\ಅಂಗನವಾಡಿಯ ಒಂದು ಮಗುವಿನ ತರಕಾರಿ ಖರ್ಚಿಗೆ ಕೇವಲ 50 ಪೈಸೆ\
ರಾಜ್ಯ ಸರ್ಕಾರವು ಅಂಗನವಾಡಿಯ ಒಂದು ಮಗುವಿನ ತರಕಾರಿ ಖರ್ಚಿಗೆ ಕೇವಲ 50 ಪೈಸೆ ನೀಡುತ್ತಿರುವುದು ನಿಜಕ್ಕೂ ಆಘಾತ ತಂದಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಖಂಡಿಸಿದ್ದಾರೆ. ಮಕ್ಕಳ ಆರೋಗ್ಯಕರ ಮತ್ತು ಸದೃಢ ಬೆಳವಣಿಗೆಗೆ ಪೌಷ್ಟಿಕ ಆಹಾರವು ಅತ್ಯಗತ್ಯ. ಮಕ್ಕಳಿಗೆ ನೀಡುವ ಆಹಾರವು ಅವರ ಬೆಳವಣಿಗೆಗೆ ಪೂರಕವಾಗಿರಬೇಕು. ದವಸ, ಧಾನ್ಯಗಳು, ತರಕಾರಿಗಳು, ಹಣ್ಣುಗಳು, ಹಾಲು ಇವೆಲ್ಲವೂ ಅಂಗನವಾಡಿ
Maize Rate Today: ಇಂದು ಕರ್ನಾಟಕದಲ್ಲಿ ಮೆಕ್ಕೆಜೋಳದ ಮಾರುಕಟ್ಟೆ ದರವೆಷ್ಟು? ಪಟ್ಟಿ
Karnataka Maize Price: ಕರ್ನಾಟಕದಲ್ಲಿ ಈ ಬಾರಿ ಕಬ್ಬಿಗೆ ಮಾತ್ರವಲ್ಲದೇ ಮೆಕ್ಕೆಜೋಳಕ್ಕೂ ಸೂಕ್ತ ಬೆಲೆ ಸಿಗದೇ ರೈತರು ಕಂಗಾಲಾಗಿದ್ದಾರೆ. ಅದರ ಆದಾಯ ನೆಚ್ಚಿಕೊಂಡಿದ್ದ ಬೆಳೆಗಾರರಿಗೆ ಆರ್ಥಿಕ ತೊಂದರೆ ಆಗಿದೆ. ಹೀಗಾಗಿ ಸೂಕ್ತ ಬೆಲೆ ನೀಡುವಂತೆ ಕೋರಿದ್ದರು. ಇದು ರಾಜಕೀಯ ವಾಕ್ಸಮರಕ್ಕೂ ಕಾರಣವಾಗಿತ್ತು. ಇತ್ತೀಚೆಗೆ ಸಿಎಂ ಸಿದ್ದರಾಮಯ್ಯ ಅವರು ಎಂಎಸ್ಪಿ ನಿಗದಿತ ಬೆಲೆಗೆ ಒಂದು ಕ್ವಿಂಟಾಲ್ಗೆ 2400 ರೂಪಾಯಿಗೆ
ಬಿಹಾರ ಚುನಾವಣೆಯಲ್ಲಿ ಅಕ್ರಮ ನಡೆದಿದೆ, ಆದರೆ ಯಾವುದೇ ಪುರಾವೆ ಇಲ್ಲ : ಪ್ರಶಾಂತ್ ಕಿಶೋರ್
ಪಾಟ್ನಾ : ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಜನ್ ಸುರಾಜ್ ಪಕ್ಷಕ್ಕೆ ಹಿನ್ನಡೆ ಬಳಿಕ ಮೌನ ಮುರಿದ ಪಕ್ಷದ ಸ್ಥಾಪಕ, ಮಾಜಿ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್, ಚುನಾವಣೆಯಲ್ಲಿ ಅಕ್ರಮ ನಡೆದಿದೆ. ಆದರೆ ಈ ಹಂತದಲ್ಲಿ ಆರೋಪಕ್ಕೆ ಸಂಬಂಧಿಸಿ ಯಾವುದೇ ಪುರಾವೆಗಳಿಲ್ಲ ಎಂದು ಹೇಳಿದರು. ಪ್ರಶಾಂತ್ ಕಿಶೋರ್ ಅವರ ಜನ್ ಸುರಾಜ್ ಪಕ್ಷ ಬಿಹಾರ ಚುನಾವಣೆಯಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿತ್ತು. ಜನ್ ಸುರಾಜ್ ಪಕ್ಷಕ್ಕೆ ಚುನಾವಣಾ ಪ್ರಚಾರದ ಸಮಯದಲ್ಲಿ ಉತ್ತಮ ಪ್ರತಿಕ್ರಿಯೆ ದೊರೆತಿತ್ತು. ಜನರಿಂದ ಪಡೆದ ಪ್ರತಿಕ್ರಿಯೆಗೆ ಫಲಿತಾಂಶಗಳು ಹೊಂದಿಕೆಯಾಗುವುದಿಲ್ಲ. ಏನೋ ತಪ್ಪಾಗಿದೆ ಎಂದು ನಾವು ನಂಬುತ್ತೇವೆ ಎಂದು ಪ್ರಶಾಂತ್ ಕಿಶೋರ್ ಹೇಳಿದರು. ಬಿಹಾರ ಚುನಾವಣೆಯಲ್ಲಿ ಕೆಲವು ಕಾಣದ ಶಕ್ತಿಗಳು ಕೆಲಸ ಮಾಡಿದಂತೆ ಕಂಡು ಬರುತ್ತಿದೆ. ಇವಿಎಂನಲ್ಲಿ ಅವ್ಯವಾಹಾರ ನಡೆದಿದೆ ಎಂದು ಧ್ವನಿ ಎತ್ತುವಂತೆ ಕೆಲವರು ನನ್ನನ್ನು ಆಗ್ರಹಿಸುತ್ತಿದ್ದಾರೆ. ಇದು ಸೋತ ನಂತರ ಜನರು ಸಾಮಾನ್ಯವಾಗಿ ಮಾಡುವ ಆರೋಪವಾಗಿದೆ. ನನ್ನ ಬಳಿ ಯಾವುದೇ ಪುರಾವೆಗಳಿಲ್ಲ. ಆದರೆ ಅನೇಕ ವಿಷಯಗಳು ಸರಿಯಾಗಿ ಹೊಂದಿಕೆಯಾಗುತ್ತಿಲ್ಲ. ಮೇಲ್ನೋಟಕ್ಕೆ ಏನೋ ತಪ್ಪಾಗಿದೆ ಎಂದು ತೋರುತ್ತದೆ. ಆದರೆ ಏನು ತಪ್ಪಾಗಿದೆ ಎಂಬುದು ನನಗೆ ಗೊತ್ತಿಲ್ಲ ಎಂದು ಪ್ರಶಾಂತ್ ಕಿಶೋರ್ ಹೇಳಿದ್ದಾರೆ. ಬಿಹಾರದಲ್ಲಿ ಸಾವಿರಾರು ಮಹಿಳಾ ಮತದಾರರಿಗೆ ಎನ್ಡಿಎ ಮೈತ್ರಿಕೂಟ ಹಣವನ್ನು ವಿತರಿಸಿದೆ ಎಂದು ಪ್ರಶಾಂತ್ ಕಿಶೋರ್ ಆರೋಪಿಸಿದರು. ಚುನಾವಣೆ ಘೋಷಣೆ ದಿನದಿಂದ ಮತದಾನದವರೆಗೆ ಮಹಿಳೆಯರಿಗೆ 10,000ರೂ.ನೀಡಲಾಗಿದೆ. ಅವರಿಗೆ ಒಟ್ಟು 2 ಲಕ್ಷ ರೂ ನೀಡುವುದಾಗಿ ಹೇಳಲಾಗಿದೆ. 10,000ರೂ. ಮೊದಲ ಕಂತು ಎಂದು ಹೇಳಿದ್ದಾರೆ. ಎನ್ಡಿಎಗೆ, ನಿತೀಶ್ ಕುಮಾರ್ಗೆ ಮತ ಹಾಕಿದರೆ ಉಳಿದ ಹಣ ಸಿಗುತ್ತದೆ ಎಂದು ಮಹಿಳೆಯರಿಗೆ ಹೇಳಲಾಗಿತ್ತು. ಈ ಮೊದಲು ಬಿಹಾರದಲ್ಲಾಗಲಿ, ಭಾರತದಲ್ಲಾಗಲಿ ಮಹಿಳೆಯರಿಗೆ ಸರಕಾರ ಈ ರೀತಿ ನೇರವಾಗಿ ಹಣವನ್ನು ವಿತರಿಸಿರುವುದು ನನಗೆ ತಿಳಿದಿಲ್ಲ ಎಂದು ಪ್ರಶಾಂತ್ ಕಿಶೋರ್ ಹೇಳಿದರು. ಜನ್ ಸುರಾಜ್ ವಿರುದ್ಧ ಹೆಚ್ಚು ಪರಿಣಾಮ ಬೀರಿದ ಮತ್ತೊಂದು ಅಂಶವೆಂದರೆ ಲಾಲು ಅವರ “ಜಂಗಲ್ ರಾಜ್” ಮರಳುವ ಭಯ. ಪ್ರಚಾರದ ಕೊನೆಯ ವೇಳೆ ಅನೇಕ ಜನರು ಜನ್ ಸುರಾಜ್ ಗೆಲ್ಲುವ ಸ್ಥಿತಿಯಲ್ಲಿಲ್ಲ ಎಂದು ಭಾವಿಸಿದ್ದರು. ಅವರಿಗೆ ಲಾಲು ಅವರ ಜಂಗಲ್ ರಾಜ್ ಮರಳುವ ಭಯವಿತ್ತು. ಇದು ಜನರನ್ನು ಪಕ್ಷಕ್ಕೆ ಮತ ಹಾಕದಂತೆ ದೂರ ಮಾಡಿತು ಎಂದು ಪ್ರಶಾಂತ್ ಕಿಶೋರ್ ಹೇಳಿದರು.
IMD Weather Forecast: ಚಂಡಮಾರುತ ಪರಿಣಾಮ ಈ ಭಾಗಗಳಲ್ಲಿ ನವೆಂಬರ್ 27ರ ವರೆಗೂ ರಣಭೀಕರ ಮಳೆ ಮುನ್ಸೂಚನೆ
IMD Weather Forecast: ದೇಶದ ಬಹುತೇಕ ರಾಜ್ಯಗಳಲ್ಲಿ ಚಳಿ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಳ ಆಗುತ್ತಲಿದೆ. ಈ ನಡುವೆಯೇ ಕೆಲವೆಡೆ ಮಳೆ ಮುಂದುವರೆದಿದೆ. ಹಾಗೆಯೇ ಬಂಗಾಳಕೊಲ್ಲಿಯಲ್ಲಿ ಸೆನ್ಯಾರ್ ಚಂಡಮಾರುತ ಪರಿಣಾಮ ಈ ಭಾಗಗಳಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ರಣಭೀಕರ ಮಳೆ ಸುರಿಯುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಾಗಾದ್ರೆ ಎಲ್ಲೆಲ್ಲಿ ಎನ್ನುವ
ಮೊರಾರ್ಜಿ ವಸತಿ ಶಾಲೆಯಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ
ಹೊಸಪೇಟೆ : ನಗರದ ಹೊರಭಾಗದ ಜಂಭುನಾಥ ರಸ್ತೆಯಲ್ಲಿರುವ ಎಪಿಜೆ ಅಬ್ದುಲ್ ಕಲಾಂ ವಸತಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳು ಕುಡಿಯುವ ನೀರಿಗಾಗಿ ನಿತ್ಯವು ಹಾಹಾಕಾರ ಅನುಭವಿಸುವ ದುಸ್ಥಿತಿ ಒಂದೆಡೆಯಾದರೆ, ಶುದ್ಧ ಕುಡಿಯುವ ನೀರಿನ ವಾಟರ್ ಕ್ಯಾನ್ಗಳನ್ನು ಹೊರಗಿನಿಂದ ಖರೀದಿಸಿ ಮಕ್ಕಳಿಗೆ ಕುಡಿಯುವ ನೀರು ಪೂರೈಕೆ ಮಾಡಲು ಅಧಿಕಾರಿಗಳು ಪರದಾಡುತ್ತಿರುವ ಪ್ರಸಂಗ ಹೊಸಪೇಟೆಯಲ್ಲಿ ನಡೆಯುತ್ತಿದೆ. 6 ನೇ ತರಗತಿಯಿಂದ ದ್ವಿತೀಯ ಪಿಯುಸಿ ವರೆಗೆ ವಿದ್ಯಾಭ್ಯಾಸ ಮಾಡಲು ಅವಕಾಶವಿರುವ ಈ ವಸತಿ ಶಾಲೆಯಲ್ಲಿ 190 ಬಾಲಕಿಯರ ಸಹಿತ ಒಟ್ಟು 420 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ವಸತಿ ಶಾಲೆಗೆ ಮುಖ್ಯವಾಗಿ ಇರಬೇಕಾದ ವಾರ್ಡನ್ ಇಲ್ಲ. ಎರಡು ವರ್ಷಗಳಿಂದ ವಾರ್ಡನ್ ಹುದ್ದೆ ಖಾಲಿ ಇದೆ. 19 ಶಿಕ್ಷಕರು ಇರಬೇಕಾದ ಶಾಲೆಯಲ್ಲಿ 17 ಶಿಕ್ಷಕರಿದ್ದಾರೆ. 8 ಖಾಯಂ ಶಿಕ್ಷಕರು ಹೊರತುಪಡಿಸಿದರೆ, ಉಳಿದವರೆಲ್ಲಾ ಅತಿಥಿ ಶಿಕ್ಷಕರು. ಕಾಲೇಜು ಕಟ್ಟಡ ಕಾಮಗಾರಿ ಪುರ್ಣಗೊಂಡಿದ್ದರೂ ಇನ್ನು ಹಸ್ತಾಂತರವಾಗದ ಹಿನ್ನ್ನೆಲೆಯಲ್ಲಿ ಕಾಲೇಜು ವಿದ್ಯಾರ್ಥಿಗಳು, ಪ್ರೌಢಶಾಲಾ ವಿದ್ಯಾರ್ಥಿಗಳ ವಸತಿ ನಿಲಯದಲ್ಲಿ ಇರಬೇಕಾದಂತಹ ಪರಿಸ್ಥಿತಿ ಇದೆ. ತರಗತಿಗಳು ನಡೆಸಲು ತೊಂದರೆಯಾದ ಹಿನ್ನೆಲೆಯಲ್ಲಿ ಹಸ್ತಾಂತರವಾಗದ ಕಾಲೇಜು ಕಟ್ಟಡದಲ್ಲಿಯೇ ಒಂದು ಭಾಗದಲ್ಲಿ ಪಿಯುಸಿ ತರಗತಿಗಳನ್ನು ನಡೆಸಲಾಗುತ್ತಿದೆ. ವಸತಿ ಶಾಲೆಯಲ್ಲಿ 420 ವಿದ್ಯಾರ್ಥಿಗಳು, ಶಿಕ್ಷಕರು, ಸಿಬ್ಬಂದಿ ಸೇರಿ 450 ಜನರಿದ್ದರೂ ಶುದ್ದ ಕುಡಿಯುವ ನೀರಿನ ವ್ಯವಸ್ಥೆಯಿಲ್ಲ. ಕುಡಿಯುವ ನೀರನ್ನು ಪ್ರತಿ ದಿನ ಹೊರಗಡೆಯಿಂದ ಕ್ಯಾನ್ಗಳ ಮೂಲಕ ತರಲಾಗುತ್ತಿದೆ. ಭೋಜನಾಲಯದಲ್ಲಿ ಕೈತೊಳೆಯಲು ಅಳವಡಿಸಲಾಗಿರುವ ಪೈಪ್ಗಳು ಕಿತ್ತು ಹೋಗಿ ನೀರು ಬೇಕಾಬಿಟ್ಟಿ ಹರಿಯುವುದು ಕಂಡು ಬರುತ್ತಿದೆ. ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಕರ್ಯಗಳ ಕೊರತೆ ಎದುರಿಸುತ್ತಿರುವ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಅಲ್ಪಸಂಖ್ಯಾತರ ಇಲಾಖೆಯ ಅಧಿಕಾರಿಗಳು ಹಾಗೂ ಜಿಲ್ಲಾಡಳಿತ ಭೇಟಿ ನೀಡುವ ಮೂಲಕ ವಸತಿ ಶಾಲೆಗೆ ಬೇಕಾಗಿರುವ ಶಾಶ್ವತ ಕುಡಿಯುವ ನೀರು ಹಾಗೂ ಇನ್ನಿತರ ಮೂಲಭೂತ ಸೌಕರ್ಯಗಳನ್ನು ವ್ಯವಸ್ಥೆ ಕಲ್ಪಿಸಬೇಕಾಗಿದೆ. ನಮ್ಮ ವಸತಿ ಶಾಲೆಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಪ್ರತಿ ದಿನ ಹೊರಗಡೆಯಿಂದ ಕ್ಯಾನ್ ಗಳಲ್ಲಿ ನೀರು ತಂದು ಬಳಸಲಾಗುತ್ತಿದೆ. ಕರೆಂಟ್ ಕೈಕೊಟ್ಟರೆ ಜನರೇಟರ್ ವ್ಯವಸ್ಥೆ ಇಲ್ಲ. ತಾತ್ಕಾಲಿಕ ಚಾರ್ಜರ್ ಬಲ್ಬ್ ಗಳನ್ನು ಅಳವಡಿಸಲಾಗಿದೆ. ಕಟ್ಟಡ ಕಾಮಗಾರಿ ಸ್ಥಗಿತ, ಶಿಕ್ಷಕರು ಹಾಗೂ ವಾರ್ಡನ್ ಕೊರತೆ ಕುರಿತು ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಕಾಲೇಜು ಕಟ್ಟಡ ಕಾಮಗಾರಿ ಪೂರ್ಣಗೊಂಡಿದ್ದು, ನಮಗೆ ಹಸ್ತಾಂತರ ಮಾಡುವುದು ಮಾತ್ರ ಬಾಕಿ ಇದೆ. -ಪರಶುರಾಮ ತಲೆವಾಡ, ಪ್ರಾಂಶುಪಾಲ, ಮೊರಾರ್ಜಿ ದೇಸಾಯಿ ವಸತಿ ಶಾಲೆ, ಹೊಸಪೇಟೆ ನಮ್ಮ ವಸತಿ ಶಾಲೆಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಹೊರಗಡೆಯಿಂದ ಕ್ಯಾನ್ಗಳಲ್ಲಿ ತರುವ ನೀರನ್ನು ಕುಡಿಯಬೇಕಾಗಿದೆ. ಕರೆಂಟ್ ಹೋದರೆ ಕತ್ತಲೆಯಲ್ಲಿ ಇರಬೇಕಾಗುತ್ತದೆ. ಸಂಬಂಧಪಟ್ಟ ಅಧಿಕಾರಿಗಳು ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಜನರೇಟರ್ ವ್ಯವಸ್ಥೆ ಕಲ್ಪಿಸಬೇಕಾಗಿದೆ. -ಕವನ, ದ್ವಿತೀಯ ಪಿಯುಸಿ ವಿದ್ಯಾರ್ಥಿ
ಕಡೆ ಕ್ಷಣದ ವಿಮಾನ ಟಿಕೆಟ್ ರದ್ದತಿಗಳಿಗೆ ಪ್ರಯಾಣಿಕರಿಗೆ ಸಂಪೂರ್ಣ ಹಣ ನಷ್ಟವಾಗುವುದನ್ನು ತಪ್ಪಿಸಲು ಭಾರತ ಸರ್ಕಾರವು ಮುಂದಿನ 2-3 ತಿಂಗಳುಗಳಲ್ಲಿ ಹೊಸ ಯೋಜನೆಯನ್ನು ಜಾರಿಗೆ ತರಲು ಸಿದ್ಧತೆ ನಡೆಸಿದೆ. ಈ ಯೋಜನೆಯಡಿ, ವಿಮಾನ ಟಿಕೆಟ್ಗಳಲ್ಲಿ ಅಂತರ್ನಿರ್ಮಿತ ಪ್ರಯಾಣ ವಿಮೆ ಇರಲಿದ್ದು, ಇದರಿಂದ ರದ್ದುಪಡಿಸಿದ ಟಿಕೆಟ್ಗಳಿಗೆ 80% ವರೆಗೆ ಮರುಪಾವತಿ ದೊರೆಯುವ ಸಾಧ್ಯತೆ ಇದೆ. ಪ್ರಸ್ತುತ, ಮೂರು ಗಂಟೆಗಳೊಳಗೆ ರದ್ದು ಮಾಡಿದರೆ ಯಾವುದೇ ಮರುಪಾವತಿ ಇರುವುದಿಲ್ಲ. ವಿಮಾನಯಾನ ಸಂಸ್ಥೆಗಳೇ ವಿಮಾ ಕಂಪನಿಗಳೊಂದಿಗೆ ಪ್ರೀಮಿಯಂ ಮೊತ್ತವನ್ನು ಭರಿಸಿ, ಪ್ರಯಾಣಿಕರಿಗೆ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಈ ಸೌಲಭ್ಯ ಒದಗಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ.
ಚಂಡೀಗಢಕ್ಕೆ ಲೆಫ್ಟಿನೆಂಟ್ ಗವರ್ನರ್ ನೇಮಿಸಲು ಕೇಂದ್ರದಿಂದ ಮಸೂದೆ: ಪಂಜಾಬ್ ವಿರೋಧ
ಚಂಡೀಗಢ: ಸದ್ಯ ಪಂಜಾಬ್ ರಾಜ್ಯಪಾಲರೇ ಆಡಳಿತ ನಡೆಸುತ್ತಿರುವ ಕೇಂದ್ರಾಡಳಿತ ಪ್ರದೇಶ ಚಂಡೀಗಢವನ್ನು ಸಂವಿಧಾನದ 240ನೇ ವಿಧಿಯಡಿ ಸೇರ್ಪಡೆ ಮಾಡಿ, ಅಲ್ಲಿಗೆ ರಾಷ್ಟ್ರಪತಿಯಿಂದ ಪ್ರತ್ಯೇಕ ಲೆಫ್ಟಿನೆಂಟ್ ಗವರ್ನರ್ ಅನ್ನು ನೇಮಿಸುವ ಮಸೂದೆಯನ್ನು ಮಂಡಿಸುವ ಪ್ರಸ್ತಾವವನ್ನು ಎನ್ಡಿಎ ನೇತೃತ್ವದ ಕೇಂದ್ರ ಸರಕಾರ ಮುಂದಿಟ್ಟಿದೆ. ಈ ಪ್ರಸ್ತಾವಿತ ಮಸೂದೆಯ ವಿರುದ್ಧ ಪಂಜಾಬ್ ರಾಜ್ಯದ ಆಡಳಿತಾರೂಢ ಆಮ್ ಆದ್ಮಿ ಪಕ್ಷ ಹಾಗೂ ವಿರೋಧ ಪಕ್ಷ ಕಾಂಗ್ರೆಸ್ ಕಳವಳ ವ್ಯಕ್ತಪಡಿಸಿದ್ದು, ತನ್ನ ಸ್ವಂತ ರಾಜಧಾನಿ ಮೇಲಿನ ಪಂಜಾಬ್ ಹಕ್ಕನ್ನು ಈ ಮಸೂದೆ ಮತ್ತಷ್ಟು ದುರ್ಬಲಗೊಳಿಸುತ್ತದೆ ಎಂದು ಆಕ್ಷೇಪ ವ್ಯಕ್ತಪಡಿಸಿವೆ. ರಾಜ್ಯಸಭಾ ಅಂತರ್ಜಾಲ ತಾಣದ ವಾರ್ತಾಪತ್ರದ ಪ್ರಕಾರ, ಸಂವಿಧಾನದ 131ನೇ ತಿದ್ದುಪಡಿ ಮಸೂದೆ, 2025 ಅನ್ನು ಡಿಸೆಂಬರ್ 1, 2025ರಂದು ಪ್ರಾರಂಭವಾಗಲಿರುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಮಂಡಿಸಲು ನಿರ್ಧರಿಸಲಾಗಿದೆ. ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಸಿಂಗ್ ಮಾನ್, “ಸಂಸತ್ತಿನ ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ಕೇಂದ್ರ ಸರಕಾರ ಮಂಡಿಸಲು ಮುಂದಾಗಿರುವ ಪ್ರಸ್ತಾವಿತ ಸಂವಿಧಾನದ 131ನೇ ತಿದ್ದುಪಡಿ ಮಸೂದೆಯನ್ನು ನಾವು ಬಲವಾಗಿ ವಿರೋಧಿಸುತ್ತೇವೆ. ಈ ತಿದ್ದುಪಡಿ ಪಂಜಾಬ್ ನ ಹಿತಾಸಕ್ತಿಗೆ ವಿರುದ್ಧವಾಗಿದೆ” ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. “ನಮ್ಮ ರಾಜ್ಯದ ಹಳ್ಳಿಗಳನ್ನು ಬೇರುಸಹಿತ ಕಿತ್ತುಹಾಕುವ ಮೂಲಕ ಸ್ಥಾಪಿಸಲಾದ ಕೇಂದ್ರಾಡಳಿತ ಪ್ರದೇಶವು ಪಂಜಾಬ್ ಗೆ ಮಾತ್ರ ಸೇರಿದೆ. ನಮ್ಮ ಹಕ್ಕನ್ನು ನಾವು ಹಾಗೆ ಕಳೆದುಕೊಳ್ಳಲು ಬಿಡುವುದಿಲ್ಲ. ಅದಕ್ಕಾಗಿ ನಾವು ಯಾವುದೇ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ” ಎಂದು ಅವರು ಘೋಷಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಹಾಗೂ ವಿಧಾನಸಭಾ ವಿಪಕ್ಷ ನಾಯಕ ಪ್ರತಾಪ್ ಸಿಂಗ್ ಬಾಜ್ವಾ ಕೂಡಾ ಈ ಪ್ರಸ್ತಾವಿತ ಮಸೂದೆಯನ್ನು ವಿರೋಧಿಸಿದ್ದು, ಇದರ ವಿರುದ್ಧ ಎಲ್ಲ ಪಕ್ಷಗಳ ಒಗ್ಗಟ್ಟಿಗೆ ಕರೆ ನೀಡಿದ್ದಾರೆ. “ಈ ಮಸೂದೆಯು ಪಂಜಾಬ್ ನ ಸ್ವಂತ ರಾಜಧಾನಿಯ ಮೇಲಿನ ಐತಿಹಾಸಿಕ ಸಾಂವಿಧಾನಿಕ ಮತ್ತು ಭಾವನಾತ್ಮಕ ಹಕ್ಕನ್ನು ದುರ್ಬಲಗೊಳಿಸುವ ಸ್ಪಷ್ಟ ಪ್ರಯತ್ನವಾಗಿದೆ” ಎಂದು ಅವರು ಆರೋಪಿಸಿದ್ದಾರೆ.
ಚಂಡೀಗಢವನ್ನು ಸಂವಿಧಾನದ 240 ನೇ ವಿಧಿಯ ಅಡಿಯಲ್ಲಿ ತರಲು ಕೇಂದ್ರದ ಉದ್ದೇಶ; ವಿಪಕ್ಷಗಳಿಂದ ತೀವ್ರ ವಿರೋಧ
ಕೇಂದ್ರ ಸರ್ಕಾರವು 2025ರ ಚಳಿಗಾಲದ ಅಧಿವೇಶನದಲ್ಲಿ ಸಂವಿಧಾನದ 131ನೇ ತಿದ್ದುಪಡಿ ಮಸೂದೆಯನ್ನು ಪರಿಚಯಿಸಲಿದೆ. ಇದು ಚಂಡೀಗಢವನ್ನು ರಾಷ್ಟ್ರಪತಿಯ ನೇರ ಆಡಳಿತಕ್ಕೆ ತರಲು ಉದ್ದೇಶಿಸಿದೆ. ಈ ಕ್ರಮವು ಪಂಜಾಬ್ನ ರಾಜಕೀಯ ಪಕ್ಷಗಳಿಂದ ತೀವ್ರ ವಿರೋಧಕ್ಕೆ ಕಾರಣವಾಗಿದೆ, ಇದು ರಾಜ್ಯದ ಹಕ್ಕುಗಳ ಮೇಲೆ ದಾಳಿ ಎಂದು ಆರೋಪಿಸಲಾಗಿದೆ.
ಸ್ಥಳೀಯಾಡಳಿತ ಸಂಸ್ಥೆ ಚುನಾವಣೆ: ಕಾಸರಗೋಡು ಜಿಲ್ಲೆ-ಮಂಗಳೂರು ನಗರ ಪೊಲೀಸ್ ಮುಖ್ಯಸ್ಥರ ಸಭೆ
ಕಾಸರಗೋಡು: ಕಾಸರಗೋಡಿನಲ್ಲಿ ಸ್ಥಳೀಯಾಡಳಿತ ಸಂಸ್ಥೆ ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮದಂಗವಾಗಿ ಕೇರಳ - ಕರ್ನಾಟಕ ಗಡಿ ಪ್ರದೇಶದಲ್ಲಿ ತಪಾಸಣೆ ನಡೆಸುವ ನಿಟ್ಟಿನಲ್ಲಿ ಕಾಸರಗೋಡು ಮತ್ತು ದ.ಕ ಜಿಲ್ಲೆಗಳ ಪೊಲೀಸ್ ಮುಖ್ಯಸ್ಥರು ಮಾತುಕತೆ ನಡೆಸಿದರು. ಮಂಗಳೂರು ನಗರ ಪೊಲೀಸ್, ಕಾಸರಗೋಡು ಜಿಲ್ಲಾ ಪೊಲೀಸರ ನೇತೃತ್ವದಲ್ಲಿ ಮಂಗಳೂರು ನಗರ ಆಯುಕ್ತರ ಕಚೇರಿಯಲ್ಲಿ ಶನಿವಾರ ಸಭೆ ನಡೆಯಿತು. ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ, ಕಣ್ಣೂರು ವಲಯ ಡಿಐಜಿ ಯತೀಶ್ಚಂದ್ರ, ಕಾಸರಗೋಡು ಜಿಲ್ಲಾ ಪೊಲೀಸ್ ಮುಖ್ಯಸ್ಥ ವಿಜಯ್ ಭರತ್ ರೆಡ್ಡಿ, ಮಂಗಳೂರು ನಗರ ಉಪ ಆಯುಕ್ತ ಮಿಥುನ್ ಎಚ್.ಎನ್., ಕಾಸರಗೋಡು ಎಎಸ್ಪಿ ಡಾ.ನಂದಗೋಪಾಲ್ ಉಪಸ್ಥಿತರಿದ್ದರು. ಉಭಯ ರಾಜ್ಯಗಳನ್ನು ಸಂಪರ್ಕಿಸುವ ಪ್ರಮುಖ ರಸ್ತೆಗಳು, ಒಳರಸ್ತೆಗಳಲ್ಲಿ ತೀವ್ರ ತಪಾಸಣೆ ನಡೆಸಲು, ತಲೆ ಮರೆಸಿಕೊಂಡಿರುವ ವಿವಿಧ ಪ್ರಕರಣಗಳ ಆರೋಪಿಗಳನ್ನು ಬಂಧಿಸಲು ಪರಸ್ಪರ ಹಸ್ತಾಂ ತರಕ್ಕೆ ತೀರ್ಮಾನಿಸಲಾಯಿತು.
ಉತ್ತರಾಖಂಡ | ಅಲ್ಮೋರಾದಲ್ಲಿ ಶಾಲೆ ಬಳಿ 160ಕ್ಕೂ ಹೆಚ್ಚು ಜಿಲೆಟಿನ್ ಕಡ್ಡಿಗಳು ಪತ್ತೆ, ಪೊಲೀಸರಿಂದ ತನಿಖೆ
ಡೆಹ್ರಾಡೂನ್ : ಉತ್ತರಾಖಂಡ ಪೊಲೀಸರು ಅಲ್ಮೋರಾದ ಸರಕಾರಿ ಶಾಲೆಯ ಬಳಿಯಿಂದ 161 ಪ್ರಬಲ ಸ್ಫೋಟಕ ವಸ್ತುವಾದ ಜಿಲೆಟಿನ್ ಕಡ್ಡಿಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ಕುರಿತು ವಿವರವಾದ ತನಿಖೆ ನಡೆಯುತ್ತಿದೆ. ದಾಬ್ರಾ ಗ್ರಾಮದ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ಪ್ರಾಂಶುಪಾಲರು ಮಕ್ಕಳು ಆಟವಾಡುತ್ತಿರುವಾಗ ಹತ್ತಿರದ ಪೊದೆಗಳಲ್ಲಿ ಅನುಮಾನಾಸ್ಪದ ವಸ್ತು ಕಂಡು ಬಂದ ಹಿನ್ನೆಲೆ ಪೊಲೀಸರಿಗೆ ದೂರು ನೀಡಿದ್ದರು. ಸ್ಥಳಕ್ಕೆ ಬಂದು ಪೊಲೀಸರು ಪರಿಶೀಲನೆ ನಡೆಸಿದಾಗ ಜಿಲೆಟಿನ್ ಕಡ್ಡಿಗಳಿರುವುದು ಕಂಡು ಬಂದಿದೆ. ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನದಳದ ತಂಡಗಳು ವಿವರವಾದ ಶೋಧ ನಡೆಸಿ ಸ್ಫೋಟಕಗಳನ್ನು ವಶಪಡಿಸಿಕೊಂಡಿದೆ. ಈ ಕುರಿತು ಪೊಲೀಸರು ಸ್ಫೋಟಕ ಕಾಯ್ದೆಯಡಿ ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಅಲ್ಮೋರಾದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ದೇವೇಂದ್ರ ಪಿಂಚ ಈ ಬೆಳವಣಿಗೆಯನ್ನು ದೃಢಪಡಿಸಿದ್ದಾರೆ. ಈ ಕುರಿತು ತನಿಖೆ ನಡೆಯುತ್ತಿದೆ. ಸಾರ್ವಜನಿಕರು ವದಂತಿಗಳನ್ನು ನಂಬಬೇಡಿ ಎಂದು ಹೇಳಿದರು. ದಾಬ್ರಾ ಗ್ರಾಮದಲ್ಲಿ, ಶಾಲೆಯ ಬಳಿಯ ಪೊದೆಯಲ್ಲಿ ಸುಮಾರು 161 ಜಿಲೆಟಿನ್ ಕಡ್ಡಿಗಳು ಕಂಡುಬಂದಿವೆ. ಸ್ಥಳೀಯ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಪ್ರಕರಣ ದಾಖಲಾಗಿದ್ದು, ಮುಂದಿನ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಗಂಜಿ ಗಿರಾಕಿ ಡಿಕೆಶಿಯ ಧಮ್ಕಿ, ರೌಡಿಸಂಗೆ ಯಾರೂ ಹೆದರಲ್ಲ: ಜೆಡಿಎಸ್
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ವಿರುದ್ಧ ಜೆಡಿಎಸ್ ಕಿಡಿಕಾರಿದೆ. ಹೆಚ್.ಡಿ. ದೇವೇಗೌಡರು ಹಾಗೂ ಹೆಚ್.ಡಿ.ಕುಮಾರಸ್ವಾಮಿ ಅವರ ಹೆಸರು ಹೇಳಿ ರಾಜಕೀಯ ಮಾಡಿಕೊಂಡು ಬದುಕುತ್ತಿರುವ ಗಂಜಿ ಗಿರಾಕಿ ಡಿಕೆ ಶಿವಕುಮಾರ್, ನಿಮ್ಮ ಧಮ್ಕಿಗೆ ಇಲ್ಲಿ ಯಾರೂ ಜಗ್ಗುವುದಿಲ್ಲ. ನಿಮ್ಮ ಹಳೇ ಚಾಳಿಗೆ ರೌಡಿಸಂಗೆ ಯಾರೂ ಬೆದರಲ್ಲ ಎಂದು ತಿರುಗೇಟು ನೀಡಿದೆ. ಮಾಧ್ಯಮದವರು ಕೇಳುವ ಪ್ರಶ್ನೆಗಳಿಗೆ ಮೂರ್ಖನಂತೆ ಉತ್ತರ ಕೊಡುವ ನಿಮಗೆ
ಬದುಕಿನ ಮೌಲ್ಯಗಳನ್ನು ಸಾರುವ ‘ಚಾರು ವಸಂತ’
ನಾಡೋಜ ಹಂಪನಾ ವಿರಚಿತ ಕಾವ್ಯ ಕಥನ ‘ಚಾರು ವಸಂತ’ ಒಂದು ಅಮೋಘವಾದ ಕೃತಿ. 16 ಭಾಷೆಗಳಿಗೆ ಅನುವಾದಗೊಂಡಿರುವ ಈ ಕೃತಿಯ ಕಥಾ ವಸ್ತು ಎಲ್ಲ ಕಾಲಕ್ಕೂ ಸಲ್ಲುವಂತಹದ್ದು. ಈ ಮಹಾಕಾವ್ಯವನ್ನು ಡಾ. ನಾ. ದಾಮೋದರ ಶೆಟ್ಟಿ ಅವರು ನಾಟಕಕ್ಕೆ ರೂಪಾಂತರಿಸಿದ್ದಾರೆ. ಒಂದು ಬೃಹತ್ ಕೃತಿಯ ಕಥಾ ವಸ್ತುವನ್ನು ಎರಡು ಗಂಟೆಯ ಅವಧಿಯ ನಾಟಕಕ್ಕೆ ಅಳವಡಿಸುವುದು ಸವಾಲಿನ ಕೆಲಸವೇ ಸರಿ. ಅಷ್ಟೈಶ್ವರ್ಯ ತುಂಬಿ ತುಳುಕುವ ವೈಶ್ಯ ಮನೆತನದಲ್ಲಿ ಜನ್ಮ ತಳೆದ ಚಾರುದತ್ತನೆಂಬ ಯುವಕನ ಜೀವನದಲ್ಲಿ ಇನ್ನಿಲ್ಲದಂತಹ ಆಟವಾಡುತ್ತದೆ ವಿಧಿ. ನಾಲ್ಕು ಆಶ್ರಮಗಳಾದ ಬ್ರಹ್ಮಚರ್ಯೆ, ಗೃಹಸ್ಥ, ವಾನಪ್ರಸ್ಥ ಹಾಗೂ ಸನ್ಯಾಸಗಳು ವಿಭಿನ್ನ ಗುರಿ ಮತ್ತು ಜವಾಬ್ದಾರಿಗಳನ್ನು ಸೂಚಿಸುತ್ತವೆ. ಆಯಾ ವಯೋಮಾನದಲ್ಲಿ ಇವುಗಳನ್ನು ಸರಿಯಾಗಿ ನಿಭಾಯಿಸದೆ ಹೋದಲ್ಲಿ ವೈಯಕ್ತಿಕ ಬದುಕಷ್ಟೇ ಅಲ್ಲ, ಕುಟುಂಬ, ಸಮಾಜದ ಮೇಲೂ ಅದು ಪರಿಣಾಮವನ್ನು ಬೀರುತ್ತವೆ. ಗೃಹಸ್ಥನಾದ ಚಾರುದತ್ತ ಗೃಹಸ್ಥ ಧರ್ಮವನ್ನು ಪಾಲಿಸದೆ ಕೇವಲ ಓದು, ಅಧ್ಯಯನಗಳಲ್ಲಿಯೇ ಮುಳುಗಿ ಹೋಗುತ್ತಾನೆ. ಸುಶೀಲೆ, ಸದ್ಗುಣ ಸಂಪನ್ನೆಯಾದ ಮಿತ್ರಾವತಿಯನ್ನು ವಿವಾಹವಾದರೂ ಅವಳ ಪತಿಯಿಂದ ಅವಳಿಗೆ ಯಾವ ಸ್ಪಂದನೆಯೂ ಸಿಗುವುದಿಲ್ಲ. ಸೊಸೆಯ ಮೌನ ರೋದನೆಯನ್ನು ತಿಳಿದ ಅತ್ತೆ ದೇವಿಲೆ ತನ್ನ ತಮ್ಮನ ಮೊರೆ ಹೋಗುತ್ತಾಳೆ. ಚಪಲ ಚನ್ನಿಗರಾಯನಾದ ದೇವಿಲೆಯ ತಮ್ಮ ರುದ್ರದತ್ತ ಚಾರುದತ್ತನನ್ನು ನಿಧಾನವಾಗಿ ತನ್ನ ಗಾರುಡಿಗೆ ಸೆಳೆದು ಅವನಿಗೆ ವಿಷಯಾಸಕ್ತಿ ಮೂಡಿಸಲು ಅನಾಮಿಕೆ ಎಂಬ ಧನದಾಹಿ ವೇಶ್ಯೆಯೊಬ್ಬಳ ಮನೆಗೆ ಕರೆದೊಯ್ಯುತ್ತಾನೆ. ಅನಾಮಿಕೆಯ ಏಕೈಕ ಪುತ್ರಿ ವಸಂತ ತಿಲಕೆಯ ಮೋಹ ಪಾಶದಲ್ಲಿ ಬಂಧಿತನಾಗುವ ಚಾರುದತ್ತ ತನ್ನ ಮನೆಯನ್ನೇ ಮರೆತು ವಸಂತ ತಿಲಕೆಯ ಮನೆಯಲ್ಲಿಯೇ ಬಿಡಾರ ಹೂಡುತ್ತಾನೆ. ಚಾರುದತ್ತನನ್ನು ಇನ್ನಿಲ್ಲದಂತೆ ಪ್ರೀತಿಸುವ ವಸಂತ ತಿಲಕೆ ಅವನೇ ತನ್ನ ಪತಿಯೆಂದು ಸತಿ ಧರ್ಮವನ್ನು ಪಾಲಿಸುತ್ತಾಳೆ. ಆಕೆಯ ತಾಯಿ ಇವರಿಬ್ಬರ ಅರಿವಿಗೆ ಬಾರದಂತೆ ಚಾರುದತ್ತನ ಮನೆಯಿಂದ ದಾರ್ಷ್ಟ್ಯತನದಿಂದ ಹೊನ್ನು, ಹಣವನ್ನು ತನ್ನದಾಗಿಸಿಕೊಳ್ಳುತ್ತ ಹೋಗುತ್ತಾಳೆ. ಮನೆತನದ ಗೌರವಕ್ಕೆ ಧಕ್ಕೆ ಬಂದಾಗ ಚಾರುದತ್ತನ ತಂದೆ ಎಲ್ಲವನ್ನು ತೊರೆದು ಸನ್ಯಾಸವನ್ನು ಸ್ವೀಕರಿಸುತ್ತಾನೆ. ಅತ್ತೆ-ಸೊಸೆ ಎಲ್ಲವನ್ನು ಕಳೆದುಕೊಂಡು ಬೀದಿಗೆ ಬೀಳುತ್ತಾರೆ. ಚಾರುದತ್ತನ ಮನೆಯಿಂದ ಇನ್ನೇನೂ ಸಿಗದು ಎಂದು ಅರಿತ ಅನಾಮಿಕೆ ಮಗಳ ಅರಿವಿಗೆ ಬಾರದಂತೆ ಚಾರುದತ್ತನನ್ನು ಹೊರ ಹಾಕುತ್ತಾಳೆ. ಅದೃಷ್ಟವಶಾತ್ ತನ್ನ ತಾಯಿ ಮತ್ತು ಹೆಂಡತಿಯನ್ನು ಸೇರಿಕೊಂಡ ಚಾರುದತ್ತ ಪಶ್ಚಾತ್ತಾಪದಿಂದ ಬೇಯುತ್ತಾನೆ. ಚಾರುದತ್ತನಿಲ್ಲದ ಗರ್ಭಿಣಿ ವಸಂತ ತಿಲಕೆ ಪ್ರಲಾಪಿಸುತ್ತಾಳೆ. ಮಗಳ ಪರಿಸ್ಥಿತಿಯನ್ನು ಕಂಡು ಮರುಗುವ ಅನಾಮಿಕೆ ಬದಲಾಗುತ್ತಾಳೆ. ಚಾರುದತ್ತನ ಮನೆಯಿಂದ ಸೆಳೆದುಕೊಂಡ ಎಲ್ಲವನ್ನೂ ಅವನಿಗೆ ಮರಳಿಸಿ ಮಗಳ ಸಮೇತ ಚಾರುದತ್ತನ ಮನೆಗೆ ನಡೆಯುತ್ತಾಳೆ. ಸಾಧ್ವಿಯಾದ ಮಿತ್ರಾವತಿ ವಸಂತ ತಿಲಕೆಯನ್ನು ಚಾರುದತ್ತನೊಂದಿಗೆ ಮದುವೆ ಮಾಡಿಸಿ ಅವಳಿಗೆ ಸಿಗಬೇಕಾದ ಸ್ಥಾನವನ್ನು ನೀಡುತ್ತಾಳೆ. ಇದು ಕತೆಯ ಒಂದು ಭಾಗವಾದರೆ ನಂತರದ ಭಾಗದಲ್ಲಿ ಚಾರುದತ್ತನಿಗೆ ಮೇಲಿಂದ ಮೇಲೆ ಎದುರಾಗುವ ಪರೀಕ್ಷೆಗಳು, ತನ್ನಲ್ಲಿರುವ ಮುಗ್ಧತೆ ಹಾಗೂ ಸತ್ಯಸಂಧತೆಗಳಿಂದ ಬಾರಿ ಬಾರಿಗೂ ಜನರಿಂದ ಮೋಸ ಹೋಗುತ್ತಾನೆ. ಗಳಿಸಿದ್ದನ್ನೆಲ್ಲವನ್ನೂ ಕಳೆದುಕೊಳ್ಳುತ್ತಾನೆ. ತಾನು ಮಾಡಿದ ಸತ್ಕಾರ್ಯಗಳಿಂದ ಎಲ್ಲವನ್ನೂ ಮರಳಿ ಪಡೆದರೂ ಜೀವನದ ಕುರಿತು ಜಿಗುಪ್ಸೆಗೊಂಡು ತಂದೆಯಂತೆ ಸನ್ಯಾಸದತ್ತ ಮುಖ ಮಾಡುತ್ತಾನೆ. ಪ್ರಾಚೀನ ಭಾರತದ ಕಾವ್ಯವಾದ ‘ಮೃಚ್ಛಕಟಿಕ’ ಶೂದ್ರಕ ರಾಜನಿಂದ ರಚಿಸಲ್ಪಟ್ಟಿತು. ಈ ಗ್ರಂಥದಿಂದ ಪ್ರೇರಣೆಗೊಂಡು ಚಾರುದತ್ತ ಮತ್ತು ವಸಂತ ತಿಲಕೆಯರ ಪವಿತ್ರ ಪ್ರೀತಿ ಕಥೆ, ನಾಟಕ ಹಾಗೂ ಉತ್ಸವ ಎಂಬ ಚಲನಚಿತ್ರವಾಗಿಯೂ ಮರು ಸೃಷ್ಟಿಯಾಗಿದೆ. ಜೀವನ ಮೌಲ್ಯಗಳನ್ನು ಸಾರುವ, ಕೋಪ ದ್ವೇಷಗಳನ್ನು ಮರೆತು ಕೂಡಿ ಬಾಳುವಂತೆ ಸಂದೇಶ ನೀಡುವ, ಘಟಿಸಿ ಹೋದ ತಪ್ಪುಗಳನ್ನು ಕ್ಷಮಿಸಿ ತನ್ನನ್ನು ತಾನು ತಿದ್ದಿಕೊಳ್ಳಲು ಅವಕಾಶವನ್ನು ನೀಡುವ ನೀತಿ ಪಾಠವನ್ನು ಬೋಧಿಸುತ್ತದೆ ಈ ಕಥೆ. ತಾಯಿ-ಮಗನ ಉತ್ಕಟ ಪ್ರೀತಿ, ಬದುಕಿನಲ್ಲಿ ಎದುರಾಗುವ ಸವಾಲುಗಳನ್ನು ಎದುರಿಸುವ ಧೈರ್ಯ ಹಾಗೂ ಸತ್ಯ ಮಾರ್ಗದಲ್ಲಿ ನಡೆಯುವವನಿಗೆ ಕೊನೆಯಲ್ಲಿ ಒಳ್ಳೆಯ ಫಲವೇ ಲಭ್ಯವಾಗುವುದೆಂಬ ನೀತಿ ಪಾಠವನ್ನು ಹೇಳುತ್ತದೆ. ಡಾ. ನಾ. ದಾಮೋದರ ಶೆಟ್ಟಿ ಅವರು ಅತ್ಯಂತ ಸುಂದರವಾಗಿ ನಾಡೋಜ ಹಂಪನಾ ಅವರ ಕೃತಿಯನ್ನು ನಾಟಕ ರೂಪಕ್ಕೆ ತಂದಿದ್ದಾರೆ. ಮೂಲ ಕೃತಿಯ ಆಶಯಕ್ಕೆ ಯಾವುದೇ ರೀತಿಯ ಧಕ್ಕೆಯಾಗದಂತೆ ಎಚ್ಚರವಹಿಸಿದ್ದಾರೆ. ಹಲವಾರು ನಾಟಕಗಳನ್ನು ರಂಗದ ಮೇಲೆ ತಂದು ಸೈ ಎನಿಸಿಕೊಂಡಿರುವ ಜೀವನ ರಾಂ ಸುಳ್ಯ ಅವರು ಅತ್ಯಂತ ಶ್ರಮವಹಿಸಿ ಚಾರು ವಸಂತ ನಾಟಕವನ್ನು ನಿರ್ದೇಶಿಸಿದ್ದಾರೆ. ಎಲ್ಲ ಕಲಾವಿದರಿಂದ ಅಭಿನಯವನ್ನು ಹೆಕ್ಕಿ ತೆಗೆಯವುದಷ್ಟೇ ಅಲ್ಲ, ರಂಗದ ಮೇಲೊಂದು ಅದ್ಭುತ ಲೋಕವನ್ನೇ ಸೃಷ್ಟಿ ಮಾಡಬಲ್ಲರು ಜೀವನ ರಾಂ ಅವರು. ರಂಗಸಜ್ಜಿಕೆ, ಸಂಗೀತ, ಕಲಾವಿದರ ಚುರುಕುತನ ಎಲ್ಲವೂ ಈ ನಾಟಕದಲ್ಲಿ ಅದ್ಭುತವಾಗಿತ್ತು. ಸಮುದಾಯಕ್ಕೆ 50 ತುಂಬಿದ ಹಿನ್ನೆಲೆಯಲ್ಲಿ ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಚಾರು ವಸಂತ ನಾಟಕ ಪ್ರದರ್ಶನಗೊಂಡು ಪ್ರೇಕ್ಷಕರ ಮನಸೂರೆಗೊಂಡಿತು. ಶಿವಮೊಗ್ಗ ಸಮುದಾಯ ಈ ನಾಟಕವನ್ನು ಪ್ರಸ್ತುತ ಪಡಿಸಿತು.
ಲಕ್ನೋ: ಮೆದುಳು ರಕ್ತಸ್ರಾವದಿಂದ ಬಿಎಲ್ಒ ಸಾವು, ಎಸ್ಐಆರ್ ಒತ್ತಡ ಹೆಚ್ಚಾಯ್ತು ಎಂದು ಶಿಕ್ಷಕರ ಸಂಘ ಆರೋಪ
ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ ಕರ್ತವ್ಯದ ಒತ್ತಡದಿಂದಾಗಿ 50 ವರ್ಷದ ಶಿಕ್ಷಕರೊಬ್ಬರು ಮೆದುಳು ರಕ್ತಸ್ರಾವದಿಂದ ನಿಧನರಾಗಿದ್ದಾರೆ. ಮತದಾರರ ಪಟ್ಟಿಗಳ ಪರಿಷ್ಕರಣೆ ಕೆಲಸದ ತೀವ್ರ ಒತ್ತಡದಿಂದ ಆರೋಗ್ಯ ಹದಗೆಟ್ಟಿದೆ ಎಂದು ಶಿಕ್ಷಕರ ಸಂಘ ಆರೋಪಿಸಿದೆ. ಸಂಘವು ಕುಟುಂಬಕ್ಕೆ ಪರಿಹಾರ ನೀಡಬೇಕೆಂದು ಒತ್ತಾಯಿಸಿದ್ದು, ಜಿಲ್ಲಾಡಳಿತ ಒತ್ತಡದ ಆರೋಪಗಳನ್ನು ನಿರಾಕರಿಸಿದೆ.
ಅವಗಾಹ: ಕೃತಿ ವಿಮರ್ಶೆಯ ಅನುಕರಣಾರ್ಹ ಮಾದರಿ
ಡಾ. ಕೆ. ರಘುನಾಥ್ ಅವರು ಈ ಕಾಲದ ಮಹತ್ವದ ಕೃತಿಗಳನ್ನು ಓದಿ, ವಿಶ್ಲೇಷಿಸಿ, ಸಮೀಕ್ಷಿಸಿರುವ ತಮ್ಮ ಕೃತಿ ವಿಮರ್ಶೆಯ ಬರಹಗಳನ್ನು ‘ಅವಗಾಹ’ ಸಂಕಲನದಲ್ಲಿ ಸಂಗ್ರಹಿಸಿಕೊಟ್ಟಿದ್ದಾರೆ. ಈ ಸಂಕಲನವನ್ನು ಓದುವಾಗ ಓದುಗರಿಗೆ ಈ ಕಾಲಘಟ್ಟದಲ್ಲಿ ಕನ್ನಡ ಗ್ರಂಥ ಲೋಕ ಯಾವ ಬಗೆಯ ಕೃತಿಗಳನ್ನು ಸೇರಿಸಿಕೊಳ್ಳುತ್ತಿದೆ ಮತ್ತು ಈ ಕೃತಿಗಳ ಚಿಂತನೆಯ ಕ್ರಮವೇನು ಎನ್ನುವುದು ಗೊತ್ತಾಗುತ್ತದೆ. ರಘುನಾಥ್ ಅವರು ಕೃತಿಗಳನ್ನು ವಿಶ್ಲೇಷಣೆ ಮತ್ತು ವರ್ಗೀಕರಣ ಮಾದರಿಗಳಲ್ಲಿ ಗ್ರಹಿಸುತ್ತಾರೆ. ಇದರಿಂದಾಗಿ ಆಯಾಯ ಕೃತಿಗಳ ಬಗ್ಗೆ ಖಚಿತವಾದ ಪರಿಚಯವು ಓದುಗರಿಗೆ ಸಿಗುವಂತಾಗುತ್ತದೆ. ನಂತರ ರಘುನಾಥ್ ಅವರು ಆ ಕೃತಿಗಳ ಸಾಧನೆ ಮತ್ತು ಮಿತಿಗಳು ಅಥವಾ ಅವುಗಳು ಗಮನಿಸಬಹುದಾಗಿದ್ದ ಇನ್ನೂ ಕೆಲವು ಅಂಶಗಳನ್ನು ತಾವು ಸೂಚಿಸುತ್ತಾರೆ. ವರ್ಗೀಕರಣ ಮಾದರಿಯ ಬಗ್ಗೆ ರಘುನಾಥ್ ಅವರಿಗೆ ಇರುವ ಒಲವು ಈ ಕೃತಿಯ ಪರಿವಿಡಿಯಲ್ಲಿಯೇ ನಮ್ಮ ಗಮನಕ್ಕೆ ಬರುತ್ತದೆ. ಈ ಕೃತಿಯಲ್ಲಿರುವ ಲೇಖನಗಳನ್ನು ಅವರು ಹೀಗೆ ವರ್ಗೀಕರಣ ಮಾಡಿದ್ದಾರೆ: ಸಂಶೋಧನೆ 1. ಪ್ಲೇಮಿಂಗ್ ಫೀಟ್ ರೂಪಕಗಳ ಮುಖಾಮುಖಿ: ಡಿ.ಆರ್. ನಾಗರಾಜ್ (ಗಾಂಧಿ ಮತ್ತು ಅಂಬೇಡ್ಕರ್): 2. ಬಿಳಿಮಲೆಯವರ ಕೃತಿಗಳು - ಅ. ಬಹುತ್ವದ ಭಾರತಕ್ಕೊಂದು ಭಾಷ್ಯ. ಬ. ಹುಡುಕಾಟ. ಕ. ವರ್ತಮಾನ ಭಾರತ, 3. ನೆನಪಿನ ಹಳ್ಳಿ: ಟಿ. ಆರ್. ಶಾಮಭಟ್ಟ, 4. ಮೈಸೂರು ಸಾಂಸ್ಕೃತಿಕ ಕಥನ: ಡಾ. ಬಿ. ಲೀಲಾ. ಅಂದರೆ ಈ ಭಾಗದಲ್ಲಿ ಆರು ಕೃತಿಗಳ ಪರಿಚಯ ಇದೆ. ಬಿಳಿಮಲೆಯವರದೇ ಮೂರು ಕೃತಿಗಳಿರುವುದರಿಂದ ಅವುಗಳನ್ನು ಅ, ಬ, ಕ ಎಂಬ ಉಪವಿಭಾಗಗಳಲ್ಲಿ ಕೊಟ್ಟಿದ್ದಾರೆ. ಉಳಿದ ವಿಭಾಗಗಳು ಹೀಗಿವೆ: ವಿಮರ್ಶಾ ಲೋಕ (12 ಕೃತಿಗಳ ಪರಿಚಯ - ವಿಮರ್ಶೆ ಇವೆ): ಸಂಪಾದನೆ (8 ಲೇಖನಗಳು); ಕಾವ್ಯಲೋಕ (6 ಕೃತಿಗಳು): ಅನುಬಂಧ (4 ಲೇಖನಗಳು); ಕಥಾಲೋಕ (13 ಲೇಖನಗಳು); ಕಾದಂಬರಿ ಲೋಕ (15 ಲೇಖನಗಳು); ನಾಟಕ - ಸಿನೆಮಾ (6 ಲೇಖನಗಳು); ಪ್ರಬಂಧ (4 ಲೇಖನಗಳು): ಪ್ರವಾಸ (6 ಲೇಖನಗಳು); ಆತ್ಮಚರಿತ್ರೆ ಮತ್ತು ಜೀವನಚರಿತ್ರೆ (12 ಲೇಖನಗಳು): ಸಂಕೀರ್ಣ (6 ಲೇಖನಗಳು), ವಿಜಯಶಂಕರ್ ಅವರ ಕೃತಿಗಳು ಎಂಬ ಲೇಖನದಲ್ಲಿ ಅವರ ಮೂರು ಕೃತಿಗಳ ಸಮೀಕ್ಷೆಗಳಿವೆ. ಪ್ರಕಾಶ ಕಂಬತ್ತಳ್ಳಿಯವರ ನಾಟಕಗಳ ಕುರಿತಾದ ಬರಹದಲ್ಲಿ ಅವರ ಮೂರು ನಾಟಕಗಳ ಪರಿಚಯವಿದೆ. ಹೀಗಾಗಿ ಒಟ್ಟು 100ಕ್ಕಿಂತ ಹೆಚ್ಚು ಕೃತಿಗಳು ಈ ಸಂಕಲನದಲ್ಲಿ ಸಮೀಕ್ಷೆಗೆ ಒಳಪಟ್ಟಿವೆ. ಸಂಖ್ಯೆಯ ದೃಷ್ಟಿಯಿಂದಲೂ ಇಷ್ಟೊಂದು ದೊಡ್ಡ ಗಾತ್ರದ ಕೃತಿ ಸಮೀಕ್ಷೆಯ ಸಂಕಲನವು ಕನ್ನಡ ವಿಮರ್ಶೆಯ ಸಂದರ್ಭದಲ್ಲಿ ಪರಿಗಣಿಸಲೇಬೇಕಾದ ಕೃತಿಯಾಗಿ ಉಳಿಯಲಿದೆ. ರಘುನಾಥ್ ಅವರು ಕೃತಿ ಸಮೀಕ್ಷೆ ಮಾಡುವ ಮಾದರಿಗೆ ಉದಾಹರಣೆಯಾಗಿ ಡಾ. ಪುರುಷೋತ್ತಮ ಬಿಳಿಮಲೆಯವರ ’ಕನ್ನಡ ಕಥನ’ವನ್ನು ಅವರು ವಿಶ್ಲೇಷಿಸಿರುವ ಪರಿಯನ್ನು ನೋಡಬಹುದು: 1. ಸಾಹಿತ್ಯಕ ನೆಲೆ. ಅದರಲ್ಲಿ ಅ) ರಾಮಾಯಣ ಮಹಾಭಾರತಗಳ ಬಹುರೂಪಗಳು. ಬ) ಹಳಗನ್ನಡ ಮತ್ತು ನಡುಗನ್ನಡದ ಶಿಷ್ಟ ಪಠ್ಯಗಳು ಯಕ್ಷಗಾನ, ಹರಿಕಥೆ, ಶಿಲ್ಪ ಇತ್ಯಾದಿ ಬಹುರೂಪಗಳನ್ನು ಪಡೆದು ವ್ಯಾಪಕತೆಯನ್ನು ಪಡೆದದ್ದು. ಕ) ಭಕ್ತಿ ಪರಂಪರೆ ಮತ್ತು ಜನಪದ, ಡ) ಎ.ಕೆ. ರಾಮಾನುಜನ್ ಅವರ ಭಾರತೀಯ ಜನಪದ ಕಥೆಗಳ ಪರಿಶೀಲನೆ. 2. ಸಂಸ್ಕೃತಿಯ ನೆಲೆ. 3. ನಾಗರಿಕ ನೆಲೆ. 4. ಸಂಶೋಧನಾತ್ಮಕ ನೆಲೆ. ನಂತರ ‘ಸಾಧನೆಗಳು’ ಎನ್ನುವ ಉಪವಿಭಾಗವನ್ನು ಮಾಡಿಕೊಂಡು ‘ಕನ್ನಡ ಕಥನಗಳು’ ಕೃತಿಯ ವೈಶಿಷ್ಟ್ಯಗಳನ್ನು ಮೂರಂಶಗಳಲ್ಲಿ ಗುರುತಿಸಿದ್ದಾರೆ: ಮೊದಲ ಬಾರಿಗೆ ಏಕಘನಾಕೃತಿಯ ಚಿಂತನೆಗಳ ಅಪಾಯವನ್ನು ಗುರುತಿಸಿ ಅದಕ್ಕೆ ಪರ್ಯಾಯವಾದ ಬಹುತ್ವದ ಚಿಂತನೆಯನ್ನು ನಿರೂಪಿಸಿದ್ದಾರೆ. ‘‘ಅಧ್ಯಯನ ಮತ್ತು ಕ್ಷೇತ್ರಾಧ್ಯಯನಗಳ ಮೂಲಕ ಪ್ರತೀ ಪ್ರಬಂಧವನ್ನು ಸಮರ್ಥವಾಗಿ ಕಟ್ಟಿದ್ದಾರೆ. ಪಿರಮಿಡ್ಡಿನ ಆಕಾರದ ಮೇಲ್ತುದಿಯ ಅಧ್ಯಯನದ ವಿಧಾನವನ್ನು (ಬ್ರಿಟಿಷ್ ಮತ್ತು ಮೇಲು ವರ್ಣದವರು ಆರಂಭಿಸಿದ) ಬಿಟ್ಟುಕೊಟ್ಟು ತಳದಿಂದ ಅಧ್ಯಯನ ಆರಂಭಿಸಬೇಕಾದ ಅಗತ್ಯವನ್ನು ಸಾಧಾರವಾಗಿ ಮಂಡಿಸಿದ್ದಾರೆ.’’(ಪುಟ 19) ನಂತರ ‘ಮಿತಿಗಳು’ ಎಂಬ ವಿಭಾಗದಲ್ಲಿ ಕೆಲವು ಮಿತಿಗಳನ್ನು ಗುರುತಿಸಿದ್ದಾರೆ. ಈ ಪುಸ್ತಕದಲ್ಲಿ ನಮಗೆ ನೂರಾರು ಪುಸ್ತಕಗಳ ಪರಿಚಯವಾಗುವುದರ ಜತೆಗೆ ನೂರಾರು ಹೊಸ ವಿಚಾರಗಳು ತಿಳಿಯುತ್ತವೆ. ಉದಾಹರಣೆಗೆ ಪ್ರೊಫೆಸರ್ ಸಿ. (ಕ್ಲೋಸ್ಪೇಟೆ) ಡಿ. ನರಸಿಂಹಯ್ಯ ಕರ್ನಾಟಕದಲ್ಲಿ ಇಂಗ್ಲಿಷ್ ಸಾಹಿತ್ಯದ ಅಧ್ಯಯನಕ್ಕೆ ದಿಕ್ಕುದೆಸೆಗಳನ್ನು ಕೊಟ್ಟವರು; ಇಂಗ್ಲೆಂಡಿನ ಮಾದರಿಯಲ್ಲಿ ಮೈಸೂರಿನ ಇಂಗ್ಲಿಷ್ ವಿಭಾಗವನ್ನು ಕಟ್ಟಿದವರು. ಅವರ ಆತ್ಮಕಥಾನಕದ (‘ಎನ್ ಫಾರ್ ನೋಬಡಿ’) ಪರಿಚಯದ ಮೂಲಕ ಸಿ.ಡಿ.ಎನ್. ಅವರ ಸಾಧನೆಯ ಪರಿಚಯವೂ ಓದುಗನಿಗೆ ಆಗುತ್ತದೆ. ಡಾ. ರಘುನಾಥ್ ಅವರು ಈ ಕೃತಿಯನ್ನು ಕೂಡ ವಿಭಾಗಗಳನ್ನಾಗಿಸಿಕೊಂಡು ಪರಿಚಯಿಸುತ್ತಾರೆ. ಅವರು ಇಲ್ಲಿ ಮಾಡಿಕೊಳ್ಳುವ ವಿಭಾಗಗಳು: 1. ವಿದ್ಯಾರ್ಥಿಯಾಗಿ. 2. ಅಧ್ಯಾಪಕರಾಗಿ. 3. ಪ್ರಾಂಶುಪಾಲರಾಗಿ. 4. ಸಾಂಸ್ಕೃತಿಕ ಸಾಹಿತ್ಯ ರಾಯಭಾರಿಯಾಗಿ. 5. ಸಂಘಟಕರಾಗಿ. ‘ವಿದ್ಯಾರ್ಥಿಯಾಗಿ’ ಎಂಬ ವಿಭಾಗದಲ್ಲಿ - ಅ. ಬಾಲ್ಯದ ಶಿಕ್ಷಣ: ಬ. ಮೈಸೂರಿನಲ್ಲಿ ಪ್ರೌಢ ಶಿಕ್ಷಣ -ಎಂಬ ವಿಭಾಗಗಳನ್ನು ಮಾಡಿದ್ದಾರೆ. ಕೊನೆಯಲ್ಲಿ ಸಿ.ಡಿ. ನರಸಿಂಹಯ್ಯನವರ ಜೀವನದ ಸಾಧನೆಗಳೆಂದು ಎಂಟು ಅಂಶಗಳನ್ನು ಪಟ್ಟಿಮಾಡಿದ್ದಾರೆ. ಅವರ ಮಿತಿಗಳೆಂದು ಎರಡು ಅಂಶಗಳನ್ನು ಗುರುತಿಸಿದ್ದಾರೆ. ಈ ಬಗೆಯಲ್ಲಿ ಒಂದು ಕೃತಿಯನ್ನು ಅಥವಾ ಅದು ಯಾರನ್ನು ಕುರಿತಿದೆಯೋ ಅವರ ಶಕ್ತಿ ಮತ್ತು ಮಿತಿಗಳನ್ನು ಖಚಿತವಾಗಿ ಗುರುತಿಸಿ ಪಟ್ಟಿಮಾಡಿ ಕೊಡುವ ವಿಮರ್ಶೆಯ ಕ್ರಮ ಡಾ. ರಘುನಾಥ್ ಅವರ ವೈಶಿಷ್ಟ್ಯವಾಗಿದೆ. ಕೃತಿ ವಿಮರ್ಶೆಯನ್ನು ಇಷ್ಟು ಶಿಸ್ತುಬದ್ಧವಾಗಿ ಮತ್ತು ಗಂಭೀರವಾಗಿ ಮಾಡುವ ಕ್ರಮವನ್ನು ಸಾಹಿತ್ಯದ ವಿದ್ಯಾರ್ಥಿಗಳು ಡಾ. ರಘುನಾಥ್ ಅವರಿಂದ ಕಲಿಯಬಹುದಾಗಿದೆ. ಇಂತಹ ಮಾದರಿ ಕೃತಿಯೊಂದನ್ನು ಕನ್ನಡಕ್ಕೆ ನೀಡಿ ಕೃತಿ ವಿಮರ್ಶೆಯ ಹೊಸ ದಾರಿಯೊಂದನ್ನು ತೋರಿಸಿದ ಡಾ. ಕೆ. ರಘುನಾಥ್ ಅವರಿಗೆ ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.
ಕರ್ನಾಟಕ ಸರ್ಕಾರವು ಕರ್ನಾಟಕ ನೋಂದಣಿ (ನೋಂದಾಯಿತ ದಾಖಲೆಗಳ ನಿರಾಕರಣೆ ಮತ್ತು ರದ್ದತಿ) ನಿಯಮಗಳು 2025ರ ಕರಡನ್ನು ಬಿಡುಗಡೆ ಮಾಡುವ ಮೂಲಕ ಆಸ್ತಿ ನೋಂದಣಿ ವ್ಯವಸ್ಥೆಯಲ್ಲಿ ಕ್ರಾಂತಿಕಾರಿ ಬದಲಾವಣೆ ತರಲು ಮುಂದಾಗಿದೆ. ಈ ನಿಯಮಗಳು ಜಿಲ್ಲಾ ನೋಂದಣಾಧಿಕಾರಿಗಳಿಗೆ ನಕಲಿ ಅಥವಾ ಕಾನೂನುಬಾಹಿರ ದಾಖಲೆಗಳ ಮೂಲಕ ಮಾಡಿದ ಆಸ್ತಿ ನೋಂದಣಿಯನ್ನು ನ್ಯಾಯಾಲಯದ ಹಸ್ತಕ್ಷೇಪವಿಲ್ಲದೆ ರದ್ದುಪಡಿಸಲು ನೇರ ಅಧಿಕಾರ ನೀಡುತ್ತವೆ. ಅದೇ ರೀತಿ, ಉಪ-ನೋಂದಣಾಧಿಕಾರಿಗಳು ಸಹ ನಕಲಿ ದಾಖಲೆಗಳ ನೋಂದಣಿಯನ್ನು ನಿರಾಕರಿಸಲು ಅಧಿಕಾರ ಪಡೆಯಲಿದ್ದಾರೆ. ಈ ಕ್ರಮವು ವಂಚನೆಯನ್ನು ತಡೆಗಟ್ಟಲು ಮತ್ತು ಅಮಾಯಕ ಆಸ್ತಿ ಖರೀದಿಗಾರರನ್ನು ರಕ್ಷಿಸಲು ಉದ್ದೇಶಿಸಿದೆ.
ನಿರ್ಬಂಧಕ್ಕೆ ಒಳಗಾಗಿರುವುದರಿಂದ ತನ್ನ ನಿಜವಾದ ತನ್ನತನದ ಕಡೆಗೆ ನಡೆಯುವುದೇ ಒಬ್ಬ ವ್ಯಕ್ತಿಯ ವ್ಯಕ್ತಿತ್ವದ ಪ್ರಯಾಣ ಆಗಿರುತ್ತದೆ ಎಂದು ಕಾರ್ಲ್ ಯುಂಗ್ ವಿವರಿಸುತ್ತಾರೆ. ವ್ಯಕ್ತಿಯ ಪ್ರಜ್ಞೆಯು ತನಗೆ ಅಂಟಿಕೊಂಡಿರುವ ಎಲ್ಲಾ ಗುರುತುಗಳ ಹಣೆಪಟ್ಟಿಗಳನ್ನು ತೊಡೆದುಕೊಂಡು ಮುಕ್ತವಾಗಿ ಹರಿಯುವುದೇ ಅದಾಗಿರುತ್ತದೆ. ಐಡೆಂಟಿಟಿ ಅಥವಾ ಗುರುತು ಎಂಬುದು ಮನೋಮಾದರಿಯಾಗಿ ಪ್ರಾರಂಭಿಕ ನಕಾಶೆಯಾಗಿರುವುದು ಏಕೆಂದರೆ ವಿಸ್ತಾರವಾದ ಮತ್ತು ಅಸೀಮವಾದ ಜೀವನದಲ್ಲಿ ಎಲ್ಲೋ ಕಳೆದು ಹೋಗದಿರಲು. ಆದರೆ ಪ್ರಜ್ಞೆಯು ಪಕ್ವವಾಗುತ್ತಿದ್ದಂತೆ ದೊರಕಿರುವ ಅಥವಾ ಆರೋಪಿಸಿಕೊಂಡಿರುವ ಗುರುತುಗಳಿಗೇ ಅಂಟಿಕೊಂಡಿರುವುದು ವಿಶಾಲವಾದ ಆಕಾಶದಲ್ಲಿ ಹಾರಾಡಲು ಸಾಧ್ಯವಿರುವ ಪಕ್ಷಿಯನ್ನು ಪಂಜರದಲ್ಲಿಯೇ ಬಂಧಿಸಿಟ್ಟಿರುವ ಹಾಗೆ. ನಿಜವಾದ ಬೆಳವಣಿಗೆ ಎಂಬುದು ಪ್ರಾರಂಭವಾಗುವುದೇ ನಮ್ಮದೇ ಗುರುತುಗಳನ್ನು ಪ್ರಶ್ನಿಸಿಕೊಳ್ಳಲು ಆರಂಭಿಸಿದಾಗ. ಈ ನಾನು ಎಂಬುದು ಬರಿಯ ರಾಷ್ಟ್ರವೇ, ಧರ್ಮವೇ, ಕುಟುಂಬವೇ, ಸಂಸ್ಕೃತಿಯೇ? ನಮಗೆ ದೇಶವೇ ಮೊದಲು, ನಮ್ಮ ಧರ್ಮವೇ ಶ್ರೇಷ್ಠ, ಕುಟುಂಬಕ್ಕಾಗಿ ತ್ಯಾಗ, ನಮ್ಮ ಹಳೆಯ ಸಂಸ್ಕೃತಿಗೆ ಮರಳಿ; ಎಂದೆಲ್ಲಾ ಹೇಳುತ್ತಾ, ನಮ್ಮ ಬೇರುಗಳಿಗೆ ನಾವು ಮರಳಬೇಕು ಎಂಬ ಕರೆಯನ್ನು ಬಹಳಷ್ಟು ಕೇಳುತ್ತಿರುತ್ತೇವೆ. ಬೇರುಗಳು ಎಂದು ಹೇಳುವಾಗ ತಮ್ಮ ಹಳೆಯ ಧಾರ್ಮಿಕತೆಗೋ, ಸಂಸ್ಕೃತಿಗೋ, ಪರಂಪರೆಗೋ ಆರೋಪಿಸುತ್ತಿರುತ್ತಾರೆ. ಆದರೆ ಬೇರುಗಳು ಎಂದು ಕರೆಯಲಾಗುವ ಅವು ನಮ್ಮ ಮನುಷ್ಯ ಸಮಾಜದಲ್ಲಿ ನಿಜಕ್ಕೂ ಏನು? ಮನುಷ್ಯನ ಪ್ರಜ್ಞೆಯ ಸಾವಯವ ಸತ್ವವನ್ನು ಬೇರೆಂದು ಕರೆಯುವ ಬದಲು ಐತಿಹಾಸಿಕ ಗ್ರಹಿಕೆಗಳನ್ನು ಬೇರುಗಳು ಎಂದು ಬಹಳಷ್ಟು ವಿವರಣೆಗಳು ಭ್ರಮೆಯನ್ನು ಹುಟ್ಟಿಸಿವೆ. ಅದರಲ್ಲಿಯೂ ಆ ಐತಿಹಾಸಿಕ ಗ್ರಹಿಕೆಗಳೋ ಮನುಷ್ಯನ ಬುದ್ಧಿಮತ್ತೆ ಸೀಮಿತದಲ್ಲಿದ್ದು, ವೈಚಾರಿಕ ವ್ಯಾಪ್ತಿ ಚೌಕಟ್ಟುಗಳಲ್ಲಿದ್ದು, ಜ್ಞಾನವೆಂಬುದು ಮಿತಿಯಲ್ಲಿದ್ದು ತಾವಿರುವ ಪ್ರಪಂಚವನ್ನೇ ಚಿಕ್ಕದಾಗಿಸಿಕೊಂಡಿದ್ದ ಕಾಲಗಳದ್ದು. ಆದಿಮ ಕಾಲದ ಬುಡಕಟ್ಟಿನ ಜನರ ಸಮುದಾಯಕ್ಕೆ ಅವರ ಕಣ್ಣಳತೆಯ ಮತ್ತು ಗ್ರಹಿಕೆಯ ಇತಿಮಿತಿಯಲ್ಲಿರುವುದಷ್ಟೇ ಇಡೀ ಪ್ರಪಂಚವಾಗಿರುತ್ತಿತ್ತು. ಆಗ ಆ ಬುಡಕಟ್ಟಿನ ಬೇರು ಎನ್ನುವುದಕ್ಕೊಂದು ಅರ್ಥವಿದೆ. ಯಾವಾಗ ಒಂದು ವ್ಯಕ್ತಿ ಅಥವಾ ಸಮೂಹಕ್ಕೆ ಧರ್ಮ ಎನ್ನುವ ಒಡಂಬಡಿಕೆಯೊಂದೇ ನೈತಿಕ ದಿಕ್ಸೂಚಿಯಾಗಿತ್ತೋ, ಆಗ ಧಾರ್ಮಿಕತೆಯ ಬೇರು ಎನ್ನುವುದು ಅಗತ್ಯವೇ ಆಗಿತ್ತು. ಆದರೀಗ ನಮ್ಮ ಮನೋಕಾಶ ಅಥವಾ ಮಾನಸ ಪ್ರಪಂಚ ವಿಸ್ತಾರಗೊಂಡಿದೆ. ಮನಶಾಸ್ತ್ರೀಯವಾಗಿ ಹೇಳುವುದಾದರೆ, ಹಳೆಯ ಬೇರುಗಳಿಗೆ ಅಂಟಿಕೊಂಡಿರುವುದು ಹೇಗೆಂದರೆ, ನಮ್ಮ ಪೂರ್ವಿಕರು ಅಂಬೆಗಾಲಿಟ್ಟು ನಡೆದರೆಂದು ಈಗ ನಾವು ನಡೆಯಲು ಅಥವಾ ಓಡುವುದನ್ನು ನಿರಾಕರಿಸುವುದು ಎಂದರ್ಥ. ತಾತ್ವಿಕವಾಗಿಯೂ ಕೂಡಾ ವಿಶ್ಲೇಷಿಸುವುದಾದರೆ, ನಿಜವಾದ ಬೇರುಗಳೆಂದರೆ ಸಾಂಸ್ಕೃತಿಕವೋ, ಜನಾಂಗೀಯವೋ ಅಥವಾ ಧಾರ್ಮಿಕವೋ ಅಲ್ಲ. ಅದು ಅಸ್ತಿತ್ವದ್ದಾಗಿರುವುದು. ನಮ್ಮ ನಿಜವಾದ ಬೇರು ಯಾವುದೇ ಹಣೆಪಟ್ಟಿಗಳನ್ನು ಕಟ್ಟಿಕೊಂಡಿರದಂತಹ ಶುದ್ಧವಾದ ಪ್ರಜ್ಞೆಯಲ್ಲಿದೆ. ಅದು ತಾನಿರುವ ಸ್ಥಿತಿಯಲ್ಲಿಯೇ ಎಲ್ಲಾ ಮನುಷ್ಯರಲ್ಲಿಯೂ ಬೇರುಬಿಟ್ಟಿದೆ. ಸಾಂಸ್ಕೃತಿಕವೋ, ಜನಾಂಗೀಯವಾಗಿಯೋ, ಧಾರ್ಮಿಕವಾಗಿಯೋ ಅಲ್ಲದೆ ಆ ಪ್ರಜ್ಞೆಯ ಸೂಕ್ಷ್ಮವಿಜ್ಞಾನವು ಪ್ರತಿಯೊಬ್ಬರಲ್ಲಿಯೂ ಕಳ್ಳುಬಳ್ಳಿಯಂತೆ ಪರಸ್ಪರ ಬೆಸೆದುಕೊಂಡಿದೆ. ಯಾವಾಗ ವ್ಯಕ್ತಿಯು ತನ್ನ ಬೇರುಗಳನ್ನು ಹೊರಗಿನ ಗುರುತುಗಳಿಂದ ತನ್ನ ಅಂತರಾಳದ ಮೂಲದೊಂದಿಗೆ ಗುರುತಿಸಿಕೊಳ್ಳುತ್ತಾನೆಯೋ ಆಗ ಆ ವ್ಯಕ್ತಿ ತನ್ನರಿವ ದೃಷ್ಟಿಯಿಂದ, ಸಾಮಾಜಿಕವಾಗಿ, ಹಾಗೆಯೇ ಆಧ್ಯಾತ್ಮಿಕವಾಗಿಯೂ ಕೂಡಾ ರೂಪಾಂತರ ಹೊಂದಲಾಗುವುದು. ಜೀವ ಮತ್ತು ಜೀವನ ವಿಕಾಸವಾದಂತೆ ಬೇರುಗಳೆಂಬ ಗ್ರಹಿಕೆಯೂ ಕೂಡಾ ವಿಕಾಸವಾದಾಗಲೇ ಹಣೆಪಟ್ಟಿಗಳ ಭಾರವಿಲ್ಲದೆ ಮನಸ್ಸು ಆರೋಗ್ಯವಾಗಿರಲು ಸಾಧ್ಯ. ಮಾನವಶಾಸ್ತ್ರೀಯವಾಗಿ ನೋಡುವುದಾದರೂ ನಮ್ಮ ಹಿಂದಿನ ಜನಕ್ಕೆ ತಾವು ಅಸ್ತಿತ್ವದಲ್ಲಿ ಉಳಿಯಲು ಗಟ್ಟಿಮುಟ್ಟಾದ ಗಡಿಗಳನ್ನು ಹೊಂದಿರಬೇಕಿತ್ತು. ಬುಡಕಟ್ಟಿನ ಬಂಧುತ್ವ, ರಾಷ್ಟ್ರೀಯತೆ, ಧಾರ್ಮಿಕತೆ ಎಲ್ಲವೂ ಒಬ್ಬರಿಗೊಬ್ಬರು ಆಗಲೇ ಬೇಕಾಗಿರುವಂತಹ ಸೀಮಿತ ಒಗ್ಗಟ್ಟಿನ ಆಧಾರವಾಗಿತ್ತು. ಆಗ ಯಾವ ಆ ಎಲ್ಲಾ ಒಗ್ಗಟ್ಟಿನ ಸಾಮಾಜಿಕ ಸಾಧನಗಳು ಅಗತ್ಯವಿತ್ತೋ, ಅವು ಇಂದು ವಿವಿಧ ಧರ್ಮಗಳು, ಸಂಸ್ಕೃತಿಗಳು ಮತ್ತು ಪರಿಕಲ್ಪನೆಗಳೆಲ್ಲವೂ ಸಹಜ ಪ್ರಜ್ಞೆಯ ಮಾನವರ ಒಗ್ಗಟ್ಟನ್ನು ಒಡೆಯುತ್ತಿದೆ. ಆಗಿನ ಬುಡಕಟ್ಟಿನ ಜನರು ಆಹಾರಕ್ಕಾಗಿ ಪೈಪೋಟಿಗಿಳಿಯುವಂತಹ ಸ್ಥಿತಿ ನಮ್ಮಲ್ಲಿ ಇಲ್ಲ. ಮಾನವನ ತಳಿಗಳೊಂದೇ ಪ್ರಜ್ಞೆಯ ದಿಕ್ಸೂಚಿಯಲ್ಲಿ ಮುನ್ನಡೆಯುತ್ತಿರುವುದು. ಈಗ ಮನುಷ್ಯನಿಗೆ ಇರುವುದು ವಿಶ್ವಾತ್ಮಕ ಪ್ರಜ್ಞೆ ಅಥವಾ ಇಳೆಯರಿವಿನ ಜಾಗೃತಿ. ಬುಡಕಟ್ಟಿನ ಸಾಮುದಾಯಿಕ ಹಿರಿಮೆಯಲ್ಲ. ಭೌತಿಕ ವಿಕಾಸಕ್ಕೆ ತೆರೆದುಕೊಂಡಿರುವ ಮನುಷ್ಯನ ಸದ್ಯದ ವೈಯಕ್ತಿಕ ಮತ್ತು ಸಾಮಾಜಿಕ ಮಾನಸಿಕ ಸಮಸ್ಯೆಗಳಿಗೆ ಬಹುದೊಡ್ಡ ಕಾರಣವೇ ಮಾನಸಿಕ ವಿಕಾಸಕ್ಕೆ ತೆರೆದುಕೊಂಡು ಪರಾನುಭೂತಿ (ಎಂಪತಿ) ಮತ್ತು ಸೂಕ್ಷ್ಮಪ್ರಜ್ಞೆಗಳನ್ನು ಹೊಂದುತ್ತಾ ಮನುಷ್ಯ ನಿರ್ಮಿತ ಗಡಿಗಳನ್ನು ದಾಟದೇ ಇರುವುದು. ಧರ್ಮಗಳು, ರಾಜಕೀಯ, ಆರ್ಥಿಕತೆ, ರಾಷ್ಟ್ರೀಯತೆ, ದೇಶಭಕ್ತಿ ಇವೆಲ್ಲವೂ ಕೂಡಾ ಆಡಳಿತಾತ್ಮಕವಾದ ಅನುಕೂಲಕ್ಕೆ ಅಗತ್ಯವಿರುವ ಒಡಂಬಡಿಕೆಗಳು. ಅವುಗಳನ್ನು ವಿನ್ಯಾಸಗೊಳಿಸಿರುವ ಉದ್ದೇಶವೇ ಪರಸ್ಪರ ಸಹಕಾರಕ್ಕಾಗಿಯೇ ಹೊರತು ಮನುಷ್ಯನ ಜೀವನವನ್ನು ಮತ್ತು ಮಾನಸಿಕ ಬೆಳವಣಿಗೆಯನ್ನು ಸೀಮಿತಗೊಳಿಸಲು ಅಲ್ಲ. ವ್ಯಕ್ತಿಗಳು ಯಾವಾಗ ಅವುಗಳಿಗೆ ವೈಯಕ್ತಿಕವಾಗಿ ಮತ್ತು ಭಾವೋದ್ರೇಕದಿಂದ ವ್ಯಾಮೋಹಕ್ಕೆ ಒಳಗಾಗಿ ಅಂಟಿಕೊಳ್ಳುತ್ತಾರೋ ಆಗ ಅದರಿಂದ ಸಂಕುಚಿತ ದೃಷ್ಟಿಕೋನಗಳೂ ಮತ್ತು ಸಂಘರ್ಷಗಳೂ ಉಂಟಾಗುತ್ತವೆ. ಸಾಮಾಜಿಕವಾದ ಪ್ರಬುದ್ಧತೆಯನ್ನು ಹೊಂದುವುದರಿಂದಲೂ ವ್ಯಕ್ತಿಯ ಮಾನಸಿಕ ಆರೋಗ್ಯವು ಉತ್ತಮ ರೀತಿಯಲ್ಲಿ ಇರಲು ಸಾಧ್ಯ. ಧರ್ಮ, ದೇಶ, ಸಂಸ್ಕೃತಿ ಮತ್ತು ಇತರ ಹಳೆಯ ಸಾಮಾಜಿಕ ಯಂತ್ರಗಳನ್ನು ವಿವೇಕದಿಂದ ಬಳಸುತ್ತಾ, ಅದನ್ನು ಮೋಹಿತರಾಗಿ ಆರಾಧಿಸದಿದ್ದರೆ ಮನಸ್ಸುಗಳು ಮತ್ತು ಮನುಷ್ಯರ ಸಮೂಹಗಳು ಸಂಘರ್ಷರಹಿತವಾಗಿ ಇರಲು ಸಾಧ್ಯ. ಮನುಷ್ಯನದ್ದೇ ಸೃಷ್ಟಿಯಾಗಿರುವ ಧಾರ್ಮಿಕತೆ, ರಾಷ್ಟ್ರೀಯತೆ ಮತ್ತು ಸಾಂಸ್ಕೃತಿಕ ಪರಂಪರೆಗಳಿಗಿಂತ ಮಾನವತೆಯನ್ನು ಗೌರವಿಸುವ ಮತ್ತು ಅಪ್ಪಿಕೊಳ್ಳುವುದಾದರೆ ಸಮಾಜದ ನಿಜವಾದ ಮತ್ತು ಮೂಲ ಚೈತನ್ಯವನ್ನು ಒಪ್ಪಿಕೊಂಡಂತಾಗುತ್ತದೆ ಮತ್ತು ಅದರೊಟ್ಟಿಗೆ ಗುರುತಿಸಿಕೊಂಡಂತಾಗುತ್ತದೆ. ಧಾರ್ಮಿಕತೆ, ರಾಷ್ಟ್ರೀಯತೆಗಳಂತೆ ಮಾನವತೆಯೂ ಕೂಡಾ ಮನುಷ್ಯನ ಸೃಷ್ಟಿಯೇ! ತನ್ನದೇ ಸೃಷ್ಟಿಗಳಲ್ಲಿ ತಾನು ಯಾವುದನ್ನು ಆಯ್ದುಕೊಳ್ಳಬೇಕು ಮತ್ತು ಗುರುತಿಸಿಕೊಳ್ಳಬೇಕು ಎಂಬುದು ವ್ಯಕ್ತಿಯ ವಿವೇಕದ ಆಯ್ಕೆಯಾಗಬೇಕು. ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ಸಾಮಾಜಿಕ, ಸಾಂಸ್ಕೃತಿಕ ಮತ್ತು ಧಾರ್ಮಿಕತೆಯ ಭಿನ್ನ ಭಿನ್ನ ಗುರುತುಗಳಿದ್ದರೂ ಅವುಗಳನ್ನು ಪಕ್ಕಕ್ಕೆ ಸರಿಸಿ ರಾಷ್ಟ್ರೀಯತೆಯ ಗುರುತಿನಲ್ಲಿ ಬೆರೆತುಕೊಂಡದ್ದು ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು. ಬೇರುಗಳು ಎಂಬ ಗುರುತುಗಳನ್ನು ಸಮಯಕ್ಕನುಸಾರವಾಗಿ, ಜೀವನ್ಮುಖಿಯಾಗಿ ಮತ್ತು ವಿಕಾಸಪರವಾಗಿ ಬದಲಾಯಿಸಿಕೊಳ್ಳುವುದು ಕೂಡಾ ಮನೋವಿಕಾಸದ ಭಾಗವೂ ಹೌದು, ಮನೋರಕ್ಷಣಾ ತಂತ್ರವೂ ಹೌದು. ಆಲೋಚನೆಗಳಿಗಷ್ಟೇ ಎಲ್ಲೆಗಳಿರುವುದು, ಅಸ್ತಿತ್ವಕ್ಕಲ್ಲ.
Price Hike: ಬೆಲೆ ಏರಿಕೆಯಲ್ಲೇ 2.5 ವರ್ಷ ಪೂರೈಸಿದ ಕಾಂಗ್ರೆಸ್ಗೆ ಅಭಿನಂದನೆಗಳು: ತೇಜಸ್ವಿ ಸೂರ್ಯ
ರಾಜ್ಯ ಕಾಂಗ್ರೆಸ್ ಸರ್ಕಾರವು 2.5 ವರ್ಷ ಪೂರೈಸಿರುವ ಹಿನ್ನೆಲೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ವ್ಯಂಗ್ಯವಾಗಿ ಅಭಿನಂದನೆಗಳನ್ನು ತಿಳಿಸಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವು ಎರಡೂವರೆ ವರ್ಷಗಳ ತನ್ನ ದುರಾಡಳಿತ ಮತ್ತು ಏಕಪಕ್ಷೀಯ ಆಡಳಿತವನ್ನು ಪೂರೈಸಿದಕ್ಕೆ ಅಭಿನಂದನೆಗಳು ಎಂದಿದ್ದಾರೆ. ಈ ಅವಧಿಯಲ್ಲಿ ರಾಜ್ಯದಲ್ಲಿ ಏನೆಲ್ಲ ಬೆಲೆ ಏರಿಕೆ ಆಗಿದೆ ಎಂಬುದರ ಪಟ್ಟಿಯನ್ನೂ ತೇಜಸ್ವಿ ಸೂರ್ಯ ಕೊಟ್ಟಿದ್ದಾರೆ. ಮೆಟ್ರೋ
ಬೀದರ್ | ಕೌಠಾ ಸೇತುವೆ ಮೇಲಿಂದ ಜಿಗಿದ ಯುವಕನಿಗಾಗಿ ಮುಂದುವರಿದ ಶೋಧ
ಬೀದರ್ : ಕೌಠಾ ಸೇತುವೆ ಮೇಲಿನಿಂದ ನದಿಗೆ ಶುಕ್ರವಾರ ಸಂಜೆ ಜಿಗಿದಿದ್ದಾನೆ ಎನ್ನಲಾದ ಯುವಕನಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಕುಮಟಿ ಗ್ರಾಮದ ನಿವಾಸಿ ಕೃಷ್ಣ ನಾರಲ್ವಾರ್(30) ಸೇತುವೆ ಮೇಲಿಂದ ನದಿಗೆ ಜಿಗಿದ ಯುವಕ. ಎರಡು ದಿನಗಳಿಂದ ಕೃಷ್ಣರಿಗಾಗಿ ಪೊಲೀಸ್ ಮತ್ತು ಅಗ್ನಿಶಾಮಕ ದಳ ಹುಡುಕಾಟ ನಡೆಸುತ್ತಿದೆ. ಕ್ಷಯ ರೋಗದಿಂದ ಬಳಲುತ್ತಿದ್ದ ಕೃಷ್ಣ ಕೆಲ ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅನಾರೋಗ್ಯ ಕಾರಣ ಮನನೊಂದಿದ್ದ ಅವರು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಎರಡು ದಿನಗಳಿಂದ ಹುಡುಕಾಟ ನಡೆಸುತ್ತಿದ್ದರೂ ಕೃಷ್ಣ ಪತ್ತೆಯಾಗಿಲ್ಲ. ಇಂದು ಬೆಳಗ್ಗೆಯಿಂದ ಶೋಧಕಾರ್ಯ ಮುಂದುವರಿದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಸಂತಪುರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯೋತ್ಸವ ಪ್ರಶಸ್ತಿ, ಸಾಧಕರ ತಲೆ ಎಷ್ಟು ಬಾಗಬೇಕು?
ಸಂಸ್ಕೃತಿಯ ಮೌಲ್ಯಗಳಲ್ಲಿ ತೂಕ ಕಡಿಮೆಯಾಗಿದ್ದು, ಕಾರ್ಯಾಚರಣೆಗಳಲ್ಲಿ ಹೊಳಪು ಹೆಚ್ಚಾಗಿದೆ. ಕನ್ನಡಕ್ಕೆ ಸೇವೆ ಮಾಡಿದವರಿಗಿಂತ ಕಾರ್ಯಕ್ರಮಕ್ಕೆ ಸೇವೆ ಮಾಡಿದವರಿಗೆ ಪ್ರಶಸ್ತಿ ಸಿಗುವ ಪ್ರವೃತ್ತಿ ಬೆಳೆದಿದೆ. ಈ ಕನ್ನಡದ ಆತ್ಮ ಉಳಿಯಬೇಕಾದರೆ, ಹಬ್ಬದ ಹೃದಯವನ್ನು ಮರುಚಿಂತನೆ ಮಾಡಬೇಕಿದೆ. ಕಾರ್ಯಕ್ರಮದ ಕಿರಿಕ್-ಕಿರಿಕ್ಗಿಂತ ಭಾಷೆಯ ಮೌಲ್ಯ, ಸಾಹಿತ್ಯದ ಗೌರವ, ಸೇವೆಯ ನಿಸ್ವಾರ್ಥತೆ-ಇವು ರಾಜ್ಯೋತ್ಸವದ ಕೇಂದ್ರವಾಗಬೇಕು. ತಾಲೂಕು, ಜಿಲ್ಲೆ, ರಾಜ್ಯ ಹೀಗೆ ಒಂದಲ್ಲ ಒಟ್ಟು ಮೂರು ಹಂತದ ರಾಜ್ಯೋತ್ಸವ ಪ್ರಶಸ್ತಿಗೆ ಹತ್ತಾರು ಬಾರಿ ಅರ್ಜಿ ಹಾಕಿ ಹಾಕಿ ಹೈರಾಣಗೊಂಡ ನಡುವಯಸ್ಸಿನ ‘ಅಸಾಧಾರಣ ಸಾಧಕ’ರೊಬ್ಬರನ್ನು ಪ್ರಯಾಣದುದ್ದ ಪಕ್ಕದ ಸೀಟಲ್ಲಿ ಭೇಟಿಯಾಗುವ ಪ್ರಸಂಗವೊಂದು ಒದಗಿತು. ಯಾವುದೇ ಸಂಕೋಚ ನಾಚಿಕೆಯಿಲ್ಲದೆ, ‘‘ತಪ್ಪು ಸರಕಾರದ್ದಲ್ಲ, ನನ್ನ ಅರ್ಜಿಯದ್ದೇ ಇರಬೇಕು’’ ಎಂದು ಅಳು ನುಂಗಿದ ಮುಖವಾಡದೊಂದಿಗೆ, ‘‘ಮುಂದಿನ ಸಲ ಅರ್ಜಿಗೊಮ್ಮೆ ನೀವು ಕಣ್ಣಾಡಿಸಬೇಕು’’ ಎಂದಾಗ ಸಹಜವಾಗಿಯೇ ನಾನು ಗಲಿಬಿಲಿಗೊಂಡೆ. ಸಮಾಜಕ್ಕೆ ಅವರು ಮಾಡಿದ ಸೇವೆಗಳೆಂದರೆ ಒಂದಷ್ಟು ಶಾಲಾ ಮಕ್ಕಳಿಗೆ ಫೀಸು ತುಂಬಿಸಿದ್ದು, ಇವೆಲ್ಲವೂ ಸಂದೇಹವಿಲ್ಲದ ಸಹಕಾರವೇ. ಆದರೆ ಆ ಸತ್ಯದ ಮೇಲೆ ಒಣಮಳೆ ಸುರಿಸುತ್ತಿದ್ದ ಅವರ ಮತ್ತೊಂದು ನಿಜ ಈಗ ನನ್ನ ಕಿವಿಗೆ ಬಡಿದುಕೊಂಡಿತು: ಕಳೆದ ಆರೇಳು ವರ್ಷಗಳಿಂದ ಅವರ ಉದ್ಯಮ, ಗಳಿಕೆ, ಜನಪ್ರೀತಿ ಎಲ್ಲಕ್ಕಿಂತಲೂ ಹೆಚ್ಚಾಗಿ ಅವರೊಳಗಡೆ ಸಮಾನಾಂತರವಾಗಿ ಬೆಳೆಯುತ್ತಿದ್ದದ್ದು ‘ಪ್ರಶಸ್ತಿ-ಭಾವನೆ’ ಎಂಬ ಒಂದು ಹೊಸಬೆಳೆ. ಸುಮಾರು ಮೂರು ದಶಕಗಳ ಹಿಂದಿನ ಒಂದು ಘಟನೆಯನ್ನು ನಾನು ಹೇಳಲೇಬೇಕು. ಕರಾವಳಿ ಕರ್ನಾಟಕದ ಪ್ರಸಿದ್ಧ ಶೈಕ್ಷಣಿಕ ಸಾಧಕರೊಬ್ಬರಿಗೆ ಇಂದಿರಾಗಾಂಧಿ ಹೆಸರಿನ ರಾಷ್ಟ್ರಮಟ್ಟದ ಪ್ರಶಸ್ತಿಯೊಂದು ಬಂತು. ನಿಜವಾಗಿಯೂ ಆ ಪ್ರಶಸ್ತಿಗೆ ಅವರು ಯೋಗ್ಯರೇ ಆಗಿದ್ದರು. ಅಕ್ಷರದಲ್ಲಿ ಅತ್ಯಂತ ಕಡಿಮೆ ಓದಿದ ಆ ವಿದ್ಯಾವಂತ ಸಾಧಕರು ಹಳ್ಳಿಗಾಡಲ್ಲಿ ಸಾಲು ಸಾಲು ಶಿಕ್ಷಣದ ತರಗತಿಗಳನ್ನು ತೆರೆದು ಮೆಡಿಕಲ್ವರೆಗೂ ಅದನ್ನು ವಿಸ್ತರಿಸಿದ್ದರು. ಮೂಲತಃ ಕೃಷಿಕರಾದ ಅವರ ಆ ಶೈಕ್ಷಣಿಕ ಚಿಂತನೆ ಒಂದು ಇಡೀ ದೇಶಕ್ಕೆ ಅದ್ಭುತ ಮಾದರಿಯೇ. ಅವರನ್ನು ಸಂದರ್ಶನ ಮಾಡುವ ಸದುದ್ದೇಶದಿಂದ ನಾನು ಮತ್ತು ನನ್ನ ಸಂಪಾದಕರು ಮನೆಯಲ್ಲೇ ಭೇಟಿಯಾಗಿ ವಿಸ್ತಾರವಾಗಿ ಅವರ ಯೋಚನೆ ಮತ್ತು ಯೋಜನೆಗಳನ್ನು ಬಗೆದಿದ್ದೆವು. ತಡರಾತ್ರಿ ಊಟ ಮುಗಿಸಿ ಹೊರಡುವ ಹೊತ್ತಿಗೆ ನಮ್ಮಿಬ್ಬರನ್ನು ತಮ್ಮ ಖಾಸಗಿ ಕೊಠಡಿಯೊಂದಕ್ಕೆ ಕರೆದು ಕಪಾಟಿನೊಳಗಡೆಯಿಂದ ಒಂದಷ್ಟು ಗರಿಗರಿ ನೋಟಿನ ಕಟ್ಟನ್ನು ತೆಗೆದು ನಮಗೆ ಕೊಡಲು ಮುಂದಾದರು. ತೀರಾ ಅನಿರೀಕ್ಷಿತವಾದ ಈ ಘಟನೆಯಿಂದ ವಿಚಲಿತರಾದ ನಮ್ಮನ್ನು ಅವರೂ ಗಲಿಬಿಲಿಯಿಂದಲೇ ನೋಡಿದರು. ‘‘ಬೇರೆನಿಲ್ಲ, ಇದು ನಿಮ್ಮ ಫೀಸು’’ ಎಂದರು. ‘‘ನಿಮ್ಮ ಸಾಧನೆಯನ್ನು ನಮ್ಮ ಪತ್ರಿಕೆಯಲ್ಲಿ ಬರೆಯುವುದಕ್ಕೆ ನೀವು ಯಾವುದೇ ಸಂಭಾವನೆಯನ್ನು ಕೊಡುವ ಅಗತ್ಯ ಇಲ್ಲ, ಅದು ನಮ್ಮ ಕರ್ತವ್ಯ’’ ಎಂದು ಉತ್ತರಿಸಿದರು ನನ್ನ ಸಂಪಾದಕರು. ಅದಕ್ಕೆ ಅವರು ಕೊಟ್ಟ ಪ್ರತ್ಯುತ್ತರ ತುಂಬಾ ಮಾರ್ಮಿಕವಾಗಿತ್ತು. ‘‘ನನ್ನಿಂದ ಈವರೆಗೆ ದುಡ್ಡು ತಗೊಳ್ಳದೆ ಯಾವ ಪತ್ರಿಕೆಯವರೂ ಬರೆದೇ ಇಲ್ಲವಲ್ಲ, ಅದಕ್ಕಾಗಿ ನಾನು ಹೀಗೆ ಕೊಡುವ ದುಡ್ಡನ್ನು ಫೀಸು ಎಂದೆ. ಇತ್ತೀಚೆಗೆ ಪ್ರಶಸ್ತಿಗಳು ಕೂಡ....’’ ಎಂದು ಅವರು ಮಾತನ್ನು ಅರ್ಧ ನುಂಗಿದರು. ಇದು ಆ ಕಾಲದ ಕಥೆಯಾದರೆ, ಇವತ್ತಿನ ಪರಿಸ್ಥಿತಿ ಹೇಗಿರಬಹುದೆಂದು ನೀವೇ ಯೋಚಿಸಿ. ಸಿಕ್ಕಿರುವ ಪ್ರಶಸ್ತಿಯ ಬಗ್ಗೆಯೂ ಅನುಮಾನ ಪಡುವ ಹಾಗೆ ಇತ್ತು ಅವರ ಆ ಮುಗ್ಧ ಉತ್ತರ.! ಯಾರಾದರೂ ಮನುಷ್ಯ ಅರ್ಜಿ ಹಾಕಿ ಪ್ರಶಸ್ತಿಯನ್ನು ಕೇಳುವಾಗ, ಒಳಗೆ ಕೇಳಿಸಿಕೊಳ್ಳುವ ಗುಟ್ಟು ಧ್ವನಿ-‘‘ನನ್ನ ತಲೆ ಎಷ್ಟು ಬಾಗಬೇಕು?’’ ಅನ್ನೋದು. ಯಾವ ಪ್ರಶಸ್ತಿಗೆ ಯಾರ ಶಿಫಾರಸು ಬೇಕು? ಯಾವ ಹಾದಿ ಹಿಡಿದು ಹೋಗಬೇಕು? ಯಾವ ರಾಜಕೀಯ-ಸಾಮಾಜಿಕ ಗುಂಪಿನ ಕಿವಿ ತಟ್ಟಬೇಕು? ಇದು ವ್ಯಕ್ತಿಗಿಂತ ವ್ಯವಸ್ಥೆಯ ನೈತಿಕತೆಯ ಪ್ರಶ್ನೆ. ಪ್ರಶಸ್ತಿಗಾಗಿ ಅರ್ಜಿಯನ್ನು ಬೇಡಿಕೊಂಡಾಗಲೇ ಆ ವ್ಯಕ್ತಿಯ ಗೌರವದ ಮೊದಲ ಹಂತ ತುಂಡಾಗುತ್ತದೆ. ಪಡೆಯುವವನ ನೈತಿಕತೆ ಪ್ರಶ್ನೆಗೆ ಬಂದುಗೊಳ್ಳುವಷ್ಟರಲ್ಲಿ, ಕೊಡುತ್ತಿರುವವರ ನೈತಿಕತೆ ಇನ್ನೊಂದು ದಿಕ್ಕಿನಲ್ಲಿ ಬಾಯಿ ಬಿಚ್ಚಿಕೊಂಡಿರುತ್ತದೆ. ಒಂದು ಕಾಲದಲ್ಲಿ ಸಾಹಿತ್ಯ, ಕಲೆ, ವಿಜ್ಞಾನ, ಸಮಾಜ ಸೇವೆ ಎಲ್ಲವೂ ನಿಷ್ಪಕ್ಷದ ಕ್ಷೇತ್ರಗಳು. ಈಗ ಅಲ್ಲೂ ಆಯ್ಕೆ ಸಮಿತಿಯ ಮುಂದೆ ದಟ್ಟ ರಾಜಕೀಯದ ಬಿರುಕು, ವೈಯಕ್ತಿಕ ಒಲವುಗಳ ಬಣ್ಣ, ಗುಂಪುಗಾರಿಕೆಯ ಒಡನಾಟ ಪ್ರತಿಬಿಂಬಿಸುತ್ತಿವೆ. ಇಷ್ಟಾದರೂ ಆಗಾಗ ಇಂತಹ ಪ್ರಶಸ್ತಿಗಳು ನಿಜವಾದ ಅರ್ಹರಿಗೆ ಸಿಗುತ್ತವೆ ಅನ್ನುವುದು ಸಮಾಧಾನದ ಸಂಗತಿ. ನಮ್ಮ ಜನರೂ ಹಾಗೆಯೇ. ಯಾವುದೇ ಪ್ರಶಸ್ತಿ ಬಂದಿರಲಿ ವ್ಯಕ್ತಿಗತ ನೆಲೆಯಲ್ಲಿ ಮೌಲ್ಯಮಾಪನಕ್ಕೆ ಇಳಿಯುವುದೇ ಇಲ್ಲ. ಆತ ಯಾವ ದಾರಿಯಲ್ಲಿ ಅದನ್ನು ದಕ್ಕಿಸಿಕೊಂಡಿದ್ದಾನೆ ಎಂಬ ನೈತಿಕ ಪ್ರಶ್ನೆಯನ್ನು ಯಾರೂ ಕೇಳುವುದೇ ಇಲ್ಲ. ರಾಜ್ಯೋತ್ಸವ ಪ್ರಶಸ್ತಿ ಪಡೆದವನೂ ಅವನ ಅಭಿಮಾನಿಗಳೂ ಸೇರಿ ಮರುದಿವಸ ಸಿಕ್ಕಸಿಕ್ಕಲ್ಲಿ ರಾಜರಸ್ತೆಯುದ್ದಕ್ಕೂ ಭಯಂಕರ ಫ್ಲೆಕ್ಸ್ಗಳನ್ನು ಏರಿಸುತ್ತಾರೆ. ಅಭಿನಂದನೆಯ ಆ ಫ್ಲೆಕ್ಸಿನ ಒಂದು ಗಟ್ಟಿದಾರವನ್ನು ಅಲ್ಲೇ ಇರುವ ಮಹಾತ್ಮಾ ಗಾಂಧಿ ಮೂರ್ತಿಯ ತಲೆಗೆ ಕಟ್ಟಿದ್ದನ್ನು, ಸಾಹಿತ್ಯದಲ್ಲಿ ರಾಜ್ಯೋತ್ಸವ ಪ್ರಶಸ್ತಿಯನ್ನು ಪಡೆದ ಫ್ಲೆಕ್ಸಿನ ಇನ್ನೊಂದು ಹಗ್ಗವನ್ನು ಬಸವಣ್ಣ- ಕುವೆಂಪು ಮೂರ್ತಿಗೆ ಅಡ್ಡವಾಗಿ ಬಿಗಿದದ್ದನ್ನು ನಾನು ಕಂಡಿದ್ದೇನೆ. ಸಮಾಜ ಸೇವೆ, ಸಾಹಿತ್ಯಕ್ಕಾಗಿ ಪ್ರಶಸ್ತಿ ಗಿಟ್ಟಿಸಿದ ಇವರೆಲ್ಲ ಅದೇ ಗಾಂಧಿಯನ್ನಾಗಲೀ, ಬಸವ ಕುವೆಂಪು ಅವರನ್ನಾಗಲೀ ಒಂದು ಅಕ್ಷರ ಓದಿಕೊಂಡಿದ್ದಾರೆ ಅನ್ನುವ ನಂಬಿಕೆ ನನಗಿಲ್ಲ. ಇತ್ತೀಚೆಗೆ ತಾಲೂಕು ಮತ್ತು ಜಿಲ್ಲಾಡಳಿತಗಳು ನೀಡುವ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗಳ ಮೂಲ ಉದ್ದೇಶ-ಸ್ಥಳೀಯವಾಗಿ ಸದ್ದಿಲ್ಲದೆ ದುಡಿದಿರುವವರಿಗೆ ಮಾನ್ಯತೆ ನೀಡುವುದು. ಆದರೆ ಇಂದು ಅಲ್ಲಿ ಯಾರೂ ಬೇಕಾದರೂ ಗಿಟ್ಟಿಸಿಕೊಳ್ಳಬಹುದಾದ, ಖರೀದಿಸಿಕೊಳ್ಳಬಹುದಾದ ಪರಿಸ್ಥಿತಿ ಸೃಷ್ಟಿಯಾಗಿದೆ. ಒಂದು ಕಾಲದಲ್ಲಿ ರಾಜ್ಯೋತ್ಸವ ಪ್ರಶಸ್ತಿ ರಾಜ್ಯಮಟ್ಟದ ಗೌರವವಾಗಿತ್ತು. ಈಗ ಅದು ಜಿಲ್ಲೆ, ತಾಲೂಕು ಮಟ್ಟಗಳವರೆಗೂ ಇಳಿದುಬಂದಿದೆ. ಮುಂದಿನ ಕೆಲವು ವರ್ಷಗಳಲ್ಲಿ ಗ್ರಾಮ ಮಟ್ಟಕ್ಕೂ ಬಂದು ಸೇರುವ ಸಾಧ್ಯತೆಗಳಿವೆ. ಪ್ರಶಸ್ತಿ ವಿಸ್ತರಣೆ ಕೆಟ್ಟದ್ದೇನಲ್ಲ, ಆದರೆ ಪ್ರಶಸ್ತಿಯನ್ನು ನೀಡುವ ಪ್ರಕ್ರಿಯೆ ಮಾತ್ರ ಗಂಭೀರತೆಯನ್ನು ಕಳೆದುಕೊಳ್ಳುತ್ತಿದೆ. ಪ್ರಶಸ್ತಿ ಈಗ ‘ಸೇವೆಯ ಗುರುತಿಸುವಿಕೆಗಿಂತ’ ಪ್ರಭುತ್ವ ನೀಡುವ ‘ಗುರುತು’ ಆಗಿದೆ. ಆಡಳಿತಾಂಗವೇ ಪ್ರಶಸ್ತಿಯ ಉಸ್ತುವಾರಿ ನೋಡಿಕೊಳ್ಳುತ್ತಿರುವುದರಿಂದ, ಪ್ರಶಸ್ತಿ ಒಂದು ಕಚೇರಿಯಿಂದ ಹೊರಡುವ ಕಾಗದಕ್ಕಿಂತ ಕಡೆಯಾಗಿದೆ. ಇದರ ಪರಿಣಾಮ ಪ್ರಶಸ್ತಿ ಪಡೆಯುವವರ ಮನಸ್ಸಿನಲ್ಲಿ ‘ಅರ್ಜಿಯ ಮೂಲಕ ಪಡೆಯಬಹುದಾದ ಅವಕಾಶ’ ಎಂಬ ಭಾವನೆ ಗಟ್ಟಿಯಾಗುತ್ತಿದೆ. ಯಾವ ನಾಚಿಕೆಯೂ ಇಲ್ಲದೆ ಪ್ರಶಸ್ತಿ ವಿಜೇತರು ತಮ್ಮ ಸನ್ಮಾನ ಸಭೆಯಲ್ಲಿ ನಾನು ಇಂಥ ಎಂಎಲ್ಎ ಮೂಲಕ ಅರ್ಜಿ ಹಾಕಿದೆ, ಇಂಥವರಿಂದಾಗಿ ಪ್ರಶಸ್ತಿ ಪಡೆದೆ ಎಂದು ಸಾರ್ವಜನಿಕವಾಗಿ ಕೃತಜ್ಞತೆಯನ್ನು ಸಲ್ಲಿಸುವ ಸನ್ಮಾನಿತರನ್ನು ನಾವು ಕಂಡಿದ್ದೇವೆ. ಈ ಹಿನ್ನೆಲೆಯಲ್ಲಿ, ಪ್ರಶಸ್ತಿಗಾಗಿ ಓಡಾಟ, ವರ್ಷಪೂರ್ತಿ ಶಿಫಾರಸು ಪತ್ರಗಳನ್ನು ಹುಡುಕುವ ಕೆಲಸ, ಯಾರಿಂದ ಯಾರಿಗೆ ಶಿಫಾರಸು ಬರೆಯಿಸಬಹುದು, ಯಾರನ್ನು ಭೇಟಿಯಾಗಬೇಕು, ಯಾವ ಅಧಿಕಾರಿಗೆ ಕರೆ ಮಾಡಿದರೆ ಫೈಲ್ ಮುಂದೆ ಸರಿಯುತ್ತದೆ ಇವುಗಳೇ ಪ್ರಶಸ್ತಿ ಪಡೆಯುವ ತಂತ್ರ ಶಾಸ್ತ್ರವಾಗುತ್ತಿದೆ. ಅರ್ಜಿ ಬರೆಯಿಸಿ, ತಿಳಿದವರನ್ನು ಭೇಟಿಯಾಗಿ, ಪಕ್ಷ-ಪರಿವಾರಗಳ ಮೂಲಕ ಶಿಫಾರಸು ಪತ್ರಗಳನ್ನು ಅಟ್ಟಿ ಕಟ್ಟಿಕೊಂಡು, ಜಿಲ್ಲಾಡಳಿತದ ಕಚೇರಿಗೆ ಅಲೆದಾಡುವುದು ಎಲ್ಲವೂ ಪ್ರಶಸ್ತಿಯನ್ನು ‘ಪಡೆಯುವ ಭಾಗ’ ಆಗಿಬಿಟ್ಟಿದೆ. ತಾಲೂಕು ಮುಗಿದ ಮೇಲೆ ಜಿಲ್ಲೆ, ಜಿಲ್ಲೆ ಮುಗಿದ ಮೇಲೆ ರಾಜ್ಯ ಹೀಗೆ ಈ ಅಲೆದಾಟ ನಿರಂತರವಾಗಿರುತ್ತದೆ. ಇಂತಹವರಲ್ಲಿ ನೀವು ನಾಚಿಕೆ ಎಂಬ ಅವಮಾನ- ಅನುಮಾನವನ್ನೂ ಕಾಣುವುದು ಕಷ್ಟ. ಪ್ರಶಸ್ತಿ ಪಡೆದ ಸಾಧನೆಗಿಂತ, ಪ್ರಶಸ್ತಿ ಪಡೆಯಲು ಮಾಡಿದ ಶ್ರಮವೇ ಹೆಚ್ಚಿನದಾಗಿ ತೋರುತ್ತದೆ.! ಈ ಪ್ರಕ್ರಿಯೆಯ ಇನ್ನೊಂದು ಮುಖ-ನಿಜವಾಗಿ ಸೇವೆ ಮಾಡಿದವರು, ಸಮಾಜದ ತಳದಲ್ಲಿ ನಿಂತು ಕೆಲಸ ಮಾಡಿದವರು - ಇವರಲ್ಲಿ ಬಹಳಷ್ಟು ಜನ ಪ್ರಶಸ್ತಿಯ ದಾರಿಯಲ್ಲಿ ಕಾಣಿಸಿಕೊಳ್ಳುವುದಿಲ್ಲ. ಅವರು ಶಿಫಾರಸು ಪತ್ರಗಳನ್ನು ಹುಡುಕುವುದಿಲ್ಲ. ಅವರು ಪ್ರಭುತ್ವದ ಬಾಗಿಲಿಗೆ ಹೋಗುವುದಿಲ್ಲ.ಅವರಿಗೆ ಪರಿಚಯದ ರಾಜಕೀಯವೂ ಇಲ್ಲ. ಹೀಗಾಗಿ ಪ್ರಶಸ್ತಿಯ ವ್ಯವಸ್ಥೆಯಿಂದ ಅವರು ಹೊರಗುಳಿಯುತ್ತಾರೆ. ಒಂದೇ ಒಂದು ಉದಾಹರಣೆಗೆ ಕನ್ನಡ ಲೋಕದಲ್ಲಿ ಮನೆ ಮಾತಾಗಿರುವ ನಮ್ಮ ಸುಬ್ರಾಯ ಚೊಕ್ಕಾಡಿಯವರು. ಈವರೆಗೆ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಸಿಗಲಿಲ್ಲವೆಂದಾದರೆ ನೀವೇ ಯೋಚಿಸಿ, ಈ ಲಾಬಿ ಯಾವ ಮಟ್ಟಕ್ಕೆ ಬೆಳೆದಿದೆ ಎಂದು. ಇದರಿಂದ ಇಂದು ಪ್ರಶಸ್ತಿ ಎಂಬುವುದು ಕೇವಲ ‘ಅರ್ಹತೆ-ಆಧಾರಿತ’ ವ್ಯವಸ್ಥೆಯಲ್ಲಿ ಪ್ರವೇಶ ಹೊಂದಿದವರಿಗೆ ಮಾತ್ರ ಲಭ್ಯವಾಗುವ ವ್ಯವಸ್ಥೆಯಾಗಿ ಪರಿವರ್ತನೆಗೊಂಡಿದೆ. ರಾಜ್ಯೋತ್ಸವ ನೆಪದಲ್ಲಿ ಕನ್ನಡದ ಆಚರಣೆಯೂ ಹಾಗೆಯೇ. ಕನ್ನಡ ಡಿಂಡಿಮ ಎಂದು ಹೆಸರಿಟ್ಟು ಎದೆ ಒಡೆದು ಹೋಗುವಷ್ಟು ಡಿಜೆ ಹಾಕಿ ಕನ್ನಡವನ್ನು ಢಂ ಢಂ ಮಾಡುವ ಕಾರ್ಯಕ್ರಮಗಳೇ ಇತ್ತೀಚೆಗೆ ಹೆಚ್ಚಾಗುತ್ತಿದೆ. ಈ ಬಾರಿ ಹುಬ್ಬಳ್ಳಿ-ಧಾರವಾಡದ ಕನ್ನಡ ಸಂಘಟಕರೊಬ್ಬರು ಇಂಥ ಪ್ರಶಸ್ತಿಗಳಿಂದ ದೂರವಿದ್ದ ಸಜ್ಜನ ಸಾಹಿತಿ, ಹಿರಿಯ ಸರಸ್ವತಿ ಸೇವಕರೊಬ್ಬರನ್ನು ಒತ್ತಾಯದಿಂದ ಕಾಡಿ ವೇದಿಕೆಗೆ ಏರಿಸಿದ್ದರು. ಅವರ ವಯಸ್ಸು 80ಕ್ಕೆ ಹತ್ತಿರವಿತ್ತು. ಅದೇ ವೇದಿಕೆಯಲ್ಲಿ ಅವರ ಪಕ್ಕದಲ್ಲಿ ಸನ್ಮಾನಕ್ಕೆ ಕೂತ ಹಿರಿಯ ವೈದ್ಯರನ್ನು ಇವರು ಕೇಳಿದರಂತೆ. ‘‘ಸ್ವಾಮಿ ಇಲ್ಲಿ ಕನ್ನಡದ ಡಿಜೆ ಎದೆ ಗುದ್ದುತ್ತಿದೆ, ಒಮ್ಮೆ ನನ್ನ ಎದೆ ಬಡಿತ ಅಳತೆ ಮಾಡುವಿರಾ, ಭಯವಾಗುತ್ತಿದೆ’’ ಎಂದು ಎದೆಯ ಮೇಲೆ ಕೈ ಇಟ್ಟುಕೊಂಡೇ ವಿನಂತಿಸಿದರಂತೆ!. ಬಹುತೇಕ ಆ ವೇದಿಕೆಯಲ್ಲಿದ್ದವರು ಅವರಷ್ಟೇ ವಯಸ್ಸಿನವರು. ಇಂಥವರಿಗೆ ಕನ್ನಡದ ಮೃದು ಮಧುರ ನುಡಿ ಸಾಹಿತ್ಯ ಬೇಕೇ ಹೊರತು ಅಬ್ಬರ ತಾಳದ ಅಗತ್ಯವೇ ಇಲ್ಲ. ಮೊದಲೆಲ್ಲ ರಾಜ್ಯೋತ್ಸವ ಸರಳವಾಗಿರುತ್ತಿತ್ತು. ಹಳ್ಳಿ ಶಾಲೆಗಳ ಆಂಗಣದಲ್ಲಾಗಲೀ, ತಾಲೂಕು ಕಚೇರಿಗಳ ಮುಂಭಾಗವಾಗಲೀ ಕನ್ನಡ ಧ್ವಜ ಏರಿಸುವುದು, ಕೆಲ ಕಲಾ ಕಾರ್ಯಕ್ರಮಗಳು, ಹಿರಿಯರಿಗೆ ಗೌರವ-ಇಷ್ಟೇ. ಆದರೆ ಕಳೆದ ಕೆಲವು ವರ್ಷಗಳಲ್ಲಿ ರಾಜ್ಯೋತ್ಸವದ ಆಚರಣೆ ಸಂಪೂರ್ಣವಾಗಿ ರೂಪ ಬದಲಿಸಿಕೊಂಡಿದೆ. ಆಚರಣೆಯಲ್ಲಿ ಕನ್ನಡಕ್ಕಿಂತ ಕೋಲಾಹಲ ಹೆಚ್ಚು, ಸಂಸ್ಕೃತಿಗಿಂತ ಸಮಾರಂಭದ ಗಲಾಟೆ ಹೆಚ್ಚು ಗೋಚರಿಸುತ್ತಿದೆ. ರಾಜ್ಯೋತ್ಸವ ಕನ್ನಡದ ಆತ್ಮದ ಹಬ್ಬ. ಆದರೆ ಈಗ ಆ ಹಬ್ಬದ ರೂಪ ಬದಲಾಗಿದೆ. ಫ್ಲೆಕ್ಸ್ ಸಂಸ್ಕೃತಿ, ಶಬ್ದ ಸಂಸ್ಕೃತಿ, ಪ್ರದರ್ಶನ ಸಂಸ್ಕೃತಿ ನಿಜವಾದ ಕನ್ನಡದ ಮೌಲ್ಯಗಳನ್ನು ಮರೆಮಾಡಿವೆ. ಪ್ರಶಸ್ತಿ ನೀಡುವುದು ರಾಜಕೀಯ-ಸಾಮಾಜಿಕ ದೃಷ್ಟಿಯಿಂದ ಕಾರ್ಯಕ್ರಮ ಆಗಿದೆ, ನಿಜದ ಗೌರವ ಮರೆಯಾಗಿದೆ. ಕಾರ್ಯಕ್ರಮದ ಮೆರುಗು, ಡಿಜೆ, ಫೋಟೊ ಸೆಷನ್, ಫ್ಲೆಕ್ಸ್ ಇವೆಲ್ಲ ಮುಖ್ಯ, ಕನ್ನಡದ ಆತ್ಮದ ಬಗ್ಗೆ ಯೋಚಿಸುವವರ ಸಂಖ್ಯೆ ಮಾತ್ರ ಕಡಿಮೆ. ಸಂಸ್ಕೃತಿಯ ಮೌಲ್ಯಗಳಲ್ಲಿ ತೂಕ ಕಡಿಮೆಯಾಗಿದ್ದು, ಕಾರ್ಯಾಚರಣೆಗಳಲ್ಲಿ ಹೊಳಪು ಹೆಚ್ಚಾಗಿದೆ. ಕನ್ನಡಕ್ಕೆ ಸೇವೆ ಮಾಡಿದವರಿಗಿಂತ ಕಾರ್ಯಕ್ರಮಕ್ಕೆ ಸೇವೆ ಮಾಡಿದವರಿಗೆ ಪ್ರಶಸ್ತಿ ಸಿಗುವ ಪ್ರವೃತ್ತಿ ಬೆಳೆದಿದೆ. ಈ ಕನ್ನಡದ ಆತ್ಮ ಉಳಿಯಬೇಕಾದರೆ, ಹಬ್ಬದ ಹೃದಯವನ್ನು ಮರುಚಿಂತನೆ ಮಾಡಬೇಕಿದೆ. ಕಾರ್ಯಕ್ರಮದ ಕಿರಿಕ್-ಕಿರಿಕ್ಗಿಂತ ಭಾಷೆಯ ಮೌಲ್ಯ, ಸಾಹಿತ್ಯದ ಗೌರವ, ಸೇವೆಯ ನಿಸ್ವಾರ್ಥತೆ-ಇವು ರಾಜ್ಯೋತ್ಸವದ ಕೇಂದ್ರವಾಗಬೇಕು.
ರಾಜಕೀಯ ಪ್ರಚಾರ ಪುನರಾರಂಭಿಸಿದ ಟಿವಿಕೆ ಮುಖ್ಯಸ್ಥ ವಿಜಯ್ : ಕರೂರ್ ದುರಂತದ ಬಳಿಕ ಇಂದು ಮೊದಲ ರಾಜಕೀಯ ಸಭೆ
ಚೆನ್ನೈ: ತಮಿಳಗ ವೆಟ್ರಿ ಕಳಗಂ ಸಂಸ್ಥಾಪಕ ಹಾಗೂ ಮುಖ್ಯಸ್ಥ ನಟ ವಿಜಯ್ ರವಿವಾರದಿಂದ ತಮ್ಮ ರಾಜಕೀಯ ಚಟುವಟಿಕೆಯನ್ನು ಪುನಾರಂಭಿಸುತ್ತಿದ್ದು, ಕಾಂಚೀಪುರಂ ಜಿಲ್ಲೆಯ ಸಮೀಪ ಒಳಾಂಗಣ ಕಾರ್ಯಕ್ರಮದಲ್ಲಿ ಜನರನ್ನುದ್ದೇಶಿಸಿ ಮಾತನಾಡಲಿದ್ದಾರೆ. ಕರೂರಿನಲ್ಲಿ ಸಂಭವಿಸಿದ ಕಾಲ್ತುಳಿತ ದುರಂತದ ಎರಡು ತಿಂಗಳ ನಂತರ ಇದೇ ಮೊದಲ ಬಾರಿಗೆ ವಿಜಯ್ ಜನರನ್ನುದ್ದೇಶಿಸಿ ಮಾತನಾಡಲಿದ್ದು, ಕಾರ್ಯಕ್ರಮವು ಸುಗಮವಾಗಿ ನಡೆಯಲು ಎಲ್ಲಾ ಅಗತ್ಯ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಈ ಕಾರ್ಯಕ್ರಮವು ಕಾಂಚೀಪುರಂ ಜಿಲ್ಲೆಯ ಸುಂಗುವರ್ಚತ್ತಿರಂನಲ್ಲಿರುವ ಖಾಸಗಿ ಶೈಕ್ಷಣಿಕ ಸಂಸ್ಥೆಯೊಂದರ ಆವರಣದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರಿಗೆ ಸುಮಾರು 1,500 ಪಾಸ್ ಗಳನ್ನು ವಿತರಿಸಲಾಗಿದ್ದು, ಪಾಸ್ ಇದ್ದವರಿಗೆ ಮಾತ್ರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿರುವ ಪಕ್ಷದ ಕಾರ್ಯಕರ್ತರು ಕಡು ಹಳದಿ ಬಣ್ಣದ ಟಿ-ಶರ್ಟ್ ಗಳು ಹಾಗೂ ಕ್ಯಾಪ್ ಗಳನ್ನು ಧರಿಸಲಿದ್ದಾರೆ. ಅವರಿಗೆ ಜನಜಂಗುಳಿಯನ್ನು ನಿಯಂತ್ರಿಸುವ ಹಾಗೂ ನಿರ್ವಹಿಸುವ ತರಬೇತಿಯನ್ನು ನಿವೃತ್ತ ಪೊಲೀಸ್ ಅಧಿಕಾರಿಗಳು ನೀಡಿದ್ದಾರೆ. ಇದಕ್ಕೂ ಮುನ್ನ, ಕಳೆದ ತಿಂಗಳು ನಟ ವಿಜಯ್ ಕರೂರು ಕಾಲ್ತುಳಿತ ದುರಂತದಲ್ಲಿ ಮೃತಪಟ್ಟ ಸಂತ್ರಸ್ತರ ಕುಟುಂಬದ ಸದಸ್ಯರನ್ನು ಮಾಮಲ್ಲಪುರಂನಲ್ಲಿನ ರೆಸಾರ್ಟ್ ಒಂದರಲ್ಲಿ ಭೇಟಿಯಾಗಿದ್ದರು ಹಾಗೂ ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಿದ್ದರು.
ರಾಜಸ್ಥಾನ | ನೂತನ ಮತಾಂತರ ವಿರೋಧಿ ಕಾನೂನಿನಡಿಯಲ್ಲಿ ಇಬ್ಬರು ಕ್ರೈಸ್ತ ಮಿಷನರಿಗಳ ವಿರುದ್ಧ ಪ್ರಕರಣ ದಾಖಲು
ಕೋಟಾ : ರಾಜಸ್ಥಾನ ಪೊಲೀಸರು ಇಬ್ಬರು ಕ್ರೈಸ್ತ ಮಿಷನರಿಗಳ ವಿರುದ್ಧ ಹೊಸದಾಗಿ ಜಾರಿಗೆ ಬಂದಿರುವ ಮತಾಂತರ ವಿರೋಧಿ ಕಾನೂನಿನಡಿಯಲ್ಲಿ ಮೊದಲ ಪ್ರಕರಣವನ್ನು ದಾಖಲಿಸಿದ್ದಾರೆ. ನವೆಂಬರ್ 4 ರಿಂದ 6ರವರೆಗೆ ಕೋಟಾದ ಬೀರ್ಶೆಬಾ ಚರ್ಚ್ನಲ್ಲಿ 'ಆಧ್ಯಾತ್ಮಿಕ ಸತ್ಸಂಗ' ಕಾರ್ಯಕ್ರಮ ನಡೆದಿತ್ತು. ಕಾರ್ಯಕ್ರದಮಲ್ಲಿ ಆಮಿಷದ ಮೂಲಕ ಮತಾಂತರ ನಡೆಸಿದ್ದಾರೆ ಎಂದು ಕ್ರೈಸ್ತ ಮಿಷನರಿಗಳ ವಿರುದ್ಧ ಆರೋಪಿಸಲಾಗಿದೆ. ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ಸ್ಥಳೀಯ ಪದಾಧಿಕಾರಿಗಳು ನೀಡಿದ ದೂರಿನ ಮೇರೆಗೆ ಈ ಕುರಿತು ನವೆಂಬರ್ 20ರಂದು ರಾತ್ರಿ ಎಫ್ಐಆರ್ ದಾಖಲಾಗಿದೆ. ಕ್ರೈಸ್ತ ಮಿಷನರಿಗಳಾದ ದಿಲ್ಲಿಯ ಚಾಂಡಿ ವರ್ಗೀಸ್, ಕೋಟಾದ ಅರುಣ್ ಜಾನ್ ಅವರಿಗೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ. ಇಬ್ಬರು ಕ್ರೈಸ್ತ ಮಿಷನರಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 299 ಮತ್ತು ರಾಜಸ್ಥಾನ ಕಾನೂನುಬಾಹಿರ ಮತಾಂತರ ನಿಷೇಧ ಕಾಯ್ದೆ- 2025ರ ಸೆಕ್ಷನ್ 3 ಮತ್ತು 5ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಬೋರ್ಖೇಡಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್ನಲ್ಲಿ ಆರೋಪಿಗಳು ಹಿಂದೂ ಸಮುದಾಯದ ಬಗ್ಗೆ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದಾರೆ ಮತ್ತು ರಾಜಸ್ಥಾನ ಸರಕಾರವನ್ನು ದೆವ್ವದ ರಾಜ್ಯ ಎಂದು ಬಣ್ಣಿಸಿದ್ದಾರೆ. ಮತಾಂತರಕ್ಕೆ ಪ್ರೇರೇಪಿಸಿದ್ದಾರೆ ಎಂದು ಆರೋಪಿಸಲಾಗಿದೆ. ಕಾರ್ಯಕ್ರಮದಲ್ಲಿನ ಭಾಷಣಗಳು ಮತ್ತು ಚಟುವಟಿಕೆಗಳ ಕುರಿತ ವೀಡಿಯೊಗಳ ಬಗ್ಗೆ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ. ತನಿಖೆಯ ಭಾಗವಾಗಿ ಸಾಮಾಜಿಕ ಮಾಧ್ಯಮ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುವುದು ಮತ್ತು ಕಾರ್ಯಕ್ರಮದಲ್ಲಿ ಭಾಗವಹಿಸಿದವರ ಹೇಳಿಕೆಗಳನ್ನು ದಾಖಲಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ನನಗೆ ಮತ್ತು ವರ್ಗೀಸ್ ಅವರಿಗೆ ಮೂರು ದಿನಗಳ ಒಳಗೆ ನೋಟಿಸ್ಗೆ ಉತ್ತರಿಸುವಂತೆ ಸೂಚಿಸಿದ್ದಾರೆ ಎಂದು ಕ್ರೈಸ್ತ ಮಿಷನರಿ ಅರುಣ್ ಜಾನ್ ತಿಳಿಸಿದ್ದಾರೆ. ನಾವು ಮುಚ್ಚಿಡುವಂತದ್ದು ಏನೂ ಇಲ್ಲ. ಕಾರ್ಯಕ್ರಮದ ವೀಡಿಯೊಗಳು ಈಗಾಗಲೇ ವೈರಲ್ ಆಗಿದೆ. ಸಭೆಯಲ್ಲಿ ಯಾವುದೇ ಕಾನೂನುಬಾಹಿರ ಚಟುವಟಿಕೆ ನಡೆದಿಲ್ಲ ಎಂದು ಅರುಣ್ ಜಾನ್ ಹೇಳಿದ್ದಾರೆ.
BIDAR | ಎರಡು ಬೈಕ್ ಗಳ ಮಧ್ಯೆ ಮುಖಾಮುಖಿ ಢಿಕ್ಕಿ: ಮಗು ಸಹಿತ ಮೂವರು ಮೃತ್ಯು
ಬೀದರ್ : ಎರಡು ಬೈಕ್ ಗಳ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿ ಐದು ವರ್ಷದ ಮಗು ಸೇರಿದಂತೆ ಮೂವರು ಮೃತಪಟ್ಟ ಘಟನೆ ಜನವಾಡ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಚಾಂಬೋಳ್ - ಬೆನಕನಹಳ್ಳಿ ರಸ್ತೆಯಲ್ಲಿ ಶನಿವಾರ ರಾತ್ರಿ ನಡೆದಿದೆ. ಭಾಲ್ಕಿ ತಾಲೂಕಿನ ಜೋಳದಾಪಕಾ ಗ್ರಾಮದ ಮಲ್ಲಿಕಾರ್ಜುನ (35), ಅವರ ಪುತ್ರಿ ಮಹಾಲಕ್ಷ್ಮಿ (5) ಹಾಗೂ ಔರಾದ್ ತಾಲೂಕಿನ ನಿವಾಸಿ ಪವನ್ (28) ಮೃತಪಟ್ಟವರು. ಮಲ್ಲಿಕಾರ್ಜುನ ಅವರು ತನ್ನ ಪತ್ನಿ, ಅತ್ತೆ ಮತ್ತು ಮಗುವಿನೊಂದಿಗೆ ಬೈಕ್ನಲ್ಲಿ ಬೀದರ್ನಿಂದ ಔರಾದ್ ತಾಲೂಕಿನ ಖಾನಾಪುರ ಗ್ರಾಮದ ಕಡೆ ತೆರಳುತ್ತಿದ್ದರು. ಪವನ್ ಔರಾದ್ ಕಡೆಯಿಂದ ಬೀದರ್ ನತ್ತ ಬೈಕಿನಲ್ಲಿ ಪ್ರಯಾಣ ಮಾಡುತಿದ್ದರು. ಎರಡು ಬೈಕ್ ಗಳ ಮಧ್ಯೆ ಮುಖಾಮುಖಿ ಢಿಕ್ಕಿ ಸಂಭವಿಸಿದೆ. ಅಪಘಾತದ ತೀವ್ರತೆಗೆ ಮಲ್ಲಿಕಾರ್ಜುನ್ ಮತ್ತು ಪವನ್ ಸ್ಥಳದಲ್ಲೇ ಮೃತಪಟ್ಟಿದ್ದರೆ, ಮಗು ಮಹಾಲಕ್ಷ್ಮಿ ಬ್ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾಳೆ. ಮಲ್ಲಿಕಾರ್ಜುನ್ ಅವರ ಪತ್ನಿ ಹಾಗೂ ಅತ್ತೆಗೆ ಗಾಯಗಳಾಗಿದ್ದು, ಅವರನ್ನು ಬ್ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಜನವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಭಟ್ಕಳ: ಮೂರು ದಿನಗಳ ಶಿಕ್ಷಕರ ತರಬೇತಿ ಕಾರ್ಯಾಗಾರ
ಭಟ್ಕಳ: ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಭಟ್ಕಳ ಎಜುಕೇಶನ್ ಟ್ರಸ್ಟ ಹಾಗೂ ಸವಿ ಫೌಂಡೇಶನ್, ಮೂಡುಬಿದಿರೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಅಯೋಧ್ಯಾ ನಗರದಲ್ಲಿರುವ ವಿದ್ಯಾಂಜಲಿ ಪಬ್ಲಿಕ್ ಶಾಲೆಯಲ್ಲಿ ನಡೆದ ಮೂರು ದಿನಗಳ ಶಿಕ್ಷಕರ ತರಬೇತಿ ಕಾರ್ಯಾಗಾರ ವಿಸ್ತಾರ ಯಶಸ್ವೀಯಾಗಿ ಸಂಪನ್ನಗೊಂಡಿತು. ವಿದ್ಯಾಂಜಲಿ ಪಬ್ಲಿಕ್ ಶಾಲೆ ಹಾಗೂ ವಿದ್ಯಾಭಾರತಿ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕರು ಮೂರು ದಿನಗಳ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು. ಕಾರ್ಯಾಗಾರವು ಮೂಡಬಿದರೆಯ ಸವಿ ಫೌಂಡೇಶನ್ನ ಸಂಸ್ಥಾಪಕ ಡಾ. ಸಂದೀಪ ನಾಯಕ ಅವರ ನೇತೃತ್ವದಲ್ಲಿ ನಡೆಯಿತು. ಕಾರ್ಯಗಾರದ ಮುಕ್ತಾಯ ಹಾಗೂ ಪ್ರಮಾಣ ಪತ್ರ ವಿತರಣಾ ಸಮಾರಂಭವು ಭಟ್ಕಳ ಎಜ್ಯುಕೇಶನ್ ಟ್ರಸ್ಟ್ ನ ಅಧ್ಯಕ್ಷ ಡಾ. ಸುರೇಶ ನಾಯಕ ಅವರ ಅಧ್ಯಕ್ಷತೆಯಲ್ಲಿ ಜರುಗಿತು. ಪ್ರಮಾಣ ಪತ್ರ ವಿತರಿಸಿ ಮಾತನಾಡಿದ ಅವರು ಈ ಭಾಗದ ವಿದ್ಯಾರ್ಥಿಗಳಿಗೆ ಮೌಲ್ಯಯುತ ಶಿಕ್ಷಣವನ್ನು ನೀಡುತ್ತಿರುವ ಎಲ್ಲಾ ಶಿಕ್ಷಕರನ್ನು ಅಭಿನಂದಿಸಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಮಾತನಾಡಿದ ಸವಿ ಫೌಂಡೇಶನ್ನ ಸಂಸ್ಥಾಪಕ ಡಾ. ಸಂದೀಪ ನಾಯಕ ಆಧುನಿಕ ಶಿಕ್ಷಣ ವ್ಯವಸ್ಥೆಯಲ್ಲಿ ಶಿಕ್ಷಕರ ಪಾತ್ರದ ಮಹತ್ವವನ್ನು ವಿವರಿಸಿದರು. ಕಾರ್ಯಕ್ರಮದ ಮುಖ್ಯ ಅತಿಥಿ ಹಿರಿಯ ಪತ್ರಕರ್ತ ರಾಧಾಕೃಷ್ಣ ಭಟ್ಟ ಮಾತನಾಡಿ ಮಕ್ಕಳಿಗೆ ಪಠ್ಯ ಶಿಕ್ಷಣ ಜೊತೆಜೊತೆಗೆ ಜೀವನ ಮೌಲ್ಯಗಳನ್ನು ಕಲಿಸಿ ಅವರ ಭವಿಷ್ಯವನ್ನು ರೂಪಿಸುವುದು ಶಿಕ್ಷಕರ ಜವಾಬ್ದಾರಿಯಾಗಿದೆ. ಇಂದಿನ ದಿನಗಳಲ್ಲಿ ಮಕ್ಕಳಿಗೆ ಸಾಮಾಜಿಕ ಜವಾಬ್ದಾರಿಯ ಅರಿವು ಮುಡಿಸುವುದು ಕೂಡಾ ಅತೀ ಅಗತ್ಯ ಎಂದರು. ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಡಾ. ಅನಂತಮೂರ್ತಿ ಶಾಸ್ತ್ರಿ ಹಾಗೂ ಶ್ರೀನಾಥ ಪೈ ಇವರು ಶಿಕ್ಷಕರಿಗೆ ಆಧುನಿಕ ಶೈಕ್ಷಣಿಕ ಕೌಶಲ್ಯದ ಕುರಿತು ಉಪನ್ಯಾಸ ನೀಡಿದರು. ಭಟ್ಕಳ ವಿದ್ಯಾಂಜಲಿ ಪಬ್ಲಿಕ್ ಶಾಲೆಯ ಪ್ರಾಂಶುಪಾಲ ರಾಘವೇಂದ್ರ ಕಾಮತ ಸ್ವಾಗತಿಸಿದರು. ವಿದ್ಯಾಭಾರತಿ ಶಾಲೆಯ ಶಿಕ್ಷಕಿ ಸೀಮಾ ನಾಯಕ ಹಾಗೂ ವಿದ್ಯಾಂಜಲಿ ಪಬ್ಲಿಕ್ ಶಾಲೆಯ ಶಿಕ್ಷಕಿ ಪ್ರೀತಿ ಪ್ರಭು ಕಾರ್ಯಾಗಾರದ ಕುರಿತು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು. ಶಿಕ್ಷಕಿ ಬೀಬಿಯಾನ ಗೋಮ್ಸ್ ಹಾಗೂ ಆನ್ರೋಸ್ ಕಾರ್ಯಕ್ರಮ ನಿರೂಪಿಸಿದರು.
Gold Price on November 23: ಬಂಗಾರ ದರ ಎಷ್ಟಿದೆ ಗೊತ್ತಾ? ಇಲ್ಲಿದೆ ನವೆಂಬರ್ 23ರ ಚಿನ್ನದ ದರಪಟ್ಟಿ
Gold Price on November 23: ಬಂಗಾರ ದರದಲ್ಲಿ ಹಾವು ಏಣಿ ಆಟದಂತೆ ಏರಿಳಿತ ಆಗುತ್ತಲೇ ಇರುತ್ತದೆ. ಹಾಗಾದ್ರೆ, ಇಂದು (ನವೆಂಬರ್ 23) ಕರ್ನಾಟಕ ರಾಜಧಾನಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಬಂಗಾರ, ಬೆಳ್ಳಿ ದರ ಎಷ್ಟಿದೆ ಎನ್ನುವ ಸಂಪೂರ್ಣ ಅಂಕಿಅಂಶಗಳ ಸಹಿತ ವಿವರವನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ಬಂಗಾರ ದರಗಳ ವಿವರ: ನಿನ್ನೆ (ನವೆಂಬರ್
ಉತ್ತರಾಖಂಡದಅಲ್ಮೋರಾದಲ್ಲಿ ಶಾಲೆಗಳ ಸಮೀಪ ಸುಮಾರು 20 ಕೆಜಿಗೂ ಅಧಿಕ ಸ್ಫೋಟಕಗಳು ಪತ್ತೆಯಾಗಿರುವುದು ಆತಂಕ ಮೂಡಿಸಿದೆ. ಕ್ರಿಕೆಟ್ ಆಡಲು ತೆರಳಿದ್ದ ಶಾಲಾ ಮಕ್ಕಳಿಗೆ 20 ಕೆಜಿಗೂ ಹೆಚ್ಚು ಸ್ಫೋಟಕಗಳು ಸಿಕ್ಕಿವೆ. ಕಲ್ಲು ಒಡೆಯಲು ಬಳಸುವ ಈ ವಸ್ತುಗಳು ಅಪರಿಚಿತರಿಂದ ಇಲ್ಲಿಡಲ್ಪಟ್ಟಿವೆ ಎಂದು ಶಂಕಿಸಲಾಗಿದೆ. ಕಲ್ಲು ಗಣಿಗಾರಿಕೆಗೆ ಬಳಸುವ ಈ ವಸ್ತುಗಳನ್ನು ಯಾರು, ಏಕೆ ಇಲ್ಲಿಟ್ಟಿದ್ದಾರೆ ಎಂಬ ಬಗ್ಗೆ ತನಿಖೆ ಕೈಗೊಳ್ಳಲಾಗಿದ್ದು, ಹೆಚ್ಚಿನ ಸ್ಫೋಟಕಗಳಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ವಿಧಿವಿಜ್ಞಾನ ತಂಡ ಪರಿಶೀಲನೆ ನಡೆಸುತ್ತಿದೆ.
ವಿಧಾನಸಭಾ ಚುನಾವಣೆಯಲ್ಲಿ ಟಿಎಂಸಿ ಸೋಲು ಕಾಣಲಿದೆ ಎಂದು ಮಮತಾ ಬ್ಯಾನರ್ಜಿಗೆ ಗೊತ್ತಾಗಿದೆ: ಬಿಜೆಪಿ ಟೀಕೆ
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ವಿಧಾನಸಭಾ ಚುನಾವಣೆಯಲ್ಲಿ ಟಿಎಂಸಿ ಸೋಲು ಕಾಣಲಿದೆ ಎಂದು ಗೊತ್ತಾಗಿದೆ, ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಮತ್ತು ಅಲ್ಪಸಂಖ್ಯಾತರ ಓಲೈಕೆ ರಾಜಕಾರಣ ಮಾಡುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಅವರ ಹಿಂದುತ್ವ ಮತ್ತು ಸಂಸ್ಕೃತವನ್ನು ಅವಮಾನಿಸಿದ ಹೇಳಿಕೆಗಳನ್ನು ಬಿಜೆಪಿ ಖಂಡಿಸಿದೆ.
KSET Results Announce: ಕೆಸೆಟ್ ಅಭ್ಯರ್ಥಿಗಳ ಮೆರಿಟ್ ಪಟ್ಟಿ ಬಿಡುಗಡೆ, ಕಟ್ಆಫ್ ಅಂಕಗಳು ಎಷ್ಟು?
ಬೆಂಗಳೂರು, ನವೆಂಬರ್ 23: ಕರ್ನಾಟಕ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ'ಯಲ್ಲಿ (KSET Exam 2025) ಅರ್ಹರಾದವರ ಮೆರಿಟ್ ಪಟ್ಟಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಪ್ರಕಟಿಸಿದೆ. ಪರೀಕ್ಷೆಗೆ ಹಾಜರಾದವರ ಪೈಕಿ ಶೇಕಡಾ 6ರಷ್ಟು ಅಭ್ಯರ್ಥಿಗಳು ಮಾತ್ರವೇ ಈ ಬಾರಿಯ ಕೆಸೆಟ್ ಗೆ ಅರ್ಹರರಾಗಿದ್ದಾರೆ. ಯುಜಿಸಿ ಮತ್ತು ರಾಜ್ಯದ ಮೀಸಲಾತಿ ನಿಯಮಗಳ ಪ್ರಕಾರ ಮೆರಿಟ್ ಪಟ್ಟಿ ಪ್ರಕಟಿಸಲಾಗಿದೆ ಎಂದು
ಅವಿವೇಕಿಗಳು: ಬೆನ್ ಸ್ಟೋಕ್ಸ್ ಪಡೆ ವಿರುದ್ಧ ಜೆಫ್ರಿ ಬಾಯ್ಕಾಟ್ ಟೀಕೆ
ಲಂಡನ್: ನೂರು ವರ್ಷಗಳ ಇತಿಹಾಸದಲ್ಲೇ ಮೊದಲ ಬಾರಿಗೆ ಕೇವಲ ಎರಡೇ ದಿನಗಳಲ್ಲಿ ಮುಕ್ತಾಯವಾದ ಟೆಸ್ಟ್ ಪಂದ್ಯದಲ್ಲಿ ಹೀನಾಯ ಸೋಲು ಅನುಭವಿಸಿರುವ ಬೆನ್ ಸ್ಟ್ರೋಕ್ ನೇತೃತ್ವದ ಇಂಗ್ಲೆಂಡ್ ತಂಡದ ವಿರುದ್ಧ ಮಾಜಿ ಕ್ರಿಕೆಟಿಗ ಜೆಫ್ರಿ ಬಾಯ್ಕಾಟ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಟೆಲಿಗ್ರಾಫ್ ಅಂಕಣದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿರುವ 85 ವರ್ಷದ ಹಿರಿಯ ಕ್ರಿಕೆಟಿಗ, ಇನ್ನೆಂದೂ ಈ ಬುದ್ಧಿಗೇಡಿ ಇಂಗ್ಲೆಂಡ್ ತಂಡವನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ ಎಂದು ತಂಡದ ದೃಷ್ಟಿಕೋನವನ್ನು ಟೀಕಿಸಿದ್ದಾರೆ. ಯಾವುದೇ ಮಾಜಿ ಆಟಗಾರರು ತಂಡವನ್ನು ಟೀಕಿಸಿದರೆ ಅಥವಾ ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದರೆ ಅವರು ಅಪ್ರಸ್ತುತ ಅಥವಾ ನಗಣ್ಯ ಎಂದು ಪರಿಗಣಿಸಬೇಕು; ಏಕೆಂದರೆ ಟೆಸ್ಟ್ ಕ್ರಿಕೆಟ್ ಬದಲಾಗಿದ್ದು, ಇತಿಹಾಸ ಅಪ್ರಸ್ತುತ ಎನ್ನುವುದಾಗಿ ಈ ಸರಣಿಗೆ ಮುನ್ನ ಬೆನ್ ಸ್ಟೋಕ್ಸ್ ಹೇಳಿಕೆ ನೀಡಿದ್ದರು. ಅಂದರೆ ಇದರ ಸಂದೇಶ ಸರಳ, ಅವಿವೇಕಿಗಳಂತೆ ಟೆಸ್ಟ್ ಪಂದ್ಯಗಳನ್ನು ಕೈಚೆಲ್ಲುತ್ತಿದ್ದರೆ, ನಿಮ್ಮನ್ನು ಗಂಭೀರವಾಗಿ ಪರಿಗಣಿಸುವುದು ಅಸಾಧ್ಯ. ನೀವೆಂದೂ ಕಲಿಯುವುದಿಲ್ಲ; ಏಕೆಂದರೆ ನೀವು ಹೊರಗಿನವರ ಮಾತು ಕೇಳುವುದಿಲ್ಲ. ನಿಜವಾಗಿ ಅವರು ತಮ್ಮದೇ ಪ್ರಚಾರದಲ್ಲಿ ಮಾತ್ರ ನಂಬಿಕೆ ಇಟ್ಟಿದ್ದಾರೆ ಎಂದು ಟೀಕಿಸಿದ್ದಾರೆ. ಇದು ತೀರಾ ಸರಳ. ಮೆದುಳಿಲ್ಲದ ಬ್ಯಾಟಿಂಗ್ ಮತ್ತು ಬೌಲಿಂಗ್ ನಿಂದಾಗಿ ಇಂಗ್ಲೆಂಡ್ ಪಂದ್ಯದಲ್ಲಿ ಸೋತಿದೆ. ಕಡಿಮೆ ಸ್ಕೋರ್ ಆದ ಪಿಚ್ ನಲ್ಲಿ 40 ರನ್ ಗಳ ಮುನ್ನಡೆ ದೊಡ್ಡದು. ತಂಡದ ಸ್ವಯಂ ವಿನಾಶಕ್ಕೆ ಮುನ್ನ ಬೆನ್ ಡಕೆಟ್ ಮತ್ತು ಓಲಿ ಪೋಪ್ ಜತೆಯಾಗಿ ಉತ್ತಮ ಪ್ರದರ್ಶನ ನೀಡಿ ಒಂದು ವಿಕೆಟ್ ನಷ್ಟಕ್ಕೆ 100 ರನ್ ಗಳಿಸಿದ್ದರು ಎಂದು ವಿವರಿಸಿದ್ದಾರೆ. ಬೇಝ್ ಬಾಲ್, ಕೆಟ್ಟ ನಿರ್ಣಯಗಳು, ಅತಿ ಆತ್ಮವಿಶ್ವಾಸ, ಯಾವುದೇ ಕಾರಣವಿರಲಿ ಅದು ಪಂದ್ಯ ಗೆಲ್ಲುವುದನ್ನು ಕಷ್ಟಕರವಾಗಿಸುತ್ತದೆ. ಭಾರತ ಮತ್ತು ಆಸ್ಟ್ರೇಲಿಯಾದಂಥ ಅಗ್ರ ದೇಶಗಳ ವಿರುದ್ಧ ಸೋಲಲು ಇದು ದೊಡ್ಡ ಕಾರಣವಾಗುತ್ತದೆ ಎಂದು ವಿಶ್ಲೇಷಿಸಿದ್ದಾರೆ. ಕೇವಲ 83 ಎಸೆತಗಳಲ್ಲಿ 123 ರನ್ ಗಳಿಸಿದ ಟ್ರಾವಿಸ್ ಹೆಡ್, ತಮ್ಮ ತಂಡ ಐದು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಗಳಿಸುವಲ್ಲಿ ಪ್ರಧಾನ ಪಾತ್ರ ವಹಿಸಿದರು.
ಬಿಹಾರ: ಎನ್ಡಿಎ ಗೆಲುವಿನಲ್ಲಿ ವರ್ಗ ಮತ್ತು ಜಾತಿಯ ಅಂಶಗಳು
ವರ್ಗ ಮತ್ತು ಜಾತಿ/ ಸಮುದಾಯ ಎರಡರ ಸಂಯೋಜನೆಯು ಎನ್ಡಿಎ ಎಂಜಿಬಿಗಿಂತ ಸುಮಾರು ಶೇ. 10ರಷ್ಟು ಅಂಕಗಳ ಬೃಹತ್ ಮುನ್ನಡೆಯನ್ನು ಪಡೆಯಲು ಸಹಾಯ ಮಾಡಿತು. ಎನ್ಡಿಎ ‘ಮೇಲು’ ಮತ್ತು ‘ಕೆಳ’ ಸಮುದಾಯಗಳ ವಿಶಾಲ ಸಾಮಾಜಿಕ ಒಕ್ಕೂಟದ ಬೆಂಬಲವನ್ನು ಹೊಂದಿತ್ತು. ಅದು ಅದನ್ನು ಚೆನ್ನಾಗಿ ಬೆಂಬಲಿಸಿತು. ಮತ್ತೊಂದೆಡೆ ಎಂಜಿಬಿ ಬಡ ಮತ್ತು ಕಡಿಮೆ ಆದಾಯದ ಗುಂಪುಗಳಲ್ಲಿ ಸ್ಪರ್ಧಾತ್ಮಕವಾಗಿದ್ದರೂ ಹೆಚ್ಚಾಗಿ ಯಾದವ ಮತ್ತು ಮುಸ್ಲಿಮರ ಬೆಂಬಲವನ್ನು ಹೊಂದಿತ್ತು. 2025ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಸತ್ಯಾತ್ಮಕ ಒಕ್ಕೂಟ (ಎನ್ಡಿಎ) ಗಳಿಸಿದ ಅದ್ಭುತ ಗೆಲುವು ಮತದಾರರು ತಮ್ಮ ಮತದಾನದ ಹಕ್ಕನ್ನು ಚಲಾಯಿಸುವಾಗ ಜಾತಿ ಮತ್ತು ವರ್ಗ ಪರಿಗಣನೆಗಳನ್ನು ಮೀರಿ ಬೆಳೆದಿದ್ದಾರೆ ಎಂಬ ಗ್ರಹಿಕೆ ಸೃಷ್ಟಿಯಾಗಿದೆ. ಈ ಗ್ರಹಿಕೆಗೆ ಪುರಾವೆಗಳ ಆಧಾರದ ಮೇಲೆ ಎಚ್ಚರಿಕೆಯಿಂದ ಮೌಲ್ಯಮಾಪನ ಮಾಡುವ ಅಗತ್ಯವಿದೆ. ಈ ಗ್ರಹಿಕೆಗೆ ಒಂದು ಕಾರಣವೆಂದರೆ, ಎನ್ಡಿಎ ಮುಸ್ಲಿಮ್ ಮತದಾರರ ಗಣನೀಯ ಪಾಲನ್ನು ಹೊಂದಿರುವ ಹೆಚ್ಚಿನ ಸಂಖ್ಯೆಯ ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ ಮತ್ತು ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರಗಳಲ್ಲಿ ಗಮನಾರ್ಹ ಸಂಖ್ಯೆಯ ಸ್ಥಾನಗಳನ್ನು ಗೆಲ್ಲುವಲ್ಲಿ ಸಫಲವಾಗಿದೆ. ಇದರ ಪರಿಣಾಮವಾಗಿ ಮುಸ್ಲಿಮ್ ಮತಗಳು ಮತ್ತು ದಲಿತ ಮತಗಳು ಎನ್ಡಿಎ ಪರವಾಗಿ ಬದಲಾಗಿವೆ ಎಂದು ಕೆಲವರು ನಂಬುತ್ತಾರೆ. ಒಂದು ಪಕ್ಷವು ನಿರ್ದಿಷ್ಟ ಸಮುದಾಯಗಳ ಮತದಾರರ ಹೆಚ್ಚಿನ ಸಾಂದ್ರತೆಯೊಂದಿಗೆ ಸ್ಥಾನಗಳನ್ನು ಗೆಲ್ಲುವಲ್ಲಿ ಎರಡು ಅಂಶಗಳ ಕಾರಣದಿಂದಾಗಿ ಯಶಸ್ವಿಯಾಗಿದೆ ಎಂಬುದನ್ನು ಅರ್ಥ ಮಾಡಿಕೊಳ್ಳುವುದು ಮುಖ್ಯ: ಒಂದು, ಆ ಸಮುದಾಯಗಳ ಜನರು ಪಕ್ಷ ಅಥವಾ ಮೈತ್ರಿಕೂಟಕ್ಕೆ ದೊಡ್ಡ ಪ್ರಮಾಣದಲ್ಲಿ ಮತಚಲಾಯಿಸುವುದು; ಮತ್ತು ಎರಡು, ಪ್ರತಿಯಾಗಿ- ಸಜ್ಜುಗೊಳಿಸುವಿಕೆ- ಆ ಕ್ಷೇತ್ರದಲ್ಲಿ ಪ್ರಾಬಲ್ಯವಿಲ್ಲದ ಗುಂಪುಗಳ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆ ಪಕ್ಷ ಅಥವಾ ಮೈತ್ರಿಕೂಟಕ್ಕೆ ಮತ ಚಲಾಯಿಸುವುದು. ಬಿಹಾರದಲ್ಲಿ ಕೆಲವು ವಿಧಾನಸಭಾ ಕ್ಷೇತ್ರಗಳಲ್ಲಿ ನಿರ್ದಿಷ್ಟ ಸಮುದಾಯದ ಮತದಾರರ ಬೆಂಬಲದಿಂದ ಎನ್ಡಿಎ ಲಾಭ ಪಡೆದಿದ್ದರೂ, ಆ ಕ್ಷೇತ್ರಗಳಲ್ಲಿ ಪ್ರಾಬಲ್ಯವಿಲ್ಲದ ಸಮುದಾಯಗಳ ಮತದಾರರ ಕ್ರೋಡೀಕರಣದಿಂದಲೂ ಅದು ಲಾಭಗಳಿಸಿತು. ಸಮೀಕ್ಷೆಯ ದತ್ತಾಂಶದ ವಿಶ್ಲೇಷಣೆ (ಪೋಲ್ ಮ್ಯಾಪ್ ದತ್ತಾಂಶವನ್ನು ಬಳಸಿಕೊಂಡು) ಸೂಚಿಸುವಂತೆ ಮುಸ್ಲಿಮರು ಮತ್ತು ಯಾದವರು ಮಹಾಘಟಬಂಧನ್ (ಎಂಜಿಬಿ) ಪರವಾಗಿ ಧ್ರುವೀಕರಿಸಲ್ಪಟ್ಟಿದ್ದರೂ ಎನ್ಡಿಎ ಅಭ್ಯರ್ಥಿಗಳ ಪರವಾಗಿ ಇತರ ಜಾತಿ/ಸಮುದಾಯಗಳ ಹೆಚ್ಚಿನ ಸಂಖ್ಯೆಯ ಮತದಾರರ ಪ್ರತಿ ಸಜ್ಜುಗೊಳಿಸುವಿಕೆಯು ಇತ್ತು. ಇದು ಎನ್ಡಿಎ ಅಭ್ಯರ್ಥಿಗಳು ಮುಸ್ಲಿಮ್ ಪ್ರಾಬಲ್ಯದ ಸ್ಥಾನಗಳಿಂದ ಗೆಲ್ಲಲು ಸಹಾಯ ಮಾಡಿತು. ಈ ಚುನಾವಣೆಯಲ್ಲಿ, 2020ರ ವಿಧಾನಸಭಾ ಚುನಾವಣೆಗೆ ಹೋಲಿಸಿದರೆ, ಯಾದವರು ಎಂಜಿಬಿ ಪರವಾಗಿ ಸ್ವಲ್ಪ ಕಡಿಮೆ ಪ್ರಮಾಣದಲ್ಲಿ ಮತ ಚಲಾಯಿಸಿದ್ದಾರೆ. ಯಾದವರಲ್ಲಿ ಶೇ. 74ರಷ್ಟು ಜನರು ಎಂಜಿಬಿ ಪರವಾಗಿ ಮತ ಚಲಾಯಿಸಿದರೆ, ಶೇ. 19ರಷ್ಟು ಜನರು ಎನ್ಡಿಎ ಅಭ್ಯರ್ಥಿಗಳಿಗೆ ಮತ ಚಲಾಯಿಸಿದ್ದಾರೆ. 2020ರ ವಿಧಾನಸಭಾ ಚುನಾವಣೆಗಳಲ್ಲಿ ಶೇ. 84ರಷ್ಟು ಯಾದವರು ಎಂಜಿಬಿಗೆ ಮತ ಚಲಾಯಿಸಿದ್ದರು. ಅದೇ ರೀತಿ, ಎಂಜಿಬಿಗೆ ಮುಸ್ಲಿಮ್ ಬೆಂಬಲವು ಸ್ವಲ್ಪ ಕಡಿಮೆಯಾಗಿದೆ. ಸುಮಾರು ಶೇ. 70ರಷ್ಟು ಮುಸ್ಲಿಮ್ ಮತದಾರರು ಎಂಜಿಬಿಗೆ ಮತ ಹಾಕಿದರೆ ಶೇ. 7ರಷ್ಟು ಮುಸ್ಲಿಮ್ ಮತದಾರರು ಎನ್ಡಿಎಗೆ ಮತ ಹಾಕಿದ್ದಾರೆ. 2020ರ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಶೇ. 76ರಷ್ಟು ಮುಸ್ಲಿಮರು ಎಂಜಿಬಿಗೆ ಮತ ಹಾಕಿದ್ದರು. ಈ ಚುನಾವಣೆಯಲ್ಲಿ, ಅಖಿಲ ಭಾರತ ಮಜ್ಲಿಸೆ ಇತ್ತೆಹಾದುಲ್ ಮುಸ್ಲಿಮೀನ್(AIMIM) ಶೇ. 9ರಷ್ಟು ಮುಸ್ಲಿಮ್ ಮತಗಳನ್ನು ಗಳಿಸಿತು. ಇದು ಎಂಜಿಬಿಗೆ ಮುಸ್ಲಿಮ್ ಮತಗಳ ಕುಸಿತಕ್ಕೆ ಕಾರಣವಾಗಿರಬಹುದು. ಒಟ್ಟು ಮತದಾರರಲ್ಲಿ ಮುಸ್ಲಿಮರು ಶೇ. 35ಕ್ಕಿಂತ ಹೆಚ್ಚು ಇರುವ ಕ್ಷೇತ್ರಗಳಲ್ಲಿ ಇದು ವಿಶೇಷವಾಗಿ ಕಂಡುಬಂದಿದೆ.AIMIM ಐದು ಮುಸ್ಲಿಮ್ ಪ್ರಾಬಲ್ಯದ ವಿಧಾನಸಭಾ ಸ್ಥಾನಗಳನ್ನು ಗೆಲ್ಲುವಲ್ಲಿ ಮುಸ್ಲಿಮ್ ಮತಗಳು ನಿರ್ಣಾಯಕ ಪಾತ್ರ ವಹಿಸಿದವು.AIMIM ಮತ್ತು ಎಂಜಿಬಿಯ ಸಂಭಾವ್ಯ ಒಗ್ಗೂಡುವಿಕೆಯು ಮುಸ್ಲಿಮ್ ಮತಗಳಲ್ಲಿನ ವಿಭಜನೆಯನ್ನು ತಡೆಯಲು ಕಾರಣವಾಗಬಹುದು. ಆದರೆ ಈ ಎರಡು ಸಮುದಾಯಗಳನ್ನು ಹೊರತುಪಡಿಸಿ ಎಂಜಿಬಿ ಬೇರೆ ಯಾವುದೇ ಸಮುದಾಯದ ಮತದಾರರನ್ನು ಸಜ್ಜುಗೊಳಿಸಲು ಸಾಧ್ಯವಾಗಲಿಲ್ಲ. ಇತರ ಸಮುದಾಯಗಳ ಮತದಾರರು ಎನ್ಡಿಎ ಪರವಾಗಿ ತೀವ್ರವಾಗಿ ಧ್ರುವೀಕರಣಗೊಂಡಿದ್ದರು. ಮೇಲುಜಾತಿಯ ಮತದಾರರಲ್ಲಿ ಶೇ. 67ರಷ್ಟು ಜನರು ಎನ್ಡಿಎಗೆ ಮತ ಹಾಕಿದರೆ ಶೇ. 9ರಷ್ಟು ಜನರು ಎಂಜಿಬಿಗೆ ಮತ ಹಾಕಿದ್ದಾರೆ. 2020ಕ್ಕೆ ಹೋಲಿಸಿದರೆ 2025ರಲ್ಲಿ ಎನ್ಡಿಎ ಪರವಾಗಿ ಮತಗಳು ಹೆಚ್ಚು ತೀವ್ರವಾಗಿ ಧ್ರುವೀಕರಣಗೊಂಡಿವೆ. ಅವರಲ್ಲಿ 2020ರಲ್ಲಿ ಶೇ. 54ರಷ್ಟು ಜನರು ಎನ್ಡಿಎಗೆ ಮತ ಹಾಕಿದ್ದರು. ಯಾದವರನ್ನು ಹೊರತು ಪಡಿಸಿ ಉಳಿದ ಎಲ್ಲಾ ಹಿಂದುಳಿದ ಜಾತಿಗಳು ಎನ್ಡಿಎ ಕಡೆಗೆ ಹೆಚ್ಚಿನ ಒಲವು ತೋರಿದವು. ನಿತೀಶ್ ಕುಮಾರ್ ಮತ್ತು ಉಪೇಂದ್ರ ಕುಶ್ವಾಹ ಸೇರಿರುವ ಪ್ರಬಲ ಕುರ್ಮಿ ಮತ್ತು ಕೊಯೇರ ಜಾತಿಗಳಲ್ಲಿ ಶೇ. 71ರಷ್ಟು ಜನರು ಎನ್ಡಿ ಎಗೆ ಮತ ಹಾಕಿದರು ಮತ್ತು ಶೇ. 13ರಷ್ಟು ಜನರು ಎಂಜಿಬಿಗೆ ಮತ ಹಾಕಿದರು. ‘ಕೆಳ’ ಒಬಿಸಿಗಳಲ್ಲಿ ಶೇ. 68ರಷ್ಟು ಜನರು ಎನ್ಡಿಎಗೆ ಮತ್ತು ಶೇ. 18ರಷ್ಟು ಜನರು ಎಂಜಿಬಿಗೆ ಮತ ಹಾಕಿದರು. ವಿಕಾಸಶೀಲ ಇನ್ಸಾನ್ ಪಕ್ಷ (ವಿಐಪಿ) ಎಂಜಿಬಿ ಕಡೆಗೆ ಇತ್ತು. ಇದು ‘ಕೆಳ’ ಒಬಿಸಿ ಮತದಾರರನ್ನು ಸಜ್ಜುಗೊಳಿಸುವಲ್ಲಿ ಮೈತ್ರಿಕೂಟಕ್ಕೆ ಸ್ವಲ್ಪ ಸಹಾಯ ಮಾಡಿದೆ ಎಂದು ತೋರುತ್ತದೆ. ದಲಿತ ಗುಂಪುಗಳಲ್ಲಿ ಗಣನೀಯ ಬೆಂಬಲ ಹೊಂದಿರುವ ಎರಡು ಪ್ರಾದೇಶಿಕ ಪಕ್ಷಗಳಾದ ಲೋಕ ಜನಶಕ್ತಿ ಮತ್ತು ಹಿಂದೂಸ್ಥಾನಿ ಅವಾಮ್ ಮೋರ್ಚಾ ಎನ್ಡಿಎ ಘಟಕಗಳಾಗಿದ್ದರಿಂದ ಶೇ. 60ರಷ್ಟು ದಲಿತರು ಎನ್ಡಿಎಗೆ ಮತ ಹಾಕಿದ್ದು ಆಶ್ಚರ್ಯವೇನಿಲ್ಲ. ದಲಿತರಲ್ಲಿ ನಾಲ್ಕನೇ ಒಂದು ಭಾಗಕ್ಕಿಂತ ಹೆಚ್ಚು (ಶೇ.28) ಜನರು ಎಂಜಿಬಿಗೆ ಮತ ಹಾಕಿದರು. ಒಟ್ಟಾರೆಯಾಗಿ ಎಲ್ಲಾ ಪ್ರಮುಖ ಜಾತಿ/ಸಮುದಾಯಗಳಲ್ಲಿ ಸುಮಾರು ಶೇ. 70ರಷ್ಟು ಜನರು ತಾವು ಮತ ಚಲಾಯಿಸಬೇಕಾದ ಮೈತ್ರಿಕೂಟದ ಪರವಾಗಿ ಸಜ್ಜುಗೊಂಡರು. ಎನ್ಡಿಎ ವಿಜಯವನ್ನು ರೂಪಿಸುವಲ್ಲಿ ವರ್ಗಗಳು ಪಾತ್ರವಹಿಸಿದೆ. ಎನ್ಡಿಎ ಮೇಲ್ವರ್ಗದ ಮತ್ತು ಮಧ್ಯಮ ವರ್ಗದ ಮತದಾರರಲ್ಲಿ ಎಂಜಿಬಿಗಿಂತ ದೊಡ್ಡ ಮುನ್ನಡೆ ಸಾಧಿಸಿತು. ಈ ಮತದಾರರಲ್ಲಿ ಶೇ. 58ರಷ್ಟು ಜನರು ಎನ್ಡಿಎಗೆ ಮತ ಹಾಕಿದ್ದಾರೆ, ಆದರೆ ಮೂರನೇ ಒಂದು ಭಾಗದಷ್ಟು ಜನರು ಎಂಜಿಬಿಯನ್ನೂ ಆಯ್ಕೆ ಮಾಡಿದ್ದಾರೆ. 2020ರ ವಿಧಾನಸಭಾ ಚುನಾವಣೆಯ ಸಮಯದಲ್ಲಿ, ಕೇವಲ ಶೇ. 38ರಷ್ಟು ಮೇಲ್ವರ್ಗದವರು ಮತ್ತು ಶೇ. 36ರಷ್ಟು ಮಧ್ಯಮ ವರ್ಗದವರು ಎನ್ಡಿಎಗೆ ಮತ ಹಾಕಿದ್ದರು. ಈ ಬಾರಿ, ಎನ್ಡಿಎ 2020ಕ್ಕಿಂತ ಮಧ್ಯಮ ಮತ್ತು ಮೇಲ್ವರ್ಗದ ಮತದಾರರನ್ನು ಆಕರ್ಷಿಸಿತು, ಇದು ಎಂಜಿಬಿಗಿಂತ ಮನಗಾಣುವ ಮುನ್ನಡೆಯನ್ನು ಸ್ಥಾಪಿಸಲು ಸಹಾಯ ಮಾಡಿತು. ಆರ್ಥಿಕವಾಗಿ ಬಡ ಮತದಾರರಲ್ಲಿ ಎನ್ಡಿಎ ಮತ್ತು ಎಂಜಿಬಿ ಎರಡು ಕ್ರಮವಾಗಿ ಪ್ರತೀ 10(ಶೇ. 38) ಮತಗಳಲ್ಲಿ ನಾಲ್ಕು ಮತಗಳನ್ನು ಪಡೆದಿವೆ. ಕಡಿಮೆ ಆದಾಯ ವರ್ಗದಲ್ಲಿ ಶೇ. 44ರಷ್ಟು ಜನರು ಎನ್ಡಿಎಗೆ ಮತ ಹಾಕಿದರೆ ಶೇ. 41ರಷ್ಟು ಎಂಜಿಬಿಗೆ ಮತ ಹಾಕಿದ್ದಾರೆ. ವರ್ಗ ಮತ್ತು ಜಾತಿ/ ಸಮುದಾಯ ಎರಡರ ಸಂಯೋಜನೆಯು ಎನ್ಡಿಎ ಎಂಜಿಬಿಗಿಂತ ಸುಮಾರು ಶೇ. 10ರಷ್ಟು ಅಂಕಗಳ ಬೃಹತ್ ಮುನ್ನಡೆಯನ್ನು ಪಡೆಯಲು ಸಹಾಯ ಮಾಡಿತು. ಎನ್ಡಿಎ ‘ಮೇಲು’ ಮತ್ತು ‘ಕೆಳ’ ಸಮುದಾಯಗಳ ವಿಶಾಲ ಸಾಮಾಜಿಕ ಒಕ್ಕೂಟದ ಬೆಂಬಲವನ್ನು ಹೊಂದಿತ್ತು. ಅದು ಅದನ್ನು ಚೆನ್ನಾಗಿ ಬೆಂಬಲಿಸಿತು. ಮತ್ತೊಂದೆಡೆ ಎಂಜಿಬಿ ಬಡ ಮತ್ತು ಕಡಿಮೆ ಆದಾಯದ ಗುಂಪುಗಳಲ್ಲಿ ಸ್ಪರ್ಧಾತ್ಮಕವಾಗಿದ್ದರೂ ಹೆಚ್ಚಾಗಿ ಯಾದವ ಮತ್ತು ಮುಸ್ಲಿಮರ ಬೆಂಬಲವನ್ನು ಹೊಂದಿತ್ತು. -ಕೃಪೆ: thehindu
Karnataka Dams Water Level: ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ: ನವೆಂಬರ್ 23ರ ಅಂಕಿಅಂಶಗಳು
Karnataka Reservoirs Water Level: ರಾಜ್ಯದಲ್ಲಿ ಈಗಾಗಲೇ ಬಹುತೇಕ ಪ್ರಮುಖ ಜಲಾಶಯಗಳು ಭರ್ತಿಯಾಗಿವೆ. ಹಾಗಾದ್ರೆ, ಇಂದು (ನವೆಂಬರ್ 23) ಬೆಂಗಳೂರು, ಮೈಸೂರು, ಮಂಡ್ಯ ಜಿಲ್ಲೆಗಳ ಜೀವನಾಡಿ ಕೆಆರ್ಎಸ್ (KRS) ಸೇರಿದಂತೆ ಉಳಿದ ಪ್ರಮುಖ ಡ್ಯಾಂಗಳ ನೀರಿನ ಮಟ್ಟ ಎಷ್ಟಿದೆ ಎನ್ನುವ ಅಂಕಿಅಂಶಗಳನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ಮುಂಗಾರು ಮಳೆ ಆರ್ಭಟದಿಂದ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಕೆರೆ-ಕಟ್ಟೆಗಳು, ನದಿಗಳು
Karnataka Weather: ಶೀತಗಾಳಿ ನಡುವೆಯೂ ಬೆಂಗಳೂರು ಸೇರಿ ರಾಜ್ಯದ ಹಲವೆಡೆ 3-4 ದಿನ ಭಾರೀ ಮಳೆ ಮುನ್ಸೂಚನೆ
Karnataka Weather Forecast: ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಚಳಿ ಆವರಿಸಿದೆ. ಈ ನಡುವೆಯೇ ಹಲವೆಡೆ ಮಳೆ ಮುಂದುವರೆದಿದೆ. ಹಾಗೆಯೇ ಮುಂದಿನ ಮೂರ್ನಾಲ್ಕು ದಿನಗಳ ಕಾಲ ರಾಜಧಾನಿ ಬೆಂಗಳೂರು ಸೇರಿದಂತೆ ಕೆಲವೆಡೆ ಭಾರೀ ಮಳೆ ಸುರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಾಗಾದ್ರೆ ಎಲ್ಲೆಲ್ಲಿ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ರಾಜ್ಯ ರಾಜಧಾನಿ
Land Acquisition: ನೀರಾವರಿ ಇಲಾಖೆಯ 61,843 ಕೇಸು ಬಾಕಿ, ಕರ್ತವ್ಯ ಲೋಪದ ತನಿಖೆಗೆ SIT ರಚನೆ: ಡಿಸಿಎಂ
ಕರ್ನಾಟಕ ನೀರಾವರಿ ಇಲಾಖೆ ಹಾಗೂ ಬೆಂಗಳೂರು ನಗರಾಭಿವೃದ್ಧಿ ಇಲಾಖೆಯ ಭೂಸ್ವಾಧೀನ ಕೋರ್ಟ್ ಪ್ರಕರಣಗಳ ಕರ್ತವ್ಯ ಲೋಪ ಹಿನ್ನೆಲೆಯಲ್ಲಿ ಅಧಿಕಾರಿಗಳಿಗೆ ಡಿಸಿಎಂ ಡಿಕೆ ಶಿವಕುಮಾರ್ ಅವರು ಖಡಕ್ ಎಚ್ಚರಿಕೆ ನೀಡಿದ್ದಾರೆ. ಬಾಕಿ ಇರುವ ಪ್ರಕರಣಗಳ ಇತ್ಯರ್ಥಕ್ಕೆ ಹೊಸ ಬದಲಾವಣೆಗಳನ್ನು ತರಲಾಗುವುದು. ತನಿಖೆಗೆ ಎಸ್ಐಟಿ ರಚಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. ನೀರಾವರಿ ಇಲಾಖೆ ಹಾಗೂ ಬಿಡಿಎ ವ್ಯಾಪ್ತಿಯಲ್ಲಿನ ಭೂಸ್ವಾಧೀನ ಪ್ರಕ್ರಿಯೆ
ಮಹಾರಾಷ್ಟ್ರ: 4.75 ಲಕ್ಷ ಅಭ್ಯರ್ಥಿಗಳು ಇಂದು ಟಿಇಟಿ ಪರೀಕ್ಷೆಗೆ ಹಾಜರು
ಮಹಾರಾಷ್ಟ್ರದಲ್ಲಿ ಇಂದು ನಡೆಯಲಿರುವ ಟಿಇಟಿ ಪರೀಕ್ಷೆಗೆ 4.75 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಹಾಜರಾಗಲಿದ್ದಾರೆ. ಇದರಲ್ಲಿ ಸಾವಿರಾರು ಮಂದಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರಿದ್ದಾರೆ. ಸುಪ್ರೀಂ ಕೋರ್ಟ್ನ ಆದೇಶದ ನಂತರ ರಾಜ್ಯದಲ್ಲಿ ನಡೆಯುತ್ತಿರುವ ಮೊದಲ ಟಿಇಟಿ ಪರೀಕ್ಷೆ ಇದಾಗಿದೆ. ಈ ಆದೇಶವು ಹೊಸದಾಗಿ ನೇಮಕಗೊಳ್ಳುವ ಶಿಕ್ಷಕರಿಗೆ ಮಾತ್ರವಲ್ಲದೆ, ಐದು ವರ್ಷಕ್ಕಿಂತ ಹೆಚ್ಚು ಸೇವೆ ಬಾಕಿ ಇರುವ, ಅಲ್ಪಸಂಖ್ಯಾತರಲ್ಲದ ಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರಿಗೂ ಟಿಇಟಿ ಕಡ್ಡಾಯಗೊಳಿಸಿದೆ.
Saudi Arabia | ಬಸ್ ಅಪಘಾತ ಪ್ರಕರಣ; ಮದೀನದಲ್ಲಿ 46 ಉಮ್ರಾ ಯಾತ್ರಿಗಳ ಅಂತ್ಯಸಂಸ್ಕಾರ
ಹೈದರಾಬಾದ್: ವಾರದ ಹಿಂದೆ ನಡೆದ ಬಸ್ ಅಪಘಾತದಲ್ಲಿ ಮೃತಪಟ್ಟ 46 ಮಂದಿ ಭಾರತೀಯ ಉಮ್ರಾ ಯಾತ್ರಿಗಳ ಅಂತ್ಯಸಂಸ್ಕಾರ ವಿಧಿವಿಧಾನವನ್ನು ಪವಿತ್ರ ನಗರ ಮದೀನಾದಲ್ಲಿ ಶನಿವಾರ ನಡೆಸಲಾಯಿತು. ಎಲ್ಲ ಧಾರ್ಮಿಕ ವಿಧಿವಿಧಾನಗಳನ್ನು ಇಸ್ಲಾಂನ ಅತ್ಯಂತ ಪವಿತ್ರ ಸ್ಥಳದಲ್ಲಿ ತೀರಾ ಕಾಳಜಿಯಿಂದ ಮತ್ತು ಅತ್ಯಂತ ಗೌರವಪೂರ್ವಕವಾಗಿ ಪೂರ್ಣಗೊಳಿಸಲಾಗಿದೆ ಎಂದು ತೆಲಂಗಾಣದ ಅಲ್ಪಸಂಖ್ಯಾತ ಕಲ್ಯಾಣ ಖಾತೆ ಸಚಿವ ಹಾಗೂ ಮಾಜಿ ಕ್ರಿಕೆಟಿಗ ಮುಹಮ್ಮದ್ ಅಝರುದ್ದೀನ್, ಇಲಾಖೆ ಕಾರ್ಯದರ್ಶಿ ಬಿ.ಸೈಫುಲ್ಲಾ ಹಾಗೂ ಎಐಎಂಐಎಂ ಶಾಸಕ ಮಜೀದ್ ಹುಸೇನ್ ಹೇಳಿದ್ದಾರೆ. ಝುಹರ್ ನಮಾಜ್ ಬಳಿಕ ಮಸ್ಜಿದುನ್ನಬವಿಯಲ್ಲಿ ಅಂತ್ಯಸಂಸ್ಕಾರದ ಪ್ರಾರ್ಥನೆ ನೆರವೇರಿಸಲಾಯಿತು. ಬಳಿಕ ಇಸ್ಲಾಂನ ಅತ್ಯಂತ ಪವಿತ್ರ ದಫನಭೂಮಿ ಎನಿಸಿದ ಜನ್ನತುಲ್ ಬಖೀನಲ್ಲಿ ದಫನ ನಡೆಸಲಾಯಿತು. ಮೃತಪಟ್ಟ ಕೆಲವರ ದಾಖಲೆಗಳನ್ನು ಅಂತಿಮಪಡಿಸುವಲ್ಲಿ ಮತ್ತು ಸಾಗಾಣಿಕೆ ಸಮಸ್ಯೆಯ ಕಾರಣದಿಂದ ಅಂತ್ಯಸಂಸ್ಕಾರ ಒಂದು ದಿನ ತಡವಾಗಿ ನೆರವೇರಿತು. ಮೃತಪಟ್ಟ ಎಲ್ಲರ ಕುಟುಂಬಕ್ಕೆ ತೆಲಂಗಾಣ ಸರ್ಕಾರ ತಲಾ ಐದು ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದು, ಸಂತ್ರಸ್ತ ಕುಟುಂಬಗಳ ತಲಾ ಇಬ್ಬರು ಸೌದಿ ಅರೇಬಿಯಾಗೆ ತೆರಳಲು ವ್ಯವಸ್ಥೆ ಮಾಡಿತ್ತು. ಭೇಟಿ ನೀಡಿದ ಎಲ್ಲ ಸಂಬಂಧಿಕರಿಗೆ ಸಾರಿಗೆ, ಆಹಾರ ಮತ್ತು ವಸತಿ ವ್ಯವಸ್ಥೆಯನ್ನು ಮಾಡಲಾಗಿದ್ದು, ಕೆಲವರು ಸ್ವಂತವಾಗಿ ಪ್ರಯಾಣಿಸಿದ್ದಾರೆ ಎಂದು ಅಝರುದ್ದೀನ್ ವಿವರಿಸಿದರು. ಸಂತ್ರಸ್ತ ಕುಟುಂಬಗಳ ಪೈಕಿ ಪ್ರಸ್ತುತ 38 ಕುಟುಂಬಗಳ ಸದಸ್ಯರು ಸೌದಿ ಅರೇಬಿಯಾದಲ್ಲಿದ್ದು, ನವೆಂಬರ್ 27ರಂದು ಎಲ್ಲ ವಿಧಿವಿಧಾನಗಳನ್ನು ಪೂರೈಸಿ ಹೈದರಾಬಾದ್ ಗೆ ಮರಳುವರು. ಕುಟುಂಬದ 17 ಸದಸ್ಯರನ್ನು ಕಳೆದುಕೊಂಡ 70 ವರ್ಷದ ನಸೀರುದ್ದೀನ್ ಅವರ ಅಳಿಯ ಇಮ್ರಾನ್ ಶರೀಫ್ ಇವರಲ್ಲಿ ಸೇರಿದ್ದಾರೆ.
ಜಿ20 ಶೃಂಗಸಭೆ: ಮಾದಕವಸ್ತು, ಉಗ್ರರ ಸಂಪರ್ಕ ವಿರುದ್ಧ ಹೋರಾಟಕ್ಕೆ ಮೋದಿ ಕರೆ
ಜೋಹಾನ್ಸ್ಬರ್ಗ್: ಜಿ20 ಶೃಂಗಸಭೆಯನ್ನು ಉದ್ದೇಶಿಸಿ ಮಾತನಾಡಿದ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಸುಸ್ಥಿರ ಮತ್ತು ಎಲ್ಲರ ಪಾಲ್ಗೊಳ್ಳುವಿಕೆಯ ಪ್ರಗತಿಗೆ ಕರೆ ನೀಡಿದ್ದಾರೆ. ಜತೆಗೆ ಉಗ್ರರು ಮತ್ತು ಮಾದಕವಸ್ತು ಜಾಲದ ಸಂಪರ್ಕ ವಿರುದ್ಧ ಸಂಯೋಜಿತ ಹೋರಾಟ ಸೇರಿದಂತೆ ನಾಲ್ಕು ಪ್ರಸ್ತಾವನೆಗಳನ್ನು ಮುಂದಿಟ್ಟಿದ್ದಾರೆ. ಮಾದಕವಸ್ತುಗಳ ಕಳ್ಳಸಾಗಣೆ ಕೇವಲ ಸಾರ್ವಜನಿಕ ಆರೋಗ್ಯ, ಸುಸ್ಥಿರ ಅಭಿವೃದ್ಧಿ ಮತ್ತ ಭದ್ರತೆಗೆ ಅಪಾಯ ಮಾತ್ರವಲ್ಲದೇ ಉಗ್ರರಿಗೆ ಹಣಕಾಸು ನೆರವು ಒದಗಿಸುವ ಮೂಲ ಎಂದು ಮೋದಿ ವಿಶ್ಲೇಷಿಸಿದರು. ಪ್ರಗತಿಯ ಮಾನದಂಡಗಳ ಮರುಪರಿಶೀಲನೆಗೆ ಒತ್ತು ನೀಡುವಂತೆ ಸಲಹೆ ನೀಡಿದ ಅವರು, ಹಾಲಿ ಇರುವ ಚೌಕಟ್ಟು ಸಂಪನ್ಮೂಲಗಳಿಂದ ವಂಚಿತವಾದ ದೊಡ್ಡ ಜನವರ್ಗವನ್ನು ಹೊರಗಿಟ್ಟಿದೆ ಹಾಗೂ ಇದು ಪ್ರಕೃತಿಯ ಶೋಷಣೆಗೆ ಕಾರಣವಾಗಿದೆ ಎಂದು ಅಭಿಪ್ರಾಯಪಟ್ಟರು. ಹೊಸದಿಲ್ಲಿಯಲ್ಲಿ ಎರಡು ವರ್ಷ ಹಿಂದೆ ನಡೆದ ಶೃಂಗಸಭೆಯಲ್ಲಿ ಜಿ20 ಕೂಟಕ್ಕೆ ಆಫ್ರಿಕನ್ ಒಕ್ಕೂಟವನ್ನು ಕಾಯಂ ಸದಸ್ಯರಾಗಿ ಸೇರಿಸುವಲ್ಲಿ ಪ್ರಧಾನ ಪಾತ್ರ ವಹಿಸಿದ್ದ ಮೋದಿಯವರು, ದೋಷಪೂರಿತ ಪ್ರಗತಿ ಆದ್ಯತೆಯ ಕಾರಣದಿಂದ ಇಡೀ ಖಂಡ ಸಾಕಷ್ಟು ಸಂಕಷ್ಟ ಅನುಭವಿಸಿದೆ. ಇಂದು ಮೊಟ್ಟಮೊದಲ ಬಾರಿಗೆ ಆಫ್ರಿಕಾ ಜಿ20 ಶೃಂಗಸಭೆಯನ್ನು ಆಯೋಜಿಸುತ್ತಿರುವ ಸಂದರ್ಭದಲ್ಲಿ ನಾವು ಅಭಿವೃದ್ಧಿ ಮಾನದಂಡಗಳನ್ನು ಮರು ಪರಿಶೀಲಿಸುವ ಅನಿವಾರ್ಯತೆ ಇದೆ ಎಂದು ಹೇಳಿದರು. ಆರೆಸ್ಸೆಸ್ ಮುಖಂಡ ದೀನದಯಾಳ್ ಉಪಾಧ್ಯಾಯ ಅವರ ತತ್ವ ಎನಿಸಿದ 'ಅಂತರ್ಗತ ಮಾನವೀಯತೆ'ಯನ್ನು ಪ್ರತಿಪಾದಿಸಿದ ಅವರು, ನಾವು ವ್ಯಕ್ತಿ, ಸಮಾಜ ಮತ್ತು ಪರಿಸರವನ್ನು ಸಮಗ್ರವಾಗಿ ಅಂತರ್ಗತವಾಗಿದೆ ಎಂದು ಭಾವಿಸಬೇಕು. ಆಗ ಮಾತ್ರ ನಾವು ಪ್ರಗತಿ ಮತ್ತು ಪರಿಸರದ ನಡುವೆ ನೈಜ ಸಮನ್ವಯ ಸಾಧಿಸಲು ಸಾಧ್ಯ ಎಂದು ಪ್ರತಿಪಾದಿಸಿದರು.
ನವೆಂಬರ್ 23ರಂದು ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ?: ಜಿಲ್ಲಾವರು ಅಂಕಿಅಂಶಗಳ ವಿವರ
Petrol, Diesel Price: ಪೆಟ್ರೋಲ್, ಡೀಸೆಲ್ ದರಲ್ಲಿ ಜಾಸ್ತಿ ಅಲ್ಲದಿದ್ದರೂ, ಸ್ವಲ್ಪ ಪ್ರಮಾಣದಲ್ಲಾದ್ರೂ ಏರಿಳಿತ ಆಗುತ್ತಿರುತ್ತದೆ. ಹಾಗಾದರೆ, ಇಂದು (ನವೆಂಬರ್ 23) ಬೆಂಗಳೂರು ಸೇರಿದಂತೆ ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಲೀಟರ್ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟಿದೆ ಎನ್ನುವ ಅಂಕಿಅಂಶಗಳನ್ನು ಇಲ್ಲಿ ನೀಡಲಾಗಿದೆ ಕಣ್ಣಾಡಿಸಿ. ಶಕ್ತಿಯ ಮೂಲ ಎನಿಸಿಕೊಂಡಿರುವ ಪೆಟ್ರೋಲ್ ಮತ್ತು ಡೀಸೆಲ್ ಇಂಧನ ಅತ್ಯವಶ್ಯಕವಾಗಿ ಬೇಕಾಗುವ ಸಂಪನ್ಮೂಲಗಳಲ್ಲಿ
2026 Holiday List: ಕೇಂದ್ರ ಸರ್ಕಾರದಿಂದ 2026ನೇ ಸಾಲಿನ ಸಾರ್ವತ್ರಿಕ ರಜಾ ದಿನಗಳ ಪಟ್ಟಿ ಇಲ್ಲಿದೆ
ನವದೆಹಲಿ, ನವೆಂಬರ್ 23: 2025ನೇ ವರ್ಷ ಪೂರ್ಣಗೊಳ್ಳಲು ಕೆಲವೇ ದಿನಗಳು ಬಾಕಿ ಇದೆ. 2026ನೇ ವರ್ಷವನ್ನು ಸ್ವಾಗತಕ್ಕೆ ಸಜ್ಜಾಗಿದೆ. ಹೊಸ ವರ್ಷದಲ್ಲಿ ಕರ್ನಾಟಕದಲ್ಲಿ ಸಿಗುವ ಸರ್ಕಾರಿ ರಜೆಗಳ ಕುರಿತು ಕರ್ನಾಟಕ ಸರ್ಕಾರ ಈಗಾಗಲೇ ಆದೇಶ ಹೊರಡಿಸಿದ್ದು, ಇದೀಗ ಕೇಂದ್ರ ಸರ್ಕಾರವು ಸಹ ಪ್ರತಿ ವರ್ಷದ ರಜೆಯ ಕ್ಯಾಲೆಂಡರ್ನ ಬಿಡುಗಡೆ ಮಾಡುತ್ತದೆ. 2025 ನೇ ವರ್ಷ ಪೂರ್ಣಗೊಳ್ಳಲು ಒಂದು
ರೈಲು ಪ್ರಯಾಣಿಕರಿಗೆ ಗುಡ್ನ್ಯೂಸ್: ಕೊಟ್ಟೂರು ಮೂಲಕ ಯಶವಂತರ - ವಿಜಯಪುರ ಕಾಯಂ ರೈಲು ಸಂಚಾರ- ದರ ಇಳಿಕೆ
ಯಶವಂತಪುರ-ವಿಜಯಪುರ ನಡುವಿನ ವಿಶೇಷ ರೈಲು ಡಿ.8ರಿಂದ ನಿತ್ಯ ಎಕ್ಸ್ಪ್ರೆಸ್ ಆಗಿ ಸಂಚಾರ ಆರಂಭಿಸಲಿದೆ. ಮೂರು ವರ್ಷಗಳ ಬಳಿಕ ಈ ರೈಲನ್ನು ನಿಯಮಿತಗೊಳಿಸಿದ್ದು, ಟಿಕೆಟ್ ದರದಲ್ಲೂ ಇಳಿಕೆಯಾಗಲಿದೆ. ಇದರಿಂದ ಪ್ರಯಾಣಿಕರಿಗೆ ಆರ್ಥಿಕ ಹೊರೆ ಕಡಿಮೆಯಾಗಲಿದ್ದು, ಅನುಕೂಲ ಒದಗಲಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ ಅಬ್ಬರ: ಇನ್ನೊಂದು ವಾರ ಮಳೆ ಸಾಧ್ಯತೆ
ಕರಾವಳಿ ಜಿಲ್ಲೆಯ ಲಕ್ಷ ದೀಪೋತ್ಸವ ಸಂಪನ್ನಗೊಂಡ ಬೆನ್ನಲ್ಲೇ ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಶನಿವಾರ ರಾತ್ರಿ ಮುಂಗಾರು ಮಾದರಿಯಲ್ಲಿ ಭಾರಿ ಮಳೆಯಾಗಿದೆ. ದಿಢೀರ್ ಸುರಿದ ಮಳೆಯಿಂದ ದ್ವಿಚಕ್ರ ವಾಹನ ಸವಾರರು ತೊಂದರೆಗೀಡಾಗಿದ್ದು, ಗ್ರಾಮೀಣ ಭಾಗದ ಕೃಷಿ ಫಸಲುಗೂ ಹಾನಿಯಾಗಿದೆ. ಮುಂದಿನ ವಾರ ನಡೆಯಲಿರುವ ಷಷ್ಠಿ ಜಾತ್ರೋತ್ಸವದ ವರೆಗೂ ಮಳೆ ಮುಂದುವರಿಯುವ ಸಾಧ್ಯತೆಯಿದೆ.
ಸಮುದಾಯದ ಸಮಸ್ಯೆಗಳನ್ನು ಬಗೆಹರಿಸಲು ಸಂಘಟಿತ ಪ್ರಯತ್ನ ಅಗತ್ಯ: ಮುಫ್ತಿ ಇಫ್ತಿಖಾರ್ ಅಹ್ಮದ್ ಖಾಸ್ಮಿ
ಬೆಂಗಳೂರು: ಪ್ರಸಕ್ತ ಸನ್ನಿವೇಶದಲ್ಲಿ ಸಮುದಾಯವು ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸಲು ಸಂಘಟಿತ ಪ್ರಯತ್ನ ಅಗತ್ಯ ಎಂದು ಜಮೀಯತ್ ಉಲಮಾ ಹಿಂದ್ ರಾಜ್ಯಾಧ್ಯಕ್ಷ ಹಝ್ರತ್ ಮೌಲಾನಾ ಮುಫ್ತಿ ಇಫ್ತಿಖಾರ್ ಅಹ್ಮದ್ ಖಾಸ್ಮಿ ಕರೆ ನೀಡಿದರು. ಶನಿವಾರ ಮಹದೇವಪುರ ಕ್ಷೇತ್ರದ ಕಾಡುಗುಡಿ ಈದ್ಗಾ ಮೈದಾನದಲ್ಲಿ ವೈಟ್ಫೀಲ್ಡ್, ಕೆ.ಆರ್.ಪುರ, ಆನೇಕಲ್, ವಿಜಯಪುರ ಸೇರಿದಂತೆ ಇನ್ನಿತರ ವಲಯಗಳ ಜಮೀಯತ್ ಉಲಮಾ ಹಿಂದ್ನ ಪದಾಧಿಕಾರಿಗಳು ಹಾಗೂ ಮಸೀದಿಗಳ ಮುಖ್ಯಸ್ಥರಿಗಾಗಿ ಆಯೋಜಿಸಿದ್ದ ಕಾರ್ಯಾಗಾರವನ್ನು ಉದ್ದೇಶಿಸಿ ಅವರು ಮಾತನಾಡಿದರು. ಜಮೀಯತ್ ಉಲಮಾ ಹಿಂದ್ ಬೆಂಗಳೂರು ಜಿಲ್ಲೆಯ ಐದು ತಾಲೂಕುಗಳನ್ನು 20 ವಲಯಗಳಾಗಿ ವಿಂಗಡಿಸಿ ತನ್ನ ಕಾರ್ಯಚಟುವಟಿಕೆಗಳನ್ನು ನಡೆಸುತ್ತಿದೆ. ಹೊಸದಾಗಿ ರಚನೆಯಾಗಿರುವ ವೈಟ್ಫೀಲ್ಡ್ ಸೇರಿದಂತೆ ಇನ್ನಿತರ ವಲಯಗಳ ಪದಾಧಿಕಾರಿಗಳು ಯಾವ ರೀತಿ ಕೆಲಸ ಕಾರ್ಯಗಳನ್ನು ನಡೆಸಬೇಕು ಎಂಬುದರ ಕುರಿತು ಈ ಕಾರ್ಯಾಗಾರದಲ್ಲಿ ತರಬೇತಿ ನೀಡಲಾಗುವುದು ಎಂದು ಅವರು ಹೇಳಿದರು. ಜಮೀಯತ್ ಉಲಮಾ ಹಿಂದ್ ಸ್ವಾತಂತ್ರ್ಯ ಪೂರ್ವದಿಂದಲೂ ಸಮಾಜದ ಒಳಿತಿಗಾಗಿ ಕೆಲಸ ಮಾಡುತ್ತಿದೆ. ಮುಸ್ಲಿಮರ ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಹಕ್ಕುಗಳ ರಕ್ಷಣೆ, ಸಮುದಾಯದಲ್ಲಿರುವ ಕೆಡಕುಗಳನ್ನು ನಿರ್ಮೂಲನೆ ಮಾಡುವುದು, ಶೈಕ್ಷಣಿಕ ರಂಗದಲ್ಲಿ ಸಮುದಾಯವನ್ನು ಮುಂದಕ್ಕೆ ತರುವ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತಿದೆ ಎಂದು ಇಫ್ತಿಖಾರ್ ಅಹ್ಮದ್ ಖಾಸ್ಮಿ ತಿಳಿಸಿದರು. ಸರಕಾರದ ಕಾರ್ಯಕ್ರಮಗಳನ್ನು ಅರ್ಹರಿಗೆ ತಲುಪಿಸುವುದು, ಪ್ರಚಲಿತ ವಿಚಾರಗಳು, ಸವಾಲುಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಸೇರಿದಂತೆ ಸುಮಾರು 30 ಅಂಶಗಳನ್ನು ಮುಂದಿಟ್ಟುಕೊಂಡು ನಾವು ಸಮಾಜದಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದು ಅವರು ಹೇಳಿದರು. ಮದ್ರಸಾ ವಿದ್ಯಾರ್ಥಿಗಳಿಗೆ ಧಾರ್ಮಿಕ ಶಿಕ್ಷಣದ ಜೊತೆಗೆ ಲೌಕಿಕ ಶಿಕ್ಷಣ ನೀಡಲು, ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್(ಎನ್ಐಒಎಸ್) ಮೂಲಕ ಎಸೆಸೆಲ್ಸಿ ಪರೀಕ್ಷೆ ಬರೆಯಲು ತರಬೇತಿ ನೀಡಲಾಗುತ್ತಿದೆ. ಇಂದು ಸಾವಿರಾರು ಮದ್ರಸಾ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆಯುತ್ತಿದ್ದಾರೆ ಎಂದು ಇಫ್ತಿಖಾರ್ ಅಹ್ಮದ್ ಖಾಸ್ಮಿ ತಿಳಿಸಿದರು. ಡಿವೈಎಸ್ ಸರ್ವೀಸ್ ಫಾರ್ ಎವರ್ ಫೌಂಡೇಶನ್(ಡಿಎಸ್ಎಫ್) ಸಂಸ್ಥಾಪಕ ಡಾ.ಸೈಯದ್ ಮುಝಮ್ಮಿಲ್ ಅಹ್ಮದ್ ಮಾತನಾಡಿ, ಜಮೀಯತ್ ಉಲಮಾ ಹಿಂದ್ ಸಂಘಟನೆಯ ಮೂಲಕ ಹೊಸ ಹೆಜ್ಜೆ ಇಡಲು ನಾವು ಮುಂದಾಗಿದ್ದೇವೆ. ಪ್ರಮುಖವಾಗಿ ಮೂರು ಕಾರ್ಯಕ್ರಮಗಳ ಮೂಲಕ ಕಾರ್ಯಾರಂಭ ಮಾಡಲು ಬಯಸಿದ್ದೇವೆ ಎಂದು ಹೇಳಿದರು. ಡಿ.25ರಂದು ಸೀರತ್ ಉನ್ ನಬಿ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗುವುದು. ಇದರಲ್ಲಿ ಸರ್ವ ಧರ್ಮದ ವಿದ್ಯಾರ್ಥಿಗಳಿಗೂ ಅವಕಾಶ ಕಲ್ಪಿಸಲಾಗುವುದು. ಪ್ರಥಮ ಬಹುಮಾನವಾಗಿ 10 ಸಾವಿರ ರೂ.ನಗದು, ಅದೇ ರೀತಿ ದ್ವಿತಿಯ, ತೃತೀಯ ಸ್ಥಾನ ಪಡೆದವರಿಗೂ ಡಿಎಸ್ಎಫ್ ಮೂಲಕ ನಗದು ಬಹುಮಾನಗಳನ್ನು ನೀಡಲಾಗುವುದು ಎಂದು ಅವರು ತಿಳಿಸಿದರು. ಬಹುತೇಕ ಚಾಲಕರು ಎಸೆಸೆಲ್ಸಿವರೆಗೆ ಶಿಕ್ಷಣ ಪಡೆದಿರುವುದಿಲ್ಲ. ಚಾಲನಾ ಪರವಾನಿಗಿ, ಪಾಸ್ಪೋರ್ಟ್ ಸೇರಿದಂತೆ ಇನ್ನಿತರ ಸರಕಾರಿ ದಾಖಲೆಗಳಿಗೆ ಎಸೆಸೆಲ್ಸಿ ಕಡ್ಡಾಯವಾಗಿದೆ. ಆದುದರಿಂದ, ಎನ್ಐಒಎಸ್ ಮೂಲಕ ಆಟೋಚಾಲಕರು, ಕ್ಯಾಬ್ ಚಾಲಕರಿಗೆ ಎಸೆಸೆಲ್ಸಿ ಪರೀಕ್ಷೆ ಬರೆಯಲು ಅನುಕೂಲವಾಗುವಂತೆ ತರಬೇತಿ ನೀಡಲಾಗುವುದು ಎಂದು ಮುಝಮ್ಮಿಲ್ ಅಹ್ಮದ್ ಹೇಳಿದರು. ವಿವಾಹ ಪೂರ್ವ ಕೌನ್ಸಿಲಿಂಗ್: ಸಮಾಜದಲ್ಲಿ ಇಂದು ಕೌಟುಂಬಿಕ ಸಮಸ್ಯೆಗಳು, ವಿವಾಹ ವಿಚ್ಛೇಧನ ಪ್ರಕರಣಗಳು ಹೆಚ್ಚಾಗುತ್ತಿವೆ. ಅದರಲ್ಲೂ ವಿದ್ಯಾವಂತರೇ ಇಂತಹ ಸಮಸ್ಯೆಗಳಿಗೆ ಗುರಿಯಾಗುತ್ತಿರುವುದು ಆತಂಕಕಾರಿ. ಆದುದರಿಂದ, ಜಮೀಯತ್ ಉಲಮಾ ಹಿಂದ್ ಹಾಗೂ ಡಿಎಸ್ಎಫ್ ಮೂಲಕ ಯುವಕ, ಯುವತಿಯರಿಗೆ ವಿವಾಹ ಪೂರ್ವ ಕೌನ್ಸಿಲಿಂಗ್ ನಡೆಸಿ ಅವರಿಗೆ ಅಗತ್ಯ ಮಾರ್ಗದರ್ಶನ ನೀಡಲು ಉದ್ದೇಶಿಸಲಾಗಿದೆ ಎಂದು ಅವರು ತಿಳಿಸಿದರು. ಕಾರ್ಯಾಗಾರದಲ್ಲಿ ಮೌಲಾನಾ ಝಫರ್ ಇಮಾಮ್ ಸಾಬ್ ಮಿಫ್ತಾಹಿ, ಮೌಲಾನಾ ಮುಹಮ್ಮದ್ ಶೈಖ್ ನದ್ವಿ, ಡಿಎಸ್ಎಫ್ ರಾಷ್ಟ್ರೀಯ ಅಧ್ಯಕ್ಷ ಮುಹಮ್ಮದ್ ತಬ್ರೇಝ್, ಕಾಡುಗುಡಿ ವಾರ್ಡ್ ಕಾಂಗ್ರೆಸ್ ಅಧ್ಯಕ್ಷ ಸೈಯದ್ ಇಬ್ರಾಹೀಂ ಯಾನೆ ಚಾಂದ್ ಭಾಯ್, ಫಿರೋಝ್ ಅಹ್ಮದ್ ಸೇರಿದಂತೆ ಸುಮಾರು 150ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದರು.
ಬೆಂಗಳೂರು: ಕೇಂದ್ರ ಸರಕಾರ ಜಾರಿಗೊಳಿಸಿದ ನಾಲ್ಕು ಕಾರ್ಮಿಕ ಸಂಹಿತೆಗಳ ವಿರೋಧಿಸಿ ಪ್ರತಿಭಟನೆ
ಬೆಂಗಳೂರು: ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಜಾರಿಗೊಳಿಸಿರುವ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ವಿರೋಧಿಸಿ, ಆಲ್ ಇಂಡಿಯಾ ಯುನೈಡೆಟ್ ಟ್ರೇಡ್ ಯೂನಿಯನ್ ಸೆಂಟರ್ ವತಿಯಿಂದ ಶನಿವಾರ ನಗರದ ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ನಡೆಸಲಾಯಿತು. ಕೇಂದ್ರ ಸರಕಾರ ಜಾರಿಗೊಳಿಸಿದ 4 ಹೊಸ ಕಾರ್ಮಿಕ ಸಂಹಿತೆಗಳು ವ್ಯವಹಾರವನ್ನು ಸುಲಭಗೊಳಿಸುವ ಹೆಸರಿನಲ್ಲಿ, ಕಾರ್ಮಿಕರ ಹಕ್ಕುಗಳನ್ನು ಮತ್ತು ರಕ್ಷಣೆಯನ್ನು ಮೊಟಕುಗೊಳಿಸುವ ಮೂಲಕ, ಬಂಡವಾಳಶಾಹಿ ಮತ್ತು ಉದ್ಯಮದ ಪರವಾಗಿವೆ. ಇದು ಪ್ರಗತಿಪರ ಸುಧಾರಣೆಯಲ್ಲ, ಬದಲಿಗೆ ಕಾರ್ಮಿಕ ವಿರೋಧಿ ನಡೆ ಎಂದು ಪ್ರತಿಭಟನಾನಿರತರು ಆಕ್ರೋಶ ವ್ಯಕ್ತಪಡಿಸಿದರು. ಕೈಗಾರಿಕಾ ಸಂಬಂಧಗಳ ಸಂಹಿತೆ ಅಡಿಯಲ್ಲಿ, ಉದ್ಯೋಗಿಗಳನ್ನು ವಜಾ ಮಾಡಲು ಅಥವಾ ಕಾರ್ಖಾನೆಗಳನ್ನು ಮುಚ್ಚಲು ಸರಕಾರದ ಅನುಮತಿಯ ಅಗತ್ಯವಿರುವ ಸಂಸ್ಥೆಗಳ ಗಾತ್ರವನ್ನು ಹೆಚ್ಚಿಸಲಾಗಿದೆ. ಉದಾಹರಣೆಗೆ, ಕೆಲವು ರಾಜ್ಯಗಳಲ್ಲಿ 300 ಕಾರ್ಮಿಕರನ್ನು ಹೊಂದಿರುವ ಸಂಸ್ಥೆಗಳಿಗೆ ಈ ಮಿತಿ ವಿಸ್ತರಿಸಲಾಗಿದೆ. ಇದರಿಂದಾಗಿ ಸಣ್ಣ ಮತ್ತು ಮಧ್ಯಮ ಗಾತ್ರದ ಸಂಸ್ಥೆಗಳು ಸುಲಭವಾಗಿ ಕಾರ್ಮಿಕರನ್ನು ತೆಗೆದುಹಾಕಲು ಸಾಧ್ಯವಾಗುತ್ತದೆ. ಇದು ಉದ್ಯೋಗ ಭದ್ರತೆಯನ್ನು ಕಡಿಮೆ ಮಾಡುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೈಗಾರಿಕಾ ಸಂಬಂಧಗಳ ಸಂಹಿತೆಯು ಮುಷ್ಕರ ಎಂಬ ಪದದ ವ್ಯಾಖ್ಯೆಯನ್ನು ವಿಸ್ತರಿಸಿದೆ. ಮುಷ್ಕರಕ್ಕೆ ಹೋಗುವ ಮೊದಲು 14-ದಿನಗಳ ನೋಟಿಸ್ ಕಡ್ಡಾಯಗೊಳಿಸಿದೆ. ಇದು ಮುಷ್ಕರ ನಡೆಸುವುದನ್ನು ಕಷ್ಟಕರವಾಗಿಸುತ್ತದೆ ಮತ್ತು ಕಾರ್ಮಿಕರ ಸಂಘಟಿತ ಶಕ್ತಿಯನ್ನು ದುರ್ಬಲಗೊಳಿಸುತ್ತದೆ. ಕಾರ್ಮಿಕ ಕಾಯಿದೆಗಳನ್ನು ಕೇಂದ್ರೀಕರಿಸುವುದರಿಂದ, ಸಂಸ್ಥೆಗಳು ಮತ್ತು ಮಾಲಕರು ಕಡಿಮೆ ನಿಯಂತ್ರಣ ಮತ್ತು ಪರಿಶೀಲನೆಗೆ ಒಳಪಟ್ಟಿರುತ್ತಾರೆ. ಸಂಹಿತೆಗಳು ಅನುಸರಣೆಯನ್ನು ಸರಳಗೊಳಿಸುವುದಾಗಿ ಹೇಳಿದರೂ, ಇದು ವಾಸ್ತವವಾಗಿ ದುರ್ಬಲ ಕಾರ್ಮಿಕ ಶ್ರಮ ಪರಿಶೀಲನಾ ವ್ಯವಸ್ಥೆಗೆ ಕಾರಣವಾಗಬಹುದು ಆತಂಕ ವ್ಯಕ್ತಪಡಿಸಿದರು. ಸಾಮಾಜಿಕ ಭದ್ರತಾ ಸಂಹಿತೆ, ಗುತ್ತಿಗೆ ಕಾರ್ಮಿಕರು ಮತ್ತು ಗಿಗ್ ವರ್ಕರ್ಸ್ ಬಗ್ಗೆ ಮಾತನಾಡಿದರೂ, ಎಲ್ಲಾ ಕಾರ್ಮಿಕರಿಗೆ ಸಮಗ್ರ ಮತ್ತು ಕಡ್ಡಾಯ ಸಾಮಾಜಿಕ ಭದ್ರತೆಯನ್ನು ಖಚಿತಪಡಿಸುವುದಿಲ್ಲ. ವೇತನ ಸಂಹಿತೆಯಲ್ಲಿ ಕೆಲಸದ ಸಮಯಕ್ಕೆ ಸಂಬಂಧಿಸಿದ ನಿಯಮಗಳಲ್ಲಿನ ಬದಲಾವಣೆಗಳು, ಕೆಲವೊಮ್ಮೆ, ಕೆಲಸದ ಸಮಯವನ್ನು 8 ಗಂಟೆಗಳಿಂದ 12 ಗಂಟೆಗಳವರೆಗೆ ಹೆಚ್ಚಿಸಲು ಸಂಸ್ಥೆಗಳಿಗೆ ಅವಕಾಶ ನೀಡಬಹುದು ಎಂಬ ಆತಂಕವಿದೆ. ಇದು ಕಾರ್ಮಿಕರ ಮೇಲೆ ಒತ್ತಡವನ್ನು ಹೆಚ್ಚಿಸುತ್ತದೆ ಎಂದರು. ಈ ಹೊಸ ಕಾರ್ಮಿಕ ಸಂಹಿತೆಗಳ ಬಗ್ಗೆ ಕೇಂದ್ರ ಸರಕಾರವು ಸ್ವಾತಂತ್ರ್ಯದ ನಂತರದ ಅತ್ಯಂತ ಸಮಗ್ರ ಮತ್ತು ಪ್ರಗತಿಪರ ಸುಧಾರಣೆಗಳು ಎಂದು ಬಣ್ಣಿಸಿದ್ದರೂ, ಅವು ವಾಸ್ತವದಲ್ಲಿ ಬಂಡವಾಳಶಾಹಿಗಳ ಪರವಾಗಿವೆ. ದಶಕಗಳಿಂದ ಗಳಿಸಿದ ಕಾರ್ಮಿಕ ಹಕ್ಕುಗಳನ್ನು ಕಸಿದುಕೊಳ್ಳುವಂತಿವೆ ಪ್ರತಿಭಟನಾನಿರತ ಕಾರ್ಮಿಕರು ಆಕ್ಷೇಪ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ಆಲ್ ಇಂಡಿಯಾ ಯುನೈಡೆಟ್ ಟ್ರೇಡ್ ಯೂನಿಯನ್ ಸೆಂಟರ್ ರಾಜ್ಯಾಧ್ಯಕ್ಷ ಕೆ.ಸೋಮಶೇಖರ್, ಉಪಾಧ್ಯಕ್ಷ ಕೆ.ವಿ.ಭಟ್, ದೇವದಾಸ್ ಮತ್ತಿತರರು ಹಾಜರಿದ್ದರು.
ಕಾಂಗ್ರೆಸ್ ಹೈಕಮಾಂಡ್ ಕರ್ನಾಟಕದ ಮುಖ್ಯಮಂತ್ರಿ ಯಾರು ಎಂದು ಸ್ಪಷ್ಟಪಡಿಸಬೇಕು: ಆರ್.ಅಶೋಕ್ ವ್ಯಂಗ್ಯ
ಬೆಂಗಳೂರು: ಮುಖ್ಯಮಂತ್ರಿ ಸ್ಥಾನಕ್ಕಾಗಿ ನಡೆಯುತ್ತಿರುವ ಕಚ್ಚಾಟದಿಂದ ಆಡಳಿತ ಯಂತ್ರಾಂಗ ನಿಷ್ಕ್ರಿಯಗೊಂಡಿದ್ದು, ರಾಜ್ಯದ ಮುಖ್ಯಮಂತ್ರಿ ಯಾರು ಎಂಬ ಪ್ರಶ್ನೆ ಕಾಡುತ್ತಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಪ್ರತಿಕ್ರಿಯಿಸಿದ್ದಾರೆ. ಶನಿವಾರ ಪದ್ಮನಾಭನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಹೈಕಮಾಂಡ್ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಯಾರು ಎಂದು ಕೂಡಲೇ ಸ್ಪಷ್ಟಪಡಿಸಬೇಕು. ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ನಡುವೆ ಕಾದಾಟ ನಡೆಯುತ್ತಿರುವುದರಿಂದ ಸರಕಾರ ಸತ್ತುಹೋಗಿದೆ ಎಂದು ದೂರಿದರು. ‘ಡಿ.ಕೆ.ಶಿವಕುಮಾರ್ ಅವರನ್ನು ಸಿಎಂ ಪದವಿಯಲ್ಲಿ ಕೂರಿಸಬೇಕು ಎಂದು ಅವರ ಪರ ಶಾಸಕರು ಹೋರಾಟ ಮಾಡುತ್ತಿದ್ದಾರೆ. ಈ ಹೋರಾಟ ಅಂತಿಮ ಹಂತಕ್ಕೆ ಬಂದಿದೆ. ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ತೀರ್ಮಾನ ನೀಡಿಲ್ಲವೆಂದರೆ ಸರಕಾರ ನಡೆಯುವುದಿಲ್ಲ. ಅಧಿಕಾರಿಗಳು ಕೆಲಸ ಮಾಡುವುದಿಲ್ಲ’ ಎಂದು ಆರ್.ಅಶೋಕ್ ಹೇಳಿದರು. ‘ಸಾರ್ವಜನಿಕರು, ರೈತ ಸಮುದಾಯ, ವಿದ್ಯಾರ್ಥಿಗಳು ಎದುರಿಸುತ್ತಿರುವ ಹತ್ತಾರು ಸಮಸ್ಯೆಗಳನ್ನು ಬಗೆಹರಿಸಬೇಕೆಂಬ ಕಾಳಜಿ ಕಾಂಗ್ರೆಸ್ ಹೈಕಮಾಂಡ್ಗೆ ಇಲ್ಲ. ಸಿದ್ದರಾಮಯ್ಯನವರನ್ನು ಉಳಿಸಲು ಒಂದು ಬಣ, ಅವರನ್ನು ಕೆಳಗಿಳಿಸಲು ಮತ್ತೊಂದು ಬಣ ಕೆಲಸ ಮಾಡುತ್ತಿದೆ. ಡಿ.ಕೆ.ಶಿವಕುಮಾರ್ ಸಿಎಂ ಆಗಬೇಕೆಂದು ಒಂದು ತಂಡ, ಆಗಬಾರದೆಂದು ಮತ್ತೊಂದು ತಂಡ, ತಂತ್ರ ಕುತಂತ್ರ ಮಾಡುತ್ತಿವೆ ಎಂದು ಟೀಕಿಸಿದರು. ಈ ನಡುವೆ ಅಪರಾಧ ಕೃತ್ಯಗಳು ಹೆಚ್ಚಿವೆ. ರೈತರು ಬೀದಿಗಿಳಿದು ಹೋರಾಟ ಮಾಡುತ್ತಿದ್ದು, ರಾಜಕೀಯ ಸ್ಥಿತಿ ಅಧೋಗತಿಗೆ ಹೋಗಿದೆ. ರಾಹುಲ್ ಗಾಂಧಿ ನಾಯಕತ್ವ ಬಲಹೀನವಾಗಿದ್ದು, ರಾಜ್ಯದಲ್ಲಿಯೂ ಕಾಂಗ್ರೆಸ್ ನಾಯಕತ್ವ ಇಲ್ಲವಾಗಿದೆ. ಕಾಂಗ್ರೆಸ್ ಪಕ್ಷದ ಇಬ್ಬರು ಶಾಸಕರು ಜೈಲಲ್ಲಿದ್ದಾರೆ. ಅವರ ಮತಗಳನ್ನು ಕೇಳಲು ಡಿಕೆಶಿ ಜೈಲಿಗೆ ಹೋಗಿದ್ದಾರೆ. ಕಾಂಗ್ರೆಸ್ಗೆ ಇಂತಹ ಸ್ಥಿತಿ ಬಂದಿರುವುದು ಶೋಚನೀಯ ಎಂದು ವಾಗ್ದಾಳಿ ನಡೆಸಿದರು.
ನ.26ರಿಂದ ಆರೆಸ್ಸೆಸ್ ವಿರುದ್ಧ ಜನಜಾಗೃತಿ, ದಸಂಸ ಸದಸ್ಯತ್ವ ಆಂದೋಲನ: ಮಾವಳ್ಳಿ ಶಂಕರ್
ಬೆಂಗಳೂರು: ಸಂವಿಧಾನ ಸಮರ್ಪಣಾ ದಿನ ಪ್ರಯುಕ್ತ ನ.26ರಿಂದ ಆರೆಸ್ಸೆಸ್ ವಿರುದ್ಧ ಜನಜಾಗೃತಿ ಹಾಗೂ ದಲಿತ ಸಂಘರ್ಷ ಸಮಿತಿಯ ಸದಸ್ಯತ್ವ ಆಂದೋಲನ ನಡೆಸಲಾಗುತ್ತದೆ ಎಂದು ದಸಂಸ ಪ್ರದಾನ ಸಂಚಾಲಕ ಮಾವಳ್ಳಿ ಶಂಕರ್ ತಿಳಿಸಿದ್ದಾರೆ. ನಗರದ ಪ್ರೆಸ್ಕ್ಲಬ್ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸದಸ್ಯತ್ವ ಆಂದೋಲನವು ನ.26ರಂದು ಬೀದರ್ ನಲ್ಲಿ ಚಾಲನೆಗೊಳ್ಳಲಿದೆ. ರಾಜ್ಯದ ಎಲ್ಲ ಜಿಲ್ಲೆ, ತಾಲೂಕು, ಗ್ರಾಮಮಟ್ಟದಲ್ಲಿ ಜನರ ಸದಸ್ಯತ್ವನ್ನು ಮಾಡಿಕೊಳ್ಳಲಾಗುವುದು. 18 ವರ್ಷ ಮೇಲ್ಪಟ್ಟ ಒಂದು ಲಕ್ಷ ಜನರ ಸದಸ್ಯತ್ವವನ್ನು ಮಾಡಿಕೊಳ್ಳುವ ಗುರಿಯನ್ನು ಹೊಂದಲಾಗಿದೆ ಎಂದು ತಿಳಿಸಿದರು. ಸಮಾಜವನ್ನು ಜಾತಿ ಆಧಾರದಲ್ಲಿ ವಿಭಜನೆ ಮಾಡಿ, ಧರ್ಮ ಧರ್ಮಗಳ ನಡುವೆ ವಿಷ ಬೀಜವನ್ನು ಬಿತ್ತಿ, ಮಹಿಳೆಯರನ್ನು ದಾಸಿಯರನ್ನಾಗಿ ಮಾಡಿದಂತಹ ಮನುಸ್ಮೃತಿಯನ್ನು ನಂಬಿರುವ ಆರೆಸ್ಸೆಸ್ ಸಂವಿಧಾನವನ್ನು ವಿರೋಧಿಸುತ್ತಿದೆ. ಅಂಬೇಡ್ಕರ್ ಅವರು ಬಹುಸಂಖ್ಯಾತರು ಮತ್ತು ಮಹಿಳೆಯರಿಗೆ ಕಾನೂನಾತ್ಮಕ ಹಕ್ಕು ಮತ್ತು ಅವಕಾಶಗಳನ್ನು ನೀಡುವ ಹಿಂದೂ ಕೋಡ್ ಬಿಲ್ ಅನ್ನು ಸುಟ್ಟವರು ಆರೆಸ್ಸೆಸ್ನ ಮನುವಾದಿಗಳು ಎಂದು ಅವರು ಟೀಕಿಸಿದರು. ಬಿಜೆಪಿಯವರು ಅಂಬೇಡ್ಕರ್ ಅವರನ್ನು ಗೌರವಿಸುವ ದೊಡ್ಡ ನಾಟಕವನ್ನು ಆಡುತ್ತಿದ್ದಾರೆ. ಇದರ ಹಿಂದೆ ಯಾವ ಹುನ್ನಾರವಿದೆ ಎನ್ನುವುದನ್ನು ದೇಶದ ಜನರು ಅರ್ಥ ಮಾಡಿಕೊಂಡಿದ್ದಾರೆ. ದೇಶದ ಬಹುಸಂಖ್ಯಾತರು ಹಸಿವಿನಿಂದ ನರಳುತಿದ್ದಾರೆ. ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಉದ್ಯೋಗಗಳು ಸಿಗುತ್ತಿಲ್ಲ. ಈ ರೀತಿಯ ಸಮಸ್ಯೆಯ ಬಗ್ಗೆ ಆರೆಸ್ಸೆಸ್ ಯಾವತ್ತೂ ಮಾತನಾಡುವುದಿಲ್ಲ. ಕೇವಲ ಒಂದು ಧರ್ಮವನ್ನು ಗುತ್ತಿಗೆ ಹಿಡದ ರೀತಿಯಲ್ಲಿ ಧರ್ಮದ ಆಧಾರದಲ್ಲಿ ದೇಶವನ್ನು ವಿಭಜನೆ ಮಾಡಿ ರಾಜಕೀಯ ಲಾಭ ಪಡೆಯುತ್ತಿದೆ. ಆದ್ದರಿಂದ ಇದರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು. ದಲಿತ ಹೋರಾಟಗಾರ್ತಿ ಇಂದಿರಾ ಕೃಷ್ಣಪ್ಪ ಮಾತನಾಡಿ, ದೇಶದಲ್ಲಿ ಈ ಸಂದರ್ಭದಲ್ಲಿ ಅನೇಕ ಅಲ್ಲೋಲ ಕಲ್ಲೋಲಗಳು ಆಗುತ್ತಿವೆ. ದಸಂಸ ಪ್ರಾರಂಭದಿಂದಲೂ ಸನಾತನ ಮತ್ತು ಮತೀಯವಾದದ ಹೇರುವಿಕೆಯನ್ನು ವಿರೋಧಿಸತ್ತಲೇ ಬರಲಾಗುತ್ತಿದೆ. ಈಗ ಆರೆಸ್ಸೆಸ್-ಬಿಜೆಪಿಯವರು ಅಂಬೇಡ್ಕರ್ ಮತ್ತು ಸಂವಿಧಾನದ ಬಗ್ಗೆ ಮಾತನಾಡುತ್ತಿವೆ. ಬಿಜೆಪಿಯಿಂದ ಭೀಮ ನಡಿಗೆ ಎಂಬ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಅಂಬೇಡ್ಕರ್ ಇದ್ದಾಗಿನಿಂದಲೂ ಅವರನ್ನು ವಿರೋಧಿಸಿದ, ಸಂವಿಧಾನ, ರಾಷ್ಟ್ರ ಧ್ವಜವನ್ನು ವಿರೋಧಿಸಿರುವುದನ್ನು ನಾವು ಕಂಡಿದ್ದೇವೆ. ಅದಕ್ಕಾಗಿ ಬಿಜೆಪಿ-ಆರೆಸ್ಸೆಸ್ ವಿರುದ್ಧ ಕರ್ನಾಟಕದಾದ್ಯಂತ ಅಭಿಯಾನಗಳನ್ನು ನಡೆಸಲಾಗುವುದು ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ದಸಂಸ ರಾಜ್ಯ ಸಂಚಾಲಕ ಕಾರಳ್ಳಿ ಶ್ರೀನಿವಾಸ್, ಬೆಂಗಳೂರು ವಿಭಾಗೀಯ ಸಂಚಾಲಕ ಮಣಿಪಾಲ್ ರಾಜಪ್ಪ, ನಾಗರಾಜ್, ದಲಿತ ಮಹಿಳಾ ಒಕ್ಕೂಟದ ರಾಜ್ಯ ಸಂಚಾಲಕಿ ನಿರ್ಮಲ, ದನಮ್ಮ ಮತ್ತಿತರರು ಹಾಜರಿದ್ದರು.
ಉಪ್ಪಿನಂಗಡಿ | ಸಮಗ್ರ ಕೃಷಿಯೊಂದಿಗೆ ಸ್ವಾವಲಂಬಿಗಳಾಗೋಣ: ಸಂಜೀವ ಮಠಂದೂರು
ಉಪ್ಪಿನಂಗಡಿ: ಪ್ರಾಕೃತಿಕ ವೈಪರೀತ್ಯದಿಂದಾಗಿ ಕೃಷಿಕರ ಬದುಕು ಕಷ್ಟಕರವಾಗತೊಡಗಿದೆ. ಇದನ್ನು ಸವಾಲಾಗಿ ಸ್ವೀಕರಿಸಿ ಸಮಗ್ರ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ಸ್ವಾವಲಂಬಿ ಕೃಷಿಕನಾಗಬೇಕು, ಹಾಗಾದಾಗ ಮಾತ್ರ ನೆಮ್ಮದಿಯ ಬದುಕು ಸಾಧ್ಯ ಎಂದು ಮಾಜಿ ಶಾಸಕ ಸಂಜೀವ ಮಠಂದೂರು ಹೇಳಿದರು. ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘ ಮತ್ತು ವಳಾಲು ಹಾಲು ಉತ್ಪಾದಕರ ಸಹಕಾರ ಸಂಘದ ಸಹಯೋಗದಲ್ಲಿ ಬಜತ್ತೂರು ಗ್ರಾಮ ಪಂಚಾಯತ್ ಸಭಾ ಭವನದಲ್ಲಿ ನಡೆದ ಕೃಷಿ ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಆಧುನಿಕ ಕೃಷಿ ಪದ್ಧತಿ ವ್ಯವಸ್ಥೆಯಿಂದ ನಾವು ಹೊರ ಬರಬೇಕಾಗಿದೆ. ವಾಣಿಜ್ಯ ಬೆಳೆಗಳಾದ ಅಡಿಕೆ, ಕಾಳು ಮೆಣಸು, ಕಾಫಿ ಜೊತೆಗೆ ತರಕಾರಿ ಮೊದಲಾದ ಉಪ ಕೃಷಿಯೊಂದಿಗೆ ಸ್ವಾವಲಂಬಿ ಕೃಷಿಕನಾಗಬೇಕು ಎಂದರು. ಬಜತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷ ಗಂಗಾಧರ ಪಿ.ಎನ್.ಮಾತನಾಡಿ, ರೈತರು ಸಮಸ್ಯೆಯನ್ನು ಎದುರಿಸುತ್ತಿದ್ದು, ಅವರ ಒಳಿತಿನ ಸಲುವಾಗಿ ಹಮ್ಮಿಕೊಂಡಿರುವ ಈ ಕಾರ್ಯಕ್ರಮ ಕೃಷಿಕರಿಗೆ ಸಹಕಾರಿ ಆಗಲಿದೆ. ನಾವುಗಳು ಹಟ್ಟಿ ಗೊಬ್ಬರ, ನೈಸರ್ಗಿಕ ಗೊಬ್ಬರಕ್ಕೆ ಹೆಚ್ಚು ಒತ್ತು ಕೊಡುವಂತಾಗಬೇಕು ಎಂದರು. ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ಸುನಿಲ್ ಕುಮಾರ್ ದಡ್ಡು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಯುವ ವಿಜ್ಞಾನಿ ಡಾ. ಭವಿಷ್ ಅಡಿಕೆ ಕೃಷಿಯಲ್ಲಿ ಗೊಬ್ಬರದ ಬಳಕೆ, ಸೂಕ್ಷ್ಮ ಪೋಷಕಾಂಶದ ಸಮಗ್ರ ನಿರ್ವಹಣೆ ಹಾಗೂ ರೋಗಗಳ ಹತೋಟಿ ಬಗ್ಗೆ ಮಾಹಿತಿ ನೀಡಿದರು. ಸನ್ಮಾನ: ತಾಲೂಕು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಹಿರಿಯ ಪತ್ರಕರ್ತ ಯು.ಎಲ್. ಉದಯಕುಮಾರ್, ಸಹಕಾರಿ ಸಂಘದ ವಳಾಲು ಶಾಲೆಯಲ್ಲಿ ಸುಮಾರು 20 ವರ್ಷಗಳಿಗೂ ಅಧಿಕ ಕಾಲ ಸಿಬ್ಬಂದಿಯಾಗಿ ಪ್ರಾಮಾಣಿಕತೆಯ ದ್ಯೋತಕದಂತಿದ್ದು, ನಿವೃತ್ತಿ ಹೊಂದಿರುವ ಇಸ್ಮಾಯಿಲ್ ನೀರಕಟ್ಟೆ ಇವರನ್ನು ಸನ್ಮಾನಿಸಲಾಯಿತು. ಸಮಾರಂಭದಲ್ಲಿ ಸಹಕಾರಿ ವ್ಯವಸಾಯಿಕ ಸಂಘದ ಉಪಾಧ್ಯಕ್ಷ ದಯಾನಂದ ಸರೋಳಿ, ನಿರ್ದೇಶಕರಾದ ಉಮೇಶ್, ರಾಜೇಶ್, ರಾಘವ ನಾಯ್ಕ್, ಶ್ರೀಮತಿ ಗೀತಾ, ಶ್ರೀಮತಿ ಸಂಧ್ಯಾ, ಪ್ರಕಾಶ್ ರೈ ಬೆಳ್ಳಿಪ್ಪಾಡಿ, ಶ್ರೀರಾಮ, ಸುಂದರ ಕೆ., ಉಪ್ಪಿನಂಗಡಿ ತಾ.ಪಂ. ಮಾಜಿ ಸದಸ್ಯ ಮುಕುಂದ ಬಜತ್ತೂರು, ಸಂಘದ ಮಾಜಿ ಅಧ್ಯಕ್ಷ ಯಶವಂತ ಗೌಡ, ಹಿರೇಬಂಡಾಡಿ ಗ್ರಾಮ ಪಂಚಾಯತ್ ಸದಸ್ಯ ಹಮ್ಮಬ್ಬ ಶೌಕತ್ ಅಲಿ, ನಿತಿನ್, ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿ ಪದ್ಮಾವತಿ, ಸಂಘದ ಉಪ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪುಷ್ಪರಾಜ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಸಹಕಾರಿ ವ್ಯವಸಾಯಿಕ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಶೋಭಾ ಸ್ವಾಗತಿಸಿದರು. ವಳಾಲು ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ವಸಂತ ಪಿಜಕ್ಕಳ ವಂದಿಸಿದರು. ಸಂಸ್ಥೆಯ ಪ್ರವೀಣ್ ಆಳ್ವ, ರವೀಶ್ ಕಾರ್ಯಕ್ರಮ ನಿರೂಪಿಸಿದರು.
ಸುಳ್ಯ | ಜಾಗದ ವಿವಾದ: ಕತ್ತಿಯಿಂದ ಕಡಿದು ಹಲ್ಲೆ
ಸುಳ್ಯ, ನ.22: ಜಾಗದ ವಿವಾದಕ್ಕೆ ಸಂಬಂಧಿಸಿ ವ್ಯಕ್ತಿಯೊಬ್ಬರಿಗೆ ಕತ್ತಿಯಿಂದ ಹಲ್ಲೆ ನಡೆಸಿದ ಘಟನೆ ಕೊಲ್ಲಮೊಗ್ರದ ಶಿವಲದಲ್ಲಿ ನಡೆದಿದೆ. ಕೊಲ್ಲಮೊಗ್ರ ಗ್ರಾಮದ ಶಿವಾಲ ವಿಶ್ವನಾಥ ರೈ ಹಲ್ಲೆಗೊಳಗಾದವರು. ಭರತ್ ಶಿವಾಲ ಹಲ್ಲೆ ನಡೆಸಿದ ಆರೋಪಿ. ಇವರಿಬ್ಬರ ನಡುವೆ ಹಲವು ಸಮಯಗಳಿಂದ ಜಾಗದ ತಕರಾರು ನಡೆಯುತ್ತಿತ್ತು. ಈ ನಡುವೆ ಭರತ್ ಶಿವಾಲ ರಸ್ತೆಯನ್ನು ಅಗಲೀಕರಣಗೊಳಿಸಿದ್ದರು. ಇದೇ ಸಂದರ್ಭ ವಿಶ್ವನಾಥ ರೈ ತನ್ನ ಜಾಗಕ್ಕೆ ಬೇಲಿ ಹಾಕುತ್ತಿದ್ದಾಗ ಮತ್ತೆ ವಿವಾದ ಉಂಟಾಗಿದೆ. ಬೇಲಿ ತೆಗೆಯುವ ವಿಚಾರದಲ್ಲಿ ಜಗಳವಾಗಿ ವಿಶ್ವನಾಥ ರೈ ಅವರಿಗೆ ಭರತ್ ಶಿವಾಲ ಕತ್ತಿಯಿಂದ ಕಡಿದು ಹಲ್ಲೆ ನಡೆಸಿದ್ದಾನೆ. ಗಾಯಗೊಂಡ ವಿಶ್ವನಾಥ ರೈಯವರನ್ನು ಸುಳ್ಯದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಬಗ್ಗೆ ಸುಬ್ರಹ್ಮಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುಳ್ಯ | ರಸ್ತೆ ಅಪಘಾತದ ಗಾಯಾಳು ಮೃತ್ಯು
ಸುಳ್ಯ, ನ.22: ಬೈಕ್ ಸ್ಕಿಡ್ಡಾಗಿ ಬಿದ್ದ ಪರಿಣಾಮ ಗಾಯಗೊಂಡು ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಮೃತಪಟ್ಟಿದ್ದಾರೆ. ಸುಳ್ಯದ ಹಳೆಗೇಟು ತಮಿಳು ಕಾಲನಿ ನಿವಾಸಿ ರಾಮಕೃಷ್ಣ (52) ಮೃತಪಟ್ಟವರು. ಇವರು ನ.19ರಂದು ರಾತ್ರಿ ಹಳೆಗೇಟಿನಿಂದ ತಮಿಳು ಕಾಲನಿಯ ಮನೆಗೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ಸಂದರ್ಭ ಸ್ಕಿಡ್ಡಾಗಿ ರಸ್ತೆಯಲ್ಲಿ ಬಿದ್ದಿದ್ದರು. ಪರಿಣಾಮ ಗಂಭೀರ ಗಾಯಗೊಂಡ ಅವರನ್ನು ಸ್ಥಳೀಯರು ಕೂಡಲೇ ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಅವರು ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಮೃತಪಟ್ಟಿದ್ದಾರೆ. ಮೃತರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಸುಳ್ಯ, ನ.22: ಎಣ್ಮೂರು ಪಟ್ಟೆ ನಿವಾಸಿ ಪ್ರಭಾಕರ ರೈ ಎನ್.ಜಿ. -ವನಜಾ ರೈ ಕುಂಬ್ರಗುತ್ತು ದಂಪತಿಯ ಪುತ್ರ ಕುಂಬ್ರಗುತ್ತು ರಕ್ಷಿತ್ ರೈ (34) ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಶನಿವಾರ ನಿಧನರಾದರು. ಮೃತರು ತಂದೆ, ತಾಯಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
23 ಕೋಟಿ ರೂ. ವಂಚನೆ ಪ್ರಕರಣ: ಧಾರವಾಡದಲ್ಲಿ ಹೈದರಾಬಾದ್ ಮೂಲದ ದಂಪತಿ ಬಂಧನ
ಧಾರವಾಡ: ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈದರಾಬಾದ್ ಮೂಲದ ದಂಪತಿಯನ್ನು ಧಾರವಾಡ ಪೊಲೀಸರು ಬಂಧಿಸಿರುವ ಘಟನೆ ಶನಿವಾರ ವರದಿಯಾಗಿದೆ. ಸತೀಶ ಉಪ್ಪಾಲಪಟ್ಟಿ ಹಾಗೂ ಶಿಲ್ಪಾ ಬಂಡಾ ಬಂಧಿತ ಆರೋಪಿಗಳು. ಹೈದರಾಬಾದ್ನಲ್ಲಿ ಹೂಡಿಕೆದಾರರಿಗೆ 23 ಕೋಟಿ ರೂ. ವಂಚಿಸಿರುವ ಆರೋಪಿಗಳ ವಿರುದ್ಧ ಹೈದರಾಬಾದ್ ಸೆಂಟ್ರಲ್ ಕ್ರೈಂ ಸ್ಟೇಷನ್ನಲ್ಲಿ ದೂರು ದಾಖಲಾಗಿದ್ದವು. ಆದರೆ, ಇವರು ಪೊಲೀಸರ ಕೈಗೆ ಸಿಗದೆ ತಲೆಮರೆಸಿಕೊಂಡಿದ್ದರು ಎನ್ನಲಾಗಿದೆ. ಹುಬ್ಬಳ್ಳಿ-ಧಾರವಾಢ ಬೈಪಾಸ್ ಮಾರ್ಗದಲ್ಲಿ ಕಾರಿನಲ್ಲಿ ಸಾಗುತ್ತಿರುವ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದರು. ದಂಪತಿಯು ಹುಬ್ಬಳ್ಳಿ-ಧಾರವಾಢ ಬೈಪಾಸ್ ಮೂಲಕ ಹೋಗುತ್ತಿದ್ದಾರೆ ಎಂದು ಹೈದರಾಬಾದ್ ಪೊಲೀಸರು ಧಾರವಾಡ ಜಿಲ್ಲಾ ಪೊಲೀಸರಿಗೆ ಮಾಹಿತಿ ನೀಡಿದ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿ ಹೈದರಾಬಾದ್ ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ ಎಂದು ಎಸ್ಪಿ ಗುಂಜನ್ ಆರ್ಯ ಮಾಹಿತಿ ನೀಡಿದ್ದಾರೆ. ಆರೋಪಿಗಳ ವಿರುದ್ಧ ಹೈದರಬಾದ್ ಸೆಂಟ್ರಲ್ ಕ್ರೈಂ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ.
Ukraine War: ಉಕ್ರೇನ್ ಭೂಮಿ ಮೇಲೆ ರಷ್ಯಾ ಹಿಡಿತ ಮತ್ತಷ್ಟು ಜೋರು, ಇನ್ನಷ್ಟು ಪ್ರದೇಶಗಳು ವಶಕ್ಕೆ!
ರಷ್ಯಾ &ಉಕ್ರೇನ್ ನಡುವೆ ಶಾಂತಿ ಮಾತುಕತೆ ಇನ್ನೇನು ನಡೆದೇ ಹೋಗಲಿದೆ ಅನ್ನೋ ಸಮಯ ಎದುರಾಗಿರುವ ವಾತಾವರಣದಲ್ಲೇ, ಇನ್ನೊಮ್ಮೆ ದ್ವೇಷದ ಬೆಂಕಿ ಮೊಳಗಿದೆ. ರಷ್ಯಾ ಸೇನೆಯಿಂದ ಭಾರಿ ದೊಡ್ಡ ಪ್ರಮಾಣದಲ್ಲಿ ಕಾರ್ಯಾಚರಣೆ ಶುರು ಆಗಿದ್ದು, ನೋಡ ನೋಡುತ್ತಲೇ ಉಕ್ರೇನ್ ದೇಶಕ್ಕೆ ಸೇರಿದ ಮತ್ತಷ್ಟು ಪ್ರದೇಶಗಳನ್ನು ವಶಕ್ಕೆ ಪಡೆದಿದೆ ರಷ್ಯಾ ಸೇನೆ. ಈ ಮೂಲಕ ರಷ್ಯಾ &ಉಕ್ರೇನ್
ಉಡುಪಿ | ಪಾಕಿಸ್ತಾನಕ್ಕೆ ರಹಸ್ಯ ಮಾಹಿತಿ ಸೋರಿಕೆ ಪ್ರಕರಣ : ಆರೋಪಿಗಳಿಗೆ ಪೊಲೀಸ್ ಕಸ್ಟಡಿ ಸಾಧ್ಯತೆ
ಉಡುಪಿ, ನ.22: ಭಾರತದ ನೌಕಾ ಸೇನೆಗೆ ಸಂಬಂಧಪಟ್ಟ ವಿವಿಧ ರಹಸ್ಯ ಮಾಹಿತಿಗಳನ್ನು ಪಾಕಿಸ್ತಾನ ಸೇರಿದಂತೆ ವಿದೇಶಗಳಿಗೆ ಸೋರಿಕೆ ಮಾಡಿದ ಪ್ರಕರಣದ ಬಂಧಿತ ಇಬ್ಬರು ಆರೋಪಿಗಳನ್ನು ಎರಡು ದಿನಗಳ ನಂತರ ಪೊಲೀಸ್ ಕಸ್ಟಡಿಗೆ ಪಡೆದು ಹೆಚ್ಚಿನ ತನಿಖೆಗೆ ಒಳಪಡಿಸಲಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಮಲ್ಪೆ ಕೊಚ್ಚಿನ್ ಶಿಪ್ ಯಾರ್ಡ್ನ ನೌಕರರಾದ ಉತ್ತರ ಪ್ರದೇಶದ ಸುಲ್ತಾನಪುರ ಜಿಲ್ಲೆಯ ರೋಹಿತ್(29) ಮತ್ತು ಸಂತ್ರಿ(37) ಎಂಬವರನ್ನು ಪಾಕಿಸ್ತಾನಕ್ಕೆ ಮಾಹಿತಿ ಸೋರಿಕೆ ಮಾಡಿರುವ ಆರೋಪದಲ್ಲಿ ಬಂಧಿಸಲಾಗಿದೆ. ಆರೋಪಿಗಳು ವಾಟ್ಸ್ಆ್ಯಪ್ ಹಾಗೂ ಫೇಸ್ಬುಕ್ ಮೂಲಕ ನೌಕಾ ಸೇನೆಗೆ ಸಂಬಂಧಿಸಿದ ಮಾಹಿತಿಗಳನ್ನು ಅನಧಿಕೃತವಾಗಿ ಶೇರ್ ಮಾಡಿ, ಅಕ್ರಮ ಲಾಭ ಪಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಸದ್ಯ ಡಿ.3ರವರೆಗೆ ನ್ಯಾಯಾಂಗ ಬಂಧನದಲ್ಲಿರುವ ಆರೋಪಿಗಳನ್ನು ಹೆಚ್ಚಿನ ಮಾಹಿತಿಗಾಗಿ ಎರಡು ದಿನಗಳ ಬಳಿಕ ಪೊಲೀಸ್ ಕಸ್ಟಡಿಗೆ ಪಡೆದುಕೊಳ್ಳಲಾಗುವುದು. ಈ ಪ್ರಕರಣಕ್ಕೆ ಸಂಬಂಧಿಸಿದ ಕೆಲವು ತಾಂತ್ರಿಕ ವಿಶ್ಲೇಷಣೆ ವರದಿಗಳು ನಮ್ಮ ಕೈ ಸೇರಬೇಕಾಗಿದೆ. ಅದನ್ನು ಕಾಯಲಾಗುತ್ತಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ತಿಳಿಸಿದ್ದಾರೆ. ತನಿಖೆಗೆ ಶಾಸಕರ ಆಗ್ರಹ : ನೌಕಾಪಡೆಯ ಹಡಗುಗಳ ಬಗ್ಗೆ ರಹಸ್ಯ ಮಾಹಿತಿಯನ್ನು ಪಾಕಿಸ್ತಾನಕ್ಕೆ ರವಾನಿಸಿರುವ ಪ್ರಕರಣದ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸುವಂತೆ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಗೃಹ ಇಲಾಖೆಯನ್ನು ಒತ್ತಾಯಿಸಿದ್ದಾರೆ. ದೇಶದ ಭದ್ರತೆಗೆ ಧಕ್ಕೆ ತರುವ ಘಟನೆ ನಡೆದಿರುವುದು ಅತ್ಯಂತ ಆಘಾತಕಾರಿಯಾಗಿದೆ. ಈ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಸಿ ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಸೂಕ್ತ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಕ್ರಮವಹಿಸಬೇಕು. ಅಕ್ರಮ ವಲಸಿಗರು ಹಾಗೂ ಬಂಧಿತ ಆರೋಪಿಗಳ ಜಾಲದ ಬಗ್ಗೆ ಉನ್ನತ ಮಟ್ಟದ ತನಿಖೆಯನ್ನೂ ನಡೆಸಿ ದೇಶದ ಭದ್ರತೆಗೆ ಸವಾಲಾಗಿರುವ ದೇಶ ವಿರೋಧಿ ಶಕ್ತಿಗಳನ್ನು ಹತ್ತಿಕ್ಕುವ ನಿಟ್ಟಿನಲ್ಲಿ ಕೇಂದ್ರ ಸರಕಾರದ ಗೃಹ ಸಚಿವಾಲಯ ಉನ್ನತ ಮಟ್ಟದ ತನಿಖೆಯನ್ನೂ ನಡೆಸುವಂತೆ ಅವರು ಪ್ರಕಟನೆಯಲ್ಲಿ ಆಗ್ರಹಿಸಿದ್ದಾರೆ.
Mandya | ಚಿನ್ನಾಭರಣ ದರೋಡೆ ಪ್ರಕರಣ: ಮದ್ದೂರು ಪುರಸಭಾ ಮಾಜಿ ಅಧ್ಯಕ್ಷ ಮರೀಗೌಡ ಬಂಧನ
ಮಂಡ್ಯ: ಮದ್ದೂರು ನಗರದ ದೊಡ್ಡಿಬೀದಿಯ ಗ್ಯಾಸ್ ಚಂದ್ರು ಎಂಬವರ ಮನೆಯಲ್ಲಿ ಮೂರು ತಿಂಗಳ ಹಿಂದೆ ನಡೆದಿದ್ದ ದರೋಡೆ ಪ್ರಕರಣವನ್ನು ಭೇದಿಸುವಲ್ಲಿ ಮದ್ದೂರು ಪೋಲೀಸರು ಯಶಸ್ವಿಯಾಗಿದ್ದು, ಈ ಕೃತ್ಯಕ್ಕೆ ಸಂಬಂಧಿಸಿದಂತೆ ಪುರಸಭಾ ಮಾಜಿ ಅಧ್ಯಕ್ಷ ಎಂ.ಕೆ.ಮರೀಗೌಡ ಅವರನ್ನು ಬಂಧಿಸಿ ಸುಮಾರು 15 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಕಳೆದ ಆಗಸ್ಟ್ 26ರಂದು ಸಂಜೆ ಮದ್ದೂರು ನಗರದ ದೊಡ್ಡಿಬೀದಿಯ ಗ್ಯಾಸ್ ಚಂದ್ರು ಅವರ ಮನೆಗೆ ಮುಸುಕುಧಾರಿಯೊಬ್ಬ ನುಗ್ಗಿ ಅವರ ಪತ್ನಿ ಸುಶೀಲಮ್ಮ ಅವರನ್ನು ಬೆದರಿಸಿ ಮೈಮೇಲಿದ್ದ ವಜ್ರದ ಓಲೆ, ಬಳೆ ಸೇರಿದಂತೆ ಚಿನ್ನಾಭರಣಗಳನ್ನು ದೋಚಿಕೊಂಡು ಪರಾರಿಯಾಗಿದ್ದ. ಈ ಸಂಬಂಧ ಮದ್ದೂರು ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ, ಕೃತ್ಯಕ್ಕೆ ಸಂಬಂಧಿಸಿದಂತೆ ಪೋಲೀಸರು ತನಿಖೆ ಕೈಗೊಂಡಿದ್ದ ವೇಳೆಗೆ ಮದ್ದೂರಿನಲ್ಲಿ ಗಣೇಶಮೂರ್ತಿ ವಿಸರ್ಜನೆ ಮೆರವಣಿಗೆ ವೇಳೆ ಕೆಲ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ ಪರಿಣಾಮ ಗಲಭೆ ನಡೆದ ಹಿನ್ನೆಲೆಯಲ್ಲಿ ಕೆಲವು ಪೋಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ ಪರಿಣಾಮ ಪ್ರಕರಣ ಭೇದಿಸುವಲ್ಲಿ ವಿಳಂಬವಾಗಿತ್ತು. ಕೆಲ ದಿನಗಳ ಹಿಂದೆ ಮದ್ದೂರು ಪೋಲೀಸ್ ಇನ್ಸ್ಪೆಕ್ಟರ್ ಆಗಿ ಅಧಿಕಾರ ಸ್ವೀಕರಿಸಿದ ಎಚ್.ಎಸ್. ನವೀನ ಅವರು ಪ್ರಥಮವಾಗಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಂದ ಕಳವು ಪ್ರಕರಣಗಳ ಮಾಹಿತಿ ಪಡೆದುಕೊಂಡು ಕಾರ್ಯಪ್ರವೃತ್ತರಾಗಿದ್ದರು. ಸುಶೀಲಮ್ಮ ಅವರನ್ನು ಬೆದರಿಸಿ ಚಿನ್ನಾಭರಣಗಳನ್ನು ದೋಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಅವರ ಮಾರ್ಗದರ್ಶನದಲ್ಲಿ, ಡಿವೈಎಸ್ಪಿ ಯಶವಂತ್ ಕುಮಾರ್ ಅವರ ಸೂಕ್ತ ನಿರ್ದೇಶನದ ಮೇರೆಗೆ ಎಚ್.ಎಸ್.ನವೀನ ಅವರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ನ.21ರಂದು ತನಿಖೆಯ ಜಾಡು ಹಿಡಿದ ಪೊಲೀಸರು ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸಿ ಸುಶೀಲಮ್ಮ ಅವರ ಪಕ್ಕದ ಮನೆಯ ನಿವಾಸಿ ಪುರಸಭಾ ಮಾಜಿ ಅಧ್ಯಕ್ಷ ಎಂ.ಕೆ.ಮರೀಗೌಡನನ್ನು ವಶಕ್ಕೆ ತೆಗೆದುಕೊಂಡು ತೀವ್ರ ವಿಚಾರಣೆ ನಡೆಸಿದ ಪರಿಣಾಮ ಕೃತ್ಯ ನಡೆಸಿದ್ದಾಗಿ ಮರೀಗೌಡ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ. ದರೋಡೆ ಮಾಡಿದ ಚಿನ್ನಾಭರಣಗಳನ್ನು ಆರೋಪಿ ಮರೀಗೌಡ ಮಳವಳ್ಳಿ ಮತ್ತು ಮದ್ದೂರಿನ ಬ್ಯಾಂಕರ್ಸ್ ಗಳಲ್ಲಿ ಅಡವಿಟ್ಟಿದ್ದಾಗಿ ಒಪ್ಪಿಕೊಂಡಿದ್ದು, ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿ ಮರೀಗೌಡನನ್ನು ಮದ್ದೂರು ನಗರದ ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಭಟ್ಕಳ ಟಿಎಂಸಿಯನ್ನು ಸಿಎಂಸಿಯಾಗಿ ಘೋಷಿಸುವ ಕರಡು ಪ್ರಸ್ತಾವನೆಗೆ ಅಂತಿಮ ಮುದ್ರೆ
ಭಟ್ಕಳ : ಭಟ್ಕಳ ಟೌನ್ ಮುನ್ಸಿಪಲ್ ಕೌನ್ಸಿಲ್ (TMC) ಅನ್ನು ಸಿಟಿ ಮುನ್ಸಿಪಲ್ ಕೌನ್ಸಿಲ್ (CMC) ಆಗಿ ಘೋಷಿಸುವ ಕುರಿತು ಪ್ರಕಟಿಸಲಾಗಿದ್ದ ಕರಡು ಪ್ರಸ್ತಾವನೆಗೆ ಸಾರ್ವಜನಿಕರಿಂದ ಆಕ್ಷೇಪಣೆ ಸಲ್ಲಿಸಲು ನಿಗದಿಪಡಿಸಿದ್ದ ಅವಧಿ ಮುಗಿದರೂ ಯಾರೊಬ್ಬರೂ ಕೂಡ ಯಾವುದೇ ಆಕ್ಷೇಪಣೆ ಸಲ್ಲಿಸದಿರುವುದರಿಂದ, ಈ ಪ್ರಸ್ತಾವನೆಗೆ ತಾತ್ವಿಕವಾಗಿ ಅಂತಿಮ ಮುದ್ರೆ ಬಿದ್ದಿದೆ. ನಗರಾಭಿವೃದ್ಧಿ ಇಲಾಖೆ ಅ.25ರಂದು ಸಿಎಂಸಿ ರಚನೆಗೆ ಸಂಬಂಧಿಸಿದಂತೆ ಕರಡು ಅಧಿಸೂಚನೆ ಹೊರಡಿಸಿತ್ತು. ಇದಕ್ಕೆ ಆಕ್ಷೇಪಣೆ ಸಲ್ಲಿಸಲು ಒಂದು ತಿಂಗಳ ಅವಧಿಯು ನೀಡಲಾಗಿತ್ತು. ಭಟ್ಕಳ ಪುರಸಭೆಯನ್ನು ನಗರ ಸಭೆಯನ್ನಾಗಿ ಮಾಡುವ ಕುರಿತಂತೆ ಕರಡು ಪ್ರಕಟವಾದ ತಕ್ಷಣ, ಭಟ್ಕಳ ಬಿಜೆಪಿ ಮುಖಂಡರು ಪತ್ರಿಕಾಗೋಷ್ಠಿ ನಡೆಸಿ ಈ ಪ್ರಸ್ತಾವನೆಯ ವಿರುದ್ಧ ತೀವ್ರ ಆಕ್ಷೇಪಣೆ ವ್ಯಕ್ತಪಡಿಸಿದ್ದರು. ಸಿಎಂಸಿಯ ವ್ಯಾಪ್ತಿಯಲ್ಲಿ ಮುಖ್ಯವಾಗಿ ಮುಸ್ಲಿಂ ಬಹುಮತದ ಪ್ರದೇಶಗಳನ್ನು ಮಾತ್ರ ಸೇರಿಸಲಾಗುತ್ತಿದೆ, ಆದ್ದರಿಂದ ನಾವು ಈ ಪ್ರಸ್ತಾವನೆಗೆ ವಿರೋಧಿಸುತ್ತೇವೆ ಎಂಬ ಹೇಳಿಕೆಗಳನ್ನು ನೀಡಿದ್ದರು. ಆದರೆ, ಅವರ ಹೇಳಿಕೆ ಕೇವಲ ಹೇಳಿಕೆಯಾಗಿ ಉಳಿದಿದ್ದು ಕರಡು ಪ್ರಸ್ತಾವಕ್ಕೆ ಯಾರೂ ಕೂಡ ಲಿಖಿತ ಆಕ್ಷೇಪಣೆ ಇಲಾಖೆಗೆ ಸಲ್ಲಿಸಿಲ್ಲ ಎಂದು ತಿಳಿದು ಬಂದಿದ್ದು, ಈ ಕಾರಣಕ್ಕಾಗಿ ನಗರಾಭಿವೃದ್ಧಿ ಇಲಾಖೆ ಭಟ್ಕಳವನ್ನು ನಗರಸಭೆಯನ್ನಾಗಿ ಮಾಡುವ ಪ್ರಸ್ತಾವಕ್ಕೆ ಅಂತಿಮ ಮುದ್ರೆಯೊತ್ತಿದೆ ಎಂದು ತಿಳಿದುಬಂದಿದೆ. ಲಭ್ಯ ಮಾಹಿತಿಯ ಪ್ರಕಾರ 60 ಸಾವಿರಕ್ಕೂ ಹೆಚ್ಚು ಜನಸಂಖ್ಯೆಯನ್ನೊಳಗೊಂಡ ಭಟ್ಕಳ ಪುರಸಭೆಯನ್ನು 2015ರಿಂದಲೇ ಸಿಎಂಸಿ ಆಗಿ ವರ್ಗೀಕರಿಸಲು ಪ್ರಯತ್ನಗಳು ನಡೆಯುತ್ತಿವೆ. ನ.20ರಂದು ನಗರಾಭಿವೃದ್ಧಿ ಇಲಾಖೆ ಅಂತಿಮ ಅಧಿಸೂಚನೆ ಹೊರಡಿಸಿದ್ದು, ಅದರಂತೆ ಹೊಸದಾಗಿ ರೂಪುಗೊಳ್ಳಲಿರುವ ಭಟ್ಕಳ ಸಿಎಂಸಿಗೆ ಭಟ್ಕಳ TMC, ಜಾಲಿ ಪಟ್ಟಣ ಪಂಚಾಯತ್ ಹಾಗೂ ಹೆಬಳೆ ಗ್ರಾಮ ಪಂಚಾಯತ್ಗಳನ್ನು ವಿಲೀನಗೊಳಿಸಲಾಗುತ್ತದೆ. ಇದನ್ನು ‘ಚಿಕ್ಕ ನಗರ’ (Mini City) ಆಗಿ ವರ್ಗೀಕರಿಸಲಾಗುತ್ತದೆ. ಹೊಸ ಸಿಎಂಸಿಯ ಒಟ್ಟು ವ್ಯಾಪ್ತಿ 22.67 ಚ.ಕಿ.ಮೀ ಆಗಿರಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಧ್ಯ ಅವರು 2025ರ ಜ.12ರಂದು ನಗರಾಭಿವೃದ್ಧಿ ಸಚಿವರಿಗೆ ಪತ್ರವೊಂದನ್ನು ಕಳುಹಿಸಿದ್ದು, ಪತ್ರದಲ್ಲಿ “2011ರ ಜನಗಣತಿಯಲ್ಲಿ ಭಟ್ಕಳದಲ್ಲಿ 32 ಸಾವಿರ, ಜಾಲಿಯಲ್ಲಿ 19 ಸಾವಿರ, ಹೆಬಳೆ ಗ್ರಾ.ಪಂ. ಯಲ್ಲಿ 19 ಸಾವಿರ ಜನವಸತಿ ಇದೆ. ಈ ಪ್ರದೇಶಗಳನ್ನು ವಿಲೀನಗೊಳಿಸಿದರೆ ಒಟ್ಟು ಜನಸಂಖ್ಯೆ 75 ಸಾವಿರದ ಮೇಲೆ ಹೋಗುತ್ತದೆ, ಆದ್ದರಿಂದ ಸಿಎಂಸಿ ರಚನೆ ಅಗತ್ಯ” ಎಂದು ಶಿಫಾರಸು ಮಾಡಿದ್ದರು ಎನ್ನಲಾಗಿದೆ. ಬಿಜೆಪಿ ನಾಯಕರು ಭಟ್ಕಳ ಸಿಎಂಸಿಗೆ ವಿರೋಧವಿಲ್ಲವೆಂದರೂ, ಶೀರಾಲಿ, ಮುಟ್ಟಳ್ಳಿ, ಮಣ್ಕುಳ್ಳಿ, ಯಲ್ವಡಿಕವೂರು, ಮವಿನಕುರ್ವೆ ಮುಂತಾದ ಸಮೀಪದ ಗ್ರಾಮಗಳನ್ನು ಕೂಡ ಸೇರಿಸಬೇಕು ಎಂದು ಆಗ್ರಹಿಸಿದ್ದರು. ಆದರೆ ಈ ಬಗ್ಗೆ ಕೂಡಾ ಪಕ್ಷದ ವತಿಯಿಂದ ಯಾವುದೇ ಅಧಿಕೃತ ಲಿಖಿತ ಪ್ರಸ್ತಾಪ ಸಲ್ಲಿಸಲೇ ಇಲ್ಲ ಎಂದು ತಿಳಿದು ಬಂದಿದೆ. ಆದರೆ ಅಂತಿಮ ಅಧಿಸೂಚನೆ ಹೊರಬಿದ್ದ ನಂತರ ಬಿಜೆಪಿ ಮುಖಂಡ ಶ್ರಿಕಾಂತ್ ಅಸರಕೇರಿ ಪ್ರತಿಕ್ರಿಯಿಸಿದ್ದು, “ನಾವು ಮವಿನಕುರ್ವೆ ಮತ್ತು ಮುಟ್ಟಳ್ಳಿ ಗ್ರಾಮಗಳನ್ನು ಸೇರಿಸುವ ಕುರಿತು ಬೇಡಿಕೆ ಇಟ್ಟಿದ್ದೇವೆ. ಆದರೆ ಅಲ್ಪಸಂಖ್ಯಾತರನ್ನು ಓಲೈಸುವ ದೃಷ್ಟಿಯಿಂದ ಕೆಲವೇ ಪ್ರದೇಶಗಳನ್ನು ಮಾತ್ರ ಸಿಎಂಸಿಗೆ ಸೇರಿಸಲಾಗಿದೆ ಎಂದು ಬಿಜೆಪಿ ಅಸಮಾಧಾನ ವ್ಯಕ್ತಪಡಿಸಿದೆ.
ಬೆಂಗಳೂರು: ಪಕ್ಷ ಸಂಘಟನೆ, ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಸಹಿತ ಸ್ಥಳೀಯ ಸಂಸ್ಥೆಗಳ ಚುನಾವಣೆ ಕುರಿತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಚರ್ಚೆ ಮಾಡಿದ್ದೇನೆ. ಅಂತಿಮವಾಗಿ ಹೈಕಮಾಂಡ್ ಕೈಗೊಳ್ಳುವ ನಿರ್ಧಾರವನ್ನು ನಾನು, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಎಲ್ಲರೂ ಒಪ್ಪಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಶನಿವಾರ ರಾತ್ರಿ ಇಲ್ಲಿನ ಸದಾಶಿವನಗರದಲ್ಲಿನ ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದ ಬಳಿಕ ಮಾತನಾಡಿದ ಸಿದ್ದರಾಮಯ್ಯ, ಯಾವಾಗ ನನ್ನನ್ನು ಕರೆಯುತ್ತಾರೋ ಆಗ ನಾನು ಹೊಸದಿಲ್ಲಿಗೆ ಹೋಗುತ್ತೇನೆ. ಹೈಕಮಾಂಡ್ ಏನೇ ತೀರ್ಮಾನ ಕೈಗೊಂಡರೂ ಅದರಂತೆ ನಡೆದುಕೊಳ್ಳುತ್ತೇನೆ ಎಂದರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ನಾನು ಒಂದೂವರೆ ಗಂಟೆ ಚರ್ಚೆ ಮಾಡಿದ್ದೇವೆ. ಇದೊಂದು ಸೌಜನ್ಯದ ಭೇಟಿಯಾಗಿತ್ತು ಅಷ್ಟೇ. ನಾನು ಯಾವಾಗಲು ಸಪ್ಪೆಯಾಗಿ ಇರುವುದಿಲ್ಲ. ಬದಲಿಗೆ ಹೆಚ್ಚು ಖುಷಿಯಾಗಿಯೂ ಇರುವುದಿಲ್ಲ. ಯಾವಾಗಲೂ ಒಂದೇ ರೀತಿಯಲ್ಲಿ ಇರುತ್ತೇನೆ ಎಂದು ಅವರು ತಿಳಿಸಿದರು.
ಬಂಟ್ವಾಳ | ವಿಸ್ಡಮ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪ್ರತಿಭಾ ಕಾರಂಜಿ ಕಾರ್ಯಕ್ರಮ
ಬಂಟ್ವಾಳ, ನ. 22 : ಬಂಟ್ವಾಳ ತಾಲೂಕಿನ ಮಾಣಿ ಸಮೀಪದ, ಕಡೇಶಿವಾಲಯ ಗ್ರಾಮದ ಪ್ರತಿಷ್ಠಿತ ವಿದ್ಯಾಸಂಸ್ಥೆಯಾಗಿರುವ ವಿಸ್ಡಮ್ ಆಂಗ್ಲ ಮಾಧ್ಯಮ ಶಾಲೆ ಬುಡೋಳಿ-ಗಡಿಯಾರ ಇದರ ಕ್ಯಾಂಪಸ್ ನಲ್ಲಿ ಇತ್ತೀಚೆಗೆ, ಕಡೇಶಿವಾಲಯ ಹಾಗೂ ಕೆದಿಲ ಕ್ಲಸ್ಟರ್ ಗಳಲ್ಲಿರುವ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಸೇರಿದಂತೆ ಇರುವ ಒಟ್ಟು ಹದಿನೈದು ಶಾಲೆಗಳ ಪ್ರತಿಭಾ ಕಾರಂಜಿ ಕಾರ್ಯಕ್ರಮವು ಬಹಳ ಸಡಗರದಿಂದ ಜರುಗಿತು. ಕರ್ನಾಟಕದ ಸರಕಾರದ ಆದೇಶದಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಸುತ್ತೋಲೆಯ ಪ್ರಕಾರ ಜರುಗುವ ಈ ಕಾರ್ಯಕ್ರಮವನ್ನು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬಂಟ್ವಾಳ, ಕ್ಷೇತ್ರ ಸಂಪನ್ಮೂಲ ಕೇಂದ್ರ ಬಂಟ್ವಾಳ, ಸಮೂಹ ಸಂಪನ್ಮೂಲ ಕೇಂದ್ರ ಕಡೇಶಿವಾಲಯ ಹಾಗೂ ಕೆದಿಲ ಕ್ಲಸ್ಟರ್ ಗಳ ಸಹಭಾಗಿತ್ವದಲ್ಲಿ ಇಲ್ಲಿನ, ವಿಸ್ಡಮ್ ಆಂಗ್ಲ ಮಾಧ್ಯಮ ಶಾಲೆಯ ಆಡಳಿತ ಮಂಡಳಿಯ ವತಿಯಿಂದ ಶಾಲಾ ಸಂಚಾಲಕ ಅಬ್ದುಲ್ ಖಾದರ್ ಕುಕ್ಕಾಜೆ ಇವರ ಅಧ್ಯಕ್ಷತೆಯಲ್ಲಿ ಕಳೆದ, ನ.6ರ, 2025ರಂದು ಶನಿವಾರ ಆಯೋಜಿಸಲಾಗಿತ್ತು. ಪರಿಸರ ಸಂರಕ್ಷಣೆಯ ಕಾಳಜಿ ಹಾಗೂ ಜಾಗೃತಿ ಮೂಡಿಸುವ ಸಲುವಾಗಿ, ಸಸಿಗೆ ನೀರೆರೆಯುವ ಮೂಲಕ, ಕಡೇಶಿವಾಲಯ ಗ್ರಾಮ ಪಂಚಾಯತ್ ಅಧ್ಯಕ್ಷೆಯವರಾದ, ಭಾರತಿ ಅವರು ಸಮಾರಂಭಕ್ಕೆ ಚಾಲನೆಯನ್ನು ನೀಡಿದರು. ಬಳಿಕ ಸುಧಾಕರ್ ಭಟ್ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾರ್ಯಕ್ರಮದ ಆರಂಭದಲ್ಲಿ ಶಾಲಾ ಮುಖ್ಯ ಶಿಕ್ಷಕಿ ಆಮಿನಾ ಬಾನು ಅವರು ಅತಿಥಿ ಗಣ್ಯರು ಹಾಗೂ ಸಭಿಕರನ್ನು ಸ್ವಾಗತಿಸಿದರು, ಕೊನೆಯಲ್ಲಿ ಶಾಲಾ ಸಂಚಾಲಕ ಅಬ್ದುಲ್ ಖಾದರ್ ಕುಕ್ಕಾಜೆ ರವರ ಅಧ್ಯಕ್ಷೀಯ ಭಾಷಣದ ಬಳಿಕ ಸಹ ಶಿಕ್ಷಕಿಯವರಾದ ಕುಮಾರಿ ನಿಖಿತಾರವರು ಧನ್ಯವಾದವಿತ್ತರು ಹಾಗೂ ಸಹ ಶಿಕ್ಷಕ ಹೈದರ್ ರವರು ಕಾರ್ಯಕ್ರಮವನ್ನು ನಿರ್ವಹಿಸಿದರು. ಸುರೇಶ್ ಪೂಜಾರಿ, ಸತೀಶ್ ರಾವ್, ಗುರುರಾಜ್ ಪಾಟ್ರಕೋಡಿ, ರಾಜೇಶ್ವರಿ, ಝಕರಿಯಾ ದಾರಿಮಿ ವೇದಿಕೆಯಲ್ಲಿ ಗೌರವ ಉಪಸ್ಥಿತರಿದ್ದರು. ಸಾಯಂಕಾಲ ಕೈಗೊಳ್ಳಲಾದ ಸಮಾರೋಪ ಸಮಾರಂಭದಲ್ಲಿ ಸ್ಥಳೀಯ ಮುಹಿಯುದ್ದೀನ್ ಜುಮಾ ಮಸೀದಿ ಗಡಿಯಾರ ಇದರ ಅಧ್ಯಕ್ಷರಾದ ರಿಯಾಝ್ ಕಲ್ಲಾಜೆ, ಶಾಲಾ ಶಿಕ್ಷಕ ರಕ್ಷಕ ಸಂಘದ ಮಾಜಿ ಅಧ್ಯಕ್ಷರಾದ ಹಾಜಿ ಇಸ್ಮಾಯಿಲ್ ಕಲ್ಲಾಜೆ, ಅಲ್ತಾಫ್ ದಾರಿಮಿ ಖತೀಬರು ಹಯಾತುಲ್ ಇಸ್ಲಾಮ್ ಜುಮಾ ಮಸೀದಿ ಪೆರ್ಲಾಪು ಮತ್ತು ಅಧ್ಯಾಪಕರು ಮುಹಿಯುದ್ದೀನ್ ಜುಮಾ ಮಸೀದಿ ಗಡಿಯಾರ ಇವರುಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸುವಲ್ಲಿ, ಸಹಕರಿಸಿದ ಎಲ್ಲಾ ಶಾಲೆಗಳ ಅಧ್ಯಾಪಕ ವೃಂದವನ್ನು ಶ್ಲಾಘಿಸಿ, ವಿಜೇತ ವಿದ್ಯಾರ್ಥಿಗಳನ್ನು, ಅಭಿನಂದಿಸಿದ, ಶಾಲಾ ಸಂಚಾಲಕ ಶ್ರೀಯುತ ಅಬ್ದುಲ್ ಖಾದರ್ ಕುಕ್ಕಾಜೆ ಸಾಂದರ್ಭಿಕ ನುಡಿಗಳನ್ನಾಡಿದರು. ಸ್ಥಳೀಯ ಮುಹಿಯುದ್ದೀನ್ ಜುಮಾ ಮಸೀದಿ ಗಡಿಯಾರ ಇದರ ಅಧ್ಯಕ್ಷರಾದ ರಿಯಾಝ್ ಕಲ್ಲಾಜೆಯವರು ಶುಭ ಹಾರೈಸಿದರು. ಸಮಾರೋಪ ಸಮಾರಂಭದಲ್ಲಿ ಸಹ ಶಿಕ್ಷಕಿಯವರಾದ ಮುಬೀನಾ ಶುಭಾನ್ ಆರಂಭದಲ್ಲಿ ಸ್ವಾಗತ ಕೋರಿ, ಕೊನೆಯಲ್ಲಿ ಧನ್ಯವಾದವಿತ್ತರು. ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ, ಒಟ್ಟು ಏಳು ಪ್ರಶಸ್ತಿಗಳನ್ನು ಪಡೆದು ಕೆದಿಲ ಕ್ಲಸ್ಟರ್ ಮಟ್ಟದ ಚಾಂಪಿಯನ್, ಪ್ರಥಮ ಸ್ಥಾನವನ್ನು ದಕ್ಷಿಣ ಕನ್ನಡ ಜಿಲ್ಲಾ ಹಿರಿಯ ಪ್ರಾಥಮಿಕ ಶಾಲೆ ಮಲ್ಲಡ್ಕ ತನ್ನದಾಗಿಸಿಕೊಂಡಿತು. ಒಟ್ಟು ಐದು ಪ್ರಶಸ್ತಿಗಳನ್ನು ಪಡೆಯುವುದರೊಂದಿಗೆ, ದಕ್ಷಿಣ ಕನ್ನಡ ಜಿಲ್ಲಾ ಹಿರಿಯ ಪ್ರಾಥಮಿಕ ಶಾಲೆ ಕೆದಿಲ ದ್ವಿತೀಯ ಸ್ಥಾನವನ್ನು ಗಳಿಸಿತು. ದ.ಕ. ಹಿರಿಯ ಪ್ರಾಥಮಿಕ ಶಾಲೆ, ಪಾಟ್ರಕೋಡಿ ನಾಲ್ಕು ಪ್ರಶಸ್ತಿಗಳನ್ನು ಪಡೆದು ತೃತೀಯ ಸ್ಥಾನವನ್ನು ಪಡೆಯಿತು. ವಿಜೇತರೆಲ್ಲರಿಗೂ, ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯರಿಂದ ಬಹುಮಾನ ವಿತರಿಸಲಾಯಿತು. ಕ್ಲಸ್ಟರ್ ಮಟ್ಟದ ಈ ಸ್ಪರ್ಧೆಯಲ್ಲಿ, ಕಡೇಶಿವಾಲಯ ಕ್ಲಸ್ಟರ್ ಉಸ್ತುವಾರಿಯನ್ನು, ವಿಸ್ಡಮ್ ಆಂಗ್ಲ ಮಾಧ್ಯಮ ಶಾಲೆ ಬುಡೋಳಿ ಗಡಿಯಾರ ಇಲ್ಲಿನ ಸಹ ಶಿಕ್ಷಕಿಯಾದ ಸಿನಾನ ವಹಿಸಿಕೊಂಡರು ಹಾಗೂ ಅಲಿಮತ್ ಸಅದಿಯ ಸಹ ಶಿಕ್ಷಕಿ ವಿಸ್ಡಮ್ ಆಂಗ್ಲ ಮಾಧ್ಯಮ ಶಾಲೆ ಅವರು ಕೆದಿಲ ಕ್ಲಸ್ಟರ್ ಗೆ ಉಸ್ತುವಾರಿಯಾಗಿ ಕಾರ್ಯ ನಿರ್ವಹಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮವನ್ನು ಸಮಾಪ್ತಿಗೊಳಿಸಲಾಯಿತು.
ಸಚಿವ ಸಂಪುಟ ಪುನರ್ ರಚನೆ: ಕುತೂಹಲಕ್ಕೆ ಕಾರಣವಾದ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ ಭೇಟಿ
ಬೆಂಗಳೂರು: ಸಂಪುಟ ಪುನರ್ ರಚನೆ ಹಾಗೂ ‘ಅಧಿಕಾರ ಹಂಚಿಕೆ’ ಕುರಿತು ಆಡಳಿತಾರೂಢ ಕಾಂಗ್ರೆಸ್ ಪಕ್ಷದಲ್ಲಿ ಚರ್ಚೆ ಆರಂಭವಾಗಿದೆ. ಈ ಮಧ್ಯೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿರುವುದು ರಾಜಕೀಯ ಕುತೂಹಲಕ್ಕೆ ಕಾರಣವಾಗಿದೆ. ‘ನಾನೇ ಮುಖ್ಯಮಂತ್ರಿ’ ಎಂದು ಸಿದ್ದರಾಮಯ್ಯ ಪ್ರಕಟಿಸಿದ ಬೆನ್ನಲ್ಲೆ ‘ಅವರಿಗೆ ಒಳ್ಳೆಯದಾಗಲಿ’ ಎಂದು ಶುಭ ಕೋರಿದ್ದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಮೀನುಗಾರಿಕೆ ಇಲಾಖೆ ವತಿಯಿಂದ ಆಯೋಜಿಸಿದ್ದ ‘ವಿಶ್ವ ಮೀನುಗಾರಿಕೆ ದಿನಾಚರಣೆ ಹಾಗೂ ಮತ್ಸ್ಯಮೇಳ’ ಕಾರ್ಯಕ್ರಮದ ಒಂದೇ ವೇದಿಕೆಯಲ್ಲಿ ಅಕ್ಕ-ಪಕ್ಕ ಕೂತು ಚರ್ಚಿಸಿದ್ದು ವಿಶೇಷವಾಗಿತ್ತು. ‘ಸಂಪುಟ ಪುನರ್ ರಚನೆ ವಿಚಾರಕ್ಕೆ ಸಂಬಂಧಿಸಿದಂತೆ ಹೈಕಮಾಂಡ್ ಸ್ಪಷ್ಟ ನಿರ್ಧಾರಕ್ಕೆ ಬರಲೇಬೇಕಾದ ಅನಿವಾರ್ಯತೆ ಸೃಷ್ಟಿಸಿದೆ. ಇದು ಪಕ್ಷ ಹಾಗೂ ಸರಕಾರದ ಭವಿಷ್ಯದ ದೃಷ್ಟಿಯಿಂದ ಅಗತ್ಯವಾಗಿದೆ. ಹೀಗಾಗಿ ಹೈಕಮಾಂಡ್ ಯಾವ ತೀರ್ಮಾನ ಪ್ರಕಟಿಸಲಿದೆ ಎಂಬುದನ್ನು ಕಾದುನೋಡಬೇಕಿದೆ. ಪಕ್ಷದ ಹೈಕಮಾಂಡ್ ನಾಜೂಕಾಗಿ ಎಲ್ಲವನ್ನು ನಿಭಾಯಿಸಬೇಕಾದ ಸ್ಥಿತಿಯಲ್ಲಿದೆ. ಹೀಗಾಗಿ ಎಲ್ಲವನ್ನು ಅಳೆದು-ತೂಗಿ ನಿರ್ಧಾರ ಪ್ರಕಟಿಸಲು ಕಾಲಾವಕಾಶ ತೆಗೆದುಕೊಳ್ಳುವ ಸಾಧ್ಯತೆಗಳಿವೆ. ನಿನ್ನೆ ಸಂಜೆ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿ.ಕೆ.ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದರು.
ಕಟ್ಬೆಲ್ತೂರು | ದಲಿತರ ಬೇಡಿಕೆಗಳಿಗೆ ಡಿಎಚ್ಎಸ್ ಹಕ್ಕೊತ್ತಾಯ
ಕುಂದಾಪುರ, ನ.22: ದಲಿತರ ವಸತಿ ಸಹಿತ ಇತರೆ ಹಕ್ಕುಗಳನ್ನು ಆಗ್ರಹಿಸಿ ದಲಿತ ಹಕ್ಕುಗಳ ಸಮಿತಿ ಕಟ್ಬೆಲ್ತೂರು ಘಟಕದ ನೇತೃತ್ವದಲ್ಲಿ ಸ್ಥಳೀಯ ಗ್ರಾಪಂಗೆ ಮನವಿಯನ್ನು ಶುಕ್ರವಾರ ಅರ್ಪಿಸಲಾಯಿತು. ದಲಿತರ ಬೇಡಿಕೆಗಳನ್ನು ಕಡೆಗಣಿಸಿದಲ್ಲಿ ಮುಂದಿನ ದಿನಗಳಲ್ಲಿ ಕಾನೂನು ಹೋರಾಟ ಹಾಗೂ ಸಾಮಾಜಿಕ ಹೋರಾಟವನ್ನು ಡಿಎಚ್ಎಸ್ ಮೂಲಕ ಸಂಘಟಿಸಲಾಗುವುದು ಎಂದು ಜಿಲ್ಲಾಧ್ಯಕ್ಷ ಸಂಜೀವ ಬಳ್ಕೂರು ಎಚ್ಚರಿಕೆ ನೀಡಿದರು. ಗ್ರಾಪಂ ಅಧ್ಯಕ್ಷೆ ವೈಶಾಲಿ ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರೇಖಾ ಮನವಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಗ್ರಾಪಂ ಉಪಾಧ್ಯಕ್ಷ ರಾಮ ಶೆಟ್ಟಿ ಹಾಗೂ ಸದಸ್ಯರಾದ ಶರತ್ ಕುಮಾರ್ ಶೆಟ್ಟಿ, ವಿಮಲಾ, ಅಶೋಕ ಬಳೆಗಾರ, ಶಾರದಾ, ದಲಿತ ಚಿಂತಕ ಶುಭಕರ, ಜಿಲ್ಲಾ ಕಾರ್ಯದರ್ಶಿ ರವಿ ವಿಎಂ, ಹಿರಿಯ ದಲಿತ ಮುಖಂಡರಾದ ಬಾಬು ಬಳ್ಕೂರ್, ಘಟಕದ ಸಂಚಾಲಕ ಸಹನಾ, ಮೊದಲಾದವರು ಉಪಸ್ಥಿತರಿದ್ದರು. ಮುಳ್ಳಿಕಟ್ಟೆಯ ಹೊಸಾಡು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶೊಭ ರಮೇಶ್ ಅವರನ್ನು ಜಿಲ್ಲಾ ನಾಯಕರಾದ ರವಿ ವಿ.ಎಂ. ಮತ್ತು ಬಾಬುಬಳ್ಕೂರು ಹಾಗೂ ಜಿಲ್ಲಾಧ್ಯಕ್ಷ ಸಂಜೀವ ಬಳ್ಕೂರು ಭೇಟಿ ಮಾಡಿ ಅಲ್ಲಿನ ನಿವಾಸಿ ಕೃಷ್ಣ ಅವರ ಮನೆಗೆ ಕೂಡಲೇ ವಿದ್ಯುತ್ ಸಂಪರ್ಕವನ್ನು ಕಲ್ಪಿಸಿ ಕೊಡುವಂತೆ ವಿನಂತಿಸಿದರು. ಈ ಸಮಸ್ಯೆಯನ್ನು ಬಗೆಹರಿಸುವುದಾಗಿ ಭರವಸೆ ನೀಡಿದ ಪಿಡಿಓ, ನಂತರದಲ್ಲಿ ಕೃಷ್ಣ ಅವರಿಗೆ ಸಂಬಂಧಪಟ್ಟ ದಾಖಲೆಯನ್ನು ಕೂಡಲೇ ಪಂಚಾಯತ್ ಒದಗಿಸುವಂತೆ ನಿರ್ದೇಶನ ನೀಡಲಾಯಿತು.
‘ಮೆಡಿಕಲ್ ಸ್ಪಾ’ಗಳನ್ನು ಅಧಿಕೃತವಾಗಿ ‘ವೈದ್ಯಕೀಯ ಸಂಸ್ಥೆಗಳುʼ ಎಂದು ಘೋಷಿಸಿದ ರಾಜ್ಯ ಸರಕಾರ
►ಸೌಂದರ್ಯವರ್ಧಕ ಚಿಕಿತ್ಸೆ ನೀಡುವ ರಾಜ್ಯದ ಎಲ್ಲ ಮೆಡಿಕಲ್ ಸ್ಪಾಗಳು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನಿಯಂತ್ರಣಕ್ಕೆ
ದ.ಕ. ಜಿಲ್ಲೆಯಾದ್ಯಂತ ಗುಡುಗು ಸಹಿತ ಭಾರೀ ಮಳೆ
ಮಂಗಳೂರು, ನ.22: ದ.ಕ. ಜಿಲ್ಲೆಯಾದ್ಯಂತ ಶನಿವಾರ ರಾತ್ರಿ ಗುಡುಗು ಸಹಿತ ಭಾರೀ ಮಳೆಯಾಗಿದೆ. ನಗರದಲ್ಲಿ ಸುಮಾರು ರಾತ್ರಿ ಹತ್ತು ಗಂಟೆಯ ಹೊತ್ತಿಗೆ ಗಾಳಿ, ಗುಡುಗು ಸಿಡಿಲಿನ ಆರ್ಭಟದೊಂದಿಗೆ ಮಳೆ ಸುರಿದಿದೆ. ಜಿಲ್ಲೆಯ ಹಲವಡೆ ಆಗಾಗ ಮಳೆಯಾಗುತ್ತಿದ್ದು, ನಗರದಲ್ಲಿ ಕೆಲವು ದಿನಗಳಿಂದ ಮಳೆ ಕಣ್ಮರೆಯಾಗಿತ್ತು. ಸಿಡಿಲಿನ ಅರ್ಭಟಕ್ಕೆ ಕೆಲವಡೆ ವಿದ್ಯುತ್ ಸಂಪರ್ಕ ಕಡಿದು ಹೋಗಿ ಜನಸಾಮಾನ್ಯರು ತೊಂದರೆ ಅನುಭವಿಸಿದ್ದಾರೆ.
ಮಂಗಳೂರು | ವೀಕೆಂಡ್ ವಾರಿಯರ್ಸ್ ನಿಂದ ಜರ್ಸಿ ಬಿಡುಗಡೆ
ಹಸನ್ ಬಜಾಲ್ ಅವರಿಗೆ ಸನ್ಮಾನ
ಮಂಗಳೂರು| ಗಡಿಜಿಲ್ಲೆಗಳ ಪೊಲೀಸ್ ಅಧಿಕಾರಿಗಳ ಸಮನ್ವಯ ಸಭೆ
ಮಂಗಳೂರು, ನ.22: ಕೇರಳದಲ್ಲಿ ನಡೆಯಲಿರುವ ಮುಂಬರುವ ಚುನಾವಣೆಗೆ ಸಂಬಂಧಿಸಿ ಗಡಿಜಿಲ್ಲೆಗಳ ಪೊಲೀಸ್ ಅಧಿಕಾರಿಗಳ ಸಮನ್ವಯ ಸಭೆ ಮಂಗಳೂರು ನಗರ ಆಯುಕ್ತರ ಕಚೇರಿಯಲ್ಲಿ ಶನಿವಾರ ನಡೆಯಿತು. ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಕೇರಳದ ಕಣ್ಣೂರು ವಲಯದ ಡಿಐಜಿಪಿ ಯತೀಶ್ಚಂದ್ರ ಜಿ. ಎಚ್ ಮತ್ತು ಕಾಸರಗೋಡು ಎಸ್ಪಿ ವಿಜಯ ಭರತ್ ರೆಡ್ಡಿ, ಮಂಗಳೂರು ಡಿಸಿಪಿ ಮಿಥುನ್ ಎಚ್ ಎನ್ ಸಭೆಯಲ್ಲಿ ಭಾಗವಹಿಸಿದ್ದರು. ಸಭೆಯಲ್ಲಿ ಉಭಯ ರಾಜ್ಯಗಳ ಗಡಿ ಜಿಲ್ಲೆಗಳಲ್ಲಿ ನಡೆಯುವ ಅಪರಾಧ ಪ್ರಕರಣಗಳ ಮಾಹಿತಿ ವಿನಿಮಯ ಮಾಡಿಕೊಂಡಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳು, ವಾರಂಟ್ನ ಅಸಾಮಿಗಳು, ಅಂತರ್ ರಾಜ್ಯ ಅಪರಾಧ ಪ್ರಕರಣಗಳು, ಮಾದಕದ್ರವ್ಯ ಸಾಗಾಟ ಇತ್ಯಾದಿ ವಿಷಯಗಳ ಬಗ್ಗೆ ಚರ್ಚಿಸಲಾಯಿತು. ಅಲ್ಲದೇ ಎರಡೂ ರಾಜ್ಯಗಳಲ್ಲಿ ದಾಖಲಾದ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ, ಗಡಿ ಜಿಲ್ಲೆಗಳಲ್ಲಿ ತಲೆಮರೆಸಿಕೊಂಡಿರುವ ಆರೋಪಿಗಳು ಮತ್ತು ವಾರಂಟ್ ಅಸಾಮಿಗಳ ಮಾಹಿತಿ ವಿನಿಮಯ ಮತ್ತು ಪತ್ತೆಯ ಬಗ್ಗೆ ಕಾರ್ಯಯೋಜನೆಯನ್ನು ರೂಪಿಸಲಾಗಿದ್ದು, ಅಪರಾಧ ಪ್ರಕರಣಗಳ ನಿಯಂತ್ರಣ ಮತ್ತು ಪತ್ತೆ ಕಾರ್ಯದಲ್ಲಿ ಪರಸ್ಪರ ಸಹಕಾರ, ಜಂಟಿ ಕಾರ್ಯಾಚರಣೆಗಳ ಬಗ್ಗೆ ಚರ್ಚಿಸಿ, ವಿಚಾರ ವಿನಿಮಯ ನಡೆಸಲಾಗಿರುತ್ತದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.
ಉಡುಪಿ | ಕಾಣೆಯಾದ ಬಾಲಕನನ್ನು ಪತ್ತೆ ಮಾಡಿದ ರೈಲ್ವೆ ಸಿಬ್ಬಂದಿ
ಉಡುಪಿ, ನ.22: ವಾಸ್ಕೋದಿಂದ ನಾಪತ್ತೆಯಾಗಿದ್ದ 14 ವರ್ಷ ಬಾಲಕನೊಬ್ಬನನ್ನು ಮತ್ಸ್ಯಗಂಧ ಎಕ್ಸ್ಪ್ರೆಸ್ ರೈಲಿನ ಜನರಲ್ ಕೋಚ್ ನಲ್ಲಿ ಮುಖ್ಯ ಟಿಕೇಟ್ ಪರೀಕ್ಷಕ ಪತ್ತೆ ಹಚ್ಚಿದ ಘಟನೆ ನ.20ರಂದು ಕೊಂಕಣ ರೈಲ್ವೆಯಲ್ಲಿ ವರದಿಯಾಗಿದೆ. ರೈಲು ನಂ. 12619 ಮತ್ಸ್ಯಗಂಧ ಎಕ್ಸ್ಪ್ರೆಸ್ನ ಜನರಲ್ ಕೋಚ್ ನಲ್ಲಿ 14 ವರ್ಷ ಪ್ರಾಯದ ಬಾಲಕನೊಬ್ಬ ಶಾಲಾ ಸಮವಸ್ತ್ರದಲ್ಲಿ ಶಾಲಾ ಬ್ಯಾಗ್ನೊಂದಿಗೆ ಟಿಕೇಟ್ ಇಲ್ಲದೇ ಪ್ರಯಾಣಿಸುತ್ತಿರುವುದನ್ನು ಟಿಕೇಟ್ ತಪಾಸಣೆ ವೇಳೆ ಪತ್ತೆ ಹಚ್ಚಿದ ಮುಖ್ಯ ಟಿಕೇಟ್ ಪರೀಕ್ಷಕ ಪ್ರದೀಪ್ ಶ್ರೀಕೆ, ಆತನೊಂದಿಗೆ ನಯವಾಗಿ ಮಾತನಾಡಿ ಎಲ್ಲಾ ವಿವರಗಳನ್ನು ಸಂಗ್ರಹಿಸಿದರು. ಬಾಲಕ ವಾಸ್ಕೊದ ತನ್ನ ಮನೆಯಿಂದ ಶಾಲಾ ಯುನಿಫಾರ್ಮ್ ಹಾಗೂ ಬ್ಯಾಗ್ನೊಂದಿಗೆ ಓಡಿ ಬಂದಿದ್ದು, ರೈಲಿನಲ್ಲಿ ಒಬ್ಬನೇ ಪ್ರಯಾಣಿಸುತ್ತಿರುವುದನ್ನು ಅವರು ಆತನೊಂದಿಗಿನ ಮಾತುಕತೆಯಿಂದ ಅರಿತುಕೊಂಡರು. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಪ್ರದೀಪ್, ರತ್ನಗಿರಿ ನಿಲ್ದಾಣದಲ್ಲಿ ರೈಲ್ವೆ ಪೊಲೀಸ್ ಹಾಗೂ ಸಿಸಿ ಸಿಬ್ಬಂದಿ ಅವರಿಗೆ ಬಾಲಕನನ್ನು ಒಪ್ಪಿಸಿ ಆತನ ಪೋಷಕರನ್ನು ಪತ್ತೆ ಹಚ್ಚುವಂತೆ ತಿಳಿಸಿದರು. ಅದರಂತೆ ಕಾರ್ಯಪ್ರವೃತ್ತರಾದ ರೈಲ್ವೆ ಪೊಲೀಸರು, ಬಾಲಕ ವಾಸ್ಕೋದ ಶಾಲೆಯಿಂದ ನಾಪತ್ತೆಯಾಗಿದ್ದು, ಆತನ ಹೆತ್ತವರು ಮಗನ ಪತ್ತೆಗಾಗಿ ಎಲ್ಲಾ ಮಾಧ್ಯಮಗಳ ಮೂಲಕ ಮಾಹಿತಿಯನ್ನು ಹಂಚಿಕೊಂಡಿರುವುದನ್ನು ಅರಿತರು. ಬಳಿಕ ಬಾಲಕನ ಹೆತ್ತವರಿಗೆ ಮಾಹಿತಿ ನೀಡಿ, ಅವರ ವಶಕ್ಕೆ ಬಾಲಕನನ್ನು ಒಪ್ಪಿಸಲಾಯಿತು. ಕೊಂಕಣ ರೈಲ್ವೆ ಸಿಬ್ಬಂದಿಗಳ ಸಕಾಲಿಕ ಕಾರ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಮಂಗಳೂರು | ಅಂಚೆ ಚೀಟಿ- ನಾಣ್ಯಗಳ ಪ್ರದರ್ಶನಕ್ಕೆ ಚಾಲನೆ
800 ನಾಣ್ಯ, 2,000 ಅಂಚೆಚೀಟಿಗಳ ಪ್ರದರ್ಶನ
ಕಲಬುರಗಿ ಸಾಂಸ್ಕೃತಿಕ ಪ್ರತಿಷ್ಠಾನದಿಂದ ಸಾಧಕರಿಗೆ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ
ಕಲಬುರಗಿ: 70ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕಲಬುರಗಿ ಸಾಂಸ್ಕೃತಿಕ ಪ್ರತಿಷ್ಠಾನದಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 29 ಮಂದಿ ಸಾಧಕರಿಗೆ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ, ಕವಿಗೋಷ್ಠಿ ಹಾಗೂ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಗರದ ಅನ್ನಪೂರ್ಣ ಕ್ರಾಸ್ ಸಮೀಪದಲ್ಲಿರುವ ಕಲಾ ಮಂಡಳ ಸಭಾಗೃಹದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀನಿವಾಸ ಸರಡಗಿಯ ಹಿರೇಮಠ ಸಂಸ್ಥಾನದ ಡಾ.ರೇವಣಸಿದ್ಧ ಶಿವಾಚಾರ್ಯರು, ಎಲ್ಲಾ ಭಾಷೆಗಳಲ್ಲಿ ಶ್ರೇಷ್ಟವಾದ ಭಾಷೆ ಎಂದರೆ ಕನ್ನಡ, ಇದಕ್ಕೆ ತನ್ನದೇ ಆದ ಇತಿಹಾಸ ಇದೆ. ಇದನ್ನು ಮೀರಿಸುವ ಭಾಷೆ ಯಾವುದೂ ಇಲ್ಲ ಎಂದು ಹೇಳಿದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅರುಣ್ ಕುಮಾರ್ ಎಂ.ವೈ.ಪಾಟೀಲ್, ಕನ್ನಡವನ್ನು ಉಳಿಸಿ, ಬೆಳೆಸಬೇಕು ಎಂದು ಹೇಳಿದರು. ರೈತ ಹೋರಾಟಗಾರ ದಯಾನಂದ ಪಾಟೀಲ್, ಡಾ. ಮಲ್ಲಿಕಾರ್ಜುನ್ ಯಡ್ರಾಮಿ ರಚಿಸಿದ 'ಅಂತರಂಗದ ಪ್ರಣತಿ' ಎಂಬ ಪುಸ್ತಕವನ್ನು ಲೋಕಾರ್ಪಣೆ ಮಾಡಿದರು. ಕಸಾಪ ಮಾಜಿ ಅಧ್ಯಕ್ಷ ಮಹಿಪಾಲರೆಡ್ಡಿ ಮಾತನಾಡಿ, ಕಸಾಪ ಅಧ್ಯಕ್ಷರಾಗಿ ಬಿ.ಎಚ್ ನಿರಗುಡಿ ಗೆದ್ದು ಬಂದರೆ, ಮುಂದಿನ ದಿನಗಳಲ್ಲಿ 'ಕೃಷಿ ಸಾಹಿತ್ಯ ಸಮ್ಮೇಳನ' ಆಯೋಜಿಸುವರು ಎಂದು ಭರವಸೆ ನೀಡಿದರು. ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಕಲ್ಯಾಣರಾವ್ ಪಾಟೀಲ್ ಅವರು ಪ್ರಶಸ್ತಿ ವಿತರಿಸಿದರು. ಪ್ರತಿಷ್ಠಾನದ ಅಧ್ಯಕ್ಷ, ಪುಸ್ತಕ ಪ್ರಾಧಿಕಾರದ ಸದಸ್ಯ ಬಿ.ಎಚ್.ನಿರಗುಡಿ ಪ್ರಸ್ತಾವಿಕವಾಗಿ ಮಾತನಾಡಿದರು. ಕವಿಗೋಷ್ಠಿ ಕಾರ್ಯಕ್ರಮದಲ್ಲಿ 12 ಮಂದಿ ಕವಿಗಳು ನಾಡು, ನುಡಿ, ಇತರ ವಿಷಯಗಳ ಬಗ್ಗೆ ತಮ್ಮ ಕವನಗಳನ್ನು ವಾಚಿಸುವ ಮೂಲಕ ಗಮನ ಸೆಳೆದರು. ಕಾಂಗ್ರೆಸ್ ಮುಖಂಡರಾದ ಕಿಶೋರ್ ಗಾಯಕ್ವಾಡ್, ಡಾ.ಎಸ್.ಎಸ್.ಗುಬ್ಬಿ, ಮಲ್ಲಿಕಾರ್ಜುನ್ ಯಡ್ರಾಮಿ ಮತ್ತಿತರರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಅಣ್ಣಾರಾಯ ಶೆಳ್ಳಗಿ, ನಾಗಪ್ಪ ಗೋಗಿ, ಅಪ್ಪಾರಾವ್ ಅಕ್ಕೋಣಿ, ಸೂರ್ಯಕಾಂತ್ ಪೂಜಾರಿ, ಶಿವಾನಂದ ಮಠಪತಿ, ಸಂದೀಪ್ ಮಾಳಗಿ, ಶಿವಾನಂದ ಖಜೂರಿ, ಜಿ.ಎಸ್.ಮಾಲಿ ಪಾಟೀಲ್, ಅಪ್ಪಾಸಾಬ ತೀರ್ಥೆ, ಚಾಮರಾಜ ದೊಡ್ಡಮನಿ, ಪರ್ವೀನ್ ಸುಲ್ತಾನಾ, ಸುನೀಲ್ ಮಾನ್ಪಡೆ, ದಸ್ತಗೀರ ನದಾಫ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಮಲ್ಪೆ | ಬೋಟಿನಿಂದ ನೀರಿಗೆ ಬಿದ್ದು ವ್ಯಕ್ತಿ ಮೃತ್ಯು
ಮಲ್ಪೆ, ನ.22: ಮಲ್ಪೆ ದಕ್ಕೆಯಲ್ಲಿ ಬೋಟಿನಿಂದ ಮೀನು ಖಾಲಿ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಆಯತಪ್ಪಿ ನೀರಿಗೆ ಬಿದ್ದು ಮೃತಪಟ್ಟ ಘಟನೆ ನ.21ರಂದು ಬೆಳಗ್ಗೆ ನಡೆದಿದೆ. ಮೃತರನ್ನು ಮಲ್ಪೆಯ ರವಿ ಟಿ.ಸಾಲ್ಯಾನ್(51) ಎಂದು ಗುರುತಿಸಲಾಗಿದೆ. ಇವರು ಮಲ್ಪೆ ದಕ್ಕೆಯಲ್ಲಿ ಜಯಮಂಗಳ ಬೋಟಿನಲ್ಲಿ ಮೀನು ಖಾಲಿ ಮಾಡುತ್ತಿದ್ದು, ಈ ವೇಳೆ ಅವರು ಆಯತಪ್ಪಿ ನೀರಿಗೆ ಬಿದ್ದರೆನ್ನಲಾಗಿದೆ. ಕೂಡಲೇ ಅವರನ್ನು ಮೇಲಕ್ಕೆತ್ತಿ ಉಡುಪಿ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿ ಪರೀಕ್ಷಿಸಿದ ವೈದ್ಯರು ಈಗಾಗಲೇ ರವಿ ಸಾಲ್ಯಾನ್ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗಾಜಾ ನೆಲದಲ್ಲಿ ಮತ್ತೆ ಅಲ್ಲೋಲ ಕಲ್ಲೋಲ, ಇಸ್ರೇಲ್ ವಾಯುದಾಳಿಗೆ 14 ಜನ ಬಲಿ?
ಗಾಜಾ ನೆಲದಲ್ಲಿ ರಕ್ತಪಾತ ನಿಂತಿಲ್ಲ, ಗಾಜಾ ನೆಲದಲ್ಲಿ ಪದೇ ಪದೇ ಹಿಂಸಾಚಾರವು ಭುಗಿಲೆದ್ದು ಅಮಾಯಕರು ಜೀವ ಕಳೆದುಕೊಳ್ಳುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ. ಪರಿಸ್ಥಿತಿ ಇನ್ನೂ ಹಿಡಿತಕ್ಕೆ ಸಿಕ್ಕಿಲ್ಲ, ಇಂತಹ ಸಮಯದಲ್ಲೇ ಮತ್ತೆ ಇಂದು ಘೋರ ದುರಂತ ಒಂದು ನಡೆದುಬಿಟ್ಟಿದೆ. ಅಂದಹಾಗೆ ಗಾಜಾ ಪ್ರದೇಶದಲ್ಲಿ ತನ್ನ ಕಾರ್ಯಾಚರಣೆ ಮುಂದುವರಿಸಿರುವ ಇಸ್ರೇಲ್ ಮಿಲಿಟರಿ ಮತ್ತಷ್ಟು ಪ್ರದೇಶಗಳ ಮೇಲೆ ವಾಯುದಾಳಿ
ಮಣಿಪಾಲ | ಫ್ಲ್ಯಾಟ್ನಲ್ಲಿ ಗಾಂಜಾ ಮಾರಾಟ : ಇಬ್ಬರು ವಿದ್ಯಾರ್ಥಿಗಳ ಬಂಧನ
ಮಣಿಪಾಲ, ನ.22: ಎರಡು ಅಪಾರ್ಟ್ಮೆಂಟ್ ಗಳಿಗೆ ದಾಳಿ ನಡೆಸಿದ ಮಣಿಪಾಲ ಪೊಲೀಸರು, ಗಾಂಜಾ ಮಾರಾಟಕ್ಕೆ ಸಂಬಂಧಿಸಿ ಇಬ್ಬರು ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ. ಗುಜರಾತ್ ಮೂಲದ ಕುಶ್ ಕೆಯುಶ್ ಪಟೇಲ್(20) ಹಾಗೂ ಉತ್ತರ ಪ್ರದೇಶ ಮೂಲದ ದೇವಾಂಶ್ ತ್ಯಾಗಿ(22) ಬಂಧಿತ ಆರೋಪಿಗಳು. ಇವರಿಂದ ಸುಮಾರು 36 ಸಾವಿರ ರೂ. ಮೌಲ್ಯದ 727 ಗ್ರಾಂ ಗಾಂಜಾ ಹಾಗೂ 30 ಸಾವಿರ ರೂ. ಮೌಲ್ಯದ ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ. ಮಣಿಪಾಲ ಠಾಣಾ ಪೊಲೀಸ್ ನಿರೀಕ್ಷಕ ಮಹೇಶ್ ಪ್ರಸಾದ್ ನೇತೃತ್ವದಲ್ಲಿ ಎಸ್ಸೈ ಅನಿಲ ಬಿ.ಎಂ. ಮತ್ತು ಸಿಬ್ಬಂದಿರವರನ್ನೊಳಗೊಂಡ ತಂಡ ನ.20ರಂದು ಸಂಜೆ ಮಣಿಪಾಲ ವಿದ್ಯಾರತ್ನ ನಗರದ ಅಪಾರ್ಟೆಂಟ್ ಗೆ ದಾಳಿ ನಡೆಸಿ, ಕುಶ್ ಕೆಯುಶ್ ಪಟೇಲ್ ನನ್ನು ವಶಕ್ಕೆ ಪಡೆದರು. ಬಳಿಕ ಆತ ನೀಡಿದ ಮಾಹಿತಿಯಂತೆ ದೇವಾಂಶ್ ತ್ಯಾಗಿಯನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಗಳು ಗಾಂಜಾವನ್ನು ಮಣಿಪಾಲದಲ್ಲಿ ವಿದ್ಯಾರ್ಥಿಗಳಿಗೆ ಮಾರಾಟ ಮಾಡಿ ಲಾಭಗಳಿಸುವ ಉದ್ದೇಶದಿಂದ ಅಪಾರ್ಟ್ಮೆಂಟ್ ಕೊಠಡಿಯಲ್ಲಿ ಶೇಖರಿಸಿ ಇಟ್ಟಿರುವುದು ತನಿಖೆಯಿಂದ ಕಂಡುಬಂದಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಾದಕ ವಸ್ತುಗಳನ್ನು ಮಣಿಪಾಲದಲ್ಲಿ ಮಾರಾಟ ಮಾಡುವ ಜಾಲದ ಬಗ್ಗೆ ತನಿಖೆ ಮುಂದುವರಿಸಲಾಗಿದೆ. ಈ ಪ್ರಕರಣದ ವಿಚಾರಣೆ ಮುಂದುವರಿಸಲಾಗಿದ್ದು, ಮಣಿಪಾಲದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳನ್ನು ಕೇಂದ್ರವಾಗಿರಿಸಿಕೊಂಡು ಕಾರ್ಯ ನಿರ್ವಹಿಸುತ್ತಿರುವುದು ಗಮನಕ್ಕೆ ಬಂದಿದೆ. ಹಲವಾರು ವಿದ್ಯಾರ್ಥಿಗಳು ಇದರಲ್ಲಿ ಭಾಗಿಯಾಗಿರುವುದು ಹಾಗೂ ಸೇವನೆ ಮಾಡಿರುವುದು ತಿಳಿದು ಬಂದಿದ್ದು, ಮುಂದಿನ ದಿನಗಳಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದೆಂದು ಪೊಲೀಸರು ತಿಳಿಸಿದ್ದಾರೆ.
ಅಲ್-ಫಲಾಹ್ ಗ್ರೂಪ್ ಅಧ್ಯಕ್ಷರಿಗೆ ಸಂಬಂಧಿಸಿದ ಕಟ್ಟಡದ ನೆಲಸಮಕ್ಕೆ ಮಧ್ಯಪ್ರದೇಶ ಹೈಕೋರ್ಟ್ ತಡೆ
ಭೋಪಾಲ,ನ.22: ಅಲ್-ಫಲಾಹ್ ಗ್ರೂಪ್ ನ ಅಧ್ಯಕ್ಷ ಜವಾದ್ ಸಿದ್ದೀಕಿ ಅವರಿಗೆ ಸಂಬಂಧಿಸಿದ ಮಹುದಲ್ಲಿಯ ಮನೆಯ ನೆಲಸಮಕ್ಕೆ ಮಧ್ಯಪ್ರದೇಶ ಉಚ್ಚ ನ್ಯಾಯಾಲಯವು 15 ದಿನಗಳ ಮಧ್ಯಂತರ ತಡೆಯಾಜ್ಞೆಯನ್ನು ನೀಡಿದೆ. ನ.10ರಂದು ದಿಲ್ಲಿಯ ಕೆಂಪು ಕೋಟೆ ಬಳಿ ಸಂಭವಿಸಿದ್ದ ಸ್ಫೋಟ ಮತ್ತು ಅಲ್-ಫಲಾಹ್ ಮೆಡಿಕಲ್ ಕಾಲೇಜಿನ ನಡುವೆ ಆರೋಪಿತ ನಂಟಿನ ಕುರಿತು ನಡೆಯುತ್ತಿರುವ ತನಿಖೆಯಲ್ಲಿ ಸಿದ್ದೀಕಿ ಅವರೂ ತನಿಖಾ ಸಂಸ್ಥೆಯ ನಿಗಾದಲ್ಲಿದ್ದಾರೆ. ಮಹು ಕಂಟೋನ್ಮೆಂಟ್ ಬೋರ್ಡ್ ಮೂರು ದಿನಗಳಲ್ಲಿ ಅಕ್ರಮ ನಿರ್ಮಾಣವನ್ನು ತೆಗೆದುಹಾಕುವಂತೆ ಜಾರಿಗೊಳಿಸಿರುವ ನೋಟಿಸನ್ನು ಪ್ರಶ್ನಿಸಿ ಮನೆಯ ಪ್ರಸ್ತುತ ಮಾಲಿಕ ಅಬ್ದುಲ್ ಮಜೀದ್ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಉಚ್ಚ ನ್ಯಾಯಾಲಯವು ಈ ಆದೇಶವನ್ನು ಹೊರಡಿಸಿದೆ. ಆಸ್ತಿಗೆ ಸಂಬಂಧಿಸಿದಂತೆ ಹಿಂದಿನ ನೋಟಿಸ್ಗಳನ್ನು 1996-97ರಲ್ಲಿ ಹೊರಡಿಸಲಾಗಿತ್ತು ಎನ್ನುವುದನ್ನು ಗಮನಿಸಿದ ನ್ಯಾ.ಪ್ರಣಯ್ ವರ್ಮಾ ಅವರು, ಅಧಿಕಾರಿಗಳು ಸುಮಾರು 30 ವರ್ಷಗಳ ಬಳಿಕ ಕ್ರಮಕ್ಕೆ ಮುಂದಾಗಿದ್ದರೆ ಅರ್ಜಿದಾರರ ಅಹವಾಲು ಆಲಿಸಲು ಸೂಕ್ತ ಅವಕಾಶವನ್ನು ನೀಡಬೇಕಿತ್ತು ಎಂದು ಹೇಳಿದರು. ಅರ್ಜಿಯ ಪ್ರಕಾರ ಮನೆಯು ಮೂಲತಃ ಸಿದ್ದೀಕಿಯವರ ತಂದೆ ಅಹ್ಮದ್ ಅವರಿಗೆ ಸೇರಿದ್ದು, ಅವರು ನಂತರ ಅದನ್ನು ಸಿದ್ದೀಕಿಯವರಿಗೆ ವರ್ಗಾಯಿಸಿದ್ದರು. ಸಿದ್ದೀಕಿ 2021ರಲ್ಲಿ ಅದನ್ನು ಮಜೀದ್ಗೆ ಉಡುಗೊರೆಯಾಗಿ ನೀಡಿದ್ದರು.
ಬಾಕಿ ಇರುವ 90,000 ಪ್ರಕರಣಗಳ ಸಂಖ್ಯೆಯನ್ನು ತಗ್ಗಿಸುವುದು ನನ್ನ ಪ್ರಥಮ ಆದ್ಯತೆ: ನಿಯೋಜಿತ ಸಿಜೆಐ ಸೂರ್ಯಕಾಂತ್
ಹೊಸದಿಲ್ಲಿ: ಮುಖ್ಯ ನ್ಯಾಯಮೂರ್ತಿ ಅವಧಿಯಲ್ಲಿ ನನ್ನೆದುರಿರುವ ಅತಿ ದೊಡ್ಡ ಸವಾಲೆಂದರೆ, ಬಾಕಿ ಇರುವ 90,000 ಪ್ರಕರಣಗಳ ಸಂಖ್ಯೆಯನ್ನು ನಿಭಾಯಿಸಲು ಸಾಧ್ಯವಿರುವ ಹಂತಕ್ಕೆ ತರುವುದಾಗಿದೆ ಎಂದು ಶನಿವಾರ ನಿಯೋಜಿತ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅಭಿಪ್ರಾಯ ಪಟ್ಟಿದ್ದಾರೆ. ಹೊಸದಿಲ್ಲಿಯ ಕೃಷ್ಣ ಮೆನನ್ ಮಾರ್ಗದಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಷ್ಟ್ರೀಯ ನ್ಯಾಯಾಂಗ ದತ್ತಾಂಶ ಜಾಲದಲ್ಲಿ ಬಾಕಿ ಇರುವ ಪ್ರಕರಣಗಳ ಸಂಖ್ಯೆ 90,225ಕ್ಕೆ ತಲುಪಿದೆ ಎಂದು ಹೇಳಿದ್ದಾರೆ. ದೇಶದ ಇತಿಹಾಸದಲ್ಲೇ ಸುಪ್ರೀಂ ಕೋರ್ಟ್ ನಲ್ಲಿ ಇಷ್ಟು ದೊಡ್ಡ ಸಂಖ್ಯೆಯ ಪ್ರಕರಣಗಳು ಬಾಕಿ ಇರುವ ಕುರಿತು ನಾನು ಯಾರನ್ನೂ ದೂಷಿಸಲು ಹೋಗುವುದಿಲ್ಲ ಎಂದೂ ಅವರು ಹೇಳಿದ್ದಾರೆ. “ನಾನು ಇದಕ್ಕೆ ಯಾರನ್ನೂ ತಪ್ಪಿತಸ್ಥರು ಎಂದು ಹೊಣೆಗಾರರನ್ನಾಗಿಸುವುದಿಲ್ಲ. ಅದು ಅಪ್ರಸ್ತುತವಾಗಿದೆ” ಎಂದು ಮಾಧ್ಯಾಮಗಳೊಂದಿಗೆ ನಡೆದ ಅನೌಪಚಾರಿಕ ಸಂವಾದದಲ್ಲಿ ಅವರು ಹೇಳಿದ್ದಾರೆ. ನವೆಂಬರ್ 24ರಂದು ಅವರು ಸುಪ್ರೀಂ ಕೋರ್ಟ್ ನ 53ನೇ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಬಾಕಿ ಇರುವ ಭಾರಿ ಸಂಖ್ಯೆಯ ಪ್ರಕರಣಗಳನ್ನು ವಿಲೇವಾರಿ ಮಾಡಲು ಅಧ್ಯಯನಶೀಲ ಮತ್ತು ಪ್ರಯೋಗಶೀಲ ಧೋರಣೆಯನ್ನು ಅಳವಡಿಸಿಕೊಳ್ಳುವ ಇಂಗಿತವನ್ನೂ ಅವರು ವ್ಯಕ್ತಪಡಿಸಿದ್ದಾರೆ. ಹಲವಾರು ವರ್ಷಗಳಿಂದ ಬಾಕಿ ಇರುವ ಪ್ರಮುಖ ಕಾನೂನು ಪ್ರಶ್ನೆಗಳನ್ನು ಹೊಂದಿರುವ ಮಹತ್ವದ ಪ್ರಕರಣಗಳನ್ನು ಗುರುತಿಸುವುದು ಈ ಕ್ರಮಗಳ ಪೈಕಿ ಒಂದಾಗಿದೆ ಎಂದು ಅವರು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಬಾಡಿಗೆ, ಅಡ್ವಾನ್ಸ್ ದುಬಾರಿ; 3 ತಿಂಗಳಿಗೆ ಮನೆ ಬೇಡಿಕೆ ಕುಸಿತ, ಯಾವ ನಗರದಲ್ಲಿ ಹೇಗಿದೆ ಡಿಮ್ಯಾಂಡ್!
ಐಟಿಬಿಟಿ ಸಿಟಿಯಾದ ಬೆಂಗಳೂರಿನಲ್ಲಿ ಬಾಡಿಗೆ ಮತ್ತು ಅಡ್ವಾನ್ಸ್ ಹೆಚ್ಚಾಗುತ್ತಿರುವ ಹಿನ್ನೆಲೆ, ಮೂರೇ ತಿಂಗಳಿಗೆ ಬೇಡಿಕೆ ಕುಸಿತಗೊಂಡಿದೆ ಎಂದು ಮ್ಯಾಜಿಕ್ಬ್ರಿಕ್ಸ್ ವರದಿಯಿಂದ ತಿಳಿದುಬಂದಿದೆ. ದೆಹಲಿ ಮತ್ತು ಎನ್ಸಿಆರ್ ಭಾಗದಲ್ಲಿ ಬಾಡಿಗೆ ಮನೆಗಳಿಗೆ ದೇಶದಲ್ಲೇ ಅತಿ ಹೆಚ್ಚು ಬೇಡಿಕೆಯಿದೆ. ಆದರೆ ದಕ್ಷಿಣದ ಪ್ರಮುಖ ನಗರಗಳಾದ ಬೆಂಗಳೂರು ಮತ್ತು ಚೆನ್ನೈನಲ್ಲಿ ಬೇಡಿಕೆ ತಗ್ಗಿರುವುದು ಕಂಡುಬಂದಿದೆ. ಇದಕ್ಕೆ ದುಬಾರಿ ಬಾಡಿಗೆ ಕಾರಣ ಎನ್ನಲಾಗಿದೆ.
ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸಿದ ಬೆನ್ನಿಗೇ, ಶನಿವಾರ ಪಂಚಾಯತಿ ಹಂತದಿಂದ ರಾಜ್ಯ ಮಟ್ಟದವರೆಗಿನ ಜನ್ ಸೂರತ್ ಪಕ್ಷದ ಸಂಘಟನಾತ್ಮಕ ಘಟಕಗಳನ್ನು ಪಕ್ಷದ ಮುಖ್ಯಸ್ಥ ಪ್ರಶಾಂತ್ ಕಿಶೋರ್ ವಿಸರ್ಜಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟನೆ ಬಿಡುಗಡೆ ಮಾಡಿರುವ ಜನ್ ಸೂರಜ್ ಪಕ್ಷದ ವಕ್ತಾರ ಸೈಯದ್ ಮಾಸಿಹ್ ಉದ್ದೀನ್, ಮುಂದಿನ ಒಂದೂವರೆ ತಿಂಗಳಲ್ಲಿ ನೂತನ ಘಟಕಗಳನ್ನು ರಚಿಸಲಾಗುವುದು ಎಂದು ತಿಳಿಸಿದ್ದಾರೆ. ರಾಜ್ಯಾಧ್ಯಕ್ಷ ಮನೋಜ್ ಭಾರತಿ ನೇತೃತ್ವದಲ್ಲಿ ಪಾಟ್ನಾದಲ್ಲಿ ಆಯೋಜನೆಗೊಂಡಿದ್ದ ಜನ್ ಸೂರಜ್ ಪಕ್ಷದ ರಾಷ್ಟ್ರೀಯ ಮಂಡಳಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ. ಈ ಸಭೆಯಲ್ಲಿ ಭಾರತೀಯ ಸೇನೆಯ ಮಾಜಿ ಉಪ ಮುಖ್ಯಸ್ಥ ಎಸ್.ಕೆ.ಸಿಂಗ್, ಮಾಜಿ ಕೇಂದ್ರ ಸಚಿವ ರಾಮಚಂದ್ರ ಪ್ರಸಾದ್ ಸಿಂಗ್ ಹಾಗೂ ಹಿರಿಯ ವಕೀಲ ವೈ.ವಿ.ಗಿರಿಯೊಂದಿಗೆ ಪ್ರಶಾಂತ್ ಕಿಶೋರ್ ಕೂಡಾ ಉಪಸ್ಥಿತರಿದ್ದರು. ಬಳಿಕ ಬಿಡುಗಡೆ ಮಾಡಲಾಗಿರುವ ಪತ್ರಿಕಾ ಪ್ರಕಟನೆಯಲ್ಲಿ, “ರಾಜ್ಯದ ಎಲ್ಲ 12 ವಿಭಾಗಗಳ ಹೊಣೆಗಾರಿಕೆಯನ್ನು ಹಿರಿಯ ನಾಯಕರಿಗೆ ವಹಿಸಲಾಗಿದ್ದು, ಪರಿಣಾಮಕಾರಿ ಮತ್ತು ಸಕ್ರಿಯ ಸಂಘಟನಾತ್ಮಕ ಚೌಕಟ್ಟನ್ನು ಮರು ರಚಿಸಲಾಗುವುದು. ಪಕ್ಷದ ಈ ತಂಡವು ಚುನಾವಣೆಯಲ್ಲಿ ಆಗಿರುವ ಪರಾಭವದ ಕಾರಣಗಳನ್ನು ಪತ್ತೆ ಹಚ್ಚಲು ವಿಸ್ತೃತ ಚರ್ಚೆಗಳನ್ನು ನಡೆಸುವುದು ಹಾಗೂ ಅಶಿಸ್ತು ಅಥವಾ ಆಂತರಿಕ ದ್ರೋಹದ ದೋಷಿಗಳಾಗಿರುವ ನಾಯಕರಿಗೆ ಸಂಬಂಧಿಸಿದಂತೆ ವರದಿಯೊಂದನ್ನು ಸಲ್ಲಿಸುವುದು” ಎಂದು ಹೇಳಲಾಗಿದೆ. ಇತ್ತೀಚೆಗೆ ಮುಕ್ತಾಯಗೊಂಡ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ತನ್ನ ಬಹುತೇಕ ಅಭ್ಯರ್ಥಿಗಳು ತಮ್ಮ ಠೇವಣಿಗಳನ್ನು ಕಳೆದುಕೊಳ್ಳುವ ಮೂಲಕ, ರಾಜ್ಯದಲ್ಲಿ ಖಾತೆ ತೆರೆಯುವಲ್ಲಿ ಜನ್ ಸೂರಜ್ ಪಕ್ಷ ವಿಫಲಗೊಂಡಿತ್ತು.
ಶ್ರೀರಾಮನ ಕುರಿತ ಹೇಳಿಕೆ | ಡಿ. 18ರಂದು ಹಾಜರಾಗಲು ರಾಹುಲ್ ಗಾಂಧಿಗೆ ವಾರಣಾಸಿ ನ್ಯಾಯಾಲಯ ಸೂಚನೆ
ಲಕ್ನೊ, ನ. 22: ಶ್ರೀರಾಮನ ಬಗ್ಗೆ ನೀಡಿರುವ ಹೇಳಿಕೆಗೆ ಸಂಬಂಧಿಸಿದ ಪ್ರಕರಣದಲ್ಲಿ ಡಿಸೆಂಬರ್ 18ರಂದು ಹಾಜರಾಗುವಂತೆ ವಾರಣಾಸಿ ನ್ಯಾಯಾಲಯ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಶುಕ್ರವಾರ ಸೂಚಿಸಿದೆ. ಈ ಪ್ರಕರಣವನ್ನು ವಿಶೇಷ ನ್ಯಾಯಾಧೀಶ (ಎಂಪಿ-ಎಂಎಲ್ಎ) ಯುಜುರ್ವೇದ್ ವಿಕ್ರಮ್ ಸಿಂಗ್ ಅವರ ನ್ಯಾಯಾಲಯದ ಮುಂದೆ ವಿಚಾರಣೆಗೆ ಪಟ್ಟಿ ಮಾಡಲಾಗಿತ್ತು. ಆದರೆ, ರಾಹುಲ್ ಗಾಂಧಿ ಅವರ ಗೈರು ಹಾಜರಿನ ಹಿನ್ನೆಲೆಯಲ್ಲಿ ಪ್ರಕರಣದ ವಿಚಾರಣೆಯನ್ನು ಮುಂದೂಡಲಾಯಿತು. ಶ್ರೀರಾಮನ ಕುರಿತ ರಾಹುಲ್ ಗಾಂಧಿ ಹೇಳಿಕೆ ಹಿನ್ನೆಲೆಯಲ್ಲಿ ನ್ಯಾಯವಾದಿ ಹರಿಕೃಷ್ಣ ಪಾಂಡೆ ಅವರು ಈ ವರ್ಷ ಮೇ 12ರಂದು ವಾರಣಾಸಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯಲ್ಲಿ ಪಾಂಡೆ ಅವರು ಎಪ್ರಿಲ್ 21ರಂದು ಅಮೆರಿಕದ ಬ್ರೌನ್ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಹನದ ಸಂದರ್ಭ ರಾಹುಲ್ ಗಾಂಧಿ ಅವರು ಶ್ರೀರಾಮ ಪೌರಾಣಿಕ ವ್ಯಕ್ತಿ. ಆಗಿನ ಕಥೆಗಳು ಕಾಲ್ಪನಿಕ ಎಂದು ಹೇಳಿದ್ದಾರೆ ಎಂದು ಪ್ರತಿಪಾದಿಸಿದ್ದರು. ಪಾಂಡೆ ಅವರ ಈ ಅರ್ಜಿಯನ್ನು ವಾರಣಾಸಿ ನ್ಯಾಯಾಲಯ ವಜಾಗೊಳಿಸಿತ್ತು. ಅನಂತರ ಪಾಂಡೆ ಅವರು ಸೆಪ್ಟಂಬರ್ 26ರಂದು ಅದೇ ನ್ಯಾಯಾಲಯದಲ್ಲಿ ಪುನರ್ ಪರೀಶೀಲನಾ ಅರ್ಜಿ ಸಲ್ಲಿಸಿದ್ದರು.
ವೆನೆಝುವೆಲಾದ ನೊಬೆಲ್ ಪ್ರಶಸ್ತಿ |ವಿಜೇತೆ ಪ್ರಶಸ್ತಿ ಸ್ವೀಕರಿಸಲು ದೇಶವನ್ನು ತೊರೆದರೆ ದೇಶಭ್ರಷ್ಟರೆಂದು ಘೋಷಣೆ: ಸರಕಾರ
ಕ್ಯಾರಕಾಸ್, ನ.22: ನೊಬೆಲ್ ಶಾಂತಿ ಪ್ರಶಸ್ತಿ ಪಡೆದಿರುವ ವೆನೆಝುವೆಲಾದ ವಿಪಕ್ಷ ನಾಯಕಿ ಮರಿಯಾ ಕೊರಿನಾ ಮಚಾದೊ ಅಡಗುದಾಣದಿಂದ ಹೊರಬಂದು ಪ್ರಶಸ್ತಿ ಸ್ವೀಕರಿಸಲು ನಾರ್ವೆಗೆ ತೆರಳಿದರೆ ಅವರನ್ನು ದೇಶಭ್ರಷ್ಟರೆಂದು ಪರಿಗಣಿಸುವುದಾಗಿ ವೆನೆಝುವೆಲಾದ ಅಟಾರ್ನಿ ಜನರಲ್ರನ್ನು ಉಲ್ಲೇಖಿಸಿ ಎಎಫ್ಪಿ ಸುದ್ದಿಸಂಸ್ಥೆ ವರದಿ ಮಾಡಿದೆ. ಓಸ್ಲೋದಲ್ಲಿ ಡಿಸೆಂಬರ್ 10ರಂದು ನಡೆಯುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಳ್ಳಲು ಮಚಾದೊ ಈ ಹಿಂದೆ ಆಸಕ್ತಿ ವ್ಯಕ್ತಪಡಿಸಿದ್ದರು. `ಹಲವಾರು ಕ್ರಿಮಿನಲ್ ಆರೋಪ ಎದುರಿಸುತ್ತಿರುವ ಅವರು ವೆನೆಝುವೆಲಾದಿಂದ ಹೊರಗೆ ತೆರಳಿದರೆ ಪಲಾಯನ ಮಾಡಿದವರು ಎಂದು ಪರಿಗಣಿಸಲಾಗುತ್ತದೆ. ಮಚಾದೊ ವಿರುದ್ಧ `ಪಿತೂರಿ, ದ್ವೇಷದ ಪ್ರಚೋದನೆ, ಭಯೋತ್ಪಾದನೆ ಕೃತ್ಯಗಳ' ಆರೋಪವಿದೆ ಎಂದು ವೆನೆಝುವೆಲಾದ ಅಟಾರ್ನಿ ಜನರಲ್ ತರೆಕ್ ವಿಲಿಯಮ್ ಹೇಳಿದ್ದಾರೆ. ವೆನೆಝುವೆಲಾದ `ಉಕ್ಕಿನ ಮಹಿಳೆ' ಎಂದು ಕರೆಯಲ್ಪಡುವ ಮಚಾದೊ(58 ವರ್ಷ) ಅಧ್ಯಕ್ಷೀಯ ಚುನಾವಣೆಗೆ ವಿಪಕ್ಷಗಳ ಒಮ್ಮತದ ಅಭ್ಯರ್ಥಿಯಾಗಿದ್ದರು. 2024ರ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸದಂತೆ ಅವರನ್ನು ನಿಷೇಧಿಸಿದ ಬಳಿಕ ಅಧ್ಯಕ್ಷ ನಿಕೋಲಸ್ ಮಡುರೊ ಗೆಲುವು ಸಾಧಿಸಿದ್ದರು. ಆದರೆ ಚುನಾವಣೆ ನ್ಯಾಯಸಮ್ಮತ ರೀತಿಯಲ್ಲಿ ನಡೆದಿಲ್ಲ ಎಂದು ಅಂತಾರಾಷ್ಟ್ರೀಯ ವೀಕ್ಷಕರು ಹೇಳಿದ್ದರು. ನೋಬೆಲ್ ಪ್ರಶಸ್ತಿ ಪಡೆದಿರುವುದು ಮಡುರೊ ಆಡಳಿತದಿಂದ ತನಗೆ ಸಾಕಷ್ಟು ರಕ್ಷಣೆ ಒದಗಿಸಿದೆ ಎಂದು ಇತ್ತೀಚೆಗೆ ಮಚಾದೋ ಪ್ರತಿಕ್ರಿಯಿಸಿದ್ದರು.
ಬೀದರ್ | ಮಾಂಜ್ರಾ ನದಿಯಲ್ಲಿ ಕೊಚ್ಚಿಕೊಂಡು ಹೋಗಿದ್ದ ಯುವಕನ ಮೃತದೇಹ ಪತ್ತೆ
ಬೀದರ್ : ಭಾಲ್ಕಿ ತಾಲೂಕಿನ ಹಲಸಿತೂಗಾಂವ್ ಗ್ರಾಮದ ಬಳಿ ಇರುವ ಮಾಂಜ್ರಾ ನದಿಯಲ್ಲಿ ಈಜಲು ಹೋಗಿದ್ದ ವೇಳೆ ಕೊಚ್ಚಿಕೊಂಡು ಹೋಗಿದ್ದ ಯುವಕನ ಮೃತದೇಹ ಶನಿವಾರ ಪತ್ತೆಯಾಗಿದೆ. ಹಲಸಿತೂಗಾಂವ್ ಗ್ರಾಮದ ನಿವಾಸಿ ದಿಗಂಬರ ಸೂರ್ಯವಂಶಿ(21) ಮೃತಪಟ್ಟ ಯುವಕನಾಗಿದ್ದಾನೆ. ನವೆಂಬರ್ 16ರಂದು ತನ್ನ ಗೆಳೆಯರೊಂದಿಗೆ ಹಲಸಿತೂಗಾಂವ್ ಗ್ರಾಮದ ಬಳಿ ಇರುವ ಮಾಂಜ್ರಾ ನದಿಗೆ ಈಜಲು ತೆರಳಿದ್ದ ದಿಗಂಬರ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದ. ಈ ಕುರಿತು ಮೆಹಕರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮೃತದೇಹದ ಪತ್ತೆಗಾಗಿ ಪೊಲೀಸ್ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳು ಹುಡುಕಾಟ ನಡೆಸಿದ್ದರು. ಶನಿವಾರ ವಾಂಜರಖೇಡ್ ಗ್ರಾಮದ ಬಳಿಯ ಮಾಂಜ್ರಾ ನದಿ ನೀರಿನಲ್ಲಿ ಮೃತದೇಹ ಪತ್ತೆಯಾಗಿದೆ.
ಮಂಗಳೂರು | ನ.23 ರಂದು ಸಂಸದ್ ಖೇಲ್ ಮಹೋತ್ಸವ ಅಂಗವಾಗಿ ಮಂಗಳೂರಿನಲ್ಲಿ ನಮೋ ಚೆಸ್ ಟೂರ್ನಮೆಂಟ್ ಆಯೋಜನೆ
ಮಂಗಳೂರು, ನ.22: ಸಂಸದ್ ಕ್ರೀಡಾ ಮಹೋತ್ಸವ ಪ್ರಯುಕ್ತ ನ.23ರಂದು ಮಂಗಳೂರು ನಗರದಲ್ಲಿ ‘ನಮೋ ಚೆಸ್ ಟೂರ್ನಮೆಂಟ್ ’ ಆಯೋಜಿಸಲಾಗಿದೆ. ನಗರದ ಯುಎಸ್ ಮಲ್ಯ ಒಳಾಂಗಣ ಕ್ರೀಡಾಂಗಣದಲ್ಲಿ ಈ ನಮೋ ಚೆಸ್ ಟೂರ್ನಮೆಂಟ್ ನಡೆಯಲಿದೆ. ಈಗಾಗಾಲೇ ಚೆಸ್ ಪಂದ್ಯಾವಳಿಯಲ್ಲಿ ಭಾಗವಹಿಸಲು 500ಕ್ಕೂ ಹೆಚ್ಚು ಆಸಕ್ತರಿಂದ ನೋಂದಾವಣೆಯಾಗಿದ್ದು, ಸಬ್ ಜ್ಯೂನಿಯರ್ (ಯು-10) ಬಾಲಕ ಮತ್ತು ಬಾಲಕಿಯರ , ಜ್ಯೂನಿಯರ್ (ಯು-15) ಬಾಲಕ ,ಬಾಲಕಿಯರ , ಓಪನ್ ಕೆಟಗರಿ ಈ ಮೂರು ವಿಭಾಗದಲ್ಲಿ ಟೂರ್ನಮೆಂಟ್ ನಡೆಯಲಿದೆ. ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಚಿಸುವವರು ಅಂದು ಬೆಳಗ್ಗೆ8ಕ್ಕೆ ತಪ್ಪದೇ ಕಡ್ಡಾಯವಾಗಿ ಹೆಸರು ನೋಂದಾಯಿಸಬೇಕಾಗಿದ್ದು, 8.30ಕ್ಕೆ ಕಾರ್ಯಕ್ರಮ ಉದ್ಘಾಟನಾ ಸಮಾರಂಭ ನಡೆಯಲಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿಕಸಿತ ಭಾರತಕ್ಕಾಗಿ ಫಿಟ್ ಯುವ ಪರಿಕಲ್ಪನೆಯಡಿ ಈ ಕ್ರೀಡಾ ಮಹೋತ್ಸವ ಆಯೋಜಿಸಲಾಗಿದೆ. ನ.23ರ ಬಳಿಕ ಪ್ರತಿ ವಾರವು ಸಂಸದ್ ಖೇಲ್ ಮಹೋತ್ಸವ ಅಂಗವಾಗಿ ವಾಲಿಬಾಲ್, ತ್ರೋಬಾಲ್, ಕುಸ್ತಿ, ಕಬ್ಬಡ್ಡಿ, ಹಗ್ಗ - ಜಗ್ಗಾಟ, ಕ್ರಿಕೆಟ್, ಬ್ಯಾಡ್ಮಿಂಟನ್ ಪಂದ್ಯಾಟಗಳನ್ನು ಆಯೋಜಿಸಲಾಗುತ್ತದೆ. ಈ ವಾರ ಚೆಸ್ ಟೂರ್ನಮೆಂಟ್ ನಡೆಯಲಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಮಕ್ಕಳು, ಯುವಕರು ಸೇರಿ ಕ್ರೀಡಾಸಕ್ತರು ಈ ಟೂರ್ನಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಎಂದು ಸಂಸದ ಕ್ಯಾ. ಬ್ರಿಜೇಶ್ ಚೌಟ ಮನವಿ ಮಾಡಿದ್ದಾರೆ. ಕಾರ್ಯಕ್ರಮದಲ್ಲಿ ಶಾಸಕ ವೇದವ್ಯಾಸ್ ಕಾಮತ್, ವಿ.ಪ.ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ರಾಜ್ಯ ಚೆಸ್ ಅಸೋಸಿಯೇಷನ್ ಉಪಾಧ್ಯಕ್ಷ ರಮೇಶ್ ಕೋಟೆ, ದಕ್ಷಿಣ ಕನ್ನಡ ಚೆಸ್ ಅಸೋಸಿಯೇಷನ್ ಗೌರವಾಧ್ಯಕ್ಷ ಸುನೀಲ್ ಅಚಾರ್, ಜಿಲ್ಲಾಧ್ಯಕ್ಷ ಅಮರಶ್ರೀ ಶೆಟ್ಟಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಮಂಗಳೂರು | ಕೇಂದ್ರ ಸರಕಾರ ಜಾರಿಗೊಳಿಸಿದ ಕಾರ್ಮಿಕ ಸಂಹಿತೆಗಳ ಅಧಿಸೂಚನೆಯನ್ನು ವಿರೋಧಿಸಿ ಪ್ರತಿಭಟನಾ ಪ್ರದರ್ಶನ
ಮಂಗಳೂರು, ನ.22: ಕೇಂದ್ರದ ನರೇಂದ್ರ ಮೋದಿ ಸರಕಾರ ಜಾರಿಗೊಳಿಸಿದ ಕಾರ್ಮಿಕ ವಿರೋಧಿಯಾದ ಸಂಹಿತೆಗಳ ಅಧಿಸೂಚನೆಯನ್ನು ವಿರೋಧಿಸಿ ಇಂದು ದೇಶಾದ್ಯಂತ ಕಾರ್ಮಿಕರಿಂದ ಸ್ವಯಂಪ್ರೇರಿತ ಪ್ರತಿಭಟನೆ ನಡೆಸಬೇಕೆಂದು ಸಿಐಟಿಯು ಕರೆ ನೀಡಿದ ಹಿನ್ನೆಲೆಯಲ್ಲಿ ಮಂಗಳೂರಿನ ಕ್ಲಾಕ್ ಟವರ್ ಬಳಿಯಲ್ಲಿ ಪ್ರತಿಭಟನಾ ಪ್ರದರ್ಶನ ನಡೆಸಲಾಯಿತು. ನೂರಾರು ಸಂಖ್ಯೆಯಲ್ಲಿ ಸೇರಿದ್ದ ಕಾರ್ಮಿಕರು, ಕಾರ್ಪೊರೇಟ್ ಗಳ ಹಿತಾಸಕ್ತಿಗಳನ್ನು ಕಾಪಾಡುವ ಕೇಂದ್ರದ ನರೇಂದ್ರ ಮೋದಿ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ಕರ್ನಾಟಕ ರಾಜ್ಯ ಸರಕಾರ ಈ ಸಂಹಿತೆಗಳಿಗೆ ನಿಯಮಗಳನ್ನು ರೂಪಿಸಬಾರದು ಎಂದು ಒತ್ತಾಯಿಸಿದರು. ಪ್ರತಿಭಟನಾ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ ಸಿಐಟಿಯು ಕರ್ನಾಟಕ ರಾಜ್ಯ ನಾಯಕ ಡಾ.ಕೆ ಪ್ರಕಾಶ್ ಅವರು, ದೇಶದ ಕಾರ್ಮಿಕ ವರ್ಗ ಸಮರಧೀರ ಹೋರಾಟಗಳ ಮೂಲಕ ರೂಪಿಸಿರುವ ನೂರಾರು ಕಾರ್ಮಿಕ ಕಾನೂನುಗಳಲ್ಲಿ 29 ಪ್ರಮುಖ ಕಾನೂನುಗಳನ್ನು 4 ಸಂಹಿತೆಗಳನ್ನಾಗಿ ಮಾಡಿದ ಕೇಂದ್ರ ಸರಕಾರ ಈ ದೇಶದ ಕಾರ್ಪೊರೇಟ್ ಕಂಪೆನಿಗಳ ಹಿತಾಸಕ್ತಿಗಳನ್ನು ಕಾಪಾಡುತ್ತಿದೆಯೇ ಹೊರತು ಕಾರ್ಮಿಕ ವರ್ಗದ ಹಿತಾಸಕ್ತಿಗಳನ್ನಲ್ಲ. ಈ ಸಂಹಿತೆಯು ಅತ್ಯಂತ ಅಪಾಯಕಾರಿ, ಅಪ್ರಜಾಸತ್ತಾತ್ಮಕ, ಕಾರ್ಮಿಕ ವಿರೋಧಿಯಾಗಿದ್ದು, ಎಲ್ಲಾ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಮೌಲ್ಯಗಳನ್ನು ನಾಶಗೊಳಿಸಿ ಕಾರ್ಮಿಕ ವರ್ಗವನ್ನು ಮತ್ತೆ ಗುಲಾಮಗಿರಿಯತ್ತ ಕೊಂಡೊಯ್ಯುವ ಮೂಲಕ ದೇಶವನ್ನೇ ಸರ್ವನಾಶಗೊಳಿಸುವ ಹುನ್ನಾರ ಅಡಗಿದೆ ಎಂದು ತೀವ್ರವಾಗಿ ಟೀಕಿಸಿದರು. ಪ್ರಾಸ್ತಾವಿಕ ಮಾತುಗಳನ್ನಾಡಿದ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಅವರು, ಕಳೆದ ಅವಧಿಯಲ್ಲಿ ಇದೇ ನರೇಂದ್ರ ಮೋದಿ ಸರಕಾರ 2019ರಲ್ಲಿ ವೇತನ ಸಂಹಿತೆ ಹಾಗೂ 2020ರಲ್ಲಿ ಕೈಗಾರಿಕಾ ಸಂಬಂಧಗಳ ಸಂಹಿತೆ, ಸಾಮಾಜಿಕ ಭದ್ರತಾ ಸಂಹಿತೆ, ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿಗಳ ಸಂಹಿತೆಗಳನ್ನು ಜಾರಿಗೆ ತಂದಿದ್ದರೂ ನಂತರದ ಐದಾರು ವರ್ಷಗಳಲ್ಲಿ ಕಾರ್ಮಿಕ ವರ್ಗದ ನಿರಂತರ ಪ್ರಬಲ ಹೋರಾಟಗಳು ನಡೆದ ಫಲವಾಗಿ ಕೇಂದ್ರ ಸರಕಾರ ಹಿಂದೆ ಸರಿದಿತ್ತು. ಮೂರನೆ ಬಾರಿಗೆ ಅಧಿಕಾರಕ್ಕೆ ಬಂದ ಈ ಸರಕಾರ ಕಾರ್ಪೊರೇಟ್ ಹಾಗೂ ದೊಡ್ಡ ಬಂಡವಾಳಿಗರ ಪರವಾಗಿ ನಿರಂತರವಾಗಿ ತುತ್ತೂರಿ ಬಾರಿಸಿತು. ಇತ್ತೀಚಿನ ಬಿಹಾರ ಚುನಾವಣಾ ಫಲಿತಾಂಶ ಹಾಗೂ ಅಧಿಕಾರದ ಮದದಿಂದ ಬೀಗುತ್ತಿರುವ ಕೇಂದ್ರ ಸರಕಾರ ಪ್ರಜಾಪ್ರಭುತ್ವ ರೀತಿಯಲ್ಲಿ ಚರ್ಚಿಸದೆ ಸಂಸತ್ತು ಹಾಗೂ ಕೇಂದ್ರ ಕಾರ್ಮಿಕ ಸಂಘಟನೆಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಏಕಪಕ್ಷೀಯವಾಗಿ ವರ್ತಿಸಿರುವುದು ಸರ್ವಾಧಿಕಾರಿ ನಡೆಯಾಗಿದೆ ಎಂದು ಹೇಳಿದರು. ಸಿಐಟಿಯು ಜಿಲ್ಲಾಧ್ಯಕ್ಷರಾದ ಬಿ ಎಂ ಭಟ್ ಮಾತನಾಡಿ, 2014ರ ಬಳಿಕ ಕೇಂದ್ರದಲ್ಲಿ ಅಧಿಕಾರದ ಗದ್ದುಗೆಯೇರಿದ ನರೇಂದ್ರ ಮೋದಿ ಸರಕಾರ ಈ ದೇಶದ ಸಂವಿಧಾನ ಕಾನೂನಿನ ಆಶಯಗಳನ್ನು ಗಾಳಿಗೆ ತೂರಿ ತನ್ನ ಫ್ಯಾಸಿಸ್ಟ್ ಬುದ್ಧಿಯನ್ನು ತೋರಿಸುತ್ತಾ ಬಂದಿದೆ ಎಂದು ಹೇಳಿದರು. ಪ್ರತಿಭಟನೆಯಲ್ಲಿ ಸಂಹಿತೆಗಳ ಅಧಿಸೂಚನೆಯ ಪ್ರತಿಗಳನ್ನು ಸುಡುವ ಮೂಲಕ ಕೇಂದ್ರ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಪ್ರತಿಭಟನೆಯಲ್ಲಿ ಸಿಐಟಿಯು ಜಿಲ್ಲಾ ನಾಯಕರಾದ ಯೋಗೀಶ್ ಜಪ್ಪಿನಮೊಗರು, ಜೆ ಬಾಲಕೃಷ್ಣ ಶೆಟ್ಟಿ, ಸುಕುಮಾರ್ ತೊಕ್ಕೊಟು, ಯಾದವ ಶೆಟ್ಟಿ, ರವಿಚಂದ್ರ ಕೊಂಚಾಡಿ, ರೋಹಿದಾಸ್,ನೋಣಯ್ಯ ಗೌಡ, ಕಟ್ಟಡ ಕಾರ್ಮಿಕರ ಸಂಘಟನೆಯ ಜನಾರ್ದನ ಕುತ್ತಾರ್, ಚಂದ್ರಹಾಸ ಪಿಲಾರ್, ಇಬ್ರಾಹೀಂ ಅಂಬ್ಲಮೊಗರು, ಉಮೇಶ್ ಶಕ್ತಿನಗರ,ಬೀಡಿ ಕಾರ್ಮಿಕರ ಸಂಘಟನೆಯ ಜಯಂತಿ ಶೆಟ್ಟಿ,ವಿಲಾಸಿನಿ,ಬೀದಿಬದಿ ವ್ಯಾಪಾರಸ್ಥರ ಸಂಘದ ಸಂತೋಷ್, ಖಾದರ್,ಬಂದರು ಶ್ರಮಿಕ ಸಂಘದ ಫಾರೂಕ್ ಉಳ್ಳಾಲ, ರಫೀಕ್ ಹರೇಕಳ,ರೈತ ಸಂಘಟನೆಯ ನಾಯಕರಾದ ಕೃಷ್ಣಪ್ಪ ಸಾಲ್ಯಾನ್, ಸದಾಶಿವದಾಸ್, ಮಶೇಖರ್ ಕುಂದರ್, ಡಿವೈಎಫ್ಐ ನಾಯಕರಾದ ಬಿ ಕೆ ಇಮ್ತಿಯಾಜ್, ಸಂತೋಷ್ ಬಜಾಲ್, ರಿಜ್ವಾನ್ ಹರೇಕಳ, ನವೀನ ಕೊಂಚಾಡಿ, ತಯ್ಯುಬ್ ಬೆಂಗರೆ, ಜನವಾದಿ ಮಹಿಳಾ ಸಂಘಟನೆಯ ಪ್ರಮೀಳಾ ಶಕ್ತಿನಗರ, ಅಸುಂತ ಡಿ ಸೋಜ, ಮಾಧುರಿ ಬೋಳಾರ, ಯೋಗಿತಾ ಉಳ್ಳಾಲ, ಪ್ಲೇವಿ ಕ್ರಾಸ್ತಾ ಅತ್ತಾವರ, ಪ್ರಮೀಳಾ ದೇವಾಡಿಗ, ದಲಿತ ಸಂಘಟನೆಯ ರಘುವೀರ್, ಆದಿವಾಸಿ ಹಕ್ಕುಗಳ ಸಮಿತಿಯ ಕರಿಯ ಕೆ, ಶೇಖರ್ ವಾಮಂಜೂರು, ವಿಕಾಸ್, ಕೃಷ್ಣ ಕತ್ತಲ್ ಸಾರ್, ಬ್ಯಾಂಕ್ ನೌಕರರ ಸಂಘಟನೆಯ ಪುರುಷೋತ್ತಮ ಪೂಜಾರಿ, ಮುನ್ನೂರು ಪಂಚಾಯತ್ ಸದಸ್ಯರಾದ ಗಣೇಶ್ ಅಡ್ಯಂತಾಯ ಮುಂತಾದವರು ಉಪಸ್ಥಿತರಿದ್ದರು.
ಪಶ್ಚಿಮ ಬಂಗಾಳ: ಇನ್ನೋರ್ವ ಬಿಎಲ್ಒ ಆತ್ಮಹತ್ಯೆ
ಎಸ್ಐಆರ್ಗೆ ಇನ್ನೆಷ್ಟು ಜೀವಗಳು ಬಲಿಯಾಗಬೇಕು?:ಮಮತಾ
ನೀವು ಮತ ನೀಡದಿದ್ದರೆ, ನಾನು ನಿಮ್ಮ ನಗರಕ್ಕೆ ಹಣ ನೀಡಲಾರೆ: ಮತದಾರರಿಗೆ ಅಜಿತ್ ಪವಾರ್ ಬಹಿರಂಗ ಬೆದರಿಕೆ
ಪುಣೆ, ನ. 22: ತನ್ನ ಪಕ್ಷದ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದರೆ ಮಾಲೇಗಾಂವ್ಗೆ ಸಾಕಷ್ಟು ಹಣ ನೀಡುತ್ತೇನೆ. ಮತ ನೀಡದೇ ಇದ್ದರೆ ಹಣ ನೀಡುವುದಿಲ್ಲ ಎಂದು ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಜಿಲ್ಲೆಯ ಮಾಲೆಗಾಂವ್ ಮತದಾರರಿಗೆ ಬಹಿರಂಗ ಬೆದರಿಕೆ ಒಡ್ಡಿದ್ದಾರೆ. ಎನ್ಸಿಪಿಯ ಮುಖ್ಯಸ್ಥರಾಗಿರುವ ಪವಾರ್ ಅವರು ಮಾಲೇಗಾಂವ್ ನಗರ ಪಂಚಾಯತ್ಗೆ ನಡೆಯಲಿರುವ ಚುನಾವಣೆ ಹಿನ್ನೆಲೆಯಲ್ಲಿ ಬಾರಾಮತಿ ತೆಹ್ಸಿಲ್ನಲ್ಲಿ ಶುಕ್ರವಾರ ಪ್ರಚಾರ ನಡೆಸುವ ಸಂದರ್ಭ ಮತದಾರರಿಗೆ ಈ ಬೆದರಿಕೆ ಒಡ್ಡಿದ್ದಾರೆ. ಗಮನಾರ್ಹ ವಿಚಾರವೆಂದರೆ ಬಿಜೆಪಿ-ಎನ್ಸಿಪಿ-ಶಿವಸೇನೆಯ ಸರಕಾರದಲ್ಲಿ ಪವಾರ್ ಅವರು ಹಣಕಾಸು ಖಾತೆ ನಿರ್ವಹಿಸುತ್ತಿದ್ದಾರೆ. ‘‘ನೀವು ಎನ್ಸಿಪಿಯ ಎಲ್ಲಾ 18 ಅಭ್ಯರ್ಥಿಗಳನ್ನು ಆಯ್ಕೆ ಮಾಡಿದರೆ ಅನುದಾನದ ಕೊರತೆ ಆಗದಂತೆ ನಾನು ನೋಡಿಕೊಳ್ಳುತ್ತೇನೆ. ನೀವು ಎಲ್ಲಾ 18 ಅಭ್ಯರ್ಥಿಗಳನ್ನು ಆಯ್ಕೆ ಮಾಡಿದರೆ, ನಾನು ಭರವಸೆ ನೀಡಿದ್ದನ್ನು ಒದಗಿಸಲು ಬದ್ಧ. ಆದರೆ, ನೀವು ತಿರಸ್ಕರಿಸಿದರೆ, ನಾನು ಕೂಡ ತಿರಸ್ಕರಿಸುತ್ತೇನೆ. ನಿಮ್ಮಲ್ಲಿ ಮತಗಳಿವೆ. ನನ್ನಲ್ಲಿ ಹಣವಿದೆ’’ ಎಂದು ಅವರು ಹೇಳಿದ್ದಾರೆ. ಅವರ ಈ ಹೇಳಿಕೆ ಬಗ್ಗೆ ಪ್ರತಿಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ. ಪವಾರ್ ಅವರು ಮತದಾರರನ್ನು ಬೆದರಿಸುತ್ತಿದ್ದಾರೆ ಎಂದು ಶಿವಸೇನೆ (ಯುಬಿಟಿ) ನಾಯಕ ಅಂಬಾದಾಸ್ ದಾನ್ವೆ ಹೇಳಿದ್ದಾರೆ. ‘‘ಹಣ ನೀಡುವುದು ಸಾಮಾನ್ಯ ಜನರು ಪಾವತಿಸಿದ ತೆರಿಗೆಯಿಂದ. ಅಜಿತ್ ಪವಾರ್ ಅವರ ಮನೆಯಿಂದ ಅಲ್ಲ. ಪವಾರ್ ಅವರಂತಹ ನಾಯಕರು ಮತದಾರರನ್ನು ಬೆದರಿಸುತ್ತಿರುವಾಗ, ಚುನಾವಣಾ ಆಯೋಗ ಏನು ಮಾಡುತ್ತಿದೆ’’ ಎಂದು ಅವರು ಪ್ರಶ್ನಿಸಿದ್ದಾರೆ. ನಗರ ಪಂಚಾಯತ್ಗಳಿಗೆ ಡಿಸೆಂಬರ್ 2ರಂದು ಚುನಾವಣೆ ನಡೆಯಲಿದೆ. ಪವಾರ್ ನೇತೃತ್ವದ ಎನ್ಸಿಪಿ ಮಾಲೆಗಾಂವ್ನಲ್ಲಿ ಬಿಜೆಪಿ ಬೆಂಬಲಿತರೊಂದಿಗೆ ಮೈತ್ರಿ ಮಾಡಿಕೊಂಡಿದೆ.
ಉಡುಪಿ | ನ.23ರಿಂದ ರಂಗಭೂಮಿ ರಾಜ್ಯ ಮಟ್ಟದ ಕನ್ನಡ ನಾಟಕ ಸ್ಪರ್ಧೆ
ಉಡುಪಿ, ನ.22: ರಾಜ್ಯದ ಪ್ರತಿಷ್ಠಿತ ನಾಟಕ ಸಂಸ್ಥೆಗಳಲ್ಲಿ ಒಂದಾಗಿರುವ ರಂಗಭೂಮಿ ಉಡುಪಿ ವತಿಯಿಂದ 46ನೇ ರಾಜ್ಯಮಟ್ಟದ ಕನ್ನಡ ನಾಟಕ ಸ್ಪರ್ಧೆ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ನ.23ರಿಂದ ಡಿ.4ರ ವರೆಗೆ ನಡೆಯಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ನ.23ರಂದು ಸಂಜೆ 5 ಗಂಟೆಗೆ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಈ ನಾಟಕ ಸ್ಪರ್ಧೆಯನ್ನು ಉದ್ಘಾಟಿಸಲಿದ್ದಾರೆ. ರಂಗಭೂಮಿ ಉಡುಪಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಅತಿಥಿಗಳಾಗಿ ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷ ಡಾ.ಕೆ. ವಿ.ನಾಗರಾಜ ಮೂರ್ತಿ, ಉದ್ಯಮಿಗಳಾದ ರಂಜನ್, ಸತ್ಯಾನಂದ ನಾಯಕ್ ಹಾಗೂ ಎಂಜಿಎಂ ಕಾಲೇಜಿನ ಪ್ರಿನ್ಸಿಪಾಲ್ ಪ್ರೊ. ವನಿತಾ ಮಯ್ಯ ಭಾಗವಹಿಸಲಿದ್ದಾರೆ ಎಂದರು. ಈ ಸಂದರ್ಭದಲ್ಲಿ ನಾಡಿನ ಸಾಂಸ್ಕೃತಿಕ ರಂಗಕ್ಕೆ ಅಭೂತಪೂರ್ವ ಕೊಡುಗೆ ನೀಡಿರುವ ರಾಜ್ಯ ಜಾನಪದ ಅಕಾಡೆಮಿ ಅಧ್ಯಕ್ಷಡಾ.ಗೊಲ್ಲಹಳ್ಳಿ ಶಿವಪ್ರಸಾದ್ ಅವರನ್ನು ಸನ್ಮಾನಿಸಲಾಗುವುದು. ರಂಗಭೂಮಿಯ ಕಲಾವಿದರಿಂದ ಗೀತಂ ಗಿರೀಶ್ ನೇತೃತ್ವದಲ್ಲಿ ’ಸಂಗೀತ ಸೌರಭ’ ಕಾಠ್ಯಕ್ರಮ ಸಭಾ ಕಾರ್ಯಕ್ರಮದ ಮೊದಲು ಸಂಜೆ 4 ಗಂಟೆಗೆ ನಡೆಯಲಿದೆ ಎಂದರು. ಡಾ.ಟಿಎಂಎ ಪೈ, ಎಸ್.ಎಲ್. ನಾರಾಯಣ ಭಟ್ ಮತ್ತು ಮಲ್ಪೆ ಮಧ್ವರಾಜ ಸ್ಮಾರಕ ನಡೆಯುವ ಈ ಸ್ಪರ್ಧೆಯಲ್ಲಿ ರಾಜ್ಯದ ವಿವಿದೆಡೆಗಳಿಂದ ಅತ್ಯುತ್ತಮ 12 ತಂಡಗಳನ್ನು ಸ್ಪರ್ಧೆಗೆ ಆಯ್ಕೆ ಮಾಡಲಾಗಿದೆ. ಇದರಲ್ಲಿ ಬೆಂಗಳೂರಿನ 6, ಶಿವಮೊಗ್ಗ ಹಾಗೂ ಉಡುಪಿ ಜಿಲ್ಲೆಗಳ ತಲಾ 2 ಮತ್ತು ತುಮಕೂರು ಹಾಗೂ ಮೈಸೂರು ಜಿಲ್ಲೆಯ ತಲಾ 1 ತಂಡ ಭಾಗವಹಿಸಲಿವೆ. ಒಟ್ಟು 12 ದಿನಗಳಲ್ಲಿ 12 ನಾಟಕಗಳು ಪ್ರತಿದಿನ ಸಂಜೆ 6:30ಕ್ಕೆ ಪ್ರದರ್ಶನಗೊಳ್ಳಲಿವೆ. ಈ ಬಾರಿ ಪ್ರಥಮ ಬಹುಮಾನ ಪಡೆದ ತಂಡಕ್ಕೆ 35,000ರೂ, ದ್ವಿತೀಯ ಸ್ಥಾನಿಗೆ 25,000 ಹಾಗೂ ತೃತೀಯ ಸ್ಥಾನಿಗೆ 15,000 ರೂ. ಅಲ್ಲದೆ ಶ್ರೇಷ್ಠ ನಿರ್ದೇಶನ, ನಟ, ನಟಿ, ಪ್ರಸಾಧನ, ರಂಗಪರಿಕರ, ಸಂಗೀತ, ಬೆಳಕು, ಹಾಸ್ಯನಟ, ಬಾಲನಟ, ಶಿಸ್ತಿನ ತಂಡಗಳಿಗೆ ನಗದು ಸಹಿತ ಪುರಸ್ಕಾರ ನೀಡಲಾಗುವುದು ಎಂದರು. ಸುದ್ದಿಗೋಷ್ಠಿಯಲ್ಲಿ ರಂಗಭೂಮಿ ಉಡುಪಿ ಸಂಸ್ಥೆಯ ಉಪಾಧ್ಯಕ್ಷ ರಾಜಗೋಪಾಲ ಬಲ್ಲಾಳ್, ಪ್ರಧಾನ ಕಾರ್ಯದರ್ಶಿ ಪ್ರದೀಪ್ಚಂದ್ರ ಕುತ್ಪಾಡಿ, ವಿವೇಕಾನಂದ ಎನ್., ಯು. ಭೋಜ ಉಪಸ್ಥಿತರಿದ್ದರು. ಬಾಕ್ಸ್ ಮಾಡಿ ಪ್ರದರ್ಶನಗೊಳ್ಳುವ ನಾಟಕಗಳು ನ.23ರಂದು ಗುಬ್ಬಿವೀರಣ್ಣ ಶಿಕ್ಷಣ ಕಲಾತಂಡ ತುಮಕೂರು ಇವರಿಂದ ಗೌತಮ ಬುದ್ಧ (ನಿರ್ದೇಶನ: ಭಾನುಪ್ರಕಾಶ್ ಎಸ್.ವಿ.), ನ.24ರಂದು ಅಂತರಂಗ - ಬಹಿರಂಗ ಬೆಂಗಳೂರು ತಂಡದಿಂದ ‘ಅನುಗ್ರಹ’ (ಭಾಷ್ ರಾಘವೇಂದ್ರ), ನ.25ರಂದು ಪುನಃ ಥಿಯೇಟರ್ ಉಡುಪಿಯಿಂದ ‘ಯೋಗಿ ಮತ್ತು ಭೋಗಿ’ (ಮಹೇಶ್ ದತ್ತಾನಿ), ನ.26ರಂದು ಮೈಸೂರಿನ ನೇಪಥ್ಯ ರಂಗತಂಡದಿಂದ ‘ಒಡಲಾಳ’ (ಸಾಗರ್ ಗುಂಬಳ್ಳಿ),ನ.27ರಂದು ಸುಮನಸಾ ಕೊಡವೂರು ಉಡುಪಿ ತಂಡದಿಂದ ‘ಈದಿ’(ವಿದ್ದು ಉಚ್ಚಿಲ), ನ.28ರಂದು ಬೆಂಗಳೂರಿನ ಸಂಚಯ ತಂಡದಿಂದ ‘ವಿಶ್ವಾಮಿತ್ರ ಮೇನಕೆ ಡ್ಯಾನ್ಸ್ ಮಾಡೋದು ಏನಕೆ? (ಚಿತ್ರಶೇಖರ್ ಎನ್.ಎಸ್.). ನ.29ರಂದು ಬೆಂಗಳೂರಿನ ಕ್ರಾನಿಕಲ್ಸ್ ಆಫ್ ಇಂಡಿಯಾ ತಂಡದಿಂದ ‘ಶಿವೋಹಂ’ (ಗಣೇಶ್ ಮಂದಾರ್ತಿ), ನ.30ರಂದು ಬೆಂಗಳೂರಿನ ನಮ್ದೆ ನಟನೆ ತಂಡದಿಂದ ‘ಮಗಳೆಂಬ ಮಲ್ಲಿಗೆ’ (ರಾಜೇಂದ್ರ ಕಾರಂತ), ಡಿ.1ರಂದು ನೆನಪು ಕಲ್ಬರಲ್ ಆಂಡ್ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ಬೆಂಗಳೂರು ವತಿಯಿಂದ ‘ಮಾಯಾ ದ್ವೀಪ’ (ಪುನೀತ್ ಎ.ಎಸ್.), ಡಿ.2ರಂದು ತೀರ್ಥಹಳ್ಳಿ ನಟಮಿತ್ರರು ಹವ್ಯಾಸಿ ಕಲಾತಂಡದಿಂದ ‘ಆ ಊರು ಈ ಊರು’ (ಹುಲುಗಪ್ಪ ಕಟ್ಟೀಮನಿ), ಡಿ.3ರಂದು ಸಾಗರದ ಸ್ಪಂದನ ತಂಡ ದಿಂದ ‘ಪ್ರಾಣಪದ್ಮಿನಿ’ (ಮಂಜುನಾಥ ಎಲ್.ಬಡಿಗೇರ), ಡಿ.4ರಂದು ಬೆಂಗಳೂರು ರೇವಾ ರಂಗ ಅಧ್ಯಯನ ತಂಡದಿಂದ ‘ದರ್ಶನಂ’ (ನಂದಕುಮಾರ್ ಅನ್ನಕ್ಕನವರ್) ನಾಟಕ ಪ್ರದರ್ಶನಗೊಳ್ಳಲಿವೆ. ರಂಗಭೂಮಿ ರಾಜ್ಯ ಮಟ್ಟದ ಕನ್ನಡ ನಾಟಕ ಸ್ಪರ್ಧೆ ಉಡುಪಿ, ನ.22: ರಾಜ್ಯದ ಪ್ರತಿಷ್ಠಿತ ನಾಟಕ ಸಂಸ್ಥೆಗಳಲ್ಲಿ ಒಂದಾಗಿರುವ ರಂಗಭೂಮಿ ಉಡುಪಿ ವತಿಯಿಂದ 46ನೇ ರಾಜ್ಯಮಟ್ಟದ ಕನ್ನಡ ನಾಟಕ ಸ್ಪರ್ಧೆ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ನ.23ರಿಂದ ಡಿ.4ರ ವರೆಗೆ ನಡೆಯಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ನ.23ರಂದು ಸಂಜೆ 5 ಗಂಟೆಗೆ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಈ ನಾಟಕ ಸ್ಪರ್ಧೆಯನ್ನು ಉದ್ಘಾಟಿಸಲಿದ್ದಾರೆ. ರಂಗಭೂಮಿ ಉಡುಪಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಅತಿಥಿಗಳಾಗಿ ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷ ಡಾ.ಕೆ. ವಿ.ನಾಗರಾಜ ಮೂರ್ತಿ, ಉದ್ಯಮಿಗಳಾದ ರಂಜನ್, ಸತ್ಯಾನಂದ ನಾಯಕ್ ಹಾಗೂ ಎಂಜಿಎಂ ಕಾಲೇಜಿನ ಪ್ರಿನ್ಸಿಪಾಲ್ ಪ್ರೊ. ವನಿತಾ ಮಯ್ಯ ಭಾಗವಹಿಸಲಿದ್ದಾರೆ ಎಂದರು. ಈ ಸಂದರ್ಭದಲ್ಲಿ ನಾಡಿನ ಸಾಂಸ್ಕೃತಿಕ ರಂಗಕ್ಕೆ ಅಭೂತಪೂರ್ವ ಕೊಡುಗೆ ನೀಡಿರುವ ರಾಜ್ಯ ಜಾನಪದ ಅಕಾಡೆಮಿ ಅಧ್ಯಕ್ಷಡಾ.ಗೊಲ್ಲಹಳ್ಳಿ ಶಿವಪ್ರಸಾದ್ ಅವರನ್ನು ಸನ್ಮಾನಿಸಲಾಗುವುದು. ರಂಗಭೂಮಿಯ ಕಲಾವಿದರಿಂದ ಗೀತಂ ಗಿರೀಶ್ ನೇತೃತ್ವದಲ್ಲಿ ’ಸಂಗೀತ ಸೌರಭ’ ಕಾಠ್ಯಕ್ರಮ ಸಭಾ ಕಾರ್ಯಕ್ರಮದ ಮೊದಲು ಸಂಜೆ 4 ಗಂಟೆಗೆ ನಡೆಯಲಿದೆ ಎಂದರು. ಡಾ.ಟಿಎಂಎ ಪೈ, ಎಸ್.ಎಲ್. ನಾರಾಯಣ ಭಟ್ ಮತ್ತು ಮಲ್ಪೆ ಮಧ್ವರಾಜ ಸ್ಮಾರಕ ನಡೆಯುವ ಈ ಸ್ಪರ್ಧೆಯಲ್ಲಿ ರಾಜ್ಯದ ವಿವಿದೆಡೆಗಳಿಂದ ಅತ್ಯುತ್ತಮ 12 ತಂಡಗಳನ್ನು ಸ್ಪರ್ಧೆಗೆ ಆಯ್ಕೆ ಮಾಡಲಾಗಿದೆ. ಇದರಲ್ಲಿ ಬೆಂಗಳೂರಿನ 6, ಶಿವಮೊಗ್ಗ ಹಾಗೂ ಉಡುಪಿ ಜಿಲ್ಲೆಗಳ ತಲಾ 2 ಮತ್ತು ತುಮಕೂರು ಹಾಗೂ ಮೈಸೂರು ಜಿಲ್ಲೆಯ ತಲಾ 1 ತಂಡ ಭಾಗವಹಿಸಲಿವೆ. ಒಟ್ಟು 12 ದಿನಗಳಲ್ಲಿ 12 ನಾಟಕಗಳು ಪ್ರತಿದಿನ ಸಂಜೆ 6:30ಕ್ಕೆ ಪ್ರದರ್ಶನಗೊಳ್ಳಲಿವೆ. ಈ ಬಾರಿ ಪ್ರಥಮ ಬಹುಮಾನ ಪಡೆದ ತಂಡಕ್ಕೆ 35,000ರೂ, ದ್ವಿತೀಯ ಸ್ಥಾನಿಗೆ 25,000 ಹಾಗೂ ತೃತೀಯ ಸ್ಥಾನಿಗೆ 15,000 ರೂ. ಅಲ್ಲದೆ ಶ್ರೇಷ್ಠ ನಿರ್ದೇಶನ, ನಟ, ನಟಿ, ಪ್ರಸಾಧನ, ರಂಗಪರಿಕರ, ಸಂಗೀತ, ಬೆಳಕು, ಹಾಸ್ಯನಟ, ಬಾಲನಟ, ಶಿಸ್ತಿನ ತಂಡಗಳಿಗೆ ನಗದು ಸಹಿತ ಪುರಸ್ಕಾರ ನೀಡಲಾಗುವುದು ಎಂದರು. ಸುದ್ದಿಗೋಷ್ಠಿಯಲ್ಲಿ ರಂಗಭೂಮಿ ಉಡುಪಿ ಸಂಸ್ಥೆಯ ಉಪಾಧ್ಯಕ್ಷ ರಾಜಗೋಪಾಲ ಬಲ್ಲಾಳ್, ಪ್ರಧಾನ ಕಾರ್ಯದರ್ಶಿ ಪ್ರದೀಪ್ಚಂದ್ರ ಕುತ್ಪಾಡಿ, ವಿವೇಕಾನಂದ ಎನ್., ಯು. ಭೋಜ ಉಪಸ್ಥಿತರಿದ್ದರು. ಬಾಕ್ಸ್ ಮಾಡಿ ಪ್ರದರ್ಶನಗೊಳ್ಳುವ ನಾಟಕಗಳು ನ.23ರಂದು ಗುಬ್ಬಿವೀರಣ್ಣ ಶಿಕ್ಷಣ ಕಲಾತಂಡ ತುಮಕೂರು ಇವರಿಂದ ಗೌತಮ ಬುದ್ಧ (ನಿರ್ದೇಶನ: ಭಾನುಪ್ರಕಾಶ್ ಎಸ್.ವಿ.), ನ.24ರಂದು ಅಂತರಂಗ - ಬಹಿರಂಗ ಬೆಂಗಳೂರು ತಂಡದಿಂದ ‘ಅನುಗ್ರಹ’ (ಭಾಷ್ ರಾಘವೇಂದ್ರ), ನ.25ರಂದು ಪುನಃ ಥಿಯೇಟರ್ ಉಡುಪಿಯಿಂದ ‘ಯೋಗಿ ಮತ್ತು ಭೋಗಿ’ (ಮಹೇಶ್ ದತ್ತಾನಿ), ನ.26ರಂದು ಮೈಸೂರಿನ ನೇಪಥ್ಯ ರಂಗತಂಡದಿಂದ ‘ಒಡಲಾಳ’ (ಸಾಗರ್ ಗುಂಬಳ್ಳಿ),ನ.27ರಂದು ಸುಮನಸಾ ಕೊಡವೂರು ಉಡುಪಿ ತಂಡದಿಂದ ‘ಈದಿ’(ವಿದ್ದು ಉಚ್ಚಿಲ), ನ.28ರಂದು ಬೆಂಗಳೂರಿನ ಸಂಚಯ ತಂಡದಿಂದ ‘ವಿಶ್ವಾಮಿತ್ರ ಮೇನಕೆ ಡ್ಯಾನ್ಸ್ ಮಾಡೋದು ಏನಕೆ? (ಚಿತ್ರಶೇಖರ್ ಎನ್.ಎಸ್.). ನ.29ರಂದು ಬೆಂಗಳೂರಿನ ಕ್ರಾನಿಕಲ್ಸ್ ಆಫ್ ಇಂಡಿಯಾ ತಂಡದಿಂದ ‘ಶಿವೋಹಂ’ (ಗಣೇಶ್ ಮಂದಾರ್ತಿ), ನ.30ರಂದು ಬೆಂಗಳೂರಿನ ನಮ್ದೆ ನಟನೆ ತಂಡದಿಂದ ‘ಮಗಳೆಂಬ ಮಲ್ಲಿಗೆ’ (ರಾಜೇಂದ್ರ ಕಾರಂತ), ಡಿ.1ರಂದು ನೆನಪು ಕಲ್ಬರಲ್ ಆಂಡ್ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ಬೆಂಗಳೂರು ವತಿಯಿಂದ ‘ಮಾಯಾ ದ್ವೀಪ’ (ಪುನೀತ್ ಎ.ಎಸ್.), ಡಿ.2ರಂದು ತೀರ್ಥಹಳ್ಳಿ ನಟಮಿತ್ರರು ಹವ್ಯಾಸಿ ಕಲಾತಂಡದಿಂದ ‘ಆ ಊರು ಈ ಊರು’ (ಹುಲುಗಪ್ಪ ಕಟ್ಟೀಮನಿ), ಡಿ.3ರಂದು ಸಾಗರದ ಸ್ಪಂದನ ತಂಡ ದಿಂದ ‘ಪ್ರಾಣಪದ್ಮಿನಿ’ (ಮಂಜುನಾಥ ಎಲ್.ಬಡಿಗೇರ), ಡಿ.4ರಂದು ಬೆಂಗಳೂರು ರೇವಾ ರಂಗ ಅಧ್ಯಯನ ತಂಡದಿಂದ ‘ದರ್ಶನಂ’ (ನಂದಕುಮಾರ್ ಅನ್ನಕ್ಕನವರ್) ನಾಟಕ ಪ್ರದರ್ಶನಗೊಳ್ಳಲಿವೆ. ರಂಗಭೂಮಿ ರಾಜ್ಯ ಮಟ್ಟದ ಕನ್ನಡ ನಾಟಕ ಸ್ಪರ್ಧೆ ಉಡುಪಿ, ನ.22: ರಾಜ್ಯದ ಪ್ರತಿಷ್ಠಿತ ನಾಟಕ ಸಂಸ್ಥೆಗಳಲ್ಲಿ ಒಂದಾಗಿರುವ ರಂಗಭೂಮಿ ಉಡುಪಿ ವತಿಯಿಂದ 46ನೇ ರಾಜ್ಯಮಟ್ಟದ ಕನ್ನಡ ನಾಟಕ ಸ್ಪರ್ಧೆ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ನ.23ರಿಂದ ಡಿ.4ರ ವರೆಗೆ ನಡೆಯಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ನ.23ರಂದು ಸಂಜೆ 5 ಗಂಟೆಗೆ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಈ ನಾಟಕ ಸ್ಪರ್ಧೆಯನ್ನು ಉದ್ಘಾಟಿಸಲಿದ್ದಾರೆ. ರಂಗಭೂಮಿ ಉಡುಪಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಅತಿಥಿಗಳಾಗಿ ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷ ಡಾ.ಕೆ. ವಿ.ನಾಗರಾಜ ಮೂರ್ತಿ, ಉದ್ಯಮಿಗಳಾದ ರಂಜನ್, ಸತ್ಯಾನಂದ ನಾಯಕ್ ಹಾಗೂ ಎಂಜಿಎಂ ಕಾಲೇಜಿನ ಪ್ರಿನ್ಸಿಪಾಲ್ ಪ್ರೊ. ವನಿತಾ ಮಯ್ಯ ಭಾಗವಹಿಸಲಿದ್ದಾರೆ ಎಂದರು. ಈ ಸಂದರ್ಭದಲ್ಲಿ ನಾಡಿನ ಸಾಂಸ್ಕೃತಿಕ ರಂಗಕ್ಕೆ ಅಭೂತಪೂರ್ವ ಕೊಡುಗೆ ನೀಡಿರುವ ರಾಜ್ಯ ಜಾನಪದ ಅಕಾಡೆಮಿ ಅಧ್ಯಕ್ಷಡಾ.ಗೊಲ್ಲಹಳ್ಳಿ ಶಿವಪ್ರಸಾದ್ ಅವರನ್ನು ಸನ್ಮಾನಿಸಲಾಗುವುದು. ರಂಗಭೂಮಿಯ ಕಲಾವಿದರಿಂದ ಗೀತಂ ಗಿರೀಶ್ ನೇತೃತ್ವದಲ್ಲಿ ’ಸಂಗೀತ ಸೌರಭ’ ಕಾಠ್ಯಕ್ರಮ ಸಭಾ ಕಾರ್ಯಕ್ರಮದ ಮೊದಲು ಸಂಜೆ 4 ಗಂಟೆಗೆ ನಡೆಯಲಿದೆ ಎಂದರು. ಡಾ.ಟಿಎಂಎ ಪೈ, ಎಸ್.ಎಲ್. ನಾರಾಯಣ ಭಟ್ ಮತ್ತು ಮಲ್ಪೆ ಮಧ್ವರಾಜ ಸ್ಮಾರಕ ನಡೆಯುವ ಈ ಸ್ಪರ್ಧೆಯಲ್ಲಿ ರಾಜ್ಯದ ವಿವಿದೆಡೆಗಳಿಂದ ಅತ್ಯುತ್ತಮ 12 ತಂಡಗಳನ್ನು ಸ್ಪರ್ಧೆಗೆ ಆಯ್ಕೆ ಮಾಡಲಾಗಿದೆ. ಇದರಲ್ಲಿ ಬೆಂಗಳೂರಿನ 6, ಶಿವಮೊಗ್ಗ ಹಾಗೂ ಉಡುಪಿ ಜಿಲ್ಲೆಗಳ ತಲಾ 2 ಮತ್ತು ತುಮಕೂರು ಹಾಗೂ ಮೈಸೂರು ಜಿಲ್ಲೆಯ ತಲಾ 1 ತಂಡ ಭಾಗವಹಿಸಲಿವೆ. ಒಟ್ಟು 12 ದಿನಗಳಲ್ಲಿ 12 ನಾಟಕಗಳು ಪ್ರತಿದಿನ ಸಂಜೆ 6:30ಕ್ಕೆ ಪ್ರದರ್ಶನಗೊಳ್ಳಲಿವೆ. ಈ ಬಾರಿ ಪ್ರಥಮ ಬಹುಮಾನ ಪಡೆದ ತಂಡಕ್ಕೆ 35,000ರೂ, ದ್ವಿತೀಯ ಸ್ಥಾನಿಗೆ 25,000 ಹಾಗೂ ತೃತೀಯ ಸ್ಥಾನಿಗೆ 15,000 ರೂ. ಅಲ್ಲದೆ ಶ್ರೇಷ್ಠ ನಿರ್ದೇಶನ, ನಟ, ನಟಿ, ಪ್ರಸಾಧನ, ರಂಗಪರಿಕರ, ಸಂಗೀತ, ಬೆಳಕು, ಹಾಸ್ಯನಟ, ಬಾಲನಟ, ಶಿಸ್ತಿನ ತಂಡಗಳಿಗೆ ನಗದು ಸಹಿತ ಪುರಸ್ಕಾರ ನೀಡಲಾಗುವುದು ಎಂದರು. ಸುದ್ದಿಗೋಷ್ಠಿಯಲ್ಲಿ ರಂಗಭೂಮಿ ಉಡುಪಿ ಸಂಸ್ಥೆಯ ಉಪಾಧ್ಯಕ್ಷ ರಾಜಗೋಪಾಲ ಬಲ್ಲಾಳ್, ಪ್ರಧಾನ ಕಾರ್ಯದರ್ಶಿ ಪ್ರದೀಪ್ಚಂದ್ರ ಕುತ್ಪಾಡಿ, ವಿವೇಕಾನಂದ ಎನ್., ಯು. ಭೋಜ ಉಪಸ್ಥಿತರಿದ್ದರು. ಬಾಕ್ಸ್ ಮಾಡಿ ಪ್ರದರ್ಶನಗೊಳ್ಳುವ ನಾಟಕಗಳು ನ.23ರಂದು ಗುಬ್ಬಿವೀರಣ್ಣ ಶಿಕ್ಷಣ ಕಲಾತಂಡ ತುಮಕೂರು ಇವರಿಂದ ಗೌತಮ ಬುದ್ಧ (ನಿರ್ದೇಶನ: ಭಾನುಪ್ರಕಾಶ್ ಎಸ್.ವಿ.), ನ.24ರಂದು ಅಂತರಂಗ - ಬಹಿರಂಗ ಬೆಂಗಳೂರು ತಂಡದಿಂದ ‘ಅನುಗ್ರಹ’ (ಭಾಷ್ ರಾಘವೇಂದ್ರ), ನ.25ರಂದು ಪುನಃ ಥಿಯೇಟರ್ ಉಡುಪಿಯಿಂದ ‘ಯೋಗಿ ಮತ್ತು ಭೋಗಿ’ (ಮಹೇಶ್ ದತ್ತಾನಿ), ನ.26ರಂದು ಮೈಸೂರಿನ ನೇಪಥ್ಯ ರಂಗತಂಡದಿಂದ ‘ಒಡಲಾಳ’ (ಸಾಗರ್ ಗುಂಬಳ್ಳಿ),ನ.27ರಂದು ಸುಮನಸಾ ಕೊಡವೂರು ಉಡುಪಿ ತಂಡದಿಂದ ‘ಈದಿ’(ವಿದ್ದು ಉಚ್ಚಿಲ), ನ.28ರಂದು ಬೆಂಗಳೂರಿನ ಸಂಚಯ ತಂಡದಿಂದ ‘ವಿಶ್ವಾಮಿತ್ರ ಮೇನಕೆ ಡ್ಯಾನ್ಸ್ ಮಾಡೋದು ಏನಕೆ? (ಚಿತ್ರಶೇಖರ್ ಎನ್.ಎಸ್.). ನ.29ರಂದು ಬೆಂಗಳೂರಿನ ಕ್ರಾನಿಕಲ್ಸ್ ಆಫ್ ಇಂಡಿಯಾ ತಂಡದಿಂದ ‘ಶಿವೋಹಂ’ (ಗಣೇಶ್ ಮಂದಾರ್ತಿ), ನ.30ರಂದು ಬೆಂಗಳೂರಿನ ನಮ್ದೆ ನಟನೆ ತಂಡದಿಂದ ‘ಮಗಳೆಂಬ ಮಲ್ಲಿಗೆ’ (ರಾಜೇಂದ್ರ ಕಾರಂತ), ಡಿ.1ರಂದು ನೆನಪು ಕಲ್ಬರಲ್ ಆಂಡ್ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ಬೆಂಗಳೂರು ವತಿಯಿಂದ ‘ಮಾಯಾ ದ್ವೀಪ’ (ಪುನೀತ್ ಎ.ಎಸ್.), ಡಿ.2ರಂದು ತೀರ್ಥಹಳ್ಳಿ ನಟಮಿತ್ರರು ಹವ್ಯಾಸಿ ಕಲಾತಂಡದಿಂದ ‘ಆ ಊರು ಈ ಊರು’ (ಹುಲುಗಪ್ಪ ಕಟ್ಟೀಮನಿ), ಡಿ.3ರಂದು ಸಾಗರದ ಸ್ಪಂದನ ತಂಡ ದಿಂದ ‘ಪ್ರಾಣಪದ್ಮಿನಿ’ (ಮಂಜುನಾಥ ಎಲ್.ಬಡಿಗೇರ), ಡಿ.4ರಂದು ಬೆಂಗಳೂರು ರೇವಾ ರಂಗ ಅಧ್ಯಯನ ತಂಡದಿಂದ ‘ದರ್ಶನಂ’ (ನಂದಕುಮಾರ್ ಅನ್ನಕ್ಕನವರ್) ನಾಟಕ ಪ್ರದರ್ಶನಗೊಳ್ಳಲಿವೆ.
ನ.24-26: ಉಡುಪಿಯಲ್ಲಿ 45ನೇ ಮಂಗಳೂರು ವಿವಿ ಅಥ್ಲೆಟಿಕ್ ಕ್ರೀಡಾಕೂಟ
ಉಡುಪಿ, ನ.22 : 45ನೇ ಮಂಗಳೂರು ವಿವಿ ಅಂತರ ಕಾಲೇಜು ಪುರುಷರ ಮತ್ತು ಮಹಿಳೆಯರ ಅಥ್ಲೆಟಿಕ್ ಚಾಂಪಿಯನ್ ಶಿಪ್ 2025-26 ಮಂಗಳೂರು ವಿವಿ ದೈಹಿಕ ಶಿಕ್ಷಣ ವಿಭಾಗ ಹಾಗೂ ಉಡುಪಿಯ ಡಾ.ಜಿ. ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರಗಳ ಸಹಭಾಗಿತ್ವದಲ್ಲಿ ನ.24ರಿಂದ 26ರವರೆಗೆ ಅಜ್ಜರಕಾಡಿನ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಆತಿಥೇಯ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಸೋಜನ್ ಕೆ.ಜಿ. ತಿಳಿಸಿದ್ದಾರೆ. ಉಡುಪಿ ಪ್ರೆಸ್ ಕ್ಲಬ್ ನಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಅವರು, ನ.24ರಂದು ಜಿಲ್ಲಾ ಮಟ್ಟದ ವಿಶೇಷ ಮಕ್ಕಳ ಕ್ರೀಡಾಕೂಟ ನಡೆಯಲಿದ್ದು, ಜಿಲ್ಲೆಯಾದ್ಯಂತ ಇರುವ ವಿಶೇಷ ಶಾಲೆಗಳ 500ಕ್ಕೂ ಅಧಿಕ ಮಕ್ಕಳು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ. ವಿಶೇಷ ಮಕ್ಕಳ ಕ್ರೀಡಾಚಟುವಟಿಕೆಗಳಿಗೆ ವೇದಿಕೆ ಒದಗಿಸುವುದು ಹಾಗೂ ವಿಶೇಷ ಮಕ್ಕಳ ಉಸ್ತುವಾರಿ ಶಿಕ್ಷಕರನ್ನು ಗೌರವಿಸುವುದು ಇದರಲ್ಲಿ ಉದ್ದೇಶವಾಗಿದೆ ಎಂದರು. ನ.25 ಮತ್ತು 26ರಂದು ಮಂಗಳೂರು ವಿವಿ ಅಂತರ ಕಾಲೇಜು ಪುರುಷ ಮತ್ತು ಮಹಿಳಾ ಅಥ್ಲೆಟಿಕ್ ಸ್ಪರ್ಧೆಗಳು ನಡೆಯಲಿವೆ. ಮಂಗಳೂರು ವಿವಿ ವ್ಯಾಪ್ತಿಯ ಮೂರು ಜಿಲ್ಲೆಗಳ ಕಾಲೇಜುಗಳ 1000ಕ್ಕೂ ಅಧಿಕ ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಲಿದ್ದಾರೆ. ಇವರೊಂದಿಗೆ 150ಕ್ಕೂ ಅಧಿಕ ಕ್ರೀಡಾ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ ಎಂದವರು ಹೇಳಿದರು. ಮಂಗಳೂರು ವಿವಿ, ಇತ್ತೀಚಿನ ಹಲವು ವರ್ಷಗಳಲ್ಲಿ ಅಖಿಲ ಭಾರತ ಅಂತರ ವಿವಿ ಅಥ್ಲೆಟಿಕ್ ಚಾಂಪಿಯನ್ ಶಿಪ್ ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಚಾಂಪಿಯನ್ ತಂಡವಾಗಿ ಮೂಡಿಬರುತಿದ್ದು, ಹೀಗಾಗಿ ಈ ಬಾರಿಯ ವಿವಿ ತಂಡದ ಆಯ್ಕೆಗೆ ಮಾನದಂಡವಾಗಿ ಈ ಕೂಟ ವಿಶೇಷ ಮಹತ್ವ ಪಡೆದಿದೆ ಎಂದರು. ಪ್ರೊ.ಕಿಶೋರ್ ಹೆಸರಿನಲ್ಲಿ ರೋಲಿಂಗ್ ಟ್ರೋಫಿ : ಮಂಗಳೂರು ವಿವಿ ಅಥ್ಲೆಟಿಕ್ ಕೂಟದಲ್ಲಿ ಪುರುಷರ ವಿಭಾಗದ ತಂಡ ಪ್ರಶಸ್ತಿ ಪಡೆಯುವ ತಂಡಕ್ಕೆ ಸೈಂಟ್ ಫಿಲೋಮಿನಾ ಕಾಲೇಜು ಪುತ್ತೂರಿನ ನೀಡಿದ ಟ್ರೋಫಿ ಹಾಗೂ ಮಹಿಳಾ ವಿಭಾಗದ ಚಾಂಪಿಯನ್ ತಂಡಕ್ಕೆ ಮಣಿಪಾಲದ ಅಕಾಡೆಮಿ ಆಫ್ ಜನರಲ್ ಎಜ್ಯುಕೇಷನ್ ನೀಡಿದ ಟ್ರೋಫಿಯನ್ನು ನೀಡಲಾಗುತ್ತಿದೆ. ಇದೀಗ ಚಾಂಪಿಯನ್ಷಿಪ್ನಲ್ಲಿ ಸಮಗ್ರ ಪ್ರಶಸ್ತಿಯನ್ನು ಗೆಲ್ಲುವ ತಂಡಕ್ಕೆ ಇದೇ ಮೊದಲ ಬಾರಿ ಪ್ರೊ.ಕಿಶೋರ್ ಕುಮಾರ್ ಸಿ.ಕೆ.ಹೆಸರಿನಲ್ಲಿ ರೋಲಿಂಗ್ ಟ್ರೋಫಿಯನ್ನು ನೀಡಲಾಗುತ್ತದೆ. ಈ ಟ್ರೋಫಿಯ ಅನಾವರಣವೂ ನ.25ರಂದು ಬೆಳಗ್ಗೆ 9:30ಕ್ಕೆ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿದೆ. ಮೂಡಬಿದರೆ ಆಳ್ವಾಸ್ ನ ಡಾ.ಮೋಹನ್ ಆಳ್ವ ಈ ಟ್ರೋಫಿಯನ್ನು ಅನಾವರಣಗೊಳಿಸುವರು ಎಂದರು. ಮಂಗಳೂರು ವಿವಿ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕರಾಗಿ ಬಹುಕಾಲ ಸೇವೆ ಸಲ್ಲಿಸಿದ್ದ ಪ್ರೊ.ಕಿಶೋರ್ ಕುಮಾರ್ ಸಿ.ಕೆ. ಬಳಿಕ ರಿಜಿಸ್ಟ್ರಾರ್ ಆಗಿ ಹಾಗೂ ಉಪಕುಲಪತಿಗಳಾಗಿಯೂ ಸೇವೆ ಸಲ್ಲಿಸಿದ್ದರು. ಅವರು ಕಳೆದ ಅ.5ರಂದು ನಿಧನರಾದ ಹಿನ್ನೆಲೆಯಲ್ಲಿ ಅವರ ಹೆಸರಿನಲ್ಲಿ ಈ ಬೆಳ್ಳಿಯ ಟ್ರೋಫಿಯನ್ನು ಅವರ ಅಭಿಮಾನಿಗಳು ನೀಡಿದ್ದಾರೆ ಎಂದು ಪ್ರೊ.ಸೋಜನ್ ತಿಳಿಸಿದರು. ನ.24ರ ವಿಶೇಷ ಮಕ್ಕಳ ಕ್ರೀಡಾಕೂಟವನ್ನು ಶಾಸಕ ಯಶಪಾಲ್ ಸುವರ್ಣ ಉದ್ಘಾಟಿಸಿದರೆ, ನ.25ರ ಮಂಗಳೂರು ವಿವಿ ಅಥ್ಲೆಟಿಕ್ ಕೂಟವನ್ನು ಬೆಳಗ್ಗೆ 9:30ಕ್ಕೆ ಮಂಗಳೂರು ವಿವಿ ಕುಲಪತಿಗಳಾದ ಡಾ.ಪಿ.ಎಲ್.ಧರ್ಮ ಉದ್ಘಾಟಿಸುವರು. ಮಂಗಳೂರು ವಿಭಾಗ ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕಿ ಪ್ರೊ.ಕೆ.ಆರ್.ಕವಿತಾ, ಉದ್ಯಮಿ ಡಾ.ಜಿ.ಶಂಕರ್, ಡಾ.ಮೋಹನ್ ಆಳ್ವ ಅವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು ಎಂದರು. ಕ್ರೀಡಾಕೂಟದ ಸಮಾರೋಪ ಸಮಾರಂಭ ನ.26ರ ಅಪರಾಹ್ನ 3:30ಕ್ಕೆ ನಡೆಯಲಿದ್ದು, ಮಂಗಳೂರು ವಿವಿ ರಿಜಿಸ್ಟ್ರಾರ್ ರಾಜು ಮೊಗವೀರ, ಉಡುಪಿಯ ಎಡಿಸಿ ಅಬಿದ್ ಗದ್ಯಾಳ್, ಮೂಡಬಿದರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಟ್ರಸ್ಟಿ ವಿವೇಕ್ ಆಳ್ವ, ಉದ್ಯಮಿ ಹರಿಯಪ್ಪ ಕೋಟ್ಯಾನ್, ಮಂಗಳೂರು ವಿವಿ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಜೆರಾಲ್ಡ್ ಸಂತೋಷ ಡಿಸೋಜ ಹಾಗೂ ಇತರರು ಭಾಗವಹಿಸಲಿದ್ದಾರೆ ಎಂದು ಪ್ರೊ. ಸೋಜನ್ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಕಾಲೇಜಿನ ಸಮಾಜಶಾಸ್ತ್ರ ವಿಭಾಗ ಮುಖ್ಯಸ್ಥ ಡಾ.ರಾಜೇಂದ್ರ ಕೆ., ಪ್ರೊ.ಕೃಷ್ಣ ಭಟ್, ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕ ಸಚ್ಚೇಂದ್ರ,ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ರಾಮಚಂದ್ರ ಪಾಟ್ಕರ್ ಉಪಸ್ಥಿತರಿದ್ದರು.
100 ವರ್ಷಗಳ ನಂತರ ಎರಡೇ ದಿನದಲ್ಲಿ ಅಂತ್ಯಗೊಂಡ ಪಂದ್ಯ
ಪರ್ತ್, ನ.22: ಮೊದಲ ಆ್ಯಶಸ್ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯ ತಂಡವು ಎರಡು ದಿನದೊಳಗೆ ಇಂಗ್ಲೆಂಡ್ ತಂಡವನ್ನು 8 ವಿಕೆಟ್ ಗಳ ಅಂತರದಿಂದ ಮಣಿಸಿದೆ.100ಕ್ಕೂ ಅಧಿಕ ವರ್ಷಗಳ ನಂತರ ಆ್ಯಶಸ್ ಪಂದ್ಯವು ಬೇಗನೆ ಕೊನೆಗೊಂಡಿದೆ. 1921ರಲ್ಲಿ ನಾಟಿಂಗ್ಹ್ಯಾಮ್ನಲ್ಲಿ ಆಸ್ಟ್ರೇಲಿಯ ತಂಡವು ಇಂಗ್ಲೆಂಡ್ ವಿರುದ್ದ ಎರಡು ದಿನದೊಳಗೆ ಪಂದ್ಯವನ್ನು ಜಯಿಸಿತ್ತು. ಗೆಲ್ಲಲು 205 ರನ್ ಗುರಿ ಪಡೆದಿದ್ದ ಆಸ್ಟ್ರೇಲಿಯ ತಂಡವು ಸುಲಭವಾಗಿ ಗೆಲುವಿನ ದಡ ಸೇರಿತು.
ಭಾರತ 38ನೇ ಟೆಸ್ಟ್ ನಾಯಕನಾದ ರಿಷಭ್ ಪಂತ್
ಗುವಾಹಟಿ, ನ.22: ಶುಭಮನ್ ಗಿಲ್ ದಕ್ಷಿಣ ಆಫ್ರಿಕಾ ವಿರುದ್ಧ ಶನಿವಾರ ಆರಂಭವಾದ ದ್ವಿತೀಯ ಟೆಸ್ಟ್ ಪಂದ್ಯದಿಂದ ಹೊರಗುಳಿದ ಹಿನ್ನೆಲೆಯಲ್ಲಿ ರಿಷಬ್ ಪಂತ್ ಭಾರತದ 38ನೇ ನಾಯಕನಾಗಿ ತಂಡವನ್ನು ಮುನ್ನಡೆಸಿದರು. ಗಿಲ್ ಎರಡನೇ ಟೆಸ್ಟ್ ಪಂದ್ಯವನ್ನಾಡಲು ಸಂಪೂರ್ಣ ಫಿಟ್ ಇರಲಿಲ್ಲ. ಅವರು ಕುತ್ತಿಗೆ ನೋವಿನ ಬಗ್ಗೆ ಹೆಚ್ಚಿನ ತಪಾಸಣೆಗಾಗಿ ಮುಂಬೈಗೆ ತೆರಳಿದ್ದಾರೆ. ಇಂಗ್ಲೆಂಡ್ ವಿರುದ್ದ ಆ್ಯಂಡರ್ಸನ್-ತೆಂಡುಲ್ಕರ್ ಟ್ರೋಫಿಯ ವೇಳೆ ಭಾರತದ ಟೆಸ್ಟ್ ನಾಯಕತ್ವವನ್ನು ವಹಿಸಿಕೊಂಡಿರುವ ಗಿಲ್ ಅವರು ಕೋಲ್ಕತಾ ಟೆಸ್ಟ್ ಸಂದರ್ಭ ಕುತ್ತಿಗೆ ನೋವಿಗೆ ಒಳಗಾಗಿದ್ದರು. ಟೆಸ್ಟ್ ಕ್ರಿಕೆಟ್ನಿಂದ ನಿವೃತ್ತಿಯಾಗಿರುವ ವಿರಾಟ್ ಕೊಹ್ಲಿ ಅವರು ಭಾರತದ ಪರ ಅತ್ಯಂತ ಹೆಚ್ಚು ಪಂದ್ಯಗಳಲ್ಲಿ(68)ನಾಯಕತ್ವವಹಿಸಿದ್ದಾರೆ. ಭಾರತದ ಟೆಸ್ಟ್ ನಾಯಕರ ಪಟ್ಟಿ : 1. ಸಿ.ಕೆ. ನಾಯ್ಡು, 2.ವಿಜಯನಗರದ ರಾಜಕುಮಾರ,3. ಐಎಕೆ ಪಟೌಡಿ, 4. ಲಾಲಾ ಅಮರನಾಥ್, 5. ವಿಜಯ ಹಝಾರೆ, 6. ವಿನೂ ಮಂಕಡ್, 7. ಗುಲಾಂ ಅಹ್ಮದ್, 8. ಪಾಲಿ ಉಮ್ರಿಗರ್, 9. ಹೆಮು ಅಧಿಕಾರಿ, 10.ದತ್ತ ಗಾಯಕ್ವಾಡ್, 11. ಪಂಕಜ್ ರಾಯ್, 12. ರಾಮಚಂದ್, 13. ನಾರಿ ಕಾಂಟ್ರಾಕ್ಟರ್, 14. ಎಂಐಎಕೆ ಪಟೌಡಿ, 15. ಚಂದು ಬೋರ್ಡೆ, 16. ಅಜಿತ್ ವಾಡೆಕರ್, 17. ವೆಂಕಟರಾಘವನ್, 18. ಸುನೀಲ್ ಗವಾಸ್ಕರ್, 19. ಬಿಶನ್ ಸಿಂಗ್ ಬೇಡಿ, 20. ಗುಂಡಪ್ಪ ವಿಶ್ವನಾಥ್, 21. ಕಪಿಲ್ ದೇವ್, 22. ದಿಲಿಪ್ ವೆಂಗ್ಸರ್ಕಾರ್, 23. ರವಿ ಶಾಸ್ತ್ರಿ, 24. ಕೆ. ಶ್ರೀಕಾಂತ್, 25. ಮುಹಮ್ಮದ್ ಅಝರುದ್ದೀನ್, 26. ಸಚಿನ್ ತೆಂಡುಲ್ಕರ್, 27. ಸೌರವ್ ಗಂಗುಲಿ, 28. ರಾಹುಲ್ ದ್ರಾವಿಡ್, 29. ವೀರೇಂದ್ರ ಸೆಹ್ವಾಗ್, 30. ಅನಿಲ್ ಕುಂಬ್ಳೆ, 31. ಎಂ.ಎಸ್. ಧೋನಿ, 32. ವಿರಾಟ್ ಕೊಹ್ಲಿ, 33. ಅಜಿಂಕ್ಯ ರಹಾನೆ, 34. ಕೆ.ಎಲ್.ರಾಹುಲ್, 35. ರೋಹಿತ್ ಶರ್ಮಾ, 36. ಜಸ್ಪ್ರಿತ್ ಬುಮ್ರಾ, 37. ಶುಭಮನ್ ಗಿಲ್, 38. ರಿಷಭ್ ಪಂತ್.
ಕುಲದೀಪ್ ಯಾದವ್ ಕೈಚಳಕ | ದ್ವಿತೀಯ ಟೆಸ್ಟ್: ದಕ್ಷಿಣ ಆಫ್ರಿಕಾ 247/6
ಗುವಾಹಟಿ, ನ.22: ಸ್ಪಿನ್ನರ್ ಕುಲದೀಪ್ ಯಾದವ್(3-48)ಅವರ ಕೈಚಳಕದ ನೆರವಿನಿಂದ ಟೀಮ್ ಇಂಡಿಯಾ ಶನಿವಾರ ಆರಂಭವಾದ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನದಾಟದಂತ್ಯಕ್ಕೆ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡವನ್ನು 6 ವಿಕೆಟ್ ಗಳ ನಷ್ಟಕ್ಕೆ 247 ರನ್ ಗೆ ನಿಯಂತ್ರಿಸಿದೆ. ಭಾರತದ ನೆಲದಲ್ಲಿ 25 ವರ್ಷಗಳಲ್ಲಿ ಮೊದಲ ಬಾರಿ ಟೆಸ್ಟ್ ಸರಣಿಯನ್ನು ಗೆಲ್ಲುವ ಕನಸು ಕಾಣುತ್ತಿರುವ ದಕ್ಷಿಣ ಆಫ್ರಿಕಾ ತಂಡವು ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ಟ್ರಿಸ್ಟನ್ ಸ್ಟಬ್ಸ್(49 ರನ್, 112 ಎಸೆತ, 4 ಬೌಂಡರಿ, 2 ಸಿಕ್ಸರ್)ಹಾಗೂ ನಾಯಕ ಟೆಂಬಾ ಬವುಮಾ(41 ರನ್, 92 ಎಸೆತ, 5 ಬೌಂಡರಿ)ಮೂರನೇ ವಿಕೆಟ್ಗೆ 84 ರನ್ ಗಳಿಸಿ ತಂಡವು ಮೊದಲ ದಿನದಾಟದಂತ್ಯಕ್ಕೆ ಗೌರವಾರ್ಹ ಮೊತ್ತ ಕಲೆ ಹಾಕಲು ನೆರವಾದರು. ದಕ್ಷಿಣ ಆಫ್ರಿಕಾದ ಎಲ್ಲ ಬ್ಯಾಟರ್ಗಳು ಉತ್ತಮ ಆರಂಭ ಪಡೆದಿದ್ದರು. ಆದರೆ ಯಾರೂ ಕೂಡ ಅರ್ಧಶತಕವನ್ನು ಗಳಿಸಲಿಲ್ಲ. ವಿಶ್ವ ಟೆಸ್ಟ್ ಚಾಂಪಿಯನ್ ದಕ್ಷಿಣ ಆಫ್ರಿಕಾ ತಂಡವು ಕೋಲ್ಕತಾದ ಈಡನ್ ಗಾರ್ಡನ್ಸ್ನಲ್ಲಿ ನಡೆದ ಎರಡು ಪಂದ್ಯಗಳ ಸರಣಿಯ ಮೊದಲ ಪಂದ್ಯವನ್ನು 30 ರನ್ ಅಂತರದಿಂದ ಗೆದ್ದುಕೊಂಡು 1-0 ಮುನ್ನಡೆ ಸಾಧಿಸಿದೆ. ಸ್ಟಬ್ಸ್ ವಿಕೆಟನ್ನು ಉರುಳಿಸಿದ ಕುಲದೀಪ್ ಅರ್ಧಶತಕವನ್ನು ನಿರಾಕರಿಸಿದರು. ಎಡಗೈ ಸ್ಪಿನ್ನರ್ ರವೀಂದ್ರ ಜಡೇಜ ಅವರು ಬವುಮಾಗೆ ಪೆವಿಲಿಯನ್ ಹಾದಿ ತೋರಿಸಿದರು. ಎಡಗೈ ಸ್ಪಿನ್ನರ್ ಕುಲದೀಪ್(3-48) ವಿಯಾನ್ ಮುಲ್ದರ್(13 ರನ್)ವಿಕೆಟನ್ನು ಕಬಳಿಸಿದರೆ, ಮುಹಮ್ಮದ್ ಸಿರಾಜ್ ಅವರು ಎರಡನೇ ಹೊಸ ಚೆಂಡಿನಲ್ಲಿ ಟೋನಿ ಡಿ ರೆರ್ಝಿ(28 ರನ್)ವಿಕೆಟನ್ನು ಉರುಳಿಸಿ ದಕ್ಷಿಣ ಆಫ್ರಿಕಾ ತಂಡಕ್ಕೆ ಇನ್ನಷ್ಟು ಒತ್ತಡ ಹೇರಿದರು. ಮಂದ ಬೆಳಕಿನಿಂದಾಗಿ 81.5 ಓವರ್ಗಳ ಪಂದ್ಯವನ್ನು ಮಾತ್ರ ಆಡಲು ಸಾಧ್ಯವಾಗಿದ್ದು ಎಡಗೈ ಬ್ಯಾಟರ್ ಎಸ್. ಮುತ್ತುಸ್ವಾಮಿ(25 ರನ್)ಹಾಗೂ ವಿಕೆಟ್ಕೀಪರ್-ಬ್ಯಾಟರ್ ಕೈಲ್ ವೆರ್ರೆನ್ನೆ(1 ರನ್)ಕ್ರೀಸ್ ಕಾಯ್ದುಕೊಂಡಿದ್ದಾರೆ. ಏಡೆನ್ ಮರ್ಕ್ರಮ್(38 ರನ್, 81 ಎಸೆತ, 5 ಬೌಂಡರಿ)ಹಾಗೂ ರಯಾನ್ ರಿಕೆಲ್ಟನ್(35 ರನ್, 82 ಎಸೆತ, 5 ಬೌಂಡರಿ)ಆರಂಭಿಕ ವಿಕೆಟ್ಗೆ 82 ರನ್ ಸೇರಿಸಿ ಉತ್ತಮ ಆರಂಭ ಒದಗಿಸಿದರು. ಮರ್ಕ್ರಮ್ರನ್ನು ಕ್ಲೀನ್ಬೌಲ್ಡ್ ಮಾಡಿದ ಜಸ್ಪ್ರಿತ್ ಬುಮ್ರಾ ಈ ಜೋಡಿಯನ್ನು ಬೇರ್ಪಡಿಸಿದರು. ಮರ್ಕ್ರಮ್ ಔಟಾದ ಬೆನ್ನಿಗೆ ರಿಕೆಲ್ಟನ್ ಅವರು ಕುಲದೀಪ್ಗೆ ವಿಕೆಟ್ ಒಪ್ಪಿಸಿದರು. ಮೂರನೇ ಕ್ರಮಾಂಕದಲ್ಲಿ ಭಡ್ತಿ ಪಡೆದು ಬಂದ ಸ್ಟಬ್ಸ್ ಹಾಗೂ ಬವುಮಾ ಭಾರತೀಯ ಸ್ಪಿನ್ನರ್ಗಳ ವಿರುದ್ಧ ಎಚ್ಚರಿಕೆಯ ಆಟವಾಡಿ ನಿರಂತರ ಬೌಂಡರಿಗಳ ಮೂಲಕ ಇನಿಂಗ್ಸ್ ಬೆಳೆಸಿದರು. ಜಡೇಜ ಫಾರ್ಮ್ ನಲ್ಲಿರುವ ಬವುಮಾ ವಿಕೆಟನ್ನು ಉರುಳಿಸುವಲ್ಲಿ ಯಶಸ್ವಿಯಾದರು. ಬವುಮಾ ಕೋಲ್ಕತಾದಲ್ಲಿ ನಡೆದಿದ್ದ ಮೊದಲ ಟೆಸ್ಟ್ ಪಂದ್ಯದಲ್ಲಿ ಅರ್ಧಶತಕ ಗಳಿಸಿದ್ದ ಏಕೈಕ ಆಟಗಾರನಾಗಿದ್ದರು. ಜಡೇಜ ಬೌಲಿಂಗ್ನಲ್ಲಿ ಸಿಕ್ಸರ್ ಸಿಡಿಸಿದ ಸ್ಟಬ್ಸ್ ಇನಿಂಗ್ಸ್ ಮತ್ತಷ್ಟು ಹಿಗ್ಗಿಸುವ ಪ್ರಯತ್ನದಲ್ಲಿದ್ದರು. ಆದರೆ ಅವರು ಕುಲದೀಪ್ ಸ್ಪಿನ್ ಮೋಡಿಗೆ ವಿಕೆಟ್ ಒಪ್ಪಿಸಿದರು. ದಕ್ಷಿಣ ಆಫ್ರಿಕಾ ತಂಡವು 201 ರನ್ಗೆ ಐದು ವಿಕೆಟ್ಗಳನ್ನು ಕಳೆದುಕೊಂಡಿತು. ಆಗ ಆರನೇ ವಿಕೆಟ್ಗೆ 45 ರನ್ ಸೇರಿಸಿದ ಟೋನಿ ಡಿ ರೆರ್ಝಿ ಹಾಗೂ ಮುತ್ತುಸ್ವಾಮಿ ತಂಡವನ್ನು ಆಧರಿಸಿದರು. ರೆರ್ಝಿ ವಿಕೆಟನ್ನು ಪಡೆದ ಸಿರಾಜ್ ಈ ಜೋಡಿಯನ್ನು ಬೇರ್ಪಡಿಸಿದರು. ಪಂದ್ಯವು ನಿಗದಿತ ಸಮಯಕ್ಕಿಂತ 30 ನಿಮಿಷ ಮೊದಲೇ ಆರಂಭವಾಗಿದ್ದು, ಲಂಚ್ ವಿರಾಮಕ್ಕಿಂತ ಮೊದಲೇ ಟೀ ವಿರಾಮ ಪಡೆಯಲಾಯಿತು. ಇದೇ ಮೊದಲ ಬಾರಿ ಬರ್ಷಪಾರ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದ ಮೊದಲ ದಿನ 15,000ಕ್ಕೂ ಅಧಿಕ ಕ್ರಿಕೆಟ್ ಪ್ರೇಮಿಗಳು ಆಗಮಿಸಿದ್ದರು. ನಿರೀಕ್ಷೆಯಂತೆಯೇ ಭಾರತ ತಂಡವು ಶುಭಮನ್ ಗಿಲ್ ಬದಲಿಗೆ ಸಾಯಿ ಸುದರ್ಶನ್, ಅಕ್ಷರ್ ಪಟೇಲ್ ಬದಲಿಗೆ ನಿತೀಶ್ ರೆಡ್ಡಿ ಅವರನ್ನು ಆಡುವ 11ರ ಬಳಗಕ್ಕೆ ಸೇರಿಸಿಕೊಂಡಿತು. ದಕ್ಷಿಣ ಆಫ್ರಿಕಾ ಅಚ್ಚರಿಯ ಹೆಜ್ಜೆ ಇಟ್ಟಿದ್ದು, ಆಲ್ರೌಂಡರ್ ಕಾರ್ಬಿನ ಬಾಷ್ ಬದಲಿಗೆ ಹೆಚ್ಚುವರಿ ಸ್ಪಿನ್ನರ್ ಎಸ್.ಮುತ್ತುಸ್ವಾಮಿಗೆ ಮಣೆ ಹಾಕಿತು. ಇತ್ತೀಚೆಗೆ ಪಾಕಿಸ್ತಾನ ತಂಡದ ವಿರುದ್ಧ 1-1 ಅಂತರದಿಂದ ಡ್ರಾ ಸಾಧಿಸಿರುವ ದಕ್ಷಿಣ ಆಫ್ರಿಕಾ ತಂಡವು 2000ರ ನಂತರ ಮೊದಲ ಬಾರಿ ಭಾರತದಲ್ಲಿ ಟೆಸ್ಟ್ ಸರಣಿಯನ್ನು ಗೆಲ್ಲುವ ವಿಶ್ವಾಸದಲ್ಲಿದೆ.
ಪಾಕಿಸ್ತಾನಕ್ಕೆ ಬುದ್ಧಿ ಕಲಿಸಲು ಮತ್ತೆ ತಾಲಿಬಾನ್ ಎಂಟ್ರಿ ಗ್ಯಾರಂಟಿ?
ತಾಲಿಬಾನ್ &ಪಾಕಿಸ್ತಾನ ನಡುವೆ ಕೆಲವು ವಾರಗಳ ಹಿಂದೆ ದೊಡ್ಡ ಗಲಾಟೆ ನಡೆದಿತ್ತು, ಹೀಗೆ ಇಬ್ಬರೂ ಬಡಿದಾಡಿಕೊಂಡು ಹತ್ತಾರು ಜೀವಗಳು ಕೂಡ ಬಲಿಯಾಗಿದ್ದವು. ಅಲ್ಲದೆ ಪಾಪಿ ಪಾಕ್ ತಾನು ಮಾಡಿದ ಕೃತ್ಯಕ್ಕೆ ಸರಿಯಾಗಿ ಪಾಠ ಕೂಡ ಕಲಿತಿದೆ. ಪರಿಸ್ಥಿತಿ ಇಷ್ಟೆಲ್ಲಾ ವಿನಾಶಕಾರಿಯಾಗಿ ಇರುವಾಗ ಮತ್ತೆ ಇಬ್ಬರ ನಡುವೆ ಯುದ್ಧ ಶುರುವಾಗುತ್ತಾ? ಎಂಬ ಆತಂಕ ಕೂಡ ಇದ್ದೇ ಇದೆ.
ದ್ವಿತೀಯ ಟೆಸ್ಟ್ | ಅನಪೇಕ್ಷಿತ ದಾಖಲೆ ನಿರ್ಮಿಸಿದ ದಕ್ಷಿಣ ಆಫ್ರಿಕಾ ಬ್ಯಾಟರ್ ಗಳು
ಗುವಾಹಟಿ, ನ.22: ದಕ್ಷಿಣ ಆಫ್ರಿಕಾ ತಂಡವು ದ್ವಿತೀಯ ಟೆಸ್ಟ್ನ ಮೊದಲ ದಿನದಾಟದಲ್ಲಿ ಅನಪೇಕ್ಷಿತ ದಾಖಲೆಯೊಂದನ್ನು ನಿರ್ಮಿಸಿದೆ. ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅಗ್ರ ಸರದಿಯ ನಾಲ್ವರು ಬ್ಯಾಟರ್ಗಳು ಅರ್ಧಶತಕವನ್ನು ಗಳಿಸುವಲ್ಲಿ ವಿಫಲರಾಗಿದ್ದಾರೆ. ಎಲ್ಲ ನಾಲ್ಕೂ ಆಟಗಾರರು ಕನಿಷ್ಠ 35 ರನ್ ಗಳಿಸುವಲ್ಲಿ ಶಕ್ತರಾಗಿದ್ದಾರೆ. ಇನಿಂಗ್ಸ್ ಆರಂಭಿಸಿದ ಮರ್ಕ್ರಮ್ ಹಾಗೂ ರಿಕೆಲ್ಟನ್ ಕ್ರಮವಾಗಿ 38 ಹಾಗೂ 35 ರನ್ ಗಳಿಸಿದ್ದರು. ಇಬ್ಬರು ಎರಡು ಓವರ್ಗಳ ಅಂತರದಲ್ಲಿ ಔಟಾದರು. ಟ್ರಿಸ್ಟನ್ ಸ್ಟಬ್ಸ್ 49 ರನ್ ಹಾಗೂ ಟೆಂಬಾ ಬವುಮಾ 41 ರನ್ ಗಳಿಸಿ ಇನಿಂಗ್ಸ್ಗೆ ಜೀವ ತುಂಬಿದ್ದಾರೆ .ಸ್ಟಬ್ಸ್ ಕೇವಲ 1 ರನ್ನಿಂದ ತನ್ನ ಚೊಚ್ಚಲ ಅರ್ಧಶತಕದಿಂದ ವಂಚಿತರಾದರು.
ಮೊದಲ ಆ್ಯಶಸ್ ಟೆಸ್ಟ್: ಆಸ್ಟ್ರೇಲಿಯಕ್ಕೆ ಸುಲಭ ತುತ್ತಾದ ಇಂಗ್ಲೆಂಡ್
ಟ್ರಾವಿಸ್ ಹೆಡ್ ಶತಕ
ಅತ್ಯಂತ ಹೆಚ್ಚು ಪ್ರೇಕ್ಷಕರ ಹಾಜರಾತಿಗೆ ಸಾಕ್ಷಿಯಾದ ಪರ್ತ್ ಸ್ಟೇಡಿಯಂ
ಮೆಲ್ಬರ್ನ್, ಫೆ.22: ಆಸ್ಟ್ರೇಲಿಯ ಕ್ರಿಕೆಟ್ ತಂಡ ಎರಡೇ ದಿನದಲ್ಲಿ ಆ್ಯಶಸ್ ಟೆಸ್ಟ್ ಸರಣಿಯ ಮೊದಲ ಪಂದ್ಯವನ್ನು ಗೆದ್ದುಕೊಂಡಿದ್ದು, ಪರ್ತ್ ಕ್ರೀಡಾಂಗಣವು ಟೆಸ್ಟ್ ಪಂದ್ಯದಲ್ಲಿ ಇದೇ ಮೊದಲ ಬಾರಿ ಅತ್ಯಂತ ಹೆಚ್ಚು ಪ್ರೇಕ್ಷಕರ ಹಾಜರಾತಿಗೆ ಸಾಕ್ಷಿಯಾಯಿತು. ಮೊದಲ ಟೆಸ್ಟ್ನ ಎರಡನೇ ದಿನವಾದ ಶನಿವಾರ 49,983 ಪ್ರೇಕ್ಷಕರು ಆಗಮಿಸಿದ್ದು ಈ ಮೂಲಕ ಪಂದ್ಯ ವೀಕ್ಷಿಸಿದ ಒಟ್ಟು ಪ್ರೇಕ್ಷಕರ ಸಂಖ್ಯೆ 1,01,514 ಕ್ಕೇರಿದೆ. ಕಳೆದ ವರ್ಷ ಭಾರತ ತಂಡದ ವಿರುದ್ಧ ಟೆಸ್ಟ್ ಪಂದ್ಯದಲ್ಲಿ 96,463 ಜನರು ಆಗಮಿಸಿದ್ದರು. ಇದೀಗ ಆ ದಾಖಲೆಯು ಪತನಗೊಂಡಿದೆ. 1921ರ ನಂತರ ಮೊದಲ ಬಾರಿ ಆ್ಯಶಸ್ ಸರಣಿಯ ಪಂದ್ಯವು ಎರಡು ದಿನದೊಳಗೆ ಅಂತ್ಯವಾಗಿದೆ.
ಜೂಜಿನ ಸಾಲ, ಶ್ರೀಮಂತರಾಗಲು 3 ತಿಂಗಳ ಮಹಾಸಂಚು: ದರೋಡೆಯ ಹಿಂದಿನ ಅಸಲಿ ಕಥೆ ಬಾಯ್ಬಿಟ್ಟ ಬಂಧಿತರು
ಬೆಂಗಳೂರಿನ ಜೆಪಿ ನಗರದಿಂದ ಡೈರಿ ಸರ್ಕಲ್ನಲ್ಲಿರುವ ಎಟಿಎಂಗಳಿಗೆ 7.11 ಕೋಟಿ ರೂ. ತುಂಬಿಸಲು ಹೋಗುತ್ತಿದ್ದ ವಾಹನವನ್ನು ಸರ್ಕಾರಿ ಅಧಿಕಾರಿ ರೀತಿ ಅಡ್ಡ ಹಾಕಿ ದೋಚಿದ ಘಟನೆ ನಡೆದಿತ್ತು. ಪ್ರಕರಣ ನಡೆದು ನಲವತ್ತೆಂಟು ಗಂಟೆಯಲ್ಲಿ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಿದ್ದರು. ಸದ್ಯ ದರೋಡೆ ಆರೋಪಿಗಳು ಕಳ್ಳತನ ಮಾಡಿದ್ಯಾಕೆ? ಎಷ್ಟು ದಿನ ದರೋಡೆಗೆ ಸಂಚು ಹೂಡಿದ್ದರು. ಎಷ್ಟು ಜನರು ದರೋಡೆಯಲ್ಲಿ ಭಾಗಿಯಾಗಿದ್ದರು ಹಾಗೂ ಇದರಲ್ಲಿ ಯಾರ ಪಾತ್ರ ಏನಿದೆ ಎಂಬುದಕ್ಕೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಯಾದಗಿರಿ | ಸಚಿವ ಪ್ರಿಯಾಂಕ ಖರ್ಗೆ ಹುಟ್ಟು ಹಬ್ಬದ ಪ್ರಯುಕ್ತ ಅನ್ನದಾಸೋಹ
ಸುರಪುರ: ಕರ್ನಾಟಕ ಸರಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಪ್ರಿಯಾಂಕ ಖರ್ಗೆ ಅವರ ಜನ್ಮದಿನದ ಅಂಗವಾಗಿ ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಅನ್ನದಾಸೋಹ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶಾಸಕ ರಾಜಾ ವೇಣುಗೋಪಾಲ್ ನಾಯಕ್ ಮಾತನಾಡಿ, ಪ್ರಿಯಾಂಕ ಖರ್ಗೆ ಅವರು ಕಲ್ಯಾಣ ಕರ್ನಾಟಕ ಭಾಗದ ಒಬ್ಬ ಮಾದರಿ ರಾಜಕಾರಣಿಯಾಗಿದ್ದಾರೆ. ಅವರು ಪಂಚಾಯತ್ ರಾಜ್ ಮತ್ತು ಐಟಿಬಿಟಿ ಸಚಿವರಾಗಿ ರಾಜ್ಯದಲ್ಲಿ ಉತ್ತಮ ಅಭಿವೃದ್ಧಿ ಯೋಜನೆಗಳನ್ನು ಮಾಡಿದ್ದಾರೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಕಲಬುರ್ಗಿ ಯಾದಗಿರಿ ಸಹಕಾರ ಕೇಂದ್ರ ಬ್ಯಾಂಕ್ ಅಧ್ಯಕ್ಷ ವಿಠ್ಠಲ್ ಯಾದವ್, ಸುರಪುರ ತಾಲೂಕು ವಕ್ಲುತನ ಹುಟ್ಟುವಳಿ ಮಾರಾಟಗಾರ ಸಹಕಾರ ಸಂಘದ ಅಧ್ಯಕ್ಷ ರಾಜಾ ಸಂತೋಷ ನಾಯಕ್, ಯೂತ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಾಜಾ ಕುಮಾರ್ ನಾಯಕ್, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ರಾಜಶೇಖರ್ ಪಾಟೀಲ್ ವಜ್ಜಲ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಿಂಗರಾಜ ಬಾಚಿಮಟ್ಟಿ, ಮುಖಂಡರಾದ ಮಲ್ಲಣ್ಣ ಸಾಹುಕಾರ್ ನರಸಿಂಗಪೇಟ, ರಮೇಶ್ ದೊರೆ ಆಲ್ದಾಳ, ವೆಂಕಟೇಶ ಬೇಟೆಗಾರ, ಅಬ್ದುಲ್ ಗಫರ್ ನಗನೂರಿ, ವೆಂಕಟೇಶ ಹೊಸಮನಿ, ಮಾಳಪ್ಪ ಕಿರದಳ್ಳಿ, ಸೂಗುರೇಶ ವಾರದ, ಮಹೆಬೂಬ್ ಒಂಟಿ, ನಾಗಪ್ಪ ಚಿಕ್ಕನಹಳ್ಳಿ, ನಾಸಿರ್ ಕುಂಡಾಲೆ, ಅಬ್ದುಲ್ ಅಲೀಂ ಗೋಗಿ, ಶಕೀಲ್ ಅಹ್ಮದ್ ಖುರೇಶಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಯಾದಗಿರಿ | ಅಕ್ರಮ ಮರಳು ಗಣಿಗಾರಿಕೆ ತಡೆಯುವಂತೆ ಹನುಮಂತ್ ನಾಯಕ್ ಆಗ್ರಹ
ಸುರಪುರ: ಸುರಪುರ ತಾಲೂಕಿನಲ್ಲಿ ನಡೆಯುವ ಅಕ್ರಮ ಮರಳು ಗಣಿಗಾರಿಕೆಯನ್ನು ಕೂಡಲೇ ತಡೆಯುವಂತೆ ಬಿಜೆಪಿ ಮುಖಂಡ ಹನುಮಂತ್ ನಾಯಕ್ ಬಬ್ಲುಗೌಡ ಆಗ್ರಹಿಸಿದರು. ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹನುಮಂತ್ ನಾಯಕ್, ತಾಲೂಕಿನಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ಗಮನಿಸಿದರೆ ಪೊಲೀಸ್ ಅಧಿಕಾರಿಗಳೇ ಇದರಲ್ಲಿ ಶಾಮೀಲಾಗಿದ್ದಾರೆ ಎಂಬ ಅನುಮಾನ ಮೂಡುತ್ತಿದೆ. ಅಕ್ರಮ ಮರಳು ತುಂಬಿಕೊಂಡು ಓಡಾಡುವ ಟಿಪ್ಪರ್ಗಳಿಂದ ರಸ್ತೆಗಳು ಸಂಪೂರ್ಣವಾಗಿ ಹಾನಿಯಾಗಿದೆ. ಈ ರಸ್ತೆಗಳಲ್ಲಿ ವಾಹನಗಳ ಓಡಾಟ ತುಂಬಾ ಕಷ್ಟಕರವಾಗಿದೆ. ಇಷ್ಟೊಂದು ಪ್ರಮಾಣದಲ್ಲಿ ಅಕ್ರಮ ಮರಳು ಸಾಗಾಟ ನಡೆಯುತ್ತಿದ್ದರೂ, ಪೊಲೀಸ್ ಇಲಾಖೆ, ತಹಶೀಲ್ದಾರ್, ಭೂ ಮತ್ತು ಗಣಿ ವಿಜ್ಞಾನ ಇಲಾಖೆ ಇದನ್ನು ತಡೆಯುತ್ತಿಲ್ಲ ಎನ್ನುವುದು ಹಲವು ಅನುಮಾನಕ್ಕೆ ಕಾರಣವಾಗಿದೆ ಎಂದು ಹೇಳಿದರು. ಅಕ್ರಮ ಮರಳು ಗಣಿಗಾರಿಕೆ ನಿಲ್ಲಬೇಕು. ಇಲ್ಲವಾದಲ್ಲಿ ಎಲ್ಲಾ ಗ್ರಾಮಗಳ ಸಾರ್ವಜನಿಕರನ್ನು ಜಾಗೃತಿಗೊಳಿಸಿ ನಿರಂತರ ಹೋರಾಟವನ್ನು ನಡೆಸಲಾಗುವುದು ಎಂದು ಹೇಳಿದರು.
ಬೆಂಗಳೂರು ಮಸಾಲ ದೋಸೆಯ ರುಚಿಗೆ ಮನಸೋತ ಇಟಲಿಯ ರಾಯಭಾರಿ!
ಬೆಂಗಳೂರಿನಲ್ಲಿ ಇಟಲಿಯ ಕಾನ್ಸುಲ್ ಜನರಲ್ ಗಿಯಾಂಡೊಮೆನಿಕೊ ಮಿಲಾನೊ ಅವರು ಮಸಾಲ ದೋಸೆಯನ್ನು ತಮ್ಮ ನೆಚ್ಚಿನ ಬೆಳಗಿನ ಉಪಾಹಾರ ಎಂದು ಹೊಗಳಿದ್ದಾರೆ. ವಿಶ್ವ ಇಟಾಲಿಯನ್ ಪಾಕಶಾಲೆಯ ವಾರದ 10ನೇ ಆವೃತ್ತಿ ಬೆಂಗಳೂರಿನಲ್ಲಿ ನಡೆಯುತ್ತಿದೆ. ಈ ಬಾರಿ 'ಸಾಂಪ್ರದಾಯಿಕತೆ ಮತ್ತು ನಾವೀನ್ಯತೆ, ಆರೋಗ್ಯ ಮತ್ತು ಸುಸ್ಥಿರತೆ' ಎಂಬುದು ವಿಷಯವಾಗಿದೆ. ಪ್ರಸಿದ್ಧ ಶೆಫ್ ಇಟಾಲೊ ಬಸ್ಸಿ ಅವರು ಪಾಕಶಾಲೆಯ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಿದ್ದಾರೆ. ಡಿಸೆಂಬರ್ 1 ರಿಂದ ನಗರದ ಪ್ರಮುಖ ರೆಸ್ಟೋರೆಂಟ್ಗಳಲ್ಲಿ ವಿಶೇಷ ಇಟಾಲಿಯನ್ ಆಹಾರ ಉತ್ಸವ ನಡೆಯಲಿದೆ.

25 C