4 ವರ್ಷದ ನಂತರ ಸಂಗೀತ ಸಾಮ್ರಾಜ್ಯದ ಸುಲ್ತಾನರನ್ನು ಕಣ್ತುಂಬಿಕೊಂಡ ಎರಡೂವರೆ ಲಕ್ಷ ಜನ ; ಐತಿಹಾಸಿಕ ದಾಖಲೆ
ಮನುಷ್ಯಕುಲದ ವ್ಯಾಕುಲಗಳನ್ನು ದೂರ ಮಾಡುವ ಶಕ್ತಿ ಸಂಗೀತಕ್ಕೆ ಇದೆ. ವಿಶ್ವದೆಲ್ಲೆಡೆ ಈ ಸಂಗೀತ ಪರಂಪರೆ ವಿಭಿನ್ನ. ವೈವಿಧ್ಯಮಯ ಸಂಗೀತಕ್ಕೆ ಕುಣಿದು ಕುಪ್ಪಳಿಸುವ ಬಹುದೊಡ್ಡ ವರ್ಗವೇ ಇದೆ. ಇದಕ್ಕೆ ಸದ್ಯ ''ಬಿಟಿಎಸ್'' ತಂಡದ ಸಂಗೀತ ಕಾರ್ಯಕ್ರಮದಲ್ಲಿ ಕಂಡು ಬಂದ ಜನಜಂಗುಳಿ ಸದ್ಯದ ಉದಾಹರಣೆ. ಹೌದು, ''ಬಿಟಿಎಸ್'' ಅರ್ಥಾತ್ 'ಬಾಂಗ್ಟನ್ ಸೋನ್ಯೋಂದನ್' ಅಂದರೆ 'ಬುಲೆಟ್ ಪ್ರೂಫ್ ಬಾಯ್ ಸ್ಕೌಟ್ಸ್'. ದಕ್ಷಿಣ
Bhavana Ramanna: ಭಾವನಾ ರಾಮಣ್ಣ ಮಗಳ ನಾಮಕರಣ; ಅಜ್ಜಿ ರುಕ್ಮಿಣಿಯ ಹೆಸರಿಟ್ಟ ನಟಿ
ಸ್ಯಾಂಡಲ್ವುಡ್ನ ಹಿರಿಯ ನಟಿ ಭಾವನಾ ರಾಮಣ್ಣ ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಐವಿಎಫ್ ಮೂಲಕ ಮಗುವನ್ನು ಪಡೆಯಲು ಮುಂದಾಗಿದ್ದ ಭಾವನಾ ಕರ್ನಾಟಕದಲ್ಲಿ ಸಂಚಲನವನ್ನು ಸೃಷ್ಟಿಸಿದ್ದರು. ಇವರು ಐವಿಎಫ್ ಮೂಲಕ ಮಗುವನ್ನು ಪಡೆಯುವುದಕ್ಕೆ ಭಯ ಬೀಳುತ್ತಿದ್ದ ಹೆಣ್ಣು ಮಕ್ಕಳಿಗೆ ಧೈರ್ಯ ತುಂಬಿಸಿದ್ದರು. ಇವರ ಗಟ್ಟಿ ನಿರ್ಧಾರದ ಬಗ್ಗೆ ಸ್ಯಾಂಡಲ್ವುಡ್ ಮಂದಿ ಮೆಚ್ಚುಗೆಯನ್ನು
ಆಸ್ಕರ್ ನಾಮನಿರ್ದೇಶಿತ 'ದಿ ವಾಯ್ಸ್ ಆಫ್ ಹಿಂದ್ ರಜಬ್' ಸಾಕ್ಷ್ಯಚಿತ್ರಕ್ಕೆ ಭಾರತದಲ್ಲಿ ನಿರ್ಬಂಧ
► “ಭಾರತ-ಇಸ್ರೇಲ್ ಸಂಬಂಧಕ್ಕೆ ಧಕ್ಕೆಯಾಗಬಹುದು ಎಂದು ಚಿತ್ರ ಬಿಡುಗಡೆಗೆ ತಡೆ”► ಗಾಝಾದ 5 ವರ್ಷದ ಮಗುವಿನ ಕೊನೆಯ ಕ್ಷಣಗಳನ್ನು ಆಧರಿಸಿ ನಿರ್ಮಿಸಿದ್ದ ಚಿತ್ರ
4 ರೊಮ್ಯಾನ್ಸ್, 2 ಲಿವ್-ಇನ್ ಸಂಬಂಧ, 2 ಡಿವೋರ್ಸ್ ; 62ನೇ ವರ್ಷದಲ್ಲಿ 3ನೇ ಮದುವೆಗೆ ರೆಡಿಯಾದ ಖ್ಯಾತ ನಟಿ
ಪ್ರೀತಿ ವಿಷಯದಲ್ಲಿ ಕೆಲವೊಮ್ಮೆ ಕೆಲವರು ಸೋತು ಹೋಗುತ್ತಾರೆ. ಯಾವುದೋ ಕಾರಣಕ್ಕೆ ಪ್ರೀತಿಯನ್ನು ಕಳೆದುಕೊಳ್ಳುತ್ತಾರೆ. ಯಾರದು ಸರಿ ಯಾರದು ತಪ್ಪು ಅಂತ ಇನ್ನೊಬ್ಬರೊಂದಿಗೆ ಹಂಚಿಕೊಂಡು ಕೂರುವ ಕಾಲ ಅದಾಗಿರುವುದಿಲ್ಲ. ಹಾಗಂಥ ಸುಮ್ಮನೆ ಕೂರಲು ಕೂಡ ಆಗುವುದಿಲ್ಲ. ಯಾಕೆಂದರೆ ಜಗವೇ ಒಂದು ನಾಟಕರಂಗ. ಸರಳ ರೇಖೆಯಂತೆ ಬದುಕು ಸಾಗುತ್ತಿರಬೇಕು. ಯಾರ ಬಗ್ಗೆ ಆಲೋಚನೆ ಮಾಡದೇ ಮುನ್ನಡೆಯುತ್ತಿರಬೇಕು. ಇದಕ್ಕೆ ಕುನಿಕಾ ಸದಾನಂದ್
ಅವಕಾಶ ಬೇಕಂದ್ರೆ ಅಡ್ಜಸ್ಟ್ ಮಾಡ್ಕೊಳ್ಳಿ ಅಂತಾರೆ ; 7ನೇ ಕ್ಲಾಸ್ನಲ್ಲೇ ಕಹಿ ಅನುಭವ - ಬಿಗ್ ಬಾಸ್ ಸ್ಫರ್ಧಿ ಭಾವುಕ
ಹೆಣ್ಣಿನ ಮೇಲೆ ಗಂಡಿನ ಶೋಷಣೆ, ಅತ್ಯಾಚಾರದ ಕುರಿತ ಸುದ್ದಿಗಳನ್ನು ನಾವು ದಿನನಿತ್ಯ ಓದುತ್ತಲೇ ಇದ್ದೇವೆ, ಕೇಳುತ್ತಲೇ ಇದ್ದೇವೆ. ಪ್ರಪಂಚದಾದ್ಯಂತ ಲಕ್ಷಾಂತರ ಮಹಿಳೆಯರು, ಹುಡುಗಿಯರು, ದೈಹಿಕ ಮತ್ತು ಲೈಂಗಿಕ ಹಿಂಸೆ ಅನುಭವಿಸಿದ್ದಾರೆ. ಇನ್ನೂ ಅನುಭವಿಸುತ್ತಲೇ ಇದ್ದಾರೆ. ಕೆಲವರು ಮುಂದೆ ಬಂದು ತಮ್ಮ ಮೇಲಾದ ದೌರ್ಜನ್ಯದ ವಿರುದ್ದ ಹೋರಾಡುತ್ತಾರೆ, ಇನ್ನು ಕೆಲವರು ವ್ಯವಸ್ಥೆಯ ವಿರುದ್ದ ಹೋರಾಡಲು ಆ ಕ್ಷಣಕ್ಕೆ ಸಾಧ್ಯವಾಗದೇ
ʼಧುರಂಧರ್ʼ ಸಿನಿಮಾವನ್ನು ಪ್ರಶಂಸಿಸಿದ ತೆಲುಗು ನಟರನ್ನು ತರಾಟೆಗೆ ತೆಗೆದುಕೊಂಡ ಪ್ರಕಾಶ್ ರಾಜ್
ಈ ಚಿತ್ರ ವೀಕ್ಷಿಸಲು ಹಣ, ಸಮಯ ಎರಡನ್ನೂ ವ್ಯರ್ಥಮಾಡಬೇಡಿ ಎಂದ ನಟಿ ರಮ್ಯಾ
ಗಂಡ ಗೆದ್ದರೂ ಹೆಂಡತಿಗಿಲ್ಲ ಖುಷಿ ? ‘ಧುರಂಧರ್’ಗೆ ಜೈಕಾರ ಹಾಕಲಿಲ್ಲ ದೀಪಿಕಾ ಪಡುಕೋಣೆ
ಸುಖ ದುಃಖದಲ್ಲಿ ಜೊತೆಯಾಗುವ ಗಂಡ-ಹೆಂಡ್ತಿ ಎಂತಹದ್ದೇ ಕಷ್ಟ ಬಂದರೂ ಜೊತೆಯಾಗಿರುತ್ತಾರೆ. ಮದುವೆ ನಂತರ ಸೋಲು ಕೂಡ ಒಬ್ಬರದ್ದಲ್ಲ. ಗೆಲುವು ಕೂಡ ಒಬ್ಬರದ್ದಲ್ಲ. ಗೆಲುವು-ಸೋಲು ಏನೇ ಇರಲಿ ಅದು ಇಬ್ಬರದ್ದು ಹೌದು. ಗಂಡನ ಸಂಭ್ರಮದಲ್ಲಿ ಹೆಂಡತಿ ಮತ್ತು ಪತ್ನಿಯ ಸಂಭ್ರಮದಲ್ಲಿ ಪತಿ ಜೊತೆಯಾಗಿ ನಿಲ್ಲುವುದೇ ಸಂಸಾರದ ಸುಂದರ ನಿಯಮ. ಹಿಂದೆಯೆಲ್ಲ ಈ ನಿಯಮವನ್ನು ನಾಲ್ಕು ಗೋಡೆಯ ನಡುವೆ ಪಾಲಿಸಲಾಗುತ್ತಿತ್ತು.
ಯುಗಾದಿ ಹಬ್ಬಕ್ಕೆ ಅನಿರೀಕ್ಷಿತವಾಗಿ ತೆರೆಕಂಡವ ಸಿನಿಮಾ 'ಲವ್ ಮಾಕ್ಟೇಲ್ 3'. ಯಶ್ ಸಿನಿಮಾ 'ಟಾಕ್ಸಿಕ್' ಮಾರ್ಚ್ 19ರಂದು ರಿಲೀಸ್ ಆಗಬೇಕಿತ್ತು. ಆದರೆ, ರಿಲೀಸ್ ಪೋಸ್ಟ್ಪೋನ್ ಆಗಿದ್ದರಿಂದ ಡಾರ್ಲಿಂಗ್ ಕೃಷ್ಣ ನಿರ್ದೇಶಿಸಿದ ಮೋಸ್ಟ್ ಎಕ್ಸ್ಪೆಕ್ಟೆಡ್ ಸಿನಿಮಾ 'ಲವ್ ಮಾಕ್ಟೇಲ್ 3' ನಿರೀಕ್ಷೆಗಿಂತ ಮೊದಲೇ ರಿಲೀಸ್ ಮಾಡಲಾಗಿದೆ. ಕಳೆದ ಎರಡು ಸೀಕ್ವೆಲ್ಗಳು ಹಿಟ್ ಆಗಿದ್ದರಿಂದ 3ನೇ ಸೀಕ್ವೆಲ್ ಬಗ್ಗೆನೂ ನಿರೀಕ್ಷೆ
Bhagyalakshmi: ಕುಸುಮಾ ಸ್ಕೆಚ್ಗೆ ತಾಂಡವ್ ಉಲ್ಟಾ ರಿಯಾಕ್ಷನ್; ಭಾಗ್ಯ-ಆದಿ ಮದುವೆ ಮಾಡಿಸ್ತಾನಾ ತಾಂಡವ್?
ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿ 'ಭಾಗ್ಯಲಕ್ಷ್ಮಿ' ಈಗ ಕುತೂಹಲಕಾರಿ ಘಟ್ಟಕ್ಕೆ ಬಂದು ನಿಂತಿದೆ. ಇಂದಿನ ಪ್ರೋಮೋದಲ್ಲಿ ಪ್ರೇಕ್ಷಕರು ನಿರೀಕ್ಷಿಸದ ದೊಡ್ಡ ಟ್ವಿಸ್ಟ್ ಒಂದು ಎದುರಾಗಿದೆ. ಇಡೀ ಕುಟುಂಬವೇ ಶಾಕ್ ಆಗುವಂತಹ ನಿರ್ಧಾರವನ್ನು ಕುಸುಮಾ ತೆಗೆದುಕೊಂಡಿದ್ದಾರೆ. ಈ ಬೆಳವಣಿಗೆಯಿಂದ ತಾಂಡವ್ ಅಕ್ಷರಶಃ ಕಂಗಾಲಾಗಿದ್ದಾನೆ. ಮನೆಯಲ್ಲಿ ನಡೆಯುತ್ತಿರುವ ಈ ಹೈಡ್ರಾಮಾ ಈಗ ಎಲ್ಲರ ಗಮನ ಸೆಳೆಯುತ್ತಿದೆ. ಭಾಗ್ಯ ಮತ್ತು ಆದಿ
ಭಗವದ್ಗೀತೆಯನ್ನು ನಿಮ್ಮಷ್ಟಕ್ಕೆ ತಿರುಚಿ ದ್ವೇಷ ಹರಡಬೇಡಿ; 'ಧುರಂಧರ್-2' ಬಗ್ಗೆ ಮತ್ತೆ ರಮ್ಯಾ ಕಾಮೆಂಟ್
'ಧುರಂಧರ್' ಸಿನಿಮಾ ಬಗ್ಗೆ ಪರ ವಿರೋಧ ಚರ್ಚೆ ನಡೀತಿದೆ. ನಟಿ ರಮ್ಯಾ ಕೂಡ ಸಿನಿಮಾ ನೋಡಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಸಿನಿಮಾ ನೋಡಿದ್ರೆ ನಿಮ್ಮ ಹಣ ವ್ಯರ್ಥ, ನಿದ್ದೆ ಬರಿಸುವಂತಿದೆ. ಕೆಲ ಸನ್ನಿವೇಶಗಳ ತಮಾಷೆ ಎನಿಸುತ್ತದೆ ಎಂದು ಕಾಮೆಂಟ್ ಮಾಡಿದ್ದರು. ಆಕೆಯ ರಿವ್ಯೂ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ಶುರುವಾಗಿದೆ. ಕೆಲವರು ಆಕೆಯ ರಿವ್ಯೂ ನೋಡಿ
ರಾಮ್ ಚರಣ್ ಬರ್ತ್ಡೇಗೆ 'ಕುಸ್ತಿ' ಫಿಕ್ಸ್: 'ಪೆದ್ದಿ' ಟೀಸರ್ ರಿಲೀಸ್ ಡೇಟ್ ಔಟ್; ಫ್ಯಾನ್ಸ್ಗೆ ಹಬ್ಬವೋ ಹಬ್ಬ…
ಗ್ಲೋಬಲ್ ಸ್ಟಾರ್ ರಾಮ್ ಚರಣ್ ಅಭಿಮಾನಿಗಳಿಗೆ ಈಗ ಹಬ್ಬದ ಸಂಭ್ರಮ. ಮಾರ್ಚ್ 27 ಬಂತೆಂದರೆ ಸಾಕು, ಮೆಗಾ ಪವರ್ ಸ್ಟಾರ್ ಫ್ಯಾನ್ಸ್ ಸೋಷಿಯಲ್ ಮೀಡಿಯಾದಲ್ಲಿ ಅಬ್ಬರ ಶುರು ಮಾಡುತ್ತಾರೆ. ಈ ಬಾರಿ ಚರಣ್ ಅವರ 41ನೇ ಹುಟ್ಟುಹಬ್ಬಕ್ಕೆ ದೊಡ್ಡ ಉಡುಗೊರೆ ಕಾದಿದೆ ಎಂಬ ಸುದ್ದಿ ಫಿಲ್ಮ್ನಗರ್ನಲ್ಲಿ ಸಖತ್ ಸೌಂಡ್ ಮಾಡುತ್ತಿದೆ. ಹೌದು, ಬುಚ್ಚಿಬಾಬು ಸನಾ ನಿರ್ದೇಶನದ 'ಪೆದ್ದಿ'
ಅವತ್ತು ಹುಲಿ ಎತ್ತಿ ಬಿಸಾಕಿತ್ತು.. ನೆನಸ್ಕೊಂಡ್ರೆ ಮೈ ಜುಮ್ ಅನ್ಸುತ್ತೆ; ಮಧುರ ಸಂಜಯ್
ಪ್ರಾಣಿಗಳನ್ನು ಬಳಸಿಕೊಂಡು ಸಿನಿಮಾ ಚಿತ್ರೀಕರಣ ಮಾಡುವುದು ಅಷ್ಟು ಸುಲಭವಲ್ಲ. ಆನೆ, ಹುಲಿ, ಸಿಂಹದ ರೀತಿ ವನ್ಯಮೃಗಗಳನ್ನು ಸಿನಿಮಾಗಳಲ್ಲಿ ನೋಡಿ ಜನ ಪುಳಕಗೊಳ್ಳಬಹುದು. ಆದರೆ ಆ ದೃಶ್ಯಗಳನ್ನು ಸೆರೆಹಿಡಿಯಲು ಚಿತ್ರತಂಡ ಕಸರತ್ತು ಅಷ್ಟಿಷ್ಟಲ್ಲ. ಈಗ ವಿಎಫ್ಎಕ್ಸ್, ಸಿಜಿ ಬಳಸಿ ಅಂತಹ ದೃಶ್ಯಗಳನ್ನು ಕಟ್ಟಿಕೊಡುತ್ತಾರೆ. ದಶಕಗಳ ಹಿಂದೆ ಜೀವಂತ ಪ್ರಾಣಿಗಳನ್ನೇ ಬಳಸಿಕೊಂಡು ಒಂದಷ್ಟು ಟ್ರಿಕ್ಸ್ ಬಳಸಿ ಚಿತ್ರೀಕರಣ ಮಾಡಲಾಗ್ತಿತ್ತು. 'ಶಬರಿಮಲೆ
'ಧುರಂಧರ್- 2' ಎದುರು 'ಟಾಕ್ಸಿಕ್' ಬಿಡುಗಡೆ ಮಾಡದೇ ಒಳ್ಳೆ ಕೆಲ್ಸ ಮಾಡಿದ್ರಾ ಯಶ್?
ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಈ ವಾರ 'ಧುರಂಧರ್- 2' ಜೊತೆ ಕನ್ನಡದ 'ಟಾಕ್ಸಿಕ್' ಸಿನಿಮಾ ಕೂಡ ತೆರೆಗಪ್ಪಳಿಸಬೇಕಿತ್ತು. 4 ವರ್ಷಗಳಿಂದ ಯಶ್ ಚಿತ್ರಕ್ಕಾಗಿ ಕಾಯುತ್ತಿದ್ದ ಅಭಿಮಾನಿಗಳು ತೆರೆಮೇಲೆ ರಾಯ ಹಾಗೂ ಟಿಕೆಟ್ ಆಗಿ ರಾಕಿಂಗ್ ಸ್ಟಾರ್ ಆರ್ಭಟ ನೋಡಿ ಎಂಜಾಯ್ ಮಾಡುತ್ತಿದ್ದರು. ಇರಾನ್- ಇಸ್ರೇಲ್ ಯುದ್ಧದ ನೆಪವೊಡ್ಡಿ ಸಿನಿಮಾ ಬಿಡುಗಡೆ 3 ತಿಂಗಳು ಮುಂದೂಡಲಾಗಿದೆ. ಮಾರ್ಚ್ 19ಕ್ಕೆ
ಕನ್ನಡದ ಜನಪ್ರಿಯ ಸಿನಿಮಾ ಗೀತೆ ಹಂಚಿಕೊಂಡು ಪ್ರಧಾನಿ ನರೇಂದ್ರ ಮೋದಿ ಸಂದೇಶ
ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದ ಜನತೆಗೆ ಕನ್ನಡದಲ್ಲಿ ಯುಗಾದಿ ಹಬ್ಬದ ಶುಭಾಶಯ ಕೋರಿದ್ದರು. ಇದೀಗ ಕನ್ನಡದ ಜನಪ್ರಿಯ ಗೀತೆಯನ್ನು ಟ್ವಿಟರ್ನಲ್ಲಿ ಹಂಚಿಕೊಂಡು ಚೈತ್ರ ನವರಾತ್ರಿ ಸಂದೇಶ ಸಾರಿದ್ದಾರೆ. ಇದು ಕನ್ನಡಿಗರ ಗಮನ ಸೆಳೆದಿದೆ. 'ಶ್ರೀಕೃಷ್ಣ ದೇವರಾಯ' ಚಿತ್ರದ 'ಶ್ರೀ ಚಾಮುಂಡೇಶ್ವರಿ' ಹಾಡಿನ ಯೂಟ್ಯೂಬ್ ಲಿಂಕ್ ಅನ್ನು ಪ್ರಧಾನಿ ಮೋದಿ ಪೋಸ್ಟ್ ಮಾಡಿದ್ದಾರೆ. ಜಗತ್ಜನನಿ ಮಾತೆಯ ಮೇಲಿನ
Dhurandhar-2 Day 2 Boxoffice: 2ನೇ ದಿನ 'ಧುರಂದರ್' ಆರ್ಭಟ ಹೇಗಿತ್ತು? ಕರ್ನಾಟಕದಲ್ಲಿ ಗಳಿಸಿದ್ದೆಷ್ಟು?
ಆದಿತ್ಯಧರ್ ನಿರ್ದೇಶನದ 'ಧುರಂಧರ್'-2 ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡ್ತಿದೆ. ಕೆಲವರು ಪ್ರಾಪೊಗಂಡಾ ಸಿನಿಮಾ ಎಂದು ಆರೋಪಿಸಿದರೂ ಪ್ರೇಕ್ಷಕರು ಮೆಚ್ಚಿ ಕೊಂಡಾಡುತ್ತಿದ್ದಾರೆ. ಮೊದಲ ಭಾಗಕ್ಕೆ ಹೋಲಿಸಿದರೆ ಎರಡನೇ ಭಾಗ ನಿರೀಕ್ಷೆ ತಲುಪುವಲ್ಲಿ ಕೊಂಚ ಹಿಂದೆ ಬಿದ್ದಿದೆ. ಆದರೂ ಹೆಚ್ಚು ಕಮ್ಮಿ 4 ಗಂಟೆ ಸಿನಿಮಾ ಪ್ರೇಕ್ಷಕರನ್ನು ಹಿಡಿದು ಕೂರಿಸುವಲ್ಲಿ ಸಕ್ಸಸ್ ಕಂಡಿದೆ. ಒಂದು ವರ್ಗದ ಪ್ರೇಕ್ಷಕರು 'ಧುರಂಧರ್'-2 ಕೊಂಡಾಡುತ್ತಿದ್ದಾರೆ.
'ಉಸ್ತಾದ್ ಭಗತ್ ಸಿಂಗ್' ಸಿನಿಮಾ ಚೆನ್ನಾಗಿಲ್ಲ ಎಂದವನಿಗೆ ಪವನ್ ಫ್ಯಾನ್ಸ್ ಗೂಸಾ- ವೀಡಿಯೋ
ಅಭಿಮಾನ ಯಾವತ್ತೂ ಎಲ್ಲೆ ಮೀರಬಾರದು. ಅತಿಯಾದ ಅಭಿಮಾನ ಅನರ್ಥಗಳಿಗೆ ಕಾರಣವಾಗಿಬಿಡುತ್ತದೆ. ಸಿನಿಮಾ ನೋಡಿ ಅಭಿಪ್ರಾಯ ವ್ಯಕ್ತಪಡಿಸುವುದು ಅವರವರ ವೈಯಕ್ತಿಕ. ಆದರೆ ಸಿನಿಮಾ ಚೆನ್ನಾಗಿಲ್ಲ ಎಂದು ಹೇಳಿದವನಿಗೆ ಪವನ್ ಕಲ್ಯಾಣ್ ಅಭಿಮಾನಿಗಳು ಥಿಯೇಟರ್ ಮುಂದೆ ಹಲ್ಲೆ ಮಾಡಿರುವ ಘಟನೆ ನಡೆದಿದೆ. ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ನಟನೆಯ 'ಉಸ್ತಾದ್ ಭಗತ್ ಸಿಂಗ್' ಸಿನಿಮಾ ಈ ವಾರ ತೆರೆಗೆ ಬಂದಿದೆ.
ಮತ್ತೆ ಒಂದಾದ ಕ್ರೇಜಿಸ್ಟಾರ್-ನಾದಬ್ರಹ್ಮ; \ನಮ್ಮಲ್ಲಿ ಬಿರುಕು ಬಿಟ್ಟಾಗ ಸಂಭ್ರಮಿಸಿದ್ದೇ ಹೆಚ್ಚು\ ರವಿಚಂದ್ರನ್
ಕ್ರೇಜಿ ಸ್ಟಾರ್ ರವಿಚಂದ್ರನ್ ಹಾಗೂ ನಾದಬ್ರಹ್ಮ ಹಂಸಲೇಖ ಇಬ್ಬರ ಕಾಂಬಿನೇಷನ್ ಹಿಟ್ ಆದಷ್ಟು ಬೇರಾವುದೇ ಜೋಡಿ ನೋಡಿಲ್ಲ. ಇವರಿಬ್ಬರು ಇದರೂವರೆಗೂ ಒಟ್ಟಿಗೆ ಕ ಕೆಲಸ ಮಾಡಿದ ಸಿನಿಮಾಗಳು ಕನ್ನಡ ಚಿತ್ರರಂಗದಲ್ಲಿ ಕ್ರಾಂತಿಯನ್ನೇ ಮಾಡಿವೆ. 40 ವರ್ಷಗಳಿಂದ ಈ ಜೋಡಿ ನೀಡಿದ ಹಾಡುಗಳು ಇಂದಿನ ಪೀಳಿಗೆಯೂ ಗುನುಗುತ್ತಾರೆ. ಅಷ್ಟೊಂದು ಪ್ರಸ್ತುತ. ಸುಮಾರು 15 ವರ್ಷಗಳಿಂದ ನೀವಿಬ್ಬರೂ ಯಾಕೆ ಸಿನಿಮಾ
'Drishyam- 3'; 'ಟಾಕ್ಸಿಕ್' ಹಾದಿಯಲ್ಲಿ'ದೃಶ್ಯಂ- 3'; ರಿಲೀಸ್ ಡೇಟ್ ಪೋಸ್ಟ್ಪೋನ್
ಒಂದು ಸಿನಿಮಾ ಹೇಳಿದ ಸಮಯಕ್ಕೆ ತೆರೆಗೆ ತರುವುದು ಅಷ್ಟು ಸುಲಭ ಅಲ್ಲ. ಅದಕ್ಕೆ ನಾನಾ ಕಾರಣಗಳಿವೆ. ಸಮಯ, ಸಂದರ್ಭ ಎಲ್ಲಾ ಚಿತ್ರತಂಡದ ಕೈಯಲ್ಲಿ ಇರಲ್ಲ. ಕೆಲವೊಮ್ಮೆ ಅನಿವಾರ್ಯ ಕಾರಣಗಳಿಂದ ಸಿನಿಮಾ ರಿಲೀಸ್ ಮುಂದೂಡಬೇಕಾಗುತ್ತಿದೆ. ಮೋಹನ್ ಲಾಲ್ ನಟನೆಯ 'ದೃಶ್ಯಂ- 3' ಚಿತ್ರ ಕೂಡ ಅದೇ ಹಾದಿಯಲ್ಲಿದೆ. ಏಪ್ರಿಲ್ 2ರಂದು 'ದೃಶ್ಯಂ- 3' ಸಿನಿಮಾ ಘೋಷಣೆ ಮಾಡುವುದಾಗಿ ಬಹಳ
ರೌಡಿ ಶೀಟರ್ ಜೊತೆ ಪಾರ್ಟಿ, ಬಿಲ್ಡಪ್.. ಡಾಗ್ ಸತೀಶ್ ವಿರುದ್ಧ ದೂರ; ರೀಲ್ಸ್ ತಂದ ಸಂಕಷ್ಟ
ಬಿಗ್ ಬಾಸ್ಗೆ ಹೋಗಿ ಬಂದ್ಮೇಲೆ ಡಾಗ್ ಸತೀಶ್ (ಕ್ಯಾಡಬಾಮ್ ಸತೀಶ್) ಸಿಕ್ಕಾಪಟ್ಟೆ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುತ್ತಿದ್ದಾರೆ. ಇತ್ತೀಚೆಗೆ ರೀಲ್ಸ್ ಮಾಡಿ ಕಿಚ್ಚ ಸುದೀಪ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಈಗ ಮತ್ತೊಂದು ರೀಲ್ಸ್ ಮಾಡುವುದಕ್ಕೆ ಹೋಗಿ ಸಂಕಷ್ಟಕ್ಕೆ ಸಿಕ್ಕಿಕಕೊಂಡಿದ್ದಾರೆ. ಪೊಲೀಸ್ ರಾಣೆಯಲ್ಲಿ ಇವರ ವಿರುದ್ಧ ದೂರು ದಾಖಲಾಗಿದೆ. ಇನ್ಸ್ಟಾಗ್ರಾಂ ಹಾಗೂ ಫೇಸ್ಬುಕ್ನಲ್ಲಿ ಡಾಗ್ ಸತೀಶ್ಗೆ ಸಿಕ್ಕಾಪಟ್ಟೆ ಫಾಲೋವರ್ಸ್ ಇದ್ದಾರೆ.
'ಲವ್ ಮಾಕ್ಟೇಲ್' ₹5 ಕೋಟಿ.. 'ಲವ್ ಮಾಕ್ಟೇಲ್ 2' ಗಳಿಸಿದ್ದೆಷ್ಟು? ಡಾರ್ಲಿಂಗ್ ಕೃಷ್ಣ ಕೊಟ್ಟ ಲೆಕ್ಕವೆಷ್ಟು?
ಡಾರ್ಲಿಂಗ್ ಕೃಷ್ಣ ಸಿನಿ ಬದುಕನ್ನೇ ಬದಲಿಸಿದ ಸಿನಿಮಾ 'ಲವ್ ಮಾಕ್ಟೇಲ್' ಅನ್ನೋದು ಈಗಾಗಲೇ ಗೊತ್ತಿರೋ ವಿಷಯ. ಸ್ಯಾಂಡಲ್ವುಡ್ನಲ್ಲಿ ಅವರಿಗೊಂದು ಹಿಟ್ ಸಿನಿಮಾ ಕೊಡುವುದಕ್ಕೆ ಅವರೇ ಸಿನಿಮಾ ನಿರ್ದೇಶನ ಮಾಡಬೇಕಾಗಿದ್ದು ಕೂಡ ವಿಶೇಷ. ಅದೇ ಯಶಸ್ಸು ಈಗ 3ನೇ ಚಾಪ್ಟರ್ವರೆಗೂ ಬಂದು ನಿಂತಿದೆ. 'ಲವ್ ಮಾಕ್ಟೇಲ್' ಸಿನಿಮಾ ಮಾಡೋದು, ಅದನ್ನು ರಿಲೀಸ್ ಮಾಡೋದು ಅಷ್ಟು ಸುಲಭದ ಕೆಲಸ ಆಗಿರಲಿಲ್ಲ.
Latest Ott Releases: ಈ ವಾರ ಓಟಿಟಿಗೆ ಬಂದ ಚಿತ್ರಗಳ ಪಟ್ಟಿ; 3 ಕನ್ನಡ ಚಿತ್ರಗಳನ್ನು ಮಿಸ್ ಮಾಡ್ಬೇಡಿ
ಚಿತ್ರಮಂದಿರಗಳಲ್ಲಿ ಹಿಟ್ ಸಿನಿಮಾಗಳ ಆರ್ಭಟ ನಡೀತಿದೆ. ಒಂದ್ಕಡೆ 'ಧುರಂಧರ್- 2' ಸಿನಿಮಾ ಬಾಕ್ಸಾಫೀಸ್ ಕೊಳ್ಳೆ ಹೊಡೀತಿದೆ. ಕನ್ನಡದಲ್ಲಿ 'ಲವ್ ಮಾಕ್ಟೇಲ್'-3 ದರ್ಬಾರ್ ಜೋರಾಗಿದೆ. ತೆಲುಗಿನ 'ಉಸ್ತಾದ್ ಭಗತ್ ಸಿಂಗ್' ಸಿನಿಮಾ ಕೂಡ ಅಭಿಮಾನಿಗಳ ಮನಗೆದ್ದಿದೆ. ಯುಗಾದಿ, ರಂಜಾನ್ ಹಬ್ಬದ ಸಂಭ್ರಮದಲ್ಲಿ ದೊಡ್ಡ ಸಿನಿಮಾಗಳನ್ನು ಬಿಡುಗಡೆ ಮಾಡಿದ್ದಾರೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ 'ಟಾಕ್ಸಿಕ್' ಸಿನಿಮಾ ಕೂಡ ರಿಲೀಸ್ ಆಗಬೇಕಿತ್ತು.
ಮನೆಗೆ ಕರೆದು ಪುಟಾಣಿ ಅಭಿಮಾನಿಯ ಆಸೆ ಈಡೇರಿಸಿದ ವಿಜಯ್ ದೇವರಕೊಂಡ- ರಶ್ಮಿಕಾ ದಂಪತಿ
ತೆಲುಗು ನಟ ಹಾಗೂ ಕೊಡಗಿನ ನಟಿ ರಶ್ಮಿಕಾ ಮಂದಣ್ಣ 25 ದಿನಗಳ ಹಿಂದೆ ಹೊಸಬಾಳಿಗೆ ಕಾಲಿಟ್ಟಿದ್ದರು. ದೂರದ ಉದಯ್ಪುರದಲ್ಲಿ ಅದ್ಧೂರಿಯಾಗಿ ಮದುವೆ ನಡೆದಿತ್ತು. ಬಳಿಕ ಹೈದರಾಬಾದ್ನಲ್ಲಿ ರಿಸೆಪ್ಷನ್ ಪಾರ್ಟಿ ಕೂಡ ಆಯೋಜಿಸಿದ್ದರು. ವಿಜಯ್ ತಮ್ಮ ಹುಟ್ಟೂರಿಗೆ ಹೋಗಿ ಅಲ್ಲಿನ ಅಭಿಮಾನಿಗಳಿಗೆ ಮದುವೆ ಊಟ ಹಾಕಿಸಿದ್ದರು. ಹೈದರಾಬಾದ್ನ ಖಾಸಗಿ ಹೋಟೆಲ್ನಲ್ಲಿ ಆಯ್ದ ಅಭಿಮಾನಿಗಳನ್ನು ಆಹ್ವಾನಿಸಿ ಮದುವೆ ಊಟ ಹಾಕಿಸಿದ್ದರು.
ತನ್ನ ಹೆಸರ ಮುಂದೆ 'Dr' ಬೇಡ ಅಂದಿದ್ದೇಕೆ ಶ್ರೀಲೀಲಾ? 'ಉಸ್ತಾದ್' ಬೆಡಗಿಯ ಅಚ್ಚರಿಯ ನಿರ್ಧಾರದ ರಹಸ್ಯವೇನು?
ಸ್ಯಾಂಡಲ್ವುಡ್ನಿಂದ ಕೆರಿಯರ್ ಶುರು ಮಾಡಿ ಈಗ ಟಾಲಿವುಡ್ನಲ್ಲಿ ಮಿಂಚುತ್ತಿರುವ ನಟಿ ಶ್ರೀಲೀಲಾ ಸದ್ಯ ಸುದ್ದಿಯಲ್ಲಿದ್ದಾರೆ. ಪವನ್ ಕಲ್ಯಾಣ್ ನಟನೆಯ 'ಉಸ್ತಾದ್ ಭಗತ್ ಸಿಂಗ್' ಸಿನಿಮಾ ನಿನ್ನೆಯಷ್ಟೇ (ಮಾರ್ಚ್ 19, 2026) ಯುಗಾದಿ ಹಬ್ಬದ ಪ್ರಯುಕ್ತ ಅದ್ಧೂರಿಯಾಗಿ ತೆರೆಕಂಡಿದೆ. ಈ ಸಿನಿಮಾದ ಜರ್ನಿ ಅವರಿಗೆ ನಿಜಕ್ಕೂ ಸಖತ್ ಖುಷಿ ಕೊಟ್ಟಿದೆ. ಕಳೆದ ಎರಡು ವರ್ಷಗಳಿಂದ ಶ್ರೀಲೀಲಾ ಈ ಸಿನಿಮಾದ
Ustaad Bhagat Singh day 1 Boxoffice: ಮೊದಲ ದಿನ 'ಉಸ್ತಾದ್ ಭಗತ್ ಸಿಂಗ್' ಕಲೆಕ್ಷನ್ ಎಷ್ಟು?
ಪವನ್ ಕಲ್ಯಾಣ್ ನಟನೆಯ 'ಉಸ್ತಾದ್ ಭಗತ್ ಸಿಂಗ್' ಸಿನಿಮಾ ಈ ವಾರ ತೆರೆಗಪ್ಪಳಿಸಿದೆ. ಪವರ್ ಸ್ಟಾರ್ ಫ್ಯಾನ್ಸ್ ಮನ ಗೆಲ್ಲುವಲ್ಲಿ ಸಕ್ಸಸ್ ಕಂಡಿದೆ. ಮಿಶ್ರ ಪ್ರತಿಕ್ರಿಯೆ ನಡುವೆಯೂ ಚಿತ್ರಕ್ಕೆ ಒಳ್ಳೆ ಓಪನಿಂಗ್ ಸಿಕ್ಕಿದೆ. ಒಂದು ದಿನ ಮುನ್ನ ಕೆಲವೆಡೆ ಪ್ರೀಮಿಯರ್ ಶೋಗಳು ಆರಂಭವಾಗಿದ್ದವು. ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣದ ಚಿತ್ರಕ್ಕೆ ಹರೀಶ್ ಶಂಕರ್ ಆಕ್ಷನ್ ಕಟ್ ಹೇಳಿದ್ದಾರೆ.
ಟಾಲಿವುಡ್, ಬಾಲಿವುಡ್ ಎಲ್ಲಾ ಕ್ಲೋಸ್: ಇಂಡಿಯನ್ ಸಿನಿಮಾ ಒಂದೇ ಅಂದಿದ್ದೇಕೆ ಕಮಲ್ ಹಾಸನ್-ಚಿರಂಜೀವಿ?
ಹೈದರಾಬಾದ್ನಲ್ಲಿ ನಡೆದ ತೆಲಂಗಾಣ ಗದ್ದರ್ ಪ್ರಶಸ್ತಿ ಪ್ರದಾನ ಸಮಾರಂಭ ಸಾಕಾಷ್ಟು ವಿಶೇಷತೆಗಳಿಂದ ಕೂಡಿತ್ತು. ಭಾರತೀಯ ಚಿತ್ರರಂಗದ ಇಬ್ಬರು ದಿಗ್ಗಜರು ಒಟ್ಟಿಗೆ ಕಾಣಿಸಿಕೊಂಡು ಗಮನ ಸೆಳೆದರು. ಕಮಲ್ ಹಾಸನ್ ಮತ್ತು ಮೆಗಾಸ್ಟಾರ್ ಚಿರಂಜೀವಿ ವೇದಿಕೆ ಮೇಲೆ ಒಟ್ಟಾಗಿ ಕಾಣಿಸಿಕೊಂಡಿದ್ದು ಅಭಿಮಾನಿಗಳಿಗೆ ಹಬ್ಬದಂತಿತ್ತು. ಸಿನಿಮಾ ರಂಗದಲ್ಲಿ ಪ್ರಾದೇಶಿಕ ಭಾಷೆಗಳ ಗಡಿ ಇರಬಾರದು ಎನ್ನುವ ಮೂಲಕ ಹೊಸ ಚರ್ಚೆಗೆ
Bhagyalakshmi: ಅಡುಗೆ ಡಬ್ಬಿ ಹಿಡಿದು ಹೊರಟ ತಾಂಡವ್ನ ತಡೆದ ಕುಸುಮಾ; ಮಗನಿಗೆ ಹಾಕಿದ ಆ ಕಂಡೀಷನ್ ಏನು?
ಬಣ್ಣದ ಲೋಕದ ಜನಪ್ರಿಯ ಧಾರಾವಾಹಿಗಳಲ್ಲಿ 'ಭಾಗ್ಯಲಕ್ಷ್ಮಿ' ಸದಾ ಮುಂಚೂಣಿಯಲ್ಲಿರುತ್ತದೆ. ಪ್ರತಿದಿನವೂ ಹೊಸ ಹೊಸ ಟ್ವಿಸ್ಟ್ಗಳ ಮೂಲಕ ವೀಕ್ಷಕರನ್ನು ಸೆಳೆಯುತ್ತಿದೆ. ಇಂದಿನ ಸಂಚಿಕೆಯ ಪ್ರೋಮೋ ಅಕ್ಷರಶಃ ಕುತೂಹಲ ಮೂಡಿಸಿದೆ. ಭಾಗ್ಯಾ ಮತ್ತು ತಾಂಡವ್ ನಡುವಿನ ಕಥೆ ಈಗ ಹೊಸ ತಿರುವು ಪಡೆದಿದೆ. ಮನೆಯಲ್ಲಿ ನಡೆಯುತ್ತಿರುವ ಈ ಬೆಳವಣಿಗೆಗಳು ಪ್ರತಿಯೊಬ್ಬರಿಗೂ ಆಶ್ಚರ್ಯ ತರುವಂತಿವೆ. ಮನೆಮಂದಿಯೆಲ್ಲಾ ಈಗ ಆತಂಕಕ್ಕೆ ಒಳಗಾಗಿದ್ದಾರೆ. {image-bhagyalakshmi-kannada-serial1-1774002969.jpg
ದರ್ಶನ್ 'ಡೆವಿಲ್' ಚಿತ್ರಕ್ಕೆ 100 ದಿನ ಪೂರೈಸಿದ ಸಂಭ್ರಮ; ಇವತ್ತಿಗೂ ಎಲ್ಲರದ್ದು ಒಂದೇ ಪ್ರಶ್ನೆ
ಪ್ರಕಾಶ್ ವೀರ್ ನಿರ್ದೇಶನದಲ್ಲಿ ದರ್ಶನ್ ನಟಿಸಿದ್ದ 'ಡೆವಿಲ್' ಸಿನಿಮಾ ಅಭಿಮಾನಿಗಳ ಮನಗೆದ್ದಿತ್ತು. ಇದೀಗ ಸಿನಿಮಾ 100 ದಿನ ಪೂರೈಸಿದೆ. ಸ್ಪೆಷಲ್ ಪೋಸ್ಟರ್ ಮೂಲಕ ಈ ವಿಚಾರವನ್ನು ಚಿತ್ರತಂಡ ಹಂಚಿಕೊಂಡಿದೆ. ಸ್ವತಃ ನಿರ್ದೇಶಕ ಪ್ರಕಾಶ್ ವೀರ್ ಈ ಆಕ್ಷನ್ ಥ್ರಿಲ್ಲರ್ ಚಿತ್ರವನ್ನು ನಿರ್ಮಾಣ ಮಾಡಿದ್ದರು. ಒಂದು ಶೆಡ್ಯೂಲ್ ಚಿತ್ರೀಕರಣದ ಬಳಿಕ ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್ ಸಂಕಷ್ಟಕ್ಕೆ ಸಿಲುಕಿದ್ದರು.
ಮಗಳಾಗಿ ಇಲ್ಲಿಗೆ ಬಂದೆ ಈಗ ಸೊಸೆಯಾಗಿದ್ದೀನಿ.. ರಶ್ಮಿಕಾ ಮಾತಿಗೆ ವಿಜಯ್ ದೇವರಕೊಂಡ ತಾಯಿ ಭಾವುಕ
ಮದುವೆ ಬೆನ್ನಲ್ಲೇ ನಟಿ ರಶ್ಮಿಕಾ ದೇವರಕೊಂಡಗೆ ಅತ್ಯುತ್ತಮ ನಟಿ ತೆಲಂಗಾಣ ರಾಜ್ಯ ಚಲನಚಿತ್ರ ಪ್ರಶಸ್ತಿ ಲಭಿಸಿದೆ. ಕಳೆದ ವರ್ಷ ಬಿಡುಗಡೆ ಆಗಿದ್ದ'ದಿ ಗರ್ಲ್ಫ್ರೆಂಡ್' ಚಿತ್ರದ ನಟನೆಗಾಗಿ ರಶ್ಮಿಕಾ ಪ್ರಶಸ್ತಿ ಸ್ವೀಕರಿಸಿದ್ದಾರೆ. ಇತ್ತೀಚೆಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಕೊಡಗಿನ ಬೆಡಗಿ ಅತ್ತೆ ಜೊತೆ ಭಾಗಿ ಆಗಿದ್ದರು. ವೇದಿಕೆಯಲ್ಲಿ ಸೊಸೆ ಮಾತು ಕೇಳಿ ಅತ್ತೆ ಭಾವೋದ್ವೇಗಕ್ಕೆ ಗುರಿಯಾಗಿದ್ದಾರೆ. ಗದ್ದರ್ ಅವಾರ್ಡ್ಸ್
ಸಲ್ಮಾನ್ ಖಾನ್, ಇಮ್ರಾನ್ ಹಶ್ಮಿ ; 'ಧುರಂಧರ್'ನ ಬಡೇ ಸಾಬ್ ಯಾರು ? ಇಲ್ಲಿದೆ ಪೂರ್ಣ ವಿವರ
ಒಂದು ಚಿತ್ರಕ್ಕೆ ನಿರ್ದೇಶಕ-ನಿರ್ಮಾಪಕ ಮತ್ತು ತಂತ್ರಜ್ಞರನ್ನು ಹೊರತು ಪಡಿಸಿ ಕೇವಲ ನಾಯಕ- ನಾಯಕಿ ಮಾತ್ರ ಮುಖ್ಯ ಅಲ್ಲ. ಆ ಚಿತ್ರದ ಖಳನಾಯಕ ಕೂಡ ಮುಖ್ಯ, ಪೋಷಕ ಕಲಾವಿದರು ಕೂಡ ಮುಖ್ಯ. ಹೀಗಾಗಿ ಈ ವಿಚಾರವನ್ನು ಚೆನ್ನಾಗಿ ಅರಿತ ಹಲವರು ತಮ್ಮ ಚಿತ್ರದ ಸಪೋರ್ಟಿಂಗ್ ಕಾಸ್ಟ್ಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ. ಅಳೆದು ತೂಗಿ ಕಲಾವಿದರನ್ನು ಆಯ್ಕೆ ಮಾಡಿ ಪಾತ್ರಗಳನ್ನು
'ಧುರಂಧರ್- 2' ನೋಡಿ ಕಾಮೆಂಟ್ ಸೆಕ್ಷನ್ ಆಫ್ ಮಾಡಿ 2 ಪುಟ ರಿವ್ಯೂ ಬರೆದ ನಟಿ ರಮ್ಯಾ
ಆದಿತ್ಯಧರ್ ನಿರ್ದೇಶನದ ಸ್ಪೈ ಆಕ್ಷನ್ ಥ್ರಿಲ್ಲರ್ 'ಧುರಂಧರ್- 2' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡ್ತಿದೆ. ಪ್ರೇಕ್ಷಕರಿಂದ ಚಿತ್ರಕ್ಕೆ ಅದ್ಭು ರೆಸ್ಪಾನ್ಸ್ ಸಿಕ್ತಿದೆ. ತಾರೆಯರು ಕೂಡ ಸಿನಿಮಾ ನೋಡಲು ಮುಗಿಬಿದ್ದಿದ್ದಾರೆ. ಒಂದು ವರ್ಗದ ಪ್ರೇಕ್ಷಕರು ಮಾತ್ರ ಸಿನಿಮಾ ನೋಡಿ ಬೇಸರಗೊಂಡಿದ್ದಾರೆ. ಟೀಕಿಸುತ್ತಿದ್ದಾರೆ. ಒಂದೊಂದು ಪ್ರೊಪಗಾಂಡಾ ಸಿನಿಮಾ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಮಾಜಿ ಸಂಸಸದೆ, ನಟಿ ರಮ್ಯಾ ಸದ್ಯ ಸಿನಿಮಾ
Love Mocktail 3 Day 1 Box office: 'ಲವ್ ಮಾಕ್ಟೇಲ್ 3' ರೆಸ್ಪಾನ್ಸ್ ಹೇಗಿದೆ? ಮೊದಲ ದಿನದ ಕಲೆಕ್ಷನ್ ಎಷ್ಟು?
ಭಾರತದ ಮೋಸ್ಟ್ ಎಕ್ಸ್ಪೆಕ್ಟೆಡ್ ಸಿನಿಮಾ 'ಧುರಂಧರ್ 2' ಎದುರು ಕನ್ನಡದ ಸಿನಿಮಾ 'ಲವ್ ಮಾಕ್ಟೇಲ್ 3' ರಿಲೀಸ್ ಆಗಿತ್ತು. 'ಲವ್ ಮಾಕ್ಟೇಲ್' ಸೀಕ್ವೆಲ್ನ ಕೊನೆಯ ಚಾಪ್ಟರ್ ಆಗಿರುವ ಈ ಸಿನಿಮಾ ಮೇಲೆ ಸಹಜವಾಗಿಯೇ ನಿರೀಕ್ಷೆಗಳು ಇತ್ತು. ಏಪ್ರಿಲ್ 10ರಂದು ರಿಲೀಸ್ ಆಗಬೇಕಿದ್ದ ಸಿನಿಮಾ 'ಟಾಕ್ಸಿಕ್' ಪೋಸ್ಟ್ಪೋನ್ ಆಗುತ್ತಿದ್ದಂತೆ ಮಾರ್ಚ್ 19ಕ್ಕೆ ಶಿಫ್ಟ್ ಆಗಿತ್ತು. ಹೀಗಾಗಿ ದೇಶದೆಲ್ಲೆಡೆ ಸದ್ದು
Dhurandhar 2 Box Office Day 1: 'ಕೆಜಿಎಫ್ 2', RRR, 'ಬಾಹುಬಲಿ 2' ದಾಖಲೆಗೆ ಕೊಳ್ಳಿ ಇಟ್ಟ 'ಧುರಂಧರ್ 2'
ಈ ವರ್ಷ ಮೋಸ್ಟ್ ಎಕ್ಸ್ಪೆಕ್ಟೆಡ್ ಸಿನಿಮಾಗಳಲ್ಲಿ ಒಂದಾಗಿರೋ 'ಧುರಂಧರ್ 2' (Dhurandhar: The Revenge) ವಿಶ್ವದಾದ್ಯಂತ ಅದ್ಧೂರಿಯಾಗಿ ರಿಲೀಸ್ ಆಗಿದೆ. ಮಾರ್ಚ್ 18 ಎರಡು ಶೋಗಳು ಪ್ರೀಮಿಯರ್ನಿಂದ ಹಿಡಿದು ಮಾರ್ಚ್ 19ರ ಮೊದಲ ದಿನ ಕಲೆಕ್ಷನ್ ಭಾರತದ ಚಿತ್ರರಂಗದ ಇತಿಹಾಸದಲ್ಲಿಯೇ ಹೊಸ ದಾಖಲೆಗಳನ್ನೇ ಬರೆದಿದೆ. ನಿರೀಕ್ಷೆ ಮಾಡಿದಂತೆ ಬಾಕ್ಸಾಫೀಸ್ನಲ್ಲಿ ಈ ಸಿನಿಮಾ ಕೆಲವು ಸಿನಿಮಾ ರೆಕಾರ್ಡ್ಗಳನ್ನು ಬ್ರೇಕ್
ಹಸೆಮಣೆ ಏರಲು ಸಜ್ಜಾದ 'ಶೇಕ್ ಇಟ್ ಪುಷ್ಪವತಿ'ಯ ನಿಮಿಕಾ ರತ್ನಾಕರ್; ವರ ಯಾರು?
ಮಾಡೆಲ್ ಆಗಿ ಮಿಂಚುತ್ತಲೇ ಕನ್ನಡ ಚಿತ್ರರಂಗದಲ್ಲಿ ನಾಯಕಿಯಾಗಿಯೂ ನೆಲೆ ಕಂಡುಕೊಂಡಿರುವವರು ನಿಮಿಕಾ ರತ್ನಾಕರ್. ನಟಿಸಿರೋ ಒಂದಷ್ಟು ಸಿನಿಮಾಗಳು ಬಿಡುಗಡೆಯ ಹಂತದಲ್ಲಿರುವಾಗಲೇ ನಿಮಿಕಾ ಶುಭ ಸುದ್ದಿಯೊಂದನ್ನು ಕೊಟ್ಟಿದ್ದಾರೆ. ನಿಮಿಕಾ ರತ್ನಾಕರ್ ಇದೇ ಏಪ್ರಿಲ್ ೬ರಂದು ವೈವಾಹಿಕ ಜೀವನಕ್ಕೆ ಅಡಿಯಿರಿಸಲಿದ್ದಾರೆ. ಮುಂಬೈ ಮೂಲದ ಉದ್ಯಮಿಯನ್ನು ನಿಮಿಕಾ ವರಿಸಲಿದ್ದಾರೆ. ವಿವಾಹ ಮಹೋತ್ಸವ ನೆರವೇರಲಿರುವ ಸ್ಥಳದ ವಿವರ ಶಿಘ್ರದಲ್ಲಿಯೇ ಜಾಹೀರಾಗಲಿದೆ. ಮಾಡೆಲಿಂಗ್ ಕ್ರೇತ್ರದಲ್ಲಿ
''ಅಮೃತಧಾರೆ'' ಧಾರಾವಾಹಿಯಲ್ಲಿ ಜೈದೇವ್ ಪ್ಲಾನ್ ಮತ್ತೊಮ್ಮೆ ಫ್ಲಾಪ್ ಆಗಿದೆ. ಮಲ್ಲಿಯನ್ನು ಪರೀಕ್ಷಾ ಕೇಂದ್ರಕ್ಕೆ ತಲುಪಬಾರದು ಎಂಬ ದಿಸೆಯಲ್ಲಿ ಜೈದೇವ್ ಹೆಣೆದ ತಂತ್ರವನ್ನೂ ಗೌತಮ್ ಭೇದಿಸಿದ್ದಾನೆ. ರೌಡಿಗಳ ಕಪಿ ಮುಷ್ಟಿಯಿಂದ ಮಲ್ಲಿಯನ್ನು ಕಾಪಾಡಿ ಎಕ್ಸಾಮ್ ಹಾಲ್ ಗೆ ಕರೆದೊಯ್ದಿದ್ದಾನೆ. ಮಲ್ಲಿ ಎಕ್ಸಾಮ್ ಬರೆದು ಬಂದು ಗೌತಮ್ ಅಪ್ಪಿಕೊಂಡು ಕಣ್ಣೀರಿಟ್ಟಿದ್ದಾಳೆ. ನಾನು ಯಾರಿಗೂ ಕೇಡನ್ನು ಬಯಸಿಲ್ಲ ಆದ್ರೂ ನನಗೆ ಹೀಗೆ
ರಜನಿಕಾಂತ್ ಆಯ್ತು.. ಸೂರ್ಯನ ಕೆರಳಿದ ವಿಜಯ್ ಫ್ಯಾನ್ಸ್.. ಸ್ಮೈಲ್ ಕೊಟ್ಟು ಬಾಯಿ ಮುಚ್ಚಿಸಿದ ಜ್ಯೋತಿಕಾ
ದಳಪತಿ ವಿಜಯ್ ಬೆಂಕಿ ಮೇಲೆ ಹೆಜ್ಜೆ ಇಡುತ್ತಿದ್ದಾರೆ. ಸಿನಿಮಾದಲ್ಲಿ ನಟಿಸುತ್ತಿದ್ದಾಗ ವಿವಾದಗಳಿಂದ ಇವರು ದೂರವೇ ಉಳಿದಿದ್ದರು. ಅದ್ಯಾವಾಗ ರಾಜಕೀಯಕ್ಕೆ ಎಂಟ್ರಿ ಕೊಟ್ಟರೋ ಅಲ್ಲಿಂದ ಒಂದೊಂದೇ ವಿವಾದಗಳು ಇವರನ್ನು ಹುಡುಕಿಕೊಂಡು ಬರುತ್ತಿವೆ ಎನಿಸುತ್ತಿದೆ. ಇವರಿಂದ ತಪ್ಪಾಗುತ್ತಿದೆಯೋ.. ಇಲ್ಲ ಇವರ ಆಪ್ತರಿಂದ ತಪ್ಪಾಗುತ್ತಿದೆಯೋ? ಬೇರೆ ಮಾತು. ಆದರೆ, ವಿವಾದ ಮಾತ್ರ ವಿಜಯ್ ಅವರನ್ನು ಹುಡುಕಿಕೊಂಡು ಬರುತ್ತಿದೆ. ವಿಜಯ್ ರಾಜಕೀಯ ಕ್ಷೇತ್ರಕ್ಕೆ
ಮದುವೆ ಬೇಡ, ಲಿವ್-ಇನ್ ಸಂಬಂಧ ಸಾಕು : 34 ವರ್ಷದ ನಟಿಯ ಹೇಳಿಕೆಗೆ ಎಲ್ಲ ತಬ್ಬಿಬ್ಬು
ಮದುವೆ ಒಂದು ಸಾಂಸ್ಥಿಕ ವ್ಯವಸ್ಥೆ ಎನ್ನುವ ಮಾತು ಹಿಂದೆ ಪ್ರಚಲಿತದಲ್ಲಿತ್ತು. ಆದರೆ ಈಗ ಬದಲಾದ ಸಾಮಾಜಿಕ.. ಆರ್ಥಿಕ.. ಶೈಕ್ಷಣಿಕ.. ವಿಚಾರಗಳು ಮದುವೆಯ ಪರಿಕಲ್ಪನೆ ಮತ್ತು ರೂಪುರೇಷೆಯನ್ನು ಬದಲಿಸಿವೆ. ಮದುವೆ ಈಗ ವ್ಯವಸ್ಥೆಯಾಗಿ ಉಳಿದಿಲ್ಲ. ಎರಡು ಮನಸುಗಳ ಬೆಸುಗೆಯಾಗದ ಮದುವೆ ಈಗ ಕೇವಲ ತೋರಿಕೆಯ ಸಂಪ್ರದಾಯವಾಗಿದೆ. ತೋರ್ಪಡಿಕೆಯ ಆಚರಣೆಯಾಗಿದೆ. ಬದಲಾದ ಈ ಕಾಲದಲ್ಲಿ ಹಲವರು ಸ್ವಾವಲಂಬಿಯಾಗುತ್ತಿದ್ದಾರೆ.ಇವತ್ತು.. ಯಾರು.. ಯಾರ
Rishab Shetty: \ಅಧ್ಯಾಯ ಎರಡು ಇಲ್ಲಿಂದ ಶುರು\; ರಿಷಬ್ ಶೆಟ್ಟಿ ಬ್ಯಾನರ್ನಲ್ಲೇ ಸಿನಿಮಾ..ಚಾಪ್ಟರ್ 2 ಯಾವುದು?
ರಿಷಬ್ ಶೆಟ್ಟಿ ಯುಗಾದಿ ಹಬ್ಬವನ್ನು ಪತ್ನಿಯೊಂದಿಗೆ ಆಚರಿಸಿದ ಪೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ರಾರಾಜಿಸಿದ್ದವಷ್ಟೇ. ಓ.. ಶೆಟ್ರು ಮನೆಯಲ್ಲಿ ಯುಗಾದಿ ಹಬ್ಬ ಭಲೇ ಜೋರು ಅಂತ ಅಭಿಮಾನಿಗಳು ಸಂಭ್ರಮಿಸಿದ್ದರು. ಈ ಪೋಟೋಗಳ ಪೋಸ್ಟ್ ಆದ ಕೆಲವೇ ಕ್ಷಣಗಳಲ್ಲಿ ರಿಷಬ್ ಶೆಟ್ಟಿ ಮತ್ತೊಂದು ಪೋಸ್ಟ್ ಮಾಡಿದ್ದರು. ಇದನ್ನು ನೋಡುತ್ತಿದ್ದಂತೆ ಅವರ ಫ್ಯಾನ್ಸ್ಗೆ ಗೊಂದಲಕ್ಕೆ ಬಿದ್ದಿದ್ದಾರೆ. ರಿಷಬ್ ಶೆಟ್ಟಿ ಯುಗಾದಿ ಹಬ್ಬದ
ಪ್ರೇಮ್ ಮಾತು ಕೇಳಿ 'ಕೆಡಿ'ಗಾಗಿ ಸೆರಗು ಸರಿಸಿದ ತಪ್ಪಿಗೆ ನೋರಾ ಫತೇಹಿ ವಿರುದ್ಧ ಫತ್ವಾ
ಸೃಜನಾತ್ಮಕ ಸ್ವಾತಂತ್ಯ್ರ ಮತ್ತು ಧಾರ್ಮಿಕ ಭಾವನೆಗಳ ನಡುವಿನ ಸಂಘರ್ಷ ಇಂದು ನಿನ್ನೆಯದಲ್ಲ. ಹಲವಾರು ವರ್ಷಗಳಿಂದ ನಡೆದುಕೊಂಡು ಬರುತ್ತಲೇ ಇದೆ. ಇದಕ್ಕೆ ಕಾರಣಗಳು ಬೇರೆ ಬೇರೆಯಾದರೂ ಸಾಂಪ್ರದಾಯಿಕ ಮೌಲ್ಯಗಳಿಗೆ ಧಕ್ಕೆಯಾದಾಗ ಈ ವಿವಾದ ಕೇವಲ ಸಾಮಾಜಿಕ ಜಾಲತಾಣಕ್ಕೆ ಮಾತ್ರ ಸೀಮಿತವಾಗಲ್ಲ. ಬದಲಿಗೆ ದೇಶವ್ಯಾಪಿ ಆಕ್ರೋಶದ ಕಿಚ್ಚು ಧಗಧಗಿಸುತ್ತೆ. ಸದ್ಯ ಇಂತಹದ್ದೇ ಒಂದು ಕಿಚ್ಚು ಹೊತ್ತಿಸಿದ ಅಪಕೀರ್ತಿಗೆ ಪ್ರೇಮ್ ಪಾತ್ರರಾಗಿದ್ದಾರೆ.
Love Mocktail 3 Review: 'ಲವ್ ಮಾಕ್ಟೇಲ್ 3' ನಗಿಸುತ್ತಾ ಸಾಗುವ ತಂದೆ-ಮಗಳ ಭಾವನಾತ್ಮಕ ಜರ್ನಿ
ಡಾರ್ಲಿಂಗ್ ಕೃಷ್ಣ ನಟಿಸಿ, ನಿರ್ದೇಶಿಸಿರುವ ಸಿನಿಮಾ 'ಲವ್ ಮಾಕ್ಟೇಲ್ 3' ಇಂದು (ಮಾರ್ಚ್ 19) ಬಿಡುಗಡೆಯಾಗಿದೆ. 'ಲವ್ ಮಾಕ್ಟೇಲ್' ಹಾಗೂ 'ಲವ್ ಮಾಕ್ಟೇಲ್ 2' ಸೀಕ್ವೆಲ್ ಇದು. 'ಲವ್ ಮಾಕ್ಟೇಲ್' ಸಿನಿಮಾ ಅಭಿಮಾನಿಗಳಿಗೆ ಇಂದು ಹಬ್ಬ ಅಂತಲೇ ಹೇಳಬಹುದು. ಇದು ಕೊನೆಯ ಸರಣಿ ಆಗಿರುವುದರಿಂದ ಸಿನಿಮಾ ಪ್ರೇಮಿಗಳಲ್ಲಿ ನಿರೀಕ್ಷೆ ದುಪ್ಪಟ್ಟು ಇತ್ತು. ಕೊನೆಗೂ ಯುಗಾದಿ ಹಬ್ಬದ
10 ವರ್ಷದ ಪ್ರೀತಿ ಅಂತ್ಯ? ಮದುವೆಗೂ ಮುನ್ನ ದೂರ ಆದ 'ಬಿಗ್ ಬಾಸ್' ಜೋಡಿ?
ಪ್ರೀತಿ ಎಂಬ ಪದ ಸುಂದರ ಇರಬಹುದು. ಆದರೆ, ಪ್ರೀತಿಯ ಕೆಲವೊಮ್ಮೆ ಕಾಡುತ್ತೆ. ಪ್ರೀತಿಯಲ್ಲಿ ನೋವು ಸಹಜವಾದರೂ ಅದನ್ನು ಸಹಿಸಿಕೊಳ್ಳುವುದಕ್ಕೆ ಸಾಧ್ಯವಾಗುವುದೇ ಇಲ್ಲ. ಅದರಿಂದಾಗುವ ನೋವು ಶಾಶ್ವತವಾಗಿಲ್ಲದಿದ್ದರೂ ಆ ಕ್ಷಣಕ್ಕೆ ಮಾತ್ರ ಅದು ನುಂಗಲಾರದ ತುತ್ತು. ಎಲ್ಲಾ ಉತ್ಸಾಹ, ಆಸಕ್ತಿ, ಖುಷಿಯ ಕ್ಷಣಗಳನ್ನು ಕಸಿದುಕೊಳ್ಳೋ ಆ ಬ್ರೇಕ್ ಅಪ್ನ ನೋವು ಸಹಿಸಿಕೊಳ್ಳೋದಕ್ಕೆ ಸಾಧ್ಯ ಆಗದೇ ಇರುವುದಕ್ಕೆ ಕಾರಣಗಳೇನು ಎಂಬುದು
ಉದ್ಯಮಿ ಜೊತೆ ಮದುವೆ, ವಯಸ್ಸಿನ ಕುರಿತು ಚರ್ಚೆ ; ಅನುಷ್ಕಾ ಶೆಟ್ಟಿ ಖಂಡ ತುಂಡ ಉತ್ತರ
ನಿಜಾ ... ಸಿನಿಮಾ ಕಲಾವಿದರೆಂದ ಮೇಲೆ ಅವರ ಸುತ್ತ ಬಣ್ಣ ಬಣ್ಣದ ಸುದ್ದಿಗಳು ರೆಕ್ಕೆ ಪುಕ್ಕಗಳ ಸಮೇತ ಸುಳಿದಾಡುವುದು ಸಹಜ. ಹಾಗಂತ ಅದರ ಬಗ್ಗೆ ಮಾತಾಡುತ್ತಾ ಕೂತರೆ ಕೆಲಸದ ಕಡೆ ಗಮನ ಕೊಡಲು ಸಾಧ್ಯವೇ ಆಗುವುದಿಲ್ಲ. ಇದನ್ನ ಮನಗಂಡೇ ತಮ್ಮ ಸುತ್ತ-ಮುತ್ತ ತಮ್ಮ ಬಗ್ಗೆ ಹಲವಾರು ಸುದ್ದಿ ಕೇಳಿ ಬಂದರೂ, ಕೆಲವರು ಆ ಎಲ್ಲ ವಿಚಾರಗಳಿಗೆ ಪ್ರತಿಕ್ರಿಯೆಯನ್ನು
ಸಿನಿಮಾ ಕೇವಲ ಮನರಂಜನೆಯ ಮಾಧ್ಯಮವಲ್ಲ. ಸಮಾಜದ ಪ್ರತಿಬಿಂದ ಕೂಡ ಹೌದು. ಇಂತಹ ಚಿತ್ರರಂಗದಲ್ಲಿ ಕೆಲವು ನಟರು ತಮ್ಮ ಪಾತ್ರಕ್ಕೆ ತನು ಮನ ಅರ್ಪಿಸುತ್ತಾರೆ. ಪಾತ್ರದ ಪರಕಾಯ ಪ್ರವೇಶ ಮಾಡುತ್ತಾರೆ. ತಮ್ಮ ಅಭಿನಯದಿಂದ ಪ್ರೇಕ್ಷಕರ ಮನಸಿನ ಮೇಲೆ ಗಾಢವಾದ ಪ್ರಭಾವವನ್ನೂ ಖೂಡ ಬೀರುತ್ತಾರೆ. ಆದರೆ, ಹೀಗೆ ಪ್ರಭಾವ ಬೀರುವ ಪಾತ್ರ ಒಳ್ಳೆತನದಿಂದ ಕೂಡಿದ್ದರೆ, ಆ ಪಾತ್ರಧಾರಿಯ ಕುರಿತು ಒಳ್ಳೆಯ

29 C