ಗುಜರಾತ್ ವಿರುದ್ಧ ಎಲಿಮಿನೇಟರ್ ಜಯಿಸಿದ ಮುಂಬೈ; 2ನೇ ಕ್ವಾಲಿಫೈಯರ್ಗೆ ಎಂಐ ಲಗ್ಗೆ, ಪಂಜಾಬ್ ಕಿಂಗ್ಸ್ ಎದುರಾಳಿ
18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ನ ಎಲಿಮಿನೇಟರ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಜಯಿಸಿದ ಮುಂಬೈ ಇಂಡಿಯನ್ಸ್ ಎರಡನೇ ಕ್ವಾಲಿಫೈಯರ್ಗೆ ಲಗ್ಗೆ ಇಟ್ಟಿದೆ.
ಎಲಿಮಿನೇಟರ್ನಲ್ಲಿ ಗುಜರಾತ್ ಬಗ್ಗುಬಡಿದ ಮುಂಬೈ! ಕ್ವಾಲಿಫೈಯರ್ 2ಕ್ಕೆ ಅರ್ಹತೆ ಪಡೆದ 5 ಬಾರಿಯ ಚಾಂಪಿಯನ್
ಗುಜರಾತ್ ಬೌಲರ್ಗಳನ್ನ ಚೆಂಡಾಡಿ 2 ದಾಖಲೆ ಬರೆದ ರೋಹಿತ್! ಐಪಿಎಲ್ನಲ್ಲಿ ಈ ಸಾಧನೆ ಮಾಡಿದ ಭಾರತೀಯ
ಕ್ಷಮೆಯಾಚಿಸಿದ ಬಜರಂಗ್ ಪುನಿಯಾ! ಕೋಚ್ಗೆ ನೋವಾಗಿದ್ದರೆ ವಿಷಾದಿಸುತ್ತೇನೆ ಎಂದ ಕಾಂಗ್ರೆಸ್ ನಾಯಕ
ದುಬೈನಲ್ಲಿ ಕೇರಳ ಎನ್ಆರ್ಐಗಳಿಂದ ಪಾಕ್ ಕ್ರಿಕೆಟಿಗರಿಗೆ ಅದ್ದೂರಿ ಸ್ವಾಗತ!
ರೆಡ್ ಬಾಲ್ ಕ್ರಿಕೆಟ್ನಲ್ಲಿ ಮುಂದುವರಿದ ಕರುಣ್ ನಾಯರ್ ಅಬ್ಬರ! ಆಂಗ್ಲರ ನೆಲೆದಲ್ಲಿ ಮೊದಲ ದಿನವೇ ಶತಕ
ಪಾಟ್ನಾ ವಿಮಾನ ನಿಲ್ದಾಣದಲ್ಲಿ ವೈಭವ್ ಸೂರ್ಯವಂಶಿಯನ್ನು ಭೇಟಿಯಾದ ಪ್ರಧಾನಿ ಮೋದಿ
PC : PTI ಪಾಟ್ನಾ: ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಪಾಟ್ನಾ ವಿಮಾನ ನಿಲ್ದಾಣದಲ್ಲಿ 14 ವರ್ಷದ ಕ್ರಿಕೆಟ್ ಪ್ರತಿಭೆ ವೈಭವ್ ಸೂರ್ಯವಂಶಿ ಹಾಗೂ ಅವರ ಕುಟುಂಬ ಸದಸ್ಯರನ್ನು ಭೇಟಿಯಾದರು. ಐಪಿಎಲ್ ಹಾಲಿ ಋತುವಿನಲ್ಲಿ ವೈಭವ್ ರ ಶ್ರೇಷ್ಠ ನಿರ್ವಹಣೆಯನ್ನು ಪ್ರಧಾನಿ ಈ ಸಂದರ್ಭದಲ್ಲಿ ಕೊಂಡಾಡಿದರು. ವೈಭವ್ ಸೂರ್ಯವಂಶಿಯೊಂದಿಗಿನ ಭೇಟಿಯ ಚಿತ್ರಗಳನ್ನು ಪ್ರಧಾನಿ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಹಂಚಿಕೊಂಡರು. ಅವರು ಹದಿಹರೆಯದ ಕ್ರಿಕೆಟಿಗನ ಶಾಂತಚಿತ್ತತೆ ಮತ್ತು ಸ್ಫೋಟಕ ಬ್ಯಾಟಿಂಗ್ನ್ನು ಶ್ಲಾಘಿಸಿದರು. ‘‘ಪಾಟ್ನಾ ವಿಮಾನ ನಿಲ್ದಾಣದಲ್ಲಿ ಯುವ ಕ್ರಿಕೆಟ್ ಪ್ರತಿಭೆ ವೈಭವ್ ಸೂರ್ಯವಂಶಿ ಮತ್ತು ಅವರ ಕುಟುಂಬ ಸದಸ್ಯರನ್ನು ಭೇಟಿಯಾದೆ. ಅವರ ಕ್ರಿಕೆಟ್ ನೈಪುಣ್ಯವನ್ನು ದೇಶಾದ್ಯಂತ ಶ್ಲಾಘಿಸಲಾಗುತ್ತಿದೆ. ಅವರ ಭವ್ಯ ಭವಿಷ್ಯಕ್ಕೆ ನಾನು ಶುಭ ಹಾರೈಸುತ್ತೇನೆ’’ ಎಂಬುದಾಗಿ ಪ್ರಧಾನಿ ಬರೆದಿದ್ದಾರೆ. ಐಪಿಎಲ್ 2025ರಲ್ಲಿ ರಾಜಸ್ಥಾನ ರಾಯಲ್ಸ್ ಪರವಾಗಿ ಆಡುತ್ತಿರುವ ಸೂರ್ಯವಂಶಿ 7 ಪಂದ್ಯಗಳಲ್ಲಿ 252 ರನ್ಗಳನ್ನು ಗಳಿಸಿದ್ದಾರೆ. ಅವರು ಗುಜರಾತ್ ಟೈಟಾನ್ಸ್ ವಿರುದ್ಧ 38 ಎಸೆತಗಳಲ್ಲಿ 101 ರನ್ಗಳನ್ನು ಸಿಡಿಸಿದ್ದಾರೆ. ಆ ಮೂಲಕ ಪುರುಷರ ಟಿ20 ಪಂದ್ಯಗಳಲ್ಲಿ ಶತಕ ಬಾರಿಸಿದ ಅತಿ ಕಿರಿಯ ಆಟಗಾರ ಎಂಬ ದಾಖಲೆಯನ್ನು ನಿರ್ಮಿಸಿದ್ದಾರೆ. ಅದೂ ಅಲ್ಲದೆ, ಐಪಿಎಲ್ ನಲ್ಲಿ 2ನೇ ಅತಿ ವೇಗದ ಶತಕ ಗಳಿಕೆದಾರ ಎಂಬ ಹೆಗ್ಗಳಿಕೆಯನ್ನೂ ಪಡೆದಿದ್ದಾರೆ. ಅವರು 35 ಎಸೆತಗಳಲ್ಲಿ 100 ರನ್ ಸಿಡಿಸಿದರು.
ಎಲಿಮಿನೇಟರ್ ಪಂದ್ಯದಲ್ಲಿ ರೋಹಿತ್, ಬೈರ್ಸ್ಟೋವ್ ರಣಾರ್ಭಟ! ಜಿಟಿಗೆ ಬೃಹತ್ ಗುರಿ ನೀಡಿದ ಮುಂಬೈ
ಐಪಿಎಲ್ನಿಂದ ಹೊರ ಬೀಳುತ್ತಿದ್ದಂತೆ ಬಿಸಿಸಿಐ ಮುಂದೆ ಕೆಎಲ್ ರಾಹುಲ್ ವಿಶೇಷ ಮನವಿ! ಸಲಾಂ ಎಂದ ಫ್ಯಾನ್ಸ್
MI vs GT: ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಮುಂಬೈ! ಹಾರ್ದಿಕ್ ಪಡೆಗೆ ವಿಧ್ವಂಸಕ ಬ್ಯಾಟರ್ ಬಲ
ವೆಸ್ಟ್ ಇಂಡೀಸ್ ವಿರುದ್ಧ ಸಿಡಿಲಬ್ಬರ ಬ್ಯಾಟಿಂಗ್! ಆರ್ಸಿಬಿ ಲೆಜೆಂಡ್ಗೆ ಕ್ರೆಡಿಟ್ ಕೊಟ್ಟ ಜಾಕೋಬ್ ಬೆಥೆಲ
Virat Kohli: ಕೊಹ್ಲಿಗೆ ಕೆಟ್ಟ ಪದದಲ್ಲಿ ನಿಂದಿಸಿದ್ರಾ ಪಂಜಾಬ್ ಬ್ಯಾಟರ್ ಇಂಗ್ಲಿಸ್ ಪತ್ನಿ?
ವಿಂಡೀಸ್ ವಿರುದ್ಧ 400 ರನ್ ದಾಖಲಿಸಿದ ಇಂಗ್ಲೆಂಡ್! 54 ವರ್ಷಗಳಲ್ಲೆ ಈ ಸಾಧನೆ ಮಾಡಿದ ಮೊದಲ ತಂಡ
IPL 2025 ಫೈನಲ್ ಗೆಲ್ಲೋದು ಅದೇ ತಂಡವಂತೆ, ಭವಿಷ್ಯ ನುಡಿದ ChatGPT!
ಸೋತ ಹತಾಶೆಯಲ್ಲಿ ಭಾರತೀಯ ಆಟಗಾರನಿಗೆ ಕೈಕುಲಕುವ ವೇಳೆ ಹೊಡೆಯಲು ಯತ್ನಿಸಿದ ಪಾಕ್ ಆಟಗಾರ!
ಮೊದಲ ಬಾರಿ ನಾಯಕನಾಗಿ ಫೈನಲ್ ಪ್ರವೇಶ! ಧೋನಿಯಂತಹ ದಿಗ್ಗಜರ ಸಾಲಿಗೆ ಸೇರಿದ ಆರ್ಸಿಬಿ ಕ್ಯಾಪ್ಟನ್
IPL 2025 ಫೈನಲ್ನಲ್ಲಿ RCB ಎದುರಾಳಿ ಯಾವ ತಂಡ ಬಂದ್ರೆ ಗೆಲುವು ಸುಲಭ? ಯಾವ ತಂಡ ಬಂದ್ರೆ ಕಷ್ಟ?
RCB ಟ್ರೋಫಿ ಗೆಲ್ಲೋದು ಪಕ್ಕಾ! ಈ ಲಕ್ಕಿ ಪ್ಲೇಯರ್ ಆಡಿರೋ ಫೈನಲ್ನಲ್ಲಿ ಆ ತಂಡ ಸೋತ ಇತಿಹಾಸವೇ ಇಲ್ಲ
IPL 2025: ಒಂದೇ ದಿನ 2 ಪಂದ್ಯ ಗೆದ್ದ RCB ಆಟಗಾರರು! ಇದಕ್ಕಿಂತ ಖುಷಿ ಇನ್ನೇನ್ ಬೇಕು?
ಐಪಿಎಲ್ ಸೆನ್ಸೇಷನ್ ವೈಭವ್ ಸೂರ್ಯವಂಶಿಯನ್ನು ಭೇಟಿಯಾದ ಮೋದಿ! ಯುವ ಆಟಗಾರನಿಗೆ ಪ್ರಧಾನಿ ಹೇಳಿದ್ದೇನು?
ನಾರ್ವೆ ಚೆಸ್: ಕರುವಾನಾ ವಿರುದ್ಧ ಡಿ ಗುಕೇಶ್ಗೆ ರೋಚಕ ಗೆಲುವು; ಕಾರ್ಲ್ಸನ್ ಆಟಕ್ಕೆ ಮಣಿದ ಎರಿಗೈಸಿ
ಡಿ ಗುಕೇಶ್ ಅವರ ಅದ್ಭುತ ರಕ್ಷಣಾತ್ಮಕ ಕೌಶಲ್ಯದ ಮುಂದೆ, ಅಮೆರಿಕದ ಗ್ರ್ಯಾಂಡ್ ಮಾಸ್ಟರ್ ಫ್ಯಾಬಿಯಾನೊ ಕರುವಾನಾ ಮಂಡಿಯೂರಿದರು. ಅತ್ತ ಅರ್ಜುನ್ ಎರಿಗೈಸಿ ಅವರು ಮ್ಯಾಗ್ನಸ್ ಕಾರ್ಲ್ಸನ್ ವಿರುದ್ಧ ಸೋಲು ಕಂಡಿದ್ದಾರೆ.
‘RCB ಕಪ್ ಗೆಲ್ಲದಿದ್ರೆ ಗಂಡನಿಗೆ ಡಿವೋರ್ಸ್ ಕೊಡ್ತೀನಿ’ ಇಂಟರ್ನೆಟ್ಗೆ ಬೆಂಕಿ ಹಚ್ಚಿದ ಮಹಿಳೆಯ ಪೋಸ್ಟರ್!
RCB vs PBKS: RCB ವಿರುದ್ಧ ಸೋಲಿನ ಬೆನ್ನಲ್ಲೇ ಶ್ರೇಯಸ್ ಅಯ್ಯರ್ ಅಚ್ಚರಿಯ ಹೇಳಿಕೆ! ದೂಷಿಸಿದ್ದು ಯಾರನ್ನು
'ಈ ಸಲ ಕಪ್ ನಮ್ದೇ' ಆದ್ರೆ, ಸಿಎಂ ಸಿದ್ದರಾಮಯ್ಯಗೆ RCB ಫ್ಯಾನ್ಸ್ ಕಡೆಯಿಂದ ಸ್ಪೆಷಲ್ ಮನವಿ!
ಹೈ ವೋಲ್ಟೇಜ್ ಪಂದ್ಯ, RCBಗೆ ಅಭಿಮಾನಿಗಳ ಶುಭಹಾರೈಕೆ
ಪಂಜಾಬ್ ವಿರುದ್ಧ ಸಿಡಿಲಬ್ಬರದ ಅರ್ಧಶತಕ! ಕೊಹ್ಲಿ,ಎಬಿಡಿಯಿಂದಲೂ ಅಸಾಧ್ಯವಾದ ದಾಖಲೆ ಬರೆದ ಫಿಲ್ ಸಾಲ್ಟ್
PBKS vs RCB: ಇದೇ ಕಾರಣಕ್ಕೆ ಈ ಆಟಗಾರನನ್ನ ಪಟ್ಟು ಹಿಡಿದು ಆರ್ಸಿಬಿ ವಾಪಸ್ ಕರೆಸಿದ್ದು!
ಫೈನಲ್ಗೆ ಲಗ್ಗೆ ಇಟ್ಟ RCB; ಸಂಭ್ರಮಿಸಿದ ಸ್ಯಾಂಡಲ್ವುಡ್ ಸ್ಟಾರ್ಸ್
IPL 2025: ಪಂಜಾಬ್ ವಿರುದ್ಧ 60 ಎಸೆತಗಳಲ್ಲೇ ಯಶಸ್ವಿ ಚೇಸಿಂಗ್! ಐಪಿಎಲ್ನಲ್ಲಿ ಚರಿತ್ರೆ ಸೃಷ್ಟಿಸಿದ RCB
ಎಲ್ರೂ ವೇಸ್ಟ್ ಅಂದ್ರು, ಆಡಿಸಬೇಡಿ ಅಂದ್ರು! ಆದ್ರೆ ಇವತ್ತು ಆರ್ಸಿಬಿನೇ ಗೆಲ್ಲಿಸಿಬಿಟ್ರು ವಾಮನ ಮೂರ್ತಿ
ಕ್ವಾಲಿಫೈಯರ್ನಲ್ಲಿ ಪಂಜಾಬ್ ವಿರುದ್ಧ RCBಗೆ 8 ವಿಕೆಟ್ಗಳ ಭರ್ಜರಿ ಜಯ! 8 ವರ್ಷದ ಬಳಿಕ ಫೈನಲ್ ಪ್ರವೇಶ
ʼಈ ಸಲ ಕಪ್ ನಮ್ದೇನಾ?ʼ; ಪಂಜಾಬನ್ನು ಮಣಿಸಿ ಫೈನಲ್ ಗೇರಿದ ಆರ್ ಸಿ ಬಿ
Photo: x/@RCBTweets ಚಂಡೀಗಡ: ಪಂಜಾಬ್ ನ ಮುಲ್ಲನ್ ಪುರದ ಮಹರಾಜ ಯದುವೀರ್ ಸಿಂಗ್ ಅಂತರರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ ನ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಪಂಜಾಬ್ ಕಿಂಗ್ಸ್ ತಂಡವನ್ನು ಸೋಲಿಸಿ ಫೈನಲ್ ಗೇರಿದೆ.
ಮತ್ತೊಮ್ಮೆ ಭಾರತಕ್ಕಾಗಿ ಆಡಲು ಸಿದ್ಧನಾಗಿದ್ದೇನೆ: ಚೇತೇಶ್ವರ್ ಪೂಜಾರ
ಚೇತೇಶ್ವರ್ ಪೂಜಾರ | PC : PTI ಹೊಸದಿಲ್ಲಿ: ಭಾರತದ ಬ್ಯಾಟಿಂಗ್ ಆಧಾರಸ್ತಂಭಗಳಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಹಾಗೂ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಟೆಸ್ಟ್ ಕ್ರಿಕೆಟ್ನಿಂದ ನಿವೃತ್ತಿ ಹೊಂದಿದ್ದಾರೆ. ಇನ್ನೊಂದೆಡೆ, ವೇಗದ ಬೌಲರ್ ಮುಹಮ್ಮದ್ ಶಮಿ ದೈಹಿಕ ಕ್ಷಮತೆಯ ಕಾರಣಗಳಿಗಾಗಿ ಮುಂಬರುವ ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದಾರೆ. ಈಗ ಎಲ್ಲರ ಗಮನ ಶುಭಮನ್ ಗಿಲ್ ನೇತೃತ್ವದ ಭಾರತೀಯ ತಂಡದ ಮೇಲಿದೆ. ಇದನ್ನು ಇತ್ತೀಚಿನ ವರ್ಷಗಳಲ್ಲಿ ಇಂಗ್ಲೆಂಡ್ ಪ್ರವಾಸಗೈಯುವ ಅತ್ಯಂತ ಅನನುಭವಿ ತಂಡ ಎಂಬುದಾಗಿ ಪರಿಗಣಿಸಲಾಗಿದೆ. ಕೊಹ್ಲಿ ಮತ್ತು ರೋಹಿತ್ ಅನುಪಸ್ಥಿತಿಯಲ್ಲಿ ಭಾರತೀಯ ಬ್ಯಾಟಿಂಗ್ ಸರದಿ ದುರ್ಬಲವಾಗಿದೆ. ಅಗ್ರ ಬ್ಯಾಟಿಂಗ್ ಕ್ರಮಾಂಕವನ್ನು ಬಲಪಡಿಸಲು ಅನುಭವಿ ಆಟಗಾರರಾದ ಚೇತೇಶ್ವರ್ ಪೂಜಾರ ಅಥವಾ ಅಜಿಂಕ್ಯ ರಹಾನೆಯನ್ನು ಆಯ್ಕೆಗಾರರು ಪರಿಗಣಿಸಬಹುದಾಗಿತ್ತೇ ಎಂಬ ಪ್ರಶ್ನೆಯು ಅಭಿಮಾನಿಗಳ ಮನಸ್ಸಿನಲ್ಲಿ ಹುಟ್ಟಿದೆ. ಇತ್ತೀಚಿನ ಸಂದರ್ಶನವೊಂದರಲ್ಲಿ, ಇಂಗ್ಲೆಂಡ್ ಪ್ರವಾಸಕ್ಕೆ ಸಂಬಂಧಿಸಿ ಪ್ರಧಾನ ಕೋಚ್ ಗೌತಮ್ ಗಂಭೀರ್ ನಿಮ್ಮನ್ನು ಸಂಪರ್ಕಿಸಿದ್ದಾರೆಯೇ ಎಂಬುದಾಗಿ ಪೂಜಾರರನ್ನು ಕೇಳಲಾಗಿತ್ತು. ‘‘ಇಲ್ಲ, ಇನ್ನೂ ಇಲ್ಲ’’ ಎಂಬುದಾಗಿ ಪೂಜಾರ ‘ಲಲನ್ಟಾಪ್’ಗೆ ಉತ್ತರಿಸಿದ್ದರು. ಆದರೆ, ಅವಕಾಶ ಸಿಕ್ಕಿದರೆ ತಂಡಕ್ಕೆ ಮರಳುವ ಉತ್ಸುಕತೆಯನ್ನು ಪೂಜಾರ ವ್ಯಕ್ತಪಡಿಸಿದ್ದಾರೆ. ‘‘ನಾನು ಸಿದ್ಧನಾಗಿದ್ದೇನೆ. ಆದರೆ, ಅವರು ನನ್ನನ್ನು ತೆಗೆದುಕೊಳ್ಳುತ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ, ನನಗೆ ಅವಕಾಶ ಸಿಕ್ಕಿದರೆ, ಅದು ದೇಶವನ್ನು ಮತ್ತೊಮ್ಮೆ ಪ್ರತಿನಿಧಿಸಲು ಸಿಕ್ಕ ಗೌರವವೆಂದು ನಾನು ಭಾವಿಸುತ್ತೇನೆ. ನಾನು ಚೆನ್ನಾಗಿ ಅಭ್ಯಾಸ ನಡೆಸುತ್ತಿದ್ದೇನೆ. ನನಗೆ ಅವಕಾಶ ಸಿಕ್ಕಿದರೆ, ತಂಡದ ಭಾಗವಾಗಲು ಅತೀವ ಸಂತೋಷಪಡುತ್ತೇನೆ’’ ಎಂದು ಪೂಜಾರ ಹೇಳಿದರು. ಪೂಜಾರ ಅವರು 103 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ.
ಕೋಚ್ ದಾಹಿಯರಿಂದ ಕ್ಷಮೆ ಕೋರಿದ ಬಜರಂಗ್ ಪೂನಿಯ
PC : PTI ಹೊಸದಿಲ್ಲಿ: ಭಾರತೀಯ ಕುಸ್ತಿ ಫೆಡರೇಶನ್ನ (ಡಬ್ಲ್ಯೂಎಫ್ಐ) ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧದ ಪ್ರತಿಭಟನೆಯ ವೇಳೆ, ‘‘ಹೆಸರು ಕೆಡಿಸಿರುವುದಕ್ಕಾಗಿ’’ ಕುಸ್ತಿ ಕೋಚ್ ನರೇಶ್ ದಾಹಿಯರಿಂದ ಒಲಿಂಪಿಕ್ಸ್ ಪದಕ ವಿಜೇತ ಬಜರಂಗ್ ಪೂನಿಯ ನಿಶ್ಶರ್ತ ಕ್ಷಮೆ ಕೋರಿದ್ದಾರೆ. ಹಲವಾರು ಕಿರಿಯ ಮಹಿಳಾ ಕುಸ್ತಿಪಟುಗಳಿಗೆ ಬ್ರಿಜ್ ಭೂಷಣ್ ಲೈಂಗಿಕ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಿ ನಡೆದ ಪ್ರತಿಭಟನೆಯ ನೇತೃತ್ವವನ್ನು ಟೋಕಿಯೊ ಒಲಿಂಪಿಕ್ಸ್ನ ಕಂಚಿನ ಪದಕ ವಿಜೇತ ಬಜರಂಗ್ ಪೂನಿಯ, ವಿನೇಶ್ ಫೋಗಟ್ ಮತ್ತು ಸಾಕ್ಷಿ ಮಲಿಕ್ ವಹಿಸಿದ್ದರು. 2023 ಮೇ 10ರಂದು ಜಂತರ್-ಮಂತರ್ನಲ್ಲಿ ನಡೆದ ಧರಣಿಯ ವೇಳೆ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದ ಬಜರಂಗ್ ಪೂನಿಯ, ಸ್ವತಃ ನರೇಶ್ ದಾಹಿಯರೇ ಅತ್ಯಾಚಾರ ಆರೋಪಿಯಾಗಿದ್ದಾರೆ, ಹಾಗಾಗಿ ತಮ್ಮ ಪ್ರತಿಭಟನೆಯನ್ನು ಪ್ರಶ್ನಿಸುವ ಹಕ್ಕು ಅವರಿಗಿಲ್ಲ ಎಂದಿದ್ದರು. ದಹಿಯ, ಪೂನಿಯ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದರು. ನ್ಯಾಯಾಲಯವು ತನ್ನ ವಿರುದ್ಧದ ಆರೋಪಗಳನ್ನು ಅದಾಗಲೇ ವಜಾಗೊಳಿಸಿದೆ ಎಂದು ಅವರು ವಾದಿಸಿದ್ದರು. ನ್ಯಾಯಾಲಯವು ಪುನಿಯಗೆ ಸಮನ್ಸ್ ಜಾರಿಗೊಳಿಸಿತ್ತು. ನ್ಯಾಯಾಲಯವು ಅವರಿಗೆ ಜಾಮೀನು ಕೂಡ ಮಂಜೂರು ಮಾಡಿತ್ತು. ಮೇ 17ರಂದು ಬಜರಂಗ್ , ಕೋಚ್ ರ ಕ್ಷಮೆ ಕೇಳಿದ್ದಾರೆ ಮತ್ತು ತನ್ನ ಹೇಳಿಕೆಗಳಿಗಾಗಿ ವಿಷಾದ ವ್ಯಕ್ತಪಡಿಸಿದ್ದಾರೆ.
ನಾಳೆ ಐಪಿಎಲ್ ಎಲಿಮಿನೇಟರ್ ಪಂದ್ಯ | ಗುಜರಾತ್ ಟೈಟಾನ್ಸ್- ಮುಂಬೈ ಇಂಡಿಯನ್ಸ್ ಹಣಾಹಣಿ
PC : PTI ಮುಲ್ಲನ್ಪುರ : ಎರಡು ತಿಂಗಳಿಗೂ ಹೆಚ್ಚು ಸಮಯ ನಡೆದ ಲೀಗ್ ಹಂತದ ಪಂದ್ಯದ ನಂತರ 18ನೇ ಆವೃತ್ತಿಯ ಐಪಿಎಲ್ ಟಿ-20 ಟೂರ್ನಿಯಲ್ಲಿ ಶುಕ್ರವಾರ ನಡೆಯಲಿರುವ ಎಲಿಮಿನೇಟರ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಸೆಣಸಾಡಲಿವೆ. ಈ ಪಂದ್ಯದಲ್ಲಿ ಸೋಲುವ ತಂಡ ಪಂದ್ಯಾವಳಿಯಿಂದ ನಿರ್ಗಮಿಸಲಿದೆ. ಗೆಲ್ಲುವ ತಂಡ ಫೈನಲ್ಗೆ ಟಿಕೆಟ್ ಗಿಟ್ಟಿಸಲು 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ಕ್ವಾಲಿಫೈಯರ್-1ರಲ್ಲಿ ಸೋಲುವ ತಂಡದೊಂದಿಗೆ ಸೆಣಸಾಡಲಿದೆ. ಈ ವರ್ಷದ ಐಪಿಎಲ್ನಲ್ಲಿ ಉಭಯ ತಂಡಗಳು 3ನೇ ಬಾರಿ ಮುಖಾಮುಖಿಯಾಗಲು ಸಜ್ಜಾಗಿವೆ. ಗುಜರಾತ್ ಹಾಗೂ ಮುಂಬೈ ತಂಡಗಳು ವ್ಯತಿರಿಕ್ತ ಆರಂಭ ಪಡೆದಿದ್ದವು. ಗುಜರಾತ್ ತಂಡವು ಮೊದಲ 8 ಪಂದ್ಯಗಳಲ್ಲಿ 6ರಲ್ಲಿ ಜಯ ಸಾಧಿಸಿ ಭರ್ಜರಿ ಆರಂಭ ಪಡೆದಿದ್ದರೆ, ಮತ್ತೊಂದೆಡೆ ಮುಂಬೈ ತಂಡವು ಮೊದಲ 5 ಪಂದ್ಯಗಳಲ್ಲಿ 4ರಲ್ಲಿ ಸೋತಿತ್ತು. 5 ಬಾರಿಯ ಚಾಂಪಿಯನ್ ಮುಂಬೈ ತಂಡವು ಆನಂತರ ಸತತ 6 ಪಂದ್ಯಗಳಲ್ಲಿ ಜಯ ಸಾಧಿಸಿ ಗೆಲುವಿನ ಹಳಿಗೆ ಮರಳಿತ್ತು. ಗುಜರಾತ್ ತಂಡವು ಅಂಕಪಟ್ಟಿಯಲ್ಲಿ ಅಗ್ರ-2ರಲ್ಲಿ ಸ್ಥಾನ ಪಡೆಯುವ ವಿಶ್ವಾಸದಲ್ಲಿತ್ತು. ಆದರೆ ಕೊನೆಯ 2 ಲೀಗ್ ಹಂತದ ಪಂದ್ಯಗಳಲ್ಲಿನ ಸೋಲು ದುಬಾರಿಯಾಯಿತು. ಮುಂಬೈ ತಂಡವು ತನ್ನ ಕೊನೆಯ ಲೀಗ್ ಪಂದ್ಯದಲ್ಲಿ 7 ವಿಕೆಟ್ಗಳಿಂದ ಸೋಲುಂಡಿದೆ. ಗುಜರಾತ್ ಟೈಟಾನ್ಸ್ ತಂಡವು ಈಗಾಗಲೇ ಎರಡು ಬಾರಿ ಐಪಿಎಲ್ ಟೂರ್ನಿಯಲ್ಲಿ ಫೈನಲ್ಗೆ ಲಗ್ಗೆ ಇಟ್ಟಿದೆ. 2022ರಲ್ಲಿ ಚಾಂಪಿಯನ್ಪಟ್ಟಕ್ಕೇರಿದರೆ, 2023ರಲ್ಲಿ ರನ್ನರ್ಸ್ ಅಪ್ ಆಗಿತ್ತು. ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ಫ್ರಾಂಚೈಸಿಗಳ ಪೈಕಿ ಒಂದಾಗಿರುವ ಮುಂಬೈ ಇಂಡಿಯನ್ಸ್ ತಂಡವು ಐದು ಬಾರಿ ಐಪಿಎಲ್ ಟ್ರೋಫಿ ಜಯಿಸಿ ಚೆನ್ನೈ ಸೂಪರ್ ಕಿಂಗ್ಸ್ನೊಂದಿಗೆ ದಾಖಲೆ ಹಂಚಿಕೊಂಡಿದೆ. ಉಭಯ ತಂಡಗಳು ಪ್ರಮುಖ ವಿದೇಶಿ ಆಟಗಾರರ ಸೇವೆಯಿಂದ ವಂಚಿತವಾಗಲಿವೆ. ಶುಭಮನ್ ಗಿಲ್ ನೇತೃತ್ವದ ಟೈಟಾನ್ಸ್ ತಂಡವು ಜೋಸ್ ಬಟ್ಲರ್ ಹಾಗೂ ಕಾಗಿಸೊ ರಬಾಡರಿಲ್ಲದೆ ಆಡಬೇಕಾಗಿದೆ. 3ನೇ ಕ್ರಮಾಂಕದಲ್ಲಿ ಟೂರ್ನಿಯುದ್ದಕ್ಕೂ ಮಿಂಚಿದ್ದ ಬಟ್ಲರ್ ಅನುಪಸ್ಥಿತಿಯು ಟೈಟಾನ್ಸ್ ತಂಡವನ್ನು ಕಾಡಬಹುದು. ಬಟ್ಲರ್ ಅನುಪಸ್ಥಿತಿಯು ಕ್ರಮವಾಗಿ 679 ರನ್ ಹಾಗೂ 649 ರನ್ ಗಳಿಸಿರುವ ಸಾಯಿ ಸುದರ್ಶನ್ ಹಾಗೂ ಗಿಲ್ ಮೇಲೆ ಹೆಚ್ಚುವರಿ ಒತ್ತಡವುಂಟು ಮಾಡಿದೆ. ಹಾರ್ದಿಕ್ ಪಾಂಡ್ಯನಾಯಕತ್ವದ ಮುಂಬೈ ತಂಡ ಕೂಡ ವಿಕೆಟ್ಕೀಪರ್-ಬ್ಯಾಟರ್ ರಯಾನ್ ರಿಕೆಲ್ಟನ್ ಹಾಗೂ ಆಲ್ರೌಂಡರ್ ವಿಲ್ ಜಾಕ್ಸ್ ಇಲ್ಲದೆ ಪ್ರಮುಖ ಪಂದ್ಯವನ್ನು ಆಡಬೇಕಾಗಿದೆ. ಅಗ್ರ ಸರದಿಯಲ್ಲಿ ರಿಕೆಲ್ಟನ್ ಅವರು ರೋಹಿತ್ ಶರ್ಮಾರೊಂದಿಗೆ ಉತ್ತಮ ಪ್ರದರ್ಶನ ನೀಡಿದ್ದಾರೆ. ವಿಲ್ ಜಾಕ್ಸ್ ಅವರು ಬಿರುಸಿನ ಬ್ಯಾಟಿಂಗ್ ಹಾಗೂ ಆಫ್ ಬ್ರೇಕ್ ಬೌಲಿಂಗ್ನ ಮೂಲಕ ತಂಡಕ್ಕೆ ಸಮತೋಲನ ತಂದಿದ್ದಾರೆ. ಈ ಆಟಗಾರರ ಅನುಪಸ್ಥಿತಿಯಿಂದ ಪಂದ್ಯದ ಹೊಳಪು ಕಡಿಮೆಯಾಗಬಹುದು. ಆದರೆ ಎರಡೂ ತಂಡಗಳಲ್ಲಿ ಪಂದ್ಯವನ್ನು ಗೆಲ್ಲುವ ಸಾಮರ್ಥ್ಯವಿರುವ ಸಾಕಷ್ಟು ಮ್ಯಾಚ್ ವಿನ್ನರ್ಗಳಿದ್ದಾರೆ. ಹೆಡ್-ಟು-ಹೆಡ್ ಆಡಿರುವ ಒಟ್ಟು ಪಂದ್ಯ: 7 ಗುಜರಾತ್ಗೆ ಗೆಲುವು: 5 ಮುಂಬೈಗೆ ಗೆಲುವು: 2 2025ರ ಐಪಿಎಲ್ನಲ್ಲಿ ಪ್ರದರ್ಶನ ► ಗುಜರಾತ್ ಟೈಟಾನ್ಸ್: ಪಂದ್ಯ: 14, ಗೆಲುವು: 9, ಸೋಲು: 5 ► ಮುಂಬೈ ಇಂಡಿಯನ್ಸ್: ಪಂದ್ಯ: 14, ಗೆಲುವು: 8, ಸೋಲು: 6 ► ಗುಜರಾತ್ ಪರ ಶ್ರೇಷ್ಠ ಪ್ರದರ್ಶನ ನೀಡಿದ ಆಟಗಾರರು ಸಾಯಿ ಸುದರ್ಶನ್ : 679 ರನ್, -ಪ್ರಸಿದ್ಧ ಕೃಷ್ಣ: 23 ವಿಕೆಟ್ಗಳು ► ಮುಂಬೈ ಪರ ಶ್ರೇಷ್ಠ ಪ್ರದರ್ಶನ ನೀಡಿದ ಆಟಗಾರರು ಸೂರ್ಯಕುಮಾರ್ ಯಾದವ್ : 640 ರನ್, -ಟ್ರೆಂಟ್ ಬೌಲ್ಟ್: 19 ವಿಕೆಟ್ಗಳು ►� ಸಂಭಾವ್ಯ ಆಡುವ 11ರ ಬಳಗ ► ಗುಜರಾತ್ ಟೈಟಾನ್ಸ್ : ಶುಭಮನ್ ಗಿಲ್(ನಾಯಕ), ಕುಶಾಲ್ ಮೆಂಡಿಸ್(ವಿಕೆಟ್ಕೀಪರ್), ಶೆರ್ಫಾನ್ ರುದರ್ಫೋರ್ಡ್, ಶಾರುಖ್ ಖಾನ್, ರಾಹುಲ್ ತೆವಾತಿಯಾ, ರಶೀದ್ ಖಾನ್, ಅರ್ಷದ್ ಖಾನ್, ಜೆರಾಲ್ಡ್ ಕೊಯೆಟ್ಝಿ, ಸಾಯಿ ಸುದರ್ಶನ್, ಮುಹಮ್ಮದ್ ಸಿರಾಜ್, ಪ್ರಸಿದ್ಧ ಕೃಷ್ಣ ಇಂಪ್ಯಾಕ್ಟ್ ಪ್ಲೇಯರ್ : ಸಾಯಿ ಸುದರ್ಶನ್. ► ಮುಂಬೈ ಇಂಡಿಯನ್ಸ್ : ಜಾನಿ ಬೈರ್ಸ್ಟೋವ್(ವಿಕೆಟ್ಕೀಪರ್), ರೋಹಿತ್ ಶರ್ಮಾ, ವಿಲ್ ಜಾಕ್ಸ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ(ನಾಯಕ), ನಮನ್ ಧೀರ್, ಮಿಚೆಲ್ ಸ್ಯಾಂಟ್ನರ್, ದೀಪಕ್ ಚಹಾರ್, ಟ್ರೆಂಟ್ ಬೌಲ್ಟ್, ಜಸ್ಪ್ರಿತ್ ಬುಮ್ರಾ. ► ಇಂಪ್ಯಾಕ್ಟ್ ಪ್ಲೇಯರ್: ಕರ್ಣ್ ಶರ್ಮಾ. ಪಂದ್ಯ ಆರಂಭ ಸಮಯ: ರಾತ್ರಿ 7:30
ಸಿಂಗಾಪುರ ಓಪನ್: ಸಾತ್ವಿಕ್-ಚಿರಾಗ್ ಕ್ವಾರ್ಟರ್ ಫೈನಲ್ಗೆ ಲಗ್ಗೆ
ಸಾತ್ವಿಕ್-ಚಿರಾಗ್ | PTI ಸಿಂಗಾಪುರ : ಭಾರತದ ಸಾತ್ವಿಕ್ಸಾಯಿರಾಜ್ ರಾಂಕಿರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ಬಿಡಬ್ಲ್ಯುಎಫ್ ವರ್ಲ್ಡ್ ಟೂರ್ ಸೂಪರ್ 750-ಸ್ಪರ್ಧೆ ಸಿಂಗಾಪುರ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ ತಲುಪಿದ್ದಾರೆ. ಗುರುವಾರ ಒಂದು ಗಂಟೆ, 14 ನಿಮಿಷಗಳ ಕಾಲ ನಡೆದ ಪುರುಷರ ಡಬಲ್ಸ್ ವಿಭಾಗದ ಪ್ರಿ-ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸಾತ್ವಿಕ್-ಚಿರಾಗ್ ಜೋಡಿ ಇಂಡೋನೇಶ್ಯದ ಸಾಬರ್ ಕಾರ್ಯಮನ್ ಗುಟಾಮ ಹಾಗೂ ಮುಹಮ್ಮದ್ ರೆಝಾರನ್ನು 19-21, 21-16, 21-18 ಗೇಮ್ಗಳ ಅಂತರದಿಂದ ಮಣಿಸಿದರು. 42 ನಿಮಿಷಗಳ ಕಾಲ ನಡೆದ ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ಎಚ್.ಎಸ್. ಪ್ರಣಯ್ ಫ್ರಾನ್ಸ್ನ ಕ್ರಿಸ್ಟೊ ಪೊಪೊವ್ ವಿರುದ್ಧ 16-21, 14-21 ಗೇಮ್ಗಳ ಅಂತರದಿಂದ ಸೋತಿದ್ದಾರೆ. ಪಿ.ವಿ. ಸಿಂಧು ಮಹಿಳೆಯರ ಸಿಂಗಲ್ಸ್ನ ಅಂತಿಮ-16ರ ಸುತ್ತಿನ ಪಂದ್ಯದಲ್ಲಿ ಚೀನಾದ ಚೆನ್ ಯು ಫೀ ವಿರುದ್ಧ 9-21, 21-18, 16-21 ಗೇಮ್ಗಳ ಅಂತರದಿಂದ ಶರಣಾದರು. ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಟ್ರೀಸಾ ಜೋಲಿ ಹಾಗೂ ಗಾಯತ್ರಿ ಗೋಪಿಚಂದ್ ಪ್ರಿ-ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಚೀನಾದ ಜಿಯಾ ಯಿಫಾನ್ ಹಾಗೂ ಝಾಂಗ್ ಶುಕ್ಸಿಯಾನ್ರನ್ನು 8-21, 10-21 ನೇರ ಗೇಮ್ಗಳ ಅಂತರದಿಂದ ಸೋಲುಂಡಿದ್ದಾರೆ. ಮಿಕ್ಸೆಡ್ ಡಬಲ್ಸ್ ವಿಭಾಗದಲ್ಲಿ ಭಾರತದ ರೋಹನ್ ಕಪೂರ್ ಹಾಗೂ ರುಥ್ವಿಕಾ ಶಿವಾನಿ ಹಾಂಕಾಂಗ್ನ ಟಾಂಗ್ ಚುನ್ ಮಾನ್ ಹಾಗೂ ಸೆ ಯಿಂಗ್ ಸುಯೆಟ್ ವಿರುದ್ಧ 10-21, 16-21 ಗೇಮ್ಗಳ ಅಂತರದಿಂದ ಸೋತಿದ್ದಾರೆ.
ಸುಯಾಶ್, ಹ್ಯಾಜಲ್ವುಡ್ ಬೌಲಿಂಗ್ ದಾಳಿಗೆ ಪಂಜಾಬ್ ಧೂಳೀಪಟ! ಶ್ರೇಯಸ್ ಪಡೆ 101ಕ್ಕೆ ಸರ್ವಪತನ
ಪಂಜಾಬ್ಗೆ ಗುಮ್ಮಿದ ಆರ್ಸಿಬಿ ಗೂಳಿ! ಇಬ್ಬರು ಮ್ಯಾಚ್ ವಿನ್ನರ್ನೇ ಪೆವಿಲಿಯನ್ಗೆ ಓಡಿಸಿಬಿಟ್ರು!