ಮೊದಲ ಟೆಸ್ಟ್: ಭಾರತ ವಿರುದ್ಧ ಇಂಗ್ಲೆಂಡ್ ಜಯಭೇರಿ
PC | X ಲೀಡ್ಸ್, ಜೂ.24: ಆರಂಭಿಕ ಆಟಗಾರರಾದ ಬೆನ್ ಡಕೆಟ್(149 ರನ್, 170 ಎಸೆತ, 21 ಬೌಂಡರಿ, 1 ಸಿಕ್ಸರ್)ಹಾಗೂ ಝ್ಯಾಕ್ ಕ್ರಾಲಿ(65 ರನ್, 126 ಎಸೆತ, 7 ಬೌಂಡರಿ)ಭರ್ಜರಿ ಆರಂಭ, ಜೋ ರೂಟ್ ಜವಾಬ್ದಾರಿಯುತ ಬ್ಯಾಟಿಂಗ್(ಔಟಾಗದೆ 53, 84 ಎಸೆತ, 6 ಬೌಂಡರಿ) ನೆರವಿನಿಂದ ಇಂಗ್ಲೆಂಡ್ ಕ್ರಿಕೆಟ್ ತಂಡವು ಭಾರತ ತಂಡದ ವಿರುದ್ಧದ ಮೊದಲ ಟೆಸ್ಟ್ ಪಂದ್ಯವನ್ನು 5 ವಿಕೆಟ್ ಅಂತರದಿಂದ ಗೆದ್ದುಕೊಂಡಿದೆ. ಗೆಲ್ಲಲು 371 ರನ್ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ತಂಡವು 82 ಓವರ್ಗಳಲ್ಲಿ 5 ವಿಕೆಟ್ಗಳ ನಷ್ಟಕ್ಕೆ 373 ರನ್ ಗಳಿಸಿದೆ. ಜೋ ರೂಟ್(53 ರನ್, 84 ಎಸೆತ, 6 ಬೌಂಡರಿ)ಹಾಗೂ ಜೇಮೀ ಸ್ಮಿತ್(ಔಟಾಗದೆ 44, 55 ಎಸೆತ, 4 ಬೌಂಡರಿ, 2 ಸಿಕ್ಸರ್) 6ನೇ ವಿಕೆಟ್ಗೆ ಮುರಿಯದ ಜೊತೆಯಾಟದಲ್ಲಿ 88 ಎಸೆತಗಳಲ್ಲಿ 71 ರನ್ ಸೇರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. 4ನೇ ಇನಿಂಗ್ಸ್ನಲ್ಲಿ 371 ರನ್ ಗುರಿ ಬೆನ್ನಟ್ಟುವ ಮೂಲಕ ಇಂಗ್ಲೆಂಡ್ ಮಹತ್ವದ ಸಾಧನೆ ಮಾಡಿತು. ಭಾರತ ಎರಡೂ ಇನಿಂಗ್ಸ್ಗಳಲ್ಲಿ ಒಟ್ಟು 5 ಶತಕಗಳನ್ನು ಸಿಡಿಸಿ 800ಕ್ಕೂ ಅಧಿಕ ರನ್ ಗಳಿಸಿದರೂ ಗೆಲುವು ದಾಖಲಿಸಲು ಸಾಧ್ಯವಾಗಲಿಲ್ಲ. ಪಂತ್ ಅವರು ಎರಡೂ ಇನಿಂಗ್ಸ್ಗಳಲ್ಲಿ ಶತಕ ಸಿಡಿಸಿದ್ದು ವ್ಯರ್ಥವಾಯಿತು. ಶತಕವೀರ ಬೆನ್ ಡಕೆಟ್ ಹಾಗೂ ಹ್ಯಾರಿ ಬ್ರೂಕ್ ಅವರು ಶಾರ್ದುಲ್ ಠಾಕೂರ್ ಬೌಲಿಂಗ್ನಲ್ಲಿ ಸತತ ಎಸೆತಗಳಲ್ಲಿ ಔಟಾದರು. ಆಗ 5ನೇ ವಿಕೆಟ್ಗೆ 49 ರನ್ ಸೇರಿಸಿ ರೂಟ್ ಹಾಗೂ ನಾಯಕ ಬೆನ್ ಸ್ಟೋಕ್ಸ್(33 ರನ್, 51 ಎಸೆತ) ತಂಡವನ್ನು ಆಧರಿಸಿದರು. ಇದಕ್ಕೂ ಮೊದಲು ವಿಕೆಟ್ ನಷ್ಟವಿಲ್ಲದೆ 21 ರನ್ನಿಂದ 5ನೇ ದಿನದಾಟ ಆರಂಭಿಸಿದ ಇಂಗ್ಲೆಂಡ್ ತಂಡಕ್ಕೆ ಕ್ರಾಲಿ ಹಾಗೂ ಡಕೆಟ್ ಭರ್ಜರಿ ಆರಂಭ ಒದಗಿಸಿದರು. ಡಕೆಟ್ ಹಾಗೂ ಕ್ರಾಲಿ 4ನೇ ಬಾರಿ ಶತಕದ ಜೊತೆಯಾಟ ನಡೆಸಿದರು. 2000ರ ನಂತರ ಮೊದಲ ಬಾರಿ ಈ ಸಾಧನೆ ಮಾಡಿದ ಇಂಗ್ಲೆಂಡ್ ಓಪನರ್ ಎನಿಸಿಕೊಂಡರು. ಅಲಿಸ್ಟರ್ ಕುಕ್ ಹಾಗೂ ಆಂಡ್ರೂ ಸ್ಟ್ರಾಸ್ ಈ ಸಾಧನೆ ಮಾಡಿದ್ದರು. ಈ ಜೋಡಿ 256 ಎಸೆತಗಳಲ್ಲಿ 188 ರನ್ ಜೊತೆಯಾಟ ನಡೆಸಿತು. ಕ್ರಾಲಿ ಹಾಗೂ ಓಲಿ ಪೋಪ್(8 ರನ್)ಬೆನ್ನುಬೆನ್ನಿಗೆ ಔಟಾದರು. ಈ ಇಬ್ಬರನ್ನು ಕನ್ನಡಿಗ ಪ್ರಸಿದ್ಧ ಕೃಷ್ಣ ಪೆವಿಲಿಯನ್ಗೆ ಕಳುಹಿಸಿದರು. ಡಕೆಟ್ ಹಾಗೂ ರೂಟ್ 3ನೇ ವಿಕೆಟ್ಗೆ 59 ಎಸೆತಗಳಲ್ಲಿ 47 ರನ್ ಸೇರಿಸಿದರು. ಕೊನೆಗೂ ಶಾರ್ದುಲ್ ಅವರು ಡಕೆಟ್ ವಿಕೆಟನ್ನು ಉರುಳಿಸಿದರು. ಪ್ರಸಿದ್ಧ ಕೃಷ್ಣ(2-92)ಹಾಗೂ ಶಾರ್ದುಲ್ ಠಾಕೂರ್(2-51)ತಲಾ ಎರಡು ವಿಕೆಟ್ಗಳನ್ನು ಪಡೆದರು. ಸ್ಕೋರ್ ವಿವರ ಭಾರತ ಮೊದಲ ಇನಿಂಗ್ಸ್: 471 ರನ್ ಇಂಗ್ಲೆಂಡ್ ಮೊದಲ ಇನಿಂಗ್ಸ್: 465 ರನ್ ಭಾರತ ಎರಡನೇ ಇನಿಂಗ್ಸ್: 364 ರನ್ಗೆ ಆಲೌಟ್ ಇಂಗ್ಲೆಂಡ್ 2ನೇ ಇನಿಂಗ್ಸ್: 82 ಓವರ್ಗಳಲ್ಲಿ 373/5 ಝ್ಯಾಕ್ ಕ್ರಾಲಿ ಸಿ ರಾಹುಲ್ ಬಿ ಪ್ರಸಿದ್ಧ ಕೃಷ್ಣ 65 ಬೆನ್ ಡಕೆಟ್ ಸಿ ಸಬ್ ಬಿ ಠಾಕೂರ್ 149 ಓಲಿ ಪೋಪ್ ಬಿ ಪ್ರಸಿದ್ಧ ಕೃಷ್ಣ 8 ಜೋ ರೂಟ್ ಔಟಾಗದೆ 53 ಹ್ಯಾರಿ ಬ್ರೂಕ್ ಸಿ ಪಂತ್ ಬಿ ಠಾಕೂರ್ 0 ಬೆನ್ ಸ್ಟೋಕ್ಸ್ ಸಿ ಗಿಲ್ ಬಿ ಜಡೇಜ 33 ಜೇಮೀ ಸ್ಮಿತ್ ಔಟಾಗದೆ 44 ಇತರ 21 ವಿಕೆಟ್ ಪತನ: 1-188, 2-206, 3-253, 4-253, 5-302 ಬೌಲಿಂಗ್ ವಿವರ ಜಸ್ಪ್ರಿತ್ ಬುಮ್ರಾ 19-3-57-0 ಮುಹಮ್ಮದ್ ಸಿರಾಜ್ 14-1-51-0 ರವೀಂದ್ರ ಜಡೇಜ 24-1-104-1 ಪ್ರಸಿದ್ಧ ಕೃಷ್ಣ 15-0-92-2 ಶಾರ್ದುಲ್ ಠಾಕೂರ್ 10-0-51-2
India vs England: ಯಂಗ್ ಇಂಡಿಯಾಗೆ ಸೋಲಿನ ಆರಂಭ! ದಾಖಲೆ ರನ್ ಚೇಸ್ ಮಾಡಿ ಗೆದ್ದು ಬೀಗಿದ ಆಂಗ್ಲರು
ಬೆನ್ ಡಕೆಟ್ ಸಿಡಿಸಿದ ಸ್ಫೋಟಕ ಶತಕದ ನೆರವಿನಿಂದ ಇಂಗ್ಲೆಂಡ್ ತಂಡ ಭಾರತದ ವಿರುದ್ಧ ಹೆಡಿಂಗ್ಲೆಯಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯವನ್ನ 5 ವಿಕೆಟ್ಗಳಿಂದ ಗೆದ್ದು 5 ಪಂದ್ಯಗಳ ಸರಣಿಯನ್ನ 1-0ಯಲ್ಲಿ ಮುನ್ನಡೆ ಸಾಧಿಸಿದೆ.
‘ಒಂದು ಕಡೆಯಿಂದ ಮುಹಮ್ಮದ್, ಇನ್ನೊಂದು ಕಡೆಯಿಂದ ಕೃಷ್ಣ’: ಶುಭಮನ್ ಗಿಲ್ ರ ಸ್ಟಂಪ್ ಮೈಕ್ ಹೇಳಿಕೆ ವೈರಲ್
Screengrab from the video | PC: X ಲೀಡ್ಸ್: ಇಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ಪ್ರಥಮ ಟೆಸ್ಟ್ ನ ಐದನೆಯ ದಿನದಾಟದಂದು ಭಾರತ ತಂಡದ ನಾಯಕ ಶುಭಮನ್ ಗಿಲ್ ಅವರ ಲಘು ಧಾಟಿಯ ಸ್ಪಂಪ್ ಮೈಕ್ ಹೇಳಿಕೆಯೊಂದು ಎಲ್ಲರ ಗಮನ ಸೆಳೆದಿದ್ದು, ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಪ್ರಥಮ ಟೆಸ್ಟ್ ಪಂದ್ಯದ ಅಂತಿಮ ದಿನವಾದ ಮಂಗಳವಾರ ಇಂಗ್ಲೆಂಡ್ ತಂಡದ ವಿಕೆಟ್ ಪಡೆಯಲು ಒಂದು ಕಡೆಯಿಂದ ಮುಹಮ್ಮದ್ ಸಿರಾಜ್ ಹಾಗೂ ಮತ್ತೊಂದು ಕಡೆಯಿಂದ ಪ್ರಸಿದ್ಧ್ ಕೃಷ್ಣ ಬೌಲಿಂಗ್ ದಾಳಿ ನಡೆಸುವಾಗ, “ಒಂದು ಕಡೆ ಮುಹಮ್ಮದ್, ಮತ್ತೊಂದು ಕಡೆ ಕೃಷ್ಣ ಸರ್ವನಾಶ ಮಾಡಲಿದ್ದಾರೆ” ಎಂದು ತಮ್ಮ ತಂಡದ ಬೌಲರ್ ಗಳು ಇಂಗ್ಲೆಂಡ್ ತಂಡದ ಬ್ಯಾಟಿಂಗ್ ಸರದಿಯನ್ನು ಧೂಳೀಪಟ ಮಾಡಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಲು ಅವರು ಅವರಿಬ್ಬರ ಹೆಸರುಗಳನ್ನು ಹಾಸ್ಯಮಯವಾಗಿ ಉಲ್ಲೇಖಿಸಿರುವುದು ಸ್ಟಂಪ್ ಮೈಕ್ ನಲ್ಲಿ ಸೆರೆಯಾಗಿದೆ. ಪಂದ್ಯವು ತೀವ್ರ ಸೆಣಸಾಟದ ಹಂತದಲ್ಲಿದ್ದಾಗ, ಶುಭಮನ್ ಗಿಲ್ ಅವರು “ಒಂದು ಕಡೆ ಮುಹಮ್ಮದ್, ಮತ್ತೊಂದು ಕಡೆ ಕೃಷ್ಣ” ಎಂಬ ಲಘು ಧಾಟಿಯ ಹಾಸ್ಯವು ಸಾಮಾಜಿಕ ಮಾಧ್ಯಮಗಳಲ್ಲಿನ ಅಭಿಮಾನಿಗಳ ಗಮನವನ್ನು ಸೆಳೆದಿದ್ದು, ಅವರು ಶುಭಮನ್ ಗಿಲ್ ರ ಹಾಸ್ಯ ಪ್ರವೃತ್ತಿಯನ್ನು ಪ್ರಶಂಸಿಸಿದ್ದಾರೆ. ಒಂದು ಬದಿಯಲ್ಲಿ ಮುಹಮ್ಮದ್ ಸಿರಾಜ್ ದಾಳಿ ನಡೆಸುತ್ತಿದ್ದಾಗ, ಮತ್ತೊಂದು ಬದಿಯಿಂದ ಜಸ್ಪ್ರೀತ್ ಬುಮ್ರಾ ಬದಲು ಪ್ರಸಿದ್ಧ್ ಕೃಷ್ಣರನ್ನು ಬೌಲಿಂಗ್ ದಾಳಿಗೆ ಇಳಿಸಿದ ವೇಳೆ ಶುಭಮನ್ ಗಿಲ್ ರಿಂದ ಈ ಹೇಳಿಕೆ ಹೊರ ಬಿದ್ದಿದೆ. ಪಂದ್ಯದ ಕೊನೆಯ ದಿನವಾದ ಇಂದು ಸವಾಲಿನ 371 ರನ್ ಗಳ ಗುರಿಯನ್ನು ಬೆನ್ನಟ್ಟಿರುವ ಇಂಗ್ಲೆಂಡ್ ತಂಡ, ಆರಂಭಿಕ ಬ್ಯಾಟರ್ ಗಳಾದ ಬೆನ್ ಡಕೆಟ್ ಹಾಗೂ ಝ್ಯಾಕ್ ಕ್ರಾಲೆ ಅವರ ಮುರಿಯದ ಅಮೋಘ ಶತಕದಾಟದಿಂದ ಭಾರತೀಯ ಬೌಲರ್ ಗಳನ್ನು ಕಂಗೆಡಿಸಿದ್ದಾಗ, ಶುಭಮನ್ ಗಿಲ್ ನೀಡಿದ ಈ ಹೇಳಿಕೆಯು ಅಂತರ್ಜಾಲದಲ್ಲಿ ಮಂದಹಾಸ ತರಿಸಿದ್ದರೂ, ಮೈದಾನದಲ್ಲಿದ್ದ ಭಾರತೀಯ ತಂಡದ ಆಟಗಾರರಿಗೆ ಅಂತಹ ಹುರುಪನ್ನೇನೂ ಮೂಡಿಸಲಿಲ್ಲ. ಇತ್ತೀಚಿನ ವರದಿಗಳ ಪ್ರಕಾರ, ಇಂಗ್ಲೆಂಡ್ ತಂಡ 66 ಓವರ್ ಗಳಲ್ಲಿ ನಾಲ್ಕು ವಿಕೆಟ್ ಗಳ ನಷ್ಟಕ್ಕೆ 291 ರನ್ ಗಳಿಸಿದ್ದು, ಗೆಲುವಿಗಾಗಿ ಇನ್ನುಳಿದ 30 ಓವರ್ ಗಳಲ್ಲಿ 80 ರನ್ ಮಾತ್ರ ಗಳಿಸಬೇಕಿದೆ. ಹೀಗಾಗಿ ಪಂದ್ಯ ಕುತೂಹಲಕರ ಘಟ್ಟ ತಲುಪಿದೆ. Gill pic.twitter.com/JbY0tb1W7t — Div (@div_yumm) June 24, 2025
ವಿಂಬಲ್ಡನ್ ಟೆನಿಸ್ ಟೂರ್ನಿಯ 150ನೇ ವಾರ್ಷಿಕೋತ್ಸವ; ಆ್ಯಂಡಿ ಮರ್ರೆ ಪ್ರತಿಮೆ ಅನಾವರಣಕ್ಕೆ ಚಿಂತನೆ
Photo : AFP ಲಂಡನ್, ಜೂ.24: ಹುಲ್ಲುಹಾಸಿನ ಟೆನಿಸ್ ಪಂದ್ಯಾವಳಿ ವಿಂಬಲ್ಡನ್ ಚಾಂಪಿಯನ್ಶಿಪ್ 2027ರಲ್ಲಿ 150ನೇ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳಲಿದ್ದು, ಈ ವೇಳೆ ಎರಡು ಬಾರಿಯ ವಿಂಬಲ್ಡನ್ ಚಾಂಪಿಯನ್ ಆ್ಯಂಡಿ ಮರ್ರೆ ಅವರ ಪ್ರತಿಮೆಯನ್ನು ಅನಾವರಣಗೊಳಿಸಲು ಪಂದ್ಯಾವಳಿಯ ಆಯೋಜಕರು ಚಿಂತನೆ ನಡೆಸುತ್ತಿದ್ದಾರೆ. ತಮ್ಮ ಪ್ರತಿಮೆಯನ್ನು ವಿನ್ಯಾಸಗೊಳಿಸಲು ಮರ್ರೆ ಸಹಾಯ ಮಾಡಲಿದ್ದಾರೆ. 2027ರ ಆವೃತ್ತಿಯ ಟೂರ್ನಿಯ ಸಮಯದಲ್ಲಿ ಬ್ರಿಟನ್ನ ಶ್ರೇಷ್ಠ ಆಟಗಾರನ ಪ್ರತಿಮೆಯನ್ನು ಅನಾವರಣಗೊಳಿಸುವ ಗುರಿಯನ್ನು ಇಟ್ಟುಕೊಳ್ಳಲಾಗಿದೆ ಎಂದು ಸಂಘಟಕರು ಮಂಗಳವಾರ ತಿಳಿಸಿದ್ದಾರೆ. 2013ರಲ್ಲಿ ವಿಂಬಲ್ಡನ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ನೊವಾಕ್ ಜೊಕೊವಿಕ್ ಅವರನ್ನು ಸೋಲಿಸಿದ್ದ ಮರ್ರೆ 77 ವರ್ಷಗಳ ಬಳಿಕ ಬ್ರಿಟನ್ ದೇಶಕ್ಕೆ ಪುರುಷರ ಸಿಂಗಲ್ಸ್ ಪ್ರಶಸ್ತಿ ಗೆದ್ದುಕೊಟ್ಟಿದ್ದರು. 2016ರ ಫೈನಲ್ನಲ್ಲಿ ಮಿಲೊಸ್ ರಾವೊನಿಕ್ರನ್ನು ಮಣಿಸಿದ್ದ ಸ್ಕಾಟ್ಲ್ಯಾಂಡ್ ಆಟಗಾರ ಮರ್ರೆ 2ನೇ ಬಾರಿ ವಿಂಬಲ್ಡನ್ ಪ್ರಶಸ್ತಿ ಜಯಿಸಿದ್ದರು. ಇದು ಅವರು 3ನೇ ಗ್ರ್ಯಾನ್ಸ್ಲಾಮ್ ಪ್ರಶಸ್ತಿಯಾಗಿತ್ತು. 14 ಫ್ರೆಂಚ್ ಓಪನ್ ಪ್ರಶಸ್ತಿಗಳನ್ನು ಗೆದ್ದಿರುವ ರಫೆಲ್ ನಡಾಲ್ ಅವರನ್ನು ಈ ತಿಂಗಳು ಮರ್ರೆ ಉಪಸ್ಥಿತಿಯಲ್ಲಿ ಪ್ಯಾರಿಸ್ನಲ್ಲಿ ಸನ್ಮಾನಿಸಿದ ರೀತಿಯು ಈ ಪ್ರತಿಮೆ ನಿರ್ಮಾಣದ ಯೋಜನೆಗೆ ಸ್ಫೂರ್ತಿಯಾಗಿದೆ. ‘‘ಪ್ಯಾರಿಸ್ನ ರೋಲ್ಯಾಂಡ್ ಗ್ಯಾರೋಸ್ನಲ್ಲಿ ರಾಫಾ ನಡಾಲ್ ಅವರಿಗೆ ಆ ರೀತಿಯ ಫಲಕವನ್ನು ಅನಾವರಣಗೊಳಿಸಿದ್ದನ್ನು ನಾವು ನೋಡಿದ್ದೇವೆ. ಅದು ತುಂಬಾ ವಿಶೇಷವಾಗಿತ್ತು. ಆಗ ನಾವು ಆ್ಯಂಡಿ ಮರ್ರೆಗೆ ಏನು ಬೇಕು ಎಂದು ಯೋಚಿಸಿದೆವು’’ ಎಂದು ಆಲ್ ಇಂಗ್ಲೆಂಡ್ ಕ್ಲಬ್ ಅಧ್ಯಕ್ಷೆ ಡೆಬ್ಬಿ ಜೆವಾನ್ಸ್ ಹೇಳಿದ್ದಾರೆ. ಮರ್ರೆಗಿಂತ ಮೊದಲು 1936ರಲ್ಲಿ ಬ್ರಿಟನ್ನ ಪುರುಷರ ಚಾಂಪಿಯನ್ ಆಗಿದ್ದ ಫ್ರೆಡ್ ಪೆರ್ರಿ ಅವರ ಕಂಚಿನ ಪ್ರತಿಮೆಯನ್ನು 1984ರಲ್ಲಿ ಅನಾವರಣಗೊಳಿಸಲಾಗಿತ್ತು. 2025ರ ಆವೃತ್ತಿಯ ವಿಂಬಲ್ಡನ್ ಚಾಂಪಿಯನ್ಶಿಪ್ ಸೋಮವಾರದಿಂದ ಆರಂಭವಾಗಲಿದೆ.�
ದುಲೀಪ್ ದೋಶಿ ಗೌರವಾರ್ಥ ಕಪ್ಪು ಪಟ್ಟಿ ಧರಿಸಿ ಆಡಿದ ಭಾರತ, ಇಂಗ್ಲೆಂಡ್ ಆಟಗಾರರು
Photo : BCCI- X ಲೀಡ್ಸ್, ಜೂ.24: ಸೋಮವಾರ ತನ್ನ 77ನೇ ವಯಸ್ಸಿನಲ್ಲಿ ನಿಧನರಾಗಿರುವ ಭಾರತದ ಮಾಜಿ ಸ್ಪಿನ್ನರ್ ದುಲಿಪ್ ದೋಶಿ ಗೌರವಾರ್ಥ ಲೀಡ್ಸ್ನ ಹೆಡ್ಡಿಂಗ್ಲೆಯಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ನ 5ನೇ ದಿನವಾದ ಮಂಗಳವಾರ ಭಾರತ ಹಾಗೂ ಇಂಗ್ಲೆಂಡ್ ಕ್ರಿಕೆಟ್ ಆಟಗಾರರು ಕೈಗೆ ಕಪ್ಪು ಧರಿಸಿ ಆಡಿದರು. ಲಂಡನ್ನಲ್ಲಿ ಹೃದಯಾಘಾತಕ್ಕೊಳಗಾಗಿ ದುಲಿಪ್ ನಿಧನರಾಗಿದ್ದು, ತಂಡಗಳು ಒಂದು ನಿಮಿಷ ಮೌನ ಪ್ರಾರ್ಥನೆ ನಡೆಸಿದವು. ‘ಸೋಮವಾರ ನಿಧನರಾದ ಮಾಜಿ ಭಾರತೀಯ ಕ್ರಿಕೆಟಿಗ ದಿಲಿಪ್ ದೋಶಿ ಅವರ ಸ್ಮರಣಾರ್ಥ ಇಂದು ಉಭಯ ತಂಡಗಳ ಆಟಗಾರರು ಕೈಗೆ ಕಪ್ಪುಪಟ್ಟಿ ಧರಿಸಿ ಆಡಿವೆ. 5ನೇ ದಿನದಾಟ ಆರಂಭಕ್ಕೂ ಮುನ್ನ ತಂಡಗಳು ಒಂದು ನಿಮಿಷ ಮೌನ ಪ್ರಾರ್ಥನೆ ನಡೆಸಿದವು’’ ಎಂದು ಬಿಸಿಸಿಐ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿದೆ. ಬೆಕ್ಹ್ಯಾಮ್ನ ಕೆಂಟ್ ಕೌಂಟಿ ಕ್ರಿಕೆಟ್ ಗ್ರೌಂಡ್ನಲ್ಲಿ ಭಾರತದ ಮಹಿಳಾ ಕ್ರಿಕೆಟ್ ತಂಡ ಕೂಡ ಇಸಿಬಿ ಇಲೆವೆನ್ ವಿರುದ್ಧ ಆಡುವ ಮೊದಲು ಒಂದು ನಿಮಿಷ ಮೌನ ಪ್ರಾರ್ಥನೆ ನಡೆಸಿತು. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಹಿರಿಯ ಆಟಗಾರನಿಗೆ ಗೌರವ ಸಲ್ಲಿಸಿದೆ. ‘‘ದಿಲೀಪ್ ದೋಶಿ ಅವರ ನಿಧನದ ಸುದ್ದಿ ತಿಳಿದು ನಮಗೆ ತೀವ್ರ ದುಃಖವಾಯಿತು. ಅವರು ಸ್ಪಿನ್ ಬೌಲಿಂಗ್ನ ನಿಜವಾದ ಕಲಾವಿದ. ಮೈದಾನದ ಒಳಗೆ ಹಾಗೂ ಹೊರಗೆ ಓರ್ವ ಸಜ್ಜನ ಹಾಗೂ ಭಾರತೀಯ ಕ್ರಿಕೆಟ್ನ ಸಮರ್ಪಿತ ಸೇವಕನಾಗಿದ್ದು’’ ಎಂದು ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಐಸಿಸಿ ನೀತಿ ಸಂಹಿತೆ ಉಲ್ಲಂಘನೆ; ರಿಷಭ್ ಪಂತ್ ಗೆ ಛೀಮಾರಿ
ರಿಷಭ್ ಪಂತ್ | PC : X @CricketNDTV ಲೀಡ್ಸ್: ಹೆಡ್ಡಿಂಗ್ಲೆ ಟೆಸ್ಟ್ ಪಂದ್ಯದ ವೇಳೆ ಐಸಿಸಿ ನೀತಿ ಸಂಹಿತೆಯ ಲೆವೆಲ್-1 ಅನ್ನು ಉಲ್ಲಂಘಿಸಿದ್ದಕ್ಕಾಗಿ ಭಾರತ ಕ್ರಿಕೆಟ್ ತಂಡದ ವಿಕೆಟ್ ಕೀಪರ್-ಬ್ಯಾಟರ್ ರಿಷಭ್ ಪಂತ್ ಗೆ ಅಧಿಕೃತವಾಗಿ ಛೀಮಾರಿ ಹಾಕಲಾಗಿದೆ. ಮಾತ್ರವಲ್ಲ ಪಂತ್ ಅವರ ಶಿಸ್ತಿನ ದಾಖಲೆಗೆ ಒಂದು ಡಿಮೆರಿಟ್ ಪಾಯಿಂಟ್ ಜಮೆ ಮಾಡಲಾಗಿದೆ. ಇದು 24 ತಿಂಗಳಲ್ಲಿ ಪಂತ್ ಅವರ ಮೊದಲ ತಪ್ಪಾಗಿದೆ. ಅಂತರ್ರಾಷ್ಟ್ರೀಯ ಪಂದ್ಯವೊಂದರಲ್ಲಿ ಅಂಪೈರ್ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತಪಡಿಸುವುದಕ್ಕೆ ಸಂಬಂಧಿಸಿದ ಆಟಗಾರರು ಹಾಗೂ ಆಟಗಾರರ ಸಹಾಯಕ ಸಿಬ್ಬಂದಿಯ ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್ 2.8 ಅನ್ನು ಪಂತ್ ಉಲ್ಲಂಘಿಸಿದ್ದಾರೆ ಎಂದು ಐಸಿಸಿ ತಿಳಿಸಿದೆ. ಇಂಗ್ಲೆಂಡ್ ತಂಡದ ಮೊದಲ ಇನಿಂಗ್ಸ್ ನ 61ನೇ ಓವರ್ನಲ್ಲಿ ಪಂತ್ ಅವರು ಚೆಂಡಿನ ಸ್ಥಿತಿಯ ಬಗ್ಗೆ ಅಂಪೈರ್ಗಳೊಂದಿಗೆ ಚರ್ಚಿಸಿ, ಚೆಂಡು ಬದಲಾಯಿಸುವಂತೆ ವಿನಂತಿಸಿದ್ದರು. ಚೆಂಡನ್ನು ಪರೀಕ್ಷಿಸಿದ ನಂತರ ಅಂಪೈರ್ ಪಂತ್ ಮನವಿಯನ್ನು ತಿರಸ್ಕರಿಸಿದರು. ಅಂಪೈರ್ ಎದುರೇ ಚೆಂಡನ್ನು ಜೋರಾಗಿ ನೆಲಕ್ಕೆ ಎಸೆದಿದ್ದ ಪಂತ್ ತನ್ನ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಘಟನೆ ನಡೆಯುವಾಗ ಬೆನ್ ಸ್ಟೋಕ್ಸ್ ಹಾಗೂ ಹ್ಯಾರಿ ಬ್ರೂಕ್ ಕ್ರೀಸ್ನಲ್ಲಿದ್ದರು. ಪಂತ್ ಅವರು ತನ್ನ ತಪ್ಪನ್ನು ಒಪ್ಪಿಕೊಂಡಿದ್ದು, ಮ್ಯಾಚ್ ರೆಫರಿ ರಿಚಿ ರಿಚರ್ಡ್ಸನ್ ನೀಡಿದ ವಾಗ್ದಂಡನೆಯನ್ನು ಸ್ವೀಕರಿಸಿದ್ದಾರೆ.�
ಎಂಸಿಎಯಿಂದ ಎನ್ಒಸಿ ಲಭ್ಯ: ಮುಂಬೈ ತಂಡ ತೊರೆಯಲಿರುವ ಪೃಥ್ವಿ ಶಾ
Photo : X/@BCCI ಮುಂಬೈ: ಮುಂಬೈ ಕ್ರಿಕೆಟ್ ಸಂಸ್ಥೆಯು(ಎಂಸಿಎ) ಪೃಥ್ವಿ ಶಾಗೆ ನಿರಾಕ್ಷೇಪಣಾ ಪ್ರಮಾಣಪತ್ರ(ಎನ್ಒಸಿ)ನೀಡಿದೆ. ಶಾ ಅವರು ಬೇರೆ ರಾಜ್ಯ ಕ್ರಿಕೆಟ್ ಸಂಸ್ಥೆಯ ಪರ ಆಡಲು ತನಗೆ ಎನ್ಒಸಿ ನೀಡುವಂತೆ ಸೋಮವಾರ ಇ-ಮೇಲ್ ಮೂಲಕ ಮನವಿ ಮಾಡಿದ್ದರು. ಈ ಬೆಳವಣಿಗೆಯನ್ನು ದೃಢಪಡಿಸಿರುವ ಎಂಸಿಎ ಕಾರ್ಯದರ್ಶಿ ಅಭಯ್ ಹಡಪ, ‘‘ಪೃಥ್ವಿ ಶಾ ಅವರಲ್ಲಿ ಅಪಾರ ಪ್ರತಿಭೆ ಇದೆ. ಮುಂಬೈ ಕ್ರಿಕೆಟ್ಗೆ ಗಣನೀಯ ಕೊಡುಗೆ ನೀಡಿದ್ದಾರೆ. ನಾವು ಅವರ ನಿರ್ಧಾರವನ್ನು ಗೌರವಿಸುತ್ತೇವೆ. ಅವರ ಭವಿಷ್ಯದ ಪ್ರಯತ್ನಗಳಿಗೆ ಶುಭಾಶಯಗಳನ್ನು ಕೋರುತ್ತೇವೆ’’ ಎಂದರು. ಆ ನಂತರ ಹೇಳಿಕೆಯೊಂದನ್ನು ನೀಡಿರುವ ಎಂಸಿಎ, ಹಲವು ವರ್ಷಗಳಿಂದ ಶಾ ನೀಡಿರುವ ಕೊಡುಗೆಗಳನ್ನು ಕೊಂಡಾಡಿದೆ. ಅವರಿಗೆ ಮತ್ತಷ್ಟು ಯಶಸ್ಸು ಸಿಗಲಿ ಎಂದು ಶುಭ ಹಾರೈಸಿದೆ. ಮುಂಬರುವ ದೇಶೀಯ ಋತುವಿನಲ್ಲಿ ಇನ್ನೊಂದು ರಾಜ್ಯ ಕ್ರಿಕೆಟ್ ಸಂಸ್ಥೆಯಡಿ ವೃತ್ತಿಪರ ಕ್ರಿಕೆಟ್ ಆಡುವ ಅವಕಾಶ ಲಭಿಸಿದೆ ಎಂದು ಎಂಸಿಎಗೆ ಬರೆದ ಪತ್ರದಲ್ಲಿ 25ರ ಹರೆಯದ ಶಾ ಹೇಳಿದ್ದಾರೆ. ಭಾರತದ ಅಂಡರ್-19 ಕ್ರಿಕೆಟ್ ತಂಡದ ಮಾಜಿ ನಾಯಕ ಶಾ ಅವರನ್ನು ಕಳೆದ ಋತುವಿನಲ್ಲಿ ಮುಂಬೈನ ರಣಜಿ ಟ್ರೋಫಿ ತಂಡದಿಂದ ಕೈಬಿಡಲಾಗಿತ್ತು. ಅವರ ಫಿಟ್ನೆಸ್ ಬಗ್ಗೆ ಕಳವಳವನ್ನು ವ್ಯಕ್ತಪಡಿಸಿ ಆಯ್ಕೆ ಸಮಿತಿ ಈ ನಿರ್ಧಾರ ಕೈಗೊಂಡಿತ್ತು. 2022ರಲ್ಲಿ ವಿಜಯ್ ಹಝಾರೆ ಟೂರ್ನಿಯಲ್ಲಿ ಆಡಿದ ನಂತರ ಶಾ ಅವರು ಲಿಸ್ಟ್ ಎ ಕ್ರಿಕೆಟ್ನಲ್ಲಿ ಆಡಿಲ್ಲ. 2 ವರ್ಷಗಳ ಹಿಂದೆ ಮುಂಬೈ ಪರ ಆಡಿದಾಗ 5 ಇನಿಂಗ್ಸ್ಗಳಲ್ಲಿ 32, 54, 39,51 ಹಾಗೂ 10 ರನ್ ಗಳಿಸಿದ್ದರು. ಈ ವರ್ಷಾರಂಭದಲ್ಲಿ ಯಶಸ್ವಿ ಜೈಸ್ವಾಲ್ ಕೂಡ ಮುಂಬೈ ಕ್ರಿಕೆಟ್ ಸಂಸ್ಥೆಯಿಂದ ಎನ್ಒಸಿ ಪಡೆದು ಗೋವಾ ರಣಜಿ ತಂಡದ ಪರ ಆಡಲು ಸಜ್ಜಾಗಿದ್ದರು. ಆ ನಂತರ ಅವರು ತಮ್ಮ ನಿರ್ಧಾರವನ್ನು ಬದಲಿಸಿ ಮುಂಬೈ ತಂಡದಲ್ಲೇ ಉಳಿದುಕೊಂಡಿದ್ದಾರೆ. ಅಗ್ರ ಸರದಿಯ ಬ್ಯಾಟರ್ ಪೃಥ್ವಿ ಶಾಗೆ ಹಲವು ರಾಜ್ಯ ಘಟಕಗಳಿಂದ ಆಫರ್ಗಳು ಬಂದಿದ್ದು, ಅವರೀಗ ತಮ್ಮ ಆಯ್ಕೆಗಳತ್ತ ನೋಡುತ್ತಿದ್ದಾರೆ.
ಮೊದಲ ಟೆಸ್ಟ್ | ಬೆನ್ ಡಕೆಟ್ ಐತಿಹಾಸಿಕ ಸಾಧನೆ
Photo: Sportzpics for BCCI ಲೀಡ್ಸ್: ಭಾರತ ತಂಡದ ವಿರುದ್ಧ ಹೆಡ್ಡಿಂಗ್ಲೆಯಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಬೆನ್ ಡಕೆಟ್ ಅವರು ಅಲಿಸ್ಟರ್ ಕುಕ್ ಸಾಧನೆಯ ನಂತರ 30 ವರ್ಷಗಳಲ್ಲಿ 2ನೇ ಬಾರಿ ಎರಡು ಬಾರಿ 50ಕ್ಕೂ ಅಧಿಕ ರನ್ ಗಳಿಸಿದ ಇಂಗ್ಲೆಂಡ್ನ ಎರಡನೇ ಆರಂಭಿಕ ಆಟಗಾರನಾಗಿ ಇತಿಹಾಸ ನಿರ್ಮಿಸಿದ್ದಾರೆ. ಮೊದಲ ಇನಿಂಗ್ಸ್ನಲ್ಲಿ 62 ರನ್ ಗಳಿಸಿರುವ ಡಕೆಟ್ ಅವರು 2ನೇ ಇನಿಂಗ್ಸ್ನಲ್ಲಿ 149 ರನ್ ಗಳಿಸಿದ್ದಾರೆ. ಟೆಸ್ಟ್ ಕ್ರಿಕೆಟ್ನ 2ನೇ ಇನಿಂಗ್ಸ್ನಲ್ಲಿ ಮೊದಲ ಬಾರಿ ಶತಕ ಗಳಿಸಿದ್ದಾರೆ. ಮೊದಲ ಇನಿಂಗ್ಸ್ನಲ್ಲಿ ಡಕೆಟ್ 94 ಎಸೆತಗಳಲ್ಲಿ 9 ಬೌಂಡರಿಗಳ ಸಹಿತ 62 ರನ್ ಗಳಿಸಿ ಜಸ್ಪ್ರಿತ್ ಬುಮ್ರಾಗೆ ಕ್ಲೀನ್ ಬೋಲ್ಡ್ ಆಗಿದ್ದರು. ಎಡಗೈ ಬ್ಯಾಟರ್ 2ನೇ ಇನಿಂಗ್ಸ್ನಲ್ಲೂ ತನ್ನ ಶ್ರೇಷ್ಠ ಫಾರ್ಮ್ ಮುಂದುವರಿಸಿದರು. ಭಾರತದ ಬೌಲಿಂಗ್ ದಾಳಿಯನ್ನು ದಿಟ್ಟವಾಗಿ ಎದುರಿಸಿದರು. ಡಕೆಟ್ 97 ರನ್ ಗಳಿಸಿದ್ದಾಗ ಜೀವದಾನ ಪಡೆದಿದ್ದರು. ಯಶಸ್ವಿ ಜೈಸ್ವಾಲ್ ಕ್ಯಾಚ್ ಕೈಚೆಲ್ಲಿದ್ದು ಮುಹಮ್ಮದ್ ಸಿರಾಜ್ಗೆ ನಿರಾಶೆಯಾಯಿತು. ಜೈಸ್ವಾಲ್ ಪಂದ್ಯದಲ್ಲಿ ಕೈಬಿಟ್ಟ 4ನೇ ಕ್ಯಾಚ್ ಇದಾಗಿದೆ. ಮೊದಲ ಇನಿಂಗ್ಸ್ನಲ್ಲಿ 3 ಕ್ಯಾಚ್ಗಳನ್ನು ಕೈಬಿಟ್ಟಿದ್ದರು. ಡಕೆಟ್ 2010ರ ನಂತರ ಟೆಸ್ಟ್ ಪಂದ್ಯದ 4ನೇ ಇನಿಂಗ್ಸ್ನಲ್ಲಿ ಶತಕ ಗಳಿಸಿದ ಇಂಗ್ಲೆಂಡ್ನ ಮೊದಲ ಆರಂಭಿಕ ಬ್ಯಾಟರ್ ಎನಿಸಿಕೊಂಡಿದ್ದಾರೆ. 15 ವರ್ಷಗಳ ಹಿಂದೆ ಅಲಸ್ಟೈರ್ ಕುಕ್ ಬಾಂಗ್ಲಾದೇಶದ ವಿರುದ್ಧ್ದ ಮೀರ್ಪುರದಲ್ಲಿ ಔಟಾಗದೆ 109 ರನ್ ಗಳಿಸಿದ್ದರು.
India vs England: ಭಾರತದ ವಿರುದ್ಧ ಸಿಡಿಲಬ್ಬರದ ಶತಕ! ವಿಶ್ವದಾಖಲೆ ಬರೆದ ಬೆನ್ ಡಕೆಟ್
ಡಕೆಟ್ ತಮ್ಮ ಆರಂಭಿಕ ಸಹಬ್ಯಾಟ್ಸ್ಮನ್ ಜಾಕ್ ಕ್ರಾಲೆ (65 ರನ್, 42ನೇ ಓವರ್ನಲ್ಲಿ ಔಟ್) ಜೊತೆಗೆ 188 ರನ್ಗಳ ಜೊತೆಯಾಟವನ್ನು ರಚಿಸಿದರು. ಇದು ಭಾರತದ ವಿರುದ್ಧ ಟೆಸ್ಟ್ ಪಂದ್ಯದ ನಾಲ್ಕನೇ ಇನ್ನಿಂಗ್ಸ್ನಲ್ಲಿ ಆರಂಭಿಕ ಜೊತೆಗಿಂತ ಗರಿಷ್ಠ ಜೊತೆಯಾಟವಾಗಿದೆ.
ಕೆಟ್ಟ ದಾಖಲೆ ಬರೆದ ಜೈಸ್ವಾಲ್! ಮೈದಾನದಲ್ಲಿ ಹೀಗಿದ್ರೆ ಬ್ಯಾಟಿಂಗ್ನಲ್ಲಿ ಎಷ್ಟು ರನ್ ಗಳಿಸಿದ್ರು ವೇಸ್ಟ್
ಭಾರತೀಯ ಬೌಲರ್ಗಳ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಡಕೆಟ್ ಹಾಗೂ ಕ್ರಾಲಿ ಜೊಡಿ ಮೊದಲ ವಿಕೆಟ್ಗೆ 188 ರನ್ಗಳ ಅಮೋಘ ಜೊತೆಯಾಟ ಆಡಿದರು. ಆದ್ರೆ, ಈ ಇನ್ನಿಂಗ್ಸ್ನಲ್ಲೂ ಭಾರತೀಯ ಕ್ಷೇತ್ರರಕ್ಷಣೆ ನಿರಾಶಾದಾಯಕವಾಗಿತ್ತು.
ಇಂಗ್ಲೆಂಡ್ನಲ್ಲಿ ತಮ್ಮ ಚೊಚ್ಚಲ ಶತಕ ಬಾರಿಸಿದ ತಿಲಕ್ ವರ್ಮಾ! ಅಬ್ಬರದ ಬ್ಯಾಟಿಂಗ್ ಮೂಲಕ ಗಮನಸೆಳೆದ ಕಿಶನ್
ತಿಲಕ್ ಹ್ಯಾಂಪ್ಶೈರ್ ಜೊತೆ ಜೂನ್ 18 ರಿಂದ ಆಗಸ್ಟ್ 2 ರವರೆಗೆ ಮಾತ್ರ ತಂಡಕ್ಕೆ ಲಭ್ಯವಿರುತ್ತಾರೆ. ಈ ಒಪ್ಪಂದದಡಿಯಲ್ಲಿ, ತಿಲಕ್ ನಾಲ್ಕು ದಿನಗಳ ಪಂದ್ಯಗಳನ್ನು ಆಡಲಿದ್ದಾರೆ. ಅವರು ವೈಟ್ಬಾಲ್ ಆಟಗಳನ್ನು ಆಡುತ್ತಾರೋ ಇಲ್ಲವೋ ಎಂಬುದು ಸ್ಪಷ್ಟವಾಗಿಲ್ಲ. ಟಿ20 ಬ್ಲಾಸ್ಟ್ ಟೂರ್ನಮೆಂಟ್ ಪ್ರಸ್ತುತ ಇಂಗ್ಲೆಂಡ್ನಲ್ಲಿ ನಡೆಯುತ್ತಿದೆ.
Asia Cup 2025: ಏಷ್ಯಾಕಪ್ನಿಂದ ಪಾಕಿಸ್ತಾನ ಔಟ್? ವೈರಲ್ ಆಗುತ್ತಿದೆ ಸೋನಿ ಸ್ಪೋರ್ಟ್ಸ್ ಪೋಸ್ಟರ್
ಪಹಲ್ಗಾಮ್ ಘಟನೆ ಮತ್ತು ಅದರ ನಂತರದ ಘಟನೆಗಳು (ಆಪರೇಷನ್ ಸಿಂಧೂರ್) ಭಾರತ ಮತ್ತು ಪಾಕಿಸ್ತಾನದ ನಡುವೆ ಅಲ್ಲಿಯವರೆಗೆ ಇದ್ದ ಸೌಮ್ಯ ಸಂಬಂಧಗಳನ್ನು ಸಹ ಕಡಿದುಹಾಕಿವೆ. ಕ್ರೀಡೆ ಸೇರಿದಂತೆ ಎಲ್ಲಾ ವಿಷಯಗಳಲ್ಲಿ ಭಾರತ ಪಾಕಿಸ್ತಾನದೊಂದಿಗಿನ ಸಂಬಂಧವನ್ನು ಕಡಿದುಕೊಂಡಿದೆ.
ನನ್ನ ಕರಿಯರ್ನಲ್ಲೇ ಆತ ನಾನು ಎದುರಿಸಿದ ಕಠಿಣ ಬೌಲರ್! ಗಂಗೂಲಿಗೆ ಭಯಪಡಿಸಿದ್ದ ಬೌಲರ್ ಯಾರು ಗೊತ್ತಾ?
ಗಂಗೂಲಿ 1992ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಏಕದಿನ ಪಂದ್ಯದ ಮೂಲಕ ಅಂತರರಾಷ್ಟ್ರೀಯ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದರು. 1996ರಲ್ಲಿ ಟೆಸ್ಟ್ ಕ್ರಿಕೆಟ್ಗೆ ಕಾಲಿಟ್ಟ ಅವರು, 16 ವರ್ಷಗಳ ಸುದೀರ್ಘ ವೃತ್ತಿಜೀವನದಲ್ಲಿ ಭಾರತಕ್ಕಾಗಿ 113 ಟೆಸ್ಟ್ ಪಂದ್ಯಗಳಲ್ಲಿ 16 ಶತಕಗಳೊಂದಿಗೆ 7212 ರನ್ ಗಳಿಸಿದರು.
ಭಾರತಕ್ಕೆ ಕಾಡುತ್ತಿರುವ ಅತಿ ದೊಡ್ಡ ಸಮಸ್ಯೆ ಇದು! ಹೀಗೆ ಮುಂದುವರಿದ್ರೆ ಭಾರತ ಈ ಜನ್ಮದಲ್ಲಿ WTC ಗೆಲ್ಲಲ್ಲ
ಭಾರತ ಮೊದಲ ಎರಡು ಫೈನಲ್ಗಳಿಗೆ ಅರ್ಹತೆ ಪಡೆಯಿತು, ಆದರೆ ಫೈನಲ್ ಹಂತದಲ್ಲಿ ವಿಫಲವಾಯಿತು. ದಕ್ಷಿಣ ಆಫ್ರಿಕಾ 2025ರಲ್ಲಿ ಚಾಂಪಿಯನ್ ಆಯಿತು. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಗೆಲ್ಲಬೇಕಾದರೆ ಭಾರತವು ಒಂದು ಸಮಸ್ಯೆಯನ್ನು ನಿವಾರಿಸಿಕೊಳ್ಳಬೇಕಿದೆ.
ಕಪಿಲ್, ಧೋನಿ ಅಲ್ವೇ ಅಲ್ಲ! ಆಂಗ್ಲರ ನೆಲದಲ್ಲಿ ಹೆಚ್ಚು ಟೆಸ್ಟ್ ಪಂದ್ಯ ಗೆದ್ದ ಕ್ಯಾಪ್ಟನ್ ಇವರೇ ನೋಡಿ
ಭಾರತ ತಂಡ 2025-27ರ ವಿಶ್ವ ಟೆಸ್ಟ ಚಾಂಪಿಯನ್ಶಿಪ್ ಫೈನಲ್ ಭಾಗವಾಗಿ ಇಂಗ್ಲೆಂಡ್ ಪ್ರವಾಸ ಕೈಗೊಂಡಿದೆ. ಈ ಪ್ರವಾಸದಲ್ಲಿ 5 ಪಂದ್ಯಗಳ ಸರಣಿಯನ್ನಾಡಲಿದೆ. ಈ ಸುದ್ದಿಯಲ್ಲಿ ಇಂಗ್ಲೆಂಡ್ನಲ್ಲಿ ಅತಿ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಗೆದ್ದ ಭಾರತೀಯ ನಾಯಕ ಯಾರು ಎಂಬುದನ್ನ ತಿಳಿದುಕೊಳ್ಲೋಣ.
ಕಪಿಲ್, ಧೋನಿ ಅಲ್ವೇ ಅಲ್ಲ! ಆಂಗ್ಲರ ನೆಲದಲ್ಲಿ ಹೆಚ್ಚು ಟೆಸ್ಟ್ ಪಂದ್ಯ ಗೆದ್ದ ಕ್ಯಾಪ್ಟನ್ ಇವರೇ ನೋಡಿ
ಭಾರತ ತಂಡ 2025-27ರ ವಿಶ್ವ ಟೆಸ್ಟ ಚಾಂಪಿಯನ್ಶಿಪ್ ಫೈನಲ್ ಭಾಗವಾಗಿ ಇಂಗ್ಲೆಂಡ್ ಪ್ರವಾಸ ಕೈಗೊಂಡಿದೆ. ಈ ಪ್ರವಾಸದಲ್ಲಿ 5 ಪಂದ್ಯಗಳ ಸರಣಿಯನ್ನಾಡಲಿದೆ. ಈ ಸುದ್ದಿಯಲ್ಲಿ ಇಂಗ್ಲೆಂಡ್ನಲ್ಲಿ ಅತಿ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಗೆದ್ದ ಭಾರತೀಯ ನಾಯಕ ಯಾರು ಎಂಬುದನ್ನ ತಿಳಿದುಕೊಳ್ಲೋಣ.
ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟರ್ ನಿಧನ: ಕಪ್ಪು ಪಟ್ಟಿ ಧರಿಸಿ ಮೈದಾನಕ್ಕಿಳಿದ ಉಭಯ ತಂಡದ ಆಟಗಾರರು
ಮಂಗಳವಾರ (ಜೂನ್ 24) ನಡೆಯುತ್ತಿರುವ ಆಂಡರ್ಸನ್-ತೆಂಡೂಲ್ಕರ್ ಟ್ರೋಫಿಯ ಕೊನೆಯ ದಿನ ಕೂಡ ಭಾರತ ತಂಡದ ಮಾಜಿ ಸ್ಟಾರ್ ಕ್ರಿಕೆಟಿಗ ನಿಧರಾದ ಹಿನ್ನೆಲೆ ಕಪ್ಪು ಪಟ್ಟಿ ಜೊತೆ ಕಣಕ್ಕಿಳಿದಿದ್ದಾರೆ.
ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟರ್ ನಿಧನ: ಕಪ್ಪು ಪಟ್ಟಿ ಧರಿಸಿ ಮೈದಾನಕ್ಕಿಳಿದ ಉಭಯ ತಂಡದ ಆಟಗಾರರು
ಮಂಗಳವಾರ (ಜೂನ್ 24) ನಡೆಯುತ್ತಿರುವ ಆಂಡರ್ಸನ್-ತೆಂಡೂಲ್ಕರ್ ಟ್ರೋಫಿಯ ಕೊನೆಯ ದಿನ ಕೂಡ ಭಾರತ ತಂಡದ ಮಾಜಿ ಸ್ಟಾರ್ ಕ್ರಿಕೆಟಿಗ ನಿಧರಾದ ಹಿನ್ನೆಲೆ ಕಪ್ಪು ಪಟ್ಟಿ ಜೊತೆ ಕಣಕ್ಕಿಳಿದಿದ್ದಾರೆ.
ಬ್ಯಾಕ್ ಟು ಬ್ಯಾಕ್ ಶತಕ ಸಿಡಿಸಿದ ಪಂತ್ಗೆ ಶಾಕ್ ನೀಡಿದ ಐಸಿಸಿ! ಅಷ್ಟಕ್ಕೂ ರಿಷಬ್ ಮಾಡಿದ ತಪ್ಪೇನು?
ಟೀಂ ಇಂಡಿಯಾ ಪರವಾಗಿ ಎರಡೂ ಇನ್ನಿಂಗ್ಸ್ಗಳಲ್ಲಿ ಶತಕ ಸಿಡಿಸುವ ಮೂಲಕ ದಾಖಲೆ ಬರೆದಿರುವ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ರಿಷಬ್ ಪಂತ್ (Rishabh Pant) ಅವರಿಗೆ ಐಸಿಸಿ ಬಿಗ್ ಶಾಕ್ ನೀಡಿದೆ.
ಮುಂಬೈ ತಂಡಕ್ಕೆ ಶಾಕ್ ಕೊಟ್ಟ ಪೃಥ್ವಿ ! ಸಿಎಸ್ಕೆ ಸೂಪರ್ ಸ್ಟಾರ್ ನೇತೃತ್ವದಲ್ಲಿ ಆಡಲಿದ್ದಾರೆ ಯುವ ಆಟಗಾರ
ಕ್ರಿಕೆಟರ್ ಪೃಥ್ವಿ ಶಾ ಮುಂಬೈನ ಈ ವೃತ್ತಿಪರ ಆಟಗಾರ ಮುಂಬರುವ ದೇಶೀಯ ಋತುವಿನಲ್ಲಿ ಬೇರೆ ತಂಡಕ್ಕೆ ಆಡಲು ಅವಕಾಶ ನೀಡುವಂತೆ ನಿರಾಕ್ಷೇಪಣಾ ಪತ್ರವನ್ನು ಕೋರಿದ್ದಾರೆ ಎಂದು ಎಂಸಿಎ ಹೇಳಿದೆ.
ಇಂಗ್ಲೆಂಡ್ ಆಟಗಾರನ ಮೈಂಡ್ ಗೇಮ್! ಭಾರತದ ಬ್ಯಾಟರ್ ಕೆರಳಿಸಿ ವಿಕೆಟ್ ಒಪ್ಪಿಸುವಂತೆ ಮಾಡಿದ ಬ್ರೂಕ್
ಇಂಗ್ಲೆಂಡ್ ಬ್ಯಾಟ್ಸ್ಮನ್ ಹ್ಯಾರಿ ಬ್ರೂಕ್ (Harry Brook) 11 ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ಭಾರತೀಯ ವೇಗಿ ಪ್ರಸಿದ್ಧ್ ಕೃಷ್ಣ ಅವರನ್ನು ಕೀಟಲೆ ಮಾಡಿ ವಿಕೆಟ್ ಒಪ್ಪಿಸುವಂತೆ ಮಾಡಿದರು. ಈ ವಿಡಿಯೋ ಸಾಕಷ್ಟು ವೈರಲ್ ಆಗುತ್ತಿದೆ.
England vs India: ರಾಹುಲ್, ಪಂತ್ ಶತಕ! ಇಂಗ್ಲೆಂಡ್ಗೆ 371 ರನ್ಗಳ ಬೃಹತ್ ಗುರಿ ನೀಡಿದ ಟೀಮ್ ಇಂಡಿಯಾ
ಭಾರತ ಮೊದಲ ಇನ್ನಿಂಗ್ಸ್ನಲ್ಲಿ 471 ರನ್ ಗಳಿಸಿದರೆ, ಇಂಗ್ಲೆಂಡ್ 465 ರನ್ ಗಳಿಸಿತು. ಭಾರತ ಕೇವಲ 6 ರನ್ಗಳ ಮುನ್ನಡೆ ಸಾಧಿಸಿತ್ತು. ಇದೀಗ 2ನೇ ಇನ್ನಿಂಗ್ಸ್ನಲ್ಲಿ ರಾಹುಲ್ ಹಾಗೂ ರಿಷಭ್ ಪಂತ್ ಶತಕದ ನೆರವಿನಿಂದ 364ಕ್ಕೆ ಆಲೌಟ್ ಆಗಿದ್ದು, ಇಂಗ್ಲೆಂಡ್ಗೆ 371 ರನ್ಗಳ ಬೃಹತ್ ಗುರಿ ನೀಡಿದೆ.
ಮಂಗೋಲಿಯ ವಿರುದ್ಧ ಭಾರತದ ಫುಟ್ಬಾಲ್ ತಂಡಕ್ಕೆ ಭರ್ಜರಿ ಜಯ
PC : @IFTWC ಹೊಸದಿಲ್ಲಿ: ಥಾಯ್ಲೆಂಡ್ ನಲ್ಲಿ ಸೋಮವಾರ ನಡೆದ ಎಎಫ್ಸಿ ಏಶ್ಯನ್ ಕಪ್ ಕ್ವಾಲಿಫೈಯರ್ ನ ತನ್ನ ಮೊದಲ ಪಂದ್ಯದಲ್ಲಿ ಭಾರತೀಯ ಮಹಿಳಾ ಫುಟ್ಬಾಲ್ ತಂಡವು ಮಂಗೋಲಿಯ ತಂಡವನ್ನು 13-0 ಗೋಲುಗಳ ಅಂತರದಿಂದ ಮಣಿಸಿದೆ. ಈ ಮೂಲಕ ಟೂರ್ನಿಯಲ್ಲಿ ಭರ್ಜರಿ ಆರಂಭ ಪಡೆದಿದೆ. ಏಕಪಕ್ಷೀಯವಾಗಿ ಸಾಗಿದ ಪಂದ್ಯದಲ್ಲಿ ಸಂಗೀತಾ 8ನೇ ನಿಮಿಷದಲ್ಲಿ ಮೊದಲ ಗೋಲು ಗಳಿಸಿದರು. ಪ್ಯಾರಿ ಅವರು ಐದು ಬಾರಿ (29ನೇ, 45ನೇ, 46ನೇ, 52ನೇ, 55ನೇ ನಿಮಿಷ) ಗೋಲು ಗಳಿಸಿ ಪಂದ್ಯದ ಹೀರೋವಾಗಿ ಹೊರಹೊಮ್ಮಿದರು. ಸೌಮ್ಯಾ(20ನೇ, 59ನೇ ನಿಮಿಷ), ರಿಂಪಾ ಹಲ್ದಾರ್(67ನೇ ನಿ.), ಮಾಳವಿಕಾ(71ನೇ ನಿಮಿಷ), ಪ್ರಿಯದರ್ಶಿನಿ(73ನೇ, 86ನೇ ನಿಮಿಷ) ಹಾಗೂ ಗ್ರೇಸ್ ಡಾಂಗ್ಮಿ(75ನೇ ನಿಮಿಷ)ಉಳಿದ ಗೋಲು ಗಳಿಸಿದರು. 4 ತಿಂಗಳ ನಂತರ ಭಾರತದ ಮಹಿಳಾ ತಂಡವು ಮೊದಲ ಗೆಲುವು ದಾಖಲಿಸಿದೆ. ಈ ವರ್ಷಾರಂಭದಲ್ಲಿ ಪಿಂಕ್ ಲೇಡೀಸ್ ಕಪ್ ನಲ್ಲಿ ಜೋರ್ಡನ್ ತಂಡದ ವಿರುದ್ಧ ತನ್ನ ಕೊನೆಯ ಗೆಲುವು ದಾಖಲಿಸಿತ್ತು. ರಶ್ಯ, ದಕ್ಷಿಣ ಕೊರಿಯಾ ಹಾಗೂ ಉಜ್ಬೇಕಿಸ್ತಾನ ತಂಡಗಳ ವಿರುದ್ಧ ಸೋತಿರುವ ಭಾರತ ತಂಡವು ಫಿಫಾ ರ್ಯಾಂಕಿಂಗ್ನಲ್ಲಿ 70ನೇ ಸ್ಥಾನಕ್ಕೆ ಕುಸಿದಿದೆ. ಸ್ವದೇಶದಲ್ಲಿ ನಡೆದಿದ್ದ ಹಿಂದಿನ ಆವೃತ್ತಿಯ ಎಎಫ್ಸಿ ಮಹಿಳೆಯರ ಏಶ್ಯನ್ ಕಪ್ ಪಂದ್ಯಾವಳಿಯಿಂದ ಭಾರತ ತಂಡವು ಕೋವಿಡ್-19 ಕಾರಣಕ್ಕೆ ಹಿಂದೆ ಸರಿದಿತ್ತು. ಭಾರತ ತಂಡ ತಂಗಿದ್ದ ಶಿಬಿರದಲ್ಲಿ ಕೋವಿಡ್-19 ಸೋಂಕು ಪತ್ತೆಯಾಗಿತ್ತು. ಮುಖ್ಯ ಕೋಚ್ ಕ್ರಿಸ್ಪಿನ್ ಚೆಟ್ರಿ ಮಾರ್ಗದರ್ಶನದಲ್ಲಿ ಭಾರತ ತಂಡವು ಆಸ್ಟ್ರೇಲಿಯದಲ್ಲಿ ನಡೆಯಲಿರುವ 2026ರ ಆವೃತ್ತಿಯ ಪಂದ್ಯಾವಳಿಗೆ ಅರ್ಹತೆ ಪಡೆಯಲು ಎದುರು ನೋಡುತ್ತಿದೆ. ಭಾರತ ತಂಡವು ಅರ್ಹತಾ ಸುತ್ತಿನಲ್ಲಿ ಮಂಗೋಲಿಯ(126ನೇ ರ್ಯಾಂಕ್), ಟಿಮೋರ್ ಲೆಸ್ಟೆ(158ನೇ ರ್ಯಾಂಕ್), ಇರಾಕ್(173ನೇ ರ್ಯಾಂಕ್) ಹಾಗೂ ಆತಿಥೇಯ ಥಾಯ್ಲೆಂಡ್(46ನೇ ರ್ಯಾಂಕ್)ತಂಡಗಳನ್ನು ಎದುರಿಸಲಿದ್ದು, ಗ್ರೂಪ್ ವಿನ್ನರ್ ಫೈನಲ್ ಗೆ ಅರ್ಹತೆ ಪಡೆಯಲಿದೆ. ಭಾರತ ತಂಡವು ಇನ್ನು 6 ದಿನಗಳ ನಂತರ ಟಿಮೋರ್ ಲೆಸ್ಟೆ ತಂಡವನ್ನು ಎದುರಿಸಲಿದೆ.
ನಾಟಿಂಗ್ ಹ್ಯಾಮ್ ಓಪನ್: ಅಮೆರಿಕದ ಕೆಸ್ಲರ್ ಗೆ ಪ್ರಶಸ್ತಿ
ಕೆಸ್ಲರ್ | PC : X @Beeorlicious ಲಂಡನ್: ಮಳೆ ಬಾಧಿತ ನಾಟಿಂಗ್ ಹ್ಯಾಮ್ ಓಪನ್ ಟೆನಿಸ್ ಟೂರ್ನಿಯಲ್ಲಿ ಅಮೆರಿಕದ ಮೆಕ್ಕರ್ಟ್ನಿ ಕೆಸ್ಲರ್ ಉಕ್ರೇನ್ ನ ಡಯಾನಾ ಯಾಸ್ಟ್ರೆಂಸ್ಕಾರನ್ನು 6-4, 7-5 ನೇರ ಸೆಟ್ಗಳ ಅಂತರದಿಂದ ಮಣಿಸುವ ಮೂಲಕ ಮಹಿಳೆಯರ ಸಿಂಗಲ್ಸ್ ಪ್ರಶಸ್ತಿ ಮುಡಿಗೇರಿಸಿಕೊಂಡರು. ಈ ಮೂಲಕ ತನ್ನ ವೃತ್ತಿಜೀವನದಲ್ಲಿ ಮೂರನೇ ಪ್ರಶಸ್ತಿ ಗೆದ್ದುಕೊಂಡರು. ಈ ತಿಂಗಳು ಹುಲ್ಲುಹಾಸಿನ ಅಂಗಣದಲ್ಲಿ ಟೂರ್ ಮಟ್ಟದಲ್ಲಿ ತನ್ನ ಮೊದಲ ಪಂದ್ಯವನ್ನು ಜಯಿಸಿದ್ದ ಕೆಸ್ಲರ್, ಒಂದು ಗಂಟೆ ಹಾಗೂ 34 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಪ್ರಾಬಲ್ಯ ಸಾಧಿಸಿದರು. ‘‘ಮತ್ತೊಂದು ಪ್ರಶಸ್ತಿ ಗೆದ್ದಿರುವುದಕ್ಕೆ ತುಂಬಾ ರೋಮಾಂಚನಗೊಂಡಿರುವೆ. ನನ್ನ ಪಾಲಿಗೆ ಇದು ಮತ್ತೊಂದು ಶ್ರೇಷ್ಠ ವಾರವಾಗಿದೆ. ಉತ್ತಮ ಹೋರಾಟ ನೀಡಿರುವ ಡಯಾನಾಗೆ ಅಭಿನಂದನೆ ಸಲ್ಲಿಸಲು ಬಯಸುವೆ. ಆಕೆ ನಿಜವಾಗಿಯೂ ಕಠಿಣ ಸ್ಪರ್ಧಿ. ನಾವು ನಿಜವಾಗಿಯೂ ಮೂರು ಸ್ಪರ್ಧಾತ್ಮಕ ಪಂದ್ಯಗಳನ್ನು ಆಡಿದ್ದು, ಡಯಾನರ ಸಾಧನೆ ಶ್ಲಾಘನೀಯ’’ ಎಂದು ಕೆಸ್ಲರ್ ಹೇಳಿದರು. ಡಯಾನಾ ಅವರು 17 ವರ್ಷಗಳ ನಂತರ ಡಬ್ಲ್ಯುಟಿಎ ಟೂರ್ ನಲ್ಲಿ ಫೈನಲ್ ಗೆ ತಲುಪಿದ ಉಕ್ರೇನ್ ನ ಮೊದಲ ಆಟಗಾರ್ತಿ ಎನಿಸಿಕೊಂಡಿದ್ದಾರೆ. ಈ ವರ್ಷ ಎರಡನೇ ಬಾರಿ ಫೈನಲ್ ಗೆ ತಲುಪಿದ್ದ ಡಯಾನಾ ಅವರು 2019ರ ನಂತರ ಮೊದಲ ಡಬ್ಲ್ಯುಟಿಎ ಪ್ರಶಸ್ತಿ ಗೆಲ್ಲುವಲ್ಲಿ ವಿಫಲರಾದರು.
ವಿಶ್ವ ಅತ್ಲೆಟಿಕ್ಸ್ ಚಾಂಪಿಯನ್ಶಿಪ್ ನಲ್ಲಿ ಅಗ್ರ ಸ್ಥಾನ ನನ್ನ ಅಂತಿಮ ಗುರಿ: ನೀರಜ್ ಚೋಪ್ರಾ
ನೀರಜ್ ಚೋಪ್ರಾ | PC : olympics.com ಒಸ್ಟ್ರಾವಾ(ಝೆಕ್ ಗಣರಾಜ್ಯ): ನಿರಂತರವಾಗಿ 90 ಮೀ.ದೂರ ಜಾವೆಲಿನ್ ಎಸೆದು ಸ್ವತಃ ಒತ್ತಡಕ್ಕೆ ಒಳಗಾಗಲು ಇಷ್ಟಪಡದ ಭಾರತದ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಟೋಕಿಯೊದಲ್ಲಿ ನಡೆಯಲಿರುವ ವಿಶ್ವ ಅತ್ಲೆಟಿಕ್ಸ್ ಚಾಂಪಿಯನ್ಶಿಪ್ ನಲ್ಲಿ ಅಗ್ರ ಸ್ಥಾನ ಪಡೆಯುವುದು ಈ ವರ್ಷದ ತನ್ನ ಅಂತಿಮ ಗುರಿಯಾಗಿದೆ ಎಂದಿದ್ದಾರೆ. ಝೆಕ್ ಗಣರಾಜ್ಯದ ಒಸ್ಟ್ರಾವಾದಲ್ಲಿ ಮಂಗಳವಾರ ಆರಂಭವಾಗಲಿರುವ ಗೋಲ್ಡನ್ ಸ್ಪೈಕ್ ಅತ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಉತ್ತಮ ಪ್ರದರ್ಶನದ ನಿರೀಕ್ಷೆಯಲ್ಲಿದ್ದೇನೆ ಎಂದು ಚೋಪ್ರಾ ಹೇಳಿದ್ದಾರೆ. ಕಳೆದ ವಾರ ನಡೆದ ಪ್ಯಾರಿಸ್ ಡೈಮಂಡ್ ಲೀಗ್ನಲ್ಲಿ 88.16 ಮೀ.ದೂರಕ್ಕೆ ಜಾವೆಲಿನ್ ಎಸೆದಿರುವ ನೀರಜ್ ಅವರು ಜುಲಿಯನ್ ವೆಬೆರ್ರನ್ನು ಸೋಲಿಸಿ ಪ್ರಶಸ್ತಿಯನ್ನು ಜಯಿಸಿದ್ದರು. ಝೆಕ್ ದಿಗ್ಗಜ ಹಾಗೂ ತನ್ನ ಕೋಚ್ ಜಾನ್ ಝೆಲೆಝ್ನಿ ಮಾರ್ಗದರ್ಶನದಲ್ಲಿ ಶ್ರೇಷ್ಠ ಪ್ರದರ್ಶನ ನೀಡುವ ವಿಶ್ವಾಸವಿದೆ ಎಂದು ಎರಡು ಬಾರಿ ಒಲಿಂಪಿಕ್ಸ್ ಪದಕ ವಿಜೇತ ಹೇಳಿದ್ದಾರೆ. 27ರ ಹರೆಯದ ಚೋಪ್ರಾ ಅವರು ದೋಹಾದಲ್ಲಿ ನಡೆದ ವರ್ಷದ ಮೊದಲ ಡೈಮಂಡ್ ಲೀಗ್ ಕ್ರೀಡಾಕೂಟದಲ್ಲಿ ಮೊದಲ ಬಾರಿ 90 ಮೀ.ಗೂ ಅಧಿಕ ದೂರ ಜಾವೆಲಿನ್ ಎಸೆದು ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದ್ದಾರೆ. ‘‘ಇಂತಹ ಮಹಾನ್ ಕ್ರೀಡಾಪಟು ಹಾಗೂ ತರಬೇತುದಾರರೊಂದಿಗೆ ಕೆಲಸ ಮಾಡಲು ನನಗೆ ನಿಜವಾಗಿಯೂ ಸಂತೋಷವಾಗುತ್ತಿದೆ. ತಂತ್ರಗಾರಿಕೆಯಲ್ಲ್ ಸ್ವಲ್ಪ ಸುಧಾರಣೆಯ ನಂತರ ನಾನು ಈ ವರ್ಷ 90 ಮೀ. ದೂರ ಜಾವೆಲಿನ್ ಎಸೆದಿದ್ದೇನೆ. ಇತ್ತೀಚೆಗೆ ನಿಂಬರ್ಕ್ನಲ್ಲಿ(ಝೆಕ್ ಗಣರಾಜ್ಯ)ಉತ್ತಮ ತರಬೇತಿ ಪಡೆದಿದ್ದೇನೆ. ಇಲ್ಲಿ ಒಸ್ಟ್ರಾವಾದಲ್ಲಿ ನನ್ನ ಅತ್ಯುತ್ತಮ ಪ್ರಯತ್ನ ಮಾಡುವೆ. ಟೋಕಿಯೊದಲ್ಲಿ ನಡೆಯಲಿರುವ ವಿಶ್ವ ಚಾಂಪಿಯನ್ಶಿಪ್ ಗೆಲ್ಲುವುದು ಈ ವರ್ಷ ನನ್ನ ಮುಖ್ಯ ಗುರಿಯಾಗಿದೆ’’ ಎಂದು ಹಿಂದಿನ ಆವೃತ್ತಿಯ ಚಾಂಪಿಯನ್ಶಿಪ್ ನಲ್ಲಿ ಚಿನ್ನ ಗೆದ್ದಿದ್ದ ನೀರಜ್ ಹೇಳಿದ್ದಾರೆ. ‘‘ ಝೆಕ್ ಗಣರಾಜ್ಯದಲ್ಲಿ ಮಂಗಳವಾರ ನಡೆಯಲಿರುವ ಕ್ರೀಡಾಕೂಟದಲ್ಲಿ ಭಾಗವಹಿಸಲು ನಾನು ತುಂಬಾ ಉತ್ಸುಕನಾಗಿದ್ದೇನೆ. ಇಲ್ಲಿ ‘ಓಟದ ರಾಜ’ ಉಸೇನ್ ಬೋಲ್ಟ್ ಸ್ಪರ್ಧಿಸಿದ್ದನ್ನು ಚಿಕ್ಕವನಿದ್ದಾಗ ಹಲವಾರು ಫೋಟೊಗಳು ಹಾಗೂ ವೀಡಿಯೊಗಳಲ್ಲಿ ನೋಡಿದ್ದೇನೆ. ನಾನಿಲ್ಲಿಗೆ ಕಳೆದ ವರ್ಷ ಬಂದಿದ್ದೆ. ಆದರೆ ಗಾಯದ ಕಾರಣಕ್ಕೆ ಸ್ಪರ್ಧಿಸಿರಲಿಲ್ಲ. 90 ಮೀ.ದೂರಕ್ಕೆ ಜಾವೆಲಿನ್ ಎಸೆಯುವುದಕ್ಕೆ ಮುಂದಾಗಿ ಅನಗತ್ಯ ಒತ್ತಡಕ್ಕೆ ಒಳಗಾಗಲು ಇಷ್ಟಪಡಲಾರೆ. ನಾನು ನಿಜವಾಗಿಯೂ ಕಠಿಣ ಶ್ರಮಪಡುವೆ’’ ಎಂದು ನೀರಜ್ ಹೇಳಿದ್ದಾರೆ. ವಿಶ್ವ ಅತ್ಲೆಟಿಕ್ಸ್ ಚಾಂಪಿಯನ್ಶಿಪ್ ಟೋಕಿಯೊದಲ್ಲಿ ಈ ವರ್ಷದ ಸೆಪ್ಟಂಬರ್ 13ರಿಂದ 21ರ ತನಕ ನಡೆಯಲಿದೆ. ನೀರಜ್ 2020ರ ಟೋಕಿಯೊ ಒಲಿಂಪಿಕ್ಸ್ನಲ್ಲಿ ಚಿನ್ನ ಹಾಗೂ 2024ರ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಬೆಳ್ಳಿ ಜಯಿಸಿದ್ದರು.�
ಕೌಂಟಿ ಕ್ರಿಕೆಟ್ ನ ತನ್ನ ಚೊಚ್ಚಲ ಪಂದ್ಯದಲ್ಲಿ ಮಿಂಚಿದ ಇಶಾನ್ ಕಿಶನ್
ಇಶಾನ್ ಕಿಶನ್ | PC ; @ImTanujSingh ಲಂಡನ್: ಭಾರತದ ವಿಕೆಟ್ಕೀಪರ್-ಬ್ಯಾಟರ್ ಇಶಾನ್ ಕಿಶನ್ ನಾಟಿಂಗ್ ಹ್ಯಾಮ್ನಲ್ಲಿ ಯಾರ್ಕ್ಶೈರ್ ವಿರುದ್ಧ ರವಿವಾರ ನಡೆದ ಡಿವಿಜನ್-1 ಪಂದ್ಯದಲ್ಲಿ ನಾಟಿಂಗ್ ಹ್ಯಾಮ್ಶೈರ್ ಪರ ಆಡುವ ಮೂಲಕ ಕೌಂಟಿ ಕ್ರಿಕೆಟ್ ಚಾಂಪಿಯನ್ಶಿಪ್ ನಲ್ಲಿ ಪಾದಾರ್ಪಣೆಗೈದಿದ್ದಾರೆ. 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಇಳಿದ ಕಿಶನ್ 33 ಎಸೆತಗಳಲ್ಲಿ 6 ಬೌಂಡರಿಗಳ ಸಹಿತ ಔಟಾಗದೆ 44 ರನ್ ಗಳಿಸಿದರು. ನಾಟಿಂಗ್ ಹ್ಯಾಮ್ ದಿನದಾಟದಂತ್ಯಕ್ಕೆ 6 ವಿಕೆಟ್ಗಳ ನಷ್ಟಕ್ಕೆ 298 ರನ್ ಗಳಿಸಲು ನೆರವಾದರು. 26ರ ಹರೆಯದ ಬಿಹಾರದ ಬ್ಯಾಟರ್ ನಾಟಿಂಗ್ ಹ್ಯಾಮ್ ಶೈರ್ ಜೊತೆ ಎರಡು ಪಂದ್ಯಗಳನ್ನು ಆಡಲು ಒಪ್ಪಂದಕ್ಕೆ ಸಹಿ ಹಾಕಿದ್ದರು. ಈ ತಿಂಗಳಾಂತ್ಯದಲ್ಲಿ ನಡೆಯಲಿರುವ ಝಿಂಬಾಬ್ವೆ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿಯನ್ನಾಡಲು ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡವನ್ನು ಸೇರಿಕೊಂಡಿರುವ ಕೈಲ್ ವೆರ್ರೆನ್ನೆ ಬದಲಿಗೆ ಕಿಶನ್ ಆಯ್ಕೆಯಾಗಿದ್ದರು. ಕೌಂಟಿ ಕ್ರಿಕೆಟಿಗೆ ಕಾಲಿಟ್ಟಿರುವ ಭಾರತದ ಮತ್ತೋರ್ವ ಆಟಗಾರ ತಿಲಕ್ ವರ್ಮಾ 2 ಓವರ್ ಬೌಲಿಂಗ್ ಮಾಡಿ ಕೇವಲ 6 ರನ್ ನೀಡಿದ್ದರು. 2021ರ ನಂತರ ಮೊದಲ ಬಾರಿ ಕೆಂಪು ಚೆಂಡಿನ ಪಂದ್ಯವನ್ನು ಆಡುತ್ತಿರುವ ಇಂಗ್ಲೆಂಡ್ ತಂಡದ ವೇಗದ ಬೌಲರ್ ಜೋಫ್ರಾ ಆರ್ಚರ್ ಸಸೆಕ್ಸ್ ಪರವಾಗಿ ಡುಹ್ರಾಮ್ ವಿರುದ್ಧ 34 ಎಸೆತಗಳಲ್ಲಿ 31 ರನ್ ಗಳಿಸಿದ್ದರು. ಆರ್ಚರ್ ಜುಲೈ 2ರಿಂದ ಭಾರತ ತಂಡದ ವಿರುದ್ಧ ಆರಂಭವಾಗಲಿರುವ 2ನೇ ಟೆಸ್ಟ್ ಪಂದ್ಯದ ವೇಳೆ ಇಂಗ್ಲೆಂಡ್ ತಂಡವನ್ನು ಸೇರಿಕೊಳ್ಳುವ ಸಾಧ್ಯತೆಯಿದೆ.
ಇಂಗ್ಲೆಂಡ್ ವಿರುದ್ಧ ವಿಧ್ವಂಸಕ ಶತಕ! ಇಂಗ್ಲಿಷ್ ನೆಲದಲ್ಲಿ ಈ ಸಾಧನೆ ಮಾಡಿದ ವಿಶ್ವದ ಮೊದಲ ವಿಕೆಟ್ ಕೀಪರ್
ಭಾರತದ ಪರ ಎರಡೂ ಇನ್ನಿಂಗ್ಸ್ನಲ್ಲಿ ಶತಕ ಸಿಡಿಸಿದ 7ನೇ ಬ್ಯಾಟರ್ ಎನಿಸಿಕೊಂಡಿದ್ದಾರೆ. ವಿಜಯ್ ಹಜಾರೆ, ಸುನಿಲ್ ಗವಾಸ್ಕರ್ (3 ಬಾರಿ), ರಾಹುಲ್ ದ್ರಾವಿಡ್ (2 ಬಾರಿ), ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ ಹಾಗೂ ರೋಹಿತ್ ಶರ್ಮಾ ಕೂಡ ಈ ಸಾಧನೆ ಮಾಡಿದ್ದಾರೆ.
ಆಂಗ್ಲರ ನೆಲದಲ್ಲಿ ಬ್ಯಾಕ್ ಟು ಬ್ಯಾಕ್ ಶತಕ! 147 ವರ್ಷಗಳಲ್ಲಿ ಈ ಸಾಧನೆ ಮಾಡಿದ 2ನೇ ವಿಕೆಟ್ ಕೀಪರ್
ಮೂರನೇ ದಿನದಾಟದ ಮೊದಲ ಸೆಷನ್ನಲ್ಲೇ ನಾಯಕ ಶುಭಮನ್ ಗಿಲ್ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಈ ವೇಳೆ ಕೆಎಲ್ ರಾಹುಲ್ ಜೊತೆಯಾದ ಉಪನಾಯಕ ರಿಷಬ್ ಪಂತ್ ಭರ್ಜರಿ ಶತಕ ಸಿಡಿಸಿ ಮಿಂಚಿದರು.
KL Rahul: ಆಂಗ್ಲರ ವಿರುದ್ಧ ಭರ್ಜರಿ ಶತಕ ಸಿಡಿಸಿದ ಕೆಎಲ್ ರಾಹುಲ್! ಬೃಹತ್ ಮೊತ್ತದತ್ತ ಟೀಮ್ ಇಂಡಿಯಾ
ಭಾರತ ಮೊದಲ ಇನ್ನಿಂಗ್ಸ್ನಲ್ಲಿ 471 ರನ್ ಗಳಿಸಿದರೆ, ಇಂಗ್ಲೆಂಡ್ 465 ರನ್ ಗಳಿಸಿತು. ಭಾರತ ಕೇವಲ 6 ರನ್ಗಳ ಮುನ್ನಡೆ ಸಾಧಿಸಿತ್ತು. ಇದೀಗ 2ನೇ ಇನ್ನಿಂಗ್ಸ್ನಲ್ಲಿ ರಾಹುಲ್ ಹಾಗೂ ರಿಷಭ್ ಪಂತ್ ಶತಕದ ಜೊತೆಯಾಟದ ನೆರವಿನಿಂದ ಟೀಮ್ ಇಂಡಿಯಾ 230ಕ್ಕೂ ಹೆಚ್ಚು ರನ್ಗಳ ಮುನ್ನಡೆ ಸಾಧಿಸಿ ಮುನ್ನುಗ್ಗುತ್ತಿದೆ.
ಬ್ಯಾಟಿಂಗ್ ವೇಷ್ಟ್, ಬೌಲಿಂಗ್ ಕೊಡ್ತಾನೆ ಇಲ್ಲ! ಈತನಿಗೆ ಪ್ಲೇಯಿಂಗ್ ಇಲೆವೆನ್ನಲ್ಲಿ ಚಾನ್ಸ್ ಕೊಟ್ಟ
ಮೂರನೇ ದಿನದಾಟದ ಅಂತ್ಯಕ್ಕೆ ಭಾರತ ತನ್ನ ಎರಡನೇ ಇನ್ನಿಂಗ್ಸ್ನಲ್ಲಿ ಉತ್ತಮವಾಗೊ ಬ್ಯಾಟಿಂಗ್ ಮಾಡುತ್ತಿದೆ. ಮೊದಲ ಇನ್ನಿಂಗ್ಸ್ 6 ರನ್ ಮುನ್ನಡೆ ಸೇರಿದಂತೆ, ಭಾರತ ಪ್ರಸ್ತುತ 200ಕ್ಕೂ ಹೆಚ್ಚು ರನ್ಗಳ ಮುನ್ನಡೆಯೊಂದಿಗೆ ಮುನ್ನಡೆಯುತ್ತಿದೆ.
25ನೇ ವಯಸ್ಸಿನಲ್ಲಿ ಭಾರತದ ಪರ ಹೆಚ್ಚು ಶತಕ! ಗಿಲ್ಗೆ 3ನೇ ಸ್ಥಾನ, ಅಗ್ರಸ್ಥಾನದಲ್ಲಿ ಯಾರಿದ್ದಾರೆ?
ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಶುಭ್ಮನ್ ಗಿಲ್ 147 ರನ್ ಗಳಿಸಿದರು. ನಾಯಕನಾಗಿ ಗಿಲ್ ತಮ್ಮ ಮೊದಲ ಪಂದ್ಯದಲ್ಲೇ ಶತಕ ಗಳಿಸಿದರು. ಈ ಅವಧಿಯಲ್ಲಿ ಗಿಲ್ ತಮ್ಮ ಹೆಸರಿನಲ್ಲಿ ಅನೇಕ ದಾಖಲೆಗಳನ್ನು ಬರೆದಿದ್ದಾರೆ. ಶತಕ ಗಳಿಸಿದ ತಕ್ಷಣ, ಅವರು ವೀರೇಂದ್ರ ಸೆಹ್ವಾಗ್, ವಿರಾಟ್ ಕೊಹ್ಲಿ ಮತ್ತು ಯಶಸ್ವಿ ಜೈಸ್ವಾಲ್ ಅವರ ದಾಖಲೆಗಳನ್ನು ಮುರಿದರು.
Prithvi Shaw: ಐಪಿಎಲ್ನಲ್ಲಿ ಅನ್ಸೋಲ್ಡ್ ಆದ ಬೆನ್ನಲ್ಲೇ ಪೃಥ್ವಿ ಶಾ ಸಂಚಲನಕಾರಿ ನಿರ್ಧಾರ!
ಕೆಲವು ವರ್ಷಗಳ ಹಿಂದೆ “ಜೂನಿಯರ್ ಸಚಿನ್ ತೆಂಡೂಲ್ಕರ್” ಎಂದು ಕರೆಯಲ್ಪಟ್ಟ ಪೃಥ್ವಿ ಶಾ ಭಾರತೀಯ ಕ್ರಿಕೆಟ್ನ ಭವಿಷ್ಯದ ತಾರೆಯಾಗಿ ಗುರುತಿಸಲ್ಪಟ್ಟಿದ್ದರು. 2018ರಲ್ಲಿ ಅಂಡರ್-19 ವಿಶ್ವಕಪ್ ಗೆಲುವಿನಲ್ಲಿ ಭಾರತ ತಂಡವನ್ನು ಮುನ್ನಡೆಸಿದ ಶಾ, ಅದೇ ವರ್ಷ ಟೆಸ್ಟ್ ಚೊಚ್ಚಲ ಪಂದ್ಯದಲ್ಲಿ ವಿಂಡೀಸ್ ವಿರುದ್ಧ ಶತಕ (134) ಗಳಿಸಿ ಎಲ್ಲರ ಗಮನ ಸೆಳೆದಿದ್ದರು.
ಮೂರು ವಿಕೆಟ್ ಪಡೆದರೂ ಬೇಡದ ದಾಖಲೆ ಬರೆದ ಕನ್ನಡಿಗ ಪ್ರಸಿದ್ಧ್!
ಟೀಂ ಇಂಡಿಯಾ ಮೊದಲ ಟೆಸ್ಟ್ನ ಮೊದಲ ಇನ್ನಿಂಗ್ಸ್ನಲ್ಲಿ 6 ರನ್ಗಳ ಮುನ್ನಡೆಯೊಂದಿಗೆ 2ನೇ ಇನ್ನಿಂಗ್ಸ್ ಆರಂಭಿಸಿದೆ. ಈ ನಡುವೆ ಟೀಂ ಇಂಡಿಯಾದ ವೇಗಿ ಕನ್ನಡಿಗ ಪ್ರಸಿದ್ಧ್ ಕೃಷ್ಣ ಬೇಡದ ದಾಖಲೆಯೊಂದನ್ನು ಬರೆದಿದ್ದಾರೆ.
ಲೀಡ್ಸ್ ಮೈದಾನದಲ್ಲಿ ಗರಿಷ್ಠ ಚೇಸಿಂಗ್ ಎಷ್ಟು? ಭಾರತ ಇನ್ನೂ ಎಷ್ಟು ರನ್ಗಳಿಸಿದ್ರೆ ಸೇಫ್?
ಭಾರತ ಹೆಡಿಂಗ್ಲೆಯಲ್ಲಿ ಟೆಸ್ಟ್ ಪಂದ್ಯ ಗೆಲ್ಲಲು ಎಷ್ಟು ರನ್ಗಳಿಸಿದರೆ ಉತ್ತಮ, ಹಾಗೂ ಈ ಮೈದಾನದಲ್ಲಿ ದಾಖಲಾದ ಗರಿಷ್ಠ ಚೇಸ್ ಎಷ್ಟು ಎಂಬುದನ್ನ ಈ ಸುದ್ದಿಯಲ್ಲಿ ತಿಳಿದುಕೊಳ್ಳೋಣ.
ಭಾರತ-ಇಂಗ್ಲೆಂಡ್ ಪ್ರಥಮ ಟೆಸ್ಟ್ | ಚೆಂಡು ಬದಲಿಸದ ಅಂಪೈರ್ ವಿರುದ್ಧ ಆಕ್ರೋಶ: ಪಂತ್ ಗೆ ನಿಷೇಧದ ಭೀತಿ?
ರಿಷಭ್ ಪಂತ್ | PC : X @CricketNDTV ಲೀಡ್ಸ್: ಆತಿಥೇಯ ಇಂಗ್ಲೆಂಡ್ ತಂಡದ ವಿರುದ್ಧದ ಪ್ರಥಮ ಟೆಸ್ಟ್ ನಲ್ಲಿ ಅಮೋಘ ಶತಕ ಬಾರಿಸುವ ಮೂಲಕ ಸುದ್ದಿ ಮಾಡಿದ್ದ ಭಾರತ ತಂಡದ ಉಪ ನಾಯಕ ರಿಷಭ್ ಪಂತ್, ಇದೀಗ ಪಂದ್ಯದ ಮೂರನೆ ದಿನದಾಟದಲ್ಲಿ ವಿಕೆಟ್ ಕೀಪಿಂಗ್ ವೇಳೆ ಅನುಚಿತ ವರ್ತನೆ ತೋರಿದ್ದಕ್ಕಾಗಿ ನಿಷೇಧದ ಭೀತಿಗೆ ಸಿಲುಕಿದ್ದಾರೆ. ಇಂಗ್ಲೆಂಡ್ ತಂಡದ ಎರಡನೆ ಇನಿಂಗ್ಸ್ ಬ್ಯಾಟಿಂಗ್ ವೇಳೆ ರಿಷಭ್ ಪಂತ್ ಚೆಂಡು ಬದಲಿಸುವಂತೆ ಅಂಪೈರ್ ಅನ್ನು ಕೋರಿದರು. ಆದರೆ, ಚೆಂಡು ಪರಿಶೀಲಿಸಿದ ಅಂಪೈರ್, ಚೆಂಡು ಬದಲಾವಣೆಗೆ ನಿರಾಕರಿಸಿದರು. ಅಂಪೈರ್ ಅವರ ಈ ನಿರ್ಧಾರದಿಂದ ಅಸಮಾಧಾನಗೊಂಡ ಪಂತ್, ಚೆಂಡನ್ನು ಬಲವಾಗಿ ನೆಲಕ್ಕೆ ಎಸೆದಿದ್ದರು. ಅಂಪೈರ್ ನಿರ್ಧಾರಕ್ಕೆ ವ್ಯತಿರಿಕ್ತವಾಗಿ ಪಂತ್ ತೋರಿದ ಈ ಅನುಚಿತ ವರ್ತನೆಯು ಐಸಿಸಿ ನಿಯಮಗಳ ಉಲ್ಲಂಘನೆಯಾಗಿದೆ ಎಂದು ಹೇಳಲಾಗಿದ್ದು, ಈ ಕುರಿತು ಇದುವರೆಗೆ ಯಾವುದೇ ಅಧಿಕೃತ ಹೇಳಿಕೆ ಹೊರ ಬಿದ್ದಿಲ್ಲ. ಈ ನಡುವೆ, ಇಂಗ್ಲೆಂಡ್ ತಂಡದ ಎದುರಿನ ಪ್ರಥಮ ಟೆಸ್ಟ್ ನ ಮೂರನೆಯ ದಿನದಾಟದ ಅಂತ್ಯಕ್ಕೆ ಭಾರತ ತಂಡ 96 ರನ್ ಗಳ ಮುನ್ನಡೆ ಗಳಿಸಿದೆ. ದಿನದಾಟದಂತ್ಯಕ್ಕೆ ಭಾರತ ತಂಡ 2 ವಿಕೆಟ್ ನಷ್ಟಕ್ಕೆ 90 ರನ್ ಗಳಿಸಿದ್ದು, ಕ್ರಮವಾಗಿ 47 ರನ್ ಹಾಗೂ 6 ರನ್ ಗಳಿಸಿರುವ ಕೆ.ಎಲ್.ರಾಹುಲ್ ಹಾಗೂ ಶುಭಮನ್ ಗಿಲ್ ಕ್ರೀಸಿನಲ್ಲಿದ್ದಾರೆ.
ಭಾರತಕ್ಕೆ ಮತ್ತೆ ಆಸರೆಯಾದ ಕನ್ನಡಿಗ ರಾಹುಲ್! ಟೀಮ್ ಇಂಡಿಯಾಗೆ 96 ರನ್ಗಳ ಮಹತ್ವದ ಮುನ್ನಡೆ
6 ರನ್ಗಳ ಮುನ್ನಡೆಯೊಂದಿಗೆ ಬ್ಯಾಟಿಂಗ್ ಆರಂಭಿಸಿದ ಭಾರತ 2ನೇ ಇನ್ನಿಂಗ್ಸ್ನಲ್ಲಿ ನಿರೀಕ್ಷಿತ ಆರಂಭ ಪಡೆಯುವಲ್ಲಿ ವಿಫಲವಾಯಿತು. ಮೊದಲ ಇನ್ನಿಂಗ್ಸ್ನ ಶತಕ ವೀರ ಯಶಸ್ವಿ ಜೈಸ್ವಾಲ್ ಕೇವಲ 4 ರನ್ಗಳಿಸಿ ಬ್ರೈಡನ್ ಕಾರ್ಸ್ಗೆ ಬೌಲಿಂಗ್ನಲ್ಲಿ ವಿಕೆಟ್ ಕೀಪರ್ ಜೇಮಿ ಸ್ಮಿತ್ಗೆ ಕ್ಯಾಚ್ ನೀಡಿ ಔಟ್ ಆದರು. ನಂತರ ಬಂದ ಸಾಯಿ ಸುದರ್ಶನ್ 2ನೇ ವಿಕೆಟ್ ಜೊತೆಯಾಟದಲ್ಲಿ 66 ರನ್ ಸೇರಿಸಿದರು.
ಫಸ್ಟ್ ಇನ್ನಿಂಗ್ಸ್ನಲ್ಲಿ ಡಕ್ ಔಟ್! 2ನೇ ಇನ್ನಿಂಗ್ಸ್ನಲ್ಲಿ ಹೀಗೆ ಆಗಬಾರದು ಅಂತ ಸಾಯಿ ಮಾಡಿದ್ದೇನು?
ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್ನ ಮೊದಲ ದಿನ ಸಂಪೂರ್ಣ ಮೇಲುಗೈ ಸಾಧಿಸಿ ಬೃಹತ್ ಮೊತ್ತ ಕಲೆಹಾಕಿತ್ತು. ಆದ್ರೆ, ಅತೀ ಹೆಚ್ಚು ನಿರೀಕ್ಷೆಯಿಂದ ಆಯ್ಕೆ ಮಾಡಿದ್ದ ತಮಿಳುನಾಡು ಮೂಲಕ ಸಾಯಿ ಸುದರ್ಶನ್ ಮೊದಲ ಇನ್ನಿಂಗ್ಸ್ನಲ್ಲಿ ವೈಫಲ್ಯ ಅನುಭವಿಸಿದರು.
ಇಂಗ್ಲೆಂಡ್ ನೆಲದಲ್ಲಿ ಚರಿತ್ರೆ ಸೃಷ್ಠಿಸಿದ ಬುಮ್ರಾ! ಕಪಿಲ್ ದೇವ್ ದಾಖಲೆ ಸರಿಗಟ್ಟಿದ ಯಾರ್ಕರ್ ಕಿಂಗ್
ಲೀಡ್ಸ್ನ ಹೆಡಿಂಗ್ಲಿಯಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾ 5 ವಿಕೆಟ್ಗಳನ್ನು ಕಬಳಿಸುವ ಮೂಲಕ ತಮ್ಮ ದಾಖಲೆಯ ಬೌಲಿಂಗ್ ಪ್ರದರ್ಶನ ಮುಂದುವರಿಸಿದರು.