ದರ್ಶನ್ 'ಡೆವಿಲ್' ಚಿತ್ರಕ್ಕೆ 100 ದಿನ ಪೂರೈಸಿದ ಸಂಭ್ರಮ; ಇವತ್ತಿಗೂ ಎಲ್ಲರದ್ದು ಒಂದೇ ಪ್ರಶ್ನೆ
ಪ್ರಕಾಶ್ ವೀರ್ ನಿರ್ದೇಶನದಲ್ಲಿ ದರ್ಶನ್ ನಟಿಸಿದ್ದ 'ಡೆವಿಲ್' ಸಿನಿಮಾ ಅಭಿಮಾನಿಗಳ ಮನಗೆದ್ದಿತ್ತು. ಇದೀಗ ಸಿನಿಮಾ 100 ದಿನ ಪೂರೈಸಿದೆ. ಸ್ಪೆಷಲ್ ಪೋಸ್ಟರ್ ಮೂಲಕ ಈ ವಿಚಾರವನ್ನು ಚಿತ್ರತಂಡ ಹಂಚಿಕೊಂಡಿದೆ. ಸ್ವತಃ ನಿರ್ದೇಶಕ ಪ್ರಕಾಶ್ ವೀರ್ ಈ ಆಕ್ಷನ್ ಥ್ರಿಲ್ಲರ್ ಚಿತ್ರವನ್ನು ನಿರ್ಮಾಣ ಮಾಡಿದ್ದರು. ಒಂದು ಶೆಡ್ಯೂಲ್ ಚಿತ್ರೀಕರಣದ ಬಳಿಕ ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್ ಸಂಕಷ್ಟಕ್ಕೆ ಸಿಲುಕಿದ್ದರು.
ಮಗಳಾಗಿ ಇಲ್ಲಿಗೆ ಬಂದೆ ಈಗ ಸೊಸೆಯಾಗಿದ್ದೀನಿ.. ರಶ್ಮಿಕಾ ಮಾತಿಗೆ ವಿಜಯ್ ದೇವರಕೊಂಡ ತಾಯಿ ಭಾವುಕ
ಮದುವೆ ಬೆನ್ನಲ್ಲೇ ನಟಿ ರಶ್ಮಿಕಾ ದೇವರಕೊಂಡಗೆ ಅತ್ಯುತ್ತಮ ನಟಿ ತೆಲಂಗಾಣ ರಾಜ್ಯ ಚಲನಚಿತ್ರ ಪ್ರಶಸ್ತಿ ಲಭಿಸಿದೆ. ಕಳೆದ ವರ್ಷ ಬಿಡುಗಡೆ ಆಗಿದ್ದ'ದಿ ಗರ್ಲ್ಫ್ರೆಂಡ್' ಚಿತ್ರದ ನಟನೆಗಾಗಿ ರಶ್ಮಿಕಾ ಪ್ರಶಸ್ತಿ ಸ್ವೀಕರಿಸಿದ್ದಾರೆ. ಇತ್ತೀಚೆಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಕೊಡಗಿನ ಬೆಡಗಿ ಅತ್ತೆ ಜೊತೆ ಭಾಗಿ ಆಗಿದ್ದರು. ವೇದಿಕೆಯಲ್ಲಿ ಸೊಸೆ ಮಾತು ಕೇಳಿ ಅತ್ತೆ ಭಾವೋದ್ವೇಗಕ್ಕೆ ಗುರಿಯಾಗಿದ್ದಾರೆ. ಗದ್ದರ್ ಅವಾರ್ಡ್ಸ್
ಸಲ್ಮಾನ್ ಖಾನ್, ಇಮ್ರಾನ್ ಹಶ್ಮಿ ; 'ಧುರಂಧರ್'ನ ಬಡೇ ಸಾಬ್ ಯಾರು ? ಇಲ್ಲಿದೆ ಪೂರ್ಣ ವಿವರ
ಒಂದು ಚಿತ್ರಕ್ಕೆ ನಿರ್ದೇಶಕ-ನಿರ್ಮಾಪಕ ಮತ್ತು ತಂತ್ರಜ್ಞರನ್ನು ಹೊರತು ಪಡಿಸಿ ಕೇವಲ ನಾಯಕ- ನಾಯಕಿ ಮಾತ್ರ ಮುಖ್ಯ ಅಲ್ಲ. ಆ ಚಿತ್ರದ ಖಳನಾಯಕ ಕೂಡ ಮುಖ್ಯ, ಪೋಷಕ ಕಲಾವಿದರು ಕೂಡ ಮುಖ್ಯ. ಹೀಗಾಗಿ ಈ ವಿಚಾರವನ್ನು ಚೆನ್ನಾಗಿ ಅರಿತ ಹಲವರು ತಮ್ಮ ಚಿತ್ರದ ಸಪೋರ್ಟಿಂಗ್ ಕಾಸ್ಟ್ಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ. ಅಳೆದು ತೂಗಿ ಕಲಾವಿದರನ್ನು ಆಯ್ಕೆ ಮಾಡಿ ಪಾತ್ರಗಳನ್ನು
'ಧುರಂಧರ್- 2' ನೋಡಿ ಕಾಮೆಂಟ್ ಸೆಕ್ಷನ್ ಆಫ್ ಮಾಡಿ 2 ಪುಟ ರಿವ್ಯೂ ಬರೆದ ನಟಿ ರಮ್ಯಾ
ಆದಿತ್ಯಧರ್ ನಿರ್ದೇಶನದ ಸ್ಪೈ ಆಕ್ಷನ್ ಥ್ರಿಲ್ಲರ್ 'ಧುರಂಧರ್- 2' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡ್ತಿದೆ. ಪ್ರೇಕ್ಷಕರಿಂದ ಚಿತ್ರಕ್ಕೆ ಅದ್ಭು ರೆಸ್ಪಾನ್ಸ್ ಸಿಕ್ತಿದೆ. ತಾರೆಯರು ಕೂಡ ಸಿನಿಮಾ ನೋಡಲು ಮುಗಿಬಿದ್ದಿದ್ದಾರೆ. ಒಂದು ವರ್ಗದ ಪ್ರೇಕ್ಷಕರು ಮಾತ್ರ ಸಿನಿಮಾ ನೋಡಿ ಬೇಸರಗೊಂಡಿದ್ದಾರೆ. ಟೀಕಿಸುತ್ತಿದ್ದಾರೆ. ಒಂದೊಂದು ಪ್ರೊಪಗಾಂಡಾ ಸಿನಿಮಾ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಮಾಜಿ ಸಂಸಸದೆ, ನಟಿ ರಮ್ಯಾ ಸದ್ಯ ಸಿನಿಮಾ
Love Mocktail 3 Day 1 Box office: 'ಲವ್ ಮಾಕ್ಟೇಲ್ 3' ರೆಸ್ಪಾನ್ಸ್ ಹೇಗಿದೆ? ಮೊದಲ ದಿನದ ಕಲೆಕ್ಷನ್ ಎಷ್ಟು?
ಭಾರತದ ಮೋಸ್ಟ್ ಎಕ್ಸ್ಪೆಕ್ಟೆಡ್ ಸಿನಿಮಾ 'ಧುರಂಧರ್ 2' ಎದುರು ಕನ್ನಡದ ಸಿನಿಮಾ 'ಲವ್ ಮಾಕ್ಟೇಲ್ 3' ರಿಲೀಸ್ ಆಗಿತ್ತು. 'ಲವ್ ಮಾಕ್ಟೇಲ್' ಸೀಕ್ವೆಲ್ನ ಕೊನೆಯ ಚಾಪ್ಟರ್ ಆಗಿರುವ ಈ ಸಿನಿಮಾ ಮೇಲೆ ಸಹಜವಾಗಿಯೇ ನಿರೀಕ್ಷೆಗಳು ಇತ್ತು. ಏಪ್ರಿಲ್ 10ರಂದು ರಿಲೀಸ್ ಆಗಬೇಕಿದ್ದ ಸಿನಿಮಾ 'ಟಾಕ್ಸಿಕ್' ಪೋಸ್ಟ್ಪೋನ್ ಆಗುತ್ತಿದ್ದಂತೆ ಮಾರ್ಚ್ 19ಕ್ಕೆ ಶಿಫ್ಟ್ ಆಗಿತ್ತು. ಹೀಗಾಗಿ ದೇಶದೆಲ್ಲೆಡೆ ಸದ್ದು
Dhurandhar 2 Box Office Day 1: 'ಕೆಜಿಎಫ್ 2', RRR, 'ಬಾಹುಬಲಿ 2' ದಾಖಲೆಗೆ ಕೊಳ್ಳಿ ಇಟ್ಟ 'ಧುರಂಧರ್ 2'
ಈ ವರ್ಷ ಮೋಸ್ಟ್ ಎಕ್ಸ್ಪೆಕ್ಟೆಡ್ ಸಿನಿಮಾಗಳಲ್ಲಿ ಒಂದಾಗಿರೋ 'ಧುರಂಧರ್ 2' (Dhurandhar: The Revenge) ವಿಶ್ವದಾದ್ಯಂತ ಅದ್ಧೂರಿಯಾಗಿ ರಿಲೀಸ್ ಆಗಿದೆ. ಮಾರ್ಚ್ 18 ಎರಡು ಶೋಗಳು ಪ್ರೀಮಿಯರ್ನಿಂದ ಹಿಡಿದು ಮಾರ್ಚ್ 19ರ ಮೊದಲ ದಿನ ಕಲೆಕ್ಷನ್ ಭಾರತದ ಚಿತ್ರರಂಗದ ಇತಿಹಾಸದಲ್ಲಿಯೇ ಹೊಸ ದಾಖಲೆಗಳನ್ನೇ ಬರೆದಿದೆ. ನಿರೀಕ್ಷೆ ಮಾಡಿದಂತೆ ಬಾಕ್ಸಾಫೀಸ್ನಲ್ಲಿ ಈ ಸಿನಿಮಾ ಕೆಲವು ಸಿನಿಮಾ ರೆಕಾರ್ಡ್ಗಳನ್ನು ಬ್ರೇಕ್
ಹಸೆಮಣೆ ಏರಲು ಸಜ್ಜಾದ 'ಶೇಕ್ ಇಟ್ ಪುಷ್ಪವತಿ'ಯ ನಿಮಿಕಾ ರತ್ನಾಕರ್; ವರ ಯಾರು?
ಮಾಡೆಲ್ ಆಗಿ ಮಿಂಚುತ್ತಲೇ ಕನ್ನಡ ಚಿತ್ರರಂಗದಲ್ಲಿ ನಾಯಕಿಯಾಗಿಯೂ ನೆಲೆ ಕಂಡುಕೊಂಡಿರುವವರು ನಿಮಿಕಾ ರತ್ನಾಕರ್. ನಟಿಸಿರೋ ಒಂದಷ್ಟು ಸಿನಿಮಾಗಳು ಬಿಡುಗಡೆಯ ಹಂತದಲ್ಲಿರುವಾಗಲೇ ನಿಮಿಕಾ ಶುಭ ಸುದ್ದಿಯೊಂದನ್ನು ಕೊಟ್ಟಿದ್ದಾರೆ. ನಿಮಿಕಾ ರತ್ನಾಕರ್ ಇದೇ ಏಪ್ರಿಲ್ ೬ರಂದು ವೈವಾಹಿಕ ಜೀವನಕ್ಕೆ ಅಡಿಯಿರಿಸಲಿದ್ದಾರೆ. ಮುಂಬೈ ಮೂಲದ ಉದ್ಯಮಿಯನ್ನು ನಿಮಿಕಾ ವರಿಸಲಿದ್ದಾರೆ. ವಿವಾಹ ಮಹೋತ್ಸವ ನೆರವೇರಲಿರುವ ಸ್ಥಳದ ವಿವರ ಶಿಘ್ರದಲ್ಲಿಯೇ ಜಾಹೀರಾಗಲಿದೆ. ಮಾಡೆಲಿಂಗ್ ಕ್ರೇತ್ರದಲ್ಲಿ
''ಅಮೃತಧಾರೆ'' ಧಾರಾವಾಹಿಯಲ್ಲಿ ಜೈದೇವ್ ಪ್ಲಾನ್ ಮತ್ತೊಮ್ಮೆ ಫ್ಲಾಪ್ ಆಗಿದೆ. ಮಲ್ಲಿಯನ್ನು ಪರೀಕ್ಷಾ ಕೇಂದ್ರಕ್ಕೆ ತಲುಪಬಾರದು ಎಂಬ ದಿಸೆಯಲ್ಲಿ ಜೈದೇವ್ ಹೆಣೆದ ತಂತ್ರವನ್ನೂ ಗೌತಮ್ ಭೇದಿಸಿದ್ದಾನೆ. ರೌಡಿಗಳ ಕಪಿ ಮುಷ್ಟಿಯಿಂದ ಮಲ್ಲಿಯನ್ನು ಕಾಪಾಡಿ ಎಕ್ಸಾಮ್ ಹಾಲ್ ಗೆ ಕರೆದೊಯ್ದಿದ್ದಾನೆ. ಮಲ್ಲಿ ಎಕ್ಸಾಮ್ ಬರೆದು ಬಂದು ಗೌತಮ್ ಅಪ್ಪಿಕೊಂಡು ಕಣ್ಣೀರಿಟ್ಟಿದ್ದಾಳೆ. ನಾನು ಯಾರಿಗೂ ಕೇಡನ್ನು ಬಯಸಿಲ್ಲ ಆದ್ರೂ ನನಗೆ ಹೀಗೆ
ರಜನಿಕಾಂತ್ ಆಯ್ತು.. ಸೂರ್ಯನ ಕೆರಳಿದ ವಿಜಯ್ ಫ್ಯಾನ್ಸ್.. ಸ್ಮೈಲ್ ಕೊಟ್ಟು ಬಾಯಿ ಮುಚ್ಚಿಸಿದ ಜ್ಯೋತಿಕಾ
ದಳಪತಿ ವಿಜಯ್ ಬೆಂಕಿ ಮೇಲೆ ಹೆಜ್ಜೆ ಇಡುತ್ತಿದ್ದಾರೆ. ಸಿನಿಮಾದಲ್ಲಿ ನಟಿಸುತ್ತಿದ್ದಾಗ ವಿವಾದಗಳಿಂದ ಇವರು ದೂರವೇ ಉಳಿದಿದ್ದರು. ಅದ್ಯಾವಾಗ ರಾಜಕೀಯಕ್ಕೆ ಎಂಟ್ರಿ ಕೊಟ್ಟರೋ ಅಲ್ಲಿಂದ ಒಂದೊಂದೇ ವಿವಾದಗಳು ಇವರನ್ನು ಹುಡುಕಿಕೊಂಡು ಬರುತ್ತಿವೆ ಎನಿಸುತ್ತಿದೆ. ಇವರಿಂದ ತಪ್ಪಾಗುತ್ತಿದೆಯೋ.. ಇಲ್ಲ ಇವರ ಆಪ್ತರಿಂದ ತಪ್ಪಾಗುತ್ತಿದೆಯೋ? ಬೇರೆ ಮಾತು. ಆದರೆ, ವಿವಾದ ಮಾತ್ರ ವಿಜಯ್ ಅವರನ್ನು ಹುಡುಕಿಕೊಂಡು ಬರುತ್ತಿದೆ. ವಿಜಯ್ ರಾಜಕೀಯ ಕ್ಷೇತ್ರಕ್ಕೆ
ಮದುವೆ ಬೇಡ, ಲಿವ್-ಇನ್ ಸಂಬಂಧ ಸಾಕು : 34 ವರ್ಷದ ನಟಿಯ ಹೇಳಿಕೆಗೆ ಎಲ್ಲ ತಬ್ಬಿಬ್ಬು
ಮದುವೆ ಒಂದು ಸಾಂಸ್ಥಿಕ ವ್ಯವಸ್ಥೆ ಎನ್ನುವ ಮಾತು ಹಿಂದೆ ಪ್ರಚಲಿತದಲ್ಲಿತ್ತು. ಆದರೆ ಈಗ ಬದಲಾದ ಸಾಮಾಜಿಕ.. ಆರ್ಥಿಕ.. ಶೈಕ್ಷಣಿಕ.. ವಿಚಾರಗಳು ಮದುವೆಯ ಪರಿಕಲ್ಪನೆ ಮತ್ತು ರೂಪುರೇಷೆಯನ್ನು ಬದಲಿಸಿವೆ. ಮದುವೆ ಈಗ ವ್ಯವಸ್ಥೆಯಾಗಿ ಉಳಿದಿಲ್ಲ. ಎರಡು ಮನಸುಗಳ ಬೆಸುಗೆಯಾಗದ ಮದುವೆ ಈಗ ಕೇವಲ ತೋರಿಕೆಯ ಸಂಪ್ರದಾಯವಾಗಿದೆ. ತೋರ್ಪಡಿಕೆಯ ಆಚರಣೆಯಾಗಿದೆ. ಬದಲಾದ ಈ ಕಾಲದಲ್ಲಿ ಹಲವರು ಸ್ವಾವಲಂಬಿಯಾಗುತ್ತಿದ್ದಾರೆ.ಇವತ್ತು.. ಯಾರು.. ಯಾರ
Rishab Shetty: \ಅಧ್ಯಾಯ ಎರಡು ಇಲ್ಲಿಂದ ಶುರು\; ರಿಷಬ್ ಶೆಟ್ಟಿ ಬ್ಯಾನರ್ನಲ್ಲೇ ಸಿನಿಮಾ..ಚಾಪ್ಟರ್ 2 ಯಾವುದು?
ರಿಷಬ್ ಶೆಟ್ಟಿ ಯುಗಾದಿ ಹಬ್ಬವನ್ನು ಪತ್ನಿಯೊಂದಿಗೆ ಆಚರಿಸಿದ ಪೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ರಾರಾಜಿಸಿದ್ದವಷ್ಟೇ. ಓ.. ಶೆಟ್ರು ಮನೆಯಲ್ಲಿ ಯುಗಾದಿ ಹಬ್ಬ ಭಲೇ ಜೋರು ಅಂತ ಅಭಿಮಾನಿಗಳು ಸಂಭ್ರಮಿಸಿದ್ದರು. ಈ ಪೋಟೋಗಳ ಪೋಸ್ಟ್ ಆದ ಕೆಲವೇ ಕ್ಷಣಗಳಲ್ಲಿ ರಿಷಬ್ ಶೆಟ್ಟಿ ಮತ್ತೊಂದು ಪೋಸ್ಟ್ ಮಾಡಿದ್ದರು. ಇದನ್ನು ನೋಡುತ್ತಿದ್ದಂತೆ ಅವರ ಫ್ಯಾನ್ಸ್ಗೆ ಗೊಂದಲಕ್ಕೆ ಬಿದ್ದಿದ್ದಾರೆ. ರಿಷಬ್ ಶೆಟ್ಟಿ ಯುಗಾದಿ ಹಬ್ಬದ
ಪ್ರೇಮ್ ಮಾತು ಕೇಳಿ 'ಕೆಡಿ'ಗಾಗಿ ಸೆರಗು ಸರಿಸಿದ ತಪ್ಪಿಗೆ ನೋರಾ ಫತೇಹಿ ವಿರುದ್ಧ ಫತ್ವಾ
ಸೃಜನಾತ್ಮಕ ಸ್ವಾತಂತ್ಯ್ರ ಮತ್ತು ಧಾರ್ಮಿಕ ಭಾವನೆಗಳ ನಡುವಿನ ಸಂಘರ್ಷ ಇಂದು ನಿನ್ನೆಯದಲ್ಲ. ಹಲವಾರು ವರ್ಷಗಳಿಂದ ನಡೆದುಕೊಂಡು ಬರುತ್ತಲೇ ಇದೆ. ಇದಕ್ಕೆ ಕಾರಣಗಳು ಬೇರೆ ಬೇರೆಯಾದರೂ ಸಾಂಪ್ರದಾಯಿಕ ಮೌಲ್ಯಗಳಿಗೆ ಧಕ್ಕೆಯಾದಾಗ ಈ ವಿವಾದ ಕೇವಲ ಸಾಮಾಜಿಕ ಜಾಲತಾಣಕ್ಕೆ ಮಾತ್ರ ಸೀಮಿತವಾಗಲ್ಲ. ಬದಲಿಗೆ ದೇಶವ್ಯಾಪಿ ಆಕ್ರೋಶದ ಕಿಚ್ಚು ಧಗಧಗಿಸುತ್ತೆ. ಸದ್ಯ ಇಂತಹದ್ದೇ ಒಂದು ಕಿಚ್ಚು ಹೊತ್ತಿಸಿದ ಅಪಕೀರ್ತಿಗೆ ಪ್ರೇಮ್ ಪಾತ್ರರಾಗಿದ್ದಾರೆ.
Love Mocktail 3 Review: 'ಲವ್ ಮಾಕ್ಟೇಲ್ 3' ನಗಿಸುತ್ತಾ ಸಾಗುವ ತಂದೆ-ಮಗಳ ಭಾವನಾತ್ಮಕ ಜರ್ನಿ
ಡಾರ್ಲಿಂಗ್ ಕೃಷ್ಣ ನಟಿಸಿ, ನಿರ್ದೇಶಿಸಿರುವ ಸಿನಿಮಾ 'ಲವ್ ಮಾಕ್ಟೇಲ್ 3' ಇಂದು (ಮಾರ್ಚ್ 19) ಬಿಡುಗಡೆಯಾಗಿದೆ. 'ಲವ್ ಮಾಕ್ಟೇಲ್' ಹಾಗೂ 'ಲವ್ ಮಾಕ್ಟೇಲ್ 2' ಸೀಕ್ವೆಲ್ ಇದು. 'ಲವ್ ಮಾಕ್ಟೇಲ್' ಸಿನಿಮಾ ಅಭಿಮಾನಿಗಳಿಗೆ ಇಂದು ಹಬ್ಬ ಅಂತಲೇ ಹೇಳಬಹುದು. ಇದು ಕೊನೆಯ ಸರಣಿ ಆಗಿರುವುದರಿಂದ ಸಿನಿಮಾ ಪ್ರೇಮಿಗಳಲ್ಲಿ ನಿರೀಕ್ಷೆ ದುಪ್ಪಟ್ಟು ಇತ್ತು. ಕೊನೆಗೂ ಯುಗಾದಿ ಹಬ್ಬದ
10 ವರ್ಷದ ಪ್ರೀತಿ ಅಂತ್ಯ? ಮದುವೆಗೂ ಮುನ್ನ ದೂರ ಆದ 'ಬಿಗ್ ಬಾಸ್' ಜೋಡಿ?
ಪ್ರೀತಿ ಎಂಬ ಪದ ಸುಂದರ ಇರಬಹುದು. ಆದರೆ, ಪ್ರೀತಿಯ ಕೆಲವೊಮ್ಮೆ ಕಾಡುತ್ತೆ. ಪ್ರೀತಿಯಲ್ಲಿ ನೋವು ಸಹಜವಾದರೂ ಅದನ್ನು ಸಹಿಸಿಕೊಳ್ಳುವುದಕ್ಕೆ ಸಾಧ್ಯವಾಗುವುದೇ ಇಲ್ಲ. ಅದರಿಂದಾಗುವ ನೋವು ಶಾಶ್ವತವಾಗಿಲ್ಲದಿದ್ದರೂ ಆ ಕ್ಷಣಕ್ಕೆ ಮಾತ್ರ ಅದು ನುಂಗಲಾರದ ತುತ್ತು. ಎಲ್ಲಾ ಉತ್ಸಾಹ, ಆಸಕ್ತಿ, ಖುಷಿಯ ಕ್ಷಣಗಳನ್ನು ಕಸಿದುಕೊಳ್ಳೋ ಆ ಬ್ರೇಕ್ ಅಪ್ನ ನೋವು ಸಹಿಸಿಕೊಳ್ಳೋದಕ್ಕೆ ಸಾಧ್ಯ ಆಗದೇ ಇರುವುದಕ್ಕೆ ಕಾರಣಗಳೇನು ಎಂಬುದು
ಉದ್ಯಮಿ ಜೊತೆ ಮದುವೆ, ವಯಸ್ಸಿನ ಕುರಿತು ಚರ್ಚೆ ; ಅನುಷ್ಕಾ ಶೆಟ್ಟಿ ಖಂಡ ತುಂಡ ಉತ್ತರ
ನಿಜಾ ... ಸಿನಿಮಾ ಕಲಾವಿದರೆಂದ ಮೇಲೆ ಅವರ ಸುತ್ತ ಬಣ್ಣ ಬಣ್ಣದ ಸುದ್ದಿಗಳು ರೆಕ್ಕೆ ಪುಕ್ಕಗಳ ಸಮೇತ ಸುಳಿದಾಡುವುದು ಸಹಜ. ಹಾಗಂತ ಅದರ ಬಗ್ಗೆ ಮಾತಾಡುತ್ತಾ ಕೂತರೆ ಕೆಲಸದ ಕಡೆ ಗಮನ ಕೊಡಲು ಸಾಧ್ಯವೇ ಆಗುವುದಿಲ್ಲ. ಇದನ್ನ ಮನಗಂಡೇ ತಮ್ಮ ಸುತ್ತ-ಮುತ್ತ ತಮ್ಮ ಬಗ್ಗೆ ಹಲವಾರು ಸುದ್ದಿ ಕೇಳಿ ಬಂದರೂ, ಕೆಲವರು ಆ ಎಲ್ಲ ವಿಚಾರಗಳಿಗೆ ಪ್ರತಿಕ್ರಿಯೆಯನ್ನು
ಸಿನಿಮಾ ಕೇವಲ ಮನರಂಜನೆಯ ಮಾಧ್ಯಮವಲ್ಲ. ಸಮಾಜದ ಪ್ರತಿಬಿಂದ ಕೂಡ ಹೌದು. ಇಂತಹ ಚಿತ್ರರಂಗದಲ್ಲಿ ಕೆಲವು ನಟರು ತಮ್ಮ ಪಾತ್ರಕ್ಕೆ ತನು ಮನ ಅರ್ಪಿಸುತ್ತಾರೆ. ಪಾತ್ರದ ಪರಕಾಯ ಪ್ರವೇಶ ಮಾಡುತ್ತಾರೆ. ತಮ್ಮ ಅಭಿನಯದಿಂದ ಪ್ರೇಕ್ಷಕರ ಮನಸಿನ ಮೇಲೆ ಗಾಢವಾದ ಪ್ರಭಾವವನ್ನೂ ಖೂಡ ಬೀರುತ್ತಾರೆ. ಆದರೆ, ಹೀಗೆ ಪ್ರಭಾವ ಬೀರುವ ಪಾತ್ರ ಒಳ್ಳೆತನದಿಂದ ಕೂಡಿದ್ದರೆ, ಆ ಪಾತ್ರಧಾರಿಯ ಕುರಿತು ಒಳ್ಳೆಯ
ಯುಗಾದಿ ಹಬ್ಬಕ್ಕೆ ಸಿನಿಮಾ ದೊಡ್ಡ ದೊಡ್ಡ ಸಿನಿಮಾಗಳನ್ನು ರಿಲೀಸ್ ಮಾಡಿದ್ದಾರೆ. ಕನ್ನಡದಲ್ಲಿ 'ಲವ್ ಮಾಕ್ಟೇಲ್ 3' ರಿಲೀಸ್ ಆಗಿದ್ದರೆ, ಅತ್ತ ರಣ್ವೀರ್ ಸಿಂಗ್ ನಟನೆಯ 'ಧುರಂಧರ್ 2' ಸಿನಿಮಾ ರಿಲೀಸ್ ಆಗಿದ್ದರೆ, ಇನ್ನೊಂದು ಕಡೆ ಪವರ್ಸ್ಟಾರ್ ಪವನ್ ಕಲ್ಯಾಣ್ ನಟಿಸಿರುವ 'ಉಸ್ತಾದ್ ಭಗತ್ ಸಿಂಗ್' ಸಿನಿಮಾ ರಿಲೀಸ್ ಆಗಿದೆ. ಈ ಎರಡೂ ಸಿನಿಮಾಗಳು ಈ ವಾರದ ಟಾಪ್
Ustaad Bhagat Singh Review: ಹಳಸಿದ ಕಥೆಗೆ ಅದೇ ಮಸಾಲೆ.. ಹೊಸ ಒಗ್ಗರಣೆ
ಆಂಧ್ರ ಡಿಸಿಎಂ ಪಟ್ಟಕ್ಕೇರಿದ ಪವನ್ ಕಲ್ಯಾಣ್ ಸಿನಿಮಾಗಳಿಂದ ಅಂತರ ಹಾಯ್ದುಕೊಂಡಿದ್ದಾರೆ. ಹೊಸದಾಗಿ ಯಾವುದೇ ಸಿನಿಮಾ ಒಪ್ಪಿಕೊಳ್ಳುತ್ತಿಲ್ಲ. ಅಭಿಮಾನಿಗಳನ್ನು ತೃಪ್ತಿಪಡಿಸಲು ಹಿಂದೆ ಶುರು ಮಾಡಿ ಅರ್ಧಕ್ಕೆ ನಿಲ್ಲಿಸಿದ್ದ ಸಿನಿಮಾಗಳನ್ನು ಒಂದೊಂದಾಗಿ ಬಿಡುಗಡೆ ಮಾಡುತ್ತಿದ್ದಾರೆ. ಅದಕ್ಕೆ ಕೊನೆ ಸೇರ್ಪಣೆ 'ಉಸ್ತಾದ್ ಭಗತ್ ಸಿಂಗ್'. 'ಗಬ್ಬರ್ ಸಿಂಗ್' ಸಿನಿಮಾ ನಿರ್ದೇಶಿಸಿ ಗೆದ್ದಿ ಹರೀಶ್ ಶಂಕರ್ ಮತ್ತೊಮ್ಮೆ ಪವನ್ ಕಲ್ಯಾಣ್ ಜೊತೆ ಸಿನಿಮಾ
Love Mocktail 3 X Review ; ನಿಧಿ ನೆನಪಲ್ಲಿ ಆದಿಯ ಪಯಣ - ಇಷ್ಟವಾಗುತ್ತಾ ತಂದೆ-ಮಗಳ ಕಥನ ? ಪ್ರೇಕ್ಷಕರ ಅಭಿಪ್ರಾಯ
ಕಿರುತೆರೆಯಿಂದ ಬೆಳ್ಳಿತೆರೆಗೆ ಹಲವಾರು ಜನ ಬಂದಿದ್ದಾರೆ. ಆ ಪೈಕಿ ಡಾರ್ಲಿಂಗ್ ಕೃಷ್ಣ ಕೂಡ ಒಬ್ಬರು. ಹಲವಾರು ವರ್ಷಗಳಿಂದ ಚಿತ್ರರಂಗದಲ್ಲಿದ್ದು, ನಾಯಕನಾಗಿ ನೆಲೆಯೂರುವ ಪ್ರಯತ್ನ ಮಾಡಿದ ಕೃಷ್ಣಗೆ ಗೆಲುವು ಆರಂಭದಲ್ಲಿ ಸಿಗಲಿಲ್ಲ. ಹಾಗಂಥ ಕೃಷ್ಣ ಸೋಲನ್ನೂ ಕೂಡ ಒಪ್ಪಿಕೊಳ್ಳಲಿಲ್ಲ. ನಿರಂತರವಾಗಿ ಪ್ರಯತ್ನ ಮಾಡುತ್ತಲೇ ಸಹಾಯಕ ನಿರ್ದೇಶಕನಾಗಿಯೂ ಕೂಡ ದುಡಿದ ಡಾರ್ಲಿಂಗ್ ಕೃಷ್ಣ 2020ರಲ್ಲಿ ದಿಗ್ಗನೆ ಎದ್ದು ನಿಂತರು.ನಿರ್ದೇಶಕನಾಗಿ ಬಡ್ತಿ
Dhurandhar 2 Box office: ಕರ್ನಾಟಕದಲ್ಲಿ 'ಧುರಂಧರ್ 2' ಕ್ರೇಜ್ ಹೇಗಿದೆ? ಪೇಯ್ಡ್ ಪ್ರಿವ್ಯೂ ಕಲೆಕ್ಷನ್ ಎಷ್ಟು?
ನಿನ್ನೆ (ಮಾರ್ಚ್ 18) ರಣ್ವೀರ್ ಸಿಂಗ್ ನಟನೆಯ 'ಧುರಂಧರ್ 2' ಸಿನಿಮಾದ ಪೇಯ್ಡ್ ಪ್ರೀಮಿಯರ್ ನಡೆದಿದೆ. ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಈ ಸಿನಿಮಾದ ಕಲೆಕ್ಷನ್ ಒಂದು ದಾಖಲೆ ಬರೆದಿದೆ. ಪೇಯ್ಡ್ ಪ್ರೀಮಿಯರ್ಗೆ ಈ ಮಟ್ಟಿಗೆ ರೆಸ್ಪಾನ್ಸ್ ಹಿಂದೆಂದೂ ಸಿಕ್ಕಿರಲಿಲ್ಲ. ನಿನ್ನೆ ನಡೆದ ಎರಡು ಶೋಗಳಿಂದಲೇ ಒಂದು ಸ್ಮಾಲ್ ಬಜೆಟ್ ಬಾಲಿವುಡ್ ಸಿನಿಮಾ ನಿರ್ಮಾಣ ಆಗುವಷ್ಟು ಕಲೆಕ್ಷನ್ ಮಾಡಿದೆ.
Dhurandhar 2 X Review: 'ಧುರಂಧರ್ 2' ನೋಡಿದ ಪ್ರೇಕ್ಷಕರು ಹೇಳಿದ್ದೇನು? ಇಷ್ಟ ಆಯ್ತಾ? ಇಲ್ವಾ?
ಈ ವರ್ಷದ ಭಾರತದ ಮೋಸ್ಟ್ ಎಕ್ಸ್ಪೆಕ್ಟೆಡ್ ಸಿನಿಮಾ 'ಧುರಂಧರ್ 2' ರಿಲೀಸ್ ಆಗಿದೆ. ನಿನ್ನೆ (ಮಾರ್ಚ್ 18) ವಿಶ್ವದ ಬಹುತೇಕ ಭಾಗಗಳಲ್ಲಿ ಪೇಯ್ಡ್ ಪ್ರೀಮಿಯರ್ ಆಗಿದೆ. ಇದರಿಂದಲೇ ಸಿನಿಮಾ ದಾಖಲೆ ಕಲೆಕ್ಷನ್ ಮಾಡಿದ್ದು, ಸಿನಿಮಾ ಬಗ್ಗೆ ಕ್ರೇಜ್ ದುಪ್ಪಟ್ಟಾಗಿದೆ. ಈ ಸ್ಪ್ರೈ (SPY) ಸೀಕ್ವೆಲ್ ನೋಡಿ ಪ್ರೇಕ್ಷಕರು ಒಂದೊಂದು ರೀತಿ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. ರಣ್ವೀರ್ ಸಿಂಗ್, ಸಂಜಯ್
ಬಾಡಿಗೆ ಕಟ್ಟದ್ದಕ್ಕೆ ಅಡುಗೆ ಮಾಡುವ ಪಾತ್ರೆಯಲ್ಲಿ ಮಾಲೀಕರು ಮೂತ್ರ ವಿಸರ್ಜನೆ ಮಾಡಿದ್ರು; ಖ್ಯಾತ ನಟನ ನೋವಿನ ಕಥೆ
ನೋವು, ಅವಮಾನ, ಅಪಮಾನ ಎದುರಿಸಿದವರು ಜೀವನದಲ್ಲಿ ಸಾಧಿಸಿ ತೋರಿಸಿರುವ ಸಾಕಷ್ಟು ಉದಾಹರಣೆಗಳಿವೆ. ಚಿತ್ರರಂಗದಲ್ಲಿ ಕೂಡ ಸ್ಟಾರ್ ನಟರು ನಿಜ ಜೀವನದಲ್ಲಿ ಸಾಕಷ್ಟು ಕಷ್ಟಗಳನ್ನು ಎದುರಿಸಿದವರೇ.. ಇವತ್ತು ಸ್ಟಾರ್ಗಳಾಗಿ ಮೆರೆಯುತ್ತಿರಬಹುದು, ಕೋಟಿ ಕೋಟಿ ಆಸ್ತಿ ಸಂಪಾದಿಸಿ ಐಷಾರಾಮಿ ಜೀವನ ಸಾಗಿಸುತ್ತಿರಬಹುದು. ಆದರೆ ಒಂದಾನೊಂದು ಕಾಲದಲ್ಲಿ ತುತ್ತು ಅನ್ನಕ್ಕೂ ಕಷ್ಟಪಟ್ಟವರಿದ್ದಾರೆ. ಬಸ್ ಕಂಡೆಕ್ಟರ್ ಆಗಿದ್ದ ಶಿವಾಜಿ ರಾವ್ ಗಾಯಕ್ವಾಡ್ ಇವತ್ತು
ಅಣ್ಣಾವ್ರ ಬಳಿಕ ಅಂಡರ್ವಾಟರ್ನಲ್ಲಿ ನಟಿ ಶ್ರುತಿ ಶೂಟಿಂಗ್; ಕೊರಗಜ್ಜ ಕ್ಲೈಮ್ಯಾಕ್ಸ್ ಬಲು ರೋಚಕ
ಕಳೆದ ಜನವರಿಯಲ್ಲಿ ಬಿಡುಗಡೆಗಾಗಿ ಸರ್ವ ಸನ್ನದ್ದವಾಗಿದ್ದ ಕೊರಗಜ್ಜ ಚಿತ್ರಕ್ಕೆ ನಿರ್ದೇಶಕ ಸುಧೀರ್ ಅತ್ತಾವರ್ ರವರು ಮತ್ತೆ ಕ್ಲೈಮ್ಯಾಕ್ಸ ನ್ನು ವೈಭವೀಕರಿಸುವ ಸಲುವಾಗಿ ಅಂಡರ್ ವಾಟರ್ ಶೂಟಿಂಗ್ ನಲ್ಲಿ ಕೆಲ ಭಾಗಗಳನ್ನು ಪುನರ್ ಚಿತ್ರೀಕರಿಸಿದ್ದಾರೆ.. ಕೇರಳದ ತಿರುವನಂತಪುರಂ ನಲ್ಲಿ ಖ್ಯಾತ ಮಲಯಾಳಂ ನಟ ಮೋಹನ್ ಲಾಲ್ ರವರ ಒಡೆತನ ದಲ್ಲಿದ್ದ ವಿಸ್ಮಯ ಸ್ಟುಡಿಯೋದಲ್ಲಿ ಅಂಡರ್ ವಾಟರ್ ನ ವಿಶೇಷ
Dhurandhar 2 Review: ಭಾರತದ ಮೋಸ್ಟ್ ಎಕ್ಸ್ಪೆಕ್ಟೆಡೆ ಸಿನಿಮಾ 'ಧುರಂದರ್ 2' ಹೇಗಿದೆ? ಪ್ಲಸ್ ಏನು? ಮೈಸನ್ ಏನು?
ಭಾರತದ ಮೋಸ್ಟ್ ಎಕ್ಸ್ಪೆಕ್ಟೆಡ್ ಸಿನಿಮಾಗಳಲ್ಲಿ ಒಂದಾದ 'ಧುರಂಧರ್ 2' ಇಂದು (ಮಾರ್ಚ್ 18) ವಿಶ್ವದಾದ್ಯಂತ ಪ್ರೀಮಿಯರ್ ಶೋ ಕಂಡಿದೆ. ವಿಶ್ವದ ಮೂಲೆ ಮೂಲೆಯಲ್ಲೂ ಈ ಸಿನಿಮಾದ ಪ್ರೀಮಿಯರ್ಗೆ ಒಳ್ಳೆಯ ಒಪಿನಿಯನ್ ಸಿಕ್ಕಿದೆ. ಶೋಗಳು ಬಹುತೇಕ ಕಡೆ ಹೌಸ್ಫುಲ್ ಆಗಿವೆ. ಭಾಷೆಯ ಭೇದವನ್ನು ಮರೆತು ಸಿನಿಮಾವನ್ನು ನೋಡಿ ಬಂದಿದ್ದಾರೆ. 'ಧುರಂಧರ್' ಬಾಕ್ಸಾಫೀಸ್ನಲ್ಲಿ ಮೋಡಿ ಮಾಡಿದ ಬೆನ್ನಲ್ಲೇ ಪಾರ್ಟ್
ಇನ್ಸ್ಟಾಗ್ರಾಮ್ನಲ್ಲಿ ಹೊಂಬಾಳೆ ಫಿಲ್ಮ್ಸ್, ಕಾಂತಾರ ಅಕೌಂಟ್ ಅನ್ಫಾಲೋ ಮಾಡಿದ್ರಾ ರಿಷಬ್ ಶೆಟ್ಟಿ?
ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ 'ಕಾಂತಾರ' ಸರಣಿ ಸಿನಿಮಾಗಳು ಬ್ಲಾಕ್ಬಸ್ಟರ್ ಹಿಟ್ ಆಗಿದ್ದು ಗೊತ್ತೇಯಿದೆ. ರಿಷಬ್ ಶೆಟ್ಟಿ ಜೀವನ ಬದಲಿಸಿದ ಸಿನಿಮಾಗಳಿವು. ಕೋವಿಡ್ ಸಮಯದಲ್ಲಿ ಶುರುವಾಗಿದ್ದ 'ಕಾಂತಾರ' ಸಿನಿಮಾ ಹಿಟ್ ಆಗಿ ಬಳಿಕ ಚಾಪ್ಟರ್-1 ಮಾಡುವಂತಾಯಿತು. ಹೊಂಬಾಳೆ ಸಂಸ್ಥೆ ಇದಕ್ಕೆ ಬೆನ್ನೆಲುಬಾಗಿ ನಿಂತಿತ್ತು. ವಿಜಯ್ ಕಿರಗಂದೂರ್ ನಿರ್ಮಾಣದ 'ಕಾಂತಾರ' ಸರಣಿ ಸಿನಿಮಾಗಳು ಪ್ಯಾನ್ ಇಂಡಿಯಾ ಮಟ್ಟದಲ್ಲಿ ದಾಖಲೆ ಬರೆದವು.
ಹೊಂಬಾಳೆ ಫಿಲ್ಮ್ಸ್ ಮುಂದಿನ ಚಿತ್ರಕ್ಕೆ 'ಕಿಷ್ಕಿಂದಕಾಂಡಂ' ಖ್ಯಾತಿಯ ದಿನ್ಜಿತ್ ಅಯ್ಯಥನ್ ಆಕ್ಷನ್ ಕಟ್?
'KGF' ಹಾಗೂ 'ಕಾಂತಾರ' ಸರಣಿ ಸಿನಿಮಾಗಳ ಬಳಿಕ ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಸೈಲೆಂಟ್ ಆಗಿದೆ. ಒಂದಷ್ಟು ಸಿನಿಮಾಗಳನ್ನು ಘೋಷಣೆ ಮಾಡಿದ್ದರೂ ಯಾವುದು ಕೂಡ ಈಗ ಸೆಟ್ಸ್ ಮೇಲೆ ಇಲ್ಲ. ಸದ್ಯಕ್ಕೆ ಯಾವುದೇ ಸಿನಿಮಾ ಶುರುವಾಗುವ ಲಕ್ಷಣಗಳು ಕಾಣ್ತಿಲ್ಲ. ಒಂದಷ್ಟು ಪ್ರಾಜೆಕ್ಟ್ ಚರ್ಚೆ ನಡೀತಿದೆ. ಅಂದಹಾಗೆ ಹೊಂಬಾಳೆ ಸಂಸ್ಥೆಯ ಮುಂದಿನ ಚಿತ್ರಕ್ಕೆ ದಿನ್ಜಿತ್ ಅಯ್ಯಥನ್ ಆಕ್ಷನ್ ಕಟ್ ಹೇಳುತ್ತಾರೆ
ಶ್ರದ್ಧಾ ಕಪೂರ್-ರಾಹುಲ್ ಮೋದಿ ಮದುವೆ ಸುದ್ದಿಗೆ ಬ್ರೇಕ್ ? ಚಿಕ್ಕಮ್ಮ ತೇಜಸ್ವಿನಿ ಕೊಲ್ಹಾಪುರೆ ಹೇಳಿದ್ದೇನು?
ಬಾಲಿವುಡ್ನ ಕ್ಯೂಟ್ ನಟಿ ಶ್ರದ್ಧಾ ಕಪೂರ್ ಸದ್ಯ ತಮ್ಮ ಮದುವೆ ವಿಚಾರವಾಗಿ ಸಖತ್ ಸುದ್ದಿಯಲ್ಲಿದ್ದಾರೆ. ಕಳೆದ ಕೆಲವು ದಿನಗಳಿಂದ ಶ್ರದ್ಧಾ ಹಾಗೂ ರಾಹುಲ್ ಮೋದಿ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂಬ ಗುಸುಗುಸು ಕೇಳಿಬರುತ್ತಿದೆ. ಈ ವದಂತಿಗಳಿಗೆ ಈಗ ಶ್ರದ್ಧಾ ಅವರ ಚಿಕ್ಕಮ್ಮ ತೇಜಸ್ವಿನಿ ಕೊಲ್ಹಾಪುರೆ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಚಿಕ್ಕಮ್ಮ ತೇಜಸ್ವಿನಿ ಅವರ ಹೇಳಿಕೆ ಈಗ ಸೋಶಿಯಲ್
ನನ್ನಿಂದ ಏನಾದ್ರೂ ತಪ್ಪಾಗಿದ್ರೆ, ಕ್ಷಮಿಸಿ; ಆದ್ರೆ ನೋರಾ ಮಾತಾಡಿದ್ದು ಸರಿಯಲ್ಲ; ಜೋಗಿ ಪ್ರೇಮ್
ಧ್ರುವ ಸರ್ಜಾ ಹಾಗೂ ಪ್ರೇಮ್ ಕಾಂಬಿನೇಷನ್ 'ಕೆಡಿ' ವಿಚಿತ್ರ ಕಾರಣಕ್ಕೆ ಸುದ್ದಿ ಆಗ್ತಿದೆ. ಚಿತ್ರದ 'ಸರ್ಸೆ ಸರ್ಸೆ' ಸಾಂಗ್ ವಿವಾದ ಸೃಷ್ಟಿಸಿತ್ತು. ಈ ಬಗ್ಗೆ ಇದೀಗ ಪ್ರೇಮ್ ಪ್ರತಿಕ್ರಿಯಿಸಿ ಕ್ಷಮೆ ಕೇಳಿದ್ದಾರೆ. ನಾನು ಕೆಟ್ಟ ಅರ್ಥದಲ್ಲಿ ಹಾಡು ಬರ್ದಿಲ್ಲ. ಅದನ್ನು ತಪ್ಪಾಗಿ ಅರ್ಥೈಸಲಾಗಿದೆ. ಆದರೂ ನನ್ನಿಂದ ಯಾರ ಮನಸ್ಸಿಗಾದರೂ ನೋವಾಗಿದ್ದರೆ ಕ್ಷಮಿಸಿ ಎಂದು ಪ್ರೇಮ್ ಕೇಳಿಕೊಂಡಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ
Ganesh-Brundavihaari:'ಕೃಷ್ಣಂ ಪ್ರಣಯ ಸಖಿ' ಕಾಂಬೋದ ಹೊಸ ಸಿನಿಮಾ ಟೈಟಲ್ 'ಬೃಂದಾವಿಹಾರಿ'; ಹೈಲೈಟ್ ಏನು?
ಗೋಲ್ಡನ್ಸ್ಟಾರ್ ಗಣೇಶ್ ಹಾಗೂ ನಿರ್ದೇಶಕ ಶ್ರೀನಿವಾಸ್ ರಾಜು ಕಾಂಬಿನೇಷನ್ ಸಿನಿಮಾ 'ಕೃಷ್ಣಂ ಪ್ರಣಯ ಸಖಿ' ಸಕ್ಸಸ್ ಕಂಡಿತ್ತು. ಸಿನಿಮಾದ ಹಾಡುಗಳು ಸಂಗೀತ ಪ್ರಿಯರ ಕಿವಿಗಳಿಗೆ ಇಂಪು ನೀಡಿದ್ದವು. ಜನರು ಥಿಯೇಟರ್ಗೆ ಬರುತ್ತಿಲ್ಲ ಎಂದು ಚಿಂತೆ ಪಡುವ ಸಮಯ. ಆ ವೇಳೆ ಈ ಸಿನಿಮಾ ಪ್ರೇಕ್ಷಕರನ್ನು ಎಳೆದು ತಂದಿತ್ತು. ಸಿನಿಮಾ ಬಾಕ್ಸಾಫೀಸ್ನಲ್ಲಿಯೂ ಸೂಪರ್ ಹಿಟ್ ಆಗಿತ್ತು. 'ಕೃಷ್ಣಂ ಪ್ರಣಯ
'KVN ಪ್ರೊಡಕ್ಷನ್ಸ್' ಹೆಸರಿನಲ್ಲೇ ಸಮಸ್ಯೆ ಇದೆ.. ಅದಕ್ಕೆ ಇಷ್ಟೆಲ್ಲಾ ಹಿನ್ನಡೆ; ಖ್ಯಾತ ಜ್ಯೋತಿಷಿ ವಿಶ್ಲೇಷಣೆ
ಅದ್ಯಾಕೋ ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ಟೈಮೇ ಸರಿಯಿಲ್ಲ ಕಣ್ರೀ. ಈ ಸಂಸ್ಥೆ ನಿರ್ಮಾಣದ ಸಿನಿಮಾಗಳಿಗೆ ಒಂದಿಲ್ಲೊಂದು ಸಮಸ್ಯೆ ಎದುರಾಗುತ್ತಿದೆ. ಸಂಕ್ರಾಂತಿಗೆ ಬರಬೇಕಿದ್ದ 'ಜನ ನಾಯಗನ್' ಸಿನಿಮಾ ಯುಗಾದಿ ಬಂದ್ರು ಬಿಡುಗಡೆ ಆಗುವ ಸುಳಿವು ಸಿಕ್ತಿಲ್ಲ. 'ಟಾಕ್ಸಿಕ್' ಸಿನಿಮಾ ರಿಲೀಸ್ ಡೇಟ್ ಮತ್ತೆ ಮುಂದಕ್ಕೆ ಹೋಗಿದೆ. ಈಗ 'ಕೆಡಿ' ಚಿತ್ರದ ಸಾಂಗ್ ವಿವಾದಕ್ಕೆ ಕಾರಣವಾಗಿದೆ. ಜೋಗಿ ಪ್ರೇಮ್ ಹೇಳುವಂತೆ
LPG ಸಂಕಷ್ಟಕ್ಕೆ ಅಕ್ಷಯ್ ಕುಮಾರ್ ಮನೆಯಲ್ಲೂ ಆತಂಕ? ಪತ್ನಿ ಟ್ವಿಂಕಲ್ ಖನ್ನಾ ಹೊಸ ಪ್ಲ್ಯಾನ್
ದೇಶಾದ್ಯಂತ ಈಗ ಎಲ್ಪಿಜಿ ಸಿಲಿಂಡರ್ ಕೊರತೆ ದೊಡ್ಡ ಸುದ್ದಿಯಾಗುತ್ತಿದೆ. ಈಗಾಗಲೇ ಗ್ಯಾಸ್ ಸಿಲಿಂಡರ್ ಅಭಾವದಿಂದ ಕೆಲವೆಡೆ ಹೋಟೆಲ್ ಮುಚ್ಚಲಾಗಿದೆ. ಪಿಜಿಗಳಲ್ಲಿ ಆಹಾರಕ್ಕೆ ತತ್ವಾರ ಶುರುವಾಗಿದೆ. ಸಾಮಾನ್ಯ ಜನರಷ್ಟೇ ಅಲ್ಲದೆ, ದೊಡ್ಡ ದೊಡ್ಡ ಸೆಲೆಬ್ರಿಟಿಗಳ ಮನೆಗೂ ಈ ಬಿಸಿ ತಟ್ಟಿದೆ. ಬಾಲಿವುಡ್ನ ಖಿಲಾಡಿ ಅಕ್ಷಯ್ ಕುಮಾರ್ ಮನೆಯಲ್ಲೂ ಈಗ ಇದೇ ಆತಂಕ ಶುರುವಾಗಿದೆ. ಗ್ಯಾಸ್ ಸಿಲಿಂಡರ್ ಸಿಗುವುದು ಕಷ್ಟವಾಗಬಹುದು
'ಕೆಟ್ಟೋದೆ ಕೆಟ್ಟೋದೆ' ಅಂತ ದರ್ಶನ್ ಜೊತೆ ಕುಣಿದಿದ್ದ ರಕ್ಷಿತಾ, ಬಳಿಕ ಏನಾಯ್ತು? ಯಾರು ಕಾಮೆಂಟ್ ಮಾಡ್ಲೇಬಾರ್ದಾ?
ಜೋಗಿ ಪ್ರೇಮ್ ನಿರ್ದೇಶನದ 'ಕೆಡಿ' ಸಿನಿಮಾ ವಿವಾದಕ್ಕೆ ಸಿಲುಕಿದೆ. ಅದಕ್ಕೆ ಕಾರಣ 'ಸರ್ಸೆ ಸರ್ಸೆ' ಸಾಂಗ್ ಸಾಹಿತ್ಯ. ಕನ್ನಡದಲ್ಲಿ ಸ್ವತಃ ಪ್ರೇಮ್ ಹಾಡಿಗೆ ಸಾಹಿತ್ಯ ಬರೆದಿದ್ದಾರೆ. ಅಶ್ಲೀಲ, ಅಸಭ್ಯ ಸಾಹಿತ್ಯದ ಬಗ್ಗೆ ಭಾರೀ ಟೀಕೆ, ಆಕ್ರೋಶ ವ್ಯಕ್ತವಾಗುತ್ತಿದೆ. ಯೂಟ್ಯೂಬ್ನಿಂದ ಹಿಂದಿ ವರ್ಷನ್ ಸಾಂಗ್ ಡಿಲೀಟ್ ಮಾಡಲಾಗಿದೆ. ಹಾಡಿನಲ್ಲಿ ಹೆಜ್ಜೆ ಹಾಕಿರುವ ನಟಿ ನೋರಾ ಫತೇಹಿ ಕೂಡ ಈಗ
KD The Devil Controversy; 'ಕೆಡಿ' ಸಾಂಗ್ ವಿವಾದ; ಜೋಗಿ ಪ್ರೇಮ್ ವಿರುದ್ಧ ತಿರುಗಿಬಿದ್ದ ನೂರಾ ಫತೇಹಿ
ಕನ್ನಡ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ 'ಕೆಡಿ ದಿ ವಿಲನ್' ಬಿಡುಗಡೆಗೆ ಸಜ್ಜಾಗಿದೆ. ಹೀಗಾಗಿ ಚಿತ್ರತಂಡ ಅದ್ಧೂರಿಯಾಗಿಯೇ ಪ್ರಚಾರವನ್ನು ಅಧಿಕೃತವಾಗಿ ಆರಂಭ ಮಾಡಿತ್ತು. ಈಗಾಗಲೇ ಸಿನಿಮಾದ ಕೆಲವು ಹಾಡುಗಳನ್ನು ರಿಲೀಸ್ ಮಾಡಿದ್ದರೂ, ನಾಲ್ಕನೇ ಹಾಡಿನ ಮೂಲಕ ಪ್ರಚಾರ ಶುರುವಾಗಿತ್ತು. ಆದರೆ, ಆರಂಭದಲ್ಲಿಯೇ ಸಿನಿಮಾಗೆ ಹಿನ್ನೆಡೆಯಾಗಿದೆ. ಅದು ಜೋಗಿ ಪ್ರೇಮ್ ಬರೆದ ಸೆರಗು ಸರ್ಸೆ.. ಅನ್ನೋ ಪೋಲಿ ಸಾಂಗ್.
ಚಿತ್ರಗಳು ಸೋತ್ರೂ ಕ್ರೇಜ್ ಕಮ್ಮಿ ಆಗ್ಲಿಲ್ಲ; 'ಉಸ್ತಾದ್ ಭಗತ್ ಸಿಂಗ್' ಚಿತ್ರಕ್ಕೆ ಶ್ರೀಲೀಲಾ ಭಾರೀ ಸಂಭಾವನೆ
ಕನ್ನಡದ ನಟಿ ಶ್ರೀಲೀಲಾ ಸದ್ಯ ಟಾಲಿವುಡ್, ಕಾಲಿವುಡ್ ಹಾಗೂ ಬಾಲಿವುಡ್ ಅಂಗಳದಲ್ಲಿ ಕಮಾಲ್ ಮಾಡುತ್ತಿದ್ದಾರೆ. ಕನ್ನಡದಲ್ಲಿ ಒಂದೆರಡು ಸಿನಿಮಾಗಳಲ್ಲಿ ನಟಿಸಿದ್ದ ಚೆಲುವೆ ಬಳಿಕ ತೆಲುಗು ಸಿನಿಮಾಗಳಲ್ಲಿ ಭರ್ಜರಿ ಅವಕಾಶ ಗಿಟ್ಟಿಸಿಕೊಂಡರು. ಸ್ಟಾರ್ ನಟರ ಜೊತೆ ಸ್ಕ್ರೀನ್ ಶೇರ್ ಮಾಡಿಕೊಂಡು ಗಮನ ಸೆಳೆಯುತ್ತಿದ್ದಾರೆ. ಆದರೆ ಈವರೆಗೆ ಶ್ರೀಲೀಲಾಗೆ ದೊಡ್ಡ ಬ್ರೇಕ್ ಸಿಗಲೇ ಇಲ್ಲ. ಶ್ರೀಲೀಲಾ ಗ್ಲಾಮರ್ ಹಾಗೂ ಡ್ಯಾನ್ಸ್
ಅಣ್ಣಾವ್ರ ಸಿನಿಮಾ ಗೀತೆಗಳಲ್ಲಿ ಇಣುಕಿತ್ತು ಡಬಲ್ ಮೀನಿಂಗ್; 'ಪ್ರೇಮಲೋಕ'ದಲ್ಲಿ ಅಸಭ್ಯ ಸಾಹಿತ್ಯ ಘಾಟು
'ಕೆಡಿ' ಸಿನಿಮಾ ಹಾಡಿನ ವಿವಾದ ಸದ್ಯಕ್ಕೆ ತಣ್ಣಗಾಗುವ ಲಕ್ಷಣಗಳು ಕಾಣ್ತಿಲ್ಲ. ಹೀಗೆ ಸಿನಿಮಾ ಹಾಡುಗಳ ಸಾಹಿತ್ಯ ಟೀಕೆಗೆ ಗುರಿ ಆಗುತ್ತಿರುವುದು ಇದೇ ಮೊದಲಲ್ಲ. ಬೇರೆ ಭಾಷೆಯ ಸಿನಿಮಾ ಹಾಡುಗಳನ್ನು ಬಿಟ್ಟುಬಿಡಿ. ಕನ್ನಡದಲ್ಲೇ ಕೆಲ ಸಿನಿಮಾ ಗೀತೆಗಳಲ್ಲಿ ಹೀಗೆ ಅಸಭ್ಯ, ಅಸಂಬದ್ಧ ಸಾಲುಗಳು, ಪದಗಳು ಈ ಹಿಂದೆ ಕೂಡ ಸೇರಿಕೊಂಡು ಟೀಕೆಗೆ ಗುರಿಯಾಗಿತ್ತು. ದಶಕಗಳ ಹಿಂದೆ ಡಾ. ರಾಜ್ಕುಮಾರ್
ಸೆಲೆಬ್ರೆಟಿಗಳು ಸಂಭಾವನೆ ವಿಚಾರದಲ್ಲಿ ಗೌಪ್ಯತೆಯನ್ನು ಕಾಪಾಡಿಕೊಳ್ಳುತ್ತಾರೆ. ಸಾಕಷ್ಟು ಮಂದಿ ಸಂಭಾವನೆ ವಿಚಾರವನ್ನು ಎಲ್ಲಿಯೂ ಯಾರ ಬಳಿಯೂ ಶೇರ್ ಮಾಡುವುದಿಲ್ಲ, ವ್ಯಾವಹಾರಿಕವಾಗಿ ಇದು ಒಪ್ಪಬೇಕಾದ ವಿಚಾರ ಕೂಡ. ಆದರೆ ಕೆಲವರು ತಮ್ಮ ಸಂಭಾವನೆಯನ್ನು ಬಹಿರಂಗವಾಗಿಯೇ ಹೇಳಿಕೊಳ್ಳುತ್ತಾರೆ. ಇನ್ನೂ ಕೆಲವರು ಸಿಗಬೇಕಾದ ಸಂಭಾವನೆ ಸಿಗುತ್ತಿದೆ ಎಂದು ಹೇಳಿ ಕೈ ತೊಳೆದುಕೊಳ್ಳುತ್ತಾರೆ. ಹೀಗಾಗಿಯೇ ಸಂಭಾವನೆ ವಿಚಾರದಲ್ಲಿ ಕೆಲ ನಟ ಮತ್ತು ನಟಿಯರ
ಹೊಸ ಸಿನಿಮಾ ಅನೌನ್ಸ್ ಮಾಡಿದ 'ಲ್ಯಾಂಡ್ಲಾರ್ಡ್' ನಿರ್ಮಾಪಕ; ಪಿಸಿ ಶೇಖರ್ ನಿರ್ದೇಶಕ..ಹೀರೊ ಯಾರು?
ಹೊಸ ವರ್ಷ ಶುರುವಾಯ್ತು. ಸಿನಿಮಾರಂಗದಲ್ಲಿಯೂ ಹೊಸ ವರುಷಕ್ಕೆ ಹೊಸ ಸಿನಿಮಾಗಳ ಅನೌನ್ಸ್ ಸಂಭ್ರಮ ಕೂಡ ಜೋರಾಗಿದೆ. ಹಬ್ಬದ ಸಂಭ್ರಮದಲ್ಲಿ ಸ್ಯಾಂಡಲ್ವುಡ್ನ ಸಕ್ಸಸ್ ಫುಲ್ ನಿರ್ದೇಶಕ ಪಿಸಿ ಶೇಖರ್ ಹೊಸ ಸಿನಿಮಾ ಅನೌನ್ಸ್ ಮಾಡಿದ್ದಾರೆ. 'ರಾಗಾ', 'ರೊಮಿಯೋ' ಅಂತಹ ಅದ್ಭುತ ಸಿನಿಮಾಗಳನ್ನು ನೀಡಿರುವ ನಿರ್ದೇಶಕ ಪಿಸಿ ಶೇಖರ್ ಇದೀಗ ತಮ್ಮ 12ನೇ ಸಿನಿಮಾ ನಿರ್ದೇಶನ ಮಾಡಲು ತಯಾರಾಗಿದ್ದಾರೆ. ಈ
Bhagyalakshmi: ಬದಲಾಗಿಲ್ಲ ತಾಂಡವ್…ಭಾಗ್ಯಾ ಫೋಟೋ ಸುಟ್ಟು ಬೆಂಕಿ ಹಾಕಿದ ಕಿರಾತಕ; ಭಾಗ್ಯಾಗೆ ಕಂಟಕ?
ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿ 'ಭಾಗ್ಯಲಕ್ಷ್ಮಿ' ಈಗ ಕುತೂಹಲದ ಘಟ್ಟ ತಲುಪಿದೆ. ಇಷ್ಟು ದಿನ ಸೌಮ್ಯವಾಗಿ ಕಾಣುತ್ತಿದ್ದ ತಾಂಡವ್ ಈಗ ಅಸಲಿ ರೂಪ ತೋರಿಸುತ್ತಿದ್ದಾನೆ. ಮನೆಯವರ ಮುಂದೆ ನಾಟಕ ಆಡುತ್ತಿದ್ದವನು ಈಗ ರೌದ್ರಾವತಾರ ತಾಳಿದ್ದಾನೆ. ಭಾಗ್ಯಾಳ ಮೇಲೆ ತಾಂಡವ್ಗೆ ವಿಪರೀತ ಕೋಪ ಬಂದಿದೆ. ಆತ ತನ್ನ ಮನಸ್ಸಿನಲ್ಲಿ ದ್ವೇಷದ ಕಿಚ್ಚು ಹಚ್ಚಿಕೊಂಡಿದ್ದಾನೆ. ಇದನ್ನು ನೋಡಿ ವೀಕ್ಷಕರು
ಮಗನ ಭವಿಷ್ಯಕ್ಕಾಗಿ ಬೇರೆಯವರ ಜೊತೆ ಮಲಗುವುದರಲ್ಲಿ ತಪ್ಪೇನಿದೆ ? ಸಾಯಬೇಕಾ ನಾನು ?
ಬದುಕು ತುಂಬಾನೇ ವಿಚಿತ್ರ. ಸರಿಯಾದ ದಾರಿಯಲ್ಲಿ ನಡೆದುಕೊಂಡು ಹೋಗುವಾಗ ಇಲ್ಲಿ ಕೆಲ ಅನಿರೀಕ್ಷಿತ ತಿರುವುಗಳು ಎದುರಾಗುತ್ತಾವೆ. ಹೀಗೆ ಎದುರಾಗುವ ಈ ತಿರುವುಗಳಿಂದ ಕೆಲ ಒಮ್ಮೆ ಬದುಕು ಅಲ್ಲೋಲ.. ಕಲ್ಲೋಲವಾಗುತ್ತೆ. ಇನ್ನೂ ಕೆಲ ಒಮ್ಮೆ ಕತ್ತಲೆ ತುಂಬಿದ್ದ ಬದುಕಿನಲ್ಲಿ ಬೆಳಕು ಮೂಡುತ್ತೆ. ಇನ್ನು ಬಡವನಿಗೆ ಮಾತ್ರ ಕಷ್ಟ ಇರುವುದೆಂದಲ್ಲ. ಎಂತಹ ಸಿರಿವಂತನಾದರೂ ಕಷ್ಟಗಳನ್ನು ಎದುರಿಸಲೇಬೇಕು. ಆದರೆ, ಕಷ್ಟಗಳನ್ನು ಧೈರ್ಯದಿಂದ
ಬಾಲಿವುಡ್ ಸಿನಿಮಾ 'ಧುರಂಧರ್ 2'ಗೆ ಎಲ್ಲೆಡೆ ಕ್ರೇಜ್ ಅದ್ಭುತವಾಗಿದೆ. ಈ ಸಿನಿಮಾವನ್ನು ಕಣ್ತುಂಬಿಕೊಳ್ಳುವುದಕ್ಕೆ ಪ್ರೇಕ್ಷಕರು ತುದಿಗಾಲಲ್ಲಿ ನಿಂತಿದ್ದಾರೆ. ನಾಳೆ (ಮಾರ್ಚ್ 19) ವಿಶ್ವದಾದ್ಯಂತ ಅದ್ಧೂರಿಯಾಗಿ ತೆರೆ ಕಾಣುವುದಕ್ಕೆ ಸಜ್ಜಾಗಿದೆ. ಆದರೆ, ಅದಕ್ಕೂ ಮುನ್ನ, ಅಂದರೆ ಇಂದು (ಮಾರ್ಚ್ 18) ವಿಶ್ವದ ಹಲವೆಡೆ ಸಾವಿರಾರು ಪ್ರೀಮಿಯರ್ ಶೋಗಳನ್ನು ಆಯೋಜನೆ ಮಾಡಲಾಗಿದೆ. ಈ ಶೋಗಳಿಗೂ ಕ್ರೇಜಿ ರೆಸ್ಪಾನ್ಸ್ ಸಿಕ್ಕಿದೆ. 'ಧುರಂಧರ್
'ಕೆಡಿ' ವಿವಾದದ ಕಿಡಿ; 'ಪುಷ್ಪ 2' \ಫೀಲಿಂಗ್ಸು\.. 'ಕಲ್ನಾಯಕ್' \ಚೋಲಿ ಕೆ ಪೀಛೇ ಕ್ಯಾ ಹೈ\ ಕೊಟ್ಟು ಟಕ್ಕರ್
ಕಳೆದೆರಡು ದಿನಗಳಿಂದ 'ಕೆಡಿ' ಸಿನಿಮಾದ ವಿವಾದ ಭುಗಿಲೆದ್ದಿದೆ. ಸರ್ಸೆ ಸರ್ಸೆ ಸೆರಗು..ಸರ್ಸೆ ಹಾಡು ರಿಲೀಸ್ ಆಗುತ್ತಿದ್ದಂತೆ ಜನರು ತಿರುಗಿಬಿದ್ದಿದ್ದರು. ಅದರಲ್ಲೂ ಹಿಂದಿ ವರ್ಷನ್ಗೆ ಸಾಂಗ್ಗೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಇಡೀ ದೇಶದಲ್ಲಿ ಸಿನಿಪ್ರಿಯರು ವಿಶೇಷವಾಗಿ ಬಾಲಿವುಡ್ ಅಂಗಳದಲ್ಲಿ ವಿಪರೀತಿ ಟೀಕೆಗಳು ವ್ಯಕ್ತವಾಗುತ್ತಿವೆ. ಸೋಶಿಯಲ್ ಮೀಡಿಯಾದಲ್ಲಿ ಈ ಹಾಡಿನ ಸಾಹಿತ್ಯದ ಬಗ್ಗೆ ಕಟುವಾಗಿ ಟೀಕೆ ಮಾಡುತ್ತಿದ್ದಾರೆ. 'ಕೆಡಿ' ಸಾಂಗ್ಗೆ

30 C