SENSEX
NIFTY
GOLD
USD/INR

Weather

24    C
...

ಇಂಡಿಯನ್ ರೇಸಿಂಗ್ ಲೀಗ್ ಮುಕ್ತಾಯ; ಮೂರನೇ ಸ್ಥಾನ ಪಡೆದ ಕಿಚ್ಚ ಸುದೀಪ್ ತಂಡ

ಇಂಡಿಯನ್ ರೇಸಿಂಗ್ ಲೀಗ್ (IRL) ಅದ್ದೂರಿಯಾಗಿ ಆರಂಭಗೊಂಡಿತ್ತು. ಇದರಲ್ಲಿ ಕಿಚ್ಚನ ತಂಡ ಕಿಚ್ಚಸ್ ಕಿಂಗ್ಸ್ ಬೆಂಗಳೂರು ತಂಡ ಕೂಡ ಭಾಗವಹಿಸಿತ್ತು. ನವಿ ಮುಂಬೈ ರೇಸ್‌ ಮುಂದಿನ ಸೀಸನ್‌ಗೆ ಮುಂದೂಡಲ್ಪಟ್ಟಿರುವ ಕಾರಣ ಈ ಸೀಸನ್‌ಗೆ ಅಂತ್ಯ ಹಾಡಲಾಗಿದೆ.

ಫಿಲ್ಮಿಬೀಟ್ 20 Apr 2026 11:59 pm

ಶ್ರೀದೇವಿ ಸತ್ತಿದ್ದ ಬಾತ್‌ಟಬ್‌ನಲ್ಲಿ ಕೂತು ಆತ್ಮದೊಂದಿಗೆ ಮಾತುಕತೆ; ಏನಂತು ಆತ್ಮ? ಮತ್ತೆ ಬೋನಿ ಕಪೂರ್ ಮೇಲೆ ಅನುಮಾನ

ಅತಿಲೋಕ ಸುಂದರಿ ಶ್ರೀದೇವಿ ಇಹಲೋಕ ತ್ಯಜಿಸಿ ಬರೋಬ್ಬರಿ 8 ವರ್ಷಗಳಾಗಿವೆ. ಪತಿ ಬೋನಿ ಕಪೂರ್, ಪುತ್ರಿಯಾದ ಜಾಹ್ನವಿ ಕಪೂರ್, ಖುಷಿ ಕಪೂರ್ ಆ ನೋವನ್ನು ಮರೆತು ಮುಂದೆ ಸಾಗಿದ್ದಾರೆ. ಆದರೂ, ಅವರ ಸಾವಿನ ರಹಸ್ಯವನ್ನು ಭೇದಿಸುವ ಪ್ರಯತ್ನ ನಡೆಯುತ್ತಲೇ ಇದೆ. 2018ರಲ್ಲಿ ಶ್ರೀದೇವಿ ದುಬೈನ ಐಷಾರಾಮಿ ಹೋಟೆಲ್‌ನ ಬಾತ್‌ಟಬ್‌ನಲ್ಲಿ ಮುಳುಗಿ ಸಾವನ್ನಪ್ಪಿದ್ದರು. ಈ ವಿಷಯವನ್ನು ಅವರ ಅಭಿಮಾನಿಗಳು

ಫಿಲ್ಮಿಬೀಟ್ 20 Apr 2026 11:39 pm

ಹಾಲಿವುಡ್ ಸಂದರ್ಶನಗಳಲ್ಲಿ 'ರಾಮಾಯಣ' ಹಾಗೂ 'ಟಾಕ್ಸಿಕ್' ವಿಚಾರದಲ್ಲಿ ಆ ತಪ್ಪು ಮಾಡಬಾರದಿತ್ತು ಯಶ್

ರಾಕಿಂಗ್ ಸ್ಟಾರ್ ಯಶ್ ಮಾಧ್ಯಮಗಳ ಮುಂದೆ ಬಂದು ಬಹಳ ದಿನಗಳಾಗಿತ್ತು. 'KGF'-2 ಸಿನಿಮಾ ಬಿಡುಗಡೆ ಸಮಯದಲ್ಲಿ ಮಾಧ್ಯಮಗಳಿಗೆ ಒಂದಷ್ಟು ಸಂದರ್ಶನ ನೀಡಿದ್ದರು. ಬಳಿಕ ಹಾಲಿವುಡ್ ರಿಪೋರ್ಟರ್ ಸಂದರ್ಶನದಲ್ಲಿ ಮಾತನಾಡಿದ್ದರು. ಇನ್ನುಳಿದಂತೆ ಹೆಚ್ಚು ಮಾಧ್ಯಮಗಳ ಮುಂದೆ ಬರಲಿಲ್ಲ. 'ರಾಮಾಯಣ' ಹಾಗೂ 'ಟಾಕ್ಸಿಕ್' ಸಿನಿಮಾಗಳ ಬಗ್ಗೆ ತುಟಿ ಬಿಚ್ಚಿರಲಿಲ್ಲ. ಗೀತು ಮೋಹನ್ ದಾಸ್ ನಿರ್ದೇಶನದ 'ಟಾಕ್ಸಿಕ್' ಚಿತ್ರದ ಬಗ್ಗೆ ಚಿತ್ರತಂಡ

ಫಿಲ್ಮಿಬೀಟ್ 20 Apr 2026 11:32 pm

ಸ್ಟಾರ್‌ಗಳಿಲ್ಲದೇ 'ವಾಳ -2' ಸಿನಿಮಾ ₹200 ಕೋಟಿ ಗಳಿಸಿದ್ದು ಹೇಗೆ?

'ವಾಳ- 2: ಬಯೋಪಿಕ್ ಆಫ್ ಎ ಬಿಲಿಯನ್ ಬ್ರೋಸ್' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಅಕ್ಷರಶಃ ಸುನಾಮಿ ಎಬ್ಬಿಸಿದೆ. ವಿಷು ಹಬ್ಬದ ರಜಾದಿನಗಳಲ್ಲಿ ಶುರುವಾದ ಈ ನಾಗಾಲೋಟ ಈಗ ಕೆಲಸದ ದಿನಗಳಲ್ಲೂ (Weekdays) ಮುಂದುವರಿದಿದ್ದು, ವಿಶ್ವದಾದ್ಯಂತ ₹200 ಕೋಟಿ ಕ್ಲಬ್ ಸೇರಿದೆ. ಏಪ್ರಿಲ್ 2ರಂದು ತೆರೆಕಂಡ ಈ ಮಲಯಾಳಂ ಕಾಮಿಡಿ ಸಿನಿಮಾ ಕೇರಳದಾದ್ಯಂತ ಹೊಸ ದಾಖಲೆ ಬರೆಯುತ್ತಿದೆ. ಫ್ಯಾಮಿಲಿ

ಫಿಲ್ಮಿಬೀಟ್ 20 Apr 2026 11:30 pm

ನಾನು ಹಾಗೂ ಡಾ. ರಾಜ್‌ಕುಮಾರ್ ಶೂದ್ರರು, ಉಳಿದವ್ರು ಬ್ರಾಹ್ಮಣರಿದ್ರು; ನನಗೆ ಅವಕಾಶ ಕೊಡ್ಬಾರ್ದು ಅಂತ ನೋಡಿದ್ದ ನಿರ್ದೇಶಕ

ಚಿತ್ರರಂಗದಲ್ಲಿ ಅಷ್ಟು ಸುಲಭವಾಗಿ ಅವಕಾಶಗಳು ಸಿಗಲ್ಲ. ನಾನಾ ಕಾರಣಗಳಿಂದ ಅವಕಾಶಗಳು ತಪ್ಪಿ ಹೋಗುತ್ತವೆ. ಡಾ. ರಾಜ್‌ಕುಮಾರ್ ಚಿತ್ರರಂಗದಲ್ಲಿ ಗೆಲ್ಲುವುದು ಅಷ್ಟು ಸುಲಭ ಇರಲಿಲ್ಲ. ಹಿಂದುಳಿದ ಸಮುದಾಯದಿಂದ ಬಂದವರು ಎನ್ನುವ ಕಾರಣಕ್ಕೆ ಕೆಲ ಪಾತ್ರಗಳನ್ನು ಅಣ್ಣಾವ್ರು ಮಾಡಬಾರದು ಎಂದು ಜಾತಿವಾದಿಗಳು ವಿರೋಧಿಸಿದ್ದು ಇದೆ. ಚಿತ್ರರಂಗದಲ್ಲಿ ಕೂಡ ಜಾತಿವಾದಿಗಳು ಇದ್ದಾರೆ ಎಂದು ನಟ ಕಲಾತಪಸ್ವಿ ರಾಜೇಶ್ ನೀಡಿದ್ದ ಹೇಳಿಕೆ ಈಗ

ಫಿಲ್ಮಿಬೀಟ್ 20 Apr 2026 10:56 pm

'AI' ತಂತ್ರಜ್ಞಾನ ಬಳಸಿ ರೆಡಿ ಆಯ್ತು ಕನ್ನಡ ಸಿನಿಮಾ; ಬೆರಗು ಮೂಡಿಸಿದ 'ರಾಣಿ ಚೆನ್ನಮ್ಮ' ಟೀಸರ್

'AI' ತಂತ್ರಜ್ಞಾನ ವಿಶ್ವದಾದ್ಯಂತ ಹಲ್‌ಚಲ್ ಎಬ್ಬಿಸಿದೆ. ಈ ತಂತ್ರಜ್ಞಾನದಿಂದ ಕೆಲವರಲ್ಲಿ ಆತಂಕ ಮೂಡಿದೆ. ಇನ್ನು ಕೆಲವರಿಗೆ ಖುಷಿ ಕೊಟ್ಟಿದೆ. ಇದೇ ಎಐ ಅನ್ನು ಬಳಸಿಕೊಂಡು ದುಡಿಮೆ ಮಾಡುವುದಕ್ಕೂ ಶುರು ಮಾಡಿದ್ದಾರೆ. ಆದರೆ, ವಿಶ್ವದಾದ್ಯಂತ ಬಹುತೇಕ ಮಂದಿ ಕೆಲಸ ಕಳೆದುಕೊಳ್ಳುತ್ತಿದ್ದಾರೆ. ಇದಕ್ಕೆ ಕಾರಣ ಎಐ ಎಂದು ಆರೋಪ ಮಾಡಲಾಗುತ್ತಿದೆ. ಹೀಗಿದ್ದರೂ 'ಎಐ' ಕ್ರಿಯೇಟಿವ್ ಫೀಲ್ಡ್‌ನಲ್ಲಿ ಎಫೆಕ್ಟಿವ್ ಆಗಿ ಬಳಸಿಕೊಳ್ಳಲಾಗುತ್ತಿದೆ.

ಫಿಲ್ಮಿಬೀಟ್ 20 Apr 2026 9:32 pm

ಗಿಲ್ಲಿಗೆ ಚಿನ್ನದ ಸರ ಹಾಕಿ ವಾಪಸ್ ಕಿತ್ಕೋತಾರೆ, ನನಗೆ ಚಿನ್ನ ಕೊಟ್ಟು ಮನೆಗೆ ಕಳಿಸ್ತಾರೆ ; ವ್ಯತ್ಯಾಸ ಇಷ್ಟೇ- ಡಾಗ್ ಸತೀಶ್

ಸೋಲು-ಗೆಲುವು ಒಂದೇ ನಾಣ್ಯದ ಎರಡು ಮುಖಗಳು. ಸೋತಾಗ ಕುಗ್ಗದೇ, ಗೆದ್ದಾಗ ಹಿಗ್ಗದೇ, ಎರಡನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವ ಇರಬೇಕು. ಆದರೆ ಕೆಲವರು ಸೋತ ನಂತರ ಹಗೆತನ ಬೆಳೆಸಿಕೊಂಡು ಮತ್ತು ಅದನ್ನು ಪೋಷಿಸಿಕೊಂಡು ಬರುತ್ತಾರೆ. ದ್ವೇಷ ಸಾಧಿಸಲು ಮುಂದಾಗುತ್ತಾರೆ. ಸೇಡು ತೀರಿಸಿಕೊಳ್ಳಲು ಹಾತೊರೆಯುತ್ತಾರೆ. ಸೋಲನ್ನು ಗೌರವಯುತವಾಗಿ ಸ್ವೀಕರಿಸುವ ಮನೋಭಾವ ಇವರಲ್ಲಿ ಇರುವುದೇ ಇಲ್ಲ. ಆ ಗುಣ ಒಲಿಯುವುದು ಇಲ್ಲ.

ಫಿಲ್ಮಿಬೀಟ್ 20 Apr 2026 9:19 pm

ನಟ ಅಲ್ಲು ಅರ್ಜುನ್ ಸಂಭಾವನೆ 30 ಪೈಸೆನಾ? ಏನಿದು ಹೊಸ ಲೆಕ್ಕಾಚಾರ?

ಸ್ಟಾರ್ ನಟರು ಚಿತ್ರವೊಂದಕ್ಕೆ ಕೋಟಿ ಕೋಟಿ ಸಂಭಾವನೆ ಪಡೆಯುತ್ತಾರೆ. ರಜನಿಕಾಂತ್, ಪ್ರಭಾಸ್, ಸಲ್ಮಾನ್ ಖಾನ್, ಶಾರುಖ್ ಖಾನ್, ಯಶ್, ರಿಷಬ್ ಶೆಟ್ಟಿ, ದಳಪತಿ ವಿಜಯ್ ಸೇರಿದಂತೆ ಕೆಲ ಸ್ಟಾರ್ ನಟರು ಚಿತ್ರವೊಂದಕ್ಕೆ 100 ಕೋಟಿ ರೂ.ಗೂ ಅಧಿಕ ಸಂಭಾವನೆ ಜೇಬಿಗಿಳಿಸುತ್ತಿದ್ದಾರೆ. ಇತ್ತೀಚೆಗೆ ಕೆಲವರು ಸಂಭಾವನೆ ಜೊತೆಗೆ ಲಾಭದಲ್ಲಿ ಪಾಲು ಪಡೆಯಲು ಆರಂಭಿಸಿದ್ದಾರೆ. ಈ ಮೂಲಕ ಮತ್ತಷ್ಟು ಆದಾಯ

ಫಿಲ್ಮಿಬೀಟ್ 20 Apr 2026 8:52 pm

39ನೇ ವರ್ಷದಲ್ಲಿ ಎರಡನೇ ಬಾರಿ ತಂದೆಯಾದ ಅಟ್ಲಿ ; ರಾಕಾ ನಿರ್ದೇಶಕನ ಮನೆಗೆ ಬಂದಳು ಮಹಾಲಕ್ಷ್ಮೀ

ಕಲೆ ಮತ್ತು ಕಾಸು ಬೆರೆತ ಉದ್ಯಮ ಸಿನಿಮಾ. ಇಂತಹ ಉದ್ಯಮದಲ್ಲಿ ಬಾಕ್ಸಾಫೀಸ್‌ನ ಲೆಕ್ಕಾಚಾರ ಆಚೆಯೂ ವೈಯಕ್ತಿಕ ಬದುಕೆನ್ನುವುದು ಇರುತ್ತೆ. ಹಾಗೇ ನೋಡಿದರೆ ಅಭಿಮಾನಿಗಳ ಮನ ತಣಿಸಲು ದಿನವಿಡೀ ದುಡಿಯುವ ಚಿತ್ರರಂಗದವರಿಗೆ ಎಲ್ಲರಂತೆ ನೆಮ್ಮದಿ ಸಿಗುವುದು ತಮ್ಮ ತಮ್ಮ ಮನೆಯಲ್ಲಿಯೇ. ಅದರಲ್ಲಿಯೂ ಮದುವೆಯಾಗಿದ್ದರೆ ಮುಗೀತು. ಮನೆಗೆ ಹೋದರೆ ಇವರ ಪಾಲಿಗೆ ಸ್ವರ್ಗ ಕೇವಲ ಮೂರೇ ಗೇಣು. ಒತ್ತಡದ ವೃತ್ತಿಪರ

ಫಿಲ್ಮಿಬೀಟ್ 20 Apr 2026 7:58 pm

4ವರ್ಷದ ನಂತರ ಗುಡ್ ನ್ಯೂಸ್ ನೀಡಿದ ಶ್ರೀರಸ್ತು ಶುಭಮಸ್ತು ಪೂರ್ಣಿ;ಪೋಷಕರಾಗಿ ಬಡ್ತಿ ಪಡೆಯುತ್ತಿದ್ದಾರೆ ಲಾವಣ್ಯ-ಶಶಿ

ಪ್ರೀತಿಗೆ ಭಾಷೆಗಳ, ಜಾತಿ ಮತಗಳ ಹಂಗಿಲ್ಲ. ವಯಸ್ಸಿನ ಗಡಿ ಇಲ್ಲ. ಅದು ಮೊದಲ ಮಳೆಯಲ್ಲಿ ಆಗ ತಾನೇ ಮೊಳಕೆಯೊಡೆದು ಹುಟ್ಟಿದ ಪುಟ್ಟ ಗಿಡದಂತೆ ಬೆಳೆಯುತ್ತಾ ಬೆಳೆಯುತ್ತಾ ರೂಪಾಂತರ ಹೊಂದುತ್ತದೆ. ಇಂಥಾ ಪ್ರೀತಿಯ ಬಲೆಯಲ್ಲಿ ಚಿತ್ರರಂಗದ ಹಲವು ತಾರೆಯರು ಸಿಲುಕಿದ್ದಾರೆ. ಪ್ರೀತಿ ಎಂದರೆ ಸಂತೋಷ. ಅದರ ಮಾಯೆಯೇ ಅಂತಹದ್ದು ಎನ್ನುವ ಮಾತುಗಳನ್ನಾಡಿದ್ದಾರೆ. ಕೇವಲ ಬೆಳ್ಳಿತೆರೆ ಮಾತ್ರ ಅಲ್ಲ ಕಿರುತೆರೆಯಲ್ಲಿ

ಫಿಲ್ಮಿಬೀಟ್ 20 Apr 2026 6:21 pm

ರಾಜೇಶ್ ನಟರಂಗ ಅವರ 'ಲವ್ ಸೀಸನ್ಸ್' ಟೀಸರ್ ನೋಡಿದ್ರಾ? ಟ್ರೆಂಡ್ ಆಗ್ತಿರೋದ್ಯಾಕೆ?

ಚಿತ್ರರಂಗ ಯಾವುದೇ ಇರಲಿ ಹೊಸಬರು ಬರಬೇಕು. ಹೊಸ ಹೊಸ ಆಲೋಚನೆಗಳು ಹೊತ್ತು ಬಂದರೆ ಆ ಸಿನಿಮಾ ಇಂಡಸ್ಟ್ರಿ ಯಶಸ್ಸು ಕಾಣುತ್ತದೆ. ಕನ್ನಡ ಚಿತ್ರರಂಗದಲ್ಲಿ ಹೊಸತಂಡಗಳು ಹೊಸ ಪ್ರಯತ್ನಗಳನ್ನು ಮಾಡುತ್ತಲೇ ಇರುತ್ತವೆ. ವಿಭಿನ್ನ ಕಾನ್ಸೆಪ್ಟ್ ಹೊಂದಿರುವ ಸಿನಿಮಾಗಳು ರಿಲೀಸ್ ಆಗುತ್ತಲೇ ಇರುತ್ತವೆ. ಈಗ ಇನ್ನೊಂದು ಹೊಸಬರ ತಂಡ ಇಂತಹದ್ದೇ ವಿಶಿಷ್ಠವಾದ ಸಿನಿಮಾವನ್ನು ಹೊತ್ತು ಬಂದಿದೆ. ರಾಜೇಶ್ ನಟರಂಗ ಮುಖ್ಯ

ಫಿಲ್ಮಿಬೀಟ್ 20 Apr 2026 5:07 pm

ವಿಜಯ್‌ಗೆ ವೋಟ್ ಹಾಕಬೇಡಿ ಎನ್ನುತ್ತಿರುವ ಸತ್ಯರಾಜ್; ವಿಜಯ್‌ಗೆ ವೋಟ್ ಹಾಕಿ ಎಂದ ಮಗ

ತಮಿಳುನಾಡಿನಲ್ಲಿ ವಿಧಾನಸಭೆ ಚುನಾವಣೆಗೆ ಇನ್ನೆರಡು ದಿನ ಬಾಕಿಯಿಕೆ. ಡಿಎಂಕೆ ಹಾಗೂ ಎಐಎಡಿಎಂಕೆ ಪಕ್ಷಗಳ ನಡುವೆ ಈ ಬಾರಿ ನಟ ವಿಜಯ್ ನೇತೃತ್ವದ ಟಿವಿಕೆ ಪಕ್ಷ ಕಣದಲ್ಲಿದೆ. ದಳಪತಿ ಎಂಟ್ರಿ ತಮಿಳುನಾಡು ರಾಜಕೀಯ ಚಿತ್ರಣವನ್ನೇ ಬದಲಿಸಿದೆ. ಏಪ್ರಿಲ್ 23ರಂದು ಮತದಾನ ನಡೆಯಲಿದೆ. 3 ಪಕ್ಷದ ನಾಯಕರು ಮತಬೇಟೆ ನಡೆಸಿದ್ದಾರೆ. ಡಿಎಂಕೆ ಪಕ್ಷಕ್ಕೆ ನಟ ಸತ್ಯರಾಜ್ ಹಾಗೂ ಪ್ರಕಾಶ್ ರಾಜ್

ಫಿಲ್ಮಿಬೀಟ್ 20 Apr 2026 4:08 pm

'ಗೌರಿ ಶಂಕರ','ನೀ ಇರಲು ಜೊತೆಯಲಿ','ಶಾರದೆ';ಒಂದರಲ್ಲೇ ಮೂರು ಸೀರಿಯಲ್.. ಇದು ತ್ರಿವೇಣಿ ಸಂಗಮ

ಕನ್ನಡ ಕಿರುತೆರೆಯಲ್ಲಿ ಹೊಸ ಹೊಸ ಸೀರಿಯಲ್‌ಗಳು ಪ್ರಸಾರ ಆಗುತ್ತಲೇ ಇರುತ್ತವೆ. ಇನ್ನು ಕೆಲವೊಮ್ಮೆ ಸೀರಿಯಲ್‌ಗಳಲ್ಲಿ ನಾನಾ ರೀತಿಯ ಪ್ರಯೋಗಗಳು ನಡೆಯುತ್ತಲೇ ಇರುತ್ತವೆ. ಇತ್ತೀಚೆಗೆ ಎರಡು ಸೀರಿಯಲ್‌ಗಳನ್ನು ಒಟ್ಟಿಗೆ ಸೇರಿ 'ಮಹಾ ಸಂಗಮ'ದ ಪರಿಕಲ್ಪನೆ ಇದೆ. ಸಾಮಾನ್ಯವಾಗಿ ಒಂದೇ ವಾಹಿನಿಯ ಎರಡು ಸೀರಿಯಲ್‌ಗಳನ್ನು ಒಟ್ಟಿಗೆ ಸೇರಿಸಿ, ಮೆಗಾ ಎಪಿಸೋಡ್ (ಒಂದು ಗಂಟೆ) ಪ್ಲಾನ್ ಮಾಡಲಾಗುತ್ತೆ. ಇದು ಕಿರುತೆರೆಯಲ್ಲಿ ಜನಪ್ರಿಯತೆ

ಫಿಲ್ಮಿಬೀಟ್ 20 Apr 2026 3:25 pm

ಅಪಘಾತದಲ್ಲಿ ಮೃತಪಟ್ಟಿದ್ದ 'ಚಿರಂಜೀವಿ ಸುಧಾಕರ್' ಸಿನಿಮಾ ನಟಿ; ಮಗಳ ನೆನೆದು ತಾಯಿ ಭಾವುಕ

ಪರಭಾಷಾ ನಟಿಯರು ಕನ್ನಡ ಸಿನಿಮಾಗಳಲ್ಲಿ ನಟಿಸೋದು ಹೊಸದೇನು ಅಲ್ಲ. ಕೇರಳದ ಸಾಕಷ್ಟು ನಟಿಯರು ತೆಲುಗು, ತಮಿಳು ಹಾಗೂ ಕನ್ನಡ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. 80 ಹಾಗೂ 90ರ ದಶಕದಲ್ಲಿ ಮಲಯಾಳಂ ನಟಿ ಮೋನಿಷಾ ಉನ್ನಿ ದಕ್ಷಿಣದ ಸಿನಿಮಾಗಳಲ್ಲಿ ಗಮನ ಸೆಳೆದಿದ್ದರು. ತಮ್ಮ 16ನೇ ವಯಸ್ಸಿನಲ್ಲೇ ಅತ್ಯುತ್ತಮ ನಟಿ ರಾಷ್ಟ್ರಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರು. ಕೇರಳದ ಕೋಳಿಕ್ಕೋಡ್ ಜಿಲ್ಲೆಯ ಪನ್ನಿಯಂಕರ

ಫಿಲ್ಮಿಬೀಟ್ 20 Apr 2026 2:02 pm

ನನ್ನ ಗಂಡ ಕುಡುಕ ಅನ್ನೋದು ಗೊತ್ತಾಗಿದ್ದೇ ಮದುವೆಯಾದ್ಮೇಲೆ ; ಡಿವೋರ್ಸ್‌ ಆದ ವರ್ಷವೇ ತೀರ್ಕೊಂಡ್ರು - ಕಣ್ಣೀರಾದ ನಟಿ

ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ. ಆದರೂ ಕೂಡ ಅಮಲಿನಲ್ಲಿ ಅನೇಕರು ತೇಲುತ್ತಾರೆ. ದಿನದಿಂದ ದಿನಕ್ಕೆ ಈ ಸಂಖ್ಯೆ ಹೆಚ್ಚಾಗುತ್ತಿದೆಯೇ ಹೊರತು ಕಡಿಮೆಯಂತೂ ಆಗುತ್ತಿಲ್ಲ. ಇನ್ನು, ಚಿತ್ರರಂಗದಲ್ಲಿ ಕೂಡ ಅನೇಕರು ದೇಹದ ದಣಿವು ನೀಗಿಸಲು ಎಣ್ಣೆ ಹೊಡೆಯುತ್ತಾರೆ. ಕೆಲವರು ಒಂದೆರಡು ಪೆಗ್ ಹೊಡೆದರೆ, ಇನ್ನೂ ಕೆಲವರು ಕಂಠಪೂರ್ತಿ ಕುಡಿದು ತೂರಾಡುತ್ತಾರೆ. ಇನ್ನು ಮದ್ಯಪಾನಕ್ಕೂ ಕೌಟುಂಬಿಕ ಹಿಂಸೆಗೂ ನಿಕಟವಾದ ಸಂಬಂಧವಿದೆ. ಅಧ್ಯಯನದ

ಫಿಲ್ಮಿಬೀಟ್ 20 Apr 2026 1:40 pm

ಮುತ್ತುರಾಜ್ ಹಾಗೂ ಪಾರ್ವತಮ್ಮ ಮದುವೆಯಲ್ಲಿ ಯಾರಿಗೆ ಹೆಚ್ಚು ಮುಯ್ಯಿ ಬಂದಿತ್ತು?

ಡಾ. ರಾಜ್‌ಕುಮಾರ್ ಬರೀ ತಮ್ಮ ಸಿನಿಮಾಗಳಿಂದ ಮಾತ್ರ ಕನ್ನಡಿಗರಿಗೆ ಹತ್ತಿರವಾಗಲಿಲ್ಲ. ತಮ್ಮ ಆದರ್ಶ ಗುಣಗಳಿಂದಲೂ ಮನೆಮಾತಾಗಿದ್ದರು. ನಾಟಕಗಳಲ್ಲಿ ನಟಿಸುತ್ತಿದ್ದ ಮುತ್ತುರಾಜ್ ಬಾಳಿಗೆ ಪಾರ್ವತಮ್ಮ ಅದೃಷ್ಟ ದೇವತೆಯಾಗಿ ಬಂದಿದ್ದರು. ಮದುವೆಯಾದ ಕೆಲವೇ ದಿನಗಳಲ್ಲಿ 'ಬೇಡರ ಕಣಪ್ಪ' ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು. 1953, ಜೂನ್ 25 ರಂದು ನಂಜನಗೂಡು ತಾಣಪ್ಪರವರ ಛತ್ರದಲ್ಲಿ ಮುತ್ತುರಾಜ್ ಹಾಗೂ ಪಾರ್ವತಮ್ಮ ಮದುವೆ ನಡೆದಿತ್ತು.

ಫಿಲ್ಮಿಬೀಟ್ 20 Apr 2026 12:36 pm

ಸಿಎಂ ಬದಲು ಐಪಿಎಲ್‌ ಮ್ಯಾಚ್ ನೋಡಿದ ನಟಿ ; ಚೆಲುವೆಯ ಕೈ ಸೇರಿದ್ಹೇಗೆ ₹40,000 ಬೆಲೆಯ ವಿಐಪಿ ಪಾಸ್ ?

ಐಪಿಎಲ್ ಅಂದರೆ ಸಾಕು ಸಂಭ್ರಮ ಸಡಗರದ ವಾತಾವರಣ ಅನೇಕ ಕಡೆ ನಿರ್ಮಾಣವಾಗುತ್ತೆ. ಆರು ವರ್ಷದ ಹುಡುಗರಿಂದ ಹಿಡಿದು ಅರವತ್ತು ವರ್ಷದ ವೃದ್ಧರವರೆಗೆ ಐಪಿಎಲ್ ಕಿಕ್ ಕೊಡುತ್ತೆ. ನಮ್ಮ ತಂಡ ನಿಮ್ಮ ತಂಡ ಅಂತಾ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನದ ಮೆರವಣಿಗೆ ಶುರುವಾಗುತ್ತೆ. ದಿನಗಳು ಉರುಳಿದಂತೆ ಐಪಿಎಲ್ ನ ಕ್ರೇಜ್ ಇನ್ನು ಹೆಚ್ಚಾಗುತ್ತೆ. ಇನ್ನು ಐಪಿಎಲ್ ನೋಡುವ ಉತ್ಸಾಹ ಕೇವಲ

ಫಿಲ್ಮಿಬೀಟ್ 20 Apr 2026 12:00 pm

ಮತ್ತೆ ಮಹೇಶ್ ಬಾಬುಗೆ ಪಾಸ್‌ಪೋರ್ಟ್ ವಾಪಸ್ ಕೊಟ್ಟ ನಿರ್ದೇಶಕ ರಾಜಮೌಳಿ

ತೆಲುಗು ನಟ ಮಹೇಶ್ ಬಾಬು 'ವಾರಣಾಸಿ' ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗುವ ಲೆಕ್ಕಾಚಾರದಲ್ಲಿದ್ದಾರೆ. ರಾಜಮೌಳಿ ನಿರ್ದೇಶನದ ಈ ಸಿನಿಮಾ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ತೆರೆಗೆ ಬರಲಿದೆ. ಮುಂದಿನ ವರ್ಷ ಏಪ್ರಿಲ್ 7ರಂದು ಸಿನಿಮಾ ಬಿಡುಗಡೆ ಆಗಲಿದೆ. ಭರದಿಂದ ಸಿನಿಮಾ ಚಿತ್ರೀಕರಣ ನಡೀತಿದೆ. ಇದೀಗ ಸಣ್ಣ ಬ್ರೇಕ್ ತಗೊಂಡು ಮಹೇಶ್ ಬಾಬು ವಿದೇಶ ಪ್ರವಾಸಕ್ಕೆ ಹೊರಟಿದ್ದಾರೆ.

ಫಿಲ್ಮಿಬೀಟ್ 20 Apr 2026 11:36 am

ಬಿಗ್ ಬಾಸ್ ಟ್ರೋಫಿ ಮುಡಿಗೇರಿಸಿಕೊಂಡ ಲಕ್ಷ್ಮೀ ನಿವಾಸ ನಟಿ ; ಗೆದ್ದ ಹಣ ಎಷ್ಟು ?

''ಬಿಗ್ ಬಾಸ್'' ಕೇವಲ ಕಾರ್ಯಕ್ರಮ ನಡೆಸಿಕೊಡುವ ಸ್ಟಾರ್ ನಿರೂಪಕರಿಗೆ ಮಾತ್ರ ಚಿನ್ನದ ಮೊಟ್ಟೆ ಇಡುವ ಕೋಳಿ ಅಲ್ಲ. ಬದಲಿಗೆ ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಸ್ಫರ್ಧಿಗಳಿಗೆ ಕೂಡ ಇಲ್ಲಿ ಭಾರೀ ಹಣವನ್ನು ನೀಡಲಾಗುತ್ತೆ. ಕೆಲವರು ಇಲ್ಲಿ ವಾರಕ್ಕೆ ಲಕ್ಷ ಎಣಿಸಿದರೆ ಇನ್ನೂ ಕೆಲವರ ಸಂಭಾವನೆ ವಾರದ ಲೆಕ್ಕ ತಪ್ಪಿ ಹೋಗುವಷ್ಟಿರುತ್ತೆ. ''ಬಿಗ್ ಬಾಸ್‌''ನಲ್ಲಿ ಹೇಗಾದರೂ ಮಾಡಿ ಭಾಗವಹಿಸಬೇಕು ಎಂದು

ಫಿಲ್ಮಿಬೀಟ್ 20 Apr 2026 9:56 am

Bhooth Bangla Box Office Day 3:3ನೇ ದಿನವೂ ಬಾಕ್ಸಾಫೀಸ್‌ನಲ್ಲಿ ಗೆದ್ದ ಅಕ್ಷಯ್ ಕುಮಾರ್;₹100 ಕೋಟಿ ದಾಟಿತೇ 'ಭೂತ್ ಬಂಗ್ಲ'?

ಬಾಲಿವುಡ್‌ನಲ್ಲಿ ಮತ್ತೊಂದು ಸಿನಿಮಾ 100 ಕೋಟಿ ರೂಪಾಯಿ ಕಲೆಕ್ಷನ್ ಮಾಡುವತ್ತ ಹೆಜ್ಜೆ ಹಾಕುತ್ತಿದೆ. ಅಕ್ಷಯ್ ಕುಮಾರ್ ಹಾಗೂ ನಿರ್ದೇಶಕ ಪ್ರಿಯದರ್ಶನ ಕಾಂಬಿನೇಷನ್‌ನಲ್ಲಿ ಬಂದಿರುವ 'ಭೂತ್ ಬಂಗ್ಲ' ಸಿನಿಮಾ ಕಳೆದ ಮೂರು ದಿನಗಳಲ್ಲಿ ಡಿಸೆಂಟ್ ಕಲೆಕ್ಷನ್ ಮಾಡುತ್ತಿದೆ. ಅಸಲಿಗೆ ಇಂದು (ಏಪ್ರಿಲ್ 20) ಸಿನಿಮಾಗೆ ಅಗ್ನಿ ಪರೀಕ್ಷೆ ಆಗಿದ್ದರೂ, ಮೊದಲ ಮೂರು ದಿನಗಳ ಕಲೆಕ್ಷನ್ ಉತ್ತಮವಾಗಿದೆ. ಅಕ್ಷಯ್ ಕುಮಾರ್

ಫಿಲ್ಮಿಬೀಟ್ 20 Apr 2026 9:25 am

Pavithra Lokesh: ನರೇಶ್ ಜೊತೆ ಮದುವೆ ಆದ್ಮೇಲೆ ಪವಿತ್ರಾ ಲೋಕೇಶ್ ಬಳಿ ಇರುವ ಆಸ್ತಿ ಎಷ್ಟು ಗೊತ್ತೇ?

ಬಹುಭಾಷಾ ನಟಿ ಪವಿತ್ರಾ ಲೋಕೇಶ್ ಇತ್ತೀಚೆಗೆ ಹೆಚ್ಚಾಗಿ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಕನ್ನಡ ಹಾಗೂ ತೆಲುಗಿನ ಸೂಪರ್ ಹಿಟ್ ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿ ಜನ ಮನ ಗೆದ್ದಿದ್ದರು. ತೆಲುಗಿನ ಹಿರಿಯ ನಟ ನರೇಶ್ ಜೊತೆಗಿನ ವಿವಾಹದ ಬಳಿಕ ಪವಿತ್ರಾ ಲೋಕೇಶ್ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿಲ್ಲ. ಅಪರೂಪಕ್ಕೆ ತೆರೆಮೇಲೆ ಪ್ರತ್ಯಕ್ಷ ಆಗುತ್ತಿರುತ್ತಾರೆ. ಕನ್ನಡ ಚಿತ್ರರಂಗದಲ್ಲಿ ವೃತ್ತಿಜೀವನ ಆರಂಭಿಸಿದ ಪವಿತ್ರಾ ಲೋಕೇಶ್‌ಗೆ

ಫಿಲ್ಮಿಬೀಟ್ 20 Apr 2026 8:14 am

ಸಂಭವಂ ಅಧ್ಯಾಯಂ ಒನ್ನು: ಕಾಡಿನ ಟೈಮ್-ಲೂಪ್ ರಹಸ್ಯ, ಒಟಿಟಿಯಲ್ಲಿ ಈಗಲೇ ನೋಡಿ!

ಮಲಯಾಳಂ ಚಿತ್ರರಂಗದ ಸಣ್ಣ ಬಜೆಟ್‌ನ ಪ್ರಯೋಗಾತ್ಮಕ ಸೈ‑ಫೈ ಸಿನಿಮಾಗಳ ಸಾಲಿಗೆ ಈಗ ಹೊಸ ಅತಿಥಿಯ ಆಗಮನವಾಗಿದೆ. ಕಾಡಿನ ಹಿನ್ನೆಲೆಯಲ್ಲಿ ನಡೆಯುವ ಮಿಸ್ಟರಿ ಕಥೆಯುಳ್ಳ ಟೈಮ್‑ಲೂಪ್ ಥ್ರಿಲ್ಲರ್ 'ಸಂಭವಂ ಅಧ್ಯಾಯಂ ಒನ್ನು' (Sambhavam Adhyayam Onnu) ಈಗ ಒಟಿಟಿಗೆ ಲಗ್ಗೆ ಇಟ್ಟಿದೆ. ಮಾರ್ಚ್‌ನಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಸಿನಿಪ್ರಿಯರ ಗಮನ ಸೆಳೆದಿದ್ದ ಈ ಸಿನಿಮಾ, ಈಗ ಡಿಜಿಟಲ್ ಪ್ಲಾಟ್‌ಫಾರ್ಮ್ ಮೂಲಕ

ಫಿಲ್ಮಿಬೀಟ್ 19 Apr 2026 11:45 pm

ಮೂರೇ ವರ್ಷಕ್ಕೆ ಮುರಿದು ಬಿತ್ತು ದಾಂಪತ್ಯ ? ಪತ್ನಿ ಮತ್ತು ಮಗಳ ಫೋಟೊಗಳನ್ನೆಲ್ಲಾ ಡಿಲೀಟ್ ಮಾಡಿದ ಸ್ಟಾರ್ ಹೀರೋ

ಮದುವೆ ಒಂದು ಸಾಂಸ್ಥಿಕ ವ್ಯವಸ್ಥೆ ಎನ್ನುವ ಮಾತು ಹಿಂದೆ ಪ್ರಚಲಿತದಲ್ಲಿತ್ತು. ಆದರೆ ಈಗ ಬದಲಾದ ಸಾಮಾಜಿಕ.. ಆರ್ಥಿಕ.. ಶೈಕ್ಷಣಿಕ.. ವಿಚಾರಗಳು ಮದುವೆಯ ಪರಿಕಲ್ಪನೆ ಮತ್ತು ರೂಪುರೇಷೆಯನ್ನು ಬದಲಿಸಿವೆ. ಮದುವೆ ಈಗ ವ್ಯವಸ್ಥೆಯಾಗಿ ಉಳಿದಿಲ್ಲ. ಎರಡು ಮನಸುಗಳ ಬೆಸುಗೆಯಾಗದ ಮದುವೆ ಈಗ ಕೇವಲ ತೋರಿಕೆಯ ಸಂಪ್ರದಾಯವಾಗಿದೆ. ತೋರ್ಪಡಿಕೆಯ ಆಚರಣೆಯಾಗಿದೆ. ಬದಲಾದ ಈ ಕಾಲದಲ್ಲಿ.. ಹಲವರು ಸ್ವಾವಲಂಬಿಯಾಗುತ್ತಿದ್ದಾರೆ. ಇವತ್ತು.. ಯಾರು..

ಫಿಲ್ಮಿಬೀಟ್ 19 Apr 2026 9:42 pm

ಮೃಣಾಲ್ ಠಾಕೂರ್, ಶ್ರೀಲೀಲಾಗೆ ಸೆಡ್ಡು ಹೊಡೆದ ಗಾಳಿಪಟ 2 ಚೆಲುವೆ ; ರಾಮ್ ಚರಣ್ 'ಪೆದ್ದಿ'ಯಲ್ಲಿ ಐಟಂ ಡ್ಯಾನ್ಸ್ ?

ಸಾಮಾನ್ಯವಾಗಿ ಒಬ್ಬ ಸೂಪರ್ ಸ್ಟಾರ್ ನಾಯಕನ ಚಿತ್ರ ಆರಂಭವಾದರೆ, ಆ ಚಿತ್ರದ ಸುತ್ತಮುತ್ತ ಹತ್ತಾರು ಪ್ರಶ್ನೆಗಳು ಹುಟ್ಟಿಕೊಳ್ತಾವೆ. ಚಿತ್ರದ ಕಥೆ ಆದಿ ಸೇರಿ ಹಲವು ವಿಚಾರಗಳಿಂದ ಕುತೂಹಲ ತಂತಾನೇ ಗರಿಗೇದರುತ್ತೆ. ಇಲಿ ಹೋದರೂ ಹುಲಿ ಹೋಯ್ತು ಅಂತ ಜನ ಚರ್ಚೆ ಮಾಡಲು ಶುರು ಮಾಡುತ್ತಾರೆ. ಇನ್ನೂ ಇದು ಐಟಂ ಸಾಂಗ್‌ಗಳ ಯುಗ. ಚಿತ್ರದ ಕಥೆಗೆಹಾಡು ಅವಶ್ಯಕತೆ ಇರುತ್ತಾ

ಫಿಲ್ಮಿಬೀಟ್ 19 Apr 2026 8:28 pm

14 ತಿಂಗಳ ಕಾಯುವಿಕೆ ಅಂತ್ಯ ; ಸದ್ದಿಲ್ಲದೇ ಓಟಿಟಿಗೆ ಬಂತು ಸನ್ನಿ ಲಿಯೋನ್ ಅಭಿನಯದ ಸಿನಿಮಾ

ಹಿಂದೆ ಒಂದು ಕಾಲ ಇತ್ತು. ಆ ಕಾಲದಲ್ಲಿ ಚಿತ್ರ ನೋಡಲು ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಅಂಗೈಯಲ್ಲಿಯೇ ಮನರಂಜನೆ ಇದೆ. ಚಿತ್ರ ನೋಡಲು ನೆಟ್‌ಫ್ಲಿಕ್ಸ್ , ಅಮೆಜಾನ್, ಜೀ 5, ಜೀಯೋ ಹಾಟ್ ಸ್ಟಾರ್ ಹೀಗೆ ಹತ್ತು ಹಲವು ಓಟಿಟಿ ವೇದಿಕೆಗಳಿವೆ. ಹಾಗಂಥ ಈ ವೇದಿಕೆಗಳು ಕಣ್ಣಿಗೆ ಕಂಡ

ಫಿಲ್ಮಿಬೀಟ್ 19 Apr 2026 6:01 pm

ಅವಮಾನ-ಸನ್ಮಾನ ; ತಾಯಿಯ ಪೊರಕೆ ಏಟು -ಬಿಗ್ ಬಾಸ್‌ ಮನೆಗೆ ಹೋಗಿದ್ದೇಕೆ ಸೋನು ಶ್ರೀನಿವಾಸ್ ಗೌಡ ?

ಒಂದು ಕಾಲದಲ್ಲಿ ಸಂಚಲನ ಸೃಷ್ಟಿಸಿ, ಕಿರುತೆರೆಯಲ್ಲಿ ಹೊಸದೊಂದು ಅಲೆಯನ್ನು ಎಬ್ಬಿಸಿದ ಕಾರ್ಯಕ್ರಮ ''ಬಿಗ್ ಬಾಸ್''. ಕೇವಲ ಹಿಂದಿಯಲ್ಲಿ ಮಾತ್ರ ಅಲ್ಲ ಆರು ಭಾಷೆಗಳಲ್ಲಿ ಈ ಕಾರ್ಯಕ್ರಮದ್ದೇ ಹವಾ ಇತ್ತು. ಆದರೆ ಕಾಲ ಕ್ರಮೇಣ ಈ ಕಾರ್ಯಕ್ರಮ ಹಳಿ ತಪ್ಪಿತು. ''ಬಿಗ್ ಬಾಸ್'' ವಿವಾದಾತ್ಮಕ ವ್ಯಕ್ತಿಗಳಿಗಷ್ಟೇ ಲಾಯಕ್ಕು ಎನ್ನುವ ಅಭಿಪ್ರಾಯ ವ್ಯಕ್ತವಾಗಲು ಶುರುವಾಯ್ತು. ಹಾಗಂಥ .. ಈ ಕಾರ್ಯಕ್ರಮದ

ಫಿಲ್ಮಿಬೀಟ್ 19 Apr 2026 4:20 pm

Bhooth Bangla Box Office Day 2: 2ನೇ ದಿನ 'ಭೂತ್ ಬಂಗ್ಲ' ಕಲೆಕ್ಷನ್‌ನಲ್ಲಿ ಏರಿಕೆ; ಯಶಸ್ಸಿನ ರುಚಿ ಕಂಡರೇ ಅಕ್ಷಯ್ ಕುಮಾರ್?

ಅಕ್ಷಯ್ ಕುಮಾರ್ ಸಿನಿಮಾ 'ಭೂತ್ ಬಂಗ್ಲ' ಶುಕ್ರವಾರದಂದು (ಏಪ್ರಿಲ್ 17) ಅದ್ಧೂರಿಯಾಗಿ ರಿಲೀಸ್ ಆಗಿದೆ. ಹಿರಿಯ ನಿರ್ದೇಶಕ ಪ್ರಿಯದರ್ಶನ್ ಆಕ್ಷನ್ ಕಟ್ ಹೇಳಿರುವ ಈ ಸಿನಿಮಾ ಮೇಲೆ ಬಾಲಿವುಡ್ ಮಂದಿ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ. ಅದರಲ್ಲೂ ಅಕ್ಷಯ್ ಕುಮಾರ್ ಹಾಗೂ ಪ್ರಿಯದರ್ಶನ್ ಕಾಂಬಿನೇಷನ್ ಬಾಕ್ಸಾಫೀಸ್‌ನಲ್ಲಿ ಸೋತಿದ್ದೇ ಇಲ್ಲ. ಹೀಗಾಗಿ 'ಭೂತ್ ಬಂಗ್ಲ' ಕೂಡ ದೊಡ್ಡ ಮಟ್ಟದಲ್ಲಿ ಯಶಸ್ಸು ಕಾಣುತ್ತೆಂಬ

ಫಿಲ್ಮಿಬೀಟ್ 19 Apr 2026 2:55 pm

ಬಸ್‌ನಲ್ಲಿ ಕೈ ಹಾಕಿದ, ಎಲ್ಲರೆದುರು ಅಲ್ಲೇ ಕಪಾಳಕ್ಕೆ ಬಾರಿಸಿದೆ - ಬಿಗ್ ಬಾಸ್ ರಿಷಾ ಗೌಡ

ಇಂದು ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಪುರುಷನಿಗೆ ಸರಿ ಸಮಾನವಾಗಿ ಮಹಿಳೆ ನಿಲ್ಲುವ ಪ್ರಯತ್ನ ಮಾಡುತ್ತಿದ್ದಾಳೆ. ಸಾಮಾಜಿಕವಾಗಿ.. ಆರ್ಥಿಕವಾಗಿ... ರಾಜಕೀಯವಾಗಿ.. ಮಹಿಳೆ ಸಬಲಳಾಗುತ್ತಿದ್ದಾಳೆ ಎನ್ನುವುದಕ್ಕೆ ಹಲವಾರು ಉದಾಹರಣೆಗಳಿವೆ. ಆ ಕ್ಷೇತ್ರ.. ಈ ಕ್ಷೇತ್ರ ಎಂದಲ್ಲ. ಹಲವು ಕ್ಷೇತ್ರಗಳಲ್ಲಿ ಪುರುಷನನ್ನೇ ಮಹಿಳೆ ಮೀರಿ ನಿಂತಿದ್ದಾಳೆ. ಆದರೆ, ಕಾಲ ಎಷ್ಟೇ ಬದಲಾದರು ಕೂಡ ಮಹಿಳೆಯರ ಮೇಲಿನ ಶೋ‍ಷಣೆ... ದೌರ್ಜನ್ಯ

ಫಿಲ್ಮಿಬೀಟ್ 19 Apr 2026 2:31 pm

ಕೋರ್ಟ್ ಹೊರಗೆ ಡಿವೋರ್ಸ್ ಡೀಲ್ ಕುದುರಿಸಿದ ನಟ ವಿಜಯ್; ಪತ್ನಿ, ಮಕ್ಕಳಿಗೆ ಏನೆಲ್ಲಾ ಕೊಡಲು ಒಪ್ಪಿದ್ರು?

ಒಂದ್ಕಡೆ ಹೊಸ ಪಕ್ಷ ಕಟ್ಟಿ ರಾಜಕೀಯರಂಗ ಪ್ರವೇಶಿಸಿರುವ ತಮಿಳು ನಟ ವಿಜಯ್ ವೈಯಕ್ತಿಕ ಜೀವನದಲ್ಲಿ ಬಿರುಗಾಳಿ ಎದ್ದಿತ್ತು. ವಿಜಯ್ ಹಾಗೂ ಸಂಗೀತಾ ಸೊರ್ನಲಿಂಗಂ ದಾಂಪತ್ಯದಲ್ಲಿ ಬಿರುಕು ಮೂಡಿದೆ. ಕೆಲ ದಿನಗಳ ಹಿಂದೆ ಪತಿಯಿಂದ ಡಿವೋರ್ಸ್ ಕೋರಿ ಸಂಗೀತಾ ಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ಕೋರ್ಟ್ ಹೊರಗಡೆ ಈ ವಿವಾದ ಬಗೆಹರಿಸಿಕೊಳ್ಳಲು ವಿಜಯ್ ಮುಂದಾಗಿದ್ದಾರೆ ಎಂದು ವರದಿಯಾಗಿದೆ. ವಿಜಯ್ ಪತ್ನಿಗೆ

ಫಿಲ್ಮಿಬೀಟ್ 19 Apr 2026 1:25 pm

ಹೊಸ ಸಿನಿಮಾ ಟೀಸರ್ ಅನಾವರಣ ಮಾಡಿ ರಿಲೀಸ್ ದಿನಾಂಕ ಘೋಷಿಸಿದ ಹೊಂಬಾಳೆ ಫಿಲ್ಮ್ಸ್

ಹೈ ಬಜೆಟ್ ಸಿನಿಮಾಗಳನ್ನು ನಿರ್ಮಿಸುತ್ತಿದ್ದ ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಸೈಲೆಂಟ್ ಆಗಿಬಿಟ್ಟಿದೆ. 'ಕಾಂತಾರ- 1' ಬಳಿಕ ಯಾವುದೇ ಸಿನಿಮಾ ಆರಂಭಿಸಿಲ್ಲ. 'KGF'-3, 'ಸಲಾರ್-2', 'ಕಾಂತಾರ- 2', ಹೃತಿಕ್ ರೋಷನ್ ಜೊತೆಗೂ ಒಂದು ಸಿನಿಮಾ ಘೋಷಣೆ ಮಾಡಿದ್ದಾರೆ. ಸದ್ಯಕ್ಕೆ ಯಾವುದೇ ಸಿನಿಮಾ ಚಿತ್ರೀಕರಣ ನಡೀತಿಲ್ಲ. ಹೊಂಬಾಳೆ ಫಿಲ್ಮ್ಸ್ ಯಾಕೆ ಇಷ್ಟು ಸೈಲೆಂಟ್ ಆಗಿಬಿಡ್ತು ಎಂದುಕೊಳ್ಳುವ ಸಮಯದಲ್ಲೇ ಸಿನಿರಸಿಕರಿಗೆ ಸಿಹಿಸುದ್ದಿ

ಫಿಲ್ಮಿಬೀಟ್ 19 Apr 2026 12:46 pm

ಶ್ರೀರಾಮನ ಬಗ್ಗೆ ವಿವಾದಾತ್ಮಕ ಹೇಳಿಕೆ; ನಾನು ಬ್ಯುಸಿ, ಸ್ವಲ್ಪ ತಾಳ್ಮೆಯಿಂದಿರಿ ಎಂದ ಪ್ರಕಾಶ್ ರಾಜ್

ಬಹುಭಾಷಾ ನಟ ಪ್ರಕಾಶ್ ರಾಜ್ ವಿವಾದಗಳಿಂದಲೂ ಪದೇ ಪದೆ ಸುದ್ದಿ ಆಗುತ್ತಾರೆ. ಇತ್ತೀಚೆಗೆ ಶ್ರೀರಾಮ, ಲಕ್ಷ್ಮಣರ ಬಗ್ಗೆ ನೀಡಿದ ಹೇಳಿಕೆ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಈ ಸಂಬಂಧ ಪ್ರಕಾಶ್ ರಾಜ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಕೂಡ ದಾಖಲಾಗಿದೆ. ಈ ಬಗ್ಗೆ ವೀಡಿಯೋ ಮಾಡಿ ಅವರು ಪ್ರತಿಕ್ರಿಯಿಸಿದ್ದಾರೆ. ಈಗ ನಾನು ಬ್ಯುಸಿ ಸ್ವಲ್ಪ ತಾಳ್ಮೆಯಿಂದ ಇರಿ ಎಂದಿದ್ದಾರೆ. ಕೇರಳದ

ಫಿಲ್ಮಿಬೀಟ್ 19 Apr 2026 11:59 am

ಡಿವೋರ್ಸ್‌ ವದಂತಿಗೆ ಫುಲ್ ಸ್ಟಾಪ್ ; 2ನೇ ಬಾರಿ ಗರ್ಭಿಣಿಯಾದ ದೀಪಿಕಾ- 18 ತಿಂಗಳಲ್ಲೇ ಮತ್ತೊಂದು ಗುಡ್ ನ್ಯೂಸ್

ಕನ್ನಡದ ''ಐಶ್ವರ್ಯ'' ಚಿತ್ರದಿಂದ ವೃತ್ತಿ ಬದುಕು ಶುರು ಮಾಡಿ ಆ ನಂತರ ಬಾಲಿವುಡ್‌ಗೆ ವಲಸೆ ಹೋಗಿ ಅಲ್ಲಿಯೇ ಬದುಕು ಕಟ್ಟಿಕೊಂಡವರು ದೀಪಿಕಾ ಪಡುಕೋಣೆ. ''ಓಂ ಶಾಂತಿ ಓಂ'' ಚಿತ್ರದ ಮೂಲಕ, ಹಿಂದಿ ಚಿತ್ರರಂಗವನ್ನ ಪ್ರವೇಶಿಸಿದ ದೀಪಿಕಾ ಅದಕ್ಕೂ ಮುನ್ನ ಮಾಡೆಲ್ ಆಗಿ ಮಿಂಚು ಹರಿಸಿದವರು. ಬಿಕಿನಿಯಲ್ಲಿ ವರೈಟಿ ವರೈಟಿ ಫೋಸ್ ಕೊಟ್ಟು ಕಣ್ಮನ ಸೆಳೆದವರು. ಇಷ್ಟೇ ಅಲ್ಲ..

ಫಿಲ್ಮಿಬೀಟ್ 19 Apr 2026 11:51 am

ನೀನು ನಟಿಯಾಗೋದು ಬೇಡ, ದರ್ಶನ್ ಜೊತೆ ಮದ್ವೆಯಾಗಿ ಸೆಟ್ಲ್ ಆಗಿಬಿಡು; ಖ್ಯಾತನಟಿಗೆ ಸಲಹೆ ಕೊಟ್ಟಿದ್ರು ತಂದೆ

ತೂಗುದೀಪ ಶ್ರೀನಿವಾಸ್ ಮಗನಾದರೂ ದರ್ಶನ್ ಚಿತ್ರರಂಗದಲ್ಲಿ ಗುರ್ತಿಸಿಕೊಳ್ಳುವುದು ಅಷ್ಟು ಸುಲಭವಾಗಿರಲಿಲ್ಲ. ಆರಂಭದಲ್ಲಿ ಲೈಟ್‌ ಬಾಯ್, ಕ್ಯಾಮರಾ ಅಸಿಸ್ಟೆಂಟ್ ಆಗಿ ಕೂಡ ದರ್ಶನ್ ಕೆಲಸ ಮಾಡಿದ್ದರು. 'ಜನುಮದ ಜೋಡಿ' ಚಿತ್ರಕ್ಕೂ ತೆರೆಹಿಂದೆ ದರ್ಶನ್ ದುಡಿದಿದ್ದರು. 'ಮಹಾಭಾರತ' ಹಾಗೂ 'ದೇವರ ಮಗ' ಚಿತ್ರಗಳ ಸಣ್ಣ ಪಾತ್ರಗಳಲ್ಲಿ ನಟಿಸಿದ್ದ ದರ್ಶನ್ 'ಮೆಜೆಸ್ಟಿಕ್' ಚಿತ್ರದ ಮೂಲಕ ಹೀರೊ ಆಗಿ ಸಕ್ಸಸ್ ಕಂಡಿದ್ದರು. ಕಿರುತೆರೆ

ಫಿಲ್ಮಿಬೀಟ್ 19 Apr 2026 10:52 am

New OTT Releases; ಭಾನುವಾರ ಓಟಿಟಿಯಲ್ಲಿ ಇಂಟ್ರೆಸ್ಟಿಂಗ್ ಚಿತ್ರಗಳು; ಕನ್ನಡ ಸಸ್ಪೆನ್ಸ್ ಥ್ರಿಲ್ಲರ್ ಮಿಸ್ ಮಾಡ್ಬೇಡಿ

ದೊಡ್ಡ ದೊಡ್ಡ ಸಿನಿಮಾಗಳ ರಿಲೀಸ್ ಡೇಟ್ ಮುಂದಕ್ಕೆ ಹೋಗ್ತಿದೆ. ಐಪಿಎಲ್ ಆರ್ಭಟ ಕೂಡ ಅದಕ್ಕೆ ಒಂದು ಕಾರಣ ಎನ್ನಬಹುದು. ಏಪ್ರಿಲ್ 30ಕ್ಕೆ ಬರಬೇಕಿದ್ದ 'ಪೆದ್ದಿ' ಹಾಗೂ 'ಕೆಡಿ' ಚಿತ್ರಗಳ ಬಿಡುಗಡೆ ಕೂಡ ಮುಂದೂಡುವಂತಾಗಿದೆ. ಕ್ರಿಕೆಟ್ ಬಿಟ್ಟು ಸಿನಿಆ ಮನರಂಜನೆ ಬಯಸುವವರು ಓಟಿಟಿಯನ್ನೆ ನೆಚ್ಚಿಕೊಳ್ಳುವಂತಾಗಿದೆ. ತಿಂಗಳ ಹಿಂದೆ ಬಿಡುಗಡೆಯಾಗಿದ್ದ ಸಿನಿಮಾಗಳು ಈಗ ಓಟಿಟಿಗೆ ಎಂಟ್ರಿ ಕೊಡ್ತಿವೆ. ವೀಕೆಂಡ್ ಮನೆಯಲ್ಲೇ

ಫಿಲ್ಮಿಬೀಟ್ 19 Apr 2026 9:51 am

ಟಿವಿಕೆ ವಿಜಯ್ ಬಗ್ಗೆ ಸತ್ಯರಾಜ್‌ ವ್ಯಂಗ್ಯ; ನೀವು ಕನ್ನಡಿಗರ ಕ್ಷಮೆ ಕೇಳಿದ್ದು ಮರೆತುಬಿಟ್ರಾ ಎಂದು ಫ್ಯಾನ್ಸ್ ತಿರುಗೇಟು

ತಮಿಳುನಾಡು ವಿಧಾನಸಭೆ ಚುನಾವಣೆ ಅಖಾಡ ರಂಗೇರುತ್ತಲೇ ಇದೆ. ಏಪ್ರಿಲ್ 23ರಂದು ಮತದಾನ ನಡೆಯಲಿದೆ. ವಿವಿಧ ಪಕ್ಷಗಳ ನಾಯಕರು ಮತಬೇಟೆಗೆ ಇಳಿದಿದ್ದಾರೆ. ಆರೋಪ ಪ್ರತ್ಯಾರೋಪ ಮಾಡುತ್ತಿದ್ದಾರೆ. ಟಿವಿಕೆ ಪಕ್ಷ ಕಟ್ಟ ರಾಜಕೀಯರಂಗಕ್ಕೆ ಧುಮುಕಿರುವ ನಟ ವಿಜಯ್‌ಗೆ ಚಿತ್ರರಂಗದವರೇ ತಿರುಗೇಟು ನೀಡುತ್ತಿದ್ದಾರೆ. ದಳಪತಿ ಪೊಲಿಟಿಕಲ್ ಎಂಟ್ರಿ ಬಗ್ಗೆ ಬಹುಭಾಷಾ ನಟ ಪ್ರಕಾಶ್ ರಾಜ್ ವ್ಯಂಗ್ಯವಾಡಿದ್ದರು. ಇದು ಸಿನಿಮಾ ಅಲ್ಲ, ಒಂದೇ

ಫಿಲ್ಮಿಬೀಟ್ 19 Apr 2026 8:52 am

'ಮಮ್ಮ' ಎಂದಿದ್ದಕ್ಕೆ ಕಮಲ್ ಪುತ್ರಿ ಶ್ರುತಿ ಹಾಸನ್ ಕೆಂಡಾಮಂಡಲ; ವಿಡಿಯೋ ವೈರಲ್

ಸಾರ್ವಜನಿಕ ಸ್ಥಳಗಳಲ್ಲಿ ಕೆಲವೊಮ್ಮೆ ಸೆಲೆಬ್ರೆಟಿಗಳಿಗೆ ಕಹಿ ಅನುಭವವಾಗುತ್ತದೆ. ಅದರಲ್ಲೂ ಪಾಪರಾಜಿಗಳ(ಛಾಯಾಗ್ರಾಹಕರು) ವರ್ತನೆಯಿಂದ ಕೆಲವರು ಬೇಸತ್ತು ಅಲ್ಲೇ ಆಕ್ರೋಶ ವ್ಯಕ್ತಪಡಿಸುವುದು ಇದೆ. ಇನ್ನು ಹಣ ಕೊಟ್ಟು ತಾವು ಹೋದಲ್ಲಿ ಬಂದಲ್ಲಿ ಪಾಪರಾಜಿಗಳನ್ನು ಆಹ್ವಾನಿಸುವವರು ಇದ್ದಾರೆ. ತಮ್ಮ ಫೋಟೊ, ವಿಡಿಯೋ ವೈರಲ್ ಆಗುವಂತೆ ಮಾಡಿ ಸದಾ ಸುದ್ದಿಯಲ್ಲಿರುವ ಬಯಸುತ್ತಾರೆ. ಮುಂಬೈನಲ್ಲಿ ನಟಿ ಶ್ರುತಿ ಹಾಸನ್ ಅವರಿಗೆ ಇದೇ ರೀತಿ ಕಹಿ

ಫಿಲ್ಮಿಬೀಟ್ 19 Apr 2026 8:19 am

'ಪೆದ್ದಿ' ಚಿತ್ರಕ್ಕಾಗಿ ರಾಮ್‌ಚರಣ್ ಜೇಬಿಗಿಳಿಸಿದ್ದೆಷ್ಟು? ಶಿವಣ್ಣ ಸಂಭಾವನೆ ಎಷ್ಟು?

ರಾಮ್‌ಚರಣ್ ನಟನೆಯ 'ಪೆದ್ದಿ' ಸಿನಿಮಾ ಸಖತ್ ಹೈಪ್ ಕ್ರಿಯೇಟ್ ಮಾಡಿದೆ. ಏಪ್ರಿಲ್ 30ಕ್ಕೆ ಸಿನಿಮಾ ತೆರೆಗೆ ಬರಬೇಕಿತ್ತು. ಕಾರಣಾಂತರಗಳಿಂದ ಒಂದು ತಿಂಗಳು ತಡವಾಗಿ ಸಿನಿಮಾ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಘೋಷಿಸಿದೆ. ಅದ್ಭುತವಾದ ಸಿನಿಮಾ ಕಟ್ಟಿಕೊಡಬೇಕು ಎನ್ನುವ ಕಾರಣಕ್ಕೆ ಈ ಪೋಸ್ಟ್‌ಪೋನ್ ಎಂದು ಚಿತ್ರತಂಡ ಹೇಳಿದೆ. ಅಂದಾಜು 300 ಕೋಟಿ ರೂ. ಬಜೆಟ್‌ನಲ್ಲಿ 'ಪೆದ್ದಿ' ಸಿನಿಮಾ ನಿರ್ಮಾಣವಾಗ್ತಿದೆ. ಜೂನ್

ಫಿಲ್ಮಿಬೀಟ್ 19 Apr 2026 7:41 am