SENSEX
NIFTY
GOLD
USD/INR

Weather

30    C
...

ಹೊಂಬಾಳೆ, ರಿಷಬ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ!

ಯಶಸ್ಸಿನಲ್ಲಿ ಹುಟ್ಟಿಕೊಂಡ ಸ್ನೇಹ ವೈಫಲ್ಯದ ಅಥವಾ ನಿರೀಕ್ಷೆ ನೆರವೇರದ ದಿನಗಳ ತನಕ ಮಾತ್ರ ಉಳಿಯುತ್ತದೆ. ಇದಕ್ಕೆ ಉದಾಹರಣೆಯಾಗಿ ಕಳೆದ ವಾರವಷ್ಟೇ ರವಿಚಂದ್ರನ್ ಮತ್ತು ಹಂಸಲೇಖ ಸಂಬಂಧದ ಬಗ್ಗೆ ಮಾತನಾಡಿದ್ದೆವು. ಇದೀಗ ಅಂಥದೇ ಒಂದು ಉದಾಹರಣೆಯಾಗಿ ರಿಷಬ್ ಶೆಟ್ಟಿ ಮತ್ತು ವಿಜಯ್ ಕಿರಗಂದೂರ್ ಬಗ್ಗೆ ಹೇಳಬೇಕಾದ ಸಂದರ್ಭ ಬಂದಿದೆ. ಈ ಅನ್ ಫಾಲೋ ಎನ್ನುವುದನ್ನು ರಿಷಬ್ ಶೆಟ್ಟಿ ಕೇವಲ ಸೋಶಿಯಲ್ ಮೀಡಿಯಾಗೆ ಮಾತ್ರ ಸೀಮಿತಗೊಳಿಸಿದ್ದಲ್ಲಿ ವಿಶೇಷವೇನೂ ಇರಲಿಲ್ಲ. ಆದರೆ ರಿಷಬ್ ಹೆಚ್ಚು ಕಡಿಮೆ ವಿಜಯ್ ಕಿರಗಂದೂರ್ ಅವರನ್ನು ಮರೆತೇಬಿಟ್ಟಿರುವ ಹಾಗಿದೆ. ಅದಕ್ಕೊಂದು ಸ್ಪಷ್ಟ ನಿದರ್ಶನವಾದಂಥ ಘಟನೆ ಕೂಡ ಸಂಭವಿಸಿದೆ. ಅದು ಮಾರ್ಚ್ ತಿಂಗಳ ಅಂತ್ಯದಲ್ಲಿ ನಡೆದಂಥ ಘಟನೆ. ಕಳೆದ ವರ್ಷ ತೆರೆಕಂಡ ಚಿತ್ರಗಳಲ್ಲಿ ಅತ್ಯುತ್ತಮವಾದವುಗಳಿಗೆ ಪ್ರಶಸ್ತಿ ನೀಡುವಂಥ ಕಾರ್ಯಕ್ರಮ. ಅವುಗಳಲ್ಲಿ ‘ಕಾಂತಾರ ಅಧ್ಯಾಯ-1’ ಚಿತ್ರ ಬರೋಬ್ಬರಿ ಒಂಭತ್ತು ವಿಭಾಗಗಳಲ್ಲಿ ಪ್ರಶಸ್ತಿ ಗೆದ್ದಿತ್ತು. ಆದರೆ ಪ್ರಶಸ್ತಿ ಪಡೆಯಲು ಹೊಂಬಾಳೆ ಸಂಸ್ಥೆಯಿಂದ ಯಾರೂ ಬಂದಿರಲಿಲ್ಲ. ಸಾಮಾನ್ಯವಾಗಿ ಪ್ರಶಸ್ತಿ ಸಮಾರಂಭಗಳಲ್ಲಿ ನಿರ್ಮಾಪಕರು ಗಮನ ಸೆಳೆಯುವುದು ಕಡಿಮೆಯೇ. ಅದರೆ ಶ್ರೇಷ್ಠ ಚಿತ್ರ ಪ್ರಶಸ್ತಿ ಘೋಷಣೆಯಾದಾಗ ಅದನ್ನು ಪಡೆಯಲು ನಿರ್ಮಾಪಕರೇ ಬರುತ್ತಾರೆ. ಆಸ್ಕರ್‌ನಿಂದ ಹಿಡಿದು ರಾಷ್ಟ್ರ ಪ್ರಶಸ್ತಿ ತನಕ ಇಂಥ ಪ್ರಶಸ್ತಿಯನ್ನು ಚಿತ್ರದ ಅಧಿಕೃತ ನಿರ್ಮಾಣ ಸಂಸ್ಥೆಯ ಮಾಲಕರೇ ಪಡೆಯಲು ಅರ್ಹರಾಗುತ್ತಾರೆ. ರಾಜ್ಯ ಮಟ್ಟದ ಪ್ರಶಸ್ತಿ ಪಡೆಯುವಾಗ ಮಾತ್ರ ಅಧಿಕೃತ ನಿರ್ಮಾಪಕರ ಪರವಾಗಿ ಬಂದವರು ಕೂಡ ವೇದಿಕೆ ಮೇಲೇರಿ ಪ್ರಶಸ್ತಿ ಪಡೆಯಬಹುದು. ಮೊನ್ನೆಯ ಪ್ರಶಸ್ತಿ ಸಮಾರಂಭದಲ್ಲಿ ಕೂಡ ಅಂಥದ್ದೇ ಅವಕಾಶಗಳಿದ್ದವು. ಅದು ಕನ್ನಡದ ಚಿತ್ರರಂಗದಲ್ಲಿ ತಕ್ಕಮಟ್ಟಿಗೆ ಹೆಸರು ಮಾಡುತ್ತಿರುವಂಥ ಸಮಾರಂಭ. ಮಾತ್ರವಲ್ಲ, ಒಂದಲ್ಲ ಎರಡಲ್ಲ ಬರೋಬ್ಬರಿ 9 ಪ್ರಶಸ್ತಿಗಳನ್ನು ಬಾಚಿರುವಂಥ ವೇದಿಕೆ. ಪ್ರಶಸ್ತಿ ನೀಡಲು ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಗಿರೀಶ್ ಕಾಸರವಳ್ಳಿಯಿಂದ ಹಿಡಿದು ಹಿರಿಯ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ಲೆಜೆಂಡ್ ನಿರ್ಮಾಣ ಸಂಸ್ಥೆಯ ಮಾಲಕ, ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಮೊದಲಾದವರು ಇದ್ದಂಥ ವೇದಿಕೆ. ಬೆಂಗಳೂರಿನ ಕೇಂದ್ರ ಭಾಗವಾದ ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮ. ಹೀಗೆ ಯಾವ ರೀತಿಯಿಂದ ನೋಡಿದರೂ ಖುದ್ದು ವಿಜಯ್ ಕಿರಗಂದೂರ್ ಆಗಮಿಸಿ ಪ್ರಶಸ್ತಿ ಪಡೆಯಲು ಯೋಗ್ಯವಾದ ಸಂದರ್ಭ ಅದಾಗಿತ್ತು. ಆದರೆ ವಿಜಯ್ ಕಿರಗಂದೂರ್ ಬಿಡಿ, ಅವರ ಸಹ ನಿರ್ಮಾಪಕರಾಗಲೀ ಅಥವಾ ಹೊಂಬಾಳೆ ತಂಡವನ್ನು ಪ್ರತಿನಿಧಿಸಿದ ಒಬ್ಬರೇ ಆಗಲೀ ಅಲ್ಲಿರಲಿಲ್ಲ. ಅದೇ ಸಂದರ್ಭದಲ್ಲಿ ಹೊಂಬಾಳೆ ಸಂಸ್ಥೆಗೆ ಸೇರಬೇಕಾದ ಪ್ರಶಸ್ತಿಯನ್ನು ಪಡೆದುಕೊಂಡ ರಿಷಬ್ ಶೆಟ್ಟಿ ಕೂಡ ಸಂಸ್ಥೆ ಬಗ್ಗೆ ಒಂದಕ್ಷರವನ್ನೂ ಮಾತನಾಡಲಿಲ್ಲ! ‘ಕಾಂತಾರ ಅಧ್ಯಾಯ-1’ ಚಿತ್ರಕ್ಕೆ ಒಂಭತ್ತು ಪ್ರಮುಖ ವಿಭಾಗಗಳಲ್ಲಿ ಪ್ರಶಸ್ತಿಗಳ ಘೋಷಣೆಯಾಗಿತ್ತು. ಅತ್ಯುತ್ತಮ ವಿಎಫೆಕ್ಸ್, ಅತ್ಯುತ್ತಮ ಕಲಾ ನಿರ್ದೇಶನ, ಅತ್ಯುತ್ತಮ ಸಾಹಸ ನಿರ್ದೇಶನ, ಅತ್ಯುತ್ತಮ ಛಾಯಾಗ್ರಹಣ, ಅತ್ಯುತ್ತಮ ಗಾಯಕ, ಅತ್ಯುತ್ತಮ ಸಂಗೀತ ಎನ್ನುವುದರೊಂದಿಗೆ ರಿಷಬ್ ಶೆಟ್ಟಿಯವರಿಗೆ ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ನಟ ಪ್ರಶಸ್ತಿಯೂ ಲಭಿಸಿತ್ತು. ಅವೆರಡನ್ನು ಕೂಡ ಎರಡೆರಡು ಬಾರಿ ವೇದಿಕೆ ಮೇಲೇರಿ ಬಂದು ಪಡೆದುಕೊಂಡವರು ಖುದ್ದು ರಿಷಬ್ ಶೆಟ್ಟಿ. ಬಹುಶಃ ಹೀಗೆ ಎರಡೆರಡು ಪ್ರಮುಖ ಪ್ರಶಸ್ತಿಗಳು ತಮಗೆ ದೊರಕಿರುವ ಕಾರಣದಿಂದಲೇ ರಿಷಬ್ ಈ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ. ಆದರೆ ರಿಷಬ್ ಬರುತ್ತಾರೆ ಎನ್ನುವುದು ಖಚಿತವಾದ ಕಾರಣದಿಂದಲೇ ನಿರ್ಮಾಣ ಸಂಸ್ಥೆಯಿಂದ ಯಾರೂ ಬಂದಿಲ್ಲ ಎನ್ನಲಾಗುತ್ತಿದೆ. ಯಾಕೆಂದರೆ ‘ಫಾಲೋ ಮಾಡುವುದನ್ನು’ ನಿಲ್ಲಿಸಿದ ವ್ಯಕ್ತಿಯನ್ನು ಮುಖಾಮುಖಿಯಾಗಲು ಹೊಂಬಾಳೆಗೂ ವಿರೋಧವಿರುವ ಹಾಗಿದೆ. ರಿಷಬ್ ಕೂಡ ಅದುವರೆಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕೊನೆಯ ಪ್ರಮುಖ ಮೂರು ಪ್ರಶಸ್ತಿಗಳಲ್ಲಿ ನೇರವಾಗಿ ತಮಗೆ ಸಂಬಂಧಿಸಿದ ಎರಡು ಪ್ರಶಸ್ತಿಗಳನ್ನು ಮಾತ್ರ ಪಡೆದುಕೊಂಡು ಹೊರಟು ನಿಂತಿದ್ದರು. ಯಾಕೆಂದರೆ ಶ್ರೇಷ್ಠ ಚಿತ್ರ ಪ್ರಶಸ್ತಿ ಎನ್ನುವುದು ನಿರ್ಮಾಣ ಸಂಸ್ಥೆಗೆ ಮೀಸಲಾದ ಪ್ರಶಸ್ತಿ ಎನ್ನುವುದು ಖುದ್ದು ರಿಷಬ್ ಶೆಟ್ಟಿಗೂ ತಿಳಿದಿತ್ತು. ಆದರೆ ಹೊಂಬಾಳೆಗೆ ಸಂಬಂಧಿಸಿದ ಯಾರೂ ಇಲ್ಲ, ನೀವೇ ಪಡೆಯಬೇಕು ಎಂದು ಆಯೋಜಕರು ಒತ್ತಾಯಿಸಿದ ಕಾರಣ ಮತ್ತೊಮ್ಮೆ ರಿಷಬ್ ಆ ವೇದಿಕೆ ಮೇಲೇರಿದ್ದಾರೆ ಎನ್ನಲಾಗಿದೆ. ರಿಷಬ್ ಶೆಟ್ಟಿಯವರ ಅದುವರೆಗಿನ ವರ್ತನೆ ಸಮರ್ಥನೀಯವೇ ಆಗಿತ್ತು. ಆನಂತರದ ಭಾಷಣ ಮಾತ್ರ ತೀರ ಅನಿರೀಕ್ಷಿತವಾಗಿರುವಂಥದ್ದು. ‘ಕಾಂತಾರ’ ಎನ್ನುವ ಚಿತ್ರದ ಮೊದಲ ಭಾಗ ಶುರುವಾದಾಗಿನಿಂದಲೂ ರಿಷಬ್ ಹೆಚ್ಚು ಮೆಚ್ಚುಗೆ ಮಾತನಾಡಿದ್ದು ಅಂದರೆ ಅದು ’ಹೊಂಬಾಳೆ’ ಎನ್ನುವ ಸಂಸ್ಥೆಯ ಬಗ್ಗೆ. ಪ್ರತೀ ವೇದಿಕೆಯಲ್ಲಿಯೂ ಹೊಂಬಾಳೆ ಇರದಿದ್ದರೆ ಇಷ್ಟು ದೊಡ್ಡ ಕನಸು ನನಸೇ ಆಗುತ್ತಿರಲಿಲ್ಲ ಅಂತಿದ್ದ ರಿಷಬ್, ಈ ಬಾರಿ ಮಾತ್ರ ನಿರ್ಮಾಣ ಸಂಸ್ಥೆ ಬಗ್ಗೆ ಸೊಲ್ಲೇ ಎತ್ತಿಲ್ಲ. ಅದು ಎರಡೆರಡು ಬಾರಿ ವೇದಿಕೆ ಏರಿ ಅತ್ಯುತ್ತಮ ನಟ, ನಿರ್ದೇಶಕ ಪ್ರಶಸ್ತಿ ಪಡೆದಾಗ ಮಾತ್ರವಲ್ಲ, ಶ್ರೇಷ್ಠ ಚಿತ್ರ ಪ್ರಶಸ್ತಿ ಪಡೆದಾಗಲೂ ಅಷ್ಟೇ. ಆದರೆ ಅಂಥದೊಂದು ಆಪಾದನೆಯಿಂದ ದೂರಾಗಲೂ ರಿಷಬ್ ಒಂದೊಳ್ಳೆಯ ಉಪಾಯವನ್ನೇ ಮಾಡಿದ್ದಾರೆ. ‘ಕಾಂತಾರ’ಕ್ಕೆ ಸಂಬಂಧಿಸಿದಂತೆ ಅಲ್ಲಿಗೆ ಬಂದಿದ್ದವರನ್ನೆಲ್ಲ ವೇದಿಕೆಗೆ ಕರೆದಿದ್ದಾರೆ. ಪ್ರತಿಯೊಬ್ಬರೂ ಮಾತನಾಡಬೇಕು ಎಂದಿದ್ದಾರೆ! ಈ ಸಂದರ್ಭದಲ್ಲಿ ಮೈಕ್ ಪಡೆದುಕೊಂಡ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್, ಅತ್ಯುತ್ತಮ ಚಿತ್ರ ಪ್ರಶಸ್ತಿ ಬಂದಿದ್ದಕ್ಕಾಗಿ ರಿಷಬ್‌ಗೆ ಕಂಗ್ರಾಚ್ಯುಲೇಶನ್ ಹೇಳಿದ್ದಾರೆ. ಆದರೆ ಇದು ಪೂರ್ತಿ ತಂಡಕ್ಕೆ ಸೇರಿದ್ದು ಎಂದಿದ್ದಾರೆ, ರಿಷಬ್ ಶೆಟ್ಟಿ. ತಕ್ಷಣ ಅಜನೀಶ್ ಅವರು ಹೊಂಬಾಳೆ ಸಂಸ್ಥೆ ಮತ್ತು ವಿಜಯ್ ಕಿರಗಂದೂರ್ ಹೆಸರನ್ನು ನೆನಪಿಸಿಕೊಂಡಿದ್ದಾರೆ. ಒಂದು ವೇಳೆ ರಿಷಬ್ ಆಕಸ್ಮಿಕವಾಗಿ ಮರೆತಿದ್ದೇ ಆಗಿದ್ದಲ್ಲಿ, ಖಂಡಿತವಾಗಿ ಈ ಸಂದರ್ಭದಲ್ಲಿ ಆದರೂ ಎಚ್ಚರಗೊಳ್ಳಬೇಕಿತ್ತು. ಆದರೆ ರಿಷಬ್ ಶೆಟ್ಟಿಯವರು ಅಜನೀಶ್ ಮಾತು ಗಮನಿಸಿಯೂ ಗಮನಿಸದಂತೆ ಸುಮ್ಮನಾಗಿದ್ದಾರೆ! ಇದನ್ನೆಲ್ಲ ಗಮನಿಸುವಾಗ ರಶ್ಮಿಕಾ ಘಟನೆ ನೆನಪಾಗುತ್ತದೆ. ಟಾಲಿವುಡ್‌ನಲ್ಲಿ ಹೆಸರು ಮಾಡುತ್ತಿರುವಂತೆ ರಶ್ಮಿಕಾ ನೀಡಿದ ಸಂದರ್ಶನವೊಂದರಲ್ಲಿ ‘ಕಿರಿಕ್ ಪಾರ್ಟಿ’ ಚಿತ್ರದಲ್ಲಿ ಅವಕಾಶ ಕೊಟ್ಟ ನಿರ್ಮಾಣ ಸಂಸ್ಥೆಯ ಹೆಸರನ್ನೇ ಹೇಳದಾಗಿದ್ದರು. ಆಕೆಗೆ ರಿಷಬ್ ತಂಡದೊಂದಿಗೆ ಅದೇನೇ ವೈಷಮ್ಯ ಇದ್ದರೂ ಮೊದಲ ಚಿತ್ರದ ಅವಕಾಶ ನೀಡಿದ ನಿರ್ಮಾಣ ಸಂಸ್ಥೆಯ ಹೆಸರನ್ನು ಹೇಳದೇ ಹೋಗಿದ್ದು ತಪ್ಪು ಎನ್ನುವುದು ಆಗ ಎಲ್ಲರ ಅಭಿಪ್ರಾಯ ಆಗಿತ್ತು. ರಿಷಬ್ ಶೆಟ್ಟಿ ಕೂಡ ಪ್ರೊಡಕ್ಷನ್ ಹೌಸ್ ಬಗ್ಗೆ ಪ್ರಸ್ತಾಪಿಸದ ರಶ್ಮಿಕಾ ಆಂಗಿಕ ವರ್ತನೆಯನ್ನೇ ಹಂಗಿಸುವಂತೆ ಒಂದು ಪ್ರತಿಕ್ರಿಯೆ ಕೂಡ ನೀಡಿದ್ದರು. ಅಲ್ಲಿಂದ ರಶ್ಮಿಕಾ ಮಂದಣ್ಣ ಸೋಶಿಯಲ್ ಮೀಡಿಯಾದಲ್ಲಿ ತೀವ್ರವಾಗಿ ಟ್ರೋಲ್‌ಗೆ ಒಳಗಾಗಿದ್ದರು. ರಶ್ಮಿಕಾ ಮತ್ತು ರಿಷಬ್ ವರ್ತನೆಗಳನ್ನು ಒಂದೇ ತಕ್ಕಡಿಯಲ್ಲಿ ತೂಗುವುದು ಕಷ್ಟ. ಯಾಕೆಂದರೆ ಇಬ್ಬರಿಗೂ ಹೆಸರು ಅವಾಯ್ಡ್ ಮಾಡಬೇಕಾದ ಸಂದರ್ಭ ಬಂದಿದ್ದೇಕೆ ಎನ್ನುವುದನ್ನು ಇಬ್ಬರೂ ಅಧಿಕೃತವಾಗಿ ಹೇಳಿಕೊಂಡಿಲ್ಲ. ಆದರೆ ರಶ್ಮಿಕಾ ಇಂಥ ವರ್ತನೆ ತೋರಿಸುವಾಗ ಅದಾಗಲೇ ತೆಲುಗು ಚಿತ್ರರಂಗದಲ್ಲಿ ಸ್ಟಾರ್ ನಟಿಯಾಗಿದ್ದರು. ಮಾತ್ರವಲ್ಲ ಆ ಸಂದರ್ಭದಲ್ಲಿ ನಿರ್ಮಾಣ ಸಂಸ್ಥೆಯ ಹೆಸರನ್ನು ಹೇಳಲೇಬೇಕಾದ ಅನಿವಾರ್ಯತೆ ಕೂಡ ಇರಲಿಲ್ಲ. ಆದರೆ ರಿಷಬ್ ಶೆಟ್ಟಿಯವರು ಹೊಂಬಾಳೆ ನಿರ್ಮಾಣ ಸಂಸ್ಥೆ ಹೆಸರನ್ನು ಅದೇ ನಿರ್ಮಾಪಕರ ಚಿತ್ರಕ್ಕೆ ಸಂಬಂಧಿಸಿದ ಪ್ರಶಸ್ತಿ ಪಡೆಯುವಾಗಲೇ ಮರೆತಿದ್ದಾರೆ. ಅಂದು ರಿಷಬ್, ರಶ್ಮಿಕಾಗೆ ಕಾಲೆಳೆಯುವ ರೀತಿಯಲ್ಲೇ ಕೈ ಸನ್ನೆ ತೋರಿಸಿದ್ದರು. ಆದರೆ ಈಗ ಕಾಲ ಬದಲಾಗಿದೆ. ರಶ್ಮಿಕಾ ಅಭಿಮಾನಿಗಳಿಗೂ ರಿಷಬ್ ವರ್ತನೆ ಬಗ್ಗೆ ಆಡಿಕೊಳ್ಳಲು ಸಂದರ್ಭ ಸೃಷ್ಟಿಯಾಗಿದೆ. ತನ್ನನ್ನು ಮೊದಲ ಬಾರಿಗೆ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಜಗತ್ತಿನ ಮುಂದೆ ತೋರಿಸಿದ ಹೊಂಬಾಳೆ ಸಂಸ್ಥೆಯನ್ನೇ, ಖುದ್ದು ರಿಷಬ್ ಶೆಟ್ಟಿ ಮರೆತು ಮುಂದಡಿ ಇಟ್ಟಿದ್ದಾರೆ. ಯಾಕೆಂದರೆ ಇದೇ ಸಂದರ್ಭದಲ್ಲಿ ರಿಷಬ್ ತಾವು ಸದ್ಯದಲ್ಲೇ ಮತ್ತೆ ನಿರ್ದೇಶನ ಮಾಡಲಿರುವ ಬಗ್ಗೆಯೂ ಘೋಷಿಸಿದ್ದಾರೆ. ಈ ಬಾರಿ ತಮ್ಮದೇ ನಿರ್ಮಾಣ ಸಂಸ್ಥೆಗೆ ಮರಳುತ್ತಿರುವುದಾಗಿ ಈಗಾಗಲೇ ಸೋಶಿಯಲ್ ಮೀಡಿಯಾದಲ್ಲೂ ಹೇಳಿಕೊಂಡಾಗಿದೆ. ಹೀಗಾಗಿ ಸೋಶಿಯಲ್ ಮೀಡಿಯಾದಲ್ಲಿ ಹೊಂಬಾಳೆ ಸಂಸ್ಥೆಯನ್ನು ಅನ್ ಫಾಲೊ ಮಾಡಿರುವುದರ ಹಿಂದೆ ಗಟ್ಟಿಯಾದ ಕಾರಣವೇ ಇದೆ ಎನ್ನುವುದು ಸಾಬೀತಾಗಿದೆ. ಅದೇನು ಎನ್ನುವುದು ಮುಂದಿನ ದಿನಗಳಲ್ಲಿ ಜಾಹೀರಾಗದೆ ಇರಲಾರದು. ಸದ್ಯಕ್ಕೆ ರಿಷಬ್ ಹೊಂಬಾಳೆ ಹೆಸರನ್ನು ಉಲ್ಲೇಖಿಸಲು ಅವಾಯ್ಡ್ ಮಾಡಿರುವ ವೀಡಿಯೊ ಸಾರ್ವಜನಿಕವಾಗಿ ಹೆಚ್ಚು ಲಭ್ಯವಾದ ಹಾಗಿಲ್ಲ. ಒಂದು ವೇಳೆ ಸಿಕ್ಕರೂ ಈ ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ರಶ್ಮಿಕಾ ಮಟ್ಟಕ್ಕೆ ರಿಷಬ್ ಟ್ರೋಲ್ ನಡೆಯುವ ಸಾಧ್ಯತೆ ಕೂಡ ಇಲ್ಲ. ಮಾತ್ರವಲ್ಲ ‘ಹೊಂಬಾಳೆ’ಯ ನೆರಳಿಲ್ಲದೆ ರಿಷಬ್ ಶೆಟ್ಟಿ ಮತ್ತೊಂದು ಪ್ಯಾನ್ ಇಂಡಿಯಾ ಗೆಲುವು ಕಂಡರೆ ಸಿನೆಮಾ ಪ್ರಿಯರು ಕೂಡ ರಿಷಬ್ ಅವರ ವರ್ತನೆಗಳನ್ನು ಮರೆತು ಬಿಡುವುದರಲ್ಲಿ ಸಂದೇಹವಿಲ್ಲ.

ವಾರ್ತಾ ಭಾರತಿ 4 Apr 2026 1:17 pm

Amruthadhaare : ಮಲ್ಲಿ-ಸುನಿ ಮಧುಚಂದ್ರಕ್ಕೆ ಮೃತ್ಯುದೂತರನ್ನು ಕಳಿಸಿದ ಜೈದೇವ್ ; ನವಜೋಡಿಯನ್ನು ಕಾಪಾಡ್ತಾರಾ ಗೌತಮ್, ಭೂಮಿಕಾ ?

''ಅಮೃತಧಾರೆ'' ಧಾರಾವಾಹಿಯಲ್ಲಿ ಮಲ್ಲಿ ಮತ್ತು ಸುನಿಯ ಮದುವೆ ನಡೆದಿದೆ. ಮಲ್ಲಿ ಮೊಗದಲ್ಲಿ ಮಂದಹಾಸ ಮೂಡಿದೆ. ಆದರೆ, ಜೈದೇವ್ ನೆಮ್ಮದಿಗೆ ಕೊಳ್ಳಿ ಬಿದ್ದಿದೆ. ಮಲ್ಲಿಯ ಬದುಕನ್ನು ಹೇಗಾದರೂ ಮಾಡಿ ಹಾಳು ಮಾಡಬೇಕೆಂದುಕೊಂಡ ಕನಸು ಕಮರಿದೆ. ಹಾಗಂಥ, ಜೈದೇವ್ ಸುಮ್ಮನೆ ಕೂರುವ ವ್ಯಕ್ತಿಯಲ್ಲ. ಒಂದಿಲ್ಲೊಂದು ಪ್ಲಾನ್ ಮಾಡುವ ಕೇಡಿ. ಅವರೆಲ್ಲಾ ನಾನು ಸೋತೆ ಎಂದುಕೊಂಡು ಖುಷಿ ಪಡುತ್ತಿರಬಹುದು, ಆದರೆ...ಸೋತಿರುವನ ಪ್ರತೀಕಾರ

ಫಿಲ್ಮಿಬೀಟ್ 4 Apr 2026 12:09 pm

ಖ್ಯಾತ ನಿರ್ಮಾಪಕರು ನಿನ್ನ ನೋಡಬೇಕಂತೆ ರೆಸಾರ್ಟ್‌ಗೆ ಬಾ ; ತೆಲುಗು ಚಿತ್ರರಂಗದ ಕೊಳಕು ವ್ಯವಸ್ಥೆ ಬಯಲು ಮಾಡಿದ ಚೆಲುವೆ

ಬಣ್ಣದ ಲೋಕದಲ್ಲಿ ಅಮಾಯಕ ಹೆಣ್ಣು ಮಕ್ಕಳನ್ನು ಕಂಡರೆ ಮುಕ್ಕಿ ತಿನ್ನುವರು ತುಂಬಾ ಜನ ಇದ್ದಾರೆ. ಇಲ್ಲಿ ಬಹುತೇಕರಲ್ಲ ಆದರೆ ಕೆಲವರು ಮುಖವಾಡದ ಬದುಕನ್ನು ಬದುಕುತ್ತಾರೆ. ಕೆಲವರು ಪ್ರಚಾರದ ಹುಚ್ಚಿಗೆ ಬರುತ್ತಾರೆ, ಇನ್ನೂ ಕೆಲವರು ಹೆಣ್ಣಿನ ಚಪಲಕ್ಕಾಗಿ ಸಿನಿಮಾ ನಿರ್ಮಾಣ ಮಾಡಲು ಬರುತ್ತಾರೆ. ಕನ್ನಡ, ತಮಿಳು, ತೆಲುಗು, ಹಿಂದಿ, ಮಲಯಾಳಂ, ಹೀಗೆ.. ಆ ಇಂಡಸ್ಟ್ರೀ ಈ ಇಂಡಸ್ಟ್ರೀ ಅಂತ

ಫಿಲ್ಮಿಬೀಟ್ 4 Apr 2026 10:38 am

ಸಂಭಾವನೆ ಜೊತೆಗೆ ಲಾಭದಲ್ಲಿ ಪಾಲು.. ಎ. ಆರ್ ರಹಮಾನ್ ಹೊಸ ದಾಖಲೆ; ಯಶ್ ಕೂಡ ನಟಿಸಿರೋ ಸಿನಿಮಾ

ಭಾರತೀಯ ಸಿನಿಮಾಗಳಲ್ಲಿ ಸಂಗೀತಕ್ಕೆ ಬಹಳ ಮಹತ್ವ ಇದೆ. ಹಾಡುಗಳ ಜೊತೆಗೆ ಹಿನ್ನೆಲೆ ಸಂಗೀತ ಬಹಳ ಮುಖ್ಯವಾಗುತ್ತದೆ. ಹಾಗಾಗಿ ಸಂಗೀತದ ಬಗ್ಗೆ ಫಿಲ್ಮ್ ಮೇಕರ್ಸ್ ಬಹಳ ತಲೆ ಕೆಡಿಸಿಕೊಳ್ಳುತ್ತಾರೆ. ಇತ್ತೀಚೆಗೆ ಕೋಟಿ ಕೋಟಿ ಸಂಭಾವನೆ ಕೊಟ್ಟು ಟ್ಯೂನ್ ಹಾಕಿಸುತ್ತಾರೆ. ಪ್ಯಾನ್ ಇಂಡಿಯಾ ಸಿನಿಮಾಗಳ ಟ್ರೆಂಡ್ ಶುರುವಾದ ಬಳಿಕ ಕಲಾವಿದರ ಸಂಭಾವನೆ ರೀತಿ ತಂತ್ರಜ್ಞರ ಸಂಭಾವನೆ ಕೂಡ ಹೆಚ್ಚಾಗಿದೆ. ಆಸ್ಕರ್

ಫಿಲ್ಮಿಬೀಟ್ 4 Apr 2026 8:53 am

'ರಾಮಾಯಣ' ಚಿತ್ರದಲ್ಲಿ ಒಂದಲ್ಲ ಎರಡಲ್ಲ ಮೂರು ಪಾತ್ರಗಳಲ್ಲಿ ರಣ್‌ಬೀರ್ ಕಪೂರ್ ನಟನೆ

ನಿತೇಶ್ ತಿವಾರಿ ಸಾರಥ್ಯದ 'ರಾಮಾಯಣ' ಚಿತ್ರದಲ್ಲಿ ಪಾತ್ರಗಳ ಆಯ್ಕೆ ಬಹಳ ವಿಶೇಷವಾಗಿದೆ. ಬಾಲಿವುಡ್ ಕಲಾವಿದರ ಜೊತೆಗೆ ದಕ್ಷಿಣದ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಶ್ರೀರಾಮನಾಗಿ ರಣ್‌ಬೀರ್‌ ಕಪೂರ್, ರಾವಣನಾಗಿ ಯಶ್, ಸೀತೆಯಾಗಿ ಸಾಯಿ ಪಲ್ಲವಿ, ಹನುಮಂತನಾಗಿ ಸನ್ನಿ ಡಿಯೋಲ್, ಲಕ್ಷ್ಮಣನಾಗಿ ರವಿ ದುಬೆ ಹೀಗೆ ಘಟಾನುಘಟಿ ಕಲಾವಿದರು ಬಣ್ಣ ಹಚ್ಚಿದ್ದಾರೆ. ಚಿತ್ರದಲ್ಲಿ ಶ್ರೀರಾಮನಾಗಿ ರಣ್‌ಬೀರ್ ಕಪೂರ್ ಹೇಗೆ

ಫಿಲ್ಮಿಬೀಟ್ 4 Apr 2026 7:45 am

NH 66 ನಲ್ಲಿ ಶ್ರುತಿ ಹರಿಹರನ್ ಜೊತೆ ಪ್ರಮೋದ್ ಶೆಟ್ಟಿ ಜರ್ನಿ; ಹೇಗಿರುತ್ತೆ ರೋಡ್ ಸ್ಟೋರಿ?

ರಾಯ ಫಿಲಂಸ್ ಲಾಂಛನದಲ್ಲಿ ಮಂಜುನಾಥ್ ಟಿ.ಆರ್ ನಿರ್ಮಿಸಿ, ನಿರ್ದೇಶಿಸುತ್ತಿರುವ ಹಾಗೂ ಪ್ರಮೋದ್ ಶೆಟ್ಟಿ, ಶೃತಿ ಹರಿಹರನ್, ರಾಜೇಶ್ ನಟರಂಗ ಪ್ರಮುಖಪಾತ್ರದಲ್ಲಿ ನಟಿಸುತ್ತಿರುವ ನೂತನ ಚಿತ್ರದ ಮುಹೂರ್ತ ಹಾಗೂ ಶೀರ್ಷಿಕೆ ಅನಾವರಣ ಸಮಾರಂಭ ರಾಜರಾಜೇಶ್ವರಿ ನಗರದ ಶ್ರೀರಾಘವೇಂದ್ರ ಸ್ವಾಮಿ ಮಠದಲ್ಲಿ ನೆರವೇರಿತು. ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ NH 66 ಎಂದು ಹೆಸರಿಡಲಾಗಿದೆ. ನಟ ಉಗ್ರಂ ಮಂಜು

ಫಿಲ್ಮಿಬೀಟ್ 3 Apr 2026 11:59 pm

Ramayana: 4 ಸಾವಿರ ಕೋಟಿ ವೆಚ್ಚದ 'ರಾಮಾಯಣ' ಸಿನಿಮಾ.. ಯಾರಿಗೆ ಎಷ್ಟೆಷ್ಟು ಕೋಟಿ ಸಂಭಾವನೆ?

ನಿರ್ದೇಶಕ ನಿತೇಶ್ ತಿವಾರಿ ಅವರ ಬೃಹತ್ ಬಜೆಟ್ 'ರಾಮಾಯಣ'ಕ್ಕಾಗಿ ಪ್ರೇಕ್ಷಕರು ಕಾತರದಲ್ಲಿದ್ದಾರೆ. ರಣಬೀರ್ ಕಪೂರ್ (ಶ್ರೀರಾಮ), ಸಾಯಿ ಪಲ್ಲವಿ (ಸೀತೆ), ಯಶ್ (ರಾವಣ) ಮತ್ತು ಸನ್ನಿ ಡಿಯೋಲ್ (ಹನುಮಾನ್) ನಟಿಸಿರುವ ಈ ಚಿತ್ರ ಹಲವು ತಿಂಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯ ವಿಷಯವಾಗಿದೆ. ಈ ಅದ್ದೂರಿ ಚಿತ್ರದ ತಾರೆಯರ ಸಂಭಾವನೆ ಕುರಿತು ಕುತೂಹಲ ಇದೀಗ ಹೆಚ್ಚಿದೆ. ಟೈಮ್ಸ್ ಆಫ್

ಫಿಲ್ಮಿಬೀಟ್ 3 Apr 2026 11:45 pm

ಎಲ್ಲರಿಗೂ ಎಲ್ಲಾ ಇಷ್ಟ ಆಗ್ಬೇಕು ಅಂತೇನಿಲ್ಲ; 'ರಾಮಾಯಣ' ಟೀಸರ್ ಬಗ್ಗೆ ಯಶ್ ತಾಯಿ ಮಾತು

ನಮಿತ್ ಮಲ್ಹೋತ್ರಾ ನಿರ್ಮಾಣದ 'ರಾಮಾಯಣ' ಸಿನಿಮಾ ಈಗ ಚಿತ್ರರಂಗದಲ್ಲಿ ಹಾಟ್ ಟಾಪಿಕ್ ಆಗಿದೆ. ನಿತೇಶ್ ತಿವಾರಿ ನಿರ್ದೇಶನದಲ್ಲಿ ರಾವಣನಾಗಿ ಯಶ್ ನಟಿಸಿದ್ದಾರೆ. 4000 ಕೋಟಿ ರೂ. ಬಜೆಟ್‌ನಲ್ಲಿ ಸರಣಿ ಸಿನಿಮಾ ನಿರ್ಮಾಣ ಮಾಡುತ್ತಿರುವುದಾಗಿ ಚಿತ್ರತಂಡ ಹೇಳ್ತಿದೆ. ಆದರೆ ಟೀಸರ್ ನೋಡಿ ಕೆಲವರು ಬೇಸರ ವ್ಯಕ್ತಪಡಿಸಿದ್ದಾರೆ. ನಿರೀಕ್ಷೆ ತಕ್ಕಂತೆ ಟೀಸರ್ ಬಂದಿಲ್ಲ ಎಂದು ಸಿನಿರಸಿಕರು ಕಾಮೆಂಟ್ ಮಾಡುತ್ತಿದ್ದಾರೆ. ಸಾಕಷ್ಟು

ಫಿಲ್ಮಿಬೀಟ್ 3 Apr 2026 11:31 pm

ಚುನಾವಣೆಗೂ ಮುನ್ನ ಚೆನ್ನೈನಲ್ಲಿ ಆಸ್ತಿ ಮಾರಿ, ಆಸ್ಟ್ರೇಲಿಯಾ ಆಸ್ತಿ ಖರೀಸಿದರೇ ವಿಜಯ್-ತ್ರಿಶಾ? ಏನಿದು ಹೊಸ ಆರೋಪ?

ತಮಿಳುನಾಡು ಚುನಾವಣಾ ಅಖಾಡಕ್ಕೆ ಸಜ್ಜಾಗಿದೆ. ಸುಡು ಬಿಸಿಲನ ನಡುವೆಯೂ ರಾಜಕೀಯರ ಮುಖಂಡರು ಅಖಾಡಕ್ಕೆ ಇಳಿದು ಚುನಾವಣಾ ಪ್ರಚಾರ ಮಾಡುತ್ತಿದ್ದಾರೆ. ತಮ್ಮ ವಿರೋಧಿ ಪಕ್ಷಕ ವಿರುದ್ಧ ಆರೋಪಗಳನ್ನು ಮಾಡುತ್ತಿದ್ದಾರೆ. ಇದೇ ಮೊದಲ ಬಾರಿಗ 'ತಮಿಳಕ ವೆಟ್ರಿ ಕಳಗಂ' ಪಕ್ಷ ಕಟ್ಟಿ ಅಖಾಡಕ್ಕೆ ಇಳಿಯುತ್ತಿರುವ ದಳಪತಿ ವಿಜಯ್ ವಿರುದ್ಧ ತೀವ್ರ ಟೀಕೆಗಳನ್ನು ಮಾಡಲಾಗುತ್ತಿದೆ. ವಿಜಯ್ ವಿಚ್ಚೇದನ ಪ್ರಕರಣದ ಬಳಿಕ ನಟಿ

ಫಿಲ್ಮಿಬೀಟ್ 3 Apr 2026 11:24 pm

ಅರೇ, ರಶ್ಮಿಕಾ ಮಂದಣ್ಣಗೆ ದಿಢೀರ್ ಕನ್ನಡ ಸಿನಿಮಾ ಮೇಲೆ ಲವ್ವಾಗೋಯ್ತು

'ಕಿರಿಕ್ ಪಾರ್ಟಿ' ಸಿನಿಮಾ ಮೂಲಕ ಬಣ್ಣದಲೋಕ ಪ್ರವೇಶಿಸಿದ ರಶ್ಮಿಮಾ ಮಂದಣ್ಣ ಈಗ ಬಾಲಿವುಡ್ ಸ್ಟಾರ್ ಹೀರೊಯಿನ್ ಆಗಿ ಮೆರೆಯುತ್ತಿದ್ದಾರೆ. ತೆಲುಗು, ತಮಿಳಿನಲ್ಲಿ ಕೂಡ ರಶ್ಮಿಕಾ ಹವಾ ನಡೀತಿದೆ. ಮದುವೆ ಬಳಿಕ ಕೂಡ ಬ್ರೇಕ್ ಪಡೆಯದೇ ಸಿನಿಮಾ ಚಿತ್ರೀಕರಣದಲ್ಲಿ ಭಾಗಿ ಆಗಿದ್ದಾರೆ. 'ಪೊಗರು' ಸಿನಿಮಾ ಬಳಿಕ ಕನ್ನಡದ ಯಾವುದೇ ಸಿನಿಮಾ ಒಪ್ಪಿಕೊಳ್ಳಲಿಲ್ಲ. ತಮ್ಮ ವಿವಾದಾತ್ಮಕ ಹೇಳಿಕೆಗಳಿಗೆ ರಶ್ಮಿಕಾ ಕೆಲ

ಫಿಲ್ಮಿಬೀಟ್ 3 Apr 2026 10:36 pm

ಮೋಹನ್‌ಲಾಲ್ 'ದೃಶ್ಯಂ 3' ವಿರುದ್ಧ ಪ್ರೈಂ ವಿಡಿಯೋ ಬಹಿರಂಗ ನೋಟೀಸ್; ಏನಿದು SVOD, TVOD, AVOD ರೈಟ್ಸ್?

ಈ ವರ್ಷದ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಮೋಹನ್‌ಲಾಲ್ ನಟನೆಯ 'ದೃಶ್ಯಂ 3' ಕೂಡ ಇದೆ. ಈಗಾಗಲೇ 'ದೃಶ್ಯಂ' ಹಾಗೂ 'ದೃಶ್ಯಂ 3' ಮೂಲಕ ಪ್ರೇಕ್ಷಕರಲ್ಲಿ ಕುತೂಹಲವನ್ನು ಕೆರಳಿಸುವಲ್ಲಿ ಯಶಸ್ವಿಯಾಗಿದೆ. ಹೀಗಾಗಿ ಕೇವಲ ಮಲಯಾಳಿಗಳಷ್ಟೇ ಅಲ್ಲ. ಇದೇ ದೇಶವೇ 3ನೇ ಸೀಕ್ವೆಲ್‌ಗಾಗಿ ಎದುರು ನೋಡುತ್ತಿದೆ. ಎಲ್ಲ ಅಂದುಕೊಂಡಂತೆ ಆಗಿದ್ದರೆ, ಏಪ್ರಿಲ್ 2ರಂದು ಈ ಸಿನಿಮಾ ರಿಲೀಸ್ ಆಗಬೇಕಿತ್ತು. ಅಮೆರಿಕ-ಇಸ್ರೇಲ್

ಫಿಲ್ಮಿಬೀಟ್ 3 Apr 2026 10:15 pm

\ನಟಿ ಸೌಂದರ್ಯ ಸತ್ತಾಗ ದೇವರ ಮನೆಗೆ ಬೀಗ ಹಾಕಿದ್ರು\; ಶಂಕರ್‌ನಾಗ್, ಸುನೀಲ್ ಸಾವು ನೆನೆದು ತಾರಾ ಭಾವುಕ

ಕನ್ನಡ ಚಿತ್ರರಂಗ ಇದೂವರೆಗೂ ಸಾಕಷ್ಟು ಅನಿರೀಕ್ಷಿತ ದುರಂತಗಳನ್ನು ಕಂಡಿದೆ. ಸ್ಯಾಂಡಲ್‌ವುಡ್‌ನಲ್ಲಿ ಇಂದಿಗೂ ಇವರೆಲ್ಲರೂ ಇರಬೇಕಿತ್ತು ಅಂತ ಅನಿಸುವಷ್ಟು ಸಾಧನೆ ಮಾಡಿ ಹೋದವರು ಬಹಳಷ್ಟು ಮಂದಿ ಇದ್ದಾರೆ. ಅವರಲ್ಲಿ ನೆನಪಿಗೆ ಬರೋದು ಕರಾಟೆ ಕಿಂಗ್ ಶಂಕರ್ ನಾಗ್, ಮಂಜುಳಾ, ನಟಿ ಸೌಂದರ್ಯಾ, ಸುನೀಲ್ ಹಾಗೂ ಪುನೀತ್ ರಾಜ್‌ಕುಮಾರ್. ಹೀಗೆ ಇಂತಹ ಮೇರು ಕಲಾವಿದರ ಅನಿರೀಕ್ಷಿತ ಅಗಲಿಕೆಯನ್ನು ಸಹಿಸಿಕೊಳ್ಳುವುದಕ್ಕೆ ಸಾಧ್ಯವೇ

ಫಿಲ್ಮಿಬೀಟ್ 3 Apr 2026 9:09 pm

Amruthadhaare ; ಪ್ರತೀಕಾರದ ಜ್ವಾಲೆಯಲ್ಲಿ ಜೈದೇವ್ ಧಗಧಗ - ಹನಿಮೂನ್‌ನಲ್ಲಿ ಮಲ್ಲಿ, ಸುನಿಗೆ ಕಾದಿದೆಯಾ ಆಪತ್ತು?

''ಅಮೃತಧಾರೆ'' ಧಾರಾವಾಹಿಯಲ್ಲಿ ಜೈದೇವ್ ಪರಿಸ್ಥಿತಿ ಇರುಳು ಕಂಡ ಬಾವಿಗೆ ಹಗಲು ಬಿದ್ದಂತಾಗಿದೆ. ಗೌತಮ್, ಭೂಮಿಕಾ, ಸುನಿ ಮತ್ತು ಮಲ್ಲಿ ನೀಡಿದ ಚಮಕ್ ದಿಂದ ಆಘಾತಕ್ಕೊಳಗಾದ ಜೈದೇವ್ ಸದ್ಯ ತಲೆ ಮೇಲೆ ಕೈಹೊತ್ತು ಕುಂತಿದ್ದಾನೆ. ಇನ್ನೊಂದು ಕಡೆ ಮಲ್ಲಿ ಐಪಿಎಸ್ ಅಧಿಕಾರಿ ಆಗಬೇಕೆಂಬ ಕನಸೊತ್ತ ಮಲ್ಲಿ,ಯುಪಿಎಸ್‌ ಪರೀಕ್ಷೆ ಬೇರೆ ಪಾಸ್‌ ಆಗಿದ್ದಾಳೆ. ಕಳೆದ ಐದು ವರ್ಷದಿಂದ ಮಲ್ಲಿ ಮಾಡಿದ

ಫಿಲ್ಮಿಬೀಟ್ 3 Apr 2026 7:03 pm

ಅಗಲಿದ ಪತಿಯ ಫೋಟೊಗೆ ತಾಳಿ ತಗುಲಾಕಿದ ಪತ್ನಿ; ಸೊಸೆ ಎಂದು ಇಂದಿಗೂ ಒಪ್ಪಿಕೊಂಡಿಲ್ಲ ನಂದಮೂರಿ ಕುಟುಂಬ

ತೆಲುಗು ಚಿತ್ರರಂಗದಲ್ಲಿ ನಂದಮೂರಿ ಕುಟುಂಬದ ಲೆಗಸಿ ಇಂದಿಗೂ ಮುಂದುವರೆದಿದೆ. ಚಿತ್ರರಂಗದಲ್ಲಿ ಬಾಲಕೃಷ್ಣ ಹಾಗೂ ಜೂ.ಎನ್‌ಟಿಆರ್ ಹವಾ ಜೋರಾಗಿದೆ. ಈ ಕುಟುಂಬದ ಮೇಲೆ ತೆಲುಗು ಮಂದಿ ಅಪಾರ ಅಭಿಮಾನವನ್ನು ಇಟ್ಟುಕೊಂಡಿದ್ದಾರೆ. ಸಿನಿಮಾ ಅಷ್ಟೇ ಅಲ್ಲದೇ, ರಾಜಕೀಯದಲ್ಲೂ ಈ ಕುಟುಂಬ ಪ್ರಬಲವಾಗಿದೆ. ಹೀಗಾಗಿ ಈ ನಂದಮೂರಿ ಕುಟುಂಬದ ಆಗು-ಹೋಗುಗಳ ಬಗ್ಗೆ ಪ್ರತಿಯೊಬ್ಬ ಅಭಿಮಾನಿಯೂ ಗಮನಿಸುತ್ತಲೇ ಇರುತ್ತಾನೆ. ಮೂರು ವರ್ಷಗಳ ಹಿಂದೆ

ಫಿಲ್ಮಿಬೀಟ್ 3 Apr 2026 5:37 pm

ರಾಜೇಶ್ ಖನ್ನಾಗೆ ಎಷ್ಟು ಹೆಂಡತಿಯರು? ಆಶೀರ್ವಾದ ಬಂಗಲೆಯ ಅಸಲಿ ಒಡತಿ ಯಾರು? ಶಾಕ್ ನೀಡಿದ ಹೈಕೋರ್ಟ್‌

ರಾಜೇಶ್ ಖನ್ನಾ ಕೇವಲ ಹೆಸರಲ್ಲ. ಬಾಲಿವುಡ್‌ನ ಅಚ್ಚಳಿಯದ ಛಾಪು. ಭಾರತದ ಮೊದಲ ಸೂಪರ್ ಸ್ಟಾರ್. ಅಂದಕಾಲತ್ತಿಲ್‌ ಇವರ ಕಾರ್ ಮೇಲಿನ ಧೂಳನ್ನು ಮಹಿಳೆಯರು ಹಣೆಗೆ ತಿಲಕವಾಗಿ ಹಚ್ಚಿಕೊಳ್ಳುತ್ತಿದ್ದರು. ಇವರ ಕಾರಿನ ಗ್ಲಾಸ್‌ಗಳ ಮೇಲೆ ಮುತ್ತಿನ ಮಳೆಗೈದ ಚೆಲುವೆಯರಿಗೇನು ಕಡಿಮೆ ಇಲ್ಲ. ಆ ಕಾಲದಲ್ಲಿ ಬಾಲಿವುಡ್‌ನ ಕೇರ್ ಆಫ್ ಅಡ್ರೆಸ್ ಆಗಿದ್ದರು ಈ ಕಾಕಾ. ಇಂಥಾ ರಾಜೇಶ್ ಖನ್ನಾ

ಫಿಲ್ಮಿಬೀಟ್ 3 Apr 2026 3:37 pm

Dhurandhar 2: ₹900 ಕೋಟಿ ಗಳಿಸಿದ 'ಧುರಂಧರ್ 2' ಹಿಂದಿ;'ಬಾಹುಬಲಿ 2' ದಾಖಲೆ ಮುರಿಯಲು ಬೇಕಿರೋದು ಇಷ್ಟೇ

ಭಾರತದ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸುತ್ತಿರುವ 'ಧುರಂಧರ್ 2' ತನ್ನ ಆರ್ಭಟವನ್ನು ಮುಂದುವರೆಸಿದೆ. ರಣ್‌ವೀರ್ ಸಿಂಗ್ ನಟಿಸಿರುವ ಈ ಸಿನಿಮಾಗೆ ಭಾರತದಾದ್ಯಂತ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಸುಮಾರು 3 ಗಂಟೆ 49 ನಿಮಿಷದ ಸಿನಿಮಾವನ್ನು ಜನರು ಥಿಯೇಟರ್‌ನಲ್ಲಿ ನೋಡಿ ಎಂಜಾಯ್ ಮಾಡಿದ್ದಾರೆ. ಈ ಸಿನಿಮಾ ಬಾಕ್ಸಾಫೀಸ್ ದಾಖಲೆಯನ್ನು ಉಡೀಸ್ ಮಾಡಬಹುದೆಂಬ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ. ದಕ್ಷಿಣ ಭಾರತದ ಪ್ಯಾನ್ ಇಂಡಿಯಾ

ಫಿಲ್ಮಿಬೀಟ್ 3 Apr 2026 3:18 pm

ಚಂದನವನದಲ್ಲಿ ಶ್ರೀರಾಮನೆಂದರೂ ರಾವಣನೆಂದರೂ ಅದು ಡಾ. ರಾಜ್‌ಕುಮಾರ್ ಮಾತ್ರ

ನಿತೇಶ್ ತಿವಾರಿ ನಿರ್ದೇಶನದ 'ರಾಮಾಯಣ' ಟೀಸರ್ ಬಿಡುಗಡೆಯಾಗಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಭಾರೀ ಟೀಕೆಗೆ ಗುರಿಯಾಗಿದೆ. ಶ್ರೀರಾಮನ ಪಾತ್ರದಲ್ಲಿ ರಣ್‌ಬೀರ್ ಕಪೂರ್ ಲುಕ್ಸ್ ಬಗ್ಗೆ ಪರ ವಿರೋಧ ಚರ್ಚೆ ನಡೀತಿದೆ. ರಣ್‌ಬೀರ್ ಬದಲು ಬೇರೆ ಯಾರಾದರೂ ಈ ಪಾತ್ರ ಮಾಡಬೇಕಿತ್ತು ಎನ್ನುವುದು ಕೆಲವರ ವಾದ. ಟೀಸರ್ ನೋಡಿ ಕಾಮೆಂಟ್ ಮಾಡಬೇಡಿ, ಸಿನಿಮಾ ನೋಡಿ ಮಾತನಾಡಿ ಎನ್ನುವುದು ರಣ್‌ಬೀರ್

ಫಿಲ್ಮಿಬೀಟ್ 3 Apr 2026 1:50 pm

ಜೈಲಿನಿಂದಲೇ ಮಾಧ್ಯಮಗಳ ವಿರುದ್ಧ ತಿರುಗಿ ಬಿದ್ದ ದರ್ಶನ್ ; ಕೇಂದ್ರ ಸರ್ಕಾರದ ವಿರುದ್ಧವೂ ಗುಡುಗಿದ ದಾಸ

ಮಾಧ್ಯಮದವರ ಜೊತೆ ಮೊದಲಿಂದ ಲವ್ ಆಂಡ್ ಹೇಟ್ ಸಂಬಂಧವನ್ನು ಹೊಂದಿರುವವರು ದರ್ಶನ್. ಇಬ್ಬರಲ್ಲಿ ಯಾರು ಸರಿ.. ಯಾರು ತಪ್ಪು.. ಎಂದು ಖಡಾಖಂಡಿತವಾಗಿ ನಿರ್ಧಾರ ಮಾಡಲು ಸಾಧ್ಯ ಇಲ್ಲವಾದರು ಕರುನಾಡಿನಲ್ಲಿ ದರ್ಶನ್ ಅತ್ಯುತ್ತಮ ಟಿ.ಆರ್.ಪಿ ಮೆಟೀರಿಯಲ್. ಇದನ್ನು ಯಾರು ಅಲ್ಲಗೆಳೆಯಲು ಸಾಧ್ಯ ಇಲ್ಲ. ಖುದ್ದು ದರ್ಶನ್ ಅವರಿಗೆ ಕೂಡ ಈ ವಿಚಾರ ಚೆನ್ನಾಗಿಯೇ ಗೊತ್ತು. ಇಂಥಾ ದರ್ಶನ್ ಪರಪ್ಪನ

ಫಿಲ್ಮಿಬೀಟ್ 3 Apr 2026 1:26 pm

ಮನೆ ಕೆಲಸದಾಳು ನನ್ನ ಮೇಲೆ ಬಲತ್ಕಾರ*ಕ್ಕೆ ಯತ್ನಿಸಿದ್ದ.. 2ನೇ ಮಹಡಿಯಿಂದ ಜಿಗಿದುಬಿಟ್ಟೆ

ಹೆಣ್ಣು ಮಕ್ಕಳಿಗೆ ಜೀವನದಲ್ಲಿ ಸಾಕಷ್ಟು ಕಹಿ ಅನುಭವಗಳಾಗಿರುತ್ತದೆ. ಚಿಕ್ಕ ವಯಸ್ಸಿನಲ್ಲಿ ಎದುರಾಗುವ ದೈಹಿಕ ದೌರ್ಜನ್ಯದಂತಹ ವಿಚಾರಗಳು ಜೀವನಪೂರ್ತಿ ಕಹಿ ಕನಸಾಗಿ ಉಳಿದುಬಿಡುತ್ತದೆ. ಸಾಕಷ್ಟು ನಟಿಯರು ತಮ್ಮ ಜೀವನದಲ್ಲಿ ಎದುರಿಸಿದ ಕಹಿ ಅನುಭವಗಳ ಬಗ್ಗೆ ಮಾತನಾಡಿದ್ದಾರೆ. ಇವತ್ತಿಗೂ ತಮಗಾಗಿದ್ದ ಕಹಿ ಅನುಭವ ಹೇಳಲು ಸಾಧ್ಯವಾಗದೇ ನರಳುವವರು, ಇವತ್ತಿಗೂ ಕಿರುಕುಳ ಅನುಭವಿಸುವವರು ಇದ್ದಾರೆ. ಬಿಗ್‌ಬಾಸ್ ಹಿಂದಿ ಸೀಸನ್-13ರ ಸ್ಪರ್ಧಿ ಆರತಿ

ಫಿಲ್ಮಿಬೀಟ್ 3 Apr 2026 12:25 pm

'ಆದಿಪುರುಷ್' ಟೀಸರ್ ನೋಡಿ ಟೀಕಿಸಿದ್ದ ದಿಪಿಕಾ ಚಿಖ್ಲಿಯಾ 'ರಾಮಾಯಣ' ಝಲಕ್ ನೋಡಿ ಹೇಳಿದ್ದಿಷ್ಟು

ನಮಿತ್ ಮಲ್ಹೋತ್ರಾ ಹಾಗೂ ಯಶ್ ನಿರ್ಮಾಣದ 'ರಾಮಾಯಣ' ಸಿನಿಮಾ ಭಾರೀ ಚರ್ಚೆ ಹುಟ್ಟಾಕ್ಕಿದೆ. ಅದಕ್ಕೆ ಕಾರಣ ಸದ್ಉ ಹೊರ ಬಂದಿರುವ ಟೀಸರ್.. ನಿತೇಶ್ ತಿವಾರಿ ನಿರ್ದೇಶನದ ಈ ಪೌರಾಣಿಕ ಕಥಾಹಂದರ ಸಿನಿಮಾ ದೀಪಾವಳಿಗೆ ತೆರೆಗೆ ಬರಲಿದೆ. ಸದ್ಯ ಶ್ರೀರಾಮನ ಪಾತ್ರ ಪರಿಚಯಿಸುವ ಟೀಸರ್ ಬಿಡುಗಡೆ ಆಗಿ ಸದ್ದು ಮಾಡ್ತಿದೆ. ರಾಮ ಟೀಸರ್ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಫಿಲ್ಮಿಬೀಟ್ 3 Apr 2026 11:21 am

ಧನಂಜಯ್ ಮುಂದಿನ ಸಿನಿಮಾ ಟೈಟಲ್ ಅನಾವರಣ; ಯಾರೆಲ್ಲಾ ನಟಿಸ್ತಿದ್ದಾರೆ ಗೊತ್ತಾ?

ಡಾಲಿ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ನಟ ಧನಂಜಯ್ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಾ ಬರ್ತಿದ್ದಾರೆ. ಇತ್ತೀಚೆಗೆ ತಮ್ಮ ಮುಂದಿನ ಸಿನಿಮಾ ಬಗ್ಗೆ ಸುಳಿವು ಕೊಟ್ಟಿದ್ದರು. ಬಹಳ ದಿನಗಳಿಂದ ಆಪ್ತ ಗೆಳೆಯ ಪೂರ್ಣ ಒಂದು ಕತೆ ಮಾಡುತ್ತಿದ್ದಿದ್ದು ಇತ್ತೀಚೆಗೆ ಅದನ್ನು ಓದಿ ಸಿನಿಮಾ ಮಾಡಲು ಮನಸ್ಸು ಮಾಡಿದ್ದು ಎಲ್ಲವನ್ನು ವಿವರಿಸಿದ್ದರು. ಆ ಸಿನಿಮಾ ಟೈಟಲ್ ಏನು ಎನ್ನುವ ಬಗ್ಗೆ ಸಣ್ಣ

ಫಿಲ್ಮಿಬೀಟ್ 3 Apr 2026 9:31 am

ಪ್ರಿಯಾಂಕ ತಟ್ಟೆ ತೊಳೆದರೆ ಸುದ್ದಿ, ನಾನು ರಾಯರ ಸೇವೆ ಮಾಡಿದ್ರೆ ಟ್ರೋಲ್ ಮಾಡ್ತೀರಾ? ಜಗ್ಗೇಶ್ ಬೇಸರ

ನಟ, ರಾಜ್ಯಸಭಾ ಸದಸ್ಯ ಜಗ್ಗೇಶ್ ಮಹಾನ್ ದೈವಭಕ್ತರು. ಬಹಳ ವರ್ಷಗಳಿಂದ ರಾಯರನ್ನು ಆರಾಧಿಸುತ್ತಾ ಬರ್ತಿದ್ದಾರೆ. ತಮ್ಮ ಯಶಸ್ಸಿಗೆ ರಾಯರೇ ಕಾರಣ ಎಂದು ನಂಬಿದ್ದಾರೆ. ಆಗಾಗ್ಗೆ ಮಂತ್ರಾಲಯಕ್ಕೆ ಭೇಟಿ ನೀಡುತ್ತಾರೆ. ತಾವು ರಾಯರ ಮಠದಲ್ಲಿ ಕಸಗುಡಿಸಿದ ಬಗ್ಗೆ ಟ್ರೋಲ್ ಮಾಡಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ನಟಿ ಪ್ರಿಯಾಂಕ ಚೋಪ್ರಾ ಸ್ವರ್ಣಮಂದಿರದಲ್ಲಿ ತಟ್ಟೆ ತೊಳೆದ ವೀಡಿಯೋ ವೈರಲ್ ಆಗಿ ಸುದ್ದಿ ಆಗಿತ್ತು.

ಫಿಲ್ಮಿಬೀಟ್ 3 Apr 2026 9:02 am

ಅರೇ, 'ರಾಮಾಯಣ'ದಲ್ಲಿ ಈ ಯುದ್ಧ ಯಾವಾಗ ನಡೀತು? ಏನಿದು ಹೊಸ ಕಥೆ?

ರಣ್‌ಬೀರ್ ಕಪೂರ್, ಯಶ್, ಸಾಯಿ ಪಲ್ಲವಿ ನಟನೆಯ 'ರಾಮಾಯಣ' ಚಿತ್ರದ ಫಸ್ಟ್ ಟೀಸರ್ ಬಿಡುಗಡೆಯಾಗಿದೆ. ನಿತೇಶ್ ತಿವಾರಿ ನಿರ್ದೇಶನ ಚಿತ್ರದಲ್ಲಿ ಶ್ರೀರಾಮನ ಪಾತ್ರ ಪರಿಚಯ ಮಾಡಿಸುವ ಸಣ್ಣ ಝಲಕ್ ಇದು. 4 ಸಾವಿರ ಕೋಟಿ ರೂ. ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣವಾಗಿದೆ ಎಂದು ನಮಿತ್ ಮಲ್ಹೋತ್ರಾ ಹೇಳಿದ್ದಾರೆ. ಆದರೆ ಟೀಸರ್ ನೋಡಿದವರು ಬೇಸರಗೊಂಡಿದ್ದಾರೆ. ಭಾರೀ ನಿರೀಕ್ಷೆ ಹುಟ್ಟಾಕಿರುವ ಸಿನಿಮಾ

ಫಿಲ್ಮಿಬೀಟ್ 3 Apr 2026 8:10 am

ಮೆಗಾ ಫ್ಯಾಮಿಲಿಯ ನಿಹಾರಿಕಾ ಕೊನಿಡೇಲಾ ನಟನೆಗೆ ವಿದಾಯ? ಪ್ರತಿಕ್ರಿಯೆ ಹೇಗಿತ್ತು ಗೊತ್ತೇ?

ನಾಗಬಾಬು ಅವರ ಪುತ್ರಿ ನಿಹಾರಿಕಾ ಕೊನಿಡೆಲಾ, ನಟಿಯಾಗಿ ನಿರೀಕ್ಷಿತ ಯಶಸ್ಸು ಕಾಣದ ಕಾರಣ ನಿರ್ಮಾಪಕಿಯಾಗಿ ಗುರುತಿಸಿಕೊಂಡಿದ್ದಾರೆ. 'ಪಿಂಕ್ ಎಲಿಫೆಂಟ್ ಪಿಕ್ಚರ್ಸ್' ಬ್ಯಾನರ್ ಅಡಿ ಹಲವು ಯೋಜನೆಗಳಲ್ಲಿ ನಿರತರಾಗಿರುವ ಅವರು, 2015ರಲ್ಲಿ 'ಢೀ ಜೂನಿಯರ್ಸ್' ನಿರೂಪಕಿಯಾಗಿ ವೃತ್ತಿ ಆರಂಭಿಸಿ, 2016ರಲ್ಲಿ 'ಒಕ ಮನಸು' ಮೂಲಕ ಬೆಳ್ಳಿತೆರೆಗೆ ಬಂದರು. ಆದರೂ, ತಾವು ನಟನಾ ವೃತ್ತಿ ಮುಂದುವರಿಸುವುದಾಗಿ ಇತ್ತೀಚೆಗೆ ಸ್ಪಷ್ಟಪಡಿಸಿದ್ದಾರೆ. ನಟಿಯಾಗಿ

ಫಿಲ್ಮಿಬೀಟ್ 2 Apr 2026 11:59 pm

\ರಾಜಾಹುಲಿ ಅಂತಹ ಬ್ಲಾಕ್ ಬಸ್ಟರ್ ಸಿನಿಮಾ ಕೊಟ್ಟಾಗ ನನಗೆ ಎರಡು ಕೋಡು ಬಂದು ಬಿಡ್ತು\; ಗುರು ದೇಶಪಾಂಡೆ

ಕಳೆದ ಕೆಲವು ದಿನಗಳಿಗೆ ಗುರು ದೇಶಪಾಂಡೆ ಸಿಕ್ಕಾಪಟ್ಟೆ ಸುದ್ದಿಯಲ್ಲಿ ಇದ್ದಾರೆ. ಇತ್ತೀಚೆಗೆ 'ಲವ್ ಮಾಕ್ಟೇಲ್ 3' ಸಿನಿಮಾದ ಕಥೆ ಕದ್ದಿದ್ದಾರೆಂದು ಡಾರ್ಲಿಂಗ್ ಕೃಷ್ಣ ವಿರುದ್ಧ ಗುರು ದೇಶಪಾಂಡೆ ತಿರುಗಿಬಿದ್ದಿದ್ದರು. ಒಂದಿಷ್ಟು ದಿನ ಡಾರ್ಲಿಂಗ್ ಕೃಷ್ಣ ಹಾಗೂ ಗುರು ದೇಶಪಾಂಡೆ ನಡುವೆ ಜಟಾಪಟಿ ಫಿಲ್ಮ್ ಚೇಂಬರ್ ಮೆಟ್ಟಿಲೇರಿತ್ತು. ಈ ವಿವಾದದ ಹಿಂದೇನೆ ಈಗ ತಮ್ಮ ಸಿನಿಮಾವನ್ನು ರಿಲೀಸ್ ಮಾಡುವುದಕ್ಕೆ

ಫಿಲ್ಮಿಬೀಟ್ 2 Apr 2026 11:43 pm

\ಈಗ ನಾವು ಮೂವರು\; ಮದುವೆ ಬೆನ್ನಲ್ಲೇ ರಶ್ಮಿಕಾ ಮಂದಣ್ಣ ಪೋಸ್ಟ್ ವೈರಲ್

ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ತಿಂಗಳ ಹಿಂದೆ ಹಸೆಮಣೆ ಏರಿದ್ದರು. ಇತ್ತೀಚೆಗೆ ಹನಿಮೂನ್‌ಗಾಗಿ ಥಾಯ್ಲೆಂಡ್‌ಗೆ ಹೋಗಿ ಬಂದಿದ್ದರು. ಬಳಿಕ ಮತ್ತೆ 'ರಣಬಾಲಿ' ಚಿತ್ರದ ಚಿತ್ರೀಕರಣದಲ್ಲಿ ಭಾಗಿ ಆಗಿದ್ದಾರೆ. ಸದ್ಯ ರಶ್ಮಿಕಾ ಹೊಸ ಇನ್‌ಸ್ಟಾಗ್ರಾಮ್ ಪೋಸ್ಟ್ ವೈರಲ್ ಆಗ್ತಿದೆ. ಈಗ ನಾವು ಮೂವರು ಎಂದು ಆಕೆ ಪೋಸ್ಟ್ ಮಾಡಿರುವುದು ಗಮನ ಸೆಳೆಯುತ್ತಿದೆ. ವಿಜಯ್ ದೇವರಕೊಂಡ ಜೊತೆಗಿನ ಕಾರ್ಟೂನ್

ಫಿಲ್ಮಿಬೀಟ್ 2 Apr 2026 11:33 pm

'ಪೇಟ್ರಿಯಾಟ್' ಚಿತ್ರ ಬಿಡುಗಡೆಗೆ ವಿಘ್ನ: ಮಮ್ಮುಟ್ಟಿ-ಮೋಹನ್ ಲಾಲ್ ಫ್ಯಾನ್ಸ್ ಶಾಕ್!

ಮಮ್ಮುಟ್ಟಿ ಮತ್ತು ಮೋಹನ್ ಲಾಲ್ ನಟನೆಯ ಬಹುನಿರೀಕ್ಷಿತ ಮಲಯಾಳಂ ಸ್ಪೈ ಥ್ರಿಲ್ಲರ್ 'ಪೇಟ್ರಿಯಾಟ್' (Patriot) ಚಿತ್ರದ ಕೇರಳ ಬಿಡುಗಡೆಗೆ ವಿಘ್ನ ಎದುರಾಗಿದೆ. ಏಪ್ರಿಲ್ 23ಕ್ಕೆ ನಿಗದಿಯಾಗಿದ್ದ ರಿಲೀಸ್ ಡೇಟ್ ಈಗ ಅನಿಶ್ಚಿತತೆಯಲ್ಲಿದೆ. ಚಿತ್ರದ ನಿರ್ಮಾಪಕರು ಮತ್ತು ಚಿತ್ರಮಂದಿರಗಳ ಮಾಲೀಕರ ನಡುವೆ ಲಾಭ ಹಂಚಿಕೆ ವಿಚಾರವಾಗಿ ಉಂಟಾಗಿರುವ ಬಿಕ್ಕಟ್ಟು ಈ ಗೊಂದಲಕ್ಕೆ ಕಾರಣ. ಟ್ರೈಲರ್ ಲಾಂಚ್ ಮತ್ತು ಫಿಲ್ಮ್

ಫಿಲ್ಮಿಬೀಟ್ 2 Apr 2026 11:30 pm

'ಮೊಗ್ಗಿನ ಮನಸ್ಸು' ಚಿತ್ರಕ್ಕಾಗಿ ಸ್ವಲ್ಪ ಅಡ್ಜಸ್ಟ್ ಮಾಡ್ಕೊಳ್ಳಿ ಅಂದ್ರು.. ಆಶಿತಾ ಹೇಳಿಕೆಗೆ ಶಶಾಂಕ್ ಆಕ್ರೋಶ

ಶಶಾಂಕ್ ನಿರ್ದೇಶನದ 'ಮೊಗ್ಗಿನ ಮನಸ್ಸು' ಸೂಪರ್ ಹಿಟ್ ಆಗಿದ್ದು ಗೊತ್ತೇಯಿದೆ. ಯಶ್, ರಾಧಿಕಾ ಪಂಡಿತ್ ಹಾಗೂ ಶುಭಾ ಪೂಂಜಾ ಮೂವರಿಗೂ ಚಿತ್ರ ಒಳ್ಳೆ ಹೆಸರು ತಂದು ಕೊಟ್ಟಿತ್ತು. ನಿರ್ದೇಶಕರಾಗಿ ಶಶಾಂಕ್ ಅವರಿಗೂ ಇದು ಎರಡನೇ ಸಿನಿಮಾ ಆಗಿತ್ತು. ಚಿತ್ರದ ಹಾಡುಗಳು ಇವತ್ತಿಗೂ ಸಿನಿರಸಿಕರು ಮರೆತ್ತಿಲ್ಲ. ಒಂದು ಚಿತ್ರಕ್ಕೆ ಬೇರೆ ಬೇರೆ ಕಲಾವಿದರಿಗೆ ಪಾತ್ರ ಮಾಡುವ ಅವಕಾಶ ಸಿಗುತ್ತದೆ.

ಫಿಲ್ಮಿಬೀಟ್ 2 Apr 2026 9:41 pm

Ramayana X Review:'ಆದಿಪುರುಷ್' ಆಯ್ತು.. ಈಗ 'ರಾಮಾಯಣ' ಟೀಸರ್‌ ನೆಟ್ಟಿಗರು ಕಿಡಿ.. ಅಂತಹದ್ದೇನಾಗಿದೆ?

ಭಾರತೀಯ ಚಿತ್ರರಂಗದ ಅತ್ಯಂತ ದುಬಾರಿ ಸಿನಿಮಾ 'ರಾಮಾಯಣ'. ಸುಮಾರು 4 ಸಾವಿರ ಕೋಟಿ ವೆಚ್ಚದಲ್ಲಿ ಈ ಸಿನಿಮಾ ನಿರ್ಮಾಣ ಆಗುತ್ತಿದೆ. ಬಾಲಿವುಡ್‌ ನಟ ರಣ್‌ಬೀರ್ ಕಪೂರ್, ಸಾಯಿ ಪಲ್ಲವಿ, ಯಶ್, ಸನ್ನಿ ಡಿಯೋಲ್ ಸೇರಿದಂತೆ ದಿಗ್ಗಜರು ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. 2 ಸಾವಿರ ಕೋಟಿ ಸಿನಿಮಾ ಕೊಟ್ಟಿರುವ ನಿತೇಶ್ ತಿವಾರಿ ಈ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.

ಫಿಲ್ಮಿಬೀಟ್ 2 Apr 2026 7:05 pm

ಅನುಭವಸ್ಥ, ನವ ದಂಪತಿಗಳಿಗೊಂದು ರಿಯಾಲಿಟಿ ಶೋ 'ಜೋಡಿ ನಂ.1'; ಎಲ್ಲಿ? ಯಾವಾಗ ಶುರು?

ಜೀ ಕನ್ನಡ ಕನ್ನಡದ ನಂ 1 ಎಂಟರ್‌ಟೈನ್ಮೆಂಟ್ ಚಾನೆಲ್. ಸದಾ ವಿಭಿನ್ನ ರಿಯಾಲಿಟಿ ಶೋಗಳನ್ನು ಕಿರುತೆರೆ ವೀಕ್ಷಕರಿಗೆ ನೀಡುತ್ತಲೇ ಬರುತ್ತಿದೆ. ಈಗ ಮತ್ತೊಂದು ರಿಯಾಲಿಟಿ ಶೋನೊಂದಿಗೆ ಮನರಂಜನೆ ನೀಡುವುದಕ್ಕೆ ಸಜ್ಜಾಗಿದೆ. ಅದುವೇ ಅನುಭವಸ್ಥ, ನವ ದಂಪತಿಗಳಿಗೊಂದು ರಿಯಾಲಿಟಿ ಶೋ 'ಜೋಡಿ ನಂ.1'. ವೀಕೆಂಡ್‌ನಲ್ಲಿ ಕಿರುತೆರೆ ವೀಕ್ಷಕರಿಗೆ ಎಂಟರ್ಟೈನ್ಮೆಂಟ್ ನೀಡುವುದಕ್ಕೆ ಹೊಸ ನಾನ್-ಫಿಕ್ಷನ್ ಶೋ 'ಜೋಡಿ ನಂ.1' ಅನ್ನು

ಫಿಲ್ಮಿಬೀಟ್ 2 Apr 2026 5:55 pm

\ಏನ್.. ಶೆಟ್ರೆ ಹೊಂಬಾಳೆ ಅನ್‌ಫಾಲೋ ಮಾಡಿದ್ದೀರಲ್ಲ ಅಂತ ಕೇಳಿದೆ\; ಪ್ರಮೋದ್‌ ಶೆಟ್ಟಿ ರಿಷಬ್ ಕೊಟ್ಟ ಉತ್ತರ ಹೀಗಿತ್ತು

ಕಳೆದ ಕೆಲವು ದಿನಗಳಿಂದ ರಿಷಬ್ ಶೆಟ್ಟಿ ಹಾಗೂ ಹೊಂಬಾಳೆ ಫಿಲ್ಮ್ ಬಗ್ಗೆ ಚರ್ಚೆಯಾಗುತ್ತಿದೆ. ಇದ್ದಕ್ಕಿದ್ದ ಹಾಗೇ ರಿಷಬ್ ಶೆಟ್ಟಿ ಹೊಂಬಾಳೆ ಫಿಲ್ಮ್ಸ್ ಅನ್ನು ಅನ್‌ಫಾಲೋ ಮಾಡಿದ್ದು ಅವರ ಅಭಿಮಾನಿಗಳನ್ನು ಗೊಂದಲಕ್ಕೆ ಎಡೆ ಮಾಡಿಕೊಟ್ಟಿತ್ತು. 'ಕಾಂತಾರ ಚಾಪ್ಟರ್ 1' ಬಳಿಕ 2ನೇ ಅಧ್ಯಾಯವನ್ನು ರಿಷಬ್ ಶೆಟ್ಟಿ ಕೈಗೆತ್ತಿಕೊಳ್ಳಬೇಕಿತ್ತು. ಅಷ್ಟರಲ್ಲೇ ಇಬ್ಬರೂ ಬೇರೆಯಾಗಿದ್ದಾರೆ, ಅಷ್ಟಕ್ಕೂ ರಿಷಬ್ ಶೆಟ್ಟಿ ಹಾಗೂ ಹೊಂಬಾಳೆ

ಫಿಲ್ಮಿಬೀಟ್ 2 Apr 2026 4:42 pm

ದಿಢೀರನೇ ಪ್ರಜಾಕೀಯದಲ್ಲಿ ಉಪ್ಪಿ ಆಕ್ಟೀವ್ ಆಗಿದ್ದೇಕೆ? ಪವನ್ ಕಲ್ಯಾಣ್, ವಿಜಯ್ ಹಾದಿ ಹಿಡಿದಿರಬಹುದೇ?

ಸಿನಿಮಾ ಸ್ಟಾರ್‌ಗಳಿಗೂ ರಾಜಕೀಯಕ್ಕೂ ಬಿಡಲಾರದ ನಂಟು. ಸೂಪರ್‌ಸ್ಟಾರ್‌ಗಳು ರಾಜಕೀಯಕ್ಕೆ ಎಂಟ್ರಿ ಕೊಡುವುದು ಹೊಸದೇನು ಅಲ್ಲ. ಸಿನಿಮಾ ಗೆದ್ದು ಬೀಗಿದ ಕೆಲವರಿಗೆ ರಾಜಕೀಯದಲ್ಲಿ ಗೆಲುವು ಸಿಕ್ಕಿದೆ. ಇನ್ನು ಕೆಲವರಿಗೆ ಸಕ್ಸಸ್ ಸಿಕ್ಕಿಲ್ಲ. ಇಂತಹ ಉದಾಹರಣೆಗಳು ಸಾಕಷ್ಟು ಸಿಗುತ್ತವೆ. ಕರ್ನಾಟಕದಲ್ಲಿ ಸಿನಿಮಾ ಮತ್ತು ರಾಜಕೀಯ ಸ್ವಲ್ಪ ವಿಭಿನ್ನವಾಗಿ ಕೆಲಸ ಮಾಡಿದೆ. ಸಿನಿಮಾದಿಂದ ರಾಜಕೀಯಕ್ಕೆ ಬಂದವರಿಗೆ ಯಶಸ್ಸು ಅಷ್ಟು ಸುಲಭಕ್ಕೆ ಸಿಕ್ಕಿಲ್ಲ.

ಫಿಲ್ಮಿಬೀಟ್ 2 Apr 2026 2:30 pm

ಹನುಮ ಜಯಂತಿ ದಿನ ಚಿರಂಜೀವಿ ಮನೆಯಲ್ಲಿ ನಡೆದ ಪವಾಡ; ವಿಡಿಯೋ ಸಮೇತ ವಿವರಿಸಿದ ನಟ

ತೆಲುಗು ನಟ ಮೆಗಾಸ್ಟಾರ್ ಚಿರಂಜೀವಿ ಹನುಮಂತನ ಪರಮಭಕ್ತ. ಕುಟುಂಬದಲ್ಲಿ ಎಲ್ಲರಿಗೂ ಹನುಮನೇ ಇಷ್ಟದೈವ. ಮಕ್ಕಳು, ಮೊಮ್ಮಕ್ಕಳಿಗೆ ಹನುಮಂತನ ಹೆಸರನ್ನು ಚಿರು ಇಟ್ಟಿದ್ದಾರೆ. ಈ ಬಾರಿ ಹನುಮ ಜಯಂತಿ ಸಮಯದಲ್ಲಿ ತಮ್ಮ ಮನೆಯಲ್ಲಿ ಒಂದು ಅದ್ಭುತ ನಡೆದಿದೆ ಎಂದು ವೀಡಿಯೋ ಹಂಚಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ನಟ ಚಿರಂಜೀವಿ ಆಗಾಗ್ಗೆ ಪೋಸ್ಟ್ ಮಾಡುತ್ತಿದ್ದಾರೆ. ಹಬ್ಬದ ಸಮಯದಲ್ಲಿ ಶುಭಾಶಯ

ಫಿಲ್ಮಿಬೀಟ್ 2 Apr 2026 12:43 pm

ನಾಸ್ತಿಕರಾಗಿದ್ದರೂ ಕ್ರೈಸ್ತ ಸಂಪ್ರದಾಯಗಳಂತೆ ತಾಯಿ ಅಂತ್ಯಕ್ರಿಯೆ ಮಾಡಿದ್ದಕ್ಕೆ ಪ್ರಕಾಶ್ ರಾಜ್ ಸ್ಪಷ್ಟನೆ

ಇತ್ತೀಚೆಗೆ ಬಹುಭಾಷಾ ನಟ ಪ್ರಕಾಶ್ ರಾಜ್ ತಮ್ಮ ತಾಯಿಯನ್ನು ಕಳೆದುಕೊಂಡಿದ್ದರು. ವಯೋಸಹಜ ಕಾಯಿಲೆಯಿಂದ ಅವರ ತಾಯಿ ಸ್ವರ್ಣಲತಾ(85) ಹೈದರಾಬಾದ್‌ನಲ್ಲಿ ನಿಧನರಾಗಿದ್ದರು. ಅವರ ಪಾರ್ಥೀವ ಶರೀರವನ್ನು ಬೆಂಗಳೂರಿಗೆ ತಂದು ಅಂತ್ಯಕ್ರಿಯೆ ನಡೆಸಲಾಗಿತ್ತು. ಶಾಂತಿನಗರದ ಚರ್ಚ್‌ನಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಬಳಿಕ ಆಡುಗೋಡಿ ಸಮೀಪದ ರುದ್ರಭೂಮಿಯಲ್ಲಿ ಕ್ರೈಸ್ತ ಪದ್ಧತಿಯಂತೆ ಅಂತ್ಯ ಸಂಸ್ಕಾರ ನೆರವೇರಿಸಲಾಗಿತ್ತು. ಪ್ರಕಾಶ್ ರಾಜ್ ತಾಯಿ ನಿಧನಕ್ಕೆ ಸಾಕಷ್ಟು

ಫಿಲ್ಮಿಬೀಟ್ 2 Apr 2026 11:52 am

Ramayana Teaser: ಕೊನೆಗೂ ಬಂತು 'ರಾಮಾಯಣ' ಟೀಸರ್; ಯಶ್ ಅಭಿಮಾನಿಗಳಿಗೆ ಮಾತ್ರ ನಿರಾಸೆ

ಅಂತೂ ಇಂತೂ ಅಭಿಮಾನಿಗಳು ಕೇಳುತ್ತಿದ್ದ 'ರಾಮಾಯಣ' ಟೀಸರ್ ಬಿಡುಗಡೆಯಾಗಿದೆ. ಮೊದಲ ನೋಟದಲ್ಲಿ ಅಭಿಮಾನಿಗಳ ಮನಗೆದ್ದಿದೆ. ಕೆಲವರು ಟೀಕಿಸಲು ಆರಂಭಿಸಿದ್ದಾರೆ. ಮಿಶ್ರ ಪ್ರತಿಕ್ರಿಯೆ ನಡುವೆ ಕೂಡ ಟೀಸರ್ ಸದ್ದು ಮಾಡ್ತಿದೆ. ಚಿತ್ರದಲ್ಲಿ ರಾಮನ ಪಾತ್ರ ಪರಿಚಯಿಸುವ ಟೀಸರ್ ಮಾತ್ರ ಸದ್ಯ ರಿಲೀಸ್ ಆಗಿದೆ. ಹಾಗಾಗಿ ಶ್ರೀರಾಮನಾಗಿ ರಣ್‌ಬೀರ್ ಕಪೂರ್ ಆರ್ಭಟವೇ ಜೋರಾಗಿದೆ. ಟೀಸರ್ ಕೊನೆಯಲ್ಲಿ ರಾವಣನಾಗಿ ಯಶ್ ನಡೆದು

ಫಿಲ್ಮಿಬೀಟ್ 2 Apr 2026 10:43 am

'ಛಾವ' ಪ್ರೊಪಾಗಂಡಾ ಸಿನಿಮಾ ಅಂತ ಗೊತ್ತಿತ್ತು, 'ಕಾಂತಾರ-1'ನಲ್ಲಿ ಯಾಕೆ ನಟಿಸ್ಲಿಲ್ಲ ಅಂದ್ರೆ; ಕಿಶೋರ್

ಬಹುಭಾಷಾ ನಟ ಕಿಶೋರ್ ತಮ್ಮ ಹೇಳಿಕೆಗಳಿಗೆ ಸದಾ ಸುದ್ದಿ ಆಗುತ್ತಾರೆ. ದಿಟ್ಟ ಮತ್ತು ಪ್ರಗತಿಪರ ಸಿದ್ಧಾಂತಗಳ ಮೂಲಕ ಯಾವುದೇ ವಿಚಾರವನ್ನು ನೋಡುತ್ತಾರೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ, ಪ್ರಧಾನಿ ಮೋದಿ ನಿರ್ಧಾರಗಳ ಟೀಕೆ ವ್ಯಕ್ತಪಡಿಸುತ್ತಲೇ ಇರ್ತಾರೆ. ಪ್ರೊಪಾಗಂಡಾ ಸಿನಿಮಾಗಳ ಬಗ್ಗೆ ಕೂಡ ಅಸಮಾಧಾನ ವ್ಯಕ್ತಪಡಿಸುತ್ತಾರೆ. 'ಛಾವ' ಚಿತ್ರದಲ್ಲಿ ನಟಿಸುವ ಅವಕಾಶ ಬಂದಿತ್ತು. ಪ್ರೊಪಾಗಂಡಾ ಎನ್ನುವ ಕಾರಣಕ್ಕೆ ಒಪ್ಪಲಿಲ್ಲ

ಫಿಲ್ಮಿಬೀಟ್ 2 Apr 2026 10:15 am

SSLC ಹಿಂದಿ ವಿವಾದ; ಮಾಜಿ ಸಂಸದೆ ಸುಮಲತಾ ಅಂಬರೀಶ್ ಪೋಸ್ಟ್ ಬಗ್ಗೆ ಆಕ್ರೋಶ

ಎಸ್‌ಎಸ್‌ಎಲ್‌ ಪರೀಕ್ಷೆಯಲ್ಲಿ ಇನ್ಮುಂದೆ ಹಿಂದಿ ಭಾಷಾ ವಿಷಯಕ್ಕೆ ಅಂಕದ ಬದಲಿಗೆ ಗ್ರೇಡ್‌ ನೀಡುವ ಸರ್ಕಾರದ ನಿರ್ಧರಿಸಿದೆ. ಈ ಬಗ್ಗೆ ಪರ ವಿರೋಧ ಚರ್ಚೆ ಮುಂದುವರೆದಿದೆ. ಬಹುತೇಕರು ಸರ್ಕಾರ ನಿರ್ಣಯವನ್ನು ಸ್ವಾಗತಿಸಿದ್ದಾರೆ. ಆದರೆ ಒಂದು ವರ್ಗದವರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಇದೀಗ ಮಾಜಿ ಸಂಸದೆ ಸುಮಲತಾ ಅಂಬರೀಶ್ ಈ ಬಗ್ಗೆ ಪರೋಕ್ಷವಾಗಿ ಪ್ರತಿಕ್ರಿಯಿಸಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ

ಫಿಲ್ಮಿಬೀಟ್ 2 Apr 2026 8:43 am

ಎರಡು ಭಾಗಗಳಾಗಿ 'ರಾಮಾಯಣ' ಸಿನಿಮಾ ತೆರೆಗೆ ತರಲು ಕಾರಣ ಏನು?

ನಿತೇಶ್ ತಿವಾರಿ ನಿರ್ದೇಶನದಲ್ಲಿ 'ರಾಮಾಯಣ' ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಶ್ರೀರಾಮನಾಗಿ ರಣ್‌ಬೀರ್ ಕಪೂರ್, ರಾವಣನಾಗಿ ಯಶ್ ಹಾಗೂ ಸೀತಾಮಾತೆಯಾಗಿ ಸಾಯಿ ಪಲ್ಲವಿ ನಟಿಸಿದ್ದು 4000 ಕೋಟಿ ರೂ. ಬಜೆಟ್‌ನಲ್ಲಿ ಎರಡು ಭಾಗಗಳಾಗಿ ಸಿನಿಮಾ ತೆರೆಗೆ ಬರ್ತಿದೆ. ಲಾಸ್‌ ಏಂಜಲೀಸ್‌ನಲ್ಲಿ ಟೀಸರ್‌ ಪ್ರದರ್ಶನದ ಬಳಿಕ ಅಧಿಕೃತವಾಗಿ ಸೋಶಿಯಲ್ ಮೀಡಿಯಾದಲ್ಲಿ ಝಲಕ್ ರಿವೀಲ್ ಆಗ್ತಿದೆ. ಹನುಮ ಜಯಂತಿ ಹಿನ್ನೆಲೆಯಲ್ಲಿ

ಫಿಲ್ಮಿಬೀಟ್ 2 Apr 2026 7:38 am