SENSEX
NIFTY
GOLD
USD/INR

Weather

22    C
... ...View News by News Source

School Holiday: ನಾಳೆ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಗಳಿಗೆ ರಜೆ ಘೋಷಣೆ

School Holiday: ದೇಶದ ಹಲವೆಡೆ ಇಲ್ಲಿವರೆಗೂ ಶಾಲೆಗಳಿಗೆ ಕಾರಣಾಂತರಗಳಿಂದ ಸಾಲು ರಜೆಗಳೇ ಸಿಕ್ಕಿವೆ. ಹಾಗೆಯೇ ನಾಳೆ ಅಂದ್ರೆ ಆಗಸ್ಟ್‌ 18ರ ಸೋಮವಾರ ಎಲ್ಲಾ ಶಾಲೆಗಳು ಮುಚ್ಚಲ್ಪಡಲಿವೆ ಎಂದು ಘೋಷಣೆ ಮಾಡಲಾಗಿದೆ. ಹಾಗಾದ್ರೆ ಎಲ್ಲಿ ಹಾಗೂ ಕಾರಣ ಏನು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ಹಲವೆಡೆ ಇಲ್ಲಿವರೆಗೂ ಕಾರಣಾಂತರಗಳಿಂದ ಶಾಲಾ-ಕಾಲೇಜುಗಳಿಗೆ ಸಾಲು ರಜೆಗಳನ್ನೇ ಘೋಷಣೆ ಮಾಡಲಾಗಿದೆ.

ಒನ್ ಇ೦ಡಿಯ 17 Aug 2025 2:02 pm

ಮಾಜಿ ಕ್ರಿಕೆಟಿಗ ಜಾವಗಲ್ ಶ್ರೀನಾಥ್ ಗೆ ಮಾತೃ ವಿಯೋಗ; ತಾಯಿ ಭಾಗ್ಯಲಕ್ಷ್ಮೀ ನಿಧನ

ಐಸಿಸಿ ಮ್ಯಾಚ್ ರೆಫ್ರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಭಾರತ ತಂಡದ ಮಾಜಿ ವೇಗದ ಬೌಲರ್ ಜಾವಗಲ್ ಶ್ರೀನಾಥ್ ಅವರ ತಾಯಿ ಭಾಗ್ಯಲಕ್ಷ್ಮೀ(88) ಅವರು ನಿಧನರಾಗಿದ್ದಾರೆ. ಮೈಸೂರಿನಲ್ಲಿ ನೆಲೆಸಿದ್ದ ಅವರು ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಆಗಸ್ಟ್ 16ರ ರಾತ್ರಿ ಕೊನೆಯುಸಿರೆಳೆದರು. ಅವರಿಗೆ ಪುತ್ರರಾದ ಜಾವಗಲ್ ಶ್ರೀನಾಥ್, ಜೆಸಿ ಶ್ರೀನಿವಾಸ್, ಪುತ್ರಿಯರಾದ ಜೆಸಿ ಶ್ರೀಲಕ್ಷ್ಮೀ ಮತ್ತು ಜೆಸಿ ಶ್ರೀಲತಾ ಇದ್ದಾರೆ. ಅವರ ಪತಿ, ಜಾವಗಲ್ ಶ್ರೀನಾಥ್ ಅವರ ತಂದೆ ಚಂದ್ರಶೇಖರ್ ಅವರು 2018ರಲ್ಲಿ ನಿಧನರಾಗಿದ್ದರು. ಶ್ರೀನಾಥ್ ಅವರ ತಾಯಿಯ ನಿಧನ ಅವರ ಕಟುಂಬ ಮತ್ತು ಕ್ರೀಡಾವಲಯದಲ್ಲಿ ಅಪಾರ ದುಃಖಕ್ಕೆ ಕಾರಣವಾಗಿದ್ದು ಅನೇಕ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ. ಅವರು ಮಗನ ಸಾಧನೆಗೆ ಬೆಂಬಲವಾಗಿ ನಿಂತಿದ್ದರು. ಎಂದೇ ಖ್ಯಾತರಾಗಿದ್ದ ಶ್ರೀನಾಥ್ ಅವರು ಕಪಿಲ್ ದೇವ್ ಬಳಿಕ ಭಾರತ ತಂಡ ಅತ್ಯುತ್ತಮ ವೇಗದ ಬೌಲರ್ ಆಗಿದ್ದರು. 67 ಟೆಸ್ಟ್ ಪಂದ್ಯಗಳಿಂದ 236 ವಿಕೆಟ್ ಮತ್ತು 229 ಏಕದಿನ ಪಂದ್ಯಗಳಿಂದ 315 ವಿಕೆಟ್ ಎಗರಿಸಿದ್ದರು.

ವಿಜಯ ಕರ್ನಾಟಕ 17 Aug 2025 1:59 pm

ಜಾತಿ-ಉಪಜಾತಿಗಳ ಸಂಖ್ಯಾಬಲದ ಯಾದವಿ ಕಲಹ ನಿಲ್ಲಲಿ

ಸರಕಾರದಿಂದ ಆಯೋಗಕ್ಕೆ ನೀಡಿದ್ದ ವಿಚಾರಣಾ ಮಾರ್ಗಸೂಚಿಯಲ್ಲಿ ಈ ಜಾತಿ ಆ ಜಾತಿಗಳ ನೇರ ಪ್ರಸ್ತಾಪವಿರಲಿಲ್ಲ. ಅದರಲ್ಲಿ ಸುಪ್ರೀಂ ಕೋರ್ಟಿನ ತೀರ್ಪಿನ ಮೇರೆಗೆ ಪರಿಶಿಷ್ಟ ಜಾತಿಗಳ ಅಂತರ ಹಿಂದುಳಿದಿರುವಿಕೆಯನ್ನು ಪ್ರಯೋಗಾತ್ಮಕವಾಗಿ ಪರಿಶೀಲಿಸಲು ಮಾತ್ರ ಸೂಚಿಸಿತ್ತು. ಆದುದರಿಂದ, 5 ಗುಂಪುಗಳ ವಿಂಗಡಣೆಯಲ್ಲಿ ಈ ಮಾದರಿ ಹಂಚಿಕೆ ತತ್ವವನ್ನು ಅಳವಡಿಸಿದಂತೆ ಕಾಣುತ್ತಿದೆ. ಎಡ-ಬಲ ಬಣಗಳಿಂದ ಚದುರಿದ ಉಪಜಾತಿಗಳು ಅತ್ಯಧಿಕವಾಗಿವೆ; ಅವುಗಳ ಕ್ರೋಡೀಕರಣ ಆಯೋಗದ ಪ್ರಥಮ ಆದ್ಯತೆ ಆಗಿರಲಿಲ್ಲ. ಸಮೀಕ್ಷೆಯಲ್ಲಿ ಲಭಿಸಿರುವ ವಿವಿಧ ಸ್ವರೂಪದ ಅಂತರ ಹಿಂದುಳಿದಿರುವಿಕೆ ದತ್ತಾಂಶಗಳ ಮೇರೆಗೆ ಹಂಚಿಕೆ ತತ್ವದಡಿ ಜೋಡಿಸುವಾಗ ಎಡ-ಬಲ ಬಣಗಳ ಉಪ ಜಾತಿಗಳು ಸಹಜವಾಗಿ ಅದಲುಬದಲಾಗಿವೆ ಅಷ್ಟೇ. ಇಂದು ಪರಿಶಿಷ್ಟರ ಮೀಸಲಾತಿ ಅನೇಕ ಆಯಾಮಗಳ ಚರ್ಚೆಗಳನ್ನು ಹುಟ್ಟು ಹಾಕಿದೆ. ಅದರೊಳಗೆ ಒಳ ಪಂಗಡಗಳ ಸಂಖ್ಯಾಬಲವನ್ನು ಮಾಪನಮಾಡಿ ಮರು ಹಂಚಿಕೆಯ ಮಾನದಂಡಗಳಿಲ್ಲ. ಈ ತಾತ್ವಿಕತೆಗಳು 1960ರಿಂದಲೂ ಹಿಂದುಳಿದ ವರ್ಗಗಳಲ್ಲಿ ಅನುಷ್ಠಾನವಾಗಿವೆ. ಸಾಮಾನ್ಯವಾಗಿ ಜಾತಿ-ಉಪಜಾತಿಗಳ ಉಗಮಕ್ಕೆ ನೂರಾರು ಮಣ್ಣಿನ ಮಕ್ಕಳ ವಾದಗಳಿವೆ. ಒಟ್ಟಾರೆ, ಪ್ರತಿಯೊಂದು ಜಾತಿ-ಉಪ ಜಾತಿಗಳು ಶ್ರೇಷ್ಠತೆಯ ವ್ಯಸನದಿಂದ ದೂರವಾಗಿಲ್ಲ. ಉದಾಹರಣೆಗೆ ಪ್ರಧಾನ ಜಾತಿಯಿಂದ ಕವಲೊಡೆದ ಉಪಜಾತಿಯು (Fusion sub-castes) ತನ್ನ ಮುಖ್ಯ ಜಾತಿಯ ಎಲ್ಲಾ ಸಾಮಾಜಿಕತೆಯನ್ನು ಮೈಗೂಡಿಸಿಕೊಂಡಿರುತ್ತದೆ. ಆದರೆ, ಉಪಜಾತಿಯಿಂದ ಸೀಳಿ ಸಣ್ಣಪುಟ್ಟ ಉಪ ಜಾತಿಗಳಾದವು (Fission sub-castes) ಸಾಮಾನ್ಯವಾಗಿ ಸಮ್ಮಿಶ್ರ ಸಾಮಾಜಿಕತೆಯನ್ನು ಸಾದರಪಡಿಸುತ್ತವೆ. ಈ ಮಾದರಿಗಳು ಎಲ್ಲಾ ವರ್ಣ/ವರ್ಗಗಳಲ್ಲಿವೆ. ಜಾತಿ-ಉಪಜಾತಿಗಳೊಳಗೆ ಬೇರ್ಪಡಿಸಿದ ಸಾಮಾಜಿಕತೆ, ಶ್ರೇಣೀಕರಣ, ಸಹಪಂಕ್ತಿ ಮತ್ತು ಮುಕ್ತ ಸಾಮಾಜಿಕ ಒಡನಾಟಗಳ ನಿಷೇಧವಿದೆ. ಸಾಂಪ್ರದಾಯಿಕ ವೃತ್ತಿ ಸ್ಥಿತಿಸ್ಥಾಪಕತ್ವವಿರುವುದಿಲ್ಲ. ನಾಗರಿಕ ಮತ್ತು ಧಾರ್ಮಿಕ ಒಡನಾಟಗಳ ನಿಷೇಧ ಹಾಗೂ ಮುಕ್ತ ವೈವಾಹಿಕತೆಗಳಿರುವುದಿಲ್ಲ. ಇವುಗಳು ಭಾರತೀಯ ಪ್ರಧಾನ ಸಾಮಾಜಿಕ ಗುಣಲಕ್ಷಣಗಳಾಗಿವೆ. ಅದರಲ್ಲೂ ಪರಿಶಿಷ್ಟರಿಗೆ ಇವೆಲ್ಲವೂ ದೈನಂದಿನ ಬಂಧವಾಗಿರುತ್ತವೆ. ಇಂತಹ ಸಮುದಾಯಗಳು ಸಮನಾಂತರ ನ್ಯಾಯಕ್ಕಾಗಿ (Horizontal Justice) ಒಳ ಮೀಸಲಾತಿಯ ಕಂದೀಲು ಹಿಡಿದು ದೀರ್ಘ ಕಾಲದಿಂದ ಹೋರಾಡುತ್ತಿವೆ. ರಾಜ್ಯದಲ್ಲಿ ಶಾಸನಬದ್ಧವಾಗಿ ಸೇರಿರುವ (1956) ಪರಿಶಿಷ್ಟ ಜಾತಿಗಳ ಒಳಗೆ 1976 ತರುವಾಯ ಅನೇಕ ಸಾಂಸ್ಥಿಕ ಬದಲಾವಣೆಗಳಾಗಿವೆ. ಅದರಲ್ಲಿಯೂ ಅಸ್ಪಶ್ಯ ಮತ್ತು ಸ್ಪಶ್ಯ ಎಂಬ ಒಳ ಭೇದತೆಗಳು ದೈನಂದಿನ ನಿತ್ಯಾರ್ಚನೆಗಳಾಗುತ್ತಿವೆ. ಡಾ. ಅಂಬೇಡ್ಕರ್‌ರ ಜಾತಿ ವಿನಾಶ ಅಭಿಮತಗಳಿಂದ ಪ್ರಭಾವಿಸಿಕೊಂಡವರು ಕಳಂಕಿತ ಜಾತಿ ನಾಮಗಳಿಂದ ದೂರವಾಗಲು ಮುಂದಾದರು. ಆಗ ಪ್ರಾದೇಶಿಕತೆಯ ಆದಿ ದ್ರಾವಿಡ, ಆದಿ ಆಂಧ್ರ ಮತ್ತು ಆದಿ ಕರ್ನಾಟಕ ಎಂಬ ಜನರಿಕ್ ಪದಗಳು ಎಡ-ಬಲ ಬಣಗಳಲ್ಲಿ ಸಮಗ್ರ ರೂಪದಲ್ಲಿ ಸಾಂಘಿಕವಾದವು. 1980ರಿಂದಾಚೆಗೆ ಇವರ ಸಂಖ್ಯಾಬಲದ ಹಾವು ಏಣಿಯಾಟಕ್ಕೆ ಗ್ರಾಸವಾಗಿವೆ. ಇದರ ನಿವಾರಣೆಗಾಗಿ ನ್ಯಾಯಮೂರ್ತಿ ದಾಸ್ ಆಯೋಗ ಸಮೀಕ್ಷೆಯಲ್ಲಿ ಕರಾರು ವಕ್ಕಾದ ಮಾಹಿತಿಗಳನ್ನು ಕ್ರೋಡೀಕರಿಸಲು ಮುಂದಾಗಿತ್ತು. ಆಯೋಗದ ಸಮೀಕ್ಷೆಯಿಂದ ಸ್ವೀಕೃತವಾಗಿರುವ 101 ಉಪಜಾತಿಗಳ ಸಂಖ್ಯಾಬಲವನ್ನು ಒಂದು ಸಂಭವನೀಯ ಫಲಿತಗಳಾಗಿ (Pಡಿobಚಿbಟe ಖesuಟಣs) ಸ್ವೀಕರಿಸುವ ಮನೋಧರ್ಮ ಪರಿಶಿಷ್ಟರಲ್ಲಿ ಧಾರಣವಾಗಬೇಕಿದೆ. ಆಗ ಅನುಷ್ಠಾನಕ್ಕೆ ದಾರಿ ತೆರೆಯುತ್ತದೆ. 2011ರಲ್ಲಿ ಆದಿ ದ್ರಾವಿಡರು 7.96 ಲಕ್ಷ, ಆದಿ ಕರ್ನಾಟಕರು 29.21 ಲಕ್ಷ ಮತ್ತು ಆದಿ ಆಂಧ್ರೀಯರು 26 ಸಾವಿರದಷ್ಟಿದ್ದರು. ಹಿಂದಿನ ಒಳ ಮೀಸಲಾತಿ ಹಂಚಿಕೆಯಲ್ಲಿಯೂ ಈ ಪ್ರಾದೇಶಿಕ ಸೂಚಕಗಳು ಎಲ್ಲಿಲ್ಲದ ಅವಾಂತರಗಳನ್ನು ಎಬ್ಬಿಸಿವೆ. ಈ ಸಮೀಕ್ಷೆಯಲ್ಲಿ ಆದಿ ಕರ್ನಾಟಕ ಜನಸಂಖ್ಯೆ ಹೊಲೆಯ ಮತ್ತು ಮಾದಿಗರ ನಡುವೆ ಹಂಚಲ್ಪಟ್ಟಿವೆ. ಮಾದಿಗರು 9.53 ಲಕ್ಷವಿದ್ದವರ (2011) ಪ್ರಜಾಸಂಖ್ಯೆ 27.74 ಲಕ್ಷವಾಗಿ ಮೂರು ಪಟ್ಟಾಗಿದೆ. ಹಾಗೆಯೇ 7.93 ಲಕ್ಷವಿದ್ದ ಹೊಲೆಯರು 24.72 ಲಕ್ಷಕ್ಕೇರಿ ಮೂರುಪಟ್ಟು ವೃದ್ಧಿಸಿದೆ. ಇನ್ನುಳಿದ 1.48 ಲಕ್ಷ ಜನರು ಆದಿ ಕರ್ನಾಟಕರಾಗಿಯೇ ಉಳಿದಿದ್ದಾರೆ. ಅದೇ ಮಾದರಿಯಲ್ಲಿ 7.96 ಲಕ್ಷವಿದ್ದ ಆದಿದ್ರಾವಿಡರು (2011) 3.21ಲಕ್ಷಕ್ಕೆ ಕುಸಿದಿದ್ದಾರೆ. ಈ ಸಮುದಾಯದ ಕುಸಿತವು ಎಡ-ಬಲಗಳ ನಡುವೆ ಹಂಚಲ್ಪಟ್ಟಿವೆ. ಆಶ್ಚರ್ಯವಾಗಿ ಪರೆಯನ್ 2,418 (2011)ರಿಂದ 1.61 ಲಕ್ಷಕ್ಕೇರಿ ಹೊಸದಾಗಿ ದಾಖಲಾಗಿರುವುದು ವೇದ್ಯವಾಗಿದೆ. ಚಲವಾದಿ ಪದಕ್ಕೂ ಭಾರೀ ಮನ್ನಣೆ ಸಿಕ್ಕಿದೆ. ಹಾಗೆಯೇ 33 ಪರಿಶಿಷ್ಟ ಜಾತಿಗಳು 2011ರಲ್ಲಿ ಹೊಂದಿದ್ದ ಪ್ರಜಾ ಸಾಮರ್ಥ್ಯವನ್ನು ದಾಖಲಿಸುವಲ್ಲಿ ವಿಫಲವಾಗಿವೆ. ಇವರಲ್ಲಿ ಹತ್ತು ಸಾವಿರಕ್ಕಿಂತ ಮೇಲ್ಪಟ್ಟು ಕುಗ್ಗಿದವರೆಂದರೆ ಬಾಂಬ್ಹಿ ಸಮೂಹ ಜಾತಿಗಳು (-95,032), ಜಾಂಬವಲು (-11,855), ಮಹಾರ್ ಸಮೂಹ (-11,546), ಮಾಂಗ್(-12784), ಮುಂಡಾಲ (-17183) ಮತ್ತು ಸಮಗಾರ (-11612) ಸೇರಿವೆ. ಅತ್ಯಧಿಕ ಧನಾತ್ಮಕ ವೃದ್ಧಿ ಕಂಡಿರುವ ಜಾತಿಗಳೆಂದರೆ; ಬಲಗೈ(24,415), ಬಂಜಾರ (1,38,236), ಬೇಡ (ಬುಡ್ಗ) ಜಂಗಮರು (60,498), ಚಲವಾದಿ/ಚನ್ನಯ್ಯ (1,56,822), ಕೊರಮ (34,052), ಮುಕ್ರಿ (20,554), ಶಿಳ್ಲೇಕ್ಯಾತ (10,792), ಮಾಲ (8,817) ಅಡಿಯಾ (8,026), ಅಗೇರ್(7,983), ಅರುಂಧತಿಯಾರ್(6,673), ಭೋವಿ (9,986), ಚನ್ನದಾಸರ್/ಹೊಲೆಯ ದಾಸರ (7,622), ಡೋಹಾರ (6,081), ಹೊಲಾರ್/ವಲೇರ್(9,700), ಹೊಲೆಯ ದಾಸರಿ (2,681), ಕೊರಚ (1,598) ಮಾಲದಾಸರಿ (4,247), ಮೊಗೇರ (4,310) ಶಿಂಧೋಳು/ಚಿಂದೋಳು (3,631), ಸುಡುಗಾಡು ಸಿದ್ಧ(6,974), ತೋಟಿ (2,639) ಮತ್ತು ವೆಲ್ಲುವನ್(1,517) ಇತ್ಯಾದಿ ಸೇರಿವೆ. ನೂರರಷ್ಟಿದ್ದ ಕೆಲವು ಸೂಕ್ಷ್ಮ ಜಾತಿಗಳಲ್ಲೂ ವೃದ್ಧಿಯಾಗಿದೆ. ಅಂದರೆ, ಸಮೀಕ್ಷೆಯಲ್ಲಿ ಜನರು ಮುಕ್ತವಾಗಿ, ಹುಮ್ಮಸ್ಸಿನಿಂದ ಹಕ್ಕಿಗಾಗಿ ಸಕ್ರಿಯರಾಗಿರುವುದು ಗೊಚರವಾಗುತ್ತಿದೆ. ಬಹುಶಃ ಇಷ್ಟೊಂದು ಸಮುದಾಯ ಆಧಾರಿತ ಪ್ರಚಾರ ಆಂದೋಲನ ಹಿಂದಿನ ಯಾವುದೇ ಸಮಗ್ರ ಜನಗಣತಿಗಳಲ್ಲಿ ಜರುಗಿದ್ದರೆ ಯಾವುದೇ ಸಮುದಾಯಗಳ ಅಸ್ಮಿತತೆ ನಾಶವಾಗುತ್ತಿರಲಿಲ್ಲ. ಸರಕಾರ ಜನ ಜಾಗೃತಿಗಾಗಿ ಎಲ್ಲಾ ಸಾಧನಗಳನ್ನು ಬಳಸಿಕೊಂಡ ಫಲಶ್ರುತಿಯೂ ಕೊಡುಗೆ ನೀಡಿದೆ. ಭಾಗಶಃ ಆದಿ ಕರ್ನಾಟಕ, ಆದಿ ದ್ರಾವಿಡ ಮತ್ತು ಆದಿ ಆಂಧ್ರೀಯ ಸಮಸ್ಯೆ ಬಗೆಹರಿದಂತೆ ಕಾಣುತ್ತಿದೆ. ಸಮೀಕ್ಷೆ ಮೂಲ ಉದ್ದೇಶ ಎಡ-ಬಲ ಬಣಗಳ ನೈಜ ಪ್ರಜಾಸಂಖ್ಯೆಯನ್ನು ಅಖೈರು ಮಾಡುವುದಾಗಿತ್ತು. ಆದಿ ಕರ್ನಾಟಕ (1.47 ಲಕ್ಷ), ಆದಿ ದ್ರಾವಿಡ (3.21 ಲಕ್ಷ) ಮತ್ತು ಆದಿ ಆಂಧ್ರೀಯರು (7,114) ಮೂಲ ಜಾತಿಗಳನ್ನು ದಾಖಲಿಸಲು ನಿರಾಕರಿಸಿದ್ದಾರೆ. ಈ ವಿಚಾರದಲ್ಲಿ ಆಯೋಗಕ್ಕೇ ಯಾರನ್ನು ಕೈ ಹಿಡಿದು ಬರೆಸುವ ಹಕ್ಕನ್ನು ಸರಕಾರ ನೀಡಿರಲಿಲ್ಲ. ಅದು ಸುಪ್ರೀಂ ಕೋರ್ಟ್ ವಿಧಿಸಿರುವ ಪ್ರಯೋಗಾತ್ಮಕ ದತ್ತಾಂಶಗಳನ್ನು ಸಾದರ ಪಡಿಸುವಲ್ಲಿ ಆಯೋಗ ಒಂದಷ್ಟು ಯಶಸ್ಸು ಕಂಡಿದೆ. ಡಾ. ಸಿ.ಎಸ್. ದ್ವಾರಕಾನಾಥ್‌ರ ಉದ್ಯೋಗ ಮಾಹಿತಿ ಕ್ರೋಡೀಕರಣದಲ್ಲಿ ಆಯೋಗ ವಿಫಲವಾಗಿದೆ ಎಂಬ ವಾದಗಳು ಸಕಾಲಿಕವಾಗಿಲ್ಲ. ಇದು 1979ರಿಂದ ಪರಿಶಿಷ್ಟ ಜಾತಿಗಳು ವಿಧಾನ ಸಭೆ/ಲೋಕ ಸಭೆಯಲ್ಲಿ ಗೆದ್ದಿರುವ ಬಗ್ಗೆಯೂ ಮಾಹಿತಿ ನೀಡಿಲ್ಲ. ಸದರಿ ಆಯೋಗ ಅತ್ಯಅಲ್ಪ ಕಾಲಮಿತಿಯಲ್ಲಿ ಸಾಧ್ಯವಾದಷ್ಟು ಪ್ರಗತಿ ಸಾಧಿಸಿದೆ. ಸದಾಶಿವ ಆಯೋಗದಲ್ಲಿದ್ದ ಮಾಹಿತಿ ಕಂಡ ಅನೇಕ ನೌಕಕರು ಬೆಚ್ಚಿ ತಮ್ಮ ನೈಜ ಜಾತಿಗಳನ್ನು ನೀಡದೆ ಫಲಾಯನ ಮಾಡಿದವರೇ ಜಾಸ್ತಿ. ಇನ್ನೂ ಕೆಲವರು ತಮ್ಮ ಸಕ್ಷಮ ಪ್ರಾಧಿಕಾರಿಗಳ ಜೊತೆ ಜಗಳವಾಡಿರುವ ಉದಾಹರಣೆಗಳಿವೆ. ಮೀಸಲಾತಿ ಮೂಲದಿಂದ ಉದ್ಯೋಗ ಅನುಭೋಗ ಪ್ರಮಾಣದಲ್ಲಿ ಬಲ ಬಣ (ಗುಂಪು-ಸಿ) ಮತ್ತು ಸ್ಪಶ್ಯರಿಗಿಂತ (ಗುಂಪು-ಡಿ) ಇ ಗುಂಪಿನ ಜನರಿಕ್ ಜಾತಿ ನಾಮಪದಗಳು ಶೇ.5.35 ಪಡೆದಿದ್ದಾರೆ. ಬಹುಶಃ ಮೀಸಲಾತಿ ಹಂಚಿರುವ ದೃಷ್ಟಿಕೋನದಿಂದ ವಿಶ್ಲೇಷಣೆ ಮಾಡಿದಾಗ ಅತ್ಯಂತ ಸದೃಢರೆಂದು ಅದರ ಫಲಿತಗಳೇ ಷರಾ ಬರೆಯುತ್ತಿದೆ. ಆದಿ ದ್ರಾವಿಡರಾದ ಅರುಂಧತಿಯಾರ್, ಮಾದಾರಿ, ಮಾದಿಗ, ತೋಟಿ, ಮಾದಿಗ, ಪಾಗಾಡೈ ಮತ್ತು ಚಕ್ಕಲಿಯನ್ ಜಾತಿಗಳು ಆರೇಳು ತಲೆಮಾರಿನಿಂದ ಮೈಸೂರು ರಾಜ್ಯಕ್ಕೆ ವಲಸೆ ಬಂದಿವೆ. ಇವರೆಲ್ಲರೂ ತಮಿಳು ಭಾಷಿಕರಾಗಿ ಸಚೇತನ ಆರಾಧಕರಾಗಿದ್ದಾರೆ. ದಿವಾನ್ ರಂಗಚಾರ್ಲು ಅವರ ಕಾಲದಲ್ಲಿ ಅಧಿಕವಾಗಿ ವಲಸೆ ಬಂದರು. ಅವರನ್ನು ಪೌರ ಕಾರ್ಮಿಕರನ್ನಾಗಿ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ನಾಗರಿಕ ವೃತ್ತಿ ನಿರ್ವಾಹಕರಾಗಿ ನಿಯೋಜಿಸಿದರು. 1931ರ ಜನಗಣತಿ ತರುವಾಯ ಸೇಲಂ, ಈರೋಡ್, ನೀಲಗಿರಿ, ಕೃಷ್ಣಗಿರಿ ಇತ್ಯಾದಿ ಭಾಗಗಳಿಂದ ಬಂದಿರುವವರು ಅತ್ಯಧಿಕವಾಗಿ ಆದಿ ದ್ರಾವಿಡ ಎಂದು ಗುರುತಿಸಿಕೊಂಡಿದ್ಧಾರೆ. ಬ್ರಿಟಿಷ್ ಆಡಳಿತ ಚರ್ಮಗಾರಿಕೆಯನ್ನು ಉತ್ತೇಜಿಸಲು ವೆಲ್ಲೂರು, ತಿರುನಾವೆಲ್ಲಿ, ಮತ್ತು ಮಧುರೆ ಭಾಗಗಳಿಂದ ಅಂದು 5,000 ಅರುಂಧತಿಯಾರ್ ಮತ್ತು ಚಕ್ಕಲಿಯನ್ ಜಾತಿ ಜನರನ್ನು ವಲಸೆ ಮಾಡಿಕೊಂಡು ಚರ್ಮ ಹದಮಾಡುವುದಕ್ಕೆ ಚಾಲನೆ ನೀಡಲಾಗಿತ್ತು (ಆಕರ: ಎನ್.ಸಿ. ಮುನಿಯಪ್ಪ). ಇವರೆಲ್ಲರೂ ಬೆಂಗಳೂರಿನಲ್ಲಿ ನೆಲಸಿದರು. ತೆಲುಗುಭಾಷಿಕ ಮಾದಿಗರು ನೆಲ್ಲೂರು, ಪ್ರಕಾಶಂ, ಪೆನಗೊಂಡ, ಅನಂತಪುರ ಇತರ ಆಂಧ್ರಪ್ರದೇಶಗಳಿಂದ ಬಂದು ಮೈಸೂರು, ಬೆಂಗಳೂರು ಇತ್ಯಾದಿ ಪ್ರದೇಶಗಳಲ್ಲಿ ನೆಲೆಸಿದ್ದಾರೆ. ಪ್ರಾಂತೀಯ ಸರಕಾರಗಳ (1921-31) ನಿರ್ಣಯಗಳಲ್ಲಿ ಎಡ-ಬಲ ಬಣಗಳನ್ನು ನೂತನ ಜನರಿಕ್ ನಾಮ ಸೂಚಕಗಳಲ್ಲಿ ಸೇರಿಸಲು ನಿರ್ಧಾರ ಮಾಡಿವೆ. ಆದುದರಿಂದ, ನ್ಯಾಯಮೂರ್ತಿ ನಾಗ ಮೋಹನ ದಾಸ್ ಆಯೋಗ ವರ್ಗೀಕರಣ ಮಾಡಿರುವ ಇ ಗುಂಪಿನಲ್ಲಿರುವ ಆದಿ ಕರ್ನಾಟಕ, ಆದಿ ದ್ರಾವಿಡ ಮತ್ತು ಆದಿ ಆಂಧ್ರರಲ್ಲಿ ಕೇವಲ ಬಲಗೈ ಉಪ ಜಾತಿಗಳಿವೆ ಅನ್ನುವುದೇ ಸೂಕ್ತವಾದ ಸಾಮಾಜಿಕ ನಿಲುವುಗಳಲ್ಲ ಅನ್ನಿಸುತ್ತದೆ. ಬಾಂಬೆ ಪ್ರಾಂತದಲ್ಲಿ (1936) ಚನ್ನದಾಸರಿಗಳನ್ನು ಚಕ್ರವಾರ್ಧ್ಯ ದಾಸರಿಗಳೆಂದು ಗುರುತಿಸಲಾಗಿತ್ತು. ಹಿಂದುಳಿದ ವರ್ಗಗಳಲ್ಲೂ ಈ ಪದವಿದ್ದ ಕಾರಣ ಡಾ. ಬಿ.ಆರ್. ಅಂಬೇಡ್ಕರ್ (1950) ಅದರ ಕುಲಶಾಸ್ತ್ರೀಯ ಗುಣಲಕ್ಷಣಗಳ ಮೇಲೆ ಚನ್ನದಾಸರ್/ಹೊಲೆಯ ದಾಸರ್ ಎಂದು ಹೆಸರಿಸಿದರು. ಈ ಸಮಾಜದ ವಕೀಲ ಟಿ.ಕೆ. ದಾಸರ್ ಹೇಳುವಂತೆ ಚನ್ನದಾಸರ್ ಇಷ್ಟೊಂದು ಜನಸಂಖ್ಯೆ ಇರಲು ಸಾಧ್ಯವಿಲ್ಲ. ಕೆಲವು ಹಿಂದುಳಿದ ವರ್ಗಗಳು ಇದರ ಸಮನಾಂತರ ಪದವನ್ನು ನಿರಂತರವಾಗಿ ದುರುಪಯೋಗ ಮಾಡಿರುವ ಕಾರಣ ಜನಸಂಖ್ಯೆ ಗಗನಕ್ಕೇರಿದೆ ಎಂದು ಅಭಿಮತಿಸಿ, ಅವರ ಸಮಾಜದಲ್ಲಿರುವ ದೇವದಾಸಿ ಪದ್ಧತಿ ಬಗ್ಗೆ ಮರುಗಿದರು. ಪರಿಶಿಷ್ಟ ಜಾತಿಗಳಲ್ಲಿ ಕೇವಲ ಚನ್ನದಾಸರಿ ಅಥವಾ ಬೇಡ (ಬುಡ್ಗ) ಜಂಗಮ ಜಾತಿಗಳು ನಿರಂತರವಾಗಿ ದುರುಪಯೋಗ ಆಗಿರುವಂತೆ, ಆದಿದ್ರಾವಿಡ, ಆದಿಕರ್ನಾಟಕ ಮತ್ತು ಆದಿಆಂಧ್ರ ಜೊತೆ ಸಣ್ಣಪುಟ್ಟ ಜಾತಿಗಳಲ್ಲಿಯೂ ವ್ಯಾಪಕ ದುರುಪಯೋಗಗಳಿವೆ. ಸರಕಾರದಿಂದ ಆಯೋಗಕ್ಕೆ ನೀಡಿದ್ದ ವಿಚಾರಣಾ ಮಾರ್ಗಸೂಚಿಯಲ್ಲಿ ಈ ಜಾತಿ ಆ ಜಾತಿಗಳ ನೇರ ಪ್ರಸ್ತಾಪವಿರಲಿಲ್ಲ. ಅದರಲ್ಲಿ ಸುಪ್ರೀಂ ಕೋರ್ಟಿನ ತೀರ್ಪಿನ ಮೇರೆಗೆ ಪರಿಶಿಷ್ಟ ಜಾತಿಗಳ ಅಂತರ ಹಿಂದುಳಿದಿರುವಿಕೆಯನ್ನು ಪ್ರಯೋಗಾತ್ಮಕವಾಗಿ ಪರಿಶೀಲಿಸಲು ಮಾತ್ರ ಸೂಚಿಸಿತ್ತು. ಆದುದರಿಂದ, 5 ಗುಂಪುಗಳ ವಿಂಗಡಣೆಯಲ್ಲಿ ಈ ಮಾದರಿ ಹಂಚಿಕೆ ತತ್ವವನ್ನು ಅಳವಡಿಸಿದಂತೆ ಕಾಣುತ್ತಿದೆ. ಎಡ-ಬಲ ಬಣಗಳಿಂದ ಚದುರಿದ ಉಪಜಾತಿಗಳು ಅತ್ಯಧಿಕವಾಗಿವೆ; ಅವುಗಳ ಕ್ರೋಡೀಕರಣ ಆಯೋಗದ ಪ್ರಥಮ ಆದ್ಯತೆ ಆಗಿರಲಿಲ್ಲ. ಸಮೀಕ್ಷೆಯಲ್ಲಿ ಲಭಿಸಿರುವ ವಿವಿಧ ಸ್ವರೂಪದ ಅಂತರ ಹಿಂದುಳಿದಿರುವಿಕೆ ದತ್ತಾಂಶಗಳ ಮೇರೆಗೆ ಹಂಚಿಕೆ ತತ್ವದಡಿ ಜೋಡಿಸುವಾಗ ಎಡ-ಬಲ ಬಣಗಳ ಉಪ ಜಾತಿಗಳು ಸಹಜವಾಗಿ ಅದಲುಬದಲಾಗಿವೆ ಅಷ್ಟೇ. ಈ ಸಂಕಷ್ಟ ಸ್ಪಶ್ಯರಿಗಿಲ್ಲ; ಅವುಗಳ ಬಹುತೇಕ ಉಪಜಾತಿಗಳು ಒಂದೆಡೆ ಅಂತರ್ಗತವಾಗಿವೆ. ಹಂಚಿಕೆಯಾಗಿರುವ ಇ ಗುಂಪಿನಲ್ಲಿರುವ 4.75 ಲಕ್ಷ ಜನರನ್ನು ಬಲಬಣದ ಆಗ್ರಹ ಪ್ರಕಾರ ಇವರಿಗೆ ಸೇರಿಸಿದಾಗ ಅವರ ಜನಸಂಖ್ಯೆ ವೃದ್ಧಿಸಿದಂತೆ ಅವುಗಳ ಮೀಸಲಾತಿ ಅನುಭೋಗ ಪ್ರಮಾಣ ದಿಢೀರನೆ ಜಿಗಿಯುತ್ತದೆ. ಅದರ ಔದ್ಯೋಗಿಕ ಅನುಪಾತ ಶೇ.6.81ಕ್ಕೆ ಮತ್ತಷ್ಟು ಜಿಗಿಯುತ್ತದೆ. ಆಗ ಇತರ ಗುಂಪುಗಳ ನಡುವೆ ಅದರ ಅಂತರ ಹಿಂದುಳಿದಿರುವಿಕೆಯು ರಾಚುವ ‘ಪರ್ವತ ಸೃಷ್ಟಿ ಅಭಿವೃದ್ಧಿ’ಯಂತೆ ಕಾಣುವುದು. ಬಲಬಣಕ್ಕೆ ಇ ಗುಂಪನ್ನು ಮರುಹಂಚಿಕೆಯಾದರೆ ಎಡ ಬಣದವರು ತಕರಾರು ಮಾಡದೆ ಇರುತ್ತಾರೆಯೇ? ಪರೆಯನ್/ಪರವನ್ ಅಥವಾ ಮೊಗೇರ್(ಮುಗ್ಗೇರಾ) ಉಪಜಾತಿಗಳನ್ನು ಎಡ ಬಣದವರು ತಮ್ಮವರೆಂದು ಎಲ್ಲಿಯೂ ಪ್ರತಿಪಾದಿಸಿಲ್ಲ. ಈ ಬಗ್ಗೆ ಯಾರೂ ಆಯೋಗದ ಮುಂದೆ ಲಿಖಿತವಾಗಿ ಪ್ರತಿಪಾದಿಸಿಲ್ಲ. ಬಹುಶಃ ಸದಾಶಿವ ಆಯೋಗದ ಸೂತ್ರದಂತೆ ಇಲ್ಲಿಗೆ ಸೇರಿದೆ. ತುಳು ನಾಡಿನ ‘ಮಾರಿ ಹೊಲೆಯ’ ಪದ ಪ್ರಯೋಗ ಮೈದಾನ ಪ್ರದೇಶಗಳ ಸಾಮಾಜಿಕತೆಗಿಂತ ವಿಭಿನ್ನವಾಗಿದೆ. ಇದನ್ನು ಸಹ ಆಯೋಗ ಮನಗಂಡಿದೆ. ಮಾಧುಸ್ವಾಮಿ ಸಮಿತಿಯ ಒಳ ಮೀಸಲಾತಿಯು ಕೇವಲ ಜನಗಣತಿ ಆಧಾರಿತ ವಿಭಜನೆಯಾಗಿತ್ತು. ಇತರ ದತ್ತಾಂಶಗಳ ಗೌಣತೆ ಎದ್ದು ಕಾಣುತ್ತಿತ್ತು. ಅದರಲ್ಲಿಯೂ ಸೂಕ್ಷ್ಮ ಜಾತಿಗಳ ವಿಭಜನೆ ತುಂಬಿ ತುಳುಕಾಡುವ ಬಸ್ಸಿನಂತಾಗಿತ್ತು. ಆದರೆ, ನ್ಯಾಯಮೂರ್ತಿ ದಾಸ್ ಆಯೋಗ ಸುಪ್ರೀಂ ಕೋರ್ಟಿನ ನಿರ್ದೇಶಾನುಸಾರ ದತ್ತಾಂಶವನ್ನು ನಿರ್ಧಾರ ಮಾಡುವಾಗ ಜನಸಂಖ್ಯೆ ಜೊತೆ ಅವುಗಳ ಇತರ ಅಭಿವೃದ್ಧಿ ಸೂಚ್ಯಂಕಗಳನ್ನು ಗಮನಿಸಿರುವುದು ವಿಶೇಷವಾಗಿದೆ. ಬಲ ಬಣಕ್ಕೆ ಸೇರಿದ ಸಮಾಜ ಕಲ್ಯಾಣ ಇಲಾಖೆ ಸಚಿವರೇ ಸಮೀಕ್ಷೆಯನ್ನು ಸೂಕ್ಷ್ಮ ವಾಗಿ ನಿರ್ವಹಿಸುತ್ತಿದ್ದರು. ಅವರ ಕಣ್ಣುತಪ್ಪಿಸಿ ಮೋಸವಾಗಲು ಸಾಧ್ಯವಿರಲಿಲ್ಲ. ಅವರು ಆಡಳಿತ ನಿರ್ವಹಣೆಯಲ್ಲಿ ಅತಿಚತುರ ಎಂಬ ಹೆಸರಿದೆ. ಅವರೂ ಸಹ ಪ್ರಭಾವ ಬೀರದೆ ಆಯೋಗವನ್ನು ಸ್ವತಂತ್ರವಾಗಿ ಕಾರ್ಯ ನಿರ್ವಹಿಸಲು ಅವಕಾಶ ನೀಡಿದ್ದಾರೆ. ಹಾಗೆಯೇ ದಾಸ್ ಆಯೋಗ ಕೂಡ ಸಮೀಕ್ಷೆಯ ದತ್ತಾಂಶಗಳನ್ನು ಬೇಕಾಬಿಟ್ಟಿಯಾಗಿ ನೋಡಲು ಯಾರಿಗೂ ಮುಕ್ತ ಅವಕಾಶ ನೀಡಿರಲಿಲ್ಲ. ಮಾದಿಗರು ಅಧಿಕವಾಗಿ ಮೂಡಿದ್ದರೂ ಅವರಲ್ಲಿಯೂ ಇನ್ನಷ್ಟು ಲಕ್ಷಗಳು ನಮಗೆ ಇನ್ನೂ ಬರಬೇಕಿತ್ತು ಎಂದು ಕೊರಗುತ್ತಿದ್ದಾರೆ. ಒಟ್ಟಾರೆ, ಪ್ರತಿಯೊಂದು ಜಾತಿ-ಉಪಜಾತಿಗಳ ಸಂಖ್ಯಾಬಲದ ಯಾದವಿ ಕಲಹ ನಿಲ್ಲದ ಕಿತ್ತಾಟವಾಗಿದೆ. ಈ ಸಂದರ್ಭದಲ್ಲಿ ಸಂಪುಟ ಉಪಸಮಿತಿ ಕಸರತ್ತು ಬೇಡದ ಕಿತ್ತಾಟಕ್ಕೂ ದಾರಿಯಾಗಲಿದೆ. ಈ ಮಧ್ಯೆ ರಾಜ್ಯದ ಸಾಕ್ಷಿಪ್ರಜ್ಞೆಯಂತಿರುವ ಸಾಹಿತಿ ದೇವನೂರು ಮಹಾದೇವ ಅವರು ಮುಖ್ಯ ಮಂತ್ರಿಗಳಿಗೆ ಬಹಿರಂಗ ಪತ್ರ ಬರೆದು ವರದಿಯನ್ನು ಯಥಾವತ್ತಾಗಿ ಅನುಷ್ಠಾನಕ್ಕೆ ತರಲು ಕೋರಿರುವುದು ಶ್ಲಾಘನೀಯ ವಿಚಾರ. ಮುಕ್ತ ಅನುಸಂಧಾನದಡಿ ಎ, ಬಿ ಮತ್ತು ಸಿ ಗುಂಪುಗಳ ಒಂದಷ್ಟು ಉಪಜಾತಿಗಳನ್ನು ಅದಲುಬದಲು ಮಾಡಿ, ಆಯೋಗದ ಶಿಫಾರಸನ್ನು ಅನುಷ್ಠಾನಕ್ಕೆ ಸರಕಾರ ಸಮ್ಮತಿಸಿದರೆ ಒಳಿತು. ಈ ಮೂಲಕ ದೀರ್ಘಕಾಲ ಮೀಸಲಾತಿ ಹೋರಾಟಕ್ಕೆ ಶಾಶ್ವತ ಪೂರ್ಣವಿರಾಮವಿಟ್ಟು, ಈ ಸಮುದಾಯಗಳ ಮಾನವ ಸಂಪನ್ಮೂಲ ಅವರವರ ಸ್ವಕುಟುಂಬಗಳ ಸೌಖ್ಯಕ್ಕೆ ಲಭಿಸುವುದರ ಜೊತೆ ಅವರ ಸಮಗ್ರ ದುಡಿಮೆ ನಾಡಿನ ಅಭಿವೃದ್ಧಿಗೆ ಸೇರಿಸಲು ಅವಕಾಶವಾದೀತು.

ವಾರ್ತಾ ಭಾರತಿ 17 Aug 2025 1:58 pm

ತಾಯಿಯ ಮೇಲೆಯೇ ಎರಡು ಬಾರಿ ಅತ್ಯಾಚಾರ; ಆರೋಪಿಯ ಬಂಧನ

ಹೊಸದಿಲ್ಲಿ: ಸುಮಾರು 65 ವರ್ಷದ ವೃದ್ಧೆ ತಾಯಿಯ ಮೇಲೆ ಎರಡು ಬಾರಿ ಅತ್ಯಾಚಾರ ಎಸಗಿದ ಆರೋಪದಲ್ಲಿ 39 ವರ್ಷದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ದಿಲ್ಲಿಯ ಹೌಝ್ ಖಾಝಿ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಹಲವು ವರ್ಷಗಳ ಹಿಂದೆ ವಿವಾಹೇತರ ಸಂಬಂಧ ಹೊಂದಿದ್ದಕ್ಕಾಗಿ ವಿಧಿಸುತ್ತಿರುವ ಶಿಕ್ಷೆ ಇದು ಎಂದು ಹೇಳಿ ಮಗ ಅತ್ಯಾಚಾರ ಎಸಗಿದ್ದಾಗಿ ವೃದ್ಧೆ ದೂರು ನೀಡಿದ್ದಾರೆ. ವೃದ್ಧೆ ತನ್ನ 25 ವರ್ಷದ ಪುತ್ರಿಯ ಜತೆಗೆ ಪೊಲೀಸ್ ಠಾಣೆಗೆ ಆಗಮಿಸಿ ಶುಕ್ರವಾರ ದೂರು ನೀಡಿದ್ದಾರೆ. ಈ ತಿಂಗಳ ಆರಂಭದಲ್ಲಿ ಪುತ್ರ ಈ ಕೃತ್ಯ ಎಸಗಿದ್ದಾಗಿ ದೂರಿನಲ್ಲಿ ವಿವರಿಸಲಾಗಿದೆ. ವೃದ್ಧೆ ತನ್ನ ನಿವೃತ್ತ ಉದ್ಯೋಗಿಯಾದ ಪತಿ ಹಾಗೂ ಆರೋಪಿ ಮಗ, ಪುತ್ರಿಯ ಜತೆ ವಾಸವಿದ್ದಾರೆ. ಇವರ ಮನೆ ಪಕ್ಕದಲ್ಲೇ ಹಿರಿಯ ಮಗಳು ತನ್ನ ಗಂಡನ ಮನೆಯಲ್ಲಿ ವಾಸವಿದ್ದಾರೆ ಎಂದು ತಿಳಿದು ಬಂದಿದೆ. ಜುಲೈ 17ರಂದು ಮಹಿಳೆ, ಆಕೆಯ ಪತಿ ಹಾಗೂ ಕಿರಿಯ ಪುತ್ರಿ ಸೌದಿ ಅರೇಬಿಯಾಗೆ ಯಾತ್ರೆ ಹೋಗಿದ್ದರು. ಎಂಟು ದಿನಗಳ ಬಳಿಕ ಇನ್ನೂ ವಿದೇಶದಲ್ಲಿ ಇದ್ದಾಗಲೇ ಕರೆ ಮಾಡಿದ ಆರೋಪಿ, ವಾಪಸ್ಸಾಗುವಂತೆ ತಂದೆಗೆ ಸೂಚಿಸಿದ್ದ. ನನ್ನ ಪತಿ ನನಗೆ ವಿಚ್ಛೇದನ ನೀಡಬೇಕು ಎಂದು ಮಗ ಬಯಸಿದ್ದ. ಆತನ ತಂಗಿ ಹುಟ್ಟುವ ಮೊದಲು ಗಂಡ ಕೆಲಸಕ್ಕೆ ಹೋದಾಗ ನಾನು ವಿವಾಹೇತರ ಸಂಬಂಧ ಇಟ್ಟುಕೊಂಡಿದ್ದೆ ಎನ್ನುವುದನ್ನು ಪತ್ತೆ ಮಾಡಿದ್ದಾಗಿ ಹೇಳಿದ್ದ ಎಂದು ವಿವರಿಸಲಾಗಿದೆ. ಪದೇ ಪದೇ ಮಗ ಇಂಥ ಕರೆ ಮಾಡುತ್ತಿದ್ದ. ಕುಟುಂಬ ಆಗಸ್ಟ್ 1ರಂದು ವಾಪಸ್ಸಾದ ತಕ್ಷಣ ಮಗ ಈ ಕೃತ್ಯ ಎಸಗಿದ್ದಾಗಿ ದೂರಿನಲ್ಲಿ ವಿವರಿಸಲಾಗಿದೆ.

ವಾರ್ತಾ ಭಾರತಿ 17 Aug 2025 1:49 pm

ಶಾಕಿಂಗ್ ನ್ಯೂಸ್: ಬೆಂಗಳೂರಲ್ಲಿ ಅವೈಜ್ಞಾನಿಕ ಕಟ್ಟಡ ನಿರ್ಮಿಸಿದವರಿಗೆ ಗಢಗಢ: ಸರ್ಕಾರದಿಂದ 4 ಲಕ್ಷ ಕಟ್ಟಡಗಳಿಗೆ ನೀರು, ವಿದ್ಯುತ್ ಸಂಪರ್ಕಕ್ಕೆ ತಡೆ!

ಡಿ.ಕೆ.ಶಿವಕುಮಾರ್ ಅವರು ಅವೈಜ್ಞಾನಿಕ ಮತ್ತು ದುರ್ಬಲ ಕಟ್ಟಡಗಳನ್ನು ಗುರುತಿಸಿ ನೋಟಿಸ್ ನೀಡಲು ಸೂಚಿಸಿದ್ದಾರೆ. ಕಟ್ಟಡ ಮಾಲೀಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ. ವಾಸಯೋಗ್ಯ ಪ್ರಮಾಣ ಪತ್ರವಿಲ್ಲದ ಕಟ್ಟಡಗಳಿಗೆ ನೀರು, ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ. ಬೆಂಕಿ ಅವಘಡದಲ್ಲಿ ಮೃತಪಟ್ಟವರಿಗೆ ತಲಾ ಐದು ಲಕ್ಷ ಪರಿಹಾರ ನೀಡಲು ಸರ್ಕಾರ ತೀರ್ಮಾನಿಸಿದೆ. ಶೇ.70 ರಷ್ಟು ಕಟ್ಟಡಗಳು ಅಕ್ರಮವಾಗಿವೆ ಎಂದು ಅವರು ಹೇಳಿದ್ದಾರೆ. ಚಿಕ್ಕಪೇಟೆ, ನಗರ್ತಪೇಟೆ ವ್ಯಾಪಾರಿ ಕೇಂದ್ರಗಳಾಗಿ ಬದಲಾಗಿವೆ ಎಂದಿದ್ದಾರೆ.

ವಿಜಯ ಕರ್ನಾಟಕ 17 Aug 2025 1:47 pm

National Highway: ಹೆದ್ದಾರಿ ರಸ್ತೆ ಅತಿಕ್ರಮ: ಕೇಂದ್ರದಿಂದ ಮಹತ್ವದ SOP ಬಿಡುಗಡೆ

ನವದೆಹಲಿ, ಆಗಸ್ಟ್ 17: ಕೇಂದ್ರ ಸರ್ಕಾರ ಕರ್ನಾಟಕ ಸೇರಿದಂತೆ ದೇಶದೆಲ್ಲಡೆ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಪಡಿಸುತ್ತಿದೆ. ಈ ಮಧ್ಯೆ ಹೆದ್ದಾರಿಗಳ ಅತಿಕ್ರಮ, ಪಕ್ಕದ ಜಾಗ ಒತ್ತುವರಿ ತೆರವು ಮಾಡಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಲು ಹೊಸ ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನವನ್ನು (SOP) ಹೊರಡಿಸಿದೆ. ಇದನ್ನು ಪಾಲಿಸಬೇಕು, ಕಟ್ಟುನಿಟ್ಟಾಗಿ ಕ್ರಮ ವಹಿಸುವಂತೆ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ (MoRTH)

ಒನ್ ಇ೦ಡಿಯ 17 Aug 2025 1:40 pm

Duleep Trophy- ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಅರ್ಜುನ್ ತೆಂಡೂಲ್ಕರ್ ವಿಫಲ; 28ರಿಂದ ಶುರುವಾಗುವ ಟೂರ್ನಿಯಲ್ಲಿ ಯಾರೆಲ್ಲಾ ಇರ್ತಾರೆ?

ಗೋವಾ ತಂಡದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಅರ್ಜುನ್ ತೆಂಡೂಲ್ಕರ್ ಅವರು ಈ ಬಾರಿಯ ದುಲೀಪ್ ಟ್ರೋಫಿ ಪಂದ್ಯಾವಳಿಯಲ್ಲಿ ವಲಯದ ತಂಡಕ್ಕೆ ಆಯ್ಕೆ ಆಗಬಹುದೆಂಬ ನಿರೀಕ್ಷೆ ಇದೀಗ ಸುಳ್ಳಾಗಿದೆ. ಈ ಹಿಂದೆ ದೇವಧರ್ ಟ್ರೋಫಿಯಲ್ಲಿ ದಕ್ಷಿಣ ವಲಯದ ಪರ ಆಡಿದ್ದ ಅವರಿಗೆ ಈ ಬಾರಿ ದುಲೀಪ್ ಟ್ರೋಫಿಯಲ್ಲಿ ಮಾತ್ರ ದಕ್ಷಿಣ ವಲಯ ತಂಡದಲ್ಲಿ ಸ್ಥಾನ ಸಿಕ್ಕಿಲ್ಲ. ಆಗಸ್ಟ್ 28ರಿಂದ ಪ್ರಾರಂಭ ಆಗಲಿರುವ ಟೂರ್ವಿಯಲ್ಲಿ ಭಾರತ ಟೆಸ್ಟ್ ತಂಡದ ನಾಯಕ ಶುಭಮನ್ ಗಿಲ್, ಋತುರಾಜ್ ಗಾಯಕ್ವಾಡ್, ಶಾರ್ದೂಲ್ ಠಾಕೂರ್ ಸೇರಿದಂತೆ ಅನೇಕ ಖ್ಯಾತನಾಮರು ಈ ಟೂರ್ನಿಯಲ್ಲಿ ಈ ಬಾರಿ ಕಾಣಿಸಿಕೊಳ್ಳಲಿದ್ದಾರೆ. ದುಲೀಪ್ ಟ್ರೋಫಿ 2025-26ರ ಸೀಸನ್ ನಲ್ಲಿ ಒಟ್ಟು ಆರುವ ತಂಡಗಳು ಭಾಗವಹಿಸಲಿವೆ. ರಾಷ್ಟ್ರೀಯ ತಂಡದ ಹೆಚ್ಚಿನ ಆಟಗಾರರೆಲ್ಲರೂ ಈ ಬಾರಿ ಭಾಗವಹಿಸುತ್ತಿರುವ ಕಾರಣ ಟೂರ್ವಿಗೆ ಮತ್ತೆ ಜೀವಕಳೆ ಬಂದಿದೆ. ಇದೇ ಹೊತ್ತಿಲನಲ್ಲಿ ಗೋವಾ ಪರವಾಗಿ ಆಡುತ್ತಿರುವ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ ಅವರು ದಕ್ಷಿಣ ವಲಯ ತಂಡಕ್ಕೆ ಆಯ್ಕೆ ಆಗಬಹುದು ಎಂದು ನಿರೀಕ್ಷಿಸಲಾಗಿತ್ತು. ಗೋವಾ, ಕರ್ನಾಟಕ, ಕೇರಳ, ತಮಿಳುನಾಡು ಮತ್ತು ಹೈದರಾಬಾದ್ ಪಾಂಡಿಚೇರಿ, ಆಂದ್ರಪ್ರದೇಶ ತಂಡಗಳು ದಕ್ಷಿಣ ವಲಯದಲ್ಲಿ ಬರುತ್ತವೆ. ಈ ಬಾರಿ ತೀವ್ರ ಪೈಪೋಟಿ ಇರುವುದರಿಂದ ಆಯ್ಕೆ ಸಮಿತಿ ಅವರನ್ನು ಪರಿಗಣಿಸಲಿಲ್ಲ. ದುಲೀಪ್ ಟ್ರೋಫಿಯ ಫೈನಲ್ ಪಂದ್ಯ ಸೆಪ್ಟೆಂಬರ್ 11 ರಿಂದ 15 ರವರೆಗೆ ನಡೆಯಲಿದೆ. ಅ ಗೋವಾದಲ್ಲಿ ಅರ್ಜುನ್ ಸಾಧನೆ ಮುಂಬೈನಿಂದ ವಲಸೆ ಹೋಗಿ ಗೋವಾ ತಂಡದ ಪರವಾಗಿ ಆಡುತ್ತಿರುವ ಅರ್ಜುನ್ ತೆಂಡೂಲ್ಕರ್ ಅವರುಗಳಿಸಿ ಮಿಂಚಿದ್ದರು. ಕಳೆದ ಸೀಸನ್ ನಲ್ಲಿ ರಣಜಿ ಟ್ರೋಫಿಯ ಪ್ಲೇಟ್ ಗುಂಪಿನಲ್ಲಿ ಅವರು ನಾಲ್ಕು ಪಂದ್ಯಗಳಲ್ಲಿ 16 ವಿಕೆಟ್ ಪಡೆದಿದ್ದಾರೆ. ಗೋವಾ ತಂಡವು ಪ್ಲೇಟ್ ವಿಭಾಗದ ಪ್ರಶಸ್ತಿಯನ್ನು ಗೆದ್ದುಕೊಂಡಿತ್ತು ಅರ್ಜುನ್ ಅವರು 2022ರಿಂದಲೂ ಗೋವಾ ತಂಡದಲ್ಲಿ ಆಡುತ್ತಿದ್ದಾರೆ. ಎಡಗೈ ಮಧ್ಯಮ ವೇಗದ ಬೌಲರ್ ಮತ್ತು ಎಡಗೈ ಬ್ಯಾಟರ್ ಆಗಿರುವ ಅವರು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 37 ವಿಕೆಟ್ ಮತ್ತು 532 ರನ್ ಗಳಿಸಿದ್ದಾರೆ. ಅರ್ಜುನ್ ತೆಂಡೂಲ್ಕರ್ ಅವರಿಗೆ ಈ ಹಿಂದೆ ಅವರು ತರಬೇತಿ ನೀಡಿದ್ದರು. ಗೋವಾ ಪರವಾಗಿ ಲಿಸ್ಟ್ ಎ ಕ್ರಿಕೆಟ್‌ ನಲ್ಲಿ ಅವರು 18 ಪಂದ್ಯಗಳಲ್ಲಿ 25 ವಿಕೆಟ್ ಮತ್ತು 102 ರನ್ ಗಳಿಸಿದ್ದಾರೆ. ಗೋವಾ ತಂಡಕ್ಕೆ ಬರುವ ಮೊದಲು ಅವರು ಮುಂಬೈ ಪರವಾಗಿ ಟಿ20 ಕ್ರಿಕೆಟ್ ಆಡಿದ್ದರು. ಅರ್ಜುನ್ IPLನಲ್ಲಿ ಮುಂಬೈ ಇಂಡಿಯನ್ಸ್ (MI) ತಂಡಕ್ಕೆ ಆಡಿದ್ದಾರೆ. ಅವರು 2021 ರಿಂದ MI ತಂಡದಲ್ಲಿದ್ದರೂ ಆದರೆ ಅವರಿಗೆ ಹೆಚ್ಚು ಆಡುವ ಅವಕಾಶ ಸಿಕ್ಕಿಲ್ಲ. ಹಾಗಾಗಿ ಗೋವಾ ತಂಡಕ್ಕೇ ಸೀಮಿತವಾಯ್ತೇ ಅವರ ಕ್ರಿಕೆಟ್ ಭವಿಷ್ಯ ಎಂಬ ಪ್ರಶ್ನೆಯೂ ಇದೀಗ ಹುಟ್ಟಿಕೊಂಡಿದೆ. ಇತ್ತೀಚೆಗಷ್ಟೇ ಅವರು ತಮ್ಮ ಬಾಲ್ಯದ ಗೆಳತಿ ಮಾಡಿಕೊಂಡಿದ್ದಾರೆ.ಆಗಸ್ಟ್ 28 ರಿಂದ 31 ರವರೆಗೆ ನಡೆಯುವ ಮೊದಲ ಪಂದ್ಯದಲ್ಲಿ ಶುಭಮನ್ ಗಿಲ್ ನೇತೃತ್ವದ ಉತ್ತರ ವಲಯವು ಪೂರ್ವ ವಲಯವನ್ನು ಎದುರಿಸಲಿದೆ. ಈಶಾನ್ಯ ವಲಯವು ಧ್ರುವ್ ಜುರೆಲ್ ನಾಯಕತ್ವದ ಕೇಂದ್ರ ವಲಯದ ವಿರುದ್ಧ ಆಡಲಿದೆ. ದುಲೀಪ್ ಟ್ರೋಫಿಯ ಫೈನಲ್ ಪಂದ್ಯ ಸೆಪ್ಟೆಂಬರ್ 11 ರಿಂದ 15 ರವರೆಗೆ ನಡೆಯಲಿದೆ. ಎಲ್ಲಾ ಪಂದ್ಯಗಳು ಬೆಂಗಳೂರಿನಲ್ಲಿರುವ ಬಿಸಿಸಿಐ ನ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ(NCA) ನಡೆಯಲಿವೆ. ದಕ್ಷಿಣ ವಲಯ ತಂಡ ತಿಲಕ್ ವರ್ಮ (ನಾಯಕ), ಮೊಹಮ್ಮದ್ ಅಜರುದ್ದೀನ್ ಜೂನಿಯರ್, ತನ್ಮಯ್ ಅಗರ್ವಾಲ್, ದೇವದತ್ತ್ ಪಡಿಕ್ಕಲ್, ಮೋಹಿತ್ ಕಾಳೆ, ಸಲ್ಮಾನ್ ನಿಜಾರ್, ನಾರಾಯಣ್ ಜಗದೀಸನ್, ಟಿ. ವಿಜಯ್, ಆರ್. ಸಾಯಿ ಕಿಶೋರ್, ತನಯ್ ತ್ಯಾಗರಾಜನ್, ವೈಶಾಕ್, ಎನ್.ಡಿ.ಪಿ.ಭೂಜಕುಮಾರ್, ಎಮ್.ಡಿ. ಸಿಂಗ್, ಸ್ನೇಹಲ್ ಕೌತಾಂಕರ್.ಮೀಸಲು ಆಟಗಾರರು- ಮೋಹಿತ್ ರೆಡ್ಕರ್, ಆರ್. ಸ್ಮರನ್, ಅಂಕಿತ್ ಶರ್ಮಾ, ಈಡನ್ ಆಪಲ್ ಟಾಮ್, ಆಂಡ್ರೆ ಸಿದ್ದಾರ್ಥ್, ಶೇಖ್ ರಶೀದ್.

ವಿಜಯ ಕರ್ನಾಟಕ 17 Aug 2025 1:27 pm

ಉಡುಪಿ: ಹಿರಿಯ ಪತ್ರಕರ್ತ ಎಚ್.ಮಂಜುನಾಥ ಭಟ್ ನಿಧನ

ಉಡುಪಿ, ಆ.17: ಹಿರಿಯ ಪತ್ರಕರ್ತ ಹಾರ್ಯಾಡಿ ಮಂಜುನಾಥ್ ಭಟ್ (72) ಅಲ್ಪಕಾಲದ ಅಸೌಖ್ಯದಿಂದ ಇಂದು ಬೆಳಗ್ಗೆ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. ಮೃತರು ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಬ್ರಹ್ಮಾವರ ತಾಲೂಕಿನ ಹಾರ್ಯಾಡಿಯಲ್ಲಿ 1953ರಲ್ಲಿ ಜನಿಸಿದ ಅವರು ಉಡುಪಿ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಪದವಿ ಪಡೆದ ಬಳಿಕ ಒಂದೆರಡು ವರ್ಷ ಹೈಸ್ಕೂಲ್ ಶಿಕ್ಷಕರಾಗಿದ್ದರು. 1977ರಲ್ಲಿ ಮಂಗಳೂರಿನ 'ನವಭಾರತ'ದ ಮೂಲಕ ಪತ್ರಿಕಾ ವೃತ್ತಿ ಪ್ರಾರಂಭಿಸಿದ ಮಂಜುನಾಥ್ ಭಟ್, ಮುಂದೆ ಮುಂಗಾರು, ಕನ್ನಡ ಜನ ಅಂತರಂಗ ಹಾಗೂ ಉದಯವಾಣಿ ಪತ್ರಿಕೆಗಳಲ್ಲಿ ವರದಿಗಾರರು, ಉಪಸಂಪಾದಕರಾಗಿ ಕಾರ್ಯ ನಿರ್ವಹಿಸಿದ್ದರು. ನಿವೃತ್ತಿಯ ಬಳಿಕ ಬೆಂಗಳೂರಿಗೆ ತೆರಳಿದ ಅವರು ಉತ್ಥಾನ ಮಾಸಪತ್ರಿಕೆ ಹಾಗೂ ರಾಷ್ಟ್ರೋತ್ಥಾನ ಸಾಹಿತ್ಯ ಸಂಪಾದಕೀಯ ವಿಭಾಗದಲ್ಲಿ ಕಾರ್ಯನಿರ್ವಹಿಸಿದ್ದರು. ಅಲ್ಲಿ ಅವರು ಹಲವು ಆಂಗ್ಲ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದರು. ಅಲ್ಲದೇ ಎಂಜಿಎಂ ಕಾಲೇಜಿನ ಪ್ರಾಧ್ಯಾಪಕರಾಗಿದ್ದ ಪ್ರೊ.ಬಿ.ವಿ.ಆಚಾರ್ಯ ಸೇರಿದಂತೆ ಹಲವರ ಜೀವನಚರಿತ್ರೆಯ ಸಂಪಾದಕರಾಗಿ ಅವರು ಕಾರ್ಯನಿರ್ವಹಿಸಿದ್ದರು.

ವಾರ್ತಾ ಭಾರತಿ 17 Aug 2025 1:22 pm

ಬಿ ಕೆ ಹರಿಪ್ರಸಾದ್ ಆರ್‌ಎಸ್‌ಎಸ್ ತಾಲಿಬಾನ್ ಹೇಳಿಕೆ; ಕಾಂಗ್ರೆಸ್‌ಗೆ ಪಿಎಫ್‌ಐ, ಸೆಮಿ ಮೇಲೆ ಅಪಾರ ಪ್ರೀತಿ: ಬಿಜೆಪಿ ತಿರುಗೇಟು

ಕಾಂಗ್ರೆಸ್ ಹಿರಿಯ ನಾಯಕ ಬಿ ಕೆ ಹರಿಪ್ರಸಾದ್ ಅವರ ಆರ್‌ಎಸ್‌ಎಸ್ ತಾಲಿಬಾನ್ ಹೇಳಿಕೆಗೆ ಬಿಜೆಪಿ ತಿರುಗೇಟು ನೀಡಿದೆ. ಕಾಂಗ್ರೆಸ್‌ನ ಮನಸ್ಥಿತಿಯೇ ತಾಲಿಬಾನ್ ಮನಸ್ಥಿತಿ. ಪಿಎಫ್‌ಐ ಮತ್ತು ಸೆಮಿಯಂತಹ ನಿಷೇಧಿತ ಮೂಲಭೂತವಾದಿ ಸಂಘಟನೆಗಳನ್ನು ಪ್ರೀತಿಸುತ್ತದೆ ಎಂದು ಬಿಜೆಪಿ ಹೇಳಿದೆ.

ವಿಜಯ ಕರ್ನಾಟಕ 17 Aug 2025 1:12 pm

ಗಾಝಾ ನಿವಾಸಿಗಳಿಗೆ ವೈದ್ಯಕೀಯ ವೀಸಾ ಸ್ಥಗಿತಗೊಳಿಸಿದ ಟ್ರಂಪ್ ಸರಕಾರ

ರಾಷ್ಟ್ರೀಯ ಭದ್ರತೆಗೆ ಬೆದರಿಕೆ ಎಂದು ಬಲಪಂಥೀಯ ಕಾರ್ಯಕರ್ತೆ ಆರೋಪಿಸಿದ ಬೆನ್ನಲ್ಲೇ ನಡೆದ ಬೆಳವಣಿಗೆ

ವಾರ್ತಾ ಭಾರತಿ 17 Aug 2025 1:09 pm

ಮಂಡ್ಯ | ಚಿನ್ನಾಭರಣ ಮಳಿಗೆಯಿಂದ ದರೋಡೆ: ಕೃತ್ಯ ನೋಡಿದ ವ್ಯಕ್ತಿಯನ್ನು ಕೊಲೆಗೈದು ಪರಾರಿಯಾದ ಕಳ್ಳರು

ಮಂಡ್ಯ: ಚಿನ್ನಾಭರಣ ಮಳಿಗೆಯಿಂದ ದರೋಡೆಗೆ ಬಂದಿದ್ದ ಕಳ್ಳರು ತಮ್ಮ ಕೃತ್ಯವನ್ನು ನೋಡಿದ ವ್ಯಕ್ತಿಯೊಬ್ಬರನ್ನು ಕೊಲೆಗೈದು ಪರಾರಿಯಾದ ಆಘಾತಕಾರಿ ಘಟನೆ ಮಳವಳ್ಳಿ ತಾಲೂಕಿನ ಕಿರುಗಾವಲು ಗ್ರಾಮದಲ್ಲಿ ಶನಿವಾರ ತಡರಾತ್ರಿ ನಡೆದಿದೆ.   ಕಿರುಗಾವಲು ಗ್ರಾಮದ ಮಹದೇಶ್ವರ ಹೋಟೆಲ್ ಮಾಲಕ ಮಾದಪ್ಪ(75) ಕೊಲೆಯಾದವರು. ಕಿರುಗಾವಲು ಗ್ರಾಮದ ಮುಖ್ಯರಸ್ತೆಯಲ್ಲಿರುವ ಮಹಾಲಕ್ಷ್ಮೀ ಜ್ಯುವೆಲರ್ಸ್ ಆಂಡ್ ಬ್ಯಾಂಕರ್ಸ್ ಗೆ ಶನಿವಾರ ತಡರಾತ್ರಿ 2 ಗಂಟೆ ವೇಳೆ ಕಳ್ಳರು ನುಗ್ಗಿದ್ದಾರೆ. ದರೋಡೆಕೋರರು ಜ್ಯುವೆಲ್ಲರಿಯ ಬಾಗಿಲನ್ನು ಗ್ಯಾಸ್ ಕಟ್ಟರ್ ನಿಂದ ಮುರಿದು ಒಳನುಗ್ಗಿದ್ದಾರೆ. ಇದೇವೇಳೆ ಶಬ್ದ ಕೇಳಿ ಪಕ್ಕದಲ್ಲಿರುವ ಮಹದೇಶ್ವರ ಹೋಟೇಲ್ ಮಾಲಕ ಮಾದಪ್ಪ ಹೊರಬಂದಿದ್ದಾರೆ. ದರೋಡೆಕೋರರು ಮಾದಪ್ಪರಿಗೆ ಹಲ್ಲೆ ಮಾಡಿ ಕತ್ತು ಹಿಸುಕಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.   ಚಿನ್ನಾಭರಣ ಮಳಿಗೆಯಿಂದ 150 ಗ್ರಾಂ ಚಿನ್ನ, 2 ಕೆಜಿ ಬೆಳ್ಳಿ, ಹಿತ್ತಾಳೆ ಹಾಗೂ ಸುಮಾರು 30 ಸಾವಿರ ರೂ. ಮೌಲ್ಯದ ಕೃತಕ ಚಿನ್ನದ ಒಡವೆಗಳನ್ನು ದೋಚಿದ್ದಾರೆ. ಜೊತೆಗೆ ಅಂಗಡಿಯಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮರಾದ ಡಿವಿಆರ್ ಅನ್ನೂ ಕೊಂಡೊಯ್ದಿದ್ದಾರೆ ಎಂದು ಚಿನ್ನದ ಅಂಗಡಿ ಮಾಲಕ ಶೇಷರಾವ್ ತಿಳಿಸಿದ್ದಾರೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಡಿವೈಎಸ್ಪಿ ವಿ.ಕೃಷ್ಣಪ್ಪ, ಸಿಪಿಐ ಬಿ.ಎಸ್.ಶ್ರೀಧರ್, ಪಿಎಸ್ಸೈ ಡಿ.ರವಿಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.   ಕಿರುಗಾವಲು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಸ್ಥಳಕ್ಕೆ ಬೆರಳಚ್ಚು ತಜ್ಞರು, ಶ್ವಾನದಳ ಸಿಬ್ಬಂದಿ ಆಗಮಿಸಿದ್ದು, ಪರಿಶೀಲನೆ ನಡೆಸಿದ್ದಾರೆ.

ವಾರ್ತಾ ಭಾರತಿ 17 Aug 2025 12:34 pm

Heavy Rain Alert: ಈ ಭಾಗಗಳಲ್ಲಿ ಧಾರಾಕಾರ ಮಳೆ: ರೆಡ್ ಅಲರ್ಟ್ ನೀಡಿದ ಐಎಂಡಿ, ವೆದರ್ ರಿಪೋರ್ಟ್ !

Heavy Rain Alert: ಭಾರತದಾದ್ಯಂತ ಮಳೆ ಆರ್ಭಟ ಮುಂದುವರಿದಿದೆ. ಚಂಡಮಾರುತದ ಪ್ರಸರಣದಿಂದಾಗಿ ದೇಶದಾದ್ಯಂತ ಧಾರಾಕಾರ ಮಳೆ ಮುಂದುವರಿದಿದೆ. ಕರ್ನಾಟಕವೂ ಸೇರಿದಂತೆ ದಕ್ಷಿಣ ಭಾರತದ ವಿವಿಧ ಭಾಗದಲ್ಲಿ ಮಳೆ ಆರ್ಭಟ ಮುಂದುವರಿದಿದೆ. ಇನ್ನೊಂದು ವಾರ ಮಳೆ ಇದೇ ರೀತಿ ಮುಂದುವರಿಯುವ ಸಾಧ್ಯತೆ ಇದೆ. ಮಹಾರಾಷ್ಟ್ರ ಹಾಗೂ ಹಿಮಾಚಲ ಪ್ರದೇಶದಲ್ಲಿ ಮಳೆ ಆರ್ಭಟ ಮುಂದುವರಿದಿದೆ. ದೇಶದಲ್ಲಿ ಹವಾಮಾನ ಹೇಗಿದೆ ಎನ್ನುವ

ಒನ್ ಇ೦ಡಿಯ 17 Aug 2025 12:29 pm

ಮಿಲಿಟರಿ ತರಬೇತಿ ವೇಳೆ ಗಾಯಗೊಂಡು ಸೇನೆಯಿಂದ ಹೊರಗುಳಿದು ಸಂಕಷ್ಟದಲ್ಲಿರುವ ಕೆಡೆಟ್‌ಗಳು: ವರದಿ ಬೆನ್ನಲ್ಲೇ ಸ್ವಯಂಪ್ರೇರಿತವಾಗಿ ವಿಚಾರಣೆ ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್

ಹೊಸದಿಲ್ಲಿ: ಸೇನಾ ತರಬೇತಿ ಸಮಯದಲ್ಲಿ ಗಾಯಗೊಂಡು ವೈದ್ಯಕೀಯ ಕಾರಣದಿಂದ ಮಿಲಿಟರಿ ಸಂಸ್ಥೆಗಳಿಂದ ಬಿಡುಗಡೆಯಾದ ಕೆಡೆಟ್‌ಗಳು ಎದುರಿಸುತ್ತಿರುವ ತೊಂದರೆಗಳ ಬಗ್ಗೆ ಸುಪ್ರೀಂ ಕೋರ್ಟ್ ಸ್ವಯಂಪ್ರೇರಿತವಾಗಿ ವಿಚಾರಣೆಗೆ ಕೈಗೆತ್ತಿಕೊಂಡಿದೆ. ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ಆರ್. ಮಹಾದೇವನ್ ಅವರ ಪೀಠವು ಸೋಮವಾರ ವಿಚಾರಣೆ ನಡೆಸಲಿದೆ. ರಾಷ್ಟ್ರೀಯ ರಕ್ಷಣಾ ಅಕಾಡೆಮಿ (ಎನ್‌ಡಿಎ) ಮತ್ತು ಭಾರತೀಯ ಮಿಲಿಟರಿ ಅಕಾಡೆಮಿ (ಐಎಂಎ)ಯಂತಹ ದೇಶದ ಉನ್ನತ ಮಿಲಿಟರಿ ಸಂಸ್ಥೆಗಳಲ್ಲಿ ತರಬೇತಿಯ ಭಾಗವಾಗಿದ್ದ ಕೆಡೆಟ್‌ಗಳ ಸಮಸ್ಯೆ ಬಗ್ಗೆ ಮಾಧ್ಯಮ ವರದಿಯ ನಂತರ ಸುಪ್ರೀಂ ಕೋರ್ಟ್ ಈ ಕುರಿತು ಸ್ವಯಂಪ್ರೇರಿತವಾಗಿ ವಿಚಾರಣೆಗೆ ಕೈಗೆತ್ತಿಕೊಂಡಿದೆ. ಮಾಧ್ಯಮ ವರದಿಯ ಪ್ರಕಾರ, 1985ರಿಂದ ಇಂದಿನವರೆಗೆ ತರಬೇತಿಯ ಸಮಯದಲ್ಲಿ ಉಂಟಾದ ಅಂಗವೈಕಲ್ಯ ಅಥವಾ ಗಾಯಗಳಿಂದ ಮಿಲಿಟರಿ ಸಂಸ್ಥೆಗಳಿಂದ ಸುಮಾರು 500 ಕೆಡೆಟ್‌ಗಳನ್ನು ಬಿಡುಗಡೆ ಮಾಡಲಾಗಿದೆ. ಅವರಿಗೆ ತೀರಾ ಕಡಿಮೆ ಮಾಸಿಕ ಪರಿಹಾರ ಧನ ನೀಡಲಾಗುತ್ತಿದೆ ಎಂದು ಹೇಳಿದೆ. ರಾಷ್ಟ್ರೀಯ ರಕ್ಷಣಾ ಅಕಾಡೆಮಿಯೊಂದರಲ್ಲೇ 2021 ಮತ್ತು ಜುಲೈ 2025ರ ನಡುವೆ ಕೇವಲ ಐದು ವರ್ಷಗಳಲ್ಲಿ ಇದೇ ರೀತಿಯಾಗಿ ಸುಮಾರು 20 ಕೆಡೆಟ್‌ಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ವರದಿಯು ಉಲ್ಲೇಖಿಸಿತ್ತು. ಅಧಿಕೃತ ಅಧಿಕಾರಿಗಳಾಗಿ ನೇಮಕವಾಗುವ ಮೊದಲೇ ಗಾಯಗೊಂಡು ಸೇನೆಯಿಂದ ಹೊರಗುಳಿದ ಕಾರಣ ಇವರನ್ನು ಮಾಜಿ ಸೈನಿಕ ಎಂದು ಪರಿಗಣಿಸಲಾಗುವುದಿಲ್ಲ. ಮಾಜಿ ಸೈನಿಕರಿಗೆ ಸಿಗುವ ವೈದ್ಯಕೀಯ ನೆರವು ಇವರಿಗೆ ಸಿಗುವುದಿಲ್ಲ. ಇದರಿಂದ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ ಎಂದು ವರದಿಯು ಬಹಿರಂಗಪಡಿಸಿತ್ತು.

ವಾರ್ತಾ ಭಾರತಿ 17 Aug 2025 12:18 pm

ಗುರುಗ್ರಾಮ |ಯೂಟ್ಯೂಬರ್ ಎಲ್ವಿಶ್ ಯಾದವ್ ನಿವಾಸದ ಮೇಲೆ ಗುಂಡಿನ ದಾಳಿ

ಗುರುಗ್ರಾಮ: ಯೂಟ್ಯೂಬರ್ ಎಲ್ವಿಶ್ ಯಾದವ್ ಅವರ ಸೆಕ್ಟರ್ 57ರ ನಿವಾಸದ ಮೇಲೆ ಬೈಕ್ ನಲ್ಲಿ ಬಂದ ಮೂವರು ಅಪರಿಚಿತ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ರವಿವಾರ ಬೆಳಗ್ಗೆ ಎಲ್ವಿಶ್ ಯಾದವ್ ನಿವಾಸದ ಮೇಲೆ 12 ಸುತ್ತಿನ ಗುಂಡಿನ ದಾಳಿ ನಡೆಸಿದ ದುಷ್ಕರ್ಮಿಗಳು, ನಂತರ ಸ್ಥಳದಿಂದ ಪರಾರಿಯಾಗಿದ್ದಾರೆ. ಘಟನೆ ನಡೆದಾಗ ಎಲ್ವಿಶ್ ಯಾದವ್ ತಮ್ಮ ಮನೆಯಲ್ಲಿರಲಿಲ್ಲ. ಅವರು ಕುಟುಂಬಸ್ಥರು ಮಾತ್ರ ಇದ್ದರು. ಈ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ಅವರು ಹೇಳಿದ್ದಾರೆ. “ಈ ಘಟನೆಗೂ ಮುನ್ನ ಎಲ್ವಿಶ್ ಯಾದವ್ ಗೆ ಯಾವುದೇ ರೀತಿಯ ಬೆದರಿಕೆ ಬಂದಿರಲಿಲ್ಲ. ಅವರು ಸದ್ಯ ಹರ್ಯಾಣದ ಹೊರಗಿದ್ದಾರೆ” ಎಂದು ಕುಟುಂಬದ ಸದಸ್ಯರು ಮಾಹಿತಿ ನೀಡಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆಯೇ ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಸಿಸಿಟಿವಿ ದೃಶ್ಯಾತವಳಿಗಳನ್ನು ಪರಿಶೀಲಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದು, ಹೆಚ್ಚಿನ ತನಿಖೆ ಮಾಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಾರ್ತಾ ಭಾರತಿ 17 Aug 2025 12:11 pm

ವಿಟ್ಲ: ಇಂಟೀರಿಯರ್ ಡಿಸೈನರ್ ಆತ್ಮಹತ್ಯೆ

ವಿಟ್ಲ: ವ್ಯಕ್ತಿಯೊಬ್ಬರು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಟ್ಲ ಚಂದಳಿಕೆ ಸಿಪಿಸಿಆರ್ಐ ಬಳಿ ರವಿವಾರ ಬೆಳಗ್ಗೆ ನಡೆದಿದೆ. ಮೃತರನ್ನು ಸಿಪಿಸಿಆರ್ಐ ನಿವಾಸಿ, ಇಂಟೀರಿಯರ್ ಡಿಸೈನ್ ಇಂಜಿನಿಯರ್ ಕಿಶನ್ ಭಟ್ (55) ಎಂದು ಗುರುತಿಸಲಾಗಿದೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆತ್ಮಹತ್ಯೆಯ ಯೋಚನೆ ಬಂದಾಗ ಅದನ್ನು ನಿಗ್ರಹಿಸಲು ರಾಜ್ಯ ಸರಕಾರದ ಅರೋಗ್ಯ ಇಲಾಖೆಯ ಹೆಲ್ಪ್ ಲೈನ್ 104 ಸಹಾಯ ಮಾಡುತ್ತದೆ. ಅದರ ಜೊತೆಗೆ Tele-MANAS ನ 14416 ಅನ್ನೂ ಸಂಪರ್ಕಿಸಬಹುದು.

ವಾರ್ತಾ ಭಾರತಿ 17 Aug 2025 12:01 pm

Anaya Bangar- ಮಹಿಳಾ ಕ್ರಿಕೆಟ್ ನಲ್ಲಿ ಚಾನ್ಸ್ ಸಿಗುತ್ತಾ ಎಂದು ಕೇಳಿದ್ದ ಸಂಜಯ್ ಬಂಗಾರ್ ಪುತ್ರಿ ಈಗ ಬಿಗ್ ಬಾಸ್ ಗೆ ಎಂಟ್ರಿ!

Anaya Bangar BIg Boss 19 Entry- ಸಂಜಯ್ ಬಂಗಾರ್ ಅವರ ಪುತ್ರಿ ಲಿಂಗ ಪರಿವರ್ತನೆ ಮಾಡಿಕೊಂಡು ಹೆಣ್ಣಾಗಿರುವ ಅನಯಾ ಬಂಗಾರ್ ಬಿಗ್ ಬಾಸ್ ಎಂಟ್ರಿ ಕೊಡುತ್ತಿದ್ದಾರಂತೆ!. ಹೌದು ಇತ್ತೀಚೆಗಷ್ಟೇ ಅವರು ತನಗೆ ಮಹಿಳಾ ಕ್ರಿಕೆಟ್ ನಲ್ಲಿ ಆಡಲು ಅವಕಾಶ ನೀಡಬೇಕೆಂದು ಆಗ್ರಹಿಸಿದ್ದರು. ಆದಾಗಿ ಕೆಲ ದಿನಗಳಲ್ಲೇ ಈಗ ರಿಯಾಲಿಟಿ ಶೋದಲ್ಲಿ ಸ್ಪರ್ಧಿಯಾಗಿ ಕಾಣಿಸಿಕೊಳ್ಳುವುದು ಪಕ್ಕಾ ಎಂದು ಎಕಾನಮಿಕ್ಸ್ ಟೈಮ್ಸ್ ವರದಿ ಮಾಡಿದೆ. ಹಾಗಿದ್ದರೆ ಏನಿದರ ಹೂರಣ? ಇಲ್ಲಿದೆ ನೋಡಿ ಮಾಹಿತಿ.

ವಿಜಯ ಕರ್ನಾಟಕ 17 Aug 2025 12:00 pm

RCB Yash Dayal: ಆರ್‌ಸಿಬಿ ಮಾರಕ ಬೌಲರ್ ಯಶ್‌ ದಯಾಳ್ ಲೀಗ್‌ನಿಂದ ಔಟ್: ಅಧಿಕೃತ ಘೋಷಣೆ

RCB Yash Dayal Banned From League: ಐಪಿಎಲ್‌ 2025 ಫೈನಲ್‌ ಪಂದ್ಯದಲ್ಲಿ ಆರ್‌ಸಿಬಿ ಭರ್ಜರಿಯಾಗಿ ಗೆದ್ದು ಚೊಚ್ಚಲ ಟ್ರೋಫಿಗೆ ಮುತ್ತಿಟ್ಟಿತು. ಈ ಮೂಲಕ ಟ್ರೋಫಿ ಇಲ್ಲ ಕೊರಗನ್ನು ಕೊನೆಗೂ ದೂರ ಮಾಡಿದೆ. ಆದರೆ, ಈ ನಡುವೆಯೇ ತಂಡದ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದ ಮಾರಕ ಬೌಲರ್ ಯಶ್‌ ದಯಾಳ್‌ ಅವರನ್ನು ಲೀಗ್‌ನಿಂದ ಬ್ಯಾನ್‌ ಮಾಡಲಾಗಿದೆ. ಹಾಗಾದ್ರೆ,

ಒನ್ ಇ೦ಡಿಯ 17 Aug 2025 11:58 am

ಧರ್ಮಸ್ಥಳ ಕ್ಷೇತ್ರದ ಅಪಪ್ರಚಾರಕ್ಕೆ ತಕ್ಷಣ ಕಡಿವಾಣ ಹಾಕಬೇಕು: ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಆಗ್ರಹ

ಬಿಜೆಪಿ ಮುಖಂಡರ ಕ್ಷೇತ್ರ ಭೇಟಿ: ಧರ್ಮಸ್ಥಳದ ಬಗ್ಗೆ ನಡೆಯುತ್ತಿರುವ ಅಪಪ್ರಚಾರದಿಂದ ಭಕ್ತರಲ್ಲಿ ಗೊಂದಲ ಉಂಟಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ. ಎಸ್ಐಟಿ ತನಿಖೆಯನ್ನು ಸ್ವಾಗತಿಸುವುದಾಗಿ ತಿಳಿಸಿದ ಅವರು, ತನಿಖೆ ಪಾರದರ್ಶಕವಾಗಿ ನಡೆಯಬೇಕು ಎಂದು ಆಗ್ರಹಿಸಿದ್ದಾರೆ. ಈ ಷಡ್ಯಂತ್ರದ ಹಿಂದೆ ಯಾರಿದ್ದಾರೆ ಎಂಬುದರ ಬಗ್ಗೆಯೂ ತನಿಖೆ ನಡೆಯಲಿ ಎಂದು ಒತ್ತಾಯಿಸಿದ್ದಾರೆ.

ವಿಜಯ ಕರ್ನಾಟಕ 17 Aug 2025 11:51 am

ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೊಂದು ಮೇಘಸ್ಫೋಟ: ಏಳು ಮಂದಿ ಮೃತ್ಯು

ಶ್ರೀನಗರ: ರವಿವಾರ ಮುಂಜಾನೆ ಜಮ್ಮು–ಕಾಶ್ಮೀರದ ಕಥುವಾ ಜಿಲ್ಲೆಯ ದೂರದ ಗ್ರಾಮವೊಂದರಲ್ಲಿ ಮೇಘ ಸ್ಫೋಟ ಸಂಭವಿಸಿದ್ದು, ಈ ಘಟನೆಯಲ್ಲಿ ಏಳು ಮಂದಿ ಮೃತಪಟ್ಟು, ಹಲವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ. ರಾತ್ರಿ ಸುರಿದ ಭಾರಿ ಮಳೆಯ ನಂತರ ಈ ಘಟನೆ ನಡೆದಿದ್ದು, ಭಾರಿ ಮಳೆಯಿಂದಾಗಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕೊಚ್ಚಿಕೊಂಡು ಹೋಗಿದೆ ಹಾಗೂ ಜಮೀನು ಮತ್ತು ಆಸ್ತಿಪಾಸ್ತಿಗಳಿಗೆ ಹಾನಿಯುಂಟಾಗಿದೆ. ಶನಿವಾರ ಮಧ್ಯರಾತ್ರಿ ರಾಜ್ ಬಾಗ್ ಪ್ರದೇಶದಲ್ಲಿ ಮೇಘ ಸ್ಫೋಟ ಸಂಭವಿಸಿದೆ. ಸುದ್ದಿ ತಿಳಿಯುತ್ತಿದ್ದಂತೆಯೇ, ಕಡಿದಾದ ಕಣಿವೆ ಪ್ರದೇಶದಲ್ಲಿರುವ ಈ ಗ್ರಾಮದಲ್ಲಿ ಪೊಲೀಸರು, ರಾಜ್ಯ ವಿಪತ್ತು ನಿರ್ವಹಣಾ ಪಡೆ ಹಾಗೂ ಸ್ಥಳೀಯ ಸ್ವಯಂಸೇವಕರ ಜಂಟಿ ತಂಡವು ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ. ಘಟನೆಯಲ್ಲಿ ಗಾಯಗೊಂಡಿದ್ದ ಆರು ಮಂದಿಯನ್ನು ರಕ್ಷಿಸಿ, ಅವರನ್ನೆಲ್ಲ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದಕ್ಕೆ ಸಂಬಂಧಪಟ್ಟಂತೆಯೇ ನಡೆದಿರುವ ಇತರ ಘಟನೆಗಳಲ್ಲಿ ಕಥುವಾ ಪೊಲೀಸ್ ಠಾಣೆ ವ್ಯಾಪ್ತಿಯ ಬಗಾರ್ದ್ ಹಾಗೂ ಚಂಗ್ಡಾ ಗ್ರಾಮಗಳು ಹಾಗೂ ಲಖನ್ ಪುರ್ ನ ದಿಲ್ವಾನ್-ಹುಟ್ಲಿ ಪ್ರದೇಶದಲ್ಲಿ ಭೂಕುಸಿತ ಸಂಭವಿಸಿದೆ. 

ವಾರ್ತಾ ಭಾರತಿ 17 Aug 2025 11:48 am

ಕಡಬ ಪಟ್ಟಣ ಪಂಚಾಯತ್ ಚುನಾವಣೆ: 11 ಗಂಟೆ ವೇಳೆ ಶೇ. 35.61 ಮತದಾನ

ಕಡಬ, ಆ.17: ಇದೇ ಮೊದಲ ಬಾರಿಗೆ ಕಡಬ ಪಟ್ಟಣ ಪಂಚಾಯತ್ ಗೆ ಚುನಾವಣೆಯು ನಡೆಯುತ್ತಿದ್ದು, ಬೆಳಗ್ಗೆ 7ರಿಂದ ಮತದಾನ ಆರಂಭಗೊಂಡಿದೆ. ಪೂರ್ವಾಹ್ನ 11 ಗಂಟೆಯ ವೇಳೆ ಶೇ.35 ಮತದಾನವಾಗಿದೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.   ಕಡಬ ಪಟ್ಟಣ ಪಂಚಾಯತ್ ನಲ್ಲಿ 13 ವಾರ್ಡ್ ಗಳಿದ್ದು, ಚುನಾವಣಾ ಕಣದಲ್ಲಿ ಒಟ್ಟು 32 ಅಭ್ಯರ್ಥಿಗಳಿದ್ದಾರೆ. ಒಟ್ಟು 8,334 ಅರ್ಹ ಮತದಾರರಿದ್ದು, ಈ ಪೈಕಿ 4,018 ಪುರುಷ ಹಾಗೂ 4,316 ಮಹಿಳಾ ಮತದಾರರಾಗಿದ್ದಾರೆ. ವಾರ್ಡ್ ವಾರು ಶೇ. ಮತದಾನ(11 ಗಂಟೆ ವೇಳೆ) : ಕಳಾರ ಶೇ.32.47, ಕೋಡಿಬೈಲು ಶೇ. 36.46, ಪನ್ಯ 42.86, ಬೆದ್ರಾಜೆ 45.36, ಮಾಲೇಶ್ವರ 32.65, ಕಡಬ 34.54, ಪಣೆಮಜಲು 39.95, ಪಿಜಕಳ 40.88 ಮೂರಾಜೆ 38.1, ದೊಡ್ಡಕೊಪ್ಪ 30.66, ಕೋಡಿಂಬಾಳ 36.38, ಮಜ್ಕಾರು 29.57 ಪುಳಿಕುಕ್ಕು 28.38 ಮತದಾನವಾಗಿದೆ.

ವಾರ್ತಾ ಭಾರತಿ 17 Aug 2025 11:43 am

ಪಿಓಪಿ ಗಣೇಶ ಬೇಡ, ಪರಿಸರ ದೃಷ್ಟಿಯಿಂದ ಮಣ್ಣಿನ ಗಣಪನ ಪೂಜಿಸಿ : ರಾಜ್ಯದ ಜನರಿಗೆ ಈಶ್ವರ್ ಖಂಡ್ರೆ ಮನವಿ

ಇದೀಗ ಎಲ್ಲೆಡೆ ಗೌರಿ ಗಣೇಶ ಹಬ್ಬದ ಸಂಭ್ರಮ ಮನೆ ಮಾಡಿದೆ. ಗೌರಿ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಪಿಓಪಿ ಗಣೇಶ ಬೇಡ, ಪರಿಸರ ದೃಷ್ಟಿಯಿಂದ ಮಣ್ಣಿನ ಗಣಪನ ಪೂಜಿಸಿ ಎಂದು ರಾಜ್ಯದ ಹಿಂದೂ ಬಾಂಧವರಿಗೆ ಈಶ್ವರ್ ಖಂಡ್ರೆ ಮನವಿ ಮಾಡಿದ್ದಾರೆ. ಪಿಓಪಿ ಗಣೇಶ ವಿಗ್ರಹಗಳನ್ನು ಕ್ಯಾಲ್ಷಿಯಂ, ಸಲ್ಫೇಟ್ ಹಾಗೂ ಹೆಮಿಹೈಡ್ರೇಟ್ ಯುಕ್ತ ಪುಡಿಯಿಂದ ತಯಾರಿಸಲಾಗುತ್ತದೆ ಎಂದು ಅವರು ವಿವರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬಣ್ಣರಹಿತ ಮಣ್ಣಿನ ಮೂರ್ತಿಗಳನ್ನೇ ಪೂಜಿಸುವಂತೆ ಅವರು ಇದೇ ಸಂದರ್ಭದಲ್ಲಿ ಮನವಿ ಮಾಡಿದ್ದಾರೆ.

ವಿಜಯ ಕರ್ನಾಟಕ 17 Aug 2025 11:43 am

ದಿಲ್ಲಿಯಲ್ಲಿಂದು 11,000 ಕೋಟಿ ರೂ ವೆಚ್ಚದ ಎರಡು ದೊಡ್ಡ ಹೆದ್ದಾರಿ ಯೋಜನೆಗೆ ಪಿಎಂ ಮೋದಿ ಚಾಲನೆ

ಪ್ರಧಾನಿ ಮೋದಿ ಇಂದು ಹೊಸದಿಲ್ಲಿಯಲ್ಲಿ ಸುಮಾರು 11,000 ಕೋಟಿ ರೂಪಾಯಿ ವೆಚ್ಚದ ಎರಡು ದೊಡ್ಡ ಹೆದ್ದಾರಿ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ. ದ್ವಾರಕಾ ಎಕ್ಸ್‌ಪ್ರೆಸ್‌ವೇಯ 10.1 ಕಿಮೀ ದೆಹಲಿ ವಿಭಾಗ ಮತ್ತು ಯುಇಆರ್ - ಐಐ ಪ್ರಮುಖ ಮಾರ್ಗವನ್ನು ಸುಮಾರು 11,000 ಕೋಟಿ ರೂಪಾಯಿಗಳ ಒಟ್ಟು ವೆಚ್ಚದಲ್ಲಿ ನಿರ್ಮಿಸಲಾಗಿದ್ದು, ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವ ಮತ್ತು ರಾಜಧಾನಿಯ ಸಂಪರ್ಕವನ್ನು ಸುಧಾರಿಸುವ ಗುರಿಯನ್ನು ಹೊಂದಿದೆ.

ವಿಜಯ ಕರ್ನಾಟಕ 17 Aug 2025 11:42 am

ಯುವಕರಿಗೆ ಮತದಾನದ ಹಕ್ಕು, ತಂತ್ರಜ್ಞಾನ ಕ್ರಾಂತಿ ಮಾಡಿದ್ದು ರಾಜೀವ್ ಗಾಂಧಿ: ಡಿಸಿಎಂ ಡಿಕೆಶಿ

ಬೆಂಗಳೂರು: 'ರನ್ ಫಾರ್ ರಾಜೀವ್' ಮ್ಯಾರಥಾನ್ ಗೆ ಚಾಲನೆ

ವಾರ್ತಾ ಭಾರತಿ 17 Aug 2025 11:26 am

ಹೆಬ್ಬಾಳ ಮೇಲ್ಸೇತುವೆ ಉದ್ಘಾಟನೆಯಿಂದ ಶೇ 30 ರಷ್ಟು ಸಂಚಾರ ಸಲೀಸು: ಆದರೆ ಮೇಖ್ರಿ ವೃತ್ತದ ರಸ್ತೆಯ ಅಗಲೀಕರಣಕ್ಕೆ ಹೆಚ್ಚಿದ ಒತ್ತಡ! ಯಾಕೆ ಗೊತ್ತಾ?

ಹೆಬ್ಬಾಳದ ಹೊಸ ಮೇಲ್ಸೇತುವೆ ರ್ಯಾಂಪ್ ಸೋಮವಾರ ಉದ್ಘಾಟನೆಗೊಳ್ಳಲಿದ್ದು, ಇದರಿಂದ ಹೆಬ್ಬಾಳದ ಟ್ರಾಫಿಕ್ ದಟ್ಟಣೆ ಶೇಕಡಾ 30 ರಷ್ಟು ಕಡಿಮೆಯಾಗುವ ನಿರೀಕ್ಷೆಯಿದೆ. ಆದರೆ, ಮೇಖ್ರಿ ಸರ್ಕಲ್‌ನಲ್ಲಿ ದಟ್ಟಣೆ ಹೆಚ್ಚಾಗುವ ಸಾಧ್ಯತೆಯಿದೆ. ಸಂಚಾರ ಪೊಲೀಸರ ಪ್ರಕಾರ, ಮೇಖ್ರಿ ಸರ್ಕಲ್ ರಸ್ತೆಯನ್ನು ವಿಸ್ತರಿಸುವುದು ಮುಖ್ಯವಾಗಿದೆ, ಇಲ್ಲದಿದ್ದರೆ ಟ್ರಾಫಿಕ್ ಜಾಮ್ ಇನ್ನೊಂದು ಕಡೆಗೆ ಸ್ಥಳಾಂತರವಾಗುತ್ತದೆ.

ವಿಜಯ ಕರ್ನಾಟಕ 17 Aug 2025 11:23 am

ಅತಿರೇಕದ ಅಭಿಮಾನ ಅನಾಹುತಕ್ಕೆ ಆಹ್ವಾನ

ಮಂಗಳೂರು ಕೆಲ ದಿನಗಳ ಹಿಂದೆ ವಸತಿ ಸಚಿವ ರಾಜಣ್ಣ ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡಲಾಯಿತು. ಇದು ಅವರ ಅಭಿಮಾನಿಗಳನ್ನು ರೊಚ್ಚಿಗೆಬ್ಬಿಸಿತು. ಬೆಂಬಲಿಗರನೇಕರು ಈ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿ ಕಟುವಾಗಿ ಪ್ರತಿಕ್ರಿಯಿಸಿದರು. ಅಭಿಮಾನಿ ಬಳಗ ತುಮಕೂರಿನಲ್ಲಿ ಪ್ರತಿಭಟನೆ ಮೆರವಣಿಗೆಯನ್ನೂ ನಡೆಸಿತು. ಇವೆಲ್ಲವೂ ಸರಿ. ಈ ಸಂದರ್ಭದಲ್ಲಿ ಒಬ್ಬ ಅಭಿಮಾನಿ ಮೈ ಮೇಲೆ ಪೆಟ್ರೋಲ್ ಸುರಿದು ಕೊಂಡ. ಇನ್ನೊಬ್ಬ ವಿಷ ಸೇವಿಸಿದ. ಇವರಿಬ್ಬರೂ ಆತ್ಮಹತ್ಯೆ ಮಾಡಿ ಕೊಳ್ಳಲು ಪ್ರಯತ್ನಿಸಿದವರು. ಜತೆಯಲ್ಲಿದ್ದವರು ಅವರನ್ನು ಹೇಗೋ ಪ್ರಾಣಾಪಾಯದಿಂದ ಪಾರು ಮಾಡಿದರು ಎನ್ನಿ. ನಿಜಕ್ಕೂ ಇಂತಹ ಅತಿರೇಕದ ಅಭಿಮಾನ ಅಗತ್ಯವಿತ್ತೇ? ಈ ಮಾದರಿಯ ಅಭಿಮಾನದ ಒಟ್ಟು ಫಲಿತಾಂಶ ಶೂನ್ಯವೆಂದು ಅಭಿಮಾನಿಗಳೆನಿಸಿ ಕೊಂಡವರಿಗೆ ಯಾಕೆ ಅರ್ಥವಾಗುತ್ತಿಲ್ಲ? ರಾಜಣ್ಣರವರು ಮತ್ತೆ ಸಚಿವರಾಗ ಬಹುದು ಅಥವಾ ಅದಕ್ಕಿಂತಲೂ ಎತ್ತರದ ಸ್ಥಾನಕ್ಕೇರ ಬಹುದು. ಸ್ಥಾನಮಾನಗಳು ಕೈ ತಪ್ಪಿತೆಂದರೆ ಅದು ಅಂತಿಮವಲ್ಲ. ಆದರೆ ಇಂಥವರ ಮೇಲೆ ಅಭಿಮಾನ ಇಟ್ಟುಕೊಂಡವನೊಬ್ಬ ಇದಕ್ಕಾಗಿಯೇ ಪ್ರಾಣ ಕಳೆದು ಕೊಂಡರೆ, ಹೋದ ಜೀವ ಮತ್ತೆ ಬಂದೀತೇ? ಇದರಿಂದ ಇವರನ್ನೇ ನಂಬಿರುವ ಕುಟುಂಬದ ಪಾಡು ಏನಾಗ ಬಹುದು? ಭಾವನೆ ಎಂಬುದು ತರ್ಕದ ವೈರಿಯಿದ್ದಂತೆ. ಯಾವುದೇ ವಿಚಾರದಲ್ಲಿ ನಾವು ಭಾವನೆಗಳ ಸುಳಿಗೆ ಸಿಲುಕಿ ವಿವೇಚನೆಯಿಲ್ಲದೆ ನಡೆದು ಕೊಂಡರೆ ಪರಿಣಾಮ ಚೆನ್ನಾಗಿರುವುದಿಲ್ಲ. ಬದಲಾಗಿ ಅದು ವೈಯಕ್ತಿಕವಾಗಿಯೂ ಸಾಮಾಜಿಕವಾಗಿಯೂ ಅಹಿತಕಾರಿ ಬೆಳವಣಿಗೆಗಳಿಗೆ ಕಾರಣವಾಗ ಬಹುದು. ಇದನ್ನು ಸಮರ್ಥಿಸುವಂತಹ ಅನೇಕ ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ. ಅದು ನಮಗೆ ಪಾಠವಾಗ ಬೇಕು. ನಮ್ಮಲ್ಲಿ ಕೆಲವು ಮಂದಿ ಅಭಿಮಾನಿಗಳೆನಿಸಿಕೊಂಡವರು ತಮ್ಮ ಅಭಿಮಾನವನ್ನು ವ್ಯಕ್ತ ಪಡಿಸುವುದಕ್ಕಾಗಿ ಬೈದಾಡುವುದು, ಜಗಳ ಮಾಡುವುದು, ಕಿತ್ತಾಡುವುದು, ಬೆಂಕಿ ಹಚ್ಚುವುದು, ಹಿಂಸಾ ಕೃತ್ಯಗಳಲ್ಲಿ ತೊಡಗುವುದು, ಆತ್ಮಹತ್ಯೆ ಮಾಡಿಕೊಳ್ಳುವುದು ಇತ್ಯಾದಿ ಕಂಡು ಬರುತ್ತವೆ. ಯಾರಿಗೂ ಯಾವುದಕ್ಕೂ ಪ್ರಯೋಜನವಾಗದ ಇಂತಹ ಕ್ರಮಗಳು ವ್ಯರ್ಥವೆಂದು ಇವರಿಗೇಕೆ ಅರ್ಥವಾಗುತ್ತಿಲ್ಲ? ಇತ್ತೀಚೆಗಿನ ಇನ್ನೊಂದು ಘಟನೆಯನ್ನು ಇಲ್ಲಿ ನೆನಪಿಸಿ ಕೊಳ್ಳಬಹುದೆನಿಸುತ್ತದೆ. ನಟಿ ರಮ್ಯಾ ತಮ್ಮ ‘ಎಕ್ಸ್’ ಖಾತೆಯಲ್ಲಿ ಹಾಕಿದಂತಹ ಪೋಸ್ಟ್ ಒಂದಕ್ಕೆ ದರ್ಶನ್ ಅವರ ಅಭಿಮಾನಿಗಳು ಎನ್ನಲಾದ ವ್ಯಕ್ತಿಗಳು ಅತಿರೇಕದ ಪ್ರತಿಕ್ರಿಯೆಗಳನ್ನು ನೀಡಿದ್ದು, ಅನಾಹುತಕಾರಿ ಬೆಳವಣಿಗೆಗೆ ಕಾರಣವಾಯಿತು. ರಮ್ಯಾರವರು ನಟ ದರ್ಶನ್ ಅವರ ಬೇಲ್ ವಿಚಾರದಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತ ಪಡಿಸಿದ್ದೇ ಇದಕ್ಕೆ ಕಾರಣ. ಅವರ ಅಭಿಪ್ರಾಯ ಸಭ್ಯ ರೀತಿಯಲ್ಲಿಯೇ ಇತ್ತು. ಈ ಅಭಿಮಾನಿಗಳೆನಿಸಿಕೊಂಡವರೂ ಪ್ರತಿಕ್ರಿಯೆ ನೀಡಲೇ ಬೇಕಿದ್ದರೆ, ಅದೇ ಸಭ್ಯ ಭಾಷೆಯಲ್ಲಿ ಪ್ರತಿಕ್ರಿಯೆ ನೀಡಿ ಸುಮ್ಮನಾಗ ಬಹುದಿತ್ತು. ಆದರೆ ಅವರು ಸಾಮಾಜಿಕ ಮಾಧ್ಯಮದಲ್ಲಿ ಅಶ್ಲೀಲ ಹಾಗೂ ಅವಹೇಳನಕಾರಿ ಸಂದೇಶಗಳನ್ನು ರಮ್ಯಾ ಅವರಿಗೆ ಕಳುಹಿಸಿ ಕೊಲೆ ಬೆದರಿಕೆಯನ್ನೂ ಹಾಕಿದರು. ಇದು ನಾಗರಿಕ ನಡವಳಿಕೆಗೆ ತಕ್ಕುದಾಗಿರಲಿಲ್ಲ. ಇದಕ್ಕೆ ಸಂಬಂಧಿಸಿದಂತೆ ವಿವಿಧ ಹೆಸರುಗಳಲ್ಲಿರುವ 43 ಖಾತೆಗಳ ವಿರುದ್ಧ ಪ್ರಕರಣ ದಾಖಲಾಗಿ ಪೊಲೀಸ್ ತನಿಖೆ ಮುಂದುವರಿದಿದೆ. ಅತಿರೇಕದಿಂದ ಕೂಡಿದ ಈ ಆಕ್ರಮಣಕಾರಿಯಾದ ನಡವಳಿಕೆ ಅಭಿಮಾನಿಗಳೆನಿಸಿಕೊಂಡವರಿಗೆ ಅಗತ್ಯವಿತ್ತೇ? ಇದೆಂತಹ ಮಾದರಿಯ ಅಭಿಮಾನ? ಈಗ ಸುಪ್ರೀಂ ಕೋರ್ಟ್ ರಮ್ಯಾ ನಿರೀಕ್ಷೆಯಂತೆ ಹೈಕೋರ್ಟ್ ತೀರ್ಪನ್ನು ಬದಿಗಿಟ್ಟು ದರ್ಶನ್‌ಅವರ ಬೇಲ್‌ಅನ್ನು ರದ್ದು ಗೊಳಿಸಿತು. ಇರಲಿ, ಅದು ಬೇರೆ ಮಾತು. ನಮ್ಮ ದೇಶದಲ್ಲಿ ಅಭಿಮಾನ ಎನ್ನುವುದು ಸೃಷ್ಟಿಸುವ ಅವಾಂತರ, ಅನಾಹುತಗಳು ಕಡಿಮೆಯೇನಿಲ್ಲ. ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ವ್ಯಕ್ತಿಗಳು ಪ್ರಖ್ಯಾತರಾಗುವುದು ಸ್ವಾಭಾವಿಕ. ಇಂತಹ ವ್ಯಕ್ತಿಗಳು ಆ ಕ್ಷೇತ್ರಗಳ ಒಲವುಳ್ಳಂತಹವರನ್ನು ತಮ್ಮತ್ತ ಸೆಳೆಯುತ್ತಾರೆ. ಇದು ಅಭಿಮಾನಿಗಳೆಂಬ ವರ್ಗ ಸೃಷ್ಟಿಯಾಗುವ ಬಗೆ. ಆದರೆ ಅಭಿಮಾನಿಗಳೆನಿಸಿ ಕೊಂಡವರು ಕಾಲಾಂತರದಲ್ಲಿ ಯಾಕೆ ವಿಚಿತ್ರ ನಡವಳಿಕೆಯನ್ನು ಪ್ರದರ್ಶಿಸುತ್ತಾರೆಂಬುದೇ ಅರ್ಥವಾಗುತ್ತಿಲ್ಲ. ಅವರ ಅಸಹಜ, ಅತಿರೇಕದ ನಡವಳಿಕೆ ಸಾಮಾಜಿಕ ಸಮಸ್ಯೆಯನ್ನು ಹುಟ್ಟು ಹಾಕುತ್ತಿರುವುದು ಸತ್ಯ. ಮೇರೆ ಮೀರಿದ ಅಭಿಮಾನವೆಂಬುದು ಅನೇಕ ಸಂದರ್ಭದಲ್ಲಿ ಸಾವು-ನೋವು, ಆಸಿ-ಪಾಸ್ತಿ ನಷ್ಟಗಳಿಗೆ ಕಾರಣವಾಗಿರುವುದನ್ನು ನಾವು ಕಂಡಿದ್ದೇವೆ. ಚಲನಚಿತ್ರ ತಾರೆಯರು, ಗಾಯಕರು, ಆಟಗಾರರು, ರಾಜಕೀಯ ನಾಯಕರು ಅಭಿಮಾನಿಗಳ ದೃಷ್ಟಿಯಿಂದ ಅಗ್ರ ಪಂಕ್ತಿಯಲ್ಲಿದ್ದಾರೆ ಎನ್ನ ಬಹುದು. ಇನ್ನು ಸಾಹಿತಿ, ಕಲಾವಿದರಿಗೂ ಅವರದೇ ಆದ ಅಭಿಮಾನಿ ವರ್ಗವಿದೆ. ಸಾಮಾನ್ಯವಾಗಿ ಈ ಅಭಿಮಾನಿಗಳಿಗೆ ಒಂದು ಮಟ್ಟದ ಪ್ರಬುದ್ಧತೆಯಿರುವುದರಿಂದ ಅಹಿತಕರ ಬೆಳವಣಿಗೆಯ ಸಾಧ್ಯತೆ ತೀರ ಕಡಿಮೆ. ಈ ಅಭಿಮಾನಿಗಳ ಪೈಕಿ ಹೆಚ್ಚು ಸುದ್ದಿಯಲ್ಲಿರುವವರು ಚಲನಚಿತ್ರ ತಾರೆಯರ ಅಭಿಮಾನಿಗಳು. ನಮ್ಮ ರಾಜ್ಯದಲ್ಲಿ ಚಲನಚಿತ್ರ ನಟರ ಅಭಿಮಾನಿ ಸಂಘಗಳು ಸ್ಥಾಪನೆಯಾಗಿ ದಶಕಗಳೇ ಕಳೆದಿವೆ. ಇದರೊಂದಿಗೆ ಮೇರು ನಟರ ಅಭಿಮಾನಿಗಳಿಂದ ಸೃಷ್ಟಿಯಾಗಿರುವ ಒಳಿತು-ಕೆಡುಕುಗಳ ಒಂದು ಪರಂಪರೆಯೇ ನಮ್ಮ ಮುಂದೆ ತೆರೆದು ಕೊಳ್ಳುತ್ತದೆ. ಹಿಂದೆ ಕೆಲವು ಸಂದರ್ಭಗಳಲ್ಲಿ ಸಂಭವಿಸಿರುವ ಘರ್ಷಣೆ, ಹಿಂಸೆಗಳಂತಹ ಕಹಿ ನೆನಪುಗಳು ನೋವುಂಟು ಮಾಡುತ್ತದೆ. ದಶಕಗಳ ಹಿಂದೆ ರಾಜ್ ಕುಮಾರ್ ಮತ್ತು ವಿಷ್ಣುವರ್ಧನ್ ಅವರಂತಹ ಮೇರು ನಟರ ಅಭಿಮಾನಿಗಳ ನಡುವಿನ ಸಂಘರ್ಷ ಸಾಕಷ್ಟು ಅಹಿತಕರ ಘಟನೆಗಳಿಗೆ ಎಡೆ ಮಾಡಿರುವುದನ್ನು ಮರೆಯುವಂತಿಲ್ಲ. ಆದರೆ ಈ ಇಬ್ಬರು ಕಲಾವಿದರ ವೈಯಕ್ತಿಕ ಸಂಬಂಧ ಕೆಟ್ಟದ್ದೇನಾಗಿರಲಿಲ್ಲ. ಕ್ರಮೇಣ ಆ ನಟರಿಬ್ಬರ ಸಂಬಂಧ ಮಧುರವಾಗಿಯೇ ಬೆಳೆದಿತ್ತು. ಇಂತಹ ಸಂಗತಿಗಳನ್ನು ಅಭಿಮಾನಿಗಳು ಅರ್ಥ ಮಾಡಿ ಕೊಳ್ಳಬೇಕು. ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಆರ್.ಸಿ.ಬಿ. ಕ್ರಿಕೆಟ್ ತಂಡದ ಅಭಿನಂದನಾ ಸಮಾರಂಭವು ಘೋರ ದುರಂತದಲ್ಲಿ ಪರ್ಯಾವಸಾನ ಕಂಡಿದ್ದು ಇನ್ನೂ ಕಾಡುವಂತಿದೆ. ಕ್ರೀಡಾಂಗಣದೊಳಗೆ ತಮ್ಮ ನೆಚ್ಚಿನ ಆಟಗಾರರನ್ನು ನೋಡಿ ಕಣ್ತುಂಬಿ ಕೊಳ್ಳ ಬೇಕೆಂಬ ಉತ್ಸಾಹ, ಆತುರದಲ್ಲಿ 11 ಮಂದಿ ಕ್ರಿಕೆಟ್ ಅಭಿಮಾನಿಗಳು ಕಾಲ್ತುಳಿತದಿಂದಾಗಿ ಸಾವನ್ನು ಕಾಣುವಂತಾಯಿತು. ಇದಕ್ಕೆ ಸರಕಾರ, ಪೊಲೀಸ್ ಇಲಾಖೆ, ವ್ಯವಸ್ಥಾಪಕ ವರ್ಗ ಹೊಣೆಗಾರಿಕೆ ನಿಭಾಯಿಸುವುದರಲ್ಲಿ ಎಡವಿದ್ದು ಕಾರಣವಿರಬಹುದು. ಆದರೆ ಅಭಿಮಾನಿಗಳೂ ಒಂದಷ್ಟು ಎಚ್ಚರ, ಸಂಯಮ ವಹಿಸಿದ್ದರೆ ಸಾವನ್ನು ತಪ್ಪಿಸಿ ಕೊಳ್ಳಬಹುದಿತ್ತೇನೋ ಎಂಬ ನೋವಿನ ನಿಟ್ಟುಸಿರು ಹಾಗೆ ಉಳಿದು ಬಿಡುತ್ತದೆ. ರಾಜಕೀಯ ನಾಯಕರ ಅಂಧಾಭಿಮಾನ ಸೃಷ್ಟಿಸುವಂತಹ ಅನಾಹುತಗಳು ಕಡಿಮೆಯೇನಿಲ್ಲ. ಯಾರೋ ಒಬ್ಬ ನಾಯಕನಿಗೆ ತಮ್ಮ ನಿಷ್ಠೆ, ನಂಬಿಕೆಯನ್ನು ಪೂರ್ತಿಯಾಗಿ ಅಡವಿಟ್ಟ ವ್ಯಕ್ತಿಗಳು ಅದಕ್ಕಾಗಿ ತಮ್ಮ ಸ್ನೇಹಿತರ, ಕುಟುಂಬ ವರ್ಗದವರ ಜತೆ ಸಂಬಂಧಗಳನ್ನು ಕಹಿ ಮಾಡಿರುವುದೂ ಇದೆ: ಕಡಿದು ಕೊಂಡಿದ್ದೂ ಇದೆ. ಈಗ ಸಾಮಾಜಿಕ ಜಾಲತಾಣದಿಂದಾಗಿ ಈ ನಿಟ್ಟಿನಲ್ಲಿ ಸಾಕಷ್ಟು ಅಹಿತಕಾರಿ ಬೆಳವಣಿಗೆಗಳಾಗುವುದನ್ನು ನಾವು ಕಾಣುತ್ತೇವೆ. ಯಾವುದೋ ಒಂದು ನಿರ್ದಿಷ್ಟ ಉದ್ದೇಶಕ್ಕಾಗಿ ಸೃಷ್ಟಿಸಿದ ವಾಟ್ಸ್‌ಆ್ಯಪ್ ಗ್ರೂಪ್‌ಗಳನ್ನು ತಮ್ಮ ರಾಜಕೀಯ ನಾಯಕನ ಗುಣಗಾನಕ್ಕೆ ದುರ್ಬಳಕೆ ಮಾಡುವುದು ಕಂಡು ಬರುತ್ತದೆ. ಇಂತಹವರಿಗೆ ಈ ಅಂಧಾಭಿಮಾನವೆಂಬುದು ಹತ್ತಿಕ್ಕಲಾಗದ ಒಂದು ಚಟವಾಗಿ ಬೆಳೆದು ಬಂದಿರುತ್ತದೆ. ಅತಿ ಅಭಿಮಾನವೆನ್ನುವುದು ವ್ಯಕ್ತಿ ಪೂಜೆಯ ಮಟ್ಟಕ್ಕೆ ಏರುವುದೇ ಹೀಗೆ. ಜನಜೀವನದ ಮೇಲೆ ಮಹತ್ವದ ಪರಿಣಾಮ ಬೀರುವಂತಹ ರಾಜಕೀಯದಂತಹ ಕ್ಷೇತ್ರದಲ್ಲಿ ಈ ಬೆಳವಣಿಗೆ ಕಳವಳಕಾರಿ. ನಾಯಕನೊಬ್ಬನ ನಿರ್ಧಾರ, ನಿಲುವು, ಕ್ರಮಗಳು ನಿರಂತರ ಪರಿಶೀಲನೆ, ವಿಮರ್ಶೆಗೆ ಒಳಪಡುತ್ತಲೇ ಇರಬೇಕು. ಇದರಿಂದ ನಾಯಕನೊಬ್ಬನ ಆಡಳಿತಾತ್ಮಕ ನಿರ್ಧಾರಗಳ ತಪ್ಪು-ಸರಿಗಳ ತುಲನೆ ಸಾಧ್ಯವಾಗಿ ಅಗತ್ಯ ಟೀಕೆ ಅಥವಾ ಮೆಚ್ಚುಗೆ ಸೃಷ್ಟಿಯಾಗುತ್ತದೆ. ಇದು ಪ್ರಜೆಯೊಬ್ಬನ ಪ್ರಬುದ್ಧತೆ, ವಿವೇಕದ ನಡೆ. ಇಂತಹ ಕ್ರಮಗಳು ದೇಶದ ಹಿತದೃಷ್ಟಿಯಿಂದ ಅಗತ್ಯ. ನಮ್ಮ ಬದುಕಿನಲ್ಲಿ ಬೇರೆ ಬೇರೆ ಚಟುವಟಿಕೆಗಳು ಉಲ್ಲಾಸ, ಚೈತನ್ಯ ತುಂಬುವ ಗುಣ ಪಡೆದಿವೆ. ನಮಗೆ ಗೊತ್ತಿದ್ದಂತೆ ಕ್ರೀಡೆ, ಸಿನೆಮಾ, ನೃತ್ಯ, ಸಂಗೀತ, ಸಾಹಿತ್ಯ ಇತ್ಯಾದಿ ನಮ್ಮ ಯಾಂತ್ರಿಕ ಬದುಕಿನ ಏಕತಾನತೆಯನ್ನು ನಿವಾರಿಸುತ್ತವೆ. ಜೊತೆಗೆ ಜೀವನೋತ್ಸಾಹ, ಸಂತೋಷವನ್ನು ಹೆಚ್ಚಿಸುತ್ತದೆ. ಹೀಗಾಗಿ ಈ ಕ್ಷೇತ್ರಗಳ ಪ್ರತಿಭಾವಂತರು, ಸಾಧಕರಿಗೆ ಜನಮಾನಸದಲ್ಲಿ ಎತ್ತರದ ಸ್ಥಾನವಿದೆ. ಈ ದೃಷ್ಟಿಯಿಂದ ಇಂತಹವರ ಬಗ್ಗೆ ಹೆಚ್ಚಿನ ಮೆಚ್ಚುಗೆ, ಅಭಿಮಾನಗಳನ್ನು ಅರ್ಥ ಮಾಡಿ ಕೊಳ್ಳಬಹುದು. ಆದರೆ ಇಂತಹ ಭಾವನೆಗಳು ನಮ್ಮ ಭವಿಷ್ಯವನ್ನು ರೂಪಿಸಲಾರವು,: ಹೊಟ್ಟೆ ತುಂಬಿಸಲಾರವು. ಆದ್ದರಿಂದ ಇವನ್ನೆಲ್ಲ ಒಂದು ಅಂಕೆಯಲ್ಲಿ ಇಟ್ಟುಕೊಂಡು ಅವುಗಳಿಂದ ಸ್ಫೂರ್ತಿ, ಪ್ರೇರಣೆ ಪಡೆಯಲು ಮಾತ್ರ ಬಳಸಿ ಕೊಂಡರೆ ಒಳ್ಳೆಯದು. ನಾವು ಪ್ರತಿಭಾವಂತರ ಸಾಧನೆಯ ಬಗ್ಗೆ ಅಭಿಮಾನ ಇಟ್ಟುಕೊಳ್ಳುವುದು ಬೇರೆ, ಅವರ ವ್ಯಕ್ತಿತ್ವದ ಕುರಿತು ಮೆಚ್ಚುಗೆ ಇಟ್ಟು ಕೊಳ್ಳುವುದು ಬೇರೆ. ನಿರಂತರ ಸಂಪರ್ಕ, ಸಹವಾಸವಿಲ್ಲದೆ ವ್ಯಕ್ತಿಯೊಬ್ಬನ ಆಳ-ಅಗಲವನ್ನು ಅರಿತು ಕೊಳ್ಳಲು ಸಾಧ್ಯವಿಲ್ಲ. ಕವಿ ಅಡಿಗರ ಮಾತೊಂದು ಇಲ್ಲಿ ಪ್ರಸ್ತುತ. ಅವರು, ‘ನಾವು ಸಂಗ ಮಾಡದೇ ಯಾರನ್ನೇ ಆಗಲಿ ಅರಿಯಲು ಸಾಧ್ಯವಿಲ್ಲ.’ ಎನ್ನುತ್ತಾರೆ. ಈ ಮಾತು ಎಷ್ಟು ಸತ್ಯ ನೋಡಿ. ಈ ದೃಷ್ಟಿಯಿಂದ ಹೀರೊ, ತಾರೆಗಳೆನಿಸಿ ಕೊಂಡವರನ್ನು ಒಂದು ಅಂತರದಲ್ಲಿ ಇಟ್ಟು ಕೊಂಡು ನೋಡಿ ನಮ್ಮ ಉತ್ಸಾಹ, ಸಂತಸ ಹೆಚ್ಚಿಸಿ ಕೊಳ್ಳಬೇಕೇ ಹೊರತು ಅವರಿಗಾಗಿ ಬೇರೆಯವರೊಡನೆ ಕಿತ್ತಾಡುವುದು, ಜೀವನವನ್ನು ಪಣಕಿಟ್ಟು ಹೋರಾಡುವುದು ಮೂರ್ಖತನ. ಮೇಲಾಗಿ ಇದು ನಮ್ಮ ವ್ಯಕ್ತಿತ್ವಕ್ಕೆ ನಾವೇ ಮಾಡಿ ಕೊಳ್ಳುವಂತಹ ಅಪಚಾರ. ಹಾಗೆಯೇ ಸ್ವಾಭಿಮಾನ, ಆತ್ಮಗೌರವಗಳಿಗೆ ಚ್ಯುತಿ ತರುವಂತಹ ನಡವಳಿಕೆ ಕೂಡ.

ವಾರ್ತಾ ಭಾರತಿ 17 Aug 2025 11:22 am

Gold Rate: ವಾರ ಪೂರ್ತಿ ಚಿನ್ನದ ಬೆಲೆ ಇಳಿಕೆ: ಇಂದಿನ ಚಿನ್ನ ಮತ್ತು ಬೆಳ್ಳಿ ಬೆಲೆ ಎಷ್ಟಿದೆ ?

Gold price August 17: ಕಳೆದ ಒಂದು ವಾರದ ಅವಧಿಯಲ್ಲಿ ಚಿನ್ನದ ಬೆಲೆಯಲ್ಲಿ ಸಾಕಷ್ಟು ಬದಲಾವಣೆಗಳು ಆಗಿವೆ. ಚಿನ್ನದ ಬೆಲೆಯು ಇಳಿಕೆಯ ಹಾದಿಯಲ್ಲಿ ಸಾಗಿದ್ದು ಚಿನ್ನ ಪ್ರಿಯರಿಗೆ ಸಂತೋಷವನ್ನುಂಟು ಮಾಡಿದೆ. ಕಳೆದ ಒಂದು ವಾರದಿಂದಲೂ ಚಿನ್ನದ ಬೆಲೆಯು ನಿರಂತರವಾಗಿ ಇಳಿಕೆಯಾಗುತ್ತಿದೆ. ದೇಶದಾದ್ಯಂತ ಚಿನ್ನದ ಬೆಲೆ ಇಳಿಕೆಯ ಹಾದಿಯಲ್ಲಿದ್ದು ವಾರಾಂತ್ಯದಲ್ಲೂ ಚಿನ್ನದ ಬೆಲೆ ಇಳಿಕೆಯ ಹಾದಿಯಲ್ಲಿದೆ. ಆಗಸ್ಟ್‌ 17ರ

ಒನ್ ಇ೦ಡಿಯ 17 Aug 2025 11:17 am

ತಾಯ್ನಾಡಿಗೆ ಮರಳಿದ ಗಗನಯಾತ್ರಿ ಶುಭಾಂಶು ಶುಕ್ಲಾ; ಅದ್ದೂರಿ ಸ್ವಾಗತ

ಹೊಸದಿಲ್ಲಿ : ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಭೇಟಿ ನೀಡಿದ್ದ ಗಗನಯಾತ್ರಿ ಶುಭಾಂಶು ಶುಕ್ಲಾ ರವಿವಾರ ಭಾರತಕ್ಕೆ ಮರಳಿದ್ದಾರೆ. ಅಮೆರಿಕದಿಂದ ಮಧ್ಯರಾತ್ರಿ 1.30ರ ವೇಳೆಗೆ ದಿಲ್ಲಿಗೆ ಆಗಮಿಸಿದ ಶುಭಾಂಶು ಶುಕ್ಲಾ ಅವರನ್ನು ಇಂದಿರಾ ಗಾಂಧಿ ವಿಮಾನ ನಿಲ್ದಾಣದಲ್ಲಿ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಮತ್ತು ದಿಲ್ಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರು ಅದ್ದೂರಿಯಾಗಿ ಸ್ವಾಗತಿಸಿದರು. “ಗಗನಯಾತ್ರಿ ಶುಭಾಂಶು ಶುಕ್ಲಾ ಇಂದು ಬೆಳಗಿನ ಜಾವ ದಿಲ್ಲಿಗೆ ಬಂದಿಳಿದರು. ಇವರೊಂದಿಗೆ ಮತ್ತೊಬ್ಬ ಗಗನಯಾತ್ರಿ ಪ್ರಶಾಂತ್ ಬಾಲಕೃಷ್ಣನ್ ನಾಯರ್ ಕೂಡ ಮರಳಿದರು ಎಂದು ಜಿತೇಂದ್ರ ಸಿಂಗ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಶುಕ್ಲಾ ಖಾಸಗಿ ಬಾಹ್ಯಾಕಾಶ ಅಭಿಯಾನ ಆಕ್ಸಿಯಂ-4ರ ತಂಡದ ಇತರ ಮೂವರೊಂದಿಗೆ ಬಾಹ್ಯಾಕಾಶ ಯಾನ ಕೈಗೊಂಡಿದ್ದರು. ಜೂ. 25ರಂದು ಫ್ಲೋರಿಡಾದಿಂದ ಯಾನವನ್ನು ಆರಂಭಿಸಿದ್ದ ಆಕ್ಸಿಯಂ-4 ಜೂ.26ರಂದು ಐಎಸ್ಎಸ್ ತಲುಪಿತ್ತು. ಜು.15ರಂದು ಕ್ಯಾಲಿಫೋರ್ನಿಯಾದ ಸ್ಯಾನ್ ಡಿಯಾಗೋ ಕರಾವಳಿಗೆ ಬಂದಿಳಿದಿದ್ದರು. ತನ್ನ 18 ದಿನಗಳ ಅಭಿಯಾನದಲ್ಲಿ ಶುಕ್ಲಾ 60ಕ್ಕೂ ಅಧಿಕ ಪ್ರಯೋಗಗಳನ್ನು ಕೈಗೊಂಡಿದ್ದರು.

ವಾರ್ತಾ ಭಾರತಿ 17 Aug 2025 11:04 am

ಆಗಸ್ಟ್‌ 17ರಂದು ರಾಜ್ಯದಲ್ಲಿ ಪೆಟ್ರೋಲ್‌, ಡೀಸೆಲ್‌ ದರ ಎಷ್ಟಿದೆ?: ಜಿಲ್ಲಾವರು ಅಂಕಿಅಂಶಗಳ ವಿವರ

Petrol, Diesel Price: ಪೆಟ್ರೋಲ್, ಡೀಸೆಲ್‌ ಆಗಾಗ ಏರಿಳಿತ ಆಗುತ್ತಲಿರುತ್ತದೆ. ಹಾಗಾದರೆ, ಇಂದು (ಆಗಸ್ಟ್‌ 17) ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಇನ್ನುಳಿದ ಜಿಲ್ಲೆಗಳಲ್ಲಿ ಲೀಟರ್‌ ಪೆಟ್ರೋಲ್‌, ಡೀಸೆಲ್‌ ಬೆಲೆ ಎಷ್ಟಿದೆ ಎನ್ನುವ ಅಂಕಿಅಂಶಗಳನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ಶಕ್ತಿಯ ಮೂಲ ಎನಿಸಿಕೊಂಡಿರುವ ಪೆಟ್ರೋಲ್ ಮತ್ತು ಡೀಸೆಲ್ ಇಂಧನ ಅತ್ಯವಶ್ಯಕವಾಗಿ ಬೇಕಾಗುವ ಸಂಪನ್ಮೂಲಗಳಲ್ಲಿ ಒಂದಾಗಿದೆ. ಇತ್ತೀಚಿನ ದಿನಗಳಲ್ಲಿ

ಒನ್ ಇ೦ಡಿಯ 17 Aug 2025 10:57 am

ಭಾರತ ಚುನಾವಣಾ ಆಯೋಗ: ಮತದಾರರನ್ನು ಪ್ರತ್ಯೇಕಗೊಳಿಸುವ ಏಜೆನ್ಸಿ?

ಕಳೆದ ಹತ್ತು ವರ್ಷಗಳ ಚುನಾವಣೆಗಳಲ್ಲಿ ಮೋದಿ ನೇತೃತ್ವ ಸರಕಾರದ ಜುಮ್ಲಾದಂತಹ, ಮತಧರ್ಮಾಂಧತೆಯಂತಹ ಉತ್ಪನ್ನಗಳ ಮಾರಾಟಕ್ಕೆ ಏಜೆನ್ಸಿಯಂತಿರುವ ಚುನಾವಣಾ ಆಯೋಗವು ‘ಬಗ್ಗು ಎಂದರೆ ತೆವಳುತ್ತೀನಿ’ ಎನ್ನುತ್ತಿದೆ. ಆಯೋಗವು ಪ್ರಭುತ್ವದ ನಿಯಂತ್ರಣಕ್ಕೆ ಒಳಪಟ್ಟಿರುವುದು ಮತ್ತು ಆಯೋಗವು ಚುನಾಯಿತ ಸರ್ವಾಧಿಕಾರದ ವಕ್ತಾರರಂತೆ ನಡೆದುಕೊಂಡಿರುವುದು ಬಹು ಚರ್ಚಿತ ವಿಷಯವಾಗಿದೆ. ನಿಷ್ಪಕ್ಷಪಾತದಿಂದ ಕಾರ್ಯ ನಿರ್ವಹಿಸಲು ವಿಫಲರಾಗಿರುವ ಈಗಿನ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ಆಯೋಗದ ವಿಶ್ವಾಸಾರ್ಹತೆಯನ್ನು ಹಾಳು ಮಾಡುವಲ್ಲಿ ಸಫಲರಾಗಿದ್ದಾರೆ ಮತ್ತು ಅವರಿಗೆ ಆಯುಕ್ತ ವಿವೇಕ್ ಜೋಶಿಯವರ ಬೆಂಬಲವೂ ಇದೆ. ಕತ್ತಲ ದಾರಿ ಬಲು ದೂರ ಮೇ 7, 2019ರಂದು ಜವಾಹರ್ ಸರ್ಕರ್ ಅವರು ತಮ್ಮ ಟ್ವಿಟರ್‌ನಲ್ಲಿ ‘ಬ್ರೇಕಿಂಗ್ ಸುದ್ದಿ: ಭಾರತದ ಚುನಾವಣಾ ಆಯೋಗವು ತಾನು ಬಿಜೆಪಿ ಪಕ್ಷವನ್ನು ಸೇರಿದ್ದೇನೆ ಎನ್ನುವ ಸುದ್ದಿಯನ್ನು ನಿರಾಕರಿಸಿದೆ, ಆದರೆ ಬಿಜೆಪಿಗೆ ಬಾಹ್ಯ ಬೆಂಬಲ ಮಾತ್ರ ನೀಡುವುದಾಗಿ ಹೇಳಿದೆ’ ಎಂದು ಬರೆಯುತ್ತಾರೆ. ಇದು ಮೇಲ್ನೋಟಕ್ಕೆ ವ್ಯಂಗ್ಯೋಕ್ತಿಯಂತೆ ಕಾಣುತ್ತದೆಯಾದರೂ ವಾಸ್ತವವೂ ಹೌದು. ಇತಿಹಾಸದ ಕುರಿತಾಗಿ ಪುಸ್ತಕಗಳನ್ನು ಬರೆದಿರುವ ಡೇವಿಡ್ ರುಂಚಿಮನ್ ಅವರು ‘ಈ ಚುನಾವಣೆಗಳು ಯಾವ ಉತ್ಪನ್ನಗಳು ಮಾರಾಟವಾಗುತ್ತವೆ ಎನ್ನುವುದರ ಅಂತಿಮ ಪರೀಕ್ಷೆ’ ಎಂದು ಬರೆಯುತ್ತಾರೆ. ಕಳೆದ ಹತ್ತು ವರ್ಷಗಳ ಚುನಾವಣೆಗಳಲ್ಲಿ ಮೋದಿ ನೇತೃತ್ವ ಸರಕಾರದ ಜುಮ್ಲಾದಂತಹ, ಮತಧರ್ಮಾಂಧತೆಯಂತಹ ಉತ್ಪನ್ನಗಳ ಮಾರಾಟಕ್ಕೆ ಏಜೆನ್ಸಿಯಂತಿರುವ ಚುನಾವಣಾ ಆಯೋಗವು ‘ಬಗ್ಗು ಎಂದರೆ ತೆವಳುತ್ತೀನಿ’ ಎನ್ನುತ್ತಿದೆ. ಆಯೋಗವು ಪ್ರಭುತ್ವದ ನಿಯಂತ್ರಣಕ್ಕೆ ಒಳಪಟ್ಟಿರುವುದು ಮತ್ತು ಆಯೋಗವು ಚುನಾಯಿತ ಸರ್ವಾಧಿಕಾರದ ವಕ್ತಾರರಂತೆ ನಡೆದುಕೊಂಡಿರುವುದು ಬಹು ಚರ್ಚಿತ ವಿಷಯವಾಗಿದೆ. ನಿಷ್ಪಕ್ಷಪಾತದಿಂದ ಕಾರ್ಯ ನಿರ್ವಹಿಸಲು ವಿಫಲರಾಗಿರುವ ಈಗಿನ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ಆಯೋಗದ ವಿಶ್ವಾಸಾರ್ಹತೆಯನ್ನು ಹಾಳು ಮಾಡುವಲ್ಲಿ ಸಫಲರಾಗಿದ್ದಾರೆ ಮತ್ತು ಅವರಿಗೆ ಆಯುಕ್ತ ವಿವೇಕ್ ಜೋಶಿಯವರ ಬೆಂಬಲವೂ ಇದೆ. ಭಾರತದ ಚುನಾವಣಾ ಆಯೋಗವು ಜೂನ್ 24, 2025ರಂದು ಬಿಹಾರ ರಾಜ್ಯದ ಮತದಾರರ ಪಟ್ಟಿಯ ‘ವಿಶೇಷ ಸಮಗ್ರ ಪರಿಷ್ಕರಣೆ(ಎಸ್‌ಐಆರ್)’ ನಡೆಸಲಾಗುತ್ತದೆ ಎಂದು ಆಡಳಿತಾತ್ಮಕ ಆದೇಶ ಹೊರಡಿಸಿತು. ಇದಕ್ಕಾಗಿ ತನಗೆ ಸಂವಿಧಾನದ ವಿಧಿ 324ರ ಅಡಿಯಲ್ಲಿ ಅಧಿಕಾರವಿದೆ ಎಂದು ಹೇಳಿಕೊಂಡಿದೆ. ವಿಧಿ 326ರ ನೀತಿಯು 18ವರ್ಷಕ್ಕಿಂತ ಮೇಲ್ಪಟ್ಟ ಪ್ರತಿಯೊಬ್ಬ ಭಾರತೀಯರಿಗೆ ಮತದಾನದ ಹಕ್ಕನ್ನು ಖಚಿತಪಡಿಸಿದರೆ ವಿಧಿ 324 ಇದನ್ನು ಕಾರ್ಯಗತಗೊಳಿಸಲು ಅಗತ್ಯವಾದ ಕಾರ್ಯವಿಧಾನ ರೂಪಿಸಲು ಚುನಾವಣಾ ಆಯೋಗಕ್ಕೆ ಜವಾಬ್ದಾರಿ ಕೊಟ್ಟಿದೆ. ಆದರೆ ಈಗಿನ ಆಯೋಗವು ತನಗೆ ಕೊಟ್ಟ ಜವಾಬ್ದಾರಿಯನ್ನು ಮಾತ್ರ ಹೇಳಿಕೊಳ್ಳುತ್ತಿದೆಯೇ ಹೊರತು ವಿಧಿ 326ರ ಪ್ರಕಾರ ಪ್ರತಿಯೊಬ್ಬ ಅರ್ಹರಿಗೂ ಮತದಾನದ ಹಕ್ಕಿದೆ ಎನ್ನುವ ನೀತಿಯನ್ನು ಆಧಾರ್ ಕಾರ್ಡ್, ಮತದಾರ ಗುರುತಿನ ಚೀಟಿ(ಎಪಿಕ್), ಪಡಿತರ ಚೀಟಿ ಮುಂತಾದವುಗಳನ್ನು ಆಧರಿಸಿ ಪೌರತ್ವವನ್ನು ನಿರ್ಧರಿಸಲು ಸಾಧ್ಯವಿಲ್ಲ ಎಂದು ನಿರ್ಧರಿಸುವುದರ ಮೂಲಕ ಉಲ್ಲಂಘಿಸುತ್ತಿದೆ. ಇದರ ಮುಂದುವರಿದ ಭಾಗವಾಗಿ 65 ಲಕ್ಷ ಜನಸಂಖ್ಯೆಯನ್ನು ‘ಮರಣ ಹೊಂದಿದ್ದಾರೆ, ಪತ್ತೆ ಇಲ್ಲ, ವಲಸೆ ಹೋಗಿದ್ದಾರೆ’ ಮುಂತಾದ ಕಾರಣಗಳನ್ನು ನೀಡಿ ಮತದಾರರ ಪಟ್ಟಿಯಿಂದ ತೆಗೆದು ಹಾಕಿದೆ. ಇದು ಅಕ್ರಮ ಎಂದು ವಿರೋಧ ಪಕ್ಷಗಳು ಟೀಕಿಸುತ್ತಿವೆ. ಮೊಹಿಂದರ್ ಸಿಂಗ್ ಗಿಲ್ ವರ್ಸಸ್ ಮುಖ್ಯ ಚುನಾವಣಾ ಅಧಿಕಾರಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠವು ‘ವಿಧಿ 324ನ್ನು ನಿರ್ದಿಷ್ಟ ಮಿತಿಯೊಳಗೆ ಬಳಸಬೇಕು. ಸಂಸತ್ತು ಅಥವಾ ಶಾಸಕಾಂಗವು ಜಾರಿಗೊಳಿಸಿದ ಕಾಯ್ದೆಯ ನೀತಿ ನಿರೂಪಣೆಯ ಚೌಕಟ್ಟಿನ ಒಳಗೆ ಕ್ರಮ ತೆಗೆದುಕೊಳ್ಳಬೇಕೇ ಹೊರತು ಅದನ್ನು ಉಲ್ಲಂಘಿಸಿ ಅಲ್ಲ’ ಎಂದು ಹೇಳಿದೆ. ಆದರೆ ಆಯೋಗದ ಬಿಹಾದ ಎಸ್‌ಐಆರ್ ಈ ತೀರ್ಪಿನ ವಿರುದ್ಧವಾಗಿದೆ. ಕಾನೂನಿನ ಮುಂದೆ ಎಲ್ಲರೂ ಸಮಾನರು, ಎಲ್ಲರಿಗೂ ಸಮಾನ ಕಾನೂನು ಅನ್ವಯವಾಗುತ್ತದೆ ಎನ್ನುವ ವಿಧಿ 14, ಅಭಿವ್ಯಕ್ತಿ ಸ್ವಾತಂತ್ರ್ಯದ ವಿಧಿ 19(1), ಬದುಕುವ ಹಕ್ಕಿನ ವಿಧಿ 21ರ ಉಲ್ಲಂಘನೆಯಾಗಿದೆ. ಮುಖ್ಯವಾಗಿ ಚುನಾವಣಾ ಆಯೋಗಕ್ಕೆ ಪೌರತ್ವವನ್ನು ನಿರ್ಧರಿಸುವ ಅಧಿಕಾರವಿಲ್ಲ. ಆದರೆ ನ್ಯಾಯಾಂಗವೂ ಇದನ್ನು ಹೇಳುತ್ತಿದೆಯೇ ಎನ್ನುವ ಪ್ರಶ್ನೆ ಕಾಡುತ್ತಿದೆ. ಆಯೋಗವು ಎಸ್‌ಐಆರ್‌ನ್ನು ಸಾಮಾನ್ಯ ಕ್ರಮ ಎಂದು ಹೇಳಿಕೊಂಡರೂ ಸಹ ಕೆಲವೇ ದಿನಗಳಲ್ಲಿ ನಿರ್ದಿಷ್ಠ ಸಮುದಾಯಗಳನ್ನು ಮತದಾನದಿಂದಲೇ ಹೊರಗಿಡುವ ತಂತ್ರ ಎನ್ನುವ ಆರೋಪಗಳು ಕೇಳಿಬಂದಿತು. ಆಯೋಗವು ಎಸ್‌ಐಆರ್ ಮೂಲಕ ಸಂವಿಧಾನದ ಚೌಕಟ್ಟನ್ನು ಉಲ್ಲಂಘಿಸುವ ಪ್ರಯತ್ನ ನಡೆಸುತ್ತಿದೆ. ಈ ಎಸ್‌ಐಆರ್‌ನ ಅಕ್ರಮಗಳು ಮತ್ತು ಗುಪ್ತ ಕಾರ್ಯಸೂಚಿಯನ್ನು ಪ್ರಶ್ನಿಸಿ ಅನೇಕರು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದರು. ಇದರ ಭಾಗವಾಗಿ ನ್ಯಾಯಮೂರ್ತಿ ಸೂರ್ಯಕಾಂತ್, ಜಯ್‌ಮಲ್ಯ ಬಾಗ್ಚಿ ಅವರನ್ನೊಳಗೊಂಡ ಸುಪ್ರೀಂಕೋರ್ಟ್ ಪೀಠವು ಜುಲೈ 10, 2025ರಂದು ‘ಆಧಾರ್ ಮತ್ತು ಗುರುತಿನ ಚೀಟಿ(ಎಪಿಕ್) ಮಾನ್ಯಗೊಂಡ ದಾಖಲೆಗಳಾಗಿ ಸೇರಿಸಿ’ ಎಂದು ತಾತ್ಕಾಲಿಕ ಪರಿಹಾರ ನೀಡಿದೆ. ನಂತರ ಆಗಸ್ಟ್ 8, 2025ರಂದು ತನ್ನ ವಿಚಾರಣೆಯನ್ನು ಮುಂದುವರಿಸಿದ ಪೀಠವು ‘ಆಧಾರ್ ಕಾರ್ಡ್ ಅಂತಿಮವಾಗಿ ನಿರ್ಣಾಯಕವಲ್ಲ’ ಎಂದು ಅಭಿಪ್ರಾಯಪಟ್ಟಿದೆ(ನ್ಯಾ.ಸೂರ್ಯಕಾಂತ್). ಆಯೋಗಕ್ಕೆ ತೀವ್ರವಾದ ಪರಿಷ್ಕರಣೆ ನಡೆಸುವ ಅಧಿಕಾರವನ್ನು ಪ್ರಶ್ನಿಸಿದ ಅರ್ಜಿದಾರರಿಗೆ ಜನಪ್ರತಿನಿಧಿಗಳ ಕಾಯ್ದೆ ಸೆಕ್ಷನ್ 21(3)ರ ‘ಆಯೋಗವು ಅಗತ್ಯವಿದೆ ಎನಿಸಿದರೆ ಯಾವುದೇ ಕ್ಷೇತ್ರದ ಮತದಾರರ ಪಟ್ಟಿಯನ್ನು ವಿಶೇಷವಾಗಿ ಪರಿಷ್ಕರಿಸಬಹುದು’ ಎನ್ನುವ ವ್ಯಾಖ್ಯಾನವನ್ನು ಉದಾಹರಿಸಿ ಆಯೋಗದ ನಿಲುವನ್ನು ಸಮರ್ಥಿಸಿದೆ. ಆದರೆ ಆಗಸ್ಟ್ 14, 2025ರಂದು ‘ನೀವು ತೆಗೆದು ಹಾಕಿದ 65 ಲಕ್ಷ ಮತದಾರರ ಜಿಲ್ಲಾವಾರು ಪಟ್ಟಿಯನ್ನು ಬಿಹಾರ ಜಿಲ್ಲಾ ಚುನಾವಣಾ ಅಧಿಕಾರಿಗಳ ಅಂತರ್ಜಾಲ ತಾಣದಲ್ಲಿ ಪ್ರಕಟಿಸಬೇಕು, ಮರಣ, ವಲಸೆ, ದ್ವಿ-ನೋಂದಣಿ ಇತ್ಯಾದಿಗಾಗಿ ಪಟ್ಟಿಯಿಂದ ಕೈಬಿಟ್ಟ ಕಾರಣಗಳನ್ನು ಸ್ಪಷ್ಟಪಡಿಸಬೇಕು. ಈ ಮಾಹಿತಿಯನ್ನು ಬಿಹಾರದ ಮುಖ್ಯ ಚುನಾವಣಾ ಅಧಿಕಾರಿಯ ವೆಬ್‌ಸೈಟ್‌ನಲ್ಲೂ ಪ್ರಕಟಿಸಬೇಕು’ ಎಂದು ಆದೇಶಿಸಿದೆ. ‘ದ ವೈರ್’ಗೆ ನೀಡಿದ ಸಂದರ್ಶನದಲ್ಲಿ ಹಿಂದಿನ ಆಯುಕ್ತ ಅಶೋಕ್‌ಲಾವಾಸ ಅವರು ಈ ಎಸ್‌ಐಆರ್ ಅನ್ನು ‘‘ಆಕ್ರಮಣಕಾರಿ, ಹಠಾತ್ ಆಗಿ ನಿರ್ಧರಿಸಲಾಗಿದೆ ಮತ್ತು ಇದನ್ನು ತಪ್ಪಿಸಬಹುದಾಗಿತ್ತು’’ ಎಂದು ಹೇಳಿದ್ದಾರೆ. ಆದರೆ ಆಯೋಗವು ಇಂತಹ ಸ್ಥಿತಿಗೆ ತಲುಪಿದ್ದು ಹೇಗೆ? ಹಿಂದಣ ನೋಟ 1952-56 ಮತ್ತು 2004ರ ಎಸ್‌ಐಆರ್‌ಗಳು ಈಗಿನಷ್ಟು ವಿವಾದಾತ್ಮಕವಾಗಿರಲಿಲ್ಲ. ಆಗಲೂ ಅರ್ಹ ಮತದಾರರನ್ನು ಹೊರ ತಳ್ಳಿದ ಉದಾಹರಣೆಗಳಿದ್ದವು. ಅದು ಆಯೋಗದ ಕಾರ್ಯ ನಿರ್ವಹಣೆಯಲ್ಲಿನ ದೋಷವಾಗಿತ್ತು, ತಾಂತ್ರಿಕ ದೋಷವಾಗಿತ್ತು. ಆದರೆ ಈಗಿನಂತೆ ಪಕ್ಷಪಾತ ಧೋರಣೆ ಹೊಂದಿರಲಿಲ್ಲ. ಚುನಾವಣಾ ಆಯೋಗದ ಸಮಸ್ಯೆಗಳು ಕಾಂಗ್ರೆಸ್ ಕಾಲದಿಂದಲೂ ಪ್ರಾರಂಭವಾಗಿದ್ದವು ಎನ್ನುವುದು ನಿಜವಾದರೂ ಅದು ಚುನಾಯಿತ ಸರ್ವಾಧಿಕಾರದ ಅಡಿಯಾಳಾಗಿರಲಿಲ್ಲ. ಅದು ತಾತ್ಕಾಲಿಕವಾಗಿತ್ತು. ಆದರೆ ಈಗ ಶಾಶ್ವತವಾಗಿ ಪ್ರಭುತ್ವದ ವಕ್ತಾರರಾಗಿ ಬದಲಾಗಿದೆ. 1962ರಲ್ಲಿ ಆಗಿನ ಮುಖ್ಯ ಚುನಾವಣಾ ಅಧಿಕಾರಿ ಕೆ.ವಿ.ಕೆ. ಸುಂದರಂ ಅವರು ಲೋಕಸಭಾ ಚುನಾವಣೆಗೂ ಮುಂಚೆ ಚುನಾವಣಾ ಸಂದರ್ಭದಲ್ಲಿ ಮಾಡಬೇಕಾದ ಮತ್ತು ಮಾಡಬಾರದ (DOs and DON’Ts) ಗೊತ್ತುವಳಿಗಳನ್ನು ಬಿಡುಗಡೆ ಮಾಡಿದರು. ಅವುಗಳನ್ನು ಮತ್ತಷ್ಟು ವಿಸ್ತರಿಸಿ ‘ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳಿಗೆ ಮಾದರಿ ನೀತಿಸಂಹಿತೆಗಳು’ ಎಂದು ಕಾಯ್ದೆ ರೂಪಿಸಲಾಯಿತು. ಇದರ ಜೊತೆಗೆ ವಿಧಿ 324 ಚುನಾವಣಾ ಆಯೋಗಕ್ಕೆ ಚುನಾವಣೆಗಳನ್ನು ಮೇಲ್ವಿಚಾರಣೆ ಮಾಡುವ, ನಿಯಂತ್ರಿಸುವ ಸಂಪೂರ್ಣ ಅಧಿಕಾರವನ್ನು ನೀಡಿತ್ತು. ಆದರೆ ತೊಂಭತ್ತರ ದಶಕದ ಆರಂಭದಲ್ಲಿ ಮುಖ್ಯ ಚುನಾವಣಾ ಅಧಿಕಾರಿಯಾಗಿ ನೇಮಕಗೊಂಡ ಟಿ.ಎನ್. ಶೇಷನ್ ಅವರು ಮೊತ್ತ ಮೊದಲ ಬಾರಿಗೆ ಆಯೋಗಕ್ಕೆ ಅದರ ಜವಾಬ್ದಾರಿಗಳನ್ನು ನೆನಪಿಸಿಕೊಟ್ಟರು. 1991ರಲ್ಲಿ ‘ಮಾದರಿ ನೀತಿ ಸಂಹಿತೆ’ಯನ್ನು ಮರುರೂಪಿಸಿ ಮತ್ತೆ ಬಿಡುಗಡೆ ಮಾಡಲಾಯಿತು. ಇದನ್ನು ಸಾರ್ವತ್ರಿಕ ನಡತೆ, ಸಭೆಗಳು, ಮೆರವಣಿಗೆಗಳು, ಮತದಾನ ದಿನದ ನಡಾವಳಿ, ಮತದಾನ ಬೂತ್‌ಗಳ ನಡಾವಳಿ, ವೀಕ್ಷಕರು, ಅಧಿಕಾರದಲ್ಲಿರುವ ಪಕ್ಷದ ನಿಯಂತ್ರಣ, ಚುನಾವಣಾ ಪ್ರಣಾಳಿಕೆಗೆ ಮಾರ್ಗದರ್ಶನ ಸೂತ್ರಗಳು ಎಂದು ಎಂಟು ಭಾಗಗಳಾಗಿ ವಿಂಗಡಿಸಲಾಯಿತು ಮತ್ತು ಎಲ್ಲದಕ್ಕೂ ಶಾಸನಬದ್ಧ ಅಧಿಕಾರ ನಿಡುವುದರ ಬದಲಾಗಿ ಚುನಾವಣಾ ಆಯೋಗಕ್ಕೆ ವಿವೇಚನಾಧಿಕಾರ ಕೊಡಬೇಕೆಂದು ಶಿಫಾರಸು ಮಾಡಲಾಯಿತು. ಪ್ರೊ. ಮಂಜರಿ ಕಾಟ್ಜು ಅವರು ‘‘ಈ ಮಾದರಿ ನೀತಿ ಸಂಹಿತೆಯ ಹಿನ್ನೆಲೆಯಲ್ಲಿ ಚುನಾವಣಾ ಆಯೋಗಕ್ಕೆ ರಾಜಕೀಯ ಪಕ್ಷವೊಂದನ್ನು ಮಾನ್ಯ ಮಾಡುವ ಅಥವಾ ಅಮಾನ್ಯ ಮಾಡುವ ಅಧಿಕಾರವಿದೆ. ಆದರೆ ರಾಜಕೀಯ ಪಕ್ಷಗಳಿಂದ ಅಧಿಕಾರದ ದುರುಪಯೋಗ ಮತ್ತು ನಿಯಮಗಳ ಉಲ್ಲಂಘನೆ ನಡೆಯುತ್ತಲೇ ಇರುತ್ತದೆ. ಆದರೆ ಅನೇಕ ಸಂದರ್ಭಗಳಲ್ಲಿ ಆಯೋಗವು ನಿಷ್ಕ್ರಿಯಗೊಂಡಿದೆ. ಅನೇಕ ಸಂದರ್ಭಗಳಲ್ಲಿ ಆರೋಪಗಳಿಗೆ ಗುರಿಯಾದ ಪಕ್ಷಗಳಿಗೆ ಸ್ಪಷ್ಟೀಕರಣ ಕೇಳಿದಾಗ ಅವು ರಕ್ಷಣಾತ್ಮಕವಾಗಿ ವರ್ತಿಸಿವೆ. ಒಲ್ಲದ ಮನಸ್ಸಿನಿಂದ, ಗೊಣಗುಟ್ಟುತ್ತಲೆ ಆಯೋಗದ ನಿರ್ಣಯಗಳನ್ನು ಒಪ್ಪಿಕೊಂಡಿವೆ, ಅಧಿಕಾರಶಾಹಿ ಮತ್ತು ಪೊಲೀಸರಂತೆ ಚುನಾವಣಾ ಆಯೋಗವು ಸಹ ನೇರವಾಗಿ ಜನರೊಂದಿಗೆ ಸಂಪರ್ಕದಲ್ಲಿರುತ್ತದೆ. ಆದರೆ ಅವುಗಳಂತೆ ಕಠಿಣ, ಪೀಡಕ ಸಂಸ್ಥೆಯಲ್ಲ. ಆಯೋಗಕ್ಕೆ ಚುನಾಯಿತ ಸರಕಾರಗಳಂತೆ ಸ್ವೇಚ್ಛಾಚಾರದ ಅಧಿಕಾರವಿಲ್ಲ. ಇದು ಸಂವಿಧಾನಾತ್ಮಕ ಸಂಸ್ಥೆ ಮತ್ತು ನೀತಿ ನಿಯಮಾವಳಿಗಳನ್ನು ಆಧರಿಸಿ ಕಾರ್ಯನಿರ್ವಹಿಸುತ್ತದೆ. ಈ ಕಾರಣಗಳಿಗೆ ಜನತೆ ಚುನಾವಣಾ ಆಯೋಗದಲ್ಲಿ ನಂಬಿಕೆ ಇಟ್ಟುಕೊಂಡಿರುತ್ತಾರೆ’’ ಎಂದು ಹೇಳುತ್ತಾರೆ. ಪ್ರಜೆಗಳು ತಮ್ಮ ಮೇಲಿಟ್ಟಿರುವ ನಂಬಿಕೆ, ವಿಶ್ವಾಸಕ್ಕೆ ಚ್ಯುತಿ ಬರದಂತೆ ನಿಷ್ಪಕ್ಷಪಾತದಿಂದ ಕಾರ್ಯನಿರ್ವಹಿಸಬೇಕಾದ ಆಯೋಗವು ಈ ಬಾರಿ ಅದಕ್ಕೆ ತದ್ವಿರುದ್ಧವಾಗಿ ವರ್ತಿಸಿದೆ. ಪ್ರಜಾಪ್ರಭುತ್ವದ ಆಶಯಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸುವುದರ ಬದಲು ಸಂಪೂರ್ಣ ರಾಜಕೀಕರಣಗೊಂಡಿದೆ. 1993ರಲ್ಲಿ ಮತದಾರರ ಗುರುತಿನ ಚೀಟಿ ಮತ್ತು 2004ರಲ್ಲಿ ಇಲೆಕ್ಟ್ರಾನಿಕ್ ಉಪಕರಣ ‘ಇವಿಎಂ’ನ್ನು ತಂದರೂ ಸಹ ಮತದಾನದಲ್ಲಿನ ಮೋಸ, ವಂಚನೆ ತಡೆಗಟ್ಟುವಲ್ಲಿ ವಿಫಲವಾಗಿವೆ. ಈಗ ‘ಮತಗಳ್ಳತನ’ಕ್ಕೆ ಸಹಕಾರ ಕೊಟ್ಟಿರುವ ಆರೋಪ ಎದುರಿಸುತ್ತಿರುವ ಆಯೋಗ ಪ್ರಜಾಪ್ರಭುತ್ವಕ್ಕೆ ಒಂದು ಕಳಂಕವಾಗಿದೆ ಎನ್ನುವ ಹಂತಕ್ಕೆ ತಲುಪಿದೆ. ಇದು ವಿಷಾದನೀಯ. 1990ರಲ್ಲಿ ದಿನೇಶ್ ಗೋಸ್ವಾಮಿ ಸಮಿತಿಯು ಚುನಾವಣಾ ಆಯೋಗದ ನೇಮಕಾತಿ ಪ್ರಕ್ರಿಯೆಯಲ್ಲಿ ಸರಕಾರದ ಪ್ರಭಾವ ಕಡಿಮೆ ಮಾಡಬೇಕು ಎಂದು ಶಿಫಾರಸು ಮಾಡಿತ್ತಾದರೂ ಸಹ ಅದಕ್ಕೆ ಯಾವುದೇ ಬೆಲೆ ಇಲ್ಲದೆ ಮುಖ್ಯ ಚುನಾವಣಾ ಆಯುಕ್ತರು ಮತ್ತು ಇಬ್ಬರು ಆಯುಕ್ತರ ನೇಮಕಾತಿಯು ಸಂಪೂರ್ಣ ರಾಜಕೀಯ ನೇಮಕಾತಿಯಾಗಿ ಮುಂದುವರಿದಿದೆ. ಆಡಳಿತದಲ್ಲಿರುವ ಸರಕಾರ ಬಯಸುವ ಐಎಎಸ್ ಅಧಿಕಾರಿಗಳು ಆಯುಕ್ತರಾಗಿ ನೇಮಕಗೊಳ್ಳುತ್ತಾರೆ. ಪ್ರತಿಯೊಂದು ನೇಮಕಾತಿಯ ಹಿಂದೆ ರಾಜಕೀಯವಿರುತ್ತದೆ. ಈ ರೀತಿ ನೇರವಾಗಿ ಸರಕಾರದ ಕೃಪಕಟಾಕ್ಷದಿಂದ ನೇಮಕಗೊಂಡ ಆಯುಕ್ತರು ತಮ್ಮ ದಣಿಗಳಿಗೆ ನಿಯತ್ತು ಪ್ರದರ್ಶಿಸುತ್ತಾರೆ. ಇದಕ್ಕೆ ಸ್ಪಷ್ಟ ಉದಾಹರಣೆ ಈಗಿನ ಚುನಾವಣಾ ಆಯೋಗ. ನಿವೃತ್ತ ಮುಖ್ಯ ಚುನಾವಣಾ ಆಯುಕ್ತ ಬಿ.ಬಿ. ಟಂಡನ್ ಅವರು ‘‘ಈ ತೊಡಕನ್ನು ನಿವಾರಿಸಲು ಲೋಕಸಭಾ ಸ್ಪೀಕರ್, ಲೋಕಸಭೆೆಯ ವಿರೋಧಪಕ್ಷದ ನಾಯಕರು, ರಾಜ್ಯಸಭೆಯ ವಿರೋಧಪಕ್ಷದ ನಾಯಕರು, ಕಾನೂನು ಮಂತ್ರಿ, ರಾಜ್ಯಸಭೆಯ ಉಪಾಧ್ಯಕ್ಷರು, ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರನ್ನು ಒಳಗೊಂಡ ಒಂದು ಆಯ್ಕೆ ಸಮಿತಿ ರಚಿಸಬೇಕು’’ ಎಂದು ಶಿಫಾರಸು ಮಾಡಿದ್ದರು. ಆದರೆ ಇದನ್ನು ಸಹ ಕಸದ ಬುಟ್ಟಿಗೆ ಎಸೆಯಲಾಯಿತು. ಮಾರ್ಚ್ 2, 2023ರಂದು ಆಗಿನ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಕೆ.ಎಂ. ಜೋಸೆಫ್ ನೇತೃತ್ವದ ಸಂವಿಧಾನ ಪೀಠವು ಭಾರತದ ಚುನಾವಣಾ ಆಯೋಗದ ಆಯುಕ್ತರ ನೇಮಕಾತಿಯ ಪ್ರಕ್ರಿಯೆಯಲ್ಲಿ ಬದಲಾವಣೆಗಳನ್ನು ಸೂಚಿಸಿತು. ಮತ್ತಷ್ಟು ಪಾರದರ್ಶಕತೆ ಮತ್ತು ನಿಷ್ಪಕ್ಷಪಾತ ನೀತಿ ತರಲು ಆಯ್ಕೆ ಸಮಿತಿಯಲ್ಲಿ ಪ್ರಧಾನ ಮಂತ್ರಿ, ವಿರೋಧ ಪಕ್ಷದ ನಾಯಕರು ಮತ್ತು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳನ್ನು(ಸಿಜೆಐ) ಒಳಗೊಂಡ ಸಮಿತಿಯು ರಾಷ್ಟ್ರಪತಿಗಳಿಗೆ ತಮ್ಮ ಆಯ್ಕೆಯನ್ನು ಕಳಿಸಿಕೊಡಬೇಕೆಂದು ನಿರ್ದೇಶನ ನೀಡಿತು. ಆದರೆ ತನ್ನ ನಿರ್ದೇಶನವು ‘ಸಂಸತ್ತು ಕಾಯ್ದೆ ರೂಪಿಸುವವರೆಗೆ ಮಾತ್ರ ಮಾನ್ಯವಾಗಿರುತ್ತದೆ’ ಎಂದು ಸೇರಿಸಿತು. ಇದನ್ನೇ ನೆಪ ಮಾಡಿಕೊಂಡ ಆಗಿನ ಮೋದಿ ನೇತೃತ್ವದ ಸರಕಾರವು 28 ಡಿಸೆಂಬರ್ 2023ರಂದು ಮುಖ್ಯ ಚುನಾವಣಾ ಅಯುಕ್ತ ಮತ್ತು ಇತರ ಆಯುಕ್ತರು(ನೇಮಕಾತಿ, ಸೇವೆ, ಟರ್ಮ್ಸ್ ಆಫ್ ಆಫೀಸ್) 2023 ಕಾಯ್ದೆಯನ್ನು ಜಾರಿಗೆ ತಂದರು. ಈ ಕಾಯ್ದೆಯಲ್ಲಿ ಸಿಜೆಐಯವರನ್ನು ಆಯ್ಕೆ ಸಮಿತಿಯಿಂದ ಕೈಬಿಟ್ಟು ಪ್ರಧಾನ ಮಂತ್ರಿ, ವಿರೋಧ ಪಕ್ಷದ ನಾಯಕರು ಮತ್ತು ಪಿಎಂ ನಾಮನಿರ್ದೇಶನ ಮಾಡುವ ಕೇಂದ್ರ ಕ್ಯಾಬಿನೆಟ್ ಸಚಿವರನ್ನು ಒಳಗೊಂಡ ಸಮಿತಿ ರಚಿಸಲಾಯಿತು. ಈ ಕಾಯ್ದೆಯನ್ನು ಜನವರಿ 2, 2024ರಂದು ಜಾರಿಗೊಳಿಸಲಾಯಿತು. ಇದನ್ನು ವಿಧಿ 32ರ ಅಡಿಯಲ್ಲಿ ಕಾಂಗ್ರೆಸ್ ಮುಖಂಡರಾದ ಜಯಾ ಠಾಕೂರ್, ಎಡಿಆರ್ ಸಂಸ್ಥೆ ಮತ್ತು ಇತರರು ‘ಸುಪ್ರೀಂ ಕೋರ್ಟ್ ನಿರ್ದೇಶನವನ್ನು ಉಲ್ಲಂಘಿಸಿ ಸಿಜೆಐಯವರನ್ನು ಹೊರಗಿಟ್ಟು ಆಯ್ಕೆ ಸಮಿತಿಯನ್ನು ರಚನೆ ಮಾಡಿದ್ದು ನ್ಯಾಯಾಂಗ ನಿಂದನೆಯಾಗಿದೆ. ಈ ಸಮಿತಿಯು ಸಂಪೂರ್ಣವಾಗಿ ಪ್ರಧಾನ ಮಂತ್ರಿಗಳ ಮರ್ಜಿಗೆ ಒಳಪಟ್ಟಿರುತ್ತದೆ, ಈ ಕಾರಣ ಅದು ಪಾರದರ್ಶಕವಾಗಿರುವುದಿಲ್ಲ ಮತ್ತು ಪಕ್ಷಪಾತದಿಂದ ಕೂಡಿರುತ್ತದೆ’ ಎಂದು ಆ ಕಾಯ್ದೆಯನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದರು. ಮಾರ್ಚ್ 13, 2024ರಂದು ಆಯುಕ್ತ ಅರುಣ್ ಗೋಯಲ್ ದಿಢೀರನೆ ರಾಜಿನಾಮೆ ಸಲ್ಲಿಸಿದರು. ಆಗ 11 ಮತ್ತು 12 ಮಾರ್ಚ್ 2024ರ ನಡುವೆ ಚುನಾವಣಾ ಆಯೋಗದಲ್ಲಿ ಮುಖ್ಯ ಆಯುಕ್ತ ರಾಜೀವ್ ಕುಮಾರ್ ಮಾತ್ರ ಅಧಿಕಾರದಲ್ಲಿದ್ದರು. ಮತ್ತೆ ಸುಪ್ರೀಂ ಕೋರ್ಟ್‌ನಲ್ಲಿ ಆಯುಕ್ತರ ನೇವಕಾತಿ ಮಾಡದಂತೆ ನಿರ್ಬಂಧಿಸಬೇಕೆಂದು ಅರ್ಜಿ ಸಲ್ಲಿಸಲಾಯಿತು. ಆದರೆ ಮಾರ್ಚ್ 14ರಂದು ರಾಷ್ಟ್ರಪತಿಗಳು ಮೋದಿ ಸರಕಾರ ಆಯ್ಕೆ ಮಾಡಿದ ಇಬ್ಬರು ಆಯುಕ್ತರ ನೇಮಕಾತಿಗೆ ಒಪ್ಪಿಗೆ ನೀಡಿದರು. ಸಂವಿಧಾನ ಪೀಠವು ಈ ಆಯ್ಕೆಗೆ ತಡೆ ನೀಡಲು ನಿರಾಕರಿಸಿತು. ನಂತರ 2023ರ ಕಾಯ್ದೆಯನ್ನು ಪ್ರಶ್ನಿಸಿದ ಅರ್ಜಿಯ ವಿಚಾರಣೆಗೆ ಮೇ, 14 2025ರಂದು ನಿಗದಿಪಡಿಸಿತು. ಒಟ್ಟಾರೆ ಚುನಾವಣಾ ಆಯೋಗದ ಪಕ್ಷಪಾತ, ಅಳುಕು, ಭಯದಿಂದ ಕಾರ್ಯನಿರ್ವಹಿಸುವ ಸ್ಥಿತಿಯಿಂದ ಬಿಡುಗಡೆ ಸಾಧ್ಯವಾಗಲೇ ಇಲ್ಲ. ಅದಕ್ಕೆ ಸ್ವಾಯತ್ತೆ ಎನ್ನುವುದು ಕನಸಿನ ಮಾತಾಗಿದೆ. ಕೊನೆಯಲ್ಲದ ಪ್ರಶ್ನೆಗಳು ಬ್ರೆಕ್ಟ್ ‘‘ಸತ್ಯ ಗೊತ್ತಿಲ್ಲದವನು ಮೂರ್ಖ ಎನಿಸಿಕೊಳ್ಳುತ್ತಾನೆ, ಆದರೆ ಸತ್ಯ ಗೊತ್ತಿದ್ದೂ ಅದನ್ನು ಸುಳ್ಳು ಅಂತ ಹೇಳುವವನು ಅಪರಾಧಿ’’ ಎಂದು ಹೇಳುತ್ತಾನೆ. ಇಲ್ಲಿ ಯಾರು ಅಪರಾಧಿಗಳು ಎಂದು ನಿರ್ಧರಿಸುವುದು ಕಷ್ಟವಲ್ಲ ಅಲ್ಲವೇ? ಕಡೆಗೂ ರುಂಚಿಮನ್ ಹೇಳಿದಂತೆ ‘‘ಪ್ರಜಾಪ್ರಭುತ್ವವು ಸೋಲುತ್ತದೆ, ಆದರೆ ಮಿಕ್ಕಂತೆ ಎಲ್ಲವೂ ಘಾಸಿಗೊಳ್ಳದೆ ಅಖಂಡವಾಗಿ ಉಳಿದುಕೊಳ್ಳುತ್ತದೆ.’’

ವಾರ್ತಾ ಭಾರತಿ 17 Aug 2025 10:37 am

ಜನರನ್ನು ದಾರಿತಪ್ಪಿಸುವ ಪ್ರಯತ್ನ : ವೋಟರ್ ಆಧಿಕಾರ ಯಾತ್ರಾ ಕುರಿತು ಕಾಂಗ್ರೆಸ್ ಹಂಚಿಕೊಂಡ AI ವೀಡಿಯೊ ಬಗ್ಗೆ ಚುನಾವಣಾ ಆಯೋಗ ಪ್ರತಿಕ್ರಿಯೆ

ಹೊಸದಿಲ್ಲಿ : ಮತದಾರರ ಪಟ್ಟಿಯಲ್ಲಿನ ಲೋಪಗಳಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ಹಂಚಿಕೊಂಡ ಇತ್ತೀಚಿನ ವೀಡಿಯೊದ ಬಗ್ಗೆ ಪ್ರತಿಕ್ರಿಯಿಸಿದ ಚುನಾವಣಾ ಆಯೋಗ, ಈ ಕುರಿತು ಸತ್ಯ ಪರಿಶೀಲನೆ ನಡೆಸಲಾಗಿದೆ. ಈ ವೀಡಿಯೊ AI ರಚಿತವಾಗಿದ್ದು ಮತ್ತು ಉದ್ದೇಶಪೂರ್ವಕವಾಗಿ ದಾರಿತಪ್ಪಿಸುವ ಪ್ರಯತ್ನವಾಗಿದೆ ಎಂದು ಹೇಳಿದೆ. ಕಾಂಗ್ರೆಸ್‌ನ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ʼವೋಟರ್ ಆಧಿಕಾರ ಯಾತ್ರಾ'ಗೆ ಜನರನ್ನು ಆಹ್ವಾನಿಸುವ AI-ರಚಿತ ವೀಡಿಯೊವನ್ನು ಕಾಂಗ್ರೆಸ್ ಹಂಚಿಕೊಂಡಿದೆ.  ಈ ಕುರಿತು ಚುನಾವಣಾ ಆಯೋಗ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, ಈ ವೀಡಿಯೊ ಬಿಹಾರದ ಜನರನ್ನು ದಾರಿತಪ್ಪಿಸುವ ಸ್ಪಷ್ಟ ಪ್ರಯತ್ನ ಎಂದು ಆರೋಪಿಸಿದೆ. ಬಿಹಾರದ ಪ್ರತಿಯೊಂದು ವಿಧಾನಸಭಾ ಕ್ಷೇತ್ರದಲ್ಲೂ ಮತದಾರರ ಪಟ್ಟಿಯನ್ನು ಕಾನೂನುಬದ್ಧವಾಗಿ ಮತ್ತು ಪಾರದರ್ಶಕವಾಗಿ ಸಿದ್ಧಪಡಿಸಲಾಗುತ್ತಿದೆ ಎಂದು ಚುನಾವಣಾ ಆಯೋಗ ಹೇಳಿದೆ. ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್‌ಗಳು ಮತ್ತು ಚುನಾವಣಾ ನೋಂದಣಿ ಅಧಿಕಾರಿಗಳು ಚುನಾವಣಾ ಪಟ್ಟಿಯನ್ನು ಸಿದ್ಧಪಡಿಸುತ್ತಿದ್ದಾರೆ. 90,000ಕ್ಕೂ ಹೆಚ್ಚು ಬೂತ್ ಮಟ್ಟದ ಅಧಿಕಾರಿಗಳು ಸಕ್ರಿಯವಾಗಿ ಇದರಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರತಿ ವಿಧಾನಸಭಾ ಕ್ಷೇತ್ರದ ಮತದಾರರು, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸೇರಿದಂತೆ ಬಿಹಾರದ ಎಲ್ಲಾ 12 ಮಾನ್ಯತೆ ಪಡೆದ ರಾಜಕೀಯ ಪಕ್ಷಗಳು ನೇಮಿಸಿದ 1.6 ಲಕ್ಷಕ್ಕೂ ಹೆಚ್ಚು ಬೂತ್ ಮಟ್ಟದ ಏಜೆಂಟ್‌ಗಳು ಕೂಡ ಈ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಮತದಾರರ ಪಟ್ಟಿಯನ್ನು ಪಾರದರ್ಶಕವಾಗಿ ಸಿದ್ಧ ಪಡಿಸಲಾಗುತ್ತಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ರಾಹುಲ್ ಗಾಂಧಿಯವರ ಮತಗಳ ಕಳ್ಳತನ ಆರೋಪದ ಬಗ್ಗೆ ರವಿವಾರ (ಆಗಸ್ಟ್ 17) ಚುನಾವಣಾ ಆಯೋಗ ಪತ್ರಿಕಾಗೋಷ್ಠಿ ನಡೆಸಲಿದೆ.   17 अगस्त से हमारे साथ आना है वोट चोरों को गद्दी से हटाना है वोटर अधिकार यात्रा बिहार pic.twitter.com/SdiKiZWWnH — Congress (@INCIndia) August 16, 2025

ವಾರ್ತಾ ಭಾರತಿ 17 Aug 2025 10:33 am

ಜಮ್ಮು ಕಾಶ್ಮೀರದ ಕಥುವಾ ಜಿಲ್ಲೆಯಲ್ಲಿ ಇಂದು ಮೇಘಸ್ಫೋಟ; ನಾಲ್ವರು ಸಾವು, ಮುಂದುವರೆದ ಕಾರ್ಯಾಚರಣೆ

ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯಲ್ಲಿ ಇಂದು ಮೇಘಸ್ಫೋಟ ಆಗಿದೆ. ಈ ದುರಂತದಲ್ಲಿ ನಾಲ್ವರು ಮೃತಪಟ್ಟಿದ್ದು, ಆರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. . ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ಮೇಘಸ್ಪೋಟದಿಂದ ಜಮ್ಮು-ಪಠಾಣ್‌ಕೋಟ್ ರಾಷ್ಟ್ರೀಯ ಹೆದ್ದಾರಿಗೆ ಹಾನಿಯಾಗಿದೆ.

ವಿಜಯ ಕರ್ನಾಟಕ 17 Aug 2025 10:03 am

SWR: ಭಾರೀ ಮಳೆಗೆ ಗುಡ್ಡ ಕುಸಿತ: ಬೆಂಗಳೂರು-ಮಂಗಳೂರು ರೈಲುಗಳ ಸೇವೆ ವ್ಯತ್ಯಯ, ವಿವರ

ಹಾಸನ, ಆಗಸ್ಟ್ 17: ಹಾಸನ ಜಿಲ್ಲೆ ವ್ಯಾಪ್ತಿಯಲ್ಲಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಿರಂತರ ಮಳೆ ಆರ್ಭಟಿಸುತ್ತಿದೆ. ಇದರ ಪರಿಣಾಮವಾಗಿ ಸಕಲೇಶಪುರ ಎಡಕುಮಾರಿ ಬಳಿ ರೈಲು ಹಳಿಗಳ ಮೇಲೆ ಅಲ್ಲಲ್ಲಿ ಗುಡ್ಡದ ಮಣ್ಣು ಕುಸಿದಿದೆ. ಇದರಿಂದಾಗಿ ಬೆಂಗಳೂರು-ಮಂಗಳೂರು ರೈಲ್ವೆ ಮಾರ್ಗದಲ್ಲಿ ತಾತ್ಕಾಲಿಕ ವ್ಯತ್ಯಯ ಉಂಟಾಗಿದೆ. ಇತ್ತರ ಮಂಗಳೂರು ಸಂಪರ್ಕಿಸುವ ಶಿರಾಡಿ ಘಾಟ್‌ನಲ್ಲಿ ವ್ಯಾಪಕ ಮಳೆ ಅಬ್ಬರದಿಂದಾಗಿ ಸಂಚಾರ ದಟ್ಟಣೆ

ಒನ್ ಇ೦ಡಿಯ 17 Aug 2025 10:03 am

ತುಂಗಭದ್ರಾ ಡ್ಯಾಂ 7 ಗೇಟ್‌ಗಳಿಗೆ ಹಾನಿ: ಕರ್ನಾಟಕದ ನಾಲ್ಕು ಜಿಲ್ಲೆಗಳಿಗೆ ಸಂಕಷ್ಟ!

ತುಂಗಭದ್ರಾ ಡ್ಯಾಂನಿಂದ ಅಪಾರ ಪ್ರಮಾಣದ ನೀರು ವ್ಯರ್ಥವಾಗುತ್ತಿದ್ದು ಸರ್ಕಾರದ ಎಡವಟ್ಟಿನಿಂದ ರೈತರಿಗೆ ಸಂಕಷ್ಟ ಎದುರಾಗಿದೆ. ಈ ವಿಚಾರವಾಗಿ ಬಿಜೆಪಿ ಸಹ ಸರಣಿ ಟ್ವೀಟ್ ಮಾಡಿದೆ. ಕಾಂಗ್ರೆಸ್ ಸರ್ಕಾರದ ದಿವ್ಯ ನಿರ್ಲಕ್ಷ್ಯದಿಂದ ತುಂಗಾಭದ್ರಾ ಡ್ಯಾಂನ ಏಳು ಗೇಟ್‌ಗಳು ಡ್ಯಾಮೇಜ್‌ ಆಗಿವೆ. ಇದರಿಂದ 4 ಜಿಲ್ಲೆಗಳ ಜೀವನಾಡಿಯಾಗಿರುವ ಬಳ್ಳಾರಿ, ಕೊಪ್ಪಳ, ವಿಜಯನಗರ ಹಾಗೂ ರಾಯಚೂರು ಜಿಲ್ಲೆಗಳ ರೈತರ ಬದುಕು ಕೊಚ್ಚಿ

ಒನ್ ಇ೦ಡಿಯ 17 Aug 2025 10:01 am

ನಟ ದರ್ಶನ್ ಫೋಟೋ ಲೀಕ್, ಪರಪ್ಪನ ಅಗ್ರಹಾರದಲ್ಲಿ ಮೊಬೈಲ್‌ಗಿಲ್ಲ ಕಡಿವಾಣ! ಗೃಹ ಇಲಾಖೆಯ ಕ್ರಮಗಳೇನು

ಪರಪ್ಪನ ಅಗ್ರಹಾರಲ್ಲಿ ಮೊಬೈಲ್ ಬಳಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಹೊಸದಾಗಿ 3 T-HCBS ಟವರ್‌ಗಳನ್ನು ಅಳವಡಿಸಲಾಗಿದೆ. ಕಾರಾಗೃಹದಲ್ಲಿ ಅಳವಡಿಸಲಾಗಿದ್ದ 19 ಮೊಬೈಲ್ ಜಾಮರ್‌ಗಳನ್ನು 2ಜಿ ಯಿಂದ 5ಜಿ ಮೇಲ್ದರ್ಜೆಗೆ ಉನ್ನತೀಕರಿಸುವ ಕಾರ್ಯ ಟೆಸ್ಟಿಂಗ್ ಅಂಡ್ ಕ್ಯಾಲಿಬರೇಷನ್ ಪರಿಶೀಲನಾ ಹಂತದಲ್ಲಿದೆ ಎಂದು ಗೃಹ ಇಲಾಖೆ ತಿಳಿಸಿದೆ. ಕಾರಾಗೃಹದಲ್ಲಿ ಕಳೆದ ಎರಡು ವರ್ಷಗಳಲ್ಲಿ ಹೆಚ್ಚುವರಿಯಾಗಿ 100 ಸಂಖ್ಯೆ ಸಿ.ಸಿ.ಟಿ.ವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಎಐ ತಂತ್ರಜ್ಞಾನ ಸಹ ಅಳವಡಿಸಿ, ಬಂದಿಗಳ ಚಲನ-ವಲನಗಳನ್ನು ನಿಗಾವಹಿಸಲಾಗುತ್ತಿದೆ. ಮತ್ತಷ್ಟು ವಿವರ ಇಲ್ಲಿದೆ.

ವಿಜಯ ಕರ್ನಾಟಕ 17 Aug 2025 9:58 am

ಸಿಸೋಡಿಯಾ ವಿವಾದಾತ್ಮಕ ಹೇಳಿಕೆ ಆರೋಪ; ಸೂಕ್ತ ಕ್ರಮಕ್ಕೆ ವಿರೋಧ ಪಕ್ಷಗಳ ಆಗ್ರಹ

ಛತ್ತೀಸ್ಗಢ: ಪಂಜಾಬ್ ನಲ್ಲಿ ಮುಂದಿನ ವಿಧಾನಸಭಾ ಚುನಾವಣೆ ಗೆಲ್ಲಲು ಎಎಪಿ ಕಾರ್ಯಕರ್ತರು ಸಾಮ, ದಾನ, ಭೇದ, ದಂಡ,ಲಡಾಯಿ, ಜಗಳ ಕ್ರಮವನ್ನು ಅನುಸರಿಸುವಂತೆ ಆಮ್ ಆದ್ಮಿ ಪಕ್ಷದ ಮುಖಂಡ ಮನೀಶ್ ಸಿಸೋಡಿಯಾ ನೀಡಿದ್ದಾರೆ ಎನ್ನಲಾದ ಹೇಳಿಕೆ ಪಂಜಾಬ್ ರಾಜಕೀಯದಲ್ಲಿ ವಿಪ್ಲವ ಸೃಷ್ಟಿಸಿದೆ. ಪಂಜಾಬ್ ಉಸ್ತುವಾರಿ ಹೊಣೆ ಹೊಂದಿರುವ ಸಿಸೋಡಿಯಾ ವಿರುದ್ಧ ಚುನಾವಣಾ ಆಯೋಗ ಕ್ರಮ ಕೈಗೊಳ್ಳಬೇಕು ಎಂದು ವಿರೋಧ ಪಕ್ಷಗಳು ಆಗ್ರಹಿಸಿವೆ. ಈ ಸಂಬಂಧ ಸಿಸೋಡಿಯಾ ನೀಡಿದ್ದಾರೆ ಎನ್ನಲಾದ ಹೇಳಿಕೆಯ ವಿಡಿಯೊ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪಂಜಾಬ್ ಬಿಜೆಪಿ ಅಧ್ಯಕ್ಷ ಸುನೀಲ್ ಜಾಖಡ್ ಚುನಾವಣಾ ಆಯೋಗಕ್ಕೆ ಈ ಸಂಬಂಧ ಪತ್ರ ಬರೆದು ಸಿಸೋಡಿಯಾ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಆಗ್ರಹಿಸಿದ್ದಾರೆ. ಅವರನ್ನು ಮುಂದಿನ ಯಾವುದೇ ಚುಣಾವಣೆಗಳಿಗೆ ಸ್ಪರ್ಧಿಸದಂತೆ ನಿಷೇಧ ಹೇರಬೇಕು ಹಾಗೂ ಭಾಷಣಗಳನ್ನು ಮಾಡದಂತೆ ತಡೆ ವಿಧಿಸಬೇಕು ಎಂದು ಒತ್ತಾಯಿಸಿದ್ದಾರೆ. ಶಿರೋಮಣಿ ಅಕಾಲಿದಳ ಇನ್ನೂ ಒಂದು ಹೆಜ್ಜೆ ಮುಂದುವರಿದು, ಪಂಜಾಬ್ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಸ್ಪರ್ಧಿಸಲು ಅವಕಾಶ ನೀಡಬಾರದು ಎಂದು ಮನವಿ ಮಾಡಿದೆ. ಆದರೆ ಎಎಪಿ ಮುಖಂಡರು ಸಿಸೋಡಿಯಾ ಅವರ ಬೆನ್ನಿಗೆ ನಿಂತಿದ್ದು, ಬೇರೆ ಯಾವುದೋ ಸಂದರ್ಭದಲ್ಲಿ ನೀಡಿದ ಹೇಳಿಕೆಯನ್ನು ತಿರುಚಿ ಚುನಾವಣಾ ಸಂದರ್ಭಕ್ಕೆ ನೀಡಿದ ಕರೆ ಎಂದು ವಿಶ್ಲೇಷಿಸಲಾಗುತ್ತಿದೆ ಎಂದು ಪ್ರತಿಪಾದಿಸಿದೆ. ಮೊಹಾಲಿಯಲ್ಲಿ ಆಗಸ್ಟ್ 13ರಂದು ನಡೆದ ಪಕ್ಷದ ಮಹಿಳಾ ಘಟಕದ ನಾಯಕತ್ವ ತರಬೇತಿ ಶಿಬಿರದಲ್ಲಿ ಸಿಸೋಡಿಯಾ ಈ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ. ಪಂಜಾಬ್ ವಿಧಾನಸಭೆಗೆ 2027ರಲ್ಲಿ ನಡೆಯುವ ಚುನಾವಣೆಯಲ್ಲಿ ಗೆಲ್ಲಲು ಅಗತ್ಯವಿರುವ ಎಲ್ಲ ತಂತ್ರಗಳನ್ನು ಅನುಸರಿಸಬೇಕು. ಸತ್ಯ, ಸುಳ್ಳು, ಪ್ರಶ್ನೆ, ಉತ್ತರ, ಹೋರಾಟ, ಜಗಳ ನಾವು ಏನೇನು ಮಾಡಬೇಕೋ ಅದನ್ನು ಮಾಡಿಯೇ ಮಾಡುತ್ತೇವೆ. ನೀವು ಸಿದ್ಧರಿದ್ದೀರಾ? ಎಂದು ಸಿಸೋಡಿಯಾ ಹೇಳಿದ್ದಾಗಿ ವಿಡಿಯೊದಿಂದ ತಿಳಿದುಬರುತ್ತದೆ. ಈ ಸಭೆಯಲ್ಲಿ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಹಾಗೂ ಪಕ್ಷದ ಪಂಜಾಬ್ ಘಟಕದ ಅಧ್ಯಕ್ಷ ಅಮನ್ ಅರೋರಾ ಕೂಡಾ ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ವರ್ಚುವಲ್ ಭಾಷಣ ಮಾಡಿದ್ದರು.

ವಾರ್ತಾ ಭಾರತಿ 17 Aug 2025 9:55 am

ಪಿಓಪಿ ಮೂರ್ತಿಗಳ ವಿಸರ್ಜನೆಯಿಂದ ಜಲಚರಗಳ ಸಾವು: ಈಶ್ವರ ಖಂಡ್ರೆ

ಮಣ್ಣಿನ ಗಣಪತಿ ನಿರ್ಮಿಸಲು ಅರಣ್ಯ ಸಚಿವ ಮನವಿ

ವಾರ್ತಾ ಭಾರತಿ 17 Aug 2025 9:17 am

ದಾವಣಗೆರೆಯಲ್ಲಿ ಕುಸಿದ ತಾಪಮಾನ, ಥಂಡಿ ಅನುಭವ! ಮಳೆ ಅಲರ್ಟ್ ಎಷ್ಟು ದಿನ ಎಲ್ಲೆಲ್ಲಿ?

ದಾವಣಗೆರೆ ಜಿಲ್ಲೆಯಲ್ಲಿ ತಾಪಮಾನ ತೀವ್ರ ಕುಸಿತ ಕಂಡಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ 5-6 ಡಿಗ್ರಿ ಸೆಲ್ಸಿಯಸ್‌ನಷ್ಟು ತಾಪಮಾನ ಕಡಿಮೆಯಾಗಿದೆ. ಇದರಿಂದಾಗಿ ಚಳಿಯ ಅನುಭವ ಹೆಚ್ಚಾಗಿದೆ. ಅಲ್ಲದೆ, ಶೀತ, ನೆಗಡಿ ಪ್ರಕರಣಗಳು ವರದಿಯಾಗುತ್ತಿವೆ. ಹವಾಮಾನ ಇಲಾಖೆಯ ಪ್ರಕಾರ, ಮುಂದಿನ ಮೂರು ದಿನಗಳ ಕಾಲ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಕನಿಷ್ಠ 2.3 ಮಿ.ಮೀ ನಿಂದ 6.8 ಮಿ.ಮೀ ವರೆಗೆ ಮಳೆಯಾಗಬಹುದು ಎಂದು ಅಂದಾಜಿಸಲಾಗಿದೆ.

ವಿಜಯ ಕರ್ನಾಟಕ 17 Aug 2025 9:16 am

ಬೆಳಗಾವಿಯಲ್ಲಿ ಎಲ್ಲೆ ಮೀರಿದ ಮಹಿಳಾ ದೌರ್ಜನ್ಯ ; ಒಂದೂವರೆ ವರ್ಷದಲ್ಲಿ425 ಕೌಟುಂಬಿಕ ಹಿಂಸೆ ಕೇಸ್‌ ದಾಖಲು

ಬೆಳಗಾವಿ ಪೊಲೀಸ್‌ ಆಯುಕ್ತರ ಕಚೇರಿ ವ್ಯಾಪ್ತಿಯಲ್ಲಿ ಕಳೆದ ಒಂದೂವರೆ ವರ್ಷದಲ್ಲಿ ಪತಿಯಿಂದ ದೌರ್ಜನ್ಯವಾಗಿದೆ ಎಂದು 93 ಪ್ರಕರಣಗಳು ದಾಖಲಾಗಿದ್ದರೆ, ಕಿರುಕುಳದ 67 ದೂರು ಹಾಗೂ ಡಿಪಿ ಆ್ಯಕ್ಟ್‌ನಡಿ ಏಳು ಪ್ರಕರಣಗಳು ದಾಖಲಾಗಿದೆ. ವರದಕ್ಷಿಣಿ ಕಿರುಕುಳ ತಾಳಲಾರದೆ ಮೂವರು ಮಹಿಳೆಯರು ಆತ್ಮಹತ್ಯೆ ಮಾಡಿಕೊಂಡ ಕುರಿತು ಕೇಸ್‌ ದಾಖಲಾಗಿದೆ.

ವಿಜಯ ಕರ್ನಾಟಕ 17 Aug 2025 9:15 am

ಪ್ರವಾಹವನ್ನು ಸಮರ್ಥವಾಗಿ ನಿಭಾಯಿಸಿದ ಕೃಷ್ಣಾ ಮೇಲ್ದಂಡೆ ಎಂಜಿನೀಯರ್‌ಗಳು; ಜನರಲ್ಲಿ ನಿಟ್ಟುಸಿರು

ಮುಂಗಾರು ಆರಂಭಗೊಂಡು ಮಹಾರಾಷ್ಟ್ರದ ಪಶ್ಚಿಮಘಟ್ಟದಲ್ಲಿ ಮಳೆ ಶುರುವಾದರೆ ಸಾಕು, ಕೃಷ್ಣಾ ನದಿಗೆ ಲಕ್ಷಾಂತರ ಕ್ಯುಸೆಕ್‌ ನೀರು ಹರಿದು ಬರುತ್ತದೆ. ಭಾರಿ ಮಳೆಯ ಜತೆಗೆ ಕೃಷ್ಣಾನದಿ ಹರಿಯುವ ದಾರಿ ಮಧ್ಯೆ ಘಟಪ್ರಭಾ, ಮಲಪ್ರಭಾ, ದೋಣಿ ನದಿ, ಹಿರೇಹಳ್ಳ ಸೇರಿ ಜಲಮೂಲಗಳು ಸೇರ್ಪಡೆಗೊಂಡು ಕೃಷ್ಣಾ ನದಿಯಲ್ಲಿ ಭಾರಿ ಪ್ರವಾಹಕ್ಕೆ ಕಾರಣವಾಗಿ ಕೃಷ್ಣಾನದಿ ತಟದಲ್ಲಿ ನೆರೆ ಹಾವಳಿ ಸೃಷ್ಟಿಯಾಗುತ್ತದೆ. ಹಲವೆಡೆ ಸಂಚಾರ ಬಂದ್‌ ಆಗಿ ಅನೇಕ ಕಡೆ ಸೇತುವೆಗಳು ಮುಳುಗಡೆಯಾಗುತ್ತವೆ.

ವಿಜಯ ಕರ್ನಾಟಕ 17 Aug 2025 8:47 am

ತಿಗಳರಪೇಟೆ ಬೆಂಕಿ ನಂದಿಸಲು 12 ತಾಸು ಹರಸಾಹಸ: ಕಿಷ್ಕಿಂಧೆಯಂತಹ ಪ್ರದೇಶಕ್ಕೆ ಅಗ್ನಿಶಾಮಕ ವಾಹನ ತಲುಪಲು ಪರದಾಟ!

ತಿಗಳರಪೇಟೆಯಲ್ಲಿ ಕಿಷ್ಕಿಂಧೆಯಂತಹ ಪ್ರದೇಶದಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಅಗ್ನಿಶಾಮಕ ಸಿಬ್ಬಂದಿ 12 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ನಾಲ್ಕು ಮೃತದೇಹಗಳನ್ನು ಹೊರತೆಗೆದರು. ಕಿರಿದಾದ ರಸ್ತೆಗಳು ಮತ್ತು ಇಕ್ಕಟ್ಟಾದ ಕಟ್ಟಡಗಳಿಂದಾಗಿ ವಾಹನಗಳು 600 ಮೀಟರ್ ದೂರದಲ್ಲಿಯೇ ನಿಲ್ಲಬೇಕಾಯಿತು. ಗೃಹ ಸಚಿವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತರ ಕುಟುಂಬಕ್ಕೆ ಪರಿಹಾರ ಘೋಷಿಸಲಾಗಿದೆ.

ವಿಜಯ ಕರ್ನಾಟಕ 17 Aug 2025 8:32 am

ಕೊಲ್ಕತ್ತಾ ಅತ್ಯಾಚಾರ,ಕೊಲೆ ಪ್ರಕರಣ: ಸಂತ್ರಸ್ತೆಯ ಕುಟುಂಬಕ್ಕೆ ರಾಷ್ಟ್ರಪತಿ ಅಭಯ

ಕೊಲ್ಕತ್ತಾ: ಇಲ್ಲಿನ ಆರ್.ಜಿ.ಕರ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಸಂಭವಿಸಿದ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಸಂತ್ರಸ್ತೆಯ ಕುಟುಂಬಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಇ-ಮೇಲ್ ಸಂದೇಶ ಕಳುಹಿಸಿ, ನ್ಯಾಯಕ್ಕಾಗಿ ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ. ತಮ್ಮ ಆಪ್ತ ಸಹಾಯಕರು ಕುಟುಂಬವನ್ನು ಶೀಘ್ರವೇ ಸಂಪರ್ಕಿಸಲಿದ್ದಾರೆ ಎಂದು ರಾಷ್ಟ್ರಪತಿ ಭರವಸೆ ನೀಡಿದ್ದಾರೆ. ಅತ್ಯುನ್ನತ ಸಂವಿಧಾನಾತ್ಮಕ ಕಚೇರಿಯಿಂದ ಸಿಕ್ಕಿದ ಅಭಯದಿಂದ ಉತ್ತೇಜನ ಪಡೆದ ಸಂತ್ರಸ್ತೆಯ ಕುಟುಂಬದವರು ನ್ಯಾಯಕ್ಕಾಗಿ ನಡೆಸುತ್ತಿರುವ ಸುಧೀರ್ಘ ಹೋರಾಟದಲ್ಲಿ ಮತ್ತೆ ಭರವಸೆಯ ಬೆಳಕು ಮೂಡಿದೆ ಎಂದು ಪ್ರತಿಕ್ರಿಯಿಸಿದ್ದಾರೆ. ಈ ಮೊದಲು ಸಂತ್ರಸ್ತೆ ಕುಟುಂಬದವರು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹಸಚಿವ ಅಮಿತ್ ಶಾ ಈ ಬಗ್ಗೆ ಗಮನ ಹರಿಸುವಂತೆ ಪದೇ ಪದೇ ಕೋರಿದ್ದರು. ಆದರೆ ಯಾವುದೇ ಸ್ಪಂದನೆ ಸಿಕ್ಕಿರಲಿಲ್ಲ. ದೆಹಲಿಗೆ ತೆರಳಿ ಶಾ ಮತ್ತು ರಾಷ್ಟ್ರಪತಿಗಳನ್ನು ಭೇಟಿ ಮಾಡಿದರೂ ತಕ್ಷಣಕ್ಕೆ ಯಾವುದೇ ಭರವಸೆ ದೊರಕಿರಲಿಲ್ಲ. ಇದೀಗ ರಾಷ್ಟ್ರಪತಿಗಳಿಂದ ನಮಗೆ ಸಿಹಿ ಸುದ್ದಿ ಸಿಕ್ಕಿದೆ. ತಮ್ಮ ಆಪ್ತ ಸಹಾಯಕರು ಕುಟುಂಬದ ಸಂಪರ್ಕದಲ್ಲಿ ಇರುವುದಾಗಿ ಭರವಸೆ ನೀಡಿದ್ದಾರೆ. ಅವರು ನಮ್ಮ ಸಮಸ್ಯೆಗಳ ಬಗ್ಗೆ ಗಮನ ಹರಿಸಿ, ಪರಿಹರಿಸಲು ಪ್ರಯತ್ನಿಸಲಿದ್ದಾರೆ. ಇದು ನಮಗೆ ಭರವಸೆ ತುಂಬಿದೆ. ಅವರ ಸಹಕಾರ ದೊರಕಿದರೆ, ನ್ಯಾಯಕ್ಕಾಗಿ ಹೋರಾಟ ಮುಂದುವರಿಸಲು ಸಾಧ್ಯವಾಗುತ್ತದೆ ಎಂದು ಸಂತ್ರಸ್ತೆಯ ತಂದೆ ಹೇಳಿದ್ದಾರೆ.

ವಾರ್ತಾ ಭಾರತಿ 17 Aug 2025 8:28 am

ಎಸ್.ಐ.ಟಿ ತನಿಖೆಯ ಹೆಸರಿನಲ್ಲಿ ನಡೆಯುತ್ತಿರುವ ಅಪಪ್ರಚಾರಗಳನ್ನು ನಿಯಂತ್ರಿಸುವಲ್ಲಿ ರಾಜ್ಯ ಸರಕಾರ ವಿಫಲ: ವಿಜಯೇಂದ್ರ

ಬೆಳ್ತಂಗಡಿ: ಎಸ್.ಐ.ಟಿ ತನಿಖೆಯ ಬಗ್ಗೆ ಆಕ್ಷೇಪವಿಲ್ಲ ಅದರ ಹೆಸರಿನಲ್ಲಿ ನಡೆಯುತ್ತಿರುವ ಅಪಪ್ರಚಾರಗಳನ್ನು ನಿಯಂತ್ರಿಸುವಲ್ಲಿ ರಾಜ್ಯ ಸರಕಾರ ವಿಫಲವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿದರು. ಅವರು ಭಾನುವಾರ  ಧರ್ಮಸ್ಥಳ ಕ್ಷೇತ್ರಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು. ಎಸ್.ಐ.ಟಿ ರಚನೆಯಾದಗಲೇ ಅದನ್ನು ಸ್ವಾಗತಿಸಿದ್ದೇವೆ ಎಂದ ಅವರು, ಕ್ಷೇತ್ರದ ವಿರುದ್ದ ನಡೆಯುತ್ತಿರುವ ಷಡ್ಯಂತ್ರಗಳನ್ನು ಸಹಿಸಲು ಸಾಧ್ಯವಿಲ್ಲ. ಡಿ.ಕೆ ಶಿವಕುಮಾರ್ ಅವರೇ ಈ ಬಗ್ಗೆ ಹೇಳಿದ್ದಾರೆ ಆದರೆ ಅಂತಹ ಶಕ್ತಿಗಳ ವಿರುದ್ದ ಕ್ರಮಕ್ಕ ಸರಕಾರ ಯಾಕೆ ಮುಂದಾಗುತ್ತಿಲ್ಲ ಎಂದು ಪ್ರಶ್ನಿಸಿದರು. ಈ ವೇಳೆ ಬಿಜೆಪಿ ನಾಯಕರಾದ  ಸಿ.ಟಿ ರವಿ, ಚಲವಾದಿ ನರಾಯಣ ಸ್ವಾಮಿ, ಸಂಸದ ಬ್ರಿಜೇಶ್ ಚೌಟ, ಶಾಸಕರುಗಳಾದ ವೇದವ್ಯಾಸ್ ಕಾಮತ್, ಹರೀಶ್ ಪೂಂಜ, ಭಗೀರಥಿ ಮುರುಳ್ಯ, ಉಮಾಥ ಕೋಟ್ಯಾನ್, ಭರತ್ ಶೆಟ್ಟಿ, ಪ್ರತಾಪ ಸಿಂಹ ನಯಕ್, ಯಶ್ ಪಾಲ್ ಸುವರ್ಣ ಹಾಗೂ ಇತರರು ಇದ್ದರು. ಬಳಿಕ  ಧರ್ಮಸ್ಥಳ ದ ಧರ್ಮಾಧಿಕಾರಿ ಡಾ ಡಿ ವೀರದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.

ವಾರ್ತಾ ಭಾರತಿ 17 Aug 2025 8:18 am

ಪೋಕ್ಸೋ ದಲ್ಲಿ ಸಿಲುಕಿರುವ ಯಶ್ ದಯಾಳ್ ಸದ್ಯ ಕ್ರಿಕೆಟ್ ಆಡೋ ಹಾಗಿಲ್ಲ!: RCB ಸ್ಟಾರ್ ನನ್ನು ಬ್ಯಾನ್ ಮಾಡಿದ UPCA

UPCA Bans Yash Dayal- ಕಳೆದ ಐಪಿಎಲ್ ಸೀಸನ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಯಶ್ ದಯಾಳ್ ಅವರ ಕ್ರಿಕಟ್ ಭವಿಷ್ಯ ಸಂಕಷ್ಟದಲ್ಲಿ ಸಿಲುಕಿದೆ. ಮಹಿಳೆಯರ ವಿರುದ್ಧ ದೌರ್ಜನ್ಯಕ್ಕೆ ಸಂಬಂಧಿಸಿ ಎರಡು ಪ್ರಕರಣಗಳಲ್ಲಿ ಸಿಲುಕಿರುವ ಅವರನ್ನು ಉತ್ತರ ಪ್ರದೇಶ ಕ್ರಿಕೆಟ್ ಅಸೋಸಿಯೇಶನ್ ಇದೀಗ ಯುಪಿ ಟಿ20 ಲೀಗ್ ನಿಂದ ನಿಷೇಧಿಸಿದೆ. ಆರೋಪ ಮುಕ್ತರಾಗುವವರೆಗೂ ಈ ನಿಷೇಧ ಮುಂದುವರಿಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ವಿಜಯ ಕರ್ನಾಟಕ 17 Aug 2025 8:15 am

ಮೈಸೂರು: ಗುಡುಮಾದನಹಳ್ಳಿ ಬಳಿ 20 ಎಕರೆ ನಿಮ್ಹಾನ್ಸ್‌ಗೆ ಮೀಸಲು ; ಶೀಘ್ರದಲ್ಲಿ ಡಿಸಿಯಿಂದ ಹಸ್ತಾಂತರ

ಸರಕಾರ ಬೆಂಗಳೂರಿನ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ ಮೇಲಿನ ಒತ್ತಡ ತಪ್ಪಿಸಲು ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ನಿಮಾನ್ಸ್‌ ಸ್ಥಾಪಿಸಲು ಮುಂದಾಗಿದೆ. ಅದರ ಮೊದಲ ಹಂತವಾಗಿ ಇದೀಗ ಮೈಸೂರು ಮತು ಕಲಬುರಗಿಯಲ್ಲಿ ನಿಮ್ಹಾನ್ಸ್‌ ಘಟಕ ಸ್ಥಾಪಿಸಲು ಉದ್ದೇಶಿಸಲಾಗಿದೆ. ಇದರಿಂದ ದೊಡ್ಡ ಅಪಘಾತವಾದಾಗ, ಯಾವುದೇ ವ್ಯಕ್ತಿಗೆ ಸ್ಟ್ರೋಕ್ (ಲಕ್ವ) ಹೊಡೆದಾಗ ತಕ್ಷಣ ಚಿಕಿತ್ಸೆ ಲಭಿಸಲಿದೆ.

ವಿಜಯ ಕರ್ನಾಟಕ 17 Aug 2025 8:03 am

Karnataka Weather: ವಾಯುಭಾರ ಕುಸಿತ : ಕರಾವಳಿಗೆ ರೆಡ್ ಅಲರ್ಟ್, ದಕ್ಷಿಣ ಕರ್ನಾಟಕದಲ್ಲಿ ಆ.24 ರವರೆಗೂ ಭಾರಿ ಮಳೆ ಆರ್ಭಟ

ರಾಜ್ಯದಲ್ಲಿ ಮುಂದಿನ ಐದು ದಿನಗಳ ಕಾಲ ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿ ಜಿಲ್ಲೆಗಳಿಗೆ ಆಗಸ್ಟ್ 17 ರಿಂದ 21 ರವರೆಗೆ ಆರೆಂಜ್ ಮತ್ತು ರೆಡ್ ಅಲರ್ಟ್ ಘೋಷಿಸಲಾಗಿದೆ. ಒಳನಾಡಿನ ಹಲವು ಜಿಲ್ಲೆಗಳಿಗೂ ಯೆಲ್ಲೋ ಮತ್ತು ಆರೆಂಜ್ ಅಲರ್ಟ್ ಎಚ್ಚರಿಕೆ ನೀಡಲಾಗಿದೆ. ಶಿವಮೊಗ್ಗ ಜಿಲ್ಲೆಯ ಆಗುಂಬೆ ಸೇರಿದಂತೆ ಹಲವೆಡೆ ಉತ್ತಮ ಮಳೆಯಾಗಿದೆ.

ವಿಜಯ ಕರ್ನಾಟಕ 17 Aug 2025 7:50 am

ಮುಂಬೈ: ಮೊಸರು ಕುಡಿಕೆ ಉತ್ಸವದ ವೇಳೆ ಇಬ್ಬರು ಮೃತ್ಯು, 95 ಮಂದಿಗೆ ಗಾಯ

ಮುಂಬೈ: ಮಹಾನಗರದಲ್ಲಿ ವ್ಯಾಪಕ ಮಳೆಯ ನಡುವೆಯೂ ಹಲವೆಡೆ ಗೋಕುಲಾಷ್ಟಮಿ ಪ್ರಯುಕ್ತ ಸಾಂಪ್ರದಾಯಿಕ ಮೊಸರು ಕುಡಿಕೆ ಉತ್ಸವ ನಡೆಯಿತು. ಆದರೆ ಮಾನವ ಪಿರಮಿಡ್ ನಿರ್ಮಿಸುವ ಉತ್ಸಾಹದ ಭರದಲ್ಲಿ 39 ವರ್ಷದ ಯುವಕ ಮತ್ತು 14 ವರ್ಷದ ಬಾಲಕ ಜೀವ ಕಳೆದುಕೊಂಡ ಧಾರುಣ ಘಟನೆ ವರದಿಯಾಗಿದೆ. ನಗರದ ವಿವಿಧೆಡೆ ಸಂಭವಿಸಿದ ದುರಂತಗಳಲ್ಲಿ ಕನಿಷ್ಠ 95 ಮಂದಿ ಗಾಯಗೊಂಡಿದ್ದಾರೆ. ಬಾಲಕ ಟೆಂಪೊದಲ್ಲಿ ಕುಳಿತಿದ್ದ ವೇಳೆ ಕುಸಿದು ಬಿದ್ದು ಮೃತಪಟ್ಟರೆ, ಯುವಕ ಸ್ನೇಹಿತನ ಮನೆಯ ಬಾಲ್ಕನಿ ಕಿಟಕಿಗೆ ಹಗ್ಗದಿಂದ ಕಟ್ಟಿದ್ದ ಮೊಸರು ಕುಡಿಕೆ ಹಿಡಿಯುವ ಉತ್ಸಾಹದಲ್ಲಿ ಜಾರಿ ಬಿದ್ದು ಜೀವ ಕಳೆದುಕೊಂಡಿದ್ದಾರೆ. ರಾತ್ರಿ 9 ಗಂಟೆರವರೆಗೆ ಮಹಾನಗರ ಪಾಲಿಕೆ ಮತ್ತು ಸರ್ಕಾರಿ ಆಸ್ಪತ್ರೆಗಳಿಂದ ಲಭ್ಯವಾದ ಮಾಹಿತಿ ಪ್ರಕಾರ ಥಾಣೆಯಲ್ಲಿ 17 ಮಂದಿ ಗಾಯಗೊಂಡಿದ್ದು, ನವಿ ಮುಂಬೈನಲ್ಲಿ 6, ಕಲ್ಯಾಣ್- ಉಲ್ಲಾಸ್ ನಗರದಲ್ಲಿ ಐದು ಮಂದಿ ಗಾಯಗೊಂಡಿದ್ದು, ಒಟ್ಟು ಗಾಯಾಳುಗಳ ಸಂಖ್ಯೆ 123ಕ್ಕೇರಿದೆ. ಒಂಬತ್ತು ವರ್ಷದ ಬಾಲಕ ಸೇರಿದಂತೆ ಗಾಯಾಳುಗಳ ಪೈಕಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಇದೇ ಮೊದಲ ಬಾರಿಗೆ 10 ಸ್ತರಗಳ ಮಾನವ ಪಿರಮಿಡ್ ಮೂರು ಬಾರಿ ನಿರ್ಮಿಸಲ್ಪಟ್ಟವು. ಸಚಿವ ಪ್ರತಾಪ್ ಸರನಾಯಕ ಥಾಣೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜೋಗೇಶ್ವರಿಯ ಕೊಂಕಣ ನಗರ ಗೋವಿಂದ ತಂಡ 10 ಸ್ತರಗಳ ಪಿರಮಿಡ್ ರಚಿಸಿದ ಮೊದಲ ತಂಡ ಎನಿಸಿಕೊಂಡಿತು.

ವಾರ್ತಾ ಭಾರತಿ 17 Aug 2025 7:45 am

Aus Vs SA- ಆಸೀಸ್ ನೆಲದಲ್ಲಿ ಕಿಂಗ್ ಕೊಹ್ಲಿ ನಿರ್ಮಿಸಿದ್ದ ಅಪರೂಪದ ದಾಖಲೆ ಪುಡಿಗಟ್ಟಿದ ಡಿವಾಲ್ಡ್ ಬ್ರೆವಿಸ್!

Dewald Brevis Breaks Vira Kohli Record-ಆಸ್ಟ್ರೇಲಿಯಾ ವಿರುದ್ಧ 2ನೇ ಟಿ20 ಪಂದ್ಯದಲ್ಲಿ ಶತಕದೊಂದಿಗೆ ಮಿಂಚಿದ್ದ ದಕ್ಷಿಣ ಆಫ್ರಿಕಾದ ಸ್ಫೋಟಕ ಬ್ಯಾಟರ್ ಡಿವಾಲ್ಡ್ ಬ್ರೆವಿಸ್ ಅವರು 3ನೇ ಟಿ20 ಪಂದ್ಯದಲ್ಲೂ ಅರ್ಧಶತಕ ಬಾರಿಸಿ ಮಿಂಚಿದ್ದಾರೆ. ಮಾತ್ರವಲ್ಲದೆ ವಿರಾಟ್ ಕೊಹ್ಲಿ ಅವರು ಆಸ್ಟ್ರೇಲಿಯಾದಲ್ಲಿ ಮಾಡಿದ್ದ ಅಪರೂಪದ ದಾಖಲೆಯನ್ನೂ ತಮ್ಮ ಹೆಸರಿಗೆ ವರ್ಗಾಯಿಸಿಕೊಂಡಿದ್ದಾರೆ. ಆದರೆ ಗ್ಲೆನ್ ಮ್ಯಾಕ್ಸ್ ವೆಲ್ ಏಕಾಂಗಿ ಸಾಹಸದಿಂದಾಗಿ ಪಂದ್ಯವನ್ನು 2 ವಿಕೆಟ್ ಗಳಿಂದ ಜಯಿಸಿದ ಆಸ್ಟ್ರೇಲಿಯಾ ತಂಡ ಸಣಿಯನ್ನೂ 2-1 ಅಂತರದಿಂದ ಗೆದ್ದುಕೊಂಡಿತು.

ವಿಜಯ ಕರ್ನಾಟಕ 17 Aug 2025 7:15 am

ವಿಧಾನಸೌಧ ಅಗೆಯಲು ಸಾಧ್ಯವೇ? ಶಾಸಕ ಎಸ್‌.ಆರ್‌.ವಿಶ್ವನಾಥ್‌ ಪ್ರಶ್ನೆ, ಹಾಸನದಲ್ಲಿ ಧರ್ಮಸ್ಥಳ ಚಲೋಗೆ ಸ್ವಾಗತ

ಧರ್ಮಸ್ಥಳದ ವಿರುದ್ಧದ ಷಡ್ಯಂತ್ರದ ಬಗ್ಗೆ ಶಾಸಕ ವಿಶ್ವನಾಥ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸೌಜನ್ಯ ಪ್ರಕರಣದ ತನಿಖೆಗೆ ಸ್ವಾಗತಿಸಿ, ಧರ್ಮಸ್ಥಳದ ಬುಡಕ್ಕೆ ಕೈ ಹಾಕುವವರ ವಿರುದ್ಧ ಕಿಡಿಕಾರಿದ್ದಾರೆ. ಮಂಜುನಾಥ ಸ್ವಾಮಿ ಅಪಪ್ರಚಾರ ಮಾಡಿದವರಿಗೆ ಶಿಕ್ಷೆ ನೀಡಲಿ ಎಂದು ಪ್ರಾರ್ಥಿಸಿದ್ದಾರೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಧರ್ಮಸ್ಥಳಕ್ಕೆ ಆಗಮಿಸಿ ದೇವರ ಮೇಲಿನ ವಿಶ್ವಾಸವನ್ನು ಉಳಿಸಬೇಕು ಎಂದು ಮನವಿ ಮಾಡಿದ್ದಾರೆ.

ವಿಜಯ ಕರ್ನಾಟಕ 17 Aug 2025 6:56 am

ತಾಯ್ನಾಡಿಗೆ ಮರಳಿದ ಗಗನಯಾನಿ ಕ್ಯಾಪ್ಟನ್‌ ಶುಭಾಂಶು ಶುಕ್ಲಾ: ಹೆಮ್ಮೆಯಿಂದ ಸ್ವಾಗತ

ಗಗನಯಾನಿ ಗ್ರೂಪ್‌ ಕ್ಯಾಪ್ಟನ್‌ ಶುಭಾಂಶು ಶುಕ್ಲಾ ಅವರು ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿ ಸುರಕ್ಷಿತವಾಗಿ ಮರಳಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅವರು ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಅನುಭವ ಹಂಚಿಕೊಳ್ಳಲಿದ್ದಾರೆ. ಶುಕ್ಲಾ ಅವರ ಅನುಭವವು ಭಾರತದ ಗಗನಯಾನ ಮಾನವ ಬಾಹ್ಯಾಕಾಶ ಹಾರಾಟ ಕಾರ್ಯಕ್ರಮಕ್ಕೆ ಸಹಾಯವಾಗಲಿದೆ ಎಂದು ಜಿತೇಂದ್ರ ಸಿಂಗ್ ತಿಳಿಸಿದ್ದಾರೆ.

ವಿಜಯ ಕರ್ನಾಟಕ 17 Aug 2025 6:55 am

Horoscope Today: ಈ ರಾಶಿಯವರ ಜೀವನದಲ್ಲಿ ಮಹತ್ವದ ಬದಲಾವಣೆ: 12 ರಾಶಿಗಳ ಭವಿಷ್ಯ ಇಲ್ಲಿದೆ.

2025 ಆಗಸ್ಟ್‌ 17 ಭಾನುವಾರದಂದು, 12 ರಾಶಿ ಭವಿಷ್ಯ ಮಾಹಿತಿಯನ್ನ ನೀಡಲಾಗಿದೆ. ಇನ್ನೂ ಇಂದು, ಯಾವ ರಾಶಿಗೆ ನಷ್ಟವಾಗಲಿದೆ..? ನಿಮ್ಮ ರಾಶಿಗೆ ಅನುಸಾರ ಯಾರಿಗೆ ಶುಭ? ಯಾರಿಗೆ ಅಶುಭ? ಎಲ್ಲಾ ರಾಶಿಗಳ ಪಾಪ ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲ ನೀಡುತ್ತವೆ. ಈ ದಿನ ಈ ರಾಶಿಯವರು ತುಂಬಾ ಮಂಗಳಕರ ಎಂದು ನಂಬಲಾಗುತ್ತದೆ. ಒಟ್ಟಾರೆ ಗ್ರಹಗಳ ಸ್ಥಾನ ಬದಲಾವಣೆಯಿಂದ

ಒನ್ ಇ೦ಡಿಯ 17 Aug 2025 6:00 am

ದುರಸ್ತಿಯಲ್ಲಿ ತುಂಗಭದ್ರಾ ಜಲಾಶಯದ ಕ್ರಸ್ಟ್‌ ಗೇಟ್‌, ಆತಂಕದಲ್ಲಿ ರೈತರು

ತುಂಗಭದ್ರಾ ಜಲಾಶಯದ ಆರು ಕ್ರಸ್ಟ್‌ ಗೇಟ್‌ಗಳು ದುರಸ್ತಿಯಲ್ಲಿರುವುದರಿಂದ ಸುಮಾರು 130 ಟಿಎಂಸಿ ನೀರು ನದಿಗೆ ಹರಿದು ಹೋಗಿದೆ. ಇದರಿಂದಾಗಿ ಕೊಪ್ಪಳ, ವಿಜಯನಗರ, ಬಳ್ಳಾರಿ, ರಾಯಚೂರು ಜಿಲ್ಲೆಗಳ ರೈತರು ಎರಡನೇ ಬೆಳೆಗೆ ನೀರು ಸಿಗುತ್ತದೆಯೋ ಇಲ್ಲವೋ ಎಂದು ಚಿಂತಿತರಾಗಿದ್ದಾರೆ. ಜಲಾಶಯದ ಗೇಟ್‌ಗಳನ್ನು ಬದಲಾಯಿಸುವ ಅಗತ್ಯವಿದೆ ಎಂದು ಐಸಿಸಿ ನೀರಾವರಿ ಸಲಹಾ ಸಮಿತಿ ಅಧ್ಯಕ್ಷರು ಹೇಳಿದ್ದಾರೆ.

ವಿಜಯ ಕರ್ನಾಟಕ 17 Aug 2025 5:34 am

ಹೊಸ ದಾಖಲೆ ಬರೆದ ಹಟ್ಟಿ ಚಿನ್ನದ ಗಣಿ: 1,342 ಕೋಟಿ ರೂ. ವಹಿವಾಟು: ಶೇ 3.43ರಷ್ಟು ಹೆಚ್ಚಳ

ಹಟ್ಟಿ ಚಿನ್ನದ ಗಣಿ ಕಂಪನಿಯು ಈ ವರ್ಷ 1,342 ಕೋಟಿ ರೂ ವಹಿವಾಟು ನಡೆಸಿ ಹೊಸ ದಾಖಲೆ ಬರೆದಿದೆ. ಕಳೆದ ವರ್ಷಕ್ಕಿಂತ 300 ಕೋಟಿ ರೂ ಅಧಿಕ ವಹಿವಾಟು ನಡೆದಿದ್ದು, ಇದು ದಾಖಲೆಯ ಸಾಧನೆ ಆಗಿದೆ.. ತೆರಿಗೆ ಪಾವತಿಸಿ 444 ಕೋಟಿ ರೂ ನಿವ್ವಳ ಲಾಭ ಗಳಿಸಿದೆ. ಈ ವರ್ಷವೂ 3,000 ಕೋಟಿ ರೂ.ಗೂ ಅಧಿಕ ವಾರ್ಷಿಕ ವಹಿವಾಟು ಗುರಿಯಿದ್ದು, 1700 ಕೆ.ಜಿ ಚಿನ್ನ ಉತ್ಪಾದಿಸುವ ಗುರಿ ಹೊಂದಲಾಗಿದೆ.

ವಿಜಯ ಕರ್ನಾಟಕ 17 Aug 2025 5:22 am

ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯ ಹುದ್ದೆಗಳ ನೇಮಕಾತಿ ಪ್ರಕ್ರಿಯೆ; ಪರಿಷ್ಕೃತ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ

ಬೆಂಗಳೂರು, ಆ.16: ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ವತಿಯಿಂದ 184 ಹುದ್ದೆಗಳ ನೇಮಕಾತಿಗೆ ಅಧಿಸೂಚನೆಯನ್ನು ಹೊರಡಿಸುವ ಮೂಲಕ ಪರೀಕ್ಷಾ ಪ್ರಕ್ರಿಯೆಯನ್ನು ನಡೆಸಿ ಪ್ರಸ್ತುತ ಪರಿಷ್ಕೃತ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗಿದೆ. ನೇಮಕಾತಿ ಪ್ರಕ್ರಿಯೆಯಲ್ಲಿ ಕಲ್ಯಾಣ ಅಧಿಕಾರಿಗಳ-12 ಹುದ್ದೆಗಳು, ಕ್ಷೇತ್ರ ನಿರೀಕ್ಷಕರು-60 ಹುದ್ದೆಗಳು, ಪ್ರಥಮ ದರ್ಜೆ ಸಹಾಯಕರು-12 ಹುದ್ದೆಗಳು, ದ್ವಿತೀಯ ದರ್ಜೆ ಸಹಾಯಕರು-100 ಹುದ್ದೆಗಳ ಆಯ್ಕೆಗೆ ಅರ್ಹತೆ ಪಡೆದ ಅಭ್ಯರ್ಥಿಗಳ ಪರಿಷ್ಕೃತ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಆ.14ರಂದು ಮಂಡಳಿಯ ವೆಬ್‍ಸೈಟ್ https://karbwwb.karnataka.gov.in   ಮತ್ತು ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದೆ ಎಂದು ಪ್ರಕಟನೆ ತಿಳಿಸಿದೆ.

ವಾರ್ತಾ ಭಾರತಿ 17 Aug 2025 12:29 am

ಚುನಾವಣಾ ಆಯೋಗದ ಉತ್ತರದಾಯಿತ್ವ ಪ್ರಶ್ನಾರ್ಹ : ತೀಸ್ತಾ ಸೆಟಲ್ವಾದ್

ಬೆಂಗಳೂರು, ಆ.16 : ಮಹಾರಾಷ್ಟ್ರ ವಿಧಾನಸಭೆಗೆ 2024ರ ನವೆಂಬರ್‌ನಲ್ಲಿ ನಡೆದ ಚುನಾವಣೆಯ ಫಲಿತಾಂಶವು ಭಾರತೀಯ ಚುನಾವಣಾ ಆಯೋಗದ ಪಾರದರ್ಶಕತೆ ಹಾಗೂ ಉತ್ತರದಾಯಿತ್ವವನ್ನೆ ಪ್ರಶ್ನಿಸುವಂತಾಗಿದೆ ಎಂದು ವೋಟ್ ಫಾರ್ ಡೆಮಾಕ್ರಸಿಯ ಸಹ ಸಂಚಾಲಕಿ ತೀಸ್ತಾ ಸೆಟಲ್ವಾದ್ ತಿಳಿಸಿದರು. ಶನಿವಾರ ನಗರದ ಶಾಸಕರ ಭವನದಲ್ಲಿ ಎದ್ದೇಳು ಕರ್ನಾಟಕ ಸಂಘಟನೆಯ ವತಿಯಿಂದ ‘ಚುನಾವಣಾ ಆಯೋಗದ ಆಯುಧೀಕರಣ’ ವೋಟ್ ಫಾರ್ ಡೆಮಾಕ್ರಸಿ(ವಿಎಫ್‍ಡಿ) ಸಂಸ್ಥೆಯ ಸದಸ್ಯರೊಂದಿಗೆ ಆಂಯೋಜಿಸಿದ್ದ ಸಂವಾದದಲ್ಲಿ ಅವರು ಮಾತನಾಡಿದರು. ಚುನಾವಣೆಯ ಬಳಿಕ ಮಹಾರಾಷ್ಟ್ರದ ಎಲ್ಲ 288 ವಿಧಾನಸಭಾ ಕ್ಷೇತ್ರಗಳ ಕುರಿತು ನಮ್ಮ ಚುನಾವಣಾ ತಜ್ಞರಾದ ಎಂ.ಜಿ.ದೇವಸಹಾಮ್, ಡಾ.ಪ್ಯಾರಾಲಾಲ್ ಗರ್ಗ್, ಮಾಧವ್ ದೇಶ್‍ಪಾಂಡೆ ಹಾಗೂ ಪ್ರೊ.ಹರೀಶ್ ಕಾರ್ಣಿಕ್ ಗಮನಿಸಿದ ವಿಶ್ಲೇಷಣೆಗಳು ಗಂಭೀರ ವೈಪರೀತ್ಯಗಳನ್ನು ಒಳಗೊಂಡಿರುವುದು ಬಯಲು ಮಾಡಿದವು ಎಂದು ಅವರು ಹೇಳಿದರು. ಸಂಜೆ 5 ಗಂಟೆಯವರೆಗೆ ಶೇ.58.22ರಷ್ಟು ಇದ್ದ ಮತದಾನದ ಪ್ರಮಾಣವು ಮಧ್ಯರಾತ್ರಿ ವೇಳೆಗೆ ಶೇ.66.05ಕ್ಕೆ ಹೆಚ್ಚಳವಾಯಿತು. ಅದರಲ್ಲೂ ನಾಂದೇಡ್‍ನಲ್ಲಿ ಶೇ.13.57, ಜಲಗಾಂವ್‍ನಲ್ಲಿ ಶೇ.11.11, ಹಿಂಗೋಲಿಯಲ್ಲಿ ಶೇ.11.06, ಬೀಡ್‍ನಲ್ಲಿ ಶೇ.10.56 ಹಾಗೂ ಧುಲೆಯಲ್ಲಿ ಶೇ.10.46ರಷ್ಟು ಮತದಾನ ಹೆಚ್ಚಳವಾಯಿತು ಎಂದು ಅವರು ಹೇಳಿದರು. ಬಿಜೆಪಿ 25 ಕ್ಷೇತ್ರಗಳಲ್ಲಿ 3 ಸಾವಿರ, 39 ಕ್ಷೇತ್ರಗಳಲ್ಲಿ 5 ಸಾವಿರ, 69 ಕ್ಷೇತ್ರಗಳಲ್ಲಿ 10 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದು ಒಟ್ಟಾರೆ ಚುನಾವಣಾ ಫಲಿತಾಂಶದ ದಿಕ್ಕನ್ನು ಬದಲಿಸುವಂತಾಯಿತು. 2024ರ ಮೇ ತಿಂಗಳಲ್ಲಿ ನಡೆದ ಲೋಕಸಭಾ ಚುನಾವಣೆ ಹಾಗೂ ನವೆಂಬರ್‍ನಲ್ಲಿ ನಡೆದ ವಿಧಾನಸಭಾ ಚುನಾವಣೆ ನಡುವೆ(6 ತಿಂಗಳಲ್ಲಿ) ಮಹಾರಾಷ್ಟ್ರದಲ್ಲಿ ಮತದಾರರ ಸಂಖ್ಯೆ 46 ಲಕ್ಷ ಹೆಚ್ಚಾಗಿದೆ ಎಂದು ತೀಸ್ತಾ ಸೆಟಲ್ವಾದ್ ತಿಳಿಸಿದರು. ಅಷ್ಟೇ ಅಲ್ಲ, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪರಾಭವಗೊಂಡಿದ್ದ 85 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ 12 ಸಾವಿರ ಮತಗಟ್ಟೆಗಳನ್ನು ಹೆಚ್ಚಳ ಮಾಡಲಾಗಿದೆ. ಕೆಲವು ಮತಗಟ್ಟೆಗಳಲ್ಲಿ ಸಂಜೆ 5 ಗಂಟೆ ನಂತರ ಹೊಸದಾಗಿ 600ಕ್ಕೂ ಹೆಚ್ಚು ಮತದಾರರು ಮತದಾನ ಮಾಡಿದ್ದಾರೆ. ಕೆಲವೆಡೆ 10 ಗಂಟೆ ಹೆಚ್ಚುವರಿ ಮತದಾನಕ್ಕೆ ಅವಕಾಶ ಮಾಡಿಕೊಡಲಾಗಿದೆ ಎಂದು ಅವರು ಹೇಳಿದರು. 2024ರ ಆ.30ರಂದು ಭಾರತೀಯ ಚುನಾವಣಾ ಆಯೋಗವು ಮಹಾರಾಷ್ಟ್ರದಲ್ಲಿ 9,64,85,765 ಮತದಾರರಿದ್ದಾರೆ ಎಂದು ತಿಳಿಸಿದೆ. ಆದರೆ, ಮಹಾರಾಷ್ಟ್ರದ ಮುಖ್ಯ ಚುನಾವಣಾಧಿಕಾರಿ ಅದೇ ದಿನ 9,53,74,302 ಮತದಾರರಿದ್ದಾರೆ. ಇವರ ಅಂಕಿ ಸಂಖ್ಯೆಯಲ್ಲಿ 11 ಲಕ್ಷ ಮತದಾರರ ವ್ಯತ್ಯಾಸ ಕಂಡು ಬಂದಿದೆ. ಆನಂತರ, ಅ.15ರಂದು 9,63,69,410 ಮತದಾರರು ಇರುವುದಾಗಿ ತಿಳಿಸಲಾಗುತ್ತದೆ. 15 ದಿನಗಳಲ್ಲಿ ಈ ಸಂಖ್ಯೆ 9,70,25,119ಕ್ಕೆ ಹೆಚ್ಚಳ(ಸುಮಾರು 16 ಲಕ್ಷ)ವಾಗುತ್ತದೆ ಎಂದು ತೀಸ್ತಾ ಸೆಟಲ್ವಾದ್ ಹೇಳಿದರು. ಲೋಕಸಭಾ ಚುನಾವಣೆಯಲ್ಲಿ 9,30,61,760 ಮತಗಳು ಚಲಾವಣೆಯಾದರೆ, ವಿಧಾನಸಭಾ ಚುನಾವಣೆಯಲ್ಲಿ 9,70,25,119 ಮತಗಳು ದಾಖಲಾಗಿವೆ. ಆರೇ ತಿಂಗಳಲ್ಲಿ 39,53,259 ಮತಗಳು ಹೆಚ್ಚಳವಾಗಿದೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ವಿಧಾನಸಭಾ ಕ್ಷೇತ್ರವಾರು ಸರಾಸರಿ 88,713 ಮತಗಳು ಲಭಿಸಿದರೆ, ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 1,16,064 ಮತಗಳು ಸರಾಸರಿ ಪ್ರತಿ ಕ್ಷೇತ್ರದಲ್ಲಿ ಪಡೆದಿದೆ ಎಂದು ಅವರು ಗಮನ ಸೆಳೆದರು. ನಾಂದೇಡ್ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿತು. ಆದರೆ, ಆ ಕ್ಷೇತ್ರದ ವ್ಯಾಪ್ತಿಯಲ್ಲಿನ ಎಲ್ಲ ವಿಧಾನಸಭಾ ಚುನಾವಣೆಯಲ್ಲಿ ಸೋಲು ಅನುಭವಿಸಿತು. ಚುನಾವಣೆಯಲ್ಲಿನ ಅಕ್ರಮಗಳಿಗೆ ಸಂಬಂಧಿಸಿದಂತೆ ನಾಗರಿಕ ಸಮಾಜ ಏನೆ ಪ್ರಶ್ನೆಗಳನ್ನು ಕೇಳಿದರೂ ಚುನಾವಣಾ ಆಯೋಗ ಮೌನ ವಹಿಸಿರುವುದು ಏಕೆ ಎಂದು ತೀಸ್ತಾ ಸೆಟಲ್ವಾದ್ ಪ್ರಶ್ನಿಸಿದರು. ನಾಗರಿಕ ಸಮಾಜವಾಗಿ ನಾವು 2017ರ ನಂತರ ನಡೆಯುತ್ತಿರುವ ಚುನಾವಣಾ ಪ್ರಕ್ರಿಯೆ ಕುರಿತು ಧ್ವನಿ ಎತ್ತುತ್ತಲೆ ಬಂದಿದ್ದೇವೆ. ಈಗಲಾದರೂ ದೇಶದ ರಾಜಕೀಯ ವಿರೋಧ ಪಕ್ಷ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ, ಹೋರಾಟಕ್ಕೆ ಮುಂದಾಗಿರುವುದು ಸ್ವಾಗತಾರ್ಹ ಎಂದು ಅವರು ಹೇಳಿದರು. ಸಂವಾದದಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಎಂ.ಜಿ.ದೇವಸಹಾಯಂ ಮಾತನಾಡಿದರು, ಒಬಮಾ ಆಡಳಿತದ ಸಲಹೆಗಾರ ಮಾಧವ್ ದೇಶ್‍ಪಾಂಡೆ ಚುನಾವಣೆಯ ವ್ಯವಸ್ಥೆ, ಮತದಾನದ ಪ್ರಕ್ರಿಯೆ, ಮತಗಳ ಎಣಿಕೆ ಹಾಗೂ ಚುನಾವಣಾ ಪ್ರಕ್ರಿಯೆಯಲ್ಲಿ ತಂತ್ರಜ್ಞಾನದ ಬಳಕೆ ಕುರಿತು ಪ್ರಾತ್ಯಕ್ಷಿತೆ ನೀಡಿದರು. ವಿಎಫ್‍ಡಿ ಬೇಡಿಕೆಗಳು: •ಮತದಾನ ವ್ಯವಸ್ಥೆಯ ವಿಕೇಂದ್ರೀಕರಣ : ಭಾರತೀಯ ಚುನಾವಣಾ ಆಯೋಗವು ಕೇವಲ ಲೋಕಸಭಾ, ರಾಜ್ಯಸಭಾ ಹಾಗೂ ರಾಷ್ಟ್ರಪತಿಯ ಚುನಾವಣೆಯನ್ನು ನಡೆಸಬೇಕು. ರಾಜ್ಯ ಚುನಾವಣಾ ಆಯೋಗಗಳು ವಿಧಾನಸಭೆ, ಪಂಚಾಯಿತಿ ಸೇರಿದಂತೆ ಸ್ಥಳೀಯ ಚುನಾವಣೆಗಳನ್ನು ನಡೆಸಬೇಕು. •ತಕ್ಷಣ ಇವಿಎಂ, ವಿವಿಪ್ಯಾಟ್ ಹಾಗೂ ಮತದಾರರ ಪಟ್ಟಿಯ ಪರಿಶೋಧನೆ ಮಾಡಬೇಕು. •ಮಶೀನ್ ರೀಡಬಲ್ ರೋಲ್ಸ್, ಅರ್ಜಿ ಸಂಖ್ಯೆ 17ಎ/17ಸಿ ಹಾಗೂ ಮತಗಟ್ಟೆಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಬೇಕು. •ಮತದಾನದ ದಾಖಲೆಗಳು ಸಾರ್ವಜನಿಕವಾಗಿ ಲಭ್ಯವಾಗದಿರುವಂತೆ ನಿಯಮ 93ಕ್ಕೆ ತಂದಿರುವ ತಿದ್ದುಪಡಿಯನ್ನು ಕೂಡಲೆ ಹಿಂಪಡೆದು, ಪಾರದರ್ಶಕತೆ ಜಾರಿಗೆ ತರಬೇಕು. •ಮತದಾನದ ಪರಿಶೀಲನೆಗೆ ಕಾನೂನಿನ ರಕ್ಷಣೆ ಒದಗಿಸಬೇಕು.

ವಾರ್ತಾ ಭಾರತಿ 17 Aug 2025 12:09 am

‘ಮತಗಳ್ಳತನ’ ಕುರಿತು ಚುನಾವಣಾ ಆಯೋಗ ಸ್ಪಷ್ಟನೆ ನೀಡಲಿ : ಮನ್ಸೂರ್ ಅಲಿ ಖಾನ್

ಬೆಂಗಳೂರು, ಆ.16 : ಲೋಕಸಭಾ ಚುನಾವಣೆ ಸಂದರ್ಭದಲ್ಲಿ ನಡೆದಿರುವ ಮತಗಳ್ಳತನದ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಾಕ್ಷ್ಯಾಧಾರಗಳನ್ನು ದೇಶದ ಮುಂದೆ ಇಟ್ಟಿದ್ದಾರೆ. ಈ ಕುರಿತು ಭಾರತೀಯ ಚುನಾವಣಾ ಆಯೋಗ ಸ್ಪಷ್ಟನೆ ನೀಡಬೇಕು ಎಂದು ಎಐಸಿಸಿ ಕಾರ್ಯದರ್ಶಿ ಹಾಗೂ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ ಮನ್ಸೂರ್ ಅಲಿ ಖಾನ್ ಆಗ್ರಹಿಸಿದರು. ಶನಿವಾರ ಶಿವಾಜಿನಗರದಲ್ಲಿರುವ ಅಲ್ ಅಮೀನ್ ಕನ್ನಡ ಪ್ರಾಥಮಿಕ ಶಾಲೆ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೊಳಪಡುವ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಮತಗಳ್ಳತನ ಯಾವ ರೀತಿ ನಡೆಸಲಾಗಿದೆ ಎಂದು ಬಹಿರಂಗವಾಗಿದೆ ಎಂದು ಹೇಳಿದರು. ಚುನಾವಣಾ ಆಯೋಗವು ಬಿಜೆಪಿಯ ಪರವಾಗಿ ಕೆಲಸ ಮಾಡುತ್ತಿರುವಂತೆ ಕಾಣುತ್ತಿದೆ. ಮತಗಳ್ಳತನ ಕೇವಲ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಸಮಸ್ಯೆಯಲ್ಲ, ಇದು ಇಡೀ ದೇಶದ ವಿಷಯವಾಗಿದೆ. ರಾಹುಲ್ ಗಾಂಧಿಯವರು ದೇಶ ಹಾಗೂ ಚುನಾವಣಾ ಆಯೋಗದ ಮುಂದೆ ಈ ಸಂಬಂಧ ಪ್ರಶ್ನೆಯನ್ನು ಇರಿಸಿದ್ದಾರೆ ಎಂದು ಮನ್ಸೂರ್ ಅಲಿ ಖಾನ್ ತಿಳಿಸಿದರು. ನಮ್ಮ ಸಂವಿಧಾನವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರಿಗೂ ಮತದಾನದ ಹಕ್ಕು ನೀಡಿದೆ. ಇವತ್ತು ಆ ಹಕ್ಕನ್ನು ಮತಗಳ್ಳತನ ಮೂಲಕ ಕಸಿಯಲಾಗುತ್ತಿದೆ. 9 ದಿನ ಆದರೂ ಚುನಾವಣಾ ಆಯೋಗವು ರಾಹುಲ್ ಗಾಂಧಿಯ ಪ್ರಶ್ನೆಗಳಿಗೆ ಉತ್ತರ ನೀಡಿಲ್ಲ. ಮತದಾರರ ಪಟ್ಟಿಯಲ್ಲಿ ಇಷ್ಟೊಂದು ಅಕ್ರಮ ನಡೆದಿದೆ ಅಂದರೆ, ಪ್ರಜಾಪ್ರಭುತ್ವದ ಮೇಲೆ ಜನರ ವಿಶ್ವಾಸ ಉಳಿಯಲು ಸಾಧ್ಯವೆ? ಎಂದು ಅವರು ಪ್ರಶ್ನಿಸಿದರು. ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಒಂದು ಲಕ್ಷಕ್ಕಿಂತ ಹೆಚ್ಚು ಮತಗಳ್ಳತನ ಆಗಿರುವ ಬಗ್ಗೆ ನಾವು ಗಮನ ಸೆಳೆದಿದ್ದೇವೆ. ಚುನಾವಣಾ ಆಯೋಗ ಮೌನವಹಿಸದೆ ಈ ಬಗ್ಗೆ ಸ್ಪಷ್ಟನೆ ನೀಡಲಿ. ಮುಂದಿನ ದಿನಗಳಲ್ಲಿ ಈ ಬಗ್ಗೆ ಏನು ಮಾಡಬೇಕು ಎಂದು ಕಾಂಗ್ರೆಸ್ ಹೈಕಮಾಂಡ್ ಸೂಕ್ತ ತೀರ್ಮಾನ ಕೈಗೊಳ್ಳುತ್ತದೆ ಎಂದು ಮನ್ಸೂರ್ ಅಲಿ ಖಾನ್ ಹೇಳಿದರು.

ವಾರ್ತಾ ಭಾರತಿ 16 Aug 2025 11:58 pm

ನಾನು ದೇಶದಲ್ಲಿ ನಂ.1 ಗೃಹ ಸಚಿವ, ಚಾಟ್ ಜಿಪಿಟಿ ನೋಡೋಕೆ ಹೇಳಿ : ಜಿ.ಪರಮೇಶ್ವರ್

ತುಮಕೂರು : ʼಗೊತ್ತಿಲ್ಲ ಸಚಿವರುʼ ಎಂದು ಟ್ರೋಲ್ ಮಾಡುವವರಿಗೆ ‘ಚಾಟ್ ಜಿಪಿಟಿ ನೋಡೋಕೆ ಹೇಳಿ, ಪರಮೇಶ್ವರ್ ಸ್ಥಾನ ಎಲ್ಲಿದೆ ಎಂದು ಗೊತ್ತಾಗುತ್ತದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ. ʼಗೊತ್ತಿಲ್ಲ ಸಚಿವರುʼ ಎಂದು ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಮಾಡುತ್ತಿದ್ದಾರೆ ಎಂಬ ಪ್ರಶ್ನೆಗೆ ನಗರದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಅವರು, ‘ಹೇಳ್ಕೊಳ್ಳಿ ಬಿಡ್ರಿ. ಈ ದೇಶದಲ್ಲಿ ಪ್ರಥಮ ಸ್ಥಾನದಲ್ಲಿ ಗೃಹ ಸಚಿವರು ಇರುವುದು ಪರಮೇಶ್ವರ್. ಅವರಿಗೆ ಚಾಟ್ ಜಿಪಿಟಿ ನೋಡೋಕೆ ಹೇಳಿ. ನೀವು ಪ್ರಶ್ನೆ ಕೇಳ್ತಿರಾ ಎಲ್ಲದಲ್ಲೂ ನಾವು ಉತ್ತರ ಕೊಡುವುದಕ್ಕೆ ಆಗುತ್ತಾ? ಸ್ವಾಭಾವಿಕವಾಗಿ ಗೊತ್ತಿಲ್ಲ ಎಂದು ಹೇಳುತ್ತೇನೆ. ಗೃಹ ಸಚಿವನಾಗಿ ನಾನು ಕೊಡುವಂತಹ ಹೇಳಿಕೆ ಬಹಳ ಜವಾಬ್ದಾರಿಯುತವಾಗಿರಬೇಕು. ಗೊತ್ತಿಲ್ಲದಿರುವುದನ್ನೆಲ್ಲ ಹೇಳುವುದಕ್ಕೆ ಆಗುವುದಿಲ್ಲ. ಹಾಗಾಗಿ ಗೊತ್ತಿಲ್ಲ ಎಂದು ಹೇಳಿರುತ್ತೇನೆ’ ಎಂದರು. ಷಡ್ಯಂತ್ರ ರೂಪಿಸಿದ್ದಾರೆ ಎಂಬ ಮಾಜಿ ಸಚಿವ ಕೆ.ಎನ್.ರಾಜಣ್ಣ ಹೇಳಿಕೆ ಬಗ್ಗೆ ಕೇಳಿದಾಗ, ʼಅವರ ಹೇಳಿಕೆಗೆ ನಾನು ಉತ್ತರ ನೀಡಲು ಆಗುವುದಿಲ್ಲ. ಕೆ.ಎನ್.ರಾಜಣ್ಣ ಜವಾಬ್ದಾರಿಯುತ ಸಚಿವರಾಗಿದ್ದವರು. ರಾಜಣ್ಣ ಹೇಳಿಕೆ ಬಗ್ಗೆ ನೀವು ಅವರನ್ನೇ ಕೇಳಬೇಕು. ಷಡ್ಯಂತ್ರ ರೂಪಿಸುವ ವಿಚಾರ ನನ್ನ ಗಮನಕ್ಕೆ ಬಂದಿಲ್ಲʼ ಎಂದು ಹೇಳಿದರು. ಧರ್ಮಸ್ಥಳ ಚಲೋ ಬಗ್ಗೆ ಮಾತನಾಡಿ, ʼಬಿಜೆಪಿಯವರು ‍ಶ್ರೀ ಮಂಜುನಾಥನ ಆಶೀರ್ವಾದಕ್ಕೆ ಹೋಗುತ್ತಿದ್ದಾರೆ. ಮಂಜುನಾಥನ ಆಶೀರ್ವಾದ ಪಡೆದುಕೊಂಡು ಬರಲಿ. ನಾವು ಧರ್ಮಸ್ಥಳಕ್ಕೆ ಅನೇಕ ಸಂದರ್ಭದಲ್ಲಿ ಹೋಗಿದ್ದೇನೆ. ಮುಂದೆಯೂ ಕೂಡ ಹೋಗುತ್ತೇನೆ. ಬಿಜೆಪಿಯವರನ್ನು ಕೇಳಿಕೊಂಡು ದೇವಸ್ಥಾನಕ್ಕೆ ಹೋಗ್ತಾರಾ?ʼ ಎಂದು ಪ್ರಶ್ನಿಸಿದರು.

ವಾರ್ತಾ ಭಾರತಿ 16 Aug 2025 11:44 pm

ಭಾರತಕ್ಕೆ ತಪ್ಪಿತಾ ಹೆಚ್ಚು'ವರಿ' ಸುಂಕ? ಪುಟಿನ್‌ ಭೇಟಿ ವೇಳೆ ಮಹತ್ವದ ಸುಳಿವು ನೀಡಿದ ಟ್ರಂಪ್‌

ಭಾರತದ ಮೇಲೆ ವಿಧಿಸಲಾಗಿದ್ದ ಶೇ. 25ರಷ್ಟು ಆಮದು ಸುಂಕವನ್ನು ಸದ್ಯಕ್ಕೆ ವಿಧಿಸದಿರಲು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸುಳಿವು ನೀಡಿದ್ದಾರೆ. ರಷ್ಯಾ ಅಧ್ಯಕ್ಷ ಪುಟಿನ್‌ ಜತೆಗಿನ ಮಾತುಕತೆ ಬಳಿಕ, ರಷ್ಯಾದಿಂದ ತೈಲ ಖರೀದಿಸುವ ದೇಶಗಳಿಗೆ ಸುಂಕ ವಿನಾಯಿತಿ ನೀಡುವ ಬಗ್ಗೆ ಪರಿಶೀಲನೆ ನಡೆಸುವುದಾಗಿ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ, ಆಗಸ್ಟ್ 27ರ ನಂತರ ಭಾರತಕ್ಕೆ ತಾತ್ಕಾಲಿಕ ರಿಲೀಫ್‌ ಸಿಗುವ ಸಾಧ್ಯತೆ ಇದೆ.

ವಿಜಯ ಕರ್ನಾಟಕ 16 Aug 2025 11:44 pm

ಮಳೆ ಅಬ್ಬರ: ಶಿರಾಡಿಘಾಟ್ ರಸ್ತೆಯಲ್ಲಿ ವಾಹನ ಓಡಾಟ ಸಂಪೂರ್ಣ ಸ್ಥಗಿತ, ರೈಲು ಸಂಚಾರದಲ್ಲೂ ವ್ಯತ್ಯಯ

ಹಾಸನದಲ್ಲಿ ಧಾರಾಕಾರ ಮಳೆಯಿಂದಾಗಿ ಶಿರಾಡಿಘಾಟ್‌ನಲ್ಲಿ ಭೂಕುಸಿತ ಉಂಟಾಗಿದ್ದು, ವಾಹನ ಸಂಚಾರ ಸ್ಥಗಿತಗೊಂಡಿದೆ. ಇದರಿಂದ ಸಾವಿರಾರು ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದೇ ರೀತಿ, ಪಶ್ಚಿಮ ಘಟ್ಟದಲ್ಲಿ ಭೂಕುಸಿತದಿಂದ ಬೆಂಗಳೂರು - ಮಂಗಳೂರು ರೈಲು ಸಂಚಾರದಲ್ಲೂ ವ್ಯತ್ಯಯ ಉಂಟಾಗಿದ್ದು, ಹಲವು ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದೆ. ಪ್ರಯಾಣಿಕರು ಊಟವಿಲ್ಲದೆ, ಮಳೆಯಿಂದ ವಾಹನದಿಂದ ಹೊರಬರಲಾಗದೆ ಪರದಾಡುತ್ತಿದ್ದಾರೆ.

ವಿಜಯ ಕರ್ನಾಟಕ 16 Aug 2025 11:42 pm

ವಿದೇಶದಲ್ಲಿ ಅಧ್ಯಯನ ಯೋಜನೆ | 5 ಸಾವಿರಕ್ಕೂ ಹೆಚ್ಚು ಆಕಾಂಕ್ಷಿಗಳ ನೊಂದಣಿ

ಬೆಂಗಳೂರು, ಆ. 16: ಕೌಶಲ್ಯಾಭಿವೃದ್ಧಿ ಇಲಾಖೆಯ ಅಡಿಯಲ್ಲಿ ಕರ್ನಾಟಕ ವೃತ್ತಿಪರ ತರಬೇತಿ ಮತ್ತು ಕೌಶಲ್ಯ ಅಭಿವೃದ್ಧಿ ನಿಗಮ(ಕೆವಿಟಿಎಸ್‍ಡಿಸಿ) ಮೂಲಕ ಕರ್ನಾಟಕ ಸರಕಾರದ ಮಹತ್ವಾಕಾಂಕ್ಷೆಯ ವಿದೇಶ ಅಧ್ಯಯನ ಉಪಕ್ರಮಕ್ಕೆ 5 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ವಿದ್ಯಾರ್ಥಿಗಳು ಇನ್ನಷ್ಟು ಹೆಚ್ಚಿನ ಭಾಗವಹಿಸುವಿಕೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಇಲಾಖೆಯು, ನಾಳೆ(ಆ.17) ನಗರದ ಹೋಟೆಲ್ ಲಲಿತ್ ಅಶೋಕ್‍ನಲ್ಲಿ ವಿದೇಶ ಅಧ್ಯಯನ ಎಕ್ಸ್‌ಪೋ ಆಯೋಜಿಸಿದೆ. ಇನ್ನಷ್ಟು ಮಂದಿ ನೊಂದಣಿ ಮಾಡಿಕೊಳ್ಳುವ ಸಾಧ್ಯತೆಯೂ ಇದೆ ಎಂದು ತಿಳಿಸಲಾಗಿದೆ. ಕರ್ನಾಟಕದ ವಿದ್ಯಾರ್ಥಿಗಳಿಗೆ ಆಕರ್ಷಕ ಶೈಕ್ಷಣಿಕ ಅವಕಾಶಗಳನ್ನು ನೀಡುವ 60ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ವಿಶ್ವ ವಿದ್ಯಾಲಯಗಳು ಈಗಾಗಲೇ ಎಕ್ಸ್‌ಪೋ ನಡೆಯುವ ಲಲಿತ್ ಅಶೋಕ್ ಹೊಟೇಲ್‍ಗೆ ಬಂದಿವೆ. ರವಿವಾರ ಇಡೀ ದಿನ ಈ ಪ್ರದರ್ಶನ ನಡೆಯಲಿದೆ. ಹಣಕಾಸಿನ ಸಮಸ್ಯೆಯನ್ನು ಸೇರಿದಂತೆ ಹಲವು ಸಮಸ್ಯೆಗಳಿಗೆ ಪರಿಹಾರವನ್ನು ಈ ವೇದಿಕೆ ಒದಗಿಸಿಕೊಡಲಿದೆ. ಸಾರ್ವಜನಿಕ ಮತ್ತು ಖಾಸಗಿ ಬ್ಯಾಂಕುಗಳು ಸ್ಪರ್ಧಾತ್ಮಕ ಬಡ್ಡಿದರಗಳಲ್ಲಿ ಶಿಕ್ಷಣ ಸಾಲಗಳನ್ನು ನೀಡುವ ಮಳಿಗೆಗಳನ್ನು ಹಾಕಲಾಗಿವೆ. ಸಾರ್ವಜನಿಕ ಸಂಸ್ಥೆಯಾದ ಕರ್ನಾಟಕ ಬ್ಯಾಂಕ್ ಸರಕಾರಕ್ಕೆ ಅತ್ಯಂತ ವಿದ್ಯಾರ್ಥಿ ಸ್ನೇಹಿ ಹಣಕಾಸು ಪ್ಯಾಕೇಜ್‍ಗಳ ಭರವಸೆ ನೀಡಿರುವುದು ಪ್ರಮುಖ ಆಕರ್ಷಣೆಯಾಗಿದೆ. ‘ವಿದೇಶದಲ್ಲಿ ಅಧ್ಯಯನ ಮಾಡುವುದು ಇನ್ನು ಮುಂದೆ ಶ್ರೀಮಂತರಿಗೆ ಮಾತ್ರ ಮೀಸಲಾಗಿರುವ ಸವಲತ್ತು ಅಲ್ಲ. ನಮ್ಮ ಸರಕಾರದ ಈ ಕ್ರಮದಿಂದಾಗಿ, ಆರ್ಥಿಕವಾಗಿ ದುರ್ಬಲ ಹಿನ್ನೆಲೆಯ ವಿದ್ಯಾರ್ಥಿಗಳು ಈಗ ಆರ್ಥಿಕ ಹೊರೆಯಿಲ್ಲದೆ ವಿದೇಶದಲ್ಲಿ ಉನ್ನತ ಶಿಕ್ಷಣವನ್ನು ಪಡೆಯಬಹುದು. ಇದು ಭಾರತದಲ್ಲಿ ಇದೇ ರೀತಿಯ ಮೊದಲ ಯೋಜನೆಯಾಗಿದ್ದು,ಜಾಗತಿಕ ಶಿಕ್ಷಣವನ್ನು ಸಮಾಜದ ಎಲ್ಲ ವರ್ಗಗಳಿಗೂ ಲಭ್ಯವಾಗುವಂತೆ ಮಾಡಿದೆ’ ಎಂದು ಕೌಶಲ್ಯಾಭಿವೃದ್ಧಿ, ಜೀವನೋಪಾಯ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ. ವಿದೇಶಕ್ಕೆ ಹೊರ ಹೋದ ನಂತರವೂ ಬೆಂಬಲ ನೀಡಲಾಗುವುದು. ಖಾಸಗಿ ಕಾರ್ಯಕ್ರಮಗಳಿಗಿಂತ ಭಿನ್ನವಾಗಿ, ಸರಕಾರಿ ಬೆಂಬಲಿತ ಯೋಜನೆಯು ವಿದೇಶದಲ್ಲಿ ನಿರಂತರ ಸಹಾಯವನ್ನು ಒದಗಿಸುತ್ತದೆ. ಭಾಗವಹಿಸಲು ಇಚ್ಛಿಸುವ ವಿದ್ಯಾರ್ಥಿಗಳು ಕೆಳಕಂಡ ವೆಬ್‍ಸೈಟ್‍ನಲ್ಲಿ ತಮ್ಮ ಹೆಸರು ನೋಂದಣಿ ಮಾಡಿಕೊಳ್ಳಬಹುದು. . http://studyabroad.ksdckarnataka.com   ಎಂದು ಪ್ರಕಟಣೆ ಕೋರಿದೆ.

ವಾರ್ತಾ ಭಾರತಿ 16 Aug 2025 11:22 pm

LIC ಮಾರಾಟಕ್ಕಿಟ್ಟ ಕೇಂದ್ರ ಸರಕಾರ!

ತನ್ನ ಪಾಲಿನ 2.5 ರಿಂದ 3% ರಷ್ಟನ್ನು ಮಾರಲಿರುವ ಕೇಂದ್ರ?

ವಾರ್ತಾ ಭಾರತಿ 16 Aug 2025 11:18 pm

ಬೆಂಗಳೂರು | ಸಿಲಿಂಡರ್ ಸ್ಫೋಟ ದುರಂತ ಸ್ಥಳಕ್ಕೆ ಸಚಿವ ಝಮೀರ್ ಅಹ್ಮದ್ ಖಾನ್ ಭೇಟಿ

ಬೆಂಗಳೂರು, ಆ.16: ವಿಲ್ಸನ್ ಗಾರ್ಡನ್‍ನ ಚಿನ್ನಯ್ಯನ ಪಾಳ್ಯದಲ್ಲಿ ಸಿಲಿಂಡರ್ ಸ್ಫೋಟಗೊಂಡು ದುರಂತ ನಡೆದ ಸ್ಥಳ ಹಾಗೂ ನರ್ಗತಪೇಟೆಯಲ್ಲಿ ಅಗ್ನಿ ಅವಘಡ ಸಂಭವಿಸಿದ ಸ್ಥಳಕ್ಕೆ ಶನಿವಾರ ಸಚಿವ ಝಮೀರ್ ಅಹ್ಮದ್ ಖಾನ್ ಭೇಟಿ ನೀಡಿ, ಸಂತ್ರಸ್ತ ಕುಟುಂಬಗಳಿಗೆ ಸಾಂತ್ವನ ಹೇಳಿ ವೈಯಕ್ತಿಕವಾಗಿ ಪರಿಹಾರ ನೀಡಿದರು. ಚಿನ್ನಯ್ಯನ ಪಾಳ್ಯದಲ್ಲಿ ಸಿಲಿಂಡರ್ ಸ್ಫೋಟ ಸಂಭವಿಸಿ ಮನೆಗಳು ಹಾನಿಯಾದ ಸ್ಥಳಕ್ಕೆ ಭೇಟಿ ನೀಡಿ ಮೃತ ಬಾಲಕನ ಕುಟುಂಬಕ್ಕೆ ಐದು ಲಕ್ಷ ರೂ., ತಾಯಿ-ಮಗಳು ಗಾಯಳು ಕುಟುಂಬಕ್ಕೆ ಎರಡು ಲಕ್ಷ ರೂ., ಇಬ್ಬರು ಗಾಯಾಳು ಕುಟುಂಬಕ್ಕೆ ಎರಡು ಲಕ್ಷ ರೂ. ಹಾಗೂ ಸಣ್ಣ ಪುಟ್ಟ ಗಾಯಗೊಂಡವರಿಗೆ ತಲಾ 25 ಸಾವಿರ ರೂ. ಪರಿಹಾರವನ್ನು ಅವರು ನೀಡಿದರು. ನಂತರ ಬೆಂಗಳೂರು ನಗರ್ತ ಪೇಟೆಯಲ್ಲಿ ಅಗ್ನಿ ಆಕಸ್ಮಿಕ ನಡೆದ ಸ್ಥಳಕ್ಕೆ ಭೇಟಿ ನೀಡಿದ ಝಮೀರ್ ಅಹ್ಮದ್ ಖಾನ್, ಮೃತರ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿ ಮದನ್, ಸುರೇಶ್ ಕುಟುಂಬಕ್ಕೆ ವೈಯಕ್ತಿಕವಾಗಿ ತಲಾ ಐದು ಲಕ್ಷ ರೂ. ಪರಿಹಾರ ನೀಡುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಕೆ-ಎಂಡಿಸಿ ಅಧ್ಯಕ್ಷ ಅಲ್ತಾಫ್ ಖಾನ್, ಕಾಂಗ್ರೆಸ್ ಮುಖಂಡ ಯುವರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 16 Aug 2025 11:17 pm

ಚಿಕ್ಕಮಗಳೂರು | ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಕಮೆಂಟ್ : ಯುವಕನ ಬಂಧನ

ಚಿಕ್ಕಮಗಳೂರು, ಆ.16: ಜೈನ ಧರ್ಮದ ಹೆಣ್ಣು ಮಕ್ಕಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಾಕಲಾಗಿದ್ದ ಪೋಸ್ಟ್‌ವೊಂದಕ್ಕೆ ಅವಹೇಳನಕಾರಿ ಕಮೆಂಟ್ ಮಾಡಿದ ಆರೋಪದ ಮೇರೆಗೆ ಜಿಲ್ಲೆಯ ಅಜ್ಜಂಪುರ ಮೂಲದ ಯುವಕನೋರ್ವನನ್ನು ಪೊಲೀಸರು ಬಂಧಿಸಿದ ಘಟನೆ ಶುಕ್ರವಾರ ರಾತ್ರಿ ನಡೆದಿದೆ. ಧರ್ಮಸ್ಥಳದಲ್ಲಿ ನೂರಾರು ಮೃತದೇಹಗಳನ್ನು ಹೂತಿಟ್ಟಿದ್ದೇನೆ ಎಂಬ ಹೇಳಿಕೆ ಮತ್ತು ಆನಂತರ ನಡೆಯುತ್ತಿರುವ ಬೆಳವಣಿಗೆಗಳ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ ಬಂದಿದ್ದ ಪೋಸ್ಟ್‌ವೊಂದಕ್ಕೆ ಅಜ್ಜಂಪುರ ತಾಲೂಕಿನ ಯುವಕ ಉಮೇಶ್‌ಗೌಡ ಎಂಬಾತ ಆ.2ರಂದು ಅಶ್ಲೀಲವಾಗಿ ಕಮೆಂಟ್ ಹಾಕಿದ್ದ ಎನ್ನಲಾಗಿದೆ. ಉಮೇಶ್‌ಗೌಡ ತನ್ನ ಕಮೆಂಟ್‌ನಲ್ಲಿ ಜೈನ ಸಮುದಾಯದ ಮಹಿಳೆಯರ ಬಗ್ಗೆ ಅವಹೇಳನಕಾರಿ ಕಮೆಂಟ್ ಬರೆದಿದ್ದ ಎನ್ನಲಾಗಿದ್ದು, ಈ ಸಂಬಂಧ ಕಳಸ ತಾಲೂಕು ಮೂಲದ ಪದ್ಮರಾಜಯ್ಯ ಎಂಬವರು ಉಮೇಶ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಅಜ್ಜಂಪುರ ಮೂಲದ ಉಮೇಶ್‌ಗೌಡನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯ ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ವಾರ್ತಾ ಭಾರತಿ 16 Aug 2025 11:08 pm

ಶಿರಾಡಿ ಘಾಟ್‍ನಲ್ಲಿ ಗುಡ್ಡ ಕುಸಿತ

ಉಪ್ಪಿನಂಗಡಿ: ಪಶ್ಚಿಮಘಟ್ಟದ ಶಿರಾಡಿ ಘಾಟ್ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದ್ದು, ಶಿರಾಡಿ ಘಾಟ್ ವ್ಯಾಪ್ತಿಯ ಕೆಂಪು ಹಳ್ಳ ಎಂಬಲ್ಲಿ ಗುಡ್ದ ಜರಿತವುಂಟಾಗಿದ್ದು , ಹೆದ್ದಾರಿಯಲ್ಲಿನ ವಾಹನ ಸಂಚಾರಕ್ಕೆ ವ್ಯತ್ಯಯ ಉಂಟಾಗಿದೆ. ಹಾಗೂ ನೇತ್ರಾವತಿ ಕುಮಾರಧಾರ ನದಿಗಳಲ್ಲಿ ನೀರಿನ ಹರಿವಿನಲ್ಲಿ ಶನಿವಾರದಂದು ಡಿಢೀರ್ ಹೆಚ್ಚಳವುಂಟಾಗಿದೆ. ಶಿರಾಡಿ ಘಾಟ್ ಪ್ರದೇಶದಲ್ಲಿ ಭಾರೀ ಮಳೆ ಸುರಿಯುತ್ತಿರುವುದರಿಂದ ಕೆಂಪಳ್ಳದಲ್ಲಿ ಸಾಯಂಕಾಲದ ವೇಳೆ ಗುಡ್ಡದಿಂದ ಮಣ್ಣು ಜರಿದು ಹೆದ್ದಾರಿಗೆ ಬಿದ್ದಿದೆ . ಇದರಿಂದಾಗಿ ವಾಹನ ಸಂಚಾರಕ್ಕೆ ತಡೆಯುಂಟಾಗಿದೆಯಾದರೂ, ಸಕಾಲಿಕ ಕಾರ್ಯಾಚರಣೆಯಿಂದಾಗಿ ರಾತ್ರಿ ವೇಳೆ ವಾಹನ ಸಂಚಾರವನ್ನು ಪುನರಾರಂಭಗೊಳಿಸಲಾಗಿದೆ. ಈ ಮಧ್ಯೆ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಉಪ್ಪಿನಂಗಡಿಯಲ್ಲಿ ನೇತ್ರಾವತಿ ಕುಮಾಧಾರ ನದಿಗಳಲ್ಲಿ ಸಾಯಂಕಾಲದ ವೇಳೆಗೆ ನೀರಿನ ಮಟ್ಟ 26.03 ಇದೆ. ಬೆಳಗ್ಗೆ ನೀರಿನ ಮಟ್ಟ 25.07 ಇತ್ತು. ಕಳೆದ ಮೂರು ದಿನಗಳಿಂದ ಬಿರುಗಾಳಿ ಸಹಿತ ಮಳೆ ಪದೇ ಪದೇ ಸುರಿಯುತ್ತಿದ್ದು, ಈ ಮಳೆಯ ನಡುವೆಯೇ ಸ್ವಾತಂತ್ರ್ಯೋತ್ಸವ ಹಾಗೂ ಮೊಸರುಕುಡಿಕೆ ಉತ್ಸವಗಳನ್ನು ನಡೆಸುವಂತಾಗಿದೆ.

ವಾರ್ತಾ ಭಾರತಿ 16 Aug 2025 11:05 pm

ಪ್ರತಿಸುಂಕದಿಂದ ಜವಳಿ ವಲಯದ 30 ಲಕ್ಷ ಉದ್ಯೋಗಿಗಳಿಗೆ ಆತಂಕ: ಪ್ರಧಾನಿಗೆ ಪತ್ರ ಬರೆದ ಸ್ಟಾಲಿನ್

ಅಮೆರಿಕವು ಭಾರತದ ಸರಕುಗಳ ಮೇಲೆ ಶೇ. 50ರಷ್ಟು ಪ್ರತಿಸುಂಕ ವಿಧಿಸಿದರೆ, ತಮಿಳುನಾಡಿನ ಜವಳಿ ವಲಯದ 30 ಲಕ್ಷ ಉದ್ಯೋಗಿಗಳು ಸಂಕಷ್ಟಕ್ಕೆ ಸಿಲುಕಲಿದ್ದಾರೆ ಎಂದು ಮುಖ್ಯಮಂತ್ರಿ ಸ್ಟಾಲಿನ್ ಆತಂಕ ವ್ಯಕ್ತಪಡಿಸಿದ್ದಾರೆ. ಜವಳಿ ರಫ್ತಿನಲ್ಲಿ ರಾಜ್ಯವು ದೊಡ್ಡ ಪಾಲು ಹೊಂದಿದ್ದು, ಸುಂಕ ಹೆಚ್ಚಳದಿಂದ ಉದ್ಯೋಗ ಮತ್ತು ಉತ್ಪಾದನೆಗೆ ತೀವ್ರ ಹೊಡೆತ ಬೀಳಲಿದೆ. ಈ ಹಿನ್ನೆಲೆಯಲ್ಲಿ ಜವಳಿ ವಲಯಕ್ಕೆ ನೆರವು ನೀಡುವಂತೆ ಪ್ರಧಾನಿಗೆ ಸ್ಟಾಲಿನ್ ಪತ್ರ ಬರೆದಿದ್ದಾರೆ.

ವಿಜಯ ಕರ್ನಾಟಕ 16 Aug 2025 11:05 pm

ಕಬಕ : ದೇಶಭಕ್ತಿ ಗೀತೆಯಲ್ಲಿ ಗಮನ ಸೆಳೆದ ಫಾತಿಮತ್ ಶೈಮಾಗೆ ಬಗ್ಗುಮೂಲೆ ಅಸೋಸಿಯೇಟ್ಸ್ ವತಿಯಿಂದ ಸನ್ಮಾನ

ಬಂಟ್ವಾಳ : ದೇಶಭಕ್ತಿ ಗೀತೆ ಹಾಡುಗಾರಿಕೆಯಲ್ಲಿ ಗಮನ ಸೆಳೆದ ಕಬಕ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೂರನೇ ತರಗತಿ ವಿದ್ಯಾರ್ಥಿನಿ ಅಲೀಮತ್ ಶೈಮಾ ಗೆ ಬಗ್ಗುಮೂಲೆ ಲೀಗಲ್ ಅಸೋಸಿಯೇಟ್ಸ್ ಹಾಗೂ ಬಗ್ಗುಮೂಲೆ ಎಜ್ಯುಕೇಶನ್ ಆಂಡ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕಬಕದ ವಿದ್ಯಾರ್ಥಿನಿಯ ನಿವಾಸದಲ್ಲಿ ಶನಿವಾರ ಸನ್ಮಾನಿಸಲಾಯಿತು. ಕಬಕ ಶಾಲೆಯಲ್ಲಿ ನಡೆದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಅಲೀಮತ್ ಶೈಮಾ ದೇಶಭಕ್ತಿ ಗೀತೆ ಹಾಡುವ ಮೂಲಕ ಗಮನ ಸೆಳೆದಿದ್ದರು. ಇದರ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡಲಾಗಿತ್ತು, ಇದಕ್ಕೆ ವ್ಯಾಪಕ ಪ್ರಶಂಸೆ ಹಾಗೂ ಮೆಚ್ಚುಗೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಆಕೆಗೆ ಈ ಸನ್ಮಾನ ಆಯೋಜಿಸಲಾಗಿತ್ತು. ಅಲ್ ಅಮೀನ್ ಚಾರಿಟಿ ಗ್ರೂಪ್ ನ ಮೆನೇಜಿಂಗ್ ಡೈರೆಕ್ಟರ್ ಸಿದ್ದೀಕ್ ಸೂರ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸನ್ಮಾನ ಸಮಾರಂಭದಲ್ಲಿ ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ ಅಲೀಮತ್ ಶೈಮಾರನ್ನು ಸನ್ಮಾನಿಸಿದರು. ಬಳಿಕ ಮಾತನಾಡಿದ ಅವರು ಸನ್ಮಾನ, ಪ್ರಶಸ್ತಿ ಗಿಟ್ಟಿಸಿಕೊಳ್ಳಲು ನಾನಾ ಕಸರತ್ತು ನಡೆಸುವ ಈ ಕಾಲಘಟ್ಟದಲ್ಲಿ ಎಳೆಯ ಪ್ರತಿಭೆಯನ್ನು ಗುರುತಿಸಿ, ಅವರ ಮನೆಗೆ ತೆರಳಿ ಅವರನ್ನು ಗೌರವಿಸಿ, ನನ್ಮಾನಿಸುವ ಬಗ್ಗುಮೂಲೆ ಲೀಗಲ್ ಅಸೋಸಿಯೇಟ್ಸ್ ಹಾಗೂ ಬಗ್ಗುಮೂಲೆ ಎಜ್ಯುಕೇಶನ್ ಆಂಡ್ ಚಾರಿಟೇಬಲ್ ಟ್ರಸ್ಟ್ ನ ಕಾರ್ಯ ಶ್ಲಾಘನೀಯ ಎಂದರು. ಈ ಸಂದರ್ಭದಲ್ಲಿ ಡಾ. ಬದ್ರುದ್ದೀನ್, ಮಧುರಾ ಇಬ್ರಾಹಿಂ ಬಗ್ಗುಮೂಲೆ, ಖಾದರ್ ಕನ್ಝ, ಸಾದಿಕ್ ಅಕ್ಕರೆ, ಸಿದ್ದೀಕ್ ಮಿತ್ತೂರು, ಕೆಜಿಎನ್ ಅಶ್ರಫ್ ಅಳಕೆಮಜಲು, ಖಾದರ್ ಭಾರತ್, ಅಶ್ರಫ್ ಭಾರತ್, ಶರೀಫ್ ಸ್ಟೈಲ್, ಶಬ್ಬೀರ್ ಅಳಕೆಮಜಲು, ಹಂಝತ್ ಸಾಲ್ಮರ, ಹಾರಿಸ್ ಕೋನಿಮಾರ್, ಶೈಮಾಳ ತಂದೆ ಝುಬೈರ್ ಭಾರತ್, ತಾಯಿ ಸಲ್ಮಾ ಝುಬೈರ್ ಮೊದಲಾದವರು ಉಪಸ್ಥಿತರಿದ್ದರು. ಬಗ್ಗುಮೂಲೆ ಲೀಗಲ್ ಅಸೋಸಿಯೇಟ್ಸ್ ಹಾಗೂ ಬಗ್ಗುಮೂಲೆ ಎಜ್ಯುಕೇಶನ್ ಆಂಡ್ ಚಾರಿಟೇಬಲ್ ಟ್ರಸ್ಟ್ ನ ಮೆನೇಜಿಂಗ್ ಡೈರೆಕ್ಟರ್ ಹನೀಫ್ ಬಗ್ಗುಮೂಲೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

ವಾರ್ತಾ ಭಾರತಿ 16 Aug 2025 11:00 pm

17,000 ಸರ್ಕಾರಿ ಶಿಕ್ಷಕರ ನೇಮಕಾತಿ ಬಗ್ಗೆ ಬಿಗ್‌ ಅಪ್ಡೇಟ್‌; ಯಾವಾಗ?

ರಾಜ್ಯದಲ್ಲಿ ಸರ್ಕಾರಿ ಶಿಕ್ಷಕ ಹುದ್ದೆ ಪಡೆಯುವ ಕನಸು ಕಂಡಿದ್ದವರಿಗೆ ರಾಜ್ಯ ಸರ್ಕಾರವು ಭರ್ಜರಿ ಸಿಹಿಸುದ್ದಿ ನೀಡಿದೆ. ಈ ಬಗ್ಗೆ ಮಾಹಿತಿ ಮಾಹಿತಿ ನೀಡಿರುವ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಶಿಕ್ಷಕರ ನೇಮಕಾತಿ ಕುರಿತು ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ. ರಾಜ್ಯದಲ್ಲಿ ಒಳಮೀಸಲಾತಿ ಜಾರಿಯಾದ ತಕ್ಷಣ ಶಾಲಾ ಶಿಕ್ಷಣ ಇಲಾಖೆಗೆ ಭಾರಿ ಸಂಖ್ಯೆಯಲ್ಲಿ ಶಿಕ್ಷಕರ ನೇಮಕ ನಡೆಯಲಿದೆ. ಈಗಾಗಲೇ

ಒನ್ ಇ೦ಡಿಯ 16 Aug 2025 10:50 pm

ಕಾವೂರಿನಲ್ಲಿ ಮೊಸರುಕುಡಿಕೆ ಉತ್ಸವದಲ್ಲಿ ಡಿಜೆ ಬಳಕೆ ಆರೋಪ: ಸಂಘಟಕರ ವಿರುದ್ಧ ಪ್ರಕರಣ ದಾಖಲು

ಮಂಗಳೂರು: ನಗರದ ಹೊರವಲಯದ ಕಾವೂರು ಬಳಿ ನಡೆದ ಶ್ರೀ ಕೃಷ್ಣ ಜನ್ಮಾಷ್ಟಮಿಯ ಮೊಸರುಕುಡಿಕೆ ಉತ್ಸವದಲ್ಲಿ ನಿಯಮಬಾಹಿರವಾಗಿ ಡಿ.ಜೆ. ಬಳಕೆ ಮಾಡಿರುವ ಆರೋಪದಲ್ಲಿ ಕಾವೂರು ಪೊಲೀಸರು ಆಯೋಜಕರು, ಸಂಘಟಕರ ಮೇಲೆ ಕೇಸು ದಾಖಲಿಸಿಕೊಂಡಿರುವುದು ವರದಿಯಾಗಿದೆ. ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ನಡೆಯುತ್ತಿರುವ ನಾನಾ ಉತ್ಸವ ಹಾಗೂ ಮೆರವಣಿಗೆ ಹಿನ್ನ್ನೆಲೆಯಲ್ಲಿ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಅವರು ಮಾರ್ಗಸೂಚಿ ಬಿಡುಗಡೆ ಮಾಡಿದ್ದರು. ಇದರಲ್ಲಿ ಮೆರವಣಿ ಗೆಗೆ ಡಿ.ಜೆ. ಬಳಕೆ ಮಾಡುವಂತಿಲ್ಲ ಎಂದು ಸ್ಪಷ್ಟ ನಿರ್ದೇಶನ ನೀಡಿದ್ದರು. ಆದರೂ ಉರುಂದಾಡಿಗುಡ್ಡೆಯ ಮೆರವಣಿಗೆಯಲ್ಲಿ ಡಿ.ಜೆ. ಬಳಕೆ ಮಾಡಲಾಗಿತ್ತು ಎನ್ನಲಾಗಿದೆ. ಡಿ.ಜೆ. ಬಳಕೆ ಮಾಡಿರುವುದಕ್ಕೆ ಸಾರ್ವಜನಿಕರಿಂದ ಆಕ್ಷೇಪ ವ್ಯಕ್ತವಾಗಿತ್ತು. ಕೂಡಲೇ ಕಾವೂರು ಪೊಲೀಸರು ಮಧ್ಯಪ್ರವೇಶಿಸಿ ಡಿ.ಜೆ. ಸ್ಥಗಿತಗೊಳಿಸಿ ಅದಕ್ಕೆ ಬಳಸಿದ ಉಪಕರಣಗಳನ್ನು ಮುಟ್ಟುಗೋಲು ಹಾಕಿದ್ದಾರೆ. ಇದು ಮಾತ್ರವಲ್ಲದೆ ಜನ್ಮಾಷ್ಟಮಿ ಕಾರ್ಯಕ್ರಮದ ಆಯೋಜಕರು ಹಾಗೂ ಡಿ.ಜೆ. ಸಂಗೀತ ಟ್ಯಾಬ್ಲೋ ವ್ಯವಸ್ಥೆ ಮಾಡಿದ ಸಂಘಟಕರ ಮೇಲೂ ಕಾವೂರು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ವಾರ್ತಾ ಭಾರತಿ 16 Aug 2025 10:49 pm

ಮಾದಕ ವಸ್ತು ಸೇವನೆ ಆರೋಪ: ಐದು ಮಂದಿ ಸೆರೆ

ಮಂಗಳೂರು, ಆ.16: ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೂರು ಪ್ರತ್ಯೇಕ ಪ್ರಕರಣ ಗಳಲ್ಲಿ ಮಾದಕ ವಸ್ತುವನ್ನು ಸೇವನೆ ಆರೋಪದಲ್ಲಿ ಐದು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬೊಂಡಂತಿಲ ಗ್ರಾಮದ ಬಿತ್ತುಪಾದೆ ಬಳಿ ಸಾರ್ವಜನಿಕ ಸ್ಥಳದಲ್ಲಿ ಮಾದಕ ವಸ್ತುವನ್ನು ಸೇವನೆ ಆರೋಪದಲ್ಲಿ ಅಡ್ಯಾರ್ ಪದವಿನ ರಕ್ಷಿತ್ (32 ) ಮತ್ತು ಮುಹಮ್ಮದ್ ಸಫ್ವಾನ್ (21 )ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ನೀರುಮಾರ್ಗ ಗ್ರಾಮದ ಮಾಣೂರಿನ ಕೊಳ್ಚಾರ್ ರೋಡ್ ಬಳಿ ಸಾರ್ವಜನಿಕ ಸ್ಥಳದಲ್ಲಿ ಮಾದಕ ವಸ್ತುವನ್ನು ಸೇವನೆ ಮಾಡಿದ ಆರೋಪದಲ್ಲಿ ಅಡ್ಯಾರ್‌ನ ಹಿತೇಶ್ (23 ) ಮತ್ತು ಕವೀಶ್ ( 29) ಇನ್ನೊಂದು ಪ್ರಕರಣದಲ್ಲಿ ನೀರುಮಾರ್ಗ ಜಂಕ್ಷನ್ ಬಳಿ ಅಡ್ಯಾರ್ ಪದವಿನ ಮುಹಮ್ಮದ್ ಇರ್ಷಾದ್ (23) ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರು ಆ.15ರಂದು ನಡೆಸಿದ ಕಾರ್ಯಾಚರಣೆಯಲ್ಲಿ ಪಂಪ್‌ವೆಲ್ ಫ್ಲೈ ಓವರ್ ಬ್ರಿಡ್ಜ್ ಕೆಳಗೆ ನಿಷೇದಿತ ಮಾದಕ ವಸ್ತುಗಳನ್ನು ಸೇವನೆ ಮಾಡಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದ ಆರೋಪದಲ್ಲಿ ಹೃತಿಕ್( 21) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯ ವಿರುದ್ದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಾರ್ತಾ ಭಾರತಿ 16 Aug 2025 10:44 pm

ಸಕಲೇಶಪುರ | ಭಾರೀ ಮಳೆ; ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಬೃಹತ್ ಮರ!

ಸಕಲೇಶಪುರ : ಜಿಲ್ಲೆಯ ಮಲೆನಾಡು ಭಾಗದಲ್ಲಿ ಧಾರಾಕಾರ ಮಳೆಯ ಹಿನ್ನಲೆ ಸಕಲೇಶಪುರ ತಾಲ್ಲೂಕಿನ ಮಾರನಹಳ್ಳಿ ಸಮೀಪ ಚಲಿಸುತ್ತಿದ್ದ ಕಾರಿನ ಮೇಲೆ ಬೃಹತ್ ಗಾತ್ರದ ಮರ ಬಿದ್ದಿದ್ದು, ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ  ಘಟನೆ ನಡೆದ ತಕ್ಷಣವೇ ಪೊಲೀಸರು ಅವರನ್ನು ರಕ್ಷಿಸಿ, ಬದಲಿ ವಾಹನದಲ್ಲಿ ಸುರಕ್ಷಿತವಾಗಿ ಕಳುಹಿಸಿದ್ದಾರೆ. ಮರ ರಸ್ತೆಗೆ ಅಡ್ಡಲಾಗಿ ಬಿದ್ದಿರುವುದರಿಂದ ಸಂಚಾರ ಅಸ್ತವ್ಯಸ್ತಗೊಂಡಿದೆ. ಮಳೆಯ ನಡುವೆಯೇ ರಕ್ಷಣಾ ಸಿಬ್ಬಂದಿ ಮರ ತೆರವುಗೊಳಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಸ್ಥಳದಲ್ಲೇ ಮೊಕ್ಕಾಂ ಹೂಡಿರುವ ಪೊಲೀಸರು ಸಂಚಾರ ನಿಯಂತ್ರಣಕ್ಕೆ ಹರಸಾಹಸ ಪಡುತ್ತಿದ್ದಾರೆ. ಈ ಘಟನೆ ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ವಾರ್ತಾ ಭಾರತಿ 16 Aug 2025 10:42 pm

ಸೆ.6-7: ಯುಎಇಯಲ್ಲಿ ಅಂ.ರಾ. ಜಾನಪದ ಉತ್ಸವ

ಉಡುಪಿ, ಆ.16: ಕರ್ನಾಟಕದ ಜಾನಪದ ಪ್ರಕಾರಗಳಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತೇಜನ ನೀಡುವ ಉದ್ದೇಶದಿಂದ ಕರ್ನಾಟಕ ಜಾನಪದ ಪರಿಷತ್‌ನ ಯುಎಇ ಘಟಕದ ಉದ್ಘಾಟನೆಯ ಸಂದರ್ಭದಲ್ಲಿ ಮುಂದಿನ ಸೆ.6 ಮತ್ತು 7ರಂದು ಯುಎಇಯ ದುಬಾಯಿಯಲ್ಲಿ ಅಂತಾರಾಷ್ಟ್ರೀಯ ಜಾನಪದ ಉತ್ಸವವೊಂದನ್ನು ಆಯೋಜಿಸಲಾ ಗುತ್ತಿದೆ ಎಂದು ಉತ್ಸವದ ನಿರ್ದೇಶಕ ಹಾಗೂ ಕಟಪಾಡಿ ವನಸುಮ ಟ್ರಸ್ಟ್ ಅಧ್ಯಕ್ಷ ಬಾಸುಮ ಕೊಡಗು ತಿಳಿಸಿದ್ದಾರೆ. ಉಡುಪಿ ಪ್ರೆಸ್ ಕ್ಲಬ್‌ನಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಬಾಸುಮ ಕೊಡಗು, ದುಬಾಯಿಯ ಬ್ಯುಸಿನೆಸ್‌ಬೇಯ ರಾಮಿಡ್ರೀಮ್ಸ್ ಪಂಚತಾರಾ ಹೊಟೇಲ್ ಸಭಾಂಗಣದಲ್ಲಿ ಎರಡು ದಿನಗಳ ಈ ಉತ್ಸವ ನಡೆಯಲಿದೆ ಎಂದರು. ರಾಜ್ಯದ ಸುಮಾರು 12 ಜಾನಪದ ತಂಡಗಳನ್ನು ದುಬಾಯಿಗೆ ಆಮಂತ್ರಿಸಿ, ಜಗತ್ತಿನ ನಾನಾ ರಾಷ್ಟ್ರಗಳ ಸುಮಾರು 2000ಕ್ಕೂ ಅಧಿಕ ಪ್ರತಿನಿಧಿಗಳ ಸಮ್ಮುಖದಲ್ಲಿ ಪ್ರದರ್ಶನ ನೀಡಿ, ನಾಡಿನ ಸಾಂಸ್ಕೃತಿಕ, ಜನಪದ ಕಲೆಗಳಿಗೆ ಹೊಸ ದಿಕ್ಕು ನೀಡುವ ಉದ್ದೇಶವನ್ನೂ ಈ ಉತ್ಸವ ಹೊಂದಿದೆ ಎಂದರು. ಉತ್ಸವದಲ್ಲಿ ಕರಾವಳಿಯ ಹುಲಿವೇಷ ಕುಣಿತ, ಕಂಗಿಲು ನೃತ್ಯ, ಮರಾಠಿ ಹೋಳಿ ನೃತ್ಯ, ಯಕ್ಷಗಾನ ಗೊಂಬೆಯಾಟ ಅಲ್ಲದೇ ರಾಜ್ಯದ ವಿವಿದೆಡೆ ಗಳಿಂದ ಡೊಳ್ಳು ಕುಣಿತ, ಸೋಲಿಗರ ನೃತ್ಯ, ಕಂಸಾಳೆ ಮೊದಲಾದ ತಂಡಗಳು ಪ್ರದರ್ಶನ ನೀಡಲಿವೆ ಎಂದು ಬಾಸುಮ ತಿಳಿಸಿದರು. ಜಾನಪದ ಉತ್ಸವ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ, ಮಾಜಿ ಸಚಿವ ಎಚ್. ಆಂಜನೇಯ, ಡಾ.ಮೋಹನ ಆಳ್ವ, ಬೆಂಗಳೂರಿನ ಪ್ರೊ.ರಾಧಾಕೃಷ್ಣ, ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ಹಿ.ಚಿ.ಬೋರಲಿಂಗಯ್ಯ ಭಾಗವಹಿ ಸಲಿದ್ದಾರೆ. ಅಧ್ಯಕ್ಷತೆಯನ್ನು ಜಾನಪದ ಪರಿಷತ್‌ನ ಯುಎಇ ಘಟಕದ ಅಧ್ಯಕ್ಷ ಸಾದನ್‌ದಾಸ್ ವಹಿಸಲಿದ್ದಾರೆ ಎಂದರು. ಇದೇ ಸಂದರ್ಭದಲ್ಲಿ ಹಿರಿಯ ಜಾನಪದ ವಿದ್ವಾಂಸರಾದ ಕೊಡಗಿನ ರಾಣಿ ಮಾಚಯ್ಯ ಹಾಗೂ ಮೈಸೂರಿನ ಮಳವಳ್ಳಿ ಮಹದೇವ ಇವರಿಗೆ ‘ಎಚ್.ಎಲ್.ನಾಗೇಗೌಡ ಜಾನಪದ ಪ್ರಶಸ್ತಿ’ ನೀಡಲಾಗುವುದು. ಅಲ್ಲದೇ ಹಿರಿಯ ಕಲಾಪೋಷಕ ರಾಮೀ ಹೊಟೇಲ್ ಸಮೂಹದ ಪ್ರವರ್ತಕ ವರದರಾಜ್ ಶೆಟ್ಟಿ ಇವರಿಗೆ ‘ಕನ್ನಡ ಕಲಾಪೋಷಕ’ ಪ್ರಶಸಿ ನೀಡಿ ಗೌರವಿಸಲಾಗುವುದು ಎಂದರು. ಎರಡು ದಿನಗಳ ಉತ್ಸವದಲ್ಲಿ ಜಾನಪದ ಕಲಾಪ್ರದರ್ಶನದ ಜೊತೆಗೆ ವಿವಿಧ ವಿಚಾರಗೋಷ್ಠಿಗಳು, ಕಲಾಕೃತಿಗಳ ಪ್ರದರ್ಶನ, ವಸ್ತುಪ್ರದರ್ಶನ ಸಹ ಇರಲಿದೆ ಎಂದೂ ಅವರು ವಿವರಿಸಿದರು. ಸುದ್ದಿಗೋಷ್ಠಿಯಲ್ಲಿ ಉತ್ಸವದ ಸಂಚಾಲಕ ಪ್ರಶಾಂತ್ ಆಚಾರ್ಯ ಹಾಗೂ ಟ್ರಸ್ಟ್‌ನ ಕಾರ್ಯದರ್ಶಿ ಕಾವ್ಯ ವಾಣಿ ಕೊಡಗು ಉಪಸ್ಥಿತರಿದ್ದರು.

ವಾರ್ತಾ ಭಾರತಿ 16 Aug 2025 10:38 pm

ಮುಂಬೈ ವಿಮಾನ ನಿಲ್ದಾಣದಲ್ಲಿ ಪ್ರತಿಕೂಲ ಹವಾಮಾನ: ರನ್ ವೇಗೆ ತಾಕಿದ ಇಂಡಿಗೊ ವಿಮಾನದ ಬಾಲ

ಮುಂಬೈ: ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ವಿಮಾನ ನಿಲ್ದಾಣದಲ್ಲಿನ ಪ್ರತಿಕೂಲ ಹವಾಮಾನದಿಂದಾಗಿ, ಇಂಡಿಗೊ ವಿಮಾನ ಯಾನ ಸಂಸ್ಥೆಯ ವಿಮಾನವೊಂದು ಭೂಸ್ಪರ್ಶ ಮಾಡುವಾಗ, ಅದರ ಬಾಲ ರನ್ ವೇಗೆ ತಾಕಿರುವ ಘಟನೆ ಶನಿವಾರ ನಡೆದಿದೆ ಎಂದು ವರದಿಯಾಗಿದೆ. ಬ್ಯಾಂಕಾಕ್ ನಿಂದ ಮುಂಬೈಗೆ ಆಗಮಿಸಿದ ವಿಮಾನ ವಿಮಾನ ಭೂಸ್ಪರ್ಶ ಮಾಡಿದಾಗ ಅದರ ಬಾಲ ರನ್ ವೇಗೆ ತಾಕಿದೆ. ಈ ಕುರಿತು ಪ್ರತಿಕ್ರಿಯಿಸಿದ ಇಂಡಿಗೊ ವಿಮಾನ ಯಾನ ಸಂಸ್ಥೆಯ ವಕ್ತಾರರು, “ಮುಂಬೈನಲ್ಲಿನ ಪ್ರತಿಕೂಲ ಹವಾಮಾನದಿಂದಾಗಿ ಕಡಿಮೆ ಎತ್ತರದಲ್ಲಿ ಹಾರಾಡುತ್ತಿದ್ದ ಇಂಡಿಗೊ ಏರ್ ವಿಮಾನದ ಬಾಲವು ಆಗಸ್ಟ್ 16, 2025ರಂದು ರನ್ ವೇಗೆ ತಾಕಿದೆ. ಇದಾದ ನಂತರ, ವಿಮಾನವನ್ನು ಮತ್ತೊಂದು ದಿಕ್ಕಿಗೆ ಕರೆದೊಯ್ದು, ಸುರಕ್ಷಿತವಾಗಿ ಭೂಸ್ಪರ್ಶ ಮಾಡಿಸಲಾಯಿತು” ಎಂದು ಹೇಳಿದ್ದಾರೆ. “ಪ್ರಮಾಣೀಕೃತ ಶಿಷ್ಟಾಚಾರದ ಪ್ರಕಾರ, ವಿಮಾನವು ಮತ್ತೆ ತನ್ನ ಕಾರ್ಯಾಚರಣೆಯನ್ನು ಆರಂಭಿಸುವುದಕ್ಕೂ ಮುನ್ನ, ಅಗತ್ಯವಿರುವ ಪರಿಶೀಲನೆ/ದುರಸ್ತಿ ಹಾಗೂ ಹಾರಾಟಕ್ಕೆ ಅನುಮತಿ ಸಿಗಬೇಕು. ಇಂಡಿಗೊದಲ್ಲಿ ನಮ್ಮ ಗ್ರಾಹಕರು, ಸಿಬ್ಬಂದಿಗಳು ಹಾಗೂ ವಿಮಾನ ನಮ್ಮ ಪ್ರಮುಖ ಆದ್ಯತೆಯಾಗಿದೆ. ಈ ಘಟನೆಯಿಂದ ಭವಿಷ್ಯದಲ್ಲಿ ಆಗಬಹುದಾದ ಪರಿಣಾಮವನ್ನು ತಗ್ಗಿಸಲು ನಾವು ಎಲ್ಲ ಬಗೆಯ ಪ್ರಯತ್ನಗಳನ್ನು ನಡೆಸುತ್ತಿದ್ದೇವೆ” ಎಂದೂ ಅವರು ತಿಳಿಸಿದ್ದಾರೆ. ಈ ಘಟನೆಯ ಕುರಿತು ಡಿಜಿಸಿಎ ಗೆ ಮಾಹಿತಿ ನೀಡಲಾಗಿದೆ.

ವಾರ್ತಾ ಭಾರತಿ 16 Aug 2025 10:36 pm

ಕಾಸರಗೋಡು | ಕೃಪಾ ಪಾರ್ವತಿ ಕುಟುಂಬದಿಂದ ಆಟಿಡೊಂಜಿ ದಿನ ಕಾರ್ಯಕ್ರಮ

ಕಾಸರಗೋಡು : ಕೃಪಾ ಪಾರ್ವತಿ ಕುಟುಂಬದಿಂದ ಆಟಿಡೊಂಜಿ ದಿನ ಕಾರ್ಯಕ್ರಮ ಮಾನ್ಯ ಬೇಳ ಗ್ರಾಮದ ಕೃಪಾ ಪಾರ್ವತಿ ನಿಲಯದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಶಿವಪ್ಪ ಎಂ ಅವರು ಉದ್ಘಾಟಿಸಿದರು. ಕುಟುಂಬದ ಹಿರಿಯರಾದ ಶಿವಪ್ಪರವರಿಗೆ ಶಾಲು ಹೊದಿಸಿ, ಮಾಲೆ ಹಾಕಿ ಪೇಟ ತೊಡಿಸಿ ಸನ್ಮಾನಿಸಲಾಯಿತು. ಕುಟುಂಬದ ಸದಸ್ಯರು ತಮ್ಮ ಮನೆಗಳಿಂದ ತಯಾರಿಸಿ ತಂದ ಸುಮಾರು 25 ಬಗೆಯ ತಿಂಡಿ ತಿನಿಸುಗಳು ಎಲ್ಲರನ್ನೂ ಮನಸೂರೆಗೊಳಿಸಿತ್ತು. ಭೋಜನದ ನಂತರ ಆಟೋಟ ಸ್ಫರ್ಧೆ ನಡೆಯಿತು. ಕ್ರೀಡೆಯಲ್ಲಿ ವಿಜೇತರಿಗೆ ಸುಬ್ರಹ್ಮಣ್ಯ, ಹರಿಕೃಷ್ಣ, ಶಿವಪ್ಪ ಎಂ. ಬಹುಮಾನ ವಿತರಿಸಿದರು. ಕಾರ್ಯಕ್ರಮದಲ್ಲಿ ಯೋಗಿಶ್‌ ಸ್ವಾಗತಿಸಿ, ರಾಜೇಶ್ವರಿ ಎಂ. ಧನ್ಯವಾದ ಸಲ್ಲಿಸಿದರು. ಮಮತ ಎಂ. ಕಾರ್ಯಕ್ರಮ ನಿರೂಪಿಸಿದರು.      

ವಾರ್ತಾ ಭಾರತಿ 16 Aug 2025 10:35 pm

ಮಸೂದೆಗಳಿಗೆ ಅಂಕಿತ ಹಾಕಲು ಕಾಲಮಿತಿ ನಿಗದಿಯಿಂದ ಸಾಂವಿಧಾನಿಕ ವ್ಯವಸ್ಥೆಗೆ ಧಕ್ಕೆ: ಕೇಂದ್ರ ಸರ್ಕಾರ

ಸುಪ್ರೀಂಕೋರ್ಟ್‌ಗೆ ಲಿಖಿತ ಅಭಿಪ್ರಾಯ ಸಲ್ಲಿಕೆ

ವಾರ್ತಾ ಭಾರತಿ 16 Aug 2025 10:33 pm

ಭಾರತದ ಮೇಲಿನ ಹೆಚ್ಚುವರಿ ಸುಂಕಕ್ಕೆ ತಡೆ; ಟ್ರಂಪ್ ಸುಳಿವು

ವಾಷಿಂಗ್ಟನ್, ಆ.16: ಅಲಾಸ್ಕಾದಲ್ಲಿ ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಜೊತೆಗಿನ ಐತಿಹಾಸಿಕ ಸಭೆಯ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರಶ್ಯದಿಂದ ಕಚ್ಛಾತೈಲ ಖರೀದಿಸುವ ದೇಶಗಳ (ಭಾರತ ಸೇರಿದಂತೆ) ವಿರುದ್ಧದ ಹೆಚ್ಚುವರಿ ಸುಂಕವನ್ನು ತಡೆಹಿಡಿಯುವ ಸುಳಿವನ್ನು ನೀಡಿರುವುದಾಗಿ ವರದಿಯಾಗಿದೆ. ತಮ್ಮ ಬಿಗಿ ನಿಲುವನ್ನು ಸಡಿಲಗೊಳಿಸಿರುವ ಟ್ರಂಪ್ `ರಶ್ಯದ ಕಚ್ಛಾ ತೈಲವನ್ನು ಖರೀದಿಸುವುದನ್ನು ಮುಂದುವರಿಸಿರುವ ದೇಶಗಳ ವಿರುದ್ಧ ಹೆಚ್ಚುವರಿ ಸುಂಕವನ್ನು ಅಮೆರಿಕ ತಡೆಹಿಡಿಯಬಹುದು' ಎಂದು ಹೇಳಿದ್ದಾರೆ. ಅವರು(ಪುಟಿನ್) ಒಬ್ಬ ತೈಲ ಗ್ರಾಹಕರನ್ನು ಕಳೆದುಕೊಳ್ಳಬಹುದು. ಅದು ಭಾರತ ಅಥವಾ ಚೀನಾ ಆಗಿರಬಹುದು. ಭಾರತ ತನ್ನ ತೈಲ ಬೇಡಿಕೆಯ 40%ವನ್ನು ರಶ್ಯದಿಂದ ಖರೀದಿಸುತ್ತದೆ. ಚೀನಾವೂ ರಶ್ಯದಿಂದ ಸಾಕಷ್ಟು ತೈಲ ಖರೀದಿಸುತ್ತದೆ. ಅವರ ವಿರುದ್ಧ ಹೆಚ್ಚುವರಿ ಸುಂಕ ವಿಧಿಸಿದರೆ ವಿನಾಶಕಾರಿ ಎಂಬುದು ಅವರ ದೃಷ್ಟಿಕೋನವಾಗಿದೆ. ಅದನ್ನು ಮಾಡಬೇಕು ಎಂದಾದರೆ ನಾನು ಮಾಡುತ್ತೇನೆ. ಆದರೆ ಬಹುಷಃ ನಾನು ಮಾಡಬೇಕಿಲ್ಲ' ಎಂದವರು ಹೇಳಿದ್ದಾರೆ.

ವಾರ್ತಾ ಭಾರತಿ 16 Aug 2025 10:29 pm

SC-ST ವಿದ್ಯಾರ್ಥಿವೇತನದ ಆದಾಯ ಮಿತಿ ಏರಿಸಲು ಸರ್ಕಾರ ಚಿಂಚನೆ; ಎಷ್ಟು ಏರಿಕೆ? ಪ್ರಯೋಜನಗಳು ಏನೇನು?

ಆರ್ಥಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಇತರ ಹಿಂದುಳಿದ ವರ್ಗ, ಮತ್ತು ವಿಮುಕ್ತ ಬುಡಕಟ್ಟು ವಿದ್ಯಾರ್ಥಿಗಳಿಗೆ ನೀಡುತ್ತಿರುವ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ ಯೋಜನೆಗಳ ಆದಾಯ ಮಿತಿಯನ್ನು ಹೆಚ್ಚಿಸಲು ಚಿಂತನೆ ನಡೆಸಿದೆ. ಈ ನಿರ್ಧಾರವು 2026-27ರಿಂದ 2030-31ರ ಆರ್ಥಿಕ ವರ್ಷದ ಅವಧಿಯಲ್ಲಿ ಜಾರಿಗೆ ಬರಲಿದೆ. ಇದರಿಂದ ಹೆಚ್ಚಿನ ವಿದ್ಯಾರ್ಥಿಗಳಿಗೆ ಇದರ ಪ್ರಯೋಜನ ಸಿಗಲಿದೆ. ವಿದ್ಯಾರ್ಥಿವೇತನ ಪಡೆಯಲು ಇರುವ ಆದಾಯ ಮಿತಿ ಹೆಚ್ಚಳಕ್ಕೆ ಸರ್ಕಾರ ಚಿಂತಿಸಿರುವುದು ಏಕೆ? ಇದರಿಂದ ಏನೆಲ್ಲಾ ಪ್ರಯೋಜನಗಳಿವೆ ಎಂಬುದನ್ನು ತಿಳಿಯೋಣ.

ವಿಜಯ ಕರ್ನಾಟಕ 16 Aug 2025 10:24 pm

2022ರಲ್ಲಿ ಟ್ರಂಪ್ ಅಧ್ಯಕ್ಷರಾಗಿದ್ದರೆ ಉಕ್ರೇನ್ ಯುದ್ಧ ಆರಂಭವಾಗುತ್ತಿರಲಿಲ್ಲ: ಪುಟಿನ್

ಅಲಾಸ್ಕ, ಆ.16: 2022ರಲ್ಲಿ ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷರಾಗಿದ್ದರೆ ಉಕ್ರೇನ್‌ ನಲ್ಲಿ ಸಂಘರ್ಷ ಆರಂಭವಾಗುತ್ತಿರಲಿಲ್ಲ. ಉಕ್ರೇನ್‌ ಗೆ ಬೆಂಬಲ ನೀಡುವುದರಿಂದ ಪರಿಸ್ಥಿತಿ ಉಲ್ಬಣಿಸಬಹುದು ಮತ್ತು ಮಿಲಿಟರಿ ಕ್ರಮಗಳ ರೀತಿಯ ಗಂಭೀರ ಪರಿಣಾಮಕ್ಕೆ ಕಾರಣವಾಗಬಹುದು ಎಂದು ಆಗ ಅಮೆರಿಕದ ಅಧ್ಯಕ್ಷರಾಗಿದ್ದ ಜೋ ಬೈಡನ್‌ ಗೆ ಎಚ್ಚರಿಕೆ ನೀಡಿದ್ದೆ' ಎಂದು ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹೇಳಿದ್ದಾರೆ. ಅಲಾಸ್ಕದಲ್ಲಿ ಅಮೆರಿಕ ಅಧ್ಯಕ್ಷ ಟ್ರಂಪ್‍ ರೊಂದಿಗೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪುಟಿನ್ ` 2022ರಲ್ಲಿ ಈ ಹಿಂದಿನ ಅಮೆರಿಕದ ಆಡಳಿತದೊಂದಿಗಿನ ನಮ್ಮ ಕೊನೆಯ ಸಂಪರ್ಕದ ಸಂದರ್ಭ ಹಿಂದಿನ ಅಮೆರಿಕ ಅಧ್ಯಕ್ಷರಿಗೆ ಮನವರಿಕೆ ಮಾಡಲು ಪ್ರಯತ್ನಿಸಿದ್ದೆ. ಪರಿಸ್ಥಿತಿ ಹಗೆತನ ಸಾಧಿಸುವ ಮಟ್ಟಕ್ಕೆ ಬಂದರೆ ಹಿಂತಿರುಗಲು ಕಷ್ಟ ಎಂದಿದ್ದೆ. ಆದರೆ ಅವರು ತಿರಸ್ಕರಿಸಿದರು. ಇದು ನಿಜವಾಗಿಯೂ ದೊಡ್ಡ ಪ್ರಮಾದವಾಗಿತ್ತು. ಒಂದು ವೇಳೆ ಬೈಡನ್ ಜಾಗದಲ್ಲಿ ಟ್ರಂಪ್ ಇದ್ದರೆ ಖಂಡಿತಾ ಈ ಪ್ರಮಾದ ನಡೆಯುತ್ತಿರಲಿಲ್ಲ. ಟ್ರಂಪ್ ಮತ್ತು ತನ್ನ ನಡುವೆ ಉತ್ತಮ ವಿಶ್ವಾಸಾರ್ಹ ಸಂಪರ್ಕವಿದೆ. ಇಂತಹ ವಿಧಾನವು ಉಕ್ರೇನ್ ಸಂಘರ್ಷವನ್ನು ಅತೀ ಶೀಘ್ರವಾಗಿ ಕೊನೆಗೊಳಿಸುತ್ತದೆ' ಎಂದು ಪುಟಿನ್ ಹೇಳಿದ್ದಾರೆ. ಅಮೆರಿಕ-ರಶ್ಯ ಸಂಬಂಧಗಳಲ್ಲಿನ ಈ ಹಿಂದಿನ ಸಮಸ್ಯೆಗಳನ್ನು ತ್ವರಿತವಾಗಿ ಬಗೆಹರಿಸುವುದು ಮುಖ್ಯವಾಗಿದೆ. ಟ್ರಂಪ್ ಅವರ ಸ್ನೇಹಮಯ ರೀತಿಯ ಸಂಭಾಷಣೆ ಮಾತುಕತೆ ಯಶಸ್ವಿಯಾಗಿ ನಡೆಯಲು ಕಾರಣವಾಗಿದೆ ಎಂದು ಪುಟಿನ್ ಶ್ಲಾಘಿಸಿದ್ದಾರೆ.

ವಾರ್ತಾ ಭಾರತಿ 16 Aug 2025 10:21 pm

ಭಾರತದ ಸಂವಿಧಾನದಲ್ಲಿ ಎಲ್ಲ ಸಮಸ್ಯೆಗಳಿಗೂ ಪರಿಹಾರವಿದೆ: ನ್ಯಾ.ಇಂದಿರೇಶ್

ಉಡುಪಿ, ಆ.16: ಭಾರತದ ಸಂವಿಧಾನದಲ್ಲಿ ಎಲ್ಲ ಸಮಸ್ಯೆಗಳಿಗೂ ಪರಿಹಾರವಿದೆ. ಕಾನೂನು ಉಲ್ಲಂಘನೆ ಮಾಡದೇ ಸಂವಿಧಾನದ ಮೇಲೆ ನಂಬಿಕೆ ಇಟ್ಟು ಕಾರ್ಯನಿರ್ವಹಿಸಬೇಕು. ಕಾನೂನನ್ನು ಕಟ್ಟುನಿಟ್ಟಾಗಿ ಪಾಲಿಸ ಬೇಕು. ಕಾನೂನು ಉಲ್ಲಂಘನೆಗೆ ಅವಕಾಶ ನೀಡಬಾರದು. ನಾವೆಲ್ಲರೂ ನಿತ್ಯವೂ ಕಾನೂನು ವಿದ್ಯಾರ್ಥಿಗಳಾಗಿದ್ದು ಕಲಿಕೆ ನಿರಂತರ ವಾಗಿರಬೇಕು ಎಂದು ಹೈಕೋರ್ಟ್ ನ್ಯಾಯಮೂರ್ತಿ, ಜಿಲ್ಲೆಯ ನಿಕಟ ಪೂರ್ವ ಆಡಳಿತಾತ್ಮಕ ನ್ಯಾಯಮೂರ್ತಿ ಇ.ಎಸ್.ಇಂದಿರೇಶ್ ಹೇಳಿದ್ದಾರೆ. ಉಡುಪಿ ವಕೀಲರ ಸಂಘದ ವತಿಯಿಂದ ಶನಿವಾರ ಜಿಲ್ಲಾ ನ್ಯಾಯಾಲಯದ ಸಭಾಂಗಣದಲ್ಲಿ ಆಯೋಜಿಸಲಾದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡುತಿದ್ದರು. ಜಿಲ್ಲೆಯ ನೂತನ ಆಡಳಿತಾತ್ಮಕ ನ್ಯಾಯಮೂರ್ತಿಯಾಗಿ ನೇಮಕ ಗೊಂಡ ಹಿನ್ನೆಲೆಯಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ನ್ಯಾ.ಜೆ.ಎಂ.ಖಾಝಿ, ನ್ಯಾಯಾಲಯಕ್ಕೆ ಬರುವ ಪ್ರತಿ ಪ್ರಕರಣದಲ್ಲೂ ಮಾನವೀಯ ಮೌಲ್ಯ ಅಡಗಿ ರುತ್ತದೆ. ಅದನ್ನು ನಾವು ಕಂಡುಕೊಳ್ಳುವ ಪ್ರಯತ್ನ ಮಾಡಬೇಕು. ಉತ್ತಮ ಅಭ್ಯಾಸಗಳನ್ನು ಜೋಡಿಸಿಕೊಳ್ಳುತ್ತಾ ವಾಸ್ತವದ ದತ್ತಾಾಂಶದ ಆಧಾರದಲ್ಲಿ ವಾದ ಮಂಡಿಸಬೇಕು ಎಂದರು. ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕಿರಣ್.ಎಸ್.ಗಂಗಣ್ಣವರ್ ಅಧ್ಯಕ್ಷತೆ ವಹಿಸಿದ್ದರು. ವಕೀಲರ ಸಂಘದ ಅಧ್ಯಕ್ಷ ರೆನೋಲ್ಡ್ ಪ್ರವೀಣ್ ಕುರ್ಮಾ ಸ್ವಾಗತಿಸಿದರು. ವಕೀಲರ ಸಂಘದ ಮಾಜಿ ಅಧ್ಯಕ್ಷ ಬಿ.ನಾಗರಾಜ್ ಪ್ರಸ್ತಾವಿಕ ಮಾತನಾಡಿದರು. ಜಿಲ್ಲಾ ಸರಕಾರಿ ವಕೀಲೆ ಮೇರಿ ಎ.ಆರ್. ಶ್ರೇಷ್ಠಾ ನೂತನ ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿಯವರ ಪರಿಚಯ ಮಾಡಿದರು. ಸಂಘದ ಕಾರ್ಯದರ್ಶಿ ರಾಜೇಶ್ ಎ.ಆರ್.ವಂದಿಸಿದರು. ನ್ಯಾಯವಾದಿ ರಾಜಶೇರ್ಖ ಶ್ಯಾಮರಾಮ್ ನಿರೂಪಿಸಿದರು.

ವಾರ್ತಾ ಭಾರತಿ 16 Aug 2025 10:18 pm

ಶ್ರೀಕೃಷ್ಣನ ಆದರ್ಶಗಳನ್ನು ಎಲ್ಲರು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಾಗಿದೆ: ಸದಾಶಿವ ಉಳ್ಳಾಲ

ಮಂಗಳೂರು, ಆ.16: ಶ್ರೀ ಕೃಷ್ಣ ಜಯಂತಿಯು ಕೇವಲ ಆಚರಣೆಗೆ ಮಾತ್ರ ಸೀಮಿತವಾಗಬಾರದು.ಭಗವಾನ್ ಶ್ರೀಕೃಷ್ಣ ಜೀವನ ಚರಿತ್ರೆಯ ಬಗ್ಗೆ ಮುಂದಿನ ಪೀಳಿಗೆಗೆ ತಿಳಿಸಬೇಕು ಎಂದು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ ಹೇಳಿದ್ದಾರೆ. ದ.ಕ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾ ಗೊಲ್ಲ ಸಮಾಜ ಸೇವಾ ಸಂಘ, ಯಾದವ ಸಭಾ ಕರ್ನಾಟಕ ಕೇಂದ್ರ ಸಮಿತಿ ಸಹಕಾರದೊಂದಿಗೆ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಸೋಮವಾರ ನಡೆದ ಶ್ರೀ ಕೃಷ್ಣ ಜಯಂತಿ ಕಾರ‌್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು. ಶ್ರೇಷ್ಠ್ಠ ವ್ಯಕ್ತಿತ್ವ ಮತ್ತು ಸಕಲ ಗುಣ ಸಂಪನ್ನ ಶ್ರೀ ಕೃಷ್ಣ ಆದರ್ಶಗಳನ್ನು ಎಲ್ಲರೂ ಪಾಲಿಸಬೇಕು ಎಂದು ಹೇಳಿದರು. ಉಪನ್ಯಾಸ ನೀಡಿದ ಮಂಗಳೂರು ವಿಶ್ವವಿದ್ಯಾನಿಲಯದ ಎಸ್‌ವಿಪಿ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕ ಡಾ. ಧನಂಜಯ್ ಕುಂಬ್ಳೆ ಮಾತನಾಡಿ, ಶ್ರೀಕೃಷ್ಣ ಪರಮಾತ್ಮವನ್ನು ತನ್ನ ಬದುಕಿನುದ್ದಕ್ಕೂ ದುಷ್ಟ್ಟತನವನ್ನು ಅನ್ಯಾಯ ವನ್ನು ಸಹಿಸಿದವನಲ್ಲ. ಅಧರ್ಮ ಹೆಚ್ಚಿದಾಗ ಧರ್ಮದ ಸ್ಥಾಪನೆಗೆ ಶ್ರೀಕೃಷ್ಣ ಜನ್ಮತಾಳಿರುತ್ತಾನೆ. ಸ್ತ್ರೀಯರನ್ನು ದುಷ್ಠರ ಬಲೆಯಿಂದ ವಿಮುಕ್ತಿಗೊಳಿಸುತ್ತಾನೆ. ಗೋವಿನ ಮೇಲೆ ವಿಶೇಷವಾದ ಪ್ರೀತಿಯನ್ನು ತನ್ನ ಬದುಕಿನುದ್ದಕ್ಕೂ ಹೊಂದಿರುತ್ತಾನೆ. ಒಟ್ಟಾರೆಯಾಗಿ ಸ್ತ್ರೀ ವಿಮೋಚನೆ ಮತ್ತು ಗೋಭಕ್ತಿಯನ್ನು ತೋರಿಸುವ ಹೆಗ್ಗಳಿಕೆ ಅವನದ್ದು , ಶ್ರೀ ಕೃಷ್ಣ ಜಯಂತಿ ಆಚರಣೆಯ ಜೊತೆಗೆ ಆತನ ಜೀವನ ಚರಿತ್ರೆ ಸಂದೇಶಗಳನ್ನು ಸ್ಮರಿಸುವ ಅಗತ್ಯವಿದೆ ಎಂದು ಅವರು ಹೇಳಿದರು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅನಿಲ್ ಕುಮಾರ್, ದಕ್ಷಿಣ ಕನ್ನಡ ಜಿಲ್ಲಾ ಸಮಾಜ ಸೇವಾ ಸಂಘದ ಅಧ್ಯಕ್ಷ ಟಿ ಆರ್ ಕುಮಾರಸ್ವಾಮಿ, ಯಾದವ ಸಭಾ ಕರ್ನಾಟಕ ಕೇಂದ್ರ ಸಮಿತಿ ಅಧ್ಯಕ್ಷ ಎ ಕೆ ಮಣಿಯಾಣಿ ಬೆಳ್ಳಾರೆ ಮತ್ತಿತ ರರು ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್ ಜಿ ಸ್ವಾಗತಿಸಿದರು.   

ವಾರ್ತಾ ಭಾರತಿ 16 Aug 2025 10:12 pm

ಕೃಷ್ಣ ಜನ್ಮಾಷ್ಟಮಿ| ಮದ್ಯದಂಗಡಿ ಮುಚ್ಚಲು ದ.ಕ. ಜಿಲ್ಲಾಧಿಕಾರಿ ಆದೇಶ

ಮಂಗಳೂರು, ಆ.16: ದ.ಕ. ಜಿಲ್ಲೆಯಾದ್ಯಂತ ವಿವಿದೆಡೆ ಆಗಸ್ಟ್ 15 ರಿಂದ ಆಗಸ್ಟ್ 17ರವರೆಗೆ ಶ್ರೀ ಕೃಷ್ಣ ಜನ್ಮಾಷ್ಟ್ಟಮಿ ಪ್ರಯುಕ್ತ ಸಾರ್ವಜನಿಕ ಮೊಸರುಕುಡಿಕೆ, ಮೆರವಣಿಗೆ ಮತ್ತು ಕಾರ್ಯಕ್ರಮಗಳು ನಡೆಯಲಿದೆ. ಈ ಸಮಯದಲ್ಲಿ ಕಿಡಿಗೇಡಿಗಳು ಅಮಲು ಪದಾರ್ಥ ಸೇವಿಸಿ ಶಾಂತಿ ಭಂಗವನ್ನುಂಟು ಮಾಡಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಸಂಭವನೀಯತೆಗಳಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಕಾನೂನು ಮತ್ತು ಸುವ್ಯವಸ್ಥೆ ಯನ್ನು ಕಾಪಾಡುವ ಹಿತದೃಷ್ಟಿಯಿಂದ ಮೆರವಣಿಗೆ ಪ್ರದೇಶಗಳಲ್ಲಿ ಆಯಾ ದಿನಗಳಂದು ಬಾರ್ ಮತ್ತು ವೈನ್ ಶಾಪ್‌ಗಳಲ್ಲಿ, ಮದ್ಯದಂಗಡಿಗಳಲ್ಲಿ ಯಾವುದೇ ರೀತಿಯ ಅಮಲು ಪದಾರ್ಥ ಮಾರಾಟ ಮಾಡದಂತೆ ಎಲ್ಲಾ ರೀತಿಯ ಮದ್ಯದಂಗಡಿಗಳನ್ನು ಬಂದ್ ಮಾಡಲು ಜಿಲ್ಲಾಧಿಕಾರಿ ದರ್ಶನ್ ಎಚ್.ವಿ ಆದೇಶಿಸಿದ್ದಾರೆ.

ವಾರ್ತಾ ಭಾರತಿ 16 Aug 2025 10:07 pm

ಪಾಕಿಸ್ತಾನಕ್ಕೆ ಮೂರನೆ ಹ್ಯಾಂಗರ್ ದರ್ಜೆಯ ಜಲಾಂತರ್ಗಾಮಿ ನೌಕೆ ಹಸ್ತಾಂತರಿಸಿದ ಚೀನಾ

ಬೀಜಿಂಗ್: ಭಾರತದ ಪಾರಮ್ಯ ಹೊಂದಿರುವ ಹಿಂದೂ ಮಹಾ ಸಾಗರದಲ್ಲಿ ಪಾಕಿಸ್ತಾನ ನೌಕಾಪಡೆಯ ಸಾಮರ್ಥ್ಯವನ್ನು ಉನ್ನತೀಕರಿಸುವ ಮೂಲಕ, ಅದರ ಬೆಳೆಯುತ್ತಿರುವ ಉಪಸ್ಥಿತಿಗೆ ನೆರವು ಒದಗಿಸುವ ಭಾಗವಾಗಿ ಚೀನಾ ತನ್ನ ಎಂಟು ಸುಧಾರಿತ ಹ್ಯಾಂಗರ್ ದರ್ಜೆಯ ಜಲಾಂಗರ್ಗಾಮಿ ನೌಕೆಗಳ ಪೈಕಿ ಮೂರನೆಯದನ್ನು ಪಾಕಿಸ್ತಾನಕ್ಕೆ ಪೂರೈಸಿದೆ. ಮೂರನೆ ಹ್ಯಾಂಗರ್ ದರ್ಜೆಯ ಜಲಾಂತರ್ಗಾಮಿ ನೌಕೆಯ ಉದ್ಘಾಟನಾ ಕಾರ್ಯಕ್ರಮವನ್ನು ಗುರುವಾರ ಕೇಂದ್ರ ಚೀನಾದ ಹುಬೇಯಿ ಪ್ರಾಂತ್ಯದ ವುಹಾನ್ ನಲ್ಲಿ ಹಮ್ಮಿಕೊಳ್ಳಲಾಗಿತ್ತು ಎಂದು ಶನಿವಾರ ಸರಕಾರಿ ಒಡೆತನದ ಗ್ಲೋಬಲ್ ಟೈಮ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ. ಪಾಕಿಸ್ತಾನಕ್ಕಾಗಿ ನಿರ್ಮಿಸುತ್ತಿರುವ ಎಂಟು ಜಲಾಂತರ್ಗಾಮಿ ನೌಕೆಗಳ ಪೈಕಿ ಎರಡನೆ ನೌಕೆಯನ್ನು ಈ ವರ್ಷದ ಮಾರ್ಚ್ ತಿಂಗಳಲ್ಲಿ ಚೀನಾ ಪಾಕಿಸ್ತಾನಕ್ಕೆ ಹಸ್ತಾಂತರಿಸಿತ್ತು. ಬಲೂಚಿಸ್ತಾನದಲ್ಲಿ ಗ್ವಾದರ್ ಬಂದರನ್ನು ಅಭಿವೃದ್ಧಿಪಡಿಸುವ ಮೂಲಕ ಅರಬ್ಬೀ ಸಮುದ್ರದಲ್ಲಿ ಚೀನಾ ನೌಕಾಪಡೆಯು ಸ್ಥಿರವಾದ ವಿಸ್ತರಣೆ ಮಾಡುತ್ತಿರುವ ಹೊತ್ತಿನಲ್ಲೇ, ಪಾಕಿಸ್ತಾನದ ನೌಕಾಪಡೆಯ ಸಾಮರ್ಥ್ಯವನ್ನು ಉನ್ನತೀಕರಿಸುವ ತನ್ನ ಪ್ರಯತ್ನದ ಭಾಗವಾಗಿ ಚೀನಾ ಕಳೆದ ಕೆಲವು ವರ್ಷಗಳಲ್ಲಿ ಪೂರೈಸಿರುವ ನಾಲ್ಕು ಆಧುನಿಕ ಜಲಾಂತರ್ಗಾಮಿ ನೌಕೆಗಳೊಂದಿಗೆ ಈ ಜಲಾಂತರ್ಗಾಮಿ ನೌಕೆಗಳನ್ನು ಪೂರೈಸುತ್ತಿದೆ. ಚೀನಾ ನೌಕಾಪಡೆ ಹಿಂದೂ ಮಹಾ ಸಾಗರದಲ್ಲೂ ತನ್ನ ಉಪಸ್ಥಿತಿಯನ್ನು ವಿಸ್ತರಿಸುತ್ತಾ ಸಾಗಿದೆ. ಮೂರನೆಯ ಜಲಾಂತರ್ಗಾಮಿ ನೌಕೆಯ ಉದ್ಘಾಟನಾ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಪಾಕಿಸ್ತಾನದ ನೌಕಾಪಡೆ ಸಿಬ್ಬಂದಿ ಯೋಜನೆ-2ರ ಉಪ ಮುಖ್ಯಸ್ಥರಾದ ವೈಸ್ ಅಡ್ಮಿರಲ್ ಅಬ್ದುಲ್ ಸಮದ್, ಹ್ಯಾಂಗರ್ ದರ್ಜೆಯ ಜಲಾಂತರ್ಗಾಮಿ ನೌಕೆ ನಿಖರ ಆಯುಧವಾಗಿದ್ದು, ಪ್ರಾದೇಶಿಕ ಶಕ್ತಿ ಸಮತೋಲನ ಹಾಗೂ ಸಾಗರದಲ್ಲಿನ ಸ್ಥಿರತೆಯನ್ನು ಕಾಪಾಡಿಕೊಳ್ಳುವಲ್ಲಿ ಅದರಲ್ಲಿನ ಸುಧಾರಿತ ಸಂವೇದಕಗಳು ನಿರ್ಣಾಯಕವಾಗಿವೆ ಎಂದು ಹೇಳಿದ್ದಾರೆ ಎಂದು ಪಾಕಿಸ್ತಾನದ ರಕ್ಷಣಾ ಹೇಳಿಕೆಯನ್ನು ಉಲ್ಲೇಖಿಸಿ ಗ್ಲೋಬಲ್ ಟೈಮ್ಸ್ ದೈನಿಕ ವರದಿ ಮಾಡಿದೆ.

ವಾರ್ತಾ ಭಾರತಿ 16 Aug 2025 10:04 pm

ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಹೊಲಿಗೆ ಯಂತ್ರ, ಸೀರೆ ವಿತರಣೆ

ಮಂಗಳೂರು, ಆ.16: ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ನಗರದ ಕಂದಕ್ ಪರಿಸರದಲ್ಲಿ ಪೋರ್ಟ್ ವಾರ್ಡ್ ಫ್ರೆಂಡ್ಸ್ ವತಿಯಿಂದ ಬಡ ಕುಟುಂಬಸ್ಥರಿಗೆ ಹೊಲಿಗೆ ಯಂತ್ರ ವಿತರಣೆ, ಸೀರೆ ವಿತರಣೆ ಹಾಗೂ ಸನ್ಮಾನ ಕಾರ್ಯಕ್ರಮ ನಡೆಯಿತು. ಬದ್ರಿಯಾ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ.ಎನ್ ಇಸ್ಮಾಯಿಲ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು. ಕಾರ್ಯಕ್ರಮದಲ್ಲಿ ಮಂಗಳೂರು ತಾಲೂಕು ತಹಶೀಲ್ದಾರ್ ಟಿ. ರಮೇಶ್ ಬಾಬು, ಮಂಗಳೂರು ನಗರಾಬಿವೃದ್ಧಿ ಪ್ರಾಧಿಕಾರದ ಆಯುಕ್ತ ಮುಹಮ್ಮದ್ ನಝೀರ್, ಮಂಗಳೂರು ಸಂಚಾರ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ಕೆ ನಜ್ಮಾ ಫಾರೂಖಿ, ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕ ಪತ್ರ ಇಲಾಖೆ ಉಪ ನಿರ್ದೇಶಕ ರಾದ ಅಸ್ಮ ಕೆ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮುಖ್ಯ ಲೆಕ್ಕ ಪರಿಶೋಧನಾ ಅಧಿಕಾರಿ ಮುಹಮ್ಮದ್ ತೌಸೀಫ್, ರೊಸಾರಿಯೋ ಚರ್ಚ್ ಧರ್ಮಗುರು ವಂ. ವಲೇರಿಯನ್ ಡಿ ಸೋಜ, ಸ್ಥಳೀಯ ಪಾಲಿಕೆ ಸದಸ್ಯ ಅಬ್ದುಲ್ ಲತೀಫ್, ನಾಗರಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಜಿ.ಹನುಮಂತ ಕಾಮತ್, ಖ್ಯಾತ ತುಳು ರಂಗಭೂಮಿ ಹಾಗೂ ಚಲನಚಿತ್ರ ನಟ ಸತೀಶ್ ಬಂದಲೆ, ಸಂತ ಅರ್ಸುಲ ಅಂಗನವಾಡಿ ಕಾರ್ಯಕರ್ತೆ ಸುಜಾತ ಶೆಟ್ಟಿ, ಬದ್ರಿಯಾ ಶಾಲೆಯ ಪ್ರಾಂಶುಪಾಲಕಿ ಸೀಮಾ ಉಪಸ್ಥಿತರಿದ್ದರು.

ವಾರ್ತಾ ಭಾರತಿ 16 Aug 2025 10:03 pm

ಆಸ್ಟ್ರೇಲಿಯದ ಮಾಜಿ ನಾಯಕ, ಕೋಚ್ ಬಾಬ್ ಸಿಂಪ್ಸನ್ ನಿಧನ

ಮೆಲ್ಬರ್ನ್, ಆ.16: ಆಸ್ಟ್ರೇಲಿಯ ಕ್ರಿಕೆಟ್ ತಂಡದ ಮಾಜಿ ಟೆಸ್ಟ್ ನಾಯಕ ಹಾಗೂ ಮೊದಲ ಪೂರ್ಣಕಾಲಿಕ ಕೋಚ್ ಬಾಬ್ ಸಿಂಪ್ಸನ್ ಅವರು ಸಿಡ್ನಿಯಲ್ಲಿ ನಿಧನರಾಗಿದ್ದಾರೆ. ಅವರಿಗೆ 89 ವರ್ಷ ವಯಸ್ಸಾಗಿತ್ತು. ಆಸ್ಟ್ರೇಲಿಯ ಕ್ರಿಕೆಟ್ ಇತಿಹಾಸದಲ್ಲಿ ಸಿಂಪ್ಸನ್ ಅತ್ಯಂತ ಪ್ರಭಾವಿ ವ್ಯಕ್ತಿಗಳ ಪೈಕಿ ಒಬ್ಬರಾಗಿದ್ದರು. 40 ವರ್ಷಗಳಿಗೂ ಅಧಿಕ ಸಮಯ ಕ್ರಿಕೆಟಿಗನಾಗಿ, ನಾಯಕ, ಕೋಚ್ ಹಾಗೂ ವೀಕ್ಷಕ ವಿವರಣೆಗಾರನಾಗಿ ತನ್ನ ಹೆಜ್ಜೆ ಗುರುತು ಮೂಡಿಸಿದ್ದರು. 1957 ಹಾಗೂ 1978ರ ನಡುವೆ 62 ಟೆಸ್ಟ್ ಪಂದ್ಯಗಳನ್ನು ಆಡಿದ್ದರು. 46.81ರ ಸರಾಸರಿಯಲ್ಲಿ 4,869 ರನ್ ಗಳಿಸಿದ್ದ ಸಿಂಪ್ಸನ್ ಅವರು ಒಟ್ಟು 71 ವಿಕೆಟ್‌ ಗಳನ್ನು ಉರುಳಿಸಿದ್ದರು. ಸ್ಲಿಪ್‌ ನಲ್ಲಿ ಓರ್ವ ಶ್ರೇಷ್ಠ ಫೀಲ್ಡರ್ ಆಗಿದ್ದರು. ಸಿಂಪ್ಸನ್ ತನ್ನ 16ನೇ ವಯಸ್ಸಿನಲ್ಲಿ ನ್ಯೂ ಸೌತ್ ವೇಲ್ಸ್ ತಂಡದ ಪರ ತನ್ನ ಚೊಚ್ಚಲ ಪ್ರಥಮ ದರ್ಜೆ ಪಂದ್ಯ ಆಡಿದ್ದರು. 21,029 ರನ್ ಗಳಿಸಿದ್ದಲ್ಲದೆ, ತನ್ನ ಲೆಗ್ ಸ್ಪಿನ್ ಬೌಲಿಂಗ್ ಮೂಲಕ ಒಟ್ಟು 349 ವಿಕೆಟ್‌ ಗಳನ್ನು ಉರುಳಿಸಿದ್ದರು. 11 ವರ್ಷಗಳ ಕಾಲ 50 ಟೆಸ್ಟ್ ಪಂದ್ಯಗಳಲ್ಲಿ ಆಸ್ಟ್ರೇಲಿಯದ ಶ್ರೇಷ್ಠ ಆರಂಭಿಕ ಆಟಗಾರನಾಗಿ, 29 ಪಂದ್ಯಗಳಲ್ಲಿ ನಾಯಕನಾಗಿ ಆಡಿದ್ದ ಸಿಂಪ್ಸನ್ 1968ರಲ್ಲಿ ಮೊದಲಿಗೆ ನಿವೃತ್ತಿ ಪಡೆದರು. 1977ರಲ್ಲಿ ನಿವೃತ್ತಿಯ ನಿರ್ಧಾರದಿಂದ ಹಿಂದೆ ಸರಿದು ಟೆಸ್ಟ್ ನಾಯಕನಾಗಿ ಮರಳಿದ್ದರು. ಸಿಂಪ್ಸನ್ ತನ್ನ 41ನೇ ವಯಸ್ಸಿನಲ್ಲಿ ಸ್ವದೇಶದಲ್ಲಿ ಭಾರತದ ವಿರುದ್ಧ 5 ಪಂದ್ಯಗಳ ಟೆಸ್ಟ್ ಸರಣಿ ಹಾಗೂ ವೆಸ್ಟ್‌ ಇಂಡೀಸ್ ವಿರುದ್ಧ ವಿದೇಶಿ ನೆಲದಲ್ಲಿ 5 ಪಂದ್ಯಗಳ ಟೆಸ್ಟ್ ಸರಣಿಯ ನಾಯಕತ್ವವಹಿಸಿದ್ದರು. ಸಿಂಪ್ಸನ್ ಟೆಸ್ಟ್ ಕ್ರಿಕೆಟ್‌ ನಲ್ಲಿ ಒಟ್ಟು 10 ಶತಕಗಳನ್ನು ಗಳಿಸಿದ್ದು, ಈ ಎಲ್ಲ ಶತಕಗಳನ್ನು ನಾಯಕನಾಗಿದ್ದಾಗ ಗಳಿಸಿದ್ದು ವಿಶೇಷ. 1964ರಲ್ಲಿ ಮ್ಯಾಂಚೆಸ್ಟರ್‌ ನಲ್ಲಿ ಇಂಗ್ಲೆಂಡ್ ವಿರುದ್ಧ ತಾನಾಡಿದ 30ನೇ ಟೆಸ್ಟ್ ಪಂದ್ಯದಲ್ಲಿ 311 ರನ್ ಗಳಿಸಿ ಚೊಚ್ಚಲ ಶತಕ ಗಳಿಸಿದರು. ಸಿಂಪ್ಸನ್ ಅವರು 1965ರಲ್ಲಿ ವರ್ಷದ ವಿಸ್ಡನ್ ಕ್ರಿಕೆಟಿಗ ಪ್ರಶಸ್ತಿಗೆ ಭಾಜನರಾಗಿದ್ದರು. ಐಸಿಸಿ ಹಾಲ್ ಆಫ್ ಫೇಮ್ ಹಾಗೂ ಆಸ್ಟ್ರೇಲಿಯದ ಕ್ರಿಕೆಟ್ ಹಾಲ್ ಆಫ್ ಫೇಮ್‌ ನ ಸದಸ್ಯರಾಗಿದ್ದರು.

ವಾರ್ತಾ ಭಾರತಿ 16 Aug 2025 10:02 pm

ಪ್ರತ್ಯೇಕ ಪ್ರಕರಣ: ಇಬ್ಬರ ಆತ್ಮಹತ್ಯೆ

ಹಿರಿಯಡ್ಕ, ಆ.16: ವೈಯಕ್ತಿಕ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡ ಬೊಮ್ಮರಬೆಟ್ಟು ಗ್ರಾಮದ ಜಯರಾಜ್ (43) ಎಂಬವರು ಆ.15ರಂದು ಸಂಜೆ ವೇಳೆ ಮನೆಯ ಕಿಟಕಿಯ ಕಬ್ಬಿಣದ ರಾಡ್‌ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಲ್ಪೆ: ಮದ್ಯಪಾನ ಮಾಡುವ ಚಟ ಹೊಂದಿದ್ದ ಉತ್ತರ ಪ್ರದೇಶ ಮೂಲದ ಮಲ್ಪೆಯಲ್ಲಿ ವಾಸವಾಗಿರುವ ಗಂಗಾ ಪ್ರಸಾದ್(49) ಎಂಬವರು ಆ.15ರಂದು ಸಂಜೆ ವೇಳೆ ಮನೆಯ ಬೆಡ್‌ರೂಮ್‌ನ ಕಿಟಕಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಾರ್ತಾ ಭಾರತಿ 16 Aug 2025 10:00 pm

ಭಾರೀ ಮಳೆಯಿಂದ ಭೂಕುಸಿತ | ಶಿರಾಡಿಘಾಟ್ ರಸ್ತೆಯಲ್ಲಿ ಸಂಚಾರ ಸಂಪೂರ್ಣ ಸ್ಥಗಿತ

ಸಕಲೇಶಪುರ : ರಾಷ್ಟ್ರೀಯ ಹೆದ್ದಾರಿ-75ರ ಶಿರಾಡಿಘಾಟ್ ಮಾರ್ಗದಲ್ಲಿ ಭಾರೀ ಮಳೆಯಿಂದಾಗಿ ಭೂಕುಸಿತ ಉಂಟಾಗಿ ವಾಹನ ಸಂಚಾರ ಸಂಪೂರ್ಣ ಬಂದ್ ಆಗಿದೆ. ಮಾರನಹಳ್ಳಿ ಬಳಿ ಪೊಲೀಸರು ಬ್ಯಾರಿಕೇಡ್ ಹಾಕಿ ವಾಹನಗಳನ್ನು ನಿಲ್ಲಿಸಿದ್ದು, ಬದಲಿ ಮಾರ್ಗ ಬಳಸುವಂತೆ ಚಾಲಕರಿಗೆ ಸೂಚನೆ ನೀಡಿದ್ದಾರೆ. ಇದರಿಂದಾಗಿ ಸಾವಿರಾರು ವಾಹನ ಸವಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಜಿಲ್ಲೆಯ ಮಲೆನಾಡು ಭಾಗದಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದ ಶಿರಾಡಿಘಾಟ್ ರಸ್ತೆಯ ಹಲವು ಕಡೆ ಭೂಕುಸಿತ ಉಂಟಾಗಿದ್ದು, ಮರ-ಗಿಡಗಳ ಸಮೇತ ಮಣ್ಣು ರಸ್ತೆಗೆ ಜಾರಿ ಬಿದ್ದಿದೆ. ಇದರಿಂದ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ವಾರಾಂತ್ಯ ಹಿನ್ನೆಲೆಯಲ್ಲಿ ವಾಹನಗಳ ಸಂಚಾರ ಹೆಚ್ಚಿರುವುದರಿಂದ ಶಿರಾಡಿಘಾಟ್ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿ ಸವಾರರು ಪರದಾಡುವ ಪರಿಸ್ಥಿತಿ ಎದುರಾಗಿದೆ. ಸದ್ಯ ನೂರಾರು ವಾಹನಗಳು ರಸ್ತೆ ಮಧ್ಯೆ ನಿಂತಿರುವುದರಿಂದ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಟ್ರಾಫಿಕ್ ಜಾಮ್ ತೆರವುಗೊಳಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.

ವಾರ್ತಾ ಭಾರತಿ 16 Aug 2025 9:58 pm

ಆಯಿಲ್ ಫ್ಯಾಕ್ಟರಿ ಮಾಲಕಿಗೆ 2.5 ಲಕ್ಷ ರೂ. ಆನ್‌ಲೈನ್ ವಂಚನೆ: ಪ್ರಕರಣ ದಾಖಲು

ಕೋಟ, ಆ.16: ಗೇರು ಆಯಿಲ್ ಖರೀದಿ ಮಾಡುವ ಹೆಸರಿನಲ್ಲಿ ಆಯಿಲ್ ಫ್ಯಾಕ್ಟರಿ ಮಾಲಕರೊಬ್ಬರಿಗೆ ಲಕ್ಷಾಂತರ ರೂ. ಆನ್‌ಲೈನ್ ವಂಚನೆ ಎಸಗಿರುವ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕುಂದಾಪುರದ ವೀಣಾ ಎಂಬವರು ಗೇರು ಆಯಿಲ್ ಫ್ಯಾಕ್ಟರಿ ನಡೆಸಿ ಕೊಂಡಿದ್ದು, ಅಗಸ್ಟ್ ತಿಂಗಳ ಮೊದಲನೇ ವಾರದಲ್ಲಿ ಖುನಾಲ್ ಚೌಧರಿ ಎಂಬಾತ ತಾನು ಯಲಹಂಕ ಬಿಎಸ್‌ಎಫ್ ಪರಚೇಸರ್ ಆಫೀಸರ್ ಎಂಬುದಾಗಿ ಹೇಳಿಕೊಂಡು ಕರೆ ಮಾಡಿ, 30 ಟನ್ ಆಯಿಲ್ ಕಳುಹಿಸಲು ಹೇಳಿದ್ದು ಅದರಂತೆ ವೀಣಾ ಆ.14ರಂದು 30 ಟನ್ ಆಯಿಲ್ ಟ್ಯಾಂಕರ್‌ಗೆ ತುಂಬಿಸಿ ಬೆಂಗಳೂರುನ ವಿಳಾಸಕ್ಕೆ ಕಳುಹಿಸಿದ್ದರು. ಮತ್ತೆ ಕರೆ ಮಾಡಿದ ಆರೋಪಿ, ಆ.15ರಂದು ರಜೆ, ಗೇಟ್ ಪಾಸ್ ಆನ್ ಲೈನ್ ಬೇಗ ಮಾಡಬೇಕು, ಗೇಟ್ ಪಾಸ್ ಮಾಡದಿದ್ದರೆ ಹಣ ಸಿಗಲು 2-3 ದಿನ ಆಗುತ್ತದೆ ಎಂದು ಹೇಳಿ 5 ರೂ. ಕಳುಹಿಸಲು ತಿಳಿಸಿದ್ದನು. ಅದರಂತೆ ವೀಣಾ ತನ್ನ ಮಗನ ಬ್ಯಾಂಕ್ ಖಾತೆಯಿಂದ 5 ರೂ. ಹಾಕಿದ್ದು ಆರೋಪಿ 10 ರೂ. ವಾಪಾಸ್ಸು ಹಾಕಿದನು. ಆರೋಪಿಯು ಮತ್ತೆ ಕರೆ ಮಾಡಿ ಸೆಕ್ಯೂರಿಟಿ ಡೆಪಾಸಿಟ್ 2.5 ಲಕ್ಷ ರೂ. ಹಣ ಕಳುಹಿಸುವಂತೆ ತಿಳಿಸಿದ್ದು ಅದರಂತೆ ವೀಣಾ ಒಟ್ಟು 2,45,486ರೂ. ಹಣ ಹಾಕಿದ್ದರು. ಆರೋಪಿ ನಂಬಿಸಿ ಆನ್‌ಲೈನ್ ಮೂಲಕ ವಂಚಿಸಿ ಹಣ ಪಡೆದು ಮೋಸ ಮಾಡಿರುವುದಾಗಿ ದೂರಲಾಗಿದೆ.

ವಾರ್ತಾ ಭಾರತಿ 16 Aug 2025 9:57 pm

ಪರಶುರಾಮ ಥೀಮ್ ಪಾರ್ಕ್ ಬಗ್ಗೆ ಸಲ್ಲಿಸಿರುವ ಪಿ ಐ ಎಲ್ ಬಗ್ಗೆ ತನಿಖೆ ನೆಡೆಸಲು ಜಿಲ್ಲಾಧಿಕಾರಿಗೆ ಮನವಿ: ಉಮೇಶ್ ಕಲ್ಲೊಟ್ಟೆ

ಕಾರ್ಕಳ : ಪರಶುರಾಮ ಥೀಮ್ ಪಾರ್ಕ್ ನಲ್ಲಿ ಹೊಸ ಕಂಚಿನ ಪರಶುರಾಮ ಮೂರ್ತಿಯನ್ನು ನಿರ್ಮಿಸಲು ತಮ್ಮ ಸಹಿತ ಬೇರೆ ಇಲಾಖಾ ಮುಖ್ಯಸ್ಥರನ್ನು ಪಕ್ಷಕಾರರನ್ನಾಗಿಸಿ ಮಾನ್ಯ ಉಚ್ಛ ನ್ಯಾಯಾಲಯದಲ್ಲಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿರುತ್ತದೆ ಈ ಬಗ್ಗೆ ಸಂಬಂಧ ಪಟ್ಟ ಇಲಾಖೆಯ ಸೂಕ್ತ ತನಿಖೆ ನಡೆಸುವಂತೆ ಸಮಾಜ ಸೇವಕ, ಮಾಹಿತಿ ಹಕ್ಕು ಕಾರ್ಯಕರ್ತ ಉಮೇಶ್ ಕಲ್ಲೊಟ್ಟೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಪರಶುರಾಮ ಥೀಮ್ ಪಾರ್ಕ್ ಗೆ ಹೋಗಲು ಕಾಂಕ್ರೀಟ್ ರಸ್ತೆಗೆ ಬಿಲ್ಲು ಬಿಡುಗಡೆಯಾಗಲು ಬಾಕಿ ಇರುತ್ತದೆ. ಪರಶುರಾಮ ಥೀಮ್ ಪಾರ್ಕ್ ಗೆ ಹೋಗಲು ಕಾಂಕ್ರೀಟ್ ರಸ್ತೆಗೆ ಯಾವುದೇ ಇಲಾಖೆಯಿಂದ ಅನುಮತಿ ಪಡೆಯದೇ ಸುಮಾರು 3 ಕೋಟಿ ರೂಪಾಯಿ ವೆಚ್ಚದಲ್ಲಿ ರಸ್ತೆಯನ್ನು ನಿರ್ಮಿಸದ ಗುತ್ತಿಗೆದಾರರಿಗೆ ಬಿಲ್ಲು ಬಿಡುಗಡೆಯಾಗದೆ ಬಾಕಿ ಇರುತ್ತದೆ. ಕಾಂಕ್ರೀಟ್ ರಸ್ತೆ ಅಕ್ರಮವಾಗಿ ಹಣ ಬಳಕೆಯಾಗಿರುವ ಬಗ್ಗೆ GST ಮತ್ತು IT ಇಲಾಖೆಯಿಂದ ತನಿಖೆಯಾಗಬೇಕು. ಹೊಸ ಕಂಚಿನ ಪರಶುರಾಮ ಮೂರ್ತಿಯನ್ನು ನಿರ್ಮಿಸಲು ಮಾನ್ಯ ಉಚ್ಛ ನ್ಯಾಯಾಲಯದಲ್ಲಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಗೆ ಮತ್ತು ಸದ್ರಿ ಕಾಂಕ್ರೀಟ್ ರಸ್ತೆಗೆ ಹಣವನ್ನು ಬಿಡುಗಡೆ ಮಾಡಲು ಸಂಬಂಧ ಇರುವ ಬಗ್ಗೆ ತಾವು ಸರಕಾರಕ್ಕೆ ಪತ್ರವನ್ನು ಬರೆದು ಯಾವುದೇ ಹಣವನ್ನು ಬಿಡುಗಡೆ ಮಾಡಬಾರದು. ಇದ್ದು ಪರಶುರಾಮ ಮೂರ್ತಿಗೆ ಸರಕಾರದಿಂದ ಶಿಲ್ಪಿಗೆ ಬಿಡುಗಡೆಯಾಗಿರುವ ಹಣವನ್ನು ವಸೂಲು ಮಾಡಲು ಕ್ರಮವನ್ನು ಕೈಗೊಳ್ಳಬೇಕೇ ಹೊರತು ಪುನಃ ಸರಕಾರದಿಂದ ಹಣ ಬಿಡುಗಡೆ ಮಾಡಿ ಪರಶುರಾಮ ಮೂರ್ತಿಯನ್ನು ನಿರ್ಮಿಸುವುದು ಕಾನೂನು ಬಾಹಿರವಾಗಿರುತ್ತದೆ ಹಾಗೂ ಈ ಬಗ್ಗೆ ತಾವು ಸೂಕ್ತ ಕ್ರಮವನ್ನು ಕೈಗೊಳ್ಳಬೇಕೆಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ವಾರ್ತಾ ಭಾರತಿ 16 Aug 2025 9:55 pm

ಕಲಬುರಗಿ| ಸ್ಥಳೀಯ ಸಂಸ್ಥೆಗಳ ಸಾರ್ವತ್ರಿಕ ಚುನಾವಣೆ: ಮದ್ಯಮಾರಾಟ, ಸಂತೆ, ಜಾತ್ರೆ ನಿಷೇಧಿಸಿ ಡಿಸಿ ಆದೇಶ

ಕಲಬುರಗಿ: ಕಾಳಗಿ ತಾಲೂಕಿನ ಕಾಳಗಿ ಪಟ್ಟಣ ಪಂಚಾಯತಿಯ ಒಟ್ಟು 11 ವಾರ್ಡ್‍ಗಳಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಸಾರ್ವತ್ರಿಕ ಚುನಾವಣೆ-2025 ಹಿನ್ನೆಲೆಯಲ್ಲಿ ಇದೇ ಆಗಸ್ಟ್ 17 ರಂದು ಮತದಾನ ನಡೆಯಲಿದೆ. ಈ ಚುನಾವಣೆಯು ಮುಕ್ತ, ಶಾಂತಿಯುತ ಹಾಗೂ ನ್ಯಾಯಸಮ್ಮತವಾಗಿ ನಡೆಸಲು ಅನುಕೂಲವಾಗುವಂತೆ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯುವ ವಾರ್ಡ್ ವ್ಯಾಪ್ತಿಯಲ್ಲಿ ಮದ್ಯಮಾರಾಟ, ಸಂತೆ ಹಾಗೂ ಜಾತ್ರೆಗಳನ್ನು ನಿಷೇಧಿಸಿ ಕಲಬುರಗಿ ಜಿಲ್ಲಾ ದಂಡಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳಾದ ಬಿ. ಫೌಝಿಯಾ ತರನ್ನುಮ್ ಅವರು ಆದೇಶ ಹೊರಡಿಸಿದ್ದಾರೆ. ಮತದಾನ ನಡೆಯುವ ಮತಗಟ್ಟೆಗಳ ಸುತ್ತಲೂ 200 ಮೀಟರ್ ವ್ಯಾಪ್ತಿಯಲ್ಲಿ ಆ.15ರ ಸಂಜೆ 6 ಗಂಟೆಯಿಂದ ಆ.18ರ ಬೆಳಿಗ್ಗೆ 6 ಗಂಟೆಯವರೆಗೆ 2023 ಬಿ.ಎನ್.ಎಸ್.ಎಸ್ ಸೆಕ್ಷನ್ 163 ರನ್ವಯ ಮತದಾರರು ಹಾಗೂ ಚುನಾವಣೆಗೆ ಸಂಬಂಧಪಟ್ಟ ಹೊರತುಪಡಿಸಿ ಇತರರ ಪ್ರವೇಶವನ್ನು ನಿಷೇಧಿಸಲಾಗಿದೆ. ಕರ್ನಾಟಕ ಅಬಕಾರಿ ಸನ್ನದುಗಳ (ಸಾಮಾನ್ಯ ಷರತ್ತುಗಳು) ನಿಯಮಾವಳಿಗಳು 1967 ನಿಯಮ 10(ಬಿ) ರಂತೆ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯುವ ವಾರ್ಡ್ ವ್ಯಾಪ್ತಿಯಲ್ಲಿ 2025ರ ಆಗಸ್ಟ್ 16ರ ಸಂಜೆ 6 ಗಂಟೆಯಿಂದ ಆಗಸ್ಟ್ 18 ರ ಬೆಳಿಗ್ಗೆ 6 ಗಂಟೆಯವರೆಗೆ ಎಲ್ಲಾ ಮದ್ಯದ ಅಂಗಡಿಗಳನ್ನು ಹಾಗೂ ಎಲ್ಲಾ ತರಹದ ಮದ್ಯಪಾನ, ಸರಾಯಿ, ಸ್ವದೇಶಿ ಹಾಗೂ ವಿದೇಶಿ ಮದ್ಯಪಾನ, ಮಾದಕ ವಸ್ತುಗಳ ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ. ಅದೇ ರೀತಿ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯುವ ವಾರ್ಡ್ ವ್ಯಾಪ್ತಿಯಲ್ಲಿ ಆ.17 ರಂದು ಬೆಳಿಗ್ಗೆ 6 ಗಂಟೆಯಿಂದ ಆಗಸ್ಟ್ 18 ರ ಬೆಳಿಗ್ಗೆ 6 ಗಂಟೆಯವರೆಗೆ ಎಲ್ಲಾ ತರಹದ ಸಂತೆ ಹಾಗೂ ಜಾತ್ರೆಗಳನ್ನು ನಿಷೇಧಿಸಲಾಗಿದೆ. ಭಾರತಿಯ ಆಯುಧ ಕಾಯ್ದೆ 1959 (Arms Act) ನಿಯಮಾವಳಿಗಳು 2016 ನಿಯಮ 24(ಎ) ರಡಿ ಪದತ್ತವಾದ ಅಧಿಕಾರದನ್ವಯ ಚುನಾವಣಾ ಜರುಗಲಿರುವ ಪಟ್ಟಣ ಪಂಚಾಯತ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಮಾತ್ರ ಸಾರ್ವಜನಿಕರು ಹೊಂದಿರುವ ಆಯುಧಗಳನ್ನು (ಗನ್/ರಿವಾಲ್ವರ್ ಇತ್ಯಾದಿ) ಚುನಾವಣಾ ಮುಕ್ತಾಯವಾಗುವವರೆಗೆ ಸಂಬಂಧಪಟ್ಟ ಪೊಲೀಸ್ ಠಾಣೆಗೆ ಜಮೆ ಮಾಡುವಂತೆ ಅವರು ಆದೇಶಿಸಿದ್ದಾರೆ.

ವಾರ್ತಾ ಭಾರತಿ 16 Aug 2025 9:55 pm

ಕೊಲ್ಲೂರು ದೇವಸ್ಥಾನದಲ್ಲಿ ಮಹಿಳೆಯ ಚಿನ್ನದ ಸರ ಕಳವು: ಪ್ರಕರಣ ದಾಖಲು

ಕೊಲ್ಲೂರು, ಆ.16: ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನದ ಶ್ರೀವೀರಭದ್ರ ದೇವರ ಗುಡಿಯಲ್ಲಿ ಕಳ್ಳರು ಮಹಿಳೆಯೊಬ್ಬರ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಕಳವು ಮಾಡಿರುವ ಘಟನೆ ಆ.15ರಂದು ಮಧ್ಯಾಹ್ನ ವೇಳೆ ನಡೆದಿದೆ. ಹೆಬ್ರಿ ಮುದ್ರಾಡಿ ಗ್ರಾಮದ ಜಯಂತಿ(64) ಎಂಬವರು ತಮ್ಮ ಮಗಳು ಹಾಗೂ ಅಳಿಯರೊಂದಿಗೆ ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನಕ್ಕೆ ಹೋಗಿದ್ದು, ಅಲ್ಲಿ ಜಯಂತಿ ಶ್ರೀವೀರಭದ್ರ ದೇವರಿಗೆ ಕೈ ಮುಗಿದು ಬರುವುದಾಗಿ ಹೇಳಿ ಹೋದಾಗ ಒಮ್ಮೇಲೆ ಮಳೆ ಬಂತ್ತೆನ್ನಲಾಗಿದೆ. ಈ ವೇಳೆ ದೇವಸ್ಥಾನದ ಹೊರಾಂಗಣದಲ್ಲಿ ನೆರೆದ ಜನರು ಒಮ್ಮೇಲೆ ವೀರಭದ್ರ ದೇವರ ಗುಡಿಯ ಕಡೆಗೆ ನುಗ್ಗಿ ಜಯಂತಿ ಅವರ ಮೈ ಮೇಲೆ ಬಿದ್ದರು. ಜನರು ಹೋದ ಬಳಿಕ ನೋಡಿದಾಗ ಜಯಂತಿ ಅವರ ಕುತ್ತಿಗೆಯಲ್ಲಿದ್ದ 5 ಪವನ್ ಇರುವ ಚಿನ್ನದ ಸರವನ್ನು ಕಳವು ಆಗಿರುವುದು ಕಂಡುಬಂದಿದೆ. ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಾರ್ತಾ ಭಾರತಿ 16 Aug 2025 9:51 pm

ಸಕಲೇಶಪುರ | ಭಾರೀ ಮಳೆಯಿಂದ ಹಳಿ ಮೇಲೆ ಮಣ್ಣು ಕುಸಿತ; ರೈಲ್ವೇ ಸಂಚಾರ ತಾತ್ಕಾಲಿಕ ಸ್ಥಗಿತ

ಸಕಲೇಶಪುರ : ತಾಲ್ಲೂಕಿನ ಎಡಕುಮೇರಿ‌ ಬಳಿ ಭಾರೀ ಮಳೆಯಿಂದ ರೈಲ್ವೇ ಹಳಿ ಮೇಲೆ ಮಣ್ಣು ಹಾಗೂ ಗಿಡಗಳು ಕುಸಿದ ಪರಿಣಾಮ, ಬೆಂಗಳೂರು–ಮಂಗಳೂರು ರೈಲ್ವೇ ಮಾರ್ಗದಲ್ಲಿ ಸಂಚಾರ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಮಂಗಳೂರು–ಬೆಂಗಳೂರು ರೈಲ್ವೆ ಮಾರ್ಗದ  ಏಳು ಕಿಲೋಮೀಟರ್ ವ್ಯಾಪ್ತಿಯಲ್ಲಿ 15 ಕಡೆಗಳಲ್ಲಿ ಭೂಕುಸಿತ ಸಂಭವಿಸಿದೆ ಎಂದು ತಿಳಿದು ಬಂದಿದೆ. ಘಟನೆ ಹಿನ್ನೆಲೆ ಈ ಮಾರ್ಗದಲ್ಲಿ ಸಂಚರಿಸುತ್ತಿದ್ದ ಎಲ್ಲಾ ಪ್ರಯಾಣಿಕ ಹಾಗೂ ಸರಕು ರೈಲುಗಳ ಸಂಚಾರವನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ. ಸ್ಥಳಕ್ಕೆ ರೈಲ್ವೇ ಇಲಾಖೆಯ ಸಿಬ್ಬಂದಿ ದೌಡಾಯಿಸಿ, ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಕಾರ್ಯಾರಂಭ ಮಾಡಿದ್ದಾರೆ.

ವಾರ್ತಾ ಭಾರತಿ 16 Aug 2025 9:49 pm