ಮತ್ತೆ ಸಿನಿಮಾ ನಿರ್ಮಾಣಕ್ಕಿಳಿದ ಶಿಲ್ಪಾ ಗಣೇಶ್; ಕನ್ನಡದಲ್ಲಿ ಮಹಿಳಾ ನಿರ್ಮಾಪಕಿಯರು ಹೆಚ್ಚಾಗಬಹುದೇ?
ಕನ್ನಡ ಚಿತ್ರರಂಗದಲ್ಲಿ ಮಹಿಳಾ ನಿರ್ಮಾಪಕಿಯರ ಸಂಖ್ಯೆ ತೀರಾ ಕಡಿಮೆಯಿದೆ. ಆಗ ಒಬ್ಬರು, ಈಗ ಒಬ್ಬರು ಸಿನಿಮಾ ನಿರ್ಮಾಣ ಮಾಡುವುದಕ್ಕೆ ಧೈರ್ಯ ತೋರಿದ್ದು ಬಿಟ್ಟರೆ, ಮತ್ಯಾರೂ ಇಂತಹ ಸಾಹಸಕ್ಕೆ ಕೈ ಹಾಕಲೇ ಇಲ್ಲ. ಪಾರ್ವತಮ್ಮ ರಾಜ್ಕುಮಾರ್ ಕನ್ನಡ ಚಿತ್ರರಂಗ ಕಂಡ ಅತ್ಯಂತ ಯಶಸ್ವಿ ನಿರ್ಮಾಪಕಿ. ತಮ್ಮ ಬ್ಯಾನರ್ನಿಂದ ಅತೀ ಹೆಚ್ಚು ಸಕ್ಸಸ್ಫುಲ್ ಸಿನಿಮಾಗಳನ್ನು ನೀಡಿದ ನಿರ್ಮಾಪಕಿ. ಸದ್ಯ ಇವರ
ಓಟಿಟಿಗೆ ಬಂತು ಶ್ಯಾಡೋ ಪ್ಲೇ ; ಮಲಯಾಳಂ ಚಿತ್ರಪ್ರೇಮಿಗಳಿಗಿವೆ ಈ ವಾರ ಹಲವು ಆಯ್ಕೆಗಳು
ಮನೋರಮಾ ಮ್ಯಾಕ್ಸ್ (ManoramaMAX) ಸಂಸ್ಥೆಯ ಹೊಸ ಮಲಯಾಳಂ ಒರಿಜಿನಲ್ ಥ್ರಿಲ್ಲರ್ 'ಶ್ಯಾಡೋ ಪ್ಲೇ' (Shadow Play) ಇಂದು, ಏಪ್ರಿಲ್ 5 ರಂದು ಬಿಡುಗಡೆಯಾಗಿದೆ. ಭಾನುವಾರದ ರಜೆಯ ಮಜಾ ಸವಿಯಲು ಸಜ್ಜಾಗಿರುವ ಪ್ರೇಕ್ಷಕರು ಈಗ ಒಂದು ಗೊಂದಲದಲ್ಲಿದ್ದಾರೆ. ಮೈ ಜುಂ ಎನಿಸುವ ಈ ಡಾರ್ಕ್ ವೆಬ್ ಸೀರೀಸ್ ನೋಡಬೇಕೋ ಅಥವಾ ಕುಟುಂಬದೊಂದಿಗೆ ಕುಳಿತು ಆರಾಮವಾಗಿ ನೋಡಬಹುದಾದ ಲೈಟ್ ಸಬ್ಜೆಕ್ಟ್
\ಪ್ರೀತಿಯೇ ಸರ್ವಸ್ವ ಅಲ್ಲ.. ಪ್ರೀತಿ ಇಲ್ಲದಿದ್ರೆ ಯಾವುದಕ್ಕೂ ಅರ್ಥವಿಲ್ಲ\; ತ್ರಿಶಾ ಪೋಸ್ಟ್ನ ಗುಟ್ಟೇನು?
ಒಂದ್ಕಡೆ ತಮಿಳುನಾಡು ಚುನಾವಣೆಯಾದರೆ, ಇನ್ನೊಂದು ಕಡೆ ವಿಜಯ್ ಹಾಗೂ ತ್ರಿಶಾ ಬಗ್ಗೆ ರೂಮರ್. ಚುನಾವಣೆಯ ಸಮಯದಲ್ಲಿ ತಮಿಳುನಾಡು ಮಂದಿಗೆ ಎರಡೆರಡು ಕುತೂಹಲ. ಈ ಬಾರಿ ತಮಿಳುನಾಡು ವಿಧಾನ ಸಭಾ ಚುನಾವಣೆಗೆ ವಿಜಯ್ ಪಕ್ಷ ಟಿವಿಕೆ ಸ್ಪರ್ಧೆ ಮಾಡುತ್ತಿದೆ. ಇದೇ ಮೊದಲ ಬಾರಿಗೆ ಚುನಾವಣೆಯನ್ನು ಫೇಸ್ ಮಾಡುತ್ತಿದ್ದರೂ, ಒಂಟಿಯಾಗಿ ಅಖಾಡಕ್ಕೆ ಇಳಿದಿದೆ. ಹೀಗಾಗಿ ಈ ಪಕ್ಷದ ಮೇಲೆ ಕುತೂಹಲವಿದೆ.
ಸೆಲ್ಫಿ ನೆಪದಲ್ಲಿ ಖ್ಯಾತ ನಟಿಯ ತುಟಿಗೆ ಮುತ್ತಿಟ್ಟ ಮಹಿಳಾ ಅಭಿಮಾನಿ ; ಬೆಚ್ಚಿ ಬಿದ್ದ ಚೆಲುವೆ-ವಿಡಿಯೋ ವೈರಲ್
ಸೆಲೆಬ್ರೆಟಿಗಳೂ ಅಭಿಮಾನಿಗಳ ಸೆಲ್ಫಿ ಸಮಸ್ಯೆಗಳಿಂದ ಈಗೀಗ ಪ್ರತಿದಿನವೂ ನರಳುವಂತಾಗಿದೆ. ಸಿನಿಮಾ ತಾರೆಯರು ಎಲ್ಲಿ ಹೋದರೂ ಅಭಿಮಾನಿಗಳು ಸೆಲ್ಫಿಗೆ ಮುಗಿಬಿದ್ದು ಅವರ ಸ್ವಾತಂತ್ರ್ಯ ಹರಣವನ್ನು ಮಾಡುತ್ತಲೇ ಇರುತ್ತಾರೆ. ಸಾಕಷ್ಟು ಸೆಲೆಬ್ರೆಟಿಗಳು ಇದರ ಸಲುವಾಗಿ ಪಬ್ಲಿಕ್ಕಿಗೆ ತಲೆ ಹಾಕುವುದೂ ಕಡಿಮೆ.ಇನ್ನೂ ಕೆಲವರು ಬಾಡಿಗಾರ್ಡ್ ಗಳನ್ನಿಟ್ಟುಕೊಂಡು ಅವೆಲ್ಲವನ್ನೂ ಅವಾಯ್ಡ್ ಮಾಡುತ್ತಲೇ ಇರುತ್ತಾರೆ. ಇನ್ನೂ ಕೆಲವರು ಸೆಲ್ಫಿ ನೆಪದಲ್ಲಿ ಮಾಡಬಾರದ ಕೆಲಸ ಮಾಡಲು
ಮುಂಬೈನ ಬೀದಿಯಲ್ಲಿ 'ಕೋಟಿಗೊಬ್ಬ' ಶೂಟಿಂಗ್; ದಿಢೀರನೇ ವಿಷ್ಣುದಾದ ಭೇಟಿ ಮಾಡಲು ಬಂದ ಶಿವಣ್ಣ..ಆಮೇಲೆ ಏನಾಯ್ತು?
ವಿಷ್ಣುದಾದ ವೃತ್ತಿ ಬದುಕಿನಲ್ಲಿ ಸೂಪರ್ ಹಿಟ್ ಲಿಸ್ಟ್ ಸೇರಿದ ಸಾಕಷ್ಟು ಸಿನಿಮಾಗಳಿವೆ. ಅದರಲ್ಲಿ 'ಕೋಟಿಗೊಬ್ಬ' ಸಿನಿಮಾ ಕೂಡ ಒಂದು. ಇದು ಸೂಪರ್ಸ್ಟಾರ್ ರಜನಿಕಾಂತ್ ನಟಿಸಿದ 'ಭಾಷಾ' ಸಿನಿಮಾದ ರಿಮೇಕ್. ಆದರೂ, ವಿಷ್ಣುದಾದ ಅವರ ಸ್ಟೈಲ್ನಲ್ಲಿಯೇ ಮಾಡಿದ ಸಿನಿಮಾವಿದು. ಹೀಗಾಗಿ ಸಿನಿಮಾ ಬಿಡುಗಡೆಯಾಗಿ 25 ದಿನಗಳನ್ನು ಪೂರೈಸಿದರೂ ಅದೇ ಕ್ರೇಜ್ ಅನ್ನು ಉಳಿಸಿದಿಕೊಂಡಿದೆ. ಸೂರಪ್ಪ ಬಾಬು ನಿರ್ಮಾಣ ಮಾಡಿದ್ದ
Dacoit Movie First Review: 'ಡಕಾಯಿತ್' ಸಿನಿಮಾದ ಮೊದಲ ವಿಮರ್ಶೆ ಏನು ಹೇಳುತ್ತೆ?
ಈ ವಾರ ರಿಲೀಸ್ ಆಗಲಿರುವ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ತೆಲುಗಿನ 'ಡಕಾಯಿತ್' ಕೂಡ ಒಂದು. ಅಡಿವಿ ಶೇಷ್ ಹಾಗೂ ಮೃಣಾಲ್ ಠಾಕೂರ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಸಿನಿಮಾ ಈಗಾಗಲೇ ತೆಲುಗು ರಾಜ್ಯಗಳಲ್ಲಿ ಸದ್ದು ಮಾಡಿದೆ. ಅಡವಿ ಶೇಷ್ ಮಾಸ್ ಅವತಾರದಲ್ಲಿ ಥಿಯೇಟರ್ಗೆ ಲಗ್ಗೆ ಇಡುವುದಕ್ಕೆ ಸಜ್ಜಾಗಿದ್ದಾರೆ. ಐಪಿಎಲ್ ಸೀಸನ್ನಲ್ಲಿ ರಿಲೀಸ್ ಆಗುತ್ತಿರೋ 'ಡಕಾಯಿತ್' ಸಿನಿಮಾ ಪ್ರೇಕ್ಷಕರನ್ನು
ಅಶ್ಲೀಲ ವೆಬ್ಸೈಟ್ನಲ್ಲಿ ನನ್ನ ಫೋಟೋ ನೋಡಿದ್ದೆ ; ಆ ದಿನ.. ಆ ಕ್ಷಣ.. ಬಿಕ್ಕಿದ ಶ್ರೀದೇವಿಯ ಮುದ್ದಿನ ಮಗಳು ಜಾಹ್ನವಿ
ಆರಂಭದಲ್ಲಿ ಮನರಂಜನೆ ದೃಷ್ಟಿಯಿಂದ ಹುಟ್ಟಿಕೊಂಡ ಡೀಪ್ ಫೇಕ್ ಇದೀಗ ಚಾರಿತ್ರ್ಯ ಹರಣಕ್ಕೆ, ರಾಜಕೀಯ ಅಪಪ್ರಚಾರಕ್ಕೆ ಹಾಗೂ ಬ್ಲಾಕ್ ಮೇಲ್ ಮಾಡೋದಕ್ಕೂ ಬಳಕೆ ಆಗ್ತಿದೆ. ಅಸಲಿ ವಿಡಿಯೋಗಳನ್ನೇ ಮೀರಿಸುವಷ್ಟು ಅತ್ಯುತ್ತಮ ಗುಣಮಟ್ಟವನ್ನ ಹೊಂದಿರುವ ಈ ನಕಲಿ ವಿಡಿಯೋಗಳಿಂದ ಅನೇಕರು ಹೈರಾಣಾಗಿದ್ದಾರೆ. ದೂರು ಕೊಟ್ಟು ಸೆಲೆಬ್ರಿಟಿಗಳು ಸುಸ್ತಾಗಿದ್ದಾರೆ. ಇನ್ನೂ ಈ ಡೀಪ್ ಫೇಕ್ ಜನ್ಮ ಪಡೆದಿದ್ದು ಇಂದು ನಿನ್ನೆಯಲ್ಲ. ಪುರಾತನ
ರಶ್ಮಿಕಾ ಮಂದಣ್ಣ ಮೊದಲ ಹೀರೋ ರಕ್ಷಿತ್ ಶೆಟ್ಟಿ ಅಲ್ಲ;ಕಿರಿಕ್ಗೂ ಮುನ್ನ ಬಿಗ್ಬಾಸ್ ಸ್ಪರ್ಧಿ ಜೊತೆ ನಟಿಸ್ಬೇಕಿತ್ತು
ರಶ್ಮಿಕಾ ಮಂದಣ್ಣ ಬಾಲಿವುಡ್ನಲ್ಲೂ ನಟಿಸುತ್ತಿದ್ದಾರೆ. ಹೀಗಾಗಿ ನಿರಂತರವಾಗಿ ಸಂದರ್ಶನವನ್ನೂ ನೀಡುತ್ತಲೇ ಇರುತ್ತಾರೆ. ಇಂತಹದ್ದೇ ಒಂದು ಸಂದರ್ಶನದಲ್ಲಿ ರಶ್ಮಿಕಾ ಮಂದಣ್ಣ 'ಕಿರಿಕ್ ಪಾರ್ಟಿ' ನನ್ನ ಮೊದಲ ಸಿನಿಮಾ ಅಲ್ಲ ಅಂತ ಹೇಳಿದ್ದರು. ಅಲ್ಲಿವರೆಗೂ ಬಹುತೇಕ ಮಂದಿ ರಕ್ಷಿತ್ ಶೆಟ್ಟಿ ಜೊತೆ ನಟಿಸಿದ ಕಿರಿಕ್ ಪಾರ್ಟಿಯೇ ಇವರ ಚೊಚ್ಚಲ ಸಿನಿಮಾವೆಂದು ನಂಬಿದ್ದರು. ಆದರೆ, 'ಕಿರಿಕ್ ಪಾರ್ಟಿ' ಅಲ್ಲವೆಂದು ಹೇಳಿಕೊಂಡಿದ್ದರು. ರಶ್ಮಿಕಾ
RCB Vs CSK: \ಉರ್ಕೊಳ್ಳೊರ್ ಉರ್ಕೊಳ್ಳಿ..ಬಡ್ಕೊಳ್ಳೊರ್ ಬಡ್ಕೊಳ್ಳಿ..\; ಡಾಲಿ ತಂಡದಿಂದ ರೋಸ್ಟ್ ಸಾಂಗ್
ಐಪಿಎಲ್ ಫೀವರ್ ನಿಧಾನವಾಗಿ ಹೆಚ್ಚಾಗುತ್ತಿದೆ. ಆರ್ಸಿಬಿ ಅಭಿಮಾನಿಗಳಿಗೆ ಇಂದು (ಮಾರ್ಚ್ 5) ಬಿಗ್ ಡೇ. ಯಾಕಂದ್ರೆ ಆರ್ಸಿಬಿಯ (RCB) ಸಾಂಪ್ರದಾಯಿಕ ಎದುರಾಳಿ ಸಿಎಸ್ಕೆ (CSK) ಜೊತೆ ಪಂದ್ಯ ನಡೆಯುತ್ತಿದೆ. ಈ ಜಿದ್ದಾ ಜಿದ್ದಿನ ಪಂದ್ಯವನ್ನು ನೋಡುವುದಕ್ಕೆ ಕ್ರೀಡಾ ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಸಿಎಸ್ಕೆ ತಂಡವನ್ನು ಆರ್ಸಿಬಿ ಅಭಿಮಾನಿಗಳು ಹಿಗ್ಗಾಮುಗ್ಗಾ ಟ್ರೋಲ್ ಮಾಡುತ್ತಿದ್ದಾರೆ. ಮೊದಲ
ಧುರಂಧರ್, ಕೇರಳ ಸ್ಟೋರಿ, ಎಲ್ಲ ಕಟ್ಟುಕಥೆ ಎಂದವರ ವಿರುದ್ದ ಗುಡುಗಿದ ನರೇಂದ್ರ ಮೋದಿ
ಸಿನಿಮಾ ಈಗ ಕೇವಲ ಮನರಂಜನೆ ಮಾತ್ರ ಅಲ್ಲ. ಬದಲಿಗೆ ಸೈದ್ಧಾಂತಿಕ ಸಂಘರ್ಷಕ್ಕೆ ವೇದಿಕೆ ಕೂಡ ಹೌದು. ಇದಕ್ಕೆ ಕೈಗನ್ನಡಿ ಎಂಬಂತೆ ಕಾಲ ಕಾಲಕ್ಕೆ ಇಲ್ಲಿ ಕೆಲ ಚಿತ್ರಗಳ ಕುರಿತು ಚರ್ಚೆ ನಡೆಯುತ್ತಲೇ ಇವೆ. ಅದರಲ್ಲಿಯೂ ಕಳೆದ ಒಂದು ದಶಕದಿಂದ ಸಿನಿಮಾ ಸುತ್ತ ಎಡ-ಬಲ ಯುದ್ಧ ಆರಂಭ ಆಗಿದೆ. ಮನರಂಜನೆಯ ಹೆಸರಿನಲ್ಲಿ ಕೆಲವರು ಹೂತು ಹೋದ ಇತಿಹಾಸವನ್ನು ಅಗೆಯುವ
ಅಕ್ರಮ ಸಂಬಂಧವಿರುವ ವಿಚಾರ ಗೊತ್ತಾದರೂ ಕೂಡ ನನ್ನ ಹೆಂಡತಿ ನನಗೆ ಡಿವೋರ್ಸ್ ಕೊಡಲಿಲ್ಲ ; ಕಣ್ಣೀರು ಹಾಕಿದ 63 ವರ್ಷದ ನಟ
ಅರೆಂಜ್ ಮ್ಯಾರೇಜ್ ಆಗಿರಲಿ.. ಲವ್ ಮ್ಯಾರೇಜ್ ಆಗಿರಲಿ.. ಸಂಬಂಧದಲ್ಲಿ ಪರಸ್ಪರ ಪ್ರೀತಿ-ವಿಶ್ವಾಸ ಇರಬೇಕು. ಆಗಲೇ ದಾಂಪತ್ಯ ಜೀವನ ಯಶಸ್ವಿಯಾಗಿ ಮುನ್ನಡೆಯಲು ಸಾಧ್ಯ. ಆದರೆ.. ಬದಲಾದ ಈ ಕಾಲದಲ್ಲಿ. ಬದುಕಲು ದೊರೆತ ಅಸಂಖ್ಯ ಅವಕಾಶಗಳು, ವ್ಯಕ್ತಿ ಸ್ವಾತಂತ್ರ್ಯ .. ಹೊಂದಾಣಿಕೆ ಕೊರತೆ .. ದೈಹಿಕ ಅತೃಪ್ತಿ .. ಪ್ರೀತಿಯ ಕೊರತೆ .. ಹೀಗೆ ಮುಂತಾದ ಕಾರಣಗಳಿಂದ ಹಲವರು ಮದುವೆಯ
ಕಮಲ್ ಹಾಸನ್ ನಂಬಿ ಕಂಗಾಲಾದ ಅಭ್ಯರ್ಥಿಗಳು ; ಉಳಗನಾಯಗನ್ ಕಟ್ಟಿದ 'ಎಂಎನ್ಎಂ' ಪಕ್ಷದಲ್ಲೇ ಭುಗಿಲೆದ್ದ ಆಕ್ರೋಶ
ಚಿತ್ರರಂಗ ಮತ್ತು ರಾಜಕೀಯ ಎರಡು ಒಂದೇ ನಾಣ್ಯದ ಎರಡು ಮುಖ. ಅಲ್ಲಿದ್ದವರು ಇಲ್ಲಿ ಸಲ್ಲುತ್ತಾರೆ. ಇಲ್ಲಿದ್ದವರು ಅಲ್ಲಿಯೂ ಬೆಳೆಯುತ್ತಾರೆ. ಇದಕ್ಕೆ ಅಣ್ಣಾದೊರೈ, ಕರುಣಾನಿಧಿ, ಜಯಲಲಿತಾ ಅವರನ್ನೊಳಗೊಂಡು ವಿಜಯಕಾಂತ್, ಶರತ್ ಕುಮಾರ್, ಕಮಲ್ ಹಾಸನ್ ವರೆಗೆ ಹತ್ತು ಹಲವು ಉದಾಹರಣೆ ಭಾರತೀಯ ಚಿತ್ರರಂಗದಲ್ಲಿವೆ. ಹಾಗಂಥ ಇಲ್ಲಿ ಎಲ್ಲರೂ ಗೆದ್ದಿಲ್ಲ. ತಮಿಳುನಾಡಿನ ಜನ ಯಾರನ್ನು ಸುಲಭವಾಗಿ ತಲೆ ಮೇಲೆ ಹೊತ್ತು
ಸಾವಿರ ಕೋಟಿಯ ಸರದಾರನಾಗುವತ್ತ ರಣವೀರ್ ಸಿಂಗ್ ; ಧುರಂಧರ್ 2 ಅಬ್ಬರ - 3ನೇ ಶನಿವಾರವೂ ಭರ್ಜರಿ ಗಳಿಕೆ
ಮೊದಲೆಲ್ಲಾ ತಮ್ಮ ನೆಚ್ಚಿನ ನಾಯಕನ ಚಿತ್ರ ಬರುತ್ತಿದೆ ಅಂದರೆ ಅಭಿಮಾನಿಗಳಲ್ಲಿ ಒಂದು ರೀತಿಯ ಉತ್ಸಾಹ ಕಾಣುತ್ತಿತ್ತು. ಕಾತುರದಿಂದ ಕಾಯುತ್ತಾ ಕುಳಿತುಕೊಳ್ಳುತ್ತಿದ್ದರು. ಇನ್ನು ಆಗ ಸೋಶಿಯಲ್ ಮೀಡಿಯಾ ಕೂಡ ಪ್ರವರ್ಧಮಾನಕ್ಕೆ ಬಂದಿರಲಿಲ್ಲ. ಓಟಿಟಿಯ ಅಲೆ ಕೂಡ ಎದ್ದಿರಲಿಲ್ಲ. ಹೀಗಾಗಿ ಚಿತ್ರಮಂದಿರಗಳಲ್ಲಿಯೇ ಚಿತ್ರವನ್ನು ಅಭಿಮಾನಿಗಳು ನೋಡಬೇಕಿತ್ತು. ಆದರೆ ಈಗ ಅಂಗೈಯಲ್ಲಿಯೇ ಮನರಂಜನೆ ಇದೆ. ಚಿತ್ರದ ಮೊದಲ ಪ್ರದರ್ಶನ ಮುಕ್ತಾಯ ಆಗುತ್ತಿದ್ದಂತೆಯೇ
ಸದ್ದಿಲ್ಲದೇ ಸಪ್ತಪದಿ ತುಳಿದ ಸುಮುಖ ; 'ಮನದ ಕಡಲು' ಚೆಲುವನ ಮನ ಗೆದ್ದ ಚೆಲುವೆ ಯಾರು ?
ಮದುವೆ ಬದುಕಿನ ಮಹತ್ವದ ಹಂತ. ಇಲ್ಲಿ ಎರಡು ಜೀವಗಳು ಜೀವನದಲ್ಲಿ ಎಷ್ಟೇ ಕಷ್ಟ ಬಂದರೂ ಕುಗ್ಗದೇ ಜೀವನಪೂರ್ತಿ, ಒಬ್ಬರಿಗೊಬ್ಬರು ಬೆನ್ನೆಲುಬಾಗಿ ಜೊತೆಯಾಗಿ ಇರಬೇಕಾದಂತಹ ಒಂದು ಬಂಧನ. ಅದಕ್ಕೆ ಮದುವೆ ಎನ್ನುವುದು ಒಂದೆರಡು ದಿನದ ಆಟ ಅಲ್ಲ, ಜೀವನ ಪೂರ್ತಿ ಸಂಗಾತಿಯ ಜೊತೆ ಬಾಳುತ್ತೇವೆ ಎನ್ನುವುದನ್ನು ಅಧಿಕೃತವಾಗಿ ಘೋಷಿಸುವಂತಹ ಸುಸಂದರ್ಭ. ಇಂತಹದ್ದೊಂದು ಸಂದರ್ಭಕ್ಕೆ ಈ ವರ್ಷದ ಆರಂಭದಲ್ಲಿ ಹಲವರು
ಮಗುವಿನ ಪ್ರಾಣಕ್ಕಾಗಿ ಸಾರ್ವಜನಿಕರಲ್ಲಿ ಮನವಿ ಮಾಡಿದ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ
ಎಲ್ಲರಿಗೂ ನಮಸ್ಕಾರ! ನಾನು ಧ್ರುವ ಸರ್ಜಾ.ನಾನು ಇಂದು ನಿಮ್ಮಲ್ಲಿ ಕೇಳಿಕೊಳ್ಳುತ್ತಿರುವುದಕ್ಕೆ ಕಾರಣ, 2 ವರ್ಷದ ಮಗು ಸಾಯಿ ಚಿರಾಗ್ SMA ಎಂಬ ಅಪರೂಪದ ಅನುವಂಶಿಕ ಕಾಯಿಲೆಯ ವಿರುದ್ಧ ಹೋರಾಡುತ್ತಿದ್ದಾನೆ - ಇದು ಮಗುವಿನ ಚಲಿಸುವ ಮತ್ತು ಉಸಿರಾಡುವ ಸಾಮರ್ಥ್ಯವನ್ನು ಕಸಿದುಕೊಳ್ಳುವ ಕಾಯಿಲೆಯಾಗಿದೆ.ಭಾರತದಲ್ಲಿ ಇದರ ಚಿಕಿತ್ಸೆಗೆ 16 ಕೋಟಿ ರೂಪಾಯಿ ವೆಚ್ಚವಾಗುತ್ತದೆ.ವಿದೇಶದಲ್ಲಿ, ಇದೇ ಚಿಕಿತ್ಸೆಗೆ ಕೇವಲ 2 ಕೋಟಿ
ಬಿಗ್ ಬಾಸ್ನಲ್ಲಿ ತಟ್ಟೆ ತೊಳೆಯೂ ಹಿಂದೇಟು ಹಾಕ್ತಿದ್ದ ಗಿಲ್ಲಿ.. ಜಿಮ್ನಲ್ಲಿ ಭಾರೀ ಕಸರತ್ತು
ಬಿಗ್ ಬಾಸ್ ಕನ್ನಡ ಸೀಸನ್ 12ರ ವಿನ್ನರ್ ಗಿಲ್ಲಿ ನಟ ಹೊರ ಬರತ್ತಿದ್ದಂತೆ ಬದಲಾಗಿದ್ದಾರೆ. ಬಿಗ್ ಬಾಸ್ ಮನೆಯೊಳಗೆ ಇದ್ದಾಗ ಗಿಲ್ಲಿ ವರಸೆ ಬೇರೆನೇ ಇತ್ತು. ಅದೇ ಬಿಗ್ ಬಾಸ್ ಟೈಟಲ್ ಗೆದ್ದು ಬರುತ್ತಿದ್ದಂತೆ ಅವರ ದಾಟಿಯೇ ಬದಲಾಗಿ ಹೋಗಿದೆ. ಇಲ್ಲಿವರೆಗೂ ತಮ್ಮ ಗೆಲುವಿನ ಸಂಭ್ರಮದಲ್ಲಿಯೇ ಇದ್ದ ಗಿಲ್ಲಿ ಈಗ ಕರಿಯರ್ ಅನ್ನು ಸೀರಿಯಸ್ ಆಗಿ ತೆಗೆದುಕೊಂಡಂತೆ
ಮೋಹನ್ ಲಾಲ್ ಬರ್ತ್ಡೇಯಂದೇ ಶುರು ದೃಶ್ಯಂ 3 ಅಬ್ಬರ ; ಹೆಚ್ಚಾಯ್ತು ಲಾಲೆಟ್ಟನ್ ಅಭಿಮಾನಿಗಳ ಸಡಗರ
ಮೋಹನ್ಲಾಲ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದ 'ದೃಶ್ಯಂ 3' ಚಿತ್ರದ ಬಿಡುಗಡೆ ದಿನಾಂಕ ಈಗ ಬದಲಾಗಿದೆ. ಈ ಮೊದಲು ಏಪ್ರಿಲ್ 2 ರಂದು ತೆರೆಗೆ ಬರಬೇಕಿದ್ದ ಈ ಸಿನಿಮಾ, ಈಗ ಮೇ 21, 2026 ರಂದು ಬಿಡುಗಡೆಯಾಗಲಿದೆ. ಕೇರಳದ ಪಾಲಿಗೆ ಅತ್ಯಂತ ಪ್ರಮುಖವಾದ ವಿಷು ಹಬ್ಬ ಹಾಗೂ ಬೇಸಿಗೆ ರಜೆಯ ಸೀಸನ್ನಿಂದ ಈ ಸಿನಿಮಾ ಹೊರಬಂದಂತಾಗಿದೆ. ವಿಶೇಷವೆಂದರೆ, ಹೊಸ
Kotigobba Re-release; 'ಕೋಟಿಗೊಬ್ಬ' ದಾದಾ ಅಬ್ಬರ ನೋಡಲು ಫ್ಯಾನ್ಸ್ ಕಾತರ; ಟಿಕೆಟ್ ಸೋಲ್ಡೌಟ್
ಹಳೇ ಸೂಪರ್ ಹಿಟ್ ಸಿನಿಮಾಗಳನ್ನು ರೀ-ರಿಲೀಸ್ ಮಾಡುವ ಟ್ರೆಂಡ್ ಮುಂದುವರೆದಿದೆ. ಸಾಹಸಸಿಂಹ ವಿಷ್ಣುವರ್ಧನ್ ನಟನೆಯ 'ಕೋಟಿಗೊಬ್ಬ' ಸಿನಿಮಾ ಹೊಸ ರೂಪದಲ್ಲಿ 25 ವರ್ಷಗಳ ಬಳಿಕ ಮತ್ತೆ ತೆರೆಗೆ ಬರ್ತಿದೆ. ಮುಂದಿನ ವಾರ(ಏಪ್ರಿಲ್ 10) ಸಿನಿಮಾ ಮತ್ತೆ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. ವಾರಕ್ಕೂ ಮುನ್ನ ಶೋ ಹೌಸ್ಫುಲ್ ಆಗಿದೆ. 2001ರಲ್ಲಿ 'ಕೋಟಿಗೊಬ್ಬ' ಸಿನಿಮಾ ಬಿಡುಗಡೆಯಾಗಿ 30 ವರ್ಷ
\ಅನುಷ್ಕಾ ಶೆಟ್ಟಿಗೆ ಬಲವಾಗಿ ಕಾಲಿನಿಂದ ಒದ್ದೆ.. ಅದರೂ ಏನೂ ಹೇಳಿಲ್ಲ\- ತೆಲುಗು ನಟ ಅಡವಿ ಶೇಷ್
ತೆಲುಗು ಚಿತ್ರರಂಗದಲ್ಲಿ ಕಮರ್ಷಿಯಲ್ ಸಿನಿಮಾಗಳ ಹಿಂದೆ ಬೀಳದೆ ವಿಭಿನ್ನ ಕಥೆಗಳನ್ನು ಆಯ್ಕೆ ಮಾಡಿಕೊಳ್ಳುವ ನಟ ಅಡವಿ ಶೇಷ್. ಇವರು ಇದೂವರೆಗೂ ನಟಿಸಿದ ಸಿನಿಮಾಗಳು ಪ್ರೇಕ್ಷಕರಿಗೆ ವಿಶಿಷ್ಠ ಅನುಭವವನ್ನು ನೀಡಿದೆ. ತೆಲುಗು ಸಿನಿಮಾಗಳು ಮಾಸ್ ಎಲಿಮೆಂಟ್ಸ್ ಇರಲೇಬೇಕು. ಇಲ್ಲದೇ ಹೋದರೆ, ಸಿನಿಮಾ ಬಾಕ್ಸಾಫೀಸ್ನಲ್ಲಿ ನೆಲಕ್ಕಚ್ಚುತ್ತೆ. ಇಂತಹ ಸಮಯದಲ್ಲಿ ವಿಶಿಷ್ಠ ಸಿನಿಮಾಗಳ ಬೆನ್ನು ಬಿದ್ದು ಗೆದ್ದ ನಟನೀತ. ಹೀಗಾಗಿ ತೆಲುಗು
ನಮ್ಮನ್ನು ಡ*ರ್ ಅಂದ್ರೆ ಹೇಗನಿಸುತ್ತೆ; ನೋವು ತೋಡಿಕೊಂಡ ಆಂಕರ್ ಅನುಶ್ರೀ
ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಅತಿಯಾಗುತ್ತಿದೆ. ಯಾವುದೋ ಮೂಲೆಯಲ್ಲಿ ಕೂತು ಬಾಯಿಗೆ ಬಂದಂತೆ ಕೆಲವರು ಕಾಮೆಂಟ್ ಮಾಡುತ್ತಾರೆ. ಖ್ಯಾತ ನಟ, ನಟಿಯರಿಗೆ ಅಸಭ್ಯ ಪದಗಳನ್ನು ಬಳಸಿ ಕಿರುಕುಳ ಕೊಡುತ್ತಾರೆ. ಸಾಕಷ್ಟು ಜನ ಈ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ. ನಟಿ ಅನುಶ್ರೀ ಈ ರೀತಿಯ ಮಾನಸಿಕ ಕಿರುಕುಳದ ಬಗ್ಗೆ ಮೌನ ಮುರಿದಿದ್ದಾರೆ. ಕಿಡಿಗೇಡಿಗಳು ಸೋಶಿಯಲ್ ಮೀಡಿಯಾದಲ್ಲಿ ಅಟ್ಟಹಾಸ ಮೆರೆಯುತ್ತಾರೆ. ಫೇಕ್
ಜೀ ಕನ್ನಡದ ಸರಿಗಮಪ ರಿಯಾಲಿಟಿ ಶೋ ಮೂಲಕ ರಾಜ್ಯದಾದ್ಯಂತ ಸದ್ದು ಮಾಡಿದ್ದ ಗಾಯಕಿ ಸುಹಾನಾ ಸೈಯ್ಯದ್. ತಮ್ಮ ಗಾಯನದಿಂದಲೇ ಜನರ ಮನ ಗೆದ್ದಿದ್ದರು. ಇವರ ಹಾಡುಗಳಿಗೆ ಜನರು ಭೇಷ್ ಎಂದಿದ್ದರು. ಸರಿಗಮಪದಲ್ಲಿ ಇವರು ಹಾಡಿದ ಹಾಡುಗಳನ್ನು ನೆನಪಿಸಿಕೊಂಡು ಇಂದಿಗೂ ಗುನುಗುವವರು ಇದ್ದಾರೆ. ಕಳೆದ ವರ್ಷ ಸುಹಾನಾ ಸೈಯ್ಯದ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಆ ಬಳಿಕ ತಮ್ಮದೇ ಪ್ರಪಂಚ
ಉಪೇಂದ್ರ ಮನೆ ಸೊಸೆಯಾಗ್ತಾರಾ ಶ್ರೇಯಾಂಕ ಪಾಟೀಲ್ ? ಟಗರು ಪುಟ್ಟಿ ಜೊತೆ ಮದುವೆ - ಮೌನ ಮುರಿದ ನಿರಂಜನ್
ಸೊಸೈಟಿಯಲ್ಲಿ ಆಗಬಹುದಾದ ಸಡನ್ ಸುದ್ದಿಗಳಿಗೆ ಜನಸಾಮಾನ್ಯರು ಟಿವಿ, ನ್ಯೂಸ್ ಪೇಪರ್ ಗಳನ್ನು ನಂಬುವ ಕಾಲ ಮರೆಯಾಯ್ತು. ಅಂಗೈಲ್ಲಿರುವ ಮೊಬೈಲ್ ನಲ್ಲಿಯೇ ಎಲ್ಲ ಸುದ್ದಿಗಳು ಘಟಿಸಿದ ಕೆಲವೇ ಸೆಕೆಂಡುಗಳಲ್ಲಿ ತಲುಪಿಬಿಡುತ್ತದೆ. ಅಷ್ಟರಮಟ್ಟಿಗೆ ತಂತ್ರಜ್ಞಾನ ಬೆಳೆದು, ನೋಡುಗರೇ ನಿಬ್ಬೆರಗಾಗುವಂತೆ ಮಾಡುತ್ತಿದೆ. ಇನ್ನು ಸೋಶಿಯಲ್ ಮೀಡಿಯಾವಂತೂ ಎಲ್ಲ ಮಾಧ್ಯಮಗಳನ್ನು ಸೈಡ್ ಗೆ ತಳ್ಳಿ ತನ್ನ ಕಬಂಧ ಬಾಹುವಿನಿಂದ ಆಕ್ರಮಿಸಿಕೊಂಡುಬಿಟ್ಟಿದೆ. ಆದರೆ ಸೋಶಿಯಲ್
\ರೆಬೆಲ್ ಸ್ಟಾರ್ ಅಂಬರೀಶ್-ಶಿವಣ್ಣ ಆ ಒಂದು ಗುಣದಲ್ಲಿ ಇಬ್ಬರೂ ಒಂದೇ\- ಹಿರಿಯ ನಟ ಡಿಂಗ್ರಿ ನಾಗರಾಜ್
ಕನ್ನಡ ಚಿತ್ರರಂಗದ ಬಗ್ಗೆ ಹಿರಿಯ ಕಲಾವಿದರು ಕಳವಳ ವ್ಯಕ್ತಪಡಿಸುತ್ತಿದ್ದಾರೆ. ಚಿತ್ರರಂಗದಲ್ಲಿ ಒಗ್ಗಟ್ಟಿಲ್ಲ. ಸಿನಿಮಾ ಮಂದಿಯನ್ನು ಒಗ್ಗೂಡಿಸುವ ಶಕ್ತಿಯಿಲ್ಲ. ಹಿರಿಯ ಕಲಾವಿದರಿಗೆ ಮರ್ಯಾದೆನೂ ಸಿಗುತ್ತಿಲ್ಲ ಎಂದು ಆತಂಕವಿದೆ. ಅಣ್ಣಾವ್ರ ಬಳಿಕ ಚಿತ್ರರಂಗದ ಮುಂದಾಳತ್ವವನ್ನು ವಹಿಸಿಕೊಳ್ಳುವುದಕ್ಕೆ ಯಾರೂ ಮುಂದೆ ಬರುತ್ತಿಲ್ಲ ಎಂದು ಬೇಸರ ಪಟ್ಟುಕೊಂಡಿದ್ದಾರೆ. ಇಂತಹ ಹಿರಿಯ ಕಲಾವಿದರಲ್ಲಿ ಡಿಂಗ್ರಿ ನಾಗರಾಜ್ ಕೂಡ ಒಬ್ಬರು. ಅಣ್ಣಾವ್ರ ಮುಂದಾಳತ್ವದಲ್ಲಿ ಕನ್ನಡ ಚಿತ್ರರಂಗ
700 ಕೋಟಿ ಲಾಟರಿಯನ್ನು ಎಡಗಾಲಿನಲ್ಲಿ ಒದ್ದ 'ರಾಮಾಯಣ' ನಿರ್ಮಾಪಕ ; 1000 ಕೋಟಿ ಮೇಲೆ ಕಣ್ಣು
ಹಿಂದೆ ಒಂದು ಕಾಲ ಇತ್ತು. ಆ ಕಾಲದಲ್ಲಿ ಚಿತ್ರವನ್ನು ಪ್ರೇಕ್ಷಕರು ಚಿತ್ರಮಂದಿರದಲ್ಲಿಯೇ ನೋಡುತ್ತಿದ್ದರು. ನಗರದ ಸುತ್ತಮುತ್ತ ಇದ್ದ ಹಳ್ಳಿಯ ಜನ ಟ್ರ್ಯಾಕ್ಟರ್.. ಎತ್ತಿನ ಬಂಡಿಯಲ್ಲಿ ಬಂದು ತಮ್ಮ ನೆಚ್ಚಿನ ನಾಯಕನ-ನಿರ್ದೇಶಕನ-ನಾಯಕಿಯ ಚಿತ್ರವನ್ನು ಕಣ್ತುಂಬಿಕೊಳ್ಳುತ್ತಿದ್ದರು. ಆದರೆ.. ಈಗ ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಅಂಗೈಯಲ್ಲಿಯೇ ಮನರಂಜನೆ ಇದೆ. ಚಿತ್ರಮಂದಿರದಲ್ಲಿ ಚಿತ್ರ ನೋಡಲು ಆಗದೇ ಇದ್ದರೆ ಟಿವಿಯಲ್ಲಿ ಬರುವವರೆಗೆ
'ಧುರಂಧರ್ 2’ ಕಥೆ ವಿವಾದ ; ಚಿಂದಿ ಚೋರ್ ಎಂದ ಕನ್ನಡದ ನಿರ್ದೇಶಕನಿಗೆ ಆದಿತ್ಯ ಧರ್ ತಿರುಗೇಟು
ಭಾರತೀಯ ಚಿತ್ರರಂಗದಲ್ಲಿ ಹಲವರಿಗೆ ಕದಿಯುವ ಮನೋವ್ಯಾದಿ ಇದೆ. ಕೆಲವರು ಸಂಗೀತ ಕದ್ದರೆ, ಇನ್ನೂ ಕೆಲವರು ಬೇರೆ ಭಾಷೆಯಲ್ಲಿ ಗಮನ ಸೆಳೆದ ಪೋಸ್ಟರ್ಗಳನ್ನು ಕೂಡ ತಮ್ಮದೇ ವಿನ್ಯಾಸವೆನ್ನುವಂತೆ ತೋರ್ಪಡಿಸುತ್ತಾರೆ. ಮತ್ತೂ ಕೆಲವರು ನಮ್ಮನ್ಯಾರು ಕೇಳ್ತಾರೆ ಎಂಬ ಮನೋಭಾವದಲ್ಲಿ ಕಥೆ ಹೇಳಿದವರ ಅಪ್ಪಣೆಯನ್ನು ಕೂಡ ಕೇಳದೇ ಯಥಾವತ್ತಾಗಿ ನಕಲು ಮಾಡುತ್ತಾರೆ. ಈ ಸಾಲಿನಲ್ಲಿ ಬಾಲಿವುಡ್ನ ''ಧುರಂಧರ್'' ಆದಿತ್ಯ ಧರ್ ಕೂಡ
ರಣಬೀರ್ ಕಪೂರ್ ಮುಖದಲ್ಲಿ ಮುಗ್ಧತೆಯೇ ಇಲ್ಲ; ರಮಾನಂದ್ ಸಾಗರ್ 'ರಾಮಾಯಣ'ದ ಲಕ್ಷ್ಮಣ ಕೆಂಡ..ಕೆಂಡ
''ರಾಮಾಯಣ'', ''ಮಹಾಭಾರತ''ದಂತಹ ಮಹಾನ್ ದೃಶ್ಯ ಕಾವ್ಯಗಳಲ್ಲಿ ರಾಮ, ಲಕ್ಷ್ಮಣ, ಸೀತೆ, ಕೃಷ್ಣ, ಅರ್ಜುನ ಮುಂತಾದ ಪಾತ್ರಧಾರಿಗಳು ಹೇಗೆ ಇದ್ದರು ಎನ್ನುವುದು ಒಂದು ಕಾಲ್ಪನಿಕ ಸೃಷ್ಟಿ. ಆದರೂ ಕೂಡ ಇಂತಹ ಪಾತ್ರಗಳನ್ನು ತೆರೆಯ ಮೇಲೆ ತರುವಾಗ ಮೈಯೆಲ್ಲಾ ಕಣ್ಣಾಗಿರಬೇಕು. ಆ ಪಾತ್ರಗಳನ್ನು ನಿರ್ವಹಿಸುವ ವ್ಯಕ್ತಿ ಕೂಡ ಅಷ್ಟೇ ಸಮರ್ಥವಾಗಿ ಆ ಪಾತ್ರಕ್ಕೆ ಜೀವ ತುಂಬಬೇಕು. ಇಲ್ಲದೇ ಹೋದರೆ ಅಭಾಸ
ಹೊಂಬಾಳೆ, ರಿಷಬ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ!
ಯಶಸ್ಸಿನಲ್ಲಿ ಹುಟ್ಟಿಕೊಂಡ ಸ್ನೇಹ ವೈಫಲ್ಯದ ಅಥವಾ ನಿರೀಕ್ಷೆ ನೆರವೇರದ ದಿನಗಳ ತನಕ ಮಾತ್ರ ಉಳಿಯುತ್ತದೆ. ಇದಕ್ಕೆ ಉದಾಹರಣೆಯಾಗಿ ಕಳೆದ ವಾರವಷ್ಟೇ ರವಿಚಂದ್ರನ್ ಮತ್ತು ಹಂಸಲೇಖ ಸಂಬಂಧದ ಬಗ್ಗೆ ಮಾತನಾಡಿದ್ದೆವು. ಇದೀಗ ಅಂಥದೇ ಒಂದು ಉದಾಹರಣೆಯಾಗಿ ರಿಷಬ್ ಶೆಟ್ಟಿ ಮತ್ತು ವಿಜಯ್ ಕಿರಗಂದೂರ್ ಬಗ್ಗೆ ಹೇಳಬೇಕಾದ ಸಂದರ್ಭ ಬಂದಿದೆ. ಈ ಅನ್ ಫಾಲೋ ಎನ್ನುವುದನ್ನು ರಿಷಬ್ ಶೆಟ್ಟಿ ಕೇವಲ ಸೋಶಿಯಲ್ ಮೀಡಿಯಾಗೆ ಮಾತ್ರ ಸೀಮಿತಗೊಳಿಸಿದ್ದಲ್ಲಿ ವಿಶೇಷವೇನೂ ಇರಲಿಲ್ಲ. ಆದರೆ ರಿಷಬ್ ಹೆಚ್ಚು ಕಡಿಮೆ ವಿಜಯ್ ಕಿರಗಂದೂರ್ ಅವರನ್ನು ಮರೆತೇಬಿಟ್ಟಿರುವ ಹಾಗಿದೆ. ಅದಕ್ಕೊಂದು ಸ್ಪಷ್ಟ ನಿದರ್ಶನವಾದಂಥ ಘಟನೆ ಕೂಡ ಸಂಭವಿಸಿದೆ. ಅದು ಮಾರ್ಚ್ ತಿಂಗಳ ಅಂತ್ಯದಲ್ಲಿ ನಡೆದಂಥ ಘಟನೆ. ಕಳೆದ ವರ್ಷ ತೆರೆಕಂಡ ಚಿತ್ರಗಳಲ್ಲಿ ಅತ್ಯುತ್ತಮವಾದವುಗಳಿಗೆ ಪ್ರಶಸ್ತಿ ನೀಡುವಂಥ ಕಾರ್ಯಕ್ರಮ. ಅವುಗಳಲ್ಲಿ ‘ಕಾಂತಾರ ಅಧ್ಯಾಯ-1’ ಚಿತ್ರ ಬರೋಬ್ಬರಿ ಒಂಭತ್ತು ವಿಭಾಗಗಳಲ್ಲಿ ಪ್ರಶಸ್ತಿ ಗೆದ್ದಿತ್ತು. ಆದರೆ ಪ್ರಶಸ್ತಿ ಪಡೆಯಲು ಹೊಂಬಾಳೆ ಸಂಸ್ಥೆಯಿಂದ ಯಾರೂ ಬಂದಿರಲಿಲ್ಲ. ಸಾಮಾನ್ಯವಾಗಿ ಪ್ರಶಸ್ತಿ ಸಮಾರಂಭಗಳಲ್ಲಿ ನಿರ್ಮಾಪಕರು ಗಮನ ಸೆಳೆಯುವುದು ಕಡಿಮೆಯೇ. ಅದರೆ ಶ್ರೇಷ್ಠ ಚಿತ್ರ ಪ್ರಶಸ್ತಿ ಘೋಷಣೆಯಾದಾಗ ಅದನ್ನು ಪಡೆಯಲು ನಿರ್ಮಾಪಕರೇ ಬರುತ್ತಾರೆ. ಆಸ್ಕರ್ನಿಂದ ಹಿಡಿದು ರಾಷ್ಟ್ರ ಪ್ರಶಸ್ತಿ ತನಕ ಇಂಥ ಪ್ರಶಸ್ತಿಯನ್ನು ಚಿತ್ರದ ಅಧಿಕೃತ ನಿರ್ಮಾಣ ಸಂಸ್ಥೆಯ ಮಾಲಕರೇ ಪಡೆಯಲು ಅರ್ಹರಾಗುತ್ತಾರೆ. ರಾಜ್ಯ ಮಟ್ಟದ ಪ್ರಶಸ್ತಿ ಪಡೆಯುವಾಗ ಮಾತ್ರ ಅಧಿಕೃತ ನಿರ್ಮಾಪಕರ ಪರವಾಗಿ ಬಂದವರು ಕೂಡ ವೇದಿಕೆ ಮೇಲೇರಿ ಪ್ರಶಸ್ತಿ ಪಡೆಯಬಹುದು. ಮೊನ್ನೆಯ ಪ್ರಶಸ್ತಿ ಸಮಾರಂಭದಲ್ಲಿ ಕೂಡ ಅಂಥದ್ದೇ ಅವಕಾಶಗಳಿದ್ದವು. ಅದು ಕನ್ನಡದ ಚಿತ್ರರಂಗದಲ್ಲಿ ತಕ್ಕಮಟ್ಟಿಗೆ ಹೆಸರು ಮಾಡುತ್ತಿರುವಂಥ ಸಮಾರಂಭ. ಮಾತ್ರವಲ್ಲ, ಒಂದಲ್ಲ ಎರಡಲ್ಲ ಬರೋಬ್ಬರಿ 9 ಪ್ರಶಸ್ತಿಗಳನ್ನು ಬಾಚಿರುವಂಥ ವೇದಿಕೆ. ಪ್ರಶಸ್ತಿ ನೀಡಲು ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಗಿರೀಶ್ ಕಾಸರವಳ್ಳಿಯಿಂದ ಹಿಡಿದು ಹಿರಿಯ ನಿರ್ಮಾಪಕ ರಾಕ್ಲೈನ್ ವೆಂಕಟೇಶ್, ಲೆಜೆಂಡ್ ನಿರ್ಮಾಣ ಸಂಸ್ಥೆಯ ಮಾಲಕ, ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಮೊದಲಾದವರು ಇದ್ದಂಥ ವೇದಿಕೆ. ಬೆಂಗಳೂರಿನ ಕೇಂದ್ರ ಭಾಗವಾದ ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮ. ಹೀಗೆ ಯಾವ ರೀತಿಯಿಂದ ನೋಡಿದರೂ ಖುದ್ದು ವಿಜಯ್ ಕಿರಗಂದೂರ್ ಆಗಮಿಸಿ ಪ್ರಶಸ್ತಿ ಪಡೆಯಲು ಯೋಗ್ಯವಾದ ಸಂದರ್ಭ ಅದಾಗಿತ್ತು. ಆದರೆ ವಿಜಯ್ ಕಿರಗಂದೂರ್ ಬಿಡಿ, ಅವರ ಸಹ ನಿರ್ಮಾಪಕರಾಗಲೀ ಅಥವಾ ಹೊಂಬಾಳೆ ತಂಡವನ್ನು ಪ್ರತಿನಿಧಿಸಿದ ಒಬ್ಬರೇ ಆಗಲೀ ಅಲ್ಲಿರಲಿಲ್ಲ. ಅದೇ ಸಂದರ್ಭದಲ್ಲಿ ಹೊಂಬಾಳೆ ಸಂಸ್ಥೆಗೆ ಸೇರಬೇಕಾದ ಪ್ರಶಸ್ತಿಯನ್ನು ಪಡೆದುಕೊಂಡ ರಿಷಬ್ ಶೆಟ್ಟಿ ಕೂಡ ಸಂಸ್ಥೆ ಬಗ್ಗೆ ಒಂದಕ್ಷರವನ್ನೂ ಮಾತನಾಡಲಿಲ್ಲ! ‘ಕಾಂತಾರ ಅಧ್ಯಾಯ-1’ ಚಿತ್ರಕ್ಕೆ ಒಂಭತ್ತು ಪ್ರಮುಖ ವಿಭಾಗಗಳಲ್ಲಿ ಪ್ರಶಸ್ತಿಗಳ ಘೋಷಣೆಯಾಗಿತ್ತು. ಅತ್ಯುತ್ತಮ ವಿಎಫೆಕ್ಸ್, ಅತ್ಯುತ್ತಮ ಕಲಾ ನಿರ್ದೇಶನ, ಅತ್ಯುತ್ತಮ ಸಾಹಸ ನಿರ್ದೇಶನ, ಅತ್ಯುತ್ತಮ ಛಾಯಾಗ್ರಹಣ, ಅತ್ಯುತ್ತಮ ಗಾಯಕ, ಅತ್ಯುತ್ತಮ ಸಂಗೀತ ಎನ್ನುವುದರೊಂದಿಗೆ ರಿಷಬ್ ಶೆಟ್ಟಿಯವರಿಗೆ ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ನಟ ಪ್ರಶಸ್ತಿಯೂ ಲಭಿಸಿತ್ತು. ಅವೆರಡನ್ನು ಕೂಡ ಎರಡೆರಡು ಬಾರಿ ವೇದಿಕೆ ಮೇಲೇರಿ ಬಂದು ಪಡೆದುಕೊಂಡವರು ಖುದ್ದು ರಿಷಬ್ ಶೆಟ್ಟಿ. ಬಹುಶಃ ಹೀಗೆ ಎರಡೆರಡು ಪ್ರಮುಖ ಪ್ರಶಸ್ತಿಗಳು ತಮಗೆ ದೊರಕಿರುವ ಕಾರಣದಿಂದಲೇ ರಿಷಬ್ ಈ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ. ಆದರೆ ರಿಷಬ್ ಬರುತ್ತಾರೆ ಎನ್ನುವುದು ಖಚಿತವಾದ ಕಾರಣದಿಂದಲೇ ನಿರ್ಮಾಣ ಸಂಸ್ಥೆಯಿಂದ ಯಾರೂ ಬಂದಿಲ್ಲ ಎನ್ನಲಾಗುತ್ತಿದೆ. ಯಾಕೆಂದರೆ ‘ಫಾಲೋ ಮಾಡುವುದನ್ನು’ ನಿಲ್ಲಿಸಿದ ವ್ಯಕ್ತಿಯನ್ನು ಮುಖಾಮುಖಿಯಾಗಲು ಹೊಂಬಾಳೆಗೂ ವಿರೋಧವಿರುವ ಹಾಗಿದೆ. ರಿಷಬ್ ಕೂಡ ಅದುವರೆಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕೊನೆಯ ಪ್ರಮುಖ ಮೂರು ಪ್ರಶಸ್ತಿಗಳಲ್ಲಿ ನೇರವಾಗಿ ತಮಗೆ ಸಂಬಂಧಿಸಿದ ಎರಡು ಪ್ರಶಸ್ತಿಗಳನ್ನು ಮಾತ್ರ ಪಡೆದುಕೊಂಡು ಹೊರಟು ನಿಂತಿದ್ದರು. ಯಾಕೆಂದರೆ ಶ್ರೇಷ್ಠ ಚಿತ್ರ ಪ್ರಶಸ್ತಿ ಎನ್ನುವುದು ನಿರ್ಮಾಣ ಸಂಸ್ಥೆಗೆ ಮೀಸಲಾದ ಪ್ರಶಸ್ತಿ ಎನ್ನುವುದು ಖುದ್ದು ರಿಷಬ್ ಶೆಟ್ಟಿಗೂ ತಿಳಿದಿತ್ತು. ಆದರೆ ಹೊಂಬಾಳೆಗೆ ಸಂಬಂಧಿಸಿದ ಯಾರೂ ಇಲ್ಲ, ನೀವೇ ಪಡೆಯಬೇಕು ಎಂದು ಆಯೋಜಕರು ಒತ್ತಾಯಿಸಿದ ಕಾರಣ ಮತ್ತೊಮ್ಮೆ ರಿಷಬ್ ಆ ವೇದಿಕೆ ಮೇಲೇರಿದ್ದಾರೆ ಎನ್ನಲಾಗಿದೆ. ರಿಷಬ್ ಶೆಟ್ಟಿಯವರ ಅದುವರೆಗಿನ ವರ್ತನೆ ಸಮರ್ಥನೀಯವೇ ಆಗಿತ್ತು. ಆನಂತರದ ಭಾಷಣ ಮಾತ್ರ ತೀರ ಅನಿರೀಕ್ಷಿತವಾಗಿರುವಂಥದ್ದು. ‘ಕಾಂತಾರ’ ಎನ್ನುವ ಚಿತ್ರದ ಮೊದಲ ಭಾಗ ಶುರುವಾದಾಗಿನಿಂದಲೂ ರಿಷಬ್ ಹೆಚ್ಚು ಮೆಚ್ಚುಗೆ ಮಾತನಾಡಿದ್ದು ಅಂದರೆ ಅದು ’ಹೊಂಬಾಳೆ’ ಎನ್ನುವ ಸಂಸ್ಥೆಯ ಬಗ್ಗೆ. ಪ್ರತೀ ವೇದಿಕೆಯಲ್ಲಿಯೂ ಹೊಂಬಾಳೆ ಇರದಿದ್ದರೆ ಇಷ್ಟು ದೊಡ್ಡ ಕನಸು ನನಸೇ ಆಗುತ್ತಿರಲಿಲ್ಲ ಅಂತಿದ್ದ ರಿಷಬ್, ಈ ಬಾರಿ ಮಾತ್ರ ನಿರ್ಮಾಣ ಸಂಸ್ಥೆ ಬಗ್ಗೆ ಸೊಲ್ಲೇ ಎತ್ತಿಲ್ಲ. ಅದು ಎರಡೆರಡು ಬಾರಿ ವೇದಿಕೆ ಏರಿ ಅತ್ಯುತ್ತಮ ನಟ, ನಿರ್ದೇಶಕ ಪ್ರಶಸ್ತಿ ಪಡೆದಾಗ ಮಾತ್ರವಲ್ಲ, ಶ್ರೇಷ್ಠ ಚಿತ್ರ ಪ್ರಶಸ್ತಿ ಪಡೆದಾಗಲೂ ಅಷ್ಟೇ. ಆದರೆ ಅಂಥದೊಂದು ಆಪಾದನೆಯಿಂದ ದೂರಾಗಲೂ ರಿಷಬ್ ಒಂದೊಳ್ಳೆಯ ಉಪಾಯವನ್ನೇ ಮಾಡಿದ್ದಾರೆ. ‘ಕಾಂತಾರ’ಕ್ಕೆ ಸಂಬಂಧಿಸಿದಂತೆ ಅಲ್ಲಿಗೆ ಬಂದಿದ್ದವರನ್ನೆಲ್ಲ ವೇದಿಕೆಗೆ ಕರೆದಿದ್ದಾರೆ. ಪ್ರತಿಯೊಬ್ಬರೂ ಮಾತನಾಡಬೇಕು ಎಂದಿದ್ದಾರೆ! ಈ ಸಂದರ್ಭದಲ್ಲಿ ಮೈಕ್ ಪಡೆದುಕೊಂಡ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್, ಅತ್ಯುತ್ತಮ ಚಿತ್ರ ಪ್ರಶಸ್ತಿ ಬಂದಿದ್ದಕ್ಕಾಗಿ ರಿಷಬ್ಗೆ ಕಂಗ್ರಾಚ್ಯುಲೇಶನ್ ಹೇಳಿದ್ದಾರೆ. ಆದರೆ ಇದು ಪೂರ್ತಿ ತಂಡಕ್ಕೆ ಸೇರಿದ್ದು ಎಂದಿದ್ದಾರೆ, ರಿಷಬ್ ಶೆಟ್ಟಿ. ತಕ್ಷಣ ಅಜನೀಶ್ ಅವರು ಹೊಂಬಾಳೆ ಸಂಸ್ಥೆ ಮತ್ತು ವಿಜಯ್ ಕಿರಗಂದೂರ್ ಹೆಸರನ್ನು ನೆನಪಿಸಿಕೊಂಡಿದ್ದಾರೆ. ಒಂದು ವೇಳೆ ರಿಷಬ್ ಆಕಸ್ಮಿಕವಾಗಿ ಮರೆತಿದ್ದೇ ಆಗಿದ್ದಲ್ಲಿ, ಖಂಡಿತವಾಗಿ ಈ ಸಂದರ್ಭದಲ್ಲಿ ಆದರೂ ಎಚ್ಚರಗೊಳ್ಳಬೇಕಿತ್ತು. ಆದರೆ ರಿಷಬ್ ಶೆಟ್ಟಿಯವರು ಅಜನೀಶ್ ಮಾತು ಗಮನಿಸಿಯೂ ಗಮನಿಸದಂತೆ ಸುಮ್ಮನಾಗಿದ್ದಾರೆ! ಇದನ್ನೆಲ್ಲ ಗಮನಿಸುವಾಗ ರಶ್ಮಿಕಾ ಘಟನೆ ನೆನಪಾಗುತ್ತದೆ. ಟಾಲಿವುಡ್ನಲ್ಲಿ ಹೆಸರು ಮಾಡುತ್ತಿರುವಂತೆ ರಶ್ಮಿಕಾ ನೀಡಿದ ಸಂದರ್ಶನವೊಂದರಲ್ಲಿ ‘ಕಿರಿಕ್ ಪಾರ್ಟಿ’ ಚಿತ್ರದಲ್ಲಿ ಅವಕಾಶ ಕೊಟ್ಟ ನಿರ್ಮಾಣ ಸಂಸ್ಥೆಯ ಹೆಸರನ್ನೇ ಹೇಳದಾಗಿದ್ದರು. ಆಕೆಗೆ ರಿಷಬ್ ತಂಡದೊಂದಿಗೆ ಅದೇನೇ ವೈಷಮ್ಯ ಇದ್ದರೂ ಮೊದಲ ಚಿತ್ರದ ಅವಕಾಶ ನೀಡಿದ ನಿರ್ಮಾಣ ಸಂಸ್ಥೆಯ ಹೆಸರನ್ನು ಹೇಳದೇ ಹೋಗಿದ್ದು ತಪ್ಪು ಎನ್ನುವುದು ಆಗ ಎಲ್ಲರ ಅಭಿಪ್ರಾಯ ಆಗಿತ್ತು. ರಿಷಬ್ ಶೆಟ್ಟಿ ಕೂಡ ಪ್ರೊಡಕ್ಷನ್ ಹೌಸ್ ಬಗ್ಗೆ ಪ್ರಸ್ತಾಪಿಸದ ರಶ್ಮಿಕಾ ಆಂಗಿಕ ವರ್ತನೆಯನ್ನೇ ಹಂಗಿಸುವಂತೆ ಒಂದು ಪ್ರತಿಕ್ರಿಯೆ ಕೂಡ ನೀಡಿದ್ದರು. ಅಲ್ಲಿಂದ ರಶ್ಮಿಕಾ ಮಂದಣ್ಣ ಸೋಶಿಯಲ್ ಮೀಡಿಯಾದಲ್ಲಿ ತೀವ್ರವಾಗಿ ಟ್ರೋಲ್ಗೆ ಒಳಗಾಗಿದ್ದರು. ರಶ್ಮಿಕಾ ಮತ್ತು ರಿಷಬ್ ವರ್ತನೆಗಳನ್ನು ಒಂದೇ ತಕ್ಕಡಿಯಲ್ಲಿ ತೂಗುವುದು ಕಷ್ಟ. ಯಾಕೆಂದರೆ ಇಬ್ಬರಿಗೂ ಹೆಸರು ಅವಾಯ್ಡ್ ಮಾಡಬೇಕಾದ ಸಂದರ್ಭ ಬಂದಿದ್ದೇಕೆ ಎನ್ನುವುದನ್ನು ಇಬ್ಬರೂ ಅಧಿಕೃತವಾಗಿ ಹೇಳಿಕೊಂಡಿಲ್ಲ. ಆದರೆ ರಶ್ಮಿಕಾ ಇಂಥ ವರ್ತನೆ ತೋರಿಸುವಾಗ ಅದಾಗಲೇ ತೆಲುಗು ಚಿತ್ರರಂಗದಲ್ಲಿ ಸ್ಟಾರ್ ನಟಿಯಾಗಿದ್ದರು. ಮಾತ್ರವಲ್ಲ ಆ ಸಂದರ್ಭದಲ್ಲಿ ನಿರ್ಮಾಣ ಸಂಸ್ಥೆಯ ಹೆಸರನ್ನು ಹೇಳಲೇಬೇಕಾದ ಅನಿವಾರ್ಯತೆ ಕೂಡ ಇರಲಿಲ್ಲ. ಆದರೆ ರಿಷಬ್ ಶೆಟ್ಟಿಯವರು ಹೊಂಬಾಳೆ ನಿರ್ಮಾಣ ಸಂಸ್ಥೆ ಹೆಸರನ್ನು ಅದೇ ನಿರ್ಮಾಪಕರ ಚಿತ್ರಕ್ಕೆ ಸಂಬಂಧಿಸಿದ ಪ್ರಶಸ್ತಿ ಪಡೆಯುವಾಗಲೇ ಮರೆತಿದ್ದಾರೆ. ಅಂದು ರಿಷಬ್, ರಶ್ಮಿಕಾಗೆ ಕಾಲೆಳೆಯುವ ರೀತಿಯಲ್ಲೇ ಕೈ ಸನ್ನೆ ತೋರಿಸಿದ್ದರು. ಆದರೆ ಈಗ ಕಾಲ ಬದಲಾಗಿದೆ. ರಶ್ಮಿಕಾ ಅಭಿಮಾನಿಗಳಿಗೂ ರಿಷಬ್ ವರ್ತನೆ ಬಗ್ಗೆ ಆಡಿಕೊಳ್ಳಲು ಸಂದರ್ಭ ಸೃಷ್ಟಿಯಾಗಿದೆ. ತನ್ನನ್ನು ಮೊದಲ ಬಾರಿಗೆ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಜಗತ್ತಿನ ಮುಂದೆ ತೋರಿಸಿದ ಹೊಂಬಾಳೆ ಸಂಸ್ಥೆಯನ್ನೇ, ಖುದ್ದು ರಿಷಬ್ ಶೆಟ್ಟಿ ಮರೆತು ಮುಂದಡಿ ಇಟ್ಟಿದ್ದಾರೆ. ಯಾಕೆಂದರೆ ಇದೇ ಸಂದರ್ಭದಲ್ಲಿ ರಿಷಬ್ ತಾವು ಸದ್ಯದಲ್ಲೇ ಮತ್ತೆ ನಿರ್ದೇಶನ ಮಾಡಲಿರುವ ಬಗ್ಗೆಯೂ ಘೋಷಿಸಿದ್ದಾರೆ. ಈ ಬಾರಿ ತಮ್ಮದೇ ನಿರ್ಮಾಣ ಸಂಸ್ಥೆಗೆ ಮರಳುತ್ತಿರುವುದಾಗಿ ಈಗಾಗಲೇ ಸೋಶಿಯಲ್ ಮೀಡಿಯಾದಲ್ಲೂ ಹೇಳಿಕೊಂಡಾಗಿದೆ. ಹೀಗಾಗಿ ಸೋಶಿಯಲ್ ಮೀಡಿಯಾದಲ್ಲಿ ಹೊಂಬಾಳೆ ಸಂಸ್ಥೆಯನ್ನು ಅನ್ ಫಾಲೊ ಮಾಡಿರುವುದರ ಹಿಂದೆ ಗಟ್ಟಿಯಾದ ಕಾರಣವೇ ಇದೆ ಎನ್ನುವುದು ಸಾಬೀತಾಗಿದೆ. ಅದೇನು ಎನ್ನುವುದು ಮುಂದಿನ ದಿನಗಳಲ್ಲಿ ಜಾಹೀರಾಗದೆ ಇರಲಾರದು. ಸದ್ಯಕ್ಕೆ ರಿಷಬ್ ಹೊಂಬಾಳೆ ಹೆಸರನ್ನು ಉಲ್ಲೇಖಿಸಲು ಅವಾಯ್ಡ್ ಮಾಡಿರುವ ವೀಡಿಯೊ ಸಾರ್ವಜನಿಕವಾಗಿ ಹೆಚ್ಚು ಲಭ್ಯವಾದ ಹಾಗಿಲ್ಲ. ಒಂದು ವೇಳೆ ಸಿಕ್ಕರೂ ಈ ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ರಶ್ಮಿಕಾ ಮಟ್ಟಕ್ಕೆ ರಿಷಬ್ ಟ್ರೋಲ್ ನಡೆಯುವ ಸಾಧ್ಯತೆ ಕೂಡ ಇಲ್ಲ. ಮಾತ್ರವಲ್ಲ ‘ಹೊಂಬಾಳೆ’ಯ ನೆರಳಿಲ್ಲದೆ ರಿಷಬ್ ಶೆಟ್ಟಿ ಮತ್ತೊಂದು ಪ್ಯಾನ್ ಇಂಡಿಯಾ ಗೆಲುವು ಕಂಡರೆ ಸಿನೆಮಾ ಪ್ರಿಯರು ಕೂಡ ರಿಷಬ್ ಅವರ ವರ್ತನೆಗಳನ್ನು ಮರೆತು ಬಿಡುವುದರಲ್ಲಿ ಸಂದೇಹವಿಲ್ಲ.
''ಅಮೃತಧಾರೆ'' ಧಾರಾವಾಹಿಯಲ್ಲಿ ಮಲ್ಲಿ ಮತ್ತು ಸುನಿಯ ಮದುವೆ ನಡೆದಿದೆ. ಮಲ್ಲಿ ಮೊಗದಲ್ಲಿ ಮಂದಹಾಸ ಮೂಡಿದೆ. ಆದರೆ, ಜೈದೇವ್ ನೆಮ್ಮದಿಗೆ ಕೊಳ್ಳಿ ಬಿದ್ದಿದೆ. ಮಲ್ಲಿಯ ಬದುಕನ್ನು ಹೇಗಾದರೂ ಮಾಡಿ ಹಾಳು ಮಾಡಬೇಕೆಂದುಕೊಂಡ ಕನಸು ಕಮರಿದೆ. ಹಾಗಂಥ, ಜೈದೇವ್ ಸುಮ್ಮನೆ ಕೂರುವ ವ್ಯಕ್ತಿಯಲ್ಲ. ಒಂದಿಲ್ಲೊಂದು ಪ್ಲಾನ್ ಮಾಡುವ ಕೇಡಿ. ಅವರೆಲ್ಲಾ ನಾನು ಸೋತೆ ಎಂದುಕೊಂಡು ಖುಷಿ ಪಡುತ್ತಿರಬಹುದು, ಆದರೆ...ಸೋತಿರುವನ ಪ್ರತೀಕಾರ
ಖ್ಯಾತ ನಿರ್ಮಾಪಕರು ನಿನ್ನ ನೋಡಬೇಕಂತೆ ರೆಸಾರ್ಟ್ಗೆ ಬಾ ; ತೆಲುಗು ಚಿತ್ರರಂಗದ ಕೊಳಕು ವ್ಯವಸ್ಥೆ ಬಯಲು ಮಾಡಿದ ಚೆಲುವೆ
ಬಣ್ಣದ ಲೋಕದಲ್ಲಿ ಅಮಾಯಕ ಹೆಣ್ಣು ಮಕ್ಕಳನ್ನು ಕಂಡರೆ ಮುಕ್ಕಿ ತಿನ್ನುವರು ತುಂಬಾ ಜನ ಇದ್ದಾರೆ. ಇಲ್ಲಿ ಬಹುತೇಕರಲ್ಲ ಆದರೆ ಕೆಲವರು ಮುಖವಾಡದ ಬದುಕನ್ನು ಬದುಕುತ್ತಾರೆ. ಕೆಲವರು ಪ್ರಚಾರದ ಹುಚ್ಚಿಗೆ ಬರುತ್ತಾರೆ, ಇನ್ನೂ ಕೆಲವರು ಹೆಣ್ಣಿನ ಚಪಲಕ್ಕಾಗಿ ಸಿನಿಮಾ ನಿರ್ಮಾಣ ಮಾಡಲು ಬರುತ್ತಾರೆ. ಕನ್ನಡ, ತಮಿಳು, ತೆಲುಗು, ಹಿಂದಿ, ಮಲಯಾಳಂ, ಹೀಗೆ.. ಆ ಇಂಡಸ್ಟ್ರೀ ಈ ಇಂಡಸ್ಟ್ರೀ ಅಂತ
ಸಂಭಾವನೆ ಜೊತೆಗೆ ಲಾಭದಲ್ಲಿ ಪಾಲು.. ಎ. ಆರ್ ರಹಮಾನ್ ಹೊಸ ದಾಖಲೆ; ಯಶ್ ಕೂಡ ನಟಿಸಿರೋ ಸಿನಿಮಾ
ಭಾರತೀಯ ಸಿನಿಮಾಗಳಲ್ಲಿ ಸಂಗೀತಕ್ಕೆ ಬಹಳ ಮಹತ್ವ ಇದೆ. ಹಾಡುಗಳ ಜೊತೆಗೆ ಹಿನ್ನೆಲೆ ಸಂಗೀತ ಬಹಳ ಮುಖ್ಯವಾಗುತ್ತದೆ. ಹಾಗಾಗಿ ಸಂಗೀತದ ಬಗ್ಗೆ ಫಿಲ್ಮ್ ಮೇಕರ್ಸ್ ಬಹಳ ತಲೆ ಕೆಡಿಸಿಕೊಳ್ಳುತ್ತಾರೆ. ಇತ್ತೀಚೆಗೆ ಕೋಟಿ ಕೋಟಿ ಸಂಭಾವನೆ ಕೊಟ್ಟು ಟ್ಯೂನ್ ಹಾಕಿಸುತ್ತಾರೆ. ಪ್ಯಾನ್ ಇಂಡಿಯಾ ಸಿನಿಮಾಗಳ ಟ್ರೆಂಡ್ ಶುರುವಾದ ಬಳಿಕ ಕಲಾವಿದರ ಸಂಭಾವನೆ ರೀತಿ ತಂತ್ರಜ್ಞರ ಸಂಭಾವನೆ ಕೂಡ ಹೆಚ್ಚಾಗಿದೆ. ಆಸ್ಕರ್
'ರಾಮಾಯಣ' ಚಿತ್ರದಲ್ಲಿ ಒಂದಲ್ಲ ಎರಡಲ್ಲ ಮೂರು ಪಾತ್ರಗಳಲ್ಲಿ ರಣ್ಬೀರ್ ಕಪೂರ್ ನಟನೆ
ನಿತೇಶ್ ತಿವಾರಿ ಸಾರಥ್ಯದ 'ರಾಮಾಯಣ' ಚಿತ್ರದಲ್ಲಿ ಪಾತ್ರಗಳ ಆಯ್ಕೆ ಬಹಳ ವಿಶೇಷವಾಗಿದೆ. ಬಾಲಿವುಡ್ ಕಲಾವಿದರ ಜೊತೆಗೆ ದಕ್ಷಿಣದ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಶ್ರೀರಾಮನಾಗಿ ರಣ್ಬೀರ್ ಕಪೂರ್, ರಾವಣನಾಗಿ ಯಶ್, ಸೀತೆಯಾಗಿ ಸಾಯಿ ಪಲ್ಲವಿ, ಹನುಮಂತನಾಗಿ ಸನ್ನಿ ಡಿಯೋಲ್, ಲಕ್ಷ್ಮಣನಾಗಿ ರವಿ ದುಬೆ ಹೀಗೆ ಘಟಾನುಘಟಿ ಕಲಾವಿದರು ಬಣ್ಣ ಹಚ್ಚಿದ್ದಾರೆ. ಚಿತ್ರದಲ್ಲಿ ಶ್ರೀರಾಮನಾಗಿ ರಣ್ಬೀರ್ ಕಪೂರ್ ಹೇಗೆ

24 C