IND vs SL: ಇಂದು ಲಂಕಾ ವಿರುದ್ಧ ಮೊದಲ ಟಿ20; ಹೇಗಿರಲಿದೆ ಭಾರತ ಆಡುವ ಬಳಗ?
IND vs SL: ಪಲ್ಲೆಕೆಲೆ ಕ್ರೀಡಾಂಗಣದ ಪಿಚ್ ಬ್ಯಾಟರ್ಗಳಿಗೆ ಹೆಚ್ಚು ನೆರವು ನೀಡುತ್ತದೆ. ಮೊದಲು ಬ್ಯಾಟಿಂಗ್ ಮಾಡುವ ತಂಡಗಳು ಸಾಮಾನ್ಯವಾಗಿ 170 ರನ್ಗಳ ಗುರಿಯನ್ನು ದಾಟಿದರೆ ಮಾತ್ರ ಪಂದ್ಯದಲ್ಲಿ ಪೈಪೋಟಿ ನೀಡಬಹುದು. ಈ ಮೊತ್ತವನ್ನು ಇಲ್ಲಿ ಸ್ಪರ್ಧಾತ್ಮಕ ಮೊತ್ತವೆಂದು ಪರಿಗಣಿಸಲಾಗಿದೆ. The post IND vs SL: ಇಂದು ಲಂಕಾ ವಿರುದ್ಧ ಮೊದಲ ಟಿ20; ಹೇಗಿರಲಿದೆ ಭಾರತ ಆಡುವ ಬಳಗ? first appeared on Vistara News .
Paris Olympics 2024 : ಬಿಲ್ಲುಗಾರಿಕೆ, ಅಥ್ಲೆಟಿಕ್ಸ್, ಬ್ಯಾಡ್ಮಿಂಟನ್, ಬಾಕ್ಸಿಂಗ್, ಈಕ್ವೆಸ್ಟ್ರಿಯನ್, ಗಾಲ್ಫ್, ಹಾಕಿ, ಜೂಡೋ, ರೋಯಿಂಗ್, ಸೇಲಿಂಗ್, ಶೂಟಿಂಗ್, ಈಜು, ಟೇಬಲ್ ಟೆನಿಸ್ ಮತ್ತು ಟೆನಿಸ್ ಸೇರಿದಂತೆ 16 ಕ್ರೀಡೆಗಳಲ್ಲಿ 117 ಕ್ರೀಡಾಪಟುಗಳು 69 ಪದಕ ಸ್ಪರ್ಧೆಗಳಲ್ಲಿ ಭಾಗವಹಿಸಲಿದ್ದಾರೆ. The post Paris Olympics 2024 : ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಭಾಗಿಯಾಗಿರುವ ಭಾರತದ ಅಥ್ಲೀಟ್ಗಳಿಗೆ ಶುಭ ಕೋರಿದ ಪ್ರಧಾನಿ ಮೋದಿ first appeared on Vistara News .
ರಾಜ್ಯ ಸರಕಾರ ಮುಖ್ಯ ಕಾರ್ಯದರ್ಶಿಯಾಗಿ ಡಾ.ಶಾಲಿನಿ ರಜನೀಶ್ ನೇಮಕ
ಡಾ.ಶಾಲಿನಿ ರಜನೀಶ್ ಬೆಂಗಳೂರು : ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಯಾಗಿ ಡಾ.ಶಾಲಿನಿ ರಜನೀಶ್ ಅವರನ್ನು ನೇಮಕ ಮಾಡಲಾಗಿದೆ. ಮುಖ್ಯ ಕಾರ್ಯದರ್ಶಿಯಾಗಿರುವ ಡಾ.ರಜನೀಶ್ ಗೋಯಲ್ ಅವರು ಜು.31ಕ್ಕೆ ಸೇವಾ ನಿವೃತ್ತಿ ಹೊಂದಲಿದ್ದಾರೆ. ಮುಂದಿನ ಮುಖ್ಯ ಕಾರ್ಯದರ್ಶಿಯಾಗಿ ನೇಮಕ ಮಾಡಲು ಶುಕ್ರವಾರ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಡಾ.ಶಾಲಿನಿ ರಜನೀಶ್ ಅವರ ಡಾ.ರಜನೀಶ್ ಗೋಯಲ್ ಪತ್ನಿ. 1989ನೇ ಬ್ಯಾಚ್ನ ಐಎಎಸ್ ಅಧಿಕಾರಿಯಾಗಿರುವ ಶಾಲಿನಿ ರಜನೀಶ್ ಅವರು 2027ರ ಜೂನ್ ಅಂತ್ಯಕ್ಕೆ ನಿವೃತ್ತರಾಗಲಿದ್ದಾರೆ.
india tour of sri lanka 2024 : ಜ್ವರದಿಂದಾಗಿ ಹೊರಗುಳಿಯುವುದು ವೇಗಿಗೂ ದೊಡ್ಡ ಹೊಡೆತವಾಗಲಿದೆ. ಗಾಯದ ಸಮಸ್ಯೆಯಿಂದಾಗಿ ಬಿನುರಾ ಫರ್ನಾಂಡೊ ಶ್ರೀಲಂಕಾ ತಂಡದಲ್ಲಿ ಇನ್ನೂ ನಿಯಮಿತ ಆಟಗಾರನಾಗಿಲ್ಲ ಉಳಿದಿಲ್ಲ. ಮುಂಬರುವ ಪಂದ್ಯಕ್ಕೆ ಅವರು ಸಂಪೂರ್ಣವಾಗಿ ಚೇತರಿಸಿಕೊಳ್ಳುವ ಭರವಸೆಯಲ್ಲಿದ್ದಾರೆ. ಟಿ20ಐನಲ್ಲಿ 17 ಪಂದ್ಯಗಳನ್ನಾಡಿ 16 ವಿಕೆಟ್ ಕಬಳಿಸಿದ್ದಾರೆ. The post India Tour of Sri Lanka 2024 : ಶ್ರೀಲಂಕಾ ತಂಡಕ್ಕೆ 3ನೇ ಹೊಡೆತ; ಭಾರತ ವಿರುದ್ಧದ ಟಿ20 ಸರಣಿಗೆ ಬಿನುರಾ ಫರ್ನಾಂಡೊ ಅಲಭ್ಯ first appeared on Vistara News .
PARIS OLYMPICS 2024 : ಪ್ಯಾರಿಸ್ ಒಲಿಂಪಿಕ್ಸ್ ಗ್ರಾಮದಲ್ಲೇ ಮದುವೆ ನಿಶ್ಚಿತಾರ್ಥ ಮಾಡಿಕೊಂಡ ಅಥ್ಲೀಟ್ಗಳು
PARIS OLYMPICS 2024 : ಈ ಸುದ್ದಿ ಮತ್ತು ಪೋಸ್ಟ್ ಅನ್ನು ಒಲಿಂಪಿಕ್ಸ್ ಅಧಿಕೃತ ಎಕ್ಸ್ ಹ್ಯಾಂಡಲ್ ಹಂಚಿಕೊಂಡಿದೆ ಪ್ಯಾರಿಸ್ 2024 ಒಲಿಂಪಿಕ್ ಗ್ರಾಮದಲ್ಲಿ ನಡೆದ ಮೊದಲ ಮದುವೆ ಪ್ರಸ್ತಾಪ. ಪಾಬ್ಲೊ ಸಿಮೊನೆಟ್ ಮತ್ತು ಪಿಲಾರ್ ಕ್ಯಾಂಪೊಯ್ ಅರ್ಜೆಂಟೀನಾದ ತಮ್ಮ ಹ್ಯಾಂಡ್ಬಾಲ್ ಮತ್ತು ಹಾಕಿ ತಂಡದ ಸದಸ್ಯರಿಂದ ಅಭಿನಂದನೆಗಳನ್ನು ಪಡೆದುಕೊಂಡರು. The post PARIS OLYMPICS 2024 : ಪ್ಯಾರಿಸ್ ಒಲಿಂಪಿಕ್ಸ್ ಗ್ರಾಮದಲ್ಲೇ ಮದುವೆ ನಿಶ್ಚಿತಾರ್ಥ ಮಾಡಿಕೊಂಡ ಅಥ್ಲೀಟ್ಗಳು first appeared on Vistara News .
Shubman Gill: ಬಾಂಗ್ಲಾ ವಿರುದ್ಧದ ಟೆಸ್ಟ್ ಸರಣಿಗೆ ಶುಭಮನ್ ಗಿಲ್ ಉಪನಾಯಕ!
Shubman Gill: 2027ರ ಏಕದಿನ ವಿಶ್ವಕಪ್ ಗಮನದಲ್ಲಿಟ್ಟುಕೊಂಡು ಹೊಸ ನಾಯಕನನ್ನು ಬೆಳೆಸಲು ಪ್ರಧಾನ ಕೋಚ್ ಗೌತಮ್ ಗಂಭೀರ್ ಉದ್ದೇಶಿಸಿದ್ದು, ಈ ನಿಟ್ಟಿನಲ್ಲಿ ಶುಭಮನ್ ಗಿಲ್ಗೆ ಏಕದಿನ ತಂಡದಲ್ಲಿ ಉಪನಾಯಕನ ಸ್ಥಾನ ನೀಡಲಾಗಿದೆ. The post Shubman Gill: ಬಾಂಗ್ಲಾ ವಿರುದ್ಧದ ಟೆಸ್ಟ್ ಸರಣಿಗೆ ಶುಭಮನ್ ಗಿಲ್ ಉಪನಾಯಕ! first appeared on Vistara News .
SL vs IND 1st T20I: ನಾಳೆ ಭಾರತ-ಲಂಕಾ ಮೊದಲ ಟಿ20; ಇತ್ತಂಡಗಳ ದಾಖಲೆ, ಪಿಚ್ ರಿಪೋರ್ಟ್ ವರದಿ ಹೇಗಿದೆ?
SL vs IND 1st T20I: ಉಭಯ ತಂಡಗಳು ಮೊದಲ ಬಾರಿಗೆ ಟಿ20 ಆಡಿದ್ದು 2009ರಲ್ಲಿ. ಕೊಲಂಬೊದ ಪ್ರೇಮದಾಸ ಕ್ರಿಕೆಟ್ ಸ್ಟೆಡಿಯಂನಲ್ಲಿ ನಡೆದ ಪಂದ್ಯ ಇದಾಗಿತ್ತು. ಇಲ್ಲಿ ಧೋನಿ ಪಡೆ 3 ವಿಕೆಟ್ಗಳ ಗೆಲುವು ಕಂಡಿತ್ತು. ಶ್ರೀಲಂಕಾ ತಂಡ ಭಾರತ ವಿರುದ್ಧ ಮೊದಲ ಟಿ20 ಗೆಲುವು ಸಾಧಿಸಿದ್ದು ಕೂಡ 2009ರಲ್ಲಿ The post SL vs IND 1st T20I: ನಾಳೆ ಭಾರತ-ಲಂಕಾ ಮೊದಲ ಟಿ20; ಇತ್ತಂಡಗಳ ದಾಖಲೆ, ಪಿಚ್ ರಿಪೋರ್ಟ್ ವರದಿ ಹೇಗಿದೆ? first appeared on Vistara News .
Maharaja Trophy Squads: ಹರಾಜಿನ ಬಳಿಕ ಎಲ್ಲ ತಂಡಗಳ ಆಟಗಾರರ ಪಟ್ಟಿ ಹೀಗಿದೆ
Maharaja Trophy Squads: ಟೀಮ್ ಇಂಡಿಯಾ ಮಾಜಿ ಕೋಚ್ ರಾಹುಲ್ ದ್ರಾವಿಡ್ ಪುತ್ರ ಸಮಿತ್ ದ್ರಾವಿಡ್(Samit Dravid) ಅವರನ್ನು ಮೂಲಬೆಲೆ 50 ಸಾವಿರ ನೀಡಿ ಮೈಸೂರು ವಾರಿಯರ್ಸ್ ತಂಡ ಖರೀದಿಸಿತು. The post Maharaja Trophy Squads: ಹರಾಜಿನ ಬಳಿಕ ಎಲ್ಲ ತಂಡಗಳ ಆಟಗಾರರ ಪಟ್ಟಿ ಹೀಗಿದೆ first appeared on Vistara News .
ಟಿ20 ಲೀಗ್ ಆಡಲು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ರಾಹುಲ್ ದ್ರಾವಿಡ್ ಪುತ್ರ ಸಜ್ಜು
ಸಮಿತ್ ದ್ರಾವಿಡ್ Photo: x.com/mysore_warriors ಬೆಂಗಳೂರು: ಭಾರತ ಕ್ರಿಕೆಟ್ ತಂಡದ ಮಾಜಿ ಕೋಚ್ ಹಾಗೂ ಮಾಜಿ ನಾಯಕ ರಾಹುಲ್ ದ್ರಾವಿಡ್ ಅವರ ಪುತ್ರ ಸಮಿತ್ ದ್ರಾವಿಡ್ ಟಿ20 ಲೀಗ್ ಆಡಲು ಸಜ್ಜಾಗಿದ್ದು, ಮೈಸೂರು ವಾರಿಯರ್ಸ್ ತಂಡ ಇವರನ್ನು ಹರಾಜಿನಲ್ಲಿ ಖರೀದಿಸಿದೆ. ಪ್ರಸಕ್ತ ಋತುವಿನ ಮಹಾರಾಜ ಟ್ರೋಫಿ ಕೆಎಸ್ಟಿಎ ಟಿ20 ಆರಂಭಕ್ಕೆ ಮುನ್ನ ಈ ಮೈಸೂರು ವಾರಿಯರ್ಸ್ ಈ ಅಂಶವನ್ನು ಬಹಿರಂಗಪಡಿಸಿದೆ. ಮಧ್ಯಮ ಕ್ರಮಾಂಕದ ಆಟಗಾರ ಮತ್ತು ವೇಗದ ಬೌಲರ್ ಸಮಿತ್ ಅವರ ಸೇವೆಯನ್ನು 50 ಸಾವಿರ ರೂಪಾಯಿಗೆ ವಾರಿಯರ್ಸ್ ಪಡೆದುಕೊಂಡಿದೆ. ಕೆಎಸ್ಸಿಎಯ ವಿವಿಧ ವಯೋವರ್ಗದ ಟೂರ್ನಿಗಳಲ್ಲಿ ಅವರು ಅಪಾಯ ಭರವಸೆ ಮೂಡಿಸಿರುವ ಹಿನ್ನೆಲೆಯಲ್ಲಿ ಅವರನ್ನು ನಮ್ಮ ತಂಡದಲ್ಲಿ ಬಳಸಿಕೊಳ್ಳುವುದು ಉತ್ತಮ ಎಂಬ ಭಾವನೆ ನಮ್ಮದು ಎಂದು ಮೈಸೂರು ವಾರಿಯರ್ಸ್ ತಂಡದ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ. ಪ್ರಸಕ್ತ ಋತುವಿನಲ್ಲಿ ಕೂಚ್ಬೆಹಾರಿ ಟ್ರೋಫಿ ಗೆದ್ದ 19 ವರ್ಷ ವಯೋಮಿತಿಯ ಕರ್ನಾಟಕ ತಂಡದಲ್ಲಿ ಸಮಿತ್ ಇದ್ದರು. ಅಂತೆಯೇ ಇದಕ್ಕೂ ಮುನ್ನ ಭಾರತಕ್ಕೆ ಭೇಟಿ ನೀಡಿದ್ದ ಲ್ಯಾಕ್ಶೈರ್ ತಂಡದ ವಿರುದ್ಧದ ಪಂದ್ಯದಲ್ಲಿ ಕೆಎಸ್ ಸಿಎ 11 ತಂಡವನ್ನು ಕೂಡಾ ಇವರು ಪ್ರತಿನಿಧಿಸಿದ್ದರು. ಕರುಣ್ ನಾಯರ್ ನೇತೃತ್ವದ ಮೈಸೂರು ವಾರಿಯರ್ಸ್ ಕಳೆದ ಬಾರಿ ರನ್ನರ್ ಅಪ್ ಆಗಿ ಹೊರಹೊಮ್ಮಿತ್ತು. ಈ ಬಾರಿ 1 ಲಕ್ಷ ರೂಪಾಯಿಗೆ ಖರೀದಿಯಾದ ಪ್ರಸಿದ್ಧ್ ಕೃಷ್ಣಾ ಅವರ ಸೇವೆಯಿಂದಾಗಿ ಬೌಲಿಂಗ್ ವಿಭಾಗ ಕೂಡಾ ಬಲಿಷ್ಠವಾಗಲಿದೆ. ಫ್ರಾಂಚೈಸಿಗಳು ನಾಯರ್ ಅವರನ್ನು ಉಳಿಸಿಕೊಂಡಿದ್ದು, ಇತ್ತೀಚೆಗೆ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಪ್ರಸಿದ್ಧ್ ಕೃಷ್ಣ ಸದ್ಯದಲ್ಲೇ ಸ್ಪರ್ಧಾತ್ಮಕ ಕ್ರಿಕೆಟ್ಗೆ ಮರಳಲಿದ್ದಾರೆ ಎಂದು ಮೂಲಗಳು ಹೇಳಿವೆ. � The first step towards creating his legacy! Welcome aboard, Samit Dravid #MysoreWarriors #GoWarriors #CricketTwitter pic.twitter.com/kN48J0vWY4 — Mysore Warriors (@mysore_warriors) July 25, 2024
Women’s Asia Cup: ಇಂದು ಸೆಮಿಫೈನಲ್ ಕಾದಾಟ: ಬಾಂಗ್ಲಾ ಸವಾಲಿಗೆ ಭಾರತ ಸಜ್ಜು
Women's Asia Cup: ಭಾರತ ತಂಡ ಪ್ರಶಸ್ತಿ ಗೆಲ್ಲುವ ಹಾಟ್ ಫೇವರಿಟ್ ಆಗಿದ್ದರೂ ಕೂಡ ಯಾವುದೇ ಕಾರಣಕ್ಕೂ ಎದುರಾಳಿಯನ್ನು ಹಗುರವಾಗಿ ಕಾಣುವಂತಿಲ್ಲ. ಅದರಲ್ಲೂ ಅಪಾಯಕಾರಿ ಬಾಂಗ್ಲಾ ವಿರುದ್ಧ ಎಚ್ಚರಿಕೆ ಅತ್ಯಗತ್ಯ. The post Women’s Asia Cup: ಇಂದು ಸೆಮಿಫೈನಲ್ ಕಾದಾಟ: ಬಾಂಗ್ಲಾ ಸವಾಲಿಗೆ ಭಾರತ ಸಜ್ಜು first appeared on Vistara News .
Sri lanka Team: ಟಿ20 ಸರಣಿ ಆರಂಭಕ್ಕೂ ಮುನ್ನವೇ ಲಂಕಾಗೆ ಗಾಯದ ಬರೆ; ಇಬ್ಬರು ವೇಗಿಗಳು ಔಟ್
Sri lanka Team: ನುವಾನ್ ತುಷಾರ ಕಳೆದ ತಿಂಗಳು ಮುಕ್ತಾಯ ಕಂಡಿದ್ದ ಟಿ20 ವಿಶ್ವಕಪ್ನಲ್ಲಿ ಶ್ರೀಲಂಕಾ ತಂಡದ ಪರ ಅತಿ ಹೆಚ್ಚು ವಿಕೆಟ್ ಕಿತ್ತ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. The post Sri lanka Team: ಟಿ20 ಸರಣಿ ಆರಂಭಕ್ಕೂ ಮುನ್ನವೇ ಲಂಕಾಗೆ ಗಾಯದ ಬರೆ; ಇಬ್ಬರು ವೇಗಿಗಳು ಔಟ್ first appeared on Vistara News .
Maharaja Trophy: ಮೈಸೂರು ವಾರಿಯರ್ಸ್ ತಂಡ ಸೇರಿದ ದ್ರಾವಿಡ್ ಪುತ್ರ ಸಮಿತ್
Maharaja Trophy: ಆಲ್ ರೌಂಡರ್ ಚೇತನ್ ಎಲ್ಆರ್ ಹರಾಜಿನಲ್ಲಿ ಭಾರೀ ಮೊತ್ತ ಪಡೆದರು. ಬೆಂಗಳೂರು ಬ್ಲಾಸ್ಟರ್ಸ್ ತಂಡವು ಅವರನ್ನು 8.60 ಲಕ್ಷ ರೂ.ಗೆ ಖರೀದಿ ಮಾಡಿತು The post Maharaja Trophy: ಮೈಸೂರು ವಾರಿಯರ್ಸ್ ತಂಡ ಸೇರಿದ ದ್ರಾವಿಡ್ ಪುತ್ರ ಸಮಿತ್ first appeared on Vistara News .
IPL 2025: ಐಪಿಎಲ್ ಮೆಗಾ ಹರಾಜಿಗೂ ಮುನ್ನಪ್ರಮುಖ ಬೇಡಿಕೆ ಮುಂದಿಟ್ಟ ಫ್ರಾಂಚೈಸಿಗಳು
IPL 2025: ಪ್ರತಿ ತಂಡ 3-4 ಆಟಗಾರರನ್ನು ಮಾತ್ರ ರಿಟೇನ್ ಮಾಡಿಕೊಳ್ಳಲು ಮಾತ್ರ ಅವಕಾಶ ಲಭಿಸಲಿದೆ ಎಂದು ಹೇಳಲಾಗಿತ್ತು. ಇದೀಗ ಎಲ್ಲ ಫ್ರಾಂಚೈಸಿಗಳು 8 ಆಟಗಾರರನ್ನು ರಿಟೇನ್ ಮಾಡಿಕೊಳ್ಳಲು ಅನುಮತಿ ನೀಡುವಂತೆ ಬಿಸಿಸಿಐ ಮತ್ತು ಐಪಿಎಲ್ ಆಡಳಿತ ಮಂಡಳಿಗೆ ಬೇಡಿಕೆ ಇರಿಸಿದೆ ಎನ್ನಲಾಗಿದೆ. The post IPL 2025: ಐಪಿಎಲ್ ಮೆಗಾ ಹರಾಜಿಗೂ ಮುನ್ನಪ್ರಮುಖ ಬೇಡಿಕೆ ಮುಂದಿಟ್ಟ ಫ್ರಾಂಚೈಸಿಗಳು first appeared on Vistara News .
ಒಲಿಂಪಿಕ್ಸ್ ನಲ್ಲಿ ಭಾರತದ ಬಂಗಾರದ ಸಾಧನೆ
ನೀರಜ್ ಚೋಪ್ರಾ | PTI ಹೊಸದಿಲ್ಲಿ: ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆಲ್ಲುವುದು ಯಾವುದೇ ಕ್ರೀಡಾಪಟು ಇಲ್ಲವೇ ತಂಡಕ್ಕೆ ಯಶಸ್ಸಿನ ಶಿಖರವಾಗಿರುತ್ತದೆ. ಭಾರತವು ಈ ತನಕ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ 10 ಚಿನ್ನದ ಪದಕಗಳನ್ನು ಜಯಿಸಿದೆ. ಈ ಪೈಕಿ ಪುರುಷರ ಹಾಕಿ ತಂಡವೊಂದೇ 8 ಚಿನ್ನದ ಪದಕ ಗೆದ್ದುಕೊಂಡಿದೆ. ಅಭಿನವ್ ಬಿಂದ್ರಾ ಹಾಗೂ ನೀರಜ್ ಚೋಪ್ರಾ ಅವರು ವೈಯಕ್ತಿಕ ವಿಭಾಗದಲ್ಲಿ ಬಂಗಾರದ ಪದಕ ಜಯಿಸಿದ್ದರು. ಭಾರತೀಯ ಪುರುಷರ ಹಾಕಿ ತಂಡವು 1928ರಲ್ಲಿ ಆಮ್ಸ್ಟರ್ಡ್ಯಾಮ್ನಲ್ಲಿ ನಡೆದಿದ್ದ ಒಲಿಂಪಿಕ್ಸ್ ನಲ್ಲಿ ಮೊದಲ ಬಾರಿ ಚಿನ್ನದ ಪದಕ ಜಯಿಸಿತ್ತು. 1920ರಿಂದ 1950ರ ತನಕ ಭಾರತವು ಹಾಕಿಯಲ್ಲಿ ಅಜೇಯವಾಗುಳಿದಿದ್ದು, ವಿಶ್ವ ಶ್ರೇಷ್ಠ ತಂಡವಾಗಿ ಮೆರೆದಾಡಿತ್ತು. 1928ರ ಗೇಮ್ಸ್ ನಲ್ಲಿ ಭಾರತವು ಒಟ್ಟು 29 ಗೋಲುಗಳನ್ನು ಗಳಿಸಿದ್ದು, ಹಾಕಿ ಮಾಂತ್ರಿಕ ಧ್ಯಾನ್ ಚಂದ್ ಒಬ್ಬರೇ 14 ಗೋಲು ಗಳಿಸಿದ್ದರು. 1932ರಲ್ಲಿ ವಿಶ್ವವು ಮಹಾ ಆರ್ಥಿಕ ಕುಸಿತದಿಂದ ಪರದಾಡುತ್ತಿದ್ದಾಗ ಲಾಸ್ ಏಂಜಲೀಸ್ ಗೇಮ್ಸ್ ನಲ್ಲಿ ಕೇವಲ 3 ತಂಡಗಳು ಭಾಗವಹಿಸಿದ್ದವು. ಅಮೆರಿಕ ಹಾಗೂ ಜಪಾನ್ ವಿರುದ್ಧ ಪ್ರಾಬಲ್ಯ ಮೆರೆದಿದ್ದ ಭಾರತವು 2ನೇ ಚಿನ್ನ ಗೆದ್ದುಕೊಂಡಿತ್ತು. 1936ರಲ್ಲಿ ಬರ್ಲಿನ್ ಒಲಿಂಪಿಕ್ಸ್ ನಲ್ಲಿ ಧ್ಯಾನ್ಚಂದ್ ನಾಯಕತ್ವದಲ್ಲಿ ಭಾರತವು ಹ್ಯಾಟ್ರಿಕ್ ಚಿನ್ನ ಜಯಿಸಿತು. ಭಾರತವು ಫೈನಲ್ನಲ್ಲಿ ಜರ್ಮನಿಯನ್ನು 8-1ರಿಂದ ಸೋಲಿಸಿತ್ತು. ಧ್ಯಾನ್ಚಂದ್ ಫೈನಲ್ನಲ್ಲಿ 4 ಗೋಲು ಗಳಿಸಿದ್ದರು. ಸ್ವಾತಂತ್ರ್ಯ ಪಡೆದ ನಂತರವೂ ಭಾರತದ ಹಾಕಿ ತಂಡ ತನ್ನ ಪ್ರಾಬಲ್ಯ ಮುಂದುವರಿಸಿದ್ದು 1948ರ ಲಂಡನ್ ಒಲಿಂಪಿಕ್ಸ್ ನಲ್ಲಿ ಸ್ವತಂತ್ರ ಭಾರತವಾಗಿ ಒಲಿಂಪಿಕ್ಸ್ ನಲ್ಲಿ ಸ್ಪರ್ಧಿಸಿ ಕಿಶನ್ ಲಾಲ್ ನೇತೃತ್ವದಲ್ಲಿ 4ನೇ ಚಿನ್ನ ಗೆದ್ದುಕೊಂಡಿತು. ನಾಯಕ ಕೆ.ಡಿ. ಸಿಂಗ್ ಬಾಬಾ ನೇತೃತ್ವದಲ್ಲಿ ಭಾರತವು 1952ರ ಹೆಲ್ಸಿಂಕಿ ಒಲಿಂಪಿಕ್ಸ್ ನಲ್ಲಿ ಸತತ 5ನೇ ಚಿನ್ನದ ಪದಕ ಜಯಿಸಿತು. ಉಪ ನಾಯಕ ಬಲ್ಬೀರ್ ಸಿಂಗ್ 3 ಪಂದ್ಯಗಳಲ್ಲಿ 9 ಗೋಲುಗಳನ್ನು ಗಳಿಸಿದ್ದರು. ಭಾರತವು ಒಲಿಂಪಿಕ್ಸ್ನಲ್ಲಿ ಸತತ 6ನೇ ಚಿನ್ನದ ಪದಕ ಜಯಿಸಿ ಅಜೇಯ ಓಟ ಮುಂದುವರಿಸಿತು. ಮಾತ್ರವಲ್ಲ 1956ರ ಮೆಲ್ಬರ್ನ್ ಗೇಮ್ಸ್ ನಲ್ಲಿ ಪೂರ್ಣ ಪಂದ್ಯಾವಳಿಯಲ್ಲಿ ಕ್ಲೀನ್ಶೀಟ್ ಕಾಯ್ದುಕೊಂಡಿತು. ಭಾರತೀಯ ಹಾಕಿ ತಂಡದ ಸತತ ಗೆಲುವಿನ ಓಟಕ್ಕೆ 1960ರಲ್ಲಿ ಪಾಕಿಸ್ತಾನ ಬ್ರೇಕ್ ಹಾಕಿತು. ಆದರೆ 1964ರ ಟೋಕಿಯೊ ಒಲಿಂಪಿಕ್ಸ್ ನಲ್ಲಿ ಮತ್ತೊಮ್ಮೆ ಚಿನ್ನ ಜಯಿಸಿದ ಭಾರತ ಮರು ಹೋರಾಟ ನೀಡಿತು. 1980ರ ಮಾಸ್ಕೊ ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಜಯಿಸಿದ್ದ ಭಾರತವು ಮೊದಲಿನ ಲಯಕ್ಕೆ ಮರಳಿತ್ತು. ಫೈನಲ್ನಲ್ಲಿ ಸ್ಪೇನ್ ತಂಡವನ್ನು 4-3 ಅಂತರದಿಂದ ರೋಚಕವಾಗಿಮಣಿಸಿ 8ನೇ ಬಾರಿ ಚಿನ್ನದ ಪದಕ ಜಯಿಸಿತ್ತು. ಭಾರತವು 2000 ಹಾಗೂ 2004ರಲ್ಲಿ ವೇಟ್ಲಿಫ್ಟಿಂಗ್ ಹಾಗೂ ಶೂಟಿಂಗ್ನಲ್ಲಿ ಪದಕಗಳನ್ನು ಜಯಿಸಿ 21ನೇ ಶತಮಾನದಲ್ಲಿ ವೈಯಕ್ತಿಕ ಕ್ರೀಡೆಯಲ್ಲಿ ಮಿಂಚತೊಡಗಿತು. ಆದರೆ ಅಭಿನವ್ ಬಿಂದ್ರಾ 2008ರ ಬೀಜಿಂಗ್ ಒಲಿಂಪಿಕ್ಸ್ ನಲ್ಲಿ ವೈಯಕ್ತಿಕ ವಿಭಾಗದಲ್ಲಿ ಚಿನ್ನದ ಪದಕ ಗೆದ್ದ ಭಾರತದ ಮೊದಲ ಅತ್ಲೀಟ್ ಎನಿಸಿಕೊಂಡು ಇತಿಹಾಸ ನಿರ್ಮಿಸಿದರು. ಪುರುಷರ 10 ಮೀ.ಏರ್ ರೈಫಲ್ ಶೂಟಿಂಗ್ ಸ್ಪರ್ಧೆಯಲ್ಲಿ ಬಿಂದ್ರಾ ಈ ಸಾಧನೆ ಮಾಡಿದ್ದರು. ಟೋಕಿಯೊ ಒಲಿಂಪಿಕ್ಸ್-2020ರಲ್ಲಿ ಜಾವೆಲಿನ್ ಎಸೆತದಲ್ಲಿ ಪ್ರಶಸ್ತಿ ಬಾಚಿಕೊಂಡ ನೀರಜ್ ಚೋಪ್ರಾ ಟ್ರ್ಯಾಕ್ ಆ್ಯಂಡ್ ಫೀಲ್ಡ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಎನಿಸಿಕೊಂಡರು. ಅಗ್ರಸ್ಥಾನದೊಂದಿಗೆ ಫೈನಲ್ಗೆ ಅರ್ಹತೆ ಪಡೆದಿದ್ದ ಚೋಪ್ರಾ ಪಂದ್ಯಾವಳಿಯಲ್ಲಿ ಮೊದಲ ಸ್ಥಾನ ಕಾಯ್ದುಕೊಂಡಿದ್ದರು. 87.58 ಮೀ.ದೂರಕ್ಕೆ ಜಾವೆಲಿನ್ ಎಸೆದು ಮೊದಲ ಸ್ಥಾನ ಪಡೆದರು. ಭಾರತವು ಒಟ್ಟು 7 ಪದಕಗಳನ್ನು ಜಯಿಸಿ ಒಲಿಂಪಿಕ್ಸ್ನಲ್ಲಿ ಸರ್ವಶ್ರೇಷ್ಠ ಪ್ರದರ್ಶನ ನೀಡಿತು. ಒಲಿಂಪಿಕ್ಸ್ನಲ್ಲಿ ಭಾರತ ಗೆದ್ದಿರುವ ಚಿನ್ನದ ಪದಕಗಳ ಪಟ್ಟಿ ಇಲ್ಲಿದೆ ತಂಡ ಕ್ರೀಡೆ ಸ್ಫರ್ಧೆ ಒಲಿಂಪಿಕ್ಸ್ ಭಾರತೀಯ ಪುರುಷರ ಹಾಕಿ ತಂಡ ಹಾಕಿ ಪುರುಷರ ಹಾಕಿ ಆಮ್ಸ್ಟರ್ಡ್ಯಾಮ್ 1928 ಭಾರತೀಯ ಪುರುಷರ ಹಾಕಿ ತಂಡ ಹಾಕಿ ಪುರುಷರ ಹಾಕಿ ಲಾಸ್ ಏಂಜಲಿಸ್ 1932 ಭಾರತೀಯ ಪುರುಷರ ಹಾಕಿ ತಂಡ ಹಾಕಿ ಪುರುಷರ ಹಾಕಿ ಬರ್ಲಿನ್ 1936 ಭಾರತೀಯ ಪುರುಷರ ಹಾಕಿ ತಂಡ ಹಾಕಿ ಪುರುಷರ ಹಾಕಿ ಲಂಡನ್ 1948 ಭಾರತೀಯ ಪುರುಷರ ಹಾಕಿ ತಂಡ ಹಾಕಿ ಪುರುಷರ ಹಾಕಿ ಹೆಲ್ಸಿಂಕಿ 1952 ಭಾರತೀಯ ಪುರುಷರ ಹಾಕಿ ತಂಡ ಹಾಕಿ ಪುರುಷರ ಹಾಕಿ ಮೆಲ್ಬರ್ನ್ 1956 ಭಾರತೀಯ ಪುರುಷರ ಹಾಕಿ ತಂಡ ಹಾಕಿ ಪುರುಷರ ಹಾಕಿ ಟೋಕಿಯೊ 1964 ಭಾರತೀಯ ಪುರುಷರ ಹಾಕಿ ತಂಡ ಹಾಕಿ ಪುರುಷರ ಹಾಕಿ ಮಾಸ್ಕೊ 1980 ಅಭಿನವ್ ಬಿಂದ್ರಾ ಶೂಟಿಂಗ್ ಪುರುಷರ 10 ಮೀ. ಏರ್ ರೈಫಲ್ ಬೀಜಿಂಗ್ 2008 ನೀರಜ್ ಚೋಪ್ರಾ ಅತ್ಲೆಟಿಕ್ಸ್ ಪುರುಷರ ಜಾವೆಲಿನ್ ಎಸೆತ ಟೋಕಿಯೊ 2020
ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಅತಿ ಕಿರಿಯ ಸ್ಪರ್ಧಿ: ದಿನಿದಿ ದೇಸಿಂಘು
ದಿನಿದಿ ದೇಸಿಂಘು | PC : NDTV ಹೊಸದಿಲ್ಲಿ: ಭಾರತದ ಹದಿಹರಯದ ಈಜು ಪ್ರತಿಭೆ ದಿನಿದಿ ದೇಸಿಂಘು ತನ್ನ ಒಲಿಂಪಿಕ್ಸ್ ಅಭಿಯಾನವನ್ನು ಪ್ಯಾರಿಸ್ ಒಲಿಂಪಿಕ್ಸ್ ನೊಂದಿಗೆ ಆರಂಭಿಸಲಿದ್ದಾರೆ. ಹದಿನಾಲ್ಕು ವರ್ಷದ ದಿನಿದಿ ಮಹಿಳೆಯರ 200 ಮೀಟರ್ ಫ್ರೀಸ್ಟೈಲ್ ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ. ‘‘ನಾನು ಚಿಕ್ಕವಳಿದ್ದಾಗ ನೀರನ್ನು ಇಷ್ಟಪಡಲಿಲ್ಲ, ನೀರಿಗೆ ಇಳಿಯಲು ಬಯಸಲಿಲ್ಲ. ಕೊಳದಲ್ಲಿ ಕಾಲಿರಿಸಲು ನನಗೆ ಸಾಧ್ಯವಾಗಲಿಲ್ಲ. ನನ್ನ ತಲೆಯನ್ನು ನೀರಿನಲ್ಲಿ ಮುಳುಗಿಸಲು ಆಗುತ್ತಿರಲಿಲ್ಲ. ನಾನು ತುಂಬಾ ಒದ್ದಾಡಿದೆ. ಆಗ ನನಗೆ ಆರು ವರ್ಷವಾಗಿತ್ತು. ಮುಂದಿನ ವರ್ಷ ಮತ್ತೆ ಬಂದಾಗಲೂ ನನ್ನ ಹೆದರಿಕೆ ಹೋಗಿರಲಿಲ್ಲ’’ ಎಂದು ‘ಇಂಡಿಯನ್ ಎಕ್ಸ್ಪ್ರೆಸ್’ನೊಂದಿಗೆ ಮಾತನಾಡಿದ ದಿನಿದಿ ಹೇಳಿದರು. ‘‘ವಾಸ್ತವವಾಗಿ, ನಾನು ಈಜುವುದನ್ನು ಕಲಿಯುವ ಮೊದಲೇ ನನ್ನ ಹೆತ್ತವರು ಕಲಿತರು. ನನ್ನಲ್ಲಿ ಧೈರ್ಯ ತುಂಬುವುದಕ್ಕಾಗಿ ಅವರು ಕೊಳಕ್ಕೆ ಇಳಿದರು. ಅಲ್ಲಿಂದ ನನ್ನ ಈಜು ಆರಂಭವಾಯಿತು’’ ಎಂದು ಅವರು ಹೇಳಿದರು. ‘‘ಮೊದಲು ನನ್ನನ್ನು ಈಜಿಗೆ ಪರಿಚಯಿಸಿದಾಗ ನನಗೆ ಈಜಿನ ಮೂಲ ಜ್ಞಾನವೂ ಇರಲಿಲ್ಲ. ನನಗೆ ಬ್ಯಾಕ್ಸ್ಟ್ರೋಕ್, ಬ್ರೆಸ್ಟ್ಸ್ಟ್ರೋಕ್ ಮುಂತಾದ ಸ್ಟ್ರೋಕ್ಗಳು ಮತ್ತು ಬಟರ್ಫ್ಲೈ ಗೊತ್ತಿತ್ತು. ಅಷ್ಟೇ ನನಗೆ ಗೊತ್ತಿದ್ದದ್ದು. ಆಗ ಅಲ್ಲಿ ಸುಮಾರು 13 ವರ್ಷದ ಮಕ್ಕಳಿದ್ದರು. ನನ್ನಂಥ 9 ವರ್ಷದ ಒಬ್ಬಳಿದ್ದಳು. ನನಗೆ ಸಹಾಯ ಕೇಳಲು ಹೆದರಿಕೆಯಾಗುತ್ತಿತ್ತು. ಏನು ಮಾಡುವುದು ಎಂದೇ ನನಗೆ ಗೊತ್ತಿರಲಿಲ್ಲ’’ ಎಂದು ಅವರು ಹೇಳಿದರು. ದಿನಿದಿಗೆ 8 ವರ್ಷ ಆಗಿದ್ದಾಗ ನಡೆದ ಘಟನೆಯೊಂದನ್ನು ಅವರ ತಾಯಿ ಜೆಸಿತಾ ಹೀಗೆ ವಿವರಿಸುತ್ತಾರೆ. ‘‘ದಿನಿದಿಯಲ್ಲಿ ಪ್ರತಿಭೆ ಇದೆ ಎನ್ನುವುದು ಗೊತ್ತಿತ್ತು. ಅವಳು ಕೊಳದಲ್ಲಿ ಚೆನ್ನಾಗಿ ಈಜುತ್ತಾಳೆ. ಆದರೆ, ಸ್ಪರ್ಧೆಗಳಲ್ಲಿ ಹಿಂಜರಿಯುತ್ತಾಳೆ. ಒಂದೋ ಸ್ಪರ್ಧೆಯ ಮುನ್ನಾ ದಿನ ಕಾಯಿಲೆ ಬೀಳುತ್ತಾಳೆ ಅಥವಾ ಸ್ಪರ್ಧೆಯ ದಿನ ಕೊಳಕ್ಕೆ ಇಳಿಯುವಾಗ ವಾಂತಿ ಮಾಡುತ್ತಾಳೆ’’ ಎಂದು ಅವರು ಹೇಳಿದರು. ‘‘ಸ್ಪರ್ಧೆಯೊಂದರಲ್ಲಿ ಭಾಗವಹಿಸಲು ಬಸ್ ಟಿಕೆಟ್ ಖರೀದಿಸಿದೆ. ನಾನೂ ಬಸ್ನಲ್ಲಿ ವಾಂತಿ ಮಾಡುತ್ತೇನೆ. ಬಸ್ನಲ್ಲಿ ಇಬ್ಬರೂ ನಿರಂತರವಾಗಿ ವಾಂತಿ ಮಾಡಿದೆವು. ಸ್ಪರ್ಧೆಯ ಸ್ಥಳಕ್ಕೆ ಹೋದಾಗ, ‘ನನಗೆ ಹೆದರಿಕೆಯಾಗುತ್ತದೆ, ನಾನು ಈಜುವುದಿಲ್ಲ’ ಎಂದು ಹೇಳಿದಳು. ಆದರೆ, ಕೊಳಕ್ಕೆ ಹೋಗಿ ನೋಡೋಣ. ಬೇಡದಿದ್ದರೆ ಹಿಂದಿರುಗೋಣ ಎಂದೆ. ಅವಳು ಕೊಳದ ಸುತ್ತಲೂ ನಡೆದಳು. ನನ್ನತ್ತ ತಿರುಗಿ ಹೇಳಿದಳು: ‘‘ನನಗೆ ಈಜಬಹುದು ಅನಿಸುತ್ತದೆ’’. ಅಲ್ಲಿ ಚಿನ್ನ ಗೆದ್ದಳು. ಆ ಬಳಿಕ ಸ್ಪರ್ಧೆಗೆ ಮುನ್ನ ಅವಳಿಗೆ ಜ್ವರ ಬಂದಿಲ್ಲ ಅಥವಾ ವಾಂತಿ ಮಾಡಿಲ್ಲ’’ ಎಂದು ಜೆಸಿತಾ ಹೇಳಿದರು. ದಿನಿದಿ ಪ್ರಸಕ್ತ ಮಹಿಳೆಯರ 200 ಮೀಟರ್ ಫ್ರೀಸ್ಟೈಲ್ನಲ್ಲಿ ರಾಷ್ಟ್ರೀಯ ದಾಖಲೆಯನ್ನು ಹೊಂದಿದ್ದಾರೆ. ಅವರು 2022ರ ಹಾಂಗ್ಝೂ ಏಶ್ಯನ್ ಗೇಮ್ಸ್ ನಲ್ಲಿ ಭಾಗವಹಿಸಿದ್ದಾರೆ.
Mohammed Shami: 19ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದ ಮೊಹಮ್ಮದ್ ಶಮಿ; ತಡೆದು ನಿಲ್ಲಿಸಿದ್ದು ಯಾರು?
Mohammed Shami: ಶಮಿ ಅವರು ವರ್ಷದ ಕೊನೆಯಲ್ಲಿ ಬಾಂಗ್ಲಾದೇಶದ ವಿರುದ್ಧ ತವರಿನಲ್ಲಿ ನಡೆಯುವ ಟೆಸ್ಟ್ ಸರಣಿಗೆ ಪುನರಾಗಮನ ಮಾಡುವ ನಿರೀಕ್ಷೆಯಲ್ಲಿದ್ದಾರೆ. The post Mohammed Shami: 19ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದ ಮೊಹಮ್ಮದ್ ಶಮಿ; ತಡೆದು ನಿಲ್ಲಿಸಿದ್ದು ಯಾರು? first appeared on Vistara News .
IPL 2025: ಆರ್ಸಿಬಿ ಸೇರಲಿದ್ದಾರೆ ಹಿಟ್ಮ್ಯಾನ್ ರೋಹಿತ್ ಶರ್ಮ!
IPL 2025: ರೋಹಿತ್ ಆರ್ಸಿಬಿ ಸೇರುತ್ತಾರೆ ಎನ್ನುವ ಸುದ್ದಿ ಕೇಳಿದ್ದೇ ತಡ ಅಭಿಮಾನಿಗಳು ಆರ್ಸಿಬಿ ಜೆರ್ಸಿಯಲ್ಲಿ ರೋಹಿತ್ ಅವರ ಫೋಟೊವನ್ನು ಎಡಿಟ್ ಮಾಡಿ ಎಲ್ಲಡೆ ಶೇರ್ ಮಾಡಿಕೊಳ್ಳುತ್ತಿದ್ದಾರೆ. ಒಂದೊಮ್ಮೆ ಅಭಿಮಾನಿಗಳ ಈ ಮಾತು ನಿಜವಾದರೂ ಅಚ್ಚರಿಯಿಲ್ಲ. ಆದರೆ ರೋಹಿತ್ ಹಾಗೂ ಆರ್ಸಿಬಿ ಫ್ರಾಂಚೈಸಿ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. The post IPL 2025: ಆರ್ಸಿಬಿ ಸೇರಲಿದ್ದಾರೆ ಹಿಟ್ಮ್ಯಾನ್ ರೋಹಿತ್ ಶರ್ಮ! first appeared on Vistara News .