Peter Pre-View:'ಲವ್ ಮಾಕ್ಟೇಲ್ 3' ಬಳಿಕ ಸ್ಯಾಂಡಲ್ವುಡ್ ಮತ್ತೊಂದು ಸಕ್ಸಸ್ ಕೊಡಬಹುದೇ 'ಪೀಟರ್'?
'ಧುರಂಧರ್ 2' ಅಬ್ಬರದ ನಡುವೆಯೂ ಕನ್ನಡ ಚಿತ್ರರಂಗಕ್ಕೆ ಲವ್ 'ಮಾಕ್ಟೇಲ್ 3' ಮೂಲಕ ಮತ್ತೊಂದು ಸಕ್ಸಸ್ ಸಿಕ್ಕಿದೆ. ಸಿನಿಮಾ ತಂಡ ಇತ್ತೀಚೆಗಷ್ಟೇ ಸಿನಿಮಾ ಗೆದ್ದಿರೋ ಸಂಭ್ರಮಾಚರಣೆಯನ್ನೂ ಮಾಡಿದೆ. ಈ ಸಿನಿಮಾ ಗೆದ್ದ ಬೆನ್ನಲ್ಲೇ ಮತ್ತೊಂದು ಕನ್ನಡ ಸಿನಿಮಾ ರಿಲೀಸ್ಗೆ ರೆಡಿಯಾಗಿದೆ. ಅದುವೇ 'ಪೀಟರ್'. 'ದೂರದರ್ಶನ' ಅನ್ನೋ ಒಂದೊಳ್ಳೆ ಕಂಟೆಂಟ್ ಸಿನಿಮಾ ಮಾಡಿದ್ದ ಸುಕೇಶ್ ಶೆಟ್ಟಿ 'ಪೀಟರ್' ಸಿನಿಮಾಗೆ
ದೈಹಿಕ ಸುಖ ನೀಡಲು ಒಪ್ಪದ ಮನೆ ಕೆಲಸದಾಕೆಯ ಕೊ*ಲೆ ಮಾಡಿದ ಕಿರುತೆರೆ ನಟ ?
ಹೆಣ್ಣಿನ ಮೇಲೆ ಗಂಡಿನ ಶೋಷಣೆ, ಅತ್ಯಾಚಾರದ ಕುರಿತ ಸುದ್ದಿಗಳನ್ನು ನಾವು ದಿನನಿತ್ಯ ಓದುತ್ತಲೇ ಇದ್ದೇವೆ, ಕೇಳುತ್ತಲೇ ಇದ್ದೇವೆ. ಪ್ರಪಂಚದಾದ್ಯಂತ ಲಕ್ಷಾಂತರ ಮಹಿಳೆಯರು, ಹುಡುಗಿಯರು, ದೈಹಿಕ ಮತ್ತು ಲೈಂ*ಗಿಕ ಹಿಂಸೆ ಅನುಭವಿಸಿದ್ದಾರೆ. ಇನ್ನೂ ಅನುಭವಿಸುತ್ತಲೇ ಇದ್ದಾರೆ. ಚಿತ್ರರಂಗ ಕೂಡ ಇದರಿಂದ ಹೊರತಾಗಿಲ್ಲ. ಇಲ್ಲಿಯೂ ಹೆಣ್ಣಿಗೆ ಕಿರುಕುಳ ನೀಡುವವರ ಸಂಖ್ಯೆ ಹೆಚ್ಚಿದೆ. ಇದಕ್ಕೆ ಇನ್ನೊಂದು ಉದಾಹರಣೆಯೇ ಆಶಿಶ್ ಮೆಶ್ರಮ್ ಪ್ರಕರಣ.
\ಬೈಯಿಸಿಕೊಂಡರೂ ದರ್ಶನ್-ಸುದೀಪ್ ಒಂದು ಮಾಡೋ ಪ್ರಯತ್ನ ಪಟ್ಟೆ\; ನಟ ರವಿ ಚೇತನ್
ಒಂದು ಕಾಲದಲ್ಲಿ ದರ್ಶನ್ ಹಾಗೂ ಸುದೀಪ್ ಇಬ್ಬರೂ ಕುಚಿಕು ಗೆಳೆಯರು. ಅಭಿಮಾನಿಗಳು ರೆಬೆಲ್ ಸ್ಟಾರ್ ಅಂಬರೀಶ್ ಹಾಗೂ ವಿಷ್ಣುವರ್ಧನ್ ಅವರನ್ನು ಇವರಲ್ಲಿ ಕಾಣುತ್ತಿದ್ದರು. ಕನ್ನಡ ಚಿತ್ರರಂಗದ ಇಬ್ಬರು ಸೂಪರ್ಸ್ಟಾರ್ಗಳು ಒಂದೇ ವೇದಿಕೆ ಮೇಲೆ ಕಂಡರೆ ಅಭಿಮಾನಿಗಳ ಖುಷಿಯೇ ಬೇರೆ. ಆದರೆ, ಈ ಸ್ನೇಹ ಹೆಚ್ಚು ದಿನ ಮುಂದುವರೆಯಲಿಲ್ಲ. ಈ ಬೇಸರ ಕೂಡ ಅಭಿಮಾನಿಗಳಲ್ಲಿ ಇದೆ. ದರ್ಶನ್ 'ಡೆವಿಲ್'
ಈ ಸುಖಕ್ಕೆ ಮದುವೆ ಯಾಕೆ ಆಗಬೇಕು ? ರಣಧೀರ ಚೆಲುವೆ ಖುಷ್ಬೂ ಕೆಂಡಾಮಂಡಲ
ಮದುವೆ ಒಂದು ಸಾಂಸ್ಥಿಕ ವ್ಯವಸ್ಥೆ ಎನ್ನುವ ಮಾತು ಹಿಂದೆ ಪ್ರಚಲಿತದಲ್ಲಿತ್ತು. ಆದರೆ ಈಗ ಬದಲಾದ ಸಾಮಾಜಿಕ.. ಆರ್ಥಿಕ.. ಶೈಕ್ಷಣಿಕ.. ವಿಚಾರಗಳು ಮದುವೆಯ ಪರಿಕಲ್ಪನೆ ಮತ್ತು ರೂಪುರೇಷೆಯನ್ನು ಬದಲಿಸಿವೆ. ಮದುವೆ ಈಗ ವ್ಯವಸ್ಥೆಯಾಗಿ ಉಳಿದಿಲ್ಲ. ಎರಡು ಮನಸುಗಳ ಬೆಸುಗೆಯಾಗದ ಮದುವೆ ಈಗ ಕೇವಲ ತೋರಿಕೆಯ ಸಂಪ್ರದಾಯವಾಗಿದೆ. ತೋರ್ಪಡಿಕೆಯ ಆಚರಣೆಯಾಗಿದೆ. ಬದಲಾದ ಈ ಕಾಲದಲ್ಲಿ ಹಲವರು ಸ್ವಾವಲಂಬಿಯಾಗುತ್ತಿದ್ದಾರೆ. ಇವತ್ತು.. ಯಾರು..
South Korea: ದಕ್ಷಿಣ ಕೊರಿಯಾದ ಖ್ಯಾತ ನಟ ಲೀ ಸಾಂಗ್-ಬೊ ನಿಧನ: ಸಾವಿನ ಹಿಂದೆ ಅಡಗಿದೆಯೇ ನಿಗೂಢ ರಹಸ್ಯ?
ದಕ್ಷಿಣ ಕೊರಿಯಾದ ಖ್ಯಾತ ನಟ ಲೀ ಸಾಂಗ್-ಬೊ ಅವರು ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಈ ಸುದ್ದಿ ಈಗ ಇಡೀ ವಿಶ್ವದಾದ್ಯಂತ ಇರುವ ಅವರ ಅಭಿಮಾನಿಗಳಿಗೆ ದೊಡ್ಡ ಆಘಾತ ನೀಡಿದೆ. ಕೇವಲ 45ನೇ ವಯಸ್ಸಿನಲ್ಲಿಯೇ ಅವರು ವಿಧಿವಶರಾಗಿರುವುದು ಚಿತ್ರರಂಗಕ್ಕೆ ತುಂಬಲಾರದ ನಷ್ಟ ತಂದಿದೆ. ಮಾರ್ಚ್ 26ರಂದು ಅವರು ತಮ್ಮ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಕುಟುಂಬದವರ ದೂರಿನ ಮೇರೆಗೆ ಪೊಲೀಸರು ಸ್ಥಳಕ್ಕೆ
Dhurandhar 2: ಕನ್ನಡದಲ್ಲೂ ಗೆದ್ದು ಬೀಗಿದ 'ಧುರಂಧರ್ 2'; 4 ದಿನಗಳಲ್ಲಿ ಎಷ್ಟಾಯ್ತು ಕಲೆಕ್ಷನ್?
ಭಾರತದ ಬಾಕ್ಸಾಫೀಸ್ನಲ್ಲಿ ಹೊಸ ದಾಖಲೆಗಳನ್ನು ಬರೆದ ಸಿನಿಮಾ 'ಧುರಂಧರ್ 2' ಈಗ ಕನ್ನಡದಲ್ಲಿ ಲಭ್ಯವಿದೆ. ಮಾರ್ಚ್ 19 ರಂದು ಯುಗಾದಿ ಸಮಯದಲ್ಲಿ ರಿಲೀಸ್ ಆಗಿದ್ದ ಈ ಸಿನಿಮಾ ದೇಶ-ವಿದೇಶದಲ್ಲಿ ದೊಡ್ಡ ಮಟ್ಟಕ್ಕೆ ಸದ್ದು ಮಾಡಿತ್ತು. ಅದರಲ್ಲೂ ಭಾರತದ ಬಾಕ್ಸಾಫೀಸ್ನಲ್ಲಿಯೂ ಹೊಸ ದಾಖಲೆಯನ್ನು ಬರೆದಿತ್ತು. ಆದರೆ, ಏಕಕಾಲಕ್ಕೆ ಬೇರೆ ಭಾಷೆಗಳಿಗೆ ಡಬ್ ಆಗಿ ರಿಲೀಸ್ ಆಗಿರಲಿಲ್ಲ. ಹೀಗಾಗಿ ಕನ್ನಡಿಗರು
ಪ್ರಶ್ನೆ ಪತ್ರಿಕೆಯಲ್ಲಿಯೂ ಧುರಂಧರ್ ; ಹಮ್ಜಾ-ರೆಹಮಾನ್ ಬ್ಯಾಲೆನ್ಸ್ ಶೀಟ್ ನೋಡಿದ್ರಾ ?
ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸುತ್ತಿರುವ 'ಧುರಂಧರ್' ಸಿನಿಮಾ ಈಗ ಶಾಲಾ ಕಾಲೇಜುಗಳಿಗೂ ತಲುಪಿದೆ. ಇಂಟರ್ನೆಟ್ ನಲ್ಲಿ ವೈರಲ್ ಆಗಿರುವ ಅಕೌಂಟ್ಸ್ ಪರೀಕ್ಷಾ ಪತ್ರಿಕೆಯೊಂದು ಎಲ್ಲರ ಹುಬ್ಬೇರಿಸುವಂತೆ ಮಾಡಿದೆ. ಆದಿತ್ಯ ಧರ್ ನಿರ್ದೇಶನದ ಈ ಚಿತ್ರದ ಪಾತ್ರಗಳ ಹೆಸರನ್ನೇ ಬಳಸಿ ಶಿಕ್ಷಕರೊಬ್ಬರು ಪ್ರಶ್ನೆ ಪತ್ರಿಕೆ ಸಿದ್ಧಪಡಿಸಿದ್ದಾರೆ. ಇದನ್ನು ನೋಡಿದ ನೆಟ್ಟಿಗರು 'ಇದು ಅಲ್ವಾ ಅಸಲಿ ಕ್ರೇಜ್' ಎಂದು ಕಾಮೆಂಟ್
ಪ್ರೀತಿಗೆ ಹುಟ್ಟೋದು ಗೊತ್ತು.. ಸಾಯೋದು ಗೊತ್ತಿಲ್ಲ.. ನಗ್ಸೋದು ಗೊತ್ತು.. ನಗು ಕಸಿಯೋದು ಗೊತ್ತಿಲ್ಲ. ಧರ್ಮ, ಬಣ್ಣ, ಭಾಷೆ, ಮೇಲು-ಕೀಳಿನ ಕಿಂಚಿತ್ತೂ ಅರಿವು ಇದಕ್ಕಿಲ್ಲ. ಕಣ್ಣಲ್ಲ್ ಹುಟ್ಟೋ ಪ್ರೀತಿಗೆ ಮನಸ್ಸೆ ಸಾಕ್ಷಿ.. ಹೃದಯವೇ ಸ್ವರ್ಗ. ಇದಕ್ಕೆ ಸೋನಾಕ್ಷಿ ಸಿನ್ಹಾ ಮತ್ತು ಜಹೀರ್ ಇಕ್ಬಾಲ್ ಜೋಡಿ ಒಂದು ಉದಾಹರಣೆ. ಹೌದು, ಅಂತರ ಧರ್ಮವಾಗಿದ್ದರೂ, ವಯಸ್ಸಿನಲ್ಲಿ ಅಂತರ ಇದ್ದರೂ.. ಪ್ರೀತಿ ಮಾಡಬಾರದು
ಎರಡೂವರೆ ತಿಂಗಳು ನರಕಯಾತನೆ, ಮಗಳಿಗೆ ಅಪರೂಪದ ಕಾಯಿಲೆ ; ವರುಣ್ ಧವನ್ ಭಾವುಕ
ಲೈಟ್ಸ್ ಕ್ಯಾಮೆರಾ ಆ್ಯಕ್ಷನ್ ಹೊರತಾಗಿಯೂ ಚಿತ್ರರಂಗದವರಿಗೆ ಅವರದ್ದೇ ಆದ ಪ್ರಪಂಚ ಇರುತ್ತೆ. ಅದು ವೈಯಕ್ತಿಕ ಪ್ರಪಂಚ. ಹಲವರು ತಮ್ಮ ಈ ಪ್ರಪಂಚವನ್ನು ತುಂಬಾನೇ ಖಾಸಗಿಯಾಗಿಡುತ್ತಾರೆ. ಕ್ಯಾಮರಾ ಕಣ್ಣು ತಮ್ಮ ಮನೆಯವರ ಮೇಲೆ ಬೀಳದಂತೆ ಎಚ್ಚರ ವಹಿಸುತ್ತಾರೆ. ಸುಖ ದುಃಖ ಏನೇ ಇರಲಿ ನಾಲ್ಕು ಗೋಡೆಯ ನಡುವೆಯೇ ಅನುಭವಿಸುತ್ತಾರೆ. ಉದಾಹರಣೆಗೆ ವರುಣ್ ಧವನ್. ಹೌದು, ಪಾತ್ರ ಯಾವುದೇ ಇರಲಿ
ಎಂ.ಎಸ್ ರಾಮಯ್ಯ ಆಸ್ಪತ್ರೆ ಮುಂದೆ ಚಪ್ಪಲಿ ಹೊಲೀತಿದ್ದ ಯುವಕನ ನೋಡಿ ಹುಟ್ಟಿದ ಕಥೆ 'ಅಂಬಾರಿ'
ಅದು ಲೂಸ್ ಮಾದ ಯೋಗಿ ತನ್ನ ವೃತ್ತಿ ಬದುಕಿನಲ್ಲಿ ಉತ್ತುಂಗದಲ್ಲಿದ್ದ ಕಾಲವದು. ಎಪಿ ಅರ್ಜುನ್ ಮೊದಲ ಸಿನಿಮಾ ನಿರ್ದೇಶನ. ಮೊದಲ ಪ್ರಯತ್ನದಲ್ಲೇ ವಿಭಿನ್ನವಾದ ಕಥೆಯನ್ನು ಹೇಳಬೇಕು ಅಂತ ಹೊರಟಿದ್ದರು. ಒಂದು ಭಾವನಾತ್ಮಕ ಟ್ರಾವೆಲ್ ಲವ್ ಸ್ಟೋರಿಯನ್ನು ಹೇಳಿದರೆ ಹೇಗೆ ಅನ್ನೋ ಆಲೋಚನೆಯಲ್ಲಿಯೇ ಸ್ಕ್ರಿಪ್ಟ್ ರೆಡಿಯಾಗಿತ್ತು. ಅದುವೇ 'ಅಂಬಾರಿ'. 'ಅಂಬಾರಿ' 2009ರಲ್ಲಿ ರಿಲೀಸ್ ಆಗಿತ್ತು. ಆರಂಭದಲ್ಲಿ ಒಂದೇ ವಾರ
ಗುರುವಿಗೆ ತಿರುಮಂತ್ರ ; ಮಹಾಕುಂಭದ ಮೊನಾಲಿಸಾಗೆ ಸಂಕಷ್ಟ - ವೈರಲ್ ಚೆಲುವೆ ವಿರುದ್ಧ ಮಾನನಷ್ಟ ಮೊಕದ್ದಮೆ
ಉತ್ತರ ಪ್ರದೇಶದ ಪ್ರಯಾಗ್ ರಾಜ್ನಲ್ಲಿ ನಡೆದ ಮಹಾಕುಂಭ ಮೇಳದಲ್ಲಿ ತಮ್ಮ ಮನಮೋಹಕ ಕಣ್ಣುಗಳಿಂದನೇ ಎಲ್ಲರನ್ನು ಸೆಳೆದವರು ಮೊನಾಲಿಸಾ ಭೋಸಲೆ. ಮಣಿ ಸರ ಮಾರುತ್ತ ತನ್ನಷ್ಟಕ್ಕೆ ತಾನು ಇದ್ದ ಈ ಚೆಲುವೆಯ ಬದುಕನ್ನು ರಾತ್ರಿ ಕಳೆದು ಹಗಲಾಗುವಷ್ಟರಲ್ಲಿ ಬದಲಿಸಿದ ಹೆಗ್ಗಳಿಕೆ ಸಾಮಾಜಿಕ ಜಾಲತಾಣದ್ದು. ಇವತ್ತು ಮೊನಾಲಿಸಾ ಕೈಯಲ್ಲಿ ಮಣಿ ಸರ ಇಲ್ಲ. ಹೂವು ಕೂಡ ಇಲ್ಲ. ಆದರೆ ವಿವಾದ
ಬಾಲಿವುಡ್ನಲ್ಲಿ ಲಕ್ಷವೆಲ್ಲಾ ಅಲಕ್ಷ್ಯ. ಒಂದೆರಡು ಕೋಟಿಗಳಂತೂ ಕಾಲ ಕಸ. ಅಲ್ಲೇನೇ ಇದ್ದರೂ 100-200 ಕೋಟಿಗಳದ್ದೇ ಕಾರು ಬಾರು ಅನ್ನುವ ಮಾತು ಈ ಹಿಂದೆ ಇತ್ತು. ಆದರೆ ಕೊರೊನಾದ ನಂತರ ಬಾಲಿವುಡ್ಡಿಗೆ ಅಕ್ಷರಶ ಗರ ಬಡಿದಿತ್ತು. 2022ರಲ್ಲಿ ಕನ್ನಡ ಚಿತ್ರರಂಗ ಪಳ ಪಳ ಅಂತ ಹೊಳೆಯುತ್ತಿದ್ದಾಗ ಮಂಕಾಗಿದ್ದ ಹಿಂದಿ ಉದ್ಯಮ ಚೇತರಿಸಿಕೊಂಡಿದ್ದು 2023ರಲ್ಲಿ. 2023ರಲ್ಲಿ ''ಜವಾನ್'' .. ''ಪಠಾಣ್''
ಕೇರಳ ರಾಜಕೀಯದಲ್ಲಿ ಸಂಚಲನ ಮೂಡಿಸಿದ 'ಪ್ರತಿಚಯ' ; ಬಾಕ್ಸ್ ಆಫೀಸ್ ಕಲೆಕ್ಷನ್ ಏನಾಗಲಿದೆ?
ಕೇರಳದ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿರುವ 'ಪ್ರತಿಚ್ಛಾಯ' ಮಲಯಾಳಂ ಸಿನಿಮಾ ಇಂದು ರಾಜ್ಯಾದ್ಯಂತ ತೆರೆಕಂಡಿದೆ. ಈ ಚಿತ್ರದ ಬಿಡುಗಡೆಯ ಬೆನ್ನಲ್ಲೇ ಕೇರಳದ ಸೋಶಿಯಲ್ ಮೀಡಿಯಾ ಲೋಕ ಎರಡು ಭಾಗವಾಗಿ ವಿಭಜನೆಯಾಗಿದೆ. ಕಳೆದ ಕೆಲವು ದಿನಗಳಿಂದ ಈ ಸಿನಿಮಾದ ವಿವಾದಾತ್ಮಕ ತುಣುಕುಗಳು ಇಂಟರ್ನೆಟ್ನಲ್ಲಿ ಸಖತ್ ವೈರಲ್ ಆಗುತ್ತಿದ್ದು, ಚುನಾವಣೆಗೂ ಮುನ್ನವೇ ಇದೊಂದು ಸೈದ್ಧಾಂತಿಕ ಸಂಘರ್ಷಕ್ಕೆ ವೇದಿಕೆಯಾಗಿದೆ. ಈಗ ಚಿತ್ರರಂಗದ
'ಕೆಜಿಎಫ್' -2 ದಾಖಲೆ ಮೇಲೆ ಕಣ್ಣಿಟ್ಟ 'ಧುರಂಧರ್-2'; ಮುಂದೆ ಬಾಕ್ಸಾಫೀಸ್ ಕಥೆಯೇನು?
ರಣ್ವೀರ್ ಸಿಂಗ್, ಸಂಜಯ್ ದತ್, ಅರ್ಜುನ್ ರಾಂಪಾಲ್, ಮಾಧವನ್, ಸಾರಾ ಅರ್ಜುನ್ ನಟನೆಯ 'ಧುರಂಧರ್-2' ಸಿನಿಮಾ ಬಾಕ್ಸಾಫೀಸ್ ಕೊಳ್ಳೆ ಹೊಡೀತಿದೆ. ಒಂದೇ ವಾರದಲ್ಲಿ 1000 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದ್ದ ಸಿನಿಮಾ ಇದೀಗ 'ಕೆಜಿಎಫ್' -2 ದಾಖಲೆ ಹಿಂದಿಕ್ಕಲು ಸಜ್ಜಾಗಿದೆ. ಭಾರತೀಯ ಚಿತ್ರರಂಗದಲ್ಲಿ ಅತಿಹೆಚ್ಚು ಗಳಿಕೆ ಕಂಡ ಸಿನಿಮಾ ಪಟ್ಟಿಯಲ್ಲಿ ಮೇಲೇರುತ್ತಿದೆ. ಆದಿತ್ಯಧರ್ ನಿರ್ದೇಶನದ ಈ
ಮಲಯಾಳಂ ಬ್ಲಾಕ್ಬಸ್ಟರ್ 'ಆಡು 3' ಒಟಿಟಿಗೆ ಬರುವುದು ಯಾವಾಗ ? ಲೆಕ್ಕಾಚಾರವೇನು..?
ಮಾರ್ಚ್ 19, 2026 ರಂದು ತೆರೆಕಂಡ 'ಆಡು 3: ಒನ್ ಲಾಸ್ಟ್ ರೈಡ್ – ಪಾರ್ಟ್ 1' (Aadu 3: One Last Ride – Part 1) ಸಿನಿಮಾ ಸದ್ಯ ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸುತ್ತಿದೆ. ಇದರ ಬೆನ್ನಲ್ಲೇ ಮಲಯಾಳಂ ಸಿನಿಮಾ ಪ್ರೇಮಿಗಳಲ್ಲಿ ಹೊಸದೊಂದು ಕುತೂಹಲ ಶುರುವಾಗಿದೆ. ಜಯಸೂರ್ಯ ನಟನೆಯ ಈ ಫ್ಯಾಂಟಸಿ ಕಾಮಿಡಿ ಸಿನಿಮಾ ಒಟಿಟಿಗೆ (OTT)
ರಣ್ಬೀರ್, ಯಶ್ ನಟನೆಯ 'ರಾಮಾಯಣ' ಸಿನಿಮಾ ಟೀಸರ್ ರಿಲೀಸ್ ಡೇಟ್ ಘೋಷಿಸಿದ ಚಿತ್ರತಂಡ
ನಿತೇಶ್ ತಿವಾರಿ ನಿರ್ದೇಶನದಲ್ಲಿ ಯಶ್ ಹಾಗೂ ರಣ್ಬೀರ್ ಕಪೂರ್ ನಟನೆಯ 'ರಾಮಾಯಣ' ಸಿನಿಮಾ ನಿರೀಕ್ಷೆ ಹುಟ್ಟಾಕ್ಕಿದೆ. ಇದೀಗ ಚಿತ್ರತಂಡದಿಂದ ಅಧಿಕೃತವಾಗಿ ಅಪ್ಡೇಟ್ ಬಂದಿದೆ. ಶ್ರೀರಾಮನವಮಿ ಸಂಭ್ರಮದಲ್ಲಿ ಟೀಸರ್ ಬಿಡುಗಡೆ ಆಗುತ್ತದೆ ಎಂದು ಕಾಯುತ್ತಿದ್ದವರಿಗೆ ನಿರಾಸೆಯಾಗಿದೆ. ಆದರೂ ಟೀಸರ್ ರಿಲೀಸ್ ಡೇಟ್ ಘೋಷಣೆ ಮಾಡಿರುವುದು ಖುಷಿ ತಂದಿದೆ. 4000 ಕೋಟಿ ರೂ. ಬಜೆಟ್ನಲ್ಲಿ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ 'ರಾಮಾಯಣ'
ಹನಿಮೂನ್ ಮುಗಿಸಿ ರಶ್ಮಿಕಾ-ವಿಜಯ್ ಕೆಲಸಕ್ಕೆ ಹಾಜರ್: ಅನಂತಪುರದಲ್ಲಿ ಅದ್ದೂರಿ ವೆಲ್ಕಮ್
ದಕ್ಷಿಣ ಭಾರತದ ಮೋಸ್ಟ್ ಕ್ಯೂಟ್ ಕಪಲ್ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಈಗ ಸುದ್ದಿಯಲ್ಲಿದ್ದಾರೆ. ಇತ್ತೀಚೆಗಷ್ಟೇ ಹಸೆಮಣೆ ಏರಿದ್ದ ಈ ಜೋಡಿ ಈಗ ಮತ್ತೆ ಕ್ಯಾಮರಾ ಮುಂದೆ ಬಂದಿದ್ದಾರೆ. ವೈವಾಹಿಕ ಜೀವನಕ್ಕೆ ಕಾಲಿಟ್ಟ ಸಂಭ್ರಮದ ಬೆನ್ನಲ್ಲೇ ಇಬ್ಬರೂ ಕೆಲಸಕ್ಕೆ ಹಾಜರಾಗಿದ್ದಾರೆ. ಕಳೆದ ತಿಂಗಳು ಉದಯಪುರದಲ್ಲಿ ಈ ತಾರಾ ಜೋಡಿಯ ವಿವಾಹ ಮಹೋತ್ಸವ ನಡೆದಿತ್ತು. ಅತ್ಯಂತ ಆಪ್ತರ
ಹಾಟ್ ಸೀಟ್ನಿಂದ ಕತ್ತಲೆ ಕೋಣೆಯವರೆಗೆ ; ಕೆಬಿಸಿಯಲ್ಲಿ ₹50 ಲಕ್ಷ ಗೆದ್ದಿದ್ದ ತಹಶೀಲ್ದಾರ್ ಅರೆಸ್ಟ್
ಹೇಗಾದರೂ ಸರಿ ಏಕಾಏಕಿ ದುಡ್ಡು ಮಾಡಿ ಬಿಡಬೇಕು... ಇಂಥಾ ಧಾವಂತದಿಂದ ಥರ ಥರದ ವೇಷ ತೊಟ್ಟ, ಹೆಜ್ಜೆ ಹೆಜ್ಜೆಗೂ ಮಹಾಮೋಸ ಮಾಡುವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಮೋಸ ಮಾಡಲು ವಂಚಕರು ಸದಾ ಹೊಸ ದಾರಿಯನ್ನು ಹುಡುಕುತ್ತಲೇ ಇರುತ್ತಾರೆ. ದುರಂತ ಅಂದರೆ ಈ ವಂಚಕರ ಸಾಲಿನಲ್ಲಿ ಕೇವಲ ಜನಸಾಮಾನ್ಯರು ಮಾತ್ರ ಇಲ್ಲ. ಜನಸಾಮಾನ್ಯರು ಮಾತ್ರ ಜನಸಾಮಾನ್ಯರನ್ನು
ನನಗೆ ಗಂಡಸಿನ ಅವಶ್ಯಕತೆ ಇಲ್ಲ- ಮಲೈಕಾ ಅರೋರಾ
ಊಹಾಪೋಹಗಳು, ಗಾಳಿಸುದ್ದಿಗಳು ಗ್ಲಾಮರ್ ಜಗತ್ತಿನಲ್ಲಿ ಮತ್ತು ಸೆಲೆಬ್ರೆಟಿಗಳ ಜೀವನದಲ್ಲಿ ಕಾಮನ್ನೋ ಕಾಮನ್ನು. ಅವರು ತಮ್ಮ ವೈಯಕ್ತಿಕ ಜೀವನದಲ್ಲಿ ಒಂದು ಬೊಂಬೆಯ ಜತೆಗೆ ಆಟವಾಡಿದರೂ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಾಗಬಹುದು. ಟ್ರೋಲಿಗರ ಹಸಿವಿಗೆ ಆಹಾರವೂ ಆಗಬಹುದು. ಕುಂತರು ನಿಂತರು ಇವರ ಕುರಿತು ನಿರಂತರವಾಗಿ ಚರ್ಚೆಯಾಗುತ್ತಲೇ ಇರುತ್ತೆ. ವ್ಯೆಯಕ್ತಿಕ ಜೀವನದ ಕುರಿತು ಸುದ್ದಿಯಾಗುತ್ತಲೇ ಇರುತ್ತೆ. ವಿಭಿನ್ನ ರೀತಿಯಲ್ಲಿ ಕಮೆಂಟ್ ಹಾಕೋದು, ಕೆಲವು
'ಧುರಂಧರ್'-2 ನಿರ್ದೇಶಕನ ಬಳಿ ವಿಚಿತ್ರ ಬೇಡಿಕೆ ಇಟ್ಟ ಪಾಕಿಸ್ತಾನದ ಪ್ರಜೆಗಳು!
ಒಂದೇ ವಾರದಲ್ಲಿ 'ಧುರಂಧರ್'-2 ಸಿನಿಮಾ 1000 ಕೋಟಿ ರೂ. ಕಲೆಕ್ಷನ್ ಮಾಡಿ ದಾಖಲೆ ಬರೆದಿದೆ. ಎಲ್ಲಾ ಕಡೆ ಬ್ಲಾಕ್ಬಸ್ಟರ್ ರೆಸ್ಪಾನ್ಸ್ ಸಿಕ್ತಿದೆ. ಪಾಕಿಸ್ತಾನ ಸೇರಿದಂತೆ ಗಲ್ಫ್ ರಾಷ್ಟ್ರಗಳಲ್ಲಿ ಸಿನಿಮಾ ಬಿಡುಗಡೆಗೆ ಅವಕಾಶ ಸಿಕ್ಕಿಲ್ಲ. ಆದರೆ ಸಿನಿಮಾ ಕ್ರೇಜ್ ಬಗ್ಗೆ ಅಲ್ಲಿ ಸಿಕ್ಕಾಪಟ್ಟೆ ಟಾಕ್ ಶುರುವಾಗಿದೆ. 'ಧುರಂಧರ್' ಚಿತ್ರ ಕೂಡ ಬಿಡುಗಡೆ ಆಗಿರಲಿಲ್ಲ. ಆದರೆ ಬಳಿಕ ಪೈರಸಿ ಸಿಡಿಯಲ್ಲಿ
Brahmagantu: ಅವಮಾನಕ್ಕೆ ಉತ್ತರ ಕೊಡಲು ಬಂದಳು ದಿಶಾ; ಸೌಂದರ್ಯಗೆ ಕಾದಿದೆ ಬಿಗ್ ಶಾಕ್…
ಜೀ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿ 'ಬ್ರಹ್ಮಗಂಟು' ಈಗ ಕುತೂಹಲಕಾರಿ ಘಟ್ಟಕ್ಕೆ ಬಂದು ತಲುಪಿದೆ. ಇಷ್ಟು ದಿನ ಸೌಂದರ್ಯ ಆಟಕ್ಕೆ ಬೆದರಿದ್ದ ಕುಟುಂಬಕ್ಕೆ ಈಗ ಹೊಸ ಆನೆಬಲ ಬಂದಿದೆ. ಹೌದು, ದಿಶಾಳ ಎಂಟ್ರಿ ಇಡೀ ಮನೆಯ ಚಿತ್ರಣವನ್ನೇ ಬದಲಿಸಿದೆ. ಸದ್ಯ ಬಿಡುಗಡೆಯಾಗಿರುವ ಮಹಾಸಂಚಿಕೆಯ ಪ್ರೋಮೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದ ಅಭಿಮಾನಿಗಳು
ಲವ್ ಮಾಕ್ಟೇಲ್ 3 ಸ್ಕ್ರಿಪ್ಟ್ ಸಮರ ಸುಖಾಂತ್ಯ ; ಮನಸ್ತಾಪ ಮರೆತು ಕೈಕುಲುಕಿದ ಡಾರ್ಲಿಂಗ್ ಕೃಷ್ -ಗುರು ದೇಶಪಾಂಡೆ
ಆ ಭಾಷೆ ಈ ಭಾಷೆ ಅಂತಲ್ಲ. ಭಾರತದ ಚಿತ್ರರಂಗದಲ್ಲಿ ಅನೇಕರು ಒಂದಿಲ್ಲೊಂದು ರೀತಿಯಲ್ಲಿ ತಮ್ಮ ಚಿತ್ರಕ್ಕೆ ಒಂದಿಲ್ಲೊಂದು ರೀತಿಯಲ್ಲಿ ಕಳ್ಳತನಕ್ಕೆ ಇಳಿಯುತ್ತಾರೆ. ಕೆಲವರು ಪ್ರೇರಣೆಯ ಗೀತೆಯನ್ನು ಹಾಡುತ್ತಾ ಬೇರೆ ಚಿತ್ರದ ಸನ್ನಿವೇಶಗಳನ್ನು ಯಥಾವತ್ತಾಗಿ ನಕಲು ಮಾಡಿದರೆ ಇನ್ನು ಹಲವರು ಯಾರ ಅಳುಕಿಲ್ಲದೇ ಬೇರೆಯವರ ಕೃತಿಯನ್ನು ಕದ್ದು ತಮ್ಮದೇ ಸೃಜನಶೀಲ ಕಲಾಕೃತಿ ಎನ್ನುವಂತೆ ಪೋಸು ಬಿಲ್ಡಪ್ಪು ಕೊಡುತ್ತಾರೆ. ಹೀಗೆ
\ನಾನು ನಾಸ್ತಿಕ, ಆದರೆ ರಾಮನ ವಿರೋಧಿಯಲ್ಲ\; ನಟ ಕಿಶೋರ್
ಪ್ರಪಂಚದ ಆಗುಹೋಗುಗಳ ಬಗ್ಗೆ ಬಹುಭಾಷಾ ನಟ ಕಿಶೋರ್ ತಮ್ಮ ಅಭಿಪ್ರಾಯಗಳನ್ನು ಆಗಾಗ್ಗೆ ಹಂಚಿಕೊಳ್ಳುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಆಕ್ವೀವ್ ಆಗಿರುವ ಅವರು ತಮ್ಮ ವಿಚಾರಧಾರೆಗಳನ್ನು ಪೋಸ್ಟ್ ಮಾಡುತ್ತಾರೆ. ಬಿಜೆಪಿ, ಆರೆಸ್ಸೆಸ್ ಹಾಗೂ ಪ್ರಧಾನಿ ಮೋದಿ ನಿರ್ಧಾರಗಳ ಬಗ್ಗೆ ಟೀಕಿಸುತ್ತಿರುತ್ತಾರೆ. ಇದೇ ಕಾರಣಕ್ಕೆ ಅವರನ್ನು ಟ್ರೋಲ್ ಮಾಡುವವರು ಇದ್ದಾರೆ. ಶ್ರೀರಾಮನವಮಿ ಹಿನ್ನೆಲೆಯಲ್ಲಿ ನಟ ಕಿಶೋರ್ ಇನ್ಸ್ಟಾಗ್ರಾಮ್ನಲ್ಲಿ ಶ್ರೀರಾಮನ ಬಗ್ಗೆ ಸುದೀರ್ಘ
ತಂದೆ-ತಾಯಿಯ ನಂತರ ನನಗೆ ಅವನೇ ಸರ್ವಸ್ವ ಆಗಿದ್ದ ; ಮಾಜಿ ಪ್ರೇಮಿಯನ್ನು ನೆನೆದು ಬಿಗ್ ಬಾಸ್ ರಾಶಿಕಾ ಶೆಟ್ಟಿ ಭಾವುಕ
ಪ್ರೀತಿ ಎಂಬ ಪದ ಸುಂದರ ಇರಬಹುದು. ಆದರೆ, ಪ್ರೀತಿ ಕೆಲವೊಮ್ಮೆ ಕಾಡುತ್ತೆ. ಪ್ರೀತಿಯಲ್ಲಿ ನೋವು ಸಹಜವಾದರೂ ಅದನ್ನು ಸಹಿಸಿಕೊಳ್ಳುವುದಕ್ಕೆ ಸಾಧ್ಯವಾಗುವುದೇ ಇಲ್ಲ. ಅದರಿಂದಾಗುವ ನೋವು ಶಾಶ್ವತವಾಗಿಲ್ಲದಿದ್ದರೂ ಆ ಕ್ಷಣಕ್ಕೆ ಮಾತ್ರ ಅದು ನುಂಗಲಾರದ ತುತ್ತು. ಎಲ್ಲಾ ಉತ್ಸಾಹ, ಆಸಕ್ತಿ, ಖುಷಿಯ ಕ್ಷಣಗಳನ್ನು ಕಸಿದುಕೊಳ್ಳೋ ಆ ಬ್ರೇಕ್ ಅಪ್ನ ನೋವು ಸಹಿಸಿಕೊಳ್ಳೋದಕ್ಕೆ ಸಾಧ್ಯ ಆಗದೇ ಇರುವುದಕ್ಕೆ ಕಾರಣಗಳೇನು ಎಂಬುದು
ರುಕ್ಮಿಣಿ ವಸಂತ್ ಅವರನ್ನು ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ; ಅಷ್ಟಕ್ಕೂ ಏನಾಯ್ತು?
ಅದ್ಯಾಕೋ 'ಕಾಂತಾರ' ಚಿತ್ರತಂಡ ಗೊಂದಲದ ಗೂಡಾಗಿದೆ. ಹೊಂಬಾಳೆ ಫಿಲ್ಮ್ಸ್ ಸಂಸ್ಥೆ, ರಿಷಬ್ ಶೆಟ್ಟಿ ನಡುವೆ ಎಲ್ಲವೂ ಸರಿಯಿಲ್ಲ ಎನ್ನುವ ಊಹಾಪೋಹ ಶುರುವಾಗಿದೆ. 'ಹೊಂಬಾಳೆ ಫಿಲ್ಮ್ಸ್' ಹಾಗೂ 'ಕಾಂತಾರ' ಇನ್ಸ್ಟಾಗ್ರಾಮ್ ಖಾತೆಗಳನ್ನು ರಿಷಬ್ ಶೆಟ್ಟಿ ಅನ್ಫಾಲೋ ಮಾಡಿದ್ದಾರೆ. ರಾಜ್ ಬಿ ಶೆಟ್ಟಿ ಜೊತೆಗೂ ಅಷ್ಟಕ್ಕಷ್ಟೆ, ಎನ್ನುವಂತಾಗಿದೆ. ಅದಕ್ಕೆ ಅವರನ್ನು ಅನ್ಫಾಲೋ ಮಾಡಿದ್ದಾರೆ ಎನ್ನುವ ಚರ್ಚೆ ನಡೀತಿದೆ. ಅಚ್ಚರಿ ಎನ್ನುವಂತೆ
Peddi Teaser: ಪೈಲ್ವಾನ್ 'ಪೆದ್ದಿ' ರಾಮ್ಚರಣ್ ಕುಸ್ತಿ ಖದರ್ ಹೇಗಿದೆ? ಮಿಸ್ ಆಗಿದ್ದೇನು?
ಬುಚ್ಚಿಬಾಬು ನಿರ್ದೇಶನದ 'ಪೆದ್ದಿ' ಸಿನಿಮಾ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡ್ತಿದೆ. ಸಿನಿಮಾ ಬಿಡುಗಡೆಗೆ ಇನ್ನೊಂದು ತಿಂಗಳು ಬಾಕಿಯಿದೆ. ಶ್ರೀರಾಮನವಮಿ ಹಾಗೂ ರಾಮ್ಚರಣ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಹೊಸ ಟೀಸರ್ ಬಿಡುಗಡೆ ಆಗಿ ಧೂಳೆಬ್ಬಿಸಿದೆ. ದೆ ಹಿಡಿದು ಕುಸ್ತಿ ಅಖಾಡಕ್ಕೆ ಇಳಿದ 'ಪೆದ್ದಿ' ಖದರ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. 80, 90ರ ದಶಕದ ಕಥೆ 'ಪೆದ್ದಿ' ಚಿತ್ರದಲ್ಲಿದೆ. ಅವತ್ತಿನ
ಶ್ರೀರಾಮನವಮಿ ಸಂಭ್ರಮದಲ್ಲಿ ಜೋಗಿ ಪ್ರೇಮ್ ಹಾಗೂ ರಕ್ಷಿತಾ ಪ್ರೇಮ್ ಹೊಸ ಅಧ್ಯಾಯ
'ಕೆಡಿ' ಚಿತ್ರದ ವಿವಾದಾತ್ಮಕ ಹಾಡಿನ ಕಾರಣಕ್ಕೆ ಇತ್ತೀಚೆಗೆ ನಿರ್ದೇಶಕ ಪ್ರೇಮ್ ಸುದ್ದಿಯಾಗಿದ್ದರು. ಪತ್ನಿ ರಕ್ಷಿತಾ ಕೂಡ ಪತಿಯ ಬೆಂಬಲಕ್ಕೆ ನಿಂತಿದ್ದರು. ಹಾಡಿನ ಸಾಹಿತ್ಯದ ಬಗ್ಗೆ ಪ್ರೇಮ್ ಕೇಳಿ ವಿವಾದಕ್ಕೆ ತೆರೆ ಎಳೆದಿದ್ದರು. ಇದೀಗ ಶ್ರೀರಾಮನವಮಿ ಸಂಭ್ರಮದಲ್ಲಿ ಖುಷಿ ಸುದ್ದಿ ಹಂಚಿಕೊಂಡಿದ್ದಾರೆ. ಹೊಸ ಪ್ರತಿಭೆಗಳಿಗೆ ವೇದಿಕೆ ನೀಡುವ ಉದ್ದೇಶದಿಂದ 'ಫಿನಿಕ್ಸ್ ಪ್ರೇಮ್ಸ್ ಸ್ಟುಡಿಯೋಸ್' ಎಂಬ ಚಿತ್ರ ನಿರ್ಮಾಣ ಸಂಸ್ಥೆ
ಧುರಂಧರ್ 2 ಅಬ್ಬರ ; ಗಂಡನ ಸಿನಿಮಾವನ್ನು ಗುಟ್ಟಾಗಿ ನೋಡಿ ಸಂಭ್ರಮಿಸಿದ ಯಾಮಿ ಗೌತಮ್
ಬಾಕ್ಸ್ ಆಫೀಸ್ನಲ್ಲಿ ಈಗ 'ಧುರಂಧರ್ 2' ಚಿತ್ರದದ್ದೇ ಅಬ್ಬರ. ರಣವೀರ್ ಸಿಂಗ್ ನಟನೆಯ ಈ ಸಿನಿಮಾ ಹೊಸ ದಾಖಲೆಗಳನ್ನು ಬರೆಯುತ್ತಿದೆ. ಪ್ರೇಕ್ಷಕರು ಚಿತ್ರಮಂದಿರದತ್ತ ಮುಗಿಬೀಳುತ್ತಿದ್ದಾರೆ. ಇದರ ನಡುವೆ ಬಾಲಿವುಡ್ ನಟಿ ಯಾಮಿ ಗೌತಮ್ ಸುದ್ದಿಯಲ್ಲಿದ್ದಾರೆ. ಅವರು ಗುಟ್ಟಾಗಿ ಚಿತ್ರಮಂದಿರಕ್ಕೆ ಭೇಟಿ ನೀಡಿದ್ದಾರೆ. ಜನರ ನಡುವೆ ಕುಳಿತು ಸಿನಿಮಾ ವೀಕ್ಷಿಸಿದ್ದಾರೆ.ಸಿನಿಮಾ ನೋಡುತ್ತಿರುವಾಗ ಪ್ರೇಕ್ಷಕರ ಪ್ರತಿಕ್ರಿಯೆ ಕಂಡು ಯಾಮಿ ಫುಲ್
'ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ' ಅನ್ನುವ ಮಾತು ಇದೆ. ಈ ಮಾತು ಚಿತ್ರರಂಗಕ್ಕೆ ಹೆಚ್ಚು ಸೂಕ್ತವಾಗುತ್ತೆ. ಯಾಕೆಂದರೆ.. ಹೊರಗಡೆಯಿಂದ ತುಂಬಾನೇ ಕಲರ್ ಫುಲ್ ಆಗಿ ಕಾಣುವ ಈ ಬಣ್ಣದ ಲೋಕದಲ್ಲಿ ನಾನಾ ಬಗೆಯ ವೇಷಭೂಷಣ ಹಾಕಿಕೊಂಡ ಹಲವಾರು ಜನ ಇದ್ದಾರೆ. ಅದರಲ್ಲಿಯೂ ನಾಯಕಿಯಾಗಿ ನೆಲೆಯೂರಬೇಕೆಂದು ಕನಸೊತ್ತು ಬರುವ ಹಲವರ ಪಾಲಿಗೆ ಚಿತ್ರರಂಗ ಕಲ್ಲು ಮುಳ್ಳಿನ ಹಾದಿಯೇ. ಅಡಿಗಡಿಗೂ
ಮಲಯಾಳಂನತ್ತ ಮುಖ ಮಾಡಿದ ರಾಧಿಕಾ ಕುಮಾರಸ್ವಾಮಿ ; ಕನ್ನಡದ ‘ಸ್ವೀಟಿ’ ಈಗ ಚತುರ್ಭಾಷಾ ತಾರೆ
ಸ್ಯಾಂಡಲ್ವುಡ್ನ ಲಕ್ಕಿ ಸ್ಟಾರ್ ರಾಧಿಕಾ ಕುಮಾರಸ್ವಾಮಿ ಅವರು ಮತ್ತೆ ಬಣ್ಣ ಹಚ್ಚಲು ರೆಡಿಯಾಗಿದ್ದಾರೆ. ಕಳೆದ ಕೆಲವು ಸಮಯದಿಂದ ಚಿತ್ರರಂಗದಿಂದ ತುಸು ದೂರ ಉಳಿದಿದ್ದ ನಟಿ, ಈಗ ಭರ್ಜರಿ ಕಂಬ್ಯಾಕ್ ಮಾಡಲು ಸಜ್ಜಾಗುತ್ತಿದ್ದಾರೆ. ಇತ್ತೀಚೆಗೆ 'ಭೈರಾದೇವಿ' ಚಿತ್ರದ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದ ಅವರು, ಈಗ ಹೊಸ ಕಥೆಗಳತ್ತ ಮುಖ ಮಾಡಿದ್ದಾರೆ. ರಾಧಿಕಾ ಕುಮಾರಸ್ವಾಮಿ ಅವರು ಕೇವಲ ಕನ್ನಡಕ್ಕೆ
ಎಂಟು ದಿನದಲ್ಲಿ 1100 ಕೋಟಿ ರೂ. ತಲುಪಿದ 'ಧುರಂಧರ್: ದ ರಿವೆಂಜ್' ಗಳಿಕೆ
PC: x.com/IndiaToday ಮುಂಬೈ: ರಣವೀರ್ ಸಿಂಗ್ ನಾಯಕ ನಟನಾಗಿರುವ 'ಧುರಂಧರ್: ದ ರಿವೆಂಜ್' ಚಿತ್ರದ ನಾಗಾಲೋಟ ಬಾಕ್ಸ್ ಆಫೀಸ್ ನಲ್ಲಿ ಮುಂದುವರಿದಿದೆ. ಆದಿತ್ಯ ಧರ್ ನಿರ್ದೇಶನದ ಚಿತ್ರದಲ್ಲಿ ರಣವೀರ್ ಸಿಂಗ್ ಜತೆ ಸಂಜಯ್ ದತ್, ಆರ್.ಮಾಧವನ್, ಅರ್ಜುನ್ ರಾಂಪಾಲ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರ ಬಿಡುಗಡೆಯಾದ ಮೊದಲ ವಾರ ಭಾರತದಲ್ಲೇ 800 ಕೋಟಿ ರೂಪಾಯಿ ಗಳಿಸಿದ್ದು, ವಿಶ್ವಾದ್ಯಂತ ಚಿತ್ರದ ಗಳಿಕೆ 1100 ಕೋಟಿ ಸನಿಹ ತಲುಪಿದೆ ಎಂದು ಅಂದಾಜಿಸಲಾಗಿದೆ. ಸ್ಕ್ಯಾನ್ಲಿಕ್ ವರದಿ ಪ್ರಕಾರ, ಎರಡನೇ ಗುರುವಾರ ಅಂದಾಜು 49.70 ಕೋಟಿ ರೂಪಾಯಿ ಆದಾಯ ಗಳಿಸಿದೆ. ವಾರದ ಮಧ್ಯದಲ್ಲಿ ಚಿತ್ರದ ಗಳಿಕೆ ಸ್ವಲ್ಪ ಕುಂಠಿತವಾದರೂ, ಮತ್ತೆ ಚೇತರಿಸಿಕೊಂಡಿರುವುದು ಈ ಅಂಕಿ ಅಂಶಗಳಿಂದ ತಿಳಿದುಬರುತ್ತದೆ. ಪ್ರಿವ್ಯೂ ಶೋಗಳಿಂದ 43 ಕೋಟಿ ಗಳಿಸಿದ್ದ ಚಿತ್ರ, ಆರಂಭಿಕ ಗುರುವಾರ 102.55 ಕೋಟಿ ಆದಾಯ ಪಡೆದಿದೆ ಎಂದು ಅಧಿಕೃತವಾಗಿ ಘೋಷಿಸಲಾಗಿತ್ತು. ಶುಕ್ರವಾರ 80.72 ಕೋಟಿ, ಶನಿವಾರ 113 ಕೋಟಿ, ರವಿವಾರ 114.85 ಕೋಟಿ ಹೀಗೆ ಒಟ್ಟು 454.12 ಕೋಟಿ ಸಂಗ್ರಹವಾಗಿತ್ತು. ಸೋಮವಾರ ಗಳಿಕೆ 65 ಕೋಟಿಗೆ ಕುಸಿದಿದ್ದು, ಮುಂದಿನ ಎರಡು ದಿನಗಳಲ್ಲಿ ಕ್ರಮವಾಗಿ 56.6, 48.75 ಕೋಟಿ ಗಳಿಕೆ ಕಂಡಿತ್ತು. ಎಂಟನೇ ದಿನ 49.70 ಕೋಟಿಯೊಂದಿಗೆ ಒಟ್ಟಾರೆ ಗಳಿಕೆ 805.32 ಕೋಟಿ ತಲುಪಿದೆ. ಧುರಂಧರ್ ಚಿತ್ರ ಗಳಿಸಿದ್ದ 1007.85 ಕೋಟಿಯ ದಾಖಲೆಯನ್ನು ಮುರಿಯುವ ನಿಟ್ಟಿನಲ್ಲಿ ನಾಗಾಲೋಟ ಮುಂದುವರಿಸಿದೆ. 2025ರ ಚಿತ್ರ 840.20 ಕೋಟಿ ರೂಪಾಯಿಗಳನ್ನು ಭಾರತದಲ್ಲಿ ಗಳಿಸಿತ್ತು. ಸಾಗರೋತ್ತರ ದೇಶಗಳಲ್ಲೂ ಗಳಿಕೆಯಲ್ಲಿ ಈ ಚಿತ್ರ ಮುಂದಿದ್ದು, ಸುಮಾರು 261.92 ಕೋಟಿ ಗಳಿಸಿದೆ. ಧುರಂದರ್ ಚಿತ್ರ ಗಳಿಸಿದ್ದ 299.50 ಕೋಟಿ ಗಳಿಕೆಯ ಮೈಲುಗಲ್ಲಿನ ಸನಿಹದಲ್ಲಿದೆ.
ಸದ್ದಿಲ್ಲದೇ ನಡೆದೇ ಹೋಯ್ತಾ ಬಿಗ್ ಬಾಸ್ ಜೋಡಿಯ ಮದುವೆ ? ವೈರಲ್ ಫೋಟೊಗಳ ಅಸಲಿಯತ್ತೇನು ?
ಚಿತ್ರರಂಗದ ತಾರೆಯರ ವೈಯಕ್ತಿಕ ಬದುಕಿನ ಮೇಲೆ ಹಲವರ ನಿಗಾ ಇರುತ್ತೆ. ಕಣ್ತಪ್ಪಿಸಿ ಇಲ್ಲಿ ಏನೂ ಮಾಡಲು ಸಾಧ್ಯ ಇಲ್ಲ. ಯಾವುದನ್ನು ಕೂಡ ಹಲವು ದಿನಗಳವರೆಗೆ ಮುಚ್ಚಿಡಲು ಕೂಡ ಆಗುವುದಿಲ್ಲ. ಅದರಲ್ಲಿಯೂ ಈ ಡಿಜಿಟಲ್ ಯುಗದಲ್ಲಿ ಸೆಲೆಬ್ರಿಟಿಗಳ ಪರ್ಸನಲ್ ಲೈಫ್ ಮನರಂಜನೆಯ ಸರಕಾಗಿದೆ. ಪ್ರತಿ ಕ್ಷಣ ಕ್ಯಾಮರಾ ಇವರ ಹಿಂದೆಯೇ ಇರುತ್ತೆ. ಪ್ರತಿಯೊಂದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಖಯಾಲಿ
Dhurandhar 2 Box Office Day 8 ; ಬಾಕ್ಸಾಫೀಸ್ನಲ್ಲಿ ಧುರಂಧರ್ ಧಮಾಕ - ಜವಾನ್, ಛಾವಾ ದಾಖಲೆ ಧೂಳಿಪಟ
ಸಾಮಾನ್ಯವಾಗಿ ಹಬ್ಬ ಹರಿದಿನಗಳಂದು .. ರಜಾದಿನಗಳಂದು .. ವಿಶೇಷ ದಿನಗಳಂದು.. ಬಿಡುಗಡೆಯಾದ ಚಿತ್ರಕ್ಕೆ ಭಾರೀ ಡಿಮ್ಯಾಂಡ್ ಇರುತ್ತೆ. ಅದರಲ್ಲಿಯೂ ಆ ಚಿತ್ರದಲ್ಲಿ ಸೂಪರ್ ಸ್ಟಾರ್ಗಳಿದ್ದರೆ ಮುಗೀತು. ಚಿತ್ರಮಂದಿರದ ಎದುರು ಜನಜಂಗುಳಿ ಕಂಡು ಬರುತ್ತದೆ. ಚಿತ್ರ ಚೆನ್ನಾಗಿದೆಯಾ.. ? ಚೆನ್ನಾಗಿಲ್ವಾ ? ಯಾವುದನ್ನೂ ಲೆಕ್ಕಿಸದೇ ಮಜಾ ಮಾಡುವ ಉದ್ದೇಶದಿಂದ ರಜಾದಿನದಂದು ಬಂದ ಚಿತ್ರವನ್ನು ಅನೇಕರು ನೋಡುತ್ತಾರೆ. ಆದರೆ ಅಸಲಿ
\45 ವರ್ಷಗಳ ಬಳಿ ಹಾಗೆನೇ.. ಅದಕ್ಕೆ 20ರ ಹರೆಯದಲ್ಲೇ ಶುರು ಮಾಡ್ಬೇಕು\: ನಟಿ ಮೀನಾ
90ರ ದಶಕದಲ್ಲಿ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಮೆರೆದ ಬಾಲನಟಿ ಮೀನಾ, ಮೂರು ದಶಕಗಳಿಗೂ ಹೆಚ್ಚು ಕಾಲ ತಮ್ಮ ಸಿನಿ ಪಯಣದಲ್ಲಿ ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇಂದಿಗೂ ಸೌಂದರ್ಯ ಹಾಗೂ ನಗುವಿನಿಂದ ಗಮನ ಸೆಳೆಯುವ ಇವರು, ಎರಡನೇ ಇನ್ನಿಂಗ್ಸ್ನಲ್ಲೂ ಯಶಸ್ವಿ ಯೋಜನೆಗಳ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಸಾಮಾಜಿಕ
ವೀಕೆಂಡ್ ಬಂತು ಅಂದ್ರೆ ಸಾಕು, ಮನೆಯವರೆಲ್ಲಾ ಕೂತು ನೋಡಲು ಒಳ್ಳೆ ಸಿನಿಮಾ ಹುಡುಕುವುದೇ ಒಂದು ದೊಡ್ಡ ಕೆಲಸ. ವಯಸ್ಸಿಗೆ ತಕ್ಕ ಕಥೆ, ಭಾಷೆ ಮತ್ತು ಅವಧಿ - ಹೀಗೆ ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ಸಿನಿಮಾ ಆಯ್ಕೆ ಮಾಡುವುದು ಸುಲಭವಲ್ಲ. ಸದ್ಯ ಭಾರತೀಯ ಒಟಿಟಿ ಪ್ಲಾಟ್ಫಾರ್ಮ್ಗಳಲ್ಲಿ ಸಾಲು ಸಾಲು ಮಲಯಾಳಂ ಸಿನಿಮಾಗಳು ಸದ್ದಿಲ್ಲದೆ ಎಂಟ್ರಿ ಕೊಡುತ್ತಿವೆ. ಹೊಸದಾಗಿ ಸ್ಟ್ರೀಮಿಂಗ್ ಆರಂಭಿಸಿರುವ
ಟೀಸರ್ನಿಂದಲೇ ಡಿ ಬಾಸ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದ 'ಬಾಸ್'; ಈಗ ಚಿತ್ರದ ಮೊದಲ ಹಾಡು ರಿಲೀಸ್
ಸಿರಿ ಪ್ರೊಡಕ್ಷನ್ಸ್ ನಿರ್ಮಾಣದ, ವಿ.ಲವ ನಿರ್ದೇಶನದಲ್ಲಿ ತನುಷ್ ಶಿವಣ್ಣ ನಾಯಕನಾಗಿ ನಟಿಸಿರುವ ಬಾಸ್ ಚಿತ್ರಕ್ಕಾಗಿ ಪ್ರಮೋದ್ ಮರವಂತೆ ಬರೆದಿದಿರುವ ಏನಿದೆಯೊ ನಿನ್ನ ಮಾಯೆ ಎಂಬ ಹಾಡಿನ ಲಿರಿಕಲ್ ವಿಡಿಯೋ ಇತ್ತೀಚೆಗೆ ಬಿಡುಗಡೆಯಾಯಿತು. ಹಾಡು ಬಿಡುಗಡೆ ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು. ಕ್ರೈಮ್ ಥ್ರಿಲ್ಲರ್ ಕಥೆ ಹೊಂದಿರುವ ಬಾಸ್ ಚಿತ್ರದ ಮೊದಲ ಹಾಡು ಬಿಡುಗಡೆಯಾಗಿದೆ. ಪ್ರಮೋದ್ ಮರವಂತೆ ಬರೆದಿರುವ
ತಾಯಿಯ ತಲೆ ಕಡಿಯಲು ಮುಂದಾದ ಪರಶುರಾಮ;'ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ' ಕಥೆಯಲ್ಲಿ ರೋಚಕ ತಿರುವು
ಕನ್ನಡ ಕಿರುತೆರೆಯ ಇತಿಹಾಸದಲ್ಲಿ ಪೌರಾಣಿಕ ಧಾರವಾಹಿಗಳಿಗೆ ಯಾವಾಗಲೂ ವಿಶೇಷ ಸ್ಥಾನವಿದೆ. ಅದರಲ್ಲೂ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ' ಧಾರವಾಹಿ ಈಗ ಅತ್ಯಂತ ಕುತೂಹಲಕಾರಿ ಘಟ್ಟಕ್ಕೆ ಬಂದು ತಲುಪಿದೆ. ಈ ಧಾರವಾಹಿಯು ಈಗಾಗಲೇ 1100ಕ್ಕೂ ಹೆಚ್ಚು ಸಂಚಿಕೆಗಳನ್ನು ಪೂರೈಸಿ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ. ಪ್ರತಿದಿನವೂ ಹೊಸ ಹೊಸ ತಿರುವುಗಳ ಮೂಲಕ ವೀಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ
ಇಂದಿರಾ ಕೆನ್ನೆಗೆ ಸಂಜಯ್ ಗಾಂಧಿ ಬಾರಿಸಲು ಗುಂಡೂರಾವ್ ಕಾರಣ? 'ಧುರಂಧರ್ 2'ಗೆ ಕನೆಕ್ಟ್ ಮಾಡಿದ ಆರ್ಜಿವಿ
'ಧುರಂಧರ್ 2' ಸಿನಿಮಾ ಬಾಕ್ಸಾಫೀಸ್ನಲ್ಲಿ ದಾಖಲೆಗಳ ಮೇಲೆ ದಾಖಲೆಗಳನ್ನು ಬರೆಯುತ್ತಿದೆ. ಈ ಮಧ್ಯೆ ಸಿನಿಮಾದಲ್ಲಿ ತೋರಿಸಲಾದ ಸನ್ನಿವೇಶಗಳ ಬಗ್ಗೆ ಪ್ರಶ್ನೆ ಮಾಡುವವರು ಕೂಡ ಹೆಚ್ಚಾಗಿದ್ದಾರೆ. ಈ ಮಧ್ಯೆ ನಿರ್ದೇಶಕ ರಾಮ್ ಗೋಪಾಲ್ ವರ್ಮಾ 'ಧುರಂಧರ್ 2' ಸಿನಿಮಾದ ಬೆಂಬಲಕ್ಕೆ ನಿಂತಿದ್ದಾರೆ. ಆದಿತ್ಯ ಧರ್ ಫಿಲ್ಮ್ ಮೇಕಿಂಗ್ ಶೈಲಿಗೆ ಮರುಳಾಗಿದ್ದಾರೆ. 'ಧುರಂಧರ್ 2' ಸಿನಿಮಾವನ್ನು ಸಮರ್ಥಿಸಿಕೊಂಡಿರುವ ಆರ್ಜಿವಿ ಕರ್ನಾಟಕದಲ್ಲಿ
\ವೀರಪ್ಪನ್ ಕಿಡ್ನಾಪ್ನಿಂದ ಪ್ರತಿಯೊಂದು ಡೀಲ್ ಮಾಡಿದ್ದು ನಾನೇ\; ಸಂಚಲನ ಸೃಷ್ಟಿಸಿದ ಪುನೀತ್ ಆಪ್ತ
ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಅಗಲಿದ ನೋವಿನಿಂದ ಇನ್ನೂ ಅವರ ಅಭಿಮಾನಿಗಳು ಹೊರ ಬಂದಿಲ್ಲ. ಇನ್ನು ಅವರೊಂದಿಗೆ ಇದ್ದವರ ಪಾಡು ಏನಾಗಿರಬಹುದು? ಊಹಿಸುವುದಕ್ಕೂ ಕಷ್ಟ. ಅಪ್ಪು ಆರಂಭದ ದಿನಗಳಿಂದ ಹೆಚ್ಚು ಕಡಿಮೆ ಕೊನೆಯ ದಿನಗಳವರೆಗೂ ಜೊತೆಯಲ್ಲಿ ಇದ್ದವರು ಎನ್ಎಸ್ ರಾಜ್ಕುಮಾರ್. ಪುನೀತ್ ಒಪ್ಪಿಕೊಂಡ ಪ್ರತಿಯೊಂದು ಸಿನಿಮಾದ ಹಿಂದೆನೂ ಅವರೇ ಇರುತ್ತಿದ್ದರು. ಯಾರೇ ನಿರ್ಮಾಪಕರು ಇರಲಿ, ನಿರ್ದೇಶಕರು ಇರಲಿ ಪುನೀತ್
ಅತಿ ಹೆಚ್ಚು ಗಳಿಕೆ ಕಂಡ ಭಾರತೀಯ ಚಿತ್ರಗಳ ಪಟ್ಟಿಯಲ್ಲಿ 10ನೇ ಸ್ಥಾನಕ್ಕೇರಿದ 'ಧುರಂಧರ್- 2'
ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ ಎನ್ನುವಂತೆ ಹಲವು ಬಾಕ್ಸಾಫೀಸ್ ದಾಖಲೆಗಳನ್ನು ಒಂದೇ ವಾರದಲ್ಲಿ 'ಧುರಂಧರ್- 2' ಚಿತ್ರ ಮುರಿದಿದೆ. 7 ದಿನಕ್ಕೆ 1000 ಕೋಟಿ ರೂ. ಕ್ಲಬ್ ಸೇರಿ ಸಿನಿಮಾ ಸಂಚಲನ ಸೃಷ್ಟಿಸಿದೆ. ಭಾರತೀಯ ಚಿತ್ರರಂಗದಲ್ಲಿ ಅತಿಹೆಚ್ಚು ಗಳಿಕೆ ಕಂಡ ಸಿನಿಮಾಗಳ ಪಟ್ಟಿಯಲ್ಲಿ 10ನೇ ಸ್ಥಾನಕ್ಕೇರಿದೆ. 'ಕಾಂತಾರ-1' ಹಾಗೂ 'ಅನಿಮಲ್' ಚಿತ್ರಗಳ ಲೈಫ್ಟೈಮ್ ಕಲೆಕ್ಷನ್ ದಾಖಲೆಯನ್ನು ರಣ್ವೀರ್
ಅವಳ ಜೊತೆ ನಾನಿನ್ನೂ ಬಾಳಲಾರೆ, ಪ್ಲೀಸ್ ಡಿವೋರ್ಸ್ ಕೊಡಿ ; ನ್ಯಾಯಾಲಯದಲ್ಲಿ ಪಟ್ಟು ಹಿಡಿದ ಖ್ಯಾತ ಸ್ಟಾರ್
ಹಿಂದೆ ಒಂದು ಕಾಲ ಇತ್ತು. ಆ ಕಾಲದಲ್ಲಿ ಗಂಡ ಹೆಂಡ್ತಿ ಜಗಳ ಉಂಡು ಮಲಗುವ ತನಕ ಎಂಬ ಗಾದೆ ಮಾತು ಅಕ್ಷರಶಃ ಪಾಲನೆಯಾಗುತ್ತಿತ್ತು. ಎಷ್ಟೇ ಸಮಸ್ಯೆ ಇದ್ದರೂ.. ಭಿನ್ನಾಭಿಪ್ರಾಯ ಇದ್ದರೂ ಕೂಡ ದಾಂಪತ್ಯದಲ್ಲಿ ಮನವೊಲಿಸಿ.. ಕಾಳಜಿ ತೋರಿಸಿ.. ಕ್ಷಮೆಯನ್ನು ಕೇಳಿ... ದಾಂಪತ್ಯದ ಬಂಡಿಯನ್ನು ಎಳೆಯುತ್ತಿದ್ದರು. ಆದರೆ.. ಈಗ ಕಾಲ ಬದಲಾಗಿದೆ.ಬದಲಾದ ಈ ಕಾಲದಲ್ಲಿ.. ಗಂಡ ಹೆಂಡತಿ ಜಗಳ
ಒಂದೇ ವಾರಕ್ಕೆ ಮುಗೀತು 'ಉಸ್ತಾದ್ ಭಗತ್ ಸಿಂಗ್' ಆಟ; ಹೀನಾಯವಾಗಿ ಸೋಲುಂಡ ಪವನ್ ಕಲ್ಯಾಣ್
ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಸಿನಿಮಾಗಳಿಂದ ದೂರ ಇರುವುದೇ ಉತ್ತಮ ಎಂದು ಅಭಿಮಾನಿಗಳು ಕಾಮೆಂಟ್ ಮಾಡುವಂತಾಗಿದೆ. ಕಳೆದ ವಾರ ಬಿಡುಗಡೆಯಾಗಿದ್ದ 'ಉಸ್ತಾದ್ ಭಗತ್ ಸಿಂಗ್' ದಯನೀಯ ಸೋಲು ಕಂಡಿರುವುದೇ ಇದಕ್ಕೆ ಕಾರಣ. ಹರೀಶ್ ಶಂಕರ್ ನಿರ್ದೇಶನದ ಆಕ್ಷನ್ ಥ್ರಿಲ್ಲರ್ ಸಿನಿಮಾ ಬಾಕ್ಸಾಫೀಸ್ನಲ್ಲಿ ಮುಗ್ಗರಿಸಿದೆ. ಹೆಚ್ಚು ಕಮ್ಮಿ ಒಂದೇ ವಾರಕ್ಕೆ 'ಉಸ್ತಾದ್ ಭಗತ್ ಸಿಂಗ್' ಸಿನಿಮಾ ಪ್ರದರ್ಶನ ಬಹುತೇಕ

27 C