'ದೊಗಲೆ ಪ್ಯಾಂಟಿನ ನಾಸಿಕಾಸುರ' ಎಂದು ಅಣ್ಣಾವ್ರ ಬಗ್ಗೆ ಟೀಕೆ; ಮುತ್ತುರಾಜನ ಉತ್ತರ ಏನಾಗಿತ್ತು
ನಟಸಾರ್ವಭೌಮ ಡಾ. ರಾಜ್ಕುಮಾರ್ ತಮ್ಮ ಅದ್ಭುತ ಅಭಿನಯ ಹಾಗೂ ಆದರ್ಶ ಗುಣಗಳಿಂದ ಕನ್ನಡಿಗರ ಹೃದಯ ಸಾಮ್ರಾಜ್ಯದಲ್ಲಿ ಶಾಶ್ವತ ಸ್ಥಾನ ಸಂಪಾದಿಸಿದ್ದಾರೆ. ಅಣ್ಣಾವ್ರು ನಮ್ಮನ್ನಗಲಿ 20 ವರ್ಷ ವರ್ಷ ಕಳೆದರೂ ಕನ್ನಡಿಗರು ಅವರನ್ನು ಮರೆತ್ತಿಲ್ಲ, ಮರೆಯುವುದಿಲ್ಲ. ರಂಗಭೂಮಿಯಿಂದ ಬಂದು ಚಿತ್ರರಂಗದಲ್ಲಿ ರಾಜಕುಮಾರನಾಗಿ ಮರೆದವರು ಮುತ್ತುರಾಜ್. 3ನೇ ಕ್ಲಾಸ್ ಓದಿದ್ದ ರಾಜ್ಕುಮಾರ್ ಡಾಕ್ಟರೇಟ್ ಪಡೆಯುವಷ್ಟು ಎತ್ತರಕ್ಕೆ ಬೆಳೆದಿದ್ದು ತಮಾಷೆಯ ಮಾತಲ್ಲ.
ಆ ಒಂದು ಅಕ್ಷರಕ್ಕಾಗಿ 112 ಕೋಟಿ ರೂ. ಕೇಳಿದ್ರು; ಶಾಕಿಂಗ್ ಸಂಗತಿ ಬಿಚ್ಚಿಟ್ಟ ವಿಘ್ನೇಶ್ ಶಿವನ್
ತಮಿಳಿನ 'ಲವ್ ಇನ್ಸುರೆನ್ಸ್ ಕಂಪನಿ' ಕಳೆದ ವಾರ ತೆರೆಕಂಡು ಬಾಕ್ಸಾಫೀಸ್ನಲ್ಲಿ ಮುಗ್ಗರಿಸಿದೆ. ಪ್ರದೀಪ್ ರಂಗನಾಥನ್ ನಟನೆಯ ಸಿನಿಮಾ ಪ್ರೇಕ್ಷಕರನ್ನು ಸೆಳೆಯುವಲ್ಲಿ ವಿಫಲವಾಗಿದೆ. ನಯನತಾರಾ ಪತಿ ವಿಘ್ನೇಶ್ ಶಿವನ್ ಚಿತ್ರವನ್ನು ನಿರ್ಮಿಸಿ ನಿರ್ದೇಶನ ಮಾಡಿದ್ದಾರೆ. 2040ರ ವೇಳೆಗೆ ಲವ್ ಸ್ಟೋರಿಗಳು ಹೇಗಿರಬಹುದು ಎನ್ನುವ ಕಾನ್ಸೆಪ್ಟ್ನಲ್ಲಿ ಚಿತ್ರ ನಿರ್ಮಾಣವಾಗಿದೆ. ಪ್ರದೀಪ್ ರಂಗನಾಥನ್ ನಟಿಸಿದ 3 ಸಿನಿಮಾಗಳು 100 ಕೋಟಿ ರೂ.
ಮೈಕ್ರೋ ಸೀರಿಸ್ಗಳನ್ನು ನೋಡುವುದಕ್ಕೆ ಹೊಸ ವೇದಿಕೆ: ಜಿಯೋಹಾಟ್ಸ್ಟಾರ್ನ ತಡ್ಕಾದ ವಿಶೇಷತೆ ಏನು?
ಒಂದು ಕಾಲದಲ್ಲಿ ಮನರಂಜನೆ ಅನ್ನೋದು ಗಂಟೆಗಟ್ಲೇ ಪ್ರದರ್ಶನ ಕಾಣುವ ಸಿನಿಮಾ ಹಾಗೂ ನಾಟಕಗಳಿಗೆ ಸೀಮಿತವಾಗಿತ್ತು. ಬಳಿಕ ವರ್ಷಗಟ್ಲೆ ಪ್ರಸಾರ ಆಗುವ ಧಾರಾವಾಹಿಗಳಿಗೆ ವಿಸ್ತರಿಸಿತು. ಡಿಜಿಟಲ್ ಕ್ರೇಜ್ ಹೆಚ್ಚಾದ್ಮೇಲೆ ಇದರ ಸ್ವರೂಪಗಳು ಬದಲಾಗಿವೆ. ಈಗ ವೆಬ್ ಸೀರಿಸ್ಗಳು ಹೆಚ್ಚು ಜನಪ್ರಿಯತೆಯಲ್ಲಿ ಇವೆ. ಇನ್ನೇನು ಇದೇ ಭವಿಷ್ಯ ಅಂದುಕೊಂಡವರ ಮುಂದೆ ಬಂದಿದ್ದೇ ಮೈಕ್ರೋ ಸೀರಿಸ್. ಮೊಬೈಲ್ನಲ್ಲಿಯೇ ಮುಳುಗಿ ಹೋಗಿರುವ ಜನರನ್ನು
'ರಾಮಾಯಣ' ಮೊದಲ ಭಾಗದಲ್ಲಿ ರಣ್ಬೀರ್ ಜೊತೆ ನಾನು ತೆರೆ ಹಂಚಿಕೊಂಡಿಲ್ಲ; ಸೀಕ್ರೆಟ್ ಲೀಕ್ ಮಾಡಿದ ಯಶ್
ನಟ ಯಶ್ 'ರಾಮಾಯಣ' ಹಾಗೂ 'ಟಾಕ್ಸಿಕ್' ಚಿತ್ರಗಳ ಪ್ರಚಾರ ಆರಂಭಿಸಿದ್ದಾರೆ. ನಿರ್ಮಾಪಕ ನಮಿತ್ ಮಲ್ಹೋತ್ರಾ ಜೊತೆಗೆ ಸಿನಿಮಾಕಾನ್ ಸಮಾವೇಶದಲ್ಲಿ ಭಾಗವಹಿಸಿದ್ದಾರೆ. ಹಾಲಿವುಡ್ ವೇದಿಕೆಯಲ್ಲಿ 'ರಾಮಾಯಣ' ಸಿನಿಮಾ ಸಖತ್ ಸದ್ದು ಮಾಡ್ತಿದೆ. ಹಾಲಿವುಡ್ ಸಿನಿಮಾಗಳ ಜೊತೆ ಭಾರತದ ಸಿನಿಮಾ ಬಗ್ಗೆ ಚರ್ಚೆ ನಡೆದಿದೆ. ಈಗಾಗಲೇ 'ರಾಮಾಯಣ' ಚಿತ್ರದಲ್ಲಿ ಶ್ರೀರಾಮನಾಗಿ ರಣ್ಬೀರ್ ಕಪೂರ್ ಟೀಸರ್ ರಿಲೀಸ್ ಆಗಿದೆ. ಆ ಬಗ್ಗೆ
10 ಕೋಟಿ ಆಸ್ತಿಗಾಗಿ ನನ್ನನ್ನು ಕೊ*ಲ್ಲಲು ಯತ್ನಿಸುತ್ತಿದ್ದಾರೆ; ಪೊಲೀಸ್ ಠಾಣೆ ಮೆಟ್ಟಿಲೇರಿದ ನಟಿ
ಮಲಯಳಂ ನಟಿ ಸಜಿನಿ ಪ್ರಾಣಭಯದಿಂದ ಜೀವನ ಸಾಗಿಸುವಂತಾಗಿದೆ. ಮಲಯಾಳಂ ನಟಿ ಸಜಿನಿ ತೆಲುಗು, ತಮಿಳು ಹಾಗೂ ಕನ್ನಡ ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ. ಬಿಂದಾಸ್ ಪಾತ್ರಗಳಲ್ಲಿ ನಟಿಸಿ ಹಸಿಬಿಸಿ ದೃಶ್ಯಗಳಲ್ಲಿ ನಟಿಸಿ ಸಜಿನಿ ಹೆಚ್ಚು ಗಮನ ಸೆಳೆದವರು. ಇತ್ತೀಚೆಗೆ ಆಕೆ ಚಿತ್ರರಂಗದಲ್ಲಿ ಅಷ್ಟಾಗಿ ಸಕ್ರಿಯರಾಗಿಲ್ಲ. ಇದೀಗ ಮಾಧ್ಯಮಗಳ ಮುಂದೆ ಬಂದು ಪ್ರಾಣಹಾನಿ ಭೀತಿ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಹೈದರಾಬಾದ್
'ಟಾಕ್ಸಿಕ್' ಬರೀ ಗ್ಯಾಂಗ್ಸ್ಟರ್ ಸಿನಿಮಾ ಅಲ್ಲ; ಹಾಲಿವುಡ್ ಸಂದರ್ಶನದಲ್ಲಿ ಯಶ್ ಮೊದಲ ಮಾತು
ಗೀತು ಮೋಹನ್ ದಾಸ್ ನಿರ್ದೇಶನದ 'ಟಾಕ್ಸಿಕ್' ಸಿನಿಮಾ ಬಿಡುಗಡೆಗೆ ಸಜ್ಜಾಗ್ತಿದೆ. ಪದೇ ಪದೆ ರಿಲೀಸ್ ಡೇಟ್ ಪೋಸ್ಟ್ಪೋನ್ ಆಗಿ ಅಂತಿಮವಾಗಿ ಜೂನ್ 4ಕ್ಕೆ ಸಿನಿಮಾ ತೆರೆಗೆ ಬರುವುದು ಖಚಿತವಾಗಿದೆ. ಈಗಾಗಲೇ ಚಿತ್ರದ ಟೀಸರ್ ಹಾಗೂ ಒಂದು ಸಾಂಗ್ ಬಂದು ಹಿಟ್ ಆಗಿದೆ. ಅಧಿಕೃತವಾಗಿ 'ಟಾಕ್ಸಿಕ್' ಸಿನಿಮಾ ಪ್ರಚಾರ ಇನ್ನು ಆರಂಭವಾಗಿಲ್ಲ. ಆದರೆ ಹಾಲಿವುಡ್ ಸಂದರ್ಶನದಲ್ಲಿ ಯಶ್ ಮೊದಲ
'ಟಾಕ್ಸಿಕ್'ನ ಆ ದೃಶ್ಯವನ್ನು ಕತ್ತರಿಸುವಂತೆ ದುಂಬಾಲು ಬಿದ್ದರೇ ಕಿಯಾರಾ ಅಡ್ವಾನಿ? ಯಶ್ ನಿರ್ಧಾರವೇನು?
ಸಿನಿಮಾ ನಿರ್ಮಾಣ ಸುಲಭವಲ್ಲ. ನಟ-ನಟಿಯರು ಜೀವ ಪಣಕ್ಕಿಟ್ಟು ಸಾಹಸಗಳನ್ನು ಮಾಡಿದರೆ, ಭಾವನಾತ್ಮಕ ಹಾಗೂ ಅನ್ಯೋನ್ಯ ದೃಶ್ಯಗಳಲ್ಲಿ ನಟಿಸುವುದೂ ಅನಿವಾರ್ಯ. ವಿವಾಹಿತ ಕಲಾವಿದರಿಗೆ ಇಂತಹ ಸನ್ನಿವೇಶಗಳು ಸವಾಲು. ಅನೇಕ ನಟರು ಕಣ್ಣೀರಾದ ಪ್ರಸಂಗಗಳೂ ಇವೆ. ಇದೀಗ ಒಬ್ಬ ಜನಪ್ರಿಯ ನಟಿ ಇದೇ ಪರಿಸ್ಥಿತಿ ಎದುರಿಸುತ್ತಿದ್ದಾರೆ ಎನ್ನಲಾಗಿದೆ. ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ 'ಟಾಕ್ಸಿಕ್' ಚಿತ್ರವು ಸ್ಯಾಂಡಲ್ವುಡ್ ಮಾತ್ರವಲ್ಲದೆ
ಕನ್ನಡದ ಮತ್ತೊಂದು ವೆಬ್ ಸೀರಿಸ್ 'ಜೆರಾಕ್ಸ್' ಶೀಘ್ರದಲ್ಲೇ ಪ್ರೀಮಿಯರ್; ಎಲ್ಲಿ? ಯಾವಾಗ?
ಕನ್ನಡದಲ್ಲಿ ವೆಬ್ ಸೀರಿಸ್ಗಳು ನಿರ್ಮಾಣ ಆಗುವುದೇ ಕಡಿಮೆ. ಆಗೊಮ್ಮೆ-ಈಗೊಮ್ಮೆ ಎನ್ನುವಂತೆ ವೆಬ್ ಸೀರಿಸ್ಗಳು ನಿರ್ಮಾಣ ಆಗುತ್ತವೆ. ಆದರೆ, ಕಳೆದ ಕೆಲವು ವರ್ಷಗಳಿಂದ ಕನ್ನಡದಲ್ಲಿ ಒಳ್ಳೊಳ್ಳೆ ವೆಬ್ ಸೀರಿಸ್ಗಳನ್ನು ಜೀ 5 ಸ್ಟ್ರೀಮಿಂಗ್ ಮಾಡುತ್ತಿದೆ. ಈಗ ಮತ್ತೊಂದು ವೆಬ್ ಸೀರೀಸ್ ಪ್ರೀಮಿಯರ್ಗೆ ರೆಡಿಯಾಗಿದೆ ಅದುವೇ 'ಜೆರಾಕ್ಸ್'. ಹೌದು, 'ಜೆರಾಕ್ಸ್' ಜೀ5ನ ಬಹುನಿರೀಕ್ಷಿತ ವೆಬ್ ಸರಣಿ ʼಜೆರಾಕ್ಸ್ʼ ನ ಟ್ರೈಲರ್
ಮೋಹಿನಿಯಾಟ್ಟಂ: ವಿಷು ವೀಕೆಂಡ್ ಕಲೆಕ್ಷನ್, ಅಸಲಿ ಪರೀಕ್ಷೆ ಶುರು!
ವಿಷು ಹಬ್ಬದ ವೀಕೆಂಡ್ನಲ್ಲಿ ಸಾಧಾರಣ ಎನ್ನಬಹುದಾದ ಕಲೆಕ್ಷನ್ ಮಾಡಿದ್ದ ಸೈಜು ಕುರುಪ್ ನಟನೆಯ ಭರತನಾಟ್ಯಂ 2: ಮೋಹಿನಿಯಾಟ್ಟಂ ಚಿತ್ರಕ್ಕೆ ಇಂದು (ಏಪ್ರಿಲ್ 14) ಅಸಲಿ ಪರೀಕ್ಷೆ ಎದುರಾಗಿದೆ. ಹಬ್ಬದ ಸಂಭ್ರಮದ ನಡುವೆಯೇ ವಾರದ ದಿನಗಳತ್ತ ಹೆಜ್ಜೆ ಇಟ್ಟಿರುವ ಈ ಡಾರ್ಕ್ ಕಾಮಿಡಿ ಸಿನಿಮಾ, ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗುತ್ತದೆಯೇ ಎಂಬುದು ಕುತೂಹಲ ಮೂಡಿಸಿದೆ. ಈ ವರ್ಷ ಏಪ್ರಿಲ್ 15
ದೇವರ ಮೇಲೆ ಭಾರ ಹಾಕಿ ಕುಂತ ವಿಜಯಲಕ್ಷ್ಮಿ ದರ್ಶನ್
ರೇಣುಕಾಸ್ವಾಮಿ ಪ್ರಕರಣದಲ್ಲಿ ವಿಚಾರಣಾಧೀನ ಕೈದಿಯಾಗಿ ದರ್ಶನ್ ಒಂದು ವರ್ಷ ಸೆರೆವಾಸ ಅನುಭವಿಸಿದಂತೆ ಆಗಿದೆ. ಸದ್ಯಕ್ಕೆ ಜಾಮೀನು ಸಿಕ್ಕಿ ದರ್ಶನ್ ಹೊರ ಬರುವ ಯಾವುದೇ ಸುಳಿವು ಸಿಕ್ತಿಲ್ಲ. ಇದೇ ವಿಚಾರ ಅವರ ಆಪ್ತರು ಹಾಗೂ ಅಭಿಮಾನಿಗಳ ಕಂಗೆಡಿಸಿದೆ. 2024 ಜೂನ್ 11ರಂದು ಪ್ರಕರಣದಲ್ಲಿ ದರ್ಶನ್ ಸೇರಿ ಎಲ್ಲಾ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ವಿಚಾರಣೆ ನಡೆಸಿ ಬಳಿಕ ವಿಚಾರಣಾಧೀನ
Love Mocktail 3: 25 ದಿನಗಳನ್ನು ಪೂರೈಸಿದ 2026ರ ಮೊದಲ ಸೂಪರ್ ಹಿಟ್ ಸಿನಿಮಾ 'ಲವ್ ಮಾಕ್ಟೇಲ್ 3'
ಕನ್ನಡ ಚಿತ್ರರಂಗದಲ್ಲಿ ಸೋಲುಗಳ ದುರಂತ ಕಥೆಯ ಈ ವರ್ಷವೂ ಕೂಡ ಮುಂದುವರೆದಿದೆ. ಕಳೆದ ನಾಲ್ಕು ತಿಂಗಳಿನಿಂದ ಸ್ಯಾಂಡಲ್ವುಡ್ ಕಡೆಗೆ ತಿರುಗಿ ನೋಡುವಂತಹ ಸಿನಿಮಾ ಬಂದಿಲ್ಲ. ಸತತ ಸೋಲುಗಳನ್ನು ಕಂಡು ಸಂಕಷ್ಟಕ್ಕೆ ಸಿಲುಕಿದೆ. ಒಂದಾದರೂ ಸಿನಿಮಾ ದೇಶಾದ್ಯಂತ ಗಮನ ಸೆಳೆಯಬಹುದೆಂಬ ನಂಬಿಕೆ ಇತ್ತು. ಹೀಗೆ ಸೋಲಿನಿಂದ ಕಂಗೆಟ್ಟಿರುವ ಸ್ಯಾಂಡಲ್ವುಡ್ಗೆ ಸಂಜೀವಿನಿಯಂತೆ ಬಂದಿದ್ದು 'ಲವ್ ಮಾಕ್ಟೇಲ್ 3'. ಡಾರ್ಲಿಂಗ್ ಕೃಷ್ಣ
ವಿಚ್ಚೇದನದ ಪ್ರಕರಣದ ಬೆನ್ನಲ್ಲೇ ಮದುವೆ ಫೋಟೊ ನೀಡಿದ ಫ್ಯಾನ್; ವಿಜಯ್ ರಿಯಾಕ್ಷನ್ ಏನಂದ್ಕೊಳ್ಬೇಕು?
ತಮಿಳುನಾಡಿನಲ್ಲಿ ಏಪ್ರಿಲ್ 23ಕ್ಕೆ ವಿಧಾನ ಸಭಾ ಚುನಾವಣೆ ನಡೆಯುತ್ತಿದೆ. ಇಲ್ಲಿವರೆಗೂ ಡಿಎಂಕೆ ಹಾಗೂ ಎಐಎಡಿಎಂಕೆ ಮಧ್ಯೆ ಫೈಟ್ ಇರುತ್ತಿತ್ತು. ಆದ್ರೀಗ ಮೂರನೇ ಪಕ್ಷ ಪೈಪೋಟಿ ನೀಡುವುದಕ್ಕೆ ಅಖಾಡಕ್ಕೆ ಇಳಿದಿದೆ. ಅದುವೇ ದಳಪತಿ ವಿಜಯ್ ನಟನೆಯ ತಮಿಳಗ ವೆಟ್ರಿ ಕಳಗಂ (TVK) ಪಕ್ಷ. ಈ ಬಾರಿ ತಮಿಳುನಾಡಿನಲ್ಲಿ ತ್ರಿಕೋನ ಸ್ಪರ್ಧೆ ಗ್ಯಾರಂಟಿ ಎಂದು ಹೇಳಲಾಗುತ್ತಿದೆ. ವಿಜಯ್ ಇದೇ ಮೊದಲ
Kotigobba Box Office Day 4:4ನೇ ದಿನವೂ 'ಕೋಟಿಗೊಬ್ಬ' ಸಿನಿಮಾಗೆ ಭರ್ಜರಿ ಕಲೆಕ್ಷನ್.. ಹೇಗಿದೆ ರೆಸ್ಪಾನ್ಸ್?
ಡಾ.ವಿಷ್ಣುವರ್ಧನ್ ನಟನೆಯ 'ಕೋಟಿಗೊಬ್ಬ' ರಿಲೀಸ್ ಆಗಿ 25 ವರ್ಷಗಳನ್ನು ಪೂರೈಸಿದೆ. ಈ ಹಿನ್ನೆಲೆಯಲ್ಲಿ ನಿರ್ಮಾಪಕ ಸೂರಪ್ಪ ಬಾಬು 'ಕೋಟಿಗೊಬ್ಬ' ಸಿನಿಮಾವನ್ನು ಅಭಿಮಾನಿಗಳ ಒತ್ತಾಯದ ಮೇಲೆ ರಿ-ರಿಲೀಸ್ ಮಾಡಿದ್ದಾರೆ. ಏಪ್ರಿಲ್ 10ಕ್ಕೆ ಈ ಸಿನಿಮಾ ಬೆಂಗಳೂರಿನ ಪ್ರಸನ್ನ ಚಿತ್ರಮಂದಿರದಲ್ಲಿ ಗ್ರ್ಯಾಂಡ್ ಆಗಿ ರಿಲೀಸ್ ಆಗಿತ್ತು. ಸಿನಿಮಾಗೆ ಒಂದೊಳ್ಳೆ ಓಪನಿಂಗ್ ಕೂಡ ಸಿಕ್ಕಿತ್ತು. 'ಕೋಟಿಗೊಬ್ಬ' ವಿಷ್ಣುದಾದ ವೃತ್ತಿ ಬದುಕಿನಲ್ಲಿಯೇ ಅತೀ
'ನಂದಗೋಕುಲ'ದಲ್ಲಿ 'ಒಟಿಪಿ' ಸಂಚಲನ; ಮೀನಾ-ಕೇಶವ ಜೋಡಿಯ ರೊಮ್ಯಾಂಟಿಕ್ ಕೋಡ್ವರ್ಡ್ ಏನು ಗೊತ್ತೇ?
ಕಲರ್ಸ್ ಕನ್ನಡದಲ್ಲಿ ಕೌಟುಂಬಿಕ ಧಾರಾವಾಹಿಗಳು ಕಿರುತೆರೆ ವೀಕ್ಷಕರ ಗಮನ ಸೆಳೆಯುತ್ತಿವೆ. ಅದರಲ್ಲಿ 'ನಂದಗೋಕುಲ' ಕೂಡ ಒಂದು. ದಿನದಿಂದ ದಿನಕ್ಕೆ ಅತ್ಯಂತ ರೋಚಕ ಹಾಗೂ ಹಾಸ್ಯದಿಂದ ಕೂಡಿದ ಎಪಿಸೋಡ್ಗಳು ವೀಕ್ಷಕರನ್ನು ಸೆಳೆಯುತ್ತಿವೆ. ಪ್ರತಿ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9 ಗಂಟೆಗೆ ಈ ಧಾರಾವಾಹಿ ಪ್ರಸಾರವಾಗುತ್ತಿದೆ. ದಿನದಿಂದ ದಿನಕ್ಕೆ 'ನಂದಗೋಕುಲ' ಧಾರಾವಾಹಿಯಲ್ಲಿ ಹೊಸ ಪ್ರಯೋಗಳು ನಡೆಯುತ್ತಿವೆ. ಹೀಗಾಗಿ ವೀಕ್ಷಕರಲ್ಲಿ ಧಾರಾವಾಹಿ
ಮತ್ತೊಂದು ಚಿತ್ರಕ್ಕೆ ಪವರ್ ಸ್ಟಾರ್ ಪವನ್ ಕಲ್ಯಾಣ್ ಗ್ರೀನ್ ಸಿಗ್ನಲ್; ಟೈಟಲ್ ಏನು?
ಆಂಧ್ರ ಡಿಸಿಎಂ ಆಗಿ ಪವನ್ ಕಲ್ಯಾಣ್ ಫುಲ್ ಬ್ಯುಸಿಯಾಗಿದ್ದಾರೆ. ಮುಂದೆ ಸಿನಿಮಾಗಳಲ್ಲಿ ಪವರ್ ಸ್ಟಾರ್ ನಟಿಸುವುದು ಅನುಮಾನ ಎನ್ನಲಾಗ್ತಿದೆ. ಇದೇ ವಿಚಾರವನ್ನು ಪವನ್ ಕೂಡ ಹೇಳಿಕೊಂಡಿದ್ದರು. ಆದರೆ ಅಭಿಮಾನಿಗಳು ಅದನ್ನು ಒಪ್ಪಲು ಸಿದ್ಧರಿಲ್ಲ. ನೆಚ್ಚಿನ ನಟನನ್ನು ತೆರೆಮೇಲೆ ನೋಡಲು ಅಭಿಮಾನಿಗಳು ಬಯಸುತ್ತಿದ್ದಾರೆ. ತೆರೆಮರೆಯಲ್ಲಿ ಮತ್ತೊಂದು ಚಿತ್ರಕ್ಕೆ ತಯಾರಿ ನಡೀತಿದೆ. ಪವನ್ ನಟಿಸಿದ 'ಉಸ್ತಾದ್ ಭಗತ್ ಸಿಂಗ್' ಸಿನಿಮಾ
ಸುದೀಪ್ 'ಮಾರ್ಕ್' ಸಿನಿಮಾ ನಿರ್ಮಾಪಕರ ಜೊತೆ ಶಿವಣ್ಣನ ಮುಂದಿನ ಪ್ರಾಜೆಕ್ಟ್ ಕನ್ಫರ್ಮ್
ಕನ್ನಡ ಚಿತ್ರರಂಗದಲ್ಲಿ ವರ್ಷವಿಡೀ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟ ಶಿವರಾಜ್ಕುಮಾರ್. ಸದಾ ಶಿವಣ್ಣ ಕೈಯಲ್ಲಿ ನಾಲ್ಕೈದು ಸಿನಿಮಾಗಳು ಇರುತ್ತವೆ. ಕ್ಯಾನ್ಸರ್ ಸಮಸ್ಯೆಯಿಂದ ಚಿಕಿತ್ಸೆ ಪಡೆದು ಬಂದು ಒಂದೆರಡು ತಿಂಗಳು ವಿಶ್ರಾಂತಿ ಪಡೆದ ಶಿವಣ್ಣ ಮತ್ತೆ ಚಿತ್ರೀಕರಣಕ್ಕೆ ಹಾಜರಾಗಿದ್ದರು. ಅಷ್ಟರಮಟ್ಟಿಗೆ ಅವರಿಗೆ ಸಿನಿಮಾ ಮೇಲೆ ಪ್ರೀತಿ. ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಸೆಂಚುರಿ ಸ್ಟಾರ್ ಬಣ್ಣ ಹಚ್ಚಿದ್ದಾರೆ. 125 ಸಿನಿಮಾಗಳನ್ನು
ಸಾಯಿ ಪಲ್ಲವಿ ವಕೇಶನ್ ಫೋಟೊಗಳನ್ನು ಟು ಪೀಸ್ ಹಾಕ್ಕೊಂಡಂಗೆ ಮಾಡಿದ್ರು; ಸಪ್ತಮಿ ಗೌಡ
ಸಾರ್ವಜನಿಕ ಸ್ಥಳಗಳಲ್ಲಿ ನಟಿಯರು ಬಂದಾಗ ಪಾಪರಾಜಿಗಳು ಅಸಭ್ಯವಾಗಿ ವಿಡಿಯೋ/ಫೋಟೋ ಶೂಟ್ ಮಾಡುವುದು, ದೇಹದ ಭಾಗಗಳ ಮೇಲೆ ಅನವಶ್ಯಕವಾಗಿ ಜೂಮ್ ಮಾಡುವುದರ ಬಗ್ಗೆ ನಟಿ ಸಪ್ತಮಿ ಗೌಡ ದನಿ ಎತ್ತಿದ್ದಾರೆ. ಇತ್ತೀಚೆಗೆ ಈ ಬಗ್ಗೆ ಅಭಿಯಾನ ಮಾಡಿದ್ದರು. ಶಿವರಾಜ್ಕುಮಾರ್, ರಮ್ಯಾ, ರಕ್ಷಿತಾ ಪ್ರೇಮ್, ಯುವ ರಾಜ್ಕುಮಾರ್ ಸೇರಿದಂತೆ ಸಾಕಷ್ಟು ಜನ ಇದಕ್ಕೆ ದನಿಗೂಡಿಸಿದ್ದರು. ಅಸಭ್ಯವಾಗಿ ವಿಡಿಯೋ ಚಿತ್ರೀಕರಿಸುವ ಛಾಯಾಗ್ರಾಹಕರು,
ಪ್ರಶಾಂತ್ ನೀಲ್ ನಿರ್ದೇಶನದ ಬಹುನಿರೀಕ್ಷಿತ ಚಿತ್ರದಲ್ಲಿ ಆಲಿಯಾ ಭಟ್?
ಬಾಲಿವುಡ್ ತಾರೆಯರು ದಕ್ಷಿಣದ ಸಿನಿಮಾಗಳಲ್ಲಿ ನಟಿಸುವುದು ಹೊಸದೇನು ಅಲ್ಲ. ಆದರೆ ಪ್ಯಾನ್ ಇಂಡಿಯಾ ಟ್ರೆಂಡ್ ಶುರುವಾದ ಬಳಿಕ ಈ ಪ್ರಯತ್ನ ಹೆಚ್ಚಾಗುತ್ತಿದೆ. ಈಗಾಗಲೇ ರಾಜಮೌಳಿ ನಿರ್ದೇಶನದ 'RRR' ಚಿತ್ರದಲ್ಲಿ ಆಲಿಯಾ ಭಟ್ ನಟಿಸಿದ್ದರು. ಆದರೆ ರಾಮ್ಚರಣ್ ಜೋಡಿಯಾಗಿ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಸದ್ಯ ಪ್ರಶಾಂತ್ ನೀಲ್ ನಿರ್ದೇಶನದ ಚಿತ್ರದಲ್ಲಿ ಆಲಿಯಾ ಭಟ್ ನಟಿಸುತ್ತಾರೆ ಎಂದು ಗುಲ್ಲಾಗಿದೆ. ಆದರೆ
ತಮಿಳು ನಟಿ ತ್ರಿಷಾಗೆ ಬೆದರಿಕೆ; ಅಖಾಡಕ್ಕಿಳಿದ ಚೆನ್ನೈ ಪೊಲೀಸರು
ರಾಜಕೀಯ ಮುಖಂಡರು, ಸರ್ಕಾರಿ ಕಚೇರಿಗಳು ಹಾಗೂ ಸೆಲೆಬ್ರೆಟಿಗಳ ಮನೆಗೆ ಹುಸಿಬಾಂಬ್ ಕರೆಗಳು ಆಗಾಗ್ಗೆ ಬರುತ್ತದೆ. ಸದ್ಯ ತಮಿಳು ನಟಿ ತ್ರಿಷಾ ಮನೆಗೆ ಬಾಂಬ್ ಇಟ್ಟಿರುವುದಾಗಿ ಮೇಲ್ ಬಂದಿದೆ. ಚೆನ್ನೈನ ಅಲ್ವಾರ್ಪೇಟ್ನಲ್ಲಿರುವ ತ್ರಿಷಾ ಅವರ ನಿವಾಸದಲ್ಲಿ ಬಾಂಬ್ ಇಟ್ಟಿರುವುದಾಗಿ ಪೊಲೀಸ್ ಕಂಟ್ರೋಲ್ ರೂಮ್ಗೆ ಅಪರಿಚಿತ ವ್ಯಕ್ತಿಯಿಂದ ಫೋನ್ ಕರೆ ಬಂದಿತ್ತು. ಇದೇ ಇಮೇಲ್ ಐಡಿಯಿಂದ ಈ ಹಿಂದೆ ನಟ
ಸಿನಿಮಾಕಾನ್ ಸಮಾವೇಶದಲ್ಲಿ 'ರಾಮಾಯಣ' ದಾಖಲೆ; ಹಾಲಿವುಡ್ ವೇದಿಕೆಯಲ್ಲಿ ಯಶ್ ದರ್ಬಾರ್
'ಟಾಕ್ಸಿಕ್' ಸಿನಿಮಾ ಪಕ್ಕಕ್ಕಿಟ್ಟು ಯಶ್ 'ರಾಮಾಯಣ' ಸಿನಿಮಾ ಪ್ರಚಾರ ಆರಂಭಿಸಿದ್ದಾರೆ. ಸಿನಿಮಾಕಾನ್ ಸಮಾವೇಶದಲ್ಲಿ ಯಶ್ ಹವಾ ಶುರುವಾಗಿದೆ. ದೀಪಾವಳಿ ಸಂಭ್ರಮದಲ್ಲಿ 'ರಾಮಾಯಣ' ಸಿನಿಮಾ ತೆರೆಗೆ ಬರಲಿದೆ. ಆದರೆ ಇತ್ತೀಚೆಗೆ ಟೀಸರ್ ಬಿಡುಗಡೆ ಮಾಡಿ ಚಿತ್ರದ ಪ್ರಮೋಷನ್ ಆರಂಭಿಸಿತ್ತು ಚಿತ್ರತಂಡ. ಈಗ ಸಿನಿಮಾಕಾನ್ ವೇದಿಕೆಯಲ್ಲಿ ಸಿನಿಮಾ ಸದ್ದು ಮಾಡ್ತಿದೆ. ಲಾಸ್ ವೇಗಾಸ್ನ ಸೀಸರ್ಸ್ ಪ್ಯಾಲೇಸ್ನಲ್ಲಿ ನಡೆಯುವ ಚಿತ್ರರಂಗದ ಪ್ರಮುಖ
ಶಾಹಿದ್ ಅಫ್ರಿದಿ ನನ್ನ ಕ್ರಶ್; 'ಧುರಂಧರ್' ಚಿತ್ರ ನಿರ್ದೇಶಕನ ಪತ್ನಿ ಹೇಳಿಕೆ ವೈರಲ್
ಆದಿತ್ಯಧರ್ ನಿರ್ದೇಶನದ 'ಧುರಂಧರ್' ಸರಣಿ ಸಿನಿಮಾಗಳು ಬ್ಲಾಕ್ಬಸ್ಟರ್ ಹಿಟ್ ಆಗಿದೆ. ಕೆಲವರು ಪ್ರಾಪಗಂಡ ಸಿನಿಮಾ ಎಂದು ಟೀಕಿಸುತ್ತಿದ್ದಾರೆ. ಆದರೆ ಬಹುತೇಕರು ಸತ್ಯವನ್ನೇ ತೆರೆಮೇಲೆ ತೋರಿಸಿದ್ದಾರೆ ಎಂದು ಕೊಂಡಾಡುತ್ತಿದ್ದಾರೆ. ಭಾರತದ ಸೈನಿಕ ಗೂಢಚಾರಿಯಾಗಿ ಪಾಕಿಸ್ತಾನಕ್ಕೆ ತೆರಳಿ ಉಗ್ರರ ವಿರುದ್ಧ ಹೋರಾಡುವ ಕಥೆ 'ಧುರಂಧರ್' ಚಿತ್ರದಲ್ಲಿದೆ. ಬಹಳ ರೋಚಕವಾಗಿ ಚಿತ್ರವನ್ನು ಕಟ್ಟಿಕೊಡಲಾಗಿದೆ. ಅದೇ ಕಾರಣಕ್ಕೆ ಸಿನಿಮಾ ಸಂಚಲನ ಸೃಷ್ಟಿಸಿದೆ. ಈ
ಸಿನಿಮಾ ಶಾಟ್ಗಾಗಿ ನಟಿ ಪಾಯಲ್ ರಜಪೂತ್ ರಿಸ್ಕ್ ತೆಗೆದುಕೊಂಡಿದ್ದರು; ಅದೇನು ಗೊತ್ತೇ?
ಅಜಯ್ ಭೂಪತಿ ನಿರ್ದೇಶನದ 'ಆರ್ಎಕ್ಸ್ 100' ಚಿತ್ರದ ಮೂಲಕ ಪಾಯಲ್ ರಾಜ್ಪುತ್ ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಕಾರ್ತಿಕೇಯ ನಾಯಕನಾಗಿದ್ದ ಈ ಚಿತ್ರದಲ್ಲಿ ಇಂದೂ ಪಾತ್ರದಲ್ಲಿನ ಅವರ ಅಭಿನಯ ಮತ್ತು ಗ್ಲಾಮರಸ್ ನೋಟ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿತು. ಈ ಹೆಸರನ್ನು ಕೇಳಿದರೆ ಇಂದಿಗೂ ಯುವಕರ ಹೃದಯದಲ್ಲಿ ಒಂದು ವಿಶಿಷ್ಟ ಕಂಪನ ಮೂಡುತ್ತದೆ ಎಂದರೆ ಅತಿಶಯೋಕ್ತಿಯಲ್ಲ. ಈ ಸಿನಿಮಾದೊಂದಿಗೆ ಪಾಯಲ್ಗೆ
ಮಂಡ್ಯ ರಮೇಶ್ ಅವರ 'ನಟನ'ದಿಂದ ಹೊರ ಬಂದ ನಟರು ಯಾರು ಗೊತ್ತೇ?
ಮಂಡ್ಯ ರಮೇಶ್ ಕೇವಲ ಕಲಾವಿದರಾಗಿ ಗುರುತಿಸಿಕೊಂಡಿಲ್ಲ. ಅವರು ಮೊದಲಿನಿಂದಲೂ ರಂಗಭೂಮಿ ಕಡೆಗೆ ಆಸಕ್ತಿಯನ್ನು ಬೆಳೆಸಿಕೊಂಡವರು. ಹೀಗಾಗಿ ಮೈಸೂರಿನಲ್ಲಿ ನಾಟಕಗಳನ್ನು ಇಷ್ಟಪಡುವವರಿಗೆ ತರಬೇತಿ ನೀಡುವುದಕ್ಕೆ 'ನಟನ' ಸಂಸ್ಥೆಯನ್ನು ಹುಟ್ಟಾಕಿದ್ದಾರೆ. ಈ 'ನಟನ' ಸಂಸ್ಥೆಯಿಂದ ಹಲವು ಮಂದಿ ಕಲಾವಿದರು ಚಿತ್ರರಂಗದಲ್ಲಿ ನೆಲೆ ಕಂಡುಕೊಂಡಿದ್ದಾರೆ. ಅವರ ಬಗ್ಗೆ, ನಟನ ಜೊತೆ ತಮ್ಮ ಜರ್ನಿ, ವಾಹಿನಿಗಳೊಂದಿಗೆ ತಮ್ಮ ಒಡನಾಟವನ್ನು ಫಿಲ್ಮಿಬೀಟ್ ಕನ್ನಡದ ಜೊತೆ
ಲೀಕ್ ಆಗಿರುವ 'ಜನ ನಾಯಗನ್' ಸಿನಿಮಾ ರಿವ್ಯೂ ಮಾಡಿದ 'ಜಾಣ' ಸಿನಿಮಾ ನಟಿ
ದಳಪತಿ ವಿಜಯ್ ನಟನೆಯ 'ಜನ ನಾಯಗನ್' ಸಿನಿಮಾ ಆನ್ಲೈನ್ನಲ್ಲಿ ಲೀಕ್ ಆಗಿರುವುದು ಗೊತ್ತೇಯಿದೆ. ಸಾಕಷ್ಟು ಜನ ಈಗಾಗಲೇ ಸಿನಿಮಾ ನೋಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಕೆಲವರು ರಿವ್ಯೂ ಕೂ ಬರೆಯುತ್ತಿದ್ದಾರೆ. ಇನ್ನು ಚಿತ್ರದ ಕೆಲ ದೃಶ್ಯಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ನಟಿ ಕಸ್ತೂರಿ ಕೂಡ ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ತಮಿಳು ನಟಿ ಕಸ್ತೂರಿ ಕನ್ನಡ ಹಾಗೂ ತೆಲುಗು
ಮತ್ತೆ ಮತ್ತೆ ಸೋಲು.. ಅದ್ಯಾಕೋ ಶ್ರೀಲೀಲಾ ಹಾಗೂ ಕೃತಿ ಶೆಟ್ಟಿ ನಸೀಬು ಚೆನ್ನಾಗಿಲ್ಲ
ಸ್ಟಾರ್ ನಟಿ ಆಗಿಬಿಡುವುದು ಅಷ್ಟು ಸುಲಭವಲ್ಲ. ಅವಕಾಶಗಳು ಸಿಕ್ಕರೂ ಕೆಲವರಿಗೆ ಸಕ್ಸಸ್ ಮರೀಚಿಕೆ ಆಗಿಬಿಡುತ್ತದೆ. ಒಂದೋ ಎರಡೋ ಸಿನಿಮಾ ಸೋತ್ರೆ ಪರವಾಗಿಲ್ಲ. ಸಾಲು ಸಾಲಾಗಿ ನಟಿಸಿದ ಸಿನಿಮಾಗಳೆಲ್ಲಾ ಮಕಾಡೆ ಮಲಗಿದರೆ ಹೇಗೆ? ಶ್ರೀಲೀಲಾ ಹಾಗೂ ಕೃತಿ ಶೆಟ್ಟಿ ವ್ಯಥೆ ಕೇಳೋರು ಯಾರು? 'ಉಪ್ಪೆನ' ಚಿತ್ರದಲ್ಲಿ ನಾಯಕಿಯಾಗಿ ನಟಿಸಿ ಕೃತಿ ಶೆಟ್ಟಿ ಮೋಡಿ ಮಾಡಿದ್ದರು. ಮೊದಲ ಚಿತ್ರದಲ್ಲೇ ಗಮನ
ಡಿಕೆಡಿ ಪ್ರೀತಂ ಅನ್ನು ದತ್ತು ಪಡೆದ ಶಿವಣ್ಣ-ಗೀತಕ್ಕ; ವೈರಲ್ ಆಗ್ತಿದೆ ಸೆಂಚುರಿ ಸ್ಟಾರ್ ವಿಡಿಯೋ
ಜೀ ಕನ್ನಡ ರಿಯಾಲಿಟಿ ಶೋ 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ಇತ್ತೀಚೆಗಷ್ಟೇ ಮುಕ್ತಾಯಗೊಂಡಿದೆ. ಇಷ್ಟು ದಿನ ವೇದಿಕೆ ಮೇಲೆ ಸ್ಪರ್ಧಿಗಳು ಡ್ಯಾನ್ಸ್ನಿಂದ ಗಮನ ಸೆಳೆದಿದ್ದರು. ಕಿರುತೆರೆ ವೀಕ್ಷಕರನ್ನು ರಂಜಿಸಿದ್ದರು. ವೇದಿಕೆ ಮೇಲೆ ಹೆಜ್ಜೆ ಹಾಕುತ್ತಿರುವ ಸ್ಪರ್ಧಿಗಳ ಅದ್ಭುತ ಡ್ಯಾನ್ಸ್ ಪರ್ಫಾಮೆನ್ಸ್ಗೆ ವೀಕ್ಷಕರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದರು. 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್'ನ ಈ ಸೀಸನ್ನಲ್ಲಿ ವಿಶೇಷವಾಗಿ ಗಮನ ಸೆಳೆದಿದ್ದು ಬಾಲಕ
ಹಣಕ್ಕಾಗಿ ಅರೆ ಬೆತ್ತಲೆ ಫೋಟೊ ; ಬಿಗ್ ಬಾಸ್ ಸ್ಫರ್ಧಿ ವಿರುದ್ದ ದೂರು ದಾಖಲು
ಹೇಳಿ ಕೇಳಿ ಇದು ಕಲರ್ಫುಲ್ ಲೋಕ. ಈ ಲೋಕದಲ್ಲಿ ಎಲ್ಲವೂ ರಂಗು ರಂಗಾಗಿರಬೇಕು. ಇಂತಹ ಪ್ರಪಂಚದಲ್ಲಿ ಭದ್ರವಾಗಿ ನೆಲೆಯೂರಬೇಕು ಅಂದರೆ, ಸಾಧ್ಯವಾದಷ್ಟು ಕಡಿಮೆ ಬಟ್ಟೆಯನ್ನು ಧರಿಸಬೇಕು, ಮೈಮಾಟವನ್ನು ಪ್ರದರ್ಶನಕ್ಕೆ ಇಡಬೇಕು ಅನ್ನುವ ಕಲ್ಪನೆ ಅನೇಕ ನಾಯಕಿಯರಲ್ಲಿದೆ. ಇನ್ನೂ ಇದು ಸೊಶಿಯಲ್ ಮೀಡಿಯಾ ಕಾಲ. ಈ ''5G'' ಕಾಲದಲ್ಲಿ ಬಟ್ಟೆ ಬಿಚ್ಚುವುದು.. ಫೋಟೊಗೆ ಪೋಸು ಕೊಡುವುದು.. ಈಗೀಗ ತೀರಾ
ರಂಗಭೂಮಿಯೇ ನನ್ನ ಉಸಿರು, ಕನ್ನಡವೇ ನನ್ನ ಹಸಿರು; 'ಆಸೆ'ಪಟ್ಟ ಮಂಡ್ಯ ರಮೇಶ್ ನಟನಾ ಜರ್ನಿ ಹೇಗಿದೆ?
ರಂಗಕರ್ಮಿ, ನಟ ಮಂಡ್ಯ ರಮೇಶ್ ಕಳೆದ ಹಲವು ವರ್ಷಗಳಿಂದ ಕಲಾ ಸೇವೆಯನ್ನು ಮಾಡಿಕೊಂಡು ಬಂದಿದ್ದಾರೆ. ರಂಗಭೂಮಿಯಲ್ಲಿ ಸಕ್ರಿಯರಾಗಿರುವ ಇವರು ಸಿನಿಮಾಗಳಲ್ಲಿಯೂ ನಟಿಸಿ ಸೈ ಎನಿಸಿಕೊಂಡವರು. ಈಗ ಕಿರುತೆರೆಯಲ್ಲಿ ಗಮನ ಸೆಳೆಯುತ್ತಿದ್ದಾರೆ. ರಿಯಾಲಿಟಿ ಶೋ, ಧಾರಾವಾಹಿಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ವೀಕ್ಷಕರನ್ನು ಸೆಳೆದಿದ್ದಾರೆ. ಮಂಡ್ಯ ರಮೇಶ್ ಸದ್ಯ ಸ್ಟಾರ್ ಸುವರ್ಣದಲ್ಲಿ ಪ್ರಸಾರ ಆಗುತ್ತಿರುವ 'ಆಸೆ' ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಇವರ ಪಾತ್ರ
'ಜನನಾಯಗನ್' ಸಿನಿಮಾ ಲೀಕ್ ಆಗಿದ್ದರಿಂದ ದಳಪತಿ ವಿಜಯ್ಗೆ ಲಾಭವಾಯ್ತಾ?
ಬಿಡುಗಡೆಗೂ ಮುನ್ನ ಸಿನಿಮಾ ಆನ್ಲೈನ್ನಲ್ಲಿ ಲೀಕ್ ಆಗಿಬಿಟ್ಟರೆ ಅದಕ್ಕಿಂತ ನಷ್ಟ ಇನ್ನೇನಿದೆ. ನೂರಾರು ಜನರ ನೂರಾರು ದಿನಗಳ ಶ್ರಮ ವ್ಯರ್ಥವಾದಂತಾಗುತ್ತದೆ. ನಿರ್ಮಾಪಕರಿಗೆ ಕೋಟಿ ಕೋಟಿ ನಷ್ಟವಾಗುತ್ತದೆ. ಚಿತ್ರದಲ್ಲಿ ನಟಿಸಿದ ಕಲಾವಿದರಿಗೂ ಹಿನ್ನಡೆ ಕಟ್ಟಿಟ್ಟಬುತ್ತಿ. ಆದರೆ 'ಜನನಾಯಗನ್' ಸಿನಿಮಾ ಬಿಡುಗಡೆಗೂ ಮುನ್ನ ಆನ್ಲೈನ್ನಲ್ಲಿ ಲೀಕ್ ಆಗಿದ್ದು ನಟ ವಿಜಯ್ಗೆ ಲಾಭವಾಗಿದೆ ಎನ್ನುವ ಚರ್ಚೆ ಶುರುವಾಗಿದೆ. ತಮಿಳಗ ವೆಟ್ರಿ ಕಳಗಂ
ಯಶ್ ಹಾಗೂ ಧನಂಜಯ್ ಫ್ಯಾನ್ಸ್ ನಡುವೆ ಕಿರಿಕ್ ಕಾರಣ ಏನು? ಹೆಚ್ಚಾಯ್ತು ಫ್ಯಾನ್ ವಾರ್!
ಸೋಶಿಯಲ್ ಮೀಡಿಯಾದಲ್ಲಿ ಸ್ಟಾರ್ ನಟರ ಅಭಿಮಾನಿಗಳ ನಡುವೆ ಕೆಸರೆರಚಾಟ ಹೊಸದೇನಲ್ಲ. ದಶಕಗಳಿಂದ ಸ್ಟಾರ್ ವಾರ್, ಫ್ಯಾನ್ಸ್ ನಡೆಯುತ್ತಲೇ ಇದೆ. ಇತ್ತೀಚೆಗೆ ಫೇಸ್ಬುಕ್, ಇನ್ಸ್ಟಾಗ್ರಾಮ್ ಹಾಗೂ ಟ್ವಿಟ್ಟರ್ ಅದಕ್ಕೆ ವೇದಿಕೆ ಆಗುತ್ತಿದೆ. ತಮ್ಮ ನಟ ಹೆಚ್ಚು ಎಂದು ಬಡಾಯಿ ಕೊಚ್ಚಿಕೊಳ್ಳಲು ಒಬ್ಬ ನಟನ ಬಗ್ಗೆ ಒಬ್ಬರು ಟ್ರೋಲ್ ಮಾಡಿ ಪೋಸ್ಟ್ ಹಾಕುವುದು. ಅದಕ್ಕೆ ಪರ ವಿರೋಧ ಚರ್ಚೆ ನಡೆಯುವುದು.
ಸಾಮಾನ್ಯ ಜ್ಞಾನ ತುಂಬಾನೇ ಮುಖ್ಯ. ಯಾಕೆಂದರೆ ಜ್ಞಾನ ಸಾಮಾನ್ಯವಾದರು ಅದು ಅಸಮಾನ್ಯ. ಮನುಷ್ಯನಲ್ಲಿ ಇರಲೇಬೇಕಾದ ಪ್ರಮುಖ ಗುಣ. ಆದರೆ.. ಈ ಜ್ಞಾನ ಪಠ್ಯ ಪುಸ್ತಕದಲ್ಲಿ ಲಭ್ಯ ಇರುವುದಿಲ್ಲ. ಪರೀಕ್ಷೆಯಲ್ಲಿ ಪ್ರಶ್ನೆ ಕೂಡ ಬರುವುದಿಲ್ಲ. ಹೀಗಾಗಿ ಹಲವರು ಪಠ್ಯಕ್ಕೆ ಮಾತ್ರ ಸೀಮಿತವಾಗುತ್ತಾರೆ ಹೊರತು ಸಾಮಾನ್ಯ ಜ್ಞಾನ ಬೆಳೆಸಿಕೊಳ್ಳುವ ಉತ್ಸಾಹ ತೋರಿಸುವುದಿಲ್ಲ. ಜೀವನಾನುಭವದ ಮೂಲಕ ಬೇರೆ ಪ್ರಶ್ನೆಗಳಿಗೆ ಉತ್ತರ ಹುಡುಕುವ
ರಜನಿಕಾಂತ್ ಹಾಗೂ ಕಮಲ್ ಹಾಸನ್ಗೆ ಕೈಕೊಟ್ಟ ಮತ್ತೊಬ್ಬ ನಿರ್ದೇಶಕ?
ಸ್ಟಾರ್ ನಟರ ಜೊತೆ ಸಿನಿಮಾ ಮಾಡುವುದು ಅಷ್ಟು ಸುಲಭವಲ್ಲ. ನಟನ ಇಮೇಜ್ ಗಮನದಲ್ಲಿಟ್ಟುಕೊಂಡು ಕಥೆ ಮಾಡಬೇಕು, ಅಭಿಮಾನಿಗಳನ್ನು ರಂಜಿಸುವ ಕಮರ್ಷಿಯಲ್ ಅಂಶಗಳನ್ನು ಸೇರಿಸಬೇಕು. ಕೊಂಚ ಎಡವಟ್ಟು ಆದರೂ ನೂರಾರು ಕೋಟಿ ರೂಪಾಯಿ ನಷ್ಟವಾಗುವ ಆತಂಕ ಇರುತ್ತದೆ. ಇದೇ ಕಾರಣಕ್ಕೆ ಸ್ಟಾರ್ಗಳ ಜೊತೆ ಸಿನಿಮಾ ಅಂದ್ರೆ ಫಿಲ್ಮ್ ಮೇಕರ್ಸ್ಗೆ ಕತ್ತಿಯ ಅಲಗಿನ ಮೇಲೆ ನಡೆಯುವುದು ನಡೆಯುವಂತಾಗುತ್ತದೆ. ಸೂಪರ್ ಸ್ಟಾರ್
ಆರ್ಸಿಬಿ ಎದುರು ಮುಂಬೈ ಇಂಡಿಯನ್ಸ್ ಸೋಲುತ್ತಿದ್ದಂತೆ ಜೆರ್ಸಿ ಬದಲಿಸಿದ್ರಾ ನಟಿ ಕರೀನಾ ಕಪೂರ್?
ಐಪಿಎಲ್ ಟೂರ್ನಿ ಆರ್ಭಟ ಜೋರಾಗಿದೆ. ಇನ್ನು ಒಂದೂವರೆ ತಿಂಗಳು ಚುಟುಕು ಕ್ರಿಕೆಟ್ ಆಟದ ವೈಭವ ಮುಂದುವರೆಯಲಿದೆ. ಹಾಲಿ ಚಾಂಪಿಯನ್ ಆರ್ಸಿಬಿ ತಂಡ ಆಡಿದ 4 ಪಂದ್ಯಗಳಲ್ಲಿ 3 ಪಂದ್ಯಗಳಲ್ಲಿ ಗೆದ್ದು ಬೀಗಿದೆ. ಮತ್ತೊಮ್ಮೆ ತಂಡ ಟ್ರೋಫಿ ಮೇಲೆ ಕಣ್ಣಿಟ್ಟಿದೆ. ಭಾನುವಾರ(ಏಪ್ರಿಲ್ 12) ವಾಂಕೆಡೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮುಂಬೈ ಎದುರು ಆರ್ಸಿಬಿ ಜಯಭೇರಿ ಬಾರಿಸಿತ್ತು. ಕರೀನಾ ಕಪೂರ್
ಕನ್ನಡ ನಿರ್ದೇಶಕನ ಚಿತ್ರಕ್ಕಾಗಿ ಸಿಕ್ಸ್ಪ್ಯಾಕ್ ಮಾಡಿ ತಯಾರಾದ ಪ್ಯಾನ್ ಇಂಡಿಯಾ ಸ್ಟಾರ್
ತೆರೆಮೇಲೆ ನಾಯಕ ನಟರು ಖಡಕ್ ಆಗಿ ಕಾಣಿಸಿಕೊಳ್ಳಬೇಕು. ಸಿಕ್ಸ್ ಪ್ಯಾನ್ ಹ್ಯಾಬ್ಸ್ ಮಾಡಿ ಕಿಡಿಗೇಡಿಗಳ ಬೆಂಡೆತ್ತಿದ್ದರೆ ಅಭಿಮಾನಿಗಳಿಗೆ ಹಬ್ಬವೇ ಸರಿ. ಹಿಂದಿಯಲ್ಲಿ ಸಲ್ಮಾನ್ ಖಾನ್, ಆಮೀರ್ ಖಾನ್, ಹೃತಿಕ್ ರೋಷನ್, ತೆಲುಗಿನಲ್ಲಿ ಅಲ್ಲು ಅರ್ಜುನ್, ರಾಮ್ಚರಣ್, ಪ್ರಭಾಸ್, ರಾಣ ತಮಿಳಿನಲ್ಲಿ ಸೂರ್ಯ, ವಿಶಾಲ್ ಹೀಗೆ ತೆರೆಮೇಲೆ ಹುರುಗಟ್ಟಿದ ದೇಹ ಪ್ರದರ್ಶಿಸಿ ಹುಬ್ಬೇರಿಸಿದ್ದಾರೆ. ಕನ್ನಡದಲ್ಲಿ ಪುನೀತ್ ರಾಜ್ಕುಮಾರ್, ಸುದೀಪ್,
'ಜನನಾಯಗನ್' ರೀತಿ 'ಕೆಡಿ'ಗೂ ಎದುರಾಯ್ತು ಸೆನ್ಸಾರ್ ಕಂಟಕ; ರಿವೈಸಿಂಗ್ ಕಮಿಟಿ ಅಂಗಳದಲ್ಲಿ ಪ್ರೇಮ್ ಸಿನಿಮಾ
KVN ಪ್ರೊಡಕ್ಷನ್ಸ್ ಸಂಸ್ಥೆ ನಿರ್ಮಾಣದ 'ಕೆಡಿ' ಸಿನಿಮಾ ಬಿಡುಗಡೆಗೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಇನ್ನು ಬಿಡುಗಡೆಗೆ ಎರಡು ವಾರಗಳು ಇರುವುದರಿಂದ 'ಕೆಡಿ'ಗೆ ಸೆನ್ಸಾರ್ ಪ್ರಕ್ರಿಯೆ ಆರಂಭ ಆಗಿದೆ. ಈ ಹಂತದಲ್ಲಿ ಕೆವಿಎನ್ ಪ್ರೊಡಕ್ಷನ್ಸ್ಗೆ ಮತ್ತೊಂದು ಸಮಸ್ಯೆ ಎದುರಾಗಿದೆ. 'ಜನ ನಾಯಗನ್'ಗೆ ಸೆನ್ಸಾರ್ ಸಮಸ್ಯೆ ಎದುರಾದಂತೆ 'ಕೆಡಿ'ಗೂ ಎದುರಾಗುವ ಸಾಧ್ಯತೆಯಿದೆ ಎಂದು ಹೇಳಾಗುತ್ತಿದೆ. ಜೋಗಿ ಪ್ರೇಮ್ ನಿರ್ದೇಶನದಲ್ಲಿ ಧ್ರುವ ಸರ್ಜಾ,
ಮತ್ತೊಂದು ಚಿತ್ರಕ್ಕೆ ಸೈ ಎಂದ ದಳಪತಿ; ಕನ್ನಡ ನಿರ್ಮಾಣ ಸಂಸ್ಥೆ ಕೈ ಹಿಡಿದ ವಿಜಯ್?
ತಮಿಳುನಾಡಿನಲ್ಲಿ ಚುನಾವಣೆ ಕಣ ರಂಗೇರಿದೆ. ಈ ಬಾರಿ ತಮಿಳು ನಟ ವಿಜಯ್ ಕೂಡ ಅಖಾಡಕ್ಕೆ ಇಳಿದಿರುವುದು ಕುತೂಹಲ ಮೂಡಿಸಿದೆ. 'ಜನನಾಯಗನ್' ಚಿತ್ರವನ್ನು ಪಕ್ಷದ ಪ್ರಚಾರಕ್ಕಾಗಿ ಬಳಸಿಕೊಳ್ಳಲು ದಳಪತಿ ಮನಸ್ಸು ಮಾಡಿದ್ದರು. ಆದರೆ 4 ತಿಂಗಳು ಕಳೆದರೂ ಸಿನಿಮಾ ಬಿಡುಗಡೆ ಆಗಲಿಲ್ಲ. ಈಗ ಆನ್ಲೈನ್ನಲ್ಲಿ ಲೀಕ್ ಆಗಿ ವಿವಾದ ಹುಟ್ಟಾಕ್ಕಿದೆ. ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ಭಾರೀ ಬಜೆಟ್ನಲ್ಲಿ 'ಜನನಾಯಗನ್'
ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಪ್ರೀತಿಯ ಅರ್ಥವೂ ಬದಲಾಗಿದೆ. ಹಿಂದೆ ಪ್ರೀತಿ ಅಂದರೆ ಭಾವನಾತ್ಮಕವಾದ ಬಂಧ ಆಗಿತ್ತು. ಮನದ ಮಾತುಗಳಿಗೆ ಅಕ್ಷರದ ರೂಪ ನೀಡಲಾಗುತ್ತಿತ್ತು. ಪ್ರೇಮ ಪತ್ರವನ್ನು ಬರೆಯಲಾಗುತ್ತಿತ್ತು. ಆದರೆ ಈಗ ನಂಬಿಕೆ .. ಗೌರವ .. ಬದ್ದತೆ .. ಪ್ರೀತಿಯಲ್ಲಿ ಕಣ್ಮರೆಯಾಗಿದೆ. ಲೈಕ್ ಮತ್ತು ಸೋಶಿಯಲ್ ಮೀಡಿಯಾದ ಮೆಸೆಂಜರ್ ನ ಬಾಗಿಲಿಗೆ ಪ್ರೀತಿ ಬಂದು
ಶೂಟಿಂಗ್ ಸೆಟ್ನಲ್ಲೇ ನಟಿಯಿಂದ ಎಣ್ಣೆ - ಸಿಗರೇಟ್ಗೆ ಡಿಮ್ಯಾಂಡ್ ; 80 ಸಾವಿರ ನಷ್ಟ ಆಯ್ತು ಎಂದ ನಿರ್ದೇಶಕ
ಚಿತ್ರರಂಗದಲ್ಲಿ ತೆರೆಮರೆಯ ಹಿಂದೆ ಹಲವು ಕಥೆಗಳಿರುತ್ತವೆ. ಆ ಕಥೆಗಳು ಹೊರ ಜಗತ್ತಿಗೆ ಗೊತ್ತಾಗುವುದಿಲ್ಲ ಅಷ್ಟೇ. ಕೊಡು-ಕೊಳ್ಳು ವ್ಯವಹಾರದಲ್ಲಿ ಆಚೀಚೆ ಆದಾಗ, ಯಾವುದೋ ಕಾರಣಕ್ಕೆ ಮನಸ್ತಾಪ ಮನೆ ಮಾಡಿದಾಗ ಅಥವಾ ಇನ್ಯಾವದ್ದೋ ಕಾರಣಕ್ಕೆ ಭಿನ್ನಾಭಿಪ್ರಾಯ ಭುಗಿಲೆದ್ದಾಗ ಮಾತ್ರ ಈ ತೆರೆಯ ಹಿಂದಿನ ಈ ಕಥೆಗಳು ಮುನ್ನೆಲೆಗೆ ಬರುತ್ತವೆ. ಆಗ ಆರೋಪ-ಪ್ರತ್ಯಾರೋಪದ ಸರಣಿ ಬಹಿರಂಗವಾಗಿ ಶುರುವಾಗುತ್ತೆ. ಇದಕ್ಕೆ ಉದಾಹರಣೆಯೇ ಮಲಯಾಳಂನಲ್ಲಿ
ಅಭಿಮಾನಿ ಎಸೆದ ಹೂವನ್ನು ಬಾಂಬ್ ಎಂದುಕೊಂಡು ಎದ್ನೋ ಬಿದ್ನೋ ಎಂದು ಓಡಿ ಹೋದ ವಿಜಯ್
ನಮ್ಮ ದೇಶದಲ್ಲಿ ಚಿತ್ರರಂಗದಲ್ಲಿ ಮಿಂಚುವುದು, ಸೂಪರ್ ಸ್ಟಾರ್ ಸ್ಥಾನಕ್ಕೇರುವುದು ಸುಲಭ ಅಲ್ಲ. ಅದೊಂದು ತಪಸ್ಸು. ಅದೊಂದು ಸಾಹಸ. ಇಲ್ಲಿ ಬೆಳೆಯುವವರೆಗೆ ಒಂದು ಲೆಕ್ಕ ಆದರೆ ಬೆಳೆದ ನಂತರದ್ದು ಮತ್ತೊಂದು ಲೆಕ್ಕ. ಅಭಿಮಾನದ ಅಲೆಗಳ ನಡುವೆ ಈಜುವುದೇ ಇಲ್ಲಿ ಕಷ್ಟ. ಮನೆಯ ಹೊರಗಡೆ ಬಂದರೆ ಸಾಕು, ಸಕ್ಕರೆಗೆ ಇರುವೆ ಮುತ್ತಿಕೊಂಡಂತೆ ಜನ ಮುತ್ತಿಕೊಳ್ಳುತ್ತಾರೆ. ಕೆಲ ಒಮ್ಮೆ ಈ ಅತಿಯಾದ
ಆರ್ಎಸ್ಎಸ್ - ಜೆಎನ್ಯು ; ಸೈದ್ಧಾಂತಿಕ ಸಂಘರ್ಷ- ದೀಪಿಕಾ ಪಡುಕೋಣೆ - ರಣ್ವೀರ್ ಸಿಂಗ್ ದಾಂಪತ್ಯದಲ್ಲಿ ಬಿರುಕು ?
ಚಿತ್ರರಂಗದವರ ಪಾಲಿಗೆ ಮದುವೆ ಎನ್ನುವುದು ಕೇವಲ ಇಬ್ಬರು ವ್ಯಕ್ತಿಗಳ ಮಿಲನ ಅಲ್ಲ. ಅದೊಂದು ಬ್ಯ್ರಾಂಡ್. ಮದುವೆಯಾಗುವ ವಾರದ ಮೊದಲೇ ಈ ಬ್ಯ್ರಾಂಡ್ನ ಪ್ರಚಾರವನ್ನು ಇಲ್ಲಿ ಹಲವರು ಮಾಡುತ್ತಾರೆ. ತಮ್ಮ ಮದುವೆಯ ಸಂಭ್ರಮದ ಕ್ಷಣಗಳನ್ನು ಮೂರು ಕಾಸಿಗೆ ಮಾರಿಕೊಳ್ಳುತ್ತಾರೆ. ಕುಂತರು ಸುದ್ದಿ. ನಿಂತರು ಸುದ್ದಿ. ಈ ಕಾರಣಕ್ಕೆ ಹಲವರು ಮದುವೆಯ ನಂತರ ಇವರ ಮೇಲೆ ಹದ್ದಿನ ಕಣ್ಣಿಡುತ್ತಾರೆ. ಇವರು

33 C