಷ್ಯದ ಉದಾಹರಣೆ ಎಂದು ಹೇಳಿದೆ. ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಯಲ್ಲಿ ಮತ್ತೊಂದು ಪ್ರಕರಣದಲ್ಲಿ ಗ್ರಾಹಕರು ಪ್ರಮುಖ ಚಿಲ್ಲರೆ ಅಂಗಡಿಯಿಂದ ಖರೀದಿಸಿದ ಇನ್ಸ್ಟಂಟ್ ನೂಡಲ್ಸ್ ಸೇವಿಸಿದ ನಂತರ ತೀವ್ರ ಜ್ವರ, ಹೊಟ್ಟೆ ನೋವು ಮತ್ತು ನಿರಂತರ ವಾಂತಿಯಿಂದ ಬಳಲಿದ್ದಾರೆ. ನಂತರ ಪರಿಶೀಲಿಸಿದಾಗ ಪ್ಯಾಕೆಟ್ ಅವಧಿ ಮೀರಿರುವುದು ಗೊತ್ತಾಗಿದೆ. ಗ್ರಾಹಕ ನ್ಯಾಯಾಲಯವು ಚಿಲ್ಲರೆ ವ್ಯಾಪಾರಿಗೆ 2.8 ಲಕ್ಷ ರೂ. ದಂಡ ಪಾವತಿಸಲು ನಿರ್ದೇಶಿಸಿತು. ►ಅವಧಿ ಮೀರಿದ ಆಹಾರ ಹಾನಿಕಾರಕ ಜನಸಾಮಾನ್ಯರು ಇನ್ಸ್ಟಂಟ್ ನೂಡಲ್ಸ್ ತಾಜಾ ಉತ್ಪನ್ನದಂತೆ ಕೊಳೆಯುವುದಿಲ್ಲ ಎಂದು ನಂಬುತ್ತಾರೆ. ಆದರೆ ಆ ಆಲೋಚನೆಯೇ ಸರಿಯಲ್ಲ. * ಇನ್ಸ್ಟಂಟ್ ನೂಡಲ್ಸ್ ತಾಳೆ ಅಥವಾ ಸಸ್ಯಜನ್ಯ ಎಣ್ಣೆಗಳಲ್ಲಿ ದೀರ್ಘಕಾಲ ಹುರಿಯಲಾಗಿರುತ್ತದೆ. ಅವಧಿ ಮೀರಿದ ನಂತರ ಈ ಕೊಬ್ಬು ಆಕ್ಸಿಡೀಕರಣಗೊಂಡು ಕಮಟು ವಾಸನೆ ಹೊಡೆಯುತ್ತದೆ. ಹೀಗಾಗಿ ಆರೋಗ್ಯಕ್ಕೆ ಹಾನಿಕರ. * ಫ್ಲೇವರಿಂಗ್ ಟೇಸ್ಟ್ಮೇಕರ್ ಸ್ಯಾಚೆಟ್ ನಲ್ಲಿ ಡಿಹೈಡ್ರೇಟ್ ಮಾಡಿದ ಮಸಾಲೆ, ಲವಣ ಮತ್ತು ಕೆಲವೊಮ್ಮೆ ಹಾಲಿನ ಘನವಸ್ತುಗಳು ಅಥವಾ ಪ್ರಾಣಿಗಳ ಸಾರಗಳನ್ನು ಹೊಂದಿರುತ್ತವೆ. ಪ್ಯಾಕೆಟ್ ತಾಪಮಾನದ ಏರಿಳಿತ ಅನುಭವಿಸಿದರೆ ತೇವಾಂಶ ಸಂಗ್ರಹವಾಗುತ್ತದೆ. ಇದು ಸಾಲ್ಮೊನೆಲ್ಲಾ, ಇ. ಕೋಲಿ ಅಥವಾ ಮೋಲ್ಡ್ನಂತಹ (ಬೂಷ್ಟು) ರೋಗಾಣುಗಳಿಗೆ ನೆಲೆಯಾಗುತ್ತದೆ. * ಪ್ಲಾಸ್ಟಿಕ್ ಪ್ಯಾಕೇಜ್ ಅವಧಿ ಮೀರಿದಾಗ ಕಠಿಣವಾಗುತ್ತದೆ. ಸೂಕ್ಷ್ಮ ರಂಧ್ರಗಳು ಸುತ್ತಮುತ್ತಲಿನ ತೇವಾಂಶ ಮತ್ತು ಪರಿಸರ ವಿಷಗಳು ಒಳನುಸುಳಲು ಅನುವು ಮಾಡಿಕೊಡುತ್ತವೆ. ಹೀಗೆ ಉತ್ಪನ್ನದ ಆಂತರಿಕ ಬಯೋಕೆಮಿಸ್ಟ್ರಿ ಬದಲಾಗುತ್ತದೆ. ►ಅವಧಿ ಮೀರಿರುವುದನ್ನು ಪರೀಕ್ಷಿಸುವುದು ಎಲ್ಲಾ ಸಾಮಾನ್ಯ ಇನ್ಸ್ಟಂಟ್ ನೂಡಲ್ಸ್ ಅಪಾಯಕಾರಿಯಲ್ಲ. ಪೌಷ್ಟಿಕ ತಜ್ಞೆ ಕವಿತಾ ದೇವಗನ್ ಅವರ ಪ್ರಕಾರ, ಅವಧಿ ಮುಗಿದ ನೂಡಲ್ಸ್ ಮಾತ್ರ ಆರೋಗ್ಯಕ್ಕೆ ಹಾನಿಕರ. ಹಾಗಿದ್ದರೆ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವುದು ಹೇಗೆ? ಪ್ಯಾಕೆಟ್ ತೆರೆಯುವ ಮೊದಲು ಸ್ವಲ್ಪ ಸಮಯ ತೆಗೆದುಕೊಂಡು ಈ ಕೆಳಗಿನ ವಿಷಯಗಳನ್ನು ಗಮನಿಸಿ: * ಅವಧಿ ಮೀರಿದೆಯೇ ಎಂದು ಪರೀಕ್ಷಿಸಿ. * ಪ್ಯಾಕೇಜಿಂಗ್ನಲ್ಲಿ ಹರಿತ, ಊತ ಅಥವಾ ಗಾಳಿ ಹೋಗಿರುವುದು ಕಂಡುಬಂದಿದೆಯೇ ಎಂದು ಗಮನಿಸಿ. * ಉಬ್ಬಿದ (Puffed) ಪ್ಯಾಕೆಟ್ಗಳನ್ನು ಖರೀದಿಸಬೇಡಿ. * ಬಣ್ಣ ಬದಲಾಗಿರುವ ಅಥವಾ ವಾಸನೆ ಸಹಜವಾಗಿಲ್ಲದ ಉತ್ಪನ್ನವನ್ನು ಬಳಸಬೇಡಿ. ►ಇನ್ಸ್ಟಂಟ್ ನೂಡಲ್ಸ್ ಬಳಸುವುದು ಹೇಗೆ? ಮೈಕ್ರೋವೇವ್ ಸುರಕ್ಷಿತ ಎನ್ನುವ ಲೇಬಲ್ ಇಲ್ಲದೆ ಇದ್ದರೆ ಅದನ್ನು ಮೈಕ್ರೋವೇವ್ ನಲ್ಲಿ ಇಡಬಾರದು. ಏಕೆಂದರೆ ಅತಿಯಾದ ಶಾಖ ಅಥವಾ ಹಾನಿಗೊಳಗಾದ ಪ್ಯಾಕೇಜಿಂಗ್ ಆಹಾರಕ್ಕೆ ರಾಸಾಯನಿಕ ವಲಸೆಯನ್ನು ಹೆಚ್ಚಿಸಬಹುದು. ಆಹಾರದ ನಿರ್ದೇಶನಗಳನ್ನು ಗಮನಿಸಿ. ಈ ಆಹಾರಗಳನ್ನು ನಿರ್ದೇಶಿಸಿದಂತೆ ಬಳಸಿದಾಗ ಮಾತ್ರ ಸುರಕ್ಷಿತವೆಂದು ಪರಿಗಣಿಸಲಾಗುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಅಸ್ವಸ್ಥರಾದರೆ ಏನು ಮಾಡುವುದು? * ಅವಧಿ ಮೀರಿದ ಆಹಾರ ವಸ್ತು ತಿಂದು ಅಸ್ವಸ್ಥರಾದರೆ ತಕ್ಷಣ ORS ಸೇವಿಸಿ. ಡಿಹೈಡ್ರೇಶನ್ ತಕ್ಷಣದ ಅಪಾಯವಾಗಿರುತ್ತದೆ. * ಹಗುರ ಆಹಾರ ಸೇವಿಸಿ. ಅಕ್ಕಿ, ಬಾಳೆಹಣ್ಣು, ಮೊಸರು ತಿನ್ನಬಹುದು. ಮಸಾಲೆಯುಕ್ತ, ಎಣ್ಣೆಯುಕ್ತ, ಕೆಫೀನ್, ಹಾಲು ಮತ್ತು ಆಲ್ಕೋಹಾಲ್ ಸೇವಿಸಬೇಡಿ. * ಸ್ವಯಂ ಔಷಧ ಸೇವಿಸಬೇಡಿ. ಅತಿಸಾರದ ಔಷಧಿಗಳು ಮತ್ತು ಆಂಟಿಬಯಾಟಿಕ್ ಗಳನ್ನು ವೈದ್ಯಕೀಯ ಸಲಹೆ ಇಲ್ಲದೆ ಸೇವಿಸಬೇಡಿ. * ಮಲದಲ್ಲಿ ರಕ್ತ, ಅಧಿಕ ಜ್ವರ, ಪದೇಪದೇ ವಾಂತಿ, ಮೂತ್ರ ಕಡಿಮೆಯಾಗಿರುವಂತಹ ಲಕ್ಷಣಗಳು 48 ಗಂಟೆಗಳಿಗೂ ಮೀರಿ ಇದ್ದರೆ ತಕ್ಷಣ ವೈದ್ಯರ ಸಲಹೆ ಪಡೆಯಬೇಕು. ಮಾಹಿತಿ ಕೃಪೆ: Hindustan Times

ವಾರ್ತಾ ಭಾರತಿ 21 Jul 2026 1:56 pm

ಮಂಗಳೂರು: ರೂಪಶ್ರೀಗೆ ‘ಅತ್ಯುತ್ತಮ ಪೋಷಕ ನಟಿ’ ರಾಷ್ಟ್ರೀಯ ಪ್ರಶಸ್ತಿ

‘ಪ್ರಶಸ್ತಿ ಬರುವ ಕಲ್ಪನೆಯೂ ಇರಲಿಲ್ಲ’ ಎಂದ ನಟಿ ರೂಪಶ್ರೀ ವರ್ಕಾಡಿ

ವಾರ್ತಾ ಭಾರತಿ 21 Jul 2026 1:48 pm

ಧನಕರ್ ರಾಜೀನಾಮೆಗೆ ವರ್ಷ | ರೈತರ ಬಳಿಕ ವಿದ್ಯಾರ್ಥಿಗಳ ಸಮಸ್ಯೆಯಲ್ಲೂ ಕೇಂದ್ರ ಅಸೂಕ್ಷ್ಮತೆ: ಕಾಂಗ್ರೆಸ್ ಆರೋಪ

ಹೊಸದಿಲ್ಲಿ: ಮಾಜಿ ಉಪ ರಾಷ್ಟ್ರಪತಿ ಹಾಗೂ ರಾಜ್ಯಸಭಾಧ್ಯಕ್ಷ ಜಗದೀಪ್ ಧನಕರ್ ಅವರು ರಾಜೀನಾಮೆ ನೀಡಿ ಒಂದು ವರ್ಷ ಕಳೆದಿರುವ ಸಂದರ್ಭದಲ್ಲಿ, ರೈತರ ಸಮಸ್ಯೆಗಳ ವಿಚಾರದಲ್ಲಿ ಈ ಹಿಂದೆ ತೋರಿದ್ದ ಅಸೂಕ್ಷ್ಮತೆಯನ್ನೇ ಕೇಂದ್ರ ಸರ್ಕಾರ ಈಗ ವಿದ್ಯಾರ್ಥಿಗಳು ಹಾಗೂ ಯುವಜನರ ಸಮಸ್ಯೆಗಳ ವಿಷಯದಲ್ಲೂ ಪ್ರದರ್ಶಿಸುತ್ತಿದೆ ಎಂದು ಕಾಂಗ್ರೆಸ್ ಮಂಗಳವಾರ ಆರೋಪಿಸಿದೆ. ಧನಕರ್ ರಾಜೀನಾಮೆ ನೀಡಿ ಒಂದು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್ ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿ, ರೈತರ ಸಮಸ್ಯೆಗಳ ಕುರಿತು ಪದೇ ಪದೇ ಧ್ವನಿ ಎತ್ತಿದ್ದ ಕಾರಣಕ್ಕೆ ಧನಕರ್ ಅವರನ್ನು ಬಲವಂತವಾಗಿ ಹುದ್ದೆಯಿಂದ ಕೆಳಗಿಳಿಸಲಾಯಿತು ಎಂದು ಆರೋಪಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರು ಜಗದೀಪ್ ಧನಕರ್ ಅವರನ್ನು ಭಾರಿ ಅದ್ದೂರಿಯಾಗಿ ಉಪ ರಾಷ್ಟ್ರಪತಿಯನ್ನಾಗಿ ನೇಮಕ ಮಾಡಿದ್ದರು. ಆದರೆ, ರೈತರ ಸಮಸ್ಯೆಗಳ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿ, ಈ ವಿಷಯದಲ್ಲಿ ಸರ್ಕಾರದ ಅಸೂಕ್ಷ್ಮತೆ ಆಘಾತಕಾರಿಯಾಗಿದೆ ಎಂದು ಹೇಳಿದ್ದರು. ಇದರ ಬೆನ್ನಲ್ಲೇ ಅವರನ್ನು ದಿಢೀರನೆ ರಾಜೀನಾಮೆ ಸಲ್ಲಿಸುವಂತೆ ಮಾಡಲಾಯಿತು ಎಂದು ಜೈರಾಮ್ ರಮೇಶ್ ದೂರಿದರು. NEET ಪರೀಕ್ಷೆಯಲ್ಲಿನ ಅಕ್ರಮದ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಹಾಗೂ ಶಿಕ್ಷಣ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಬೇಕು ಎಂದು ಆಗ್ರಹಿಸಿ ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆಯನ್ನು ಉಲ್ಲೇಖಿಸಿದ ಅವರು, ವಿದ್ಯಾರ್ಥಿಗಳು ಹಾಗೂ ಯುವಜನರ ಸಮಸ್ಯೆಗಳನ್ನು ನಿಭಾಯಿಸುವಲ್ಲಿಯೂ ಕೇಂದ್ರ ಸರ್ಕಾರ ಅದೇ ರೀತಿಯ ಅಸೂಕ್ಷ್ಮತೆ ಮತ್ತು ಯಥಾಸ್ಥಿತಿಯ ಧೋರಣೆಯನ್ನು ಅನುಸರಿಸುತ್ತಿದೆ ಎಂದು ಟೀಕಿಸಿದರು. ಇದೇ ದಿನದಂದು ಭಾರತದ ಉಪ ರಾಷ್ಟ್ರಪತಿ ಹಾಗೂ ರಾಜ್ಯಸಭಾಧ್ಯಕ್ಷರಾಗಿದ್ದ ಜಗದೀಪ್ ಧನಕರ್ ಅವರನ್ನು ಬಲವಂತವಾಗಿ ರಾಜೀನಾಮೆ ಸಲ್ಲಿಸುವಂತೆ ಮಾಡಲಾಗಿತ್ತು. ಐದು ವರ್ಷಗಳ ಅವಧಿಗೆ ನೇಮಕಗೊಂಡಿದ್ದ ಅವರು ಕೇವಲ ಮೂರು ವರ್ಷಗಳಷ್ಟೇ ಅಧಿಕಾರದಲ್ಲಿದ್ದರು. ಪ್ರಧಾನಿ ಮೋದಿ ಅವರು ಅವರನ್ನು ಅದ್ದೂರಿಯಾಗಿ ಉಪ ರಾಷ್ಟ್ರಪತಿಯನ್ನಾಗಿ ನೇಮಕ ಮಾಡಿದ್ದರು. ಆದರೆ, ರೈತರ ಸಮಸ್ಯೆಗಳ ಕುರಿತು ಅವರು ಪದೇ ಪದೇ ಧ್ವನಿ ಎತ್ತಿದ್ದರಿಂದ ಹಾಗೂ ರೈತರ ಸಮಸ್ಯೆಗಳ ಬಗ್ಗೆ ಮೋದಿ ಸರ್ಕಾರ ಅಸೂಕ್ಷ್ಮವಾಗಿ ವರ್ತಿಸುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದರಿಂದ ಅವರನ್ನು ಹುದ್ದೆಯಿಂದ ಕೆಳಗಿಳಿಸಲಾಯಿತು. ಅದೇ ರೀತಿಯ ಅಸೂಕ್ಷ್ಮತೆ ಹಾಗೂ ಯಥಾಸ್ಥಿತಿಯನ್ನು ಈಗ ಲಕ್ಷಾಂತರ ವಿದ್ಯಾರ್ಥಿಗಳು ಮತ್ತು ಯುವಜನರ ಸಮಸ್ಯೆಗಳ ವಿಚಾರದಲ್ಲೂ ಪ್ರದರ್ಶಿಸಲಾಗುತ್ತಿದೆ ಎಂದು ಜೈರಾಮ್ ರಮೇಶ್ ಹೇಳಿದ್ದಾರೆ. NEET ಪರೀಕ್ಷೆಯ ಅಕ್ರಮ, ಶಿಕ್ಷಣ ವ್ಯವಸ್ಥೆಯಲ್ಲಿ ಪಾರದರ್ಶಕತೆ ಹಾಗೂ ವಿದ್ಯಾರ್ಥಿಗಳ ಪ್ರತಿಭಟನೆಗಳ ಕುರಿತು ಕೇಂದ್ರ ಸರ್ಕಾರದ ನಿಲುವನ್ನು ಪ್ರಶ್ನಿಸಿರುವ ಕಾಂಗ್ರೆಸ್, ಧನಕರ್ ರಾಜೀನಾಮೆಯ ಘಟನೆಯನ್ನು ಉಲ್ಲೇಖಿಸಿ ಸರ್ಕಾರದ ಕಾರ್ಯವೈಖರಿಯನ್ನು ಟೀಕಿಸಿದೆ.

ವಾರ್ತಾ ಭಾರತಿ 21 Jul 2026 1:48 pm

ಧನಕರ್ ರಾಜೀನಾಮೆಗೆ ವರ್ಷ | ರೈತರ ಬಳಿಕ ವಿದ್ಯಾರ್ಥಿಗಳ ಸಮಸ್ಯೆಯಲ್ಲೂ ಕೇಂದ್ರ ಅಸೂಕ್ಷ್ಮತೆ: ಕಾಂಗ್ರೆಸ್ ಆರೋಪ

ಹೊಸದಿಲ್ಲಿ: ಮಾಜಿ ಉಪ ರಾಷ್ಟ್ರಪತಿ ಹಾಗೂ ರಾಜ್ಯಸಭಾಧ್ಯಕ್ಷ ಜಗದೀಪ್ ಧನಕರ್ ಅವರು ರಾಜೀನಾಮೆ ನೀಡಿ ಒಂದು ವರ್ಷ ಕಳೆದಿರುವ ಸಂದರ್ಭದಲ್ಲಿ, ರೈತರ ಸಮಸ್ಯೆಗಳ ವಿಚಾರದಲ್ಲಿ ಈ ಹಿಂದೆ ತೋರಿದ್ದ ಅಸೂಕ್ಷ್ಮತೆಯನ್ನೇ ಕೇಂದ್ರ ಸರ್ಕಾರ ಈಗ ವಿದ್ಯಾರ್ಥಿಗಳು ಹಾಗೂ ಯುವಜನರ ಸಮಸ್ಯೆಗಳ ವಿಷಯದಲ್ಲೂ ಪ್ರದರ್ಶಿಸುತ್ತಿದೆ ಎಂದು ಕಾಂಗ್ರೆಸ್ ಮಂಗಳವಾರ ಆರೋಪಿಸಿದೆ. ಧನಕರ್ ರಾಜೀನಾಮೆ ನೀಡಿ ಒಂದು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್ ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿ, ರೈತರ ಸಮಸ್ಯೆಗಳ ಕುರಿತು ಪದೇ ಪದೇ ಧ್ವನಿ ಎತ್ತಿದ್ದ ಕಾರಣಕ್ಕೆ ಧನಕರ್ ಅವರನ್ನು ಬಲವಂತವಾಗಿ ಹುದ್ದೆಯಿಂದ ಕೆಳಗಿಳಿಸಲಾಯಿತು ಎಂದು ಆರೋಪಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರು ಜಗದೀಪ್ ಧನಕರ್ ಅವರನ್ನು ಭಾರಿ ಅದ್ದೂರಿಯಾಗಿ ಉಪ ರಾಷ್ಟ್ರಪತಿಯನ್ನಾಗಿ ನೇಮಕ ಮಾಡಿದ್ದರು. ಆದರೆ, ರೈತರ ಸಮಸ್ಯೆಗಳ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿ, ಈ ವಿಷಯದಲ್ಲಿ ಸರ್ಕಾರದ ಅಸೂಕ್ಷ್ಮತೆ ಆಘಾತಕಾರಿಯಾಗಿದೆ ಎಂದು ಹೇಳಿದ್ದರು. ಇದರ ಬೆನ್ನಲ್ಲೇ ಅವರನ್ನು ದಿಢೀರನೆ ರಾಜೀನಾಮೆ ಸಲ್ಲಿಸುವಂತೆ ಮಾಡಲಾಯಿತು ಎಂದು ಜೈರಾಮ್ ರಮೇಶ್ ದೂರಿದರು. NEET ಪರೀಕ್ಷೆಯಲ್ಲಿನ ಅಕ್ರಮದ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಹಾಗೂ ಶಿಕ್ಷಣ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಬೇಕು ಎಂದು ಆಗ್ರಹಿಸಿ ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆಯನ್ನು ಉಲ್ಲೇಖಿಸಿದ ಅವರು, ವಿದ್ಯಾರ್ಥಿಗಳು ಹಾಗೂ ಯುವಜನರ ಸಮಸ್ಯೆಗಳನ್ನು ನಿಭಾಯಿಸುವಲ್ಲಿಯೂ ಕೇಂದ್ರ ಸರ್ಕಾರ ಅದೇ ರೀತಿಯ ಅಸೂಕ್ಷ್ಮತೆ ಮತ್ತು ಯಥಾಸ್ಥಿತಿಯ ಧೋರಣೆಯನ್ನು ಅನುಸರಿಸುತ್ತಿದೆ ಎಂದು ಟೀಕಿಸಿದರು. ಇದೇ ದಿನದಂದು ಭಾರತದ ಉಪ ರಾಷ್ಟ್ರಪತಿ ಹಾಗೂ ರಾಜ್ಯಸಭಾಧ್ಯಕ್ಷರಾಗಿದ್ದ ಜಗದೀಪ್ ಧನಕರ್ ಅವರನ್ನು ಬಲವಂತವಾಗಿ ರಾಜೀನಾಮೆ ಸಲ್ಲಿಸುವಂತೆ ಮಾಡಲಾಗಿತ್ತು. ಐದು ವರ್ಷಗಳ ಅವಧಿಗೆ ನೇಮಕಗೊಂಡಿದ್ದ ಅವರು ಕೇವಲ ಮೂರು ವರ್ಷಗಳಷ್ಟೇ ಅಧಿಕಾರದಲ್ಲಿದ್ದರು. ಪ್ರಧಾನಿ ಮೋದಿ ಅವರು ಅವರನ್ನು ಅದ್ದೂರಿಯಾಗಿ ಉಪ ರಾಷ್ಟ್ರಪತಿಯನ್ನಾಗಿ ನೇಮಕ ಮಾಡಿದ್ದರು. ಆದರೆ, ರೈತರ ಸಮಸ್ಯೆಗಳ ಕುರಿತು ಅವರು ಪದೇ ಪದೇ ಧ್ವನಿ ಎತ್ತಿದ್ದರಿಂದ ಹಾಗೂ ರೈತರ ಸಮಸ್ಯೆಗಳ ಬಗ್ಗೆ ಮೋದಿ ಸರ್ಕಾರ ಅಸೂಕ್ಷ್ಮವಾಗಿ ವರ್ತಿಸುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದರಿಂದ ಅವರನ್ನು ಹುದ್ದೆಯಿಂದ ಕೆಳಗಿಳಿಸಲಾಯಿತು. ಅದೇ ರೀತಿಯ ಅಸೂಕ್ಷ್ಮತೆ ಹಾಗೂ ಯಥಾಸ್ಥಿತಿಯನ್ನು ಈಗ ಲಕ್ಷಾಂತರ ವಿದ್ಯಾರ್ಥಿಗಳು ಮತ್ತು ಯುವಜನರ ಸಮಸ್ಯೆಗಳ ವಿಚಾರದಲ್ಲೂ ಪ್ರದರ್ಶಿಸಲಾಗುತ್ತಿದೆ ಎಂದು ಜೈರಾಮ್ ರಮೇಶ್ ಹೇಳಿದ್ದಾರೆ. NEET ಪರೀಕ್ಷೆಯ ಅಕ್ರಮ, ಶಿಕ್ಷಣ ವ್ಯವಸ್ಥೆಯಲ್ಲಿ ಪಾರದರ್ಶಕತೆ ಹಾಗೂ ವಿದ್ಯಾರ್ಥಿಗಳ ಪ್ರತಿಭಟನೆಗಳ ಕುರಿತು ಕೇಂದ್ರ ಸರ್ಕಾರದ ನಿಲುವನ್ನು ಪ್ರಶ್ನಿಸಿರುವ ಕಾಂಗ್ರೆಸ್, ಧನಕರ್ ರಾಜೀನಾಮೆಯ ಘಟನೆಯನ್ನು ಉಲ್ಲೇಖಿಸಿ ಸರ್ಕಾರದ ಕಾರ್ಯವೈಖರಿಯನ್ನು ಟೀಕಿಸಿದೆ.

ವಾರ್ತಾ ಭಾರತಿ 21 Jul 2026 1:48 pm

`ಈ ನೋವು ಅಪಾರ': ಫಿಫಾ ವಿಶ್ವಕಪ್ 2026 ಸೋಲಿನ ಬಳಿಕ ಲಿಯೋನೆಲ್ ಮೆಸ್ಸಿ ಭಾವುಕ ಪೋಸ್ಟ್!

ಫಿಫಾ ವಿಶ್ವಕಪ್ 2026 ಫೈನಲ್‌ನಲ್ಲಿ ಸ್ಪೇನ್ ವಿರುದ್ಧ 1-0 ಅಂತರದಲ್ಲಿ ಸೋತ ಅರ್ಜೆಂಟೀನಾ, ಸತತ ಎರಡನೇ ಬಾರಿಗೆ ಚಾಂಪಿಯನ್ ಆಗುವ ಅವಕಾಶ ಕಳೆದುಕೊಂಡಿದೆ. ಈ ಸೋಲಿನಿಂದ ಭಾವುಕರಾದ ಲಿಯೋನೆಲ್ ಮೆಸ್ಸಿ, ಸೋಲಿನ ನೋವು ಅಪಾರ, ಆದರೆ ಸತತ ಎರಡು ಫೈನಲ್ ತಲುಪಿದ್ದಕ್ಕೆ ಹೆಮ್ಮೆಯಿದೆ ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡು ಸ್ಪೇನ್ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ಫೈನಲ್‌ನಲ್ಲಿ ಮಂಕಾಗಿದ್ದ ಮೆಸ್ಸಿ 8 ಗೋಲುಗಳೊಂದಿಗೆ ಟೂರ್ನಿ ಮುಗಿಸಿದರು. 6 ವಿಶ್ವಕಪ್‌ಗಳಲ್ಲಿ ಆಡಿದ ಸಾಧನೆ ಮಾಡಿರುವ ಮೆಸ್ಸಿ ಇನ್ನೂ ನಿವೃತ್ತಿ ಘೋಷಿಸಿಲ್ಲವಾದರೂ, ಮುಂದಿನ ವಿಶ್ವಕಪ್‌ ವೇಳೆಗೆ ಅವರಿಗೆ 43 ವರ್ಷವಾಗುವುದರಿಂದ ಅವರ ಮುಂದಿನ ನಡೆಯ ಬಗ್ಗೆ ಕುತೂಹಲ ಮೂಡಿದೆ.

ವಿಜಯ ಕರ್ನಾಟಕ 21 Jul 2026 1:39 pm

ಕೆಯುಡಬ್ಲ್ಯೂಜೆ ದತ್ತಿನಿಧಿ ವಾರ್ಷಿಕ ಪ್ರಶಸ್ತಿ ಪ್ರಕಟ

ಬೆಂಗಳೂರು : ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದಿಂದ ಕೊಡ ಮಾಡುವ ಕೆಯುಡಬ್ಲ್ಯೂಜೆ ದತ್ತಿನಿಧಿ ಪ್ರಶಸ್ತಿಗಳನ್ನು ಪ್ರಕಟ ಮಾಡಲಾಗಿದೆ. ವೃತ್ತಿ ಸೇವೆ, ಸಾಮಾಜಿಕ ಬದ್ದತೆ ಮತ್ತು ಸಾಧನೆಗಳಿಗಾಗಿ ಕೆಯುಡಬ್ಲ್ಯುಜೆ ದತ್ತಿನಿಧಿ ಪ್ರಶಸ್ತಿಯನ್ನು ನೀಡಲಾಗುವುದು. ಪ್ರಶಸ್ತಿಯು ಫಲಕ, ಪ್ರಶಸ್ತಿ ಪತ್ರ, 5ಸಾವಿರ ನಗದು, ಕೆಯುಡಬ್ಲ್ಯೂಜೆ ಗೌರವಾದರಗಳನ್ನು ಒಳಗೊಂಡಿದೆ. ಚಿಕ್ಕಮಗಳೂರಿನಲ್ಲಿ ಜುಲೈ 25ಕ್ಕೆ ನಡೆಯಲಿರುವ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು ಎಂದು ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಮತ್ತು ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ್ ಅವರು ತಿಳಿಸಿದ್ದಾರೆ.  ಡಿ.ವಿ.ಜಿ.ಪ್ರಶಸ್ತಿ : ಬಿ.ವಿ.ಗೋಪಿನಾಥ್, ಸಂಯುಕ್ತ ಕರ್ನಾಟಕ, ಕೋಲಾರ ಗೊಮ್ಮಟ ಮಾಧ್ಯಮ ಪ್ರಶಸ್ತಿ: ಗಿರೀಶ್ ರಾವ್ ಹತ್ವಾರ್ (ಜೋಗಿ), ಸಂಪಾದಕರು, ಕನ್ನಡಪ್ರಭ ಎಚ್. ಎಸ್. ದೊರೆಸ್ವಾಮಿ ಪ್ರಶಸ್ತಿ: ರವಿಪ್ರಕಾಶ್, ಪ್ರಜಾವಾಣಿ ಎಸ್.ವಿ. ಜಯಶೀಲರಾವ್ ಪ್ರಶಸ್ತಿ: ಜಾನ್ ಮಥಾಯಿಸ್, ಹಿರಿಯ ಪತ್ರಕರ್ತರು. ಸಿ.ಆರ್.ಕೃಷ್ಣರಾವ್ ಪ್ರಶಸ್ತಿ: ಅನಂತ ಚಿನಿವಾರ್, ಹಿರಿಯ ಪತ್ರಕರ್ತರು ಡಾ.ಎಂ.ಎಂ.ಕಲ್ಬುರ್ಗಿ ಪ್ರಶಸ್ತಿ: ಮೀನಾ ಮೈಸೂರು ಡಾ.ಬಿ.ಆರ್.ಅಂಬೇಡ್ಕರ್ ಪ್ರಶಸ್ತಿ: ಮಾವಳ್ಳಿ ಶಂಕರ್, ಅಂಬೇಡ್ಕರ್ ವಾದ ಪತ್ರಿಕೆ ಪಾಟೀಲ್ ಪುಟ್ಟಪ್ಪ(ಪಾಪು) ಪ್ರಶಸ್ತಿ: ಅಡಿವೇಂದ್ರ ಇನಾಂದಾರ, ಹಿರಿಯ ಪತ್ರಕರ್ತರು, ಬಾದಾಮಿ ಶ್ರೀಮತಿ ಯಶೋದಮ್ಮ ಜಿ. ನಾರಾಯಣ ಪ್ರಶಸ್ತಿ: ಮಂಜುಳ ಕಿರುಗಾವಲು, ಜನೋದಯ, ಮಂಡ್ಯ ಬದರಿನಾಥ ಹೊಂಬಾಳೆ ಪ್ರಶಸ್ತಿ : ಡಿ.ಜಿ.ಮೋಮಿನ್, ಗಂಜೇಂದ್ರಗಡ, ಗದಗ ಕಿಡಿಶೇಷಪ್ಪ ಪ್ರಶಸ್ತಿ: ದಿನೇಶ್ ಗೌಡಗೆರೆ, ಸಂಪಾದಕರು, ಇಬ್ಬನಿ ಸೂರ್ಯ, ಚಿತ್ರದುರ್ಗ ರವಿ ಬೆಳಗೆರೆ ಪ್ರಶಸ್ತಿ: ಎಚ್.ಸಿ.ದಿನೇಶ್ ಕುಮಾರ್, ಹಿರಿಯ ಪತ್ರಕರ್ತರು ಪಿ.ಆರ್. ರಾಮಯ್ಯ ಸ್ಮಾರಕ ಪ್ರಶಸ್ತಿ: ಭವಾನಿ ಲಕ್ಷ್ಮಿನಾರಾಯಣ, ಹಿರಿಯ ಪತ್ರಕರ್ತರು, ಚಿಕ್ಕಬಳ್ಳಾಪುರ ಹೆಚ್.ಕೆ. ವೀರಣ್ಣಗೌಡ ಸ್ಮಾರಕ ಪ್ರಶಸ್ತಿ: ಬಿ.ಎಸ್.ಜಯರಾಂ, ಪಾಂಡವಪುರ ರಾಜಶೇಖರ ಕೋಟಿ ಪ್ರಶಸ್ತಿ: ಟಿ.ವಿ.ರಾಜೇಶ್ವರ, ಆಂದೋಲನ, ಮೈಸೂರು ಪಿ.ರಾಮಯ್ಯ ಪ್ರಶಸ್ತಿ: ಎಚ್.ಬಿ.ದಿನೇಶ್, ಹಿರಿಸಾವೆ. ಮಾ. ರಾಮಮೂರ್ತಿ ಪ್ರಶಸ್ತಿ: ಶಿವಮೂರ್ತಿ, ಹಿರಿಯ ಪತ್ರಕರ್ತರು, ರಾಯಚೂರು ಮಹದೇವ ಪ್ರಕಾಶ್ ಪ್ರಶಸ್ತಿ: ಸುರೇಶ್ ಕೆ, ವಿಜಯ ಕರ್ನಾಟಕ, ಬೆಳಗಾವಿ. ಶಿವಮೊಗ್ಗ ಮಿಂಚು ಶ್ರೀನಿವಾಸ ಪ್ರಶಸ್ತಿ: ಶ್ರೀಕಾಂತ್ ಭಟ್, ವಿಜಯವಾಣಿ, ಬೆಂಗಳೂರು ಎಚ್.ಎಸ್. ರಂಗಸ್ವಾಮಿ ಪ್ರಶಸ್ತಿ: ಜಿ.ವಾದಿರಾಜ್ ಕಮರೂರು, ಸ್ಥಾನಿಕ ಸಂಪಾದಕರು, ಹೊಸದಿಗಂತ, ಶಿವಮೊಗ್ಗ ಎಂ.ನಾಗೇಂದ್ರ ರಾವ್ ಪ್ರಶಸ್ತಿ: ಕಣ್ಣಪ್ಪ ಉಷಾಮಹಿ, ಹಿರಿಯ ಪತ್ರಕರ್ತರು, ಶಿವಮೊಗ್ಗ ಶ್ರೀಮತಿ ಗಿರಿಜಮ್ಮ, ರುದ್ರಪ್ಪ ತಾಳಿಕೋಟಿ ಪ್ರಶಸ್ತಿ: ಬಿ.ಕೆ.ರಮ್ಯಶ್ರೀ, ಚಂದನ/ಆಕಾಶವಾಣಿ ಅಪ್ಪಾಜಿಗೌಡ (ಸಿನಿ)ಪ್ರಶಸ್ತಿ: ಹರ್ಷವರ್ಧನ್ ಬ್ಯಾಡನೂರು, ವಿಜಯವಾಣಿ ಮೂಡಣ, ಹಾವೇರಿ ಪ್ರಶಸ್ತಿ: ಎಸ್.ಆರ್.ನಂದಿಹಳ್ಳಿ, ಡಿಡಿ1, ಹಾವೇರಿ ಕೆಯುಡಬ್ಲ್ಯೂಜೆ ವಿಶೇಷ ಪ್ರಶಸ್ತಿಗಳು: ರುದ್ರಯ್ಯ ಕೆ.ಎಚ್. ವಿಜಯ ಕರ್ನಾಟಕ, ಚಿಕ್ಕಮಗಳೂರು ಕಿರಣ್ ಕೆ. ಸುವರ್ಣ ನ್ಯೂಸ್, ಚಿಕ್ಕಮಗಳೂರು ಬಿ.ಉಮೇಶ್ ನಾಯಕ್, ವಿಜಯವಾಣಿ, ಚಿಕ್ಕಮಗಳೂರು ಅಕ್ರಮ್ ಅಬ್ದುಲ್ ಹಕ್, ಹಿರಿಯ ಪೋಟೋ ಜರ್ನಲಿಸ್ಟ್. ಬಿಳಿಗಿರಿ ಶ್ರೀನಿವಾಸ್-ಚಾಮರಾಜನಗರ ಎಚ್.ಪಿ.ರವಿಕುಮಾರ್, ಜನತಾ ಮಾಧ್ಯಮ, ಹಾಸನ.

ವಾರ್ತಾ ಭಾರತಿ 21 Jul 2026 1:27 pm

ಕಾರ್ಪೊರೇಟ್ ಕೆಲಸ ಬಿಟ್ಟು ಭಾರತದ ಹಳ್ಳಿಗೆ ಬಂದ ವಿದೇಶಿ ಮಹಿಳೆ: ಬಡ ಮಕ್ಕಳ ಬಾಳಲ್ಲಿ ಬೆಳಕಾದ ಸಾಂಡ್ರಾ ಲಾವಿ

15 ವರ್ಷಗಳ ಹಿಂದೆ ಕೇವಲ ಒಂದು ಕಡೆಗೆ ಪ್ರಯಾಣಿಸುವ ವಿಮಾನದ ಟಿಕೆಟ್ ಹಿಡಿದು ಭಾರತಕ್ಕೆ ಬಂದ ಸಾಂಡ್ರಾ ಲಾವಿ ಗೊಜ್ಕೋವಿಕ್, ಅವರ ಬಳಿ ಭವಿಷ್ಯದ ಬಗ್ಗೆ ಯಾವುದೇ ಸ್ಪಷ್ಟವಾದ ಯೋಜನೆ ಇರಲಿಲ್ಲ. ಸ್ವಿಟ್ಜರ್ಲೆಂಡ್‌ನ ಐಷಾರಾಮಿ ಜೀವನ, ಹಾಗೂ ಯಶಸ್ವಿ ಕಾರ್ಪೊರೇಟ್ ಕೆಲಸವನ್ನಾ ತೊರೆದು ಬಂದ ಅವರ ಏಕೈಕ ಗುರಿ ಜೀವನದ ಉದ್ದೇಶವನ್ನು ಹುಡುಕುವುದಾಗಿತ್ತು. ಆ ಹುಡುಕಾಟ ಅವರನ್ನ

ಒನ್ ಇ೦ಡಿಯ 21 Jul 2026 1:22 pm

ವಿದ್ಯಾರ್ಥಿಗಳೊಂದಿಗೆ ಈ ರೀತಿ ನಡೆದುಕೊಳ್ಳಬಾರದು: ಪೊಲೀಸ್ ಕ್ರಮ ಖಂಡಿಸಿದ ನಟ ದಿಲ್ಜಿತ್ ದೋಸಾಂಜ್

ಮಾತನಾಡಿದ್ದಕ್ಕೆ ನನ್ನನ್ನು ʼರಾಷ್ಟ್ರ ವಿರೋಧಿʼ ಎಂದು ಕರೆಯುತ್ತಾರೆNEET ಅಕ್ರಮ ವಿರೋಧಿ 'ಚಲೋ ಸಂಸದ್' ಪ್ರತಿಭಟನೆಯಲ್ಲಿ ಬಲಪ್ರಯೋಗ

ವಾರ್ತಾ ಭಾರತಿ 21 Jul 2026 1:10 pm

ʼನಡ್ಡಾ ಜೀ ಸುಳ್ಳು ಹೇಳ್ಬೇಡಿ.. ನಿಷ್ಪ್ರಯೋಜಕ ಟಾಕ್ಸ್‌ನಿಂದ ನಮ್ಮ 4ಗಂಟೆ ಟೈಂ ವೇಸ್ಟ್‌ ಆಯ್ತುʼ: ಸೌಹಾರ್ದಯುತ ಸಭೆ ಎಂದ ಕೇಂದ್ರ ಸಚಿವರಿಗೆ CJP ತಿರುಗೇಟು!

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ, ದೆಹಲಿಯ ಜಂತರ್ ಮಂತರ್‌ನಲ್ಲಿ ಕಾಕ್ರೋಚ್ ಜನತಾ ಪಾರ್ಟಿ ನಡೆಸುತ್ತಿದ್ದ 'ಸಂಸತ್ ಚಲೋ' ಪ್ರತಿಭಟನೆ ಭಾರಿ ಹಿಂಸಾತ್ಮಕ ರೂಪ ಪಡೆದುಕೊಂಡಿದ್ದು, ಈ ನಡುವೆ CJP ಪಕ್ಷದೊಂದಿಗೆ ಕೇಂದ್ರ ಸಚಿವ ಜೆ.ಪಿ ನಡ್ಡಾ ಮಾತುಕತೆ ನಡೆಸಿದ್ದು, ಈ ಮಾತುಕತೆಗಳು ಸೌಹಾರ್ದಯುತವಾಗಿ ನಡೆದಿದೆ ಎಂದು ಹೇಳಿಕೊಂಡಿದ್ದರು. ಆದರೆ, ಇದಕ್ಕೆ ಸ್ಪಷ್ಟನೆ ನೀಡಿರುವ CJP ಪಕ್ಷ 4 ಗಂಟೆಗಳ ಕಾಲ ಸುದೀರ್ಘ ಸಭೆ ನಡೆಸಿದರೂ, ಸರ್ಕಾರದ ಕಡೆಯಿಂದ ಬೇಡಿಕೆಗಳಿಗೆ ಸ್ಪಂದನೆ ಸಿಗದೆ ಸಭೆ ವಿಫಲವಾಗಿದೆ ಎಂದಿದ್ದು, ಈ ಮಾತುಕತೆ ನಿಷ್ಪ್ರಯೋಜಕವಾಗಿದ್ದು, ನಮ್ಮ ಟೈಂ ವೇಸ್ಟ್‌ ಆಗಿದೆ ಎಂದು ತಿರುಗೇಟು ನೀಡಿದೆ.

ವಿಜಯ ಕರ್ನಾಟಕ 21 Jul 2026 1:09 pm

NEET ವಿವಾದ | ಪ್ರತಿಪಕ್ಷಗಳ ಸಂಸದರೊಂದಿಗೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾರನ್ನು ಭೇಟಿಯಾದ ರಾಹುಲ್ ಗಾಂಧಿ

ಹೊಸದಿಲ್ಲಿ: ಲೋಕಸಭೆಯ ವಿರೋಧಪಕ್ಷದ ನಾಯಕ ರಾಹುಲ್ ಗಾಂಧಿ ಪ್ರತಿಪಕ್ಷಗಳ ಸಂಸದರೊಂದಿಗೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿಯಾದರು. ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ನಡೆಸುವ ರಾಷ್ಟ್ರೀಯ ಪ್ರವೇಶ ಪರೀಕ್ಷೆ(NEET)ಗಳಲ್ಲಿ ಮರುಕಳಿಸುತ್ತಿರುವ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಪರೀಕ್ಷಾ ಅಕ್ರಮಗಳ ಕುರಿತು ಲೋಕಸಭೆಯಲ್ಲಿ ಚರ್ಚಿಸಲು ಅವಕಾಶ ನೀಡಬೇಕೆಂದು ಆಗ್ರಹಿಸಿ ಈ ಭೇಟಿ ನಡೆದಿದೆ. ಈ ಬಗ್ಗೆ ಎಕ್ಸ್ ನಲ್ಲಿ ಬರೆದಿರುವ ಅವರು , ನಿನ್ನೆ ವಿದ್ಯಾರ್ಥಿಗಳ ಮೇಲೆ ನಡೆಸಲಾದ ಕ್ರೌರ್ಯ ಮತ್ತು ಪರೀಕ್ಷಾ ಬಿಕ್ಕಟ್ಟಿನ ಕುರಿತು ಸರ್ಕಾರದ ಸಂಪೂರ್ಣ ಹೊಣೆಗೇಡಿತನದ ಬಗ್ಗೆ ಸಂಸತ್ತಿನಲ್ಲಿ ವಿವರವಾದ ಚರ್ಚೆಯಾಗಬೇಕು. ಈ ಸರಳ ಬೇಡಿಕೆಯನ್ನು ಅವರ ಮುಂದಿಡಲಾಗಿದೆ ಎಂದು ತಿಳಿಸಿದ್ದಾರೆ. ತಮ್ಮ ಭವಿಷ್ಯದ ಕುರಿತು ನ್ಯಾಯಯುತ ಪ್ರಶ್ನೆಗಳನ್ನು ಕೇಳಿದ್ದಕ್ಕಾಗಿ ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ನಡೆಸಲಾಗಿದೆ ಎಂದು ಆರೋಪಿಸಿದ ಅವರು, ಭಾರತದ ಯುವಕರ ಭವಿಷ್ಯದ ಬಗ್ಗೆ ಚರ್ಚಿಸಲು ಸಾಧ್ಯವಾಗದಿದ್ದರೆ ಸಂಸತ್ತು ಇರುವುದು ಯಾವುದಕ್ಕಾಗಿ ಎಂದು ಪ್ರಶ್ನಿಸಿದ್ದಾರೆ. ವಿದ್ಯಾರ್ಥಿಗಳ ಧ್ವನಿ ಬೀದಿಗಳಲ್ಲಿಯೂ, ಸಂಸತ್ತಿನಲ್ಲಿಯೂ ಮೊಳಗುವಂತೆ ನಾವು ಖಚಿತಪಡಿಸುತ್ತೇವೆ. ಈ ವಿಚಾರವನ್ನು ಮುಚ್ಚಿಹಾಕಲು ವಿರೋಧ ಪಕ್ಷಗಳು ಬಿಡುವುದಿಲ್ಲ ಎಂದು ಅವರು ಹೇಳಿದ್ದಾರೆ. ನಿಯೋಗದಲ್ಲಿ ಕೆ. ಸಿ. ವೇಣುಗೋಪಾಲ್   ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಸೇರಿದಂತೆ ಹಲವು ನಾಯಕರಿದ್ದರು.

ವಾರ್ತಾ ಭಾರತಿ 21 Jul 2026 1:04 pm

CJP ಭಾರೀ ಪ್ರತಿಭಟನೆ ಬೆನ್ನಲ್ಲೇ, ನೀಟ್ 'ಸೋರಿಕೆ' ಬಗ್ಗೆ ಮೌನ ಮುರಿದ ಪ್ರಧಾನಿ ಮೋದಿ : ಹೇಳಿದ್ದೇನು?

ಯುವಜನರ ಭವಿಷ್ಯ ಮುಖ್ಯ , ಅವರಿಗಾಗಿ ಎಲ್ಲಾ ಪಕ್ಷದವರು ಕೆಲಸ ಮಾಡಬೇಕು. ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಕೇವಲ ಕೇಂದ್ರದ ಜವಾಬ್ದಾರಿ ಅಲ್ಲ, ಎಲ್ಲಾ ರಾಜ್ಯಗಳು ಒಟ್ಟಿಗೆ ಬಂದು ಕೆಲಸ ಮಾಡಬೇಕು ಎಂದು ಮನವಿ ಮಾಡಿರುವುದಾಗಿ ಕೇಂದ್ರ ಸಚಿವ ಕಿರಣ್ ರಿಜಿಜು ಹೇಳಿದ್ದಾರೆ.

ವಿಜಯ ಕರ್ನಾಟಕ 21 Jul 2026 12:59 pm

ರಿಯಲ್ ಎಸ್ಟೇಟ್ ಬಗ್ಗೆ ಇರುವ ಆಸಕ್ತಿ ರೈತರ ಬಗ್ಗೆಯೂ ಇರಲಿ! ಡಿಕೆಶಿ ವಿರುದ್ಧ ಬಿವೈ ವಿಜಯೇಂದ್ರ ವಾಗ್ದಾಳಿ

ಎರಡನೇ ವಿಮಾನ ನಿಲ್ದಾಣವನ್ನು ಕನಕಪುರದ ಸಮೀಪವೇ ಮಾಡಲು ಸಿಎಂ ಡಿ.ಕೆ.ಶಿವಕುಮಾರ್ ಅವರು ಮುಂದಾಗಿದ್ದಾರೆ. ಇದಕ್ಕೆ ವಿರೋಧಿಸಿ ಪತ್ರ ಬರೆದಿದ್ದೇನೆ. ಡಿಕೆಶಿ ಅವರು ಕನಕಪುರದ ಸಿಎಂ ಅಲ್ಲ ರಾಜ್ಯದ ಸಿಎಂ ಎಂಬುದನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಯೋಜನೆಯನ್ನು ತೀರ್ಮಾನ ಮಾಡುವಾಗ ರಿಯಲ್ ಎಸ್ಟೇಟ್ ಹಿತಾಸಕ್ತಿ ಬದಲು ರಾಜ್ಯದ ಹಿತಾಸಕ್ತಿ ಇರಲಿ ಎಂದು ಆಗ್ರಹಿಸಿದ್ದೇನೆ. ಎರಡನೇ ವಿಮಾನ ನಿಲ್ದಾಣ ತುಮಕೂರು ಅಕ್ಕ ಪಕ್ಕ ಬಂದರೆ ಏಳೆಂಟು ಜಲ್ಲೆಗಳಿಗೆ ಲಾಭ ಆಗಲಿದೆ. ಬೆಂಗಳೂರು ಮಹಾನಗರದ ಮೇಲಿನ ಒತ್ತಡ ತಪ್ಪಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದರು.

ವಿಜಯ ಕರ್ನಾಟಕ 21 Jul 2026 12:59 pm

SIR: ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ ಸುಲಭಕ್ಕೆ ಇದನ್ನು ಮಾಡಿದರೆ ತಪ್ಪೇನು ಎಂದ ಕಾಂಗ್ರೆಸ್‌ ಸರ್ಕಾರ

SIR: ಹಿಂದೆಯೂ ಜಾತಿ ಪ್ರಮಾಣ ಪತ್ರವನ್ನು ತಹಶೀಲ್ದಾರ್‌ ಅವರೇ ಕೊಡುತ್ತಿದ್ದರು. ಈಗ ಹೊಸದಾಗಿ ಏನಾದರೂ ಬದಲಾವಣೆ ಆಗಿದೆಯೇ? ಎಸ್‌ಐಆರ್ ಮಾಡುವಾಗ ಜಾತಿ ಪ್ರಮಾಣ ಪತ್ರವನ್ನು ಕೇಳಿದ್ದಾರೆ. ನಾವು ಯಾವ ಕಾರಣಕ್ಕೆ ಈ ವ್ಯವಸ್ಥೆಯನ್ನು ಮಾಡಿದ್ದೇವೆ ಎಂಬುದರ ಬಗ್ಗೆ ಬಿಜೆಪಿಗರಿಗೆ ಅರಿವಿರಬೇಕು. ನಾವು ಸರ್ಕಾರದಿಂದ ಅದನ್ನು ಅಧಿಕೃತವಾಗಿ ಕೊಡುತ್ತಿದ್ದೇವೆ. ಅದರಲ್ಲಿ ತಪ್ಪು ಇದೆ ಎಂದು ನನಗೆ ಅನಿಸುವುದಿಲ್ಲ ಎಂದು

ಒನ್ ಇ೦ಡಿಯ 21 Jul 2026 12:56 pm

Mysuru | ಪಶ್ಚಿಮ‌ ಬಂಗಾಳ ಮೂಲದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ: ಮೂವರು ಆರೋಪಿಗಳ ಬಂಧನ

ಮೈಸೂರು : ಪಶ್ಚಿಮ ಬಂಗಾಳ ಮೂಲದ ಮಹಿಳೆಯೊಬ್ಬರ ಮೇಲೆ ಸಾಮೂಹಿ ಅತ್ಯಾಚಾರ ಎಸಗಿರುವ ಘಟನೆ ಮೈಸೂರು ಜಿಲ್ಲೆಯ ಟಿ.ನರಸೀಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರನ್ನು ಕಿರಣ್ ಅಲಿಯಾಸ್ ಹುಚ್ಚ, ರಿಯಾನ್ಸನ್ ಮತ್ತು ಕಿಶೋರ್ ಎಂದು ಗುರುತಿಸಲಾಗಿದೆ. ಈ ಮೂವರು ಟಿ.ನರಸೀಪುರ ಟೌನ್ ನಿವಾಸಿಗಳಾಗಿದ್ದಾರೆ ಎನ್ನಲಾಗಿದೆ. ಪಶ್ಚಿಮ ಬಂಗಾಳದ ಮಹಿಳೆಯೋರ್ವರು, ಟಿ.ನರಸೀಪುರದ ಕಬಾಬ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಶನಿವಾರ ರಾತ್ರಿ 9.30 ರ ಸಮಯದಲ್ಲಿ ಟಿ.ನರಸೀಪುರ ಟೌನ್ ನಲ್ಲಿ ಬಸ್ ಗಾಗಿ ಕಾಯುತ್ತಿದ್ದ ವೇಳೆ ಕಿರಣ್ ಎಂಬಾತ ಅವರನ್ನು ಡ್ರಾಪ್ ಮಾಡುವ ನೆಪದಲ್ಲಿ ತನ್ನ ವಾಹನಕ್ಕೆ ಹತ್ತಿಸಿಕೊಂಡು ಮೂಗೂರು ಗ್ರಾಮದ ಆಚೆಗೆ ಇರುವ ಲಾಡ್ಜ್ ಒಂದಕ್ಕೆ ಕರೆದೊಯ್ದು ತನ್ನ ಇನ್ನಿಬ್ಬರು ಸ್ನೇಹಿತರೊಂದಿಗೆ ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಟಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಸೂಚನೆ ಮೇರೆಗೆ ಡಿವೈಎಸ್ಪಿ ಧರ್ಮೇಂದ್ರ ಅವರ ಮಾರ್ಗದರ್ಶನದಲ್ಲಿ ಇನ್ಸ್ ಪೆಕ್ಟರ್ ಧನಂಜಯ ತನಿಖೆ ನಡೆಸುತ್ತಿದ್ದಾರೆ.

ವಾರ್ತಾ ಭಾರತಿ 21 Jul 2026 12:56 pm

ಭಾರತದ ಭರವಸೆಯ ಹಸಿರು ಸ್ಟಾರ್ಟ್‌ಅಪ್‌ಗಳನ್ನು ಸನ್ಮಾನಿಸಿದ ಇಕೋಕ್ರಾಂತಿ ಶುಭ ಲಾಭ್ 1.0

Indian Green Startups : ಭಾರತದಾದ್ಯಂತದ 900ಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳು ರಾಷ್ಟ್ರೀಯ ಸವಾಲಿನಲ್ಲಿ ಸ್ಪರ್ಧಿಸಿದ್ದವು; ಹವಾಮಾನ ತಂತ್ರಜ್ಞಾನ ಮತ್ತು ಗ್ರಾಮೀಣಾಭಿವೃದ್ಧಿ ಪರಿಹಾರಗಳನ್ನು ಉತ್ತೇಜಿಸಲು ಸಂಶೋಧಕರು, ಹೂಡಿಕೆದಾರರು, ನೀತಿ ನಿರೂಪಕರು ಹಾಗೂ ಸುಸ್ಥಿರತೆಯ ತಜ್ಞರ ಸಮಾಗಮ. ಕರ್ನಾಟಕದ 'ಅಕಾಲಾ ಡಿಸೈನ್ ಮತ್ತು ಟೆಕ್ ಪ್ರೈ.ಲಿಮಿಟೆಡ್' ಪ್ರಥಮ ರನ್ನರ್ ಅಪ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.

ವಿಜಯ ಕರ್ನಾಟಕ 21 Jul 2026 12:49 pm

ಕರ್ನಾಟದಲ್ಲಿ ಜನಿಸಿರುವ ಆಧಾರದ ಮೇಲೆ ಪಿಆರ್‌ಸಿ ನೀಡಲು ತೀರ್ಮಾನಿಸಿದ್ದೇವೆ : ಜಿ.ಪರಮೇಶ್ವರ್‌

ಬೆಂಗಳೂರು  : ಹಿಂದೆಯೂ ಜಾತಿ ಪ್ರಮಾಣ ಪತ್ರವನ್ನು ತಹಶೀಲ್ದಾರ್‌ ಅವರೇ ಕೊಡುತ್ತಿದ್ದರು. ಈಗ ಹೊಸದಾಗಿ ಏನಾದರೂ ಬದಲಾವಣೆ ಆಗಿದೆಯೇ? ಎಸ್‌ಐಆರ್ ಮಾಡುವಾಗ ಜಾತಿ ಪ್ರಮಾಣ ಪತ್ರವನ್ನು ಕೇಳಿದ್ದಾರೆ. ನಾವು ಯಾವ ಕಾರಣಕ್ಕೆ ಈ ವ್ಯವಸ್ಥೆಯನ್ನು ಮಾಡಿದ್ದೇವೆ ಎಂಬುದರ ಬಗ್ಗೆ ಬಿಜೆಪಿಗರಿಗೆ ಅರಿವಿರಬೇಕು. ನಾವು ಸರಕಾರದಿಂದ ಅದನ್ನು ಅಧಿಕೃತವಾಗಿ ಕೊಡುತ್ತಿದ್ದೇವೆ. ಅದರಲ್ಲಿ ತಪ್ಪು ಇದೆ ಎಂದು ನನಗೆ ಅನಿಸುವುದಿಲ್ಲ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಅವರು ಹೇಳಿದರು. ಇಂದು ಸದಾಶಿವನಗರದ ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕರ್ನಾಟದಲ್ಲಿ ಜನಿಸಿರುವ ಆಧಾರದ ಮೇಲೆ ಪಿಆರ್‌ಸಿ ನೀಡಲು ತೀರ್ಮಾನಿಸಿದ್ದೇವೆ. ಹೆಚ್ಚಿನಾಂಶ ಎಲ್ಲರಿಗೂ 2002ರ ಮತದಾರರ ಪಟ್ಟಿಯ ಬಗ್ಗೆ ಕೇಳಿದ್ದಾರೆ. ಇದರಲ್ಲಿ ಎಲ್ಲರಿಗೆ ಶೇ. 50- 60ರಷ್ಟು ಇರುತ್ತದೆ. ಯಾರೋ ಒಬ್ಬರಿಗೆ ಶಾಶ್ವತ ನಿವಾಸಿ ಪ್ರಮಾಣಪತ್ರ (ಪಿಆರ್‌ಸಿ) ಇರೋದಿಲ್ಲ. ಅಂತಹವರಿಗೆ ಪಿಆರ್‌ಸಿ ಅನುಕೂಲ ಆಗುತ್ತದೆ ಎಂದರು. ಬರ ಪರಿಸ್ಥಿತಿ ಘೋಷಣೆಯಾದರೆ ರಾಜ್ಯದ ಜನರಿಗೆ ಯಾವ ರೀತಿ ಅನುಕೂಲವಾಗುತ್ತದೆ ಎಂಬ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿ, ಈ ಬಗ್ಗೆ ಇನ್ನೂ ಏನು ನಿರ್ಧರಿಸಿಲ್ಲ. ರೈತರಿಗೆ, ಸಾಮಾನ್ಯ ಜನರಿಗೆ ಅನುಕೂಲ ಆಗಬೇಕು. ಯಾರೂ ಕೆಲಸ ಇಲ್ಲ ಅಂತ ಗುಳೆ ಹೋಗ್ತಾರೋ ಅವರಿಗೆ ಅನುಕೂಲ ಆಗಬೇಕು. ಈ ಎಲ್ಲಾ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ನಾವು ತೀರ್ಮಾನ ಮಾಡುತ್ತೇವೆ ಎಂದು ತಿಳಿಸಿದರು. ಸಂಪುಟದಲ್ಲಿ ಹಿರಿಯರಿಗೆ ಸ್ಥಾನಮಾನ ಎಂಬ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿ, ನಮ್ಮ ನಾಯಕರು ದೆಹಲಿಗೆ ಹೋಗಿದ್ದಾರೆ. ಹೈಕಮಾಂಡ್‌ ಅನುಮತಿ ಕೊಟ್ಟರೆ ಸಚಿವ ಸಂಪುಟ ವಿಸ್ತರಣೆ ಮಾಡಲಾಗುವುದು. ನಾಯಕರು ಮಾನದಂಡಗಳ ಮೇಲೆ ಚರ್ಚಿಸುತ್ತಾರೆ ಎಂದು ಕೇಳಿದ್ದೇನೆ. ಅದರಲ್ಲಿ ಯುವಕರಿಗೆ ಹೆಚ್ಚಿನ ಪ್ರಾತಿನಿದ್ಯ ಕೊಡಬೇಕು ಎನ್ನುವ ಅಂಶವಿದೆ, ಅದನ್ನು ಗಣನೆಗೆ ತೆಗೆದುಕೊಳ್ಳಬೇಕು ಎಂದರು. 2028ರ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಸಂಪುಟ ವಿಸ್ತರಣೆ ಮಾಡಬೇಕಾ ಎಂಬ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿ, ನನಗೆ ಇದರ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಮಾನದಂಡಗಳ ಪ್ರಕಾರವೇ ತೀರ್ಮಾನ ಮಾಡುತ್ತಾರೆ. ಹಿಂದೆ ನಾನು ಅಧ್ಯಕ್ಷನಾಗಿದ್ದಾಗ ಹೊಸ ನಾಯಕತ್ವದ ಮೇಲೆ ಸಂಪುಟ ರಚಿಸಬೇಕು ಎಂದು ಮಾನದಂಡಗಳಿತ್ತು. ಅದು ಈಗಲೂ ಅನ್ವಯಿಸುತ್ತದೆ ಎಂದು ಅಂದುಕೊಂಡಿದ್ದೇನೆ ಎಂದು ಹೇಳಿದರು.  

ವಾರ್ತಾ ಭಾರತಿ 21 Jul 2026 12:46 pm

ಉಕ್ರೇನ್ ನಲ್ಲಿ ಹಡಗಿನ ಮೇಲೆ ದಾಳಿಯಲ್ಲಿ 4 ಭಾರತೀಯರು ಮೃತ್ಯು; ರಷ್ಯಾ ರಾಜತಾಂತ್ರಿಕರಿಗೆ ಭಾರತದಿಂದ ಸಮನ್ಸ್

ಹೊಸದಿಲ್ಲಿ: ಉಕ್ರೇನ್ ಕರಾವಳಿಯ ಬಳಿ ವಾಣಿಜ್ಯ ನೌಕೆಯೊಂದರ ಮೇಲೆ ನಡೆದ ಕ್ಷಿಪಣಿ ದಾಳಿಯಲ್ಲಿ ನಾಲ್ವರು ಭಾರತೀಯರು ಮೃತಪಟ್ಟಿರುವ ಹಿನ್ನೆಲೆಯಲ್ಲಿ ಭಾರತವು ಮಂಗಳವಾರ ರಷ್ಯಾದ ರಾಜತಾಂತ್ರಿಕರಿಗೆ ಸಮನ್ಸ್ ಜಾರಿಗೊಳಿಸಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ. ರವಿವಾರ ಉಕ್ರೇನ್ ನ ಒಡೆಸ್ಸಾ ಬಂದರಿನಿಂದ ಹೊರಡುತ್ತಿದ್ದ ಎಂವಿ ಗೋಲ್ಡನ್ ಲಿಯೋ ವಾಣಿಜ್ಯ ನೌಕೆಯ ಮೇಲೆ ನಡೆದ ದಾಳಿಯಲ್ಲಿ ನಾಲ್ವರು ಭಾರತೀಯ ಪ್ರಜೆಗಳು ಮೃತಪಟ್ಟಿದ್ದಾರೆ ಎಂದು ಭಾರತ ಸರ್ಕಾರ ದೃಢಪಡಿಸಿದೆ. ಮತ್ತೊಬ್ಬ ಭಾರತೀಯ ಸಿಬ್ಬಂದಿಯ ಸ್ಥಿತಿ ಚಿಂತಾಜನಕವಾಗಿದ್ದು, ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಸರ್ಕಾರದ ಮಾಹಿತಿ ಪ್ರಕಾರ, ದಾಳಿ ನಡೆದ ವೇಳೆ ನೌಕೆಯಲ್ಲಿ ಐವರು ಭಾರತೀಯರು ಸೇರಿದಂತೆ ಒಟ್ಟು 17 ಮಂದಿ ಸಿಬ್ಬಂದಿ ಇದ್ದರು. ಘಟನೆಯನ್ನು ಭಾರತ ತೀವ್ರವಾಗಿ ಖಂಡಿಸಿದೆ. ವಾಣಿಜ್ಯ ಹಡಗುಗಳು ಮತ್ತು ನಾಗರಿಕ ಸಿಬ್ಬಂದಿಯನ್ನು ಗುರಿಯಾಗಿಸಿ ದಾಳಿ ನಡೆಸುವುದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಸರ್ಕಾರ ಹೇಳಿದೆ. ವಾಣಿಜ್ಯ ನೌಕೆಗಳನ್ನು ಗುರಿಯಾಗಿಸುವುದು ನಾಗರಿಕ ನಾವಿಕರ ಜೀವಕ್ಕೆ ಅಪಾಯ ಉಂಟುಮಾಡುವುದಲ್ಲದೆ, ಅಂತಾರಾಷ್ಟ್ರೀಯ ವ್ಯಾಪಾರಕ್ಕೆ ಅಡ್ಡಿಪಡಿಸಿ ನೌಕಾಯಾನದ ಸ್ವಾತಂತ್ರ್ಯಕ್ಕೆ ಧಕ್ಕೆ ತರುತ್ತದೆ ಎಂದು ತಿಳಿಸಿದೆ. ಲಭ್ಯವಿರುವ ಮಾಹಿತಿಯ ಪ್ರಕಾರ ನಾಲ್ವರು ಭಾರತೀಯ ಪ್ರಜೆಗಳು ಮೃತಪಟ್ಟಿದ್ದಾರೆ. ಮತ್ತೊಬ್ಬರು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಕ್ರೇನ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಪರಿಸ್ಥಿತಿಯನ್ನು ನಿಕಟವಾಗಿ ಗಮನಿಸುತ್ತಿದ್ದು, ಸಂತ್ರಸ್ತರಿಗೆ ಸಾಧ್ಯವಿರುವ ಎಲ್ಲ ನೆರವು ಒದಗಿಸಲು ಶ್ರಮಿಸುತ್ತಿದೆ ಎಂದು ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ. ಮೃತರ ಪೈಕಿ ಒಬ್ಬರನ್ನು ಕೇರಳದ ಕಾಸರಗೋಡು ಜಿಲ್ಲೆಯ ವೆಳ್ಳರಿಕ್ಕುಂಡು ನಿವಾಸಿ, 26 ವರ್ಷದ ಮರ್ಚೆಂಟ್ ನೌಕಾ ಅಧಿಕಾರಿ ಅಖಿಲ್ ಜೊಯನ್ ಎಂದು ಗುರುತಿಸಲಾಗಿದೆ. ನೌಕಾ ಸಂಸ್ಥೆಯು ಸೋಮವಾರ ಇಮೇಲ್ ಮೂಲಕ ಅವರ ಕುಟುಂಬಕ್ಕೆ ಮಾಹಿತಿ ನೀಡಿ, ಮೃತಪಟ್ಟಿರುವುದನ್ನು ದೃಢಪಡಿಸಿದೆ. ಅಖಿಲ್ ಇತ್ತೀಚೆಗೆ ರಜೆಯ ಮೇಲೆ ಮನೆಗೆ ಬಂದಿದ್ದರು. ನಿಶ್ಚಿತಾರ್ಥವಾದ ಕೇವಲ ಒಂದು ತಿಂಗಳ ಬಳಿಕ ಅವರು ಮತ್ತೆ ಕರ್ತವ್ಯಕ್ಕೆ ಹಾಜರಾಗಿದ್ದರು. 10 ಮಂದಿ ಮೃತ್ಯು: ಉಕ್ರೇನ್ ಇದೇ ದಾಳಿಯ ಕುರಿತು ಉಕ್ರೇನ್ ಅಧಿಕಾರಿಗಳನ್ನು ಉಲ್ಲೇಖಿಸಿ ರಾಯಿಟರ್ಸ್ ವರದಿ ಮಾಡಿದ್ದು, ದಕ್ಷಿಣ ಉಕ್ರೇನ್ನ ಒಡೆಸ್ಸಾ ಬಂದರು ಸಮೀಪ ಮೆಕ್ಕೆಜೋಳವನ್ನು ಸಾಗಿಸುತ್ತಿದ್ದ ಹಡಗಿನ ಮೇಲೆ ರಷ್ಯಾ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಒಟ್ಟು 10 ಮಂದಿ ಮೃತಪಟ್ಟಿದ್ದಾರೆ ಎಂದು ತಿಳಿಸಿದೆ.

ವಾರ್ತಾ ಭಾರತಿ 21 Jul 2026 12:42 pm

ನೆಲಮೂಲದ ಸ್ಮತಿಗಳನ್ನು ಕೆದಕುವ ‘ಅದಲು ಬದಲು ಕಂಚಿ ಕದಲು’

ನಾಟಕ: ಅದಲು ಬದಲು ಕಂಚಿ ಕದಲು ರಚನೆ: ಲಕ್ಷ್ಮೀಪತಿ ಕೋಲಾರ ನಿರ್ದೇಶನ: ಉದಯ್ ಸೋಸಲೆ ಪ್ರಸ್ತುತಿ: ಆಜೀವಿಕ ಇತಿಹಾಸವನ್ನು ಕೇವಲ ಅರಮನೆಗಳಲ್ಲೂ, ರಾಜವಂಶಗಳಲ್ಲೂ ಹುಡುಕುವ ಪರಿಪಾಠಕ್ಕೆ ವಿರುದ್ಧವಾಗಿ, ಜನಪದದ ಸ್ಮತಿಗಳು, ಅಲೆಮಾರಿ ಸಮುದಾಯಗಳ ಬದುಕು, ಮರೆತುಹೋದ ದೇವತೆಗಳು ಮತ್ತು ಮೌಖಿಕ ಪರಂಪರೆಗಳೊಳಗೆ ಅನ್ವೇಷಿಸುವ ಪ್ರಯತ್ನವೇ ‘ಅದಲು ಬದಲು ಕಂಚಿ ಕದಲು’. ಇದು ಕೇವಲ ಒಂದು ನಾಟಕವಲ್ಲ, ನಮ್ಮ ಸಾಂಸ್ಕೃತಿಕ ನೆನಪುಗಳನ್ನು ಪ್ರಶ್ನಿಸುವ, ಅಳಿಸಲ್ಪಟ್ಟ ಗುರುತುಗಳನ್ನು ಹುಡುಕುವ ರಂಗಪ್ರಯೋಗ. ಜನಪದ ಸಂಶೋಧಕ, ಇತಿಹಾಸಕಾರ ಲಕ್ಷ್ಮೀಪತಿ ಕೋಲಾರ ಅವರ ದೀರ್ಘಕಾಲದ ಜನಪದ ಮತ್ತು ಸಾಂಸ್ಕೃತಿಕ ಅಧ್ಯಯನದ ಒಂದು ಪ್ರಮುಖ ಚಿಂತನೆ ಈ ನಾಟಕದ ಮೂಲಕ ರಂಗರೂಪ ಪಡೆದಿದೆ. ಲಕ್ಷ್ಮೀಪತಿ ಕೋಲಾರ ಅವರು ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವಲಯದಲ್ಲಿ ಬಹುಮುಖ ಪ್ರತಿಭೆಯಾಗಿ ಗುರುತಿಸಿಕೊಂಡಿರುವ ವ್ಯಕ್ತಿತ್ವ. ಕವಿ, ವಿಮರ್ಶಕ, ನಾಟಕಕಾರ, ಜಾನಪದ ಸಂಶೋಧಕ ಹಾಗೂ ಹವ್ಯಾಸಿ ಪತ್ರಕರ್ತರಾಗಿ ಅವರು ಸಲ್ಲಿಸಿರುವ ಕೊಡುಗೆಗಳು ಕನ್ನಡದ ಬೌದ್ಧಿಕ ಪರಂಪರೆಯಲ್ಲಿ ವಿಶಿಷ್ಟ ಸ್ಥಾನ ಪಡೆದಿವೆ. ಜಾನಪದ ಸಂಸ್ಕೃತಿಯನ್ನು ಕೇವಲ ಅಧ್ಯಯನದ ವಿಷಯವಾಗಿ ಅಲ್ಲದೆ, ಸಮಕಾಲೀನ ಸಮಾಜದ ಬದುಕು, ಇತಿಹಾಸ ಮತ್ತು ಸಾಂಸ್ಕೃತಿಕ ಸ್ಮತಿಯೊಂದಿಗೆ ಜೋಡಿಸಿ ನೋಡುವ ದೃಷ್ಟಿಕೋನ ಅವರ ಬರಹಗಳ ಪ್ರಮುಖ ಲಕ್ಷಣವಾಗಿದೆ. ಸಾಹಿತ್ಯ, ರಂಗಭೂಮಿ ಮತ್ತು ವಿಮರ್ಶೆಯ ಮೂಲಕ ಅವರು ಜನಪದ ಮತ್ತು ಆಧುನಿಕತೆಯ ನಡುವೆ ಸೃಜನಾತ್ಮಕ ಸಂವಾದವನ್ನು ರೂಪಿಸಿದ್ದಾರೆ. ‘ವಾರ್ತಾಭಾರತಿ’ಯ 22ನೇ ವಿಶೇಷಾಂಕದಲ್ಲಿ ಅವರು ಮಂಡಿಸಿರುವ ‘ಕೊ-ಕೋಲಿ-ಕೊರವಿ: ದ್ರಾವಿಡ ಸಂಸ್ಕೃತಿಯ ತಾಯಿಬೇರು’ ಓದಿದರೆ ‘ಅದಲು ಬದಲು ಕಂಚಿ ಕದಲು’ ನಾಟಕ ಸುಲಭವಾಗಿ ಅರ್ಥವಾಗುತ್ತದೆ. (Link : https://www.varthabharati.in/ko-koli-koravi-is-the-mother-root-of-dravidian-culture/22nd-annual-special/news-2046428 ) ಲಕ್ಷ್ಮಿಪತಿ ಕೋಲಾರ ಅವರ ಕತೆಯನ್ನು ನಿರ್ದೇಶಕ ಉದಯ್ ಸೋಸಲೆ ಕೇವಲ ಕಥೆಯಾಗಿ ಹೇಳದೆ ದೃಶ್ಯ, ಸಂಗೀತ, ಸಂಕೇತ ಮತ್ತು ಅಭಿನಯದ ಮೂಲಕ ಪ್ರೇಕ್ಷಕರನ್ನು ಒಂದು ಐತಿಹಾಸಿಕ ಸಂವಾದದೊಳಗೆ ಕರೆದುಕೊಂಡು ಹೋಗುತ್ತಾರೆ. ನಾಟಕದ ಕೇಂದ್ರದಲ್ಲಿರುವುದು ಕೊರವಿ ಎಂಬ ನೆಲಮೂಲ ದೇವತೆಯ ಪಯಣ. ಆ ದೇವತೆ ಹೇಗೆ ತನ್ನ ಮೂಲ ಸಾಮಾಜಿಕ ಸನ್ನಿವೇಶದಿಂದ ದೂರವಾಗಿ, ಅಧಿಕಾರದ ಧಾರ್ಮಿಕ ರಾಜಕಾರಣದ ಮೂಲಕ ಹೊಸ ಹೆಸರನ್ನು, ಹೊಸ ರೂಪವನ್ನು ಪಡೆಯುತ್ತಾಳೆ ಎಂಬುದನ್ನು ನಾಟಕ ರೂಪಕಾತ್ಮಕವಾಗಿ ಕಟ್ಟಿಕೊಡುತ್ತದೆ. ಇದು ಯಾವುದೇ ಒಂದು ದೇವತೆಯ ಕಥೆಯಷ್ಟೇ ಅಲ್ಲ; ಭಾರತದ ಅನೇಕ ಸ್ಥಳೀಯ ಆರಾಧನೆಗಳು, ಜನಪದ ನಂಬಿಕೆಗಳು ಮತ್ತು ಸಮುದಾಯಗಳ ಸಾಂಸ್ಕೃತಿಕ ಅನುಭವಗಳು ಹೇಗೆ ಪ್ರಧಾನ ಧಾರೆಯೊಳಗೆ ಸೇರಿಸಲ್ಪಟ್ಟವು ಎಂಬ ವಿಶಾಲ ಚರ್ಚೆಗೆ ನಾಂದಿ ಹಾಡುತ್ತದೆ. ಮೂಲನಿವಾಸಿಗಳ ಕೊರವಿ ದೇವತೆಯು ಮಾರಮ್ಮಳಾಗಿ ಬ್ರಾಹ್ಮಣರ ದೇವರಾಗುವಂತಹದ್ದೇ ಪ್ರಸಂಗ ಈಗಲೂ ನಮ್ಮ ನೆಲದಲ್ಲಿ ನಡೆಯುತ್ತಿದೆ. ಇದು ಕೊರವಿಗೆ ಮಾತ್ರ ಸಂಬಂಧಿಸಿದ್ದಲ್ಲ. ಭೂತಾರಾಧನೆ ಅಥವಾ ದೈವಾರಾಧನೆ ಎನ್ನುವುದು ಕರಾವಳಿ ಕರ್ನಾಟಕ ಮತ್ತು ತುಳುನಾಡಿನ ಮೂಲನಿವಾಸಿಗಳ ಪ್ರಾಚೀನ ಸಂಪ್ರದಾಯವಾಗಿದೆ. ಕಾಲಕ್ರಮೇಣ, ವೈದಿಕ ಸಂಸ್ಕೃತಿಯ ಪ್ರಭಾವದಿಂದ ಈ ಆಚರಣೆಗಳಲ್ಲಿ ಬದಲಾವಣೆಗಳಾಗುತ್ತಿದೆ. ಭೂತಗಳು ಅಥವಾ ದೈವಗಳ ಮೂಲ ಕಥೆಗಳಿಗೆ ಪುರಾಣ, ರಾಮಾಯಣ ಅಥವಾ ಮಹಾಭಾರತದ ಕಥೆಗಳನ್ನು ಜೋಡಿಸಿ, ಅವುಗಳನ್ನು ಹಿಂದೂ ದೇವಾನುದೇವತೆಗಳ ಪರಿವಾರಕ್ಕೆ ಸೇರಿಸುವ ಪ್ರಯತ್ನ ನಡೆದಿದೆ. ಮೂಲ ಸಂಪ್ರದಾಯದಲ್ಲಿ ಪ್ರಾಣಿ ಬಲಿಗೆ ಪ್ರಾಮುಖ್ಯತೆಯಿತ್ತು. ವೈದಿಕ ಪ್ರಭಾವ ಹೆಚ್ಚಾದಂತೆ ಇವುಗಳಲ್ಲಿ ಹಲವನ್ನು ನಿಷೇಧಿಸಿ, ಸಸ್ಯಾಹಾರ, ಹೂವು ಮತ್ತು ಹಣ್ಣುಗಳನ್ನು ಅರ್ಪಿಸುವ ಪದ್ಧತಿ ರೂಪುಗೊಂಡಿದೆ. ದೈವಗಳನ್ನು ಕರೆಯುವಾಗ ಮೂಲ ಮೌಖಿಕ ನುಡಿಗಳು ಮತ್ತು ಪಾಡ್ದನಗಳೊಂದಿಗೆ ಸಂಸ್ಕೃತ ಮಂತ್ರಗಳು ಮತ್ತು ಹೋಮ-ಹವನಗಳನ್ನು ಸೇರಿಸಿಕೊಳ್ಳಲಾಗಿದೆ. ಸಾಂಪ್ರದಾಯಿಕವಾಗಿ ಮಧ್ಯಸ್ಥ ಅಥವಾ ಮನೆಯ ಹಿರಿಯ ಅಥವಾ ಪಾತ್ರಿಗಳು ಮಾತ್ರ ಮುಂಚೂಣಿಯಲ್ಲಿದ್ದ ಜಾಗದಲ್ಲಿ, ಇದೀಗ ಕೆಲವು ದೈವಸ್ಥಾನಗಳಲ್ಲಿ ಬ್ರಾಹ್ಮಣ ಅರ್ಚಕರು ಪೂಜಾ ಕೈಂಕರ್ಯಗಳನ್ನು ನೆರವೇರಿಸುತ್ತಿದ್ದಾರೆ. ಈಗ ಕರಾವಳಿಯಲ್ಲೂ ನೆಲಮೂಲ ಸಂಸ್ಕೃತಿಯ ಹುಡುಕಾಟ ಶುರುವಾಗಿದೆ. ಈ ಹುಡುಕಾಟದಲ್ಲಿ ನಾಟಕವು ದಕ್ಕಲಿಗರು, ಸಿಂಧೋಳರು, ಕೊರವಂಜಿಗಳು ಸೇರಿದಂತೆ ಅಂಚಿನ ಸಮುದಾಯಗಳನ್ನು ಮತ್ತೆ ನೆನಪಿಗೆ ತರುತ್ತದೆ. ಇತಿಹಾಸ ಬರೆಯುವವರು ಹೆಚ್ಚಾಗಿ ಮರೆಮಾಚಿದ ಜನರೇ ನಿಜವಾದ ಸಾಂಸ್ಕೃತಿಕ ಸಾಕ್ಷಿಗಳು ಎಂಬ ಅರ್ಥವನ್ನು ನಾಟಕ ಸೂಕ್ಷ್ಮವಾಗಿ ಪ್ರಸ್ತಾಪಿಸುತ್ತದೆ. ಹೀಗಾಗಿ ಇದು ಕೇವಲ ಭೂತಕಾಲದ ಕಥೆಯಲ್ಲ. ಇಂದಿನ ಸಮಾಜದ ಜಾತಿ, ಅಸ್ಮಿತೆ ಮತ್ತು ಸಾಂಸ್ಕೃತಿಕ ರಾಜಕಾರಣದ ಕುರಿತ ಚರ್ಚೆಯೂ ಹೌದು. ನಾಟಕದ ಅತ್ಯಂತ ಪರಿಣಾಮಕಾರಿ ಅಂಶಗಳಲ್ಲಿ ಒಂದು ಅದರ ಪ್ರಶ್ನೆಗಳು. ನಾಗರಿಕತೆ ಎಂದರೆ ಅಧಿಕಾರದ ಭಾಷೆಯನ್ನೇ ಒಪ್ಪಿಕೊಳ್ಳುವುದೇ? ಸ್ಥಳೀಯ ದೇವತೆಗಳಿಗೆ ಹೊಸ ಹೆಸರು ಬಂದರೆ ಅವುಗಳ ಮೂಲ ಇತಿಹಾಸವೂ ಅಳಿದುಹೋಗುತ್ತದೆಯೇ? ಮರೆತುಹೋದ ಪೂರ್ವಿಕರನ್ನು ನೆನಪಿಸಿಕೊಳ್ಳುವುದು ಕೇವಲ ಭಾವನಾತ್ಮಕ ಕ್ರಿಯೆಯೇ ಅಥವಾ ಅದು ಸಾಮಾಜಿಕ ನ್ಯಾಯದ ಹೋರಾಟವೂ ಆಗಬಹುದೇ? ಇಂತಹ ಪ್ರಶ್ನೆಗಳು ಪ್ರೇಕ್ಷಕರನ್ನು ನಾಟಕ ಮುಗಿದ ಮೇಲೂ ಕಾಡುತ್ತವೆ. ಈ ನಾಟಕವನ್ನು ಯಾವ ಜಿಲ್ಲೆ, ಪ್ರದೇಶದ ಜನರೂ ತಮ್ಮದೇ ಸಾಂಸ್ಕೃತಿಕ ಮತ್ತು ಆರಾಧನೆಯ ಕತೆಗಳೆಂದು ಭಾವಿಸಬಹುದು. ಮಾರಮ್ಮ, ಅಣ್ಣಮ್ಮಗಳ ಗುಡಿಗೆ ಬ್ರಾಹ್ಮಣ ಅರ್ಚಕರ ನೇಮಕ, ಹನುಮಂತನ ಗುಡಿಗಳಿಗೆ ಬ್ರಾಹ್ಮಣ ಪೂಜಾರಿಗಳ ನೇಮಕ, ಕರಾವಳಿಯ ದೈವಾರಾಧನೆಯು ನಿಧಾನವಾಗಿ ವೈದಿಕೀಕರಣಗೊಳ್ಳುವುದನ್ನು ಈ ನಾಟಕದ ಮೂಲಕ ಅರ್ಥ ಮಾಡಿಕೊಳ್ಳಬಹುದು. ಅಣ್ಣಪ್ಪ ದೈವ ಅಣ್ಣಪ್ಪ ಸ್ವಾಮಿಯಾಗುವುದು, ಪಂಜುರ್ಲಿ ದೈವ ನಟ ರಿಷಬ್ ಶೆಟ್ಟಿಯ ಮೂಲಕ ಮಾಂಸಾಹಾರ ದ್ವೇಷಿ ಎಂದು ಬಿಂಬಿತವಾಗುವುದು, ಜುಮಾದಿ ದೈವವು ಧೂಮಾವತಿಯಾಗುವುದು, ಕೊಡಮಣಿತ್ತಾಯ ದೈವವು ಕುಂಭಕಂಠಿನಿಯಾಗುವುದು ಇಂತಹದ್ದೇ ‘ಅದಲು ಬದಲು’ ಪ್ರಕ್ರಿಯೆಗಳು. ರಂಗಸಜ್ಜೆ ಸರಳವಾಗಿದ್ದರೂ ಪರಿಣಾಮಕಾರಿಯಾಗಿದೆ. ಬೆಳಕು ಮತ್ತು ನೆರಳಿನ ವಿನ್ಯಾಸ ಕಥೆಯ ಒಳನೋಟಗಳನ್ನು ಪ್ರೇಕ್ಷಕರಿಗೆ ಅಡ್ಡಿ ಉಂಟು ಮಾಡುತ್ತದೆ. ಪ್ರೇಕ್ಷಕರತ್ತ ತೂರಿ ಬರುವ ಬೆಳಕು ಅಸಹನೀಯವಾಗಿದೆ. ಸಂಗೀತ ಮತ್ತು ಜನಪದ ಧ್ವನಿಗಳು ಕಥೆಯ ಭಾಗವಾಗಿ ಕೆಲಸ ಮಾಡುತ್ತವೆ. ಹಾಡುಗಳು ದೃಶ್ಯಗಳ ನಡುವಿನ ಸೇತುವೆಯಾಗಿ ನಿಂತು ಕತೆಗೊಂದು ಭಾವನಾತ್ಮಕ ತೀವ್ರತೆಯನ್ನು ಹೆಚ್ಚಿಸುತ್ತವೆ. ಆದರೆ, ಈ ನಾಟಕವು ಬೌದ್ಧಿಕ ವಲಯಕ್ಕೆ ಸೀಮಿತವಾಗಿರುವಂತೆ ಭಾಸವಾಗುತ್ತದೆ. ಒಂದೊಳ್ಳೆ ಇತಿಹಾಸವನ್ನು ಜನಸಾಮಾನ್ಯರು ಅರ್ಥೈಸಿಕೊಳ್ಳುವಂತೆ ನಾಟಕವನ್ನು ರೂಪಿಸಬೇಕಾಗಿತ್ತು. ಪ್ರತಿಯೊಂದು ಪಾತ್ರಕ್ಕೂ ನಿರ್ದೇಶಕರು ಸಮಾನ ಪ್ರಾಮುಖ್ಯ ನೀಡಿದ್ದಾರೆ. ಆಜೀವಿಕ ತಂಡ ತನ್ನ ಹತ್ತು ವರ್ಷಗಳ ಪಯಣವನ್ನು ಈ ನಾಟಕದ ಮೂಲಕ ಆಚರಿಸಿಕೊಂಡಿರುವುದು ಅರ್ಥಪೂರ್ಣ ಆಯ್ಕೆ. ಏಕೆಂದರೆ ‘ಅದಲು ಬದಲು ಕಂಚಿ ಕದಲು’ ಕೇವಲ ಮನರಂಜನೆಯ ರಂಗಪ್ರಯೋಗವಲ್ಲ. ಅದು ಜನಪದ, ಇತಿಹಾಸ ಮತ್ತು ಸಾಂಸ್ಕೃತಿಕ ಅಸ್ಮಿತೆಗಳ ಬಗ್ಗೆ ಗಂಭೀರ ಸಂವಾದವನ್ನು ಆರಂಭಿಸುವ ಪ್ರಯತ್ನ. ಎರಡೂವರೆ ಗಂಟೆಗಳ ಈ ನಾಟಕ ಪ್ರೇಕ್ಷಕರಿಗೆ ಸಿದ್ಧ ಉತ್ತರಗಳನ್ನು ಕೊಡುವುದಿಲ್ಲ. ಬದಲಿಗೆ, ನಾವು ಯಾರ ಮಕ್ಕಳು? ನಮ್ಮ ದೇವತೆಗಳು ಯಾರವು? ನಮ್ಮ ಸಾಂಸ್ಕೃತಿಕ ಸ್ಮತಿಗಳನ್ನು ಯಾರು ಬರೆದರು? ಯಾರು ಅಳಿಸಿದರು? ಎಂಬ ಪ್ರಶ್ನೆಗಳನ್ನು ನಮ್ಮ ಮುಂದಿಡುತ್ತದೆ. ಉತ್ತರ ಸಿಗದ ಆ ಪ್ರಶ್ನೆಗಳನ್ನು ಹೊತ್ತು ಹುಡುಕಾಟಕ್ಕಾಗಿ ನಿರ್ಧರಿಸಿ ರಂಗಮಂದಿರದಿಂದ ನಿರ್ಗಮಿಸಿದರೆ ಅದೇ ಈ ನಾಟಕದ ನಿಜವಾದ ಯಶಸ್ಸು.

ವಾರ್ತಾ ಭಾರತಿ 21 Jul 2026 12:33 pm

Gold Rate July 21: ಚಿನ್ನ ಮತ್ತು ಬೆಳ್ಳಿ ಬೆಲೆ ಎಷ್ಟಾಗಿದೆ, ಬೆಳ್ಳಿ ಬೆಲೆಯಲ್ಲಿ ಹೊಸ ದಾಖಲೆ!

Gold Rate July 21: ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ ಆಗಿದೆ. ಇದು ಚಿನ್ನ ಪ್ರಿಯರಲ್ಲಿ ಆತಂಕವನ್ನುಂಟು ಮಾಡಿದೆ. ಚಿನ್ನ ಮತ್ತು ಬೆಳ್ಳಿ ಬೆಲೆಯು ಇತ್ತೀಚಿನ ದಿನಗಳಲ್ಲಿ ನಿರಂತರವಾಗಿ ಏರಿಕೆಯಾಗುತ್ತಿದೆ. ಜುಲೈ 21ರ ಮಂಗಳವಾರ ಚಿನ್ನದ ಬೆಲೆಯಲ್ಲಿ ಭಾರೀ ಹೆಚ್ಚಳವಾಗಿದೆ. ಮಂಗಳವಾರದಂದು 18, 22 ಹಾಗೂ 24 ಕ್ಯಾರೆಟ್‌ನ ಚಿನ್ನದ ಬೆಲೆ ಎಷ್ಟಾಗಿದೆ ಎನ್ನುವುದರ ಸಂಪೂರ್ಣ ವಿವರ

ಒನ್ ಇ೦ಡಿಯ 21 Jul 2026 12:30 pm

ರಾಯಚೂರು : ಮಂತ್ರಾಲಯಕ್ಕೆ ತೆರಳುತ್ತಿದ್ದ ವೇಳೆ ರಸ್ತೆ ಅಪಘಾತ; ಮಂಗಳೂರು ಮೂಲದ ಉದ್ಯಮಿ ಮೃತ್ಯು

ರಾಯಚೂರು, ಜುಲೈ 21: ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠಕ್ಕೆ ದರ್ಶನಕ್ಕೆ ತೆರಳುತ್ತಿದ್ದ ವೇಳೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮಂಗಳೂರು ಮೂಲದ ಉದ್ಯಮಿ ರವಿ ಶೆಟ್ಟಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಸೋಮವಾರ ತಡರಾತ್ರಿ ನಡೆದಿದೆ. ತಿರುಪತಿಯಿಂದ ಮಂತ್ರಾಲಯಕ್ಕೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ರಾತ್ರಿ ಸುಮಾರು 2.30 ಗಂಟೆಗೆ ಆಂಧ್ರಪ್ರದೇಶದ ಎಮ್ಮಿಗನೂರು ಸಮೀಪ ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ಡಿವೈಡರ್‌ಗೆ ಢಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ. ಅಪಘಾತದ ತೀವ್ರತೆಗೆ ಕಾರಿನಲ್ಲಿದ್ದ ಮಂಗಳೂರು ಮೂಲದ ಉದ್ಯಮಿ ರವಿ ಶೆಟ್ಟಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದ ಇತರ ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಎಮ್ಮಿಗನೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳಕ್ಕೆ ಮಂತ್ರಾಲಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

ವಾರ್ತಾ ಭಾರತಿ 21 Jul 2026 12:26 pm

ಕರ್ನಾಟಕ ಕಾಂಗ್ರೆಸ್ ಸರ್ಕಾರವೇ ಬಿಜೆಪಿಗೆ ಮಾದರಿ, ದಿಲ್ಲೀಲೂ ಗೃಹಲಕ್ಷ್ಮಿ ಮಾದರಿ ಸ್ಕೀಂ

ನವದೆಹಲಿ: ಕರ್ನಾಟಕದಲ್ಲಿ ಐದು ಗ್ಯಾರಂಟಿ ಸ್ಕೀಂ ಘೋಷಿಸಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರಕಾರ, ಎಲ್ಲವನ್ನೂ ಯಶಸ್ವಿಯಾಗಿ ಕಾರ್ಯಗತಗೊಳಿಸುತ್ತಿದೆ. ಸದಾ ಒಂದಲ್ಲೊಂದು ರೀತಿ ಈ ಯೋಜನೆಗಳನ್ನು ಪ್ರತಿಪಕ್ಷ ಬಿಜೆಪಿ ವಿರೋಧಿಸುತ್ತಲೇ ಇದೆ. ಆದರೆ, ಈ ಯೋಜನೆಗಳು ಬಿಜೆಪಿ ಆಧಿಕಾರದಲ್ಲಿರೋ ಬೇರೆ ರಾಜ್ಯಗಳಿಗೂ ಮಾದರಿಯಾಗಿದ್ದು, ಇದೀಗ ಬಿಜೆಪಿ ಆಡಳಿತ ಇರೋ ಮುಖ್ಯಮಂತ್ರಿ ರೇಖಾ ಗುಪ್ತಾ ಸರಕಾರವೂ ಕರ್ನಾಟಕದ ಗೃಹಲಕ್ಷ್ಮಿ ಯೋಜನೆಯಂತೆ

ಒನ್ ಇ೦ಡಿಯ 21 Jul 2026 12:25 pm

ಮಂತ್ರಾಲಯ ಬಳಿ ಭೀಕರ ಅಪಘಾತ: ಧಾರ್ಮಿಕ ಮುಂದಾಳು, ಯಕ್ಷಧ್ರುವ ಪಟ್ಲ ಫೌಂಡೇಶನ್‌ನ ರವಿಚಂದ್ರ ಶೆಟ್ಟಿ ಸಾವು

ಯಕ್ಷಧ್ರುವ ಪಟ್ಲ ಫೌಂಡೇಶನ್‌ನ ಸ್ಥಾಪಕರಾದ ಸತೀಶ್ ಪಟ್ಲ ಹಾಗೂ ಪದಾಧಿಕಾರಿಗಳು 2 ಕಾರಿನಲ್ಲಿ ತಿರುಪತಿಯಿಂದ ಮಂತ್ರಾಲಯಕ್ಕೆ ಹೋಗುತ್ತಿದ್ದ ಸಂದರ್ಭ ಅವಘಡ ನಡೆದಿದೆ. ಕರ್ನೂಲು ಬಳಿ ಪದಾದಿಕಾರಿಗಳಿದ್ದ 1 ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ಅದರಲ್ಲಿದ್ದ ಮೂವರಿಗೆ ಗಂಭೀರ ಗಾಯವಾಗಿದ್ದು, ರವಿಚಂದ್ರ ಶೆಟ್ಟಿ ಎನ್ನುವವರು ಮೃತಪಟ್ಟಿದ್ದಾರೆ.

ವಿಜಯ ಕರ್ನಾಟಕ 21 Jul 2026 12:22 pm

ಪ್ರಶ್ನೆಪತ್ರಿಕೆ ಸೋರಿಕೆ ತಡೆ ರಾಷ್ಟ್ರೀಯ ಜವಾಬ್ದಾರಿ: NEET ವಿವಾದದ ನಡುವೆ ಪ್ರಧಾನಿ ಮೋದಿ

ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಗೆ ಕರೆ

ವಾರ್ತಾ ಭಾರತಿ 21 Jul 2026 12:21 pm

ರಾಯಚೂರು: ಬಾಲಕನ ಮೇಲೆ ಬೀದಿನಾಯಿಗಳ ದಾಳಿ: ತಲೆಗೆ ಗಂಭೀರ ಗಾಯ

ರಾಯಚೂರು:  ಮನೆಯ ಮುಂದೆ ಆಟವಾಡುತ್ತಿದ್ದ ಮೂರು ವರ್ಷದ ಬಾಲಕನ ಮೇಲೆ ಬೀದಿನಾಯಿಗಳು ಭೀಕರ ದಾಳಿ ನಡೆಸಿದ್ದು, ಬಾಲಕ ಗಂಭೀರವಾಗಿ ಗಾಯಗೊಂಡ ಘಟನೆ ತಾಲೂಕಿನ ಮಲಿಯಾಬಾದ್ ಗ್ರಾಮದಲ್ಲಿ ಸೋಮವಾರ ನಡೆದಿದೆ. ಗಾಯಗೊಂಡಿರುವ ಬಾಲಕನನ್ನು ವೇಣುಗೋಪಾಲ ಎಂದು ಗುರುತಿಸಲಾಗಿದ್ದು, ಬಾಲಕನ ತಲೆಯ ಮೇಲಿನ ಚರ್ಮ ಕಿತ್ತು ಬರುವಂತೆ ಪರಚಿವೆ ಎನ್ನಲಾಗಿದೆ. ಗಾಯಾಳು ಬಾಲಕನಿಗೆ ಸ್ಥಳೀಯ ನವೋದಯ ವೈದ್ಯಕೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲಾಗುತ್ತಿದೆ ಎಂದು ತಿಳಿದು ಬಂದಿದೆ.

ವಾರ್ತಾ ಭಾರತಿ 21 Jul 2026 11:54 am

ಕಾಕ್ರೋಚ್ ಸಂಸತ್ ಚಲೋ: ವಿದ್ಯಾರ್ಥಿಗಳ ಮೇಲಿನ ಲಾಠಿ ಚಾರ್ಜ್ ಖಂಡಿಸಿ ಹುಟ್ಟುಹಬ್ಬ ಆಚರಿಸದಿರಲು ಮಲ್ಲಿಕಾರ್ಜುನ ಖರ್ಗೆ ನಿರ್ಧಾರ

ಕಾಕ್ರೋಚ್ ಜನತಾ ಪಕ್ಷದ ಸಂಸತ್ ಚಲೋ ಹೋರಾಟದ ಸಂದರ್ಭದಲ್ಲಿ ನಡೆದ ಗಲಾಟೆ ಹಾಗೂ ಲಾಠಿಚಾರ್ಜ್ ವಿಚಾರ ಇದೀಗ ರಾಜಕೀಯ ಆರೋಪ ಪ್ರತ್ಯಾರೋಪಕ್ಕೆ ಕಾರಣವಾಗುತ್ತಿದೆ. ಈ ನಡುವೆ ವಿದ್ಯಾರ್ಥಿಗಳ ಮೇಲಿನ ಲಾಠಿ ಚಾರ್ಜ್ ಖಂಡಿಸಿ ಹುಟ್ಟುಹಬ್ಬ ಆಚರಿಸದಿರಲು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿರ್ಧಾರ ಮಾಡಿದ್ದಾರೆ. ಈ ಕುರಿತಾಗಿ ಅವರು ಪತ್ರಿಕಾ ಹೇಳಿಕೆಯ ಮೂಲಕ ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ. ನಮ್ಮ ಮಕ್ಕಳಿಗೆ ನ್ಯಾಯ ಸಿಗಬೇಕೇ ಹೊರತು ದೌರ್ಜನ್ಯವಲ್ಲ ಎಂದಿದ್ದಾರೆ. ಈ ಕುರಿತಾದ ಮತ್ತಷ್ಟು ವಿವರ ಇಲ್ಲಿದೆ.

ವಿಜಯ ಕರ್ನಾಟಕ 21 Jul 2026 11:51 am

ನೀಟ್ ಪರೀಕ್ಷಾ ಅಕ್ರಮಗಳ ಕುರಿತು ಚರ್ಚೆಗೆ ಒತ್ತಾಯ: 12 ಗಂಟೆಯವರೆಗೆ ಲೋಕಸಭೆ ಅಧಿವೇಶನ ಮುಂದೂಡಿಕೆ

ಹೊಸದಿಲ್ಲಿ: ಮಂಗಳವಾರ ಆರಂಭವಾದ ಲೋಕಸಭೆ ಅಧಿವೇಶನವನ್ನು 12 ಗಂಟೆಯವರೆಗೆ ಮುಂದೂಡಲಾಗಿದೆ. ಪ್ರಶ್ನೋತ್ತರ ವೇಳೆಯೊಂದಿಗೆ ಆರಂಭವಾದ ಲೋಕಸಭೆಯ ಅಧಿವೇಶನದಲ್ಲಿ ಕಾಂಗ್ರೆಸ್ ಸಂಸದ ಹಿಬಿ ಈಡನ್ ತುರ್ತು ಚರ್ಚೆಗೆ ಒತ್ತಾಯಿಸುವ ನಿಲುವಳಿ ಸೂಚನೆ ನೀಡಿದರು. ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ನಡೆಸುವ ರಾಷ್ಟ್ರೀಯ ಪ್ರವೇಶ ಪರೀಕ್ಷೆಗಳಲ್ಲಿ ಮರುಕಳಿಸುತ್ತಿರುವ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಪರೀಕ್ಷಾ ಅಕ್ರಮಗಳ ಕುರಿತು ಚರ್ಚಿಸಲು ನಿಲುವಳಿ ಸೂಚನೆ ನೀಡಿದ ಕಾಂಗ್ರೆಸ್ ಸಂಸದ, ಚರ್ಚೆಗೆ ಒತ್ತಾಯಿಸಿದ್ದಾರೆ. ಬಳಿಕ ಅಧಿವೇಶನವನ್ನು ಮಧ್ಯಾಹ್ನ 12 ಗಂಟೆಯವರೆಗೆ ಮುಂದೂಡಲಾಯಿತು.

ವಾರ್ತಾ ಭಾರತಿ 21 Jul 2026 11:38 am

ಹೋರಾಟಗಾರರ ಸ್ವಾಭಿಮಾನವನ್ನು ಹೀಯಾಳಿಸುವುದು ಪ್ರಜಾಪ್ರಭುತ್ವದ ಸಂಸ್ಕೃತಿಗೆ ಹೊಂದುವುದಿಲ್ಲ

ಒಂದು ಸಮಾಜದಲ್ಲಿ ಅನ್ಯಾಯ ಉಳಿದಿರುವವರೆಗೆ ಪ್ರತಿರೋಧವೂ ಉಳಿಯುತ್ತದೆ. ಪ್ರತಿರೋಧವನ್ನು ಅಪಹಾಸ್ಯ ಮಾಡುವವರು ಸಮಸ್ಯೆಯನ್ನು ಅಲ್ಲ, ಸಮಸ್ಯೆಯ ವಿರುದ್ಧ ನಿಂತವರನ್ನೇ ಗುರಿಯಾಗಿಸುತ್ತಾರೆ. ಸಂವಿಧಾನವನ್ನು ದಿಲ್ಲಿಯ ಪುಸ್ತಕದಿಂದ ಕರ್ನಾಟಕದ ಹಳ್ಳಿಗಳ ಬದುಕಿನ ದಾಖಲೆಯನ್ನಾಗಿ ಮಾಡಿದ ಚಳವಳಿಗಳಲ್ಲಿ ದಸಂಸವೂ ಒಂದು. ದಸಂಸದ ರಾಜಕೀಯ ನಿಷ್ಠೆ ಅಧಿಕಾರದ ಕಡೆಗಲ್ಲ; ಸಂವಿಧಾನದ ಕಡೆಗಿದೆ. ಆದ್ದರಿಂದ ಅದು ಸರಕಾರಗಳ ವಿರುದ್ಧ ಹೋರಾಡಿದೆ, ಪಕ್ಷಗಳ ವಿರುದ್ಧವಲ್ಲ. ಕರ್ನಾಟಕದಲ್ಲಿ ದಲಿತ ಸಾಹಿತ್ಯ ಮತ್ತು ದಲಿತ ಚಳವಳಿ ಎರಡು ಪ್ರತ್ಯೇಕ ಪ್ರವಾಹಗಳಲ್ಲ; ಅವು ಒಂದೇ ಸಾಮಾಜಿಕ ಜಾಗೃತಿಯ ಎರಡು ಮುಖಗಳು. ದಸಂಸಕ್ಕೆ ಭೂಮಿ ಎಂದರೆ ಕೇವಲ ಆಸ್ತಿ ಅಲ್ಲ; ಅದು ಮಾನವ ಘನತೆ, ಸ್ವಾವಲಂಬನೆ ಮತ್ತು ಸಾಮಾಜಿಕ ಸ್ವಾತಂತ್ರ್ಯದ ಪ್ರಶ್ನೆಯಾಗಿತ್ತು. ದಸಂಸದ ಹುಟ್ಟು ಕೇವಲ ಒಂದು ಸಂಘಟನೆಯ ಹುಟ್ಟಲ್ಲ; ಅದು ಕರ್ನಾಟಕದ ಸಾರ್ವಜನಿಕ ವಲಯದಲ್ಲಿ ದಲಿತ ಧ್ವನಿ ಸ್ವತಂತ್ರ ರಾಜಕೀಯ ಮತ್ತು ಸಾಂಸ್ಕೃತಿಕ ಶಕ್ತಿಯಾಗಿ ಹೊರಹೊಮ್ಮಿದ ಕ್ಷಣ. ಒಂದು ಸಮಾಜ ತನ್ನ ಚಳವಳಿಗಳನ್ನು ಹೇಗೆ ನೆನಪಿಸಿಕೊಳ್ಳುತ್ತದೆಯೋ, ಅದರ ಪ್ರಜಾಪ್ರಭುತ್ವದ ಗುಣಮಟ್ಟವೂ ಅದರಿಂದಲೇ ಅಳೆಯಲ್ಪಡುತ್ತದೆ. ದಲಿತ ಸಂಘರ್ಷ ಸಮಿತಿಯನ್ನು ಕೇವಲ ಒಂದು ಸಂಘಟನೆಯಾಗಿ ನೋಡುವುದರಿಂದ ಅದರ ಇತಿಹಾಸವನ್ನು ಕುಗ್ಗಿಸುತ್ತದೆ. ಅದು ಕರ್ನಾಟಕದಲ್ಲಿ ಸಂವಿಧಾನವನ್ನು ಗ್ರಾಮಗಳಿಗೂ, ಬೀದಿಗಳಿಗೂ, ದಲಿತ ಕಾಲನಿಗಳಿಗೂ ಕೊಂಡೊಯ್ದ ಸಾಮಾಜಿಕ ಶಾಲೆಯಾಗಿದೆ. ಕರ್ನಾಟಕದ ಸಾರ್ವಜನಿಕ ಬದುಕಿನಲ್ಲಿ ರಾಜಕೀಯ ಭಿನ್ನಾಭಿಪ್ರಾಯಗಳು ಸಹಜ. ಆದರೆ ಸಾಮಾಜಿಕ ಚಳವಳಿಗಳ ಬಗ್ಗೆ ಮಾತನಾಡುವಾಗ ಮಾತಿನ ಜವಾಬ್ದಾರಿ ಇನ್ನಷ್ಟು ಹೆಚ್ಚಿರುತ್ತದೆ. ಇತ್ತೀಚೆಗೆ ಬಿಜೆಪಿ ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಅವರು ದಲಿತ ಸಂಘರ್ಷ ಸಮಿತಿಯ (ದಸಂಸ)ಯ ಕಾರ್ಯಕರ್ತರ ಕುರಿತು ನೀಡಿರುವ ವ್ಯಂಗ್ಯಾತ್ಮಕ ಹೇಳಿಕೆ ಈ ಜವಾಬ್ದಾರಿಯನ್ನು ಮರೆತಂತಿದೆ. ಇದು ಕೇವಲ ಒಂದು ಸಂಘಟನೆಯ ವಿರುದ್ಧದ ಟೀಕೆಯಲ್ಲ; ಕರ್ನಾಟಕದ ದಲಿತ ಚಳವಳಿಯ ಇತಿಹಾಸದ ಬಗ್ಗೆ ಇರುವ ಅಸಂವೇದನೆಯನ್ನು ಬಯಲಿಗೆಳೆಯುವ ಹೇಳಿಕೆಯಾಗಿದೆ. ಇಂತಹ ಸಂಘಟನೆಯ ಕಾರ್ಯಕರ್ತರನ್ನು ‘‘ಬೆಳಗ್ಗಿನಿಂದ ಸಂಜೆವರೆಗೆ ಹೋರಾಟ ಮಾಡಿ, ಸಂಜೆ ಕುಡಿದು ತೂಗಾಡುತ್ತಾರೆ’’ ಎಂಬ ರೀತಿಯಲ್ಲಿ ಹೀಯಾಳಿಸುವುದು ರಾಜಕೀಯ ಟೀಕೆ ಅಲ್ಲ; ಅದು ಸಾವಿರಾರು ಹೋರಾಟಗಾರರ ತ್ಯಾಗವನ್ನು ಅಪಮಾನಿಸುವ ಮಾತಾಗಿದೆ. ಯಾವ ಸಂಘಟನೆಯಲ್ಲಾದರೂ ಕೆಲವು ವ್ಯಕ್ತಿಗಳ ವೈಯಕ್ತಿಕ ನಡೆ ಆ ಸಂಘಟನೆಯ ಸಮಗ್ರ ವ್ಯಕ್ತಿತ್ವವಾಗುವುದಿಲ್ಲ. ಒಬ್ಬ ವ್ಯಕ್ತಿಯ ವರ್ತನೆಯನ್ನು ಆಧರಿಸಿ ಸಂಪೂರ್ಣ ಚಳವಳಿಯನ್ನು ನಿರ್ಣಯಿಸುವುದು ಪ್ರಜಾಸತ್ತಾತ್ಮಕ ಸಂವಾದದ ಮಟ್ಟವನ್ನು ಕುಗ್ಗಿಸುತ್ತದೆ. ವಿಚಿತ್ರವೆಂದರೆ, ಇಂದು ದಲಿತ ಪ್ರಶ್ನೆಗಳ ಬಗ್ಗೆ ಮಾತನಾಡುವ ಅನೇಕ ರಾಜಕೀಯ ಪಕ್ಷಗಳು ತಮ್ಮ ರಾಜಕೀಯ ಅಸ್ತಿತ್ವವನ್ನು ಬಲಪಡಿಸಿಕೊಳ್ಳಲು ದಲಿತ ಚಳವಳಿಗಳಿಂದಲೇ ನಿರ್ಮಾಣವಾದ ಸಾಮಾಜಿಕ ಜಾಗೃತಿಯ ಲಾಭ ಪಡೆದಿವೆ. ಕರ್ನಾಟಕದ ಸಾಮಾಜಿಕ ಚಳವಳಿಗಳ ಇತಿಹಾಸದಲ್ಲಿ ದಲಿತ ಸಂಘರ್ಷ ಸಮಿತಿ (ಡಿ.ಎಸ್.ಎಸ್.) ಒಂದು ಮಹತ್ವದ ಅಧ್ಯಾಯವಾಗಿದೆ. 1970ರ ದಶಕದಲ್ಲಿ ಜಾತಿ ಆಧಾರಿತ ದೌರ್ಜನ್ಯ, ಭೂಹೀನತೆ, ಅಸ್ಪಶ್ಯತೆ ಮತ್ತು ಸಾಮಾಜಿಕ ಬಹಿಷ್ಕಾರದ ವಿರುದ್ಧ ಸಂಘಟಿತ ಪ್ರತಿರೋಧವಾಗಿ ಈ ಚಳವಳಿ ರೂಪುಗೊಂಡಿತು. ಡಾ. ಬಿ.ಆರ್. ಅಂಬೇಡ್ಕರ್ ಅವರ ಸಮಾನತೆ, ಸ್ವಾಭಿಮಾನ ಮತ್ತು ಸಂವಿಧಾನಬದ್ಧ ಹಕ್ಕುಗಳ ಚಿಂತನೆಗಳಿಂದ ಪ್ರೇರಿತವಾದ ಈ ಸಂಘಟನೆ, ಕರ್ನಾಟಕದ ದಲಿತ ಚಳವಳಿಗೆ ಹೊಸ ದಿಕ್ಕು ನೀಡಿತು. 1974ರಲ್ಲಿ ಹುಟ್ಟಿಕೊಂಡ ದಲಿತ ಸಂಘರ್ಷ ಸಮಿತಿ ಕೇವಲ ಒಂದು ಸಂಘಟನೆಯಲ್ಲ; ಅದು ಸ್ವಾಭಿಮಾನ, ಸಮಾನತೆ ಮತ್ತು ಸಂವಿಧಾನಬದ್ಧ ಹಕ್ಕುಗಳಿಗಾಗಿ ರೂಪುಗೊಂಡ ಸಾಮಾಜಿಕ ಚಳವಳಿ. ಪ್ರೊ.ಬಿ. ಕೃಷ್ಣಪ್ಪ, ಎನ್. ಗಿರಿಯಪ್ಪ, ಕವಿ ಸಿದ್ದಲಿಂಗಯ್ಯ, ದೇವನೂರ ಮಹಾದೇವ, ಡಾ. ಎಚ್. ಗೋವಿಂದಯ್ಯ ಸೇರಿದಂತೆ ಅನೇಕ ಚಿಂತಕರು, ಲೇಖಕರು ಮತ್ತು ಹೋರಾಟಗಾರರು ಈ ಚಳವಳಿಗೆ ವೈಚಾರಿಕ ಬುನಾದಿ ಹಾಕಿದರು. ಕರ್ನಾಟಕದಲ್ಲಿ ಜಾತಿ ದೌರ್ಜನ್ಯ, ಭೂಹೀನತೆ, ಅಸ್ಪಶ್ಯತೆ, ದೇವದಾಸಿ ಪದ್ಧತಿ, ಕನಿಷ್ಠ ಕೂಲಿ, ಶಿಕ್ಷಣ ಮತ್ತು ಮಾನವ ಘನತೆಯ ಪ್ರಶ್ನೆಗಳನ್ನು ರಾಜ್ಯದ ರಾಜಕೀಯ ಚರ್ಚೆಯ ಕೇಂದ್ರಕ್ಕೆ ತಂದದ್ದು ಇದೇ ಚಳವಳಿ. ಇಂದು ನಾವು ಸಾಮಾನ್ಯವಾಗಿ ಮಾತನಾಡುವ ಪರಿಶಿಷ್ಟ ಜಾತಿ-ಪಂಗಡಗಳ ಮೇಲಿನ ದೌರ್ಜನ್ಯ, ಮೀಸಲಾತಿ ಅನುಷ್ಠಾನ, ಭೂಹಕ್ಕು, ಸ್ವಚ್ಛತಾ ಕಾರ್ಮಿಕರ ಮಾನವ ಹಕ್ಕುಗಳು, ದೇವದಾಸಿ ಮಹಿಳೆಯರ ಪುನರ್ವಸತಿ, ಸಾಮಾಜಿಕ ನ್ಯಾಯದ ನೀತಿಗಳು-ಇವೆಲ್ಲವೂ ಸ್ವಯಂಸ್ಫೂರ್ತಿಯಾಗಿ ದೊರೆತವುಗಳಲ್ಲ. ಸಾವಿರಾರು ಪ್ರತಿಭಟನೆಗಳು, ಧರಣಿಗಳು, ಜೈಲು ಭರೋ ಚಳವಳಿಗಳು, ಪಾದಯಾತ್ರೆಗಳು ಮತ್ತು ಕಾನೂನು ಹೋರಾಟಗಳ ಫಲವಾಗಿ ಇವು ಸಾರ್ವಜನಿಕ ನೀತಿಗಳಾಗಿ ರೂಪುಗೊಂಡವು. ಈ ಹೋರಾಟಗಳಲ್ಲಿ ದಸಂಸ ಪ್ರಮುಖ ಪಾತ್ರವಹಿಸಿದೆ. ಇತಿಹಾಸ ಹೇಳುವುದೇನೆಂದರೆ, ದಸಂಸ ಯಾವೊಂದು ಪಕ್ಷದ ಪರವಾಗಿಯೂ ಅಥವಾ ವಿರೋಧವಾಗಿಯೂ ಹುಟ್ಟಿಕೊಂಡಿಲ್ಲ. ಕಾಂಗ್ರೆಸ್ ಆಡಳಿತವಿದ್ದಾಗಲೂ ಹೋರಾಟ ನಡೆಸಿದೆ; ಜನತಾ ದಳ ಅಧಿಕಾರದಲ್ಲಿದ್ದಾಗಲೂ ಪ್ರಶ್ನಿಸಿದೆ; ಬಿಜೆಪಿ ಸರಕಾರವಿದ್ದಾಗಲೂ ಪ್ರತಿಭಟಿಸಿದೆ. ಏಕೆಂದರೆ ಅದರ ನಿಷ್ಠೆ ಅಧಿಕಾರಕ್ಕೆ ಅಲ್ಲ; ಸಂವಿಧಾನದ ಸಾಮಾಜಿಕ ನ್ಯಾಯದ ಆಶಯಕ್ಕೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಅಂಕಿಅಂಶಗಳು ಹಲವು ವರ್ಷಗಳಿಂದ ಪರಿಶಿಷ್ಟ ಜಾತಿಗಳ ವಿರುದ್ಧದ ದೌರ್ಜನ್ಯ ಪ್ರಕರಣಗಳು ಇನ್ನೂ ಗಂಭೀರ ಸಾಮಾಜಿಕ ಸಮಸ್ಯೆಯೇ ಎಂಬುದನ್ನು ತೋರಿಸುತ್ತಿವೆ. ಇಂತಹ ಸಂದರ್ಭದಲ್ಲಿ ದೌರ್ಜನ್ಯಗಳ ವಿರುದ್ಧ ಧ್ವನಿ ಎತ್ತುವ ಚಳವಳಿಗಳನ್ನು ಅಪಹಾಸ್ಯ ಮಾಡುವುದಕ್ಕಿಂತ, ಅವು ಎತ್ತುವ ಪ್ರಶ್ನೆಗಳಿಗೆ ಉತ್ತರಿಸುವುದು ಜನಪ್ರತಿನಿಧಿಗಳ ಕರ್ತವ್ಯವಾಗಬೇಕು. ವ್ಯಂಗ್ಯ ಮಾಡುವುದು ಸುಲಭ. ಆದರೆ ದಲಿತ ಹೋರಾಟಗಾರರು ಎದುರಿಸಿರುವ ಸಾಮಾಜಿಕ ಬಹಿಷ್ಕಾರ, ಪೊಲೀಸ್ ಪ್ರಕರಣಗಳು, ಬಂಧನಗಳು, ಹಲ್ಲೆಗಳು ಮತ್ತು ಜೀವಭಯವನ್ನು ಅರ್ಥಮಾಡಿಕೊಳ್ಳುವುದು ಸುಲಭವಲ್ಲ. ಅನೇಕ ಕಾರ್ಯಕರ್ತರು ಯಾವುದೇ ವೈಯಕ್ತಿಕ ಲಾಭವಿಲ್ಲದೆ ದಶಕಗಳ ಕಾಲ ಗ್ರಾಮದಿಂದ ಗ್ರಾಮಕ್ಕೆ ತೆರಳಿ ಸಂವಿಧಾನದ ಮೌಲ್ಯಗಳನ್ನು ಜನರಿಗೆ ತಲುಪಿಸಿದ್ದಾರೆ. ಅವರನ್ನು ಒಂದು ಅವಹೇಳನಕಾರಿ ರೂಪಕದ ಮೂಲಕ ಚಿತ್ರಿಸುವುದು ಅವರ ವೈಯಕ್ತಿಕ ಘನತೆಗೆ ಮಾತ್ರವಲ್ಲ, ಪ್ರಜಾಪ್ರಭುತ್ವದ ಪ್ರತಿಭಟನಾ ಸಂಸ್ಕೃತಿಗೂ ಅವಮಾನ. ಛಲವಾದಿ ನಾರಾಯಣಸ್ವಾಮಿ ಅವರು ದಲಿತ ಸಮುದಾಯದ ಪ್ರತಿನಿಧಿ ಎಂದು ರಾಜಕೀಯವಾಗಿ ಗುರುತಿಸಿಕೊಂಡಿದ್ದಾರೆ. ಆದ್ದರಿಂದ ಅವರ ಮಾತುಗಳು ಇನ್ನಷ್ಟು ಜವಾಬ್ದಾರಿಯುತವಾಗಿರಬೇಕಿತ್ತು. ಭಿನ್ನಾಭಿಪ್ರಾಯ ಇದ್ದರೆ ದಸಂಸದ ರಾಜಕೀಯ ನಿಲುವುಗಳನ್ನು ವಿಮರ್ಶಿಸಬಹುದು; ಅದರ ಕಾರ್ಯತಂತ್ರವನ್ನು ಪ್ರಶ್ನಿಸಬಹುದು; ಆದರೆ ಸಾವಿರಾರು ಹೋರಾಟಗಾರರ ಸ್ವಾಭಿಮಾನವನ್ನು ಹೀಯಾಳಿಸುವುದು ಪ್ರಜಾಪ್ರಭುತ್ವದ ಸಂಸ್ಕೃತಿಗೆ ಹೊಂದುವುದಿಲ್ಲ. ಬಿಜೆಪಿ ಸೇರಿದಂತೆ ಎಲ್ಲ ರಾಜಕೀಯ ಪಕ್ಷಗಳು ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ಗೌರವಿಸುತ್ತೇವೆ ಎಂದು ಹೇಳುತ್ತವೆ. ಆದರೆ ಅಂಬೇಡ್ಕರ್ ಅವರನ್ನು ಗೌರವಿಸುವುದು ಅವರ ಪ್ರತಿಮೆಗೆ ಹಾರ ಹಾಕುವುದರಿಂದ ಪೂರ್ಣವಾಗುವುದಿಲ್ಲ. ಅವರು ಪ್ರತಿಪಾದಿಸಿದ ಸಂವಿಧಾನಬದ್ಧ ಪ್ರತಿಭಟನೆಯ ಹಕ್ಕು, ಸಮಾನತೆ, ಭ್ರಾತೃತ್ವ ಮತ್ತು ಸಾಮಾಜಿಕ ನ್ಯಾಯದ ಮೌಲ್ಯಗಳನ್ನು ಗೌರವಿಸುವುದರಿಂದಲೇ ಅದು ಅರ್ಥಪೂರ್ಣವಾಗುತ್ತದೆ. ಸಾಮಾಜಿಕ ಚಳವಳಿಗಳೊಂದಿಗೆ ಒಪ್ಪಿಗೆ ಅಥವಾ ಭಿನ್ನಾಭಿಪ್ರಾಯ ಇರಬಹುದು. ಆದರೆ ಅವುಗಳನ್ನು ಹಾಸ್ಯಕ್ಕೆ ಇಳಿಸುವುದು ಪ್ರಜಾಪ್ರಭುತ್ವದ ಗುಣಮಟ್ಟವನ್ನು ಕುಗ್ಗಿಸುತ್ತದೆ. ದಸಂಸವನ್ನು ಟೀಕಿಸುವ ಮೊದಲು ಅದರ ಐವತ್ತು ವರ್ಷಗಳ ಚರಿತ್ರೆಯನ್ನು ಓದಬೇಕು; ಅದರ ಹೋರಾಟಗಳಿಂದ ನ್ಯಾಯ ಪಡೆದ ಸಾವಿರಾರು ಕುಟುಂಬಗಳ ಅನುಭವಗಳನ್ನು ಕೇಳಬೇಕು. ಇತಿಹಾಸದಲ್ಲಿ ರಾಜಕೀಯ ಪಕ್ಷಗಳು ಬದಲಾಗುತ್ತವೆ; ಸರಕಾರಗಳು ಬರುತ್ತವೆ, ಹೋಗುತ್ತವೆ. ಆದರೆ ಸಮಾಜವನ್ನು ಬದಲಿಸಿದ ಚಳವಳಿಗಳು ಮಾತ್ರ ಉಳಿಯುತ್ತವೆ. ದಲಿತ ಸಂಘರ್ಷ ಸಮಿತಿಯ ಸ್ಥಾನಮಾನವೂ ಅಂಥದ್ದೇ. ಆ ಚಳವಳಿಯನ್ನು ಅವಮಾನಿಸುವ ಯಾವುದೇ ಹೇಳಿಕೆ ಕೊನೆಗೆ ಒಬ್ಬ ಸಂಘಟನೆಯನ್ನು ಅಲ್ಲ, ಕರ್ನಾಟಕದ ಸಾಮಾಜಿಕ ನ್ಯಾಯದ ಇತಿಹಾಸವನ್ನೇ ಅವಮಾನಿಸುತ್ತದೆ. ಸರಕಾರಗಳು ಬದಲಾಗುತ್ತವೆ. ರಾಜಕೀಯ ಪಕ್ಷಗಳು ಅಧಿಕಾರಕ್ಕೆ ಬರುತ್ತವೆ, ಅಧಿಕಾರ ಕಳೆದುಕೊಳ್ಳುತ್ತವೆ. ಆದರೆ ಸಮಾಜದ ಮನಸ್ಸನ್ನು ಬದಲಿಸಿದ ಚಳವಳಿಗಳು ಮಾತ್ರ ಇತಿಹಾಸದಲ್ಲಿ ಉಳಿಯುತ್ತವೆ. ದಲಿತ ಸಂಘರ್ಷ ಸಮಿತಿಯ ಐದು ದಶಕಗಳ ಪಯಣವು ಇದೇ ಸತ್ಯವನ್ನು ನೆನಪಿಸುತ್ತದೆ. ಅದರೊಂದಿಗೆ ಭಿನ್ನಾಭಿಪ್ರಾಯ ಹೊಂದುವುದು ಪ್ರಜಾಪ್ರಭುತ್ವದ ಹಕ್ಕು; ಆದರೆ ಅದರ ಹೋರಾಟವನ್ನು ಅಪಹಾಸ್ಯ ಮಾಡುವುದು ಪ್ರಜಾಪ್ರಭುತ್ವದ ಆತ್ಮವನ್ನೇ ಕುಗ್ಗಿಸುವ ಪ್ರಯತ್ನ. ದಲಿತ ಸಂಘರ್ಷ ಸಮಿತಿ ಎಂದರೆ ಕೆಲವು ಪ್ರತಿಭಟನೆಗಳ ನೆನಪು ಮಾತ್ರವಲ್ಲ. ಅದು ಸಂವಿಧಾನದ ಸಮಾನತೆ, ಸ್ವಾಭಿಮಾನ ಮತ್ತು ಮಾನವ ಘನತೆಯ ಮೌಲ್ಯಗಳನ್ನು ಕರ್ನಾಟಕದ ಹಳ್ಳಿಗಳಿಗೂ ಜನಜೀವನಕ್ಕೂ ತಲುಪಿಸಿದ ಒಂದು ಸಾಮಾಜಿಕ ವಿಶ್ವವಿದ್ಯಾನಿಲಯ. ಅದರ ಕೊಡುಗೆಯನ್ನು ನಿರಾಕರಿಸುವುದು ಎಂದರೆ ಕರ್ನಾಟಕದ ಸಾಮಾಜಿಕ ನ್ಯಾಯದ ಇತಿಹಾಸವನ್ನೇ ನಿರಾಕರಿಸಿದಂತಾಗುತ್ತದೆ. ಇಂದು ಪ್ರಶ್ನೆ ದಸಂಸದ ಬಗ್ಗೆ ಅಲ್ಲ. ಪ್ರಶ್ನೆ ಪ್ರಜಾಪ್ರಭುತ್ವದಲ್ಲಿ ಭಿನ್ನಮತವನ್ನು ಹೇಗೆ ಕಾಣಬೇಕು ಎಂಬುದು. ಹೋರಾಟಗಾರರನ್ನು ಅಪಹಾಸ್ಯ ಮಾಡುವ ರಾಜಕೀಯಕ್ಕಿಂತ, ಅವರು ಎತ್ತುವ ಪ್ರಶ್ನೆಗಳಿಗೆ ಉತ್ತರಿಸುವ ರಾಜಕೀಯವೇ ಸಮಾಜಕ್ಕೆ ಬೇಕಾಗಿದೆ. ಸಂಘಟನೆಗಳನ್ನು ಅವಮಾನಿಸುವುದರಿಂದ ಇತಿಹಾಸ ಬದಲಾಗುವುದಿಲ್ಲ. ಆದರೆ ಇತಿಹಾಸವನ್ನು ಗೌರವಿಸುವ ನಾಯಕರೇ ಸಮಾಜದ ಗೌರವವನ್ನೂ ಗಳಿಸುತ್ತಾರೆ.

ವಾರ್ತಾ ಭಾರತಿ 21 Jul 2026 11:33 am

ಭಾರತ-ಅಮೆರಿಕ ವ್ಯಾಪಾರ ಒಪ್ಪಂದ ವಿರೋಧಿಸಿ ಮಹಾಪಂಚಾಯತ್ ನಡೆಸಲು ದಿಲ್ಲಿಯತ್ತ ಹೊರಟ ರೈತರು: ಶಂಭು ಗಡಿ ಬಂದ್

ಚಂಡೀಗಢ/ಹೊಸದಿಲ್ಲಿ: ಭಾರತ–ಅಮೆರಿಕ ನಡುವಿನ ವ್ಯಾಪಾರ ಒಪ್ಪಂದವನ್ನು ವಿರೋಧಿಸಿ ದಿಲ್ಲಿಯಲ್ಲಿ ಮಂಗಳವಾರ ನಡೆಯಲಿರುವ ರೈತರ ಮಹಾಪಂಚಾಯತ್ನಲ್ಲಿ ಪಾಲ್ಗೊಳ್ಳಲು ಪಂಜಾಬ್ ಸೇರಿದಂತೆ ವಿವಿಧ ರಾಜ್ಯಗಳ ರೈತರು ದಿಲ್ಲಿಯತ್ತ ಪ್ರಯಾಣ ಬೆಳೆಸಿದ್ದಾರೆ. ಇದರ ಬೆನ್ನಲ್ಲೇ ಹರ್ಯಾಣ ಸರ್ಕಾರ ಪಂಜಾಬ್–ಹರ್ಯಾಣ ಗಡಿಯ ಶಂಭು ಗಡಿಯನ್ನು ಮುಚ್ಚಿದೆ. ಹರ್ಯಾಣ ಸರ್ಕಾರದ ಈ ಕ್ರಮವನ್ನು ಪಂಜಾಬ್ ನ ರೈತ ನಾಯಕ ಸರ್ವಣ್ ಸಿಂಗ್ ಪಂಧೇರ್ ಖಂಡಿಸಿದ್ದಾರೆ. ಪಂಜಾಬ್–ಹರ್ಯಾಣ ಗಡಿ ಪ್ರದೇಶದಲ್ಲಿ ಭಾರಿ ಸಂಖ್ಯೆಯ ಪೊಲೀಸರನ್ನು ನಿಯೋಜಿಸಲಾಗಿದೆ. ರೈತರ ಬೆಂಗಾವಲು ವಾಹನಗಳ ಸಂಚಾರವನ್ನು ತಡೆಯಲು ಘಗ್ಗರ್ ನದಿಯ ಮೇಲಿನ ಸೇತುವೆಯಲ್ಲಿ ಹಲವು ತಡೆಗೋಡೆಗಳು ಹಾಗೂ ಕಾಂಕ್ರೀಟ್ ಬ್ಲಾಕ್ಗಳನ್ನು ಅಳವಡಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ‘ದೇಶ್ ಬಚಾವೊ ಮೋರ್ಚಾ’ ಸಂಘಟನೆಯ ನೇತೃತ್ವದಲ್ಲಿ ದಿಲ್ಲಿಯ ಕಿಸಾನ್ ಘಾಟ್ ನಲ್ಲಿ ದಿನಪೂರ್ತಿ ರೈತರ ಮಹಾಪಂಚಾಯತ್ ನಡೆಯಲಿದೆ. ಪಂಜಾಬ್, ಹರ್ಯಾಣ ಸೇರಿದಂತೆ ವಿವಿಧ ರಾಜ್ಯಗಳ ರೈತ ನಾಯಕರು ಮಹಾಪಂಚಾಯತ್ ನಲ್ಲಿ ಭಾಗವಹಿಸುವ ನಿರೀಕ್ಷೆಯಿದೆ ಎಂದು ಸಂಘಟಕರು ತಿಳಿಸಿದ್ದಾರೆ. ಮಂಗಳವಾರ ಬೆಳಿಗ್ಗೆಯೇ ವಿವಿಧ ರೈತ ಸಂಘಟನೆಗಳ ಸದಸ್ಯರು ಪಂಜಾಬ್ ನಿಂದ ಬಸ್ ಗಳಲ್ಲಿ ದಿಲ್ಲಿಯತ್ತ ಹೊರಟಿದ್ದಾರೆ. ಭಾರತ–ಅಮೆರಿಕ ವ್ಯಾಪಾರ ಒಪ್ಪಂದದ ವಿರುದ್ಧ ತಮ್ಮ ಆಕ್ಷೇಪಗಳನ್ನು ವ್ಯಕ್ತಪಡಿಸಲು ಮಹಾಪಂಚಾಯತ್ ಆಯೋಜಿಸಲಾಗಿದೆ ಎಂದು ರೈತ ಸಂಘಟನೆಗಳು ತಿಳಿಸಿವೆ.

ವಾರ್ತಾ ಭಾರತಿ 21 Jul 2026 11:27 am

ಇರಾನ್ ಮೇಲೆ ಸತತ 10ನೇ ದಿನವೂ ಅಮೆರಿಕದಿಂದ ದಾಳಿ; ಹಾರ್ಮುಝ್ ಜಲಸಂಧಿಯಲ್ಲಿ ಮತ್ತೊಂದು ತೈಲ ಟ್ಯಾಂಕರ್ ಮೇಲೆ ಪ್ರತಿದಾಳಿ

ಟೆಹರಾನ್, ಜು.21: ಹಾರ್ಮುಝ್ ಜಲಸಂಧಿಯ ಮೇಲಿನ ನಿಯಂತ್ರಣಕ್ಕಾಗಿ ಅಮೆರಿಕ ಸತತ 10ನೇ ರಾತ್ರಿಯೂ ಇರಾನ್ ಮೇಲೆ ವೈಮಾನಿಕ ದಾಳಿ ನಡೆಸಿದೆ. ಇದರ ಬೆನ್ನಲ್ಲೇ, ಮಂಗಳವಾರ ಮುಂಜಾನೆ ಇರಾನ್ ಕೂಡ ಮತ್ತೊಂದು ತೈಲ ಟ್ಯಾಂಕರ್ ಮೇಲೆ ದಾಳಿ ನಡೆಸಿದೆ. ದಾಳಿಯ ಬಳಿಕ ಹಡಗಿನ ಸಿಬ್ಬಂದಿ ಹಡಗನ್ನು ತೊರೆದು ಸುರಕ್ಷಿತ ಸ್ಥಳಕ್ಕೆ ತೆರಳಿದ್ದಾರೆ. ಅಮೆರಿಕ ಸತತ 10ನೇ ರಾತ್ರಿಯೂ ವೈಮಾನಿಕ ದಾಳಿ ಮುಂದುವರಿಸಿದ್ದರೂ, ಹಾರ್ಮುಝ್ ಜಲಸಂಧಿಯ ಮೇಲಿನ ನಿಯಂತ್ರಣವನ್ನು ಇರಾನ್ ಕಳೆದುಕೊಂಡಿಲ್ಲ. ವಿಶ್ವದ ಒಟ್ಟು ಕಚ್ಚಾ ತೈಲ ಮತ್ತು ನೈಸರ್ಗಿಕ ಅನಿಲ ಸಾಗಣೆಯ ಸುಮಾರು ಐದನೇ ಒಂದರಷ್ಟು ಪ್ರಮಾಣ ಈ ಜಲಮಾರ್ಗದ ಮೂಲಕವೇ ಸಾಗುತ್ತದೆ. ಹೀಗಾಗಿ ಇಲ್ಲಿ ನಡೆಯುತ್ತಿರುವ ಸಂಘರ್ಷ ಜಾಗತಿಕ ಇಂಧನ ಪೂರೈಕೆಯ ಮೇಲೂ ಪರಿಣಾಮ ಬೀರುವ ಆತಂಕ ಮೂಡಿಸಿದೆ. ಇರಾನ್ ಮತ್ತು ಅಮೆರಿಕ ನಡುವಿನ ಸಂಘರ್ಷ ಮತ್ತೆ ಪೂರ್ಣ ಪ್ರಮಾಣದ ಯುದ್ಧದತ್ತ ಸಾಗುತ್ತಿರುವ ನಡುವೆಯೇ, ಉಭಯ ರಾಷ್ಟ್ರಗಳ ನಡುವೆ ಸಂಧಾನಕ್ಕೆ ಪ್ರಮುಖ ಪಾತ್ರ ವಹಿಸಿದ್ದ ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸಲು ಇರಾನ್ನ ಆಂತರಿಕ ಸಚಿವರು ಪಾಕಿಸ್ತಾನಕ್ಕೆ ಭೇಟಿ ನೀಡಿದ್ದಾರೆ. ಯುದ್ಧವನ್ನು ಅಂತ್ಯಗೊಳಿಸುವ ನಿಟ್ಟಿನಲ್ಲಿ ಹೊಸ ಒಪ್ಪಂದ ಏರ್ಪಡಬಹುದೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಯುದ್ಧವನ್ನು ಕೊನೆಗೊಳಿಸುವ ಉದ್ದೇಶದಿಂದ ಕಳೆದ ತಿಂಗಳು ಇರಾನ್ ಮತ್ತು ಅಮೆರಿಕ ನಡುವೆ ಏರ್ಪಟ್ಟಿದ್ದ ಮಧ್ಯಂತರ ಒಪ್ಪಂದ ಮುರಿದುಬಿದ್ದಿದೆ. ಇದರ ಪರಿಣಾಮವಾಗಿ ಹಾರ್ಮುಝ್ ಜಲಸಂಧಿಯ ಮೂಲಕ ಹಡಗುಗಳ ಸಂಚಾರ ದೊಡ್ಡ ಪ್ರಮಾಣದಲ್ಲಿ ಸ್ಥಗಿತಗೊಂಡಿದೆ. ಸಂಘರ್ಷ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಉಭಯ ದೇಶಗಳೂ ಲಕ್ಷಾಂತರ ಜನರು ಬಳಸುವ ನಾಗರಿಕ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲು ಆರಂಭಿಸಿವೆ.

ವಾರ್ತಾ ಭಾರತಿ 21 Jul 2026 11:19 am

₹38 ಸಾವಿರ ಸಂಬಳದ ಉದ್ಯೋಗ ಬಿಟ್ಟು ಟೀ ಅಂಗಡಿ ತೆರೆದ ಕಾರ್ಪೊರೇಟ್ ಉದ್ಯೋಗಿ; ಈಗ ತಿಂಗಳಿಗೆ ಲಕ್ಷಾಂತರ ರೂ. ಆದಾಯ

ಯಾರಿಗೇ ಆಗಲಿ ಕೆಲಸಕ್ಕೆ ಸೇರುವಾಗಲೇ ಸ್ಯಾಲರಿ ಚೆನ್ನಾಗಿ ಇರಬೇಕು ಎನ್ನುವುದು ಸಾಮಾನ್ಯ ಬೇಡಿಕೆಯಾಗಿರುತ್ತದೆ. ಆದರೆ ಕೆಲವೊಮ್ಮೆ, ಸಂಬಳ ಹೆಚ್ಚಾಗದೇ ಇರುವುದು, ಉದ್ಯೋಗಗಳಲ್ಲಿನ ಸೀಮಿತ ಪ್ರಗತಿಯು ಹೊಸ ಕೆಲಸ ಹುಡುಕುವಂತೆ ಮಾಡುತ್ತದೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ಈ ಕಥೆಯು ಅಂಥದ್ದೇ ಒಂದು ಉದಾಹರಣೆಯಾಗಿದೆ. ಇಲ್ಲಿ ಒಬ್ಬ ವ್ಯಕ್ತಿ ತನ್ನ ಜೀವನದ ಪ್ರಮುಖ ನಿರ್ಧಾರವನ್ನು ತೆಗೆದುಕೊಂಡಿದ್ದಾನೆ. ತಿಂಗಳಿಗೆ 38,000

ಒನ್ ಇ೦ಡಿಯ 21 Jul 2026 11:11 am

ಜಂತರ್ ಮಂತರ್ ನಲ್ಲಿ ವೀಡಿಯೋಗ್ರಫಿ ಸುರಕ್ಷತೆಗಾಗಿ, ಕಣ್ಗಾವಲಿಗಾಗಿ ಅಲ್ಲ: ಹೈಕೋರ್ಟ್‌ ಗೆ ತಿಳಿಸಿದ ಕೇಂದ್ರ

ಹೊಸದಿಲ್ಲಿ: ಜಂತರ್ ಮಂತರ್ ನಲ್ಲಿ ನಡೆಯುವ ಪ್ರತಿಭಟನೆಗಳ ವೇಳೆ ವೀಡಿಯೋಗ್ರಫಿ ನಡೆಸುವುದು ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಹಾಗೂ ಸುರಕ್ಷತೆಗಾಗಿ ಮಾತ್ರವೇ ಹೊರತು, ಪ್ರತಿಭಟನಾಕಾರರ ಮೇಲೆ ಕಣ್ಗಾವಲು ಅಥವಾ ಗೂಢಚಾರಿಕೆ ನಡೆಸಲು ಅಲ್ಲ ಎಂದು ಕೇಂದ್ರ ಸರ್ಕಾರ ಸೋಮವಾರ ದೆಹಲಿ ಹೈಕೋರ್ಟ್‌ ಗೆ ತಿಳಿಸಿತು. ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (JNU) ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷೆ ಐಷೆ ಘೋಷ್ ಅವರು ಕೇಂದ್ರ ಸರ್ಕಾರ ಮತ್ತು ದಿಲ್ಲಿ ಪೊಲೀಸರ ವಿರುದ್ಧ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ವೇಳೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಈ ವಾದ ಮಂಡಿಸಿದರು. ಪರೀಕ್ಷೆಗಳಲ್ಲಿನ ಅಕ್ರಮಗಳನ್ನು ವಿರೋಧಿಸಿ ಜಂತರ್ ಮಂತರ್ ನಲ್ಲಿ ನಡೆಯುತ್ತಿರುವ ಪ್ರತಿಭಟನೆಯ ಸಂದರ್ಭದಲ್ಲಿ ಪೊಲೀಸರು ನಿರಂತರವಾಗಿ ವೀಡಿಯೋಗ್ರಫಿ ನಡೆಸುತ್ತಿರುವುದು ಪ್ರತಿಭಟನಾಕಾರರ ಗೌಪ್ಯತೆಯ ಹಕ್ಕಿಗೆ ಧಕ್ಕೆ ತರುತ್ತಿದೆ. ಇಂತಹ ಮೇಲ್ವಿಚಾರಣೆಗೆ ಕಟ್ಟುನಿಟ್ಟಾದ ಕಾನೂನು ನಿಯಮಗಳು ಇರಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ. ಮುಖ್ಯ ನ್ಯಾಯಮೂರ್ತಿ ಡಿ.ಕೆ. ಉಪಾಧ್ಯಾಯ ಮತ್ತು ನ್ಯಾಯಮೂರ್ತಿ ತೇಜಸ್ ಕರಿಯಾ ಅವರ ವಿಭಾಗೀಯ ಪೀಠವು ಪ್ರಕರಣದ ವಿಚಾರಣೆಯನ್ನು ಮಂಗಳವಾರಕ್ಕೆ ಮುಂದೂಡಿತು. ಪ್ರತಿಭಟನೆಗಳ ನಿರ್ವಹಣೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಸೂಚಿಸಿರುವ ಮಾರ್ಗಸೂಚಿಗಳ ಅನುಸಾರ ದೆಹಲಿ ಪೊಲೀಸರು ಯಾವುದೇ ನಿಯಮಗಳನ್ನು ರೂಪಿಸಿರುವರೇ ಎಂಬುದನ್ನು ತಿಳಿಸುವಂತೆ ಕೇಂದ್ರಕ್ಕೆ ಸೂಚಿಸಿತು. ಅರ್ಜಿದಾರರ ಪರ ಹಿರಿಯ ವಕೀಲೆ ನಂದಿತಾ ರಾವ್ ವಾದ ಮಂಡಿಸಿ, ಶಾಂತಿಯುತವಾಗಿ ಪ್ರತಿಭಟಿಸುವ ವಿದ್ಯಾರ್ಥಿಗಳ ಮೇಲೆ ನಿರಂತರ ಕಣ್ಗಾವಲು ನಡೆಸುವುದು ಅತಿಕ್ರಮಣಕಾರಿ ಹಾಗೂ ಕಾನೂನುಬಾಹಿರ ಎಂದು ಹೇಳಿದರು. ಸಾರ್ವಜನಿಕ ಸ್ಥಳದಲ್ಲಿದ್ದರೂ ನಾಗರಿಕರು ತಮ್ಮ ಗೌಪ್ಯತೆಯ ಹಕ್ಕನ್ನು ಕಳೆದುಕೊಳ್ಳುವುದಿಲ್ಲ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ತುಷಾರ್ ಮೆಹ್ತಾ, ಜಂತರ್ ಮಂತರ್ ನಲ್ಲಿ ನಡೆಯುವ ಎಲ್ಲ ಪ್ರತಿಭಟನೆಗಳ ವೀಡಿಯೋಗ್ರಫಿ ಸಾಮಾನ್ಯ ಕ್ರಮವಾಗಿದೆ ಎಂದು ತಿಳಿಸಿದರು. ಜಂತರ್ ಮಂತರ್ ನಲ್ಲಿ ಪ್ರತಿದಿನ ಯಾವುದಾದರೂ ಪ್ರತಿಭಟನೆ ನಡೆಯುತ್ತದೆ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಅವುಗಳ ವೀಡಿಯೋಗ್ರಫಿ ಮಾಡಲಾಗುತ್ತದೆ. ಇದರಲ್ಲಿ ಗೂಢಚಾರಿಕೆ ಅಥವಾ ಕಣ್ಗಾವಲು ಎಂಬ ಪ್ರಶ್ನೆಯೇ ಇಲ್ಲ ಎಂದು ಅವರು ಹೇಳಿದರು. ಪ್ರತಿಭಟನೆಯಲ್ಲಿ ಭಾಗವಹಿಸುವ ನೂರಾರು ಜನರು ಪ್ರತಿದಿನ ಮೊಬೈಲ್ ಗಳಲ್ಲಿ ವೀಡಿಯೋ ಮತ್ತು ರೀಲ್ಸ್ ಗಳನ್ನು ತಯಾರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಅಂತಹ ಸಂದರ್ಭದಲ್ಲಿ ಸರ್ಕಾರದ ವೀಡಿಯೋಗ್ರಫಿಯನ್ನು ಕಣ್ಗಾವಲು ಎಂದು ಕರೆಯಲು ಸಾಧ್ಯವಿಲ್ಲ ಎಂದೂ ಅವರು ವಾದಿಸಿದರು. ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಅವರು ಈ ಅರ್ಜಿ ಅಗತ್ಯವಿಲ್ಲದ, ಕೇವಲ ತಾತ್ವಿಕ ಅಥವಾ ಅನಗತ್ಯ ಸಾರ್ವಜನಿಕ ಹಿತಾಸಕ್ತಿ ಅರ್ಜಿಎಂದೂ ಅಭಿಪ್ರಾಯಪಟ್ಟರು. ಜಂತರ್ ಮಂತರ್ ನಲ್ಲಿ ಕಾಕ್ರೋಚ್‌ ಜನತಾ ಪಾರ್ಟಿ (CJP)ಯು ಜೂನ್ 20ರಿಂದ ಪ್ರತಿಭಟನೆ ನಡೆಸುತ್ತಿದೆ. ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (NEET) ಸೇರಿದಂತೆ ವಿವಿಧ ಪರೀಕ್ಷೆಗಳಲ್ಲಿನ ಅಕ್ರಮಗಳಿಗೆ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂದು ಸಂಘಟನೆ ಆಗ್ರಹಿಸಿದೆ. ಪರಿಸರ ಹೋರಾಟಗಾರ ಸೋನಮ್ ವಾಂಗ್ಚುಕ್ ಜೂನ್ 28ರಂದು ಪ್ರತಿಭಟನೆಯಲ್ಲಿ ಸೇರಿದ್ದು, ಅಂದಿನಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ವಕೀಲ ಸುಭಾಷ್ ಚಂದ್ರನ್ ಕೆ.ಆರ್. ಅವರ ಮೂಲಕ ಸಲ್ಲಿಸಿರುವ ಅರ್ಜಿಯಲ್ಲಿ, ಶಾಂತಿಯುತ ಪ್ರತಿಭಟನಾಕಾರರ ಮೇಲೆ ನಿರಂತರ ಮತ್ತು ಸಾಮೂಹಿಕ ಕಣ್ಗಾವಲು ಸಂವಿಧಾನಬಾಹಿರವಾಗಿದೆ ಎಂದು ಘೋಷಿಸುವಂತೆ ಕೋರಲಾಗಿದೆ. ಸಾರ್ವಜನಿಕ ಸುವ್ಯವಸ್ಥೆಗೆ ನೈಜ ಮತ್ತು ಸನ್ನಿಹಿತ ಅಪಾಯವಿಲ್ಲದಿದ್ದರೆ ಜಂತರ್ ಮಂತರ್ ನಲ್ಲಿ ಸಾಮೂಹಿಕ ಛಾಯಾಗ್ರಹಣ, ವೀಡಿಯೋಗ್ರಫಿ ಮತ್ತು ಕಣ್ಗಾವಲನ್ನು ತಕ್ಷಣ ನಿಲ್ಲಿಸುವಂತೆ ಆದೇಶ ನೀಡಬೇಕೆಂದೂ ಮನವಿ ಮಾಡಲಾಗಿದೆ. ಅರ್ಜಿಯೊಂದಿಗೆ ಶಾಶ್ವತ ಕಣ್ಗಾವಲು ಗೋಪುರ ಹಾಗೂ ಪೊಲೀಸ್ ಸಿಬ್ಬಂದಿ ನಿರಂತರವಾಗಿ ಛಾಯಾಚಿತ್ರ ಮತ್ತು ವೀಡಿಯೋಗಳನ್ನು ದಾಖಲಿಸುತ್ತಿರುವ ಚಿತ್ರಗಳನ್ನು ಸಲ್ಲಿಸಲಾಗಿದೆ. ಪ್ರತಿಭಟನಾ ಸ್ಥಳದಲ್ಲಿರುವ ಪ್ರತಿಯೊಬ್ಬರನ್ನೂ ಯಾವುದೇ ಅನುಮಾನವಿಲ್ಲದೆ ನಿರಂತರವಾಗಿ ಚಿತ್ರೀಕರಿಸಲಾಗುತ್ತಿದೆ. ಪ್ರತಿಭಟನೆಯಷ್ಟೇ ಅಲ್ಲದೆ, ಊಟ, ವಿಶ್ರಾಂತಿ, ವೈದ್ಯಕೀಯ ನೆರವು ಪಡೆಯುವುದು ಸೇರಿದಂತೆ ವೈಯಕ್ತಿಕ ಚಟುವಟಿಕೆಗಳನ್ನೂ ದಾಖಲಿಸಲಾಗುತ್ತಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ. ಪ್ರಕರಣದ ಮುಂದಿನ ವಿಚಾರಣೆ ಮಂಗಳವಾರ ನಡೆಯಲಿದೆ. ಜಂತರ್ ಮಂತರ್ ನಲ್ಲಿ ವೀಡಿಯೋಗ್ರಫಿ ಸುರಕ್ಷತೆಗಾಗಿ ನಡೆಸುವ ಸಾಮಾನ್ಯ ಕ್ರಮ ಎಂಬ ಕೇಂದ್ರದ ವಾದ ಮತ್ತು ಅದು ಶಾಂತಿಯುತ ಪ್ರತಿಭಟನಾಕಾರರ ಮೇಲೆ ನಡೆಯುತ್ತಿರುವ ಅತಿಕ್ರಮಣಕಾರಿ ಕಣ್ಗಾವಲು ಎಂಬ ಅರ್ಜಿದಾರರ ಆಕ್ಷೇಪವನ್ನು ಹೈಕೋರ್ಟ್ ಪರಿಶೀಲಿಸಲಿದೆ.

ವಾರ್ತಾ ಭಾರತಿ 21 Jul 2026 11:10 am

2 ಶಕ್ತಿ ಕೇಂದ್ರ ಪ್ಲಸ್ ಹೈಕಮಾಂಡ್ ! ಸಂಪುಟ ವಿಸ್ತರಣೆಯಲ್ಲಿ ಮಂತ್ರಿಗಿರಿ ಹಂಚಿಕೆ ಕಾಂಗ್ರೆಸ್‌ ವರಿಷ್ಠರ ಪಾಲಿಗೆ ಸವಾಲು

ಸಚಿವ ಸಂಪುಟ ವಿಸ್ತರಣೆ ಗೊಂದಲಕ್ಕೆ ತೆರೆ ಬೀಳುವ ಸಾಧ್ಯತೆ ಇದೆ. ಈಗಾಗಲೇ ಸಿಎಂ ಡಿಕೆ ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರು ದೆಹಲಿಗೆ ತೆರಳಿದ್ದಾರೆ. ದೆಹಲಿಯಲ್ಲಿ ಸಂಪುಟ ವಿಸ್ತರಣೆ ಗುರಿತಾಗಿ ಅವರು ಮಾತುಕತೆ ನಡೆಸಲಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಗುರುವಾರ ಸಂಪುಟ ವಿಸ್ತರಣೆ ಆಗುವ ಸಾಧ್ಯತೆ ಇದೆ. ಹಾಗಾಗಿ ಆಕಾಂಕ್ಷಿಗಳ ಲಾಬಿಯೂ ತೀವ್ರಗೊಂಡಿದೆ. ಯಾರಿಗೆಲ್ಲಾ ಅವಕಾಶ ಸಿಗಲಿದೆ ಎಂಬುವುದು ಸದ್ಯಕ್ಕೆ ಕುತೂಹಲ ಕೆರಳಿಸಿದೆ. ವಿವರ ಇಲ್ಲಿದೆ.

ವಿಜಯ ಕರ್ನಾಟಕ 21 Jul 2026 11:07 am

IAS Officers Transfer : ಸಿಎಂ ಕಚೇರಿಗೆ ನೂತನ ಅಧಿಕಾರಿಗಳ ಎಂಟ್ರಿ, 7 ಐಎಎಸ್‌ ಅಧಿಕಾರಿಗಳ ವರ್ಗಾವಣೆ

ರಾಜ್ಯ ಸರ್ಕಾರ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಲು ಮತ್ತು ಅಭಿವೃದ್ಧಿ ಕೆಲಸಗಳನ್ನಾ ತ್ವರಿತಗೊಳಿಸಲು ಮಹತ್ವದ ಹೆಜ್ಜೆಯನ್ನಿಟ್ಟಿದೆ. ಆಡಳಿತಾತ್ಮಕ ಹಿತದೃಷ್ಟಿಯಿಂದ ಸೋಮವಾರದಂದು ಪ್ರಮುಖ ಇಲಾಖೆಗಳ 7 ಮಂದಿ ಹಿರಿಯ ಐಎಎಸ್ ಅಧಿಕಾರಿಗಳನ್ನು ದಿಢೀರ್‌ ವರ್ಗಾವಣೆ ಮಾಡಿ ಅಧಿಕೃತ ಆದೇಶವನ್ನು ಹೊರಡಿಸಿದೆ. ಈ ವರ್ಗಾವಣೆಯು ಸರ್ಕಾರದ ವಿವಿಧ ಯೋಜನೆಗಳು ಹಾಗೂ ಇಲಾಖೆಗಳ ಕಾರ್ಯನಿರ್ವಹಣೆಯನ್ನು ಮತ್ತಷ್ಟು ಸುಗಮಗೊಳಿಸುವ ನಿಟ್ಟಿನಲ್ಲಿ ಮಾಡಲಾದ ಅತ್ಯಂತ

ಒನ್ ಇ೦ಡಿಯ 21 Jul 2026 11:03 am

Caste Certificate Row: \ಜಾತಿ ಪ್ರಮಾಣಪತ್ರದ ಸಮಸ್ಯೆಯಲ್ಲ... ಕಾಂಗ್ರೆಸ್ ಸರ್ಕಾರ ಸತ್ತಿರುವುದರ ಪ್ರಮಾಣ ಪತ್ರ!\

Caste Certificate Row: ಜಾತಿ, ನಿವಾಸಿ ಪ್ರಮಾಣಪತ್ರ ಮನೆ ಬಾಗಿಲಿಗೆ ತಲುಪಿಸುವ ಯೋಜನೆಯನ್ನು ಪರಿಚಯಿಸಿರುವುದಾಗಿ ಕರ್ನಾಟಕ ಕಾಂಗ್ರೆಸ್ ಸರ್ಕಾರವು ಹೇಳಿದೆ. ಕಚೇರಿ ಅಲೆದಾಟ ತಪ್ಪಿತು; ಜಾತಿ, ನಿವಾಸಿ ಪ್ರಮಾಣಪತ್ರ ಮನೆ ಬಾಗಿಲಿಗೆ ಬಂತು. ರಾಜ್ಯದಲ್ಲಿ ಮನೆ ಮನೆಗೆ ತೆರಳಿ ಉಚಿತವಾಗಿ ಜಾತಿ ಹಾಗೂ ಶಾಶ್ವತ ನಿವಾಸಿ ಪ್ರಮಾಣಪತ್ರ ವಿತರಿಸುವ ಸೇವೆಗೆ ಕರ್ನಾಟಕ ಸರ್ಕಾರವು ಚಾಲನೆ ನೀಡಿರುವುದಾಗಿ ಮುಖ್ಯಮಂತ್ರಿ

ಒನ್ ಇ೦ಡಿಯ 21 Jul 2026 10:35 am

ಪ್ರತಿಭಾವಂತ ಉದ್ಯೋಗಿಗಳ ವಲಸೆ; ಭಾರತದ ಆರ್ಥಿಕತೆಗೆ ವರವೇ ಅಥವಾ ಪ್ರತಿಭೆಯ ನಷ್ಟವೇ?

ಪ್ರತಿಭಾವಂತ ಉದ್ಯೋಗಿಗಳ ವಲಸೆಯನ್ನು ಕೇವಲ ಪ್ರತಿಭೆಯ ನಷ್ಟ ಎಂದು ನೋಡುವ ಕಾಲ ಮುಗಿದಿದೆ. ಅದೇ ರೀತಿ ಅದನ್ನು ಸಂಪೂರ್ಣ ಆರ್ಥಿಕ ವರ ಎಂದೂ ಹೇಳಲು ಸಾಧ್ಯವಿಲ್ಲ. ಇದರ ನಿಜವಾದ ಪರಿಣಾಮವು ಭಾರತವು ತನ್ನ ಯುವಜನತೆ ಮತ್ತು ಪ್ರತಿಭಾವಂತರಿಗೆ ಯಾವ ರೀತಿಯ ಅವಕಾಶಗಳನ್ನು ಸೃಷ್ಟಿಸುತ್ತದೆ ಎಂಬುದರ ಮೇಲೆ ಅವಲಂಬಿತವಾಗಿದೆ. ಇಂದಿನ ಜಾಗತೀಕರಣದ ಯುಗದಲ್ಲಿ ಪ್ರತಿಭೆ ಮತ್ತು ಕೌಶಲ್ಯಕ್ಕೆ ಭೌಗೋಳಿಕ ಗಡಿಗಳು ಅಡ್ಡಿಯಾಗುತ್ತಿಲ್ಲ. ಉತ್ತಮ ಶಿಕ್ಷಣ, ಹೆಚ್ಚಿನ ವೇತನ, ಅತ್ಯಾಧುನಿಕ ತಂತ್ರಜ್ಞಾನ, ಗುಣಮಟ್ಟದ ಜೀವನಮಟ್ಟ ಹಾಗೂ ವೃತ್ತಿ ಬೆಳವಣಿಗೆಯ ಅವಕಾಶಗಳನ್ನು ಹುಡುಕುತ್ತಾ ಲಕ್ಷಾಂತರ ಪ್ರತಿಭಾವಂತ ಭಾರತೀಯರು ವಿಶ್ವದ ವಿವಿಧ ರಾಷ್ಟ್ರಗಳಿಗೆ ವಲಸೆ ಹೋಗುತ್ತಿದ್ದಾರೆ. ಮತ್ತೊಂದೆಡೆ ಭಾರತವು ಜಾಗತಿಕ ಆರ್ಥಿಕತೆಯ ಪ್ರಮುಖ ಕೇಂದ್ರವಾಗಿ ಬೆಳೆಯುತ್ತಿರುವ ಕಾರಣ ಅನೇಕ ವಿದೇಶಿ ವೃತ್ತಿಪರರು, ತಾಂತ್ರಿಕ ತಜ್ಞರು ಮತ್ತು ಸಂಶೋಧಕರು ಭಾರತದಲ್ಲಿಯೂ ಉದ್ಯೋಗ ಹಾಗೂ ಹೂಡಿಕೆ ಅವಕಾಶಗಳನ್ನು ಅರಸಿಕೊಂಡು ಬರುತ್ತಿದ್ದಾರೆ. ಹೀಗಾಗಿ ಕಾರ್ಮಿಕರ ಹಾಗೂ ಪ್ರತಿಭಾವಂತ ಉದ್ಯೋಗಿಗಳ ವಲಸೆ ಇಂದು ಏಕಮುಖ ಪ್ರಕ್ರಿಯೆಯಾಗಿಲ್ಲ; ಅದು ಜಾಗತಿಕ ಆರ್ಥಿಕ ವ್ಯವಸ್ಥೆಯ ಅವಿಭಾಜ್ಯ ಅಂಗವಾಗಿದೆ. ಈ ಬೆಳವಣಿಗೆ ಭಾರತದ ಆರ್ಥಿಕತೆಗೆ ವರವೇ ಅಥವಾ ಪ್ರತಿಭೆಯ ನಷ್ಟವೇ ಎಂಬ ಪ್ರಶ್ನೆ ಇಂದಿನ ಸಂದರ್ಭದಲ್ಲಿ ಅತ್ಯಂತ ಪ್ರಸ್ತುತವಾಗಿದೆ. ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಯುವಜನಸಂಖ್ಯೆ ಹೊಂದಿರುವ ರಾಷ್ಟ್ರಗಳಲ್ಲಿ ಒಂದಾಗಿದೆ. ಪ್ರತೀ ವರ್ಷ ಸಾವಿರಾರು ಇಂಜಿನಿಯರ್‌ಗಳು, ವೈದ್ಯರು, ವಿಜ್ಞಾನಿಗಳು, ಚಾರ್ಟರ್ಡ್ ಅಕೌಂಟೆಂಟ್‌ಗಳು, ಮಾಹಿತಿ ತಂತ್ರಜ್ಞಾನ ತಜ್ಞರು, ಕೃತಕ ಬುದ್ಧಿಮತ್ತೆ ಪರಿಣಿತರು, ಶಿಕ್ಷಕರು ಮತ್ತು ಸಂಶೋಧಕರು ಉನ್ನತ ಶಿಕ್ಷಣ ಅಥವಾ ಉದ್ಯೋಗಕ್ಕಾಗಿ ಅಮೆರಿಕ, ಕೆನಡಾ, ಆಸ್ಟ್ರೇಲಿಯ, ಯುನೈಟೆಡ್ ಕಿಂಗ್ಡಮ್, ಜರ್ಮನಿ, ಜಪಾನ್, ಸಿಂಗಾಪುರ್ ಹಾಗೂ ಮಧ್ಯಪ್ರಾಚ್ಯದ ರಾಷ್ಟ್ರಗಳಿಗೆ ತೆರಳುತ್ತಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಜಾಗತಿಕ ಮಟ್ಟದಲ್ಲಿ ಭಾರತೀಯ ಪ್ರತಿಭೆಗೆ ಹೆಚ್ಚಿದ ಬೇಡಿಕೆ ಈ ವಲಸೆಯ ವೇಗವನ್ನು ಇನ್ನಷ್ಟು ಹೆಚ್ಚಿಸಿದೆ. ವಿಶೇಷವಾಗಿ ಮಾಹಿತಿ ತಂತ್ರಜ್ಞಾನ, ಆರೋಗ್ಯ, ಹಣಕಾಸು ಸೇವೆಗಳು ಮತ್ತು ವೈಜ್ಞಾನಿಕ ಸಂಶೋಧನಾ ಕ್ಷೇತ್ರಗಳಲ್ಲಿ ಭಾರತೀಯ ವೃತ್ತಿಪರರು ಪ್ರಮುಖ ಸ್ಥಾನವನ್ನು ಅಲಂಕರಿಸುತ್ತಿದ್ದಾರೆ. ಭಾರತೀಯ ಪ್ರತಿಭೆಗಳ ವಲಸೆಗೆ ಹಲವು ಕಾರಣಗಳಿವೆ. ಉತ್ತಮ ವೇತನ, ವೃತ್ತಿ ಭದ್ರತೆ, ಜಾಗತಿಕ ಮಟ್ಟದ ಸಂಶೋಧನಾ ಸೌಲಭ್ಯಗಳು, ತಂತ್ರಜ್ಞಾನ ಅಭಿವೃದ್ಧಿಗೆ ಅನುಕೂಲಕರ ವಾತಾವರಣ, ಪ್ರತಿಭೆಗೆ ಸಿಗುವ ಗೌರವ ಹಾಗೂ ಜೀವನಮಟ್ಟವನ್ನು ಸುಧಾರಿಸಿಕೊಳ್ಳುವ ಅವಕಾಶಗಳು ಪ್ರಮುಖ ಕಾರಣಗಳಾಗಿವೆ. ಅನೇಕ ದೇಶಗಳು ಕೌಶಲ್ಯಾಧಾರಿತ ವಲಸೆ ನೀತಿಗಳನ್ನು ಜಾರಿಗೆ ತಂದಿರುವುದರಿಂದ ಭಾರತೀಯ ಯುವಕರಿಗೆ ಜಾಗತಿಕ ಉದ್ಯೋಗ ಮಾರುಕಟ್ಟೆಯ ಬಾಗಿಲು ಇನ್ನಷ್ಟು ತೆರೆದಿದೆ. ಇದರ ಪರಿಣಾಮವಾಗಿ ವಿಶ್ವದ ಅನೇಕ ಪ್ರಮುಖ ಕಂಪೆನಿಗಳು ಹಾಗೂ ಸಂಶೋಧನಾ ಸಂಸ್ಥೆಗಳಲ್ಲಿ ಭಾರತೀಯರು ನಾಯಕತ್ವದ ಸ್ಥಾನಗಳನ್ನು ಅಲಂಕರಿಸುತ್ತಿದ್ದಾರೆ. ಈ ವಲಸೆಯು ಭಾರತದ ಆರ್ಥಿಕತೆಗೆ ಹಲವು ರೀತಿಯ ಲಾಭಗಳನ್ನು ತಂದುಕೊಡುತ್ತಿದೆ. ವಿದೇಶಗಳಲ್ಲಿ ಕೆಲಸ ಮಾಡುತ್ತಿರುವ ಭಾರತೀಯರು ತಮ್ಮ ಕುಟುಂಬಗಳಿಗೆ ಕಳುಹಿಸುವ ಹಣವು ಭಾರತದ ವಿದೇಶಿ ವಿನಿಮಯ ಸಂಗ್ರಹವನ್ನು ಬಲಪಡಿಸುವ ಪ್ರಮುಖ ಮೂಲವಾಗಿದೆ. ಈ ಹಣವು ಕುಟುಂಬಗಳ ಜೀವನಮಟ್ಟ ಸುಧಾರಿಸುವುದರ ಜೊತೆಗೆ ಶಿಕ್ಷಣ, ಆರೋಗ್ಯ, ಮನೆ ನಿರ್ಮಾಣ ಹಾಗೂ ಸಣ್ಣ ಉದ್ಯಮಗಳಿಗೆ ಬಂಡವಾಳವಾಗಿ ಬಳಕೆಯಾಗುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ಅನೇಕ ಕುಟುಂಬಗಳ ಆರ್ಥಿಕ ಸ್ಥಿರತೆಗೆ ಈ ಹಣ ಮಹತ್ತರ ಪಾತ್ರವಹಿಸಿದೆ. ವಿದೇಶಿ ಹಣ ರವಾನೆ ದೇಶದ ಬಳಕೆ ವೆಚ್ಚವನ್ನು ಹೆಚ್ಚಿಸುವುದರೊಂದಿಗೆ ಸ್ಥಳೀಯ ವ್ಯಾಪಾರ ಮತ್ತು ಸೇವಾ ವಲಯಕ್ಕೂ ಉತ್ತೇಜನ ನೀಡುತ್ತದೆ. ಪ್ರತಿಭಾವಂತರ ವಲಸೆಯಿಂದ ಹಣ ಮಾತ್ರವಲ್ಲ, ಜ್ಞಾನ ಮತ್ತು ಅನುಭವವೂ ಭಾರತಕ್ಕೆ ಮರಳಿ ಬರುತ್ತದೆ. ವಿದೇಶಗಳಲ್ಲಿ ಕೆಲಸ ಮಾಡಿದ ಭಾರತೀಯರು ಹೊಸ ತಂತ್ರಜ್ಞಾನ, ಉತ್ತಮ ನಿರ್ವಹಣಾ ವಿಧಾನಗಳು, ಜಾಗತಿಕ ವ್ಯವಹಾರ ಸಂಸ್ಕೃತಿ ಹಾಗೂ ಆಧುನಿಕ ಸಂಶೋಧನಾ ಅನುಭವವನ್ನು ಭಾರತಕ್ಕೆ ತರುತ್ತಾರೆ. ಅನೇಕರು ಭಾರತದಲ್ಲಿ ಸ್ಟಾರ್ಟ್‌ಅಪ್‌ಗಳನ್ನು ಆರಂಭಿಸುತ್ತಾರೆ ಅಥವಾ ಹೊಸ ಉದ್ಯಮಗಳಲ್ಲಿ ಹೂಡಿಕೆ ಮಾಡುತ್ತಾರೆ. ಇದರಿಂದ ಉದ್ಯೋಗಾವಕಾಶಗಳು ಹೆಚ್ಚುವುದರ ಜೊತೆಗೆ ನವೀನತೆ ಮತ್ತು ತಂತ್ರಜ್ಞಾನ ಅಭಿವೃದ್ಧಿಗೂ ಉತ್ತೇಜನ ಸಿಗುತ್ತದೆ. ಜಾಗತಿಕ ಅನುಭವ ಹೊಂದಿರುವ ಭಾರತೀಯರು ದೇಶದ ಕೈಗಾರಿಕೆಗಳನ್ನು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಾತ್ಮಕವಾಗಿಸಲು ಸಹಕಾರಿಯಾಗುತ್ತಾರೆ. ಭಾರತೀಯ ಪ್ರತಿಭೆಗಳು ವಿಶ್ವದ ಪ್ರಮುಖ ಸಂಸ್ಥೆಗಳಲ್ಲಿ ಸಾಧಿಸಿರುವ ಯಶಸ್ಸು ದೇಶದ ಪ್ರತಿಷ್ಠೆಯನ್ನು ಹೆಚ್ಚಿಸಿದೆ. ಗೂಗಲ್, ಮೈಕ್ರೋಸಾಫ್ಟ್, ಅಡೋಬ್, ಐಬಿಎಂ ಸೇರಿದಂತೆ ಅನೇಕ ಜಾಗತಿಕ ಸಂಸ್ಥೆಗಳಲ್ಲಿ ಭಾರತೀಯ ಮೂಲದ ನಾಯಕರು ಉನ್ನತ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ವಿಶ್ವದ ಪ್ರಮುಖ ವಿಶ್ವವಿದ್ಯಾನಿಲಯಗಳು ಮತ್ತು ಸಂಶೋಧನಾ ಸಂಸ್ಥೆಗಳಲ್ಲಿ ಭಾರತೀಯ ವಿಜ್ಞಾನಿಗಳು ಮತ್ತು ಸಂಶೋಧಕರು ಗಮನಾರ್ಹ ಸಾಧನೆ ಮಾಡುತ್ತಿದ್ದಾರೆ. ಇದು ಭಾರತದ ಶಿಕ್ಷಣ ವ್ಯವಸ್ಥೆ ಹಾಗೂ ಮಾನವ ಸಂಪನ್ಮೂಲದ ಗುಣಮಟ್ಟವನ್ನು ಜಾಗತಿಕ ಮಟ್ಟದಲ್ಲಿ ಗುರುತಿಸುವಂತೆ ಮಾಡಿದೆ. ಇಂತಹ ಸಾಧನೆಗಳು ವಿದೇಶಿ ಹೂಡಿಕೆದಾರರ ವಿಶ್ವಾಸವನ್ನೂ ಹೆಚ್ಚಿಸುತ್ತವೆ. ಆದರೆ ಈ ಚಿತ್ರಣದ ಇನ್ನೊಂದು ಮುಖವೂ ಇದೆ. ಪ್ರತಿಭಾವಂತ ಉದ್ಯೋಗಿಗಳ ನಿರಂತರ ವಲಸೆಯಿಂದ ದೇಶವು ತನ್ನ ಅತ್ಯಮೂಲ್ಯ ಮಾನವ ಸಂಪನ್ಮೂಲವನ್ನು ಕಳೆದುಕೊಳ್ಳುವ ಅಪಾಯ ಎದುರಿಸುತ್ತಿದೆ. ವೈದ್ಯರು, ವಿಜ್ಞಾನಿಗಳು, ಸಂಶೋಧಕರು ಹಾಗೂ ಉನ್ನತ ತಾಂತ್ರಿಕ ಪರಿಣಿತರು ವಿದೇಶಗಳಲ್ಲಿ ನೆಲೆಸಿದಾಗ ದೇಶದ ಆರೋಗ್ಯ, ಶಿಕ್ಷಣ ಮತ್ತು ಸಂಶೋಧನಾ ಕ್ಷೇತ್ರಗಳಲ್ಲಿ ಪರಿಣಿತರ ಕೊರತೆ ಉಂಟಾಗುತ್ತದೆ. ಸಾರ್ವಜನಿಕ ಹಣದಿಂದ ಶಿಕ್ಷಣ ಪಡೆದ ಅನೇಕ ಪ್ರತಿಭೆಗಳು ದೇಶದಲ್ಲೇ ಸೇವೆ ಸಲ್ಲಿಸುವ ಬದಲು ವಿದೇಶಗಳಲ್ಲಿ ತಮ್ಮ ವೃತ್ತಿಯನ್ನು ಮುಂದುವರಿಸುವುದರಿಂದ ಸರಕಾರದ ಶಿಕ್ಷಣ ಹೂಡಿಕೆಯ ಸಂಪೂರ್ಣ ಲಾಭ ದೇಶಕ್ಕೆ ದೊರೆಯುವುದಿಲ್ಲ. ವಿಶೇಷವಾಗಿ ಸಂಶೋಧನೆ ಮತ್ತು ನವೀನತೆಯ ಕ್ಷೇತ್ರದಲ್ಲಿ ಈ ಪ್ರತಿಭೆಯ ಹೊರಹರಿವು ದೀರ್ಘಾವಧಿಯಲ್ಲಿ ಸವಾಲಾಗಿ ಪರಿಣಮಿಸಬಹುದು. ಉತ್ತಮ ಸಂಶೋಧಕರು ಮತ್ತು ವಿಜ್ಞಾನಿಗಳು ವಿದೇಶಗಳಲ್ಲಿ ಕಾರ್ಯನಿರ್ವಹಿಸಿದರೆ ಹೊಸ ತಂತ್ರಜ್ಞಾನ ಅಭಿವೃದ್ಧಿ, ಪೇಟೆಂಟ್‌ಗಳು ಹಾಗೂ ಆವಿಷ್ಕಾರಗಳಲ್ಲಿ ಭಾರತ ನಿರೀಕ್ಷಿತ ವೇಗವನ್ನು ಸಾಧಿಸಲು ಕಷ್ಟವಾಗಬಹುದು. ಇದೇ ಕಾರಣಕ್ಕೆ ಬ್ರೇನ್ ಡ್ರೇನ್ ಎಂಬ ಪದವು ಇಂದಿಗೂ ಪ್ರಸ್ತುತವಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಅನೇಕ ಅರ್ಥಶಾಸ್ತ್ರಜ್ಞರು ಇದನ್ನು ಬ್ರೇನ್ ಸರ್ಕ್ಯುಲೇಶನ್ ಎಂದು ಕರೆಯುತ್ತಾರೆ. ಏಕೆಂದರೆ ವಿದೇಶಗಳಲ್ಲಿ ನೆಲೆಸಿರುವ ಭಾರತೀಯರು ತಮ್ಮ ಜ್ಞಾನ, ಬಂಡವಾಳ, ಸಂಪರ್ಕಗಳು ಹಾಗೂ ತಂತ್ರಜ್ಞಾನವನ್ನು ವಿವಿಧ ರೀತಿಯಲ್ಲಿ ಭಾರತಕ್ಕೆ ತಲುಪಿಸುತ್ತಿದ್ದಾರೆ. ಇನ್ನೊಂದೆಡೆ ಭಾರತವೂ ಜಾಗತಿಕ ಪ್ರತಿಭೆಗಳನ್ನು ಆಕರ್ಷಿಸುತ್ತಿದೆ. ಅನೇಕ ವಿದೇಶಿ ತಜ್ಞರು ಭಾರತದಲ್ಲಿನ ಬಹುರಾಷ್ಟ್ರೀಯ ಕಂಪೆನಿಗಳು, ಸಂಶೋಧನಾ ಸಂಸ್ಥೆಗಳು ಮತ್ತು ಉತ್ಪಾದನಾ ವಲಯಗಳಲ್ಲಿ ಕಾರ್ಯನಿರ್ವ ಹಿಸುತ್ತಿದ್ದಾರೆ. ಅವರ ಆಗಮನದಿಂದ ಅತ್ಯಾಧುನಿಕ ತಂತ್ರಜ್ಞಾನ, ಜಾಗತಿಕ ಗುಣಮಟ್ಟದ ಕಾರ್ಯವಿಧಾನ, ಹೊಸ ಕೌಶಲ್ಯ ಹಾಗೂ ನಿರ್ವಹಣಾ ಅನುಭವ ಭಾರತೀಯ ಸಂಸ್ಥೆಗಳಿಗೆ ಲಭ್ಯವಾಗುತ್ತಿದೆ. ವಿದೇಶಿ ಪರಿಣಿತರ ಸಹಯೋಗದಿಂದ ಭಾರತೀಯ ಉದ್ಯೋಗಿಗಳ ಕೌಶಲ್ಯವೂ ವೃದ್ಧಿಯಾಗುತ್ತಿದೆ. ಇದರ ಜೊತೆಗೆ ಭಾರತದಲ್ಲಿ ವಿದೇಶಿ ಹೂಡಿಕೆ ಹೆಚ್ಚಲು ಸಹ ಈ ಪ್ರತಿಭೆಗಳ ಪಾತ್ರ ಮಹತ್ವದ್ದಾಗಿದೆ. ಆದರೂ ವಿದೇಶಿ ವೃತ್ತಿಪರರ ಆಗಮನಕ್ಕೂ ಕೆಲವು ಸವಾಲುಗಳಿವೆ. ಕೆಲವು ಉನ್ನತ ಹುದ್ದೆಗಳಲ್ಲಿ ವಿದೇಶಿ ಪರಿಣಿತರಿಗೆ ಆದ್ಯತೆ ಸಿಕ್ಕರೆ ಸ್ಥಳೀಯ ಪ್ರತಿಭೆಗಳ ಅವಕಾಶಗಳು ಸೀಮಿತವಾಗಬಹುದು. ಆದ್ದರಿಂದ ಜಾಗತಿಕ ಪ್ರತಿಭೆಯನ್ನು ಸ್ವಾಗತಿಸುವುದರ ಜೊತೆಗೆ ಸ್ಥಳೀಯ ಮಾನವ ಸಂಪನ್ಮೂಲದ ಅಭಿವೃದ್ಧಿಗೆ ಸಮಾನ ಆದ್ಯತೆ ನೀಡುವುದು ಅಗತ್ಯವಾಗಿದೆ. ಭಾರತದ ಮುಂದಿರುವ ನಿಜವಾದ ಸವಾಲು ಪ್ರತಿಭಾವಂತರ ವಲಸೆಯನ್ನು ತಡೆಯುವುದಲ್ಲ; ಬದಲಾಗಿ ಪ್ರತಿಭೆ ದೇಶದ ಅಭಿವೃದ್ಧಿಗೆ ಹೇಗೆ ನಿರಂತರವಾಗಿ ಕೊಡುಗೆ ನೀಡುವಂತೆ ಮಾಡುವುದು ಎಂಬುದಾಗಿದೆ. ವಿಶ್ವಮಟ್ಟದ ಸಂಶೋಧನಾ ಕೇಂದ್ರಗಳು, ಸ್ಪರ್ಧಾತ್ಮಕ ವೇತನ, ಉತ್ತಮ ಉದ್ಯೋಗ ಪರಿಸರ, ಕೈಗಾರಿಕೆ-ವಿಶ್ವವಿದ್ಯಾನಿಲಯಗಳ ಸಹಭಾಗಿತ್ವ, ನವೀನ ಉದ್ಯಮಗಳಿಗೆ ಪ್ರೋತ್ಸಾಹ ಹಾಗೂ ಯುವ ಸಂಶೋಧಕರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಿದರೆ ಅನೇಕ ಪ್ರತಿಭೆಗಳು ಭಾರತದಲ್ಲಿಯೇ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಆಸಕ್ತಿ ತೋರುತ್ತಾರೆ. ವಿದೇಶಗಳಲ್ಲಿ ನೆಲೆಸಿರುವ ಭಾರತೀಯರೊಂದಿಗೆ ಜ್ಞಾನ, ತಂತ್ರಜ್ಞಾನ ಮತ್ತು ಹೂಡಿಕೆಯ ಸಂಬಂಧವನ್ನು ಮತ್ತಷ್ಟು ಬಲಪಡಿಸುವ ನೀತಿಗಳು ದೇಶದ ಅಭಿವೃದ್ಧಿಗೆ ಹೊಸ ದಿಕ್ಕನ್ನು ನೀಡಬಹುದು. ಇಂದಿನ ಜಾಗತಿಕ ಆರ್ಥಿಕತೆಯಲ್ಲಿ ಪ್ರತಿಭೆಯ ಚಲನೆಯು ಅನಿವಾರ್ಯ. ಅದನ್ನು ಕೇವಲ ನಷ್ಟವೆಂದು ನೋಡುವುದೂ ಸರಿಯಲ್ಲ, ಕೇವಲ ಲಾಭವೆಂದು ಹೇಳುವುದೂ ಸಮಂಜಸವಲ್ಲ. ವಿದೇಶಿ ಹಣ ರವಾನೆ, ಜ್ಞಾನ ವರ್ಗಾವಣೆ, ಜಾಗತಿಕ ಹೂಡಿಕೆ ಮತ್ತು ಭಾರತದ ಪ್ರತಿಷ್ಠೆ ಹೆಚ್ಚಿಸುವಂತಹ ಮಹತ್ವದ ಲಾಭಗಳು ಒಂದೆಡೆ ಇದ್ದರೆ, ಪರಿಣಿತ ಮಾನವ ಸಂಪನ್ಮೂಲದ ಕೊರತೆ, ಸಂಶೋಧನಾ ಸಾಮರ್ಥ್ಯದ ಕುಸಿತ ಮತ್ತು ಶಿಕ್ಷಣ ಹೂಡಿಕೆಯ ಸೀಮಿತ ಪ್ರತಿಫಲ ಮತ್ತೊಂದೆಡೆ ಕಾಣಿಸಿಕೊಳ್ಳುತ್ತವೆ. ಆದ್ದರಿಂದ ಭಾರತದ ಗುರಿ ಪ್ರತಿಭೆಯನ್ನು ಉಳಿಸಿಕೊಳ್ಳುವುದು ಮಾತ್ರವಲ್ಲ, ಪ್ರತಿಭೆಯೊಂದಿಗೆ ನಿರಂತರ ಸಂಪರ್ಕವನ್ನು ಉಳಿಸಿಕೊಳ್ಳುವುದು ಆಗಿರಬೇಕು. ದೇಶದ ಒಳಗೆ ಉತ್ತಮ ಅವಕಾಶಗಳನ್ನು ಸೃಷ್ಟಿಸುವುದರ ಜೊತೆಗೆ ವಿಶ್ವದಾದ್ಯಂತ ಇರುವ ಭಾರತೀಯ ಪ್ರತಿಭೆಯನ್ನು ರಾಷ್ಟ್ರದ ಅಭಿವೃದ್ಧಿಯಲ್ಲಿ ಪಾಲುದಾರರನ್ನಾಗಿ ಮಾಡಿದಾಗ ಮಾತ್ರ ಪ್ರತಿಭಾವಂತ ಉದ್ಯೋಗಿಗಳ ವಲಸೆಯು ಭಾರತದ ಆರ್ಥಿಕತೆಗೆ ನಿಜವಾದ ವರವಾಗಲಿದೆ; ಇಲ್ಲದಿದ್ದರೆ ಅದು ದೀರ್ಘಾವಧಿಯಲ್ಲಿ ಪ್ರತಿಭೆಯ ನಷ್ಟವಾಗಿ ಪರಿಣಮಿಸುವ ಅಪಾಯವನ್ನು ನಾವು ನಿರ್ಲಕ್ಷಿಸಲು ಸಾಧ್ಯವಿಲ್ಲ. ಕೊನೆಯಲ್ಲಿ, ಪ್ರತಿಭಾವಂತ ಉದ್ಯೋಗಿಗಳ ವಲಸೆಯನ್ನು ಕೇವಲ ಪ್ರತಿಭೆಯ ನಷ್ಟ ಎಂದು ನೋಡುವ ಕಾಲ ಮುಗಿದಿದೆ. ಅದೇ ರೀತಿ ಅದನ್ನು ಸಂಪೂರ್ಣ ಆರ್ಥಿಕ ವರ ಎಂದೂ ಹೇಳಲು ಸಾಧ್ಯವಿಲ್ಲ. ಇದರ ನಿಜವಾದ ಪರಿಣಾಮವು ಭಾರತವು ತನ್ನ ಯುವಜನತೆ ಮತ್ತು ಪ್ರತಿಭಾವಂತರಿಗೆ ಯಾವ ರೀತಿಯ ಅವಕಾಶಗಳನ್ನು ಸೃಷ್ಟಿಸುತ್ತದೆ ಎಂಬುದರ ಮೇಲೆ ಅವಲಂಬಿತವಾಗಿದೆ. ವಿಶ್ವದ ಅತಿದೊಡ್ಡ ಯುವಜನಸಂಖ್ಯೆಯನ್ನು ಹೊಂದಿರುವ ಭಾರತವು ತನ್ನ ಭಾರತೀಯ ಯುವಕರಿಗೆ ಗುಣಮಟ್ಟದ ಶಿಕ್ಷಣ, ವಿಶ್ವಮಟ್ಟದ ಸಂಶೋಧನಾ ಸೌಲಭ್ಯಗಳು, ನವೀನ ಉದ್ಯಮಗಳಿಗೆ ಪ್ರೋತ್ಸಾಹ, ಸಮರ್ಪಕ ವೇತನ ಮತ್ತು ಪಾರದರ್ಶಕ ಉದ್ಯೋಗ ವ್ಯವಸ್ಥೆಯನ್ನು ಒದಗಿಸಲು ಸಾಧ್ಯವಾದರೆ, ಪ್ರತಿಭೆಯ ವಲಸೆಯನ್ನು ರಾಷ್ಟ್ರದ ಅಭಿವೃದ್ಧಿಯ ಶಕ್ತಿಯನ್ನಾಗಿ ಪರಿವರ್ತಿಸಬಹುದು. ವಿದೇಶಗಳಲ್ಲಿ ಸಾಧನೆ ಮಾಡುತ್ತಿರುವ ಭಾರತೀಯ ಯುವಕರು ಕೇವಲ ತಮ್ಮ ವೈಯಕ್ತಿಕ ಯಶಸ್ಸಿನ ಪ್ರತೀಕಗಳಲ್ಲ; ಅವರು ಭಾರತದ ಆರ್ಥಿಕ ಬೆಳವಣಿಗೆ, ತಂತ್ರಜ್ಞಾನ ಪ್ರಗತಿ ಮತ್ತು ಜಾಗತಿಕ ಪ್ರತಿಷ್ಠೆಯನ್ನು ಹೆಚ್ಚಿಸುವ ಅಮೂಲ್ಯ ಸಂಪನ್ಮೂಲಗಳಾಗಿದ್ದಾರೆ. ಆದ್ದರಿಂದ ಭಾರತದ ಗುರಿ ಪ್ರತಿಭೆಯನ್ನು ತಡೆಯುವುದಲ್ಲ, ಭಾರತೀಯ ಯುವಕರ ಪ್ರತಿಭೆಯನ್ನು ದೇಶದ ಅಭಿವೃದ್ಧಿಯೊಂದಿಗೆ ನಿರಂತರವಾಗಿ ಜೋಡಿಸುವುದಾಗಿರಬೇಕು. ಆಗ ಮಾತ್ರ ಜಾಗತಿಕ ಪ್ರತಿಭಾ ಚಲನೆಯ ಈ ಯುಗದಲ್ಲಿ ಭಾರತವು ಕೇವಲ ಮಾನವ ಸಂಪನ್ಮೂಲವನ್ನು ರಫ್ತು ಮಾಡುವ ರಾಷ್ಟ್ರವಾಗಿ ಉಳಿಯದೆ, ಜ್ಞಾನ, ನಾವೀನ್ಯತೆ ಮತ್ತು ಆರ್ಥಿಕ ನಾಯಕತ್ವದಲ್ಲಿ ವಿಶ್ವಕ್ಕೆ ದಿಕ್ಕು ತೋರುವ ರಾಷ್ಟ್ರವಾಗಿ ಹೊರಹೊಮ್ಮಲಿದೆ.

ವಾರ್ತಾ ಭಾರತಿ 21 Jul 2026 10:35 am

8ನೇ ತರಗತಿಯಲ್ಲಿ ಕಾಪಿ ಹೊಡೆದು ಸಿಕ್ಕಿಬಿದ್ದಿದ್ದ ಸೆಕ್ಯೂರಿಟಿ ಗಾರ್ಡ್ ಮಗ, ಇಂದು CA ಪರೀಕ್ಷೆಯಲ್ಲಿ AIR 25ನೇ ರ್‍ಯಾಂಕ್

ಜೀವನದಲ್ಲಿ ಎಷ್ಟೇ ಬಡತನ, ಅಥವಾ ಎಂತಹದ್ದೇ ಕಠಿಣ ಪರಿಸ್ಥಿತಿಯಿದ್ದರೂ ಸಾಧಿಸಿಬೇಕು ಎನ್ನುವ ದೃಢಮನಸ್ಸಿದ್ದರೆ ಸಾಕು ಎನನ್ನಾದರೂ ಸಾಧಿಸಬಹುದು ಎನ್ನುವುದಕ್ಕೆ ಅಮಾನ್‌ ಕಾರ್ನ್‌ ಎನ್ನುವ ಹುಡುಗನೇ ಒಂದು ಒಳ್ಳೆಯ ಉದಾಹರಣೆ. ಒಂದು ಚಿಕ್ಕ ಅದರಲ್ಲೂ ಕೇವಲ ಒಂದು ಕೊಠಡಿ ಇರುವ ಬಾಡಿಗೆ ಮನೆಯಲ್ಲಿ ಈ ಹುಡುಗ ತನ್ನ ಬಾಲ್ಯವನ್ನಾ ಕಳೆದಿರುತ್ತಾನೆ. ದಿನನಿತ್ಯದ ಖರ್ಚುಗಳನ್ನಾ ಸೇರಿದಂತೆ, ಪ್ರತಿಯೊಂದು ರೂಪಾಯಿಗೂ ಲೆಕ್ಕಾಚಾರ

ಒನ್ ಇ೦ಡಿಯ 21 Jul 2026 10:24 am

Gold Rate Rise: ಕಚ್ಚಾ ತೈಲ ಬೆಲೆ ಇಳಿಕೆ ಪರಿಣಾಮ ದಿಢೀರ್‌ ಏರಿದ ಚಿನ್ನದ ಬೆಲೆ : ಬೆಳ್ಳಿ ಬೆಲೆ ತಟಸ್ಥ

ಅಮೆರಿಕ ಹಾಗೂ ಇರಾನ್ ಬಿಕ್ಕಟ್ಟು ಶಾಂತವಾಗಿದ್ದು, ನಿನ್ನೆಯಿಂದ ಕಚ್ಚಾ ತೈಲ ಬೆಲೆಗಳು ಇಳಿಕೆಯಾಗಿವೆ. ಹೂಡಿಕೆದಾರರು ಸುರಕ್ಷಿತ ಹೂಡಿಕೆಯಾದ ಚಿನ್ನದತ್ತ ಮುಖ ಮಾಡಿದ್ದು, ಚಿನ್ನದ ದಿಢೀರ್ ಬೆಲೆ ಏರಿಕೆಗೆ ಕಾರಣವಾಗಿದೆ. ಬೆಳ್ಳಿ ಬೆಲೆ ತಟಸ್ಥವಾಗಿದೆ.

ವಿಜಯ ಕರ್ನಾಟಕ 21 Jul 2026 10:21 am

ಬೀದರ್‌ನಲ್ಲಿ ಮೂರ್ನಾಲ್ಕು ದಿನಗಳಿಂದ ಭರ್ಜರಿ ಮಳೆ: ಬಾಡುತ್ತಿದ್ದ ಸೋಯಾ, ತೊಗರಿ ಬೆಳೆಗೆ ಹೊಸ ಜೀವ, ರೈತರ ಮೊಗದಲ್ಲಿ ಮಂದಹಾಸ!

ತೀವ್ರ ಮಳೆ ಕೊರತೆ ಹಾಗೂ ಬರದ ಭೀತಿಯಿಂದ ಕಂಗೆಟ್ಟಿದ್ದ ಬೀದರ್ ಜಿಲ್ಲೆಯಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಭರ್ಜರಿ ಮಳೆಯಾಗುತ್ತಿದೆ. ಅದರಲ್ಲೂ ವಿಶೇಷವಾಗಿ ಜುಲೈ 19ರ ರಾತ್ರಿ ಆರಂಭವಾದ ಮಳೆ 24 ಗಂಟೆಗಳಲ್ಲಿ 16.5 ಮಿ.ಮೀ ಮಳೆ ದಾಖಲಿಸಿದ್ದು, ಈ ಮುಂಗಾರಿನ ಗರಿಷ್ಠ ಮಳೆಯಾಗಿದೆ. ಇದು ಸದ್ಯ ನೀರಿಲ್ಲದೆ ಜಮೀನುಗಳಲ್ಲೇ ಒಣಗಿ ಹೋಗುವ ಹಂತ ತಲುಪಿದ್ದ ಸೋಯಾ ಅವರೆ, ತೊಗರಿ ಬೆಳೆಗಳಿಗೆ ಜೀವಕಳೆ ತುಂಬಿದ್ದು, ತಡವಾಗಿ ಸುರಿದ ಮಳೆ ಹಾಗೂ ಮಳೆ ಕೊರತೆಯಿಂದ ಇಳುವರಿ ಕಡಿಮೆಯ ಸಾಧ್ಯತೆಯಿದ್ದರೂ ಸಹ ಬೆಳೆ ಚೇತರಿಸಿಕೊಳ್ಳುತಿರುವುದು ಸದ್ಯ ರೈತರ ಮೊಗದಲ್ಲಿ ಭರವಸೆಯ ಮಂದಹಾಸ ಮೂಡುವಂತೆ ಮಾಡಿದೆ.

ವಿಜಯ ಕರ್ನಾಟಕ 21 Jul 2026 10:13 am

ಸಂಪುಟ ವಿಸ್ತರಣೆ : ಹೊಸ ಸಮೀಕರಣದೊಂದಿಗೆ, ಮತ್ತೆ ಡಿಕೆಶಿ ದೆಹಲಿಗೆ - ಈ ’ಐವರಿಗೆ’ ಮಿನಿಸ್ಟರ್ ಭಾಗ್ಯ ಪಕ್ಕಾ?

DK Shivakumar government Cabinet Expansion : ಮುಂಬರುವ ಸ್ಥಳೀಯ ಸಂಸ್ಥೆ ಮತ್ತು 2028ರ ವಿಧಾನಸಭಾ ಚುನಾವಣೆಯನ್ನೂ ಗಮನದಲ್ಲಿ ಇಟ್ಟುಕೊಂಡು, ಹೊಸ ಸಮೀಕರಣದೊಂದಿಗೆ, ಸಚಿವ ಸ್ಥಾನ ಭರ್ತಿ ಮಾಡಲು ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸಿದೆ. ಈ ಹಿನ್ನಲೆಯಲ್ಲಿ ಹಲವು ಹೊಸಬರಿಗೆ ಸ್ಥಾನ ಸಿಗುವ ಸಾಧ್ಯತೆಯಿದೆ. ಸಿಎಂ ಡಿಕೆ ಶಿವಕುಮಾರ್, ದೆಹಲಿಗೆ ಪ್ರಯಾಣಿಸಿದ್ದಾರೆ. ಎರಡ್ಮೂರು ದಿನಗಳಲ್ಲಿ ಈ ಪ್ರಕ್ರಿಯೆ ಅಂತಿಮಗೊಳ್ಳಬಹುದು.

ವಿಜಯ ಕರ್ನಾಟಕ 21 Jul 2026 9:55 am

Delhi: ಚಾಕುವಿನಿಂದ ಇರಿದು ವಿದ್ಯಾರ್ಥಿಯ ಹತ್ಯೆ: ಇಬ್ಬರ ಬಂಧನ

ಹೊಸದಿಲ್ಲಿ: ಜನರ ಗುಂಪೊಂದರ ಜೊತೆ ನಡೆದ ಜಗಳದ ನಂತರ 19 ವರ್ಷದ 11ನೇ ತರಗತಿಯ ವಿದ್ಯಾರ್ಥಿಯೊಬ್ಬನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆಯು ದಿಲ್ಲಿಯ ಕಲ್ಕಾಜಿಯಲ್ಲಿ ನಡೆದಿದೆ. ಶಾಲಾ ವಿದ್ಯಾರ್ಥಿಗಳ ನಡುವೆ ಜಗಳ ನಡೆದಿದೆ ಎಂದು ಪೋಲೀಸರು ಶಂಕಿಸಿದ್ದು, ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ. ಮೃತನನ್ನು ಓಖ್ಲಾ ಫೇಸ್-2 ನ ಜೆಜೆ ಕ್ಯಾಂಪ್ ನಿವಾಸಿ ಸೈಯದ್ ಹುಸೇನ್ (19) ಎಂದು ಗುರುತಿಸಲಾಗಿದೆ. ಆತನು ಕಲ್ಕಾಜಿಯ ಎಮ್ಸಿಡಿ ಶಾಲೆಯೊಂದರಲ್ಲಿ 11ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಕಲ್ಕಾಜಿಯ ಡಿಡಿಎ ಫ್ಲ್ಯಾಟ್ಸ್ನ ಬಿ ಬ್ಲಾಕ್ನಲ್ಲಿರುವ ಉದ್ಯಾನವನದ ಬಳಿ ಈ ಘಟನೆ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಶಾಲಾ ವಿದ್ಯಾರ್ಥಿಗಳ ನಡುವೆ ಜಗಳ ನಡೆಯುತ್ತಿದೆ ಎಂದು ಪೋಲೀಸರಿಗೆ ಮಧ್ಯಾಹ್ನ 2:23 ಕ್ಕೆ ಪಿಸಿಆರ್ ಕರೆ ಬಂದಿತ್ತು. ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸ್ ತಂಡಕ್ಕೆ ಯುವಕನು ಚಾಕು ಇರಿತದ ಗಾಯಗಳೊಂದಿಗೆ ಬಿದ್ದಿರುವುದು ಕಂಡುಬಂದಿದೆ. ಕೂಡಲೇ ಸಿಎಟಿಎಸ್ ಆಂಬ್ಯುಲೆನ್ಸ್ ಸ್ಥಳಕ್ಕೆ ಆಗಮಿಸಿದ್ದು, ಗಾಯಾಳುವಿಗೆ ಸಿಪಿಆರ್ ಪ್ರಥಮ ಚಿಕಿತ್ಸೆ ನೀಡಲಾಗಿದೆ. ಬಳಿಕ ಏಮ್ಸ್ ಟ್ರಾಮಾ ಸೆಂಟರ್ಗೆ ದಾಖಲಿಸಿಲಾಗಿದ್ದು, ಅಲ್ಲಿ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಇಬ್ಬರು ಅಥವಾ ಮೂವರು ವ್ಯಕ್ತಿಗಳ ನಡುವೆ ನಡೆದ ಜಗಳದ ವೇಳೆ ಹುಸೇನ್ನಿಗೆ ಚಾಕುವಿನಿಂದ ಇರಿಯಲಾಗಿದೆ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ದಾಳಿ ನಡೆಸಿದ ಶಂಕಿತರನ್ನು ಗುರುತಿಸಲಾಗಿದ್ದು, ಅವರನ್ನು ಪತ್ತೆಹಚ್ಚಿ ಬಂಧಿಸಲು ಹಲವು ತಂಡಗಳನ್ನು ರಚಿಸಲಾಗಿದೆ” ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ದಾಳಿಗೆ ಕಾರಣವಾದ ಘಟನೆಗಳ ಮಾಹಿತಿಗಾಗಿ ಪೋಲಿಸರು ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದು, ಸಾಕ್ಷಿಗಳನ್ನು ವಿಚಾರಣೆಗೊಳಪಡಿಸುತ್ತಿದ್ದಾರೆ. ಘಟನೆಯ ಹಿಂದಿನ ನಿಖರ ಕಾರಣ ಇನ್ನೂ ತಿಳಿದುಬಂದಿರುವುದಿಲ್ಲ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

ವಾರ್ತಾ ಭಾರತಿ 21 Jul 2026 9:52 am

Rahul Gandhi: ದೆಹಲಿಯಲ್ಲಿ ಸಿಜೆಪಿ ಪ್ರತಿಭಟನೆಯ ಬಗ್ಗೆ ಕೊನೆಗೂ ಮೌನ ಮುರಿದ ರಾಹುಲ್ ಗಾಂಧಿ, ಮೋದಿ ಬಗ್ಗೆ ಹೇಳಿದ್ದೇನು

Rahul Gandhi: ದೆಹಲಿಯ ಜಂತರ್‌ಮಂತರ್‌ನಲ್ಲಿ ದೇಶದ ಯುವ ಸಮೂಹವು ನಡೆಸಿದ ಪ್ರತಿಭಟನೆಯನ್ನು ಕೇಂದ್ರ ಬಿಜೆಪಿ ಸರ್ಕಾರವು ನಿಭಾಯಿಸಿದ ರೀತಿಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಈ ವಿಚಾರವಾಗಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ವಾಗ್ದಾಳಿ ನಡೆಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಇತಿಹಾಸದಲ್ಲಿ ಅತ್ಯಂತ ಯುವ ವಿರೋಧಿ ಪ್ರಧಾನಿ - ಅವರು ಎಷ್ಟು

ಒನ್ ಇ೦ಡಿಯ 21 Jul 2026 9:39 am

ಹಸಿರು ಮಾರ್ಗದಲ್ಲಿ ಮತ್ತೆ ಕೈಕೊಟ್ಟ ಮೆಟ್ರೋ ಸಂಚಾರ: ಬೆಳಗ್ಗೆ ಯಶವಂತಪುರ ನಂತರದ 9 ನಿಲ್ದಾಣಗಳಲ್ಲಿ ಸ್ಥಗಿತ, ಕೆಲ ಸಮಯದ ಬಳಿಕ ಪುನರಾರಂಭ

ಹಸಿರು ಮಾರ್ಗದಲ್ಲಿ ಮೆಟ್ರೋ ನಿಲ್ದಾಣಗಳಲ್ಲಿ ಜನದಟ್ಟಣೆ ಉಂಟಾಗಿದೆ. ಪ್ರಯಾಣಿಕರು ರೈಲು ವಿಳಂಬದಿಂದ ಗೊಂದಲಕ್ಕೀಡಾಗಿದ್ದಾರೆ. ಬಿಎಂಆರ್‌ಸಿಎಲ್ ನೀಡಿರುವ ಕಾರಣ ಇಲ್ಲಿದೆ.

ವಿಜಯ ಕರ್ನಾಟಕ 21 Jul 2026 9:15 am

Sikkim | ಭೂಕುಸಿತದಿಂದ ಮುಚ್ಚಿದ ಸುರಂಗದ ಪ್ರವೇಶದ್ವಾರ: 7 ಮಂದಿ ಮೃತ್ಯು, ಹಲವು ಕಾರ್ಮಿಕರು ಸಿಲುಕಿರುವ ಶಂಕೆ

ಗ್ಯಾಂಗ್ಟಕ್: ಸಿಕ್ಕಿಂನ ನಾಮ್ಚಿ ಜಿಲ್ಲೆಯಲ್ಲಿ ಸೋಮವಾರ ಸಂಭವಿಸಿದ ಭೂಕುಸಿತದಿಂದಾಗಿ ನಿರ್ಮಾಣ ಹಂತದ ಸುರಂಗದ ಪ್ರವೇಶದ್ವಾರ ಮುಚ್ಚಿಹೋಗಿದ್ದು, ಗ್ಯಾಸ್ ಸೋರಿಕೆಯಾದ ಶಂಕೆಯಿಂದ ಕನಿಷ್ಠ ಏಳು ಮಂದಿ ಮೃತಪಟ್ಟಿದ್ದಾರೆ ಮತ್ತು ಹಲವು ಕಾರ್ಮಿಕರು ಸುರಂಗದೊಳಗೆ ಸಿಲುಕಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ನಾಮ್ಚಿ ಜಿಲ್ಲೆಯ ಸಮರ್ಡುಂಗ್‌ನ ಝೋಲುಂಗೇ ಎಂಬಲ್ಲಿ ನಿರ್ಮಾಣ ಹಂತದಲ್ಲಿದ್ದ ಸುರಂಗದೊಳಗೆ ಈ ಘಟನೆಯು ಸಂಭವಿಸಿದ್ದು, ಅಂದಾಜು 27 ಕಾರ್ಮಿಕರು ಒಳಗೆ ಸಿಲುಕಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ನಿಖರ ಸಂಖ್ಯೆಯನ್ನು ಇನ್ನೂ ಅಧಿಕಾರಿಗಳು ದೃಢಪಡಿಸಿಲ್ಲ. ಎನ್‌ಡಿಆರ್‌ಎಫ್, ರಾಜ್ಯ ವಿಪತ್ತು ಸ್ಪಂದನಾ ಪಡೆ, ಸಿಕ್ಕಿಂ ಪೊಲೀಸ್, ಅಗ್ನಿಶಾಮಕ ಮತ್ತು ತುರ್ತು ಸೇವೆಗಳು ಸ್ಥಳಕ್ಕೆ ಧಾವಿಸಿದ್ದು, ಆರೋಗ್ಯ ಇಲಾಖೆ ಹಾಗೂ ನಾಮ್ಚಿ ಜಿಲ್ಲಾಡಳಿತದ ಸಹಯೋಗದೊಂದಿಗೆ ರಕ್ಷಣಾ ಕಾರ್ಯಾಚರಣೆಯನ್ನು ನಡೆಸುತ್ತಿದೆ. ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ನಾಮ್ಚಿ ತನ್ನ ಹೇಳಿಕೆಯಲ್ಲಿ, ಏಳು ಜನರು ಮೃತಪಟ್ಟಿರುವುದು ವರದಿಯಾಗಿದೆ ಎಂದು ತಿಳಿಸಿದೆ. ಮೃತದೇಹಗಳನ್ನು ಸಿಂಗ್ತಮ್ ಜಿಲ್ಲಾ ಆಸ್ಪತ್ರೆ, ಗ್ಯಾಂಗ್ಟಕ್‌ನ ಎಸ್‌ಟಿಎನ್‌ಎಮ್ ಆಸ್ಪತ್ರೆ ಮತ್ತು ನಾಮ್ಚಿ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಬಗ್ಗೆ ಎಎನ್‌ಐಗೆ ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ ಅನುಪಾ ತಮ್ಲಿಂಗ್, ಸುರಂಗದೊಳಗೆ ಸುಮಾರು 27 ಕಾರ್ಮಿಕರು ಸಿಲುಕಿರುವ ಸಾಧ್ಯತೆಯಿದೆ. ಆದರೆ, ಸುರಂಗದೊಳಗಿನ ಪರಿಸ್ಥಿತಿಯ ಕುರಿತು ಸಂಪೂರ್ಣ ಮಾಹಿತಿ ಇನ್ನೂ ದೊರೆಯದಿರುವುದರಿಂದ, ನಿಜವಾದ ಸಂಖ್ಯೆ ದೃಢಪಟ್ಟಿಲ್ಲ ಎಂದು ಹೇಳಿದ್ದಾರೆ. ಅಪಘಾತಕ್ಕೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲವಾದರೂ, ಸುರಂಗದೊಳಗೆ ಅನಿಲ ಸೋರಿಕೆಯಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ.

ವಾರ್ತಾ ಭಾರತಿ 21 Jul 2026 8:51 am

ಟಿ.ನರಸೀಪುರದಲ್ಲಿ ಬಸ್‌ ನಿಲ್ದಾಣದಲ್ಲಿ ಒಂಟಿಯಾಗಿ ನಿಂತಿದ್ದ ಪಶ್ಚಿಮ ಬಂಗಾಳದ ಯುವತಿ ಕಿಡ್ನಾಪ್‌, ಸಾಮೂಹಿಕ ಅತ್ಯಾಚಾರ: 3 ಆರೋಪಿಗಳ ಬಂಧನ!

ಮೈಸೂರು ಜಿಲ್ಲೆಯ ಟಿ. ನರಸೀಪುರದಲ್ಲಿ ಪಶ್ಚಿಮ ಬಂಗಾಳ ಮೂಲದ ಯುವತಿಯನ್ನು ಅಪಹರಿಸಿ ಸಂತೇಮರಹಳ್ಳಿ ಲಾಡ್ಜ್‌ನಲ್ಲಿ ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ನಡೆದಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು 24 ಗಂಟೆಯೊಳಗೆ ಕಿರಣ್, ಕಿಶೋರ್ ಹಾಗೂ ರಿಯಾನ್ ಎಂಬ ಮೂವರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೊಳಪಡಿಸಿದ್ದಾರೆ. ಮತ್ತೊಂದೆಡೆ ನಂಜನಗೂಡು ತಾಲೂಕಿನಲ್ಲಿ ತಂದೆ-ತಾಯಿ ಕೂಲಿಗೆ ಹೋಗಿದ್ದಾಗ ಮನೆಯಲ್ಲಿದ್ದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ 23 ವರ್ಷದ ಸುರೇಶ್ ಎಂಬಾತನನ್ನು ಹುಲ್ಲಹಳ್ಳಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ವಿಜಯ ಕರ್ನಾಟಕ 21 Jul 2026 8:45 am

'ಜಂತರ್ ಮಂತರ್ ಬಿಡುವುದಿಲ್ಲ': ಎರಡನೇ ದಿನವೂ ಚಲೋ ಸಂಸದ್ ನಡೆಯಲಿದೆ ಎಂದ ಅಭೀಜಿತ್ ದೀಪ್ಕೆ

ಹೊಸದಿಲ್ಲಿ: ಕಾಕ್ರೋಚ್ ಜನತಾ ಪಾರ್ಟಿ ನೇತೃತ್ವದ ಚಲೋ ಸಂಸದ್ ಎರಡನೇ ದಿನವೂ ಮುಂದುವರಿಯಲಿದೆ ಎಂದು ಸಿಜೆಪಿ ಸ್ಥಾಪಕ ಅಭೀಜಿತ್ ದೀಪ್ಕೆ ಹೇಳಿರುವುದಾಗಿ ಇಂಡಿಯಾ ಟುಡೇ ವರದಿ ಮಾಡಿದೆ. ಸೋಮವಾರ ಸಂಸತ್ತಿನ ಕಡೆಗೆ ನಡೆದ ಮೆರವಣಿಗೆಯು ಲಾಠಿಚಾರ್ಜ್, ಅಶ್ರುವಾಯು ಪ್ರಯೋಗಕ್ಕೆ ಸಾಕ್ಷಿಯಾಗಿದ್ದು, ಹಲವರು ಗಾಯಗೊಂಡಿದ್ದಾರೆ. ಜಂತರ್ ಮಂತರ್ ಮತ್ತು ಅದರ ಸುತ್ತಮುತ್ತಲಿನ ಪ್ರತಿಭಟನಾ ಸ್ಥಳಗಳಿಗೆ ಭೇಟಿ ನೀಡಿದ್ದ ಇಂಡಿಯಾ ಟುಡೇ ಡಿಜಿಟಲ್‌ಗೆ ನೀಡಿದ ಪ್ರತಿಕ್ರಿಯೆಯಲ್ಲಿ ದೀಪ್ಕೆ, ನಾವು ಮತ್ತೆ ಪಾದಯಾತ್ರೆ ನಡೆಸಲಿದ್ದೇವೆ. ನಾವು ಈ ಪ್ರತಿಭಟನಾ ಸ್ಥಳ ಜಂತರ್ ಮಂತರ್ ಬಿಟ್ಟು ಹೋಗುವುದಿಲ್ಲ ಎಂದು ಹೇಳಿದ್ದಾರೆ. ಮಳೆಯಲ್ಲಿ ಸಂಪೂರ್ಣವಾಗಿ ನೆನೆದಿದ್ದ ದೀಪ್ಕೆ, ಪಕ್ಷದ ಇತರೆ ನಾಯಕರೊಂದಿಗೆ ಮಾನವ ಸರಪಳಿಯ ಮುಂಭಾಗದಲ್ಲಿ ನಿಂತು ಘೋಷಣೆಗಳನ್ನು ಕೂಗಿದರು. ಸೋಮವಾರ ಬೆಳಿಗ್ಗೆ ದಿಲ್ಲಿ ಪೊಲೀಸರು ಈ ಹಿಂದೆ ಇದ್ದ ವೇದಿಕೆಯನ್ನು ತೆರವುಗೊಳಿಸಿದ್ದರು ಎಂದು ವರದಿಯಾಗಿದೆ. ತದನಂತರ ಜಂತರ್ ಮಂತರ್‌ಗೆ ಹಿಂತಿರುಗಿದ CJP ಪ್ರತಿಭಟನಾಕಾರರು, ಅಲ್ಲಿ ಡೇರೆ ಹಾಕಿ ತಾತ್ಕಾಲಿಕ ವೇದಿಕೆಯನ್ನು ನಿರ್ಮಿಸಿಕೊಂಡಿದ್ದಾರೆ. ಮಳೆಯ ನಡುವೆಯೂ ಜಂತರ್ ಮಂತರ್‌ನಲ್ಲಿ ವಾತಾವರಣ ಉದ್ವಿಗ್ನವಾಗಿಯೇ ಇದ್ದು, ಸ್ಥಳದಲ್ಲಿ ಕನಿಷ್ಠ ಸಾವಿರ ಪ್ರತಿಭಟನಾಕಾರರು ಮತ್ತು ನೂರಾರು ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು. ಸೋಮವಾರದ ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ದಿಲ್ಲಿ ಪೊಲೀಸರು, ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದಾಗ ಪೊಲೀಸರು ಅಶ್ರುವಾಯು ಪ್ರಯೋಗಿಸಬೇಕಾಯಿತು ಮತ್ತು ಲಾಠಿಚಾರ್ಜ್ ನಡೆಸಬೇಕಾಯಿತು ಎಂದು ತಿಳಿಸಿದ್ದಾರೆ. ಎರಡನೇ ದಿನದ ಪ್ರತಿಭಟನೆಯ ಬಗ್ಗೆ ಪ್ರತಿಕ್ರಿಯಿಸಿದ ಸ್ಥಳದಲ್ಲಿದ್ದ ಪೊಲೀಸರು, ಬಂದೋಬಸ್ತ್ ಮೊದಲಿನಂತೆಯೇ ಇರುತ್ತದೆ. ನಾವು ಬ್ಯಾರಿಕೇಡ್‌ಗಳನ್ನು ಮತ್ತೆ ಅಳವಡಿಸುತ್ತೇವೆ ಎಂದು ಹೇಳಿದ್ದಾರೆ. ಸೋಮವಾರ ತಡರಾತ್ರಿಯವರೆಗೂ ಜಂತರ್ ಮಂತರ್ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇಂಟರ್ನೆಟ್ ಸೇವೆಗಳು ಬಾಧಿತವಾಗಿದ್ದವು. ದಿಲ್ಲಿ ಪೊಲೀಸರು ಹಲವು ಎಫ್‌ಐಆರ್‌ಗಳನ್ನು ದಾಖಲಿಸಲು ಪ್ರಾರಂಭಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿ ಹಾಗೂ ಮೊಬೈಲ್ ವೀಡಿಯೊಗಳನ್ನು ಪರಿಶೀಲಿಸುತ್ತಿದ್ದಾರೆ. ಈ ಹಿಂಸಾಚಾರವು ಯಾವುದಾದರೂ ದೊಡ್ಡ ಸಂಚಿನ ಭಾಗವೇ ಎಂಬುದರ ಕುರಿತು ತನಿಖೆ ನಡೆಸುತ್ತಿದ್ದಾರೆ ಎಂದು ಇಂಡಿಯಾ ಟುಡೇ ಟಿವಿ ವರದಿ ಮಾಡಿದೆ.

ವಾರ್ತಾ ಭಾರತಿ 21 Jul 2026 8:28 am

ಅಮ್ಮನ ಮೇಲಾಣೆ.. : ತಾಯಿಯ ಅಂತಿಮ ಸಂಸ್ಕಾರದ ವೇಳೆ, ಕುಮಾರಸ್ವಾಮಿ ಮಾಡಿದ ಆ ಸಂಕಲ್ಪವೇನು?

HDK Pledge in Mothers Funeral : ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿಯವರ ತಾಯಿ ಚೆನ್ನಮ್ಮ ದೇವೇಗೌಡರ ಅಂತಿಮ ಸಂಸ್ಕಾರ, ಹಾಸನ ಜಿಲ್ಲೆಯಲ್ಲಿ ನಡೆದಿದೆ. ಹಲವು ರಾಜಕೀಯ ನಾಯಕರು ಈ ವೇಳೆ ಹಾಜರಿದ್ದರು. ಸರ್ಕಾರಿ ಗೌರವದೊಂದಿಗೆ, ಚೆನ್ನಮ್ಮನವರು ಬೀಳ್ಕೊಡಲಾಯಿತು. ವಿಧಿವಿಧಾನ ಮುಗಿದ ನಂತರ, ತಾಯಿಯನ್ನು ನೋಯಿಸಿದ್ದರೆ, ಇನ್ನು ಮುಂದೆ ಅಂತಹ ತಪ್ಪು ಮಾಡುವುದಿಲ್ಲ ಎನ್ನುವ ಸಂಕಲ್ಪವನ್ನು ಕುಮಾರಸ್ವಾಮಿ ಮಾಡಿದ್ದಾರೆ.

ವಿಜಯ ಕರ್ನಾಟಕ 21 Jul 2026 8:20 am

ಉಕ್ರೇನ್‌ನ ಒಡೆಸ್ಸಾ ಬಂದರಿನಿಂದ ಹೊರಟಿದ್ದ MV ಗೋಲ್ಡನ್ ಲಿಯೋ ಹಡಗಿನ ಮೇಲೆ ಕ್ಷಿಪಣಿ ದಾಳಿ: 4 ಜನ ಭಾರತೀಯರು ಬಲಿ, ಭಾರತದಿಂದ ಖಂಡನೆ ವ್ಯಕ್ತ!

ರಷ್ಯಾ ಮತ್ತು ಉಕ್ರೇನ್ ನಡುವಿನ ಸುದೀರ್ಘ ಯುದ್ಧ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಜುಲೈ 19ರ ಸಂಜೆ ಉಕ್ರೇನ್‌ನ ಒಡೆಸ್ಸಾ ಬಂದರಿನಿಂದ ಜೋಳ ಹೊತ್ತು ಹೊರಟಿದ್ದ 'MV ಗೋಲ್ಡನ್ ಲಿಯೋ' ಎಂಬ ವಾಣಿಜ್ಯ ಹಡಗಿನ ಮೇಲೆ ರಷ್ಯಾ 3 ಕ್ರೂಸ್ ಕ್ಷಿಪಣಿಗಳಿಂದ ಭೀಕರ ದಾಳಿ ನಡೆಸಿದೆ. ಪರಿಣಾಮ ಈ ಹಡಗಿನಲ್ಲಿದ್ದ 17 ಸಿಬ್ಬಂದಿ ಪೈಕಿ 8 ಜನರನ್ನು ರಕ್ಷಿಸಲಾಗಿದ್ದು, ನಾಲ್ವರು ಭಾರತೀಯ ಪ್ರಜೆಗಳು ಸೇರಿದಂತೆ ಒಟ್ಟು 9 ಸಿಬ್ಬಂದಿ ದುರಂತವಾಗಿ ಮೃತಪಟ್ಟಿದ್ದಾರೆ. ಭಾರತದ ವಿದೇಶಾಂಗ ಸಚಿವಾಲಯವು ಮೃತರ ಕುಟುಂಬಕ್ಕೆ ಸಂತಾಪ ಸೂಚಿಸಿದ್ದು, ವಾಣಿಜ್ಯ ಹಾಗೂ ನಾಗರಿಕ ಸಾಗಣೆ ನೌಕೆಗಳ ಮೇಲಿನ ಇಂತಹ ದಾಳಿಗಳನ್ನು ಶೋಚನೀಯ ಎಂದು ಕಟುವಾಗಿ ಖಂಡಿಸಿದೆ.

ವಿಜಯ ಕರ್ನಾಟಕ 21 Jul 2026 8:11 am

ಕೈಕೊಟ್ಟ ಮಳೆ, ಜಲಾಶಯಗಳಿಗಿಲ್ಲ ಕಳೆ! ರಾಮನಗರದ ಬಹುತೇಖ ಕೆರೆಗಳು ಖಾಲಿ, ಕೃಷಿಯ ಜತೆಗೆ ಕುಡಿಯುವ ನೀರಿನ ಸಮಸ್ಯೆಯೂ ಉಲ್ಬಣಿಸುವ ಸಾಧ್ಯತೆ

ಜುಲೈ ಅಂತ್ಯಕ್ಕೆ ಬಂದಿದ್ದರೂ, ಮುಂಗಾರು ಮಾತ್ರ ಸರಿಯಾದ ಪ್ರಮಾಣದಲ್ಲಿ ಸುರಿಯಲೇ ಇಲ್ಲ. ಈ ವೇಳೆಗೆ ಬಿತ್ತನೆ ಮುಗಿದು ಬೆಳೆ ನಳನಳಿಸಬೇಕಿತ್ತು. ಆದರೆ ಮಳೆಯಿಲ್ಲದೆ ಕೆರೆಗಳು ಖಾಲಿಯಾಗಿದ್ದು, ಅಂತರ್ಜಲವೂ ಕುಸಿದಿದೆ. ಮುಂದಿನ ದಿನಗಳಲ್ಲಿ ಕೃಷಿ ನಡೆಸುವುದು ಕಷ್ಟವಾಗಲಿದೆ ಎಂಬುದು ರೈತರ ಆತಂಕ.

ವಿಜಯ ಕರ್ನಾಟಕ 21 Jul 2026 7:46 am

Jammu and Kashmir |ಭಾರಿ ಮಳೆಗೆ ಶ್ರೀನಗರದ ಲಾಲ್ ಚೌಕ್ ಜಲಾವೃತ

ಸ್ಮಾರ್ಟ್ ಸಿಟಿ ಯೋಜನೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಟೀಕೆ

ವಾರ್ತಾ ಭಾರತಿ 21 Jul 2026 7:22 am

ಮಳೆ ಕೊರತೆಗೆ ಬರಿದಾದ ಡ್ಯಾಂಗಳು: ರಾಜ್ಯದಲ್ಲಿ ಜಲವಿದ್ಯುತ್ ಉತ್ಪಾದನೆ ಶೇ.60ರಷ್ಟು ಕುಸಿಯುವ ಆತಂಕ, ವಿದ್ಯುತ್‌ಕ್ಷಾಮದ ಭೀತಿ! ಉಷ್ಣ ಸ್ಥಾವರಗಳೇ ಈಗ ಗತಿ..

ಹವಾಮಾನ ವೈಪರೀತ್ಯ ಹಾಗೂ ದುರ್ಬಲ ಮುಂಗಾರಿನ ಪರಿಣಾಮ ಕರ್ನಾಟಕದ ಪ್ರಮುಖ ಜಲಾಶಯಗಳಲ್ಲಿ ನೀರಿಲ್ಲದೆ ಜಲವಿದ್ಯುತ್ ಉತ್ಪಾದನೆ ಶೇ. 60ರಷ್ಟು ಕುಸಿಯುವ ತೀವ್ರ ಆತಂಕ ಎದುರಾಗಿದೆ. ಕೃಷಿ ಪಂಪ್‌ಸೆಟ್‌ಗಳು ಹಾಗೂ ಕೈಗಾರಿಕೆಗಳಿಂದ ರಾಜ್ಯದ ದೈನಂದಿನ ಬೇಡಿಕೆ 13,000 ಮೆಗಾವಾಟ್ ದಾಟಿದ್ದು, ಜಲವಿದ್ಯುತ್ ಕೊರತೆಯನ್ನು ನಿಭಾಯಿಸಲು ರಾಯಚೂರು ಮತ್ತು ಬಳ್ಳಾರಿ ಉಷ್ಣ ವಿದ್ಯುತ್ ಸ್ಥಾವರಗಳನ್ನೇ ಪ್ರಮುಖವಾಗಿ ನೆಚ್ಚಿಕೊಳ್ಳಲಾಗಿದೆ. ಈ ವಿದ್ಯುತ್ ಕ್ಷಾಮವನ್ನು ನಿವಾರಿಸಲು ಇಂಧನ ಇಲಾಖೆಯು ಹೊರರಾಜ್ಯಗಳಿಂದ ವಿದ್ಯುತ್ ಖರೀದಿ, ಬ್ಯಾಟರಿ ಎನರ್ಜಿ ಸ್ಟೋರೇಜ್ ಸಿಸ್ಟಮ್ ಹಾಗೂ ಸೌರ-ಪವನ ಶಕ್ತಿ ಯೋಜನೆಗಳತ್ತ ಮುಖಮಾಡಿದ್ದು, ಈ ಕುರಿತ ಮಾಹಿತಿ ಇಲ್ಲಿದೆ..

ವಿಜಯ ಕರ್ನಾಟಕ 21 Jul 2026 7:20 am

ಗೃಹಲಕ್ಷ್ಮೀ ಹಣ ಮರಳಿ ಪಡೆಯುವುದೇ ಸವಾಲು! ಯಾದಗಿರಿಯಲ್ಲಿ ಮೃತಪಟ್ಟ 1666 ಫಲಾನುಭವಿಗಳಿಗೆ ಹಣ ಜಮೆ! ಬೊಕ್ಕಸಕ್ಕೆ 1.97 ಕೋಟಿ ರೂ. ನಷ್ಟ

ಮರಣಹೊಂದಿದವರ ಖಾತೆಗೂ ಗೃಹಲಕ್ಷ್ಮೀ ಹಣ ಜಮೆ ಆಗಿದ್ದು, ಸರಕಾರಕ್ಕೆ ಈಗ ಅದನ್ನು ಮರಳಿ ಪಡೆಯುವುದು ಕಾನೂನಾತ್ಮಕವಾಗಿಯೂ, ಅದರ ಹೊರತಾಗಿಯೂ ಬಹುದೊಡ್ಡ ಸವಾಲಾಗಿದೆ. ಮರಣ ಹೊಂದಿದವರ ದಾಖಲೆಗಳು ತಡವಾಗಿ ಇಲಾಖೆ ಕೈಗೆ ಸಿಗುತ್ತಿರುವುದರಿಂದ ಮಾಸಿಕ ಹಣ 2 ಸಾವಿರ ರೂ ಜಮೆಯಾಗುತ್ತಲ್ಲೇ ಬಂದಿದ್ದು, ಇದೀಗ ಯಾದಗಿರಿ ಜಿಲ್ಲೆಯೊಂದರಲ್ಲೇ 1.97 ಕೋಟಿ ರೂ ನಷ್ಟವಾಗಿದೆ.

ವಿಜಯ ಕರ್ನಾಟಕ 21 Jul 2026 7:12 am

ʼಕೊಲೆಗಡುಕರನ್ನು ಬಿಟ್ಟು ಸೋಶಿಯಲ್‌ಮೀಡಿಯಾ ಪೋಸ್ಟ್ ಬೆನ್ನತ್ತೋದು ಅರಾಜಕತೆʼ: ಬಂಟ್ವಾಳ ಯುವತಿ ಕೊಲೆ ಬಗ್ಗೆ ಪೋಸ್ಟ್‌ ಮಾಡಿದ್ದ ವಿದ್ಯಾರ್ಥಿ ವಿರುದ್ದದ FIRಗೆ ಸರ್ಕಾರಕ್ಕೆ ಹೈಕೋರ್ಟ್‌ ತರಾಟೆ!

ಬಂಟ್ವಾಳದ ಬಿ.ಸಿ. ರೋಡ್‌ನಲ್ಲಿ ನಡೆದ ಯುವತಿಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡಿದ್ದ ಬೆಂಗಳೂರಿನ ಕಾನೂನು ವಿದ್ಯಾರ್ಥಿ ಕಿರಣ್ ಆರಾಧ್ಯ ಮಾಡಿದ್ದ ಪೋಸ್ಟ್‌ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣಗಳ ತನಿಖೆಗೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ. ವಿಚಾರಣೆ ವೇಳೆ, ಕೊಲೆಗಡುಕರ ವಿರುದ್ಧ ಕ್ರಮ ಕೈಗೊಳ್ಳದೆ ಟ್ವೀಟ್ ವಿಚಾರಕ್ಕೆ ತನಿಖೆಗೆ ಬೆನ್ನತ್ತುವ ಸರ್ಕಾರ ಅರಾಜಕತೆ ಸೃಷ್ಟಿಸುತ್ತಿದೆ ಎಂದು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠ ಸರ್ಕಾರವನ್ನು ಕಟುವಾಗಿ ತರಾಟೆಗೆ ತೆಗೆದುಕೊಂಡಿದೆ. ಸಂಸದ ತೇಜಸ್ವಿ ಸೂರ್ಯ ಮಂಡಿಸಿದ ವಾದವನ್ನು ಆಲಿಸಿದ ನ್ಯಾಯಾಲಯವು, ಹೈಗ್ರೌಂಡ್ಸ್ ಹಾಗೂ ಬಂಟ್ವಾಳ ಠಾಣೆಗಳಲ್ಲಿ ದಾಖಲಾಗಿದ್ದ ಪ್ರಕರಣಗಳ ತನಿಖೆಗೆ ತಡೆ ನೀಡಿ, ರಾಜ್ಯ ಪ್ರಾಸಿಕ್ಯೂಷನ್‌ಗೆ ತುರ್ತು ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಆಗಸ್ಟ್ 7ಕ್ಕೆ ಮುಂದೂಡಿದೆ.

ವಿಜಯ ಕರ್ನಾಟಕ 21 Jul 2026 6:56 am

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಡೀಪ್‌ಫೇಕ್ ವಿಡಿಯೋ ಬಳಸಿ ಸೈಬರ್‌ವಂಚನೆ: ಹಿರಿಯ ನಾಗರಿಕರಿಗೆ 6.88 ಲಕ್ಷ ರೂ. ದೋಖಾ!

AI ತಂತ್ರಜ್ಞಾನ ದುರ್ಬಳಕೆ ಮಾಡಿಕೊಂಡು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಡೀಪ್‌ಫೇಕ್ ವಿಡಿಯೋ ಸೃಷ್ಟಿಸಿದ್ದ ಸೈಬರ್ ವಂಚಕರು, 66 ವರ್ಷದ ಹಿರಿಯ ನಾಗರಿಕರೊಬ್ಬರಿಗೆ 6.88 ಲಕ್ಷ ರೂಪಾಯಿ ವಂಚಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಕೇಂದ್ರ ಸರ್ಕಾರ ಹಾಗೂ ಎಸ್‌ಬಿಐ ಜಂಟಿಯಾಗಿ ಹೂಡಿಕೆ ಯೋಜನೆ ಆರಂಭಿಸಿವೆ ಎಂಬ ನಕಲಿ ಫೇಸ್‌ಬುಕ್ ಜಾಹೀರಾತಿನ ಲಿಂಕ್ ಕ್ಲಿಕ್ ಮಾಡಿದ್ದ ಸಂತ್ರಸ್ತರಿಗೆ, ಯುಕೆಯ (+44) ವಾಟ್ಸ್‌ಆ್ಯಪ್ ಸಂಖ್ಯೆಯಿಂದ ಕರೆ ಮಾಡಿ 10 ದಿನಗಳಲ್ಲಿ ಭಾರಿ ಲಾಭಾಂಶದ ಆಮಿಷ ಒಡ್ಡಿ ಹಣ ಲೂಟಿ ಮಾಡಲಾಗಿತ್ತು. ಸದ್ಯ ಈ ಸಂಬಂಧ ಈಶಾನ್ಯ ವಿಭಾಗದ ಸೈಬರ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಗಣ್ಯರ ಹೆಸರಿನಲ್ಲಿ ಬರುವ ಇಂತಹ ಹೂಡಿಕೆ ಜಾಹೀರಾತುಗಳನ್ನು ನಂಬಿ ಹಣ ಕಳೆದುಕೊಳ್ಳಬೇಡಿ ಎಂದು ಸೈಬರ್ ಪೊಲೀಸರು ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದ್ದಾರೆ.

ವಿಜಯ ಕರ್ನಾಟಕ 21 Jul 2026 6:35 am

ಅಪಾರ್ಟ್‌ಮೆಂಟ್‌ ಬಲ್ಕ್‌ ವೇಸ್ಟ್‌ ವಿಲೇವಾರಿಗೆ ಕಾನೂನು ಚೌಕಟ್ಟು: ದರ ಗೊಂದಲದ ಬಗ್ಗೆ ಸ್ಪಷ್ಟನೆ ಕೊಟ್ಟ ಸಚಿವ ಕೃಷ್ಣ ಬೈರೇಗೌಡ

ಫುಟ್‌ಪಾತ್‌ ಒತ್ತುವರಿ ತೆರವು ಮಾಡಿ ಸ್ವಚ್ಛಗೊಳಿಸಿದ ಬಳಿಕ ಇದೀಗ ನಗರದ ಕಸದ ಸಮಸ್ಯೆ ಬಗ್ಗೆ ಕ್ರಮ ಕೈಗೊಂಡಿರುವ ಸಚಿವರು, ಎಲ್ಲಾ ಬಲ್ಕ್‌ ವೇಸ್ಟ್ ಉತ್ಪಾದಕರು ಹಾಗೂ ವಿಲೇವಾರಿ ಮಾಡುವ ಖಾಸಗಿ ವೆಂಡರ್‌ಗಳು ಸುಪ್ರೀಂ ಕೋರ್ಟ್‌ ಹಾಗೂ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಪೋರ್ಟನಲ್ಲಿ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವಾಗಿದೆ ಎಂದು ಹೇಳಿದ್ದಾರೆ.

ವಿಜಯ ಕರ್ನಾಟಕ 21 Jul 2026 6:27 am

ಬೆಂಗಳೂರು ಜಲಮಂಡಳಿಯಿಂದ ಜು.22ರಂದು ರಾಜಾಜಿನಗರ ಸೇರಿ ನಗರದ ಹಲವೆಡೆ ಕಾವೇರಿ ನೀರು ಬಂದ್‌: ಯಾವ್ಯಾವ ಏರಿಯಾಗಳಲ್ಲಿ ನೀರಿರಲ್ಲ?

ಬೆಂಗಳೂರು ಜಲಮಂಡಳಿ ಕಾವೇರಿ ನೀರು ಸರಬರಾಜು ಯೋಜನೆಯ 4ನೇ ಹಂತ 1ನೇ ಘಟ್ಟದಲ್ಲಿ 1200 ಮಿ.ಮೀ. ವ್ಯಾಸದ ಕೊಳವೆ ಮಾರ್ಗದಲ್ಲಿ ಸೋರಿಕೆ ತಡೆಗಟ್ಟುವ ತುರ್ತು ಕಾಮಗಾರಿ ಕೈಗೊಳ್ಳುತ್ತಿದ್ದು, ಈ ಹಿನ್ನಲೆಯಲ್ಲಿ ಜುಲೈ 22ರಂದು ನಗರದಲ್ಲಿ ಬಹುತೇಕ ಪ್ರದೇಶಗಳಲ್ಲಿ ಕಾವೇರಿ ನೀರಿನ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ರಾಜಾಜಿನಗರ, ಕೆಎಚ್‌ಬಿ ಕಾಲೋನಿ, ಸಿಲ್ಕ್ ಬೋರ್ಡ್‌ ಕ್ವಾರ್ಟರ್ಸ್‌ ‌, ಯಶವಂತಪುರ ಎಪಿಎಂಸಿ ಹೀಗೆ ನಗರದಲ್ಲಿ 40ಕ್ಕೂ ಅಧಿಕ ಪ್ರದೇಶಗಳಲ್ಲಿ ಬೆಳ್ಳಗೆ 6ಗಂಟೆಯಿಂದ ಸಂಜೆ 6ಗಂಟೆವರೆಗೂ ನೀರು ಪೂರೈಕೆಯಾಗುವುದಿಲ್ಲ.

ವಿಜಯ ಕರ್ನಾಟಕ 21 Jul 2026 6:03 am

ಕರ್ನಾಟಕ-ಕೇರಳದ 10 ಜಿಲ್ಲೆಗಳ ರೋಗಿಗಳ ಜೀವನಾಡಿ ವೆನ್ಲಾಕ್‌ನಲ್ಲಿ ಐಸಿಯು ಬೆಡ್‌, ನರ್ಸ್‌ಗಳ ಅಭಾವ!

ಕರ್ನಾಟಕದ ಕರಾವಳಿ ಹಾಗೂ ಕೇರಳದ ಗಡಿ ಭಾಗ ಸೇರಿದಂತೆ ಸುಮಾರು 10 ಜಿಲ್ಲೆಗಳ ಬಡ ರೋಗಿಗಳಿಗೆ ಏಕೈಕ ಮಾದರಿ ಸರ್ಕಾರಿ ಆಸರೆಯಾಗಿರುವ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯು ಹೆಚ್ಚುತ್ತಿರುವ ರೋಗಿಗಳ ಸೇವೆಗೆ ಐಸಿಯು ಬೆಡ್‌ಗಳ ಅಭಾವ ಹಾಗೂ ನರ್ಸಿಂಗ್ ಸಿಬ್ಬಂದಿ ಕೊರತೆಯಿಂದ ತೀವ್ರ ಒತ್ತಡಕ್ಕೆ ಒಳಗಾಗಿ ಬಳಲುತ್ತಿದೆ. ವಾರ್ಷಿಕವಾಗಿ ಬರೋಬ್ಬರಿ 30ಸಾವಿರಕ್ಕೂ ಅಧಿಕ ರೋಗಿಗಳಿಗೆ ಚಿಕಿತ್ಸೆ ನೀಡಬೇಕಾದ ಈ ಆಸ್ಪತ್ರೆಯನ್ನು ಪ್ರಾದೇಶಿಕ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಬೇಕೆಂಬ ಬೇಡಿಕೆ ಇನ್ನೂ ಈಡೇರಿಲ್ಲ. ಇದು ನಡೆದರೆ, ಆಸ್ಪತ್ರೆಗೆ ಹೆಚ್ಚಿನ ಅನುದಾನ ಹಾಗೂ ಸಿಬ್ಬಂದಿಗಳು ಹರಿದುಬರಲಿದ್ದು, ಆಸ್ಪತ್ರೆಯ ಮೇಲಿನ ಒತ್ತಡ ತಗ್ಗಿ, ವೈದ್ಯಕೀಯ ಸೇವೆ ಮತ್ತಷ್ಟು ಸುಧಾರಿಸಲಿದೆ.

ವಿಜಯ ಕರ್ನಾಟಕ 21 Jul 2026 5:41 am

ಸ್ವಿಸ್ ಓಪನ್ ಟೆನಿಸ್ ಟೂರ್ನಿ : ಸಿಟ್ಸಿಪಾಸ್ ಚಾಂಪಿಯನ್

ಜಿಸ್ಟಾಡ್, ಜು.20: ಸ್ವಿಸ್ ಓಪನ್ ಟೆನಿಸ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಬೆಲ್ಜಿಯಂನ ರಾಫೆಲ್ ರನ್ನು ಮೂರು ಸೆಟ್‌ಗ ಳಿಂದ ಮಣಿಸಿದ ಗ್ರೀಸ್ ಆಟಗಾರ ಸ್ಟೆಫನೋಸ್ ಸಿಟ್ಸಿಪಾಸ್ ಸುಮಾರು ಒಂದೂವರೆ ವರ್ಷಗಳ ನಂತರ ತನ್ನ ಮೊದಲ ಎಟಿಪಿ ಪ್ರಶಸ್ತಿ ಜಯಿಸಿದರು. ರವಿವಾರ ನಡೆದ ಪಂದ್ಯದಲ್ಲಿ ಮಾಜಿ ವಿಶ್ವದ ನಂ.3ನೇ ಆಟಗಾರ ಸಿಟ್ಸಿಪಾಸ್, ರಾಫೆಲ್‌ರನ್ನು 6-4, 6-7(3), 6-3 ಸೆಟ್‌ಗಳ ಅಂತರದಿಂದ ಮಣಿಸಿದರು. ಇದರೊಂದಿಗೆ ತನ್ನ ವೃತ್ತಿಬದುಕಿನಲ್ಲಿ 13ನೇ ಟ್ರೋಫಿ ಜಯಿಸಿದರು. 2025ರ ಫೆಬ್ರವರಿಯ ನಂತರ ಮೊದಲ ಪ್ರಶಸ್ತಿ ಗೆದ್ದರು. 24ರ ವಯಸ್ಸಿನ ರಾಫೆಲ್ ಇದೇ ಮೊದಲ ಬಾರಿ ಎಟಿಪಿ ಟೂರ್ನಿಯಲ್ಲಿ ಫೈನಲ್ ಪಂದ್ಯವಾಡಿದರು. Turns out, determination can move mountains. ⛰️ Very, very happy to lift my 13th ATP title in Gstaad! pic.twitter.com/0F2dKKtejv — Stefanos Tsitsipas (@stefanos) July 19, 2026

ವಾರ್ತಾ ಭಾರತಿ 21 Jul 2026 12:12 am

ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ವಿದ್ಯಮಾನಗಳ ಸಮಗ್ರ ವರದಿ; ಜುಲೈ 20ರಂದು ಏನೆಲ್ಲಾ ಆಯ್ತು?

ದಿನದ 24 ಗಂಟೆಗಳಲ್ಲಿ ಈ ಜಗತ್ತಿನಲ್ಲಿ ಏನೆಲ್ಲಾ ಬೆಳವಣಿಗೆಗಳು ಸಂಭವಿಸುತ್ತವೆ ಅಲ್ವಾ? ಜಗತ್ತಿನ ಯಾವುದೋ ಭಾಗದಲ್ಲಿ ನಡೆಯುವ ಯುದ್ಧ, ಇನ್ನೆಲ್ಲೋ ನಡೆಯುವ ಕ್ರೀಡಾಕೂಟ, ನಮ್ಮ ಅಕ್ಕ-ಪಕ್ಕದಲ್ಲೇ ನಡೆಯವ ಬೆಳವಣಿಗೆಗಳು ನಮ್ಮನ್ನು ಬಹುವಾಗಿ ಆಕರ್ಷಿಸುತ್ತವೆ. ಜಗತ್ತಿನಲ್ಲಿ ನಡೆಯವ ಎಲ್ಲಾ ವಿದ್ಯಮಾನಗಳ ಬಗ್ಗೆ ಮಾಹಿತಿ ಪಡೆಯಬೇಕು ಎಂಬ ಹಂಬಲ ಸಹಜವಾಗಿ ಎಲ್ಲರಿಗೂ ಇರುತ್ತದೆ. ಇದೇ ಕಾರಣಕ್ಕೆ ಈ ಲೇಖನದಲ್ಲಿ ಇಂದು (ಜುಲೈ 20-ಸೋಮವಾರ) ಸಂಭವಿಸಿದ ಪ್ರಮುಖ ಬೆಳವಣಿಗೆಗಳ ಕುರಿತು ಸಮಗ್ರ ಮಾಹಿತಿ ನೀಡಲಾಗಿದೆ.

ವಿಜಯ ಕರ್ನಾಟಕ 20 Jul 2026 11:55 pm

ಮುಂಗಾರು ಅಧಿವೇಶನ | ನೂತನ ರಾಜ್ಯಸಭಾ ಸದಸ್ಯರಿಂದ ಪ್ರಮಾಣ ವಚನ ಸ್ವೀಕಾರ

ಹೊಸದಿಲ್ಲಿ,ಜು.20: ರಾಜ್ಯಸಭೆಯ ಸಭಾಪತಿ ಸಿ.ಪಿ. ರಾಧಾಕೃಷ್ಣನ್ ಅವರು ಸೋಮವಾರ ಮೇಲ್ಮನೆಯ ಒಂಬತ್ತು ನೂತನ ಚುನಾಯಿತ ಸದಸ್ಯರಿಗೆ ಪ್ರಮಾಣ ವಚನ ಬೋಧಿಸಿದರು. ಮುಕೇಶ್ ಭಾಯಿ ಜೆ. ರಾಥ್ವಾ (ಬಿಜೆಪಿ-ಗುಜರಾತ್), ಪವನ್ ಖೇರಾ (ಕಾಂಗ್ರೆಸ್-ಕರ್ನಾಟಕ), ಮಹೇಶ್ ಕೇವತ್ (ಬಿಜೆಪಿ- ಮಧ್ಯಪ್ರದೇಶ), ಜಮೇಶ ಪಾಂಗ್ಸಾಂಗ್ ಕೊಂಗ್ಕಲ್ ಸಂಗ್ಮಾ (ಎನ್ಪಿಪಿ-ಮೇಘಾಲಯ),ಖಿಯಾಂಗ್ಟೆ ಲಾಲ್ತುವಾಗ್ಕಿಮಾ (ಮಿಜೋರಾಂ), ಸತೀಶ್ ಪೂನಿಯಾ (ಬಿಜೆಪಿ-ರಾಜಸ್ಥಾನ), ಪ್ರಕಾಶ್ ಚಿಕ್ ಬರೈಕ್ (ಬಿಜೆಪಿ-ಪ. ಬಂಗಾಳ), ಸುಶ್ಮಿತಾ ದೇವ್ (ಬಿಜೆಪಿ-ಪ.ಬಂಗಾಳ) ಮತ್ತು ಸುಖೇಂದು ಶೇಖರ್ ರಾಯ್ (ಬಿಜೆಪಿ-ಪ.ಬಂಗಾಳ) ಅವರು ಮುಂಗಾರು ಅಧಿವೇಶನದ ಮೊದಲ ದಿನ ಪ್ರಮಾಣ ವಚನ ಸ್ವೀಕರಿಸಿದ ನೂತನ ಚುನಾಯಿತ ಸದಸ್ಯರಾಗಿದ್ದಾರೆ. ಈ ಹಿಂದೆ ಚುನಾಯಿತರಾಗಿದ್ದ ಇತರ ಕೆಲವು ಸದಸ್ಯರು ಈಗಾಗಲೇ ಅಧಿವೇಶನದ ನಡುವಿನ ಅವಧಿಯಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದರು.

ವಾರ್ತಾ ಭಾರತಿ 20 Jul 2026 11:51 pm

Bihar | ಶಾಲೆಗೆ ತೆರಳುತ್ತಿದ್ದ ವಿದ್ಯಾರ್ಥಿನಿಯ ಗುಂಡಿಕ್ಕಿ ಹತ್ಯೆ

ಸಮಸ್ತಿಪುರ, ಜು. 20: ಬಿಹಾರದ ಸಮಸ್ತಿಪುರದಲ್ಲಿ 12ನೇ ತರಗತಿ ವಿದ್ಯಾರ್ಥಿನಿಯೊಬ್ಬಳನ್ನು ಶಾಲೆಗೆ ಹೋಗುವಾಗ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಈ ಘಟನೆ ಕೈಜಿಯಾ ಗ್ರಾಮದಲ್ಲಿ ನಡೆದಿದೆ. ಮೃತಪಟ್ಟ ಯುವತಿಯನ್ನು ಉಮೇಶ್ ಠಾಕೂರ್ ಅವರ ಪುತ್ರಿ ಸೋನಮ್ ಕುಮಾರಿ ಎಂದು ಗುರುತಿಸಲಾಗಿದೆ. ಈಕೆ ಪೂಸಾ ರಸ್ತೆಯ ಕಸ್ತೂರ್ಬಾ ವಿದ್ಯಾಲಯದ ವಿದ್ಯಾರ್ಥಿನಿಯಾಗಿದ್ದಳು. ಸೋನಮ್ ಕುಮಾರಿ ಸೋಮವಾರ ಬೆಳಗ್ಗೆ ತನ್ನ ಶಾಲೆಗೆ ನಡೆದುಕೊಂಡು ಹೋಗುತ್ತಿದ್ದಾಗ ಬೈಕ್‌ನಲ್ಲಿ ಆಗಮಿಸಿದ ಆರೋಪಿಗಳು ಗುಂಡಿಟ್ಟು ಹತ್ಯೆಗೈದಿದ್ದಾರೆ. ಈ ಹತ್ಯೆಯ ಹಿನ್ನೆಲೆಯಲ್ಲಿ ಆಕೆಯ ಕುಟುಂಬದ ಸದಸ್ಯರು ಮತ್ತು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ತನಿಖೆ ಆರಂಭಿಸಿದ್ದು, ಉದ್ವಿಗ್ನಗೊಳ್ಳುತ್ತಿದ್ದ ಪರಿಸ್ಥಿತಿಯನ್ನು ಹತೋಟಿಗೆ ತಂದರು. ಗ್ರಾಮದ ಯುವಕನೊಬ್ಬ ವಿದ್ಯಾರ್ಥಿನಿಗೆ ಗುಂಡಿಕ್ಕಿ ಕೊಂದಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಸಂತ್ರಸ್ತೆ ತಾಯಿ ಸಂಗೀತಾ ದೇವಿ, ತನ್ನ ಪುತ್ರಿ ಗ್ರಾಮದ ಯುವಕನೊಂದಿಗೆ ಸಂಪರ್ಕದಲ್ಲಿದ್ದಳು. ಆತನೇ ಆಕೆಯನ್ನು ಗುಂಡಿಟ್ಟು ಕೊಂದಿದ್ದಾನೆ ಎಂದು ತಿಳಿಸಿದ್ದಾರೆ. ಕೊಲೆಯ ಹಿಂದಿನ ದಿನ ಆರೋಪಿಯು ಆಕೆಯನ್ನು ವಿವಾಹವಾಗುವಂತೆ ಕೇಳಿಕೊಂಡಿದ್ದ ಎಂದು ಸಂಗೀತಾ ದೇವಿ ಹೇಳಿದ್ದಾರೆ.

ವಾರ್ತಾ ಭಾರತಿ 20 Jul 2026 11:49 pm

ಸೌದಿ ಅರೇಬಿಯಾ ವಿರುದ್ಧ ಕಡಲ ದಿಗ್ಬಂಧನ: ಹೌದಿ ಘೋಷಣೆ

ಸನಾ, ಜು.20: ಕಳೆದ ವಾರ ಪರಸ್ಪರ ಗುಂಡಿನ ಚಕಮಕಿ ನಡೆಸಿದ ಬೆನ್ನಲ್ಲೇ, ಯೆಮನ್‍ನ ಇರಾನ್ ಬೆಂಬಲಿತ ಹೌದಿ ಬಂಡುಕೋರರು ತಮ್ಮ ಶತ್ರು ದೇಶವಾದ ಸೌದಿ ಅರೇಬಿಯಾದ ವಿರುದ್ಧ ಕಡಲ ದಿಗ್ಬಂಧನವನ್ನು ಸೋಮವಾರ ಘೋಷಿಸಿದ್ದಾರೆ. `ಕಣ್ಣಿಗೆ ಕಣ್ಣು' ಎಂಬ ಸಿದ್ಧಾಂತದ ಆಧಾರದ ಮೇಲೆ, ಅಪರಾಧಿ ಸೌದಿ ಶತ್ರುವಿನ ವಿರುದ್ಧ ಈ ತಕ್ಷಣದಿಂದಲೇ ಜಾರಿಗೆ ಬರುವಂತೆ ನಾವು ಕಡಲ ದಿಗ್ಬಂಧನವನ್ನು ಘೋಷಿಸುತ್ತಿದ್ದೇವೆ' ಎಂದು ಹೌದಿ ಮಿಲಿಟರಿ ವಕ್ತಾರ ಯಾಹ್ಯಾ ಸಾರೀ ಹೇಳಿದ್ದಾರೆ.

ವಾರ್ತಾ ಭಾರತಿ 20 Jul 2026 11:47 pm

ಮೋದಿ ‘ಅತ್ಯಂತ ಯುವ ವಿರೋಧಿ’ ಪ್ರಧಾನಿ : ರಾಹುಲ್ ಗಾಂಧಿ ಟೀಕೆ

ಹೊಸದಿಲ್ಲಿ,ಜು.20: ನರೇಂದ್ರ ಮೋದಿಯವರು ದೇಶದ ಇತಿಹಾಸದಲ್ಲೇ ‘ಅತ್ಯಂತ ಯುವ ವಿರೋಧಿ’ ಪ್ರಧಾನಿಯಾಗಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸೋಮವಾರ ಬಣ್ಣಿಸಿದ್ದಾರೆ. ಪ್ರಸ್ತುತ ಸರ್ಕಾರವು ಯುವಜನರನ್ನು ಕೈಬಿಟ್ಟಿರುವುದು ಮಾತ್ರವಲ್ಲದೆ ಅವರ ಮೇಲೆಯೇ ಮುಗಿಬೀಳುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ಪ್ರಧಾನಿ ಮೋದಿ ಅವರು ಎಷ್ಟು ‘ಯುವ ವಿರೋಧಿ’ ಎಂದರೆ ವಿಫಲರಾಗಿರುವ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಯನ್ನು ಪಡೆಯಲು ಕೂಡ ಅವರಿಂದ ಸಾಧ್ಯವಾಗುತ್ತಿಲ್ಲ ಎಂದು ರಾಹುಲ್ ಎಕ್ಸ್‌ನಲ್ಲಿ ಗೇಲಿ ಮಾಡಿದ್ದಾರೆ. ‘152 ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗಿವೆ. 7.5 ಕೋಟಿ ವಿದ್ಯಾರ್ಥಿಗಳು ಬಲಿಪಶುಗಳಾಗಿದ್ದಾರೆ. ಆದರೂ ಒಬ್ಬನೇ ಒಬ್ಬ ಅಪರಾಧಿಗೆ ಶಿಕ್ಷೆಯಾಗಿಲ್ಲ. ಹಾಗಾದರೆ ಶಿಕ್ಷೆ ಅನುಭವಿಸಿದವರು ಯಾರು? ಕಷ್ಟಪಟ್ಟು ಓದಿದ ದೇಶದ ಯುವಜನರು’ ಎಂದು ಅವರು ಕಿಡಿಕಾರಿದ್ದಾರೆ. ಪ್ರಶ್ನೆಪತ್ರಿಕೆ ಸೋರಿಕೆ ಮಾಡಿದ ಅಪರಾಧಿಗಳು ಮುಕ್ತವಾಗಿ ತಿರುಗಾಡುತ್ತಿದ್ದಾರೆ ? ಆದರೆ ನ್ಯಾಯಸಮ್ಮತವಾದ ವಿಷಯಗಳನ್ನು ಪ್ರಸ್ತಾವಿಸುವ ವಿದ್ಯಾರ್ಥಿಗಳನ್ನು ಎಳೆದೊಯ್ದು, ಥಳಿಸಲಾಗುತ್ತಿದೆ. ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ವಾರ್ತಾ ಭಾರತಿ 20 Jul 2026 11:44 pm

ಉಕ್ರೇನ್ ಬಂದರಿನಲ್ಲಿ ರಷ್ಯಾ ಕ್ಷಿಪಣಿ ದಾಳಿ: ಕಾಸರಗೋಡಿನ ಯುವಕ ಸೇರಿ 10 ಮಂದಿ ಮೃತ್ಯು

ಕಾಸರಗೋಡು: ಉಕ್ರೇನ್‌ನ ದಕ್ಷಿಣ ಬಂದರು ನಗರ ಒಡೆಸಾ ಕರಾವಳಿಯಲ್ಲಿ ಸರಕು ಹಡಗಿನ ಮೇಲೆ ರಷ್ಯಾ ನಡೆಸಿದ ಭೀಕರ ಕ್ಷಿಪಣಿ ದಾಳಿಯಲ್ಲಿ ಕಾಸರಗೋಡಿನ ನಾವಿಕ ಯುವಕ ಸೇರಿದಂತೆ 10 ನಾವಿಕರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಮೃತ ಭಾರತೀಯ ನಾವಿಕನನ್ನು ಕಾಸರಗೋಡು ವೆಲ್ಲರಿಕುಂಡು ನಿವಾಸಿ ಅಖಿಲ್ ಜೋಯನ್ (26) ಎಂದು ಗುರುತಿಸಲಾಗಿದೆ. ಜೋಳದ ಸರಕು ಸಾಗಿಸುತ್ತಿದ್ದ ಟರ್ಕಿಶ್ ಮೂಲದ ಕಂಪನಿಗೆ ಸೇರಿದ ಹಡಗು 'ಗೋಲ್ಡನ್ ಲಿಯೋ' ಮೇಲೆ ರಷ್ಯಾ  ಕ್ಷಿಪಣಿಗಳನ್ನು ಹಾರಿಸಿತು. ಉಕ್ರೇನ್‌ನಿಂದ ಜೋಳ ತುಂಬಿಕೊಂಡು ಹೋಗುತ್ತಿದ್ದ ಹಡಗಿನ ಮೇಲೆ ರವಿವಾರ ತಡರಾತ್ರಿ ದಾಳಿ ನಡೆದಿದೆ. ಕ್ಷಿಪಣಿಗಳು ನೇರವಾಗಿ ಹಡಗಿನ ಸ್ಟಾರ್‌ಬೋರ್ಡ್ ಬದಿಗೆ ಬಡಿದು ಇಡೀ ಹಡಗಿನಲ್ಲಿ ಭಾರಿ ಬೆಂಕಿಯನ್ನು ಉಂಟು ಮಾಡಿತು. ಹಡಗಿನಲ್ಲಿದ್ದ ಒಟ್ಟು 17 ನಾವಿಕರಲ್ಲಿ 9 ಸಿಬ್ಬಂದಿ ಮತ್ತು ಉಕ್ರೇನ್‌ನ ಒಬ್ಬ ಪೈಲಟ್ ಸೇರಿದಂತೆ ಒಟ್ಟು 10 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಉಕ್ರೇನಿಯನ್ ಕರಾವಳಿ ಕಾವಲು ಪಡೆ ಇಡೀ ರಾತ್ರಿ ಕಾರ್ಯಾಚರಣೆ ನಡೆಸಿ ಗಂಭೀರವಾಗಿ ಗಾಯಗೊಂಡಿದ್ದ 8 ಮಂದಿಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿತು. ಮೃತ ಅಖಿಲ್ ಜೋಯನ್ ಕಳೆದ ಆರು ವರ್ಷಗಳಿಂದ ಮರ್ಚೆಂಟ್ ನೇವಿಯಲ್ಲಿ ಸೇವೆ ಸಲ್ಲಿಸುತ್ತಿದ್ದರು ಎಂದು ತಿಳಿದುಬಂದಿದೆ.

ವಾರ್ತಾ ಭಾರತಿ 20 Jul 2026 11:44 pm

ಕಾಫಿನಾಡಿನ ಮಲೆನಾಡು ಭಾಗದಲ್ಲಿ ಚುರುಕುಗೊಂಡ ಮಳೆ

ಚಿಕ್ಕಮಗಳೂರು: ಕಾಫಿನಾಡಿನ ಮಲೆನಾಡು ಭಾಗದಲ್ಲಿ ಮುಂಗಾರು ಮಳೆ ಮತ್ತೆ ಚುರುಕುಗೊಂಡಿದೆ. ರವಿವಾರ ರಾತ್ರಿ ಹಾಗೂ ಸೋಮವಾರ ಇಡೀ ದಿನ ಜಿಲ್ಲೆಯ ಮಲೆನಾಡು ಭಾಗದಲ್ಲಿ ಉತ್ತಮ ಮಳೆಯಾಗಿದ್ದು, ತುಂಗಾ, ಭದ್ರಾ, ಹೇಮಾವತಿ ನದಿಗಳಲ್ಲಿ ನೀರಿನ ಹರಿವು ಹೆಚ್ಚಾಗಿದೆ. ಚಿಕ್ಕಮಗಳೂರು ತಾಲೂಕಿನ ಆಲ್ದೂರು, ಮಲ್ಲಂದೂರು, ವಸ್ತಾರೆ ಹೋಬಳಿಗಳೂ ಸೇರಿದಂತೆ, ಮೂಡಿಗೆರೆ, ಶೃಂಗೇರಿ, ಕೊಪ್ಪ, ಎನ್.ಆರ್.ಪುರ, ಕಳಸ ತಾಲೂಕುಗಳ ವ್ಯಾಪ್ತಿಯಲ್ಲಿ ರವಿವಾರ ಹಾಗೂ ಸೋಮವಾರ ಉತ್ತಮ ಮಳೆಯಾಗಿದ್ದು, ಉತ್ತಮ ಮಳೆಯಿಂದಾಗಿ ಜಿಲ್ಲೆಯ ಪ್ರಮುಖ ನದಿಗಳಲ್ಲಿ ನೀರಿನ ಹರಿವಿನ ಪ್ರಮಾಣದಲ್ಲಿ ಏರಿಕೆಯಾಗಿದೆ. ಹಳ್ಳಕೊಳ್ಳಗಳು ತುಂಬಿ ಹರಿಯಲಾರಂಭಿಸಿವೆ. ಈ ಬಾರಿ ಜಿಲ್ಲೆಗೆ ಮುಂಗಾರು ಮಳೆ ತಡವಾಗಿ ಕಾಲಿಟ್ಟಿದ್ದು, ಜುಲೈ ತಿಂಗಳ ಆರಂಭದಲ್ಲಿ ಜಿಲ್ಲೆಯಲ್ಲಿ ಉತ್ತಮ ಮಳೆ ಸುರಿದಿದೆ. ಕಳೆದ ಕೆಲ ದಿನಗಳಿಂದ ಮಳೆ ಬಿಡುವು ನೀಡಿದ್ದು, ರವಿವಾರದಿಂದ ಮಳೆ ಮತ್ತೆ ಆರ್ಭಟಿಸುತ್ತಿದೆ. ಮಳೆಯ ಆರ್ಭಟಕ್ಕೆ ಅಲ್ಲಲ್ಲಿ ಮರಗಳು, ವಿದ್ಯುತ್ ಕಂಬಗಳು ಧರಾಶಾಯಿಯಾಗಿದ್ದು, ಗ್ರಾಮೀಣ ಭಾಗದ ಹಲವಾರು ಗ್ರಾಮಗಳಲ್ಲಿ ವಿದ್ಯುತ್ ಕಣ್ಣಾ ಮುಚ್ಚಾಲೆ ಆಟ ಆರಂಭವಾಗಿದೆ. ಮಲೆನಾಡು ಭಾಗದಲ್ಲಿ ಮಳೆ ಆರ್ಭಟ ಮತ್ತೆ ಆರಂಭವಾಗಿರುವುದರಿಂದ ಭತ್ತದ ಗದ್ದೆಗಳ ಕೃಷಿಕರು ಸಂತಸಗೊಂಡಿದ್ದಾರೆ. ಭತ್ತದ ಕೃಷಿಕರು ಗದ್ದೆಗಳ ಹೂಟೆ, ಸಸಿಮಡಿ ತಯಾರಿಕೆಯಲ್ಲಿ ನಿರತರಾಗಿದ್ದಾರೆ. ಮಲೆನಾಡು ಭಾಗದಲ್ಲಿ ಉತ್ತಮ ಮಳೆಯಾಗುತ್ತಿದ್ದರೇ ಜಿಲ್ಲೆಯ ಬಯಲು ಭಾಗವಾದ ಕಡೂರು, ತರೀಕೆರೆ, ಅಜ್ಜಂಪುರ ತಾಲೂಕುಗಳಲ್ಲಿ ಮಳೆಯ ಕೊರತೆ ಎದುರಾಗಿದೆ. ಮಳೆ ಕೊರತೆಯಿಂದಾಗಿ ಕೃಷಿಕರು ಕೃಷಿ ಚಟುವಟಿಕೆಯಿಂದ ದೂರ ಇಳಿಯುವಂತಾಗಿದೆ. ಈ ಮೂರು ತಾಲೂಕುಗಳ ವ್ಯಾಪ್ತಿಯಲ್ಲಿ ಮಳೆಯ ತೀವ್ರ ಕೊರತೆ ಉಂಟಾಗಿದ್ದು, ಬರ ಪರಿಸ್ಥಿತಿಯ ಛಾಯೆ ಎಲ್ಲೆಡೆ ಕಂಡು ಬರುತ್ತಿದೆ. ಚಿಕ್ಕಮಗಳೂರು ತಾಲೂಕಿನ ಮಲ್ಲಂದೂರು, ಆಲ್ದೂರು, ವಸ್ತಾರೆ ಹೋಬಳಿಗಳ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗುತ್ತಿದ್ದರೇ, ಚಿಕ್ಕಮಗಳೂರು ನಗರ ಸುತ್ತಮುತ್ತಲ ಗ್ರಾಮಗಳಲ್ಲೂ ಉತ್ತಮ ಮಳೆಯಾಗುತ್ತಿದೆ, ಆದರೆ ಲಕ್ಯಾ, ಅಂಬಳೆ ಹೋಬಳಿಗಳ ವ್ಯಾಪ್ತಿಯಲ್ಲಿ ಮಳೆಯ ಕೊರತೆ ಉಂಟಾಗಿದ್ದು, ರೈತರು ಕೃಷಿ ಚಟುವಟಿಕೆ ಮಾಡಲು ಸಾಧ್ಯವಾಗದಂತಾಗಿದೆ. ಕಾಫಿನಾಡಿನಲ್ಲಿ ಈ ಬಾರಿ ವಾಡಿಕೆಗಿಂತ ಮಳೆ ಕಡಿಮೆಯಾಗಿದ್ದರೂ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಭಾಗದಲ್ಲಿ ಕಳೆದ ವಾರ ಸುರಿದ ದಾಖಲೆಯ ಮಳೆ ಇದೀಗ ಕಾಫಿ ಬೆಳೆಗಾರರನ್ನು ಸಂಕಷ್ಟಕ್ಕೆ ತಳ್ಳಿದೆ. ಒಂದೇ ಸಮನೆ ಧಾರಾಕಾರವಾಗಿ ಮಳೆ ಸುರಿದ ಪರಿಣಾಮ ತೋಟಗಳಲ್ಲಿ ತೇವಾಂಶ ಹೆಚ್ಚಾಗಿ ಕಾಫಿ ಗಿಡಗಳಿಗೆ ಮಾರಕವಾಗಿರುವ ಕೊಳೆರೋಗ ವ್ಯಾಪಕವಾಗಿ ಹರಡುತ್ತಿದೆ. ಹಸಿರು ಕಾಯಿಯಾಗಿರುವ ಕಾಫಿ ಕೊಳೆತು ನೆಲಕ್ಕೆ ಉದುರುತ್ತಿದ್ದು, ಬೆಳೆಗಾರರಲ್ಲಿ ಆತಂಕ ಹುಟ್ಟಿಸಿದೆ. ಒಂದೆಡೆ ಬಿಡುವಿಲ್ಲದೆ ಸುರಿಯುತ್ತಿರುವ ಮಳೆಯಿಂದಾಗಿ ತೋಟಕ್ಕೆ ಕಾಲಿಡಲೂ ಸಾಧ್ಯವಾಗುತ್ತಿಲ್ಲ, ಇನ್ನೊಂದೆಡೆ ಔಷಧಿ ಸಿಂಪಡಣೆ ಸಂಪೂರ್ಣ ಸ್ಥಗಿತಗೊಂಡಿರುವುದರಿಂದ ರೋಗ ತಡೆಗಟ್ಟುವುದು ಅಸಾಧ್ಯವಾಗಿದೆ. ಫಸಲು ಕಣ್ಣೆದುರೇ ನಾಶವಾಗುತ್ತಿರುವುದು ಕಾಫಿಯ ಉತ್ಪಾದನೆ ಮತ್ತು ಗುಣಮಟ್ಟಕ್ಕೆ ದೊಡ್ಡ ಪೆಟ್ಟು ನೀಡಿದೆ. ಈ ತೀವ್ರ ಸಂಕಷ್ಟದ ವೇಳೆಯಲ್ಲಿ ಸರ್ಕಾರ ಹಾಗೂ ಕಾಫಿ ಮಂಡಳಿ ತಕ್ಷಣವೇ ಸಮೀಕ್ಷೆ ನಡೆಸಿ, ನಷ್ಟಕ್ಕೊಳಗಾದ ರೈತರಿಗೆ ಶೀಘ್ರವೇ ಪರಿಹಾರ ನೀಡಲು ಧಾವಿಸಬೇಕು ಎಂದು ಬೆಳೆಗಾರರು ಒತ್ತಾಯಿಸಿದ್ದಾರೆ.

ವಾರ್ತಾ ಭಾರತಿ 20 Jul 2026 11:42 pm

ಜಂತರ್ ಮಂತರ್‌ಗೆ ತೆರಳದಂತೆ ತಡೆ : ರಿಕ್ಷಾ ಹತ್ತಿದ ಜಮ್ಮುಕಾಶ್ಮೀರ ಸಿಎಂ ಉಮರ್ ಅಬ್ದುಲ್ಲಾ

ಹೊಸದಿಲ್ಲಿ,ಜು.20: ಸೆಂಟ್ರಲ್ ದಿಲ್ಲಿಯಲ್ಲಿ ಜಾರಿಯಲ್ಲಿದ್ದ ನಿರ್ಬಂಧಗಳ ನಡುವೆ ಜಮ್ಮುಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ ನೀಡಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಲು ಸೋಮವಾರ ಜಂತರ್ ಮಂತರ್ ಕಡೆಗೆ ತೆರಳುತ್ತಿದ್ದ ನ್ಯಾಷನಲ್ ಕಾನ್ಫರೆನ್ಸ್ (ಎನ್ಸಿ) ನಾಯಕರನ್ನು ಪೊಲೀಸರು ತಡೆದ ಬೆನ್ನಲ್ಲೇ, ಜಮ್ಮುಕಾಶ್ಮೀರ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಅವರು ಪೃಥ್ವಿರಾಜ್ ರಸ್ತೆಯನ್ನು ತಲುಪಲು ಆಟೋರಿಕ್ಷಾ ಏರಿದರು. ಸಂಸತ್ತಿನ ಮುಂಗಾರು ಅಧಿವೇಶನದ ಮೊದಲ ದಿನವಾದ ಸೋಮವಾರ ಪಕ್ಷದ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಮತ್ತು ಉಮರ್ ಅಬ್ದುಲ್ಲಾ ನೇತೃತ್ವದಲ್ಲಿ ಎನ್ಸಿ ನಾಯಕರು ಹಾಗೂ ಕಾರ್ಯಕರ್ತರು ಜಮ್ಮುಕಾಶ್ಮೀರಕ್ಕೆ ತಕ್ಷಣವೇ ಪೂರ್ಣ ಪ್ರಮಾಣದ ರಾಜ್ಯದ ಸ್ಥಾನಮಾನವನ್ನು ಮರುಸ್ಥಾಪಿಸುವಂತೆ ಆಗ್ರಹಿಸಲು ದಿಲ್ಲಿಯಲ್ಲಿ ಜಮಾಯಿಸಿದ್ದರು. ತನ್ನ ಆಟೋರಿಕ್ಷಾ ಪ್ರಯಾಣದ ವೀಡಿಯೊವನ್ನು ಎಕ್ಸ್‌ನಲ್ಲಿ ಹಂಚಿಕೊಂಡಿರುವ ಉಮರ್ ಅಬ್ದುಲ್ಲಾ,‘ಜಂತರ್ ಮಂತರ್‌ನಿಂದ ನನ್ನ ನಡಿಗೆಯು ಮತ್ತೊಂದು ಮೆರವಣಿಗೆಯಾಗಿ ಬದಲಾಗುವಂತಿತ್ತು. ಆದ್ದರಿಂದ ನಾವು ಮೊದಲು ಸಿಕ್ಕ ಸಾರಿಗೆ ವಾಹನವನ್ನು ಬಳಸಿಕೊಂಡೆವು’ ಎಂದು ಹೇಳಿದ್ದಾರೆ. ಪೃಥ್ವಿರಾಜ್ ರಸ್ತೆಯನ್ನು ತಲುಪಿದ ನಂತರ ಉಮರ್ ಅಬ್ದುಲ್ಲಾ ಆಟೋರಿಕ್ಷಾ ಚಾಲಕನಿಗೆ 500 ರೂ.ನೀಡಿದರು.

ವಾರ್ತಾ ಭಾರತಿ 20 Jul 2026 11:39 pm

ವಿಶ್ವಕಪ್ ಟ್ರೋಫಿಯೊಂದಿಗೆ ಮ್ಯಾಡ್ರಿಡ್‌ಗೆ ಮರಳಿದ ಸ್ಪೇನ್

ಮ್ಯಾಡ್ರಿಡ್, ಜು.20: ಫಿಫಾ ವಿಶ್ವಕಪ್ ಟೂರ್ನಿಯನ್ನು ಗೆದ್ದ ಸಂಭ್ರಮದಲ್ಲಿರುವ ಸ್ಪೇನ್ ಫುಟ್ಬಾಲ್ ತಂಡವು ಸೋಮವಾರ ತವರಿಗೆ ಮರಳಿದ್ದು ವಿಶ್ವಕಪ್ ಹೀರೋಗಳಿಗೆ ವೀರೋಚಿತ ಸ್ವಾಗತ ನೀಡಲಾಯಿತು. ಮ್ಯಾಡ್ರಿಡ್‌ನ ಬೀದಿಗಳಲ್ಲಿ ಸಂಭ್ರಮಾಚರಣೆಗಳು ನಡೆದವು. ವಿಶ್ವಕಪ್ ವಿಜೇತ ತಂಡವು ಸ್ಪ್ಯಾನಿಶ್ ರಾಜಧಾನಿಗೆ ಬಂದಿಳಿದಿದೆ ಎಂದು ರಾಯಲ್ ಸ್ಪ್ಯಾನಿಶ್ ಫುಟ್ಬಾಲ್ ಒಕ್ಕೂಟ ಸೋಮವಾರ ದೃಢಪಡಿಸಿದೆ. ಆದರೆ, ಆಟಗಾರರು ಐತಿಹಾಸಿಕ ಸಾಧನೆಯನ್ನು ಅಭಿಮಾನಿಗಳೊಂದಿಗೆ ಆಚರಿಸುವ ಬಗ್ಗೆ ತಮ್ಮ ಬಯಕೆ ವ್ಯಕ್ತಪಡಿಸಿದ್ದಾರೆ. ‘‘ಹೌದು.. ವಿಶ್ವಕಪ್ ಕೊನೆಗೂ ಸ್ಪೇನ್‌ಗೆ ಬಂದಿದೆ. ಸ್ಪೇನ್ ತಂಡವು ಮ್ಯಾಡ್ರಿಡ್‌ಗೆ ಬಂದಿಳಿದಿದೆ. ನಿಮ್ಮೊಂದಿಗೆ ಆಚರಿಸಲು ಕಾತರದಿಂದಿದ್ದೇವೆ’’ಎಂದು ಎಕ್ಸ್‌ನಲ್ಲಿ ಬರೆಯಲಾಗಿದೆ. ಸ್ಪೇನ್ ‘ರಿವರ್ಸ್ ಆಫ್ ದಿ ವರ್ಲ್ಡ್’ಎಂಬ ಹೆಸರಿನ ಸಾರ್ವಜನಿಕ ವಿಜಯೋತ್ಸವ ಆಚರಿಸುವುದಾಗಿ ಘೋಷಿಸಿದೆ. ವಿಜಯೋತ್ಸವವು ಮ್ಯಾಡ್ರಿಡ್‌ನ ಸಿಬೆಲೆಸ್ ಕಮ್ಯುನಿಕೇಶನ್ಸ್ ಪ್ಯಾಲೇಸ್‌ನಲ್ಲಿ ನಡೆಯಲಿದೆ.

ವಾರ್ತಾ ಭಾರತಿ 20 Jul 2026 11:36 pm

ಕಣ್ಣೀರಿನೊಂದಿಗೆ ವಿಶ್ವಕಪ್‌ಗೆ ವಿದಾಯ ಕೋರಿದ ಮೆಸ್ಸಿ

ನ್ಯೂಜರ್ಸಿ, ಜು. 20: ಫಿಫಾ ವಿಶ್ವಕಪ್ ಫೈನಲ್‌ನಲ್ಲಿ ರವಿವಾರ ರಾತ್ರಿ ಸ್ಪೇನ್ ವಿರುದ್ಧ ಅರ್ಜೆಂಟೀನ ಪರಾಭವಗೊಂಡ ಬಳಿಕ, ಕತ್ತಿನಲ್ಲಿ ಬೆಳ್ಳಿ ಪದಕ ಧರಿಸಿದ ಲಿಯೊನೆಲ್ ಮೆಸ್ಸಿ ಕಣ್ಣೀರು ಸುರಿಸುತ್ತಾ ಮೈದಾನದಿಂದ ಹೊರಗೆ ಹೋದರು. ಫೈನಲ್ ಪಂದ್ಯದ ಹೆಚ್ಚುವರಿ ಅವಧಿಯಲ್ಲಿ ಬಾರಿಸಿದ ಗೋಲಿನ ಮೂಲಕ ಸ್ಪೇನ್ ಅರ್ಜೆಂಟೀನವನ್ನು 1-0 ಅಂತರದಿಂದ ಸೋಲಿಸಿತು. ಇದರೊಂದಿಗೆ ಹಾಲಿ ಚಾಂಪಿಯನ್ ತಂಡದ ಪ್ರಶಸ್ತಿ ಉಳಿಸಿಕೊಳ್ಳುವ ಅಭಿಯಾನ ನಿರಾಶೆಯೊಂದಿಗೆ ಕೊನೆಗೊಂಡಿತು. ವಿಶ್ವಕಪ್ ಪಾದಾರ್ಪಣೆಯ 20 ವರ್ಷಗಳ ನಂತರ, 39 ವರ್ಷದ ಮೆಸ್ಸಿಗೆ ಮತ್ತೊಂದು ಪವಾಡ ಮಾಡಲು ಸಾಧ್ಯವಾಗಲಿಲ್ಲ. ಸತತ ಎರಡನೇ ವಿಶ್ವಕಪ್ ಪ್ರಶಸ್ತಿಯನ್ನು ಬೆನ್ನಟ್ಟುತ್ತಿದ್ದ ಅರ್ಜೆಂಟೀನಾವನ್ನು, ಮೆಟ್ಲೈಫ್ ಸ್ಟೇಡಿಯಂನಲ್ಲಿ ಸ್ಪೇನ್ ದೀರ್ಘಕಾಲದವರೆಗೆ ಕಟ್ಟಿಹಾಕಿತು. ಅಲ್ಲಿ ನೆರೆದಿದ್ದ 80,663 ಪ್ರೇಕ್ಷಕರು ತಮ್ಮ ’ಮೆಸ್ಸಯ್ಯ’ (ರಕ್ಷಕ) ಮತ್ತೊಮ್ಮೆ ಟ್ರೋಫಿ ಎತ್ತುವುದನ್ನು ನೋಡಲು ಕಾತರದಿಂದ ಕಾಯುತ್ತಿದ್ದರು. ಆದರೆ, ಅಲ್ಲಿ ಸ್ಪೇನ್ ತನ್ನ ಎರಡನೇ ವಿಶ್ವಕಪ್ ಪ್ರಶಸ್ತಿಯನ್ನು ಎತ್ತಿತು. ಕೆನ್ನೆಗಳ ಮೇಲೆ ಹರಿಯುತ್ತಿದ್ದ ಕಣ್ಣೀರಿನೊಂದಿಗೆ ಮೆಸ್ಸಿ ರನ್ನರ್ ಅಪ್ ಪ್ರಶಸ್ತಿಯನ್ನು ಸ್ವೀಕರಿಸಿದರು. ಮೆಸ್ಸಿಯ ಎಂಟು ಗೋಲುಗಳು ಅರ್ಜೆಂಟೀನಾವನ್ನು ಗುಂಪು ಹಂತ ಮತ್ತು ನಾಕೌಟ್ ಸುತ್ತುಗಳನ್ನು ದಾಟಲು ಸಹಾಯ ಮಾಡಿದವು. ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್‌ನಲ್ಲಿ, ಹೆಚ್ಚುವರಿ ಸಮಯದಲ್ಲಿ ಅವರು ಎರಡೂ ಗೋಲುಗಳಿಗೆ ನೆರವಾಗಿದ್ದರು. ಈಜಿಪ್ಟ್ ವಿರುದ್ಧ ಅರ್ಜೆಂಟೀನ 2-0ಯಿಂದ ಹಿನ್ನಡೆಯಲ್ಲಿದ್ದಾಗ ಮತ್ತು ಹೊರ ಬೀಳುವ ಭೀತಿಯಲ್ಲಿದ್ದಾಗ, ಮೊದಲ ಗೋಲಿಗೆ ಕ್ರಾಸ್ ಒದಗಿಸಿದ ಅವರು, ನಂತರ ತಾವೇ ಸಮಬಲದ ಗೋಲು ಬಾರಿಸಿದರು. ಟೂರ್ನಮೆಂಟ್‌ನುದ್ದಕ್ಕೂ, ಮೆಸ್ಸಿ ತನ್ನ ಸಹ ಆಟಗಾರರಿಗಿಂತ ಕಡಿಮೆ ಓಡಿದರೂ ಪಂದ್ಯಗಳ ಮೇಲೆ ಪ್ರಭಾವ ಬೀರುವ ತನ್ನ ಸಾಮರ್ಥ್ಯವನ್ನು ಮತ್ತೊಮ್ಮೆ ನಿರೂಪಿಸಿದರು. ಅವರು ಮೈದಾನದಲ್ಲಿದ್ದ ಅರ್ಧದಷ್ಟು ಸಮಯ ಕೇವಲ ನಡೆಯುತ್ತಿದ್ದರು, ಪ್ರತಿ ಪಂದ್ಯಕ್ಕೆ ಸರಾಸರಿ ಸುಮಾರು ಐದು ಕಿಲೋಮೀಟರ್ ಕ್ರಮಿಸುತ್ತಿದ್ದರು. ತಂಡಕ್ಕೆ ಅಗತ್ಯವಿದ್ದಾಗಲೆಲ್ಲಾ ಗುಣಮಟ್ಟದ ಆಟದ ಮೂಲಕ ಮಿಂಚಲು ಅವರು ತನ್ನ ಶಕ್ತಿಯನ್ನು ಉಳಿಸಿಕೊಳ್ಳುತ್ತಿದ್ದರು. ಒಂದು ವೇಳೆ ಇದು ಅವರ ಕೊನೆಯ ಪಂದ್ಯವಾಗಿದ್ದರೆ, ಅವರು ತನ್ನ ವಿಶ್ವಕಪ್ ವೃತ್ತಿಜೀವನವನ್ನು 21 ಗೋಲುಗಳೊಂದಿಗೆ ಕೊನೆಗೊಳಿಸುತ್ತಾರೆ. ಮೆಸ್ಸಿ ನಿವೃತ್ತಿ ಹೊಂದುತ್ತಾರಾ? ಲಿಯೋನೆಲ್ ಮೆಸ್ಸಿ ನಿವೃತ್ತಿ ಹೊಂದುತ್ತಾರಾ? ಫಿಫಾ ವಿಶ್ವಕಪ್ 2026 ರ ಫೈನಲ್, ಫುಟ್ಬಾಲ್‌ನ ಅತಿದೊಡ್ಡ ವೇದಿಕೆಯಲ್ಲಿ ಅವರ ಕೊನೆಯ ಪ್ರದರ್ಶನವೇ? ಆದರೆ ಅರ್ಜೆಂಟೀನದ ಮುಖ್ಯ ತರಬೇತುದಾರ ಲಿಯೊನೆಲ್ ಸ್ಕಲೋನಿ, ಮೆಸ್ಸಿಯ ಭವಿಷ್ಯವು ಸಂಪೂರ್ಣವಾಗಿ ಅವರ ಸ್ವಂತ ನಿರ್ಧಾರವಾಗಿರುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ. ಮೆಸ್ಸಿ ಬಯಸುವವರೆಗೆ ಆಡುವುದನ್ನು ಮುಂದುವರಿಸುತ್ತಾರೆ ಎಂದು ಫೈನಲ್‌ನ ನಂತರ ಮಾತನಾಡಿದ ಸ್ಕಲೋನಿ ಹೇಳಿದರು. ‘‘ಅವರಿಗೆ ಈಗ 39 ವರ್ಷ. ನಂಬಲಾಗುತ್ತಿಲ್ಲ. ನನ್ನ ಕಡೆಯಿಂದ ಹೊಸದಾಗಿ ಹೇಳಲು ಏನೂ ಇಲ್ಲ. ಆಡಲು ಬಯಸುವವರೆಗೂ ಅವರು ಆಡುತ್ತಾರೆ ಹಾಗೂ ತಂಡದ ಎಲ್ಲಾ ಆಟಗಾರರು, ಸಹ ಆಟಗಾರರು ಮತ್ತು ಅವರ ಎಲ್ಲರೂ ಅವರನ್ನು ಬೆಂಬಲಿಸುತ್ತಾರೆ. ಏಕೆಂದರೆ ಅವರು ಸಾರ್ವಕಾಲಿಕ ಅತ್ಯುತ್ತಮ ಫುಟ್ಬಾಲ್ ಆಟಗಾರನಾಗಿದ್ದಾರೆ’’ ಎಂದು ಸ್ಕಲೋನಿ ಹೇಳಿರುವುದಾಗಿ‘ಅತ್ಲೆಟಿಕ್’ ಮಾಡಿದೆ.

ವಾರ್ತಾ ಭಾರತಿ 20 Jul 2026 11:34 pm

ಇರಾನ್ ಪೂರ್ಣಪ್ರಮಾಣದ ಯುದ್ಧದಲ್ಲಿದೆ : ಮಸೂದ್ ಪೆಝೆಶ್ಕಿಯಾನ್

ಟೆಹರಾನ್, ಜು.20: ಇರಾನ್ ದೇಶವು ಅಮೆರಿಕದೊಂದಿಗೆ ಪೂರ್ಣಪ್ರಮಾಣದ ಯುದ್ಧದಲ್ಲಿ ತೊಡಗಿಸಿಕೊಂಡಿದೆ ಮತ್ತು ಈ ಸಂಘರ್ಷದ ಪರಿಣಾಮಗಳನ್ನು ಇರಾನ್ ಒಪ್ಪಿಕೊಳ್ಳಲೇಬೇಕು ಎಂದು ಅಧ್ಯಕ್ಷ ಮಸೂದ್ ಪೆಝೆಶ್ಕಿಯಾನ್ ಹೇಳಿದ್ದಾರೆ. ನಾವು ವಾಸ್ತವಿಕವಾಗಿರಬೇಕು ಮತ್ತು ಈ ಪ್ರತಿರೋಧದ ಸಹಜ ಪರಿಣಾಮಗಳನ್ನು ಸ್ವೀಕರಿಸಬೇಕು. ಪ್ರಸ್ತುತ ಸಂಘರ್ಷವು ಕೇವಲ ಕ್ಷಿಪಣಿ ದಾಳಿಗಳಿಗೆ ಮಾತ್ರ ಸೀಮಿತವಾಗಿಲ್ಲ. ಇರಾನ್ ತನ್ನ ರಾಷ್ಟ್ರೀಯ ಹಕ್ಕುಗಳು ಅಥವಾ ಹಿತಾಸಕ್ತಿಗಳ ವಿಷಯದಲ್ಲಿ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ. ಕೇವಲ ಮಿಲಿಟರಿ ಕ್ರಮಗಳ ಮೂಲಕ ಇರಾನ್ ಜನರನ್ನು ಶರಣಾಗುವಂತೆ ಮಾಡಲು ಸಾಧ್ಯವಿಲ್ಲ ಎಂಬುದನ್ನು ದೇಶದ ವಿರೋಧಿಗಳು ಅರ್ಥಮಾಡಿಕೊಂಡಿದ್ದಾರೆ' ಎಂದು ಮಸೂದ್ ಪೆಝೆಶ್ಕಿಯಾನ್ ಹೇಳಿದ್ದಾರೆ. ಈಗ ಎಂದಿಗಿಂತಲೂ ಹೆಚ್ಚಾಗಿ ಏಕತೆ, ಒಗ್ಗಟ್ಟು ಮತ್ತು ಸಾಮೂಹಿಕ ವಿವೇಕದ ಆಧಾರದ ಮೇಲೆ ನಿರ್ಧಾರ ತೆಗೆದುಕೊಳ್ಳುವ ಅಗತ್ಯವಿದೆ. ನಾವು ತಿಳುವಳಿಕಾ ಪತ್ರದಲ್ಲಿ ಯಾವುದೇ ರಿಯಾಯಿತಿಗಳನ್ನು ನೀಡಿಲ್ಲ. ಒಪ್ಪಂದದ ನಿಬಂಧನೆಗಳ ಅಡಿಯಲ್ಲಿ ಇರಾನ್ ತನ್ನ ಯಾವುದೇ ಹಕ್ಕುಗಳು, ಹಿತಾಸಕ್ತಿಗಳು ಅಥವಾ ತತ್ವಗಳಿಂದ ಹಿಂದೆ ಸರಿದಿಲ್ಲ ಎಂದು ಪೆಝೆಶ್ಕಿಯಾನ್ ಸ್ಪಷ್ಟಪಡಿಸಿರುವುದಾಗಿ ವರದಿಯಾಗಿದೆ.

ವಾರ್ತಾ ಭಾರತಿ 20 Jul 2026 11:28 pm

ಫಿಫಾ ವಿಶ್ವಕಪ್‌ ಸೋಲು; ಅರ್ಜೆಂಟೀನಾದಲ್ಲಿ ಭುಗಿಲೆದ್ದ ದಂಗೆ, ರಣಾಂಗಣವಾದ ರಾಜಧಾನಿ! ಆಟಗಾರರು ಮರಳಿ ಬಂದರೆ ಏನು ಗತಿ?

ಫಿಪಾ ವಿಶ್ವಕಪ್‌ 2026ರ ಫೈನಲ್‌ ಪಂದ್ಯಲ್ಲಿ ಸ್ಪೇನ್‌ ವಿರುದ್ಧ ಅರ್ಜೆಂಟೀನಾ ಸೋಲುತ್ತಲೇ, ಆ ದೇಶದಲ್ಲಿ ಭಾರೀ ಹಿಂಸಾಚಾರ ಭುಗಿಲೆದ್ದಿದೆ. ರಾಜಧಾನಿ ಬ್ಯೂನಸ್ ಐರಿಸ್​ನಲ್ಲಿ ಫುಟ್ಬಾಲ್‌ ಅಭಿಮಾನಿಗಳು ಹಿಂಸಾಚಾರದಲ್ಲಿ ನಿರತರಾಗಿದ್ದು, ಪೊಲೀಸರು ಬಲಪ್ರಯೋಗದ ಮೂಲಕ ಪರಿಸ್ಥಿತಿಯನ್ನು ಹತೋಟಿಗೆ ತರಲು ಪ್ರಯತ್ನಿಸುತ್ತಿದ್ದಾರೆ. ದಂಗೆಕೋರರ ವಿರುದ್ಧ ಪೊಲೀಸರು ಅಶ್ರುವಾಯು ಮತ್ತು ಜಲಫಿರಂಗಿಗಳನ್ನು ಬಳಸಿದ್ದಾರೆ. ಈ ಮಧ್ಯೆ ಅರ್ಜೆಂಟೀನಾ ಆಟಗಾರರು ಸ್ವದೇಶಕ್ಕೆ ಮರಳಿದಾಗ ಮತ್ತಷ್ಟು ದಂಗೆ ಭುಗಿಲೇಳಬಹುದು ಎಂಬ ಆತಂಕ ಎದುರಾಗಿದೆ. ಇಲ್ಲಿದೆ ಹೆಚ್ಚಿನ ಮಾಹಿತಿ.

ವಿಜಯ ಕರ್ನಾಟಕ 20 Jul 2026 10:32 pm