SENSEX
NIFTY
GOLD
USD/INR

Weather

26    C
...

ಡಾ.ಎಚ್.ಸಿ.ಸತ್ಯನ್‌ಗೆ ನಾಡೋಜ ಪ್ರಶ್ನಿಸಿದ್ದ ಪಿಐಎಲ್ ವಜಾಗೊಳಿಸಿದ ಹೈಕೋರ್ಟ್‌

ಬೆಂಗಳೂರು: ಕರ್ನಾಟಕ ರಾಜ್ಯ ಮಾಹಿತಿ ಆಯೋಗದ ಪ್ರಭಾರ ಮುಖ್ಯ ಮಾಹಿತಿ ಆಯುಕ್ತರಾಗಿದ್ದು ಸದ್ಯ ನಿವೃತ್ತಿ ಹೊಂದಿರುವ ಡಾ.‌ ಎಚ್.ಸಿ‌. ಸತ್ಯನ್ ಅವರಿಗೆ ಹಂಪಿ‌ ಕನ್ನಡ ವಿಶ್ವವಿದ್ಯಾಲಯ 'ನಾಡೋಜ' ಪದವಿ ಪ್ರದಾ‌ನ ಮಾಡಿರುವುದನ್ನು ಪ್ರಶ್ನಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಕಮಿಟಿ ಫಾರ್ ಪಬ್ಲಿಕ್ ಅಕೌಂಟೆಬಿಲಿಟಿ ಸಂಸ್ಥೆಯ ಅಧ್ಯಕ್ಷ ಎಸ್. ಶಿವಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು. ವಿಚಾರಣೆ ವೇಳೆ, ಸತ್ಯನ್‌ ಅವರ ಮೇಲೆ ಭ್ರಷ್ಟಾಚಾರದ ಆರೋಪವಿದೆ ಎಂಬ ಅರ್ಜಿದಾರರ ಪರ ವಕೀಲರ ಹೇಳಿಕೆಗೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಭ್ರಷ್ಟಾಚಾರ ಸಾಬೀತಾಗಿದೆಯಾ? ಇಲ್ಲವೆಂದಾದರೆ ಸುಮ್ಮನೆ ಆರೋಪ ಮಾಡಬೇಡಿ. ಇಲ್ಲದಿದ್ದರೆ ದೊಡ್ಡ ಮೊತ್ತದ ದಂಡ ವಿಧಿಸಬೇಕಾಗುತ್ತದೆ. ನೀವು (ಅರ್ಜಿದಾರ) ಸಂಕಷ್ಟ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿತು. ಮುಂದುವರಿದು, ಯಾರಿಗೆ ಯಾವ ಪದವಿ ಕೊಡಬೇಕು ಎಂಬ ಬಗ್ಗೆ ನಿರ್ಧರಿಸಲು ವಿಶ್ವವಿದ್ಯಾಲಯ ಸ್ವತಂತ್ರವಾಗಿದೆ. ಇಂತಹ ವಿಷಯದಲ್ಲಿ ನ್ಯಾಯಾಲಯ ಮಧ್ಯಪ್ರವೇಶಿಸಲು ಬಯಸುವುದಿಲ್ಲ. ಮೇಲಾಗಿ ಈ ಪ್ರಕರಣದಲ್ಲಿ ಅರ್ಜಿದಾರರ ಮೂಲಭೂತ ಹಕ್ಕುಗಳು, ಸಾಂವಿಧಾ‌ನಿಕ ಹಕ್ಕುಗಳ ಉಲ್ಲಂಘನೆ ಆಗುತ್ತಿಲ್ಲ. ಇಂತಹ ಅರ್ಜಿಗಳ ಸಲ್ಲಿಕೆಯು ನ್ಯಾಯಾಲಯದ ಅತ್ಯಮೂಲ್ಯ ಸಮಯ ವ್ಯರ್ಥ ಮಾಡುವುದು ಬಿಟ್ಟರೆ ಮತ್ತೇನೂ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿ, ಅರ್ಜಿ ವಜಾಗೊಳಿಸಿತು. ರಾಜ್ಯಪಾಲರು 2026ರ ಫೆಬ್ರವರಿ 24ರಂದು ಹಂಪಿ ‌ಕನ್ನಡ ವಿಶ್ವವಿದ್ಯಾಲಯದ 34ನೇ ಘಟಿಕೋತ್ಸವದಲ್ಲಿ ಡಾ. ಎಚ್.ಸಿ. ಸತ್ಯನ್ ಅವರಿಗೆ 'ನಾಡೋಜ' ಪದವಿ ಪ್ರದಾ‌ನ ಮಾಡಿದ್ದರು.

ವಾರ್ತಾ ಭಾರತಿ 8 Apr 2026 12:44 am

ಅತ್ಯಾಚಾರ ಆರೋಪ; ಇನ್‌ಸ್ಪೆಕ್ಟರ್ ಸಂದೇಶ್ ವಿರುದ್ಧದ ಪ್ರಕರಣ ರದ್ದತಿಗೆ ಹೈಕೋರ್ಟ್ ನಕಾರ

ಬೆಂಗಳೂರು: ದಕ್ಷಿಣ ಕನ್ನಡ‌ ಜಿಲ್ಲೆಯ ಶಾಲೆಯೊಂದರ ಮುಖ್ಯ ಶಿಕ್ಷಕಿ ಮೇಲೆ ಅತ್ಯಾಚಾರವೆಸಗಿದ ಆರೋಪದಲ್ಲಿ ಮೂಡಬಿದಿರೆ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್‌ (ಸದ್ಯ ಅಮಾನತುಗೊಂಡಿರುವ) ಪಿ.ಜಿ. ಸಂದೇಶ್‌ ಸೇರಿ ಮೂವರ ವಿರುದ್ಧ ದಾಖಲಾಗಿರುವ ಪ್ರಕರಣ ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿದೆ. ವೇಣೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ದೂರು ಹಾಗೂ ಎಫ್‌ಐಆರ್ ರದ್ದು ಕೋರಿ ಪಿ.ಜಿ. ಸಂದೇಶ್‌, ಉಡುಪಿಯ ಸ್ಮಿತಾ ಪೂರ್ಣಿಮಾ ಆರ್. ಮಲ್ಯ ಹಾಗೂ ಮಂಗಳೂರಿನ ಸುನೀತಾ ಲೋಬೋ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು‌. ಕೆಲ ಕಾಲ‌ ಅರ್ಜಿ ಆಲಿಸಿದ ಬಳಿಕ ಪ್ರಕರಣಕ್ಕೆ ತಡೆ ನೀಡಲು ಅಥವಾ ಎಫ್‌ಐಆರ್‌ ರದ್ದುಪಡಿಸಲು ನ್ಯಾಯಪೀಠ ಸ್ಪಷ್ಟವಾಗಿ ನಿರಾಕರಿಸಿದಾಗ ಸಂದೇಶ್‌ ಪರ ವಕೀಲ ಎಂ.ಆರ್‌. ಬಾಲಕೃಷ್ಣ ಅವರು ಅರ್ಜಿ ಹಿಂಪಡೆಯುವುದಾಗಿ ತಿಳಿಸಿದರು. ಇದನ್ನು ಪರಿಗಣಿಸಿದ ನ್ಯಾಯಪೀಠ, ಅರ್ಜಿದಾರರ ವಿರುದ್ಧ ಆರೋಪ ಪಟ್ಟಿ ಸಲ್ಲಿಕೆಯಾದರೆ ಅದನ್ನು ಪ್ರಶ್ನಿಸಿ ಇದೇ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವ ಸ್ವಾತಂತ್ರ್ಯ ಹೊಂದಿದ್ದಾರೆ ಎಂದು ತಿಳಿಸಿತಲ್ಲದೆ, ಅರ್ಜಿ ಹಿಂಪಡೆಯಲು ಅರ್ಜಿದಾರರು ಒಪ್ಪಿರುವುದರಿಂದ ಅದನ್ನು ವಜಾಗೊಳಿಸಲಾಗಿದೆ ಎಂದು ಆದೇಶಿಸಿತು. ಇದೇ ವೇಳೆ, ಅರ್ಜಿದಾರರಿಗೆ ತನಿಖೆಯ ನೆಪದಲ್ಲಿ ಕಿರುಕುಳ ನೀಡದಂತೆ ಆದೇಶಿಸಬೇಕು ಎಂದು ಸಂದೇಶ್ ಪರ ವಕೀಲರು ಮಾಡಿದ ಮನವಿಯನ್ನು ನ್ಯಾಯಾಲಯ ಸ್ಪಷ್ಟವಾಗಿ ನಿರಾಕರಿಸಿತು. ಸಂದೇಶ್ ವಾದವೇನು? ಇದಕ್ಕೂ ಮುನ್ನ ಅರ್ಜಿದಾರರ ಪರ ವಕೀಲ ಬಾಲಕೃಷ್ಣ ವಾದ ಮಂಡಿಸಿ, ಕೃತ್ಯ ನಡೆದು 3 ವರ್ಷಗಳ ಬಳಿಕ ಮುಖ್ಯ ಶಿಕ್ಷಕಿ ಪ್ರಕರಣ ದಾಖಲಿಸಿದ್ದಾರೆ. 2022ರ ನವೆಂಬರ್‌ನಿಂದ 2023ರ ಜೂನ್‌ ನಡುವೆ ಅತ್ಯಾಚಾರ ನಡೆದಿದೆ ಎಂದು ಆರೋಪಿಸಲಾಗಿದ್ದು, 2026ರ ಮಾರ್ಚ್ 21ರಂದು ಪ್ರಕರಣ ದಾಖಲಿಸಲಾಗಿದೆ. ಇದೊಂದು ಪಿತೂರಿಯಾಗಿದೆ. ಪೊಲೀಸ್‌ ಅಧಿಕಾರಿ ಸಂದೇಶ್‌ ಅವರನ್ನು ಸಿಲುಕಿಸಲು ಈ ರೀತಿ ಮಾಡಲಾಗಿದೆ. ಮೇಲ್ನೋಟಕ್ಕೆ ಯಾವುದೇ ಪ್ರಕರಣವಿಲ್ಲ ಎಂದು ನ್ಯಾಯಪೀಠಕ್ಕೆ ತಿಳಿಸಿದರು. ರಾಜ್ಯ ಸರ್ಕಾರದ ಪರ ವಾದ ಮಂಡಿಸಿದ ಹೆಚ್ಚುವರಿ ಸರ್ಕಾರಿ ಅಭಿಯೋಜಕ ಬಿ.ಎನ್‌. ಜಗದೀಶ್‌, ಮೊದಲನೇ ಅರ್ಜಿದಾರ ಪೊಲೀಸ್‌ ಅಧಿಕಾರಿ. ಸಿಆರ್‌ಪಿಸಿ ಸೆಕ್ಷನ್‌ 183ರ ಅಡಿ ಸಂತ್ರಸ್ತೆಯ ಹೇಳಿಕೆ ಇದೆ. ಅದೇ ಸಾಕಲ್ಲವೇ? ಪ್ರಕರಣದ ತನಿಖೆ ನಡೆಯಬೇಕು ಎಂದರು. ಸಂತ್ರಸ್ತೆಯ ಪರ ವಕೀಲರು ವಾದ‌ ಮಂಡಿಸಿ, 2 ಮತ್ತು 3ನೇ ಆರೋಪಿಗಳು ಮೊದಲ ಅರ್ಜಿದಾರರ ಪರವಾಗಿ ಸಂತ್ರಸ್ತೆಗೆ ಬೆದರಿಕೆ ಹಾಕಿ, ದೂರು ಮುಂದುವರಿಸದಂತೆ ಒತ್ತಾಯಿಸಿದ್ದಾರೆ. ಪ್ರಕರಣವನ್ನು ಸಿಐಡಿಗೆ ನೀಡಲಾಗಿದ್ದು, ಸಂತ್ರಸ್ತೆ ಹೇಳಿಕೆ ನೀಡಿದ್ದಾರೆ. ಪೊಲೀಸ್‌ ಅಧಿಕಾರಿ ಸಂದೇಶ್‌ ವಿರುದ್ಧ 2-3 ಪ್ರಕರಣ ದಾಖಲಾಗಿವೆ. 13 ಲಕ್ಷ ನಗದನ್ನು ಸಂತ್ರಸ್ತೆಯು ಪೊಲೀಸ್‌ ಅಧಿಕಾರಿಗೆ ನೀಡಿದ್ದಾರೆ. ಅರ್ಜಿದಾರರು ಸಂತ್ರಸ್ತೆ ಜತೆ ಮಾತನಾಡಿರುವ 800ಕ್ಕೂ ಹೆಚ್ಚು ಆಡಿಯೊ ರೆಕಾರ್ಡಿಂಗ್‌ ಇದೆ ಎಂದರು. ವಿಚಾರಣೆಯ ಒಂದು ಹಂತದಲ್ಲಿ ನ್ಯಾಯಪೀಠ, ಪೊಲೀಸ್‌ ಅಧಿಕಾರಿಯಾಗಿ ನೀವು ಹೀಗೆಲ್ಲ ಮಾಡುವಂತಿಲ್ಲ. ಆರೋಪ ಪಟ್ಟಿ ಸಲ್ಲಿಕೆಯಾದ ನಂತರ ಬನ್ನಿ ನೋಡೋಣ ಎಂದು ಹೇಳಿತು. ಇದರಿಂದ, ಅರ್ಜಿ ಹಿಂಪಡೆಯುವುದಾಗಿ ಅರ್ಜಿದಾರರ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು. ಪ್ರಕರಣವೇನು? ಸಂತ್ರಸ್ತ ಶಿಕ್ಷಕಿ ನೀಡಿದ ದೂರಿನ ಮೇರೆಗೆ ಮೂಡಬಿದಿರೆ ಇನ್‌ಸ್ಪೆಕ್ಟರ್ ಆಗಿದ್ದ ಸಂದೇಶ್‌ ವಿರುದ್ದ ಬೆಳ್ತಂಗಡಿ ತಾಲೂಕಿನ ವೇಣೂರು ಪೊಲೀಸ್‌ ಠಾಣೆಯಲ್ಲಿ ಬಿಎನ್‌ಎಸ್‌ 376(2)(ಎ)(1), 376(2)(ಎನ್‌), 384, 506 ಅಡಿ ಎಫ್‌ಐಆರ್‌ ದಾಖಲಾಗಿದೆ. ಈಗಾಗಲೇ ಮಹಿಳೆಯರನ್ನು ಲೈಂಗಿಕವಾಗಿ ಪೀಡಿಸಿದ ಆರೋಪ ಸಂದೇಶ್‌ ಮೇಲಿದೆ. ಇತ್ತೀಚೆಗೆ ಇಬ್ಬರು ಮಹಿಳೆಯರು ಮಾಡಿದ್ದ ಆರೋಪ ಬಾರಿ ಚರ್ಚೆಯಾಗಿತ್ತು. ಆದರೆ, ಪೊಲೀಸ್‌ ಪ್ರಾಥಮಿಕ ತನಿಖೆಯಲ್ಲಿ ಇದು ಪ್ರಚೋದಿತ ಹಾಗೂ ಸುಳ್ಳು ಆರೋಪ ಎಂದು ಕೇಳಿಬಂದಿತ್ತು. ಅದರ ಬೆನ್ನಲ್ಲೇ ಶಿಕ್ಷಕಿಯೊಬ್ಬರು ದೂರು ನೀಡಿದ್ದು ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿದೆ.

ವಾರ್ತಾ ಭಾರತಿ 8 Apr 2026 12:42 am

ಎಲ್‍ಪಿಜಿ ಸಮಸ್ಯೆಗೆ ಕೇಂದ್ರ ಸರಕಾರವೇ ನೇರ ಹೊಣೆ; ಆಟೋ ಚಾಲಕರಿಗೆ ವಿಶೇಷ ಪ್ಯಾಕೇಜ್ ಘೋಷಿಸಿ: ಆನಂದ್ ಕುಮಾರ್

ಬೆಂಗಳೂರು : ದೇಶದಲ್ಲಿ ತಲೆದೋರಿರುವ ಆಟೋ ಎಲ್‍ಪಿಜಿ ಸಮಸ್ಯೆಗೆ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರಕಾರವೇ ಹೊಣೆಯಾಗಿದ್ದು, ತಮ್ಮದಲ್ಲದ ತಪ್ಪಿಗೆ ಹೈರಾಣಾಗಿರುವ ಆಟೋ ಚಾಲಕರಿಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ಎಐಸಿಸಿ ಎಸ್‍ಸಿ ವಿಭಾಗದ ರಾಷ್ಟ್ರೀಯ ಸಂಯೋಜಕರು ಡಾ.ಆನಂದ್ ಕುಮಾರ್ ಆಗ್ರಹಿಸಿದ್ದಾರೆ. ಮಂಗಳವಾರ ಈ ಸಂಬಂಧ ಪ್ರಕಟಣೆ ನೀಡಿರುವ ಅವರು, ಎಲ್‍ಪಿಜಿ ಮತ್ತು ಸಿಎನ್‍ಜಿ ಪೂರೈಕೆ ಕೇಂದ್ರ ಸರಕಾರದ ಜವಾಬ್ದಾರಿಯಾಗಿದ್ದು, ಸಮರ್ಪಕವಾಗಿ ನಿರ್ವಹಣೆ ಮಾಡದ ಕಾರಣದಿಂದ ಸಂಕಷ್ಟ ತಲೆದೋರಿದೆ. ಹೋಟೆಲ್‍ಗಳು, ಆಥಿತ್ಯ ವಲಯ, ತರಕಾರಿ, ಕುಕ್ಕುಟೋದ್ಯಮ, ಮತ್ಸೋದ್ಯಮ, ಪ್ರವಾಸೋದ್ಯಮ ಹೀಗೆ ಪ್ರತಿಯೊಂದು ವಲಯ ತತ್ತರಿಸುತ್ತಿದೆ. ಹೆಚ್ಚಿನ ಪ್ರಮಾಣದಲ್ಲಿ ಬಾಧಿತರಾಗಿರುವವರು ಆಟೋ ಚಾಲಕರು. ಇವರ ನೆರವಿಗೆ ಕೇಂದ್ರ ಸರಕಾರ ಕೂಡಲೇ ಧಾವಿಸಬೇಕು ಎಂದು ಒತ್ತಾಯಿಸಿದ್ದಾರೆ. ಗರಿಷ್ಠ ಮೊತ್ತದ ನೋಟುಗಳ ಅಮಾನ್ಯೀಕರಣದಿಂದ ಜನ ಸಂಕಷ್ಟಕ್ಕೆ ಸಿಲುಕಿದ್ದರು. ಕೋವಿಡ್ ಸಂದರ್ಭದಲ್ಲಿ ಜನಸಾಮಾನ್ಯರು ತೊಂದರೆಗೀಡಾದರು. ಇದೀಗ ಮಧ್ಯಪ್ರಾಚ್ಯ ರಾಷ್ಟ್ರಗಳ ಸಂಘರ್ಷದಿಂದ ಮತ್ತೆ ಅನಾಹುತ ಎದುರಾಗಿದೆ. ಆಟೋ ಚಾಲಕರು ಸಂಕಷ್ಟದಲ್ಲಿದ್ದಾರೆ. ಸಾಲದ ಕಂತು ಪಾವತಿಸಲು ಸಾಧ್ಯವಾಗುತ್ತಿಲ್ಲ. ದಿನದ ತುತ್ತಿನ ಚೀಲ ತುಂಬಿಸುವುದು ದುಸ್ತರವಾಗಿದೆ. ಹೀಗಾಗಿ ಪ್ರತಿಯೊಂದು ಚಾಲಕರ ಕುಟುಂಬಕ್ಕೆ ತಕ್ಷಣಕ್ಕೆ 10ಸಾವಿರ ರೂ.ಹಣವನ್ನು ಪರಿಹಾರದ ರೂಪದಲ್ಲಿ ನೀಡಬೇಕು. ಎಲ್‍ಪಿಜಿ ದರ ಹೆಚ್ಚಳವಾಗದಂತೆ ಕೂಡಲೇ ಕ್ರಮ ತೆಗೆದುಕೊಳ್ಳಬೇಕು. ಬ್ಯಾಂಕ್ ಸಾಲದ ಬಡ್ಡಿ ಮನ್ನಾ ಮಾಡಬೇಕು. ಸಾಲದ ಕಂತುಗಳ ಪಾವತಿಯನ್ನು ವರ್ಷದ ಮಟ್ಟಿಗೆ ಮುಂದೂಡಬೇಕು ಎಂದು ಅವರು ಕೋರಿದ್ದಾರೆ. ಆಟೋ ಎಲ್‍ಪಿಜಿ ಸಮಸ್ಯೆ ಕೇವಲ ಸ್ಥಳೀಯ ಸಮಸ್ಯೆಯಲ್ಲ, ಇದು ಜಾಗತಿಕ ಇಂಧನ ಸಂಕಷ್ಟ ಮತ್ತು ಕೇಂದ್ರ ಸರಕಾರದ ನೀತಿ-ನಿರ್ಧಾರಗಳೊಂದಿಗೆ ನೇರವಾಗಿ ಸಂಬಂಧಿಸಿದ್ದಾಗಿದೆ. ವಿದೇಶಾಂಗ ನೀತಿಯನ್ನು ಸಮರ್ಪಕವಾಗಿ ನಿರ್ವಹಿಸಿದ್ದರೆ ಇಂತಹ ಸಮಸ್ಯೆ ಎದುರಾಗುತ್ತಿರಲಿಲ್ಲ. 11 ವರ್ಷಗಳಿಂದ ಮೋದಿ ಸರಕಾರ ಎಲ್ಲ ರಂಗಗಳಲ್ಲೂ ವಿಫಲವಾಗಿದೆ. ಕೇಂದ್ರ ಸರಕಾರವು ದೀರ್ಘಕಾಲೀನ ಪರಿಹಾರಗಳನ್ನು ರೂಪಿಸುವುದು ಅಗತ್ಯ ಎಂದು ಆನಂದ್ ಕುಮಾರ್ ತಿಳಿಸಿದ್ದಾರೆ.

ವಾರ್ತಾ ಭಾರತಿ 8 Apr 2026 12:30 am

ವಿಶ್ವಶ್ರೇಷ್ಠ ವೇಗಿ ಜಸ್ಪ್ರೀತ್ ಬುಮ್ರಾನನ್ನೂ ಬಿಡದ ವೈಭವ್ ಸೂರ್ಯವಂಶಿ!: ರಾಜಸ್ಥಾನ ರಾಯಲ್ಸ್ ಗೆ ಹ್ಯಾಟ್ರಿಕ್ ಜಯಭೇರಿ

Rajasthan Royals Vs Mumbai Indians Match Highlights- ಮಳೆಯಿಂದ ಅಡಚಣೆಗೊಳಗಾದ ಪಂದ್ಯದಲ್ಲಿ ವೈಭವ್ ಸೂುರ್ಯವಂಶಿ ಮತ್ತು ಯಶಸ್ವಿ ಜೈಸ್ವಾಲ್ ಅವರ ಬ್ಯಾಟಿಂಗ್ ಆರ್ಭಟಕ್ಕೆ ನಲುಗಿದ ಮುಂಬೈ ಇಂಡಿಯನ್ಸ್ ತಂಡ ರಾಜಸ್ಥಾನ ರಾಯಲ್ಸ್ ವಿರುದ್ಧ 27 ರನ್ ಗಳಿಂದ ಪರಾಭವ ಅನುಭವಿಸಿತು. ಇಡೀ ಪಂದ್ಯದಲ್ಲಿ ಹೈಲೈಟ್ ಆಗಿದ್ದು ವೈಭವ್ ಸೂರ್ಯವಂಶಿ ಅವರ ಬ್ಯಾಟಿಂಗ್. ಅದರಲ್ಲೂ ಅವರು ವಿಶ್ವಶ್ರೇಷ್ಠ ವೇಗಿ ಜಸ್ಪ್ರೀತ್ ಬುಮ್ರಾ ಅವರ ಒಂದೇ ಓವರ್ ನಲ್ಲಿ ಹೊಡೆದ 2 ಸಿಕ್ಸರ್ ಗಳು!

ವಿಜಯ ಕರ್ನಾಟಕ 8 Apr 2026 12:30 am

ಸಂಸ್ಕೃತವು ಕೇವಲ ಒಂದು ಭಾಷೆಯಲ್ಲ, ಅದು ಭಾರತದ ಆತ್ಮ: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್

ಬೆಂಗಳೂರು : ಸಂಸ್ಕೃತವು ಕೇವಲ ಒಂದು ಭಾಷೆಯಲ್ಲ, ಅದು ಭಾರತದ ಆತ್ಮವಾಗಿದೆ. ನಮ್ಮ ನಾಗರಿಕತೆ, ಸಂಸ್ಕೃತಿ ಮತ್ತು ತತ್ವಶಾಸ್ತ್ರದ ಮೂಲಾಧಾರವಾಗಿದೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ತಿಳಿಸಿದ್ದಾರೆ. ಮಂಗಳವಾರ ನಗರದ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ 12ನೇ ಮತ್ತು 13ನೇ ಘಟಿಕೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವೇದಗಳು, ಉಪನಿಷತ್ತುಗಳು ಮತ್ತು ಮಹಾಕಾವ್ಯಗಳು ಸಂಸ್ಕೃತದಲ್ಲೇ ಹುಟ್ಟಿಕೊಂಡಿವೆ. ಕೃತಕ ಬುದ್ಧಿಮತ್ತೆ ಮತ್ತು ದತ್ತಾಂಶ ವಿಜ್ಞಾನದ ಕ್ಷೇತ್ರದಲ್ಲಿ ಸಂಸ್ಕೃತದ ರಚನಾತ್ಮಕ ಸ್ಪಷ್ಟತೆ ಅದನ್ನು ಅತ್ಯಂತ ಉಪಯುಕ್ತವಾಗಿಸುತ್ತದೆ ಎಂದು ಅಭಿಪ್ರಾಯಪಟ್ಟರು. ವಿದ್ಯಾರ್ಥಿಗಳು ತಮ್ಮ ಜ್ಞಾನವನ್ನು ಸಮಾಜ ಮತ್ತು ರಾಷ್ಟ್ರದ ಕಲ್ಯಾಣಕ್ಕಾಗಿ ಬಳಸಬೇಕು. ಈ ದಿನ ಪದವಿ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಇದು ಮಹತ್ವದ ದಿನ. ನೀವು ಸಂಪಾದಿಸಿರುವ ಜ್ಞಾನವು ವೈಯಕ್ತಿಕ ಪ್ರಗತಿಗೆ ಮಾತ್ರ ಸೀಮಿತವಾಗದೇ, ಸಮಾಜ ಸೇವೆಗೂ ದಾರಿಯಾಗಬೇಕು ಎಂದು ರಾಜ್ಯಪಾಲರು ಹೇಳಿದರು. ಜ್ಞಾನವು ಜನರ ಹಿತಕ್ಕಾಗಿ ಬಳಸಿದಾಗ ಮಾತ್ರ ಅದರ ನಿಜವಾದ ಮೌಲ್ಯ ಹೊರಹೊಮ್ಮುತ್ತದೆ. ಜ್ಞಾನವು ವಿನಮ್ರತೆಯನ್ನು ತರುತ್ತದೆ, ವಿನಮ್ರತೆ ಯೋಗ್ಯತೆಯನ್ನು, ಯೋಗ್ಯತೆ ಸಮೃದ್ಧಿಯನ್ನು ಮತ್ತು ಸಮೃದ್ಧಿ ಸದಾಚಾರವನ್ನು ತರುತ್ತದೆ ಎಂದು ರಾಜ್ಯಪಾಲರು ತಿಳಿಸಿದರು. ಸ್ವಾವಲಂಬಿ ಭಾರತ ಮತ್ತು ಅಭಿವೃದ್ಧಿ ಹೊಂದಿದ ಭಾರತ ನಿರ್ಮಾಣದಲ್ಲಿ ಯುವಕರ ಪಾತ್ರ ಅತ್ಯಂತ ಮುಖ್ಯವಾಗಿದೆ. ಪ್ರಾಚೀನ ಜ್ಞಾನ ಮತ್ತು ಆಧುನಿಕ ವಿಜ್ಞಾನವನ್ನು ಸಂಯೋಜಿಸಿ, ನವೀನತೆ ಮತ್ತು ಸಂಶೋಧನೆಯಲ್ಲಿ ತೊಡಗಿಕೊಳ್ಳಬೇಕು. ಇಡೀ ಜಗತ್ತು ಮಾನಸಿಕ ಒತ್ತಡ, ಪರಿಸರ ಬಿಕ್ಕಟ್ಟು, ಸಾಮಾಜಿಕ ಅಸಮತೋಲನ ಮತ್ತು ಮೌಲ್ಯಹೀನತೆಯಂತಹ ಸವಾಲುಗಳನ್ನು ಎದುರಿಸುತ್ತಿರುವಾಗ, ಭಾರತೀಯ ಜ್ಞಾನ ಪರಂಪರೆ, ಸಂಸ್ಕೃತ ಸಾಹಿತ್ಯ ಮತ್ತು ಸಂಸ್ಕೃತದ ‘ವಸುಧೈವ ಕುಟುಂಬಕಂ’ ಮತ್ತು ‘ಸರ್ವೇ ಜನೋ ಸುಖಿನೋ ಭವಂತು’ ಎಂಬ ಶಾಶ್ವತ ತತ್ವಗಳು ಮಾನವೀಯತೆಗೆ ಹೊಸ ದಿಕ್ಕನ್ನು ನೀಡುತ್ತಿವೆ ಎಂದು ರಾಜ್ಯಪಾಲರು ತಿಳಿಸಿದರು. ಮುಂಬರುವ ವರ್ಷಗಳಲ್ಲಿ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯವು ಸಂಸ್ಕೃತ ಅಧ್ಯಯನ, ಸಂಶೋಧನೆ, ಹಸ್ತಪ್ರತಿ ಸಂರಕ್ಷಣೆ, ಭಾರತೀಯ ಜ್ಞಾನ ಸಂಪ್ರದಾಯ ಮತ್ತು ಅಂತಾರಾಷ್ಟ್ರೀಯ ಶೈಕ್ಷಣಿಕ ಸಹಯೋಗದಲ್ಲಿ ಹೊಸ ಎತ್ತರವನ್ನು ಸಾಧಿಸುತ್ತದೆ ಮತ್ತು ಪ್ರಾಚೀನ ಜ್ಞಾನ ಮತ್ತು ಆಧುನಿಕ ವಿಜ್ಞಾನದ ನಡುವೆ ಸೇತುವೆಯನ್ನು ನಿರ್ಮಿಸಲು ಶ್ರಮಿಸುತ್ತದೆ ಎಂದು ನನಗೆ ವಿಶ್ವಾಸವಿದೆ ಎಂದು ರಾಜ್ಯಪಾಲರು ಹೇಳಿದರು. ಇದೇ ಸಂದರ್ಭದಲ್ಲಿ ಭಿಕ್ಷು ಆನಂದ ಥೇರ, ಡಾ.ಪುಷ್ಪಾ ದೀಕ್ಷಿತ್, ಡಾ.ವ್ಯಾಸನ್ ಕೆರೆ ಪ್ರಭಂಜನಾಚಾರ್ಯ, ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಪ್ರೊ.ಶಿಂಗಪ್ಪ ಎಚ್.ಎಂ. ಮತ್ತು ಪ್ರೊ. ಸುಕಾಂತ ಕುಮಾರ್ ಸೇನಾಪತಿ ಅವರಿಗೆ ಧರ್ಮ ಮತ್ತು ಸಂಸ್ಕೃತಿಯ ಪ್ರಚಾರ ಹಾಗೂ ಸಮಾಜ ಸೇವೆಯಲ್ಲಿ ನೀಡಿದ ಕೊಡುಗೆಗಾಗಿ ಗೌರವ ಪದವಿಗಳನ್ನು ಪ್ರದಾನ ಮಾಡಲಾಯಿತು. ಸಮಾರಂಭದಲ್ಲಿ ಸಂಸದ ಡಾ.ಸಿ.ಎನ್.ಮಂಜುನಾಥ್, ಕುಲಪತಿ ಅಹಲ್ಯಾ ಮತ್ತು ಇತರರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 8 Apr 2026 12:19 am

ಕೇಂದ್ರದ ವಿಫಲ ವಿದೇಶಾಂಗ ನೀತಿ, ಅಸಮರ್ಥ ನಿರ್ವಹಣೆಯಿಂದಲೇ ಇಂಧನ ಅಹಾಕಾರ : ಕೆ.ಎಚ್.ಮುನಿಯಪ್ಪ

ಬೆಂಗಳೂರು : ಕೇಂದ್ರ ಸರಕಾರದ ವಿಫಲ ವಿದೇಶಾಂಗ ನೀತಿ ಹಾಗೂ ಅಸಮರ್ಥ ನಿರ್ವಹಣೆ ಪರಿಣಾಮದಿಂದಲೇ ದೇಶದಲ್ಲಿ ಇಂಧನ ಅಹಾಕಾರ ಎದುರಾಗಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದ್ದಾರೆ. ಮಂಗಳವಾರ ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಪ್ರತಿಕ್ರಿಯಿಸಿರುವ ಸಚಿವರು,ಇಂಧನ ಪೂರೈಕೆಯಲ್ಲಿ ರಾಜ್ಯಗಳ ನಡುವೆ ಸಮಾನತೆ ಕಾಣುತ್ತಿಲ್ಲ ಎಂಬ ಅಂಶವೂ ಗಮನಕ್ಕೆ ಬಂದಿದೆ.ಅದರಲ್ಲೂ, ಕರ್ನಾಟಕ ರಾಜ್ಯದೊಂದಿಗೆ ತಾರತಮ್ಯ ಧೋರಣೆ ಅನುಸರಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ದೇಶದಲ್ಲಿ ಎಲ್‍ಪಿಜಿ ಗ್ಯಾಸ್, ವಾಣಿಜ್ಯ ಗ್ಯಾಸ್ ಸಿಲಿಂಡರ್, ಸಿಎನ್‍ಜಿ, ಪೆಟ್ರೋಲ್ ಹಾಗೂ ಡೀಸೆಲ್ ಪೂರೈಕೆ ಮಾಡುವ ಜವಾಬ್ದಾರಿ ಸಂಪೂರ್ಣವಾಗಿ ಕೇಂದ್ರ ಸರಕಾರದ ಅಧೀನದಲ್ಲಿದೆ. ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಮೂಲಕ ಈ ವ್ಯವಸ್ಥೆ ನಡೆಯುತ್ತದೆ. ರಾಜ್ಯ ಸರಕಾರಕ್ಕೆ ಈ ಪೂರೈಕೆಯನ್ನು ನೇರವಾಗಿ ನಿಯಂತ್ರಿಸುವ ಅಧಿಕಾರವಿಲ್ಲ ಎಂಬುದು ಸಾರ್ವಜನಿಕರು ಗಮನಿಸಬೇಕಾದ ವಿಷಯವಾಗಿದೆ ಎಂದು ಅವರು ತಿಳಿಸಿದ್ದಾರೆ. ಕೊಲ್ಲಿ ರಾಷ್ಟ್ರಗಳ ಪ್ರದೇಶದಲ್ಲಿ ಉಂಟಾಗಿರುವ ಯುದ್ಧದ ಪರಿಣಾಮವಾಗಿ ಜಾಗತಿಕ ಮಟ್ಟದಲ್ಲಿ ಇಂಧನ ಸರಬರಾಜು ವ್ಯತ್ಯಯಗೊಂಡಿದೆ. ಅದರ ಪರಿಣಾಮ ದೇಶದೊಳಗೂ ತೀವ್ರವಾಗಿ ಕಾಣಿಸುತ್ತಿದ್ದು, ಕರ್ನಾಟಕದಲ್ಲಿಯೂ ಎಲ್‍ಪಿಜಿ ಗ್ಯಾಸ್ ಹಾಗೂ ಇಂಧನ ಕೊರತೆ ಉಂಟಾಗಿದೆ. ಇದರಿಂದ ಜನರ ದೈನಂದಿನ ಬದುಕು ಸಂಕಷ್ಟಕ್ಕೆ ಸಿಲುಕಿದೆ ಎಂದೂ ಅವರು ಉಲ್ಲೇಖಿಸಿದ್ದಾರೆ. ಸಿಎನ್‍ಜಿ ಕೊರತೆಯಿಂದ ಸಂಕಷ್ಟದಲ್ಲಿರುವ ಆಟೊ ಚಾಲಕರು, ವಾಣಿಜ್ಯ ಗ್ಯಾಸ್ ಕೊರತೆಯಿಂದ ತೊಂದರೆ ಅನುಭವಿಸುತ್ತಿರುವ ಹೊಟೇಲ್ ಮತ್ತು ಆಹಾರ ಉದ್ಯಮಗಳು, ಅಡುಗೆಗೆ ಗ್ಯಾಸ್ ಸಿಗದೇ ಪರದಾಡುತ್ತಿರುವ ಗೃಹಿಣಿಯರು. ಈ ಎಲ್ಲವನ್ನು ಗಮನಿಸಿದಾಗ, ಕೇಂದ್ರ ಸರಕಾರವು ಸಮಯೋಚಿತ ಕ್ರಮಗಳನ್ನು ಕೈಗೊಳ್ಳುವಲ್ಲಿ ವಿಫಲವಾಗಿದೆ ಎಂಬುದು ಸ್ಪಷ್ಟವಾಗುತ್ತದೆ. ವಿದೇಶಾಂಗ ನೀತಿ ಮತ್ತು ಇಂಧನ ನಿರ್ವಹಣೆಯ ನಡುವೆ ಸಮನ್ವಯದ ಕೊರತೆ ಕಾಣಿಸಿಕೊಂಡಿದ್ದು, ಅದರ ಹೊರೆ ಜನರ ಮೇಲೆ ಬಿದ್ದಿದೆ ಎಂದು ಟೀಕಿಸಿದ್ದಾರೆ. ಇದಲ್ಲದೇ, ಇಂಧನ ಪೂರೈಕೆಯಲ್ಲಿ ರಾಜ್ಯಗಳ ನಡುವೆ ಸಮಾನತೆ ಕಾಣುತ್ತಿಲ್ಲ ಎಂಬ ಅಂಶವೂ ಗಮನಕ್ಕೆ ಬಂದಿದೆ. ಕೆಲವು ರಾಜ್ಯಗಳಿಗೆ ಹೆಚ್ಚು ಆದ್ಯತೆ ನೀಡಲಾಗುತ್ತಿರುವಂತಿದೆ. ಕರ್ನಾಟಕ ರಾಜ್ಯದೊಂದಿಗೆ ತಾರತಮ್ಯ ಧೋರಣೆ ಅನುಸರಿಸಲಾಗುತ್ತಿದೆ ಎಂಬ ಆತಂಕವೂ ವ್ಯಕ್ತವಾಗಿದೆ. ಇದರಿಂದ ರಾಜ್ಯದ ಲಕ್ಷಾಂತರ ಜನರು ಅನಗತ್ಯ ಸಂಕಷ್ಟ ಅನುಭವಿಸುವಂತಾಗಿದೆ ಎಂದು ಸಚಿವರು ಹೇಳಿದ್ದಾರೆ.  

ವಾರ್ತಾ ಭಾರತಿ 8 Apr 2026 12:14 am

ಮೈಸೂರು ಪೊಲೀಸರ ಕಾರ್ಯಾಚರಣೆ : ಡ್ರಗ್ ಪೆಡ್ಲರ್‌ನ ಬಂಧನ; 25 ಕೆಜಿ ಗಾಂಜಾ ವಶ

30 ಪೆಡ್ಲರ್‌ಗಳ ಗಡಿಪಾರು

ವಾರ್ತಾ ಭಾರತಿ 7 Apr 2026 11:48 pm

'ಇಂದು ರಾತ್ರಿ ಇಡೀ ನಾಗರಿಕತೆ ಸಾಯಲಿದೆ' ಎಂದ ಟ್ರಂಪ್; ಇರಾನ್ ವಿರುದ್ಧ ಪರಮಾಣು ಬಳಕೆಯ ಸಾಧ್ಯತೆ ತಳ್ಳಿಹಾಕಿದ ಶ್ವೇತಭವನ

ವಾಷಿಂಗ್ಟನ್: “ಇಂದು ರಾತ್ರಿ ಇಡೀ ನಾಗರಿಕತೆ ಸಾಯಲಿದೆ” ಎಂದು ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ ಎಚ್ಚರಿಕೆಯ ಬೆನ್ನಲ್ಲೇ, ಇರಾನ್ ವಿರುದ್ಧ ಪರಮಾಣು ಶಸ್ತ್ರಾಸ್ತ್ರಗಳ ಬಳಕೆಯ ಯಾವುದೇ ಸಾಧ್ಯತೆಯನ್ನು ಶ್ವೇತಭವನ ಸ್ಪಷ್ಟವಾಗಿ ತಳ್ಳಿಹಾಕಿದೆ. ಶಾಂತಿ ಮಾತುಕತೆಗಳಲ್ಲಿ ಪ್ರಗತಿ ಸಾಧಿಸಲು ಮಂಗಳವಾರ ರಾತ್ರಿ 8 ಗಂಟೆ (EST) ಗಡುವು ನಿಗದಿಯಾಗಿದ್ದರೂ, ಅದನ್ನು ಇರಾನ್ ಪೂರೈಸದಿದ್ದರೆ ಗಂಭೀರ ಪರಿಣಾಮಗಳು ಎದುರಾಗಲಿವೆ ಎಂದು ಟ್ರಂಪ್ ಎಚ್ಚರಿಸಿದ್ದರು. ಈ ಹೇಳಿಕೆಗಳು ಜಾಗತಿಕ ಮಟ್ಟದಲ್ಲಿ ಆತಂಕ ಹುಟ್ಟುಹಾಕಿದ್ದು, ಅಮೆರಿಕದ ಮುಂದಿನ ಕ್ರಮಗಳ ಬಗ್ಗೆ ಅನಿಶ್ಚಿತತೆಯನ್ನು ಹೆಚ್ಚಿಸಿವೆ. ಇದರ ಮಧ್ಯೆ, ಇರಾನ್ “ಆರ್ಥಿಕ ಭಯೋತ್ಪಾದನೆ” ಕ್ರಮಗಳನ್ನು ಮುಂದುವರಿಸಿದರೆ, ಅಮೆರಿಕದ ಬಳಿ “ಇಲ್ಲಿಯವರೆಗೆ ಬಳಸಿಲ್ಲದ ಸಾಧನಗಳು” ಇವೆ ಎಂದು ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಹೇಳಿದ್ದಾರೆ. ಇರಾನ್ ತನ್ನ ನಿಲುವು ಬದಲಾಯಿಸದಿದ್ದರೆ ಆ ಸಾಧನಗಳನ್ನು ಬಳಸುವ ಅಧಿಕಾರ ಅಧ್ಯಕ್ಷರಿಗೆ ಇದೆ ಎಂದು ಅವರು ತಿಳಿಸಿದ್ದಾರೆ. ಈ ಹೇಳಿಕೆಗಳಿಂದ ಪರಮಾಣು ಉಲ್ಬಣದ ಬಗ್ಗೆ ಕಳವಳ ಹೆಚ್ಚಿದ ಹಿನ್ನೆಲೆಯಲ್ಲಿ, ಶ್ವೇತಭವನ ತಕ್ಷಣ ಸ್ಪಷ್ಟನೆ ನೀಡಿದೆ. ವ್ಯಾನ್ಸ್ ಹೇಳಿಕೆಯನ್ನು ಪರಮಾಣು ಆಯ್ಕೆಯೊಂದಿಗೆ ಸಂಪರ್ಕಿಸುವ ವ್ಯಾಖ್ಯಾನಗಳನ್ನು ತಿರಸ್ಕರಿಸಿ, ಅಂತಹ ಯಾವುದೇ ಸೂಚನೆ ನೀಡಲಾಗಿಲ್ಲ ಎಂದು ತಿಳಿಸಿದೆ. ಗಡುವು ಸಮೀಪಿಸುತ್ತಿರುವ ಸಂದರ್ಭದಲ್ಲೇ, ವಾಷಿಂಗ್ಟನ್ ಮತ್ತು ಟೆಹ್ರಾನ್ ನಡುವೆ ಒಪ್ಪಂದ ಸಾಧ್ಯವೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಶಾಂತಿ ಮಾತುಕತೆಗಳ ಭವಿಷ್ಯ ಅನಿಶ್ಚಿತವಾಗಿಯೇ ಉಳಿದಿದೆ. ವಾಲ್ ಸ್ಟ್ರೀಟ್ ಜರ್ನಲ್ ವರದಿ ಪ್ರಕಾರ, ಗಡುವಿನೊಳಗೆ ಇರಾನ್ ಹಾರ್ಮುಜ್ ಜಲಸಂಧಿಯನ್ನು ಮತ್ತೆ ತೆರೆಯುವ ಸಾಧ್ಯತೆ ಬಗ್ಗೆ ಸಂಧಾನಕಾರರು ಅನುಮಾನ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ, ಪಾಕಿಸ್ತಾನದಲ್ಲಿ ಶಾಂತಿ ಪ್ರಸ್ತಾಪಕ್ಕೆ ಮಧ್ಯಸ್ಥಿಕೆ ವಹಿಸಲು ಕೊನೆಯ ಹಂತದ ರಾಜತಾಂತ್ರಿಕ ಪ್ರಯತ್ನಗಳು ನಡೆಯುತ್ತಿವೆ ಎನ್ನಲಾಗಿದೆ. ಆದರೆ, ಸೌದಿ ಅರೇಬಿಯಾ ಮಿಲಿಟರಿ ಪ್ರತಿಕ್ರಿಯೆ ನೀಡಿದರೆ, ರಿಯಾದ್‌ನೊಂದಿಗೆ ಇರುವ ರಕ್ಷಣಾ ಬದ್ಧತೆಗಳಿಂದ ಪಾಕಿಸ್ತಾನವೂ ಸಂಘರ್ಷಕ್ಕೆ ಸೆಳೆಯಲ್ಪಡುವ ಸಾಧ್ಯತೆ ಇದೆ ಎಂದು ರಾಯಿಟರ್ಸ್ ವರದಿ ಉಲ್ಲೇಖಿಸಿದೆ. ಇನ್ನೊಂದೆಡೆ, ಇರಾನ್‌ ನ ಸರ್ಕಾರಿ ಸ್ವಾಮ್ಯದ ‘ಟೆಹ್ರಾನ್ ಟೈಮ್ಸ್’ ಪತ್ರಿಕೆ, ಅಮೆರಿಕದೊಂದಿಗೆ ರಾಜತಾಂತ್ರಿಕ ಮತ್ತು ಪರೋಕ್ಷ ಮಾರ್ಗಗಳು ಮುಚ್ಚಲ್ಪಟ್ಟಿವೆ ಎಂದು ಹೇಳಿಕೊಂಡಿದ್ದು, ಸಂವಾದಕ್ಕೆ ಅವಕಾಶಗಳಿಲ್ಲ ಎಂದು ಹೇಳಿದೆ.

ವಾರ್ತಾ ಭಾರತಿ 7 Apr 2026 11:33 pm

America Attacks Iran: ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಿಚ್ಚು: ಇರಾನ್‌ನಲ್ಲಿರುವ ಭಾರತೀಯರಿಗೆ ಮಹತ್ವದ ಸಲಹೆ

America Attacks Iran: ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಭೀತಿ ಈಗ ಉತ್ತುಂಗಕ್ಕೇರಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್‌ಗೆ ನೀಡಿದ್ದ ಗಡುವು ಮುಗಿಯುವ ಮೊದಲೇ, ಇರಾನ್‌ನ ಪ್ರಮುಖ ನೆಲೆಗಳ ಮೇಲೆ ಅಮೆರಿಕ ಮತ್ತು ಇಸ್ರೇಲ್ ಪಡೆಗಳು ಜಂಟಿ ದಾಳಿ ನಡೆಸಿವೆ. ಇದರ ಬೆನ್ನಲ್ಲೇ ಭಾರತೀಯ ಪ್ರಜೆಗಳಿಗೆ ಅಭಯದ ಸೂಚನೆಯನ್ನು ನೀಡಲಾಗಿದೆ. ತಮ್ಮ 'ಟ್ರೂತ್ ಸೋಶಿಯಲ್'ನಲ್ಲಿ ಅಧ್ಯಕ್ಷ

ಒನ್ ಇ೦ಡಿಯ 7 Apr 2026 11:18 pm

ಏನಿದು 'ಜನ ವಿಶ್ವಾಸ ಮಸೂದೆ 2026'?

ಏನು ಹೇಳುತ್ತದೆ ಹೊಸ ಮಸೂದೆ?

ವಾರ್ತಾ ಭಾರತಿ 7 Apr 2026 11:11 pm

Bengaluru | ಅಗ್ನಿ ಅವಘಡ: ಪ್ಲೈವುಡ್ ಅಂಗಡಿ ಸುಟ್ಟು ಭಸ್ಮ, ಆರು ಹಸುಗಳು ಸಾವು

ಬೆಂಗಳೂರು : ಪ್ಲೈವುಡ್ ಅಂಗಡಿಯೊಂದರಲ್ಲಿ ಆಕಸ್ಮಿಕವಾಗಿ ಕಾಣಿಸಿಕೊಂಡ ಬೆಂಕಿಯು ದನಗಳ ಕೊಟ್ಟಿಗೆಗೆ ವ್ಯಾಪಿಸಿದ ಪರಿಣಾಮ ಆರು ಹಸುಗಳು ಮೃತಪಟ್ಟಿರುವ ದಾರುಣ ಘಟನೆ ಇಲ್ಲಿನ ಡಿ.ಜೆ.ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಶಾಂಪುರ ರಸ್ತೆಯಲ್ಲಿ ಎ.6ರಂದು ತಡರಾತ್ರಿ ನಡೆದಿದೆ. ಎ.6ರ ಸೋಮವಾರ ತಡರಾತ್ರಿ 1:30ರ ಸುಮಾರಿಗೆ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ನೋಡ ನೋಡುತ್ತಿದ್ದಂತೆ ಬೆಂಕಿ ಜ್ವಾಲೆಗೆ ಪ್ಲೈವುಡ್ ಅಂಗಡಿ ಹೊತ್ತಿ ಉರಿದಿದೆ. ಅಂಗಡಿ ಪಕ್ಕದಲ್ಲಿರುವ ಹಸುವಿನ ಶೆಡ್‍ಗೆ ಅಗ್ನಿ ಕ್ಷಣಾರ್ಧದಲ್ಲಿ ವ್ಯಾಪಿಸಿದ ಪರಿಣಾಮ ಆರು ಹಸುಗಳು ಬೆಂಕಿಗಾಹುತಿಯಾಗಿವೆ. ಶೆಡ್‍ನಲ್ಲಿದ್ದ ಇತರೆ ಹಸುಗಳು ಗಂಭೀರವಾಗಿ ಗಾಯಗೊಂಡಿದ್ದು, ಪಶು ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಶಾಂಪುರ ರಸ್ತೆಯ ಮುನೇಶ್ವರ ನಗರದಲ್ಲಿ ಹಲವು ವರ್ಷಗಳಿಂದ ಅಹ್ಮಮದ್ ಎಂಬುವರು ಪ್ಲೈವುಡ್ ಅಂಗಡಿ ಇಟ್ಟುಕೊಂಡಿದ್ದರು. ಎಂದಿನಂತೆ ಕೆಲಸ ಮುಗಿಸಿ ಅಂಗಡಿಗೆ ಬೀಗ ಹಾಕಿ ಮನೆಗೆ ತೆರಳಿದ್ದರು. ಎ.6ರ ಸೋಮವಾರ ತಡರಾತ್ರಿ ಅಂಗಡಿಯಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಕ್ಷಣಾರ್ಧದಲ್ಲಿ ಅಂಗಡಿಯಲ್ಲಿದ್ದ ಪ್ಲೈವುಡ್ ಸೇರಿದಂತೆ ಪೀಠೋಪಕರಣಕ್ಕೆ ಬೆಂಕಿ ತಗುಲಿದೆ. ಅಂಗಡಿ ಮುಂದೆ ನಿಂತಿದ್ದ ಟಾಟಾ ಏಸ್ ವಾಹನ ಹಾಗೂ ನಾಲ್ಕು ದ್ವಿಚಕ್ರವಾಹನಗಳಿಗೆ ಬೆಂಕಿ ಕಿಡಿ ವ್ಯಾಪಿಸಿ ಸಂಪೂರ್ಣ ಹಾನಿಯಾಗಿವೆ. ಅಲ್ಲದೆ ಪಕ್ಕದ ಮನೆಯ ಬಾಗಿಲು, ಕಿಟಕಿ, ಟಿವಿ ಸೇರಿದಂತೆ ಇತರೆ ಗೃಹಯೋಪಯೋಗಿ ವಸ್ತುಗಳಿಗೂ ಬೆಂಕಿ ತಗುಲಿದೆ. ಸದ್ಯ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ವಾರ್ತಾ ಭಾರತಿ 7 Apr 2026 10:59 pm

ಬೆಳಗಾವಿ ಜಿಲ್ಲೆಯ ಹೂಲಿ ಗ್ರಾ.ಪಂಯಿಂದ ‘ಕುಮಾರಿ ಸಮೃದ್ಧಿ’ ಯೋಜನೆ: ಪ್ರಿಯಾಂಕ್ ಖರ್ಗೆ ಶ್ಲಾಘನೆ

ಬೆಂಗಳೂರು : ಹೆಣ್ಣು ಮಕ್ಕಳನ್ನು ಪ್ರೋತ್ಸಾಹಿಸಲು ಹಾಗೂ ಅವರ ಭವಿಷ್ಯಕ್ಕೆ ನೇರವಾಗಲು ‘ಕುಮಾರಿ ಸಮೃದಿ’ ಹೆಸರಲ್ಲಿ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಹೂಲಿ ಗ್ರಾಮ ಪಂಚಾಯತಿ ಇತರ ಆಡಳಿತಗಳಿಗೆ ಮಾದರಿಯಾದ ಹಾಗೂ ಅನುಕರಣೀಯವಾಗಿರುವ ವಿಶೇಷ ಕಾರ್ಯಕ್ರಮವೊಂದನ್ನು ರೂಪಿಸಿರುವ ಕ್ರಮವನ್ನು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಶ್ಲಾಘಿಸಿದ್ದಾರೆ. ಹೂಲಿ ಗ್ರಾಮದಲ್ಲಿ ಜನಿಸುವ ಪ್ರತಿ ಹೆಣ್ಣು ಮಕ್ಕಳ ಹೆಸರಲ್ಲಿ ಪಂಚಾಯತಿ ಕಡೆಯಿಂದ 5,500 ರೂ.ಠೇವಣಿ ಇರಿಸುವ ಮೂಲಕ, ಹೆಣ್ಣು ಮಕ್ಕಳ ಭವಿಷ್ಯಕ್ಕೆ ಆರ್ಥಿಕ ಭದ್ರತೆ ಒದಗಿಸುವ ಯೋಜನೆಯನ್ನು ರೂಪಿಸಿದ್ದು ಕರ್ನಾಟಕದಲ್ಲಿ ಇದೊಂದು ವಿನೂತನ ಕಾರ್ಯಕ್ರಮವಾಗಿದೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. ಸ್ವಯಂ ಸರಕಾರಗಳಾದ ಗ್ರಾಮ ಪಂಚಾಯತಿಗಳು ರಾಜ್ಯದಲ್ಲಿ ಕ್ರಿಯಾಶೀಲವಾಗಿ ತಮ್ಮದೇ ಆದ ವಿಶಿಷ್ಠ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಪ್ರೇರಣಾತ್ಮಕವಾಗಿ ಕೆಲಸ ಮಾಡುತ್ತಿವೆ, ಸಮಾಜದಲ್ಲಿ ಹೆಣ್ಣು ಮಕ್ಕಳ ಬಗ್ಗೆ ಇರುವ ಪೂರ್ವಗ್ರಹವನ್ನು ನಿವಾರಿಸಲು ಹಾಗೂ ಹೆಣ್ಣುಮಕ್ಕಳ ಪೋಷಕರಲ್ಲಿ ಆತ್ಮಸ್ಥೈರ್ಯ ತುಂಬಲು ಹೂಲಿ ಗ್ರಾಮ ಪಂಚಾಯತಿ ತೆಗೆದುಕೊಂಡಿರುವ ಈ ಐತಿಹಾಸಿಕ ನಿರ್ಧಾರ ರಾಜ್ಯದ ಇತರ ಗ್ರಾಮ ಪಂಚಾಯತಿಗಳಿಗೆ ಸ್ಫೂರ್ತಿಯಾಗಲಿ ಎಂದು ಪ್ರಿಯಾಂಕ್ ಖರ್ಗೆ ಪ್ರಕಟಣೆಯಲ್ಲಿ ಆಶಿಸಿದ್ದಾರೆ.  

ವಾರ್ತಾ ಭಾರತಿ 7 Apr 2026 10:41 pm

Bengaluru | ಮೊಬೈಲ್ ಕಳವು ಪ್ರಕರಣಗಳ ಪತ್ತೆ: 22.3 ಲಕ್ಷ ಮೌಲ್ಯದ 110 ಮೊಬೈಲ್‍ಗಳು ಜಪ್ತಿ

ಬೆಂಗಳೂರು : ಬೆಂಗಳೂರು ನಗರ ಉತ್ತರ ವಿಭಾಗದ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ಸಿಇಐಆರ್ ತಂತ್ರಾಂಶದ ಮೂಲಕ ಹಲವು ಮೊಬೈಲ್ ಕಳ್ಳತನ ಪ್ರಕರಣಗಳನ್ನು ಪತ್ತೆಹಚ್ಚಿದ್ದು, ಕಳುವಾಗಿದ್ದ 22.3 ಲಕ್ಷ ರೂ. ಮೌಲ್ಯದ ವಿವಿಧ ಕಂಪೆನಿಯ 110 ಮೊಬೈಲ್‍ಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್‍ಕುಮಾರ್ ಸಿಂಗ್ ತಿಳಿಸಿದ್ದಾರೆ. ಬೆಂಗಳೂರು ನಗರ ಉತ್ತರ ವಿಭಾಗದ 13 ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿ ಸಾರ್ವಜನಿಕರು ಕಳೆದುಕೊಂಡಿದ್ದ ಹಾಗೂ ಕಳುವಾಗಿದ್ದ ಮೊಬೈಲ್‍ಗಳ ವಿವರವನ್ನು ಸಿಇಐಆರ್ ಪೊರ್ಟಲ್‍ನಲ್ಲಿ ದೂರು ದಾಖಲಿಸಿದ್ದರು. ಈ ಬಗ್ಗೆ ತನಿಖೆ ಕೈಗೊಂಡ ಪೊಲೀಸರು ಹಿಂದಿನ ಮಾರ್ಚ್ ತಿಂಗಳಲ್ಲಿ ಸಿಇಐಆರ್ ತಂತ್ರಾಂಶದ ಸಹಾಯದಿಂದ ಮೊಬೈಲ್‍ಗಳ ಪತ್ತೆಕಾರ್ಯದಲ್ಲಿ ತೊಡಗಿಕೊಂಡು 110 ಮೊಬೈಲ್‍ಗಳನ್ನು ವಶಪಡಿಸಿಕೊಂಡಿರುವುದಾಗಿ ಸೀಮಂತ್‍ಕುಮಾರ್ ಸಿಂಗ್ ಮಾಹಿತಿ ನೀಡಿದ್ದಾರೆ. ಆರ್‍ಟಿನಗರ ವ್ಯಾಪ್ತಿಯಲ್ಲಿ 12, ಜಾಲಹಳ್ಳಿ 8, ಜೆಸಿನಗರ 9, ಮಹಾಲಕ್ಷ್ಮೀ ಲೇಔಟ್ 12, ಸಂಜಯನಗರ 6, ರಾಜಾಜಿನಗರ 10, ಸುಬ್ರಹಣ್ಯನಗರ 11, ನಂದಿನಿ ಲೇಔಟ್ 12, ಮಲ್ಲೇಶ್ವರಂ 8, ಹಬ್ಬಾಳ 3, ಯಶವಂತಪುರ 10, ಆರ್‍ಎಮ್‍ಸಿಯಾರ್ಡ್ 4, ಶ್ರೀರಾಮಪುರ ಠಾಣಾ ವ್ಯಾಪ್ತಿಯಲ್ಲಿ ಕಳುವಾಗಿದ್ದ ಐದು ಮೊಬೈಲ್‍ಗಳನ್ನು ಪತ್ತೆಹಚ್ಚಲಾಗಿದೆ ಎಂದು ಸೀಮಂತ್‍ಕುಮಾರ್ ಸಿಂಗ್ ವಿವರಿಸಿದ್ದಾರೆ. ಸಾರ್ವಜನಿಕರು ಕಳೆದುಕೊಂಡ ಮೊಬೈಲ್‍ಗಳ ವಿವರಗಳನ್ನು ಸಿಇಐಆರ್ ತಂತ್ರಾಂಶದಲ್ಲಿ ದಾಖಲಿಸುವುದರಿಂದ ಅಥವಾ ಪೊಲೀಸ್ ಠಾಣೆಗಳಿಗೆ ದೂರು ನೀಡುವುದರಿಂದ ಮೊಬೈಲ್‍ಗಳನ್ನು ಪತ್ತೆ ಮಾಡಲು ಅನುಕೂಲವಾಗುತ್ತದೆ ಎಂದು ಸೀಮಂತ್‍ಕುಮಾರ್ ಸಿಂಗ್ ತಿಳಿಸಿದ್ದಾರೆ.  

ವಾರ್ತಾ ಭಾರತಿ 7 Apr 2026 10:34 pm

Middle East Conflict- `48 ಗಂಟೆ ಎಲ್ಲಿದ್ದೀರೋ ಅಲ್ಲೇ ಇರಿ': ಇರಾನ್‌ನಲ್ಲಿರುವ ಭಾರತೀಯರಿಗೆ ಕೇಂದ್ರ ಸರ್ಕಾರ ತುರ್ತು ಸೂಚನೆ!

Middle East Conflict- ಮಧ್ಯಪ್ರಾಚ್ಯದಲ್ಲಿ ಯುದ್ಧದ ಭೀತಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಇರಾನ್‌ನಲ್ಲಿರುವ ಭಾರತೀಯರಿಗೆ ಭಾರತದ ರಾಯಭಾರ ಕಚೇರಿಯು 48 ಗಂಟೆಗಳ ಕಾಲ ಜಾಗರೂಕರಾಗಿರಲು ಮತ್ತು ಮನೆಯಿಂದ ಹೊರಬರದಂತೆ ತುರ್ತು ಸೂಚನೆ ನೀಡಿದೆ. ಜೊತೆಗೆ ಭಾರತದ ರಾಯಭಾರ ಕಚೇರಿ ಜೊತೆ ಸಂಪರ್ಕದಲ್ಲಿ ಇರುವಂತೆ ತಿಳಿಸಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ಮೇಲೆ ಹಿಂದೆಂದೂ ಕಂಡರಿಯದ ದಾಳಿ ನಡೆಸುವುದಾಗಿ ಎಚ್ಚರಿಸಿದ ಬೆನ್ನಲ್ಲೇ ಈ ಮುನ್ನೆಚ್ಚರಿಕೆ ಸೂಚನೆಯನ್ನು ಅನಿವಾಸಿ ಭಾರತೀಯರಿಗೆ ನೀಡಲಾಗಿದೆ.

ವಿಜಯ ಕರ್ನಾಟಕ 7 Apr 2026 10:20 pm

ವಿಜಯನಗರ | ಕನ್ನಡಪರ ಸಂಘಟನೆಗಳಿಂದ ತುಂಗಭದ್ರಾ ಡ್ಯಾಮ್ ಕ್ರಸ್ಟ್ ಗೇಟ್ ಕಾಮಗಾರಿ ಪರಿಶೀಲನೆ

ವಿಜಯನಗರ/ಹೊಸಪೇಟೆ : ಜಿಲ್ಲೆಯ ಹೊರವಲಯದಲ್ಲಿರುವ ತುಂಗಭದ್ರಾ ಜಲಾಶಯದಲ್ಲಿ ನಡೆಯುತ್ತಿರುವ ಕ್ರಸ್ಟ್ ಗೇಟ್ ಅಳವಡಿಕೆ ಕಾಮಗಾರಿಯನ್ನು ಕನ್ನಡಪರ ಸಂಘಟನೆಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ಮಳೆಗಾಲ ಸಮೀಪಿಸುತ್ತಿರುವ ಹಿನ್ನೆಲೆ ಕಾಮಗಾರಿಯ ಗುಣಮಟ್ಟ ಪರಿಶೀಲಿಸುವ ಉದ್ದೇಶದಿಂದ ಸಂಘಟನೆಗಳ ಪ್ರತಿನಿಧಿಗಳು ಟಿಬಿ ಡ್ಯಾಮ್ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. ಈ ವೇಳೆ ಈಗಾಗಲೇ ಮಾಧ್ಯಮಗಳಲ್ಲಿ ಪ್ರಕಟಗೊಂಡಿರುವ ವರದಿಗಳನ್ನೂ ಪರಿಗಣಿಸಿದರು. ಪರಿಶೀಲನೆ ಸಂದರ್ಭದಲ್ಲಿ ಕ್ರಸ್ಟ್ ಗೇಟ್‌ಗಳಿಗೆ ಸಂಬಂಧಿಸಿದ ಚೈನ್ ಲಿಂಕ್ ಅಳವಡಿಕೆಯಲ್ಲಿ ಕೆಲವು ಲೋಪದೋಷಗಳಿರುವ ಬಗ್ಗೆ ಸಂಘಟನೆಗಳು ಆತಂಕ ವ್ಯಕ್ತಪಡಿಸಿದವು. ವಿಶೇಷವಾಗಿ 19ನೇ ಗೇಟಿಗೆ ಮಾತ್ರ ಹೊಸ ಚೈನ್ ಅಳವಡಿಸಿರುವುದು ಗಮನಕ್ಕೆ ಬಂದಿದ್ದು, ಉಳಿದ ಗೇಟ್‌ಗಳ ಸ್ಥಿತಿ ಕುರಿತು ಪ್ರಶ್ನೆಗಳು ಉದ್ಭವಿಸಿವೆ. ಈ ಕುರಿತು ಅಧಿಕಾರಿಗಳನ್ನು ಪ್ರಶ್ನಿಸಿದಾಗ, ಹೊಸ ಚೈನ್‌ಗಳು ಬಂದ ನಂತರ ಹಳೆಯ ಚೈನ್‌ಗಳನ್ನು ತೆರವುಗೊಳಿಸಿ ಎಲ್ಲಾ ಗೇಟ್‌ಗಳಿಗೆ ಹೊಸ ಚೈನ್ ಅಳವಡಿಸಲಾಗುವುದು ಎಂದು ಸ್ಪಷ್ಟಪಡಿಸಿದರು. ಮೂರು ರಾಜ್ಯಗಳಿಗೆ ಸಂಬಂಧಿಸಿದ ಮಹತ್ವದ ಜಲಾಶಯವಾಗಿರುವ ತುಂಗಭದ್ರಾ ಡ್ಯಾಮ್‌ನಲ್ಲಿ ಕಾಮಗಾರಿಯನ್ನು ಶೀಘ್ರ ಹಾಗೂ ಗುಣಮಟ್ಟದೊಂದಿಗೆ ಪೂರ್ಣಗೊಳಿಸಬೇಕು ಎಂದು ಸಂಘಟನೆಗಳ ಪದಾಧಿಕಾರಿಗಳು ಒತ್ತಾಯಿಸಿದರು. ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಿ ರೈತರಿಗೆ ಶೀಘ್ರ ಪ್ರಯೋಜನವಾಗುವಂತೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ವಿಜಯನಗರ ಜಿಲ್ಲೆಯ ವಿವಿಧ ಕನ್ನಡಪರ ಸಂಘಟನೆಗಳ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸಂಬಂಧಿತ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. ವಿಜಯನಗರ ಜಿಲ್ಲಾ ಕನ್ನಡ ಪರ ಸಂಘಟನೆಗಳ ಅಧ್ಯಾಕ್ಷರಾದ ಪಿ ವೆಂಕಟೇಶ್, ಉಪಾಧ್ಯಕ್ಷರಾದ ಗುಜ್ಜಲ್ ಗಣೇಶ್, ವಿನೋದ್, ಬಸವರಾಜ್, ಮತ್ತು ಕನ್ನಡ ಪರ ಹೋರಾಟಗಾರರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 7 Apr 2026 10:13 pm

ವಿಜಯನಗರ | ವಾರ್ತಾಭಾರತಿ ವರದಿ ಫಲಶ್ರುತಿ : ಗ್ರಾಮಸ್ಥರಿಗೆ ಕಾಟ ನೀಡುತ್ತಿದ್ದ ಕೋತಿ ಸೆರೆ

ಹರಪನಹಳ್ಳಿ: ತಾಲೂಕಿನ ಯರಬಾಳು ಗ್ರಾಮದಲ್ಲಿ ರೈತರ ಮೇಲೆ ದಾಳಿ ಮಾಡಿ ಗಾಯಗೊಳಿಸುತ್ತಿದ್ದ ಕೋತಿಯನ್ನು ಕೊನೆಗೂ ಸೆರೆ ಹಿಡಿಯಲಾಗಿದೆ. “ಕೋತಿ ದಾಳಿಗೆ 12ಕ್ಕೂ ಹೆಚ್ಚು ಮಂದಿ ಗಾಯ” ಎಂಬ ಶೀರ್ಷಿಕೆಯಡಿ ವಾರ್ತಾಭಾರತಿ ಪತ್ರಿಕೆಯಲ್ಲಿ ಎ.1ರಂದು ವರದಿ ಪ್ರಕಟಿಸಿತ್ತು. ಈ ವರದಿಯ ಪರಿಣಾಮವಾಗಿ ಎಚ್ಚೆತ್ತ ಗ್ರಾಮ ಪಂಚಾಯಿತಿ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ಯರಬಾಳು ಗ್ರಾಮದಲ್ಲಿ ಭಾನುವಾರ ಗಂಗಾವತಿಯ ಕೋತಿ ಸೆರೆ ತಂಡ ಆಗಮಿಸಿ ಕಾರ್ಯಾಚರಣೆ ನಡೆಸಿ, ಕೋತಿಯನ್ನು ಸೆರೆ ಹಿಡಿದು ಬೋನಿಗೆ ಹಾಕಿದ್ದಾರೆ. ಗ್ರಾಮದಲ್ಲಿ ಕೋತಿಯ ಹಾವಳಿ ಹೆಚ್ಚಾದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಗ್ರಾಮ ಪಂಚಾಯಿತಿಗೆ ದೂರು ನೀಡಿದ್ದರು. ಈ ದೂರಿನ ಮೇರೆಗೆ ಅರಣ್ಯ ಇಲಾಖೆ ಹಾಗೂ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಗಂಗಾವತಿ ಮೂಲದ ಅಭಿ ಅವರ ತಂಡ ಸ್ಥಳಕ್ಕೆ ಬಂದು ಕೋತಿಯನ್ನು ಸೆರೆ ಹಿಡಿದಿದೆ ಎಂದು ನಿಟ್ಟೂರು ಗ್ರಾಮ ಪಂಚಾಯಿತಿ ಪಿಡಿಓ ರೇವಣಸಿದ್ಧಪ್ಪ ತಿಳಿಸಿದ್ದಾರೆ.  

ವಾರ್ತಾ ಭಾರತಿ 7 Apr 2026 10:08 pm

ಇರಾನ್‌ನಲ್ಲಿ ನೆಲೆಸಿರುವ ಭಾರತೀಯರಿಗೆ ರಾಯಭಾರ ಕಚೇರಿಯಿಂದ ತುರ್ತು ಸೂಚನೆ

ಮಂಗಳೂರು, ಎ.7: ಇರಾನ್‌ನಲ್ಲಿ ನೆಲೆಸಿರುವ ಭಾರತದ ಪ್ರಜೆಗಳಿಗೆ ಟೆಹ್ರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಮಂಗಳವಾರ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಮುಂದಿನ 48 ಗಂಟೆಗಳ ಕಾಲ ಅತ್ಯಂತ ಎಚ್ಚರಿಕೆಯಿಂದ ಇರಲು ಸೂಚಿಸಲಾಗಿದೆ. ರಾಯಭಾರ ಕಚೇರಿ ನೀಡಿರುವ ಪ್ರಮುಖ ಸೂಚನೆಗಳು ಇಂತಿವೆ:- *ಸ್ಥಳ ಬಿಟ್ಟು ಕದಲಬೇಡಿ: ಇದೀಗ ಇರಾನ್‌ನಲ್ಲಿರುವ ಭಾರತೀಯರು ತಾವು ಇರುವ ಸ್ಥಳದಲ್ಲೇ ಮುಂದಿನ 48 ಗಂಟೆಗಳ ಕಾಲ ಉಳಿಯಬೇಕು. ಅನಗತ್ಯ ಓಡಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. *ಸುರಕ್ಷಿತ ತಾಣಗಳ ಆಯ್ಕೆ: ವಿದ್ಯುತ್, ಮಿಲಿಟರಿ ನೆಲೆಗಳಿಂದ ದೂರವಿರಬೇಕು. ಬಹುಮಹಡಿ ಕಟ್ಟಡಗಳ ಮೇಲಿನ ಅಂತಸ್ತಿನಲ್ಲಿ ವಾಸಿಸುವವರು ಕೆಳಗಿನ ಮಹಡಿಗಳಿಗೆ ಸ್ಥಳಾಂತರಗೊಳ್ಳಲು ಮತ್ತು ಮನೆಯ ಒಳಗಡೆಯೇ ಇರಲು ಸೂಚಿಸಲಾಗಿದೆ. *ರಸ್ತೆಗಳಲ್ಲಿ ಸಂಚರಿಸಲು ಅನುಮತಿ: ರಸ್ತೆಗಳಲ್ಲಿ ಅನಿವಾರ್ಯವಾಗಿ ಸಂಚರಿಸಬೇಕಾದ ಸಂದರ್ಭ ಎದುರಾದಲ್ಲಿ, ಕಡ್ಡಾಯವಾಗಿ ರಾಯಭಾರ ಕಚೇರಿಯ ಅನುಮತಿ ಪಡೆಯಬೇಕು ಮತ್ತು ರಾಯಭಾರ ಕಚೇರಿಯ ನಿರಂತರ ಸಂಪರ್ಕದಲ್ಲಿರಬೇಕು. *ಹೋಟೆಲ್‌ಗಳಲ್ಲಿರುವವರಿಗೆ ಸೂಚನೆ: ರಾಯಭಾರ ಕಚೇರಿಯ ವತಿಯಿಂದ ವ್ಯವಸ್ಥೆ ಮಾಡಲಾಗಿರುವ ಹೋಟೆಲ್‌ಗಳಲ್ಲಿ ತಂಗಿರುವ ಭಾರತೀಯರು ಹೊರಗೆ ಬರಬಾರದು ಹಾಗೂ ಅಲ್ಲಿ ನಿಯೋಜನೆಗೊಂಡಿರುವ ರಾಯಭಾರ ಕಚೇರಿಯ ತಂಡದೊಂದಿಗೆ ನಿರಂತರ ಸಂಪರ್ಕದಲ್ಲಿರಬೇಕು. *ತುರ್ತು ಸಂಪರ್ಕ ಸಂಖ್ಯೆಗಳು: ಯಾವುದೇ ತುರ್ತು ಸಂದರ್ಭಗಳಲ್ಲಿ ಸಹಾಯಕ್ಕಾಗಿ ಭಾರತೀಯ ರಾಯಭಾರ ಕಚೇರಿಯ ನ್ನು ಸಂಪರ್ಕಿಸಿಸುವಂತೆ ಸೂಚನೆ ನೀಡಲಾಗಿದ್ದು, ಸಂಪರ್ಕಿಸಲು ಮೊಬೈಲ್ ಸಂಖ್ಯೆಗಳು ಹಾಗೂ ಇಮೇಲ್ ವಿಳಾಸ ಇಂತಿವೆ. *ಮೊಬೈಲ್ ಸಂಖ್ಯೆಗಳು: +989128109115, +989128109102, +989128109109, +989932179359 ಇಮೇಲ್: cons.tehran@mea.gov.in ಭಾರತೀಯರು ಅಧಿಕೃತ ಮಾಹಿತಿಗಾಗಿ ರಾಯಭಾರ ಕಚೇರಿಯ ಜಾಲತಾಣಗಳನ್ನು ಗಮನಿಸುತ್ತಿರಬೇಕೆಂದು ಭಾರತದ ರಾಯಭಾರ ಕಚೇರಿ ಪ್ರಕಟನೆಯಲ್ಲಿ ತಿಳಿಸಿದೆ.

ವಾರ್ತಾ ಭಾರತಿ 7 Apr 2026 10:06 pm

ಅಮೆರಿಕದ ಜೊತೆಗಿನ ಎಲ್ಲಾ ಸಂವಹನಗಳನ್ನು ಸ್ಥಗಿತಗೊಳಿಸಿದ ಇರಾನ್: ವರದಿ

ಟೆಹ್ರಾನ್, ಎ.7: ಅಮೆರಿಕದೊಂದಿಗಿನ ಎಲ್ಲಾ ರಾಜತಾಂತ್ರಿಕ ಮತ್ತು ಪರೋಕ್ಷ ಸಂವಹನ ಮಾರ್ಗಗಳನ್ನು ಇರಾನ್ ಸ್ಥಗಿತಗೊಳಿಸಿದೆ ಎಂದು ಇರಾನ್‍ನ ಮಾಧ್ಯಮ ಸಂಸ್ಥೆ `ಟೆಹ್ರಾನ್ ಟೈಮ್ಸ್' ಮಂಗಳವಾರ ವರದಿ ಮಾಡಿದೆ. ಅಮೆರಿಕಾದೊಂದಿಗಿನ ಎಲ್ಲಾ ರಾಜತಾಂತ್ರಿಕ ಮತ್ತು ಪರೋಕ್ಷ ಸಂವಹನ ವ್ಯವಸ್ಥೆಯನ್ನು ಇರಾನ್ ಮುಚ್ಚಿದೆ. ಯಾವುದೇ ಮತ್ತು ಎಲ್ಲಾ ಸಂದೇಶ ವಿನಿಮಯಗಳನ್ನೂ ಸ್ಥಗಿತಗೊಳಿಸಲಾಗಿದೆ ಎಂದು ವರದಿ ತಿಳಿಸಿದೆ. ಹಾರ್ಮುಝ್‌ ಜಲಸಂಧಿಯನ್ನು ಮತ್ತೆ ತೆರೆಯಲು ಇರಾನ್‍ಗೆ ಟ್ರಂಪ್ ಗಡುವು ನೀಡುವುದಕ್ಕೆ ಸ್ವಲ್ಪ ಮೊದಲು ಇರಾನ್ ಈ ಕ್ರಮ ಕೈಗೊಂಡಿದೆ ಎಂದು ವರದಿಯಾಗಿದೆ. ಇದಕ್ಕೂ ಮುನ್ನ ವಾಶಿಂಗ್ಟನ್‍ನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ್ದ ಅಮೆರಿಕದ ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್ `ಮಾತುಕತೆ ಈಗಲೂ ನಡೆಯುತ್ತಿದೆ. ಉತ್ತಮ ಫಲಿತಾಂಶ ಬರಬಹುದು ಎಂಬ ವಿಶ್ವಾಸವಿದೆ ಎಂದು ಹೇಳಿದ್ದರು. ಈ ಮಧ್ಯೆ, ಇರಾನ್‍ನ ಜನರು ಸ್ವಾತಂತ್ರ್ಯಕ್ಕಾಗಿ ಎಷ್ಟೇ ಕಷ್ಟ ಅನುಭವಿಸಲೂ ಸಿದ್ಧರಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಟ್ರಂಪ್ ಪ್ರತಿಪಾದಿಸಿದ್ದಾರೆ. ಇರಾನ್‍ನ ಮೇಲೆ ಬಾಂಬ್ ಅಭಿಯಾನವನ್ನು ಮುಂದುವರಿಸಬೇಕು ಎಂದು ಅಲ್ಲಿನ ಜನರೇ ಬಯಸುತ್ತಿದ್ದಾರೆ. ಯಾಕೆಂದರೆ ಸ್ವಾತಂತ್ರ್ಯ ಪಡೆಯಬೇಕಿದ್ದರೆ ಕೆಲವು ಕಷ್ಟನಷ್ಟಗಳನ್ನು ಅನುಭವಿಸಬೇಕು ಎಂಬುದು ಅವರಿಗೆ ತಿಳಿದಿದೆ ಎಂದು ಟ್ರಂಪ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ಇರಾನ್ ಯುದ್ಧಕ್ಕೆ ಸಂಬಂಧಿಸಿದ ಕೆಲವು ಮಹತ್ವದ ಬೆಳವಣಿಗೆಗಳು: ಮಂಗಳವಾರ ಬೆಳಿಗ್ಗೆ ಸೌದಿ ಅರೆಬಿಯಾದತ್ತ ಡ್ರೋನ್‍ಗಳು ಹಾಗೂ ಕ್ಷಿಪಣಿಗಳನ್ನು ಇರಾನ್ ಪ್ರಯೋಗಿಸಿದ್ದು ದೇಶದ ಅತೀ ದೊಡ್ಡ ಕೈಗಾರಿಕಾ ಕೇಂದ್ರ ಅಲ್ ಜುಬೈಲ್‍ನಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದ್ದು ಸ್ಫೋಟವೂ ಸಂಭವಿಸಿದೆ ಎಂದು ವರದಿಯಾಗಿದೆ. ಸೋಮವಾರ ತಡರಾತ್ರಿ ಕುವೈತ್‌ನಲ್ಲಿ ಅಲಿ ಅಲ್‍ಸಲೆಮ್ ವಾಯುನೆಲೆಯ ಮೇಲೆ ನಡೆದ ಡ್ರೋನ್ ದಾಳಿಯಲ್ಲಿ ಕನಿಷ್ಠ 15 ಅಮೆರಿಕನ್ ಸೈನಿಕರು ಗಾಯಗೊಂಡಿರುವುದಾಗಿ ಅಮೆರಿಕದ ಮೂಲಗಳು ಹೇಳಿವೆ. ಮಂಗಳವಾರ ಬೆಳಿಗ್ಗೆ ಟೆಹ್ರಾನ್ ಮೇಲೆ ಅಮೆರಿಕ-ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಯಹೂದಿಗಳ ಪ್ರಾರ್ಥನಾ ಮಂದಿರ ಸಂಪೂರ್ಣ ನೆಲಸಮಗೊಂಡಿರುವುದಾಗಿ ವರದಿಯಾಗಿದೆ. ಯಹೂದಿ ಧರ್ಮವು ಇರಾನ್‍ನಲ್ಲಿ ಕಾನೂನುಬದ್ಧವಾಗಿ ಗುರುತಿಸಲ್ಪಟ್ಟ ಅಲ್ಪಸಂಖ್ಯಾತ ಧರ್ಮಗಳಲ್ಲಿ ಒಂದಾಗಿದೆ ಮತ್ತು ಇರಾನ್ ಸಣ್ಣ ಯಹೂದಿ ಸಮುದಾಯವನ್ನು ಹೊಂದಿದೆ.

ವಾರ್ತಾ ಭಾರತಿ 7 Apr 2026 10:00 pm

ಕಾಂಗ್ರೆಸ್ ಸರಕಾರದ ಆಡಳಿತ ವೈಫಲ್ಯ: ಬಿಜೆಪಿಯಿಂದ ಹೋರಾಟದ ಎಚ್ಚರಿಕೆ

ಉಡುಪಿ, ಎ.7: ಕಾಂಗ್ರೆಸ್ ಸರಕಾರದ ಆಡಳಿತ ವೈಫಲ್ಯದಿಂದಾಗಿ ಜನ ಸಾಮಾನ್ಯರ ಗೋಳು ಕೇಳುವವರಿಲ್ಲ ವಾಗಿದೆ. ಉಡುಪಿ ಜಿಲ್ಲೆಯಲ್ಲಿ ಅಗತ್ಯ ಮೂಲಭೂತ ಸೌಕರ್ಯಗಳಿಗೆ ತುರ್ತು ಸ್ಪಂದನೆ ನೀಡಬೇಕು. ಇಲ್ಲದಿದ್ದರೆ ಮುಂದಿನ ತಿಂಗಳು ಬಿಜೆಪಿಯಿಂದ ತೀವ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಹೇಳಿದ್ದಾರೆ. ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ಉಡುಪಿ ಶಾಸಕ ಯಶ್ಪಾಲ್ ಎ. ಸುವರ್ಣ ಉಪಸ್ಥಿತಿಯಲ್ಲಿ ಮಂಗಳವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,2021ರಲ್ಲೇ ಪ್ರಾರಂಭಗೊಂಡ ಉಡುಪಿ ಜಿಲ್ಲಾಸ್ಪತ್ರೆ ಕಾಮಗಾರಿ ಮೂರು ವರ್ಷಗಳ ಹಿಂದೆಯೇ ಶೇ.90ರಷ್ಟು ಪೂರ್ಣಗೊಂಡಿತ್ತು. ಬಳಿಕ ಕುಂಟುತ್ತಾ ಸಾಗಿರುವ ಬಾಕಿ ಉಳಿದಿರುವ ಕಾಮಗಾರಿಯನ್ನು ಪೂರ್ಣಗೊಳಿಸಿ ಶೀಘ್ರ ಲೋಕಾರ್ಪಣೆಗೊಳಿಸುವ ಮೂಲಕ ಜನರ ಸೇವೆಗೆ ಲಭಿಸುವಂತಾಗ ಬೇಕು ಎಂದವರು ತಿಳಿಸಿದರು. ಸಾಮಾಜಿಕ ಭದ್ರತಾ ಯೋಜನೆಗಳಡಿ ನೀಡಲಾಗುತ್ತಿರುವ ಮಾಸಾಶನಕ್ಕೆ ಕುಟುಂಬದ ವಾರ್ಷಿಕ ಆದಾಯ ಮಿತಿ ಕೇವಲ 32,000ರೂ. ಎಂದು ನಿಗದಿ ಪಡಿಸಿರುವುದು ಸಂಪೂರ್ಣ ಅವೈಜ್ಞಾನಿಕ ಹಾಗೂ ಬಡವರ ವಿರೋಧಿ ನಿರ್ಧಾರವಾಗಿದ್ದು, ಇದರಿಂದ ಉಡುಪಿ ಜಿಲ್ಲೆ ಸೇರಿದಂತೆ ರಾಜ್ಯದ ಲಕ್ಷಾಂತರ ಅರ್ಹ ಫಲಾನುಭವಿಗಳು ಯೋಜನೆಯ ಲಾಭದಿಂದ ವಂಚಿತರಾಗುತ್ತಿದ್ದಾರೆ. ಆದ್ದರಿಂದ ಆದಾಯ ಮಿತಿಯನ್ನು 1,20,000ರೂ.ಗಳಿಗೆ ಹೆಚ್ಚಿಸುವಂತೆ ಅವರು ಒತ್ತಾಯಿಸಿದರು. ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಕಳೆದ ಮೂರು ವರ್ಷಗಳಿಂದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಕೊರತೆಯ ನೆಪವೊಡ್ಡಿ ಜನ ಸಾಮಾನ್ಯರು ಸೇವೆ ಪಡೆಯಲು ಅಸಹಾಯಕರಾಗಿ ತಿಂಗಳು ಗಟ್ಟಲೆ ಅಲೆದಾಡುವ ಪರಿಸ್ಥಿತಿ ನಿತ್ಯ ನಿರಂತರವಾಗಿದೆ. ಸರಕಾರಕ್ಕೆ ಎಷ್ಟೇ ಮನವಿ ಸಲ್ಲಿಸಿದರೂ ಯಾವುದೇ ಪರಿಹಾರ ಕಂಡುಬಂದಿಲ್ಲ ಎಂದು ಆರೋಪಿಸಿದರು. ಬಡ ನಿವೇಶನ ರಹಿತರಿಗೆ ಜಿಲ್ಲಾಧಿಕಾರಿ ಹಕ್ಕುಪತ್ರ ನೀಡಿ ನಿವೇಶನ ಒದಗಿಸಿದ ಕುಟುಂಬಗಳಿಗೆ ಮನೆ ನಿರ್ಮಾಣ ಮಾಡಲು ಪರವಾನಿಗೆ ಲಭಿಸುತ್ತಿಲ್ಲ. 94ಸಿಸಿ ಕಾನೂನಿನಡಿ ಸರಕಾರದಿಂದ ಒಂದೆರಡು ಸೆನ್ಸ್ ಭೂಮಿ ಪಡೆದ ಬಡ ಕುಟುಂಬಗಳಿಗೂ ಮನೆ ನಿರ್ಮಾಣದ ಪರವಾನಿಗೆ ಲಭಿಸುತ್ತಿಲ್ಲ. ಇವುಗಳನ್ನು ಕೂಡಲೇ ಸರಿಪಡಿಸಬೇಕು ಎಂದವರು ಒತ್ತಾಯಿಸಿದರು. ಈ ಎಲ್ಲಾ ಜ್ವಲಂತ ಸಮಸ್ಯೆಗಳಿಗೆ ಆದ್ಯತೆ ಮೇರೆಗೆ ತುರ್ತು ಪರಿಹಾರ ದೊರೆಯದೇ ಇದ್ದಲ್ಲಿ ಜಿಲ್ಲೆಯ ಸಂಸದರು, ಶಾಸಕರು, ಜನಪ್ರತಿನಿಧಿಗಳು ಹಾಗೂ ಪಕ್ಷದ ಎಲ್ಲಾ ಸ್ತರದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರನ್ನು ಒಗ್ಗೂ ಡಿಸಿ ರಾಜ್ಯ ಸರಕಾರದ ವಿರುದ್ಧ ತೀವ್ರ ಸಂಘಟಿತ ಹೋರಾಟ ರೂಪಿಸಲಾಗುವುದು ಎಂದು ಕುತ್ಯಾರು ನವೀನ್ ಶೆಟ್ಟಿ ಮತ್ತು ಶಾಸಕ ಯಶ್ಪಾಲ್ ಎ. ಸುವರ್ಣ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ವಕ್ತಾರ ದಿವಾಕರ ಶೆಟ್ಟಿ ಕಲ್ಯಾ, ಜಿಲ್ಲಾ ಕಾರ್ಯದರ್ಶಿಗಳಾದ ಶಿವಕುಮಾರ ಅಂಬಲಪಾಡಿ ಮತ್ತು ಶ್ರೀನಿಧಿ ಹೆಗ್ಡೆ ಹಿರೇಬೆಟ್ಟು ಉಪಸ್ಥಿತರಿದ್ದರು.

ವಾರ್ತಾ ಭಾರತಿ 7 Apr 2026 9:58 pm

Kalaburagi | ಬಿಜೆಪಿ ಜಿಲ್ಲಾ ಎಸ್‌ಸಿ ಮೋರ್ಚಾಕ್ಕೆ ಪದಾಧಿಕಾರಿಗಳ ನೇಮಕ

ಕಲಬುರಗಿ: ಭಾರತೀಯ ಜನತಾ ಪಕ್ಷದ ಕಲಬುರಗಿ ಗ್ರಾಮಾಂತರ ಜಿಲ್ಲಾಧ್ಯಕ್ಷರ ಆದೇಶದ ಮೇರೆಗೆ ಕಲಬುರಗಿ ಗ್ರಾಮಾಂತರ ಜಿಲ್ಲೆಯ ಸಂಘಟನಾತ್ಮಕ ಜಿಲ್ಲಾ ಎಸ್.ಸಿ.ಮೋರ್ಚಾ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ಎಸ್ ಸಿ ಮೋರ್ಚಾದ ಜಿಲ್ಲಾಧ್ಯಕ್ಷರಾದ ಮಹೇಂದ್ರ ಪೂಜಾರಿ ತಿಳಿಸಿದ್ದಾರೆ. ಉಪಾಧ್ಯಕ್ಷರಾಗಿ ಶಿವಕುಮಾರ ತೊಟನಳ್ಳಿ, ರಾಜು ಮುಕ್ಕಣ್ಣಾ, ವಿನೋದ ರಾಠೋಡ, ಶರಣು ಹಾಗರಗುಂಡಗಿ, , ಪ್ರಕಾಶ ತೊಳೆ, ಪ್ರಧಾನ ಕಾರ್ಯದರ್ಶಿಗಳಾಗಿ ಗುಂಡಪ್ಪ ಶಿರಾಡೋಣ, ತಿಪ್ಪಣ್ಣ ರಾಠೋಡ, ಕಾರ್ಯದರ್ಶಿಗಳಾಗಿ ವೆಂಕಟೇಶ ಮೇಸ್ತ್ರಿ, ರವಿ ಪವಾರ, ಆಕಾಶ ಪಾತ್ರೆ, ನಾಗೇಶ ಕೊಳ್ಳಿ, ರಾಯಪ್ಪ ಕೊಳಕೂರ, ಕೋಶಾಧ್ಯಕ್ಷರಾಗಿ ದುರ್ಗಪ್ಪಾ ಪವಾರ, ಕಾರ್ಯಲಯ ಕಾರ್ಯದರ್ಶಿಯಾಗಿ ರವಿ ಸಿಂಗೆ, ಮಾಧ್ಯಮ ಸಂಚಾಲಕರಾಗಿ ಮಲ್ಲಿಕಾರ್ಜುನ ಸಜ್ಜನ ಹಾಗೂ ಸ್ವಚ್ಛ ಭಾರತ ಅಭಿಯಾನ ಸಂಚಾಲಕರಾಗಿ ಪರಷುರಾಮ ರಾವೂರ ಅವರನ್ನು ನೇಮಕ ಮಾಡಲಾಗಿದೆ. ಪಕ್ಷ ವಹಿಸಿದ ಜವಾಬ್ದಾರಿಯನ್ನು ನಿಷ್ಠೆಯಿಂದ ಕಾರ್ಯನಿರ್ವಹಿಸಬೇಕೆಂದು ಪಕ್ಷದ ಎಸ್ ಸಿ ಮೋರ್ಚಾದ ಜಿಲ್ಲಾಧ್ಯಕ್ಷರಾದ ಮಹೇಂದ್ರ ಪೂಜಾರಿ ಅವರು ಆದೇಶದಲ್ಲಿ ತಿಳಿಸಿದ್ದಾರೆ.

ವಾರ್ತಾ ಭಾರತಿ 7 Apr 2026 9:56 pm

ಮಂಗಳೂರು : ವಿವಿಧ ರೈಲುಗಳಿಗೆ ಹೆಚ್ಚುವರಿ ಬೋಗಿ

ಮಂಗಳೂರು, ಎ.7: ತಿಂಗಳ ರಜೆ ಹಾಗೂ ಹಬ್ಬಗಳ ಹಿನ್ನೆಲೆಯಲ್ಲಿ ರೈಲುಗಳಲ್ಲಿ ಉಂಟಾಗುವ ಪ್ರಯಾಣಿಕರ ವಿಪರೀತ ದಟ್ಟಣೆಯನ್ನು ಕಡಿಮೆ ಮಾಡಲು ರೈಲ್ವೆ ಇಲಾಖೆಯು ಮಂಗಳೂರು ಮಾರ್ಗವಾಗಿ ಸಂಚರಿಸುವ ಪ್ರಮುಖ ರೈಲುಗಳಿಗೆ ಹೆಚ್ಚುವರಿ ಸ್ಲೀಪರ್ ಕ್ಲಾಸ್ ಬೋಗಿಗಳನ್ನು ಅಳವಡಿಸಲು ನಿರ್ಧರಿಸಿದೆ. ಹೆಚ್ಚುವರಿ ಬೋಗಿ ಅಳವಡಿಸಲಾದ ರೈಲುಗಳ ವಿವರ ಇಂತಿವೆ. ಎ.10 ಮತ್ತು 11 ರಂದು ಚೆನ್ನೈನಿಂದ ಹೊರಡುವ ಚೆನ್ನೈ ಎಗ್ಮೋರ್ - ಮಂಗಳೂರು ಸೆಂಟ್ರಲ್ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 16159 ) ರೈಲಿಗೆ ಒಂದು ಹೆಚ್ಚುವರಿ ಸ್ಲೀಪರ್ ಬೋಗಿ ಇರಲಿದೆ. ಎ. 12 ಮತ್ತು 13 ರಂದು ಮಂಗಳೂರು ಸೆಂಟ್ರಲ್‌ನಿಂದ ಹೊರಡುವ ಮಂಗಳೂರು ಸೆಂಟ್ರಲ್ - ಚೆನ್ನೈ ಎಗ್ಮೋರ್ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 16160 ) ರೈಲಿಗೆ ಒಂದು ಹೆಚ್ಚುವರಿ ಸ್ಲೀಪರ್ ಬೋಗಿ ಅಳವಡಿಸಲಾಗುವುದು. ಎ. 10, 11, 12, 14 ಮತ್ತು 15 ರಂದು ಮಂಗಳೂರು ಸೆಂಟ್ರಲ್‌ನಿಂದ ಹೊರಡುವ ಮಾವೇಲಿ ಎಕ್ಸ್‌ಪ್ರೆಸ್ ಮಂಗಳೂರು ಸೆಂಟ್ರಲ್ - ತಿರುವನಂತಪುರಂ ಸೆಂಟ್ರಲ್ ರೈಲು (ರೈಲು ಸಂಖ್ಯೆ 16603 )ಒಂದು ಹೆಚ್ಚುವರಿ ಸ್ಲೀಪರ್ ಬೋಗಿ ಸೇರಿಸಲಾಗುವುದು. ಎ. 11, 12, 13, 15 ಮತ್ತು 16 ರಂದು ತಿರುವನಂತಪುರಂ ಸೆಂಟ್ರಲ್ ಹೊರಡುವ ತಿರುವನಂತಪುರ ಸೆಂಟ್ರಲ್ - ಮಂಗಳೂರು ಸೆಂಟ್ರಲ್ ( ರೈಲು ಸಂಖ್ಯೆ 16604 ) ಮಾವೇಲಿ ಎಕ್ಸ್‌ಪ್ರೆಸ್ ರೈಲಿಗೆ ಒಂದು ಹೆಚ್ಚುವರಿ ಸ್ಲೀಪರ್ ಬೋಗಿ ಇರಲಿದೆ. ಎ.8ರಿಂದ 15 ರವರೆಗೆ ಮಂಗಳೂರು ಸೆಂಟ್ರಲ್‌ನಿಂದ ಹೊರಡುವ (ರೈಲು ಸಂಖ್ಯೆ 16630 )ಮಂಗಳೂರು ಸೆಂಟ್ರಲ್ - ತಿರುವನಂತಪುರಂ ಸೆಂಟ್ರಲ್ ಮಲಬಾರ್ ಎಕ್ಸ್‌ಪ್ರೆಸ್ ರೈಲಿಗೆ ಒಂದು ಹೆಚ್ಚುವರಿ ಸ್ಲೀಪರ್ ಬೋಗಿ ಅಳವಡಿಸಲಾಗುವುದು. ಎ.9 ರಿಂದ 16 ರವರೆಗೆ ತಿರುವನಂತಪುರಂನಿಂದ ಹೊರಡುವ ತಿರುವನಂತಪುರಂ - ಮಂಗಳೂರು ಸೆಂಟ್ರಲ್ (ಸಂಖ್ಯೆ 16629 ) ಮಲಬಾರ್ ಎಕ್ಸ್‌ಪ್ರೆಸ್ ರೈಲಿಗೆ ಒಂದು ಹೆಚ್ಚುವರಿ ಸ್ಲೀಪರ್ ಬೋಗಿ ಅಳವಡಿಸಲು ನಿರ್ಧರಿಸ ಲಾಗಿದೆ ಎಂದು ರೈಲ್ವೆ ಇಲಾಖೆಯ ಪ್ರಕಟನೆ ತಿಳಿಸಿದೆ.

ವಾರ್ತಾ ಭಾರತಿ 7 Apr 2026 9:55 pm

Kalaburagi | ಹಝರತ್ ಖ್ವಾಜಾ ಬಂದಾ ನವಾಝ್ ದರ್ಗಾದಲ್ಲಿ ಝೆಲಾ ಮುಬಾರಕ್

ಕಲಬುರಗಿ: ಜಿಲ್ಲೆಯ ಪ್ರಮುಖ ಧಾರ್ಮಿಕ ಕೇಂದ್ರವಾದ ಹಝರತ್ ಖ್ವಾಜಾ ಬಂದಾ ನವಾಝ್ ದರ್ಗಾದ ಝೆಲಾ ಪ್ರಯುಕ್ತ ನಮಾಝ್-ಎ-ಅಸರ್ ಮಹೆಬೂಬ್ ಗುಲ್ಶನ್ ಸಮರ್ ಹೌಸ್‌ನಲ್ಲಿ ಸೋಮವಾರ ನೆರವೇರಿಸಲಾಯಿತು. ಬಳಿಕ ಮಹ್ಫಿಲ್-ಎ-ಸಮಾ ಕಾರ್ಯಕ್ರಮ ಜರುಗಿದ್ದು, ವಿವಿಧ ನಗರಗಳಿಂದ ಆಗಮಿಸಿದ ಖ್ಯಾತ ಕವ್ವಾಲಿಗಳು ತಮ್ಮ ಮನಮೋಹಕ ಕಲಾಮ್‌ಗಳ ಮೂಲಕ ಭಕ್ತರನ್ನು ಮಂತ್ರಮುಗ್ಧರನ್ನಾಗಿಸಿದರು. ಕಾರ್ಯಕ್ರಮದ ಅಂತ್ಯದಲ್ಲಿ ಫಾತೀಹಾ ಖ್ವಾನಿ ನೆರವೇರಿಸಲಾಯಿತು. ಇದಾದ ನಂತರ ಜುಲೂಸ್-ಎ-ಜ್ಹೇಳಾ ಮುಬಾರಕ್ ಅನ್ನು ವೈಭವವಾಗಿ ಆರಂಭಿಸಲಾಯಿತು. ಜುಲೂಸ್ ಜಗತ್ ಸರ್ಕಲ್ ಮೂಲಕ ಸಾಗುತ್ತಾ ಸೂಪರ್ ಮಾರ್ಕೆಟ್ ಪ್ರದೇಶಕ್ಕೆ ತಲುಪಿದ್ದು, ಅಲ್ಲಿ ಮಾರ್ಕೆಟ್ ಮಸೀದಿಯಲ್ಲಿ ನಮಾಝ್-ಎ-ಮಘ್ರಿಬ್ ಸಲ್ಲಿಸಲಾಯಿತು. ಬಳಿಕ ಜುಲೂಸ್ ಸರಾಫ್ ಬಜಾರ್, ಬಹಮನಿ ಚೌಕ್ ಹಾಗೂ ಹಫ್ತ್ ಗುಂಬಜ್ ಮಾರ್ಗವಾಗಿ ರಾತ್ರಿ ತಡವರೆಗೆ ಮುಂದುವರಿಯಿತು. ರಾತ್ರಿ ಸುಮಾರು 10:30ರ ವೇಳೆಗೆ ಜ್ಹೇಳಾ ಮುಬಾರಕ್ ಗಯಾರಾ ಸೀಡಿಗೆ ತಲುಪಿತು. ಈ ಸಂದರ್ಭದಲ್ಲಿ ಹಝರತ್ ಡಾ. ಸೈಯದ್ ಮುಹಮ್ಮದ್ ಅಲಿ ಅಲ್ ಹುಸೈನಿ ಸಾಹೇಬ್ (ಸಜ್ಜಾದಾ ನಶೀನ್) ಅವರು ಜ್ಹೇಳಾ ಮುಬಾರಕ್‌ನ ಪ್ರತಿಕಾತ್ಮಕ ಕಷ್ಟಿಯನ್ನು ತಮ್ಮ ತಲೆಯ ಮೇಲೆ ಹೊತ್ತು ಬರಾದರಿ ಒಳಗೆ ಕೊಂಡೊಯ್ದರು. ಅಲ್ಲಿ ಸಂಪ್ರದಾಯಬದ್ಧ ವಿಧಿವಿಧಾನಗಳನ್ನು ನೆರವೇರಿಸಿ, ಬಳಿಕ ಜ್ಹೇಳಾ ಮುಬಾರಕ್ ಅನ್ನು ಗುಂಬದ್-ಎ-ಮುಬಾರಕ್‌ಗೆ ಕಟ್ಟಲು ಕಳುಹಿಸಲಾಯಿತು. ಗುಂಬದ್ ಮೇಲೆ ಜ್ಹೇಳಾ ಕಟ್ಟಿದ ನಂತರ ಮತ್ತೆ ಕೆಳಗೆ ಬಂದು ಫಾತೀಹಾ ಖ್ವಾನಿ ನೆರವೇರಿಸಿದರು. ನಂತರ ಮತ್ತೊಂದು ಮಹ್ಫಿಲ್-ಎ-ಸಮಾ ಕಾರ್ಯಕ್ರಮ ನಡೆದಿದ್ದು, 10ಕ್ಕೂ ಹೆಚ್ಚು ಕವ್ವಾಲಿಗಳು ತಮ್ಮ ಭಕ್ತಿಪರ ಕಲಾಮ್‌ಗಳನ್ನು ಪ್ರಸ್ತುತಪಡಿಸಿದರು. ಈ ಪವಿತ್ರ ಹಾಗೂ ಆಧ್ಯಾತ್ಮಿಕ ಕಾರ್ಯಕ್ರಮದಲ್ಲಿ ಅನೇಕ ಗಣ್ಯರು ಮತ್ತು ಗೌರವಾನ್ವಿತ ವ್ಯಕ್ತಿಗಳು ಉಪಸ್ಥಿತರಿದ್ದರು. ಇವರಲ್ಲಿ ಸೈಯದ್‌ ಶಾ ಯೂಸುಫ್ ಹುಸೈನ್ ಸಾಹೇಬ, ಸಯ್ಯದ್ ಶಾ ಹಸನ್ ಶಬ್ಬೀರ್ ಹುಸೈನಿ ಸಾಹೇಬ್ (ಸಜ್ಜಾದಾ ನಶೀನ್ ರೋಜಾ-ಎ-ಖುರ್ಡ್), ಜನಾಬ್ ಅಕ್ಬರ್ ನಿಜಾಮುದ್ದೀನ್ ಸಾಹೇಬ್ (ಸಜ್ಜಾದಾ ನಶೀನ್ ದರ್ಗಾ ಶಾ ಖಾಮೋಶ್, ಹೈದರಾಬಾದ್), ಡಾ.ಸೈಯದ್‌ ಮುಸ್ತಫಾ ಅಲ್ ಹುಸೈನಿ ಸಾಹೇಬ್, ಸೈಯದ್‌ ಮುಹಮ್ಮದ್ ಸೈಯದ್‌ ಹುಸೈನಿ ಸಾಹೇಬ್, ಸೈಯದ್‌ ಅಲೀಮ್ ಹುಸೈನಿ ಸಾಹೇಬ್, ಸೈಯದ್‌ ಶಾ ಸಫಿಯುಲ್ಲಾ ಮುಂತಾದ ಗಣ್ಯರು ಉಪಸ್ಥಿತರಿದ್ದರು.    

ವಾರ್ತಾ ಭಾರತಿ 7 Apr 2026 9:53 pm

ಅಸ್ಸಾಂನಲ್ಲಿ ವಿಧಾನಸಭಾ ಕ್ಷೇತ್ರ ಮರುವಿಂಗಡಣೆ | ಬದಲಾಗಲಿದೆ ಅಲ್ಪಸಂಖ್ಯಾತರ ರಾಜಕೀಯ ಸಮೀಕರಣ

ಸಾಂದರ್ಭಿಕ ಚಿತ್ರ | Photo Credit : PTI ಏಪ್ರಿಲ್ 9ರ ವಿಧಾನಸಭಾ ಚುನಾವಣೆಯಲ್ಲಿ ಅಸ್ಸಾಂನ ಹೈಲಕಂಡಿಯಲ್ಲಿ ಹೊಸದಾಗಿ ರೂಪುಗೊಂಡ ಅಲ್ಗಾಪುರ-ಕಟ್ಲಿಚೆರಾ ಕ್ಷೇತ್ರವು ಅತಿ ಹೆಚ್ಚು ಅಭ್ಯರ್ಥಿಗಳನ್ನು ಹೊಂದಿದೆ. ಇಲ್ಲಿ 15 ಅಭ್ಯರ್ಥಿಗಳು ಕಣದಲ್ಲಿದ್ದು, ಇದರಲ್ಲಿ ಮೂವರು ಹಾಲಿ ಶಾಸಕರು. ಶಾಸಕರಲ್ಲಿ ಅಲ್ಗಾಪುರ ಶಾಸಕ ನಿಜಾಂ ಉದ್ದೀನ್ ಚೌಧರಿ ಮತ್ತು ಕಟ್ಲಿಚೆರಾ ಶಾಸಕ ಸುಜಮ್ ಉದ್ದೀನ್ ಲಸ್ಕರ್ ಸ್ವತಂತ್ರ ಅಭ್ಯರ್ಥಿಗಳಾಗಿ ಸ್ಪರ್ಧಿಸುತ್ತಿದ್ದಾರೆ. ಹೈಲಕಂಡಿ ಶಾಸಕ ಜಾಕಿರ್ ಹುಸೇನ್ ಬಿಜೆಪಿ ಮಿತ್ರಪಕ್ಷವಾದ ಅಸೋಮ್ ಗಣ ಪರಿಷತ್ (AGP) ಟಿಕೆಟ್‌ನಲ್ಲಿ ಸ್ಪರ್ಧಿಸುತ್ತಿದ್ದಾರೆ. 2021ರ ಚುನಾವಣೆಯಲ್ಲಿ, ಅವರೆಲ್ಲರೂ ಎಐಯುಡಿಎಫ್ ಶಾಸಕರಾಗಿ ಆಯ್ಕೆಯಾಗಿದ್ದರು. ಆದರೆ 2023ರ ಕ್ಷೇತ್ರ ಮರುವಿಂಗಡಣೆಯ ವೇಳೆ ಅವರು ತಮ್ಮ ಕ್ಷೇತ್ರಗಳನ್ನು ಕಳೆದುಕೊಂಡರು. ಕ್ಷೇತ್ರ ಮರುವಿಂಗಡಣೆಯ ನಂತರ, ಬಂಗಾಳಿ ಮಾತನಾಡುವ ಬರಾಕ್ ಕಣಿವೆಯಲ್ಲಿ ಹೈಲಕಂಡಿ ಜಿಲ್ಲೆಯ ಸ್ಥಾನಗಳ ಸಂಖ್ಯೆಯನ್ನು ಮೂರರಿಂದ ಎರಡಕ್ಕೆ ಇಳಿಸಲಾಯಿತು. ಅಲಗಾಪುರ ಮತ್ತು ಕಟ್ಲಿಚೆರಾ ಕ್ಷೇತ್ರಗಳನ್ನು ವಿಲೀನಗೊಳಿಸಿ 2.7 ಲಕ್ಷಕ್ಕೂ ಹೆಚ್ಚು ಮತದಾರರೊಂದಿಗೆ ಹೊಸ ಸ್ಥಾನವನ್ನು ರಚಿಸಲಾಯಿತು. ಇದೇ ವೇಳೆ ಹೈಲಕಂಡಿ ಸ್ಥಾನದ ಪರಿಸ್ಥಿತಿಯೂ ಬದಲಾಗಿದೆ. ಮುಸ್ಲಿಂ ಶಾಸಕರು ಪ್ರತಿನಿಧಿಸುವ ಮೂರೂ ಕ್ಷೇತ್ರಗಳು ಮುಸ್ಲಿಂ-ಹಿಂದೂ ಜನಸಂಖ್ಯೆಯನ್ನು ಹೊಂದಿದ್ದವು. ಆದರೆ ಮರುವಿಂಗಡಣೆಯ ನಂತರ ಅಲಗಾಪುರ-ಕಟ್ಲಿಚೆರಾ ಸುಮಾರು 80% ಮುಸ್ಲಿಂ ಮತದಾರರನ್ನು ಹೊಂದಿರುವ ದೊಡ್ಡ ಕ್ಷೇತ್ರವಾಗಿದೆ. ಹೈಲಕಂಡಿಯಲ್ಲಿ ಬಹುಪಾಲು ಮತದಾರರು ಹಿಂದೂಗಳಾಗಿದ್ದಾರೆ. ಆದ್ದರಿಂದ ಹಾಲಿ ಹೈಲಕಂಡಿ ಶಾಸಕರು ಅಲ್ಲಿಂದ ಗೆಲ್ಲಲು ಸಾಧ್ಯವಾಗುವುದಿಲ್ಲ. ಅದಕ್ಕಾಗಿಯೇ ಅವರು ಕಟ್ಲಿಚೆರಾ-ಅಲಗಾಪುರದಿಂದ ಸ್ಪರ್ಧಿಸುತ್ತಿದ್ದಾರೆ, ಎಂದು ಬರಾಕ್ ಕಣಿವೆಯ ಹಿರಿಯ ಪತ್ರಕರ್ತರೊಬ್ಬರು ಹೇಳಿರುವುದಾಗಿ ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. 2023ರ ಕ್ಷೇತ್ರ ಮರುವಿಂಗಡಣೆಯ ನಂತರ ಅಸ್ಸಾಂನಲ್ಲಿ ನಡೆಯುತ್ತಿರುವ ಮೊದಲ ವಿಧಾನಸಭಾ ಚುನಾವಣೆ ಇದಾಗಿದ್ದು, ಇದರ ಪರಿಣಾಮವಾಗಿ ಅದರ ರಾಜಕೀಯ ನಕ್ಷೆಯಲ್ಲಿ ಗಮನಾರ್ಹ ಬದಲಾವಣೆಗಳಾಗಿವೆ. ಕ್ಷೇತ್ರ ಮರುವಿಂಗಡಣೆಯು ಬೋಡೋಲ್ಯಾಂಡ್ ಪ್ರಾದೇಶಿಕ ಪ್ರದೇಶದ ಸ್ಥಾನಗಳ ಸಂಖ್ಯೆಯನ್ನು 11ರಿಂದ 15ಕ್ಕೆ ಹೆಚ್ಚಿಸಲು ಕಾರಣವಾಗಿದ್ದು, ಅನೇಕ ಸ್ಥಾನಗಳ ಬಾಹ್ಯರೇಖೆಗಳನ್ನು ಬದಲಾಯಿಸಿದೆ. ಹೀಗೆ ಹಲವಾರು ಹಾಲಿ ಶಾಸಕರು ಕ್ಷೇತ್ರಗಳನ್ನು ಕಳೆದುಕೊಂಡಿದ್ದು, ಇದರಲ್ಲಿ ಶಿವಸಾಗರ್ ಜಿಲ್ಲೆಯ ಅಮ್ಗುರಿ ಮತ್ತು ದಿಬ್ರುಗಢ ಜಿಲ್ಲೆಯ ಚಬುವಾ ಕೂಡ ಸೇರಿವೆ. ಕ್ಷೇತ್ರ ಮರುವಿಂಗಡಣೆಯ ಅತಿದೊಡ್ಡ ಪರಿಣಾಮವು ಹೊಸ ಅಸ್ಸಾಂ ಸದನದಲ್ಲಿ ಅಲ್ಪಸಂಖ್ಯಾತರ ಪ್ರಾತಿನಿಧ್ಯದ ಮೇಲೆ ಇರುತ್ತದೆ. ಅಲ್ಪಸಂಖ್ಯಾತ ಮತದಾರರು ನಿರ್ಣಾಯಕ ಪಾತ್ರ ವಹಿಸುವ ಕ್ಷೇತ್ರಗಳು ರಾಜ್ಯದ 126 ಸ್ಥಾನಗಳಲ್ಲಿ ಸುಮಾರು 35ರಿಂದ ಸುಮಾರು 23ಕ್ಕೆ ಇಳಿದಿವೆ ಎಂದು ಹಲವಾರು ಪಕ್ಷಗಳು ಮತ್ತು ವೀಕ್ಷಕರು ಅಂದಾಜಿಸಿದ್ದಾರೆ. ಈಗ ಅಲ್ಪಸಂಖ್ಯಾತರಿರುವ ಅನೇಕ ಕ್ಷೇತ್ರಗಳಲ್ಲಿ ನಡೆಯುತ್ತಿರುವ ಸ್ಪರ್ಧೆಗಳಲ್ಲಿ ಇದು ಗೋಚರಿಸುತ್ತದೆ. ಆದರೆ, ಈ ಪ್ರಕ್ರಿಯೆಯು ಅಸ್ಸಾಂ ಮತ್ತು ಅದರ ಸ್ಥಳೀಯ ಜನರ ಹಿತಾಸಕ್ತಿಗಳು ಮತ್ತು ಆಕಾಂಕ್ಷೆಗಳನ್ನು ರಕ್ಷಿಸಿದೆ ಎಂದು ಬಿಜೆಪಿ ಸಮರ್ಥಿಸಿಕೊಂಡಿದೆ. ಅಲ್ಗಾಪುರ-ಕಟ್ಲಿಚೆರಾದಂತೆ, ಬಾರ್ಪೇಟಾ ಜಿಲ್ಲೆಯ ಹೊಸ ಮಂಡಿಯಾ ಕ್ಷೇತ್ರದಲ್ಲಿ ಒಟ್ಟು 2.8 ಲಕ್ಷ ಮತದಾರರು ಇದ್ದಾರೆ. ಬಾಗ್ಬೋರ್ ಮತ್ತು ಜಾನಿಯಾ ಸ್ಥಾನಗಳನ್ನು ವಿಲೀನಗೊಳಿಸುವ ಮೂಲಕ ಈ ಕ್ಷೇತ್ರವನ್ನು ಮಾಡಲಾಗಿದೆ. ಬಾಗ್ಬೋರ್ ಮತ್ತು ಜಾನಿಯಾ ಎರಡೂ ಕ್ಷೇತ್ರಗಳ ಹಾಲಿ ಶಾಸಕರು ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಮಾಜಿ ಕಾಂಗ್ರೆಸ್ ನಾಯಕ ಶೆರ್ಮನ್ ಅಲಿ ಅಹ್ಮದ್ ಬಾಗ್ಬೋರ್‌ನಲ್ಲಿ ಟಿಎಂಸಿ ಟಿಕೆಟ್‌ ನಲ್ಲಿ ಸ್ಪರ್ಧಿಸುತ್ತಿದ್ದು, ಎಐಯುಡಿಎಫ್ ನಾಯಕ ಹಫೀಝ್ ರಫೀಕುಲ್ ಇಸ್ಲಾಂ ಜಾನಿಯಾದಲ್ಲಿ ಕಣಕ್ಕಿಳಿದಿದ್ದಾರೆ. ಮಂಡಿಯಾ ಚುನಾವಣೆಯ ರೇಸ್‌ನಲ್ಲಿ ಕಾಂಗ್ರೆಸ್‌ನ ಅಬ್ದುಲ್ ಖಲೀಕ್ ಕೂಡ ಇದ್ದಾರೆ. ಅವರು ಈ ಹಿಂದೆ ಬಾರ್ಪೇಟಾದ ಸಂಸದರಾಗಿ ಸೇವೆ ಸಲ್ಲಿಸಿದ್ದರೂ, ಕ್ಷೇತ್ರ ಮರುವಿಂಗಡಣೆಯಿಂದ ತಮ್ಮ ಕ್ಷೇತ್ರ ಮರುವಿಂಗಡಣೆ ಆದ ನಂತರ 2024ರ ಲೋಕಸಭಾ ಚುನಾವಣೆಯಿಂದ ಹೊರಗುಳಿದಿದ್ದರು. ಈ ಕ್ರಮವು ಅಲ್ಲಿನ ಅಲ್ಪಸಂಖ್ಯಾತ ಮತದಾರರ ನಿರ್ಣಾಯಕ ಪ್ರಭಾವವನ್ನು ತಟಸ್ಥಗೊಳಿಸುತ್ತದೆ ಎಂದು ವ್ಯಾಪಕವಾಗಿ ಪರಿಗಣಿಸಲಾಗಿದೆ. ಕಳೆದ ಕೆಲವು ದಿನಗಳಲ್ಲಿ ಮಂಡಿಯಾದಲ್ಲಿ ತೀವ್ರ ಪೈಪೋಟಿ ನಡೆಯುತ್ತಿರುವುದರಿಂದ, ಎಐಯುಡಿಎಫ್‌ ನಿಂದ ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಉವೈಸಿ, ಟಿಎಂಸಿಯಿಂದ ಸಯಾನಿ ಘೋಷ್ ಮತ್ತು ಕಾಂಗ್ರೆಸ್‌ ನಿಂದ ಇಮ್ರಾನ್ ಪ್ರತಾಪ್‌ಗಢಿ ಸೇರಿದಂತೆ ಹಲವು ಪ್ರಮುಖರು ಇಲ್ಲಿ ಪ್ರಚಾರ ನಡೆಸಿದ್ದಾರೆ. ನೆರೆಯ ಪ್ರದೇಶಗಳಲ್ಲಿ ಹಾಲಿ ಶಾಸಕರು ಬೇರೆ ಕ್ಷೇತ್ರಗಳಲ್ಲಿ ಕಣಕ್ಕಿಳಿದಿದ್ದಾರೆ. ಉದಾಹರಣೆಗೆ, ಬಾರ್ಪೇಟಾದ ಕಾಂಗ್ರೆಸ್ ಶಾಸಕ ಅಬ್ದುರ್ ರಹೀಮ್ ಅಹ್ಮದ್ ಅವರು ತಮ್ಮ ಪಕ್ಷದ ಟಿಕೆಟ್‌ ನಲ್ಲಿ ಚೆಂಗಾದಲ್ಲಿ ಸ್ಪರ್ಧಿಸುತ್ತಿದ್ದಾರೆ. ಏಕೆಂದರೆ ಅವರ ಸ್ಥಾನವನ್ನು ಪರಿಶಿಷ್ಟ ಜಾತಿ (SC) ಅಭ್ಯರ್ಥಿಗಳಿಗೆ ಕಾಯ್ದಿರಿಸಲಾಗಿದೆ. ಅದೇ ರೀತಿ, ಗೋಲ್‌ ಪಾರ ಪಶ್ಚಿಮವನ್ನು ಪರಿಶಿಷ್ಟ ಪಂಗಡ (ST) ನಾಮನಿರ್ದೇಶಿತರಿಗೆ ಕಾಯ್ದಿರಿಸಲಾಗಿದೆ. ಆದ್ದರಿಂದ ಹಾಲಿ ಕಾಂಗ್ರೆಸ್ ಶಾಸಕ ಅಬ್ದುರ್ ರಶೀದ್ ಮಂಡಲ್ ಅವರು ಈಗ ಗೋಲ್‌ಪಾರ ಪೂರ್ವದಿಂದ ರೈಜೋರ್ ದಳ ಅಭ್ಯರ್ಥಿಯಾಗಿ ಹಾಲಿ ಕಾಂಗ್ರೆಸ್ ಶಾಸಕ ಅಬುಲ್ ಕಲಾಂ ರಶೀದ್ ಆಲಂ ವಿರುದ್ಧ ಸ್ಪರ್ಧಿಸುತ್ತಿದ್ದಾರೆ. ಕೆಲವು ಸ್ಥಾನಗಳಲ್ಲಿ ವಿರೋಧ ಪಕ್ಷದ ಬೆಂಬಲಿಗರಲ್ಲಿ ಅಭ್ಯರ್ಥಿಗಳ ಬದಲಾವಣೆಯು ಅಸಮಾಧಾನವನ್ನು ಉಂಟುಮಾಡಿದೆ. ಏಕೆಂದರೆ ಅವರು ಹೊಸ ಅಭ್ಯರ್ಥಿಗಳನ್ನು ಸ್ಥಳೀಯರು ಎಂದು ಪರಿಗಣಿಸುತ್ತಿಲ್ಲ. ಕಾಂಗ್ರೆಸ್ ಪಕ್ಷವು ತಮಗೆ ಸ್ಪಷ್ಟ ಆಯ್ಕೆಯಾಗಿರುತ್ತಿತ್ತು. ಆದರೆ ಪ್ರಸ್ತುತ ಪಕ್ಷದ ಅಭ್ಯರ್ಥಿ ಸ್ಥಳೀಯರಲ್ಲ, ಅವರು ಬಾರ್ಪೇಟಾದವರು. ಅವರು ಸ್ಥಳೀಯ ಕಾಳಜಿಗಳನ್ನು ಎಷ್ಟು ಸುಲಭವಾಗಿ ಪ್ರತಿನಿಧಿಸುತ್ತಾರೆ ಅಥವಾ ಪ್ರತಿನಿಧಿಸಲು ಸಾಧ್ಯವಾಗುತ್ತದೆ ಎಂಬುದರ ಬಗ್ಗೆ ನಮ್ಮಲ್ಲಿ ಹಲವರಿಗೆ ಕಳವಳವಿದೆ. ಇದು ಸ್ಪರ್ಧೆಯನ್ನು ತೀವ್ರಗೊಳಿಸುತ್ತದೆ, ಎಂದು ಚೆಂಗಾ ನಿವಾಸಿ ಜಹರುಲ್ ಇಸ್ಲಾಂ ಹೇಳಿದ್ದಾರೆ. ಪ್ರಾತಿನಿಧ್ಯದ ಬಿಕ್ಕಟ್ಟನ್ನು ಮೀರಿ, ಎನ್‌ಡಿಎ ಅಲ್ಪಸಂಖ್ಯಾತ ಮತದಾರರಲ್ಲಿ ಹೆಚ್ಚಿನ ಜಾಗವನ್ನು ಕಂಡುಕೊಳ್ಳುತ್ತಿದೆ ಎಂದು ದಿಬ್ರುಗಢ ವಿಶ್ವವಿದ್ಯಾಲಯದ ರಾಜಕೀಯ ವಿಜ್ಞಾನ ಸಂಶೋಧಕ ಅಹ್ಮದ್ ತೋಹಿದಸ್ ಜಮಾನ್ ಹೇಳಿದ್ದಾರೆ. ಗುರುತಿನ ರಾಜಕೀಯ, ಪೌರತ್ವ ಸಮಸ್ಯೆಗಳು, ಬಾಂಗ್ಲಾದೇಶಕ್ಕೆ ತಳ್ಳುವಿಕೆ ಮತ್ತು ಕ್ಷೇತ್ರ ಮರುವಿಂಗಡಣೆಯಂಥ ಅಂಶಗಳು ಬೆದರಿಕೆಯ ಗ್ರಹಿಕೆಯ ಬಲವಾದ ಅರ್ಥವನ್ನು ಸೃಷ್ಟಿಸಿವೆ. ಪರಿಣಾಮವಾಗಿ, ಅಲ್ಪಸಂಖ್ಯಾತ ಸಮುದಾಯದ ಕೆಲವು ವಿಭಾಗಗಳು ಎನ್‌ಡಿಎಯನ್ನು ಬೆಂಬಲಿಸುತ್ತಿವೆ. ಈ ಕ್ಷೇತ್ರಗಳಲ್ಲಿ ಎಜಿಪಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಮೂಲಕ, ಮೈತ್ರಿಕೂಟವು ಮಧ್ಯಮ ನೆಲೆಯನ್ನು ಸೃಷ್ಟಿಸುತ್ತದೆ. ಮತದಾರರು ಬಿಜೆಪಿಗೆ ನೇರವಾಗಿ ಮತ ಚಲಾಯಿಸದೆ ಸರ್ಕಾರದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ಅನುವು ಮಾಡಿಕೊಡುತ್ತದೆ ಎಂದು ಜಮಾನ್ ತಿಳಿಸಿದ್ದಾರೆ. ಎಜಿಪಿ ತನ್ನ 26 ಅಭ್ಯರ್ಥಿಗಳಲ್ಲಿ 13 ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ, ಆದರೆ 89 ಅಭ್ಯರ್ಥಿಗಳನ್ನು ಹೊಂದಿರುವ ಬಿಜೆಪಿ ಪಟ್ಟಿಯಲ್ಲಿ ಒಬ್ಬನೇ ಒಬ್ಬ ಮುಸ್ಲಿಂ ಕೂಡ ಇಲ್ಲ. ಬರ್ಖೇತ್ರಿಯಲ್ಲಿ ಈ ಪರಿಗಣನೆಗಳು ಸ್ಪಷ್ಟವಾಗಿ ಕಂಡುಬರುತ್ತವೆ, ಅಲ್ಲಿ ಅನೇಕ ನಿವಾಸಿಗಳು ಬಿಜೆಪಿಯನ್ನು ಆಯ್ಕೆಯಾಗಿ ಪರಿಗಣಿಸುತ್ತಿರುವುದಾಗಿ ಹೇಳಿದ್ದಾರೆ. ಚುನಾವಣಾ ಆಯೋಗದ ಇತ್ತೀಚಿನ ವಿಶೇಷ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಮುಸ್ಲಿಂ ಮತದಾರರನ್ನು ಮತದಾರರ ಪಟ್ಟಿಯಲ್ಲಿ ಸೇರಿಸುವುದರ ವಿರುದ್ಧ ಸಾಮೂಹಿಕ ಆಕ್ಷೇಪಣೆಗಳು ಬಂದ ಕ್ಷೇತ್ರಗಳಲ್ಲಿ ಇದೂ ಒಂದು. ಈ ವಿವಾದದ ಬಗ್ಗೆ ಮಾತನಾಡಿದ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, ಮಿಯಾಸ್ (ಬಂಗಾಳಿ ಮಾತನಾಡುವ ಮುಸ್ಲಿಮರಿಗೆ ಅವಹೇಳನಕಾರಿ ಪದ) ಗೆ ತೊಂದರೆ ಉಂಟುಮಾಡಲು ಬಿಜೆಪಿ ಕಾರ್ಯಕರ್ತರು ಆಕ್ಷೇಪಣೆಗಳನ್ನು ಸಲ್ಲಿಸುವಂತೆ ಪ್ರೋತ್ಸಾಹಿಸಿದ್ದಾಗಿ ಹೇಳಿದ್ದಾರೆ. ಬಿಜೆಪಿಗೆ ಮತ ಹಾಕುವ ಮೂಲಕ, ಮುಖ್ಯಮಂತ್ರಿಗೆ ನಮ್ಮ ಬೆಂಬಲವಿದೆ ಎಂದು ತೋರಿಸಬಹುದು. ಬಹುಶಃ ಅದು ನಮಗೆ ಉತ್ತಮವಾಗಬಹುದು, ಅಂತಾರೆ ಬರ್ಖೇತ್ರದ ಲಾರ್ಕುಚಿ ಗ್ರಾಮದ 45 ವರ್ಷದ ಫರ್ಮಾನ್ ಅಲಿ. ಸಮುದಾಯದ ವಿರುದ್ಧ ಮಾಡಿದ ಎಲ್ಲಾ ಭಾಷಣಗಳು ಮತ್ತು ಹೇಳಿಕೆಗಳ ಹೊರತಾಗಿಯೂ ಕೆಲವರು ಸರ್ಕಾರದ ಸವಲತ್ತುಗಳನ್ನು ಪಡೆಯುತ್ತಿದ್ದಾರೆ ಎಂಬುದು ಸತ್ಯ. ಮತ್ತೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವ ಸಾಧ್ಯತೆ ಹೆಚ್ಚಿರುವುದರಿಂದ, ಸರ್ಕಾರದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದು ಉತ್ತಮ ಎಂದು ಕೆಲವರು ಭಾವಿಸುತ್ತಿದ್ದಾರೆ, ಎಂದು ಬರ್ಖೇತ್ರಿಯ ರಾಂಪುರ ಪಟ್ಟಣದಲ್ಲಿ ಖಾಸಗಿ ಶಾಲೆಯನ್ನು ನಡೆಸುತ್ತಿರುವ ಅಕ್ಕಶ್ ಅಹ್ಮದ್ ಹೇಳಿದರು. ಇದಕ್ಕೆ ಅವರು 2025ರ ಪಂಚಾಯತ್ ಚುನಾವಣೆಗಳನ್ನು ಸಾಕ್ಷಿಯಾಗಿ ಉಲ್ಲೇಖಿಸಿದರು. ಬಿಜೆಪಿ 90% ಮುಸ್ಲಿಂ ಜನಸಂಖ್ಯೆಯನ್ನು ಹೊಂದಿದ್ದರೂ ಬರ್ಖೇತ್ರಿ ಚಾರ್ ಜಿಲ್ಲಾ ಪರಿಷತ್ ಸ್ಥಾನವನ್ನು ಗೆದ್ದಿದೆ. ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಈ ವಿಜಯವನ್ನು ಬಾರ್ಪೇಟಾ ಮತ್ತು ಧುಬ್ರಿಯಲ್ಲಿ ಇದೇ ರೀತಿಯ ಗೆಲುವುಗಳೊಂದಿಗೆ ಆಗಾಗ್ಗೆ ಎತ್ತಿ ತೋರಿಸಿದ್ದಾರೆ. ಇದು ವಿಧಾನಸಭಾ ಚುನಾವಣೆಯಲ್ಲಿಯೂ ಪ್ರತಿಫಲಿಸುತ್ತದೆ ಎಂದು ಅಕ್ಕಶ್ ಅಹ್ಮದ್ ಹೇಳಿದ್ದಾರೆ.

ವಾರ್ತಾ ಭಾರತಿ 7 Apr 2026 9:40 pm

Ballari | ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ಅಗತ್ಯ : ಶಾಸಕ ಜೆ.ಎನ್.ಗಣೇಶ

ಬಳ್ಳಾರಿ/ಕಂಪ್ಲಿ: ಮಕ್ಕಳಿಗೆ ಗುಣಮಟ್ಟದ ಹಾಗೂ ಮೌಲ್ಯಯುತ ಶಿಕ್ಷಣ ಅತ್ಯಂತ ಅಗತ್ಯ ಎಂದು ಶಾಸಕ ಜೆ.ಎನ್. ಗಣೇಶ ಹೇಳಿದರು. ಪಟ್ಟಣದ ವಾಲ್ಮೀಕಿ ವೃತ್ತದ ಬಳಿಯ ಹೊಸಪೇಟೆ ಬೈಪಾಸ್ ರಸ್ತೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಎದುರುಗಡೆಯಲ್ಲಿರುವ ಶ್ರೀನಿಧಿ ಎಜ್ಯುಕೇಶನ್ ಟ್ರಸ್ಟ್‌ನ ಹಲೋ ಕಿಡ್ಸ್ ಶೌರ್ಯ ವಿದ್ಯಾಲಯವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂಗ್ಲಿಷ್ ಶಿಕ್ಷಣವೊಂದೇ ಮುಖ್ಯವಲ್ಲ. ಅಂಕಪಟ್ಟಿಗೆ ಸೀಮಿತಗೊಳಿಸದೇ ಎಲ್ಲಾ ಆಯಾಮಗಳಲ್ಲಿ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾದ ವಾತಾವರಣ ಕಲ್ಪಿಸಬೇಕು ಎಂದು ತಿಳಿಸಿದರು. ಪೋಷಕರು ಮಕ್ಕಳ ಅಭಿರುಚಿಯನ್ನು ಗಮನಿಸಿ ಪ್ರೋತ್ಸಾಹ ನೀಡಬೇಕು. ಇತ್ತೀಚೆಗೆ ಮಕ್ಕಳು ಮೊಬೈಲ್‌ಗೆ ಅಂಟಿಕೊಳ್ಳುತ್ತಿರುವುದು ಆತಂಕಕಾರಿ ಬೆಳವಣಿಗೆ. ಆದ್ದರಿಂದ ಮೌಲ್ಯಾಧಾರಿತ ಶಿಕ್ಷಣ ನೀಡುವುದು ಅಗತ್ಯವಾಗಿದೆ. ಶಿಕ್ಷಣದ ಜೊತೆಗೆ ಸಂಸ್ಕೃತಿ ಹಾಗೂ ಸಂಸ್ಕಾರಗಳನ್ನೂ ಮಕ್ಕಳಲ್ಲಿ ಬೆಳೆಸಬೇಕು ಎಂದು ಹೇಳಿದರು. ನೂತನ ಶಾಲೆಯ ಮುಖ್ಯಶಿಕ್ಷಕಿ ಬಿ. ದುರ್ಗಾಲಕ್ಷಿ ಮಾತನಾಡಿ, ಚಿಕ್ಕಮಕ್ಕಳಿಗೆ ಸುಲಭ ಮತ್ತು ಪರಿಣಾಮಕಾರಿ ರೀತಿಯಲ್ಲಿ ಶಿಕ್ಷಣ ನೀಡಲಾಗುತ್ತದೆ. ನುರಿತ ಶಿಕ್ಷಕರಿಂದ ಗುಣಮಟ್ಟದ ಶಿಕ್ಷಣ ಒದಗಿಸುವ ಉದ್ದೇಶದಿಂದ ಶಾಲೆಯನ್ನು ಪ್ರಾರಂಭಿಸಲಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಮುಖ್ಯಾಧಿಕಾರಿ ಬಿ. ಮಲ್ಲಿಕಾರ್ಜುನ, ಗ್ಯಾರಂಟಿ ಯೋಜನೆಯ ತಾಲೂಕು ಸಮಿತಿ ಅಧ್ಯಕ್ಷ ಕೆ. ಶ್ರೀನಿವಾಸರಾವ್, ಎಪಿಎಂಸಿ ಅಧ್ಯಕ್ಷ ಹಬೀಬ್ ರೆಹಮಾನ್, ಮುಖಂಡರಾದ ಕೆ.ಎಸ್. ಚಾಂದ್ ಬಾಷಾ ಸೇರಿದಂತೆ ಹಲವರು, ಪೋಷಕರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 7 Apr 2026 9:37 pm

ಕಸ್ಟಡಿಯಲ್ಲಿದ್ದ ತಂದೆ-ಮಗನಿಗೆ ಚಿತ್ರಹಿಂಸೆ ನೀಡಿ ಕೊಲೆ: ತಮಿಳುನಾಡಿನ 9 ಪೊಲೀಸರಿಗೆ ಮರಣದಂಡನೆ: ಏನಿದು ಪ್ರಕರಣ?

ಏಪ್ರಿಲ್ 6, 2026ರಂದು ಮಧುರೈ ನ್ಯಾಯಾಲಯವು ಸಾತಂಕುಲಂ ಕಸ್ಟಡಿ ಸಾವು ಪ್ರಕರಣದಲ್ಲಿ ಶಿಕ್ಷೆಗೊಳಗಾದ ಒಂಬತ್ತು ಪೊಲೀಸ್ ಸಿಬ್ಬಂದಿಗೆ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿ, ಎಲ್ಲಾ ಒಂಬತ್ತು ಆರೋಪಿಗಳಿಗೆ ಮರಣದಂಡನೆ ವಿಧಿಸಿತು. ಮಧುರೈನ ಮೊದಲ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಜೂನ್ 2020ರಲ್ಲಿ ಪಿ. ಜಯರಾಜ್ ಮತ್ತು ಅವರ ಮಗ ಜೆ. ಬೆನಿಕ್ಸ್ ಅವರ ಕಸ್ಟಡಿ ಚಿತ್ರಹಿಂಸೆ ಮತ್ತು ಸಾವು ಪ್ರಕರಣದಲ್ಲಿ ಒಂಬತ್ತು ಆರೋಪಿಗಳು ತಪ್ಪಿತಸ್ಥರೆಂದು ಘೋಷಿಸಿದ ಒಂದು ವಾರದ ನಂತರ ಈ ಶಿಕ್ಷೆ ವಿಧಿಸಲಾಗಿದೆ. ಸಾಮಾನ್ಯ ನಾಗರಿಕರು ಇದೇ ಅಪರಾಧವನ್ನು ಮಾಡಿದ್ದರೆ, ಸಾಮಾನ್ಯ ಶಿಕ್ಷೆಯನ್ನು ನೀಡಬಹುದಿತ್ತು. ಆದರೆ ಪೊಲೀಸರೇ ಅಪರಾಧ ಮಾಡಿದ್ದಾರೆ ಎಂದು ಆದೇಶ ಹೊರಡಿಸಿದ ನ್ಯಾಯಾಧೀಶ ಮುತ್ತುಕುಮಾರನ್ ಹೇಳಿದ್ದಾರೆ. ಈ ಪ್ರಕರಣವು ಕಸ್ಟಡಿ ಹಿಂಸಾಚಾರದ ಸ್ಪಷ್ಟ ನಿದರ್ಶನವಾಗಿದೆ ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿದ್ದು, ತಂದೆ ಮತ್ತು ಮಗನ ಮೇಲೆ ಪೊಲೀಸ್ ಕಸ್ಟಡಿಯಲ್ಲಿದ್ದಾಗ ಕ್ರೂರವಾಗಿ ಹಲ್ಲೆ ನಡೆಸಲಾಗಿದೆ ಎಂಬುದಕ್ಕೆ ಪುರಾವೆಗಳಿವೆ. ಇನ್ಸ್‌ಪೆಕ್ಟರ್ ಎಸ್. ಶ್ರೀಧರ್ ಹಲ್ಲೆಗೆ ಪ್ರಚೋದನೆ ನೀಡಿದ್ದಾರೆ. ಇತರ ಸಿಬ್ಬಂದಿಯೂ ಇದರಲ್ಲಿ ಭಾಗಿಯಾಗಿದ್ದು, ಪ್ರಕರಣವನ್ನು ಮುಚ್ಚಿಹಾಕಿದ್ದಾರೆ ಎಂದಿದೆ. ಶಿಕ್ಷೆಗೊಳಗಾದವರಲ್ಲಿ ಇನ್ಸ್‌ಪೆಕ್ಟರ್ ಶ್ರೀಧರ್, ಸಬ್-ಇನ್‌ಸ್ಪೆಕ್ಟರ್‌ಗಳಾದ ಬಾಲಕೃಷ್ಣನ್ ಮತ್ತು ರಘು ಗಣೇಶ್ ಹಾಗೂ ಪೊಲೀಸ್ ಸಿಬ್ಬಂದಿ ಮುರುಗನ್, ಸಮದುರೈ, ಮುತ್ತುರಾಜ, ಚೆಲ್ಲಾದುರೈ, ಥಾಮಸ್ ಫ್ರಾನ್ಸಿಸ್ ಮತ್ತು ವೇಲುಮುತ್ತು ಸೇರಿದ್ದಾರೆ. ಶಿಕ್ಷೆಯನ್ನು ಘೋಷಿಸುವಾಗ ನ್ಯಾಯಾಲಯವು ಇದನ್ನು ಅಧಿಕಾರದ ದುರುಪಯೋಗ ಎಂದು ಕರೆದಿದೆ. ರಾಜ್ಯದ ಅನೇಕ ಪೊಲೀಸ್ ಅಧಿಕಾರಿಗಳು ಸಮಗ್ರತೆಯಿಂದ ಸೇವೆ ಸಲ್ಲಿಸುತ್ತಾರೆ. ಈ ತೀರ್ಪು ಇತರರಲ್ಲಿ ಭಯವನ್ನು ಹುಟ್ಟುಹಾಕುವ ಉದ್ದೇಶವನ್ನು ಹೊಂದಿದೆ ಎಂದು ಹೇಳಿದೆ. ಜಯರಾಜ್ (58) ಮತ್ತು ಬೆನಿಕ್ಸ್ (31) ಅವರನ್ನು ಜೂನ್ 19, 2020ರಂದು ಕೋವಿಡ್-19 ಲಾಕ್‌ಡೌನ್ ಮಾನದಂಡಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದರು. ಕೆಲವು ದಿನಗಳ ನಂತರ ಅವರು ಕೋವಿಲ್‌ಪಟ್ಟಿ ಸರ್ಕಾರಿ ಆಸ್ಪತ್ರೆಯಲ್ಲಿ ನಿಧನರಾದರು. ಆ ನಂತರ ನಡೆದ ತನಿಖೆಯಿಂದ ಅವರಿಗೆ ಕಸ್ಟಡಿಯಲ್ಲಿ ಚಿತ್ರಹಿಂಸೆ ನೀಡಲಾಗಿತ್ತು ಎಂಬುದು ಸಾಬೀತಾಗಿತ್ತು. ತಂದೆ ಮತ್ತು ಮಗನ ಬಟ್ಟೆ ಬಿಚ್ಚಿ, ನಿರ್ದಯವಾಗಿ ಹಲ್ಲೆ ಮಾಡಲಾಯಿತು. ಇದನ್ನು ಓದಿದಾಗ ಹೃದಯ ಕಂಪಿಸುತ್ತದೆ ಎಂದು ನ್ಯಾಯಾಲಯ ಹೇಳಿದೆ. 2020 ಜೂನ್ 19ರಂದು ರಾತ್ರಿ ಏನೇನಾಯ್ತು? 31 ವರ್ಷದ ಜೆ. ಬೆನಿಕ್ಸ್ ತೂತುಕುಡಿ ಜಿಲ್ಲೆಯ ಸಾತಂಕುಲಂನಲ್ಲಿರುವ ಕಾಮರಾಜರ್ ಪ್ರತಿಮೆಯ ಬಳಿ ಮೊಬೈಲ್ ಫೋನ್ ಅಂಗಡಿಯನ್ನು ನಡೆಸುತ್ತಿದ್ದರು. ಸಾತಂಕುಲಂ, ಚೆನ್ನೈನಿಂದ ಸುಮಾರು 600 ಕಿ.ಮೀ ದೂರದಲ್ಲಿದೆ. ರಾತ್ರಿ 8 ಗಂಟೆ ಸುಮಾರಿಗೆ, ಬೆನಿಕ್ಸ್ ಅವರಿಗೆ ಅವರ ತಂದೆ ಪಿ. ಜಯರಾಜ್ ಅವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿಸಲಾಯಿತು. ಹಿಂದಿನ ದಿನ ಅವರ ಮರಗೆಲಸದ ಅಂಗಡಿಯ ಬಳಿ ನಡೆದ ವಾಗ್ವಾದಕ್ಕೆ ಸಂಬಂಧಿಸಿದಂತೆ ಜಯರಾಜ್ ಅವರನ್ನು ಸಾತಂಕುಲಂ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿತ್ತು. ಆತಂಕಗೊಂಡ ಬೆನಿಕ್ಸ್ ಪೊಲೀಸ್ ಠಾಣೆಗೆ ಹೋದರು. ಹಲವಾರು ಪ್ರತ್ಯಕ್ಷದರ್ಶಿಗಳ ಪ್ರಕಾರ, ಮೊದಲು ಅವರನ್ನು ಹೊರಗೆ ಕಾಯುವಂತೆ ಪೊಲೀಸರು ಹೇಳಿದರು. ನಂತರ ಅವರನ್ನು ಪೊಲೀಸರು ಒಳಗೆ ಕರೆದರು. ತನ್ನ ತಂದೆಯ ಮೇಲೆ ಹಲ್ಲೆ ಮಾಡಿದ್ದೇಕೆ ಎಂದು ಬೆನಿಕ್ಸ್ ಪೊಲೀಸರನ್ನು ಪ್ರಶ್ನಿಸಿದರು. ಹಾಗೆ ಕೇಳಿದ್ದೇ ತಪ್ಪಾಯಿತು. ಪೊಲೀಸರು ಬೆನಿಕ್ಸ್ ಜೊತೆಗಿದ್ದ ಸ್ನೇಹಿತರನ್ನು ಒಳಗೆ ಬಿಡಲಿಲ್ಲ. ಅವರು ರಾತ್ರಿಯಿಡೀ ಪೊಲೀಸ್ ಠಾಣೆಯ ಹೊರಗೆ ಕೂತರು. ಠಾಣೆಯ ಒಳಗೆ ಹೋದವರನ್ನು ಅವರಿಗೆ ನೋಡಲು ಸಾಧ್ಯವಾಗಲಿಲ್ಲ. ಎಫ್‌ಐಆರ್ ಪ್ರಕಾರ, ಜಯರಾಜ್ ಮತ್ತು ಬೆನಿಕ್ಸ್ ತಮ್ಮ ಅಂಗಡಿಯನ್ನು ಅನುಮತಿಸಲಾದ ಸಮಯಗಳನ್ನು ಮೀರಿ ತೆರೆದಿಡುವ ಮೂಲಕ ಕೋವಿಡ್-19 ಲಾಕ್‌ಡೌನ್ ನಿರ್ಬಂಧಗಳನ್ನು ಉಲ್ಲಂಘಿಸಿದ್ದಾರೆ ಎಂದು ಕಂಡುಬಂದಿದೆ. ಪೊಲೀಸರು ಚದುರಿಸಲು ಕೇಳಿದಾಗ, ಇಬ್ಬರು ಅಧಿಕಾರಿಗಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದರು, ನೆಲದ ಮೇಲೆ ಕುಳಿತು ಹೊರಳಾಡಿದರು. ಈ ವೇಳೆ ಅವರು ಗಾಯಗೊಂಡರು ಎಂದು ಪೊಲೀಸರು ಹೇಳಿದ್ದಾರೆ. ಇದಲ್ಲದೆ, ಇಬ್ಬರು ಪೊಲೀಸರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಎಫ್‌ಐಆರ್‌ ನಲ್ಲಿ ಆರೋಪಿಸಲಾಗಿದೆ. ಆದರೆ ಈ ಹೇಳಿಕೆಯನ್ನು ಪ್ರಶ್ನಿಸಲಾಯಿತು. ತಂದೆ ಮತ್ತು ಮಗನನ್ನು ಒಟ್ಟಿಗೆ ಠಾಣೆಗೆ ಕರೆತರಲಾಗಿಲ್ಲ; ರಾತ್ರಿಯಾಗುತ್ತಿದ್ದಂತೆ ಠಾಣೆಯೊಳಗೆ ಅವರಿಗೆ ಚಿತ್ರಹಿಂಸೆ ನೀಡಲಾಗುತ್ತಿತ್ತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ರಾತ್ರಿ 11.30ರ ಸುಮಾರಿಗೆ ಸಬ್-ಇನ್‌ಸ್ಪೆಕ್ಟರ್ ರಘು ಗಣೇಶ್ ಅಲ್ಲಿಗೆ ಬಂದಿದ್ದಾರೆ; ನಂತರ ಹಲ್ಲೆಯ ತೀವ್ರತೆ ಹೆಚ್ಚಾಯಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಒಳಗಿನಿಂದ ಕಿರುಚಾಟ ಕೇಳಿಬಂದಿದೆ ಎಂದು ಠಾಣೆ ಹೊರಗೆ ಕಾಯುತ್ತಿದ್ದವರು ಹೇಳಿದ್ದಾರೆ. ಚಿತ್ರಹಿಂಸೆ ಆರೋಪ ತನ್ನ ತಂದೆಯನ್ನು ನೆಲಕ್ಕೆ ಕೆಡವಿ ಥಳಿಸಲಾಗಿತ್ತು. ಬೆನಿಕ್ಸ್ ಮಧ್ಯಪ್ರವೇಶಿಸಿದಾಗ, ಅವರ ಮೇಲೂ ಹಲ್ಲೆ ನಡೆಸಲಾಯಿತು. ಆಮೇಲೆ ಇಬ್ಬರನ್ನೂ ಬಂಧಿಸಿ ಠಾಣೆಯೊಳಗೆ ಸುಮಾರು ಎರಡು ಗಂಟೆಗಳ ಕಾಲ ಥಳಿಸಲಾಯಿತು ಎಂದು ಜಯರಾಜ್ ಅವರ ಮಗಳು ಪರ್ಸಿ ತಿಳಿಸಿದ್ದಾರೆ. ಅವರಿಬ್ಬರಿಗೆ ತೀವ್ರ ಗಾಯಗಳಾಗಿತ್ತು. ರಕ್ತಸ್ರಾವದಿಂದಾಗಿ ಅವರು ಹಲವಾರು ಬಾರಿ ಬಟ್ಟೆ ಬದಲಿಸಬೇಕಾಯಿತು ಎಂದು ಜಯರಾಜ್-ಬೆನಿಕ್ಸ್ ಕುಟುಂಬವನ್ನು ಪ್ರತಿನಿಧಿಸಿದ ವಕೀಲರು ಹೇಳಿದ್ದಾರೆ. ಈ ಹೇಳಿಕೆಗಳನ್ನು ನಂತರ ಮಹಿಳಾ ಕಾನ್‌ಸ್ಟೆಬಲ್ ಒಬ್ಬರ ಸಾಕ್ಷ್ಯದಿಂದ ಬಲಪಡಿಸಲಾಯಿತು. ರಾತ್ರಿಯಿಡೀ ಹಲ್ಲೆ ನಡೆಸಲಾಗಿತ್ತು ಎಂದು ಆಕೆ ತನಿಖಾಧಿಕಾರಿಗಳಿಗೆ ತಿಳಿಸಿದ್ದು, ಠಾಣೆಯೊಳಗಿನ ಟೇಬಲ್‌ಗಳು ಮತ್ತು ಲಾಠಿಗಳಲ್ಲಿ ರಕ್ತದ ಕಲೆಗಳಿದ್ದವು ಎಂದಿದ್ದಾರೆ. ಮದ್ರಾಸ್ ಹೈಕೋರ್ಟ್‌ನ ನಿರ್ದೇಶನಗಳನ್ನು ಅನುಸರಿಸಿ ರಾಜ್ಯದ ಸಿಬಿ-ಸಿಐಡಿಯಿಂದ ತನಿಖೆಯನ್ನು ವಹಿಸಿಕೊಂಡ ಸಿಬಿಐ, ಜಯರಾಜ್-ಬೆನಿಕ್ಸ್ ಅವರಿಗೆ ಚಿತ್ರಹಿಂಸೆ ನೀಡಿ ನಿರ್ದಯವಾಗಿ ಥಳಿಸಲಾಯಿತು ಎಂದು ವಾದಿಸಿತು. ಲೈಂಗಿಕ ಹಿಂಸೆಗೆ ಸಂಬಂಧಿಸಿದ ಆರೋಪಗಳು ಅತ್ಯಂತ ಗಂಭೀರ ಆರೋಪಗಳಲ್ಲಿ ಸೇರಿವೆ. ಬೆನಿಕ್ಸ್ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಕುಟುಂಬ ಸದಸ್ಯರು ಆರೋಪಿಸಿದ್ದಾರೆ. ವೈದ್ಯಕೀಯ ವರದಿಗಳು ಬರುವವರೆಗೂ ಎಚ್ಚರಿಕೆಯಿಂದ ಇರಬೇಕೆಂದು ತನಿಖಾಧಿಕಾರಿಗಳು ಒತ್ತಾಯಿಸಿದರೂ, ಆರೋಪದ ಬಗ್ಗೆ ಸಾರ್ವಜನಿಕ ಆಕ್ರೋಶ ತೀವ್ರವಾಗಿತ್ತು. ಬಂಧನ ಜೂನ್ 20ರಂದು ಪೊಲೀಸರು ಇಬ್ಬರನ್ನೂ ವೈದ್ಯಕೀಯ ಫಿಟ್‌ನೆಸ್ ಪರೀಕ್ಷೆಗೆ ಕರೆದೊಯ್ದು ನಂತರ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿದೆ ಎಂದು ಹೇಳಿದರು. ಕಾನೂನಿನ ಪ್ರಕಾರ, ಇಬ್ಬರ ದೈಹಿಕ ಸ್ಥಿತಿಯನ್ನು ಸಮರ್ಪಕವಾಗಿ ಪರೀಕ್ಷಿಸದೆ ಮ್ಯಾಜಿಸ್ಟ್ರೇಟ್ ರಿಮಾಂಡ್ ಆದೇಶಗಳನ್ನು ಹೊರಡಿಸಿದ್ದಾರೆ ಎಂಬ ಆರೋಪ ಇದೆ. ಪೆರುರಾನಿಯಲ್ಲಿ ಹತ್ತಿರದ ಜಿಲ್ಲಾ ಜೈಲು ಲಭ್ಯವಿದ್ದರೂ ಸಹ, ಸಾತಂಕುಲಂನಿಂದ ತಂದೆ ಮತ್ತು ಮಗನನ್ನು ಸುಮಾರು 100 ಕಿಲೋಮೀಟರ್ ದೂರದಲ್ಲಿರುವ ಕೋವಿಲ್‌ ಪಟ್ಟಿ ಸಬ್‌ಜೈಲಿಗೆ ಸಾಗಿಸಲಾಯಿತು. ಜೂನ್ 22ರ ರಾತ್ರಿ ಕಸ್ಟಡಿಯಲ್ಲಿದ್ದಾಗ ಬೆನಿಕ್ಸ್ ಅವರಿಗೆ ಎದೆನೋವು ಕಾಣಿಸಿಕೊಂಡಿತು. ಅವರನ್ನು ಕೋವಿಲ್‌ಪಟ್ಟಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು; ಅಲ್ಲಿ ಅವರು ನಿಧನರಾದರು. ಜೂನ್ 23ರ ಮುಂಜಾನೆ ಜಯರಾಜ್ ಕೂಡ ಅದೇ ಆಸ್ಪತ್ರೆಯಲ್ಲಿ ನಿಧನರಾದರು. ಸಾರ್ವಜನಿಕ ಆಕ್ರೋಶ ಮತ್ತು ರಾಜಕೀಯ ಒತ್ತಡ ಜಯರಾಜ್-ಬೆನಿಕ್ಸ್ ಸಾವಿನ ಬಳಿಕ ಸಾತಂಕುಲಂನಲ್ಲಿ ಅಂಗಡಿಯವರು ತಮ್ಮ ವ್ಯವಹಾರಗಳನ್ನು ಮುಚ್ಚಿ ಪ್ರತಿಭಟನೆ ನಡೆಸಿದರು. ತಮಿಳುನಾಡಿನಾದ್ಯಂತ ವಾಣಿಜ್ಯ ಸಂಸ್ಥೆಗಳು ಒಗ್ಗಟ್ಟಿನಿಂದ ಅಂಗಡಿ ಮುಚ್ಚಿ ಪ್ರತಿಭಟನೆ ವ್ಯಕ್ತಪಡಿಸಿದರು. ಸಾಮಾಜಿಕ ಮಾಧ್ಯಮಗಳಿಂದಾಗಿ ಪ್ರಕರಣವು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಗಮನ ಸೆಳೆಯಿತು. ಇದನ್ನು ಅಮೆರಿಕದಲ್ಲಿ ಜಾರ್ಜ್ ಫ್ಲಾಯ್ಡ್ ಸಾವಿನೊಂದಿಗೆ ಹೋಲಿಸಲಾಯಿತು. ಕೆಲವರು ಭಾರತದಲ್ಲಿ ಕಸ್ಟಡಿ ಹಿಂಸಾಚಾರವನ್ನು ಬಹಳ ಹಿಂದಿನಿಂದಲೂ ಕಡಿಮೆ ವರದಿ ಮಾಡಲಾಗಿದೆ ಎಂದು ವಾದಿಸಿದರು. ಇಬ್ಬರು ಸಬ್-ಇನ್‌ಸ್ಪೆಕ್ಟರ್‌ಗಳನ್ನು ಅಮಾನತುಗೊಳಿಸಲಾಯಿತು. ಇನ್ಸ್‌ ಪೆಕ್ಟರ್ ಶ್ರೀಧರ್ ಅವರನ್ನು ವರ್ಗಾಯಿಸಲಾಯಿತು. ಕೆಲವು ಕಾನ್‌ ಸ್ಟೆಬಲ್‌ಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ತೂತುಕುಡಿ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ. ನ್ಯಾಯಾಂಗ ಹಸ್ತಕ್ಷೇಪ ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠವು ಪ್ರಕರಣವನ್ನು ಸ್ವತಃ ಕೈಗೆತ್ತಿಕೊಂಡು ತನಿಖೆಯನ್ನು ಮೇಲ್ವಿಚಾರಣೆ ಮಾಡಲು ಮುಂದಾಯಿತು. ನ್ಯಾಯಮೂರ್ತಿಗಳಾದ ಪಿ.ಎಂ. ಪ್ರಕಾಶ್ ಮತ್ತು ಬಿ. ಪುಗಲೇಂಧಿ ಅವರನ್ನೊಳಗೊಂಡ ಪೀಠವು ವಿವರವಾದ ತನಿಖೆ ಮತ್ತು ಮರಣೋತ್ತರ ಪರೀಕ್ಷೆಯನ್ನು ಮೂವರು ವೈದ್ಯರ ತಂಡದಿಂದ ನಡೆಸಬೇಕೆಂದು ಆದೇಶಿಸಿತು. ನ್ಯಾಯಾಲಯವು ಮರಣೋತ್ತರ ಪರೀಕ್ಷೆಯನ್ನು ವಿಡಿಯೊ ಮಾಡಬೇಕೆಂದು ಸೂಚಿಸಿತು. ಪೊಲೀಸ್ ಠಾಣೆ ಮತ್ತು ಜೈಲು ದಾಖಲೆಗಳ ಸಿಸಿಟಿವಿ ದೃಶ್ಯಾವಳಿಗಳು ಸೇರಿದಂತೆ ಪ್ರಮುಖ ಸಾಕ್ಷ್ಯಗಳನ್ನು ಸಂರಕ್ಷಿಸಲು ಅದು ಆದೇಶಿಸಿತ್ತು. ಪ್ರಕರಣವನ್ನು ಅಂತಿಮವಾಗಿ ಸಿಬಿಐಗೆ ಹಸ್ತಾಂತರಿಸಲಾಯಿತು. ಅಲ್ಲಿ ಒಬ್ಬ ಇನ್ಸ್‌ಪೆಕ್ಟರ್, ಇಬ್ಬರು ಸಬ್-ಇನ್‌ ಸ್ಪೆಕ್ಟರ್‌ಗಳು ಮತ್ತು ಹಲವಾರು ಕಾನ್‌ಸ್ಟೆಬಲ್‌ಗಳು ಸೇರಿದಂತೆ 10 ಪೊಲೀಸರನ್ನು ಬಂಧಿಸಲಾಯಿತು. ಪ್ರಕರಣದಲ್ಲಿ ಬಂಧಿಸಲ್ಪಟ್ಟಿದ್ದ 10ನೇ ಆರೋಪಿ, ಆಗಿನ ವಿಶೇಷ ಸಬ್-ಇನ್‌ಸ್ಪೆಕ್ಟರ್ ಪಾಲ್ ದುರೈ, 2020 ಆಗಸ್ಟ್‌ನಲ್ಲಿ ಕೋವಿಡ್-19ರಿಂದ ನಿಧನರಾದರು. ಐದು ವರ್ಷಗಳಿಗೂ ಹೆಚ್ಚು ಕಾಲ ನಡೆದ ವಿಚಾರಣೆಯ ನಂತರ ಈ ಪ್ರಕರಣವನ್ನು ಅಪರೂಪದಲ್ಲಿ ಅಪರೂಪ ಎಂದು ಕರೆದ ನ್ಯಾಯಾಲಯವು 9 ಪೊಲೀಸರಿಗೆ ಮರಣದಂಡನೆ ವಿಧಿಸಿತು.

ವಾರ್ತಾ ಭಾರತಿ 7 Apr 2026 9:37 pm

ಜೈಪುರ| 400ಕೋಟಿ.ರೂ.ಸೈಬರ್ ವಂಚನೆ ಜಾಲ ಭೇದಿಸಿದ ಪೊಲೀಸರು

ಜೈಪುರ,ಎ. 7: ವಿದೇಶ ವ್ಯಾಪಾರದ ಮಹಾ ನಿರ್ದೇಶನಾಲಯ (ಡಿಜಿಎಫ್‌ಟಿ)ದ ಪೋರ್ಟಲ್‌ನಲ್ಲಿರುವ ದೇಶದಾದ್ಯಂತದ 400ಕ್ಕೂ ಅಧಿಕ ಕಂಪೆನಿಗಳ ನಿರ್ದೇಶಕರ ವ್ಯಕ್ತಿ ವಿವರಗಳನ್ನು ಹ್ಯಾಕ್ ಮಾಡುವಲ್ಲಿ ಭಾಗಿಯಾದ ಪ್ರಮುಖ ಸೈಬರ್ ವಂಚನೆ ಜಾಲವೊಂದನ್ನು ಜೈಪುರ ಪೊಲೀಸರು ಭೇದಿಸಿದ್ದಾರೆ. ಇದು ದುಬೈಯೊಂದಿಗೆ ನಂಟು ಹೊಂದಿರುವ ಡಿಜಿಎಫ್‌ಟಿ-ಐಸಿಇಜಿಎಟಿಇ ಪ್ರಮಾಣ ಪತ್ರ ಹಗರಣ. ಇದರ ಪರಿಣಾಮ ಕೋಟ್ಯಂತರ ರೂಪಾಯಿ ನಷ್ಟ ಉಂಟಾಗಿದೆ ಎಂದು ಜೈಪುರ ಪೊಲೀಸ್ ಕಮಿಷನರೇಟ್ ತಿಳಿಸಿದೆ. ಪೊಲೀಸರು ಬಹಿರಂಗಪಡಿಸಿದ ಮಾಹಿತಿಯ ಪ್ರಕಾರ, ಈ ಜಾಲ 400ಕ್ಕೂ ಅಧಿಕ ಕಂಪೆನಿಗಳ ನಿರ್ದೇಶಕರ ವ್ಯಕ್ತಿ ವಿವರವನ್ನು ಬದಲಾಯಿಸಿದೆ ಹಾಗೂ ಕೋಟ್ಯಂತರ ರೂಪಾಯಿ ನಷ್ಟ ಉಂಟು ಮಾಡಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಇದುವರೆಗೆ ಐವರು ಆರೋಪಿಗಳನ್ನು ಬಂಧಿಸಲಾಗಿದೆ. ಇವರೆಲ್ಲರೂ ದುಬೈಯಿಂದ ಕಾರ್ಯಾಚರಿಸುತ್ತಿರುವ ಜಾಲದ ಭಾಗವಾಗಿದ್ದಾರೆ ಎಂದು ಹೇಳಲಾಗಿದೆ. ಆರೋಪಿಗಳು ನಕಲಿ ಆಧಾರ್ ಹಾಗೂ ಪಾನ್ ಕಾರ್ಡ್‌ಗಳನ್ನು ಬಳಸಿಕೊಂಡು ಡಿಜಿಟಲ್ ಸಹಿ ಪ್ರಮಾಣಪತ್ರ (ಡಿಎಸ್‌ಸಿ) ಪಡೆದುಕೊಂಡಿದದ್ದಾರೆ ಎಂದು ತನಿಖೆ ಬಹಿರಂಗಪಡಿಸಿದೆ. ಈ ಪ್ರಮಾಣ ಪತ್ರಗಳನ್ನು ಸಾಮಾನ್ಯವಾಗಿ ಕಂಪೆನಿಯ ನಿರ್ದೇಶಕರು ಅಥವಾ ರಫ್ತುದಾರರ ಡಿಜಿಟಲ್ ಗುರುತನ್ನು ಪರಿಶೀಲಿಸಲು ಬಳಸಲಾಗುತ್ತದೆ. ಆದರೆ, ಆರೋಪಿಗಳು ಈ ಪ್ರಮಾಣ ಪತ್ರವನ್ನು ಬಳಸಿಕೊಂಡು ಐಸಿಇಜಿಎಟಿಇ ಪೋರ್ಟಲ್‌ಗೆ ಅನಧಿಕೃತ ಪ್ರವೇಶ ಪಡೆದಿದ್ದಾರೆ. ಅನಂತರ ಹ್ಯಾಕರ್‌ಗಳು ರಫ್ತುದಾರರ ಖಾತೆಗಳನ್ನು ಭೇದಿಸಿದ್ದಾರೆ. ಡ್ಯೂಟಿ ಕ್ರೆಡಿಟ್ ಸ್ಕ್ರಿಪ್ಸ್ (ಆಮದು/ರಫ್ತು ಸುಂಕವನ್ನು ಕಡಿಮೆ ಮಾಡಲು ನೀಡುವ ಪ್ರಮಾಣ ಪತ್ರಗಳು)ಅನ್ನು ನಕಲಿ ಖಾತೆಗೆ ವರ್ಗಾಯಿಸಿದ್ದಾರೆ. ಬಳಿಕ ನಗದೀಕರಿಸಿಕೊಂಡಿದ್ದಾರೆ ಎಂದು ಹೇಳಲಾಗಿದೆ.

ವಾರ್ತಾ ಭಾರತಿ 7 Apr 2026 9:35 pm

ಬಿಜೆಪಿ ಸಂಸದ ಸುರೇಶ್ ಗೋಪಿ ಆಯ್ಕೆ ಪ್ರಶ್ನಿಸಿದ ಅರ್ಜಿ ವಜಾಗೊಳಿಸಿದ ಕೇರಳ ಹೈಕೋರ್ಟ್‌

ತಿರುವನಂತಪುರಂ,ಎ.7: 2024ರ ಲೋಕಸಭಾ ಚುನಾವಣೆಯಲ್ಲಿ ತ್ರಿಶೂರ್ ಕ್ಷೇತ್ರದಲ್ಲಿ ಬಿಜೆಪಿ ಸಂಸದ ಸುರೇಶ್ ಗೋಪಿ ಅವರು ಜಯ ಗಳಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿಯನ್ನು ಕೇರಳ ಉಚ್ಚ ನ್ಯಾಯಾಲಯ ಮಂಗಳವಾರ ವಜಾಗೊಳಿಸಿದೆ. 2024ರ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಜೋಷಿ ವಿಲ್ಲಡಂ ಅವರು ಈ ಅರ್ಜಿ ಸಲ್ಲಿಸಿದ್ದರು. ಚುನಾವಣೆ ಸಂದರ್ಭ ಸುರೇಶ್ ಗೋಪಿ ಅವರು ಮತಗಳನ್ನು ಪಡೆಯಲು ಲಂಚ, ಎರಡು ಗುಂಪುಗಳ ನಡುವೆ ದ್ವೇಷ ಪ್ರಚೋದನೆ ಹಾಗೂ ಧಾರ್ಮಿಕ ಮನವಿ ಸೇರಿದಂತೆ ಅಕ್ರಮಗಳಲ್ಲಿ ತೊಡಗಿಕೊಂಡಿದ್ದರು ಎಂದು ವಿಲ್ಲಡಮ್ ಆರೋಪಿಸಿದ್ದಾರೆ. ಸುರೇಶ್ ಗೋಪಿ ವಿರುದ್ಧದ ಇನ್ನೊಂದು ಅರ್ಜಿ ಉಚ್ಚ ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿ ಇದೆ. ಆಲ್ ಇಂಡಿಯಾ ಯೂತ್ ಫೆಡರೇಶನ್‌ನ ನಾಯಕ ಹಾಗೂ ತ್ರಿಶೂರ್‌ನ ಮತದಾರ ಬಿನೋಯ್ ಎ.ಎಸ್. ಸಲ್ಲಿಸಿದ ಈ ಅರ್ಜಿಯನ್ನು ಉಚ್ಚ ನ್ಯಾಯಾಲಯ ಎಪ್ರಿಲ್ 1ರಂದು ವಿಚಾರಣೆಗೆ ಪರಿಗಣಿಸಿದೆ. ಜನತಾ ಪ್ರಾತಿನಿಧ್ಯ ಕಾಯ್ದೆಯ ನಿಯಮಗಳ ಅಡಿಯಲ್ಲಿ ಸುರೇಶ್ ಗೋಪಿ ಅವರ ಆಯ್ಕೆಯನ್ನು ಅನೂರ್ಜಿತವೆಂದು ಘೋಷಿಸುವಂತೆ ಅವರು ಕೋರಿದ್ದಾರೆ. ವಿಲ್ಲಡಂ ಅವರಂತೆ ಬಿನೋಯ್ ಎ.ಎಸ್. ಕೂಡ ಸುರೇಶ್ ಗೋಪಿ, ಅವರ ಚುನಾವಣಾ ಏಜೆಂಟ್ ಹಾಗೂ ಸಹವರ್ತಿಗಳು ಮತದಾರರನ್ನು ಸೆಳೆಯಲು ಧಾರ್ಮಿಕ ಭಾವನೆಗಳ ಪ್ರಚೋದನೆ, ಹಣಕಾಸು ನೆರವು ಹಾಗೂ ಇತರ ಸೌಲಭ್ಯಗಳ ಆಮಿಷ ಸೇರಿದಂತೆ ಅಕ್ರಮಗಳಲ್ಲಿ ತೊಡಗಿದ್ದರು ಎಂದು ಆರೋಪಿಸಿದ್ದಾರೆ.

ವಾರ್ತಾ ಭಾರತಿ 7 Apr 2026 9:34 pm

Ballari | 6.20 ಕೋಟಿ ರೂ. ವೆಚ್ಚದ ಸಿಸಿ ರಸ್ತೆ ಕಾಮಗಾರಿಗೆ ಶಾಸಕ ಗಣೇಶ ಭೂಮಿ ಪೂಜೆ

ಬಳ್ಳಾರಿ/ಕಂಪ್ಲಿ: ತಾಲೂಕಿನ ಗ್ರಾಮೀಣ ಭಾಗದಲ್ಲಿ ಸುಮಾರು 6.20 ಕೋಟಿ ರೂ. ವೆಚ್ಚದಲ್ಲಿ ಸಿಸಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಜೆ.ಎನ್. ಗಣೇಶ ಮಂಗಳವಾರ ಭೂಮಿ ಪೂಜೆ ನೆರವೇರಿಸಿದರು. ನಂತರ ಮಾತನಾಡಿದ ಅವರು, ಪ್ರದೇಶದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡು ಜನತೆಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುತ್ತಿದೆ ಎಂದು ತಿಳಿಸಿದರು. ಇಂದಿನ ಕಾಲದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿದರೆ ಮಕ್ಕಳ ಭವಿಷ್ಯ ಉಜ್ವಲವಾಗಲಿದೆ ಎಂದು ಅಭಿಪ್ರಾಯಪಟ್ಟರು. ತಾಲೂಕಿನ ದೇವಲಾಪುರ ಗ್ರಾಮದ ಸೋಮಲಾಪುರದಲ್ಲಿ 2025-26ನೇ ಸಾಲಿನ 4059 ಸಿಎಂಡಿಕ್ಯೂ ಯೋಜನೆಯಡಿ ಸುಮಾರು 300 ಲಕ್ಷ ರೂ. ಹಾಗೂ ಸುಗ್ಗೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾವಿನಹಳ್ಳಿ ಗ್ರಾಮದಲ್ಲಿ ಸುಮಾರು 320 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಿರುವ ಸಿಸಿ ರಸ್ತೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದರು. ಈ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆಯ ತಾಲೂಕು ಸಮಿತಿ ಅಧ್ಯಕ್ಷ ಕೆ. ಶ್ರೀನಿವಾಸರಾವ್, ಮುಖಂಡರಾದ ವಿ. ಮಾರೇಶ, ಚಂದುಸಾಬ್, ಆರ್. ಬಸವರಾಜ, ರಾಮರಾಜು, ವಡ್ಡಿನ ಮರಿಸ್ವಾಮಿ, ನಾಯಕರ ಪಂಪಣ್ಣ, ಬಾಬುಸಾಬ್, ಬಸಯ್ಯಸ್ವಾಮಿ, ಪಂಪಣ್ಣ, ಎನ್. ರಮೇಶ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 7 Apr 2026 9:33 pm

ಅಬುಧಾಬಿಯಲ್ಲಿರುವ ಅಮೆರಿಕ ಸಂಯೋಜಿತ AI ಕೇಂದ್ರದ ಮೇಲೆ ದಾಳಿ: ಇರಾನ್ ಎಚ್ಚರಿಕೆ

ಟೆಹ್ರಾನ್, ಎ.7: ಟೆಹ್ರಾನ್‍ನಲ್ಲಿ ಎಐ (ಕೃತಕ ಬುದ್ಧಿಮತ್ತೆ)ಗೆ ಸಂಬಂಧಿಸಿದ ಕೇಂದ್ರದ ಮೇಲೆ ವೈಮಾನಿಕ ದಾಳಿ ನಡೆದಿರುವುದಕ್ಕೆ ಪ್ರತಿಯಾಗಿ ಅಬುಧಾಬಿಯಲ್ಲಿನ ಪ್ರಮುಖ ಅಮೆರಿಕ ಎಐ ಡೇಟಾ ಕೇಂದ್ರವನ್ನು ಗುರಿಯಾಗಿಸಿ ದಾಳಿ ನಡೆಯುವ ಸಾಧ್ಯತೆಯಿದೆ ಎಂದು ತಸ್ನಿಮ್ ಸುದ್ದಿಸಂಸ್ಥೆ ವರದಿ ಮಾಡಿದೆ. ಟೆಹ್ರಾನ್‍ನ ಷರೀಫ್ ತಾಂತ್ರಿಕ ವಿಶ್ವವಿದ್ಯಾಲಯದ ಮೇಲೆ ನಡೆದ ದಾಳಿಯಲ್ಲಿ ಕಂಪ್ಯೂಟಿಂಗ್ ಕೇಂದ್ರ ಮತ್ತು ಜಿಪಿಯು ಸೌಲಭ್ಯಕ್ಕೆ ಹಾನಿಯಾಗಿದೆ. ಈ ವಿವಿಯು ದೇಶದ ಕೃತಕ ಬುದ್ಧಿಮತ್ತೆ ಪರಿಸರ ವ್ಯವಸ್ಥೆಗೆ ಮೂಲ ಸೌಕರ್ಯವನ್ನು ಒದಗಿಸುತ್ತದೆ. `ಈ ದಾಳಿಗೆ ಪ್ರತೀಕಾರವಾಗಿ ಅಬುಧಾಬಿಯಲ್ಲಿರುವ ಅಮೆರಿಕದ ಸ್ಟಾರ್ಗೆಟ್ ಎಐ ಕೇಂದ್ರವನ್ನು ಗುರಿಯಾಗಿಸಿ ದಾಳಿ ನಡೆಯುವ ಸಾಧ್ಯತೆಯಿದೆ ಎಂದು ಇರಾನ್‍ನ ಇಸ್ಲಾಮಿಕ್ ರೆವೊಲ್ಯುಷನರಿ ಗಾರ್ಡ್ ಕಾಪ್ರ್ಸ್(ಐಆರ್‌ಜಿಸಿ) ಎಚ್ಚರಿಕೆ ನೀಡಿರುವುದಾಗಿ ವರದಿಯಾಗಿದೆ.

ವಾರ್ತಾ ಭಾರತಿ 7 Apr 2026 9:32 pm

ಇರಾನ್ ಮೇಲೆ ಅಮೆರಿಕ-ಇಸ್ರೇಲ್ ಜಂಟಿ ದಾಳಿ: ಡೆಡ್‌ಲೈನ್ ಮುಗಿಯುವ ಮುನ್ನ ತೈಲ ಕೇಂದ್ರಗಳು ಧ್ವಂಸ

America Attacks Iran: ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷ ಈಗ ಬೇರೊಂದು ಸ್ವರೂಪ ಪಡೆದುಕೊಂಡಿದೆ. ಇರಾನ್ ಯಾವುದೇ ನಿರ್ಧಾರಕ್ಕೆ ಬರುವ ಮುನ್ನವೇ ಅಮೆರಿಕ ಮತ್ತು ಇಸ್ರೇಲ್ ಪಡೆಗಳು ಇರಾನ್‌ನ ಪ್ರಮುಖ ನೆಲೆಗಳ ಮೇಲೆ ಮುಗಿಬಿದ್ದಿವೆ. ಇರಾನ್‌ನ ಆರ್ಥಿಕ ಬೆನ್ನೆಲುಬಾಗಿರುವ ಖಾರ್ಗ್ ದ್ವೀಪದ ತೈಲ ರಫ್ತು ಕೇಂದ್ರದ ಮೇಲೆ ಸರಣಿ ದಾಳಿ ನಡೆಸಲಾಗಿದ್ದು, ತೈಲ ಪೂರೈಕೆಗೆ ಭಾರಿ

ಒನ್ ಇ೦ಡಿಯ 7 Apr 2026 9:32 pm

`ಟಿ20ಯೇ ಭವಿಷ್ಯ, ಏಕದಿನ ಮಾದರಿ ಪೂರ್ತಿ ಬಿಟ್ಹಾಕಿ': ಬಿಸಿಸಿಐಗೆ ಲಲಿತ್ ಮೋದಿ ಹೀಗೊಂದು ಸಲಹೆ ನೀಡಿರುವುದೇಕೆ?

ಚುಟುಕು ಕ್ರಿಕೆಟ್ ನ ಭರಾಟೆಯಲ್ಲಿ ಏಕದಿನ ಸರಣಿಗಳು ನಡೆಯುವುದೇ ಅಪರೂಪ ಎಂಬಂತಾಗಿದೆ. ಅಂಥದ್ದರಲ್ಲಿ ಇದೀಗ ​ಲಲಿತ್ ಮೋದಿ ಅವರು ಏಕದಿನ ಕ್ರಿಕೆಟ್ ಅನ್ನು ಸಂಪೂರ್ಣವಾಗಿ ರದ್ದುಗೊಳಿಸುವಂತೆ ಬಿಸಿಸಿಐಗೆ ಸಲಹೆ ನೀಡಿದ್ದಾರೆ. ಟಿ20 ಲೀಗ್‌ಗಳಿಂದ ರೂಪುಗೊಂಡ ಆಧುನಿಕ ಆಟಕ್ಕೆ ಈ ಸ್ವರೂಪ ಇನ್ನು ಮುಂದೆ ಹೊಂದಿಕೆಯಾಗುವುದಿಲ್ಲ. ಕ್ರೀಡಾಭಿಮಾನಿಗಳ ಆಸಕ್ತಿ ಬದಲಾಗುತ್ತಿರುವುದರಿಂದ ಭವಿಷ್ಯದ ಕ್ರಿಕೆಟ್ ಮಾದರಿಯಾಗಿ ಒಂಡೇ ಉಳಿಯುವುದಿಲ್ಲ ಎಂದಿದ್ದಾರೆ. 2027 ರ ಏಕದಿನ ವಿಶ್ವಕಪ್ ಕಡೆಗೆ ಎಲ್ಲರೂ ಚಿತ್ತ ಹರಿಸುತ್ತಿರುವ ಈ ಸಂದರ್ಭದಲ್ಲಿ ಅವರ ಈ ಹೇಳಿಕೆಗಳು ಬಹಳ ಪ್ರಾಮುಖ್ಯತೆ ಪಡೆದಿವೆ.

ವಿಜಯ ಕರ್ನಾಟಕ 7 Apr 2026 9:29 pm

ಬೆಂಗಳೂರು ಉದ್ಯಮಿ ಪತ್ನಿಗೆ ಆನ್‌ಲೈನ್ಸ್‌ ಗೆಳೆಯರಿಂದ ಸುಲಿಗೆ; ಖಾಸಗಿ ಫೋಟೋ ಮುಂದಿಟ್ಟು ಅರ್ಧ ಕೆಜಿ ಚಿನ್ನ, ನಗದು ವಂಚನೆ

ಬೆಂಗಳೂರು ಉದ್ಯಮಿ ಪತ್ನಿಗೆ ಆನ್‌ಲೈನ್ಸ್‌ ಗೆಳೆಯರು ಅರ್ಧ ಕೆಜಿ ಚಿನ್ನ, ನಗದು ವಂಚನೆ ಮಾಡಿದ್ದಾರೆ. ಮಹಿಳೆಯ ಸುಲಿಗೆ ಖಾಸಗಿ ಫೋಟೋ ಮುಂದಿಟ್ಟು ಹಂತ ಹಂತವಾಗಿ ಹಣ, ಚಿನ್ನವನ್ನು ಪಡೆದುಕೊಂಡಿದ್ದಾರೆ. ಸದ್ಯ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದು ಚಿನ್ನ ಜಪ್ತಿ ಮಾಡಿದ್ದಾರೆ. ಕೆಆರ್‌ ಪುರ ಠಾಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯ ಕರ್ನಾಟಕ 7 Apr 2026 9:29 pm

ಅನಾಥ ಆಶ್ರಮದಿಂದ ಯುವಕ ಪರಾರಿ: ಪ್ರಕರಣ ದಾಖಲು

ಕಾಪು, ಎ.7: ಸುಳ್ಯದ ಆರಂಬೂರಿನಲ್ಲಿ ಫೆ.6ರಂದು ಪತ್ತೆಯಾಗಿ ಇನ್ನಂಜೆ ಗ್ರಾಮದ ಶಂಕರಪುರದಲ್ಲಿರುವ ವಿಶ್ವಾಸದ ಮನೆ ಅನಾಥ ಆಶ್ರಮದಲ್ಲಿ ದಾಖಲಾಗಿದ್ದ ಅನಾಥ ಬುದ್ಧಿಮಾಂದ್ಯ ಯುವಕನೊಬ್ಬ ಮಾ.30ರಂದು ರಾತ್ರಿ ಆಶ್ರಮ ದಿಂದ ತಪ್ಪಿಸಿಕೊಂಡು ಹೋಗಿರುವುದಾಗಿ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಾರ್ತಾ ಭಾರತಿ 7 Apr 2026 9:27 pm

ಗಾಝಾ| ಇಸ್ರೇಲ್ ದಾಳಿಯಲ್ಲಿ ಕನಿಷ್ಠ 10 ಮಂದಿ ಮೃತ್ಯು

ಗಾಝಾನಗರ, ಎ.7: ಗಾಝಾದ ಅಲ್-ಮಘಾಜಿ ನಗರದ ಪೂರ್ವದಲ್ಲಿ ಸ್ಥಳಾಂತರಗೊಂಡವರು ಆಶ್ರಯ ಪಡೆದಿದ್ದ ಶಾಲೆಯ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಕನಿಷ್ಠ 10 ಮಂದಿ ಮೃತಪಟ್ಟಿದ್ದು, 13 ಮಂದಿ ಗಾಯಗೊಂಡಿರುವುದಾಗಿ ಸ್ಥಳೀಯ ಆಸ್ಪತ್ರೆಯ ಮೂಲಗಳು ಸೋಮವಾರ ಹೇಳಿವೆ. 6 ಗಾಯಾಳುಗಳ ಸ್ಥಿತಿ ಗಂಭೀರವಾಗಿದೆ. ಇಸ್ರೇಲ್ ಬೆಂಬಲಿತ, ಹಮಾಸ್ ವಿರೋಧಿ ಸಶಸ್ತ್ರ ಹೋರಾಟಗಾರರ ಗುಂಪು ಹಾಗೂ ಶಾಲೆಯಲ್ಲಿ ಆಶ್ರಯ ಪಡೆದಿದ್ದವರ ನಡುವೆ ಆರಂಭಗೊಂಡ ವಾಗ್ಯುದ್ಧ ಘರ್ಷಣೆಯ ರೂಪಕ್ಕೆ ತಿರುಗಿದೆ. ಹಮಾಸ್ ವಿರೋಧಿ ಗುಂಪಿನವರು ಕೆಲವರನ್ನು ಬಂಧಿಸುವ ಉದ್ದೇಶದಿಂದ ಬಂದಿದ್ದರು. ಘರ್ಷಣೆಯಲ್ಲಿ ಸ್ಥಳೀಯರನ್ನು ಹಮಾಸ್ ಸದಸ್ಯರು ಬೆಂಬಲಿಸಿದರು. ಸ್ವಲ್ಪ ಹೊತ್ತಿನಲ್ಲೇ ಆ ಪ್ರದೇಶದ ಮೇಲೆ ಇಸ್ರೇಲ್ ಪಡೆ ಬಾಂಬ್ ದಾಳಿ ಹಾಗೂ ಗುಂಡಿನ ದಾಳಿ ನಡೆಸಿದೆ ಎಂದು ಸ್ಥಳೀಯರನ್ನು ಉಲ್ಲೇಖಿಸಿ ಎಎಫ್‍ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.

ವಾರ್ತಾ ಭಾರತಿ 7 Apr 2026 9:26 pm

ಮೀನುಗಾರರ ಸಹಕಾರ ಸಂಘಕ್ಕೆ ಲಕ್ಷಾಂತರ ರೂ. ವಂಚನೆ: ಪ್ರಕರಣ ದಾಖಲು

ಬೈಂದೂರು: ಕರಾವಳಿ ಸಾಂಪ್ರದಾಯಿಕ ಮೀನುಗಾರರ ಸಹಕಾರ ಸಂಘ ಉಪ್ಪುಂದ ಇಲ್ಲಿನ ಅಧಿಕಾರಿಗಳು ಲಕ್ಷಾಂತರ ರೂ. ಹಣ ದುರುಪಯೋಗಪಡಿಸಿ ವಂಚಿಸಿರುವ ಬಗ್ಗೆ ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಂಘದಲ್ಲಿ ಈ ಹಿಂದೆ ಮುಖ್ಯಕಾರ್ಯನಿರ್ವಾಹಣಾಧಿಕಾರಿಯಾಗಿದ್ದ ನಾವುಂದ ಗ್ರಾಮದ ಸುಭಾಶ್ಚಂದ್ರ(39) ಮತ್ತು ಪ್ರಧಾನ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸಿದ್ದ ಮರವಂತೆ ಗ್ರಾಮದ ದೀಪಕ್ ಕುಮಾರ್(35) ಎಂಬವರು ತಮ್ಮ ಹುದ್ದೆಯನ್ನು ದುರುಪಯೋಗಪಡಿಸಿಕೊಂಡು 2023- 2024ನೇ ಸಾಲಿನಲ್ಲಿ ಒಟ್ಟು 80,91,996ರೂ. ಹಣವನ್ನು ತಮ್ಮ ಸ್ವಂತಕ್ಕೆ ದುರುಪಯೋಗಪಡಿಸಿಕೊಂಡು ಮೋಸ ಮಾಡಿ ವಂಚಿಸಿರುವುದಾಗಿ ದೂರಲಾಗಿದೆ. 2023-2024ರ ಸಾಲಿನ ಲೆಕ್ಕ ಪರಿಶೋಧನಾ ವರದಿಯಲ್ಲಿ ಈ ವಿಚಾರ ಸಂಘದ ಗಮನಕ್ಕೆ ಬಂದಿರುವುದಾಗಿ ಪ್ರಭಾರ ಮುಖ್ಯ ಕಾರ್ಯನಿರ್ವಾ ಹಣಾಧಿಕಾರಿ ಶ್ರೀನಿವಾಸ ಕೆ. ನೀಡಿದ ನ್ಯಾಯಾಲಯದ ಖಾಸಗಿ ದೂರಿನಂತೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಾರ್ತಾ ಭಾರತಿ 7 Apr 2026 9:26 pm

ಪ್ರಕತ್ಯೇಕ ಪ್ರಕರಣ: ಇಬ್ಬರ ಆತ್ಮಹತ್ಯೆ

ಗಂಗೊಳ್ಳಿ, ಎ.7: ವಿಪರೀತ ಮದ್ಯ ಸೇವನೆಯಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ ಗುಜ್ಜಾಡಿ ಗ್ರಾಮದ ನಾಯಕ ವಾಡಿಯ ಉಮೇಶ ಖಾರ್ವಿ(59) ಎಂಬವರು ಜೀವನದಲ್ಲಿ ಜಿಗುಪ್ಸೆಗೊಂಡು ಎ.6ರಂದು ರಾತ್ರಿ ಮನೆಯ ಜಗುಲಿಯ ಬಳಿಯ ಕಿಟಕಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಣಿಪಾಲ: ವಿಪರೀತ ಮದ್ಯಪಾನದ ಚಟ ಹೊಂದಿದ್ದ ಕರಂಬಳ್ಳಿ ದೇವಸ್ಥಾನದ ಬಳಿ ನಿವಾಸಿ ರಾಘವೇಂದ್ರ(45) ಎಂಬವರು ಜೀವನದಲ್ಲಿ ಜಿಗುಪ್ಸೆಗೊಂಡು ಎ.3ರಂದು ರಾತ್ರಿ ಮನೆಯ ಒಳಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಾರ್ತಾ ಭಾರತಿ 7 Apr 2026 9:25 pm

ಕನ್ನಡ ಸಾಹಿತ್ಯದಲ್ಲಿ ‘ಮಾನವೀಯತೆ’ ಸಹಜ ಪ್ರವೃತ್ತಿಯಾಗಿ ಬೆಳೆದುಬಂದಿದೆ: ಡಾ.ಚಿನ್ನಪ್ಪ ಗೌಡ

‘ಕನ್ನಡ ಸಾಹಿತ್ಯದಲ್ಲಿ ಮಾನವೀಯ ಮೌಲ್ಯಗಳು’ ವಿಚಾರಸಂಕಿರಣ

ವಾರ್ತಾ ಭಾರತಿ 7 Apr 2026 9:24 pm

ಮಂಗಳೂರು: ಸಹಾಯಕ ಔಷಧ ನಿಯಂತ್ರಕ ಬಾಬು ಬಿ.ಎನ್. ಮನೆ, ಕಚೇರಿಗೆ ಲೋಕಾಯುಕ್ತ ದಾಳಿ

ಚಿಕ್ಕಬಳ್ಳಾಪುರ, ಬೆಂಗಳೂರು, ಮಂಗಳೂರಿನ ಮನೆ, ಕಚೇರಿಯಲ್ಲಿ ನಗದು, ಚಿನ್ನ-ಬೆಳ್ಳಿ ಪತ್ತೆ

ವಾರ್ತಾ ಭಾರತಿ 7 Apr 2026 9:21 pm

Kalaburagi | 371(ಜೆ) ಸಂಪುಟದ ಉಪಸಮಿತಿಗೆ ಸಚಿವ ಪ್ರಿಯಾಂಕ್‌ ಖರ್ಗೆ ಬದಲು ಶರಣಪ್ರಕಾಶ್ ಅವರನ್ನು ನೇಮಿಸುವಂತೆ ಆಗ್ರಹ

ಕಲಬುರಗಿ: ಕಲ್ಯಾಣ ಕರ್ನಾಟಕದ 371(ಜೆ) ಉಪ ಸಮಿತಿಯ ಅಧ್ಯಕ್ಷ ಸ್ಥಾನದಿಂದ ಸಚಿವ ಪ್ರಿಯಾಂಕ್ ಖರ್ಗೆಯವರನ್ನು ತೆಗೆದು ಆ ಸ್ಥಾನಕ್ಕೆ ರಾಜ್ಯದ ವೈದ್ಯಕೀಯ ಶಿಕ್ಷಣ ಸಚಿವ ಡಾ ಶರಣಪ್ರಕಾಶ್ ಪಾಟೀಲ್ ಅವರನ್ನು ನಿಯೋಜಿಸಬೇಕು ಎಂದು ಹೈದರಾಬಾದ್ ಕರ್ನಾಟಕ ಯುವ ಹೋರಾಟ ಸಮಿತಿಯ ಅಧ್ಯಕ್ಷ ಸಂಚಾಲಕ ಡಾ.ರಾಜು ಕುಳಗೇರಿ ಆಗ್ರಹಿಸಿದ್ದಾರೆ. ಮಂಗಳವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸ್ತುತ ಉಪ ಸಮಿತಿಯ ಅಧ್ಯಕ್ಷರಾದ ಸಚಿವ ಪ್ರಿಯಾಂಕ್ ಖರ್ಗೆ ಅವರು ಈ ಭಾಗದ ಸಮಗ್ರ ಅಭಿವೃದ್ಧಿಯ ಕಡೆ ಗಮನ ಹರಿಸುತ್ತಿಲ್ಲ, ಅವರು ಕೇವಲ ರಾಷ್ಟ್ರೀಯ, ಅಂತರರಾಷ್ಟ್ರೀಯ ಹೇಳಿಕೆಗಳನ್ನು ನೀಡುತ್ತಾ ಸಮಯ ವ್ಯರ್ಥ ಮಾಡುತ್ತಿದ್ದಾರೆ ವಿನಃ ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ಆರೋಪಿಸಿದರು. ಈ ಭಾಗದ ಯುವಜನರ ಉದ್ಯೋಗ, ಶಿಕ್ಷಣಕ್ಕಾಗಿ ಯಾವುದೇ ಕ್ರಮ ಕೈಗೊಳ್ಳದ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಈ ಸ್ಥಾನದಿಂದ ತೆಗೆದು ನಮ್ಮದೇ ಜಿಲ್ಲೆಯ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ.ಶರಣಪ್ರಕಾಶ್ ಪಾಟೀಲ್ ಅವರು ಆರೋಗ್ಯ ಕ್ಷೇತ್ರದಲ್ಲಿ ಗಣನೀಯ ಕೊಡುಗೆ ನೀಡುತ್ತಿದ್ದಾರೆ. ಅಂತಹ ಅಭಿವೃದ್ಧಿಪರ ಚಿಂತಕ ಸಚಿವರಿಗೆ ಈ ಸ್ಥಾನ ನೀಡಿದರೆ ಭವಿಷ್ಯದಲ್ಲಿ ಬದಲಾವಣೆ ತರಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದರು. 371 ಜೆ ಉಪ ಸಮಿತಿಯ ಅಧ್ಯಕ್ಷರಾಗಿ ಭಾಗದ ಅಭಿವೃದ್ಧಿಗೆ ಒತ್ತು ಕೊಡುವ ಬದಲು ಸಚಿವರು ಅವರಿಗೆ ಸಂಬಂಧಪಡದ ಆರೆಸ್ಸೆಸ್ ಹಾಗೂ ಅಂತರರಾಷ್ಟ್ರೀಯ ವಿಚಾರಗಳಿಗೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ. ಹೀಗಾಗಿ ಅವರಿಗೆ ರಾಷ್ಟ್ರ ರಾಜಕಾರಣದಲ್ಲಿ ಹೆಚ್ಚಿನ ಜವಾಬ್ದಾರಿ ಕೊಡಬೇಕು. ಕಲಬುರಗಿಯನ್ನು ಹೆಲ್ತ್ ಹಬ್ ಮಾಡುವಲ್ಲಿ ಶ್ರಮಿಸುತ್ತಿರುವ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಅವರಿಗೆ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಹೋರಾಟಗಾರರಾದ ನಾಗರಾಜ್ ಸ್ವಾದಿ, ಹಣಮಂತ ಶೇರಿ ಉಪಸ್ಥಿತರಿದ್ದರು.

ವಾರ್ತಾ ಭಾರತಿ 7 Apr 2026 9:16 pm

ಪ್ರಿಯಕರನ ಪ್ರಚೋದನೆ ಆರೋಪ: ಯುವತಿ ಆತ್ಮಹತ್ಯೆ

ಕುಂದಾಪುರ, ಎ.7: ಪ್ರಿಯಕರನ ಪ್ರಚೋದನೆಯಿಂದ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತರನ್ನು ಶಂಕರನಾರಾಯಣ ಗ್ರಾಮದ ಬೆದ್ರಕಟ್ಟೆ ಕಾಲೋನಿ ನಿವಾಸಿ, ಕುಂದಾಪುರ ಸಾಯಿ ಆಸ್ಪತ್ರೆಯಲ್ಲಿ ಕ್ಲಿನಿಂಗ್ ಕೆಲಸ ಮಾಡಿಕೊಂಡಿದ್ದ ರಮ್ಯಾ (28) ಎಂದು ಗುರುತಿಸಲಾಗಿದೆ. ಈಕೆ ಮಂಜುನಾಥ್(19) ಎಂಬಾತನನ್ನು ಪ್ರೀತಿಸುತ್ತಿದ್ದು, ಆತನು ಆಕೆಯಲ್ಲಿ ಹಣ ಹೊಂದಿಸಿ ಕೊಡುವಂತೆ ಪೀಡಿಸುತಿದ್ದನು ಎಂದು ದೂರಲಾಗಿದೆ. ಅದಕ್ಕೆ ಆಕೆ ನನ್ನಲ್ಲಿ ಹಣ ಇಲ್ಲ ಎಂದು ಹೇಳಿದಕ್ಕೆ ಮಂಜುನಾಥ್, ನೀನು ನನಗೆ ಬೇಡ ನೀನು ಎಲ್ಲಿಯಾದರೂ ಬಿದ್ದು ಸತ್ತು ಹೋಗು ಎಂದು ಹೇಳಿ ಆಕೆಗೆ ಸಾಯುವಂತೆ ಪ್ರಚೋದನೆ ನೀಡಿದ್ದಾನೆಂದು ದೂರಲಾಗಿದೆ. ಅದೇ ಕಾರಣಕ್ಕೆ ಆಕೆ ಎ.3ರಂದು ರಾತ್ರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ದೂರಲಾಗಿದೆ.

ವಾರ್ತಾ ಭಾರತಿ 7 Apr 2026 9:13 pm

Afzalpur | ಪಕ್ಷದೊಳಗಿನ ಭಿನ್ನಾಭಿಪ್ರಾಯ ಬಹಿರಂಗ ಬೇಡ: ಕಾಂಗ್ರೆಸ್ ಮುಖಂಡರಿಂದ ಎಚ್ಚರಿಕೆ

ಅಫಜಲಪುರ: ಮಾಜಿ ಸಚಿವ ಮಾಲಿಕಯ್ಯ ಗುತ್ತೇದಾರ್ ಹಾಗೂ ಮುಸ್ಲಿಂ ಸಮುದಾಯದ ಹಿರಿಯ ಮುಖಂಡ ಮಕ್ಬೂಲ್ ಪಟೇಲ್ ಅವರಿಗೆ ಏನಾದರೂ ಗೊಂದಲಗಳು ಇದ್ದರೆ ಪಕ್ಷದ ಚೌಕಟ್ಟಿನಲ್ಲೇ ಚರ್ಚಿಸಬೇಕು, ಬಹಿರಂಗ ಹೇಳಿಕೆಗಳಿಂದ ಪಕ್ಷಕ್ಕೆ ಹಾನಿಯಾಗುತ್ತದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಪೂಜಾರಿ ಹೇಳಿದರು. ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ರೇವೂರ(ಬಿ) ಗ್ರಾಮದ ಕಾರ್ಯಕ್ರಮದಲ್ಲಿ ಮಾಲಿಕಯ್ಯ ಗುತ್ತೇದಾರ್ ಅವರು ಶಾಸಕ ಎಂ.ವೈ. ಪಾಟೀಲ್ ಬಗ್ಗೆ ಒಳ್ಳೆಯ ಅಭಿಪ್ರಾಯ ವ್ಯಕ್ತಪಡಿಸಿ, ಅವರ ಪುತ್ರ ಅರುಣಕುಮಾರ ಪಾಟೀಲ್ ವಿರುದ್ಧ ಬಹಿರಂಗವಾಗಿ ಹೇಳಿಕೆ ನೀಡಿರುವುದು ಸರಿಯಲ್ಲ ಎಂದು ತಿಳಿಸಿದರು. ಮುಸ್ಲಿಂ ಸಮುದಾಯದ ಹಿರಿಯ ಮುಖಂಡ ಮಕ್ಬೂಲ್ ಪಟೇಲ್ ಅವರು ಅಹಿಂದ ವರ್ಗಗಳಿಗೆ ನಾಮ ನಿರ್ದೇಶನದಲ್ಲಿ ಅವಕಾಶ ನೀಡಬೇಕೆಂದು ಹೇಳಿರುವುದನ್ನು ಸ್ವಾಗತಿಸುತ್ತೇವೆ. ಆದರೆ 2023ರ ವಿಧಾನಸಭೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಗೆ ಬೆಂಬಲ ನೀಡಿದ ಬಳಿಕ ಈಗ ಕಾಂಗ್ರೆಸ್‌ಗೆ ಸಲಹೆ ನೀಡುವುದು ಸೂಕ್ತವಲ್ಲ ಎಂದು ಅಭಿಪ್ರಾಯಪಟ್ಟರು. ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಪ್ರಕಾಶ್ ಜಮಾದಾರ ಮಾತನಾಡಿ, ಪಕ್ಷದ ಕೆಲವು ಮುಖಂಡರು ಅರುಣಕುಮಾರ ಪಾಟೀಲ್ ಕುರಿತು ಈಗಲೇ ನಕಾರಾತ್ಮಕ ಹೇಳಿಕೆ ನೀಡುವುದು ಸಮಂಜಸವಲ್ಲ. ಇನ್ನೂ ಎರಡು ವರ್ಷಗಳ ಬಳಿಕ ನಡೆಯುವ ವಿಧಾನಸಭೆ ಚುನಾವಣೆಯವರೆಗೆ ಎಲ್ಲರೂ ಒಗ್ಗಟ್ಟಿನಿಂದ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು. ವೀರಶೈವ ಲಿಂಗಾಯತ ಸಮಾಜದ ತಾಲೂಕು ಅಧ್ಯಕ್ಷ ಚಂದ್ರಶೇಖರ ಕರಜಗಿ ಮಾತನಾಡಿ, ಶಾಸಕ ಎಂ.ವೈ. ಪಾಟೀಲ್ ಕೇವಲ ಒಂದು ಸಮುದಾಯಕ್ಕೆ ಮಾತ್ರ ಅವಕಾಶ ನೀಡುತ್ತಿದ್ದಾರೆ ಎಂಬ ಆರೋಪ ಸರಿಯಲ್ಲ. ಅವರು ಹಿಂದುಳಿದ ವರ್ಗಗಳಿಗೂ ಸಮಾನ ನ್ಯಾಯ ಒದಗಿಸಿದ್ದಾರೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯ ಸಿದ್ದಾರ್ಥ್ ಬಸರಗಿಡ, ಸಿದ್ದು ಸಿರಸಗಿ, ಶರಣು ಕುಂಬಾರ, ಶಿವಾನಂದ ಗಾಡಿ ಸಾಹುಕಾರ, ಅಸ್ಪಕ್ ಬಂದರವಾಡ, ಶ್ರೀಶೈಲಗೌಡ ಪಾಟೀಲ್, ಸೈಯದ್ ಪಟೇಲ್, ಮಹಾಲಿಂಗ ಅಂಗಡಿ, ಪ್ರವೀಣ್ ಕಲ್ಲೂರ, ಗೌತಮ್ ಸಕ್ಕರಗಿ, ಸೈಫನಸಾಬ ಚಿಕ್ಕಳಗಿ, ಸಿದ್ದು ಕೇರಕನಳ್ಳಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. “ಎಂ.ವೈ. ಪಾಟೀಲ್ ಎಲ್ಲರನ್ನು ಒಗ್ಗೂಡಿಸಿಕೊಂಡು ಸಾಗುತ್ತಿದ್ದಾರೆ. ಅವರ ವಿರುದ್ಧ ಆಧಾರರಹಿತ ಆರೋಪ ಮಾಡುವುದು ಸರಿಯಲ್ಲ. ಯಾವುದೇ ಸಮಸ್ಯೆಗಳಿದ್ದರೂ ಪಕ್ಷದ ವೇದಿಕೆಯಲ್ಲಿ ಚರ್ಚಿಸಬೇಕು” ಎಂದು ಕಾಂಗ್ರೆಸ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ರೇಣುಕಾ ಸಿಂಗೆ ಹೇಳಿದರು.

ವಾರ್ತಾ ಭಾರತಿ 7 Apr 2026 9:12 pm

Devadurga | ಜನಸ್ಪಂದನೆಯಲ್ಲಿ ಗದ್ದಲ : ಸಮಸ್ಯೆ ಪರಿಹಾರಕ್ಕೆ ಅಧಿಕಾರಿಗಳಿಗೆ ಶಾಸಕಿ ಸೂಚನೆ

ದೇವದುರ್ಗ : ಪಟ್ಟಣದ ಎಲ್ಲಾ ವಾರ್ಡಗಳ ಮೂಲಸೌಕರ್ಯ ಸಮಸ್ಯೆಗಳ ಪರಿಹಾರಕ್ಕಾಗಿ ಸೋಮವಾರ ಪುರಸಭೆ ಕಾರ್ಯಾಲಯದಲ್ಲಿ ಆಯೋಜಿಸಿದ್ದ ಜನಸ್ಪಂದನೆ ಕಾರ್ಯಕ್ರಮ ಸಾರ್ವಜನಿಕರಿಗೆ ಅನುಕೂಲಕರವಾಗಬೇಕು ಎಂದು ಶಾಸಕಿ ಕರೆಮ್ಮ.ಜಿ. ನಾಯಕ್ ಹೇಳಿದರು. ಕಾರ್ಯಕ್ರಮದಲ್ಲಿ ಸಾರ್ವಜನಿಕರು ರಸ್ತೆ, ಕುಡಿಯುವ ನೀರು, ವಿದ್ಯುತ್ ಕಂಬಗಳು ಸೇರಿದಂತೆ ಹಲವು ಸಮಸ್ಯೆಗಳ ಬಗ್ಗೆ ಅಳಲು ತೋಡಿಕೊಂಡರು. ಈ ವೇಳೆ ಪುರಸಭೆ ಅಧಿಕಾರಿಗಳು ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದ ಸಾರ್ವಜನಿಕರು ಶಾಸಕಿ ಎದುರು ಆಕ್ರೋಶ ವ್ಯಕ್ತಪಡಿಸಿದ್ದು, ಕೆಲಕಾಲ ಗದ್ದಲದ ವಾತಾವರಣ ನಿರ್ಮಾಣವಾಯಿತು. ಪಟ್ಟಣದಲ್ಲಿ ಮಟ್ಕಾ, ಬೆಟ್ಟಿಂಗ್ ಹಾಗೂ ಅಕ್ರಮ ಮದ್ಯದ ಚಟುವಟಿಕೆಗಳು ಹೆಚ್ಚಾಗಿದ್ದು, ಯುವಕರು ದುಷ್ಚಟಗಳಿಗೆ ಒಳಗಾಗುತ್ತಿದ್ದಾರೆ. ಇದರಿಂದ ಕುಟುಂಬಗಳು ಸಂಕಷ್ಟಕ್ಕೆ ಸಿಲುಕುತ್ತಿವೆ ಎಂದು ಶಾಸಕಿ ತಿಳಿಸಿ, ಇಂತಹ ಅಕ್ರಮ ಚಟುವಟಿಕೆಗಳಿಗೆ ತಕ್ಷಣ ಕಡಿವಾಣ ಹಾಕುವಂತೆ ಪೊಲೀಸ್ ಹಾಗೂ ಅಬಕಾರಿ ಅಧಿಕಾರಿಗಳಿಗೆ ತಾಕೀತು ಮಾಡಿದರು. ಜನಸ್ಪಂದನೆ ಕಾರ್ಯಕ್ರಮ ಕೇವಲ ಒಂದು ದಿನಕ್ಕೆ ಸೀಮಿತವಾಗಬಾರದು. ಸಾರ್ವಜನಿಕರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿ ಪರಿಹಾರ ಒದಗಿಸಬೇಕು. ಇಲ್ಲವಾದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ಪ್ರತಿ ವಾರ್ಡದಲ್ಲೂ ಕುಡಿಯುವ ನೀರು, ರಸ್ತೆ, ವಿದ್ಯುತ್ ದೀಪ, ಶೌಚಾಲಯ ಸೇರಿದಂತೆ ಮೂಲಸೌಕರ್ಯಗಳ ಕೊರತೆ ಕುರಿತು ಹಲವಾರು ಬಾರಿ ಮನವಿ ಸಲ್ಲಿಸಿದರೂ ಅಧಿಕಾರಿಗಳು ಸ್ಪಂದಿಸದಿರುವುದರಿಂದ ಜನರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ತಹಶೀಲ್ದಾರ್ ನಾಗಮ್ಮ ಕಟ್ಟಿಮನಿ, ಅಲಮುದ್ದೀನ್, ಶಿವರಾಜ್ ಪೂಜಾರಿ, ಡಾ. ಬನೇಶ್, ದೇವೇಂದ್ರ ಕಡೇಕರ್, ಪುರಸಭೆ ಮುಖ್ಯಾಧಿಕಾರಿ ಹಂಪಯ್ಯ, ಪಿ.ಐ ಮಂಜುನಾಥ ಸೇರಿದಂತೆ ಇತರರು ಉಪಸ್ಥಿತರಿದ್ದರು. ಪಟ್ಟಣದಲ್ಲಿ  ಬಿಡಾಡಿ ದನ ಗಳಿಂದ ಅಪಘಾತಗಳು ಹೆಚ್ಚಾಗುತ್ತಿವೆ. ಖಾತಾ, ಮುಟೇಷನ್ ಹಾಗೂ ಕಟ್ಟಡ ಅನುಮತಿಗೆ ಹೆಚ್ಚು ಹಣ ವಸೂಲಿ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದ್ದು, ವಿವಿಧ ಸೇವೆಗಳ ದರಪಟ್ಟಿಯನ್ನು ಸಾರ್ವಜನಿಕರಿಗೆ ಗೋಚರವಾಗುವಂತೆ ಪ್ರದರ್ಶಿಸಬೇಕು ಎಂದು ಗಂಗನಗೌಡ ಗೌರಂಪೇಟ ಒತ್ತಾಯಿಸಿದರು. ಪಟ್ಟಣದ ಎಲ್ಲ ವಾರ್ಡ್‌ಗಳಲ್ಲಿ ಚರಂಡಿ ಹಾಗೂ ರಸ್ತೆ ಸಮಸ್ಯೆಗಳು ಗಂಭೀರವಾಗಿವೆ. ಪುರಸಭೆ ಮುಖ್ಯಾಧಿಕಾರಿ ಸಮಸ್ಯೆಗಳನ್ನು ಆಲಿಸದೇ ನಿರ್ಲಕ್ಷ್ಯ ತೋರಿದ್ದಾರೆ. ಹೈಟೆಕ್ ಶೌಚಾಲಯ ಕಾಮಗಾರಿಗಳಲ್ಲಿ ಕಳಪೆ ಗುಣಮಟ್ಟದ ಆರೋಪಗಳಿದ್ದರೂ ಸ್ಪಷ್ಟನೆ ನೀಡಲಾಗಿಲ್ಲ ಎಂದು ರೈತ ಸಂಘದ ಮುಖಂಡ ತಿಮ್ಮನಗೌಡ ಆರೋಪಿಸಿದರು.

ವಾರ್ತಾ ಭಾರತಿ 7 Apr 2026 9:10 pm

ಪಂಜಾಬ್| ನೂತನ ರಾಜಕೀಯ ಪಕ್ಷ ಘೋಷಿಸಿದ ಉಚ್ಛಾಟಿತ ಕಾಂಗ್ರೆಸ್ ಶಾಸಕಿ ನವಜೋತ್ ಕೌರ್ ಸಿಧು

ಚಂಡಿಗಢ, ಎ.7: ಕಾಂಗ್ರೆಸ್‌ನಿಂದ ಎರಡು ತಿಂಗಳ ಹಿಂದೆ ಉಚ್ಛಾಟನೆಗೊಂಡಿದ್ದ ಕಾಂಗ್ರೆಸ್‌ನ ಮಾಜಿ ಶಾಸಕಿ ನವಜೋತ್ ಕೌರ್ ಸಿಧು ಅವರು ‘‘ಭಾರತೀಯ ರಾಷ್ಟ್ರವಾದಿ ಪಕ್ಷ’’ ಎಂಬ ಹೊಸ ಪಕ್ಷವನ್ನು ಪ್ರಾರಂಭಿಸುವುದಾಗಿ ಘೋಷಿಸಿದ್ದಾರೆ. ‘‘ಮುಖ್ಯಮಂತ್ರಿ ಖುರ್ಚಿಗೆ 500 ಕೋ.ರೂ.’’ ಎಂಬ ಕೌರ್ ಅವರ ಹೇಳಿಕೆ ತೀವ್ರ ವಿವಾದಕ್ಕೆ ಕಾರಣವಾಗಿತ್ತು. ಈ ಹೇಳಿಕೆ ಕುರಿತಂತೆ ಪಂಜಾಬ್ ಕಾಂಗ್ರೆಸ್ ಅವರನ್ನು ಕಟುವಾಗಿ ಟೀಕಿಸಿತ್ತು. ಅನಂತರ ಅವರನ್ನು ಪಕ್ಷದಿಂದ ಅಮಾನತುಗೊಳಿಸಿತ್ತು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಪಂಜಾಬ್ ಕಾಂಗ್ರೆಸ್ ವರಿಷ್ಠ ಅಮರಿಂದರ್ ಸಿಂಗ್ ರಾಜಾ ವಾರಿಂಗ್ ಅವರನ್ನು ಪದೇ ಪದೇ ಟೀಕಿಸಿದ ಹಿನ್ನೆಲೆಯಲ್ಲಿ ಕೌರ್ ಅವರನ್ನು ಪಕ್ಷದಿಂದ ಉಚ್ಛಾಟಿಸಲಾಗಿತ್ತು. ಮಾಜಿ ಕ್ರಿಕೆಟಿಗ ಹಾಗೂ ಪಂಜಾಬ್ ಕಾಂಗ್ರೆಸ್‌ನ ಮಾಜಿ ವರಿಷ್ಠ ನವಜೋತ್ ಸಿಂಗ್ ಸಿಧು ಅವರ ಪತ್ನಿಯಾಗಿರುವ ನವಜೋತ್ ಕೌರ್ ಸಿಧು ಸೋಮವಾರ ರಾತ್ರಿ ‘ಎಕ್ಸ್’ನ ಪೋಸ್ಟ್‌ನಲ್ಲಿ ತನ್ನ ನಿರ್ಧಾರವನ್ನು ಘೋಷಿಸಿದ್ದಾರೆ.

ವಾರ್ತಾ ಭಾರತಿ 7 Apr 2026 8:58 pm

ಪಿಐಟಿ ಎನ್.ಡಿ.ಪಿ.ಎಸ್. ಕಾಯ್ದೆಯಡಿ ಆರೋಪಿ ಸೆರೆ

ಉಡುಪಿ, ಎ.7: ಮಾದಕ ದ್ರವ್ಯ ಸಾಗಾಟ ಮತ್ತು ಮಾರಾಟ ಪ್ರಕರಣಗಳಲ್ಲಿ ನಿರಂತರವಾಗಿ ಭಾಗಿಯಾಗಿ ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುತ್ತಿದ್ದ ಕಾರ್ಕಳ ನಗರ ಠಾಣಾ ವ್ಯಾಪ್ತಿಯ ಆರೋಪಿ ಬಂಗ್ಲೆಗುಡ್ಡೆಯ ಫೈಝಲ್ (22) ಎಂಬಾತನನ್ನು ಪಿ.ಐ.ಟಿ. ಎನ್.ಡಿ.ಪಿ.ಎಸ್. ಕಾಯ್ದೆಯಡಿ ಬಂಧನ ಕ್ರಮ ಜರಗಿಸಲು ಆದೇಶ ಹೊರಡಿಸಲಾಗಿದೆ. ಈತನ ವಿರುದ್ಧ ಕಾರ್ಕಳ ನಗರ ಠಾಣೆಯ ಪೊಲೀಸ್ ನಿರೀಕ್ಷಕರ ಮೂಲಕ ಬಂದ ವರದಿಯನ್ನು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರು, ಬಂಧನ ಆದೇಶಕ್ಕಾಗಿ ಮಂಗಳೂರು ಪಶ್ಚಿಮ ವಲಯ ಪೊಲೀಸ್ ಮಹಾನಿರೀಕ್ಷಕರಿಗೆ ಸಲ್ಲಿಸಿದ್ದು, ಆತನ ವಿರುದ್ಧ ದಾಖಲಾದ ಪ್ರಕರಣಗಳನ್ನು ಪರಿಶೀಲಿಸಿ, ಎ.7/ರಂದು ಬಂಧನ ಆದೇಶ ಹೊರಡಿಸಲಾ ಗಿದೆ. ಅದರಂತೆ ಕಾರ್ಕಳ ನಗರ ಪೊಲೀಸ್ ನಿರೀಕ್ಷಕರು, ಎ.7ರಂದು ಆರೋಪಿಗೆ ಬಂಧನ ಆದೇಶ ಜಾರಿಗೊಳಿಸಿ, ಬಂಧಿತನನ್ನು ಧಾರವಾಡದಲ್ಲಿರುವ ಕೇಂದ್ರ ಕಾರಾಗೃಹಕ್ಕೆ ಒಪ್ಪಿಸಿದ್ದಾರೆ ಬಂಧಿತ ಆರೋಪಿಯ ವಿರುದ್ಧ ಒಟ್ಟು 5 ಮಾದಕ ದ್ರವ್ಯ ಸಾಗಾಟ ಮತ್ತು ಮಾರಾಟ ಪ್ರಕರಣಗಳು ದಾಖಲಾಗಿದ್ದು, ಅವುಗಳಲ್ಲಿ 2 ಪ್ರಕರಣಗಳಲ್ಲಿ ಸಜೆಯಾಗಿದ್ದು, 2 ಪ್ರಕರಣಗಳು ನ್ಯಾಯಾಲಯದ ವಿಚಾರಣೆಯಲ್ಲಿದ್ದು, 1 ಪರಕರಣ ತನಿಖೆಯಲ್ಲಿರುತ್ತದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ವಾರ್ತಾ ಭಾರತಿ 7 Apr 2026 8:56 pm

ಮುಖ್ಯ ಚುನಾವಣಾ ಆಯುಕ್ತರ ವಜಾ ಕೋರಿದ ಪ್ರತಿಪಕ್ಷದ ನೋಟಿಸ್ ತಿರಸ್ಕರಿಸಿದ ರಾಜ್ಯಸಭೆ ಸಭಾಪತಿ, ಲೋಕಸಭೆ ಸ್ಪೀಕರ್‌

ಹೊಸದಿಲ್ಲಿ, ಎ.7: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಹುದ್ದೆಯಿಂದ ವಜಾಗೊಳಿಸುವಂತೆ ಕೋರಿ ಪ್ರತಿಪಕ್ಷದ ಸದಸ್ಯರು ಸಲ್ಲಿಸಿದ ನೋಟಿಸುಗಳನ್ನು ರಾಜ್ಯಸಭೆಯ ಸಭಾಪತಿ ಸಿ.ಪಿ. ರಾಧಾಕೃಷ್ಣನ್ ಹಾಗೂ ಲೋಕಸಭೆಯ ಸ್ಪೀಕರ್ ಓಮ್ ಬಿರ್ಲಾ ಅವರು ಸೋಮವಾರ ತಿರಸ್ಕರಿಸಿದ್ದಾರೆ. ತಮ್ಮ ನಿರ್ಧಾರಕ್ಕೆ ಅವರು ಯಾವುದೇ ನಿರ್ದಿಷ್ಟ ಕಾರಣಗಳನ್ನು ನೀಡಿಲ್ಲ. ಈ ನೋಟಿಸ್‌ಗಳನ್ನು ಮಾರ್ಚ್ 12ರಂದು ಸಲ್ಲಿಸಲಾಗಿತ್ತು. ರಾಜ್ಯಸಭೆಯ 63 ಸದಸ್ಯರು ಹಾಗೂ ಲೋಕಸಭೆಯ 130 ಸದಸ್ಯರು ಇವುಗಳಿಗೆ ಸಹಿ ಹಾಕಿದ್ದರು. ಇದು ಅಂತಹ ಪ್ರಸ್ತಾವನೆಗೆ ಕನಿಷ್ಠ ಅವಶ್ಯಕತೆಯನ್ನು ಪೂರೈಸಿತ್ತು. ಜ್ಞಾನೇಶ್ ಕುಮಾರ್ ಅವರ ನಡವಳಿಕೆ ಪಕ್ಷಪಾತ ಹಾಗೂ ತಾರತಮ್ಯದಿಂದ ಕೂಡಿದ್ದು, ಸಾಂವಿಧಾನಿಕ ಸಂಸ್ಥೆಯನ್ನು ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ತೃಣಮೂಲಕ ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷ ಆರೋಪಿಸಿತ್ತು. ಹಲವು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಚುನಾವಣಾ ವಂಚನೆ ಹಾಗೂ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯ ತನಿಖೆಗೆ ಮುಖ್ಯ ಚುನಾವಣಾ ಆಯುಕ್ತರು ಅಡ್ಡಿಪಡಿಸಿದ್ದಾರೆ ಎಂದು ಕೂಡ ಅದು ಹೇಳಿತ್ತು. ನೋಟಿಸ್‌ಗಳನ್ನು ತಿರಸ್ಕರಿಸಿದ ನಿರ್ಧಾರವನ್ನು ಸೋಮವಾರ ಹೊರಡಿಸಲಾದ ಸಂಸತ್ತಿನ ಬುಲೆಟಿನ್‌ನಲ್ಲಿ ತಿಳಿಸಲಾಗಿದೆ.

ವಾರ್ತಾ ಭಾರತಿ 7 Apr 2026 8:56 pm

ಹಿರಿಯ ಕಾಂಗ್ರೆಸ್ ಮುಖಂಡ ಶಂಭು ಶೆಟ್ಟಿ ನಿಧನ

ಉಡುಪಿ, ಎ.7: ಪರ್ಕಳ ಶೆಟ್ಟಿಬೆಟ್ಟು ವಾರ್ಡಿನ ನಿವಾಸಿ ಹಿರಿಯ ಕಾಂಗ್ರೆಸ್ ಮುಖಂಡ ಶಂಭು ಶೆಟ್ಟಿ(75) ಅಲ್ಪಕಾಲದ ಅಸೌಖ್ಯದಿಂದ ಮಣಿಪಾಲದ ಆಸ್ಪತ್ರೆಯಲ್ಲಿ ಎ.7ರಂದು ನಿಧನರಾದರು. ಮೃತರು ಪತ್ನಿ, ಹಾಗೂ ಮೂವರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ. ವ್ಯವ ಹಾರ ನಡೆಸುತ್ತಿದ್ದ ಅವರು ಕೃಷಿಕರಾಗಿದ್ದರು. ಉಡುಪಿಯಲ್ಲಿ ಕಾಂಗ್ರೆಸ್ ಪಕ್ಷದಲ್ಲಿದ್ದಾಗ ಮಲ್ಪೆ ಮನೋರ ಮಧ್ವರಾಜ್ ಸ್ಪರ್ಧಿಸಿದ ಚುನಾವಣೆಯಲ್ಲಿ ಹೆಗಲುಕೊಟ್ಟು. ಗೆಲುವು ಸಾಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇವರ ನಿಧನಕ್ಕೆ ಉಡುಪಿ ಜಿಲ್ಲಾ ಪ್ರಚಾರ ಸಮಿತಿಯ ಅಧ್ಯಕ್ಷ ಹರೀಶ್ ಕಿಣಿ ಮತ್ತು ಕಾಂಗ್ರೆಸ್ ಮುಖಂಡ ಪ್ರಸಾದ್‌ರಾಜ್ ಕಾಂಚನ್ ಹಾಗೂ ಪರ್ಕಳ ಕಾಂಗ್ರೆಸ್ ಸಂತಾಪ ಸೂಚಿಸಿದ್ದಾರೆ.

ವಾರ್ತಾ ಭಾರತಿ 7 Apr 2026 8:53 pm

ಕೆಂಪು ಗೆರೆ ದಾಟಿದರೆ ಮಧ್ಯಪ್ರಾಚ್ಯ ಮೀರಿ ಪ್ರತೀಕಾರ: ಅಮೆರಿಕಕ್ಕೆ ಐಆರ್‌ಜಿಸಿ ಎಚ್ಚರಿಕೆ

ಟೆಹ್ರಾನ್, ಎ.7: ಅಮೆರಿಕವು ಕೆಂಪು ಗೆರೆಯನ್ನು ದಾಟಿದರೆ ಮಧ್ಯಪ್ರಾಚ್ಯವನ್ನು ಮೀರಿ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಮತ್ತು ಅಮೆರಿಕ ಹಾಗೂ ಅದರ ಮಿತ್ರರಾಷ್ಟ್ರಗಳ ತೈಲವನ್ನು ನಾಶಗೊಳಿಸುವುದಾಗಿ ಇರಾನ್‍ನ ಇಸ್ಲಾಮಿಕ್ ರೆವೊಲ್ಯುಷನರಿ ಗಾರ್ಡ್ ಕಾಪ್ರ್ಸ್(ಐಆರ್‌ಜಿಸಿ) ಮಂಗಳವಾರ ಎಚ್ಚರಿಕೆ ನೀಡಿದೆ. ಇಂದಿನವರೆಗೂ ನಾವು ಉತ್ತಮ ನೆರೆಹೊರೆಗಾಗಿ ಗರಿಷ್ಠ ಸಂಯಮವನ್ನು ಹೊಂದಿದ್ದೇವೆ ಮತ್ತು ಪ್ರತೀಕಾರಕ್ಕಾಗಿ ಗುರಿಗಳನ್ನು ಆಯ್ಕೆ ಮಾಡುವಾಗ ಕೆಲವು ವಿನಾಯಿತಿ ನೀಡಿದ್ದೆವು. ಆದರೆ ಈ ವಿನಾಯಿತಿಗಳನ್ನು ತೆಗೆದುಹಾಕಲಾಗಿದೆ' ಎಂದು ಐಆರ್‌ಜಿಸಿ ಹೇಳಿದೆ. ಈ ಮಧ್ಯೆ, ಮಧ್ಯಪ್ರಾಚ್ಯದಲ್ಲಿನ ಯುದ್ಧವು ನಿಯಂತ್ರಣ ಮೀರುವ ಸ್ಥಿತಿಗೆ ಅತೀ ಹತ್ತಿರದಲ್ಲಿದೆ ಎಂದು ಖತರ್ ಕಳವಳ ವ್ಯಕ್ತಪಡಿಸಿದೆ. ಉಲ್ಬಣವನ್ನು ಶಮನಗೊಳಿಸುವ ಕ್ರಮ ಕೈಗೊಳ್ಳದಿದ್ದರೆ ನಿಯಂತ್ರಿಸಲಾಗದ ಪರಿಸ್ಥಿತಿಗೆ ನಮ್ಮನ್ನು ತಲುಪಿಸುತ್ತದೆ ಎಂದು ನಾವು 2023ರಿಂದಲೂ ಎಚ್ಚರಿಸುತ್ತಾ ಬಂದಿದ್ದೆವು. ಈಗ ಈ ಹಂತಕ್ಕೆ ನಾವು ಅತೀ ಹತ್ತಿರದಲ್ಲಿರುವುದರಿಂದ ಕಾಲ ಮೀರುವ ಮುನ್ನ ಈ ಯುದ್ಧವನ್ನು ಕೊನೆಗೊಳಿಸುವ ಮಾರ್ಗವನ್ನು ಕಂಡುಕೊಳ್ಳುವಂತೆ ಎಲ್ಲಾ ಪಕ್ಷಗಳನ್ನೂ ಒತ್ತಾಯಿಸುತ್ತೇವೆ' ಎಂದು ಖತರ್‌ನ ವಿದೇಶಾಂಗ ಇಲಾಖೆಯ ವಕ್ತಾರರು `ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.

ವಾರ್ತಾ ಭಾರತಿ 7 Apr 2026 8:45 pm

Kalaburagi | ಬೈಕ್‌ಗೆ ಸಿಮೆಂಟ್ ಟ್ಯಾಂಕರ್ ಢಿಕ್ಕಿ: ತಂದೆ-ಮಗಳು ಸ್ಥಳದಲ್ಲೇ ಮೃತ್ಯು

ಕಲಬುರಗಿ : ಬೈಕ್‌ಗೆ ಸಿಮೆಂಟ್ ಮಿಕ್ಸರ್ ಟ್ಯಾಂಕರ್ ಢಿಕ್ಕಿಯಾದ ಪರಿಣಾಮ ತಂದೆ-ಮಗಳು ಸ್ಥಳದಲ್ಲೇ ಮೃತಪಟ್ಟ ಘಟನೆ ನಗರದ ರಿಂಗ್ ರಸ್ತೆಯ ಸೈಯದ್ ಚಿಂಚೋಳಿ ಕ್ರಾಸ್ ಬಳಿ ನಡೆದಿದೆ. ಮೃತರನ್ನು ರಾಣೇಶಪೀರ ದರ್ಗಾ ಪ್ರದೇಶದ ನಿವಾಸಿಗಳಾದ ರಾಜುಕುಮಾರ್ ಮಾನಿಂಗಗೋಳ (45) ಹಾಗೂ ಅವರ ಪುತ್ರಿ ಸುಮಾ (14) ಎಂದು ಗುರುತಿಸಲಾಗಿದೆ. ತಂದೆ-ಮಗಳು ಬೈಕ್‌ನಲ್ಲಿ ಮನೆಗೆ ತೆರಳುತ್ತಿದ್ದಾಗ ವೇಗವಾಗಿ ಬಂದ ಸಿಮೆಂಟ್ ಮಿಕ್ಸರ್ ಟ್ಯಾಂಕರ್ ಅವರ ವಾಹನಕ್ಕೆ ಢಿಕ್ಕಿ ಹೊಡೆದಿದೆ. ಢಿಕ್ಕಿಯ ತೀವ್ರತೆಗೆ ಇಬ್ಬರೂ ಟ್ಯಾಂಕರ್ ಚಕ್ರದ ಕೆಳಗೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಘಟನೆ ಕುರಿತು ಮಾಹಿತಿ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಟ್ಯಾಂಕರ್ ಚಾಲಕ ಆಂಧ್ರ ಪ್ರದೇಶದ ಸುರೇಶ್ ಅವರನ್ನು ವಶಕ್ಕೆ ಪಡೆದಿದ್ದಾರೆ. ಈ ಕುರಿತು ಸಂಚಾರಿ ಪೊಲೀಸ್ ಠಾಣೆ-2ರಲ್ಲಿ ಪ್ರಕರಣ ದಾಖಲಾಗಿದೆ.

ವಾರ್ತಾ ಭಾರತಿ 7 Apr 2026 8:43 pm

Bengaluru | ನಕಲಿ ದಾಖಲೆ ಸೃಷ್ಟಿಸಿ ಪೊಲೀಸ್ ವಸತಿಗೃಹದ ಜಾಗ ಕಬಳಿಸಲು ಯತ್ನ: ಬಿಜೆಪಿ ಮುಖಂಡ ಸಹಿತ ಮೂವರ ಬಂಧನ

ಬೆಂಗಳೂರು : ನಕಲಿ ದಾಖಲಾತಿಗಳನ್ನು ಸೃಷ್ಟಿಸಿ ಮಲ್ಲೇಶ್ವರದ ಪೊಲೀಸ್ ವಸತಿಗೃಹದ ಜಾಗವನ್ನು ಕಬಳಿಸಲು ಯತ್ನಿಸಿದ್ದ ಪ್ರಕರಣ ಸಂಬಂಧ ಬಿಜೆಪಿ ಮುಖಂಡ ಸೇರಿದಂತೆ ಮೂವರನ್ನು ಇಲ್ಲಿನ ಮಲ್ಲೇಶ್ವರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಶಿವಮೊಗ್ಗದ ಬಿಜೆಪಿ ಮುಖಂಡ ಶ್ರೀನಾಥ್ ನಗರಗದ್ದೆ, ತುಮಕೂರಿನ ಕೃಷ್ಣಮೂರ್ತಿ ಹಾಗೂ ಮೈಸೂರಿನ ಕಿಶನ್ ಎಂಬುವರು ಬಂಧಿತ ಆರೋಪಿಗಳು ಗುರುತಿಸಲಾಗಿದೆ. ಬೆಂಗಳೂರು ದಕ್ಷಿಣ ಜಿಲ್ಲೆಯ ಲೋಕಾಯುಕ್ತ ಇನ್‍ಸ್ಪೆಕ್ಟರ್ ಎಂ.ಕುಮಾರ್ ಅವರು ನೀಡಿದ ದೂರಿನನ್ವಯ ಎಫ್‍ಐಆರ್ ದಾಖಲಿಸಿಕೊಳ್ಳಲಾಗಿತ್ತು. ಸದ್ಯ, ವಿವಿಧೆಡೆ ಕಾರ್ಯಾಚರಣೆ ನಡೆಸಿ, ಈ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಸುಮಾರು 80 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಕಬಳಿಸಲು ಸಂಚು ರೂಪಿಸಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಪೊಲೀಸ್ ವಸತಿಗೃಹ ತೆರವು ಮಾಡಿ ಹೊಸ ಕಟ್ಟಡ ನಿರ್ಮಾಣಕ್ಕೆ ಉತ್ತರ ವಿಭಾಗದ ಡಿಸಿಪಿ ಅವರು ಪ್ರಸ್ತಾವ ಸಲ್ಲಿಸಿದ್ದರು ಅದೇ ಜಾಗವನ್ನು ಕಬಳಿಸಲು ಈ ತಂಡವು ಮುಂದಾಗಿತ್ತು ಎಂದು ಮೂಲಗಳು ತಿಳಿಸಿವೆ. ಆರೋಪಿ ಶ್ರೀನಾಥ್ ನಗರಗದ್ದೆಯೇ ಈ ಪ್ರಕರಣದ ಸೂತ್ರಧಾರ ಎನ್ನಲಾಗಿದ್ದು, ಮಾಜಿ ಸಚಿವರೊಬ್ಬರ ಶಿವಮೊಗ್ಗದ ಕಚೇರಿಯಲ್ಲೂ ಶ್ರೀನಾಥ್ ಕೆಲಸ ಮಾಡಿದ್ದರು ಎಂದು ತಿಳಿದುಬಂದಿದೆ.  

ವಾರ್ತಾ ಭಾರತಿ 7 Apr 2026 8:43 pm

ಬಹರೈನ್‌ ಸಂಪರ್ಕಿಸುವ ಸೇತುವೆ ಮತ್ತೆ ತೆರೆದ ಸೌದಿ ಅರೇಬಿಯ

ದಬೈ, ಎ.7: ಇರಾನ್‍ನ ದಾಳಿಯ ಬೆದರಿಕೆಯ ಕಾರಣ ಕೆಲ ಹೊತ್ತು ಮುಚ್ಚಲಾಗಿದ್ದ, ಸೌದಿ ಅರೆಬಿಯಾವನ್ನು ಬಹರೈನ್‌ಗೆ ಸಂಪರ್ಕಿಸುವ ಪ್ರಮುಖ ಸೇತುವೆ `ದಿ ಕಿಂಗ್ ಫಹದ್ ಕಾಸ್‍ವೇ' ಯನ್ನು ಮತ್ತೆ ತೆರೆದಿರುವುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಸೌದಿ ಅರೆಬಿಯಾದ ಪೂರ್ವ ಪ್ರಾಂತಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುವ ಇರಾನ್‍ನ ಬೆದರಿಕೆಯ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ ಎಂದು ಮಂಗಳವಾರ ಬೆಳಿಗ್ಗೆ ಅಧಿಕಾರಿಗಳು ಘೋಷಿಸಿದ್ದರು. 25 ಕಿ.ಮೀ ಉದ್ದದ ಸೇತುವೆಯು ಅಮೆರಿಕ ನೌಕಾಪಡೆಯ 5ನೇ ಬಟಾಲಿಯನ್ ಇರುವ ಬಹರೈನ್‌ಗೆ ಯುಇಎಯಿಂದ ಏಕೈಕ ರಸ್ತೆ ಸಂಪರ್ಕವಾಗಿದೆ. ಈ ಮಧ್ಯೆ, ಮಂಗಳವಾರ ಬೆಳಿಗ್ಗೆ ಪೂರ್ವ ಪ್ರಾಂತಗಳನ್ನು ಗುರಿಯಾಗಿಸಿದ್ದ ಹಲವು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ನಿರ್ಬಂಧಿಸಿರುವುದಾಗಿ ಸೌದಿಯ ರಕ್ಷಣಾ ಇಲಾಖೆ ಹೇಳಿದೆ.

ವಾರ್ತಾ ಭಾರತಿ 7 Apr 2026 8:41 pm

1.4 ಕೋಟಿ ಜನತೆ ಪ್ರಾಣತ್ಯಾಗಕ್ಕೆ ಸಿದ್ಧ: ಇರಾನ್‌ ಅಧ್ಯಕ್ಷ ಮಸೂದ್ ಪೆಝೆಶ್ಕಿಯಾನ್

ಟೆಹ್ರಾನ್‌: ಹಾರ್ಮುಝ್‌ ಜಲಸಂಧಿಯನ್ನು ತೆರೆಯಲು ಅಮೆರಿಕ ನೀಡಿದ್ದ ಗಡುವಿಗೂ ಮುನ್ನ ಉದ್ವಿಗ್ನತೆ ಹೆಚ್ಚಿರುವಂತೆಯೇ `ದೇಶವನ್ನು ರಕ್ಷಿಸಲು 1.4 ಕೋಟಿಗೂ ಹೆಚ್ಚು ಇರಾನ್ ಜನತೆ ತಮ್ಮ ಪ್ರಾಣಗಳನ್ನು ತ್ಯಾಗ ಮಾಡಲು ಸಿದ್ಧವಿರುವುದಾಗಿ ಘೋಷಿಸಿದ್ದಾರೆ. ನಾನೂ ಕೂಡಾ ಇರಾನ್‍ಗಾಗಿ ನನ್ನ ಪ್ರಾಣವನ್ನು ತ್ಯಜಿಸಲು ಸಿದ್ಧವಾಗಿದ್ದೇನೆ' ಎಂದು ಇರಾನ್ ಅಧ್ಯಕ್ಷ ಮಸೂದ್ ಪೆಝೆಶ್ಕಿಯಾನ್ ಹೇಳಿದ್ದಾರೆ. 1.4 ಕೋಟಿಗೂ ಹೆಚ್ಚು ಇರಾನ್‌ ಜನತೆ ಆತ್ಮಾರ್ಪಣೆ ಮಾಡುವ ಅಭಿಯಾನಕ್ಕೆ ಕೈಜೋಡಿಸಿ ದೇಶಕ್ಕಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಲು ಸಿದ್ಧವಿರುವುದಾಗಿ ಘೋಷಿಸಿದ್ದಾರೆ. ಇದರಲ್ಲಿ ನಾನು ಕೂಡಾ ಸೇರಿದ್ದೇನೆ' ಎಂದು ಪೆಝೆಶ್ಕಿಯಾನ್ `ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.

ವಾರ್ತಾ ಭಾರತಿ 7 Apr 2026 8:39 pm

ಎ.9ರಿಂದ ಉಳ್ಳಾಲದಲ್ಲಿ ಬೇಸಿಗೆ ಫುಟ್ಬಾಲ್‌ ಶಿಬಿರ

ಮಂಗಳೂರು: ಅಲ್ಫಾ ಸ್ಪೋರ್ಟ್ಸ್‌ ಕ್ಲಬ್‌ ಹಾಗೂ ಉಳ್ಳಾಲ ಫುಟ್ಬಾಲ್‌ ಅಕಾಡೆಮಿ ವತಿಯಿಂದ ಬೇಸಿಗೆ ಫುಟ್ಬಾಲ್‌ ಶಿಬಿರವು ಎ.9ರಿಂದ ಮೇ 15ರವರೆಗೆ ಆಯೋಜಿಸಲಾಗಿದೆ. ಉಳ್ಳಾಲದ ಗ್ರೀನ್ಸ್‌ ಫೀಲ್ಡ್‌ ಮೈದಾನದಲ್ಲಿ ಸಂಜೆ 6.30ರಿಂದ ರಾತ್ರಿ 10.30ರ ವರೆಗೆ ಶಿಬಿರ ನಡೆಯಲಿದೆ. 6ರಿಂದ 15 ವರ್ಷದೊಳಗಿನ ಮಕ್ಕಳು ಶಿಬಿರದಲ್ಲಿ ಪಾಲ್ಗೊಳ್ಳಲು ನೋಂದಣಿ ಮಾಡಿಕೊಳ್ಳಬಹುದು ಎಂದು ಉಳ್ಳಾಲ ಫುಟ್ಬಾಲ್‌ ಆಕಾಡೆಮಿಯ ಹೆಡ್‌ ಕೋಚ್‌ ತಮೀಮ್‌ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9972724345(ತಮೀಮ್‌) ಸಂಪರ್ಕಿಸಬಹುದು.

ವಾರ್ತಾ ಭಾರತಿ 7 Apr 2026 8:36 pm

ಎಸ್‌ಐಆರ್| ಅಲ್ಪಸಂಖ್ಯಾತರು, ಪರಿಶಿಷ್ಟರ ಹೆಸರುಗಳನ್ನು ಉದ್ದೇಶಪೂರ್ವಕವಾಗಿ ಕೈಬಿಡಲಾಗಿದೆ: ಮಮತಾ ಕಿಡಿ

ಕೋಲ್ಕತಾಎ.7: ವಿವಾದಾತ್ಮಕ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಪರಿಶಿಷ್ಟ ಮಟುವಾ ಹಾಗೂ ಅಲ್ಪಸಂಖ್ಯಾತ ಸಮುದಾಯಗಳ ಮತದಾರರನ್ನು ಉದ್ದೇಶಪೂರ್ವಕವಾಗಿ ಮತದಾರಪಟ್ಟಿಯಿಂದ ಕೈಬಿಡಲಾಗಿದೆಯೆಂದು ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ ಆಪಾದಿಸಿದ್ದಾರೆ. ನಾಡಿಯಾ ಜಿಲ್ಲೆಯ ಚಾಕ್‌ದಹಾದಲ್ಲಿ ಮಂಗಳವಾರ ಚುನಾವಣಾ ಪ್ರಚಾರ ರ್ಯಾಲಿಯಲ್ಲಿ ಮಾತನಾಡಿದ ಅವರು, ಮತದಾರಪಟ್ಟಿಯಿಂದ ಹೊರಗಿರಿಸಲಾದವರನ್ನು ತನ್ನ ಟಿಎಂಸಿ ಪಕ್ಷವು ಬೆಂಬಲಿಸಲಿದೆಯೆಂದು ಹೇಳಿದ್ದಾರೆ. ಕೇಂದ್ರ ಸರಕಾರವು ತಾರತಮ್ಯದ ನೀತಿಯನ್ನು ಅನುಸರಿಸುತ್ತಿದೆ. ನಿರ್ದಿಷ್ಟ ಸಮುದಾಯಗಳನ್ನು ಗುರಿಯಿರಿಸಿಕೊಂಡು ಮತದಾರಪಟ್ಟಿಯಿಂದ ಮತದಾರರ ಹೆಸರುಗಳನ್ನು ಕೈಬಿಡಲಾಗಿದೆ ಎಂದು ಆರೋಪಿಸಿದೆ. ‘‘ ಯಾಕೆ ಈ ತಾರತಮ್ಯ?. ನೀವು ಮಟುವಾಗಳನ್ನು, ರಾಜಬನ್ಶಿಗಳನ್ನು ಹಾಗೂ ಅಲ್ಪಸಂಖ್ಯಾತರನ್ನು ಮತದಾರಪಟ್ಟಿಯಿಂದ ಹೊರಗಿಡುತ್ತಿದ್ದೀರಿ. ಜನರಿಗೆ ಇದು ತಿಳಿದಿಲ್ಲವೆಂದು ನೀವು ಅಂದುಕೊಂಡಿದ್ದಿರಾ’’ ಎಂದು ಮಮತಾ ಅವರು ಕೇಂದ್ರ ಸರಕಾರದ ವಿರುದ್ಧ ಕಿಡಿಕಾರಿದ್ದಾರೆ. ಅಲ್ಪಸಂಖ್ಯಾತ ಸಮುದಾಯಗಳು ಗಣನೀಯ ಸಂಖ್ಯೆಯಲ್ಲಿರುವ ಮುರ್ಷಿದಾಬಾದ್, ಮಾಲ್ಡಾ ಹಾಗೂ ಉತ್ತರ ದಿನಾಜ್‌ಪುರ ಪ್ರದೇಶಗಳಲ್ಲಿ ಮತದಾರ ಪಟ್ಟಿಯಿಂದ ಮತದಾರರ ಹೆಸರುಗಳನ್ನು ‘ಹೇನುಗಳಂತೆ ’ಹುಡುಕಿ ತೆಗೆಯಲಾಗಿದೆ ಎಂದವರು ಆಪಾದಿಸಿದ್ದಾರೆ. ಸುಪ್ರೀಂಕೋರ್ಟ್‌ನಲ್ಲಿ ತಾನು ಮಧ್ಯಪ್ರವೇಶಿಸಿದ ಬಳಿಕ ಪರಿಶೀಲನೆಯಲ್ಲಿದ್ದ 60 ಲಕ್ಷ ಪ್ರಕರಣಗಳಲ್ಲಿ ಸುಮಾರು 32 ಲಕ್ಷ ಮಂದಿಯ ಹೆಸರುಗಳನ್ನು ಮತದಾರಪಟ್ಟಿಗೆ ಮರುಸೇರ್ಪಡೆಗಳಿಸಲಾಗಿದೆ ಎಂದು ಮಮತಾ ಹೇಳಿದರು. ಮುಂಬರುವ ವಿಧಾನಸಭಾ ಚುನಾವಣೆಯು ಜನತೆಯ ಗುರುತನ್ನು ಹಾಗೂ ಪ್ರಜಾತಾಂತ್ರಿಕ ಹಕ್ಕುಗಳ ರಕ್ಷಣೆಗೆ ನಡೆಸುವ ಸಮರವಾಗಿದೆ ಎಂದು ಹೇಳಿದ ಮಮತಾ ಅವರು ಮತದಾನದ ಮೂಲಕ ಈ ಯುದ್ಧಕ್ಕೆ ಉತ್ತರಿಸುವಂತೆ ಮತದಾರರಿಗೆ ಕರೆ ನೀಡಿದ್ದಾರೆ.

ವಾರ್ತಾ ಭಾರತಿ 7 Apr 2026 8:36 pm

ಹೊಸಪೇಟೆ | ರಾಜ್ಯಪಾಲರನ್ನು ವಾಪಸ್ ಕರೆಸಿಕೊಳ್ಳಲು ಕರವೇ ಆಗ್ರಹ : ಹಿಂದಿ ಹೇರಿಕೆ ವಿರುದ್ಧ ಮನವಿ

ಹೊಸಪೇಟೆ/ವಿಜಯನಗರ : ಕರ್ನಾಟಕದಲ್ಲಿ ಹಿಂದಿ ಹೇರಿಕೆ ನಡೆಯುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್ ಅವರನ್ನು ಕೇಂದ್ರ ಸರ್ಕಾರ ಕೂಡಲೇ ವಾಪಸ್ ಕರೆಸಿಕೊಳ್ಳಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ (ಕನ್ನಡಪರ ಸಂಘಟನೆಗಳ ಒಕ್ಕೂಟ) ಹೊಸಪೇಟೆ ತಾಲೂಕು ಘಟಕ ಒತ್ತಾಯಿಸಿದೆ. ಈ ಕುರಿತು ರಾಷ್ಟ್ರಪತಿಗಳಿಗೆ ಜಿಲ್ಲಾಧಿಕಾರಿಗಳ ಮುಖಾಂತರ ಮನವಿ ಸಲ್ಲಿಸಿರುವ ಸಂಘಟನೆ, ಎಸೆಸೆಲ್ಸಿ ಪರೀಕ್ಷೆಗಳಲ್ಲಿ ತೃತೀಯ ಭಾಷೆಗೆ ಗ್ರೇಡಿಂಗ್ ವ್ಯವಸ್ಥೆ ಕುರಿತು ರಾಜ್ಯ ಸರ್ಕಾರ ತೆಗೆದುಕೊಂಡ ನಿರ್ಧಾರವನ್ನು ಮರುಪರಿಶೀಲಿಸಲು ರಾಜ್ಯಪಾಲರು ಪತ್ರ ಬರೆದಿರುವುದನ್ನು ತೀವ್ರವಾಗಿ ಖಂಡಿಸಿದೆ. ರಾಜ್ಯದ ಜನರಿಂದ ಆಯ್ಕೆಯಾದ ಸರ್ಕಾರದ ನಿರ್ಧಾರಗಳಲ್ಲಿ ರಾಜ್ಯಪಾಲರು ಹಸ್ತಕ್ಷೇಪ ಮಾಡುವುದು ಸರಿಯಲ್ಲ ಎಂದು ಸಂಘಟನೆ ಅಭಿಪ್ರಾಯಪಟ್ಟಿದೆ. ಕನ್ನಡಿಗರ ಹಿತಾಸಕ್ತಿಗೆ ವಿರುದ್ಧವಾದ ಯಾವುದೇ ಕ್ರಮಗಳನ್ನು ಪರಿಗಣಿಸಬಾರದು ಎಂದು ತಿಳಿಸಿದೆ. ಹಿಂದಿ ಹೇರಿಕೆಗೆ ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಸಂಘಟನೆ, ಹಿಂದಿ ಭಾಷೆ ಪ್ರಾಬಲ್ಯ ಹೊಂದಿರುವ ರಾಜ್ಯಗಳಲ್ಲಿಯೂ ಕನ್ನಡವನ್ನು ತೃತೀಯ ಭಾಷೆಯಾಗಿ ಕಡ್ಡಾಯಗೊಳಿಸಲು ರಾಜ್ಯಪಾಲರು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದೆ. ರಾಜ್ಯಪಾಲರ ನಡೆ ಕರ್ನಾಟಕದ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದು ಆರೋಪಿಸಿರುವ ಸಂಘಟನೆ, ಇಂತಹ ಧೋರಣೆ ಹೊಂದಿರುವವರು ಆ ಹುದ್ದೆಯಲ್ಲಿ ಮುಂದುವರಿಯಲು ಯೋಗ್ಯರಲ್ಲ ಎಂದು ತಿಳಿಸಿದೆ. ಈ ಹಿನ್ನೆಲೆಯಲ್ಲಿ ರಾಜ್ಯಪಾಲರನ್ನು ತಕ್ಷಣ ವಜಾಗೊಳಿಸಿ, ಕರ್ನಾಟಕದ ಹಿತಾಸಕ್ತಿಯನ್ನು ಕಾಪಾಡುವ ಕ್ರಮ ಕೈಗೊಳ್ಳಬೇಕೆಂದು ಕೇಂದ್ರ ಸರ್ಕಾರವನ್ನು ಆಗ್ರಹಿಸಲಾಗಿದೆ.

ವಾರ್ತಾ ಭಾರತಿ 7 Apr 2026 8:36 pm

ಎಸ್‌ಐಆರ್: ಪಶ್ಚಿಮ ಬಂಗಾಳದಲ್ಲಿ 91 ಲಕ್ಷ ಮತದಾರರ ಹೆಸರು ಡಿಲೀಟ್

ಕೋಲ್ಕತಾ,ಎ.7: ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್)ಪ್ರಕ್ರಿಯೆ ಬಳಿಕ ಮತದಾರಪಟ್ಟಿಯಿಂದ ಸುಮಾರು 91 ಲಕ್ಷ ಮತದಾರರ ಹೆಸರುಗಳನ್ನು ತೆಗೆದುಹಾಕಿರುವುದನ್ನು ಮತದಾರಪಟ್ಟಿಯ ದತ್ತಾಂಶಗಳು ಬಹಿರಂಗಪಡಿಸಿವೆ. ಫೆಬ್ರವರಿ 28ರಂದು ಪ್ರಕಟಿಸಲಾದ ಪ್ರಾಥಮಿಕ ಅಂಕಿಅಂಶಗಳ ಪ್ರಕಾರ 63.66 ಲಕ್ಷ ಮಂದಿಯ ಹೆಸರುಗಳನ್ನು (ಶೇ.8.3ರಷ್ಟು ಮತದಾರರು)ಮತದಾರಪಟ್ಟಿಯಿಂದ ಕೈಬಿಡಲಾಗಿದೆ. ಇದರೊಂದಿಗೆ 7.66 ಕೋಟಿಯಷ್ಟಿದ್ದ ಮತದಾರರ ಸಂಖ್ಯೆ 7.04 ಕೋಟಿಗೆ ಇಳಿದಿದೆ. 60.06 ಲಕ್ಷಕ್ಕೂ ಅಧಿಕ ಮತದಾರರನ್ನು ‘ಪರಿಶೀಲನೆಯಲ್ಲಿರುವವರು’ ಎಂದು ಗುರುತಿಸಲಾಗಿದೆ. ಆದಾಗ್ಯೂ ಪಶ್ಚಿಮಬಂಗಾಳದಲ್ಲಿ ಎಸ್‌ಐಆರ್ ಪ್ರಕ್ರಿಯೆ ಬಳಿಕ ರಾಜ್ಯದ ಮತದಾರರ ಅಂತಿಮ ಸಂಖ್ಯೆಯನ್ನು ಚುನಾವಣಾ ಆಯೋಗವು ಈವರೆಗೆ ಪ್ರಕಟಿಸಿಲ್ಲ. ತರುವಾಯ ನ್ಯಾಯಾಂಗ ಅಧಿಕಾರಿಗಳು ಪರಿಶೀಲನೆಯ ಬಳಿಕ ವಿವಾದಿತವಾಗಿ ದಾಖಲಾಗಿರುವ 27.16 ಲಕ್ಷಕ್ಕೂ ಅಧಿಕ ಮಂದಿಯ ಹೆಸರುಗಳನ್ನು ತೆಗೆದುಹಾಕಿದ್ದರೆ, ಸುಮಾರು 32.18 ಲಕ್ಷ ಮಂದಿಯ ಹೆಸರುಗಳನ್ನು ಉಳಿಸಿ, ಅಂತಿಮಪಟ್ಟಿಗೆ ಸೇರಿಸಲಾಗಿದೆ. ಒಟ್ಟಾರೆಯಾಗಿ, ಎಸ್‌ಐಆರ್ ಪ್ರಕ್ರಿಯೆಯಲ್ಲಿ ಸುಮಾರು 90.83 ಲಕ್ಷ ಮತದಾರರ ಹೆಸರುಗಳನ್ನು ತೆಗೆದುಹಾಕಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಮತದಾರಪಟ್ಟಿಯ ಪರಿಷ್ಕರಣೆಯನ್ನು ಹಂತಹಂತವಾಗಿ ಹಾಗೂ ಪಾರದರ್ಶಕವಾದ ರೀತಿಯಲ್ಲಿ ಆಯೋಜಿಸಲಾಗುತ್ತಿದೆಯೆಂದು ಚುನಾವಣಾ ಆಯೋಗವು ತಿಳಿಸಿದೆ. ಎಸ್‌ಐಆರ್ ಪ್ರಕ್ರಿಯೆಯಲ್ಲಿ ಉತ್ತರದಾಯಿತ್ವವನ್ನು ಖಾತರಿಪಡಿಸಲು ಜಿಲ್ಲಾವಾರು ದತ್ತಾಂಶಗಳನ್ನು ಬಹಿರಂಗಪಡಿಸಲಾಗುವುದು ಎಂದು ಅದು ಹೇಳಿದೆ. ಮತದಾರರ ಪಟ್ಟಿಯ ಅಂತಿಮ ಪೂರಕಪಟ್ಟಿಯನ್ನು ಬಿಡುಗಡೆಗೊಳಿಸಿದ ಬಳಿಕ ಚುನಾವಣಾ ಆಯೋಗವು ಪಶ್ಚಿಮಬಂಗಾಳ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾರಪಟ್ಟಿಯನ್ನು ನಿಯಮಾನುಸಾರ ಸ್ಥಗಿತಗೊಳಿಸಲಾಗಿದೆ. ರಾಜ್ಯವಿಧಾನಸಭೆಯ 294 ಸ್ಥಾನಗಳ ಪೈಕಿ, 152ಕ್ಕೆ ಎಪ್ರಿಲ್ 23ರಂದು ಚುನಾವಣೆ ನಡೆಯಲಿದೆ. ಉಳಿದ 142 ಸ್ಥಾನಗಳಿಗೆ ಎಪ್ರಿಲ್ 29ರಂದು ಮತದಾನ ನಡೆಯಲಿದೆ. ಎರಡನೆ ಹಂತದ ಚುನಾವಣೆಯನ್ನು ಎದುರಿಸಲಿರುವ ಕ್ಷೇತ್ರಗಳ ಮತದಾರ ಪಟ್ಟಿಯನ್ನು ಎಪ್ರಿಲ್ 9ರಂದು ಸ್ಥಗಿತಗೊಳಿಸಲಾಗುವುದು. ಈ ಹಂತದಲ್ಲಿ ಮತದಾರರಪಟ್ಟಿಯಲ್ಲಿ ಯಾವುದೇ ಸೇರ್ಪಡೆ ಮಾಡಲಾಗುವುದಿಲ್ಲವೆಂದು ಆಯೋಗ ತಿಳಿಸಿದೆ. ಮತದಾರರ ಪಟ್ಟಿಯಲ್ಲಿ ಮಾಡಲಾಗುವ ಯಾವುದೇ ಬದಲಾವಣೆಯು ಸುಪ್ರೀಂಕೋರ್ಟ್ ಸೇರಿದಂತೆ ಸಕ್ಷಮ ಪ್ರಾಧಿಕಾರಗಳು ನೀಡುವ ನಿರ್ದೇಶಗಳನ್ನು ಅವಲಂಭಿಸಿರುತ್ತದೆಯೆಂದು ಅದು ಹೇಳಿದೆ. ಸುಪ್ರೀಂಕೋರ್ಟ್ ಎಪ್ರಿಲ್ 13ರಂದು ಈ ಸಂಬಂಧ ಸಲ್ಲಿಕೆಯಾದ ಅರ್ಜಿಗಳ ಆಲಿಕೆಯನ್ನು ನಡೆಸಲಿದೆ.

ವಾರ್ತಾ ಭಾರತಿ 7 Apr 2026 8:32 pm

ವಿಜಯನಗರ | ವಾರ್ತಾಭಾರತಿ ವರದಿ ಫಲಶ್ರುತಿ : ಕುಡಿಯುವ ನೀರಿಗಾಗಿ 50 ಲಕ್ಷ ರೂ. ಯೋಜನೆ ಪ್ರಸ್ತಾವನೆ

ಹೊಸಪೇಟೆ/ವಿಜಯನಗರ: ವಾರ್ತಾಭಾರತಿ ಪತ್ರಿಕೆಯಲ್ಲಿ ಫೆ.12ರ, 2026 ರಂದು ಪ್ರಕಟವಾದ ವರದಿ ಹಿನ್ನೆಲೆ, ಹೊಸಪೇಟೆ ನಗರಸಭೆಗೆ ಡಿಸ್ಟ್ರಿಕ್ಟ್ ಮಿನರಲ್ ಫೌಂಡೇಶನ್ (ಡಿ.ಎಂ.ಎಫ್.) ಯೋಜನೆಯಡಿ ಮಂಜೂರಾದ ಅನುದಾನದ ಬಳಕೆಯಲ್ಲಿ ಪರಿಷ್ಕರಣೆ ಮಾಡುವ ಪ್ರಸ್ತಾವನೆ ಮುಂದಿರಿಸಲಾಗಿದೆ. 50 ಲಕ್ಷ ಅನುದಾನವನ್ನು ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವ ಉದ್ದೇಶದಿಂದ 9ನೇ ವಾರ್ಡ್‌ನ ಸಿದ್ದಲಿಂಗಪ್ಪ ಚೌಕಿ ಪ್ರದೇಶದಲ್ಲಿ ನಿರ್ಮಾಣಗೊಂಡಿರುವ ಓವರ್ ಹೆಡ್ ಟ್ಯಾಂಕ್ (OHT)ನಿಂದ ನೀರು ಸರಬರಾಜು ಮಾಡಲು ಮುಖ್ಯ ಹಾಗೂ ವಿತರಣಾ ಜಾಲ ಪೈಪ್‌ಲೈನ್ ಅಳವಡಿಸುವ ಕಾಮಗಾರಿಗೆ ಕ್ರಿಯಾ ಯೋಜನೆ ರೂಪಿಸಿ ಅನುಮೋದನೆಗಾಗಿ ಸಲ್ಲಿಸಲಾಗಿದೆ. ಈ ಸಂಬಂಧ ನಗರಸಭೆ ಪೌರಾಯುಕ್ತರು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಖನಿಜ ಪ್ರತಿಷ್ಠಾನ ಟ್ರಸ್ಟ್ ಅಧ್ಯಕ್ಷರಿಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಸಾರ್ವಜನಿಕ ಸಮಸ್ಯೆಗೆ ಸ್ಪಂದನೆ ನೀಡುವ ನಿಟ್ಟಿನಲ್ಲಿ ವಾರ್ತಾಭಾರತಿ ವರದಿಯನ್ನು ಆಧಾರವಾಗಿಸಿಕೊಂಡು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಯೋಜನೆಗೆ ಶೀಘ್ರ ಅನುಮೋದನೆ ದೊರೆತರೆ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.  

ವಾರ್ತಾ ಭಾರತಿ 7 Apr 2026 8:26 pm

‘ಮದರ್ ಪ್ರಾಮಿಸ್’ |ವಿಶಿಷ್ಟ ಪೋಸ್ಟ್‌ ಗಳ ಜೊತೆಗೆ ಸಿನಿಮಾ ಪ್ರಚಾರ ಮಾಡುತ್ತಿರುವ ಡಾಲಿ ಧನಂಜಯ್

ಮೂರನೇ ಪೋಸ್ಟ್‌ ಮೂಲಕ ಕಥೆಯ ಸುಳಿವು ಬಿಟ್ಟು ಕೊಟ್ಟಿದ್ದಾರೆ. ಜೊತೆಗೆ ಹಾಡು ಬಿಡುಗಡೆ ಮಾಡುವ ಬಗ್ಗೆಯೂ ಮಾಹಿತಿ ನೀಡಿದ್ದಾರೆ. ಧನಂಜಯ್ ಅವರು ‘ಮದರ್ ಪ್ರಾಮಿಸ್’ ಸಿನಿಮಾಗೆ ವಿಭಿನ್ನ ರೀತಿಯ ಪ್ರಚಾರ ನೀಡುತ್ತಿದ್ದಾರೆ. ಇತ್ತೀಚೆಗಷ್ಟೇ ಅವರು ‘ಮದರ್ ಪ್ರಾಮಿಸ್’ ಸಿನಿಮಾ ಘೋಷಿಸಿದ್ದರು. ಪೂರ್ಣಚಂದ್ರ ಕಥೆ ಬರೆದು ನಿರ್ದೇಶನ ಮಾಡಿರುವ ಈ ಸಿನಿಮಾವನ್ನು ಧನಂಜಯ್ ನಿರ್ಮಿಸಿದ್ದಾರೆ. ಧನಂಜಯ್ ಈ ಸಿನಿಮಾದಲ್ಲಿ ನಟನೆಯನ್ನೂ ಮಾಡಿದ್ದಾರೆ. “ಈ ಚಿತ್ರಕತೆ 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು” ಎಂದು ಆರಂಭಿಸಿದ ಮೊದಲ ಪೋಸ್ಟ್‌ ನಲ್ಲಿ ತಮ್ಮ ಗೆಳೆಯ ಪೂರ್ಣಚಂದ್ರ ಅವರು ಬರೆದ ಚಿತ್ರಕತೆಯಲ್ಲಿ ಸ್ವತಃ ನಟಿಸಿ ನಿರ್ಮಿಸಿರುವ ಬಗ್ಗೆ ವಿವರ ನೀಡಿದ್ದರು. ಅಂತಹದೇ ಮತ್ತೊಂದು ಪೋಸ್ಟ್‌ ನಲ್ಲಿ ಅದೇ ಸಿನಿಮಾದ ಹೆಸರನ್ನೂ ಬಹಿರಂಗಗೊಳಿಸಿದ್ದರು. “Gen Z ಹುಡುಗರನ್ನು ಸೇರಿಸಿಕೊಂಡು ಪೂರ್ಣಚಂದ್ರ ನಿರ್ದೇಶನದಲ್ಲಿ ಶೇ 100 ಮನೋರಂಜನೆಯ ಸಿನಿಮಾ ಕಟ್ಟಿದ್ದೀವಿ” ಎಂದು ಅವರು ತಿಳಿಸಿದ್ದರು. ಹೀಗೆ ಎರಡನೇ ಪೋಸ್ಟ್‌ನಲ್ಲಿ ಅವರು ಸಿನಿಮಾದ ಹೆಸರನ್ನು ಘೋಷಿಸಿದ್ದರು. ಇದೀಗ ಮೂರನೇ ಪೋಸ್ಟ್‌ ಮೂಲಕ ಕಥೆಯ ಸುಳಿವು ಬಿಟ್ಟು ಕೊಟ್ಟಿದ್ದಾರೆ. ಜೊತೆಗೆ ಹಾಡು ಬಿಡುಗಡೆ ಮಾಡುವ ಬಗ್ಗೆಯೂ ಮಾಹಿತಿ ನೀಡಿದ್ದಾರೆ. ಡಾಲಿ ಧನಂಜಯ್ ಇಂದಿನ ಪೋಸ್ಟ್‌ನಲ್ಲಿ ಏನಿದೆ? “ಈ ಕಥೆ 2025ರ ನಮ್ಮ ಆರ್ಸಿಬಿ ಕಪ್ ಗೆದ್ದಿರೋ ರಾತ್ರಿ ಶುರು ಆಗೋದ್ರಿಂದ....” ಎಂದು ಪೋಸ್ಟ್ ಆರಂಭಿಸಿರುವ ಅವರು, “ಮದರ್ ಪ್ರಾಮಿಸ್: ಫಾದರ್ ಆಫ್ ಆಲ್ ಪ್ರಾಮಿಸಸ್. ಪೂರ್ಣ ಅವರು ಈ ಟೈಟಲ್ ಮತ್ತು ಟ್ಯಾಗ್ಲೈನ್ ಹೇಳ್ತಿದ್ದಂಗೆ ನನ್ನ ಮುಖ ಅರಳಿತ್ತು. ಈ ಕಥೆಗೆ ತುಂಬಾ ಹೊಂದುವಂತ, ಎಲ್ಲರಿಗೂ ಬಹಳ ಕನೆಕ್ಟ್ ಆಗುವ ಟೈಟಲ್. ಅದರ ಅಡಿಬರಹವಂತೂ ಸೂಪರ್ ಡೂಪರ್ ಎನಿಸಿತ್ತು. ನಮ್ಮ ಕಾಲೇಜು ದಿನಗಳಲ್ಲಿ ನಾನು, ನಾಗ, ಸುನಿಲ್, ಮಹದೇವ ಮತ್ತಷ್ಟು ಗೆಳೆಯರು ಸೇರಿ ಉಗಿಬಂಡಿ - ಪಾದರ್ ಆಫ್ ಆಲ್ ಮಾಸ್ ಮೂವಿಸ್ ಅಂತೆಲ್ಲಾ ಒಂದು ತರಲೆ ಶಾರ್ಟ್ ಫಿಲಂ ಮಾಡಿದ್ದು ನೆನಪಾಯ್ತು” ಎಂದು ಬರೆದುಕೊಂಡಿದ್ದಾರೆ. ಮುಂದುವರಿದು, “ಫಾದರ್ ಆಫ್ ಆಲ್ ಪ್ರಾಮಿಸಸ್ - ಇಡೀ ಸಿನಿಮಾ ನಿರೂಪಣೆಯ ಧಾಟಿಗೆ ತುಂಬಾ ಸೂಕ್ತವಾಗಿತ್ತು, ಅಷ್ಟೇ ಮಜವಾಗಿತ್ತು. ನೋಡಣ, ಬೇರೆ ಎಲ್ಲರೂ ಹೇಗೆ ರಿಯಾಕ್ಟ್ ಮಾಡ್ತಾರೆ ಅಂತಾ ಬಹಳಷ್ಟು ಗೆಳೆಯರ ಮುಂದೆ ಹೇಳಿದಾಗ ಅವರ ಮುಖದಲ್ಲೂ ನಗು ಕಂಡಿದ್ದೆ. ಈಗ ಪೋಸ್ಟರ್ ರಿಲೀಸ್ ಆದ್ಮೇಲೆ ನಿಮ್ಮ ರಿಯಾಕ್ಷನ್ ಕೂಡಾ ಅದೇ ಇದೆ. ಬಹಳ ಖುಷಿ ಆಯ್ತು. ಈಗ ಇದೇ ಖುಷಿಯಲ್ಲಿ ಒಂದು ಹಾಡನ್ನು ನಿಮ್ಮ ಮುಂದೆ ತರೋ ತರಾತುರಿಯಲ್ಲಿದ್ದೀವಿ. ನವನೀತ್ ಶ್ಯಾಮ್ ನರನಾಡಿ ಪಂಪ್ ಆಗೋ ಥರ ಕಂಪೋಸ್ ಮಾಡಿ, ಶಶಾಂಕ್ ಸೋಗಾಲ್ ಮಾಸ್ ಆಗಿ ಸಾಹಿತ್ಯ ಬರೆದು, ನಮ್ಮ ಪ್ರೀತಿಯ ಲೆಜೆಂಡರಿ __ ನಮ್ಮ ಮಿಲೇನಿಯಲ್ಸ್ ಫೇವರಿಟ್ ಗಾಯಕರು ಹಾಡಿರೋ ಹಾಡು'' ಎಂದು ವಿವರ ನೀಡಿದ್ದಾರೆ. “ಕಥೆ 2025ರ ನಮ್ಮ ಆರ್ಸಿಬಿ ಗೆದ್ದಿರೋ ರಾತ್ರಿ ಶುರು ಆಗೋದ್ರಿಂದ, ಗೆದ್ದಿರೋ ಸೆಲೆಬ್ರೇಶನ್ ಇಂದಾನೆ ಸಿನಿಮಾ ಶುರು ಮಾಡಿದ್ದೀವಿ. ಈಗ ಈ ಸೀಸನ್ ಅಲ್ಲೂ ಬ್ಯಾಕ್ ಟು ಬ್ಯಾಕ್ ಗೆಲುವಿನಿಂದ ನಮ್ಮನ್ನು ಬಹಳ ಖುಷಿಯಾಗಿಟ್ಟಿದ್ದಾರೆ. ಮತ್ತೊಮ್ಮೆ ನಾವೇ ಕಪ್ ಗೆಲ್ತೀವಿ ಮತ್ತು ನಮ್ಮ ‘ಮದರ್ ಪ್ರಾಮಿಸ್’ ಸಿನಿಮಾ ಕೂಡಾ ಗೆಲ್ಲುತ್ತೆ ಅನ್ನೋ ನಂಬಿಕೆ ಮತ್ತು ಉತ್ಸಾಹದಿಂದ ನಿಮ್ಮ ಮುಂದೆ ನಮ್ಮ ಸಿನಿಮಾದ ಮೊದಲ ಹಾಡು - ಜೀವನದ ಗೆಲುವುಗಳನ್ನು ಸೆಲೆಬ್ರೇಟ್ ಮಾಡುವ ಮಜವಾದ ದಿ ರೋಸ್ಟ್ ಸಾಂಗ್. ಸದ್ಯದಲ್ಲೇ! ಪ್ರೀತಿಯಿರಲಿ” ಎಂದು ಬರೆದುಕೊಂಡಿದ್ದಾರೆ. ‘ಮದರ್ ಪ್ರಾಮಿಸ್’ ಎನ್ನುವ ಶೀರ್ಷಿಕೆಯಲ್ಲಿ ಡಾಲಿ ಧನಂಜಯ್ ಮತ್ತು ಅವರ ಸ್ನೇಹಿತರು ಸಿನಿಮಾ ಮಾಡಿದ್ದಾರೆ. ಮೈಸೂರಿನ ಪೂರ್ಣಚಂದ್ರ ನಿರ್ದೇಶಕರು. ಸಿನಿಮಾದಲ್ಲಿ ಡಾಲಿ ಧನಂಜಯ್, ನಾಗಭೂಷಣ್, ಹಿರಿಯ ನಟಿ ವಿನಯ ಪ್ರಸಾದ್, ಗೀತಾ, ಗುರುದತ್ ಸೇರಿ ಅನೇಕರು ಅಭಿನಯಿಸಿದ್ದಾರೆ. ಫಸ್ಟ್ ಲುಕ್ ಪೋಸ್ಟರ್‌ ನಲ್ಲಿ ಒಟ್ಟು 36 ಮುಖ್ಯ ಕಲಾವಿದರನ್ನು ಚಿತ್ರತಂಡ ಪರಿಚಯಿಸಿದೆ. ಈ ಸಿನಿಮಾವನ್ನು ಧನಂಜಯ್ ಮತ್ತು ಅವರ ಸ್ನೇಹಿತ ಹರ್ಷ ಮುರುಂಡಿ ಶಿವಲಿಂಗಪ್ಪ ನಿರ್ಮಿಸಿದ್ದಾರೆ. ನಿರ್ದೇಶಕರಾಗಿ ಕೆಲಸ ಮಾಡಿರುವ ಶಶಾಂಕ ಕ್ರಿಯೇಟಿವ್ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದಾರೆ. ರಾಹುಲ್ ರಾಯ್ ಕ್ಯಾಮರಾ ಕೆಲಸ ಮಾಡಿದರೆ, ನವನೀತ್ ಶ್ಯಾಮ್ ಸಂಗೀತ ನಿರ್ದೇಶಿಸಿದ್ದಾರೆ.

ವಾರ್ತಾ ಭಾರತಿ 7 Apr 2026 8:26 pm

ಕೃಷಿಗೆ ಯೂರಿಯ ಕೊರತೆ; ಸ್ವಯಂ ತಂದುಕೊಂಡ ಬಿಕ್ಕಟ್ಟು!

ತೈಲ ಮತ್ತು ಅನಿಲ ಪೂರೈಕೆಯಲ್ಲಿನ ಅಡಚಣೆಯು ಕೃಷಿ ಸೇರಿದಂತೆ ಪೆಟ್ರೋಕೆಮಿಕಲ್ ಉಪ ಉತ್ಪನ್ನಗಳನ್ನು ಅವಲಂಬಿಸಿರುವ ವೈವಿಧ್ಯಮಯ ವಲಯಗಳ ಮೇಲೆ ಪರಿಣಾಮ ಬೀರುತ್ತಿದೆ. ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದಿಂದಾಗಿ ಕೃಷಿಗೆ ಅಗತ್ಯವಿರುವ ಪ್ರಮುಖ ರಸಗೊಬ್ಬರವಾದ ನೈಟ್ರೊಜನ್ ಆಧಾರಿತ ಯೂರಿಯ ಪೂರೈಕೆಯು ಅಪಾಯದಲ್ಲಿದೆ. ಅಮೆರಿಕ-ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷದಿಂದಾಗಿ ಕಚ್ಚಾ ತೈಲದ ಬೆಲೆಗಳು ಏರಿದ್ದು, ಎಲ್‌ಪಿಜಿ ಬಿಕ್ಕಟ್ಟು ಕಂಡುಬಂದಿದೆ. ತೈಲ ಮತ್ತು ಅನಿಲ ಪೂರೈಕೆಯಲ್ಲಿನ ಅಡಚಣೆಯು ಕೃಷಿ ಸೇರಿದಂತೆ ಪೆಟ್ರೋಕೆಮಿಕಲ್ ಉಪ ಉತ್ಪನ್ನಗಳನ್ನು ಅವಲಂಬಿಸಿರುವ ವೈವಿಧ್ಯಮಯ ವಲಯಗಳ ಮೇಲೆ ಪರಿಣಾಮ ಬೀರುತ್ತಿದೆ. ದ್ರವೀಕೃತ ನೈಸರ್ಗಿಕ ಅನಿಲ (LNG) ಪೂರೈಕೆಯಲ್ಲಿನ ಅಡಚಣೆಯು ಭಾರತದ ಯೂರಿಯಾ ಉತ್ಪಾದನೆ ಮೇಲೆ ಪರಿಣಾಮ ಬೀರಬಹುದು ಎಂದು ತಜ್ಞರು ಸೂಚಿಸುತ್ತಿದ್ದಾರೆ. ಕೇಂದ್ರ ಸರ್ಕಾರ ಮಂಗಳವಾರ ತಿಳಿಸಿರುವ ಪ್ರಕಾರ ಖಾರಿಫ್ ಬಿತ್ತನೆ ಋತುವಿಗೆ ಮುಂಚಿತವಾಗಿ ರಸಗೊಬ್ಬರ ಪೂರೈಕೆ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಘಟಕಗಳು ಈಗ ಅಗತ್ಯವಿರುವ ನೈಸರ್ಗಿಕ ಅನಿಲ ಪೂರೈಕೆಯಲ್ಲಿ ಸುಮಾರು ಶೇ 90ರಷ್ಟನ್ನು ಪಡೆಯುತ್ತಿವೆ. ಹೀಗಾಗಿ ಹಿಂದಿನ ಶೇ 70-80ಗಿಂತ ಹೆಚ್ಚಾಗಿದೆ ಎಂದು ಹೇಳಿದೆ. ಆದರೆ ರಾಜ್ಯ ಸರ್ಕಾರಿ ಸ್ವಾಮ್ಯದ ಇಂಡಿಯನ್ ಪೊಟ್ಯಾಶ್ ಲಿಮಿಟೆಡ್ ಜಾಗತಿಕ ಮಾರುಕಟ್ಟೆಗಳಿಂದ 2.5 ಮಿಲಿಯನ್ ಟನ್ ಯೂರಿಯಾ ಆಮದಿಗೆ ನಿರ್ಧರಿಸಿದ್ದು, ಸೂಕ್ತ ಕಂಪನಿಗಳನ್ನು ಹುಡುಕುತ್ತಿದೆ. ಗೊಬ್ಬರ ಘಟಕಗಳಿಗೆ ಅನಿಲ ಪೂರೈಕೆ ಪಶ್ಚಿಮ ಏಷ್ಯಾದ ಯುದ್ಧವು ಗಲ್ಫ್ ರಾಷ್ಟ್ರಗಳಿಂದ ಇಂಧನ ಹರಿವಿಗೆ ಅಡ್ಡಿಯಾದ ಕಾರಣ ಸರ್ಕಾರ ಆರಂಭದಲ್ಲಿ ರಸಗೊಬ್ಬರ (ಯೂರಿಯಾ) ಸ್ಥಾವರಗಳಿಗೆ ಅನಿಲ ಪೂರೈಕೆಯನ್ನು ಅಗತ್ಯದ ಸುಮಾರು ಶೇ 60ಕ್ಕೆ ನಿರ್ಬಂಧಿಸಿತು. ಪರ್ಯಾಯ ವ್ಯವಸ್ಥೆಗಳ ಮೂಲಕ ಇದನ್ನು ಶೇ 75-80ಕ್ಕೆ ಏರಿಸಲಾಯಿತು. ಏಪ್ರಿಲ್ 6ರಿಂದ ಸ್ಪಾಟ್ ಪ್ರೊಕ್ಯೂರ್‌ಮೆಂಟ್ ಬಳಸಿ ಅನಿಲ ಪೂರೈಕೆಯನ್ನು ಘಟಕದ ಆರು ತಿಂಗಳ ಸರಾಸರಿ ಬಳಕೆಯ ಶೇ 90ರಷ್ಟು ಹೆಚ್ಚಿಸಲಾಗಿದೆ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಜಂಟಿ ಕಾರ್ಯದರ್ಶಿ ಸುಜಾತ ಶರ್ಮಾ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಸ್ವಯಂ ತಂದುಕೊಂಡ ಬಿಕ್ಕಟ್ಟು ಆದರೆ ಈಗಿನ ಬಿಕ್ಕಟ್ಟು ಭಾರತವೇ ನಿರ್ಮಿಸಿಕೊಂಡಿರುವುದಾಗಿದೆ. ಏಕೆಂದರೆ ಎನ್‌ಪಿಕೆ ಗೊಬ್ಬರ ಮಿಶ್ರಣಕ್ಕೆ ಸಂಬಂಧಿಸಿ ರೈತರು ಸೂಚಿಸಲಾದ ನೈಟ್ರೋಜನ್ ಅಥವಾ ಯೂರಿಯಾ ಅನುಪಾತವನ್ನು ಅನುಸರಿಸುತ್ತಿಲ್ಲ. ಹೀಗಾಗಿ ದೇಶ ಆಮದುಗಳ ಮೇಲೆ ಅವಲಂಬಿತವಾಗಿದೆ. ವೈಜ್ಞಾನಿಕ ಮಾನದಂಡಗಳ ಪ್ರಕಾರ ಒಂದು ಆದರ್ಶ ಗೊಬ್ಬರ ಮಿಶ್ರಣದಲ್ಲಿ ನಾಲ್ಕು ಭಾಗ ನೈಟ್ರೋಜನ್, ಎರಡು ಭಾಗ ಫಾಸ್ಫರಸ್ ಮತ್ತು ಒಂದು ಭಾಗ ಪೊಟ್ಯಾಶ್ ಇರಬೇಕಾಗುತ್ತದೆ. ನೈಟ್ರೋಜನ್ ಒಂದು ಯೂರಿಯಾ ಅಂಶವಾಗಿದ್ದು, ಅದನ್ನು ಹೆಚ್ಚು ಬಳಸಿದಲ್ಲಿ ಇಳುವರಿಗೆ ಸಂಬಂಧಿಸಿ ತ್ವರಿತ ಫಲಿತಾಂಶ ಕೊಡುತ್ತದೆ. ಆದರೆ ಬೇರುಗಳನ್ನು ದುರ್ಬಲಗೊಳಿಸಿ ದೀರ್ಘಕಾಲೀನ ಮಣ್ಣಿನ ಫಲವತ್ತತೆಗೆ ಹಾನಿ ಮಾಡುತ್ತದೆ. ಯೂರಿಯದಲ್ಲಿ ಶೇ 46ರಷ್ಟು ತೂಕ ನೈಟ್ರೊಜನ್‌ನದ್ದಾಗಿರುತ್ತದೆ. ಅಧಿಕ ಯೂರಿಯ ಬಳಕೆಯಿಂದ ಬಂಜರಾದ ಭೂಮಿ ಭಾರತದಲ್ಲಿ ಉತ್ತಮ ಇಳುವರಿಗಾಗಿ ರೈತರು ಅಧಿಕ ಪ್ರಮಾಣದ ಯೂರಿಯವನ್ನು ಗೊಬ್ಬರ ಮಿಶ್ರಣದಲ್ಲಿ ಬಳಸುತ್ತಾರೆ. ಆದರ್ಶ ಎನ್‌ಪಿಕೆ ಅನುಪಾತ 4:2:1 ಆಗಿದ್ದು, ಭಾರತದಲ್ಲಿ 9:3:1 ರಷ್ಟು ಬಳಸಲಾಗುತ್ತದೆ ಎಂದು ರಾಸಾಯನಿಕ ಮತ್ತು ಗೊಬ್ಬರ ಸಚಿವಾಲಯದ ದತ್ತಾಂಶ ತೋರಿಸುತ್ತದೆ. ಅಂದರೆ ಭಾರತದಲ್ಲಿ ರೈತರು 9 ಕೆಜಿ ನೈಟ್ರೋಜನ್‌ಗೆ 1 ಕೆಜಿ ಪೊಟ್ಯಾಶ್ ಬಳಸುತ್ತಿರುವುದು ಬಹಳ ಅಪಾಯಕಾರಿ ಅಂಶವಾಗಿದೆ. ಕೆಲವು ರಾಜ್ಯಗಳಲ್ಲಿ ರೈತರು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ನೈಟ್ರೋಜನ್ (ಯೂರಿಯ) ಬಳಸುತ್ತಾರೆ. ನಾಗಾಲ್ಯಾಂಡ್‌ನಲ್ಲಿ ಪ್ರತಿ ಕಿಲೋಗ್ರಾಂ ಪೊಟ್ಯಾಶ್‌ಗೆ 101 ಕೆಜಿಯಷ್ಟು ನೈಟ್ರೋಜನ್ ಬಳಸಲಾಗುತ್ತದೆ. ಹೆಚ್ಚಿನ ಇಳುವರಿಗಾಗಿ ಭಾರತೀಯ ರೈತರು ತಮ್ಮ ಹೊಲಗಳನ್ನು ನೈಟ್ರೊಜನ್‌ಗೆ (ಯೂರಿಯ) ಮಾತ್ರ ಒಗ್ಗಿಸಿಕೊಂಡಿದ್ದಾರೆ. ರಂಜಕ ಮತ್ತು ಪೊಟ್ಯಾಶ್‌ನಂತಹ ಜೀವ ನೀಡುವ ಅಂಶಗಳನ್ನು ಹೊರಗಿಟ್ಟಿದ್ದಾರೆ. ನೈಟ್ರೋಜನ್‌ನ ಅತಿ ಬಳಕೆಯು ಮಣ್ಣಿನ ಫಲವತ್ತತೆ ಕುಗ್ಗಿಸಿದ್ದು, ಉತ್ತಮ ಇಳುವರಿಗೆ ಇನ್ನಷ್ಟು ನೈಟ್ರೋಜನ್ ಹೆಚ್ಚಿಸುವ ಅಗತ್ಯ ಬರುತ್ತಿದೆ. ನೈಟ್ರೊಜನ್ ಆಮದು ಮೇಲಿನ ಅವಲಂಬನೆ ಕೃಷಿ ತಜ್ಞರು LNG ಪೂರೈಕೆ ಮತ್ತು ಯೂರಿಯಾ ಉತ್ಪಾದನೆ ಮೇಲಿನ ಪರಿಣಾಮದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಬಿಕ್ಕಟ್ಟನ್ನು ನಿವಾರಿಸಲು 9.3 ಕೆಜಿ ನೈಟ್ರೊಜನ್ ಬಳಕೆಯನ್ನು ಪ್ರಮಾಣಿತ 4 ಕೆಜಿಗೆ ಇಳಿಸುವ ಅಗತ್ಯವನ್ನು ಸೂಚಿಸಿದ್ದಾರೆ. ಹೀಗೆ ಮಾಡುವುದರಿಂದ ಭಾರತ ನೈಟ್ರೊಜನ್ ಆಮದು ಮೇಲಿನ ಅವಲಂಬನೆ ಕಡಿಮೆ ಮಾಡಿಕೊಳ್ಳಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆದರೆ ಇದನ್ನು ಸಾಧಿಸುವುದು ಸರಳವಲ್ಲ. ವರ್ಷಗಳಿಂದ ಮಣ್ಣು ಭಾರೀ ಯೂರಿಯ ಬಳಕೆಯೊಂದಿಗೆ ಅವಲಂಬಿತವಾಗಿರುವುದರಿಂದ ಹಠಾತ್ ಬದಲಾವಣೆಯಿಂದ ಇಳುವರಿ ಕಡಿಮೆಯಾಗಬಹುದು. 1960ರ ದಶಕಕ್ಕೆ ಮೊದಲು ರಸಗೊಬ್ಬರದ ಬಳಕೆ ಕಡಿಮೆ ಇತ್ತು. 1960ರಲ್ಲಿ ಒಟ್ಟು ಬಳಕೆ ಕೇವಲ 0.3 ಲಕ್ಷ ಮೆಟ್ರಿಕ್ ಟನ್‌ಗಳಷ್ಟಿತ್ತು. ಕೃಷಿ ಹೆಚ್ಚಾಗಿ ಸಾವಯವ ಗೊಬ್ಬರದ ಮೇಲೆ ಅವಲಂಬಿತವಾಗಿತ್ತು ಮತ್ತು ಸಾಂಪ್ರದಾಯಿಕ ಬೀಜ ಪ್ರಭೇಧಗಳಿಗೆ ಹೆಚ್ಚು ನೈಟ್ರೋಜನ್ ಅಗತ್ಯವಿರಲಿಲ್ಲ. ಹಸಿರು ಕ್ರಾಂತಿಯ ಪ್ರಭಾವ ಆದರೆ ಲಕ್ಷಾಂತರ ಜನರಿಗೆ ಆಹಾರ ಒದಗಿಸಬೇಕಾಗಿದ್ದ ದೇಶವು ಆಹಾರ ಭದ್ರತೆಗಾಗಿ ಪ್ರಧಾನ ಬೆಳೆಯ ಉತ್ಪಾದನೆ ಹೆಚ್ಚಿಸುವ ಅಗತ್ಯವಿತ್ತು. 1960ರ ದಶಕದಲ್ಲಿ ಹಸಿರು ಕ್ರಾಂತಿಯ ಆರಂಭವು ಮಹತ್ವದ ತಿರುವು ನೀಡಿರುವುದಲ್ಲದೆ ಭಾರತವನ್ನು ಭತ್ತ ಮತ್ತು ಗೋಧಿಯ ವಿಷಯದಲ್ಲಿ ಆಹಾರ ಭದ್ರತೆ ತಂದಿತು. ಮೆಕ್ಸಿಕೊದಲ್ಲಿ ಅಭಿವೃದ್ಧಿಪಡಿಸಿದ ಹೆಚ್ಚಿನ ಇಳುವರಿ ನೀಡುವ ಗೋಧಿ ಮತ್ತು ಭಾರತದಲ್ಲಿ ಪರಿಚಯಿಸಿದ ಅಕ್ಕಿಯ ಪ್ರಭೇದಗಳು ನೈಟ್ರೊಜನ್‌ಗೆ ಬಲವಾದ ಪ್ರತಿಕ್ರಿಯೆ ತೋರಿಸಿದವು. ಇವು ಹೆಚ್ಚಿನ ಇಳುವರಿ ಸಾಧಿಸಲು ಪೋಷಕಾಂಶಗಳ ಬೆಂಬಲದ ಅಗತ್ಯವಿತ್ತು. ಸರ್ಕಾರವು HYV ಬೀಜಗಳನ್ನು ಭರವಸೆಯ ನೀರಾವರಿ ಮತ್ತು ರಾಸಾಯನಿಕ ಗೊಬ್ಬರಗಳೊಂದಿಗೆ, ವಿಶೇಷವಾಗಿ ಯೂರಿಯದಂತಹ ನೈಟ್ರೊಜನ್ ಗೊಬ್ಬರದೊಂದಿಗೆ ಸಂಯೋಜಿಸುವ ಸಮಗ್ರ ಪ್ಯಾಕೇಜ್ ವಿಧಾನವನ್ನು ಉತ್ತೇಜಿಸಿತು. ಕಡಿಮೆ ವೆಚ್ಚ ಮತ್ತು ಸರಳ ಬಳಕೆಯ ವಿಧಾನದಿಂದಾಗಿ ಯೂರಿಯ ಆದ್ಯತೆಯ ಆಯ್ಕೆಯಾಯಿತು. ದೇಶದ ಅತ್ಯಧಿಕ ಬಳಕೆಯಾದ ಗೊಬ್ಬರ 2025ರಲ್ಲಿ ರಾಷ್ಟ್ರೀಯವಾಗಿ 387 ಲಕ್ಷ ಮೆಟ್ರಿಕ್ ಟನ್‌ಗಳಷ್ಟು ಯೂರಿಯ ಬಳಕೆ ಮಾಡಲಾಗುತ್ತಿತ್ತು. ಹೀಗಾಗಿ ದೇಶದಲ್ಲಿ ಅತ್ಯಧಿಕ ಬಳಕೆಯಾದ ಗೊಬ್ಬರವಾಗಿದೆ. 2025ರಲ್ಲಿ ಭಾರತ 306 ಲಕ್ಷ ಮೆಟ್ರಿಕ್ ಟನ್ ಯೂರಿಯ ಉತ್ಪಾದಿಸಿದ್ದಲ್ಲದೆ, 81 ಲಕ್ಷ ಮೆಟ್ರಿಕ್ ಟನ್‌ಗಳನ್ನು ಆಮದು ಮಾಡಿಕೊಂಡಿದೆ. 2025ರಲ್ಲಿ ಅಗತ್ಯವಿದ್ದ ಒಟ್ಟು 2.3 ಶತಕೋಟಿ ಡಾಲರ್ ಮೌಲ್ಯದ ಯೂರಿಯಾದ ಶೇ 71ರಷ್ಟು ಪ್ರಮಾಣವನ್ನು ಮಧ್ಯಪ್ರಾಚ್ಯದಿಂದ ಆಮದು ಮಾಡಿಕೊಳ್ಳಲಾಗಿತ್ತು. ಭಾರತ ಮುಖ್ಯವಾಗಿ ಒಮಾನ್, ಸೌದಿ ಅರೆಬಿಯಾ ಮತ್ತು ಯುಎಇಯಿಂದ ಆಮದು ಮಾಡಿಕೊಳ್ಳುತ್ತಿದೆ. ಈ ದೇಶಗಳಿಂದ ಆಮದು ಸಾಗಣೆಯು ಮುಖ್ಯವಾಗಿ ಹಾರ್ಮುಜ್ ಜಲಸಂಧಿಯನ್ನು ಅವಲಂಬಿಸಿದೆ. ಇದನ್ನು ಅಮೆರಿಕ ಮತ್ತು ಇಸ್ರೇಲ್ ದಾಳಿಯ ನಂತರ ಇರಾನ್ ಹತ್ತಿಕ್ಕಿದೆ. ಇರಾನ್ ಹಾರ್ಮುಜ್ ಜಲಸಂಧಿಯ ಮೇಲಿನ ಹಿಡಿತದಿಂದಾಗಿ ಎಲ್‌ಎನ್‌ಜಿ ಬಿಕ್ಕಟ್ಟು ಕಂಡುಬಂದಿದೆ. ಅತಿ ಯೂರಿಯ ಬಳಕೆಯಿಂದ ಹೊಲಕ್ಕೆ ಬರೆ ಉತ್ತಮ ಇಳುವರಿಗಾಗಿ ಬಳಸುವ ಯೂರಿಯದಿಂದ ಸಸ್ಯಕ ಬೆಳವಣಿಗೆ ಸುಧಾರಿಸುತ್ತದೆ. ಅಗತ್ಯ ಪ್ರೋಟೀನ್, ಅಮೈನೋ ಆಮ್ಲ ಮತ್ತು ಕಿಣ್ವಗಳನ್ನು ಒದಗಿಸುತ್ತದೆ. ಅಕ್ಕಿ, ಗೋಧಿ, ಮೆಕ್ಕೆಜೋಳ ಮತ್ತು ಜೋಳದಂತಹ ಕೃಷಿಯಲ್ಲಿ ಸರಿಯಾದ ಪ್ರಮಾಣದಲ್ಲಿ ಯೂರಿಯ ಬಳಸಿದಲ್ಲಿ ಶೇ 20-50ರಷ್ಟು ಇಳುವರಿ ಹೆಚ್ಚಾಗುತ್ತದೆ. ಆದರೆ ಹೊಲದಲ್ಲಿ ಬೇಗನೆ ಹಸಿರು ಕಾಣುವುದರಿಂದ ಬೆಳೆ ಅಭಿವೃದ್ಧಿ ಎಂದು ರೈತರು ನಂಬುತ್ತಾರೆ. ಆದರೆ ರಂಜಕ ಮತ್ತು ಪೊಟ್ಯಾಶ್ ಇಲ್ಲದೆ ಸಸ್ಯದ ಬೇರುಗಳು ದುರ್ಬಲವಾಗಿರುತ್ತವೆ ಮತ್ತು ರೋಗಗಳಿಗೆ ಪ್ರತಿರೋಧ ಕಡಿಮೆಯಾಗುತ್ತದೆ ಎನ್ನುತ್ತಾರೆ ಕೃಷಿ ವಿಜ್ಞಾನಿಗಳು. ಹೆಚ್ಚು ಯೂರಿಯ ಮಣ್ಣಿಗೆ ತುಂಬಿದಾಗ ಮಣ್ಣಿನಲ್ಲಿನ ರಂಜಕ ಮತ್ತು ಪೊಟ್ಯಾಶ್ ವೇಗವಾಗಿ ಹೀರಿಕೊಂಡು ಕ್ರಮೇಣ ಭೂಮಿಯನ್ನು ಬರಡಾಗಿಸುತ್ತದೆ. ಭಾರತೀಯ ರೈತರು ಸೂಚಿಸಲಾದ 4:2:1 ಪ್ರಮಾಣದಲ್ಲಿ ಯೂರಿಯ ಬಳಸುತ್ತಿದ್ದಲ್ಲಿ, ಇಂದಿನ ಬಿಕ್ಕಟ್ಟು ಎದುರಿಸಬೇಕಾಗಿರಲಿಲ್ಲ. ಆಮದು ಮಾಡುವ ಬದಲಾಗಿ ಯೂರಿಯ ರಫ್ತು ಮಾಡಬಹುದಾಗಿತ್ತು. ದೇಶದ ಕೊರತೆ ಸ್ವಯಂ ತಂದುಕೊಂಡ ಬಿಕ್ಕಟ್ಟಾಗಿದೆ.

ವಾರ್ತಾ ಭಾರತಿ 7 Apr 2026 8:22 pm

ದಾವಣಗೆರೆ ಉಪ ಚುನಾವಣೆ: ಅಭ್ಯರ್ಥಿ ಬೆಂಬಲ ಕುರಿತು ಸಿರಿಗೆರೆ ತರಳುಬಾಳು ಮಠ ಮಹತ್ವದ ಸ್ಪಷ್ಟನೆ; ತಟಸ್ಥ ನೀತಿ

ದಾವಣಗೆರೆ ಉಪ ಚುನಾವಣೆಗೆ ಸಂಬಂಧಿಸಿ ಮಧ್ಯ ಕರ್ನಾಟಕದ ಪ್ರಮುಖ ಮಠವಾದ ಸಿರಿಗೆರೆ ಮಠವು ಪ್ರಕಟಣೆ ಹೊರಡಿಸಿದೆ. ಈ ಬಾರಿಯೂ ಯಾವ ಪಕ್ಷ ಅಥವಾ ಅಭ್ಯರ್ಥಿಗೆ ಬೆಂಬಲ ಇಲ್ಲ ಎಂದು ಮಠವು ಹೇಳಿದ್ದು, ತಟಸ್ಥ ನೀತಿ ಪಾಲಿಸುವುದಾಗಿ ನಿರ್ಧರಿಸಿದೆ. ಇನ್ನೂ ಚುನಾವಣಾ ಅಭ್ಯರ್ಥಿ ಜತೆ ಡಾ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಭಾವಚಿತ್ರ ಬಳಸಿರುವುದನ್ನು ಮಠ ಖಂಡಿಸಿದೆ. ಈ ಬಗ್ಗೆ ಪೊಲೀಸ್‌ ದೂರು ದಾಖಲಿಸಲಾಗುವುದು ಎಂದು ಮಠದ ಕಾರ್ಯದರ್ಶಿ ತಿಳಿಸಿದ್ದಾರೆ.

ವಿಜಯ ಕರ್ನಾಟಕ 7 Apr 2026 8:21 pm

ಮ್ಯಾಗಿಗೆ ಹತ್ತರಲ್ಲಿ ಶೂನ್ಯ ಅಂಕ ನೀಡಿದ ಮುಂಬೈ ವೈದ್ಯ!

ಮುಂಬೈ ಮೂಲದ ಮೂಳೆ ಶಸ್ತ್ರಚಿಕಿತ್ಸಕ, ಆರೋಗ್ಯ ತಜ್ಞ ಮತ್ತು ನ್ಯೂಟ್ರಿಬೈಟ್ ವೆಲ್ನೆಸ್‌ ಸಹ ಸಂಸ್ಥಾಪಕ ಡಾ. ಮನನ್ ವೋರಾ ಇನ್‌ ಸ್ಟಾಗ್ರಾಮ್‌ ನಲ್ಲಿ ಐದು ಆಹಾರಗಳಿಗೆ ಹತ್ತರಲ್ಲಿ ಶ್ರೇಯಾಂಕ ನೀಡಿದ್ದಾರೆ. ಎಲ್ಲಾ ಆಹಾರಗಳು ಸಮಾನವಲ್ಲ. ಕೆಲವು ಆಹಾರಗಳು ಪೋಷಿಸುತ್ತವೆ. ಕೆಲವು ಹೊಟ್ಟೆ ತುಂಬಿಸುತ್ತವೆ. ಖಾರ ಖಾರ ಮ್ಯಾಗಿ ತಿನ್ನಲು ಆಕರ್ಷಕವಾಗಿದ್ದರೂ ಆರೋಗ್ಯಕರ ಆಯ್ಕೆಯಲ್ಲ ಎಂದು ಹೇಳಿದ್ದಾರೆ ಮುಂಬೈನ ವೈದ್ಯರು. ನಾವು ಸೇವಿಸುವ ಒಟ್ಟು ಆಹಾರ ನಮ್ಮ ದೇಹದ ಮೇಲೆ ಪರಿಣಾಮ ಬೀರುತ್ತದೆಯಾದರೂ, ವೈಯಕ್ತಿಕ ಆಹಾರಗಳ ವಿಷಯಕ್ಕೆ ಬಂದಾಗ ಆರೋಗ್ಯಕರ ಆಯ್ಕೆಗಳನ್ನು ಆರಿಸುವುದು ದೇಹದ ಆರೋಗ್ಯಕ್ಕೆ ಸೂಕ್ತ ಹಾದಿಯಾಗಿದೆ. ಈ ನಿಟ್ಟಿನಲ್ಲಿ ಮುಂಬೈ ಮೂಲದ ಮೂಳೆ ಶಸ್ತ್ರಚಿಕಿತ್ಸಕ, ಆರೋಗ್ಯ ತಜ್ಞ ಮತ್ತು ನ್ಯೂಟ್ರಿಬೈಟ್ ವೆಲ್ನೆಸ್‌ ಸಹ ಸಂಸ್ಥಾಪಕ ಡಾ. ಮನನ್ ವೋರಾ ಇನ್‌ ಸ್ಟಾಗ್ರಾಮ್‌ ನಲ್ಲಿ ಐದು ಆಹಾರಗಳಿಗೆ ಹತ್ತರಲ್ಲಿ ಶ್ರೇಯಾಂಕ ನೀಡಿದ್ದಾರೆ. ಮ್ಯಾಗಿಗೆ 0/10 ಶ್ರೇಯಾಂಕ! ಯುವಜನರ ಆರಾಮದಾಯಕ ಆಹಾರ ಮ್ಯಾಗಿಯ ಆಕರ್ಷಣೆ ಬಹಳಷ್ಟು ಮಂದಿಯ ಬಾಯಲ್ಲಿ ನೀರೂರಿಸುತ್ತದೆ. ಹಾಗಿದ್ದರೂ, ಮ್ಯಾಗಿ ಆರೋಗ್ಯಕರ ಆಯ್ಕೆಯಲ್ಲ ಎನ್ನುತ್ತಾರೆ ಡಾ. ಮನನ್ ವೋರಾ. ಸೋಡಿಯಂ ಮತ್ತು ಸಂಸ್ಕರಿಸಿದ ಕಾರ್ಬೋಹೈಡ್ರೇಟ್‌ ಗಳನ್ನು ಹೊಂದಿರುವ ಸಂಸ್ಕರಿತ ಆಹಾರವಾಗಿದೆ. ಸೂಕ್ಷ್ಮ ಪೋಷಕಾಂಶಗಳು ಮತ್ತು ಫೈಬರ್ ಅಂಶ ಕಡಿಮೆ ಇರುತ್ತದೆ. ಆಕರ್ಷಕ ತಿನಿಸಾಗಿ ಕಂಡರೂ ದೀರ್ಘಕಾಲ ಹೊಟ್ಟೆ ತುಂಬಿಸುವುದಿಲ್ಲ. ಮಾವಿನ ಹಣ್ಣಿಗೆ ಸಿಕ್ಕಿದ್ದು 7.5/10 ರೇಟಿಂಗ್ ಬೇಸಿಗೆ ಬಂದರೆ ಮಾವಿನ ಹಣ್ಣಿನ ಕಾಲ ಬರುತ್ತದೆ. ಬೇಸಗೆಯಲ್ಲಿ ಇದು ಉತ್ತಮ ಆಹಾರ. ವಿಟಮಿನ್ ಎ, ವಿಟಮಿನ್ ಸಿ, ಫೈಬರ್ ಮತ್ತು ಪಾಲಿ ಫಿನಾಲ್‌ ಗಳು ದಟ್ಟವಾಗಿರುತ್ತವೆ. ರೋಗನಿರೋಧಕ ಶಕ್ತಿ, ಚರ್ಮ ಮತ್ತು ಜೀರ್ಣಕ್ರಿಯೆ ವೃದ್ಧಿಸಲು ಉತ್ತಮ ಆಹಾರ. ಮಾವಿನಲ್ಲಿ ನೈಸರ್ಗಿಕ ಸಕ್ಕರೆ ಇರುವ ಕಾರಣದಿಂದ ಮಧುಮೇಹಿಗಳು ನಿಯಂತ್ರಣದಲ್ಲಿ ಸೇವಿಸುವುದು ಅಗತ್ಯ. ಕಲ್ಲಂಗಡಿಗೆ 8/10 ವೈದ್ಯರ ಪ್ರಕಾರ ಬೇಸಿಗೆಯ ಮತ್ತೊಂದು ಜನಪ್ರಿಯ ಹಣ್ಣು ಕಲ್ಲಂಗಡಿ ಆರೋಗ್ಯ ವಿಚಾರದಲ್ಲಿ ಮಾವಿಗಿಂತ ಉನ್ನತ ಸ್ಥಾನದಲ್ಲಿದೆ. ಕಲ್ಲಂಗಡಿ ಶೇ. 90ರಷ್ಟು ನೀರನ್ನು ಒಳಗೊಂಡಿರುವ ಹೈಡ್ರೇಟಿಂಗ್ ಹಣ್ಣು. ವಿಟಮಿನ್ ಸಿ, ವಿಟಮಿನ್ ಎ, ಬೀಟಾ ಕ್ಯಾರೋಟಿನ್ ಮತ್ತು ಲೈಕೋಪೀನ್‌ ನ ಅತ್ಯುತ್ತಮ ಮೂಲವಾಗಿದೆ. ಹೀಗಾಗಿ ಹೃದಯದ ಆರೋಗ್ಯಕ್ಕೆ ಬೆಂಬಲಿಸುತ್ತದೆ. ಆಕ್ಸಿಡೇಟಿವ್ ಒತ್ತಡ ಕಡಿಮೆ ಮಾಡುತ್ತದೆ. ತಾಜಾ ಮತ್ತು ಋತುವಿನಲ್ಲಿ ಸೇವಿಸಿದರೆ ಉತ್ತಮ. ಬ್ರುಕೊಲಿಗೆ 9/10 ಶ್ರೇಯಾಂಕ ಬ್ರುಕೊಲಿ ಬಹಳ ಪೌಷ್ಠಿಕಾಂಶವಿರುವ ತರಕಾರಿ. ವೈದ್ಯರ ಪ್ರಕಾರ ವಿಟಮಿನ್ ಸಿ, ವಿಟಮಿನ್ ಕೆ, ಫೈಬರ್, ಫೋಲೇಟ್ ಮತ್ತು ಸಲ್ಫೋರಾಫೇನ್ ಸಮೃದ್ಧವಾಗಿದೆ. ಉರಿಯೂತ ನಿವಾರಕ ಮತ್ತು ಸಂಭಾವ್ಯ ಕ್ಯಾನ್ಸರ್ ವಿರೋಧಿ ಪ್ರಯೋಜನಗಳಿಗೆ ಸಂಬಂಧಿಸಿದ ಸಂಯುಕ್ತವಾಗಿದೆ. ಪಾರ್ಮೆಸನ್ ಚೀಸ್ ಗೆ 8/10 ಶ್ರೇಯಾಂಕ: ಪಾರ್ಮೆಸನ್ ಚೀಸ್ ವಿವಿಧ ರೀತಿಯ ಭಕ್ಷ್ಯಗಳ ರುಚಿಯನ್ನು ತಕ್ಷಣವೇ ಹೆಚ್ಚಿಸುವುದಲ್ಲದೆ, ಕ್ಯಾಲ್ಸಿಯಂನಲ್ಲಿ ಬಹಳ ಸಮೃದ್ಧವಾಗಿದೆ. 100 ಗ್ರಾಂಗೆ ಸುಮಾರು 110 ಮಿ.ಗ್ರಾಂ ಕ್ಯಾಲ್ಸಿಯಂ ಅಂಶ ಇರುತ್ತದೆ. ಇದು ಪ್ರೋಟೀನ್ ಮತ್ತು ವಿಟಮಿನ್ ಕೆ2 ಅನ್ನೂ ಒದಗಿಸುತ್ತದೆ. ಮೂಳೆಯ ಆರೋಗ್ಯವನ್ನು ಬೆಂಬಲಿಸುತ್ತದೆ.

ವಾರ್ತಾ ಭಾರತಿ 7 Apr 2026 8:19 pm

ಬಳ್ಳಾರಿ ಡಿಸಿಸಿ ಬ್ಯಾಂಕ್‌ ನಿಯಮಿತದಲ್ಲಿ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಬಳ್ಳಾರಿ ಡಿಸಿಸಿ ಬ್ಯಾಂಕ್‌ ನ ಅಧಿಕೃತ ಜಾಲತಾಣದಲ್ಲಿ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ ಅರ್ಜಿ ಸಲ್ಲಿಸಬೇಕು. ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತ (BDCC) ಖಾಲಿ ಇರುವ ವಿವಿಧ 82 ಹುದ್ದೆಗಳನ್ನು ಭರ್ತಿ ಮಾಡಲು ಅಧಿಕೃತ ಅಧಿಸೂಚನೆ ಹೊರಡಿಸಿದೆ. ಪ್ರೌಢ ಶಿಕ್ಷಣ, ಪಿಯುಸಿ ಮತ್ತು ಪದವಿ ಮುಗಿಸಿದ ಅಭ್ಯರ್ಥಿಗಳು ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಆಸಕ್ತ ಅಭ್ಯರ್ಥಿಗಳು ಈ ಮುಂದಿನ ಲಿಂಕ್ ಬಳಸಿ ಅರ್ಜಿ ಸಲ್ಲಿಸಬಹುದು: https://manageexam.com/BDCCB/index.html ಪ್ರಮುಖ ದಿನಾಂಕಗಳು ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭ: 06 ಏಪ್ರಿಲ್ 2026 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 06 ಮೇ 2026 ಒಟ್ಟು ಹುದ್ದೆಗಳು 82 ಉದ್ಯೋಗ ಸ್ಥಳ ಬಳ್ಳಾರಿ ಹುದ್ದೆಗಳ ವಿವರ ಮತ್ತು ಶೈಕ್ಷಣಿಕ ಅರ್ಹತೆ ✅ವ್ಯವಸ್ಥಾಪಕರು/ಪ್ರಥಮ ದರ್ಜೆ ಸಹಾಯಕರು (FDA) – 22 ಹುದ್ದೆಗಳು ವಿದ್ಯಾರ್ಹತೆ: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ ಹಾಗೂ ಕಂಪ್ಯೂಟರ್ ಜ್ಞಾನ ಕಡ್ಡಾಯ. ವೇತನ ಶ್ರೇಣಿ: ₹44,425 – ₹83,700 ರವರೆಗೆ ✅ದ್ವಿತೀಯ ದರ್ಜೆ ಸಹಾಯಕರು (SDA) – 28 ಹುದ್ದೆಗಳು ವಿದ್ಯಾರ್ಹತೆ: ಪಿಯುಸಿ (PUC) ಅಥವಾ ತತ್ಸಮಾನ ವಿದ್ಯಾರ್ಹತೆ ಹಾಗೂ ಕಂಪ್ಯೂಟರ್ ಜ್ಞಾನ ಕಡ್ಡಾಯ. ವೇತನ ಶ್ರೇಣಿ: ₹34,100 – ₹67,600 ರವರೆಗೆ ✅ಕಿರಿಯ ಸೇವಕರು (Junior Servants) – 31 ಹುದ್ದೆಗಳು ವಿದ್ಯಾರ್ಹತೆ: ಎಸ್‌ಎಸ್‌ಎಲ್‌ಸಿ (SSLC) ಯಲ್ಲಿ ಉತ್ತೀರ್ಣರಾಗಿರಬೇಕು (ಕನ್ನಡವನ್ನು ಒಂದು ಭಾಷೆಯಾಗಿ ಓದಿರಬೇಕು). ವೇತನ ಶ್ರೇಣಿ: ₹29,600 – ₹52,800 ರವರೆಗೆ ✅ವಾಹನ ಚಾಲಕರು (Driver) – 1 ಹುದ್ದೆ ವಿದ್ಯಾರ್ಹತೆ: ಎಸ್‌ಎಸ್‌ಎಲ್‌ಸಿ ಜೊತೆಗೆ ಕಾನೂನುಬದ್ಧ ಡ್ರೈವಿಂಗ್ ಲೈಸೆನ್ಸ್ ಹೊಂದಿರಬೇಕು. ವೇತನ ಶ್ರೇಣಿ: ₹31,775 – ₹61,300 ರವರೆಗೆ ವಯೋಮಿತಿ * ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ತುಂಬಿರಬೇಕು. * ಸಾಮಾನ್ಯ ವರ್ಗದ (GM) ಅಭ್ಯರ್ಥಿಗಳಿಗೆ ಗರಿಷ್ಠ 35 ವರ್ಷ. * 2A, 2B, 3A, 3B ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ 38 ವರ್ಷ. * SC, ST, ಪ್ರವರ್ಗ-1 ರ ಅಭ್ಯರ್ಥಿಗಳಿಗೆ ಗರಿಷ್ಠ 40 ವರ್ಷ. * ವಿಶೇಷ ಸೂಚನೆ: ಸರ್ಕಾರದ ಇತ್ತೀಚಿನ ಆದೇಶದಂತೆ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ ಒಂದು ಬಾರಿಯ ಕ್ರಮವಾಗಿ 5 ವರ್ಷಗಳ ಸಡಿಲಿಕೆ ನೀಡಲಾಗಿದೆ. ಅರ್ಜಿ ಶುಲ್ಕದ ವಿವರ * ಸಾಮಾನ್ಯ ಮತ್ತು ಇತರೆ (2A, 2B, 3A, 3B) ಅಭ್ಯರ್ಥಿಗಳಿಗೆ: ₹1,000/- (ಗೇಟ್‌ವೇ ಶುಲ್ಕ ಪ್ರತ್ಯೇಕ). * SC/ST, ಪ್ರವರ್ಗ-1, ಮಾಜಿ ಸೈನಿಕ ಮತ್ತು PWD ಅಭ್ಯರ್ಥಿಗಳಿಗೆ: ₹500/- (ಗೇಟ್‌ವೇ ಶುಲ್ಕ ಪ್ರತ್ಯೇಕ). * ಪಾವತಿ ವಿಧಾನ: ಶುಲ್ಕವನ್ನು ಕೇವಲ ಆನ್‌ಲೈನ್ ಮೂಲಕ (ನೆಟ್ ಬ್ಯಾಂಕಿಂಗ್, ಡೆಬಿಟ್/ಕ್ರೆಡಿಟ್ ಕಾರ್ಡ್, ಯುಪಿಐ) ಮಾತ್ರ ಪಾವತಿಸಬೇಕು. ಡಿ.ಡಿ./ಪೋಸ್ಟಲ್ ಆರ್ಡರ್ ಅವಕಾಶವಿಲ್ಲ. ಆಯ್ಕೆ ಪ್ರಕ್ರಿಯೆ * ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ಹಾಗೂ 15 ಅಂಕಗಳ ಸಂದರ್ಶನವನ್ನು ನಡೆಸುವ ಮೂಲಕ ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. * ಎಫ್‌ಡಿಎ ಮತ್ತು ಎಸ್‌ಡಿಎ ಹುದ್ದೆಗಳಿಗೆ: ಒಟ್ಟು 200 ಅಂಕಗಳ ಲಿಖಿತ ಪರೀಕ್ಷೆ ಇರಲಿದ್ದು (ಕನ್ನಡ-50, ಇಂಗ್ಲಿಷ್-25, ಸಾಮಾನ್ಯ ಜ್ಞಾನ-25, ಸಹಕಾರ ವಿಷಯ-50, ಸಂವಿಧಾನ-25, ಬ್ಯಾಂಕಿಂಗ್-25), ಪರೀಕ್ಷಾ ಅವಧಿ 2 ಗಂಟೆ ಇರುತ್ತದೆ. * ಚಾಲಕ ಮತ್ತು ಕಿರಿಯ ಸೇವಕ ಹುದ್ದೆಗಳಿಗೆ: ಒಟ್ಟು 100 ಅಂಕಗಳ ಲಿಖಿತ ಪರೀಕ್ಷೆ ಇರಲಿದ್ದು (ಕನ್ನಡ-50, ಸಾಮಾನ್ಯ ಜ್ಞಾನ-50), ಪರೀಕ್ಷಾ ಅವಧಿ 1 ಗಂಟೆ ಇರುತ್ತದೆ. ಅಧಿಕೃತ ವೆಬ್‌ಸೈಟ್ bellarydcc.bank.in ಅರ್ಜಿ ಸಲ್ಲಿಸುವ ವಿಧಾನ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಬಳ್ಳಾರಿ ಡಿಸಿಸಿ ಬ್ಯಾಂಕ್‌ನ ಅಧಿಕೃತ ಜಾಲತಾಣವಾದ www.bellarydcc.bank.in ಗೆ ಭೇಟಿ ನೀಡಿ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿಕೊಳ್ಳಬೇಕು. ನಿಮ್ಮ ಮೊಬೈಲ್ ನಂಬರ್ ಮತ್ತು ಇ-ಮೇಲ್ ಐಡಿ ಮೂಲಕ ರಿಜಿಸ್ಟರ್ (OTP ಮೂಲಕ) ಮಾಡಿಕೊಂಡು, ಕೇವಲ ಆನ್‌ ಲೈನ್ ಮೂಲಕವೇ ಅರ್ಜಿಯನ್ನು ಸಲ್ಲಿಸಬೇಕು. ಅಗತ್ಯ ದಾಖಲೆಗಳು, ಭಾವಚಿತ್ರ ಹಾಗೂ ಸಹಿಯನ್ನು ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡುವುದು ಕಡ್ಡಾಯ.

ವಾರ್ತಾ ಭಾರತಿ 7 Apr 2026 8:16 pm

ಹೊಸಪೇಟೆ | ದಾಸಿಮಯ್ಯರ ವಚನಗಳು ಸಮಾಜಕ್ಕೆ ದಾರಿದೀಪ : ಡಾ.ಮೃತ್ಯುಂಜಯ ರುಮಾಲೆ

ಹೊಸಪೇಟೆ/ವಿಜಯನಗರ: ಸಂಪತ್ತನ್ನು ತಳ್ಳಿಹಾಕಿ ಮೌಲ್ಯಾಧಾರಿತ ಜೀವನವನ್ನು ಬೋಧಿಸಿದ ಮಹಾಶರಣ ದೇವರ ದಾಸಿಮಯ್ಯರ ಚಿಂತನೆಗಳು ಇಂದಿಗೂ ಸಮಾಜಕ್ಕೆ ದಾರಿದೀಪವಾಗಿದ್ದು, ಅವರ ವಚನಗಳು ಕಾಲಾತೀತ ಮಹತ್ವ ಹೊಂದಿವೆ ಎಂದು ನಿವೃತ್ತ ಪ್ರಾಧ್ಯಾಪಕರಾದ ಡಾ. ಮೃತ್ಯುಂಜಯ ರುಮಾಲೆ ಹೇಳಿದರು. ಕನ್ನಡ ವಿಶ್ವವಿದ್ಯಾಲಯದ ಪಂಪ ಸಭಾಂಗಣದಲ್ಲಿ ದೇವರ ದಾಸಿಮಯ್ಯ ಅಧ್ಯಯನ ಪೀಠದಿಂದ ಆಯೋಜಿಸಲಾದ “ದಾಸಿಮಯ್ಯ ವಚನಗಳಲ್ಲಿ ವಸ್ತು ಮತ್ತು ಆತ್ಮ” ವಿಷಯದ ಉಪನ್ಯಾಸದಲ್ಲಿ ಅವರು ಮಾತನಾಡಿದರು. ಬಟ್ಟೆ ನೇಯುವ ಮೂಲಕ ಜೀವನ ನಡೆಸಿದ ದಾಸಿಮಯ್ಯರು “ನನಗೆ ಸಂಪತ್ತು ಬೇಡ” ಎಂಬ ಸಂದೇಶದ ಮೂಲಕ ಆ ಕಾಲದ ಸಾಮಾಜಿಕ ವ್ಯವಸ್ಥೆಗೆ ಸೂಕ್ಷ್ಮ ವಿರೋಧ ವ್ಯಕ್ತಪಡಿಸಿದ್ದರು. ವಚನಕಾರ, ತತ್ವಜ್ಞಾನಿ ಹಾಗೂ ಚಿಂತಕರಾಗಿ ಅವರು ವಿಶಿಷ್ಟ ಸ್ಥಾನ ಪಡೆದಿದ್ದಾರೆ ಎಂದು ಹೇಳಿದರು. ದಾಸಿಮಯ್ಯ ಮತ್ತು ಬಸವಣ್ಣನವರು ನೇರವಾಗಿ ಭೇಟಿಯಾಗದಿದ್ದರೂ, ದಾಸಿಮಯ್ಯರ ಚಿಂತನೆಗಳು ಬಸವಣ್ಣನವರ ಮೇಲೆ ಪ್ರಭಾವ ಬೀರಿವೆ ಎಂದು ತಿಳಿಸಿದರು. ವಚನ ಸಾಹಿತ್ಯವನ್ನು ಸಮಗ್ರವಾಗಿ ಅರ್ಥೈಸಿದಾಗ ಮಾತ್ರ ಇಂದಿನ ಸಾಮಾಜಿಕ ಗೊಂದಲಗಳಿಗೆ ಪರಿಹಾರ ದೊರೆಯುತ್ತದೆ ಎಂದು ಅಭಿಪ್ರಾಯಪಟ್ಟರು. ಮರದಲ್ಲಿರುವ ಬೆಂಕಿ, ಹಾಲಿನಲ್ಲಿರುವ ತುಪ್ಪ, ದೇಹದಲ್ಲಿರುವ ಆತ್ಮದಂತೆ ಕಾಣದ ಸತ್ಯಗಳನ್ನು ದಾಸಿಮಯ್ಯರು ತಮ್ಮ ವಚನಗಳಲ್ಲಿ ಪರಿಣಾಮಕಾರಿಯಾಗಿ ವಿವರಿಸಿದ್ದಾರೆ. “ಬೇಕು” ಎನ್ನುವ ಮನೋಭಾವದಿಂದ “ಬೇಡ” ಎನ್ನುವ ತತ್ವದತ್ತ ಸಮಾಜವನ್ನು ಕೊಂಡೊಯ್ಯುವ ಮಾರ್ಗದರ್ಶಕರಾಗಿ ಅವರು ಕಾಣಿಸುತ್ತಾರೆ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ. ಡಿ.ವಿ. ಪರಮಶಿವಮೂರ್ತಿ ಮಾತನಾಡಿ, ದಾಸಿಮಯ್ಯರ ಕುರಿತು ಹೆಚ್ಚಿನ ಮೂಲಭೂತ ಸಂಶೋಧನೆ ಅಗತ್ಯವಿದೆ ಎಂದು ತಿಳಿಸಿದರು. ಅವರ ವಚನಗಳಲ್ಲಿ ಸಂಸಾರಿಕ ಹಾಗೂ ಆಧ್ಯಾತ್ಮಿಕ ಅಂಶಗಳ ಸಮನ್ವಯ ಸ್ಪಷ್ಟವಾಗಿದೆ ಎಂದು ಹೇಳಿದರು. ಬಟ್ಟೆ ನೇಯುವ ಸಮುದಾಯವು ಮಾನವ ಸಮಾಜವನ್ನು ನಾಗರಿಕತೆಯತ್ತ ಕೊಂಡೊಯ್ಯುವಲ್ಲಿ ಮಹತ್ವದ ಪಾತ್ರ ವಹಿಸಿದ್ದರೂ, ಆಧುನಿಕ ಯಂತ್ರಗಳ ಬಳಕೆ ಹಾಗೂ ಜೈನಾ ಸಿಲ್ಕ್ ಆಮದುದಿಂದ ಈ ವೃತ್ತಿಗೆ ಹಿನ್ನಡೆಯಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ವಿವಿಧ ವಿಭಾಗಗಳ ಡೀನ್‌ಗಳು, ಪ್ರಾಧ್ಯಾಪಕರು, ಸಂಶೋಧಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವಾರ್ತಾ ಭಾರತಿ 7 Apr 2026 8:15 pm

ಕ್ರೇನ್ ಢಿಕ್ಕಿ: ಪಾದಚಾರಿ ಸ್ಥಳದಲ್ಲೇ ಮೃತ್ಯು

ಉಪ್ಪಿನಂಗಡಿ: ಕ್ರೇನ್ ಢಿಕ್ಕಿ ಹೊಡೆದ ಪರಿಣಾಮ ಪಾದಚಾರಿಯೋರ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ಬೆಳ್ತಂಗಡಿ ತಾಲೂಕಿನ ಕಣಿಯೂರು ಗ್ರಾಮದ ಪಿಲಿಗೂಡು ಎಂಬಲ್ಲಿ ಎ.7ರಂದು ನಡೆದಿದೆ. ತಮಿಳುನಾಡು ಮೂಲದ ಮಹಾಲಿಂಗಂ(53) ಮೃತ ವ್ಯಕ್ತಿ. ಪುತ್ತೂರು ತಾಲೂಕಿನ ಕೊಳ್ತಿಗೆಯಲ್ಲಿ ವಾಸವಾಗಿದ್ದ ಇವರು ಉಪ್ಪಿನಂಗಡಿ ಕಡೆಯಿಂದ ಪಿಲಿಗೂಡು ಕಡೆಗೆ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಗುರುವಾಯನಕೆರೆಯಿಂದ ಉಪ್ಪಿನಂಗಡಿ ಕಡೆಗೆ ಬರುತ್ತಿದ್ದ ಕ್ರೇನ್ ಚಾಲಕನ ನಿಯಂತ್ರಣ ತಪ್ಪಿ ಇವರಿಗೆ ಢಿಕ್ಕಿ ಹೊಡೆದಿದೆ. ಢಿಕ್ಕಿಯ ತೀವ್ರತೆಗೆ ಮಹಾಲಿಂಗಂ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆ ಬಗ್ಗೆ ಅವರ ಪುತ್ರ ಸುದಿನ್ ಎಂಬವರು ಪುತ್ತೂರು ಸಂಚಾರಿ ಪಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

ವಾರ್ತಾ ಭಾರತಿ 7 Apr 2026 8:14 pm

ವಿಜಯನಗರ | ಬೇಸಿಗೆಯಲ್ಲಿ ನೀರಿನ ಅಭಾವ ತಪ್ಪಿಸಲು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ : ಜಿಪಂ ಸಿಇಒ ಸೂಚನೆ

ವಿಜಯನಗರ (ಹೊಸಪೇಟೆ): ಬೇಸಿಗೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಸಾರ್ವಜನಿಕರು ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ಅಭಾವ ಉಂಟಾಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೋಂಗ್ಜಾಯ್ ಮಹ್ಮದ್ ಅಲಿ ಅಕ್ರಮ್ ಷಾ ಸೂಚಿಸಿದರು. ನಗರದ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಮಂಗಳವಾರ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಲ ಜೀವನ್ ಮಿಷನ್ ಯೋಜನೆಯಡಿ ಪ್ರತಿ ಮನೆಗೂ ನಳದ ಮೂಲಕ ನೀರು ಪೂರೈಕೆ ಮಾಡುವ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಬೇಕು. ತಾಂತ್ರಿಕ ಕಾರಣಗಳಿಂದ ಅಪೂರ್ಣಗೊಂಡಿರುವ ಪೈಪ್‌ಲೈನ್ ಅಳವಡಿಕೆ ಮತ್ತು ಟ್ಯಾಂಕ್ ನಿರ್ಮಾಣ ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲಿ ಮುಗಿಸಲು ಅಧಿಕಾರಿಗಳಿಗೆ ಸೂಚಿಸಿದರು. ಅಂತರ್ಜಲ ಮಟ್ಟ ಕುಸಿದಿರುವ ಹಳ್ಳಿಗಳನ್ನು ಗುರುತಿಸಿ, ಅವುಗಳಿಗೆ ಖಾಸಗಿ ಬೋರ್‌ವೆಲ್‌ಗಳನ್ನು ಬಾಡಿಗೆಗೆ ಪಡೆದು ಅಥವಾ ಟ್ಯಾಂಕರ್ ಮೂಲಕ ನೀರು ಪೂರೈಸಬೇಕು. ದುರಸ್ತಿ ಅಗತ್ಯವಿರುವ ಕೈಪಂಪುಗಳನ್ನು ತಕ್ಷಣವೇ ಸರಿಪಡಿಸಲು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು. ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸ್ಥಾಪಿಸಿರುವ ಶುದ್ಧ ಕುಡಿಯುವ ನೀರಿನ ಘಟಕಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿರುವುದನ್ನು ಖಚಿತಪಡಿಸಬೇಕು. ತಾಂತ್ರಿಕ ದೋಷಗಳಿಂದ ಸ್ಥಗಿತಗೊಂಡ ಘಟಕಗಳನ್ನು ಪರಿಶೀಲಿಸಿ ತಕ್ಷಣ ದುರಸ್ತಿ ಮಾಡಬೇಕು ಎಂದು ನಿರ್ದೇಶಿಸಿದರು. ಮಳೆಗಾಲ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕಾಗಿ ನೀರಿನ ಮೂಲಗಳ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಗ್ರಾಮ ಮಟ್ಟದಲ್ಲಿ ಫೀಲ್ಡ್ ಟೆಸ್ಟ್ ಕಿಟ್ ಬಳಸಿ ನೀರಿನ ಗುಣಮಟ್ಟವನ್ನು ನಿಯಮಿತವಾಗಿ ಪರೀಕ್ಷಿಸಿ ದಾಖಲೆ ನಿರ್ವಹಣೆ ಕಡ್ಡಾಯ ಎಂದು ಸೂಚಿಸಿದರು. ಕರ್ತವ್ಯ ಲೋಪ ಎಸಗುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ವಾರ್ತಾ ಭಾರತಿ 7 Apr 2026 8:12 pm

‘ಒಪ್ಪಂದವಾಗದಿದ್ದರೆ ಇಂದು ರಾತ್ರಿ ಇಡೀ ನಾಗರಿಕತೆ ಸಾಯಲಿದೆ’: ಇರಾನ್‌ ಗೆ ಡೊನಾಲ್ಡ್ ಟ್ರಂಪ್ ಬೆದರಿಕೆ

  ವಾಷಿಂಗ್ಟನ್: “ಮಂಗಳವಾರದ ಅಂತಿಮ ಗಡುವಿನೊಳಗೆ ಇರಾನ್ ಯಾವುದೇ ಒಪ್ಪಂದಕ್ಕೆ ಬರದಿದ್ದರೆ, ಇಡೀ ನಾಗರಿಕತೆ ಸಾಯಲಿದೆ. ಅದಕ್ಕೆ ಮತ್ತೆ ಮರುಜೀವ ನೀಡಲು ಸಾಧ್ಯವಿಲ್ಲ” ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ. ಟ್ರುತ್ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ ಸಂದೇಶದಲ್ಲಿ, “ಒಂದು ನಾಗರಿಕತೆ ಇಂದು ರಾತ್ರಿ ಅಂತ್ಯಗೊಳ್ಳುವ ಸಾಧ್ಯತೆ ಇದೆ. ಅದಕ್ಕೆ ಮರುಜೀವ ನೀಡಲು ಸಾಧ್ಯವಿಲ್ಲ. ಅದು ನನಗೆ ಬೇಕಿಲ್ಲ; ಆದರೆ ಬಹುತೇಕ ಹಾಗೆಯೇ ಆಗುವ ಲಕ್ಷಣಗಳಿವೆ” ಎಂದು ಅವರು ತಿಳಿಸಿದ್ದಾರೆ. “ಜಗತ್ತಿನ ಅತ್ಯಂತ ಸುದೀರ್ಘ ಹಾಗೂ ಸಂಕೀರ್ಣ ಇತಿಹಾಸದಲ್ಲಿ ನಾವು ಈ ರಾತ್ರಿ ಅತ್ಯಂತ ಮಹತ್ವದ ಕ್ಷಣಗಳನ್ನು ಕಾಣಲಿದ್ದೇವೆ” ಎಂದೂ ಅವರು ಬರೆದುಕೊಂಡಿದ್ದಾರೆ. ಇದಕ್ಕೂ ಮೊದಲು, ಇರಾನ್‌ ನ ಖಾರ್ಗ್ ದ್ವೀಪದಲ್ಲಿರುವ ಸೇನಾ ಗುರಿಗಳ ಮೇಲೆ ಹೆಚ್ಚುವರಿ ದಾಳಿ ನಡೆಸಿರುವುದಾಗಿ ಅಮೆರಿಕ ಸೇನಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. “ಈ ದಾಳಿಯಿಂದ ತೈಲ ಮೂಲಸೌಕರ್ಯಗಳಿಗೆ ಯಾವುದೇ ಹಾನಿ ಸಂಭವಿಸಿಲ್ಲ” ಎಂದೂ ಅವರು ಸ್ಪಷ್ಟಪಡಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಟ್ರಂಪ್ ಇರಾನ್‌ ನ ಮೂಲಸೌಕರ್ಯಗಳು ಹಾಗೂ ಉನ್ನತ ಅಧಿಕಾರಿಗಳನ್ನು ಗುರಿಯಾಗಿಸಿಕೊಂಡು ಪದೇ ಪದೇ ಬೆದರಿಕೆ ಹಾಕುತ್ತಿದ್ದಾರೆ. “ಇರಾನ್‌ ನಲ್ಲಿ ಅಮೆರಿಕ ಸೇನೆ ತನ್ನ ಗುರಿಗಳನ್ನು ಬಹುತೇಕ ಸಾಧಿಸಿದೆ” ಎಂದು ಅವರು ಹೇಳಿದ್ದಾರೆ. ಆದರೆ, ಒಂದು ತಿಂಗಳಿನಿಂದ ಮುಂದುವರಿದಿರುವ ಯುದ್ಧ ಯಾವಾಗ ಅಂತ್ಯಗೊಳ್ಳಲಿದೆ ಎಂಬುದರ ಕುರಿತು ಯಾವುದೇ ಸ್ಪಷ್ಟ ಕಾಲಮಿತಿ ನೀಡಲಾಗಿಲ್ಲ. ಜೊತೆಗೆ, ಇರಾನ್ ಅನ್ನು “ಶಿಲಾಯುಗಕ್ಕೆ ತಳ್ಳಲಾಗುವುದು” ಎಂಬುದಾಗಿ ಟ್ರಂಪ್ ಹೇಳಿದ್ದಾರೆ.

ವಾರ್ತಾ ಭಾರತಿ 7 Apr 2026 8:11 pm

IPL 2026- ಡೆಲ್ಲಿಗೆ ಹ್ಯಾಟ್ರಿಕ್ ಜಯದ ವಿಶ್ವಾಸ; ಗೆಲುವಿನ ಹುಡುಕಾಟದಲ್ಲಿ ಗುಜರಾತ್; ಹೇಗಿದೆ ಜೇಟ್ಲಿ ಮೈದಾನದ ಪಿಚ್?

GT Vs GT ಐಪಿಎಲ್ 2026ರ ಪಂದ್ಯದಲ್ಲಿ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಮೊದಲ ಜಯಕ್ಕಾಗಿ ಹಂಬಲಿಸುತ್ತಿರುವ ಗುಜರಾತ್ ಟೈಟಾನ್ಸ್ ತಂಡಗಳು ಏಪ್ರಿಲ್ 8ರಂದು ಮುಖಾಮುಖಿಯಾಗಲಿವೆ. ಅಕ್ಷರ್ ಪಟೇಲ್ ನೇತೃತ್ವದ ಡೆಲ್ಲಿ ತಂಡವು ಸತತ ಎರಡು ಗೆಲುವುಗಳೊಂದಿಗೆ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಸಮೀರ್ ರಿಜ್ವಿ ಅವರ ಫಾರ್ಮ್ ತಂಡಕ್ಕೆ ಬಲ ನೀಡಿದೆ. ಮತ್ತೊಂದೆಡೆ, ಶುಭ್ಮನ್ ಗಿಲ್ ನಾಯಕತ್ವದ ಗುಜರಾತ್ ತಂಡವು ಬ್ಯಾಟಿಂಗ್ ವೈಫಲ್ಯದಿಂದ ಎರಡು ಪಂದ್ಯಗಳಲ್ಲಿ ಸೋತಿದೆ.

ವಿಜಯ ಕರ್ನಾಟಕ 7 Apr 2026 8:11 pm

ಮಂಗಳೂರು: ಸಾರ್ವಜನಿಕರು ಕಳೆದುಕೊಂಡ 150 ಮೊಬೈಲ್‌ಗಳ ಹಸ್ತಾಂತರ

ಮಂಗಳೂರು, ಎ.7: ನಾನಾ ಕಾರಣಗಳಿಗಾಗಿ ಸಾರ್ವಜನಿಕರು ಕಳೆದುಕೊಂಡ 150 ಮೊಬೈಲ್‌ಗಳನ್ನು ಪೊಲೀಸರು ವಿಶೇಷ ಕಾರ್ಯಾಚರಣೆಯ ಮೂಲಕ ವಾರಸುದಾರರಿಗೆ ಹಸ್ತಾಂತರಿಸಿದ್ದಾರೆ. ಕಳೆದ ಮಾರ್ಚ್‌ನಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿದ ಪೊಲೀಸರು CEIR Portal ಮೂಲಕ ಪತ್ತೆ ಹಚ್ಚಿದರು. ಸಾರ್ವಜನಿಕರು ಮೊಬೈಲ್ ಕಳೆದುಕೊಂಡಿರುವ ಬಗ್ಗೆ CEIR (Central Equipment Identity Register, https://ceir.sancharsaathi.gov.in ) Portal ನಲ್ಲಿ ದಾಖಲಿಸಿದ್ದ ದೂರುಗಳನ್ನು ಪರಿಶೀಲಿಸಿ ಜಿಲ್ಲಾದ್ಯಂತ ಮಾರ್ಚ್ ತಿಂಗಳಲ್ಲಿ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿದರು. ಹಾಗೇ 150 ಮೊಬೈಲ್‌ಗಳನ್ನು ಪತ್ತೆ ಹಚ್ಚಿ ಆಯಾ ಠಾಣಾ ವ್ಯಾಪ್ತಿಯಲ್ಲೇ ವಾರಸುದಾರರಿಗೆ ಹಸ್ತಾಂತರಿಸಲಾಯಿತು ಎಂದು ಪೊಲೀಸ್ ಇಲಾಖೆಯು ಪ್ರಕಟನೆಯಲ್ಲಿ ತಿಳಿಸಿದೆ.

ವಾರ್ತಾ ಭಾರತಿ 7 Apr 2026 8:08 pm

3 ಕೋಟಿ ರೂ.ಗೆ ಬೇಡಿಕೆ, ಹಲ್ಲೆ ಆರೋಪ | ಮಹಿಳೆ ಸೇರಿದಂತೆ ನಾಲ್ವರ ವಿರುದ್ಧ ಬಸವ ಜಯಮೃತ್ಯುಂಜಯ ಸ್ವಾಮೀಜಿ ದೂರು

ವಿಜಯಪುರ : ʼತನ್ನ ಮೇಲೆ ಮಹಿಳೆ ಹಾಗೂ ಇತರರು ಹಲ್ಲೆ ಮಾಡಿ, 3 ಕೋಟಿ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದಾರೆʼ ಎಂದು ಆರೋಪಿಸಿ ಕೂಡಲಸಂಗಮದ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಬೆಂಗಳೂರು ಮೂಲದ ಮಹಿಳೆ, ಪೃಥ್ವಿ ಗೌಡ, ಯಶವಂತ, ಎಂ.ಡಿ.ವಿರೇಶ ಎಂಬ ನಾಲ್ವರು ಕಳೆದ ಫೆ.11ರಂದು ವಿಜಯಪುರ ತಾಲೂಕಿನ ಕಗ್ಗೋಡ ಬಳಿ ಹಲ್ಲೆ ಮಾಡಿದ್ದಾರೆಂದು ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಎಪ್ರಿಲ್ 4 ರಂದು ಸ್ವಾಮೀಜಿ ದೂರು ದಾಖಲು ಮಾಡಿದ್ದಾರೆ. 2-3 ವರ್ಷಗಳ ಹಿಂದೆ ಬೆಂಗಳೂರಿನ ಮಹಿಳೆ ತನ್ನ ಸಹೋದರನೊಂದಿಗೆ ಬಂದು ಭೇಟಿಯಾಗಿದ್ದಳು. ನಾನೂ ಲಿಂಗಾಯತ ಸಮಾಜದವಳು, ಫೌಂಡೇಷನ್ ವೊಂದರ ಮುಖ್ಯಸ್ಥೆ. ಬಡ ಹಾಗೂ ಅನಾಥ ಮಕ್ಕಳನ್ನು ಸಾಕುತ್ತೇನೆಂದು ಆಕೆಯು ಭೇಟಿಯಾಗಿದ್ದಳು. ಪಂಚಮಸಾಲಿ ಹೋರಾಟಕ್ಕೂ ಸಾಥ್ ನೀಡುವುದಾಗಿ ಹೇಳಿದ್ದರು. ನಂತರ ಪೌಂಡೇಷನ್ ಗಾಗಿ ಹಣ ನೀಡಬೇಕೆಂದು ಬೇಡಿಕೆ ಇಟ್ಟಿದ್ದಳು. ಯಾರಾದರೂ ದಾನಿಗಳಿದ್ದರೆ ಸಹಾಯ ಮಾಡಿಸೋದಾಗಿ ಹೇಳಿದ್ದೆ. ಆದರೆ ನಾನು ಹಣ ನೀಡದ ಕಾರಣ, ಹಣಕ್ಕಾಗಿ ಒತ್ತಾಯ ಮಾಡುತ್ತಿದ್ದಳು ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ನಾನು ಕಳೆದ ಫೆ.11 ರಂದು ನಾನು ವಿಜಯಪುರ ತಾಲ್ಲೂಕಿನ ಕಗ್ಗೋಡದಿಂದ ಬರುವಾಗ ವಾಹನ ಅಡ್ಡಗಟ್ಟಿ ಹಣಕ್ಕಾಗಿ ಬೆದರಿಸಿ ಬೇಡಿಕೆ ಇಟ್ಟರು. ಹಣ ನೀಡದ ಕಾರಣ ನನ್ನ ಕಾರಿನ ಗ್ಲಾಸಿಗೆ ಗುದ್ದಿ, ಹಲ್ಲೆ ನಡೆಸಿದ್ದಾರೆ. ಆ ಸಂದರ್ಭದಲ್ಲಿ ನನ್ನ ಬೆಂಗಾವಲು ಸಿಬ್ಬಂದಿ ವಾತಾವರಣ ತಿಳಿಗೊಳಿಸಿದರು. ಬಳಿಕ ಕೆಲ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ನನ್ನ ಮೇಲೆ ಕೆಟ್ಟದಾಗಿ ಅಪಪ್ರಚಾರ ಮಾಡಿಸಿದ್ದರು. ಈ ಸಂಬಂಧ ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ನಲ್ಲಿ ಇದಕ್ಕೆ ತಡೆಯಾಜ್ಞೆಯನ್ನೂ ತರಲಾಗಿದೆ. ಇಷ್ಟರ ಹೊರತಾಗಿಯೂ ಖಾಸಗಿ ವಾಹಿನಿಯಲ್ಲಿ ನನ್ನ ವಿರುದ್ಧ ಅಪಪ್ರಚಾರ ಮಾಡಿಸಿದ್ದಾಳೆ' ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ನನ್ನ ಶಿಷ್ಯ ರಾಜಕುಮಾರ ಎಂಬುವವರ ಮೊಬೈಲ್‌ಗೆ ಕರೆ ಮಾಡಿ 1.3 ಕೋಟಿ ಹಣ ಬೇಡಿಕೆ ಇಟ್ಟಿದ್ದಾಳೆ. ಹಣ ನೀಡದೇ ಇದ್ದರೆ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಕೆಟ್ಟದಾಗಿ ಪ್ರಚಾರ ಮಾಡುತ್ತೇನೆಂದು ಹೇಳಿದ್ದಾಳೆ. ಅತ್ಯಾಚಾರದ ದೂರು ಹಾಕುತ್ತೇನೆಂದು ಬೆದರಿಕೆ ಹಾಕಿದ್ದಾಳೆ' ಎಂದು ತಿಳಿಸಿದ್ದಾರೆ. ಪಂಚಮಸಾಲಿ ಸಮಾಜದ ಹೋರಾಟ ಹತ್ತಿಕ್ಕಲು, ನನ್ನ ತೇಜೋವಧೆ ಮಾಡಲು ಪ್ರಯತ್ನಿಸುತ್ತಿದ್ದಾರೆ. ಮಹಿಳೆ ಸೇರಿದಂತೆ ಆರೋಪಿಗಳಾದ ಪೃಥ್ವಿಗೌಡ, ಯಶವಂತ, ಎಂ.ಡಿ.ವಿರೇಶ ಇವೆರಲ್ಲರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ವಾರ್ತಾ ಭಾರತಿ 7 Apr 2026 8:07 pm

ಎ.10ರಂದು ನೇರ ಸಂದರ್ಶನ

ಉಡುಪಿ, ಎ.7: ನಗರದ ಅಜ್ಜರಕಾಡು ಕಿತ್ತೂರು ರಾಣಿ ಚೆನ್ನಮ್ಮ ರಸ್ತೆಯ ಧನಂಜಯ ಟವರ್ಸ್‌ನ ಹರ್ಷ ರೀಟೇಲ್ ಪ್ರೈ.ಲಿ ಇಲ್ಲಿ ಎಪ್ರಿಲ್ 10ರಂದು ಬೆಳಗ್ಗೆ 10:30ಕ್ಕೆ ವಿವಿಧ ಹುದ್ದೆಗಳಿಗೆ ನೇರ ಸಂದರ್ಶನ ನಡೆಯಲಿದೆ. ಡಿಪ್ಲೋಮಾ ಹಾಗೂ ಇತರೆ ಪದವಿ ವಿದ್ಯಾರ್ಹತೆಯೊಂದಿಗೆ ಉತ್ತೀರ್ಣ ರಾದ ಅಭ್ಯರ್ಥಿಗಳು ಅಂಕಪಟ್ಟಿ, ಸ್ವ-ವಿವರವುಳ್ಳ ರೆಸ್ಯೂಮ್ ಹಾಗೂ ಆಧಾರ್‌ಕಾರ್ಡ್ ಪ್ರತಿಯೊಂದಿಗೆ ನೇರ ಸಂದರ್ಶನದಲ್ಲಿ ಭಾಗವಹಿಸ ಬಹುದು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ, ರಜತಾದ್ರಿ, ಮಣಿಪಾಲ ಉಡುಪಿ ಮೊ. ನಂ: 8105618291, 9945856670 ಹಾಗೂ 9901472710 ಅನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಉದ್ಯೋಗಾಧಿಕಾರಿಗಳ ಪ್ರಕಟನೆ ತಿಳಿಸಿದೆ.

ವಾರ್ತಾ ಭಾರತಿ 7 Apr 2026 8:05 pm

ಕರಾವಳಿಯಲ್ಲಿ ಅತಿಯಾದ ತಾಪಮಾನದ ಬಗ್ಗೆ ಜಾಗೃತಿ ವಹಿಸಿ: ಉಡುಪಿ ಡಿಸಿ ಸ್ವರೂಪಾ

► ನಿರ್ಜಲೀಕರಣ, ಬಳಲಿಕೆ, ಶಾಖದ ಆಘಾತದ ಎಚ್ಚರಿಕೆ

ವಾರ್ತಾ ಭಾರತಿ 7 Apr 2026 8:04 pm

ಗಾಂಜಾ ಮಾರಾಟ ಮಾಡುತ್ತಿದ್ದ ಪ್ರಕರಣ: ಐವರು ಆರೋಪಿಗಳ ಬಂಧನ

ಮಂಗಳೂರು, ಎ.7: ನಗರದ ಹೊಯ್ಗೆ ಬಜಾರ್ ಬಳಿ ಗಾಂಜಾ ಮಾರಾಟ ಮಾಡಿದ ಆರೋಪದಲ್ಲಿ 5 ಮಂದಿಯನ್ನು ಪಾಮಡೇಶ್ವರ ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಸಿನಾನ್, ಶಶಾಂಕ್, ರಿತುರಾಗ್, ರಾಫಿ, ಪಾರ್ಥೀವ್ ಬಂಧಿತ ಆರೋಪಿಗಳಾಗಿದ್ದಾರೆ. ಎ.6ರಂದು ಪೂ.11:30ಕ್ಕೆ ನಿಷೇಧಿತ ಮಾದಕ ವಸ್ತು ಗಾಂಜಾವನ್ನು ಬೈಕ್‌ನಲ್ಲಿ ಕುಳಿತು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ 5 ಮಂದಿಯನ್ನು ಬಂಧಿಸಲಾಗಿದೆ ಎಂದು ಪ್ರಕರಣ ದಾಖಲಿಸಿರುವ ಪಾಂಡೇಶ್ವರ ಪೊಲೀಸರು ತಿಳಿಸಿದ್ದಾರೆ.

ವಾರ್ತಾ ಭಾರತಿ 7 Apr 2026 7:57 pm

Kalaburagi | ಡಾ.ಬಾಬು ಜಗಜೀವನರಾಮ್ ಜಯಂತ್ಯೋತ್ಸವ : ಒಳಮೀಸಲಾತಿಗಾಗಿ ಹೋರಾಟಕ್ಕೆ ನಿರ್ಧಾರ

ಕಲಬುರಗಿ: ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಒಳಮೀಸಲಾತಿ ಸಂಪೂರ್ಣ ಜಾರಿಗೆ ನಿರ್ಧಾರ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಹೋರಾಟ ಕೈಗೊಳ್ಳುವುದಾಗಿ ರಾಜ್ಯ ಸರ್ಕಾರಕ್ಕೆ ಬಾಬು ಜಗಜೀವನರಾಮ್ ಜಯಂತಿ ಸಮಾರಂಭದಲ್ಲಿ ಮಾದಿಗ ಸಮುದಾಯದ ಮುಖಂಡರು ಎಚ್ಚರಿಕೆ ನೀಡಿದರು. ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಡಾ.ಬಾಬು ಜಗಜೀವನರಾಮ್ ಜಿಲ್ಲಾ ಜಯಂತ್ಯೋತ್ಸವ ಸಮಿತಿಯಿಂದ ರವಿವಾರ ಆಯೋಜಿಸಿದ್ದ ಜಗಜೀವನರಾಮ್ ಜಯಂತ್ಯೋತ್ಸವ ಪ್ರಯುಕ್ತ ಸಮತಾ ದಿವಸ ಕಾರ್ಯಕ್ರಮದಲ್ಲಿ ಎಲ್ಲ ಮುಖಂಡರು ಒಳ ಮೀಸಲಾತಿ ಕೂಡಲೇ ಜಾರಿಗೆ ಮಾಡಬೇಕೆಂದು ಸರಕಾರಕ್ಕೆ ಆಗ್ರಹ ವ್ಯಕ್ತಪಡಿಸಿದರು. ಈ ವೇಳೆ ಮಾತನಾಡಿದ ಮೈಸೂರಿನ ನ್ಯಾಯವಾದಿ ಅರುಣಕುಮಾರ ಮಾತನಾಡಿ, ಒಳ ಮೀಸಲಾತಿಗೆ ನಾವು ಒಗ್ಗಟ್ಟಿನ ಪ್ರದರ್ಶನ ತೋರಿಸಬೇಕಿದೆ. ನಾವು ಮೊದಲು ಸಂಘಟಿತರಾಗಬೇಕು. ನಮ್ಮ ಹಕ್ಕಿಗೆ ನಿರಂತರ ಹೋರಾಟ ಮುಖ್ಯ. ಒಳಮೀಸಲಾತಿಯಂತಹ ಹೋರಾಟಕ್ಕೆ ಅಪಾರ ಮಹಿಳೆಯರು ಭಾಗಿಯಾಗಬೇಕು. ಯಾವುದೇ ಕುತಂತ್ರಗಳಿಗೆ ನಾವು ಹೆದರಬಾರದು ಎಂದು ಕರೆ ನೀಡಿದರು. ಚಲಚಿತ್ರ ನಟ ಚೇತನ ಅಹಿಂಸಾ ಮಾತನಾಡಿ, ದೇಶ ಅಂದರೆ ಕೇವಲ ಜನವಲ್ಲ, ಗಡಿಯೂ ಅಲ್ಲ, ಸರಕಾರವೂ ಅಲ್ಲ, ಅದೊಂದು ಪರಿಕಲ್ಪನೆ. ನಾವು ಯಾವ ಪರಿಕಲ್ಪನೆ ಪರವಾಗಿ ಹೋಗಬೇಕು. ಬಲಪಂಥೀಯ ಹಿಂದುತ್ವ, ಮಧ್ಯ ಪಂಥೀಯ ಮನುವಾದವಲ್ಲ, ಎಡಪಂಥೀಯ ಕಮ್ಯೂನಿಸ್ಟ್ ಕೂಡ ಅಲ್ಲ, ಅಂಬೇಡ್ಕರ್, ಪೆರಿಯಾರ್, ಕಾರಾಂ ಅವರ ಸತ್ಯ ಪಂಥದ ಸಿದ್ದಾಂತ ನಾವೆಲ್ಲ ಕಟ್ಟಬೇಕಿದೆ. ಅದುವೇ ಇಡೀ ವಿಶ್ವಕ್ಕೆ ಮಾದರಿಯಾಗಬಲ್ಲದು ಎಂದು ಹೇಳಿದರು. ಜಗದ್ಗುರು ಡಾ.ಸಾರಂಗಧರ ದೇಶೀಕೇಂದ್ರ ಸ್ವಾಮೀಜಿ ಮಾತನಾಡಿದರು. ಮಾಜಿ ಸಚಿವರಾದ ಎಸ್.ಕೆ.ಕಾಂತಾ, ಮಾಲೀಕಯ್ಯ ಗುತ್ತೇದಾರ್, ಮಾಜಿ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ, ಕೆ.ಬಿ.ವಾಸು, ನೀಲಕಂಠರಾವ್ ಮೂಲಗೆ, ಸುರೇಶ ಬಡಿಗೇರ, ಲಚ್ಚಪ್ಪ ಜಮಾದಾರ, ನಂದಿನಿ ಸನಬಾಳ್, ವಿನೋದ ಬಿ.ಕೆ., ಬಸವರಾಜ ಜವಳಿ, ಎ.ಎಚ್.ನಾಗೇಶ, ಆರುಂಧತಿ ನಾಗಮೂರ್ತಿ, ಹಣಮಂತ ತುಮಕೂರ, ಅಂಬಾರಾಯ ಬೆಳಕೋಟಾ, ಪ್ರದೀಪ ಭಾವೆ, ದಶರಥ ಕಲಗುರ್ತಿ, ಶ್ರೀಶೈಲ್ ಎಂ.ಜಿ., ಅನಿಲ ಬೆಳಕೇರಿ ಸೇರಿ ಅನೇಕರು ಇದ್ದರು. ರಾಜು ಹದನೂರ ಅಧ್ಯಕ್ಷತೆ ವಹಿಸಿದ್ದರು. ಮಂಜುನಾಥ ನಾಲವಾರ ಪ್ರಾಸ್ತಾವಿಕ ಮಾತನಾಡಿದರು. ವೀರಭದ್ರಪ್ಪ ಅರಕೇರಿ ನಿರೂಪಿಸಿದರು. ಪದ್ಮಶ್ರೀ ಡಾ.ವಿಜಯಲಕ್ಷ್ಮಿ ದೇಶಮಾನೆ ವಿಶೇಷ ಸನ್ಮಾನ : ಪದ್ಮಶ್ರೀ ಪುರಸ್ಕೃತ ಹಿರಿಯ ಕ್ಯಾನ್ಸರ್ ತಜ್ಞೆ, ಕಲಬುರಗಿ ಮೂಲದ ಡಾ.ವಿಜಯಲಕ್ಷ್ಮಿ ದೇಶಮಾನೆ ಅವರಿಗೆ ವಿಶೇಷವಾಗಿ ಸನ್ಮಾನಿಸಿ ಗೌರವಿಸಲಾಯಿತು. ನಂತರ ಸರಕಾರಿ ನೌಕರರ ಸಂಘದ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ನಂದಿನಿ ಸನಬಾಳ್ ಸೇರಿ ಅನೇಕರಿಗೆ ಗೌರವ ಸತ್ಕಾರ ಹಾಗೂ ಸಾಧಕರಿಗೆ ಸಮತಾ ದಿವಸ ಪುರಸ್ಕಾರ ನೀಡಿ ಗೌರವಿಸಲಾಯಿತು.

ವಾರ್ತಾ ಭಾರತಿ 7 Apr 2026 7:56 pm

ಮಹಿಳೆಯರಿಗೆ ಸ್ವ ಉದ್ಯೋಗಕ್ಕೆ ಪ್ರೋತ್ಸಾಹಧನ ಪಾವತಿಗೆ ಅಗತ್ಯ ಕ್ರಮಕ್ಕೆ ದ.ಕ. ಡಿಸಿ ಸೂಚನೆ

ಮಂಗಳೂರು, ಎ.7: ದ.ಕ.ಜಿಲ್ಲೆಯಲ್ಲಿರುವ ಲಿಂಗತ್ವ ಅಲ್ಪಸಂಖ್ಯಾತರಿಗೆ ಗುರುತು ಚೀಟಿ ನೀಡಲು ಸಮುದಾಯ ಆಧಾರಿತ ಸಂಸ್ಥೆಗಳು ಸಹಕರಿಸಬೇಕು. ಅವರಿಗೆೆ ನಿವೇಶನವನ್ನು ಮಂಜೂರು ಮಾಡುವ ಕುರಿತು ಸಂಬಂಧಪಟ್ಟ ಇಲಾಖೆಗಳು ಕ್ರಮವಹಿಸಬೇಕು ಎಂದು ದ.ಕ. ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಸೂಚಿಸಿದ್ದಾರೆ. ಮಹಿಳಾ ಅಭಿವೃದ್ಧಿ ನಿಗಮದ ವಿವಿಧ ಯೋಜನೆಗಳ ಆಯ್ಕೆ ಹಾಗೂ ಸಮನ್ವಯ ಸುತಿ ಸಭೆ ಹಾಗೂ ಕೆಲಸದ ಸ್ಥಳ ದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ ತಡೆ ಕಾಯ್ದೆ ಕುರಿತು ದ.ಕ.ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ನಡೆದ ಜಿಲ್ಲಾ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಧನಶ್ರೀ ಯೋಜನೆಯಡಿ ಎಚ್.ಐ.ವಿ ಸೋಂಕಿತ ಮಹಿಳೆಯರಿಗೆ ಹಾಗೂ ಚೇತನ ಯೋಜನೆಯಡಿ ದಮನಿತ ಮಹಿಳೆಯರಿಗೆ ಸ್ವ ಉದ್ಯೋಗಕ್ಕೆ ಪ್ರೋತ್ಸಾಹಧನ ಪಾವತಿಗೆ ಕ್ರಮ ಕೈಗೊಳ್ಳಬೇಕು. ಫಲಾನುಭವಿಗಳಿಗೆ ಯೋಜನೆ ಗಳಿಗೆ ಅರ್ಜಿ ಸಲ್ಲಿಸಲು ಆಧಾರ್ ಕಾರ್ಡ್ ಅಥವಾ ಇನ್ನಿತರೆ ದಾಖಲೆಗಳ ಸಮಸ್ಯೆಯಾದಲ್ಲಿ ಅದನ್ನು ಪರಿಹರಿಸುವಂತೆ ಕ್ರಮವಹಿಸಬೇಕು ಎಂದು ಡಿಸಿ ಹೇಳಿದರು. 15 ಮಂದಿ ನಿವೇಶನ ರಹಿತ ಟ್ರಾನ್ಸ್‌ಜೆಂಡರ್ಸ್ ಪಟ್ಟಿಯನ್ನು ಮಂಗಳೂರು ಮಹಾನಗರಪಾಲಿಕೆಗೆ ಒದಗಿಸಲಾಗಿದೆ. ಗೃಹಲಕ್ಷ್ಮಿ ಯೋಜನೆಯಡಿ ನೋಂದಾಯಿಸಿದ 45 ಮಂದಿ ಟ್ರಾನ್ಸ್‌ಜೆಂಡರ್ಸ್‌ಗೆ ತಿಂಗಳಿಗೆ 2,000 ರೂ.ಮೊತ್ತವನ್ನು ನೀಡಲಾಗುತ್ತಿದೆ. ಇತ್ತೀಚಿಗೆ ನಡೆದ ಸರ್ವೇಯಂತೆ ದ.ಕ. ಜಿಲ್ಲೆಯಲ್ಲಿ ಒಟ್ಟು 96 ಟ್ರಾನ್ಸ್‌ಜೆಂಡರ್ಸ್ ವ್ಯಕ್ತಿಗಳು ನೊಂದಾಯಿಸಿರುತ್ತಾರೆ.ಟ್ರಾನ್ಸ್‌ಜೆಂಡರ್ ಪುರ್ನವಸತಿ ಯೋಜನೆಯಡಿ 18ರಿಂದ 60 ವಷರ್ ವಯೋಮಿತಿ ವ್ಯಕ್ತಿ ಗಳು ಸ್ವ-ಉದ್ಯೋಗ ಕೈಗೊಳ್ಳಲು 30 ಸಾವಿರ ರೂ.ಪ್ರೋತ್ಸಾಹಧನ ನೀಡಲಾಗುತ್ತದೆ. ಟ್ರಾನ್ಸ್ ಜೆಂಡರ್ಸ್ ಪುನರ್ವಸತಿ ಯೋಜನೆಯಡಿ 16 ಅರ್ಜಿಗಳು ಸ್ವೀಕೃತವಾಗಿದ್ದು, 1 ಅರ್ಜಿಯು ಯಾವುದೇ ದಾಖಲೆಗಳು ಇಲ್ಲದೆ ತಿರಸ್ಕೃತಗೊಂಡಿರುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಭಿವೃದ್ಧಿ ನಿರೀಕ್ಷಕಿ ಚಂದ್ರಿಕಾ ಸಭೆಗೆ ಮಾಹಿತಿ ನೀಡಿದರು. ದ.ಕ. ಜಿಲ್ಲಾ ಮಟ್ಟದಲ್ಲಿ ಲೈಂಗಿಕ ಕಿರುಕುಳ ತಡೆಗಟ್ಟುವಿಕೆ ಕಾಯ್ದೆಯ ಬಗ್ಗೆ ಐಇಸಿ ಚಟುವಟಿಕೆಗಳನ್ನು ಹಮ್ಮಿಕೊಳ್ಳ ಬೇಕು. 10 ಅಥವಾ 10ಕ್ಕಿಂತ ಹೆಚ್ಚು ಸಿಬ್ಬಂದಿ ವರ್ಗ ಕೆಲಸ ನಿರ್ವಹಿಸುತ್ತಿರುವ ಸ್ಥಳಗಳಲ್ಲಿ ಆಂತರಿಕ ದೂರುಗಳ ಸಮಿತಿ ರಚಿಸಿ ಜಿಲ್ಲಾ ಮಟ್ಟದಲ್ಲಿ ಆಂತರಿಕ ಮತ್ತು ಸ್ಥಳೀಯ ದೂರು ಸಮಿತಿಯ ವಿಚಾರಣಾ ವರದಿಯಂತೆ ನಿಯಮಾನುಸಾರ ಕ್ರಮ ವಹಿಸಬೇಕು. ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ ತಡೆ ಕಾಯ್ದೆಯನ್ನು ಸಮಗ್ರವಾಗಿ ಅನುಷ್ಠ್ಠಾನ ಮಾಡಬೇಕು. ಶಿ ಬಾಕ್ಸ್ ಪೋರ್ಟಲ್‌ನಲ್ಲಿ ನಿಖರವಾಗಿ ಮಾಹಿತಿಯನ್ನು ಪರಿಶೀಲಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು. ಸಭೆಯಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶೆ ಜೈಬುನ್ನೀಸಾ, ಅಪರ ಜಿಲ್ಲಾಧಿಕಾರಿ ರಾಜು ಕೆ, ಸಹಾಯಕ ಪೋಲಿಸ್ ಆಯುಕ್ತೆ ಗೀತಾ ಕುಲಕರ್ಣಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ತಿಮ್ಮಯ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಉಸ್ಮಾನ್ ಎ, ಹಾಗೂ ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.

ವಾರ್ತಾ ಭಾರತಿ 7 Apr 2026 7:55 pm

ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಕ್ರಮ ವಹಿಸಲು ಸ್ಪೀಕರ್ ಖಾದರ್ ಸೂಚನೆ

ಮಂಗಳೂರು ವಿಧಾನ ಸಭಾ ಕ್ಷೇತ್ರಕ್ಕೆ ಸಂಬಂಧಿಸಿ ಅಧಿಕಾರಿಗಳೊಂದಿಗೆ ಸಭೆ

ವಾರ್ತಾ ಭಾರತಿ 7 Apr 2026 7:53 pm

Middle East War: ಪಾಕಿಸ್ತಾನದಲ್ಲಿ ಲಾಕ್‌ಡೌನ್‌ ಘೋಷಣೆ; ಸಂಘರ್ಷದ ಬೇಗುದಿಯಲ್ಲಿ ಅಸ್ತಿತ್ವದ ಅನ್ವೇಷಣೆ!

ಮಧ್ಯಪ್ರಾಚ್ಯ ಬಿಕ್ಕಟ್ಟಿನಿಂದಾಗಿ ತೀವ್ರ ತೈಲ ಬಿಕ್ಕಟ್ಟನ್ನು ಎದುರಿಸುತ್ತಿರುವ ಪಾಕಿಸ್ತಾನ, ಈ ಬಿಕ್ಕಟ್ಟನ್ನು ನಿಭಾಯಿಸಲು ಭಾಗಶಃ ಲಾಕ್‌ಡೌನ್‌ ಮೊರೆ ಹೋಗಿದೆ. ಈ ಕುರಿತು ಅಧಿಕೃತ ಆದೇಶ ಹೊರಡಿಸಿರುವ ಪ್ರಧಾನಮಂತ್ರಿ ಶೆಹಬಾಜ್‌ ಷರೀಫ್‌ ನೇತೃತ್ವದ ಪಾಕ್‌ ಸರ್ಕಾರ ಸಿಂಧ್‌ ಪ್ರಾಂತ್ಯವನ್ನು ಹೊರತುಪಡಿಸಿ ಉಳಿದೆಲ್ಲಾ ಪಾಕಿಸ್ತಾನದಲ್ಲಿ ಭಾಗಶಃ ಲಾಕ್‌ಡೌನ್‌ ಜಾರಿ ಮಾಡಿದೆ. ಲಾಕ್‌ಡೌನ್‌ ನಿಯಮಾವಳಿಗಳನ್ನು ಹೊರಡಿಸಿರುವ ಸರ್ಕಾರ, ಅನಗತ್ಯ ತೈಲ ಬಳಕೆಗೆ ಕಡಿವಾಣ ಹಾಕುವಂತೆ ನಾಗರಿಕರಿಗೆ ಸೂಚನೆ ನೀಡಿದೆ. ಈ ಕುರಿತು ಇಲ್ಲಿದೆ ಮಾಹಿತಿ.

ವಿಜಯ ಕರ್ನಾಟಕ 7 Apr 2026 7:50 pm

ಯುದ್ಧದ ಲಾಭ ಪಡೆಯಲು ಗ್ಯಾಸ್ ಮಾಫಿಯಾ ಸಕ್ರಿಯ: ಡಿವೈಎಫ್‌ಐ ದ.ಕ. ಜಿಲ್ಲಾಧ್ಯಕ್ಷ ಇಮ್ತಿಯಾಝ್ ಆರೋಪ

ಮಂಗಳೂರು, ಎ.7: ಗ್ಯಾಸ್ ವಿತರಣೆ ವಿಳಂಬ ಮಾಡಿ ಏಜನ್ಸಿಗಳು ಅಕ್ರಮ ದಂಧೆಗಿಳಿದಿದೆ ಅಮೇರಿಕಾ-ಇರಾನ್ ಯುದ್ಧದ ಲಾಭ ಪಡೆಯಲು ಗ್ಯಾಸ್ ಮಾಫಿಯಾಗಳು ಸಕ್ರಿಯವಾಗಿದ್ದು, ಅಕ್ರಮ ದಂಧೆ ತಡೆಯಲು ದ.ಕ. ಜಿಲ್ಲಾಡಳಿತ ವಿಫಲವಾಗಿದೆ ಎಂದು ಡಿವೈಎಫ್‌ಐ ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಝ್ ಹೇಳಿದರು. ಡಿವೈಎಫ್‌ಐ ದ.ಕ ಜಿಲ್ಲಾ ಸಮಿತಿಯ ವತಿಯಿಂದ ಸಮರ್ಪಕ ಗ್ಯಾಸ್ ವಿತರಣೆಯಲ್ಲಿ ಆಗುತ್ತಿರುವ ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಿ ನಗರದ ಮಿನಿ ವಿಧಾನಸೌಧದ ಎದುರು ಮಂಗಳವಾರ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು. ರಾಜ್ಯದಲ್ಲಿ ಗ್ಯಾಸ್ ಅಭಾವ ಇದ್ದರೂ ಮಂಗಳೂರಿನ ಎಚ್‌ಪಿಸಿಎಲ್ ಗ್ಯಾಸ್ ಸ್ಥಾವರಗಳಿಂದ ಮಹಾರಾಷ್ಟ್ರಕ್ಕೆ ಪ್ರತಿನಿತ್ಯ 300ರಷ್ಟು ಹೆಚ್ಚುವರಿ ಬುಲೆಟ್ ಟ್ಯಾಂಕರ್‌ಗಳು ಗ್ಯಾಸ್ ತುಂಬಿಸಿ ಹೋಗುತ್ತಿವೆ ಎಂದು ಆರೋಪಿಸಿದ ಇಮ್ತಿಯಾಝ್ ದೇಶ ವಿಷಮ ಪರಿಸ್ಥಿತಿಯಲ್ಲಿರುವಾಗ ದೇಶದಲ್ಲಿ ಗ್ಯಾಸ್ ಅಭಾವ ಸೃಷ್ಟಿಸಿ ಅಧಿಕ ಲಾಭ ಗಳಿಸುವ ಹುನ್ನಾರಗಳು ಜನರ ಜೇಬಿಗೆ ಕತ್ತರಿ ಹಾಕುತ್ತಿದೆ ಎಂದರು. ಗ್ಯಾಸ್ ಏಜನ್ಸಿಗಳು ಅಧಿಕ ಲಾಭಕ್ಕಾಗಿ ಅಕ್ರಮ ದಂಧೆಯಲ್ಲಿ ತೊಡಗಿದೆ. ಕಾಳ ಸಂತೆಯಲ್ಲಿ ಗ್ಯಾಸ್ ಮಾರಾಟ ನಿಲ್ಲಿಸಬೇಕು. ಸಮರ್ಪಕ ಗ್ಯಾಸ್ ವಿತರಣೆ ಕ್ರಮಗೊಳ್ಳಲು ಏಜನ್ಸಿಗಳು ವಿಫಲವಾದರೆ ಡಿವೈಎಫ್‌ಐ ಕಾರ್ಯ ಕರ್ತರು ಗ್ಯಾಸ್ ಏಜನ್ಸಿಗಳಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಇಮ್ತಿಯಾಝ್ ಎಚ್ಚರಿಕೆ ನೀಡಿದರು. ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಮಾತನಾಡಿ ಜನರು ಗ್ಯಾಸ್ ಪಡೆಯಲು ಏಜನ್ಸಿ ಮುಂದೆ ಸಾಲು ನಿಂತಿದ್ದರೂ ಕೇಂದ್ರ ಸರಕಾರದ ಮಂತ್ರಿಗಳು ದೇಶದಲ್ಲಿ ಗ್ಯಾಸ್ ಕೊರತೆ ಇಲ್ಲ ಎಂದು ಸುಳ್ಳು ಹೇಳಿಕೆ ಕೊಡುತ್ತಿದ್ದಾರೆ. ಇನ್ನೊಂದೆಡೆ ರಾಜ್ಯ ಸರಕಾರ ನಾಗರಿಕರ ಸರಬರಾಜು ವ್ಯವಸ್ಥೆಯ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಆರೋಪಿಸಿದರಲ್ಲದೆ ಅಡುಗೆ ಅನಿಲದ ಅಕ್ರಮ ದಂಧೆಗೆ ಜಿಲ್ಲಾಡಳಿತ ಕಡಿವಾಣ ಹಾಕಬೇಕೆಂದು ಆಗ್ರಹಿಸಿದರು. ಡಿವೈಎಫ್‌ಐ ಜಿಲ್ಲಾ ಮುಖಂಡರಾದ ನವೀನ್ ಕೊಂಚಾಡಿ, ತಯ್ಯುಬ್ ಬೆಂಗ್ರೆ, ಜಗದೀಶ್ ಬಜಾಲ್, ಖಾಲಿದ್ ಹರೇಕಳ, ತೌಸೀಫ್ ಬೈಕಂಪಾಡಿ, ಪ್ರವೀಣ್ ಕೊಂಚಾಡಿ, ಜನವಾದಿ ಮಹಿಳಾ ಸಂಘಟನೆಯ ಮುಖಂಡರಾದ ಭಾರತಿ ಬೋಳಾರ, ಯೋಗೀತಾ ಸುವರ್ಣ, ಸಾಮಾಜಿಕ ಮುಂದಾಳುಗಳಾದ ಮಹಾಬಲ ದೆಪ್ಪೆಲಿಮಾರ್, ಜೆರಾಲ್ಡ್ ಟವರ್ಸ್, ರವಿಚಂದ್ರ ಕೊಂಚಾಡಿ, ಅಬೂಬಕ್ಕರ್ ಜಲ್ಲಿ, ಉಮರಬ್ಬ ಮುಂತಾದವರು ಉಪಸ್ಥಿತರಿದ್ದರು. ಜಿಲ್ಲಾ ಸಹ ಕಾರ್ಯದರ್ಶಿ ರಿಝ್ವಾನ್ ಖಂಡಿಗ ಸ್ವಾಗತಿಸಿದರು. ಜಿಲ್ಲಾ ಕೋಶಾಧಿಕಾರಿ ಮನೋಜ್ ವಾಮಂಜೂರ್ ವಂದಿಸಿದರು.    

ವಾರ್ತಾ ಭಾರತಿ 7 Apr 2026 7:50 pm

ಮಂಗಳೂರು| ನ.3ರಿಂದ ಅಂತರ್‌ರಾಷ್ಟ್ರೀಯ ಮಟ್ಟದ ಬ್ಯಾಡ್ಮಿಂಟನ್ ಟೂರ್ನಮೆಂಟ್: ಸಂಜಯ್ ಮಿಶ್ರಾ

ಮಂಗಳೂರು, ಎ.7: ಪ್ರಸಕ್ತ ವರ್ಷದ ನವೆಂಬರ್ 3ರಿಂದ 8ರ ತನಕ ಮಂಗಳೂರಿನಲ್ಲಿ ಯೋನೆಕ್ಸ್ ಸನ್‌ರೈಸ್ ಚೀಫ್ ಮಿನಿಸ್ಟರ್ಸ್ ಮಂಗಳೂರು ಇಂಡಿಯಾ ಇಂಟರ್ ನ್ಯಾಶನಲ್ ಚಾಲೆಂಜ್-2026 ಬ್ಯಾಡ್ಮಿಂಟನ್ ಟೂರ್ನಮೆಂಟ್ ನಡೆಯಲಿದೆ ಎಂದು ಬ್ಯಾಡ್ಮಿಂಟನ್ ಅಸೋಸಿಯೇಶನ್ ಆಫ್ ಇಂಡಿಯಾದ ಪ್ರಧಾನ ಕಾರ್ಯದರ್ಶಿ ಸಂಜಯ್ ಮಿಶ್ರಾ ತಿಳಿಸಿದ್ದಾರೆ. ನಗರದ ಉರ್ವ ಇಂಡೋರ್ ಸ್ಟೇಡಿಯಂನಲ್ಲಿ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿರುವ ಬೇಸಗೆಯ ಎರಡು ತಿಂಗಳ ಯೋನೆಕ್ಸ್ ಸನ್‌ರೈಸ್ ಬ್ಯಾಡ್ಮಿಂಟನ್ ತರಬೇತಿ ಶಿಬಿರಕ್ಕೆ ಮಂಗಳವಾರ ಭೇಟಿ ನೀಡಿದ ಅವರು ಉರ್ವ ಬ್ಯಾಡ್ಮಿಂಟನ್ ಸ್ಟೇಡಿಯಂನ ವ್ಯವಸ್ಥೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಮಂಗಳೂರಿನಲ್ಲಿ ಸತತ ಎರಡನೇ ಬಾರಿಗೆ ಅಂತರ್‌ರಾಷ್ಟ್ರೀಯ ಮಟ್ಟದ ಬ್ಯಾಡ್ಮಿಂಟನ್ ಟೂರ್ನಮೆಂಟ್‌ನ ಆತಿಥ್ಯ ವಹಿಸಲು ದಕ್ಷಿಣ ಕನ್ನಡ ಬ್ಯಾಡ್ಮಿಂಟನ್ ಅಸೋಸಿಯೇಶನ್‌ಗೆ ಅವಕಾಶ ನೀಡಿರುವುದಾಗಿ ಪ್ರಕಟಿಸಿದರು. ಕಳೆದ ವರ್ಷದ ನವೆಂಬರ್‌ನಲ್ಲಿ ಮಂಗಳೂರಿನಲ್ಲಿ ದ.ಕ. ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಶನ್ ಅತ್ಯುತ್ತಮವಾಗಿ ಅಂತರ್‌ರಾಷ್ಟ್ರೀಯ ಮಟ್ಟದ ಬ್ಯಾಡ್ಮಿಂಟನ್ ಟೂರ್ನಮೆಂಟ್‌ನ್ನು ಆಯೋಜಿಸಿತ್ತು ಎಂದು ಸಂಜಯ್ ಮಿಶ್ರಾ ಶ್ಲಾಘಿಸಿದರು. ಇದೇ ಸಂದರ್ಭದಲ್ಲಿ ರಾಜ್ಯ ಮತ್ತು ರಾಷ್ಟ್ರೀಯ ಬ್ಯಾಡ್ಮಿಂಟನ್ ಟೂರ್ನಮೆಂಟ್‌ನಲ್ಲಿ ಆಡಿರುವ ಕರಾವಳಿಯ ಸ್ಥಳಿಯ ಆಟಗಾರರನ್ನು ಸಂಜಯ್ ಮಿಶ್ರಾ ಅವರು ಅಭಿನಂದಿಸಿದರು. ದಕ್ಷಿಣ ಕನ್ನಡ ಬ್ಯಾಡ್ಮಿಂಟನ್ ಅಸೋಸಿಯೇಶನ್‌ನ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ, ಉಪಾಧ್ಯಕ್ಷ ಅಶೋಕ್ ಹೆಗ್ಡೆ, ಕಾರ್ಯದರ್ಶಿ ಸುಪ್ರೀತ್ ಆಳ್ವ, ಕೋಶಾಧಿಕಾರಿ ಲಕ್ಷ್ಮೀ ಪಿ ಸುವರ್ಣ, ಕಾರ್ಯಕಾರಿ ಸಮಿತಿ ಸದಸ್ಯರಾದ ಎ.ಕೆ.ನಿಯಾಝ್, ರಿಯಾಝ್ ಅಝರ್ ಹಸನ್, ಡಾ.ಶರತ್ ಕುಮಾರ್ ಕೆ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.  

ವಾರ್ತಾ ಭಾರತಿ 7 Apr 2026 7:47 pm

Kuknoor | ಅನುಮಾನಾಸ್ಪದವಾಗಿ ಯುವತಿ ಮೃತ್ಯು : ತನಿಖೆ ಚುರುಕು

ಕುಕನೂರು : ತಾಲೂಕಿನ ಸೋಂಪುರ ಯುವತಿಯೊರ್ವಳು ಅನುಮಾನಾಸ್ಪದವಾಗಿ ಮೃತಪಟ್ಟ ಘಟನೆ ಸೋಮವಾರ ಸಂಜೆ ನಡೆದಿದೆ. ಮೃತ ಯುವತಿಯನ್ನು ಮಾಳವಿಕಾ (27) ಎಂದು ಗುರುತಿಸಲಾಗಿದೆ. ಮೂಲತಃ ದೆಹಲಿ ಮೂಲದವರಾದ ಅವರು, ಸೋಂಪುರ ಗ್ರಾಮದ 28 ವರ್ಷದ ಯುವಕನನ್ನು ಸುಮಾರು ನಾಲ್ಕು–ಐದು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು ಎಂದು ತಿಳಿದುಬಂದಿದೆ. ತುಮಕೂರಿನಲ್ಲಿ ತರಬೇತಿ ಪಡೆಯುವ ವೇಳೆ ಇಬ್ಬರ ನಡುವೆ ಪರಿಚಯ ಬೆಳೆದು, ಅದು ಪ್ರೀತಿಯಾಗಿ ಕೋವಿಡ್ ಅವಧಿಯಲ್ಲಿ ಮದುವೆಯಾಗಿ ದಾಂಪತ್ಯ ಜೀವನ ಆರಂಭಿಸಿದ್ದರು ಎನ್ನಲಾಗಿದೆ. ಗ್ರಾಮದ ಸ್ಥಳೀಯರ ಮಾಹಿತಿ ಪ್ರಕಾರ, ದಂಪತಿ ಇದುವರೆಗೆ ಅನೋನ್ಯ ವಾಗಿ ಜೀವನ ಸಾಗಿಸುತ್ತಿದ್ದು ಯಾವುದೇ ಗಂಭೀರ ಕಲಹಗಳ ಮಾಹಿತಿ ಇಲ್ಲ. ಆದರೆ ಸೋಮವಾರ ಸಂಜೆ ದಂಪತಿಗಳ ನಡುವೆ ಯಾವುದೋ ವಿಷಯಕ್ಕೆ ಮನಸ್ತಾಪ ಉಂಟಾಗಿದೆ ಎನ್ನಲಾಗುತ್ತಿದೆ. ಘಟನೆಗೆ ಸಂಬಂಧಿಸಿದಂತೆ ಎರಡು ರೀತಿಯ ಮಾಹಿತಿ ಹರಿದಾಡುತ್ತಿದೆ. ಒಂದರ ಪ್ರಕಾರ, ಮನಸ್ತಾಪದ ವೇಳೆ ಗಂಡ ಸುತ್ತಿಗೆಯಿಂದ ತಲೆಗೆ ಹೊಡೆದ ಪರಿಣಾಮ ಯುವತಿ ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಮತ್ತೊಂದರ ಪ್ರಕಾರ, ಯುವತಿ ಕಾಲು ಜಾರಿ ಬಿದ್ದು ತಲೆಗೆ ಪೆಟ್ಟುಗೊಂಡಿದ್ದು, ಗಂಡ ತಕ್ಷಣ ಆಸ್ಪತ್ರೆಗೆ ಕರೆದೊಯ್ದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಕುರಿತು ಕುಕನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ. ಘಟನೆಯ ನಿಖರ ಕಾರಣ ಪೊಲೀಸರ ತನಿಖೆಯಿಂದಲೇ ಬಹಿರಂಗವಾಗಬೇಕಿದ್ದು, ಈ ಘಟನೆ ಗ್ರಾಮಸ್ಥರಲ್ಲಿ ಆತಂಕಕ್ಕೆ ಕಾರಣವಾಗಿದೆ.

ವಾರ್ತಾ ಭಾರತಿ 7 Apr 2026 7:45 pm

ಹೆಬ್ರಿ: ಚಾಣಕ್ಯ ನಲಿ ಕಲಿ ಬೇಸಗೆ ಶಿಬಿರಕ್ಕೆ ಚಾಲನೆ

ಹೆಬ್ರಿ, ಎ.7: ಹೆಬ್ರಿ ಚಾಣಕ್ಯ ಎಜುಕೇಷನ್ ಮತ್ತು ಕಲ್ಚರಲ್ ಅಕಾಡೆಮಿ ಆಶ್ರಯದಲ್ಲಿ ಎ.19ರವರೆಗೆ ಹೆಬ್ರಿ ಎಸ್.ಆರ್. ಸ್ಕೂಲ್ ಬಳಿ ಇರುವ ಚಾಣಕ್ಯ ಟ್ಯುಟೋರಿಯಲ್ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿರುವ ಚಾಣಕ್ಯ ನಲಿ ಕಲಿ 11ನೇ ವರ್ಷದ ವೈವಿಧ್ಯಮಯ ಬೇಸಗೆ ಶಿಬಿರವನ್ನು ಬಾಲ ಸಾಧಕ ಅದ್ವೈತ್ ಉದ್ಘಾಟಿಸಿದರು. ಎಸ್.ಆರ್.ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಚ್.ನಾಗರಾಜ್ ಶೆಟ್ಟಿ ಮಾತನಾಡಿ, ರಜಾ ಸಮಯವನ್ನು ಮೊಬೈಲ್ ಟಿವಿ ನೋಡುತ್ತಾ ಕಾಲಹರಣ ಮಾಡುವ ಬದಲು ಇಂತಹ ವೈವಿಧ್ಯಮಯ ಬೇಸಗೆ ಶಿಬಿರದಲ್ಲಿ ಮಕ್ಕಳನ್ನು ಸೇರಿಸು ವುದರ ಮೂಲಕ ಅವರ ವ್ಯಕ್ತಿತ್ವ ವಿಕಸವಾಗಲು ಸಾಧ್ಯ ಎಂದು ತಿಳಿಸಿದರು. ಬಾಲ ಸಾಧಕ ಅದ್ವೈತ್ ತಂದೆ ರಾಘವೇಂದ್ರ, ಹೆಬ್ರಿ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ನವೀನ್ ಕೆ.ಅಡ್ಯಂತಾಯ ಮಾತನಾಡಿದರು. ಅಧ್ಯಕ್ಷತೆಯನ್ನು ಚಾಣಕ್ಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹೆಬ್ರಿ ಉದಯ್ ಕುಮಾರ್ ಶೆಟ್ಟಿ ವಹಿಸಿದ್ದರು. ಸೀತಾನದಿ ಸೌಖ್ಯಯೋಗ ಟ್ರಸ್ಟ್ ಅಧ್ಯಕ್ಷ ಸೀತಾನದಿ ವಿಠ್ಠಲ ಶೆಟ್ಟಿ, ಬ್ರಹ್ಮಾವರ ತಾಲೂಕು ದೈಹಿಕ ಶಿಕ್ಷಣ ಪರೀಕ್ಷಾಧಿಕಾರಿ ನಿತ್ಯಾನಂದ ಶೆಟ್ಟಿ, ಯಕ್ಷಗಾನ ಗುರು ಪ್ರಕಾಶ್ ನಾಯಕ್ ಮೊದಲಾದವರು ಉಪಸ್ಥಿತರಿದ್ದರು. ಪ್ರಾಂಶುಪಾಲೇ ವೀಣಾ ಯು.ಶೆಟ್ಟಿ ವಂದಿಸಿದರು.

ವಾರ್ತಾ ಭಾರತಿ 7 Apr 2026 7:39 pm

‘ಕೊರಗರ ಕಟ್ಟುಕಟ್ಲೆಗಳು - ಆರಾಧನೆ ಮತ್ತು ಆಚರಣೆ’ ಪುಸ್ತಕ ಬಿಡುಗಡೆ

ಶಿರ್ವ, ಎ.7: ಪಾಂಗಾಳ ಕೊರಗರ ಕೂಡು ಕುಟುಂಬದ ಕಟ್ಟುಕಟ್ಲೆಗಳು -ಆರಾಧನೆ ಮತ್ತು ಆಚರಣೆ ಎಂಬ ಮಾರ್ಗ ದರ್ಶಕ ಪುಸ್ತಕವನ್ನು ಸೋಮವಾರ ಪಾಂಗಾಳ ಕೊರಗರ ದೈವ ಸಾನಿಧ್ಯದಲ್ಲಿ ಬಿಡುಗಡೆಗೊಳಿಸಲಾಯಿತು. ಕೂಡು ಕುಟುಂಬದ ಹಿರಿಯ ಮಹಿಳೆಯರಾದ ಗುರ್ಬಿ ಮತ್ತು ಅಮಣಿ ಜಂಟಿಯಾಗಿ ಪುಸ್ತಕ ಬಿಡುಗಡೆಗೊಳಿಸಿದರು. ಸಮಾರಂಭದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಕೊರಗರ ಬಲೆಪಿನ ಗುರಿಕಾರ ಕುಡುಪ ಕೊರಗ, ಕೊರಗ ಸಮುದಾಯದಲ್ಲಿ ಇದೊಂದು ಹೊಸ ಪ್ರಯತ್ನ ವಾಗಿದ್ದು, ಇತರರಿಗೂ ಮಾದರಿಯಾಗಿದೆ ಎಂದರು. ಸಭೆಯಲ್ಲಿ ಪಾದೆಬೆಟ್ಟು ಬಲೆಪಿನ ಪ್ರತಿನಿಧಿ ಸೋಮಶೇಖರ್, ಮುಂಡ್ಕೂರು ಬಲೆಪಿನ ಗುರಿಕಾರ ಅಣ್ಣು ಸಾಲಿಯಾನ್, ಕುರ್ಕಾಲು ಬಲೆಪಿನ ಗುರಿಕಾರ ಸುರೇಶ್ ಕುಂದರ್ ಮಾತನಾಡಿದರು. ಸಚ್ಚೇರಿಪೇಟೆಯ ಕರ್ಣಾ ಸಾಲಿಯಾನ್, ಕಬ್ಯಾಡಿ ಬಲೆಪಿನ ಶಂಭು, ಪಾಂಗಾಳ ಕುಟುಂಬದ ಹಿರಿಯರಾದ ಕುಡ್ಡು ಕೊರಗ, ಗುರುವ ಮೂಡುಬೆಳ್ಳೆ, ಅಣ್ಣು ಕಡಂದಲೆ, ಉಪಸ್ಥಿತರಿದ್ದರು. ಕುಟುಂಬದ ಗುರಿಕಾರ ವಸಂತ ಪಾಂಬೂರು ಅಧ್ಯಕ್ಷತೆ ವಹಿಸಿದ್ದರು. ಸೌಮ್ಯಾ ಮತ್ತು ತಂಡದವರು ಪ್ರಾರ್ಥನಾ ಗೀತೆ ಹಾಡಿದರು. ಅಣ್ಣು ಪಿಲಾರು ವಂದಿಸಿದರು. ಜ್ಯೋತಿ ಪಾಂಬೂರು ಕಾರ್ಯಕ್ರಮ ನಿರೂಪಿಸಿದರು.

ವಾರ್ತಾ ಭಾರತಿ 7 Apr 2026 7:37 pm

ಬ್ರಹ್ಮಾವರ: ರುಡ್‌ಸೆಟ್‌ನಲ್ಲಿ ವಿವಿಧ ತರಬೇತಿಗೆ ಅರ್ಜಿ ಆಹ್ವಾನ

ಬ್ರಹ್ಮಾವರ, ಎ.7: ಸ್ವ ಉದ್ಯೋಗ ಆಕಾಂಕ್ಷಿಗಳಿಗೆ ಹಾಗೂ ಉದ್ಯೋಗ ವನ್ನು ಅರಸುತ್ತಿರುವವರಿಗೆ ಆಶಾಕಿರಣವಾ ಗಿರುವ, ಕೆನರಾ ಬ್ಯಾಂಕಿನ ಸಹಯೋಗದೊಂದಿಗೆ ನಡೆಯುತ್ತಿರುವ ಬ್ರಹ್ಮಾವರದ ರುಡ್‌ಸೆಟ್ ಸಂಸ್ಥೆ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಹಾಗೂ ಜಿಪಂ ಉಡುಪಿ ಇವರ ವತಿಯಿಂದ ಉಚಿತ ಊಟ, ವಸತಿ, ಸಮವಸ್ತ್ರ, ತರಬೇತಿ ಕಿಟ್‌ಗಳೊಂದಿಗೆ ವಿವಿಧ ತರಬೇತಿಯನ್ನು ನೀಡಲಿದೆ. ರಾಜ್ಯದ ಎಲ್ಲಾ ಜಿಲ್ಲೆ ಗಳ ಆಸಕ್ತ ಅಭ್ಯರ್ಥಿಗಳು ತರಬೇತಿಯಲ್ಲಿ ಪಾಲ್ಗೊಳ್ಳಲು ಅರ್ಜಿ ಸಲ್ಲಿಸಬಹುದಾಗಿದೆ. ಸಂಸ್ಥೆಯಲ್ಲಿ ಮುಂದಿನ ದಿನಗಳಲ್ಲಿ ನೀಡಲಿರುವ ತರಬೇತಿಗಳು: ಫಾಸ್ಟ್‌ಫುಡ್ ತಯಾರಿ ತರಬೇತಿ (12ದಿನ-ಎ.17ರಿಂದ ಎ.28ರವರೆಗೆ), ಕಂಪ್ಯೂಟರ್ ಡಿಟಿಪಿ ತರಬೇತಿ (45ದಿನ-ಎ.16ರಿಂದ ಮೇ 31ರವರೆಗೆ), ಅಣಬೆ ಬೇಸಾಯ ತರಬೇತಿ (10ದಿನ- ಎ.21ರಿಂದ ಎ.28ರವರೆಗೆ), ಬ್ಯೂಟಿ ಪಾರ್ಲರ್ ಮ್ಯಾನೇಜ್‌ಮೆಂಟ್ ತರಬೇತಿ (35ದಿನ- ಎ.21ರಿಂದ ಮೇ 25ರವರೆಗೆ), ಹಪ್ಪಳ, ಉಪ್ಪಿನಕಾಯಿ, ಮಸಾಲ ಪೌಡರ್ ತಯಾರಿ (20ದಿನ- ಮೇ4ರಿಂದ ಮೇ23ರವರೆಗೆ), ಕೋಳಿ ಸಾಕಾಣಿಕೆ ತರಬೇತಿ (13ದಿನ- ಮೇ 18ರಿಂದ ಮೇ 30ರವರೆಗೆ), ಗೃಹೋಪಯೋಗಿ ವಿದ್ಯುತ್ ಉಪಕರಣಗಳ ದುರಸ್ತಿ (45ದಿನ- ಜೂನ್ 4ರಿಂದ ಜುಲೈ 3ರವರೆಗೆ). ಈ ತರಬೇತಿ ಪಡೆಯಲು ಬಯಸುವ ಗ್ರಾಮೀಣ ಭಾಗದ 18ರಿಂದ 50ವರ್ಷ ಒಳಗಿರುವವರು ಬಿಪಿಎಲ್ ಕುಟುಂಬದ ಸದಸ್ಯರಾಗಿರಬೇಕು. ಕನ್ನಡ ಓದಲು, ಬರೆಯಲು ಬರಬೇಕು. ತರಬೇತಿ ಪಡೆದ ವೃತ್ತಿಯಲ್ಲಿ ಮುಂದು ವರಿಯಲು ಬಯಸುವವರು ತಮ್ಮ ಹೆಸರು, ವಿಳಾಸ, ವಾಟ್ಸಪ್ ಮೊಬೈಲ್ ನಂಬರ್, ನೀವು ಪಡೆಯಲು ಇಚ್ಛಿಸುವ ತರಬೇತಿಯ ವಿವರ ಬರೆದು ಜೊತೆಗೆ ತಮ್ಮ ರೇಷನ್ ಕಾರ್ಡ್, ಆಧಾರ್ ಕಾರ್ಡ್‌ನ ಪ್ರತಿಯನ್ನು ಇರಿಸಿ ಈ ಕೆಳಗಿನ ವಿಳಾಸಕ್ಕೆ ಅರ್ಜಿ ಸಲ್ಲಿಸಬಹುದು. ವಿಳಾಸ: ನಿರ್ದೇಶಕರು, ರುಡ್‌ಸೆಟ್ ಸಂಸ್ಥೆ, 52ನೇ ಹೇರೂರು, ಬ್ರಹ್ಮಾವರ- 576213, ಉಡುಪಿ ಜಿಲ್ಲೆ. ಅಥವಾ ವಾಟ್ಸಪ್ ನಂಬರ್: 9844086383, 7022560492ಗೆ ಅರ್ಜಿ ಕಳುಹಿಸಿಕೊಡಬಹುದು ಎಂದು ಸಂಸ್ಥೆಯ ನಿರ್ದೇಶಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ವಾರ್ತಾ ಭಾರತಿ 7 Apr 2026 7:35 pm

ಬೆಂಗಳೂರು ಪೊಲೀಸರ ಕಾರ್ಯಾಚರಣೆ: ವಿದೇಶಿ ಪ್ರಜೆ ಸಹಿತ 8 ಮಂದಿ ಬಂಧನ, 27.42 ಕೋಟಿ ಮೌಲ್ಯದ ಮಾದಕ ವಸ್ತು ಜಪ್ತಿ

ಬೆಂಗಳೂರು : ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಸ್ಥಳಗಳ ಮೇಲೆ ಬೆಂಗಳೂರು ನಗರ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ವಿದೇಶಿ ಪ್ರಜೆ ಸೇರಿದಂತೆ ಎಂಟು ಮಂದಿಯನ್ನು ಬಂಧಿಸಿ 27.42 ಕೋಟಿ ರೂ. ಮೌಲ್ಯದ ಮಾಲನ್ನು ಜಪ್ತಿ ಮಾಡಿದ್ದಾರೆ. ಮಾದಕ ವಸ್ತು ಎಂಡಿಎಂಎ, ಕೋಕೇನ್ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಆಧರಿಸಿ ಎನ್‍ಡಿಪಿಎಸ್ ಕಾಯ್ದೆಯಡಿ ಪ್ರಕರಣಗಳನ್ನು ದಾಖಲಿಸಿಕೊಂಡು ನಗರದ ಹೆಬ್ಬಗೋಡಿ, ಯಲಹಂಕ ಉಪನಗರ, ಮೈಕೋಲೇಔಟ್, ಪರಪ್ಪನ ಅಗ್ರಹಾರ, ಬಾಗಲೂರು ಹಾಗೂ ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿಯ ಸ್ಥಳಗಳ ಮೇಲೆ ಪೊಲೀಸರು ದಾಳಿ ನಡೆಸಿ ಓರ್ವ ವಿದೇಶಿ ಪ್ರಜೆ, ಹೊರರಾಜ್ಯದ ನಾಲ್ವರು ಹಾಗೂ ಸ್ಥಳೀಯ ಮೂವರು ವ್ಯಕ್ತಿಗಳು ಸೇರಿದಂತೆ ಒಟ್ಟು ಎಂಟು ಮಂದಿಯನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದಾಗ ದುಪ್ಪಟ್ಟು ಹಣ ಗಳಿಸುವ ಉದ್ದೇಶದಿಂದ ಅಪರಿಚಿತ ವ್ಯಕ್ತಿಗಳಿಂದ ಮಾದಕ ವಸ್ತುಗಳನ್ನು ಕಡಿಮೆ ಬೆಲೆಗೆ ಖರೀದಿಸಿಕೊಂಡು ಬಂದು ಕಾಲೇಜು ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದುದ್ದಾಗಿ ಬಾಯ್ಬಿಟ್ಟಿದ್ದಾರೆ. ಹೆಬ್ಬಗೋಡಿ ಠಾಣೆ ಪೊಲೀಸರು 27 ಕೋಟಿ ರೂ. ಮೌಲ್ಯದ 12 ಕೆ.ಜಿ. 55 ಗ್ರಾಂ ಎಂಡಿಎಂಎ, 275 ಗ್ರಾಂ ಕೋಕೇನ್, 40 ಗ್ರಾಂ ಚಿನ್ನಾಭರಣ, 2.85 ಲಕ್ಷ ನಗದು, 1 ಕಾರು, 2 ಮೊಬೈಲ್ ವಶಪಡಿಸಿಕೊಂಡಿದ್ದಾರೆ. ಯಲಹಂಕ ಉಪನಗರ ಠಾಣೆ ಪೊಲೀಸರು 21 ಕೆ.ಜಿ. 175 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದು, ಇದರ ಮೌಲ್ಯ 21 ಲಕ್ಷ ರೂ. ಗಳೆಂದು ಅಂದಾಜಿಸಲಾಗಿದೆ. ಮೈಕೋಲೇಔಟ್ ಠಾಣೆ ಪೊಲೀಸರು 6.60 ಲಕ್ಷ ರೂ. ಮೌಲ್ಯದ 6 ಕೆ.ಜಿ. 400 ಗ್ರಾಂ ಗಾಂಜಾ, ಪರಪ್ಪನ ಅಗ್ರಹಾರ ಠಾಣೆ ಪೊಲೀಸರು 7.60 ಲಕ್ಷ ರೂ. ಮೌಲ್ಯದ 7 ಕೆ.ಜಿ. 277 ಗ್ರಾಂ ಗಾಂಜಾ, ಎರಡು ದ್ವಿಚಕ್ರ ವಾಹನ ಹಾಗೂ ಬಾಗಲೂರು ಠಾಣೆ ಪೊಲೀಸರು 4 ಲಕ್ಷ ಮೌಲ್ಯದ 20 ಗ್ರಾಂ ಎಂಡಿಎಂಎ ಮತ್ತು ಬಾಣಸವಾಡಿ ಠಾಣೆ ಪೊಲೀಸರು 3.20 ಲಕ್ಷ ರೂ. ಮೌಲ್ಯದ 16 ಗ್ರಾಂ ಎಂಡಿಎಂಎ ವಶಪಡಿಸಿಕೊಂಡಿದ್ದಾರೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್‍ಕುಮಾರ್ ಸಿಂಗ್ ಮಾಹಿತಿ ನೀಡಿದ್ದಾರೆ. ವಿವಿಧ ಪ್ರಕರಣಗಳಲ್ಲಿ ವಶಪಡಿಸಿಕೊಂಡಿರುವ ಮಾಲುಗಳ ಒಟ್ಟು ಮೌಲ್ಯ 27.42 ಕೋಟಿ ರೂ.ಗಳೆಂದು ಅಂದಾಜಿಸಲಾಗಿದೆ. ಈ ಆರೋಪಿಗಳಿಗೆ ಮಾದಕ ವಸ್ತುಗಳನ್ನು ಸರಬರಾಜು ಮಾಡುತ್ತಿದ್ದ ಅಪರಿಚಿತ ವ್ಯಕ್ತಿಗಳ ಪತ್ತೆಕಾರ್ಯ ನಡೆಸಲಾಗುತ್ತಿದ್ದು, ಪ್ರಕರಣಗಳ ತನಿಖೆ ಮುಂದುವರೆದಿದೆ ಎಂದು ಸೀಮಂತ್‍ಕುಮಾರ್ ಸಿಂಗ್ ತಿಳಿಸಿದ್ದಾರೆ.  

ವಾರ್ತಾ ಭಾರತಿ 7 Apr 2026 7:34 pm

ಕಾಪು: ವಿಕಲಚೇತನರಿಗೆ ವಿವಿಧ ಸೌಲಭ್ಯ ವಿತರಣೆ

ಕಾಪು, ಎ.7: ಉಡುಪಿ ಜಿಲ್ಲಾ ವಿಕಲಚೇತನ ಹಾಗೂ ಹಿರಿಯ ನಾಗರಿಕ ಸಬಲೀಕರಣ ಇಲಾಖೆ ಮತ್ತು ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ವಿಕಲಚೇತನ ಫಲಾನುಭವಿಗಳಿಗೆ ಮಂಜೂರಾದ ಯಂತ್ರ ಚಾಲಿತ ದ್ವಿಚಕ್ರ ವಾಹನ ಹಾಗೂ ಶ್ರವಣ ಸಾಧನವನ್ನು ಇಂದು ವಿತರಣೆ ಮಾಡಲಾಯಿತು. ಕಾಪು ಶಾಸಕರ ಕಚೇರಿಯಲ್ಲಿ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ವಿಕಲಚೇತನರಿಗೆ ವಿವಿಧ ಸೌಲಭ್ಯ ಗಳನ್ನು ವಿತರಿಸಿದರು. ಬಡಾ ಗ್ರಾಮ ಪಂಚಾಯತ್ ವ್ಯಾಪ್ತಿಯ ದಿನೇಶ್ ಆಚಾರ್ಯ ಅವರಿಗೆ ಯಂತ್ರ ಚಾಲಿತ ದ್ವಿಚಕ್ರ ವಾಹನ ಹಾಗೂ ಮಲ್ಲಾರು ರಾಣ್ಯಕೇರಿ ನಿವಾಸಿ ಶಾಂತ ಅವರಿಗೆ ಶ್ರವಣ ಸಾಧನವನ್ನು ವಿತರಿಸಲಾಯಿತು.

ವಾರ್ತಾ ಭಾರತಿ 7 Apr 2026 7:33 pm

ಕಟಪಾಡಿ: ರಾ.ಹೆ. ಓವರ್ ಪಾಸ್ ಕಾಮಗಾರಿ ಸಂಸದರಿಂದ ವೀಕ್ಷಣೆ

ಎ.10ರಿಂದ ಹೆದ್ದಾರಿಯ ಒಂದು ಭಾಗ ವಾಹನ ಸಂಚಾರಕ್ಕೆ ಮುಕ್ತ

ವಾರ್ತಾ ಭಾರತಿ 7 Apr 2026 7:32 pm

Koppal | ಹಿಂದಿ ಸಾಮ್ರಾಜ್ಯಶಾಹಿಗಳ ಪರವಾಗಿ ವರ್ತಿಸುತ್ತಿರುವ ರಾಜ್ಯಪಾಲರನ್ನು ಕೇಂದ್ರ ಸರಕಾರ ಹಿಂದಕ್ಕೆ ಕೆರಸಿಕೊಳ್ಳಬೇಕು: ಕರವೇ ಆಗ್ರಹ

ಕೊಪ್ಪಳ: ಕರ್ನಾಟಕ ವಿರೋಧಿ ಧೋರಣೆ ತಳೆದಿದ್ದಾರೆ ಎಂದು ಆರೋಪಿಸಿ ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್ ಅವರನ್ನು ಕೇಂದ್ರ ಸರ್ಕಾರ ತಕ್ಷಣ ಹಿಂಪಡೆಯಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಆಗ್ರಹಿಸಿದೆ. ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಮಂಗಳವಾರ ನಡೆದ ಪ್ರತಿಭಟನೆಯಲ್ಲಿ ಕರವೇ ಜಿಲ್ಲಾ ಘಟಕದ ಅಧ್ಯಕ್ಷ ಬಿ. ಗಿರೀಶಾನಂದ ಜ್ಞಾನಸುಂದರ ಮಾತನಾಡಿ, ರಾಜ್ಯಪಾಲರು ತಮ್ಮ ಅಧಿಕಾರ ವ್ಯಾಪ್ತಿಯನ್ನು ಮೀರಿ ಕಾರ್ಯನಿರ್ವಹಿಸುತ್ತಿದ್ದು, ಕನ್ನಡಿಗರ ಆಶಯಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತೃತೀಯ ಭಾಷೆಗೆ ಗ್ರೇಡಿಂಗ್ ವ್ಯವಸ್ಥೆ ಜಾರಿಗೊಳಿಸಿದ ರಾಜ್ಯ ಸರ್ಕಾರದ ನಿರ್ಧಾರವನ್ನು ಮರುಪರಿಶೀಲಿಸುವಂತೆ ರಾಜ್ಯಪಾಲರು ಪತ್ರ ಬರೆದಿರುವುದು ಹಿಂದಿ ಹೇರಿಕೆಯ ಭಾಗವಾಗಿದೆ ಎಂದು ಹೇಳಿದರು. ಕರ್ನಾಟಕದಲ್ಲಿ ಹಿಂದಿ ಭಾಷೆಯನ್ನು ಶಾಶ್ವತವಾಗಿ ಜಾರಿಗೊಳಿಸಲು ಪ್ರಯತ್ನ ನಡೆಯುತ್ತಿದೆ ಎಂಬ ಅನುಮಾನ ವ್ಯಕ್ತಪಡಿಸಿದರು. ರಾಜ್ಯ ಸರ್ಕಾರವನ್ನು ಜನತೆ ಆಯ್ಕೆ ಮಾಡಿದ್ದು, ನಾಡಿನ ವಿಚಾರಗಳಲ್ಲಿ ತೀರ್ಮಾನ ಮಾಡುವ ಅಧಿಕಾರ ಸರ್ಕಾರಕ್ಕಿದೆ. ಇಂತಹ ಸಂದರ್ಭದಲ್ಲಿ ರಾಜ್ಯಪಾಲರು ಆಡಳಿತದಲ್ಲಿ ಹಸ್ತಕ್ಷೇಪ ಮಾಡುವುದು ಆಕ್ಷೇಪಾರ್ಹ ಎಂದು ತಿಳಿಸಿದರು. ಹಿಂದಿ ಭಾಷಿಕರ ಪರವಾಗಿ ಕಾರ್ಯನಿರ್ವಹಿಸುವ ಪ್ರಯತ್ನ ನಡೆಯುತ್ತಿದ್ದು, ಕರ್ನಾಟಕದ ಶಿಕ್ಷಣ ನೀತಿಯನ್ನು ಪ್ರಶ್ನಿಸುವ ಹಕ್ಕು ರಾಜ್ಯಪಾಲರಿಗೆ ಇಲ್ಲ ಎಂದು ಹೇಳಿದರು. ಕನ್ನಡಿಗರ ಹಿತಾಸಕ್ತಿಗೆ ಧಕ್ಕೆ ಉಂಟಾದರೆ ಅದನ್ನು ಯಾವ ಪರಿಸ್ಥಿತಿಯಲ್ಲೂ ಸಹಿಸಿಕೊಳ್ಳುವುದಿಲ್ಲ ಎಂದು ಎಚ್ಚರಿಸಿದರು. ಈ ವೇಳೆ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಂಜುನಾಥ ಗುಂಡೂರು ಅವರ ಮುಖಾಂತರ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಯಿತು. ಜಿಲ್ಲಾ ಯುವ ಘಟಕ ಅಧ್ಯಕ್ಷ ಹನುಮಂತ ಬೆಸ್ತರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿಂಗಪ್ಪ ಮೂಗಿನ್, ಜಿಲ್ಲಾ ಉಪಾಧ್ಯಕ್ಷಶಿವನಗೌಡ ಪಾಟೀಲ ಹಲಗೇರಿ, ಜಿಲ್ಲಾ ಮಹಿಳಾ ಅಧ್ಯಕ್ಷೆ ಭುವನೇಶ್ವರಿ ಮೊಟಗಿ, ಜಿಲ್ಲಾ ಪ್ರಧಾನ ಸಂಚಾಲಕ ಗವಿಸಿದ್ದಪ್ಪ ಚಕ್ಕಡಿ, ಕೊಪ್ಪಳ ತಾಲೂಕು ಅಧ್ಯಕ್ಷ ಹುಸೇನ ಬಾಶಾ ಮಣ್ಣೂರು, ಕನಕಗಿರಿ ತಾಲೂಕಾ ಅಧ್ಯಕ್ಷ ಹರೀಶ ಪೂಜಾರ, ಕುಕನೂರು ತಾಲೂಕ ಅಧ್ಯಕ್ಷ ರಮೇಶ ಚಂಡೂರು, ಕುಷ್ಟಗಿ ತಾಲೂಕ ಅಧ್ಯಕ್ಷ ಪ್ರಕಾಶ ಮನ್ನೇರಾಳ, ಜಿ.ಸಾ.ಜಾಲತಾಣ ಸಂಚಾಲಕ ಸಿದ್ದು ಸಶಿಮಠ, ಮಹಿಳಾ ಘಟಕ ಉಪಾಧ್ಯಕ್ಷೆ ಗಂಗಮ್ಮ ಕುಂಬಾರ, ಕನಕಗಿರಿ ಮಹಿಳಾ ಅಧ್ಯಕ್ಷೆ ಹುಲಿಗೆಮ್ಮ ನಾಯಕ, ಮಹಿಳಾ ಗೌರವಾಧ್ಯಕ್ಷೆ ಶಂಕ್ರಮ್ಮ ಮ್ಯಾಗಳಮನಿ, ತಾಲೂಕು ಉಪಾಧ್ಯಕ್ಷ ಶ್ರೀಧರ ಭೂತಣ್ಣವರ, ರವಿ ಆದಿ, ಶೇಖರ ಭಾಗ್ಯನಗರ, ನಗರ ಅಧ್ಯಕ್ಷ ಪ್ರಫುಲ್ ಪಾಟೀಲ, ಕರವೇ ಮುಖಂಡರಾದ ಮಹೇಶ ನಾಯಕ ಅಗಳಕೇರಾ, ಶರಣು ಮದಲಗಟ್ಟಿ, ಮಲ್ಲು ಬಡಿಗೇರ, ಹುಲ್ಲಪ್ಪ ಟಕ್ಕಳಕಿ, ಮುಹಮ್ಮದ್‌ ರಫೀ, ದ್ಯಾಮೇಶ ದದೇಗಲ್, ಶಿವು ಹರಿಜನ, ಶರಣಪ್ಪ ಆಡೂರು, ವಿರುಪಾಕ್ಷಪ್ಪ ದೊಡ್ಡಮನಿ, ರಮೇಶ ಪೂಜಾರ, ವಿರೇಶ ದೊಡ್ಡಮನಿ, ಮಾರುತಿ ದೊಡ್ಡಮನಿ, ಪ್ರಕಾಶ ಗಡ್ಡಿ, ಶಿವು ನಾಯಕ, ರಮೇಶ ಬೂದಗುಂಪಿ, ಮಂಜುನಾಥ ಕಿನ್ನಾಳ, ಮಾರುತಿ ಮುದ್ದಾಬಳ್ಳಿ, ಹನುಮಂತ ಹಟಮಾರಿ, ಅರುಣ ಎಚ್ ಮುದ್ದಾಬಳ್ಳಿ, ಹಾಗೂ ಇನ್ನೂ ಅನೇಕರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 7 Apr 2026 7:31 pm

ಉಳ್ಳಾಲ ತಾಲೂಕಿನಲ್ಲಿ ಸುಸ್ಥಿರ ಸ್ವಚ್ಚತೆ, ಸುಸ್ಥಿರ ಅಭಿವೃದ್ಧಿ ಅಭಿಯಾನ: ಸ್ಪೀಕರ್ ಯು.ಟಿ ಖಾದರ್

ಕೊಣಾಜೆ : ಉಳ್ಳಾಲ ತಾಲೂಕಿನಾದ್ಯಂತ ಸೃಷ್ಟಿ ಮಾಡಿರುವ ಬಯಲು ಕಸಾಲಯಗಳನ್ನು ಅಳಿಸಿ ಸುಸ್ಥಿರ ಅಭಿವೃದ್ಧಿ ಕಾರ್ಯವನ್ನು ಅಭಿಯಾನ ರೀತಿಯಲ್ಲಿ ಶೀಘ್ರ ವಾಗಿ ಆರಂಭಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದೆಂದು ಸ್ಪೀಕರ್ ಯು.ಟಿ ಖಾದರ್ ಹೇಳಿದರು. ಮುಡಿಪು ಜೀವನ್ ಮೂರ್ತಿ ಸರ್ವೋದಯ ಮಂಟಪದಲ್ಲಿ ನಡೆದ ಶೂನ್ಯ ಕಸ ನಿರ್ವಹಣೆ ಸ್ವಚ್ಚ ಮನೆ ಸ್ವಯಂ ಘೋಷಣೆ ಸುಸ್ಥಿರ ಸ್ವಚ್ಛತೆ ಸುಸ್ಥಿರ ಅಭಿವೃದ್ಧಿ ಸಂವಾದಕ್ಕೆ ಚಾಲನೆ ನೀಡಿ KA19.20 ಯುನೈಟೆಡ್ ಆಫ್ ರೋಡ್ಸ್ ಮಂಗಳೂರು ವತಿಯಿಂದ ಅಸಾಹಾಯಕ ಕುಟುಂಬಗಳ ಸಮಗ್ರ ಅಭಿವೃದ್ಧಿಗೆ ನೀಡಲಾದ ಒಂದು ಲಕ್ಷ ಇಪ್ಪತ್ತೈದು ಸಾವಿರ ಮೊತ್ತದ ಶೈಕ್ಷಣಿಕ, ಆರೋಗ್ಯ,ಸ್ವದ್ಯೋಗ,ಸೋಲಾರ್ ಸೌಲಭ್ಯಗಳನ್ನು ವಿತರಿಸಿ ಮಾತನಾಡಿದರು. ರೋಗ ಮುಕ್ತ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಪ್ಲಾಸ್ಟಿಕ್ ಮಾಲಿನ್ಯ ಮುಕ್ತ ಸ್ವಚ್ಚ ಪರಿಸರ ಅಗತ್ಯವಾಗಿದ್ದು ಈ ದಿಸೆಯಲ್ಲಿ ಸರಕಾರ ಸಮಾಜ ಹಾಗೂ ಸಂಘ ಸಂಸ್ಥೆಗಳು ಒಂದಾಗಿ ಶ್ರಮಿಸುವುದು ಅಗತ್ಯ ವೆಂದರು. ಸ್ವಚ್ಚತೆಗಾಗಿ ನಿರಂತರವಾಗಿ ಶ್ರಮಿಸುತ್ತಿರುವ ಜನ ಶಿಕ್ಷಣ ಟ್ರಸ್ಟ್ ಹಾಗೂ ಉಳ್ಳಾಲ, ಪುತ್ತೂರು, ಮಂಗಳೂರು ತಾಲೂಕಿನ 11ಕುಟಂಬಗಳಿಗೆ ನೆರವಾದ KA19.20 ಯುನೈಟೆಡ್ ಆಫ್ ರೋಡ್ಸ್ ಮಂಗಳೂರು ತಂಡದ ಸದಸ್ಯರ ಸೇವಾ ಕಾರ್ಯ ನನ್ನು ಶ್ಲಾಘಿಸಿದರು. ಮಂಗಳೂರು ವಿ ವಿ ಕುಲಪತಿಗಳಾದ ಪ್ರೊ. ಪಿ. ಎಲ್. ಧರ್ಮ ಮಾತನಾಡಿ ಗ್ರಾಮ ಅಧ್ಯಯನದೊಂದಿಗೆ ಕಸ ಮುಕ್ತ ಗ್ರಾಮ ನಿರ್ಮಾಣಕ್ಕೆ ಮಂಗಳೂರು ವಿ ವಿ ವಿದ್ಯಾರ್ಥಿಗಳಿಗೆ ಸ್ವಚ್ಛತಾ ಪಾಠ ದೊಂದಿಗೆ ಸ್ವಚ್ಛ ಗ್ರಾಮ ಅಭಿಯಾನ ಆರಂಭಿಸಲಾಗಿದೆ ಎಂದು ತಿಳಿಸಿದರು. ವಿಶ್ವ ಸಂಸ್ಥೆಯ 17 ಸಾಮಾಜಿಕ ಅಭಿವೃದ್ಧಿ ಗುರಿಗಳ ಬಗ್ಗೆ ಪಿ ಎ ಕಾಲೇಜು ಪ್ರಾಧ್ಯಾಪಕ ಡಾ ಸಿ ವಿ ಪೂಜಾರ್ ಅರಿವು ಮೂಡಿಸಿದರು. ಯುನೈಟೆಡ್ ಆಫ್ ರೋಡ್ಸ್ ಅಧ್ಯಕ್ಷ ಅವಿನಾಶ್ ಅಡಪ ನಡಿಗುತ್ತು ,ನಾಸೀರ್ ನಡುಪದವು, ವಿಜೇಶ್ ನಾಯ್ಕ್ ನಡಿಗುತ್ತು ಜನ ಜೀವನದ ಗೌರವ ಅಧ್ಯಕ್ಷ ರಮೇಶ ಶೇಣವ, ಅಧ್ಯಕ್ಷ ರಾಧಾಕೃಷ್ಣ ರೈ ಉಮಿಯ ಮುಡಿಪು ಉತ್ಸವ ಸಮಿತಿಯ ಹೈದರ್ ಕೈರಂಗಳ,ಪ್ರೌಢ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಇಬ್ರಾಹಿಂ ನಡುಪದವು, ಉಮಾನಾಥ ಕೋಟ್ಯಾನ್, ಜಮಿಯ್ಯತುಲ್ ಫಲಾಹ್ ನ ಅಬ್ದುನ್ ನಾಸೀರ್, ಅಬ್ದುಲ್ ರಹಿಮಾನ್ ಕೋಡಿಜಾಲ್ ಸೀತಾರಾಮ್ , ಪಿ.ಎ ಕಾಲೇಜಿನ ಪ್ರೊ ಪ್ರಶಾಂತ್ ಉಪಸ್ಥಿತರಿದ್ದರು. ಜಿಲ್ಲಾ ಸ್ವಚ್ಚತಾ ರಾಯಭಾರಿ ಪ್ರಸ್ತಾವಿಸಿ ಕಸ ಮುಕ್ತ ಉಳ್ಳಾಲ ಕಾರ್ಯಾಚರಣೆಗೆ ಸರ್ವರೂ ಕೈ ಜೋಡಿಸ ಬೇಕೆಂದರು. ಸ್ಮೈಲ್ ಸ್ಕಿಲ್ ಸ್ಕೂಲ್ ವಿದ್ಯಾರ್ಥಿನಿ‌ ಯರು, ಶಿಕ್ಷಕಿಯರು ಗ್ರಾಮ ಸ್ವರಾಜ್ ಅಭಿಯಾನ ಹಾಗೂ ಸ್ಕಿಲ್ ಇನ್ ವಿಲೇಜ್ ಯೋಜನೆಯ ಸಂಯೋಜಕ ಸಂಯೋಜಕಿಯರು ಸುಸ್ಥಿರ ಸ್ವಚ್ಚತೆ ಅಭಿಯಾನದಲ್ಲಿ ಸಕ್ರಿಯವಾಗಿ ಭಾಗವಹಿಸುವ ಸಂಕಲ್ಪ ಮಾಡಿದರು.

ವಾರ್ತಾ ಭಾರತಿ 7 Apr 2026 7:24 pm

ಕುಡಿಯುವ ನೀರು ಕಾಮಗಾರಿ ಬಗ್ಗೆ ವ್ಯಾಪಕ ಚರ್ಚೆ: ಸೋಮೇಶ್ವರ ಪುರಸಭೆ ಸಾಮಾನ್ಯ ಸಭೆ

ಉಳ್ಳಾಲ, ಸೋಮೇಶ್ವರ ಪುರಸಭೆ ವ್ಯಾಪ್ತಿಯ ಕುಡಿಯುವ ನೀರು ಕಾಮಗಾರಿ ವಿಳಂಬ, ಈ ಬಗ್ಗೆ ಸಭೆ ನಡೆಸದ ವಿಚಾರದಲ್ಲಿ ವ್ಯಾಪಕ ಚರ್ಚೆ ಸೋಮೇಶ್ವರ ಪುರಸಭೆ ಸಾಮಾನ್ಯ ಸಭೆಯಲ್ಲಿ ನಡೆಯಿತು. ಸೋಮೇಶ್ವರ ಪುರಸಭೆ ಅಧ್ಯಕ್ಷ ಕಮಲ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಕೌನ್ಸಿಲರ್ ಸಲಾಮ್ ಉಚ್ಚಿಲ ಅವರು, ಎಂಟು ವಾರ್ಡ್ ಗಳ ಕುಡಿಯುವ ನೀರು ಕಾಮಗಾರಿ ಪರಿಶೀಲನೆ ಬಗೆ ಸಭೆ ನಡೆಸಲು ತೀರ್ಮಾನ ಆಗಿತ್ತು. ಈ ಸಭೆ , ಪರಿಶೀಲನೆ ಯಾಕೆ ಆಗಲಿಲ್ಲ. ಕೆಲಸ ಆಗುತ್ತಿಲ್ಲ, ಹೀಗೆ ಆದರೆ ಅಭಿವೃದ್ಧಿ ಹೇಗೆ ಆಗುತ್ತದೆ ಎಂದು ಪ್ರಶ್ನಿಸಿದರು. ಸೋಮೇಶ್ವರ ದ ಒಂಬತ್ತು ವಾರ್ಡ್ ಗಳಿಗೆ ಕುಡಿಯುವ ನೀರು ಯೋಜನೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಕಾಮಗಾರಿ ಮಾಡುತ್ತಿದ್ದಾರೆ.ಮುಂದಿನ ಗುರುವಾರ ಕುಡಿಯುವ ನೀರು ಜಲಸಿರಿ ಯೋಜನೆಯ ಅಧಿಕಾರಿಗಳು ಬರಲಿದ್ದು ,ಎರಡನೇ ಹಂತದ ಪರಿಶೀಲನೆ ನಡೆಸಲಿದ್ದಾರೆ. ಈ ವಿಚಾರದಲ್ಲಿ ಟೀಕೆ ಬೇಕಿಲ್ಲ ಎಂದು ಉಪಾಧ್ಯಕ್ಷ ರವಿಶಂಕರ್ ಸಭೆಗೆ ತಿಳಿಸಿದಾಗ ವ್ಯಾಪಕ ಚರ್ಚೆ ನಡೆಯಿತು. ಕುಡಿಯುವ ನೀರಿನ ಸಮಸ್ಯೆ ಚರ್ಚೆ ಗೆ ಅವಕಾಶ ನೀಡಬಾರದು.ಏನು ಸಮಸ್ಯೆ ಇದೆಯೋ ಅದನ್ನು ಕ್ರಮ ಬದ್ಧವಾಗಿ ಬಗೆಹರಿಸಿ.ನಮಗೆ‌ಕೆಲಸ ಮಾತ್ರ ಆಗಬೇಕು ಎಂದು ವಿರೋಧ ಪಕ್ಷದ ನಾಯಕ ಪುರುಷೋತ್ತಮ ಶೆಟ್ಟಿ ಸಭೆಗೆ ತಿಳಿಸಿದರು. 15 ನೇ ಹಣಕಾಸು ಯೋಜನೆಯಡಿ ಬಿಡುಗಡೆ ಆದ ಹಣ ಖರ್ಚು ಮಾಡುವ ಬಗ್ಗೆ ಮಾಡುವ ವಿಚಾರದಲ್ಲಿ ಸಭೆಯಲ್ಲಿ ವ್ಯಾಪಕ ಚರ್ಚೆ ನಡೆಯಿತು. ಈ ಹಣವನ್ನು ನಮ್ಮ ಕ್ಲಿನಿಕ್ ಗೆ ನೀಡಬಹುದು. ಆದರೆ ಸಂಪೂರ್ಣ ನಾವು ನೇರವಾಗಿ ಕೊಡುವ ಆಗಿಲ್ಲ , ಆರೋಗ್ಯ ಇಲಾಖೆ ಮೂಲಕ ನೀಡಬೇಕಾಗುತ್ತದೆ ಎಂದು ಮುಖ್ಯಾಧಿಕಾರಿ ಮತಡಿ ಹೇಳಿದರು. 15 ವರ್ಷದ ಒಳಗಿನ ಹೆಣ್ಣು ಮಕ್ಕಳಿಗೆ ವ್ಯಾಕ್ಸಿನ್ ಕೊಡಲು ಆದೇಶ ಇದೆ.ಸೋಮೇಶ್ವರ ಗ್ರಾಮ 24 ಮಂದಿ ಲಸಿಕೆ ತೆಗೆದುಕೊಂಡಿದ್ದಾರೆ ಈ ಬಗ್ಗೆ ಅಪಪ್ರಚಾರ ಆಗಿರುವ ಹಿನ್ನೆಲೆಯಲ್ಲಿ ಮಕ್ಕಳು ಲಸಿಕೆ ತೆಗೆದುಕೊಳ್ಳುತ್ತಿಲ್ಲ ಎಂದು ಆರೋಗ್ಯ ಇಲಾಖೆ ಲಲಿತಾ ಸಭೆಗೆ ತಿಳಿಸಿದರು. ಸರ್ಕಾರ ನಿಯಮ ಜಾರಿ ಮಾಡಿದರೆ ಅದನ್ನು ಉಲ್ಲಂಘನೆ ಮಾಡುವುದು ಶಿಕ್ಷಾರ್ಹ ಅಪರಾಧ.ಈ ಬಗ್ಗೆ ಅಪಪ್ರಚಾರ ಮಾಡುವವರ ವಿರುದ್ಧ ‌ಆರೋಗ್ಯ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಸದಸ್ಯರು ಆಗ್ರಹಿಸಿದರು. ರೈಲ್ವೆ ಟ್ರ್ಯಾಕ್, ರಸ್ತೆ ಸಮೀಪ ಮನೆ ನಿರ್ಮಾಣ ಆಗುತ್ತದೆ.ಇದಕ್ಕೆ ಯಾಕೆ ಪರವಾನಗಿ ಕೊಡ್ತೀರಿ ಎಂದು ಪ್ರಶ್ನಿಸಿದ ಸಲಾಮ್ ಉಚ್ಚಿಲ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು. ಸೋಮೇಶ್ವರ ಗ್ರಾಮ ಪಂಚಾಯತ್ ಆಗಿದ್ದ ಸಂದರ್ಭದಲ್ಲಿ ನಿರ್ಮಲ ಗ್ರಾಮ ಯೋಜನೆ ಇತ್ತು ಇದನ್ನು ಮುಚ್ಚಿ ಇದರಲ್ಲಿ ರುವ ಹಣವನ್ನು ಬೇರೆ ಯೋಜನೆ ಮೂಲಕ ಅರ್ಹರಿಗೆ ಹಂಚುವಂತೆ ಪುರುಷೋತ್ತಮ ಶೆಟ್ಟಿ ಸಲಹೆ ನೀಡಿದರು. ಸೋಮೇಶ್ವರ ಪುರಸಭೆ ವ್ಯಾಪ್ತಿಯ ವಿವಿಧ ಸಮಸ್ಯೆ ಗಳು,ಮಳೆ ಆರಂಭ ಆಗುವ ಮುನ್ನ ಆಗಬೇಕಾದ ಅಗತ್ಯ ಕಾಮಗಾರಿ, ತೆರಿಗೆ ಸಂಗ್ರಹದ ಬಗೆ ಸದಸ್ಯರು ಸಭೆಯಲ್ಲಿ ಚರ್ಚೆ ನಡೆಸಿದರು. ಸಭೆಯಲ್ಲಿ ಆರೋಗ್ಯ ಇಲಾಖೆಯ ಲಲಿತಾ, ರಾಜೇಶ್ವರಿ, ಉಪಾಧ್ಯಕ್ಷ ರವಿಶಂಕರ್, ಸ್ಥಾಯಿ ಸಮಿತಿ ಅಧ್ಯಕ್ಷ ಪುರುಷೋತ್ತಮ ಗಟ್ಟಿ ಉಪಸ್ಥಿತರಿದ್ದರು.

ವಾರ್ತಾ ಭಾರತಿ 7 Apr 2026 7:22 pm

Raichur | ಆಟೋ ಗ್ಯಾಸ್ ದರ ಏರಿಕೆ ವಿರೋಧಿಸಿ ಚಾಲಕರ ಆಕ್ರೋಶ : ಗ್ಯಾಸ್ ಫಿಲ್ಲಿಂಗ್ ಸ್ಥಗಿತ

ರಾಯಚೂರು : ನಗರದಲ್ಲಿ ಆಟೋಗಳಿಗೆ ಬಳಸುವ ಎಲ್‌ಪಿಜಿ ಗ್ಯಾಸ್ ದರ ಏರಿಕೆಯಾಗಿರುವುದನ್ನು ಖಂಡಿಸಿ ಆಟೋ ಚಾಲಕರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಗ್ಯಾಸ್ ಫಿಲ್ಲಿಂಗ್ ಕಾರ್ಯವನ್ನು ಸ್ಥಗಿತಗೊಳಿಸಿದ ಘಟನೆ ನಡೆದಿದೆ. ನಗರದ “ಗೋ ಗ್ಯಾಸ್” ಫಿಲ್ಲಿಂಗ್ ಸ್ಟೇಷನ್‌ನಲ್ಲಿ ಟ್ಯಾಂಕರ್ ಮೂಲಕ ಗ್ಯಾಸ್ ಬಂದ ನಂತರ ಲೀಟರ್‌ಗೆ 120 ರೂ. ದರ ನಿಗದಿ ಮಾಡಿರುವುದು ಚಾಲಕರ ಆಕ್ರೋಶಕ್ಕೆ ಕಾರಣವಾಯಿತು. ಕಳೆದ 10 ದಿನಗಳಿಂದ ಗ್ಯಾಸ್ ಲಭ್ಯವಾಗದೇ ಸಂಕಷ್ಟ ಅನುಭವಿಸಿದ್ದ ಚಾಲಕರು, ಈಗ ಗ್ಯಾಸ್ ಸಿಕ್ಕರೂ ಏಕಾಏಕಿ ಭಾರೀ ದರ ಏರಿಕೆ ಮಾಡಿರುವುದನ್ನು ಖಂಡಿಸಿದರು. ಚಾಲಕರ ಮಾಹಿತಿ ಪ್ರಕಾರ, ಇತರೆ ಸ್ಟೇಷನ್‌ಗಳಲ್ಲಿ ಲೀಟರ್‌ಗೆ 91 ರೂ. ರಿಂದ 96 ರೂ. ರವರೆಗೆ ದರ ಇದ್ದು, “ಗೋ ಗ್ಯಾಸ್” ಸ್ಟೇಷನ್‌ನಲ್ಲಿ ಮಾತ್ರ 120 ರೂ. ವಿಧಿಸುತ್ತಿರುವುದು ಅನ್ಯಾಯವಾಗಿದೆ. ಕೆಲವೇ ದಿನಗಳ ಹಿಂದೆ 84 ರೂ. ರಷ್ಟು ಇದ್ದ ದರವನ್ನು ಏಕಾಏಕಿ ಹೆಚ್ಚಿಸಿರುವುದರಿಂದ ಜೀವನ ಸಾಗಿಸುವುದು ಕಷ್ಟಕರವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಆಟೋ ಚಾಲಕ ಭಾಷಾ ಮಾತನಾಡಿ, “ಹಿಂದೆ 89-91 ರೂ. ದರದಲ್ಲಿ ಸಿಗುತ್ತಿದ್ದ ಗ್ಯಾಸ್ ಈಗ 120 ರೂ. ಆಗಿದೆ. ಇದರಿಂದ ನಮ್ಮ ಮೇಲೆ ಆರ್ಥಿಕ ಭಾರ ಹೆಚ್ಚಾಗಿದೆ. ಹಲವರು ಗ್ಯಾಸ್ ಹಾಕಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ” ಎಂದು ಹೇಳಿದರು. ಆಟೋ ಚಾಲಕರ ಸಂಘದ ಜಿಲಾನಿ ಮಾತನಾಡಿ, “ದರ ಏರಿಕೆಯಿಂದ ಚಾಲಕರ ಜೀವನ ಸಂಕಷ್ಟಕ್ಕೀಡಾಗಿದೆ. ತಿಂಗಳ ಕಂತು ಹಾಗೂ ಮನೆಯ ಖರ್ಚು ನಿರ್ವಹಿಸಲು ಕಷ್ಟವಾಗುತ್ತಿದೆ. ಅಧಿಕಾರಿಗಳಿಗೆ ಮಾಹಿತಿ ಇದ್ದರೂ ಕ್ರಮ ಕೈಗೊಂಡಿಲ್ಲ” ಎಂದು ಆರೋಪಿಸಿದರು. ಜಿಲ್ಲಾಡಳಿತ ತಕ್ಷಣ ಮಧ್ಯಪ್ರವೇಶಿಸಿ ಚಾಲಕರು, ಗ್ಯಾಸ್ ಕಂಪನಿ ಹಾಗೂ ಫಿಲ್ಲಿಂಗ್ ಸ್ಟೇಷನ್ ಮಾಲೀಕರ ಸಭೆ ಕರೆದು ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಲಾಗಿದೆ. ಇಲ್ಲವಾದರೆ ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಚಾಲಕರು ಎಚ್ಚರಿಕೆ ನೀಡಿದ್ದಾರೆ.  

ವಾರ್ತಾ ಭಾರತಿ 7 Apr 2026 7:20 pm

Davangere by-election : ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್‌ ಪರ ಡಿಸಿಎಂ ಡಿಕೆಶಿ, ಮಾಜಿ ಕ್ರಿಕೆಟಿಗ ಅಝರುದ್ದೀನ್ ರೋಡ್ ಶೋ

ದಾವಣಗೆರೆ : ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಚುನಾವಣಾ ಬಹಿರಂಗ ಪ್ರಚಾರ ಮಂಗಳವಾರ (ಎ.7) ಅಂತ್ಯಗೊಂಡಿದ್ದು, ಇನ್ನೂ ಎ.8ರಿಂದ ಮನೆ ಮನೆ ಪ್ರಚಾರ ಮಾತ್ರ ನಡೆಯಲಿದೆ. ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಬಹಿರಂಗ ಪ್ರಚಾರಕ್ಕೆ ಕೊನೆಯ ದಿನವಾದ ಹಿನ್ನಲೆಯಲ್ಲಿ ಕಾಂಗ್ರೆಸ್, ಬಿಜೆಪಿ, ಎಎಪಿ, ಎಸ್‌ಡಿಪಿಐ ಸೇರಿದಂತೆ ವಿವಿಧ ಪಕ್ಷಗಳು ಭರ್ಜರಿ ರೋಡ್ ಶೋ ನಡೆಸಿದವು. ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಪರವಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಮಾಜಿ ಕ್ರಿಕೆಟಿಗ ಅಝರುದ್ದೀನ್, ಸಂಸದ ನಾಸೀರುದ್ದೀನ್,ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್, ಡಾ.ಸುಧಾಕರ, ಶಾಸಕರಾದ ರಿಝ್ವಾನ್ ಅರ್ಷದ್, ಸಲೀ ಅಹಮದ್, ಹ್ಯಾರಿಸ್‌, ಶಿವಲಿಂಗೇಗೌಡ ಸೇರಿದಂತೆ ಹಲವು ಮುಖಂಡರು ದೊಡ್ಡಪೇಟೆ, ವಿಠಲಮಂದಿರ, ಹಳೇ ಬೇತೂರು ರಸ್ತೆ ಸೇರಿದಂತೆ ವಿವಿಧಡೆ ಪ್ರಚಾರ ನಡೆಸಿದರು. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಬಸವಣ್ಣನವರ ಪ್ರತಿಮೆಗೆ ಪುಷ್ಪಹಾರ ಹಾಕಿ, ನಗರ ದೇವತೆ ದುರ್ಗಾಂಬಿಕಾ ದೇವಿ ದೇಗುಲದಲ್ಲಿ ಪೂಜೆ ಸಲ್ಲಿಸಿದರು. ತೆಲಂಗಾಣ ಸಚಿವ ಹಾಗೂ ಮಾಜಿ ಕ್ರಿಕೆಟಿಗ ಅಝರುದ್ದೀನ್ ಅವರು ತೆರದ ವಾಹನದಲ್ಲಿ ರೋಡ್‌ ಶೋ ನಡೆಸಿದರು.  

ವಾರ್ತಾ ಭಾರತಿ 7 Apr 2026 7:17 pm

ನಮ್ಮ ನಾಗರಿಕತೆ ಮುಗಿಸಲು ಬಂದವರ ಕಥೆ ನಾವು ಮುಗಿಸುತ್ತೇವೆ; ಅಮೆರಿಕಕ್ಕೆ ಇರಾನ್‌ 'ರೆಡ್‌ ಲೈನ್‌' ಎಚ್ಚರಿಕೆ!

ಪರಸ್ಪರ ಸರ್ವನಾಶ ಗುರಿಯೊಂದಿಗೆ ಯುದ್ಧರಂಗಕ್ಕೆ ಇಳಿದಿರುವ ಅಮೆರಿಕ-ಇಸ್ರೇಲ್‌ ಮತ್ತು ಇರಾನ್‌, ತಮ್ಮ ಗುರಿಯನ್ನು ತಲುಪುವಲ್ಲಿ ಅತ್ಯಂತ ವೇಗವಾಗಿ ಹೆಜ್ಜೆ ಹಾಕುತ್ತಿವೆ. ಇಡೀ ಇರಾನ್‌ ನಾಗರಿಕತೆಯನ್ನೇ ಸರ್ವನಾಶ ಮಾಡುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಇರಾನ್‌ ಜನರಿಗಾಗಿ ಪ್ರಾರ್ಥಿಸುವುದಾಗಿ ಹೇಳಿದ್ದಾರೆ. ಇದಕ್ಕೆ ಅಷ್ಟೇ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿರುವ ಇರಾನ್‌, ಅಮೆರಿಕ ಕಂಡು ಕೇಳರಿಯದಂತಹ ಪೆಟ್ಟು ನೀಡುವುದಾಗಿ ಎಚ್ಚರಿಸಿದೆ,. ಈ ಹೇಳಿಕೆಗಳನ್ನು ಗಮನಿಸಿದರೆ, ಮಧ್ಯಪ್ರಾಚ್ಯ ಸಂಘರ್ಷ ಮತ್ತಷ್ಟು ಉಲ್ಬಣವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ವಿಜಯ ಕರ್ನಾಟಕ 7 Apr 2026 7:07 pm