SENSEX
NIFTY
GOLD
USD/INR

Weather

30    C
...

Toxic Movie: ಯಶ್ ಥರ ಉಪ್ಪಿ ಮಾಡಿದ್ರೆ ಹೇಗೆ.? ಟ್ರೋಲ್ ಫೋಟೋಸ್ ಸಖತ್ ಮಜಾ ಇವೆ ನೋಡಿ.!

ಟಾಕ್ಸಿಕ್ ಚಿತ್ರದ ಸಾಂಗ್ ಪೋಸ್ಟರ್ ವೈರಲ್ ಆಗಿದೆ. ಇದರಲ್ಲಿ ಯಶ್ ಕಾಣಿಸಿಕೊಂಡ ರೀತಿನೂ ಹೆಚ್ಚು ಗಮನ ಸೆಳೆಯುತ್ತಿದೆ. ಇದನ್ನೆ ಉಪೇಂದ್ರ ಮಾಡಿದರೆ ಹೇಗೆ ಅನ್ನುವ ಕುತೂಹಲವು ಇದೆ. ಅದಕ್ಕೆ ಇಲ್ಲೊಂದಷ್ಟು ಫೋಟೋ ಉತ್ತರ ಕೊಡ್ತಿವೆ ನೋಡಿ.

ಸುದ್ದಿ18 28 Feb 2026 5:20 pm

Prakash Raj: 'ಸ್ಪಿರಿಟ್' ಚಿತ್ರದಿಂದ ಹೊರಬಂದ ಪ್ರಕಾಶ್ ರಾಜ್? ಕಾರಣವೇನು ಗೊತ್ತಾ?

Prakash Raj: ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಹಾಗೂ ಪ್ರಭಾಸ್ ಮತ್ತು ತ್ರಿಪ್ತಿ ದಿಮ್ರಿ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಬಹು ನಿರೀಕ್ಷಿತ ಚಿತ್ರ 'ಸ್ಪಿರಿಟ್' ನಿಂದ ನಟ ಪ್ರಕಾಶ್ ರಾಜ್ ಹಿಂದೆ ಸರಿದಿದ್ದಾರೆ ಎಂದು ವರದಿಯಾಗಿದೆ.

ಸುದ್ದಿ18 28 Feb 2026 5:16 pm

Rashmika-Vijay: ನಗು ನಗುತ್ತಾ ಗಂಡನ ಮನೆಗೆ ಎಂಟ್ರಿ ಕೊಟ್ಟ ರಶ್ಮಿಕಾ! ವಿಡಿಯೋ ವೈರಲ್

Rashmika-Vijay: ರಶ್ಮಿಕಾ ಮಂದಣ್ಣಮತ್ತು ವಿಜಯ್ ದೇವರಕೊಂಡ ಕಳೆದ ಎರಡು ದಿನಗಳ ಹಿಂದೆಯಷ್ಟೇ ಮದುವೆಯಾಗಿದ್ದಾರೆ. ವಿವಾಹವಾದ ಬಳಿಕ ಇದೀಗ ಜೋಡಿ ಹೈದರಾಬಾದ್‌ಗೆ ಮರಳಿದ್ದಾರೆ.

ಸುದ್ದಿ18 28 Feb 2026 4:29 pm

ಹೆಚ್ಚು ಕಡಿಮೆ ಹೀಗೆ ಆಯ್ತಲ್ವಾ ಮದುವೆ? ರಶ್ಮಿಕಾ-ವಿಜಯ್‌ಗೆ 'ರಾಣಾಬಾಲಿ'ನೇ ಪ್ರೇರಣೆಯೇ.. ಈ ವಿಡಿಯೋ ನೋಡಿ

ಟಾಲಿವುಡ್‌ನ ಕ್ಯೂಟ್ ಜೋಡಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದರೂ ಇಬ್ಬರೂ ರಹಸ್ಯವಾಗಿಯೇ ಇಟ್ಟಿದ್ದರು. ಇಬ್ಬರ ಬಗ್ಗೆ ಅದೆಷ್ಟೇ ವದಂತಿಗಳು ಹಬ್ಬಿದರೂ ಡೋಂಟ್ ಕೇರ್ ಅಂತ ಓಡಾಡಿಕೊಂಡಿದ್ದರು. ಒಂದಿಷ್ಟು ವರ್ಷ ಡೇಟಿಂಗ್ ಮಾಡಿದ ಬಳಿಕ ಈ ಜೋಡಿ ಈಗ ವೈವಾಹಿಕ ಜೀವನಕ್ಕೆ ಕಾಲಿಟ್ಟಿದೆ. ಸಿನಿಮಾ ರಂಗದಿಂದ

ಫಿಲ್ಮಿಬೀಟ್ 28 Feb 2026 4:01 pm

ಶ್ರೇಷ್ಠತೆಯ ಸೊಕ್ಕು ; ಮೂತ್ರ ವಿಸರ್ಜನೆ ವಿಡಿಯೋಗೆ ಕಿಚ್ಚ ಸುದೀಪ್ ಹಾಡು ಹಾಕಿದ ಡಾಗ್ ಸತೀಶ್ - ರಜತ್, ವಿನಯ್ ಗೌಡ ಧಗಧಗ

''ಬಿಗ್ ಬಾಸ್‌'' ಮನೆಗೆ ಹೋಗಿ ಬಂದ ಬಹುತೇಕರು ದೇಶ ಗೆದ್ದು ಬಂದವರಂತೆ ಬೀಗುತ್ತಾರೆ. ತಲೆ ನಿಲ್ಲದವರಂತೆ ವರ್ತಿಸುತ್ತಾರೆ. ಜನಪ್ರಿಯತೆ ಸಿಕ್ಕ ತಕ್ಷಣ ಮೈ ಮರೆಯುತ್ತಾರೆ. ಕಾರ್ಯಕ್ರಮದಲ್ಲಿ ಇವರನ್ನು ಕ್ಯಾರೇ ಕೂಡ ಅಂದಿರುವುದಿಲ್ಲ. ಆದರೂ ಕೂಡ ಮನೆಯಿಂದ ಹೊರಗಡೆ ಬಂದ ತಕ್ಷಣ ತಾವೂ ಕೂಡ ಸೆಲೆಬ್ರಿಟಿ ಎಂಬ ಭ್ರಮೆಯಲ್ಲಿ ಓಡಾಡಲು ಶುರು ಮಾಡುತ್ತಾರೆ. ಜನಪ್ರಿಯತೆಯ ಅಮಲಿನಲ್ಲಿ ಮಾಡಬಾರದ ಅನಾಚಾರ

ಫಿಲ್ಮಿಬೀಟ್ 28 Feb 2026 3:54 pm

Vijay-Sangeetha: ವಿಜಯ್-ಸಂಗೀತಾ ಪ್ರೀತಿಸಿ ಮದುವೆಯಾಗಿದ್ದಲ್ವಾ? ಅರೇಂಜ್ಡ್ ಮ್ಯಾರೇಜಾ?

Vijay-Sangeetha: ಸಂಗೀತಾ ಹಾಗೂ ವಿಜಯ್ ಅವರದ್ದು ಲವ್ ಮ್ಯಾರೇಜ್ ಅಲ್ವಾ? ಇದು ಅರೇಂಜ್ಡ್ ಮ್ಯಾರೇಜಾ? ಎಲ್ಲರೂ ಲವ್ ಮ್ಯಾರೇಜ್ ಅಂದುಕೊಂಡಿದ್ದು ಸುಳ್ಳಾ?

ಸುದ್ದಿ18 28 Feb 2026 3:28 pm

Virosh Wedding: ಕೊಹ್ಲಿ ದಾಖಲೆ ಮುರಿದ ರಶ್ಮಿಕಾ! ಮದುವೆ ಫೋಟೋಸ್​ಗೆ ಅತ್ಯಧಿಕ ಲೈಕ್ಸ್

ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಉದಯಪುರದ ರೆಸಾರ್ಟ್‌ನಲ್ಲಿ ವಿವಾಹವಾದರು. ರಶ್ಮಿಕಾ ಅವರ ಇನ್‌ಸ್ಟಾಗ್ರಾಮ್ ಪೋಸ್ಟ್ 24 ಮಿಲಿಯನ್ ಲೈಕ್‌ಗಳೊಂದಿಗೆ ಭಾರತೀಯ ದಾಖಲೆ ಮುರಿದಿದೆ.

ಸುದ್ದಿ18 28 Feb 2026 2:59 pm

Success Story: ಬಾಲ್ಯ ತುಂಬಾ ಕಷ್ಟಗಳು, ಈಗ ಕಿರುತೆರೆ ಸ್ಟಾರ್, ಶಕ್ತಿಮಾನ್ ನಟಿಯ ಹೋರಾಟದ ಜೀವನ ಕಥೆ

ಕಲಾವಿದರ ಬಣ್ಣದ ಬದುಕು ಒಂದು ಕಡೆಯಾದರೆ, ಅದರ ಹಿಂದೆ ನಾನಾ ಹೋರಾಟ, ಕಷ್ಟ, ತಿರಸ್ಕಾರ ಇರುತ್ತದೆ ಅನ್ನೋದಕ್ಕೆ ವೈಷ್ಣವಿ ಮ್ಯಾಕ್‌ಡೊನಾಲ್ಡ್ ಜೀವನವೇ ಸಾಕ್ಷಿ. ತೆರೆಮೇಲೆ ಮಿಂಚಿದ ಇವರು, ಬದುಕಿನಲ್ಲಿ ಅನೇಕ ಕಷ್ಟಗಳನ್ನು ಕಂಡಿದ್ದಾರೆ.

ಸುದ್ದಿ18 28 Feb 2026 2:48 pm

Bollywood News: ಗಂಡನ ಪ್ರೇಮಪತ್ರಕ್ಕೆ ಕಣ್ಣೀರಾದ ದೇಸಿಗರ್ಲ್, 'ಮೈ ಜಾನ್' ಪತ್ರದಲ್ಲಿದ್ದಿದ್ದೇನು?

ಇತ್ತೀಚೆಗೆ ಜೇ ಶೆಟ್ಟಿ ಅವರ ಪ್ರಸಿದ್ಧ ಪಾಡ್‌ಕಾಸ್ಟ್‌ನಲ್ಲಿ ಪ್ರಿಯಾಂಕಾ ಚೋಪ್ರಾ ಭಾಗವಹಿಸಿದ್ದರು. ಅಲ್ಲಿ ಅವರಿಗೆ ನಿಕ್ ಜೋನಾಸ್ ಬರೆದ ಒಂದು ಹೃದಯಸ್ಪರ್ಶಿ ಪ್ರೇಮ ಪತ್ರವನ್ನು ಓದಲಾಯಿತು. ಆ ಪತ್ರದ ಸಾಲುಗಳನ್ನು ಕೇಳುತ್ತಿದ್ದಂತೆ ಪ್ರಿಯಾಂಕಾ ಕಣ್ಣಾಲಿಗಳು ತೇವವಾದವು.

ಸುದ್ದಿ18 28 Feb 2026 2:31 pm

ಷಡ್ಯಂತ್ರ, ಪಿತೂರಿ ; ದರ್ಶನ್ ವಿರುದ್ದ ಸುಳ್ಳು ದಾಖಲೆ - ಬೃಹತ್ ಪ್ರತಿಭಟನೆಗೆ ಕರೆ ನೀಡಿದ ಕನ್ನಡ ಒಕ್ಕೂಟ

ಹೆಚ್ಚೇನು ಇಲ್ಲ. ಮೂರು ವರ್ಷದ ಹಿಂದೆ ಚಿತ್ರರಂಗದಲ್ಲಿ ರಾಜನಂತೆ ಮೆರೆದವರು ದರ್ಶನ್. ಹೋದಲ್ಲಿ.. ಬಂದಲ್ಲಿ.. ಜನ ಸಾಗರ. ಅಭಿಮಾನದ ಜಾತ್ರೆ.. ಆನೆ ನಡೆದಿದ್ದೇ ದಾರಿ ಎಂಬಂತೆ ದರ್ಶನ್ ಇದ್ದರು. ಇಡೀ ಕನ್ನಡ ಚಿತ್ರರಂಗ ಒಂದು ಕಡೆಯಾದರೆ ಮತ್ತೊಂದು ಕಡೆ ತಮ್ಮದೇ ಲೋಕದಲ್ಲಿ ತೇಲುತ್ತಿದ್ದ ದರ್ಶನ್ ಒಂದಾದ ಮೇಲೊಂದು ಚಿತ್ರಗಳನ್ನು ಮಾಡುತ್ತಾ ಬ್ಯುಸಿಯಾಗಿದ್ದರು. ಇದ್ದರೆ ನೆಮ್ಮದಿಯಾಗ್ ಇರಬೇಕು ಎಂದು

ಫಿಲ್ಮಿಬೀಟ್ 28 Feb 2026 2:19 pm

ಕ್ಷೌರಿಕರ ಶೋಕ ವಿನಾಶಕ ಅಶೋಕ!

ಕ್ಷೌರದ ವಿಚಾರದಲ್ಲಿ ನಡೆಯುವ ದೌರ್ಜನ್ಯದಿಂದ ಇಂದಿಗೂ ನಮ್ಮ ಸಮಾಜ ಪೂರ್ಣವಾಗಿ ಮುಕ್ತಿ ಹೊಂದಿಲ್ಲ. ಅಲ್ಲೊಂದು ಇಲ್ಲೊಂದು ಪ್ರಕರಣಗಳು ಸುದ್ದಿಯಾಗುತ್ತಲೇ ಇವೆ. ಅದರಲ್ಲೂ ಕ್ಷೌರವನ್ನು ತುಚ್ಛವಾಗಿ ಕಾಣುವಂಥ ಬೈಗುಳಗಳು ಈಗಲೂ ಚಾಲ್ತಿಯಲ್ಲಿವೆ. ಪರಿಸ್ಥಿತಿ ಈಗಲೇ ಹೀಗಿದ್ದರೆ ೭೦ರ ದಶಕದಲ್ಲಿ ಕ್ಷೌರಿಕರ ಸ್ಥಿತಿ ಹೇಗಿರಬಹುದು? ಅವರ ಮೇಲೆ ನಡೆದಿರಬಹುದಾದ ದೌರ್ಜನ್ಯ ಯಾವ ಮಟ್ಟದ್ದು ಎನ್ನುವುದನ್ನು ಈ ಚಿತ್ರ ತೋರಿಸಿ ಕೊಟ್ಟಿದೆ. ಇದು ಕರ್ನಾಟಕದ ಒಂದು ಹಳ್ಳಿಯಲ್ಲಿ ನಡೆಯುವ ಕಥೆ. ಜಾತಿಭೇದದ ಆಚರಣೆ ದೊಡ್ಡ ಮಟ್ಟದಲ್ಲೇ ಇರುವಂಥ ಕುಗ್ರಾಮ. ಕ್ಷೌರವನ್ನು ಕುಲ ಕಸುಬಾಗಿಸಿಕೊಂಡವರಿಗೆ ಊರ ಹೊರಗೊಂದು ಕೇರಿ ಮಾಡಲಾಗಿರುತ್ತದೆ. ಅಂಚೆಯ ವ್ಯಕ್ತಿ ಕೂಡ ಆ ಕೇರಿಗೆ ಹೋಗಿ ಪತ್ರ ನೀಡುವಂತಿಲ್ಲ. ಕೊಟ್ಟರೆ ಆತನಿಗೂ ಮೇಲ್ವರ್ಗದ ಮಂದಿ ಬಹಿಷ್ಕಾರ ಹಾಕುತ್ತಾರೆ. ಇಂಥ ಊರಿನಲ್ಲಿ ವರ್ಷಗಳಿಂದ ಕೂದಲು ಕ್ಷೌರದ ಒಟ್ಟು ಮಾರುಕಟ್ಟೆಯನ್ನು ಟೆಂಡರ್ ಮೂಲಕ ತಮ್ಮದಾಗಿಸಿಕೊಂಡವನು ಕುಟ್ಟಿ ಬಾಬ್ಜಿ. ವೀರಪ್ಪನ್ ಹಾಗೆ ಮೀಸೆ ಬಿಟ್ಟಿರುವ ಕುಟ್ಟಿ ಬಾಬ್ಜಿ ಕ್ರೌರ್ಯದಲ್ಲಿಯೂ ಆತನಂತೆ ನಿರ್ದಯಿ. ತನ್ನ ವಿರುದ್ಧದ ಸಣ್ಣದೊಂದು ಅಲುಗಾಟಕ್ಕೂ ಬಾಬ್ಜಿಯ ತೀರ್ಪು ಕೊಲೆಯೇ! ತಮಿಳು ಮಿಶ್ರಿತ ಕನ್ನಡ ಮಾತನಾಡುವ ಆತ ಆರು ದಶಕದ ಹಿಂದೆಯೇ ಆ ಹಳ್ಳಿಗೆ ವಲಸೆ ಬಂದು ಬೀಡು ಬಿಟ್ಟಿರುವುದಾಗಿ ಹೇಳುತ್ತಾನೆ. ಆತನ ಕೈಕೆಳಗೆ ಜೀತದಾಳುಗಳಂತೆ ದುಡಿಯುವವರು ಅಲ್ಲಿನ ಕ್ಷೌರಿಕರು. ಅವರಲ್ಲಿ ಗಂಗಾಧರ ಎನ್ನುವಾತನೂ ಒಬ್ಬ. ತನ್ನ ಪುತ್ರನಿಗೆ ವಿದ್ಯಾಭ್ಯಾಸ ಕೊಡಿಸಿ ಹೇಗಾದರೂ ಸರಕಾರಿ ಅಧಿಕಾರಿ ಮಾಡಬೇಕು ಎನ್ನುವುದು ಗಂಗಾಧರನ ಕನಸು. ಆ ಕನಸು ನನಸು ಮಾಡಲು ಮನಸಿಟ್ಟು ಕಲಿಯುವ ಸುಪುತ್ರನೇ ಅಶೋಕ. ಆದರೆ ಕಲಿತು ಪಾಸಾಗಿ ನೌಕರಿಯ ನೇಮಕಾತಿ ಪತ್ರ ಕೈ ಸೇರುವ ಹೊತ್ತಿಗೆ ಅಶೋಕ ಮನಸ್ಸು ಬದಲಾಯಿಸಿರುತ್ತಾನೆ. ಅದಕ್ಕೆ ಕಾರಣವಾಗುವ ಅಂಶಗಳೇನು? ಅಶೋಕನ ಮುಂದಿನ ನಡೆಯೇನು ಎನ್ನುವುದನ್ನು ಪರದೆಯ ಮೇಲೆ ನೋಡಿದರೆ ಚೆನ್ನ. ಎಪ್ಪತ್ತರ ದಶಕದ ವಿದ್ಯಾರ್ಥಿಯಾಗಿ, ಅಶೋಕ ಎನ್ನುವ ಯುವಕನಾಗಿ ನೀನಾಸಂ ಸತೀಶ್ ಕಾಣಿಸಿಕೊಂಡಿದ್ದಾರೆ. ಅದಕ್ಕೆ ಅವರಿಗೆ ನೀಡಿರುವಂಥ ವಸ್ತ್ರ ವಿನ್ಯಾಸ, ಪ್ರಸಾದನ, ಕಲಾ ನಿರ್ದೇಶನ ಎಲ್ಲವೂ ಪೂರಕವಾಗಿ ಕೆಲಸ ಮಾಡಿವೆ. ಅಶೋಕನಾಗಿ ಕಿಚ್ಚು ಮೂಡಿಸಿಕೊಂಡ ಹದಿಹರೆಯದ ಯುವಕನಂತೆ ಸಂಭಾಷಣೆಗಳನ್ನು ಹೇಳಿದ್ದಾರೆ. ಆದರೆ ಹೊಡೆದಾಟಗಳು ಸಾಮಾನ್ಯ ಕಮರ್ಷಿಯಲ್ ಸಿನೆಮಾಗಳಂತೆ ಅತಿಮಾನುಷಿಕವಾಗಿಯೇ ಇವೆ. ಸಮುದಾಯದ ಮೇಲಿನ ದೌರ್ಜನ್ಯ ಆ ಪಾತ್ರವನ್ನು ಕೆರಳಿಸಿರುತ್ತದೆ. ಹಾಗಾಗಿ ಸತೀಶ್ ಅಲ್ಲಲ್ಲಿ ಕಣ್ಣರಳಿಸಿ, ಹೊರಳಿಸಿ ಬೆದರಿಸಿದ್ದಾರೆ. ಅಶೋಕನ ತಂದೆ ಗಂಗಾಧರನ ಪಾತ್ರಕ್ಕೆ ಬಿ.ಸುರೇಶ್ ಜೀವ ನೀಡಿದ್ದಾರೆ. ಮಮತೆಯ ತಂದೆಯಾಗಿ ಭಾವ ನೀಡಿದ್ದಾರೆ. ದೌರ್ಜನ್ಯಕ್ಕೊಳಗಾಗುವ ದೃಶ್ಯಗಳಲ್ಲಿ ದೇಹವನ್ನೇ ನೀಡಿ ಕೌಪೀನದಲ್ಲಿ ಕಾಣಿಸಿದ್ದಾರೆ. ಕುಟ್ಟಿ ಬಾಬ್ಜಿ ಪಾತ್ರದಲ್ಲಿ ಸಂಪತ್ ಮೈತ್ರೇಯ ಅವಿಸ್ಮರಣೀಯ ಅಭಿನಯ ನೀಡಿದ್ದಾರೆ. ತಮ್ಮ ಸಾಧಾರಣ ದೇಹಾಕೃತಿ ಇಟ್ಟುಕೊಂಡೇ ಬೃಹದಾಕಾರದ ಭಯ ಬಿತ್ತುತ್ತಾರೆ. ಆರಂಭದಿಂದ ಕೊನೆಯ ತನಕ ಗೊಗ್ಗರು ಧ್ವನಿಯಲ್ಲೇ ಮಾತನಾಡಿ ಪಾತ್ರದ ಮೇಲಿನ ತಮ್ಮ ಸಮರ್ಪಣಾ ಭಾವ ಪ್ರದರ್ಶಿಸಿದ್ದಾರೆ. ಬಾಬ್ಜಿಯ ಪುತ್ರನಾಗಿ ಯಶ್ ಶೆಟ್ಟಿ ಸಿಕ್ಕ ಅವಕಾಶವನ್ನು ಚೆನ್ನಾಗಿ ಬಳಸಿದ್ದಾರೆ. ಆದರೆ ನೋಟದಲ್ಲೇ ಕ್ರೂರಿಯಂತೆ ಕಂಡರೂ ಇವರ ಕ್ರೌರ್ಯಕ್ಕೆ ಹೆಚ್ಚು ಅವಕಾಶಗಳಿಲ್ಲ. ಅಶೋಕನ ಸ್ನೇಹಿತನಾಗಿ ನಟಿಸಿರುವ ಗೋಪಾಲಕೃಷ್ಣ ದೇಶಪಾಂಡೆ ಕೆಲವೇ ದೃಶ್ಯಗಳಲ್ಲಿ ಬಂದರೂ ಎಂದಿನಂತೆ ಪೂರ್ತಿ ಅಂಕ ಗಳಿಸಿಯೇ ತೆರಳುತ್ತಾರೆ. ನಟ ಪಿ. ರವಿಶಂಕರ್ ವಿಶೇಷ ಪಾತ್ರದಲ್ಲಿ ವಿರಾಜಮಾನರಾಗಿ ವಿಸ್ಮಯ ತರಿಸುತ್ತಾರೆ. ದೃಶ್ಯಗಳಲ್ಲಿ ಲವಲವಿಕೆ ಉಳಿಸಿಕೊಳ್ಳುವ ಲವಿತ್ ಛಾಯಾಗ್ರಹಣ ಮತ್ತು ಪೂರ್ಣಚಂದ್ರ ತೇಜಸ್ವಿ ಸಂಗೀತದ ಸಮ್ಮಿಲನವಾದಾಗ ಸೃಜನಶೀಲತೆ ಸಂಪೂರ್ಣ. ಆದರೆ ಕಥೆಯ ಒಟ್ಟು ಸಂದೇಶದ ಬಗ್ಗೆ ಇದೇ ಮಾತು ಹೇಳಲಾಗದು. ದಮನಿತರ ಪರ ಎನ್ನುವ ರೀತಿಯಲ್ಲಿ ಇತ್ತೀಚೆಗೆ ತೆರೆಕಾಣುತ್ತಿರುವ ಎಲ್ಲ ಚಿತ್ರಗಳಲ್ಲೂ ಈ ಕೊರತೆ ಇದೆ. ಇತಿಹಾಸದ ಕ್ರಾಂತಿಯಲ್ಲಿ ದಮನಿತರ ರಕ್ತ ಚಿಮ್ಮಿದೆ ನಿಜ. ಆದರೆ ಕೊನೆಯಲ್ಲಿ ಕಾನೂನು ಕೈಗೆತ್ತಿಕೊಳ್ಳುವುದೇ ಕ್ರಾಂತಿಯ ಗೆಲುವೇ? ನಡೆದಂಥ ಘಟನೆಗಳೇ ಇದ್ದರೂ ಅವುಗಳಿಂದ ನಮಗೆ ಮಾಹಿತಿ ಮತ್ತು ಸ್ಫೂರ್ತಿಯಾಗಬೇಕಾದ ವಿಚಾರಗಳಷ್ಟೇ ಸಂದೇಶವಾಗಿರಲಿ ಎನ್ನುವುದು ಸದಾಶಯ. ಚಿತ್ರ: ದಿ ರೈಸ್ ಆಫ್ ಅಶೋಕ ನಿರ್ದೇಶಕ: ವಿನೋದ್ ದೋಂಡಾಳೆ ನಿರ್ಮಾಪಕ: ವರ್ಧನ್ ಹರಿ ತಾರಾಗಣ: ನೀನಾಸಂ ಸತೀಶ್, ಸಂಪತ್ ಮೈತ್ರೇಯ ಮೊದಲಾದವರು.

ವಾರ್ತಾ ಭಾರತಿ 28 Feb 2026 1:58 pm

Gilli: ಮಂಡ್ಯದ ಪ್ರಭಾವಿ ದೇಗುಲಕ್ಕೆ ಗಿಲ್ಲಿ ಭೇಟಿ, ಇಲ್ಲಿನ ದೇವರ ವಿಶೇಷತೆ ಏನು ಗೊತ್ತಾ?

ಗಿಲ್ಲಿ ಬಿಗ್ ಬಾಸ್ ವಿಜೇತ, ಶ್ರೀರಂಗಪಟ್ಟಣದ ಆರತಿ ಉಕ್ಕಡದ ಅಲಹ್ಯ ಮಾರಮ್ಮ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಮರದ ಕೊರಡಿನಿಂದ ರೂಪುಗೊಂಡ ದೇವಿಯು ಇಲ್ಲಿ ವಿಶೇಷ.

ಸುದ್ದಿ18 28 Feb 2026 1:42 pm

Vijay-Sangeetha: ಪತ್ನಿಯನ್ನು ಪ್ರತ್ಯೇಕವಾಗಿ ವಾಸಿಸಲು ಬಲವಂತ ಮಾಡಿದ್ರಾ ವಿಜಯ್? ನಟಿ ಜೊತೆ ಫಾರಿನ್ ಟ್ರಿಪ್! ಸಂಗೀತಾ ಹೇಳಿದ್ದೇನು?

ತನ್ನನ್ನು ಬಿಟ್ಟು ಪ್ರತ್ಯೇಕವಾಗಿ ವಾಸಿಸುವಂತೆ ಪತ್ನಿಗೆ ಬಲವಂತ ಮಾಡಿದ್ರಾ ವಿಜಯ್? ನಟಿಯೊಂದಿಗೆ ಫಾರಿನ್ ಟ್ರಿಪ್ ಹೋದ್ರಾ? ಸಂಗೀತಾ ಆರೋಪಗಳೇನು?

ಸುದ್ದಿ18 28 Feb 2026 1:31 pm

Amruthadhaare to Bhargavi LLB: ಬೇರೆ ಬೇರೆ ಚಾನೆಲ್ ಆದ್ರೂ ಒಂದಾದ ಮನಸ್ಸುಗಳು..ಸದ್ದಿಲ್ಲದೆ ಜೆಡಿ-ರಾಧಾ ನಿಶ್ಚಿತಾರ್ಥ

ಕಿರುತೆರೆಯ ಜನಪ್ರಿಯ ಜೋಡಿಗಳ ಪಟ್ಟಿಗೆ ಈಗ ಮತ್ತೊಂದು ಜೋಡಿ ಸೇರ್ಪಡೆಯಾಗಿದೆ. ಹೌದು, ಅಮೃತಧಾರೆ ಸೀರಿಯಲ್ ಖ್ಯಾತಿಯ ರಾಣವ್ ಗೌಡ ಹಾಗೂ ಭಾರ್ಗವಿ ಎಲ್ಎಲ್ಬಿ ನಟಿ ರಾಧಾ ಭಗವತಿ ಈಗ ಅಧಿಕೃತವಾಗಿ ಒಂದಾಗಿದ್ದಾರೆ. ಇಷ್ಟು ದಿನ ತೆರೆಮರೆಯಲ್ಲಿ ಸಾಗುತ್ತಿದ್ದ ಇವರ ಪ್ರೇಮ ಪುರಾಣಕ್ಕೆ ಈಗ ಮುದ್ರೆ ಬಿದ್ದಿದೆ. ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಳ್ಳುವ ಮೂಲಕ ಈ ಜೋಡಿ ಅಭಿಮಾನಿಗಳಿಗೆ

ಫಿಲ್ಮಿಬೀಟ್ 28 Feb 2026 1:25 pm

The Kerala Story 2; 'ದಿ ಕೇರಳ ಸ್ಟೋರಿ 2' ಬಿಡುಗಡೆಗೆ ಕೇರಳ ಹೈಕೋರ್ಟ್ ಅನುಮತಿ; ಇಂದಿನಿಂದಲೇ ಶೋ ಶುರು

'ದಿ ಕೇರಳ ಸ್ಟೋರಿ 2' ಸಿನಿಮಾದ ಸುತ್ತಲಿನ ಕಾನೂನು ಹೋರಾಟವು ಶುಕ್ರವಾರ ಮಹತ್ವದ ತಿರುವು ಪಡೆದುಕೊಂಡಿದೆ. ಕೇರಳ ಹೈಕೋರ್ಟ್‌ನ ವಿಭಾಗೀಯ ಪೀಠವು ಸಿನಿಮಾ ಬಿಡುಗಡೆಯ ಮೇಲಿದ್ದ ಮಧ್ಯಂತರ ತಡೆಯಾಜ್ಞೆಯನ್ನು ತೆರವುಗೊಳಿಸಿದ್ದು, ಶುಕ್ರವಾರ ಸಂಜೆಯಿಂದಲೇ ಪ್ರದರ್ಶನಗಳು ಆರಂಭಗೊಳ್ಳುವುದಕ್ಕೆ ದಾರಿ ಮಾಡಿಕೊಟ್ಟಿದೆ.ಈ ಆದೇಶದ ಬಳಿಕ ಕೊಚ್ಚಿ, ಕೋಝಿಕ್ಕೋಡ್ ಮತ್ತು ತಿರುವನಂತಪುರಂನ ಮಲ್ಟಿಪ್ಲೆಕ್ಸ್ ಚೈನ್‌ಗಳು ಹಾಗೂ ಸಿಂಗಲ್ ಸ್ಕ್ರೀನ್‌ಗಳು ಮತ್ತೆ ಬುಕಿಂಗ್‌ಗಳನ್ನು

ಫಿಲ್ಮಿಬೀಟ್ 28 Feb 2026 1:22 pm

Gold Rate Today: Gold price sees sudden rise! Rs 3,160. Huge increase

ಅಯ್ಯಯ್ಯೋ, ಮತ್ತೆ ಏರಿಕೆಯಾಯ್ತು ನೋಡಿ ಚಿನ್ನದ ಬೆಲೆ. ಫೆಬ್ರವರಿ ಅಂತ್ಯದ ವೇಳೆ ಭಾರತದಲ್ಲಿ ಚಿನ್ನದ ಬೆಲೆ ಭಾರೀ ಏರಿಕೆಯಾಗಿದೆ. ಕಳೆದ ವಾರವಿಡೀ ಭಾರೀ ಇಳಿಕೆ ಕಂಡಿದ್ದ ಬಂಗಾರದ ಬೆಲೆ, ಈ ವಾರಾಂತ್ಯದಲ್ಲಿ ಭಾರೀ ಹೆಚ್ಚಳವಾಗಿದೆ. ಹಾಗಿದ್ರೆ ಇಂದು (ಫೆ.28) ಭಾರತದಲ್ಲಿ ಚಿನ್ನದ ದರ ಎಷ್ಟು ಏರಿಕೆಯಾಗಿದೆ ಗೊತ್ತಾ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ. ಭಾರತದಲ್ಲಿ 24K ಚಿನ್ನದ

ಫಿಲ್ಮಿಬೀಟ್ 28 Feb 2026 1:11 pm

Ranabaali Song Review: ಮದುವೆ ಬಳಿಕ ಮೊದಲ ಸಾಂಗ್ ರಿಲೀಸ್! ತೆರೆಯ ಮೇಲೂ ಪತಿ-ಪತ್ನಿಯಾಗಿ ಮಿಂಚಿದ ವಿರೋಷ್

ರಣಬಾಲಿ ಚಿತ್ರದ ರೋಮ್ಯಾಂಟಿಕ್ ಸಾಂಗ್ ರಿಲೀಸ್ ಆಗಿದೆ. ರಶ್ಮಿಕಾ-ವಿಜಯ್ ಮದುವೆ ಆದ್ಮೇಲೆನೆ ಈ ಗೀತೆ ರಿಲೀಸ್ ಆಗಿದೆ. ಇದು ಅಷ್ಟೆ ರೋಮ್ಯಾಂಟಿಕ್ ಆಗಿಯೇ ಇದೆ. ಇದರ ಇತರ ವಿವರ ಇಲ್ಲಿದೆ ಓದಿ.

ಸುದ್ದಿ18 28 Feb 2026 1:03 pm

Ranabaali: ರಣಬಾಲಿಯ ಮುದ್ದಾದ ಪ್ರಣಯಗೀತೆ ರಿಲೀಸ್! ಏನಯ್ಯಾ ಸಾಮಿ ಎಂದ ರಶ್ಮಿಕಾ, ವಿಜಯ್ ಜೊತೆ ಕ್ಯೂಟ್ ರೊಮ್ಯಾನ್ಸ್

ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅಭಿನಯದ ರಣಬಾಲಿಯ ಮುದ್ದಾದ ಹಾಡು ರಿಲೀಸ್ ಆಗಿದೆ. ಇಬ್ಬರ ಕ್ಯೂಟ್ ರೊಮ್ಯಾನ್ಸ್ ಈ ಹಾಡಿನಲ್ಲಿ ಸೆರೆಯಾಗಿದೆ.

ಸುದ್ದಿ18 28 Feb 2026 12:21 pm

Amruthadhaare ; ಸುನಿ ಅವಾಜ್‌ಗೆ ಜೈದೇವ್‌ ಗಪ್‌ಚುಪ್ - ಮಲ್ಲಿಗೆ ಕೈ ಕೊಡ್ತಾನಾ ಕೇಡಿಯ ಪೈಲ್ವಾನ್?

ಅಮೃತಧಾರೆ ಧಾರಾವಾಹಿಯಲ್ಲಿ ಮಲ್ಲಿ ಮತ್ತು ಸುನಿ ಪ್ರೇಮ ಕಥೆಯ ಮೇಲೆ ಗೌತಮ್ ಮತ್ತು ಭೂಮಿಕಾ ಮದುವೆಯ ಅಧಿಕೃತ ಮುದ್ರೆ ಒತ್ತಲು ಸಿದ್ದರಾಗಿದ್ದಾರೆ. ನಿಶ್ಚಿತಾರ್ಥದ ಸಮಾರಂಭ ಹಮ್ಮಿಕೊಂಡಿದ್ದಾರೆ. ಆದರೆ, ಸುನಿಯ ಹಿನ್ನೆಲೆ ಎಲ್ಲಾ ಗೊತ್ತಾಗಿದೆ ಎಂದು ಅಂದುಕೊಂಡಿರುವ ಗೌತಮ್ ಮತ್ತು ಭೂಮಿಕಾಗೆ ಸುನಿಯ ಹಿಂದಿರುವ ವ್ಯಕ್ತಿ ಜೈದೇವ್ ಎನ್ನುವುದು ಇನ್ನೂ ಗೊತ್ತಾಗಿಲ್ಲ. ವಿಶೇಷ ಅಂದರೆ ಜೈದೇವ್ ತಾಳಕ್ಕೆ ತಕ್ಕಂತೆ

ಫಿಲ್ಮಿಬೀಟ್ 28 Feb 2026 12:10 pm

Divorce: ದಳಪತಿ To ಧನುಷ್, ಸಿನಿ ಪ್ರೇಮಿಗಳಿಗೆ ಶಾಕ್ ಕೊಟ್ಟ ಸೌತ್​ನ ಬಿಗ್ ಡಿವೋರ್ಸ್​

South Cinema Divorce Cases: ದಕ್ಷಿಣದ ಚಿತ್ರರಂಗದಲ್ಲಿ ಡಿವೋರ್ಸ್ ಕೇಸ್​​ಗಳು ಪ್ರೇಕ್ಷರನ್ನು ನಿಜಕ್ಕೂ ಬೆಚ್ಚಿ ಬೀಳಿಸಿವೆ. ಅವು ಯಾವ್ಯಾವುದು ನೋಡಿ.

ಸುದ್ದಿ18 28 Feb 2026 11:38 am

Dhurandhar 2 Vs Toxic: ಮಾರ್ಚ್ 19ಕ್ಕೆ ಬಿಗ್ ಫೈಟ್ ಫಿಕ್ಸ್;'ಧುರಂಧರ್ 2' ಚಿತ್ರದ ರನ್ ಟೈಮ್ ಎಷ್ಟು? ಪ್ರೀ-ಬುಕಿಂಗ್ ಯಾವಾಗ?

ಸಿನಿಮಾ ಲೋಕದಲ್ಲಿ ಈಗ ಒಂದೇ ಸದ್ದು. ಅದು ರಣವೀರ್ ಸಿಂಗ್ ನಟನೆಯ 'ಧುರಂಧರ್ 2' ಚಿತ್ರದ ಅಬ್ಬರ. ಈ ಸಿನಿಮಾ ಮಾರ್ಚ್ 19ರಂದು ಅದ್ಧೂರಿಯಾಗಿ ತೆರೆಗೆ ಬರಲಿದೆ. ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದ ಕ್ಷಣ ಈಗ ಹತ್ತಿರ ಬಂದಿದೆ. ಇನ್ನೊಂದು ಕಡೆ ರಾಕಿ ಭಾಯ್ ಯಶ್ ಅವರ 'ಟಾಕ್ಸಿಕ್' ಸಿನಿಮಾ ಕೂಡ ಸಜ್ಜಾಗಿದೆ. ವಿಶೇಷ ಅಂದರೆ, ಎರಡೂ ಸಿನಿಮಾಗಳು

ಫಿಲ್ಮಿಬೀಟ್ 28 Feb 2026 11:36 am

Virosh First Public Appearance After Wedding | ಕೈ ಕೈ ಹಿಡಿದು ಏಪೋರ್ಟ್​ನಲ್ಲಿ ಕಾಣಿಸಿಕೊಂಡ ನವಜೋಡಿ | N18V

Virosh First Public Appearance After Wedding | ಕೈ ಕೈ ಹಿಡಿದು ಏಪೋರ್ಟ್​ನಲ್ಲಿ ಕಾಣಿಸಿಕೊಂಡ ನವಜೋಡಿ | N18V

ಸುದ್ದಿ18 28 Feb 2026 10:25 am

Vijay-Sangeetha: ವಿಜಯ್-ಸಂಗೀತಾ ಡಿವೋರ್ಸ್​ನಲ್ಲಿ ಕಾನೂನು ಸಮಸ್ಯೆ? ಇಬ್ಬರಿಗೂ ತಲೆನೋವಾಗುತ್ತಾ ಆ 4 ಅಂಶ?

ವಿಜಯ್ ಮತ್ತು ಸಂಗೀತಾ ಡಿವೋರ್ಸ್ ಭಾರೀ ಸುದ್ದಿಯಾಗಿದೆ. ಇಬ್ಬರೂ ದಾಂಪತ್ಯ ಜೀವನ ಕೊನೆಗೊಳಿಸ್ತಾರಾ? ಡಿವೋರ್ಸ್​ನಲ್ಲಿಯೂ ಈ ಜೋಡಿಗೆ ಇದೆ ಪ್ರಾಬ್ಲೆಂ.

ಸುದ್ದಿ18 28 Feb 2026 10:06 am

'ಹಯಗ್ರೀವ' ನೆಗೆಟಿವ್ ಕಮೆಂಟ್ ಮಾಡೋಕೆ ವಾಟ್ಸಾಪ್ ಗ್ರೂಪ್? \ಈ ಪ್ರೀತಿ ತೋರಿಸ್ತೀನಿ\ ಅಂದಿದ್ಯಾರಿಗೆ ಧನ್ವೀರ್‌?

ನಟ ಧನ್ವೀರ್ ನಟನೆಯ ಸಿನಿಮಾ 'ಹಯಗ್ರೀವ' ನಿನ್ನೆ (ಫೆಬ್ರವರಿ 27) ರಿಲೀಸ್ ಆಗಿದೆ. ಕಳೆದ ಕೆಲವು ದಿನಳಿಂದ ಸಿನಿಮಾ ಬಗ್ಗೆ ಅಬ್ಬರ ಪ್ರಚಾರ ಮಾಡಿ ಬಿಡುಗಡೆ ಮಾಡವುದಕ್ಕೆ ಸಜ್ಜಾಗಿತ್ತು. ಆದರೆ, ಮೊದಲ ದಿನವ ಸಿನಿಮಾ ಕಂಟಕ ಎದುರಾಗಿತ್ತು. ಸೆನ್ಸಾರ್ ಬೋರ್ಡ್‌ನಿಂದ ಸಿನಿಮಾಗೆ ಸಿಗಬೇಕಿದ್ದ ಸೆನ್ಸಾರ್ ಕಾಪಿಯೇ ಸಿಕ್ಕಿರಲಿಲ್ಲ. ಹೀಗಾಗಿ ಮೊದಲ ಎರಡು ಶೋಗಳು ಪ್ರದರ್ಶನ ಕಾಣಲಿಲ್ಲ. ಸಿನಿಮಾ

ಫಿಲ್ಮಿಬೀಟ್ 28 Feb 2026 9:57 am

Dhurandhar: ಧುರಂಧರ್ ಸಿನಿಮಾ ಕನ್ನಡದಲ್ಲಿ ಬರ್ತಿದ್ರೆ ಹೇಗಿರ್ತಿತ್ತು? ಇಲ್ನೋಡಿ ಒಂದು ಝಲಕ್

ಬಾಲಿವುಡ್‌ನ ಧುರಂಧರ್ ಕನ್ನಡದಲ್ಲಿ ರೀಮೇಕ್ ಆದರೆ ಹೇಗೆ? ಈ ಒಂದು ಚಿತ್ರದಲ್ಲಿರೋ ಯಾವ ಪಾತ್ರವನ್ನ ಯಾರು ಮಾಡಿದರೆ ಚೆನ್ನಾಗಿರುತ್ತದೆ? ಈ ಒಂದು ಕಲ್ಪನೆಯ ಇಂಟ್ರಸ್ಟಿಂಗ್ ವಿಡಿಯೋ ಈಗ ಹೆಚ್ಚು ಗಮನ ಸೆಳೆಯುತ್ತಿದೆ. ಅದರ ವಿವರ ಇಲ್ಲಿದೆ ಓದಿ.

ಸುದ್ದಿ18 28 Feb 2026 9:42 am

Preethiya Parivala: ಪೂವೆ ಉನಕ್ಕಾಗ ಸಿನಿಮಾ ನೋಡಿ ಲಂಡನ್​ನಿಂದ ಬಂದ ಚೆಲುವೆ! ವಿಜಯ್-ಸಂಗೀತಾ ಪ್ರೇಮಕಥೆ ಯಾವ ಮೂವಿಗೂ ಕಡಿಮೆ ಇಲ್ಲ

ವಿಜಯ್ ಅವರ ಪತ್ನಿ ಸಂಗೀತಾ ಸೊರ್ನಲಿಂಗಂ, 25 ವರ್ಷಗಳ ದಾಂಪತ್ಯದ ನಂತರ ವಿಚ್ಛೇದನಕ್ಕಾಗಿ ಚೆಂಗಲ್ಪಟ್ಟು ಕುಟುಂಬ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಇವರ ಪ್ರೀತಿ ಶುರುವಾಗಿದ್ದು ಹೇಗೆ?

ಸುದ್ದಿ18 28 Feb 2026 9:35 am

Vijay-Sangeetha: ದಾಂಪತ್ಯ ಬಿರುಕಿಗೆ ಇದೇನಾ ಕಾರಣ? ಡಿವೋರ್ಸ್ ಅರ್ಜಿಯಲ್ಲಿ ವಿಜಯ್ ಪತ್ನಿ ಸಂಗೀತಾ ಮಾಡಿದ ಆರೋಪ ಇದು

Divorce: ಸಂಗೀತಾ-ವಿಜಯ್ ಡಿವೋರ್ಸ್​ಗೆ ಇದೇನಾ ಕಾರಣ? ವಿಚ್ಛೇದನೆಗೆ ಅರ್ಜಿ ಸಲ್ಲಿಸುವಾಗ ಸಂಗೀತಾ ಕೊಟ್ಟ ಕಾರಣ ಏನು?

ಸುದ್ದಿ18 28 Feb 2026 8:45 am

Hayagreeva Review: ಮಿಸ್ಟರಿ, ಥ್ರಿಲ್ಲರ್, ಸಸ್ಪೆನ್ಸ್.. ಧನ್ವೀರ್ ಸಿನಿಮಾ 'ಹಯಗ್ರೀವ'ದ ಪ್ಲಸ್ ಏನು? ಮೈನಸ್ ಏನು?

ಧನ್ವೀರ್ ನಟನೆಯ ಮತ್ತೊಂದು ಸಿನಿಮಾ 'ಹಯಗ್ರೀವ' ರಿಲೀಸ್ ಆಗಿದೆ. ಬಿಡುಗಡೆ ದಿನವೇ ಸಿನಿಮಾಗೆ ವಿಘ್ನ ಆಗಿತ್ತು. ಸೆನ್ಸಾರ್ ಕಾಪಿ ಸಿಗದೇ ಇದ್ದಿದ್ದರಿಂದ ಎರಡು ಶೋಗಳ ಬಳಿಕ ಸಿನಿಮಾ ಪ್ರದರ್ಶನ ಆಗುತ್ತಿದೆ. ಹೀಗಾಗಿ ಮೊದಲ ಎರಡು ಶೋಗಳಿಗೆ ಕಾದು ಕೂತಿದ್ದ ಸಿನಿಪ್ರಿಯರಿಗೆ ನಿರಾಸೆ ಆಗಿದ್ದಂತೂ ಅಷ್ಟೇ ನಿಜ. ಆದರೆ, ಸಂಜೆ ಶೋಗಳಿಗೆ ಕೆಲವೆಡೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.

ಫಿಲ್ಮಿಬೀಟ್ 28 Feb 2026 7:55 am

ಮಲಯಾಳಂ ಸಿನಿರಸಿಕರಿಗಾಗಿ ಈ ವಾರ ಓಟಿಟಿಗೆ ಫ್ಯಾಮಿಲಿ ಎಂಟರ್‌ಟೈನರ್ ಸಿನಿಮಾಗಳು ಎಂಟ್ರಿ

ಫೆಬ್ರವರಿ 27 ಮತ್ತು ಮಾರ್ಚ್ 1 ರ ನಡುವೆ ಕುಟುಂಬದೊಂದಿಗೆ ಚಲನಚಿತ್ರ ವೀಕ್ಷಣೆಯನ್ನು ಯೋಜಿಸುತ್ತಿದ್ದರೆ, ಈಗ OTT ಯಲ್ಲಿ ಹಲವಾರು ಹೊಸ ಮಲಯಾಳಂ ಆಯ್ಕೆಗಳು ಲಭ್ಯವಿದೆ. ಪ್ಲಾಟ್‌ಫಾರ್ಮ್‌ಗಳು ಎಲ್ಲಾ ವಯೋಮಾನದವರಿಗೂ ಸೂಕ್ತವಾದ, ವಿಶೇಷವಾಗಿ ಸುರಕ್ಷಿತವಾದ ಮನೆ ವೀಕ್ಷಣೆಯನ್ನು ಬಯಸುವ ಪೋಷಕರಿಗಾಗಿ U ಅಥವಾ U/A ಪ್ರಮಾಣಪತ್ರ ಹೊಂದಿರುವ ಸ್ವಚ್ಛ ಮತ್ತು ಕಥೆ ಆಧಾರಿತ ಸಿನಿಮಾಗಳನ್ನು ನೋಡಬಹುದು. ಇತ್ತೀಚಿನ

ಫಿಲ್ಮಿಬೀಟ್ 28 Feb 2026 12:40 am

Rising Bharat Summit 2026: ರಾಜಕೀಯ ಆಧಾರಿತ ಚಿತ್ರಗಳಿಂದ ಜನ ನಮ್ಮನ್ನು ಗುರುತಿಸುತ್ತಾರೆ! ರೈಸಿಂಗ್ ಭಾರತ್‌ನಲ್ಲಿ ನಟಿ ಯಾಮಿ ಗೌತಮ್ ಮಾತು

Rising Bharat Summit 2026: ರಾಜಕೀಯ ಚಲನಚಿತ್ರಗಳನ್ನು ಆಯ್ಕೆ ಮಾಡುವುದರಿಂದ ತಮ್ಮ ಚಲನಚಿತ್ರ ಅವಕಾಶಗಳು ಪರಿಣಾಮ ಬೀರುತ್ತವೆಯೇ ಎಂಬುದರ ಕುರಿತು ಬಾಲಿವುಡ್ ನಟಿ ಯಾಮಿ ಗೌತಮ್ ಹೇಳಿದ್ದಾರೆ.

ಸುದ್ದಿ18 27 Feb 2026 10:47 pm

ಅಲ್ಲು ಅರ್ಜುನ್ ತಮ್ಮನ ಮದ್ವೆಗೆ ಮುಹೂರ್ತ ನಿಗದಿ ; ನಯನಿಕಾ ಜೊತೆ ಈ ದಿನದಂದು ಸಪ್ತಪದಿ ತುಳಿಯಲಿದ್ದಾರೆ ಅಲ್ಲು ಸಿರೀಶ್

ಟಾಲಿವುಡ್‌ನ ಖ್ಯಾತ ಕುಟುಂಬಗಳಲ್ಲಿ ಒಂದಾದ ಅಲ್ಲು ಕುಟುಂಬದಲ್ಲಿ ಈಗ ಮದುವೆಯ ಸಡಗರ ಮನೆಮಾಡಿದೆ. ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅವರ ತಮ್ಮ, ನಟ ಅಲ್ಲು ಸಿರೀಶ್ ಈಗ ಹೊಸ ಜೀವನಕ್ಕೆ ಕಾಲಿಡಲು ಸಿದ್ಧರಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಸಿರೀಶ್ ಮದುವೆಯ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದವು. ಅಲ್ಲು ಸಿರೀಶ್ ತಮ್ಮ ವೈಯಕ್ತಿಕ ಜೀವನದ ಬಗ್ಗೆ

ಫಿಲ್ಮಿಬೀಟ್ 27 Feb 2026 10:20 pm

Rising Bharat Summit 2026: ನರೇಂದ್ರ ಮೋದಿಯವರೇ ನನ್ನ ರಾಜಕೀಯ ಗುರು; ರೈಸಿಂಗ್ ಭಾರತ್‌ನಲ್ಲಿ ಕಂಗನಾ ಮೆಚ್ಚುಗೆ ಮಾತು

Rising Bharat Summit 2026: ಕಾಂಗ್ರೆಸ್ ತನ್ನನ್ನು ಉಳಿಸಿಕೊಳ್ಳಬೇಕೆಂದಿದ್ದರೆ, ಅವರು ಇನ್ನೂ ಉತ್ತಮ ಆಯಾಮವನ್ನು ಹುಡುಕಬೇಕು ಎಂದು ಬಾಲಿವುಡ್ ನಟಿ, ಮಂಡಿ ಸಂಸದೆ ಕಂಗನಾ ರನೌತ್ ಫೆಬ್ರವರಿ 27, ಶುಕ್ರವಾರದಂದು ಭಾರತ್ ಮಂಟಪದಲ್ಲಿ ನಡೆದ ರೈಸಿಂಗ್ ಭಾರತ್ ಶೃಂಗಸಭೆಯಲ್ಲಿ ಹೇಳಿದರು.

ಸುದ್ದಿ18 27 Feb 2026 9:45 pm

O Romeo Box Office Day 15 ; ಶಾಹಿದ್ ಕಪೂರ್ ಕೈ ಹಿಡಿದ್ನಾ ರೋಮಿಯೋ ? 15 ದಿನದಲ್ಲಿ ಗಳಿಸಿದೆಷ್ಟು ?

''ಸೂಪರ್ ಸ್ಟಾರ್'' ಎಂಬ ಭ್ರಮೆಯಲ್ಲಿ ಮೆರೆದಾಡುತ್ತಿರುವವರನ್ನು ಪ್ರೇಕ್ಷಕರು ಮೂಲೆಗುಂಪು ಮಾಡುತ್ತಿರುವ ಕಾಲ ಇದು. ಈ ಕಾಲದಲ್ಲಿ.. ಚಿತ್ರಕ್ಕೆ ಯಾರು ಎಷ್ಟೇ ಬೆವರು ಸುರಿಸಿರಲಿ.. ಆ ಪಾತ್ರಕ್ಕೆ ನ್ಯಾಯ ಸಲ್ಲಿಸಲು ಚಿತ್ರದಲ್ಲಿನ ತಾರೆಯರು ತಮ್ಮ ರಕ್ತವನ್ನೇ ಹರಿಸಿರಲಿ.. ಪ್ರೇಕ್ಷಕರು ಅದ್ಯಾವುದನ್ನು ನೋಡುವುದಿಲ್ಲ. ಚಿತ್ರದ ಕಥೆ ಅವರಿಗೆ ಆಪ್ತವಾದರೆ ಸಾಕು. ಆ ಚಿತ್ರವನ್ನಷ್ಟೇ ಅವರು ಹೊತ್ತು ಮೆರೆಸುತ್ತಾರೆ. ಗೆಲ್ಲಿಸುತ್ತಾರೆ. ಉದಾಹರಣೆಗೆ

ಫಿಲ್ಮಿಬೀಟ್ 27 Feb 2026 9:14 pm

Rukmini Vasanth: ಕೆಂಪು ಬಣ್ಣದ ಡ್ರೆಸ್ ಅಲ್ಲಿ ಮಿಂಚ್ತಿರೋ ರುಕ್ಮಿಣಿ ವಸಂತ್; ನೋಡಿದವ್ರು ಏನಂದ್ರು ಗೊತ್ತಾ?

Rukmini Vasanth:ರುಕ್ಮಿಣಿ ವಸಂತ್ ಸಖತ್ ಫೋಟೋ ಶೂಟ್ ಮಾಡಿಸಿದ್ದಾರೆ. ಕೆಂಪು ಬಣ್ಣದ ಡ್ರೆಸ್‌ ಅಲ್ಲಿ ಕಂಗೊಳಿಸಿದ್ದಾರೆ. ಈ ಫೋಟೋಗಳ ಒಂದು ಗ್ಯಾಲರಿ ಸ್ಟೋರಿ ಇಲ್ಲಿದೆ ನೋಡಿ.

ಸುದ್ದಿ18 27 Feb 2026 8:34 pm

Dhanveerah Movie: ಧನ್ವೀರ್ 'ಹಯಗ್ರೀವ' ಕೊನೆಗೂ ರಿಲೀಸ್; ರಾರಾಜಿಸಿದ ದಾಸನ ಫೋಟೋ!

ಧನ್ವೀರ್ ಅಭಿನಯದ ಹಯಗ್ರೀವ ರಿಲೀಸ್ ಆಗಿದೆ. ಮೊದಲ ಶೋ ಸಂಜೆ 4.30 ರಿಂದಲೇ ಶುರು ಆಗಿದೆ. ದರ್ಶನ್ ಫ್ಯಾನ್ಸ್ ಅಂತೂ ದರ್ಶನ್ ಭಾವ ಚಿತ್ರ ಹಿಡಿದು ಈ ಚಿತ್ರವನ್ನ ಸ್ವಾಗತಿಸಿದ್ದಾರೆ. ಈ ಚಿತ್ರದ ಮೊದಲ ದಿನದ ಇನ್ನಷ್ಟು ಸಂಭ್ರಮದ ವಿವರ ಇಲ್ಲಿದೆ ಓದಿ.

ಸುದ್ದಿ18 27 Feb 2026 8:30 pm

Kamal-Rajini Movie: ರಜನಿ-ಕಮಲ್ ಸಿನಿಮಾದಲ್ಲಿ ಈ ಸೂಪರ್ ಸ್ಟಾರೇ ವಿಲನ್! ಯಾರವರು ಗೊತ್ತಾ?

Kamal-Rajini Movie: ರಜನಿ ಮತ್ತು ಕಮಲ್ ಮುಂದಿನ ಚಿತ್ರದಲ್ಲಿ ಕೈಜೋಡಿಸಲಿದ್ದಾರೆ. ಈ ಚಿತ್ರದ ಬಗ್ಗೆ ಮತ್ತೊಂದು ಅಪ್‌ಡೇಟ್ ಹೊರಬಿದ್ದಿದೆ. ಅದೇನೆಂದರೆ ಮತ್ತೊಬ್ಬ ಸೂಪರ್‌ಸ್ಟಾರ್ ರಜನಿ-ಕಮಲ್ ಜೊತೆಗೆ ಖಳನಾಯಕನಾಗಿ ನಟಿಸಲಿದ್ದಾರೆ.

ಸುದ್ದಿ18 27 Feb 2026 8:25 pm

Toxic First Song: ನಾಡಿಯಾಳನ್ನು ಎದೆಗಪ್ಪಿಕೊಂಡು ಹೊಂಟ ರಾಯ; 'ಟಾಕ್ಸಿಕ್' ಫಸ್ಟ್ ಸಾಂಗ್ ಅಪ್‌ಡೇಟ್ ಬಂತು

ಬಿರುಗಾಳಿಯಂತೆ ಅಬ್ಬರಿಸುತ್ತಿದ್ದ ರಾಯ ಈಗ ರೊಮ್ಯಾಂಟಿಕ್ ಮೂಡ್‌ಗೆ ಜಾರುತ್ತಿದ್ದಾನೆ. 'ತಬಾಹಿ' ಎಂದು ನಾಡಿಯಾ ಜೊತೆ ಪ್ರೇಮಗೀತೆ ಹಾಡಲು ಮುಂದಾಗಿದ್ದಾರೆ. 'ಟಾಕ್ಸಿಕ್' ಚಿತ್ರದ ಫಸ್ಟ್ ಸಾಂಗ್ ರಿಲೀಸ್ ಬಗ್ಗೆ ಅಪ್‌ಡೇಟ್ ಬಂದಿದೆ. ಇದೊಂದು ರೊಮ್ಯಾಂಟಿಕ್ ಸಾಂಗ್ ಎನ್ನುವುದು ಗೊತ್ತಾಗುತ್ತಿದೆ. ರಾಕಿಂಗ್ ಸ್ಟಾರ್ ಯಶ್ ಜೋಡಿಯಾಗಿ ಚಿತ್ರದಲ್ಲಿ ಕಿಯಾರಾ ಅದ್ವಾನಿ ನಟಿಸುತ್ತಿದ್ದಾರೆ. ಇದೀಗ ನಾಡಿಯಾಳನ್ನು ರಾಯ ಎದೆಗಪ್ಪಿಕೊಂಡು ಹೋಗುತ್ತಿರುವಂತಹ ಪೋಸ್ಟರ್

ಫಿಲ್ಮಿಬೀಟ್ 27 Feb 2026 8:15 pm

TVK ಮುಖ್ಯಸ್ಥ, ನಟ ವಿಜಯ್ ದಾಂಪತ್ಯದಲ್ಲಿ ಬಿರುಕು: ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಪತ್ನಿ ಸಂಗೀತಾ

Photo : ndtv ಚೆನ್ನೈ, ಫೆ.27: ತಮಿಳು ಚಿತ್ರರಂಗದ ಖ್ಯಾತ ನಟ ಹಾಗೂ ತಮಿಳಗ ವೆಟ್ರಿ ಕಳಗಂ (TVK) ಮುಖ್ಯಸ್ಥ ವಿಜಯ್ ಅವರ ವೈವಾಹಿಕ ಜೀವನದಲ್ಲಿ ಬಿರುಕು ಮೂಡಿರುವುದು ಬಹಿರಂಗವಾಗಿದೆ. 27 ವರ್ಷಗಳ ದಾಂಪತ್ಯ ಜೀವನಕ್ಕೆ ತೆರೆ ಎಳೆಯಲು ಅವರ ಪತ್ನಿ ಸಂಗೀತಾ ಸೊರ್ನಲಿಂಗಂ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿರುವುದು ತಿಳಿದುಬಂದಿದೆ. 1954ರ ವಿಶೇಷ ವಿವಾಹ ಕಾಯ್ದೆಯ ಸೆಕ್ಷನ್ 27(1)(ಎ) ಮತ್ತು 27(1)(ಡಿ) ಅಡಿಯಲ್ಲಿ ಅರ್ಜಿ ಸಲ್ಲಿಸಲಾಗಿದೆ. ಪ್ರಕರಣವು ಪ್ರಸ್ತುತ ಜಿಲ್ಲಾ ನ್ಯಾಯಾಲಯದ ಮುಂದಿದ್ದು, ವಿಚಾರಣೆ ಮುಂದುವರಿದಿದೆ. ಅರ್ಜಿಯಲ್ಲಿ 51 ವರ್ಷದ ವಿಜಯ್ ಒಬ್ಬ ನಟಿಯೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದಾರೆ ಎಂದು 48 ವರ್ಷದ ಸಂಗೀತಾ ಆರೋಪಿಸಿದ್ದಾರೆ. 2021ರಲ್ಲಿ ಈ ಬಗ್ಗೆ ತಿಳಿದುಕೊಂಡಿದ್ದಾಗಿ ಅವರು ದಾಖಲಿಸಿದ್ದಾರೆ. ಸಂಬಂಧವನ್ನು ಕೊನೆಗೊಳಿಸುವುದಾಗಿ ವಿಜಯ್ ಭರವಸೆ ನೀಡಿದ್ದರೂ, ಅದು ಮುಂದುವರಿದಿದೆ ಎಂದು ಸಂಗೀತಾ ದೂರಿದ್ದಾರೆ. ವಿಜಯ್ ತಮ್ಮ ಸಾಮಾಜಿಕ ಹಾಗೂ ವೃತ್ತಿಪರ ವಲಯದಿಂದ ಸಂಗೀತಾಳನ್ನು ದೂರವಿಟ್ಟು, ವಿದೇಶ ಪ್ರವಾಸಗಳು ಹಾಗೂ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಆ ನಟಿಯೊಂದಿಗೆ ಭಾಗವಹಿಸುತ್ತಿದ್ದರೆಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಆ ನಟಿ ಈ ಪ್ರವಾಸಗಳ ಫೋಟೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ನಿಯಮಿತವಾಗಿ ಹಂಚಿಕೊಂಡಿದ್ದರೆಂದು, ಆದರೆ ವಿಜಯ್ ಅವುಗಳಿಗೆ ವಿರೋಧ ವ್ಯಕ್ತಪಡಿಸದೇ ಮೌನಾನುಮೋದನೆ ನೀಡಿದಂತಾಗಿದೆ ಎಂದು ಸಂಗೀತಾ ಹೇಳಿದ್ದಾರೆ. ಈ ಪೋಸ್ಟ್‌ಗಳು ತಮಗೂ ಮಕ್ಕಳಿಗೂ ಪದೇ ಪದೇ ಅವಮಾನ ಉಂಟುಮಾಡಿದವು ಎಂದು ಅವರು ದೂರಿದ್ದಾರೆ. ಇದಲ್ಲದೆ, ವಿಜಯ್ ಹಿಂದಿನಿಂದ ಅನುಭವಿಸುತ್ತಿದ್ದ ಸೌಲಭ್ಯಗಳನ್ನು ಹಿಂತೆಗೆದುಕೊಂಡು, ಆರ್ಥಿಕ ನಿರ್ಬಂಧಗಳನ್ನು ವಿಧಿಸಿದ್ದಾಗಿ ಸಂಗೀತಾ ಆರೋಪಿಸಿದ್ದಾರೆ. “ತಮ್ಮ ಮುಕ್ತ ಚಲನೆಯನ್ನು ಮೊಟಕುಗೊಳಿಸಲಾಗಿದೆ” ಎಂಬ ಅಂಶವನ್ನೂ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. 2024ರಲ್ಲಿ ವಿಜಯ್ ಅವರ ಈ ನಡವಳಿಕೆ ಹಾಗೂ ಪುನರಾವರ್ತಿತ ಸಾಮಾಜಿಕ ಮಾಧ್ಯಮ ವಿವಾದಗಳಿಂದ ತಮಗೆ ತೀವ್ರ ಮಾನಸಿಕ ಹಿಂಸೆ ಉಂಟುಮಾಡಿದವು ಎಂದು ಸಂಗೀತಾ ಹೇಳಿದ್ದಾರೆ. ಮದುವೆ ಪರಿಣಾಮಕಾರಿಯಾಗಿ ಅಸ್ತಿತ್ವದಲ್ಲಿಲ್ಲ; ಈಗ ಅದು ಕೇವಲ ಕಾಗದದ ಮೇಲಿನ ಸಂಬಂಧವಾಗಿ ಉಳಿದಿದೆ ಎಂದು ಅವರು ತಿಳಿಸಿದ್ದಾರೆ. ಸಂಬಂಧವು ಪುನರುಜ್ಜೀವನಗೊಳ್ಳಲು ಅಸಾಧ್ಯವಾಗಿದ್ದು, ತಮಗೆ “ಮಾನಸಿಕ ನೋವು, ಅವಮಾನ ಮತ್ತು ಸಂಕಟ” ಮಾತ್ರ ನೀಡುತ್ತಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ. ಆಗಸ್ಟ್ 25, 1999ರಂದು ಹಿಂದೂ ಹಾಗೂ ಕ್ರಿಶ್ಚಿಯನ್ ಸಂಪ್ರದಾಯದಂತೆ ವಿಜಯ್–ಸಂಗೀತಾ ವಿವಾಹವಾಗಿದ್ದರು. ತಮಿಳು ಕೈಗಾರಿಕೋದ್ಯಮಿಯೊಬ್ಬರ ಪುತ್ರಿಯಾಗಿರುವ ಸಂಗೀತಾ, ಮದುವೆಗೆ ಮುನ್ನ ವಿಜಯ್ ಅವರ ಅಭಿಮಾನಿಯಾಗಿದ್ದರು ಎನ್ನಲಾಗಿದೆ. ಈ ದಂಪತಿಗೆ ಜೇಸನ್ ಸಂಜಯ್ ಮತ್ತು ದಿವ್ಯಾ ಶಶಾ ಎಂಬ ಇಬ್ಬರು ಮಕ್ಕಳು ಇದ್ದಾರೆ.

ವಾರ್ತಾ ಭಾರತಿ 27 Feb 2026 8:13 pm

Toxic: ಟಾಕ್ಸಿಕ್ ಫಸ್ಟ್ ಸಾಂಗ್ ರಿಲೀಸ್‌ಗೆ ಡೇಟ್ ಫಿಕ್ಸ್! ಯಶ್ ಜೊತೆ ಹೊಸ ಪೋಸ್‌ನಲ್ಲಿ ಹಾಟ್ ಹಾಟ್ ಬೆಡಗಿ! ಯಾರದು ಗೊತ್ತಾ?

Toxic: ಟಾಕ್ಸಿಕ್ ಸಿನಿಮಾ ಬಿಡುಗಡೆಗೆ ಇನ್ನೂ ಕೆಲ ದಿನಗಳಷ್ಟೇ ಬಾಕಿ ಉಳಿದಿದೆ. ಹೀಗಿರುವಾಗ ಇದೀಗ ಯಶ್ ಅಭಿನಯದ ಟಾಕ್ಸಿಕ್ ಸಿನಿಮಾದ ಬಗ್ಗೆ ಹೊಸ ವಿಷ್ಯ ಒಂದು ಹೊರ ಬಿದ್ದಿದೆ.

ಸುದ್ದಿ18 27 Feb 2026 8:03 pm

Rashmika Mandanna: ನನಗೆ ನೀನು, ನಿನಗೆ ನಾನು! ಕೈ-ಕೈ ಹಿಡಿದು ನಡೆದು ಬಂದ ರಶ್ಮಿಕಾ-ವಿಜಯ್

ರಶ್ಮಿಕಾ ಮಂದಣ್ಣ ಖುಷಿಗೆ ಪಾರವೇ ಇರಲಿಲ್ಲ. ಪತಿಯ ಕೈ ಹಿಡಿದು ಅತ್ಯಂತ ಸಂಭ್ರಮದಲ್ಲಿಯೇ ಇದ್ದರು. ವಿಜಯ್ ದೇವರಕೊಂಡ ಕೂಡ ಅಷ್ಟೆ ಸಂತೋಷದಲ್ಲಿಯೇ ಇದ್ದರು. ಇವರ ಈ ಒಂದು ಖುಷಿಯ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಎಲ್ಲಿ ನೋಡಿದ್ರು ಇದೇ ವಿಡಿಯೋ ಇದೆ. ಈ ವಿಡಿಯೋದಲ್ಲಿರೋ ಇವರ ಇನ್ನಷ್ಟು ಖುಷಿಯ ವಿವರ ಇಲ್ಲಿದೆ ಓದಿ.

ಸುದ್ದಿ18 27 Feb 2026 7:57 pm

ವಿಜಯ್-ಸಂಗೀತಾ ದಾಂಪತ್ಯ ಅಂತ್ಯ ; ಸುಂದರ ಸಂಸಾರದಲ್ಲಿ ಹುಳಿ ಹಿಂಡಿದ ನಟಿಯ ವಿರುದ್ದ ಸಿಡಿದೆದ್ದ ದಳಪತಿ ಸೈನ್ಯ

ಸಂಸಾರದಲ್ಲಿ ಸಮರಸವಿದ್ದರೆ ಮಾತ್ರ ಹೊಂದಾಣಿಕೆ ಗಟ್ಟಿಯಾಗಲು ಸಾಧ್ಯ. ದಂಪತಿಗಳ ನಡುವೆ ಭಿನ್ನಾಭಿಪ್ರಾಯಗಳು ಸಹಜ. ಆದರೆ ಅದನ್ನು ಮೂರನೇ ವ್ಯಕ್ತಿಯ ನಡುವೆ ತೋರಿಸಿಕೊಂಡಾಗ ಅಥವಾ ಇದರಲ್ಲಿ ಮೂರನೇ ವ್ಯಕ್ತಿ ಮೂಗು ತೂರಿಸಿದಾಗ ಚಿಕ್ಕ ಸಮಸ್ಯೆ ಕೂಡ ದೊಡ್ಡದಾಗುತ್ತೆ. ವಿಚಾರ ವಿಚ್ಛೇದನದ ಹಂತದವರೆಗೆ ತಲುಪುತ್ತೆ. ಇದಕ್ಕೆ ವಿಜಯ್ ಮತ್ತು ಸಂಗೀತಾ ದಾಂಪತ್ಯ ಜೀವನ ಸದ್ಯದ ತಾಜಾ ಉದಾಹರಣೆ. ಹೌದು, ಕಳೆದ

ಫಿಲ್ಮಿಬೀಟ್ 27 Feb 2026 7:50 pm

Exclusive:: ಜೈಲಿಂದ ಬರ್ತಿದ್ದಂತೆ ಚಿತ್ರದುರ್ಗದ ಕಡೆಗೆ ದರ್ಶನ್; 'ರಾಜ ವೀರ ಮದಕರಿ ನಾಯಕ' ಸಿನಿಮಾ ಆಗುತ್ತಾ?

ಚಾಲೆಂಜಿಂಗ್ ಸ್ಟಾರ್ ದರ್ಶನ್ ವೃತ್ತಿ ಬದುಕಿನ ಬಹು ನಿರೀಕ್ಷಿತ ಸಿನಿಮಾಗಳ ಸಾಲಿನಲ್ಲಿ 'ರಾಜ ವೀರ ಮದಕರಿ ನಾಯಕ' ಇತ್ತು. ಕೋವಿಡ್ ಶುರುವಾಗುವುದಕ್ಕೂ ಮುನ್ನ ಆರಂಭ ಆಗಿದ್ದ ಈ ಸಿನಿಮಾ ಈಗ ನಿಂತಿದೆ. ರಾಕ್‌ಲೈನ್ ವೆಂಕಟೇಶ ನಿರ್ಮಾಣ ಮಾಡುತ್ತಿದ್ದ ಈ ಸಿನಿಮಾ ಮೇಲೆ ಇಡೀ ಸ್ಯಾಂಡಲ್‌ವುಡ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಿತ್ತು. ಆದರೆ, ಕೋವಿಡ್ ಬಂದಿದ್ದರಿಂದ ಈ ಸಿನಿಮವನ್ನು ಅಲ್ಲಿಗೆ

ಫಿಲ್ಮಿಬೀಟ್ 27 Feb 2026 7:41 pm