ಅರಳುವ ಮುನ್ನವೇ ಮುದುಡಿತು ದಂಗಲ್ ಚೆಲುವೆಯ ಪ್ರೀತಿ ; ಮುರಿದು ಹೋಯ್ತು ಸಿತಾರದ ತಂತಿ
ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಇಂದು ಪ್ರೀತಿ ಕೇವಲ ಸುಂದರ ಸುಮಧುರ ಭಾವನೆಯಾಗಿ ಮಾತ್ರ ಉಳಿದಿಲ್ಲ. ಬದಲಿಗೆ ಬಹುತೇಕರ ಪಾಲಿಗೆ ಪ್ರೀತಿ ಸಾರ್ವಜನಿಕವಾಗಿ ಪ್ರದರ್ಶನಕ್ಕಿಟ್ಟ ವಸ್ತುವಾಗಿದೆ. ಇಂದಿನ 5G ಯುಗದಲ್ಲಿ ಲೈಕ್ ಮತ್ತು ಪೋಸ್ಟ್ಗಳ ಆಧಾರದ ಮೇಲೆ ಪ್ರೀತಿಯನ್ನು ಅಳೆಯಲಾಗುತ್ತದೆ. ಅಗಾಧ ಪ್ರೀತಿಗಿಂತ ಹೆಚ್ಚಾಗಿ ವೈಭವದ ಪ್ರದರ್ಶನಕ್ಕೆ ಪ್ರಾಮುಖ್ಯತೆ ನೀಡಲಾಗುತ್ತಿದೆ. ಯುವಸಮೂಹದ ಪಾಲಿಗೆ ಪ್ರೀತಿ ಎನ್ನುವುದು
ಒಂದೇ ನಿರ್ಮಾಣ ಸಂಸ್ಥೆಯಲ್ಲಿ ಮೂರು ಸಿನಿಮಾಗಳು ಶುರು; ಟೈಟಲ್ಗಳೇನು?
ಸೋಮವಾರ ಬೆಳಿಗ್ಗೆ ಗವಿಪುರದ ಶ್ರೀ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಅರುಣಕುಮಾರ್ ಅವರ ಮಾಲೀಕತ್ವದ ಮ್ಯಾಟ್ರಿಕ್ ಮೂವೀ ಮೇಕರ್ಸ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಮೂರು ಚಿತ್ರಗಳಿಗೆ ಒಟ್ಟಿಗೇ ಚಾಲನೆ ನೀಡಲಾಯಿತು. ಆ ಮೂರು ಚಿತ್ರಗಳು ಯಾವುವೆಂದರೆ ಕೀರ್ತಿ ಕೃಷ್ಣ ಅವರ ನಿರ್ದೇಶನದ ಸೀತಾ ರಾಮ ರಾಜು, ಸ್ವಸ್ತಿಕ್ ಅವರ ನಿದೇಶನದ ದರ್ಶನ ಹಾಗೂ ಕುಮಾರ್ ನಿರ್ದೇಶನದ ಇನ್ನೂ ಹೆಸರಿಡದ ಚಿತ್ರದ
ಕನ್ನಡದಲ್ಲೂ ಶುರು ಇನ್ಸ್ಟಾ ಸಬ್ಸ್ಕ್ರಿಪ್ಷನ್ ಟ್ರೆಂಡ್; ಸೋನು ಎಕ್ಸ್ಕ್ಲೂಸಿವ್ ಕಂಟೆಂಟ್ ನೋಡಲು ಹಣ ಕಟ್ಟಬೇಕಾ?
ಸೋಶಿಯಲ್ ಮೀಡಿಯಾದಲ್ಲಿ ವಿಚಿತ್ರ ಟ್ರೆಂಡ್ ಶುರುವಾಗಿದೆ. ಕೆಲ ನಟಿಯರು, ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ಸ್ ಬಿಂದಾಸ್ ಅವತಾರದಲ್ಲಿ ದರ್ಶನ ಕೊಟ್ಟು ನೆಟ್ಟಿಗರ ಗಮನ ಸೆಳೆಯುತ್ತಿದ್ದಾರೆ. ಇಷ್ಟು ದಿನ ವೀವ್ಸ್, ಲೈಕ್ಸ್ಗಾಗಿ ಹೀಗೆಲ್ಲಾ ಮಾಡ್ತಿದ್ರು. ಈಗ ಇನ್ಸ್ಟಾಗ್ರಾಮ್ನಲ್ಲಿ ಕೂಡ ಸಬ್ಸ್ಕ್ರಿಪ್ಷನ್ ಫೀಚರ್ ಬಂದಿದೆ. ಹಣ ಕಟ್ಟಿ ನಟಿಯರ ಎಕ್ಸ್ಕ್ಲೂಸಿವ್ ಕಂಟೆಂಟ್ ನೋಡುವ ಅವಕಾಶ ಸಿಗುತ್ತಿದೆ. ಈಗಾಗಲೇ ತೆಲುಗು, ತಮಿಳು, ಹಿಂದಿ,
'ಪಳ್ಳಿ ಚಟ್ಟಂಬಿ' ಮಲಯಾಳಂ ಸಿನಿಮಾದಲ್ಲಿ ಕರ್ನಾಟಕದ ಯಕ್ಷಗಾನ; ಕಿಕ್ ಕೊಡುತ್ತೆ ಕನ್ನಡ ಡೈಲಾಗ್
ಇತ್ತೀಚೆಗೆ ಮಲಯಾಳಂ ಸಿನಿಮಾಗಳು ಬೆಂಗಳೂರಿನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿವೆ. ಇಲ್ಲಿ ಸಿನಿಮಾ ಒಳ್ಳೆಯ ಕಲೆಕ್ಷನ್ ಆಗುತ್ತಿವೆ. ಹೀಗಾಗಿ ಮಲಯಾಳಂ ಫಿಲ್ಮ್ ಮೇಕರ್ಸ್ ಬೆಂಗಳೂರಿನಲ್ಲಿ ಸಿನಿಮಾ ರಿಲೀಸ್ ಮಾಡುವುದಕ್ಕೆ ಆಸಕ್ತಿ ತೋರುತ್ತಿದ್ದಾರೆ. ಮೋಹನ್ಲಾಲ್, ಮಮ್ಮುಟ್ಟಿಯಂತಹ ದಿಗ್ಗಜರ ಸಿನಿಮಾಗಳು ಒಳ್ಳೆಯ ಕಲೆಕ್ಷನ್ ಮಾಡುತ್ತಿವೆ. ಹಿರಿಯರೊಂದಿಗೆ ಯುವ ನಟರ ಸಿನಿಮಾಗಳು ಕೂಡ ಬೆಂಗಳೂರು ಬಾಕ್ಸಾಫೀಸ್ನಲ್ಲಿ ಸದ್ದು ಮಾಡುತ್ತಿವೆ. ಸದ್ಯ ಆಗಸ್ಟ್ 15ರಂದು
ಪವನ್ ಕಲ್ಯಾಣ್ ಜೊತೆ ಲವ್, ಪ್ರಪೋಸ್ ಮಾಡಿದ್ದು ಯಾರು? ಸೀಕ್ರೆಟ್ ಬಿಚ್ಚಿಟ್ಟ ಅನ್ನಾ ಲೆಜ್ನೆವಾ
ತೆಲುಗು ನಟ, ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಒಂದಲ್ಲ ಎರಡಲ್ಲ ಮೂರು ಮದುವೆ ಮಾಡಿಕೊಂಡಿರುವುದು ಗೊತ್ತೇಯಿದೆ. 90ರ ದಶಕದಲ್ಲೇ ನಂದಿನಿ ಎಂಬುವವರನ್ನು ಮದುವೆಯಾಗಿದ್ದ ಪವನ್ ಬಳಿಕ ನಟಿ ರೇಣು ದೇಸಾಯಿ ಅವರನ್ನು ಪ್ರೀತಿಸಿ ಮದುವೆ ಆಗಿದ್ದರು. ಆಕೆಗೂ ಡಿವೋರ್ಸ್ ಕೊಟ್ಟು ರಷ್ಯನ್ ಮಹಿಳೆ ಅನ್ನಾ ಲೆಜ್ನೆವಾ ಜೊತೆ 3ನೇ ಮದುವೆ ಆಗಿದ್ದಾರೆ. ಪವನ್ ಹಾಗೂ ರೇಣು ದೇಸಾಯಿಗೆ
ಜೊತೆಯಲ್ಲಿದ್ದವರೇ ಚೂರಿ ಹಾಕಿದರು ; ಚುನಾವಣಾ ಕಣದಲ್ಲಿ ಪತ್ನಿ ಸಂಗೀತಾ ವಿರುದ್ಧ ಪರೋಕ್ಷವಾಗಿ ಕಿಡಿಕಾರಿದ ವಿಜಯ್
ಮದುವೆಯಾದ ಹೊಸತರಲ್ಲಿ ಹಲವರು ಎರಡು ಹೆಸರು ಒಂದೇ ಉಸಿರು ಎನ್ನುವಂತೆ ಇರುತ್ತಾರೆ. ಆದರೆ.. ಕಾಲ ಕ್ರಮೇಣ ದಾಂಪತ್ಯದಲ್ಲಿನ ಈ ಪ್ರೀತಿ-ಪ್ರಣಯ ನಿಧಾನಕ್ಕೆ ನೇಪಥ್ಯಕ್ಕೆ ಸರಿಯಲು ಶುರು ಮಾಡುತ್ತೆ. ಅಲ್ಲಿಯವರೆಗೆ ಕಾಣದ ಭಿನ್ನಾಭಿಪ್ರಾಯಗಳು ಕಾಣುತ್ತವೆ. ನೋಡ ನೋಡುತ್ತಲೇ ಸಂಬಂಧ ಮುರಿದು ಬೀಳುತ್ತೆ. ಆ ನಂತರ ಶುರುವಾಗುವುದೇ ಆರೋಪ- ಪ್ರತ್ಯಾರೋಪಗಳ ಸುರಿಮಳೆ. ಇದಕ್ಕೆ ಉದಾಹರಣೆ ಎಂಬಂತೆ ವಿಜಯ್ ದಾಂಪತ್ಯ ಜೀವನ
\ಬೆಳಗ್ಗೆ ಮಗಳಂತೆ ನೋಡುತ್ತಿದ್ದರು.. ರಾತ್ರಿ ಬೇರೆ ರೀತಿನೇ ಇರ್ತಿದ್ರು\; ಪಾಕ್ ನಟಿಯ ಗಂಭೀರ ಆರೋಪ
ಮೀಟೂ ಪ್ರಕರಣಗಳು ಭಾರತೀಯ ಚಿತ್ರರಂಗವನ್ನು ತಲ್ಲಣಗೊಳಿಸಿತ್ತು. ನಟಿಯರು ಮುಂದೆ ಬಂದು ತಮಗಾದ ಕಹಿ ಅನುಭವಗಳನ್ನು ಹಂಚಿಕೊಂಡಿದ್ದರು. ಒಬ್ಬೊಬ್ಬರೇ ಮುಂದೆ ಬಂದು ನಿರ್ಮಾಪಕರು, ನಿರ್ದೇಶಕರು, ತಂತ್ರಜ್ಞರು ಹಾಗೂ ನಟರ ಮೇಲೆ ಆರೋಪ ಮಾಡುತ್ತಿದ್ದರೆ, ಸಿನಿಮಾ ಮಂದಿಗೆ ಎದೆ ಬಡಿತ ಹೆಚ್ಚಾಗಿತ್ತು. ಇಂತಹ ಪ್ರಕರಣದಲ್ಲಿ ಹೆಸರು ಕೇಳಿ ಬಂದ ಕೆಲವರು ಕೆಲಸ ಕಳೆದುಕೊಂಡಿದ್ದಾರೆ. ಇನ್ನು ಕೆಲವರರು ಛೀಮಾರಿ ಹಾಕಲಾಗಿತ್ತು. ಚಿತ್ರರಂಗದಲ್ಲಿ
IPL 2026 ; ಅಜಿತ್ ಮಗಳ ಪಕ್ಕದಲ್ಲಿರುವ ಈ ಸುರಸುಂದರ ಯಾರು ? ಅಳಿಯನಾ ? ಬರೀ ಮಗಳ ಸ್ನೇಹಿತನಾ ?
ಚಿತ್ರರಂಗದಲ್ಲಿ ಅಪ್ಪ- ಅಮ್ಮ ಯಾರಾದರೂ ಇದ್ದರೆ ಮುಗಿಯಿತು. ಅವರ ಮಕ್ಕಳು.. ಸಂಬಂಧಿಕರೆಲ್ಲ .. ಅನಾಯಾಸವಾಗಿ ಚಿತ್ರರಂಗಕ್ಕೆ ಬಂದು ಬಿಡ್ತಾರೆ. ಅನೇಕರ ವಿಚಾರದಲ್ಲಿ ಈ ಮಾತು ರುಜುವಾತಾಗಿದೆ ಕೂಡ. ನಿಜಾ.. ಅವರು ಅದೇ ಕ್ಷೇತ್ರದಲ್ಲಿ ಮುಂದುವರೆಯುವುದು.. ಉಳಿಯುವುದು.. ಬೆಳೆಯುವುದು.. ಅವರ ಅವರ ಟ್ಯಾಲೆಂಟ್ ಮೇಲೆ ನಿರ್ಧಾರವಾಗುತ್ತೆ ಆದರೂ.. ಇವರ ಹಾದಿ ಸರಾಗವಾಗಲು ಅವರ ಹೆತ್ತವರು ಕಾರಣವೆನ್ನುವುದನ್ನು ಅಲ್ಲಗೆಳೆಯಲು ಸಾಧ್ಯ
DKD Finale: 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ಗ್ರ್ಯಾಂಡ್ ಫಿನಾಲೆ.. ಯಾವಾಗ? ಫಿನಾಲೆಗೆ ಬಂದವರು ಯಾರು?
ಜೀ ಕನ್ನಡದ ಜನಪ್ರಿಯ ರಿಯಾಲಿಟಿ ಶೋ 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್'ಗೆ ಬಿಗ್ ಫಾಲೋವರ್ಸ್ ಇದ್ದಾರೆ. ಕಿರುತೆರೆ ನಟರು ಹಾಗೂ ಅವರೊಂದಿಗೆ ಹೆಜ್ಜೆ ಹಾಕಿದ ಸ್ಪರ್ಧಿಗಳು ವೀಕ್ಷಕರನ್ನು ಇದೂವರೆಗೂ ರಂಜಿಸುತ್ತಾ ಬಂದಿದ್ದಾರೆ. ಈ ಶೋನಲ್ಲಿ ಡ್ಯಾನ್ಸ್ನ ವಿವಿಧ ಪ್ರಕಾರಗಳು, ಥೀಮ್ಗಳಲ್ಲಿ ಸೆಲೆಬ್ರೆಟಿಗಳ ಜೊತೆ ಡ್ಯಾನ್ಸರ್ಗಳು ಹೆಜ್ಜೆ ಹಾಕಿದ್ದಾರೆ. ವೀಕೆಂಡ್ನಲ್ಲಿ ಪ್ರೇಕ್ಷಕರನ್ನು ರಂಜಿಸುತ್ತಿದ್ದ ಈ ಶೋ ಈಗ ಅಂತಿಮ ಹಂತಕ್ಕೆ
Amruthadhaare ; ಮಲ್ಲಿ - ಸುನಿ ಮಧುಚಂದ್ರದ ಮೇಲೆ ಹಂತಕರ ನೆರಳು - ಪೈಲ್ವಾನ್ನ ಕಾಪಾಡ್ತಾನಾ ಆನಂದ್ ?
''ಅಮೃತಧಾರೆ'' ಧಾರಾವಾಹಿಯಲ್ಲಿ ಮಲ್ಲಿಯ ಮದುವೆ ಏನೋ ಆಗಿದೆ. ಆದರೆ.. ಅಪಾಯ ಇನ್ನೂ ತಪ್ಪಿಲ್ಲ. ಮಲ್ಲಿಯ ಮೇಲಿನ ಸೇಡಿನಿಂದ ಜೈದೇವ್ ಈಗ ಸುನಿಯ ಪ್ರಾಣದ ಹಿಂದೆ ಬಿದ್ದಿದ್ದಾನೆ. ನಂಬಿಕೆ ದ್ರೋಹ ಮಾಡಿದ ಸುನಿಯ ಜೀವ ಬಲಿ ಪಡೆಯಲೇಬೇಕೆಂದು ನಿರ್ಧಾರ ಮಾಡಿ ಸುಪಾರಿ ಹಂತಕರನ್ನು ಕಳಿಸಿದ್ದಾನೆ. ಆದರೆ, ಹಂತಕರು ಅಲ್ಲಿ ಹೋಗುವವರೆಗೆ ಮಲ್ಲಿ ಮತ್ತು ಸುನಿ ಹನಿಮೂನ್ಗೆ ಹೋಗಿದ್ದಾರೆ. ಕೇವಲ
ಧರ್ಮಗುರು ಗಂಡನ ಆದೇಶ ; ಇಸ್ಲಾಂ ಧರ್ಮದ ಆಳ ಅರಿಯಲು 'ಮದರಸಾ' ಸೇರಿಕೊಂಡ 'ಕೂಲ್' ನಟಿ ಸನಾ ಖಾನ್
ಪ್ರೀತಿಗೆ ಎಲ್ಲರನ್ನು ಎಲ್ಲವನ್ನೂ ಜಯಿಸುವಂತಹ ನಿಗೂಢವಾದ ಶಕ್ತಿ ಇದೆ. ಪ್ರತಿಯೊಂದು ಧರ್ಮದಲ್ಲಿಯೂ ಈ ಪ್ರೀತಿಯ ಪರಿಕಲ್ಪನೆಗೆ ಅಪಾರವಾದ ಆದ್ಯತೆ ಇದೆ. ಇನ್ನು ನಿಜವಾದ ಪ್ರೀತಿಯ ಆಳಕ್ಕೆ ಇಳಿದು ನೋಡಿದಾಗ ಅದರ ಅರ್ಥ ಹುಡುಕುತ್ತಾ ಹೋದಾಗ ಪ್ರೀತಿ ಎನ್ನುವುದು ಮನಸಿಂದ ಬರಬೇಕೆ ಹೊರತು ಆ ಪ್ರೀತಿ ಒತ್ತಾಯಪೂರ್ವಕವಾಗಿರಬಾರದು ಎಂಬ ವಿಚಾರದ ಅರಿವು ಆಗುತ್ತೆ. ಹೀಗೆ ಪ್ರೀತಿಯನ್ನು ಅರಿತುಕೊಂಡು ಪ್ರೀತಿಯನ್ನು
ಜಾಣಮೌನ, ದಿವ್ಯ ನಿರ್ಲಕ್ಷ್ಯ ; ಧುರಂಧರ್ ಬಗ್ಗೆ ಮಾತನಾಡಿಲ್ಲವೇಕೆ ದೀಪಿಕಾ ಪಡುಕೋಣೆ - ಇಲ್ಲಿದೆ ಉತ್ತರ
ಪ್ರೀತಿ ತೋರ್ಪಡಿಕೆಯಲ್ಲ, ಕಾಣದ ಸ್ಪರ್ಶ. ಸವಿದರಷ್ಟೇ ಚೆಂದ. ಆದರೆ ಕಾಲ ಈಗ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಪ್ರೀತಿಯನ್ನು ಪ್ರದರ್ಶನಕ್ಕಿಡಬೇಕು. ಇಲ್ಲದಿದ್ದರೆ ಸಮಾಜ ಅನುಮಾನದ ದೃಷ್ಟಿಯಿಂದ ನೋಡುತ್ತೆ. ನಾನಾ ರೀತಿಯ ಕಥೆ ಹೆಣೆಯುತ್ತೆ. ಇನ್ನೂ ಚಿತ್ರರಂಗದ ಹಿನ್ನೆಲೆಯುಳ್ಳವರಾಗಿದ್ದರೆ, ಅದರಲ್ಲಿಯೂ ಸ್ಟಾರ್ ಎಂಬ ಸಿಂಹಾಸನದ ಮೇಲೆ ಯಾರಾದರೂ ಕುಂತಿದ್ದರೆ ಮುಗಿದೇ ಹೋಯ್ತು. ವೈಯಕ್ತಿಕ ಬದುಕಿನ ಇಂಚಿಂಚೂ
ರಾಮ್ಚರಣ್ 'ಪೆದ್ದಿ' ರಿಲೀಸ್ ಡೇಟ್ ಪೋಸ್ಟ್ಪೋನ್; ಓಟಿಟಿಯಿಂದ ಭಾರೀ ನಷ್ಟ
ದಿನದಿಂದ ದಿನಕ್ಕೆ ಸಿನಿಮಾ ಮೇಕಿಂಗ್ ಸ್ಟೈಲ್, ಬ್ಯುಸಿನೆಸ್ ಎಲ್ಲವೂ ಬದಲಾಗ್ತಿದೆ. ಪ್ಯಾನ್ ಇಂಡಿಯಾ ಟ್ರೆಂಡ್ ಶುರುವಾದ ಬಳಿಕ ಹೊಸ ಹೊಸ ಸಮಸ್ಯೆಗಳು ಎದುರಾಗ್ತಿದೆ. ಸದ್ಯ ರಾಮ್ಚರಣ್ ನಟನೆಯ 'ಪೆದ್ದಿ' ಸಿನಿಮಾ ಈಗ ಸಂಕಷ್ಟಕ್ಕೆ ಸಿಲುಕಿದೆ. ಸಿನಿಮಾ ರಿಲೀಸ್ ತಡವಾಗಿ ನಿರ್ಮಾಪಕರು ನಷ್ಟ ಎದುರಿಸುವಂತಾಗಿದೆ. ಬುಚ್ಚಿಬಾಬು ನಿರ್ದೇಶನದ 'ಪೆದ್ದಿ' ಚಿತ್ರದಲ್ಲಿ ರಾಮ್ಚರಣ್ ಜೊತೆ ಜಾನ್ವಿ ಕಪೂರ್ ನಾಯಕಿಯಾಗಿ ನಟಿಸುತ್ತಿದ್ದಾರೆ.
ಠುಸ್ ಆಯ್ತು ಅಭಿಮಾನಿಗಳ ಲೆಕ್ಕಾಚಾರ; 'ಜೈಲರ್'-2 ಚಿತ್ರದಿಂದ ಬೇಸರದ ಸುದ್ದಿ
ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ 'ಜೈಲರ್'-2 ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಎರಡು ವರ್ಷಗಳ ಹಿಂದೆ ಬ್ಲಾಕ್ಬಸ್ಟರ್ ಹಿಟ್ ಆಗಿದ್ದ 'ಜೈಲರ್' ಸಿನಿಮಾ ಸೀಕ್ವೆಲ್ ಇದು. ನೆಲ್ಸನ್ ನಿರ್ದೇಶನದ ಚಿತ್ರದಲ್ಲಿ ಶಿವಣ್ಣ ಹಾಗೂ ಮೋಹನ್ ಲಾಲ್ ಅತಿಥಿ ಪಾತ್ರಗಳಲ್ಲಿ ಮಿಂಚಿದ್ದರು. ಸನ್ ಪಿಕ್ಚರ್ಸ್ ಸಂಸ್ಥೆ ನಿರ್ಮಾಣದ ಆಕ್ಷನ್ ಥ್ರಿಲ್ಲರ್ ಸಿನಿಮಾ 'ಜೈಲರ್' ಸಿನಿರಸಿಕರಿಗೆ ಭರ್ಜರಿ ಮನರಂಜನೆ ಒದಗಿಸಿತ್ತು.
ಮಲೇಷಿಯಾ ಜಾತ್ರೆಯಲ್ಲಿ ಪಾನಿಪುರಿ ಮಾರುತ್ತಿದ್ದಾರಾ ನಟ ಬಾಲಯ್ಯ? ಇಲ್ಲಿದೆ ಸತ್ಯ
ಒಂದೇ ರೀತಿ ಕಾಣುವ ವ್ಯಕ್ತಿಗಳು ಪ್ರಪಂಚದಲ್ಲಿ 7 ಜನ ಇರ್ತಾರೆ ಎಂದು ಕೆಲವರು ಹೇಳ್ತಾರೆ. ವ್ಯಕ್ತಿಯನ್ನು ಹೋಲುವ ವ್ಯಕ್ತಿಗಳು ಆಗಾಗ್ಗೆ ಕಾಣಿಸುವುದು ಇದೆ. ಸ್ಟಾರ್ ನಟರನ್ನು ಹೋಲುವ ವ್ಯಕ್ತಿಗಳು ವೇದಿಕೆ ಏರಿ ರಂಜಿಸುವುದನ್ನು ನೋಡುತ್ತೇವೆ. ಜ್ಯೂ. ರಾಜ್ಕುಮಾರ್, ಜ್ಯೂ. ವಿಷ್ಣುವರ್ಧನ್, ಜ್ಯೂ. ಶಂಕರ್ ನಾಗ್, ಜ್ಯೂ. ಅಪ್ಪು, ಜ್ಯೂ. ರವಿಚಂದ್ರನ್ ಹೀಗೆ ಕೆಲವರು ಸ್ಟಾರ್ ನಟರನ್ನು ನೆನಪಿಸುವುದು
ಸದ್ದಿಲ್ಲದೇ ಮದುವೆಯಾದ 'ಕ್ರಾಂತಿ' ನಟಿ ನಿಮಿಕಾ ರತ್ನಾಕರ್ ; 'ಪುಷ್ಪವತಿ'ಯ ಕೈ ಹಿಡಿದ ಹುಡುಗ ಯಾರು ?
ಮದುವೆ ಎನ್ನುವುದು ನಿರಂತರ ಕಲಿಕೆಯ ಪ್ರಕ್ರಿಯೆ. ಬದ್ದತೆ, ಹೊಂದಾಣಿಕೆ, ಸಂತೋಷದ ಜೀವನ. ಬದುಕಿನ ಮಹತ್ವದ ಹಂತ. ಎರಡು ಜೀವಗಳು ಜೀವನದಲ್ಲಿ ಎಷ್ಟೇ ಕಷ್ಟ ಬಂದರೂ ಕುಗ್ಗದೇ ಜೀವನಪೂರ್ತಿ, ಒಬ್ಬರಿಗೊಬ್ಬರು ಬೆನ್ನೆಲುಬಾಗಿ ಜೊತೆಯಾಗಿ ಇರಬೇಕಾದಂತಹ ಒಂದು ಬಂಧನ. ಇಂತಹ ಬಂಧನಕ್ಕೆ ಈ ವರ್ಷ ಹಲವು ತಾರೆಯರು ಒಳಗಾಗಿದ್ದಾರೆ. ಈ ಸಾಲಿಗೆ ನಂದ ಗೋಕುಲದ ರಕ್ಷಾ.. ಗತ ವೈಭವದ ಹೀರೋ
ಬೆಂಗಳೂರಿನ ಪ್ರತೀಕಾಗೆ ಮನ ಸೋತ ಮಹಾಕುಂಭದ ಐಐಟಿ ಬಾಬಾ ; ಸಂಸಾರಿಯಾದ ಸನ್ಯಾಸಿ-ಲವ್ ಸ್ಟೋರಿ ಶುರುವಾಗಿದ್ಹೇಗೆ ?
ಕೆಲವರು ತುಂಬಾ ಓದಿರುತ್ತಾರೆ. ಮನೆಯವರ ಬಲವಂತಕ್ಕೆ ಯಾವುದ್ಯಾವುದೋ ಕೋರ್ಸ್ ಮಾಡಿರುತ್ತಾರೆ. ಆದರೆ ಇಂತಹವರಿಗೆ ನೌಕರಿ ಸೇರುವ ಯಾವ ಮನಸು ಇರುವುದಿಲ್ಲ. ಬದಲಿಗೆ ಆಧ್ಯಾತ್ಮ ಇವರನ್ನು ಸೆಳೆಯುತ್ತಿರುತ್ತೆ ಉದಾಹರಣೆಗೆ ಐಐಟಿ ಬಾಬಾ. ಹೌದು, ಕಳೆದ ವರ್ಷದ ಮಹಾಕುಂಭ ಮೇಳದಲ್ಲಿ ಪುಣ್ಯ ಸ್ನಾನ ಮಾಡಿ ತಮ್ಮ ಪಾಪ -ಕರ್ಮಗಳನ್ನು ಕಳೆದುಕೊಂಡವರ ನಿಖರವಾದ ಸಂಖ್ಯೆ ಎಷ್ಟು ಎನ್ನುವ ಪ್ರಶ್ನೆಗೆ ಉತ್ತರ ಯೋಗಿ
ಹಿಂದೆ ಒಂದು ಕಾಲ ಇತ್ತು. ಆ ಕಾಲದಲ್ಲಿ ಹಾಸ್ಯ- ಅಪಹಾಸ್ಯದ ನಡುವೆ ಒಂದು ಸ್ಪಷ್ಟವಾದ ಗೆರೆ ಇತ್ತು. ಆದರೆ, ಈಗ ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಹಾಸ್ಯ ಅಂದರೆ ದ್ವಂದಾರ್ಥದ ಸಂಭಾಷಣೆ ಎನ್ನುವಂತೆ ಆಗಿದೆ. ಹಾಸ್ಯಾಧಾರಿತ ಟೀಕೆ ಈ ಹಿಂದೆ ಜನರ ಮನಸನ್ನು ಹಗುರವಾಗಿಸುತ್ತಿತ್ತು. ಆದರೆ ಈಗ ಸ್ಟ್ಯಾಂಡಪ್ ಕಾಮಿಡಿ ಮತ್ತು ರಿಯಾಲಿಟಿ ಶೋಗಳ ಭರಾಟೆಯ
ಹೆಣ್ಣುಮಕ್ಕಳ ಪಾಲಿಗೆ ತವರು ಎನ್ನುವುದು ಕೇವಲ ಹುಟ್ಟಿದ ಮನೆಯಲ್ಲ, ಅದು ಅವಳ ಅಸ್ತಿತ್ವದ ಬೇರು. ಮದುವೆಯಾಗಿ ಹೊಸ ಬದುಕಿಗೆ ಮುನ್ನುಡಿ ಬರೆದ ನಂತರ ಆ ಬೇರಿನ ಮೇಲಿನ ಮಮಕಾರ ಮತ್ತಷ್ಟು ಗಾಢವಾಗುತ್ತೆ. ತವರಿನಿಂದ ದೈಹಿಕವಾಗಿ ದೂರವಾಗಿದ್ದರೂ ಕೂಡ ಮನಸ್ಸು ಮಾತ್ರ ತನ್ನ ತವರನ್ನು ನೆನೆಯುತ್ತಿರುತ್ತೆ. ಗಂಡನ ಮನೆ ಜವಾಬ್ಧಾರಿಗಳ ನಡುವೆ ಮನದ ಮೂಲೆಯಲ್ಲಿ ತವರೂರಿನ ಹಸಿರು, ಅಮ್ಮನ
ಹೆಣ್ಣಿನ ಮೇಲೆ ಗಂಡಿನ ಶೋಷಣೆ, ಅತ್ಯಾಚಾರದ ಕುರಿತ ಸುದ್ದಿಗಳನ್ನು ನಾವು ಓದುತ್ತಲೇ ಇದ್ದೇವೆ, ಕೇಳುತ್ತಲೇ ಇದ್ದೇವೆ. ಪ್ರಪಂಚದಾದ್ಯಂತ ಲಕ್ಷಾಂತರ ಮಹಿಳೆಯರು, ಹುಡುಗಿಯರು, ದೈಹಿಕ, ಲೈಂ*ಗಿಕ ಹಿಂಸೆ ಅನುಭವಿಸುತ್ತಲೇ ಇದ್ಧಾರೆ. ಬದಲಾದ ಈ ಕಾಲದಲ್ಲಿ ಮಹಿಳಾ ಸಬಲೀಕರಣದ ಕುರಿತು ಭಾಷಣಗಳನ್ನು ಮಾಡಲಾಗುತ್ತೆಯಾದರೂ, ವಾಸ್ತವದಲ್ಲಿ ಮಹಿಳೆಯ ಸಾಧನೆ.. ಶ್ರಮ ಮತ್ತು ಪ್ರತಿಭೆಗಿಂತ ಭೋಗದ ವಸ್ತು ಎಂದುಕೊಂಡ ವಿಕೃತ ಮನಸ್ಥಿತಿಗಳು ಇಂದಿಗೂ
ಮದುವೆ ಎಂಬ ಮೂರಕ್ಷರ ಜೀವನ ಪರ್ಯಂತದ ಬದ್ದತೆ ಮತ್ತು ಭರವಸೆ. ಆದರೆ .. ವಾಸ್ತವದಲ್ಲಿ ಕೆಲ ಒಮ್ಮೆ ಈ ಬದ್ದತೆ ಮರೆಯಾಗುತ್ತೆ. ಬದುಕಿನ ಪ್ರಯಾಣದಲ್ಲಿ ಸಂಬಂಧ ಅರ್ಧದಲ್ಲಿಯೇ ಮುರಿದು ಬೀಳುತ್ತೆ. ಹೀಗಾದಾಗ ಸಾಮಾನ್ಯವಾಗಿ ಅನೇಕರು ಮತ್ತೊಂದು ಮದುವೆಯಾಗುವ ಮನಸು ಮಾಡುವುದಿಲ್ಲ. ಅಯ್ಯೋ ಒಮ್ಮೆ ಅನುಭವಿಸಿದ್ದೇ ಸಾಕು ಎನ್ನುವ ತೀರ್ಮಾನಕ್ಕೆ ಬರುತ್ತಾರೆ. ಇನ್ನು ಕೆಲವರು ಅಳೆದು ತೂಗಿ ಹೊಸ
ಚಿತ್ರರಂಗಕ್ಕೆ ತಮಿಳು ನಟಿ ತ್ರಿಶಾ ಗುಡ್ಬೈ; ಮೌನ ಮುರಿದ ಚೆಲುವೆ ಹೇಳಿದ್ದಿಷ್ಟು
ಬಹುಭಾಷಾ ನಟಿ ತ್ರಿಶಾ ಚಿತ್ರರಂಗದಿಂದ ನಿವೃತ್ತಿ ಪಡೆಯುತ್ತಾರೆ ಎನ್ನುವ ವದಂತಿ ಹರಿದಾಡಿತ್ತು. ಅಷ್ಟೇ ಅಲ್ಲ ಆಕೆ ಇತ್ತೀಚೆಗೆ ಮಾಡಿದ್ದ ಪೋಸ್ಟ್ ಬಗ್ಗೆ ಕೂಡ ಭಾರೀ ಚರ್ಚೆ ನಡೀತಿತ್ತು. ಇನ್ನು ಸಿನಿಮಾಗಳಿಂದ ದೂರಾಗಿ ದಳಪತಿ ವಿಜಯ್ ಜೊತೆ ರಾಜಕೀಯರಂಗ ಪ್ರವೇಶಿಸುತ್ತಾರೆ ಎನ್ನುವ ಗುಸುಗುಸು ಜೋರಾಗಿದೆ. ಇದೆಲ್ಲದರ ಬಗ್ಗೆ ಸ್ವತಃ ನಟಿ ತ್ರಿಶಾ ಪ್ರತಿಕ್ರಿಯಿಸಿದ್ದಾರೆ. ನಟ ವಿಜಯ್ ಹಾಗೂ ಪತ್ನಿ
ವಿಚಿತ್ರ ಮೃಗದ ಅವತಾರದಲ್ಲಿ ಅಲ್ಲು ಅರ್ಜುನ್; ಅಟ್ಲಿ ನಿರ್ದೇಶನದ ಸಿನಿಮಾ ಪೋಸ್ಟರ್ ವೈರಲ್
ತೆಲುಗು ನಟ ಅಲ್ಲು ಅರ್ಜುನ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಕ್ಷಣಗಣನೆ ಆರಂಭಿದ್ದಾರೆ. 'ಪುಷ್ಪ-2' ಬಳಿಕ ಎರಡು ಸಿನಿಮಾಗಳಿಗೆ ಸ್ಟೈಲಿಶ್ ಸ್ಟಾರ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ತಮಿಳು ನಿರ್ದೇಶಕ ಅಟ್ಲಿ ನಿರ್ದೇಶನ ಸೈನ್ಸ್ ಫಿಕ್ಷನ್ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ. ಅಲ್ಲು ಅರ್ಜುನ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ರಿವೀಲ್ ಆಗಲಿದೆ. ಅಲ್ಲು ಅರ್ಜುನ್ ಹಾಗೂ ಅಟ್ಲಿ ಕಾಂಬಿನೇಷನ್
ಮತ್ತೆ ರಾಯನ ಅವತಾರದಲ್ಲಿ ಕಂಡ ಯಶ್; 'ಟಾಕ್ಸಿಕ್' ರೀ-ಶೂಟ್ ನಿಜಾನಾ?
ಎಲ್ಲಾ ಅಂದುಕೊಂಡಂತೆ ಆಗಿದ್ದರೆ 'ಟಾಕ್ಸಿಕ್' ಸಿನಿಮಾ ತೆರೆಕಂಡು 20 ದಿನ ಕಳೆಯಬೇಕಿತ್ತು. ಆದರೆ ಕೊನೆ ಕ್ಷಣದಲ್ಲಿ ಸಿನಿಮಾ ರಿಲೀಸ್ ಪೋಸ್ಟ್ಪೋನ್ ಮಾಡಿ ಚಿತ್ರತಂಡ ಶಾಕ್ ಕೊಟ್ಟಿತ್ತು. ಫಸ್ಟ್ ಸಾಂಗ್ ಹೊರಬಂದ ಬಳಿಕ ಯಶ್ ನಿರ್ಧಾರ ಬದಲಿಸಿದ್ದರು. ಇರಾನ್-ಇಸ್ರೇಲ್ ಯುದ್ಧದ ನೆಪವೊಡ್ಡಿ ಜೂನ್ 4ಕ್ಕೆ ಸಿನಿಮಾ ಬಿಡುಗಡೆ ಮಾಡುವುದಾಗಿ ಘೋಷಿಸಿದ್ದರು. ಮಾರ್ಚ್ 19ಕ್ಕೆ 'ಟಾಕ್ಸಿಕ್' ಹಾಗೂ 'ಧುರಂಧರ್'-2 ನಡುವೆ
ಮೊದಲ 'ರಾಮಾಯಣ' ಚಿತ್ರದಲ್ಲಿ ರಾಮ, ಸೀತೆ ಪಾತ್ರ ಮಾಡಿದ್ದು ಒಬ್ರೇನಾ; ಆ ಸಿನಿಮಾ ಬಗ್ಗೆ ನಿಮಗೆಷ್ಟು ಗೊತ್ತು
ಸದ್ಯ ಭಾರತೀಯ ಚಿತ್ರರಂಗದಲ್ಲೀಗ ನಿತೇಶ್ ತಿವಾರಿ ನಿರ್ದೇಶನದ 'ರಾಮಾಯಣ' ಸಿನಿಮಾ ಬಗ್ಗೆ ಭಾರೀ ಚರ್ಚೆ ನಡೀತಿದೆ. ಇತ್ತೀಚೆಗೆ ಚಿತ್ರದ ಟೀಸರ್ ರಿಲೀಸ್ ಆಗಿತ್ತು. ಶ್ರೀರಾಮನ ಪಾತ್ರ ಪರಿಚಯದ ಸಣ್ಣ ಝಲಕ್ ನೋಡಿ ಸಿನಿರಸಿಕರು ಪರ, ವಿರೋಧ ಚರ್ಚೆ ನಡೆಸುತ್ತಿದ್ದಾರೆ. ಬೆಳ್ಳಿಪರದೆ ಮೇಲೆ 'ರಾಮಾಯಣ' ಕಾವ್ಯವನ್ನು ಕಟ್ಟಿಕೊಟ್ಟವರು ಯಾರು? ಯಾರೆಲ್ಲಾ ನಟಿಸಿದ್ದರು ಗೊತ್ತಾ? ವಾಲ್ಮೀಕಿ ರಾಮಾಯಣ ಆಧರಿಸಿ ಸಾಕಷ್ಟು
22 ವರ್ಷಗಳ ಬಳಿಕ 'ರಂಗ SSLC' ಸಿನಿಮಾ ನೆನೆದ ಕಿಚ್ಚ ಸುದೀಪ್; ಅಭಿಮಾನಿ ಪೋಸ್ಟ್ ನೋಡಿ ರಿಪ್ಲೇ
ಸುದೀಪ್ ಸಿನಿಜರ್ನಿಯಲ್ಲಿ 'ರಂಗ SSLC' ಬಹಳ ವಿಭಿನ್ನ ಸಿನಿಮಾ. ಆರಂಭದ ದಿನಗಳಲ್ಲೇ ವಿಭಿನ್ನ ಪ್ರಯತ್ನ ಮಾಡಿದ್ದರು ಕಿಚ್ಚ. ಯೋಗರಾಜ್ ಭಟ್ ನಿರ್ದೇಶನದ ಚಿತ್ರದಲ್ಲಿ ಸುದೀಪ್ ಜೋಡಿಯಾಗಿ ರಮ್ಯಾ ನಟಿಸಿದ್ದರು. ಚಿತ್ರದ ಹಾಡುಗಳನ್ನು ಅಭಿಮಾನಿಗಳು ಇನ್ನು ಮರೆತ್ತಿಲ್ಲ. ಬಾಕ್ಸಾಫೀಸ್ನಲ್ಲಿ ಸೋತ್ರು ಸಿನಿಮಾ ಅಭಿಮಾನಿಗಳ ಮನಗೆದ್ದಿತ್ತು. 22 ವರ್ಷಗಳ ಬಳಿಕ 'ರಂಗ SSLC' ಚಿತ್ರವನ್ನು ಸುದೀಪ್ ನೆನಪು ಮಾಡಿಕೊಂಡಿದ್ದಾರೆ. ದುನಿಯಾ
ಪೀರಿಯಡ್ಸ್ ಅನ್ನೋದು ಒಬ್ಬ ಮಹಿಳೆಗೆ ನೆಪ ಆಗಬಾರದು; ನಟಿ ಶ್ರೀಲೀಲಾ ಮುಕ್ತ ಮಾತು
ಋತುಚಕ್ರ ಅಥವಾ ಪೀರಿಯಡ್ಸ್ ಪ್ರತಿ ಮಹಿಳೆಯರಲ್ಲಿ ಸಂಭವಿಸುವ ನೈಸರ್ಗಿಕ ಪ್ರಕ್ರಿಯೆ. ಇದು ಮಹಿಳೆಯ ಆರೋಗ್ಯದ ಸಂಕೇತ ಕೂಡ ಹೌದು. ಋತುಚಕ್ರ ಬಗ್ಗೆ ಮುಕ್ತವಾಗಿ ಮಾತನಾಡುವುದು, ನೈರ್ಮಲ್ಯ ಕಾಪಾಡಿಕೊಳ್ಳುವುದು, ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದು ಬಹಳ ಮುಖ್ಯ. ಬಹುಭಾಷಾ ನಟಿ ಶ್ರೀಲೀಲಾ ಪೀರಿಯಡ್ಸ್ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಸಾಯಿ ಪಲ್ಲವಿ ಸೇರಿದಂತೆ ಕೆಲ ನಟಿಯರು ತಮ್ಮ ಋತುಚಕ್ರದ ಬಗ್ಗೆ ಸಂದರ್ಶನಗಳಲ್ಲಿ
'ಧುರಂಧರ್'-2 ಸಿನಿಮಾ ನೋಡಿ ವಿರಾಟ್ ಕೊಹ್ಲಿ- ಅನುಷ್ಕಾ ಶರ್ಮಾ ದಂಪತಿ ರಿವ್ಯೂ
ಬಾಕ್ಸಾಫೀಸ್ನಲ್ಲಿ 'ಧುರಂಧರ್-2' ಆರ್ಭಟ ಮುಂದುವರೆದಿದೆ. ಮತ್ತೊಂದು ಕಡೆ ಐಪಿಎಲ್ ಫೀವರ್ ಜೋರಾಗಿದೆ. ಐಪಿಎಲ್ ಆರ್ಭಟದ ನಡುವೆ ಕೂಡ ಆದಿತ್ಯಧರ್ ನಿರ್ದೇಶನದ ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡ್ತಿದೆ. ಈ ಸ್ಪೈ ಥ್ರಿಲ್ಲರ್ ಸಿನಿಮಾ ಕ್ರೇಜ್ ಹೇಗಿದೆ ಅಂದ್ರೆ, ಐಪಿಎಲ್ ಟೂರ್ನಿ ನಡುವೆ ಕೂಡ ಕ್ರಿಕೆಟಿಗ ವಿರಾಟ್ ಕೊಹ್ಲಿ ಹಾಗೂ ಪತ್ನಿ ಅನುಷ್ಕಾ ಶರ್ಮಾ ಸಿನಿಮಾ ವೀಕ್ಷಿಸಿದ್ದಾರೆ. ವಿರಾಟ್ ಕೊಹ್ಲಿ

22 C