ಫುಟ್ಬಾಲ್ ನ ಮೊದಲ ಬಿಲಿಯಾಧೀಶ ರೊನಾಲ್ಡೊ
ಬ್ಲೂಮ್ ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ವರದಿ
ಆಸ್ಟ್ರೇಲಿಯ ಅಂಡರ್-19 ವಿರುದ್ಧ ಯೂತ್ ಟೆಸ್ಟ್ ಸರಣಿ; ಕ್ಲೀನ್ಸ್ವೀಪ್ ಸಾಧಿಸಿದ ಭಾರತದ ಅಂಡರ್-19 ತಂಡ
Photo Credit : PTI ಮಕಾಯ್, ಅ.8: ಎರಡನೇ ಯೂತ್ ಟೆಸ್ಟ್ ಪಂದ್ಯದಲ್ಲಿ ಭಾರತದ ಅಂಡರ್-19 ಕ್ರಿಕೆಟ್ ತಂಡವು ಆಸ್ಟ್ರೇಲಿಯದ ಅಂಡರ್-19 ತಂಡವನ್ನು 7 ವಿಕೆಟ್ಗಳ ಅಂತರದಿಂದ ಮಣಿಸಿದೆ. ಈ ಮೂಲಕ 2 ಪಂದ್ಯಗಳ ಸರಣಿಯನ್ನು 2-0 ಅಂತರದಿಂದ ವಶಪಡಿಸಿಕೊಂಡು ಕ್ಲೀನ್ ಸ್ವೀಪ್ ಸಾಧಿಸಿದೆ. ಚತುರ್ದಿನ ಪಂದ್ಯದ 2ನೇ ದಿನದಾಟವಾದ ಬುಧವಾರ ಗೆಲ್ಲಲು ಕೇವಲ 81 ರನ್ ಗುರಿ ಪಡೆದ ಭಾರತ ತಂಡವು 12.2 ಓವರ್ ಗಳಲ್ಲಿ 3 ವಿಕೆಟ್ಗಳನ್ನು ಕಳೆದುಕೊಂಡು 84 ರನ್ ಗಳಿಸಿತು. ಔಟಾಗದೆ 33 ರನ್(35 ಎಸೆತ, 6 ಬೌಂಡರಿ) ಗಳಿಸಿದ ವೇದಾಂತ ತ್ರಿವೇದಿ ಬೌಂಡರಿ ಗಳಿಸುವ ಮೂಲಕ ಪಂದ್ಯಕ್ಕೆ ಅಂತ್ಯ ಹಾಡಿದರು. ಆರಂಭಿಕ ಬ್ಯಾಟರ್ ವೈಭವ್ ಸೂರ್ಯವಂಶಿ ಶೂನ್ಯಕ್ಕೆ ಔಟಾದರೆ, ನಾಯಕ ಆಯುಷ್ ಮ್ಹಾತ್ರೆ(13 ರನ್), ವಿಹಾನ್ ಮಲ್ಹೋತ್ರಾ(21 ರನ್)ಹಾಗೂ ರಾಹುಲ್ ಕುಮಾರ್( ಔಟಾಗದೆ 13 ರನ್)ಚೇಸ್ ವೇಳೆ ಎರಡಂಕೆಯ ಸ್ಕೋರ್ ಗಳಿಸಿದರು. ಮೊದಲ ಇನಿಂಗ್ಸ್ನಲ್ಲಿ 36 ರನ್ ಮುನ್ನಡೆ ಪಡೆದಿದ್ದ ಪ್ರವಾಸಿ ತಂಡ ಭಾರತವು ಆತಿಥೇಯ ಆಸ್ಟ್ರೇಲಿಯ ತಂಡವನ್ನು 2ನೇ ಇನಿಂಗ್ಸ್ನಲ್ಲಿ 116 ರನ್ಗೆ ಆಲೌಟ್ ಮಾಡಿ ಗೆಲ್ಲಲು ಸುಲಭ ಸವಾಲು ಪಡೆಯಿತು. ನಮನ್ ಪುಷ್ಪಕ್(3-19) ಹಾಗೂ ಹೆನಿಲ್ ಪಟೇಲ್(3-23) ತಲಾ ಮೂರು ವಿಕೆಟ್ಗಳನ್ನು ಪಡೆದರು. ಆಸ್ಟ್ರೇಲಿಯದ ಅಂಡರ್-19 ತಂಡದ ವಿಕೆಟ್ಕೀಪರ್ ಅಲೆಕ್ಸ್ ಲೀ ಯಂಗ್(38 ರನ್, 78 ಎಸೆತ, 4 ಬೌಂಡರಿ)ಸರ್ವಾಧಿಕ ಸ್ಕೋರ್ ಗಳಿಸಿದರು. ಆಸ್ಟ್ರೇಲಿಯ ಪ್ರವಾಸದಲ್ಲಿ 3 ಏಕದಿನ ಹಾಗೂ 2 ಟೆಸ್ಟ್ ಪಂದ್ಯಗಳ ಸಹಿತ ಎಲ್ಲ ಐದೂ ಪಂದ್ಯಗಳಲ್ಲಿ ಗೆದ್ದಿರುವ ಭಾರತದ ಅಂಡರ್-19 ಕ್ರಿಕೆಟ್ ತಂಡ ಯಶಸ್ವಿ ಪ್ರದರ್ಶನ ನೀಡಿದೆ. ಎರಡೂ ಸ್ವರೂಪದ ಪಂದ್ಯಗಳಲ್ಲಿ ವೇದಾಂತ ತ್ರಿವೇದಿ ಗರಿಷ್ಠ ರನ್ ಗಳಿಸಿದ್ದಾರೆ. ಏಕದಿನ ಕ್ರಿಕೆಟ್ನಲ್ಲಿ ಒಟ್ಟು 173 ರನ್ ಗಳಿಸಿದ್ದ ತ್ರಿವೇದಿ ಟೆಸ್ಟ್ ಪಂದ್ಯಗಳಲ್ಲಿ ಒಟ್ಟು 198 ರನ್ ಕಲೆ ಹಾಕಿದ್ದರು. ಟೆಸ್ಟ್ನಲ್ಲಿ 133 ರನ್ ಹಾಗೂ ಏಕದಿನ ಪಂದ್ಯದಲ್ಲಿ 124 ರನ್ ಗಳಿಸಿದ್ದ ಸೂರ್ಯವಂಶಿ 2ನೇ ಗರಿಷ್ಠ ರನ್ ಸ್ಕೋರರ್ ಎನಿಸಿಕೊಂಡಿದ್ದಾರೆ.
ಐಸಿಸಿ ಟೆಸ್ಟ್ ಆಟಗಾರರ ರ್ಯಾಂಕಿಂಗ್: ಸಿರಾಜ್, ರಾಹುಲ್, ಜಡೇಜಗೆ ಭಡ್ತಿ
ಮುಹಮ್ಮದ್ ಸಿರಾಜ್ , ಜಡೇಜ | Photo Credit : PTI ಹೊಸದಿಲ್ಲಿ, ಅ.8: ಅಹ್ಮದಾಬಾದ್ ನಲ್ಲಿ ನಡೆದಿದ್ದ ವೆಸ್ಟ್ಇಂಡೀಸ್ ತಂಡದ ವಿರುದ್ಧ ಬೃಹತ್ ಅಂತರದಿಂದ ಗೆಲುವು ದಾಖಲಿಸಿರುವ ಆತಿಥೇಯ ಭಾರತ ತಂಡದ ಆಟಗಾರರು ಐಸಿಸಿ ಪುರುಷರ ಟೆಸ್ಟ್ ಆಟಗಾರರ ರ್ಯಾಂಕಿಂಗ್ ನಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದ್ದಾರೆ. ಪಂದ್ಯದಲ್ಲಿ 3 ವಿಕೆಟ್ಗಳನ್ನು ಕಬಳಿಸಿದ್ದ ವೇಗದ ಬೌಲರ್ ಜಸ್ಪ್ರಿತ್ ಬುಮ್ರಾ ಟೆಸ್ಟ್ ಕ್ರಿಕೆಟಿನ ಅಗ್ರಮಾನ್ಯ ಬೌಲರ್ ಆಗಿ ಮುಂದುವರಿದಿದ್ದಾರೆ. ಬುಮ್ರಾರ ಜೊತೆಗಾರ ಮುಹಮ್ಮದ್ ಸಿರಾಜ್ ಮೂರು ಸ್ಥಾನ ಮೇಲಕ್ಕೇರಿ 12ನೇ ಸ್ಥಾನ ತಲುಪಿದ್ದಾರೆ. ಈ ಮೂಲಕ ಜೀವನಶ್ರೇಷ್ಠ ಸಾಧನೆ ಮಾಡಿದ್ದಾರೆ. ಸಿರಾಜ್ ವೆಸ್ಟ್ಇಂಡೀಸ್ ವಿರುದ್ಧ ಸರಣಿಯ ಆರಂಭಿಕ ಪಂದ್ಯದಲ್ಲಿ ಒಟ್ಟು 7 ವಿಕೆಟ್ಗಳನ್ನು ಉರುಳಿಸಿದ್ದರು. ಭಾರತ ತಂಡದ ಪ್ರಮುಖ ಸ್ಪಿನ್ನರ್ ಕುಲದೀಪ್ ಯಾದವ್ ಅಹ್ಮದಾಬಾದ್ ಟೆಸ್ಟ್ನಲ್ಲಿ 4 ವಿಕೆಟ್ಗಳನ್ನು ಉರುಳಿಸಿದ ನಂತರ 7 ಸ್ಥಾನ ಭಡ್ತಿ ಪಡೆದು 21ನೇ ಸ್ಥಾನ ತಲುಪಿದ್ದಾರೆ. ಬ್ಯಾಟರ್ಗಳ ಹೊಸ ರ್ಯಾಂಕಿಂಗ್ ನಲ್ಲಿ ಆರು ಸ್ಥಾನ ಜಿಗಿದಿರುವ ರವೀಂದ್ರ ಜಡೇಜ 25ನೇ ಸ್ಥಾನ ತಲುಪಿದ್ದಾರೆ. ವಿಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಜಡೇಜ ಔಟಾಗದೆ 106 ರನ್ ಗಳಿಸ್ದಿರು. ಅಹ್ಮದಾಬಾದ್ ಟೆಸ್ಟ್ನ ಮೊದಲ ಇನಿಂಗ್ಸ್ನಲ್ಲಿ ಶತಕ ಗಳಿಸಿದ್ದ ಕೆ.ಎಲ್.ರಾಹುಲ್ 4 ಸ್ಥಾನ ಭಡ್ತಿ ಪಡೆದು 35ನೇ ಸ್ಥಾನ ಪಡೆದಿದ್ದಾರೆ. ಟೆಸ್ಟ್ ಆಲ್ರೌಂಡರ್ ಗಳ ಪೈಕಿ ಜಡೇಜ ಅಗ್ರ ರ್ಯಾಂಕ ಕಾಯ್ದುಕೊಂಡಿದ್ದಾರೆ. ಜಡೇಜರ ಸಹ ಆಟಗಾರ ವಾಶಿಂಗ್ಟನ್ ಸುಂದರ್ 4 ಸ್ಥಾನ ಮೇಲಕ್ಕೇರಿ 11ನೇ ಸ್ಥಾನ ತಲುಪಿದ್ದಾರೆ. ಟಿ20 ರ್ಯಾಂಕಿಂಗ್: ಮಿಚೆಲ್ ಮಾರ್ಷ್ಗೆ ಭಡ್ತಿ ನ್ಯೂಝಿಲ್ಯಾಂಡ್ ವಿರುದ್ಧ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ಆಸ್ಟ್ರೇಲಿಯ ತಂಡದ ನಾಯಕ ಮಿಚೆಲ್ ಮಾರ್ಷ್ ಬುಧವಾರ ಬಿಡುಗಡೆಯಾಗಿರುವ ಟಿ-20 ರ್ಯಾಂಕಿಂಗ್ ನಲ್ಲಿ 13 ಸ್ಥಾನ ಭಡ್ತಿ ಪಡೆದು 10ನೇ ಸ್ಥಾನ ಹಂಚಿಕೊಂಡಿದ್ದಾರೆ. ಆಸ್ಟ್ರೇಲಿಯ ವಿರುದ್ಧ ಮೊದಲ ಟಿ-20 ಪಂದ್ಯದಲ್ಲಿ ಶತಕ ಗಳಿಸಿದ್ದ ಕಿವೀಸ್ ಬ್ಯಾಟರ್ ಟಿಮ್ ರಾಬಿನ್ಸನ್ 58 ಸ್ಥಾನಗಳಲ್ಲಿ ಭಡ್ತಿ ಪಡೆದು 22ನೇ ಸ್ಥಾನ ಗಿಟ್ಟಿಸಿದ್ದಾರೆ. ಅಫ್ಘಾನಿಸ್ತಾನ ವಿರುದ್ಧದ 3ನೇ ಹಾಗೂ ಅಂತಿಮ ಟಿ-20 ಪಂದ್ಯದಲ್ಲಿ ಅರ್ಧಶತಕ ಗಳಿಸಿದ ನಂತರ ಬಾಂಗ್ಲಾದೇಶದ ಸೈಫ್ ಹಸನ್ 17 ಸ್ಥಾನಗಳಲ್ಲಿ ಏರಿಕೆ ಕಂಡು 18ನೇ ಸ್ಥಾನ ತಲುಪಿದ್ದಾರೆ. ಬಾಂಗ್ಲಾದೇಶ ವಿರುದ್ಧ 3 ಟಿ-20 ಪಂದ್ಯಗಳಲ್ಲಿ 6 ವಿಕೆಟ್ಗಳನ್ನು ಕಬಳಿಸಿರುವ ಅಫ್ಘಾನಿಸ್ತಾನದ ಸ್ಪಿನ್ ಬೌಲರ್ ರಶೀದ್ ಖಾನ್ ಬೌಲರ್ಗಳ ರ್ಯಾಂಕಿಂಗ್ ನಲ್ಲಿ 2ನೇ ಸ್ಥಾನಕ್ಕೇರಿದ್ದಾರೆ. ರಶೀದ್ ಅವರ ಸಹ ಆಟಗಾರರಾದ ನೂರ್ ಅಹ್ಮದ್ ಹಾಗೂ ಮಜೀಬ್ವುರ್ರಹ್ಮಾನ್ ಕ್ರಮವಾಗಿ 17ನೇ ಹಾಗೂ 23ನೇ ಸ್ಥಾನಕ್ಕೇರಿದ್ದಾರೆ. ಆಸ್ಟ್ರೇಲಿಯದ ವೇಗದ ಬೌಲರ್ ಜೋಶ್ ಹೇಝಲ್ವುಡ್ 13ನೇ ಸ್ಥಾನಕ್ಕೆ ಭಡ್ತಿ ಪಡೆದಿದ್ದಾರೆ.
97ನೇ ವರ್ಷಕ್ಕೆ ಕಾಲಿಟ್ಟ ಅತ್ಯಂತ ಹಿರಿಯ ಟೆಸ್ಟ್ ಕ್ರಿಕೆಟಿಗ ನೀಲ್ ಹಾರ್ವೆ
ನೀಲ್ ಹಾರ್ವೆ |Photo Credit : @Aryaseen5911 ಮೆಲ್ಬರ್ನ್,ಅ.8: ಬದುಕಿರುವ ಅತ್ಯಂತ ಹಿರಿಯ ಟೆಸ್ಟ್ ಕ್ರಿಕೆಟಿಗ, ಆಸ್ಟ್ರೇಲಿಯದ ಮಾಜಿ ಬ್ಯಾಟರ್ ನೀಲ್ ಹಾರ್ವೆ ಬುಧವಾರ 97ನೇ ವಸಂತಕ್ಕೆ ಕಾಲಿಟ್ಟರು. ಆಸ್ಟ್ರೇಲಿಯದ ಪರ ದೀರ್ಘಕಾಲ ಬದುಕಿರುವ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಹಾರ್ವೆ 1948ರಲ್ಲಿ ಇಂಗ್ಲೆಂಡ್ ನಲ್ಲಿ 34 ಪಂದ್ಯಗಳನ್ನು ಜಯಿಸಿ ಅಜೇಯವಾಗುಳಿದಿದ್ದ ಡಾನ್ ಬ್ರಾಡ್ಮನ್ ಅವರಿದ್ದ ಪ್ರವಾಸಿ ಆಸ್ಟ್ರೇಲಿಯ ತಂಡದ ಕೊನೆಯ ಜೀವಂತ ಸದಸ್ಯರೂ ಆಗಿದ್ದಾರೆ. ವಿಕ್ಟೋರಿಯಾದಲ್ಲಿ ಜನಿಸಿರುವ ಎಡಗೈ ಬ್ಯಾಟರ್ ಹಾರ್ವೆ 1948 ಹಾಗೂ 1963ರ ನಡುವೆ 79 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 48.41ರ ಸರಾಸರಿಯಲ್ಲಿ 6,149 ರನ್ ಗಳಿಸಿದ್ದಾರೆ. 306 ಪ್ರಥಮ ದರ್ಜೆ ಪಂದ್ಯಗಳಲ್ಲಿ 50ಕ್ಕೂ ಅಧಿಕ ಸರಾಸರಿಯಲ್ಲಿ 21,000ಕ್ಕೂ ಅಧಿಕ ರನ್ ಕಲೆ ಹಾಕಿದ್ದಾರೆ. 1952-53ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿಯಲ್ಲಿ 9 ಇನಿಂಗ್ಸ್ಗಳಲ್ಲಿ 834 ರನ್ ಗಳಿಸಿದ್ದು, ಹಾರ್ವೆ ಅವರ ಅಮೋಘ ಸಾಧನೆಗಳ ಪೈಕಿ ಒಂದಾಗಿದೆ. 1949-50ರ ದಕ್ಷಿಣ ಆಫ್ರಿಕಾ ಪ್ರವಾಸದ ವೇಳೆ ಹಾರ್ವೆ 5 ಪಂದ್ಯಗಳಲ್ಲಿ 4 ಶತಕಗಳ ಸಹಿತ ಒಟ್ಟು 660 ರನ್ ಗಳಿಸಿದ್ದರು. ತನ್ನ ಮೊದಲ 13 ಟೆಸ್ಟ್ ಪಂದ್ಯಗಳಲ್ಲಿ ಹಾರ್ವೆ ಒಬ್ಬರೇ 6 ಶತಕಗಳನ್ನು ಗಳಿಸಿದ್ದರು. 1948ರಲ್ಲಿ ಮೆಲ್ಬರ್ನ್ ನಲ್ಲಿ ಭಾರತದ ವಿರುದ್ಧ 19 ವರ್ಷ, 121ನೇ ದಿನದ ವಯಸ್ಸಿನಲ್ಲಿ 153 ರನ್ ಗಳಿಸಿದ್ದರು. ಟೆಸ್ಟ್ ಶತಕ ಗಳಿಸಿದ ಆಸ್ಟ್ರೇಲಿಯದ ಕಿರಿಯ ಕ್ರಿಕೆಟಿಗ ಎನಿಸಿಕೊಂಡಿದ್ದರು. ನಿವೃತ್ತಿಯ ನಂತರ ಹಾರ್ವೆ ಅವರು 12 ವರ್ಷಗಳ ಕಾಲ ರಾಷ್ಟ್ರೀಯ ಆಯ್ಕೆಗಾರರಾಗಿದ್ದರು. 2000ರಲ್ಲಿ ಆಸ್ಟ್ರೇಲಿಯನ್ ಹಾಲ್ ಆಫ್ ಫೇಮ್ಗೆ ಸೇರ್ಪಡೆಯಾಗಿದ್ದರು.
ಮೊದಲ ಆ್ಯಶಸ್ ಟೆಸ್ಟ್ ನಿಂದ ಪ್ಯಾಟ್ ಕಮಿನ್ಸ್ ಹೊರಗುಳಿಯುವ ಸಾಧ್ಯತೆ
ಪ್ಯಾಟ್ ಕಮಿನ್ಸ್ | Photo Credit : X ಮೆಲ್ಬರ್ನ್, ಅ.8: ಬೆನ್ನುನೋವಿನಿಂದ ಬಳಲುತ್ತಿರುವ ಆಸ್ಟ್ರೇಲಿಯದ ಟೆಸ್ಟ್ ತಂಡದ ನಾಯಕ ಪ್ಯಾಟ್ ಕಮಿನ್ಸ್ ಇಂಗ್ಲೆಂಡ್ ವಿರುದ್ಧದ ಪ್ರತಿಷ್ಠಿತ ಆ್ಯಶಸ್ ಸರಣಿಯ ಮೊದಲ ಟೆಸ್ಟ್ ಪಂದ್ಯದಿಂದ ಹೊರಗುಳಿಯುವ ಸಾಧ್ಯತೆಯಿದೆ. ಕಮಿನ್ಸ್ ಅವರು ಪರ್ತ್ನಲ್ಲಿ ನವೆಂಬರ್ 21ರಿಂದ ಆರಂಭವಾಗಲಿರುವ ಸಂಪೂರ್ಣ ಐದು ಪಂದ್ಯಗಳ ಟೆಸ್ಟ್ ಸರಣಿಯಿಂದಲೇ ಹೊರಗುಳಿಯುವ ಸಾಧ್ಯತೆಯೂ ಇದೆ. ಸ್ಟಾರ್ ವೇಗದ ಬೌಲರ್ ಈ ತನಕವೂ ಬೌಲಿಂಗ್ ಅಭ್ಯಾಸ ಆರಂಭಿಸಿಲ್ಲ. ಮೊದಲ ಪಂದ್ಯಕ್ಕೆ ಸಜ್ಜಾಗಲು 4ರಿಂದ 6 ವಾರಗಳ ಕಾಲ ತರಬೇತಿ ನಡೆಸುವ ಅಗತ್ಯವೂ ಇದೆ ಎಂದು ‘ಕೋಡ್ಸ್ಪೋರ್ಟ್ಸ್’ ವರದಿ ಮಾಡಿದೆ. ಇತ್ತೀಚೆಗಿನ ಸ್ಕ್ಯಾನಿಂಗ್ ವರದಿಯಲ್ಲಿ ಕಮಿನ್ಸ್ ಅವರ ಬೆನ್ನುನೋವು ಗುಣಮುಖವಾಗುತ್ತಿರುವುದು ಕಂಡುಬಂದಿದೆ. ಆದರೆ, ಅವರು ತಂಡಕ್ಕೆ ಮರಳುವ ಕುರಿತಂತೆ ವೈದ್ಯಕೀಯ ಸಿಬ್ಬಂದಿ ಎಚ್ಚರಿಕೆಯಿಂದಿದೆ. ನಾಯಕ ಹಾಗೂ ಪ್ರಮುಖ ವೇಗದ ಬೌಲರ್ ಆಗಿ ತಂಡಕ್ಕೆ ಅತ್ಯಂತ ಮುಖ್ಯವಾಗಿರುವ ಕಮಿನ್ಸ್ ಅವರ ಆರೋಗ್ಯವನ್ನು ದೀರ್ಘಕಾಲ ಕಾಪಾಡಲು ವೈದ್ಯಕೀಯ ಸಿಬ್ಬಂದಿ ಬಯಸಿದೆ ಎಂದು ಆಸ್ಟ್ರೇಲಿಯ ಮಾಧ್ಯಮ ವರದಿ ಮಾಡಿದೆ. ಕಮಿನ್ಸ್ ತಂಡಕ್ಕೆ ಮರಳುವ ಮೊದಲು ಸಂಪೂರ್ಣ ಫಿಟ್ ಆಗುವುದು ಮುಖ್ಯವಾಗಿದೆ ಎಂದು ಒತ್ತಿ ಹೇಳಿರುವ ಆಸ್ಟ್ರೇಲಿಯದ ಮಾಜಿ ವೇಗದ ಬೌಲರ್ ಬ್ರೆಟ್ ಲೀ, ‘‘ಅವರು ಶೇ.100ರಷ್ಟು ಫಿಟ್ ಆಗುವ ತನಕ ಕಾಯುವುದು ಉತ್ತಮ. ಏಕೆಂದರೆ ಮೊದಲ ಟೆಸ್ಟ್ನಲ್ಲಿ 80ರಿಂದ 90 ಶೇ. ಫಿಟ್ ಇದ್ದಾಗ ಆಡಿದರೆ ಅವರು ಮತ್ತೊಮ್ಮೆ ಬೆನ್ನುನೋವಿಗೆ ಒಳಗಾಗುವ ಸಾಧ್ಯತೆಯಿದೆ’’ಎಂದರು. ಒಂದು ವೇಳೆ ಆ್ಯಶಸ್ ಟೆಸ್ಟ್ಗೆ ಕಮಿನ್ಸ್ ಗೈರಾದರೆ, ಸ್ಟೀವ್ ಸ್ಮಿತ್ ನಾಯಕತ್ವವಹಿಸಬಹುದು, ಸ್ಕಾಟ್ ಬೋಲ್ಯಾಂಡ್ ವೇಗದ ಬೌಲಿಂಗ್ ವಿಭಾಗಕ್ಕೆ ಸೇರಲಿದ್ದಾರೆ. ಇದೇ ವೇಳೆ, ಆ್ಯಶಸ್ ಸರಣಿಗೆ ತಯಾರಿ ನಡೆಸಲು ಜೋಶ್ ಹೇಝಲ್ವುಡ್ ಹಾಗೂ ಮಿಚೆಲ್ ಸ್ಟಾರ್ಕ್ ಭಾರತ ಹಾಗೂ ಶೀಫೀಲ್ಡ್ ಶೀಲ್ಡ್ ಪಂದ್ಯಗಳಲ್ಲಿ ಆಡುತ್ತಿದ್ದಾರೆ. 2017ರಲ್ಲಿ ಟೆಸ್ಟ್ ಕ್ರಿಕೆಟಿಗೆ ವಾಪಸಾದ ನಂತರ ಕಮಿನ್ಸ್ ಅವರು ಕೆಲವೇ ಪಂದ್ಯಗಳಿಂದ ವಂಚಿತರಾಗಿದ್ದರು. ಈ ವರ್ಷ 300 ಟೆಸ್ಟ್ ವಿಕೆಟ್ಗಳ ಮೈಲಿಗಲ್ಲು ತಲುಪಿದ ಆಸ್ಟ್ರೇಲಿಯದ 8ನೇ ಬೌಲರ್ ಎನಿಸಿಕೊಂಡಿದ್ದರು.
ಸರ್ಫರಾಜ್ ಖಾನ್ ಸಹೋದರ ಮುಶೀರ್ ಖಾನ್ ಜೊತೆ ಪೃಥ್ವಿ ಶಾ ಕಿರಿಕ್; ಮೈದಾನದಲ್ಲಿ ನಡೆದಿದ್ದೇನು?
ಮುಂಬೈನ ಎಂಸಿಎ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಮುಂಬೈ ಹಾಗೂ ಮಹಾರಾಷ್ಟ್ರ ತಂಡಗಳ ಅಭ್ಯಾಸ ಪಂದ್ಯದಲ್ಲಿ ಟೀಮ್ ಇಂಡಿಯಾ ಆಟಗಾರ ಸರ್ಫರಾಜ್ ಖಾನ್ ಅವರ ಕಿರಿಯ ಸಹೋದರ ಮುಶೀರ್ ಖಾನ್ ಮೇಲೆ ಪೃಥ್ವಿ ಶಾ ಹಲ್ಲೆಗೆ ಯತ್ನಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
Virat Kohli: ಕೊಹ್ಲಿ 54 ರನ್ ಗಳಿಸಿದರೆ, ಕುಮಾರ್ ಸಂಗಕ್ಕಾರ ವಲ್ಡ್ ರೆಕಾರ್ಡ್ ಬ್ರೇಕ್!
ಆಸ್ಟ್ರೇಲಿಯಾ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ 54 ರನ್ ಗಳಿಸುವ ಮೂಲಕ ಶ್ರೀಲಂಕಾ ತಂಡದ ಮಾಜಿ ನಾಯಕ ಕುಮಾರ್ ಸಂಗಕ್ಕಾರ ಅವರ ವಲ್ಡ್ ರೆಕಾರ್ಡ್ ಬ್ರೇಕ್ ಮಾಡಲು ಸಜ್ಜಾಗಿದ್ದಾರೆ.
IND vs AUS: ಕಮ್ಮಿನ್ಸ್ ಔಟ್, ಸ್ಟಾರ್ಕ್ ಇನ್...ಭಾರತ ಎದುರಿಸಲಿರುವ ಬಲಿಷ್ಠ ಆಸ್ಟ್ರೇಲಿಯಾ ತಂಡ ಪ್ರಕಟ
ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಅಕ್ಟೋಬರ್ 19 ರಂದು ಏಕದಿನ ಸರಣಿ ಪ್ರಾರಂಭವಾಗಲಿದೆ. ಬಳಿಕ ಉಭಯ ತಂಡಗಳ ನಡುವೆ ಟಿ20 ಸರಣಿ ನಡೆಯಲಿದೆ. ಈ ಎರಡು ಸರಣಿಗಳಿಗೆ ಆಸ್ಟ್ರೇಲಿಯಾ ತಂಡವನ್ನು ಪ್ರಕಟಿಸಲಾಗಿದೆ.
ಪಂಜಾಬ್ ಕಿಂಗ್ಸ್ ಬೌಲಿಂಗ್ ಕೋಚ್ ಹುದ್ದೆಗೆ ಕನ್ನಡಿಗ ರಾಜೀನಾಮೆ; ದಿಢೀರ್ ನಿರ್ಧಾರ ತೆಗೆದುಕೊಂಡಿದ್ದೇಕೆ?
ಬಾಲಿವುಡ್ ನಟಿ ಪ್ರೀತಿ ಜಿಂಟಾ ಅವರ ಪಂಜಾಬ್ ಕಿಂಗ್ಸ್ ತಂಡದ ಬೌಲಿಂಗ್ ಕೋಚ್ ಹುದ್ದೆಗೆ ಕನ್ನಡಿಗ ಸುನೀಲ್ ಜೋಶಿ ರಾಜೀನಾಮೆ ನೀಡಿದ್ದಾರೆ.
Rishabh Pant: ಶೀಘ್ರದಲ್ಲೇ ರಿಷಭ್ ಪಂತ್ ಕಣಕ್ಕೆ, ಫಿಟ್ನೆಸ್ ಅಪ್ಡೇಟ್ ಇಲ್ಲಿದೆ...
ಇಂಗ್ಲೆಂಡ್ ಪ್ರವಾಸದ ಟೆಸ್ಟ್ ಸರಣಿ ಸಂದರ್ಭದಲ್ಲಿ ಗಾಯಗೊಂಡಿದ್ದ ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ಮತ್ತು ವಿಕೆಟ್ ಕೀಪರ್ ರಿಷಭ್ ಪಂತ್ ಫಿಟ್ ಆಗಿದ್ದು, ಮೈದಾನಕ್ಕೆ ಯಾವಾಗ ಇಳಿಯುತ್ತಾರೆ ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.
ಉದ್ದೀಪನ ದ್ರವ್ಯ ಸೇವನೆ ಪತ್ತೆ : ಓಟಗಾರ್ತಿ ಧನಲಕ್ಷ್ಮಿ ತಾತ್ಕಾಲಿಕ ಅಮಾನತು
ಧನಲಕ್ಷ್ಮಿ | Photo Credit : olympics.com ಹೊಸದಿಲ್ಲಿ, ಅ. 6: ಉದ್ದೀಪನ ದ್ರವ್ಯ ಸೇವಿಸಿರುವುದು ಪರೀಕ್ಷೆಯಲ್ಲಿ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ತಮಿಳುನಾಡಿನ ವೇಗದ ಓಟಗಾರ್ತಿ ಧನಲಕ್ಷ್ಮಿಯನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿದೆ. ಅವರು ಡ್ರೋಸ್ಟನೊಲೋನ್ ಸ್ಟೀರಾಯ್ಡ್ ಸೇವಿಸಿರುವುದು 2ನೇ ಬಾರಿ ಪತ್ತೆಯಾಗಿತ್ತು. ಪಂಜಾಬ್ನ ಸಂಗ್ರೂರ್ನಲ್ಲಿ ನಡೆದ ಭಾರತೀಯ ಮುಕ್ತ ಅತ್ಲೆಟಿಕ್ಸ್ ಕೂಟದ ವೇಳೆ ಜುಲೈ 27ರಂದು ಅವರ ವಿವಾದಾತ್ಮಕ ಮಾದರಿಯನ್ನು ಸಂಗ್ರಹಿಸಲಾಗಿತ್ತು. ಈಗ ಧದನಲಕ್ಷ್ಮಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿದೆ. ಅವರ ಈ ಹಿಂದಿನ ನಿಷೇಧ ಅವಧಿಯು ಈ ವರ್ಷದ ಜುಲೈ 17ರಂದು ಕೊನೆಗೊಂಡಿತ್ತು. ಬಳಿಕ, ಹತ್ತೇ ದಿನಗಳಲ್ಲಿ ಅವರು ಮತ್ತೆ ರಾಷ್ಟ್ರೀಯ ಮಾದಕ ದ್ರವ್ಯ ನಿಗ್ರಹ ಸಂಸ್ಥೆ (ನಾಡ)ಯ ಬಲೆಗೆ ಬಿದ್ದಿದ್ದಾರೆ. ಸಂಗ್ರೂರಿನಲ್ಲಿ ನಡೆದ ಕ್ರೀಡಾಕೂಟದಲ್ಲಿ ಅವರು 100 ಮೀಟರ್ ಓಟವನ್ನು 11.55 ಸೆಕೆಂಡ್ಗಳಲ್ಲಿ ಪೂರೈಸಿ ಚಿನ್ನ ಗೆದ್ದಿದ್ದರು. 2ನೇ ಬಾರಿ ಉದ್ದೀಪನ ದ್ರವ್ಯ ಸೇವಿಸಿ ಸಿಕ್ಕಿ ಬಿದ್ದಿರುವ ಹಿನ್ನೆಲೆಯಲ್ಲಿ ಅವರು 8 ವರ್ಷಗಳ ನಿಷೇಧಕ್ಕೆ ಒಳಗಾಗುವ ಸಾಧ್ಯತೆಯಿದೆ. ಈ ನಿಷೇಧವನ್ನು ತಪ್ಪಿಸಬೇಕಾದರೆ, ಮುಂದೆ ನಡೆಯಲಿರುವ ವಿಚಾರಣೆಗಳಲ್ಲಿ ಉದ್ದೀಪನ ದ್ರವ್ಯದ ಬಳಕೆಯು ಉದ್ದೇಶಪೂರ್ವಕವಲ್ಲ ಎನ್ನುವುದನ್ನು ಸಾಬೀತುಪಡಿಸಬೇಕಾಗುತ್ತದೆ.
ರಣಜಿಗೆ ರಿಷಭ್ ಪಂತ್ ಮರಳುವ ಸಾಧ್ಯತೆ
ರಿಷಭ್ ಪಂತ್ | Photo Credit : PTI ಹೊಸದಿಲ್ಲಿ, ಅ.6: ವಿಕೆಟ್ಕೀಪರ್-ಬ್ಯಾಟರ್ ರಿಷಭ್ ಪಂತ್ ಅಕ್ಟೋಬರ್ನ ಕೊನೆಯ ವಾರದಲ್ಲಿ ರಣಜಿ ಟ್ರೋಫಿ ಟೂರ್ನಿಯಲ್ಲಿ ಆಡುವ ಮೂಲಕ ಸ್ಪರ್ಧಾತ್ಮಕ ಕ್ರಿಕೆಟಿಗೆ ಮರಳುವ ಸಾಧ್ಯತೆಯಿದೆ. ಮುಂದಿನ ವಾರ ಸೆಂಟರ್ ಆಫ್ ಎಕ್ಸಲೆನ್ಸ್ನ(ಸಿಒಇ)ಬಿಸಿಸಿಐನ ವೈದ್ಯಕೀಯ ತಂಡವು ಪಂತ್ ಅವರ ಬಲಗಾಲನ್ನು ಪರೀಕ್ಷಿಸುವ ನಿರೀಕ್ಷೆ ಇದೆ ಎಂದು ವರದಿಯಾಗಿದೆ. ‘‘ಅ.10ರಂದು ಪಂತ್ ಅವರು ಫಿಟ್ನೆಸ್ ಪರೀಕ್ಷೆಯಲ್ಲಿ ಪಾಸಾಗುವ ನಿರೀಕ್ಷೆ ಇದೆ. ಬಿಸಿಸಿಐ ವೈದ್ಯಕೀಯ ತಂಡವು ಪಂತ್ ಕುರಿತು ನಿಗಾ ವಹಿಸಿದೆ’’ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ರಣಜಿ ಟ್ರೋಫಿ ಟೂರ್ನಿಯಲ್ಲಿ ದಿಲ್ಲಿ ತಂಡದ ಪರ ಆಡುವ ಕುರಿತಂತೆ ಪಂತ್ ಅವರು ದಿಲ್ಲಿ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ರೋಹನ್ ಜೇಟ್ಲಿಗೆ ಮನವರಿಕೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಅ.25ರಿಂದ ದಿಲ್ಲಿಯಲ್ಲಿ ಆರಂಭವಾಗಲಿರುವ ರಣಜಿ ಟ್ರೋಫಿ ಪಂದ್ಯಗಳಿಗೆ ತಾನು ಲಭ್ಯವಿದ್ದೇನೆ. ಇದು ಫಿಟ್ನೆಸ್ ಹಾಗೂ ಬಿಸಿಸಿಐ ವೈದ್ಯಕೀಯ ತಂಡದಿಂದ ಪಡೆಯಲಿರುವ ಅನುಮತಿಯನ್ನು ಅವಲಂಬಿಸಿದೆ ಎಂದು ಪಂತ್ ತಿಳಿಸಿದ್ದಾಗಿ ಡಿಡಿಸಿಎ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಜುಲೈನ ಕೊನೆಯ ವಾರದಲ್ಲಿ ಮ್ಯಾಂಚೆಸ್ಟರ್ನಲ್ಲಿ ಇಂಗ್ಲೆಂಡ್ ವಿರುದ್ಧದ 4ನೇ ಟೆಸ್ಟ್ ಪಂದ್ಯದ ವೇಳೆ ಪಂತ್ ಕಾಲ್ಬೆರಳಿನ ಗಾಯಕ್ಕೆ ಒಳಗಾಗಿದ್ದು, ಅವರು ಇನ್ನೂ ಚೇತರಿಸಿಕೊಳ್ಳದ ಕಾರಣ ಮುಂಬರುವ ಆಸ್ಟ್ರೇಲಿಯ ವಿರುದ್ಧ ಸೀಮಿತ ಓವರ್ ಕ್ರಿಕೆಟ್ ಸರಣಿ ಹಾಗೂ ಈಗ ನಡೆಯುತ್ತಿರುವ ವೆಸ್ಟ್ಇಂಡೀಸ್ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿಯಿಂದ ವಂಚಿತರಾಗಿದ್ದಾರೆ. ಭಾರತ ತಂಡವು ನವೆಂಬರ್ನಲ್ಲಿ 14ರಿಂದ ದಕ್ಷಿಣ ಆಫ್ರಿಕಾ ವಿರುದ್ಧ 2 ಪಂದ್ಯಗಳ ಟೆಸ್ಟ್ ಸರಣಿಯನ್ನಾಡಲಿದೆ. ನ.5ರ ತನಕ ಪಂತ್ ಅವರು 2 ರಣಜಿ ಪಂದ್ಯಗಳನ್ನು ಆಡಬಹುದು. ಪಂತ್ ಅವರು ಎಷ್ಟು ರಣಜಿ ಪಂದ್ಯಗಳನ್ನು ಆಡಲಿದ್ದಾರೆ ಎನ್ನುವುದು ಸಿಒಇಯಿಂದ ಪಡೆಯುವ ಅನುಮತಿಯನ್ನು ಅವಲಂಬಿಸಿದೆ.
ಶಾಂಘೈ ಮಾಸ್ಟರ್ಸ್ ಟೆನಿಸ್ ಟೂರ್ನಿ : ಹಾಲಿ ಚಾಂಪಿಯನ್ ಜನ್ನಿಕ್ ಸಿನ್ನರ್ ಹೊರಕ್ಕೆ
ಜನ್ನಿಕ್ ಸಿನ್ನರ್ | Photo Credit : X ಶಾಂಘೈ, ಅ.6: ನೆದರ್ಲ್ಯಾಂಡ್ಸ್ನ ತಲ್ಲೋನ್ಗ್ರೀಕ್ಸ್ಪೂರ್ ವಿರುದ್ಧ ತನ್ನ 3ನೇ ಸುತ್ತಿನ ಪಂದ್ಯದ ವೇಳೆ ಕಾಲುನೋವಿಗೆ ಒಳಗಾಗಿರುವ ಹಾಲಿ ಚಾಂಪಿಯನ್ ಜನ್ನಿಕ್ ಸಿನ್ನರ್ ಶಾಂಘೈ ಮಾಸ್ಟರ್ಸ್ ಟೆನಿಸ್ ಟೂರ್ನಿಯಿಂದ ಹೊರಗುಳಿದಿದ್ದಾರೆ. ವಿಶ್ವದ ನಂ.4ನೇ ಆಟಗಾರ ಸಿನ್ನರ್ಗೆ 3ನೇ ಸೆಟ್ನ 4ನೇ ಗೇಮ್ ವೇಳೆ ನೋವು ಕಾಣಿಸಿಕೊಂಡಿತು. ಸಿನ್ನರ್ 6-7(3/7), 7-5, 3-2 ಹಿನ್ನಡೆಯಲ್ಲಿದ್ದಾಗ ಪಂದ್ಯ ನಿಲ್ಲಿಸಲಾಯಿತು. ನಾಲ್ಕು ಬಾರಿಯ ಗ್ರ್ಯಾನ್ಸ್ಲಾಮ್ ಚಾಂಪಿಯನ್ ಸಿನ್ನರ್ ಮೊದಲ ಸೆಟ್ ಅನ್ನು ಟೈ-ಬ್ರೇಕರ್ನಲ್ಲಿ ಸೋತಿದ್ದಾರೆ. 2ನೇ ಸೆಟ್ಟನ್ನು 7-5 ಅಂತರದಿಂದ ಗೆದ್ದುಕೊಂಡ ಇಟಲಿ ಆಟಗಾರ ತಿರುಗೇಟು ನೀಡಿದರು. 3ನೇ ಸೆಟ್ನ 4ನೇ ಗೇಮ್ ವೇಳೆ ಸಿನ್ನರ್ಗೆ ನೋವು ಕಾಣಿಸಿಕೊಂಡಿದ್ದು, ಅವರ ಪರಿಸ್ಥಿತಿ ಸುಧಾರಿಸಲಿಲ್ಲ. ಆಗ ಚೇರ್ ಮೇಲೆ ಕುಳಿತುಕೊಂಡ ಸಿನ್ನರ್ ಪಂದ್ಯದಿಂದ ನಿವೃತ್ತಿಯಾಗಲು ನಿರ್ಧರಿಸಿದರು.
ಅವಕಾಶ ಸಿಕ್ಕರೂ ಅಬ್ಬರಿಸದ ಟೀಮ್ ಇಂಡಿಯಾದ ಯಂಗ್ ಬ್ಯಾಟರ್; ಕನ್ನಡಿಗನಿಗೆ ಚಾನ್ಸ್ ಸಿಗುತ್ತಾ?
ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿಯ ಎರಡನೇ ಮತ್ತು ಕೊನೆಯ ಪಂದ್ಯ ಅಕ್ಟೋಬರ್ 10 ರಂದು ನವದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಅವಕಾಶ ಸಿಕ್ಕರೂ ಅಬ್ಬರಿಸದ ಟೀಮ್ ಇಂಡಿಯಾದ ಯಂಗ್ ಬ್ಯಾಟರ್ ಬದಲಿಗೆ ಕನ್ನಡಿಗನಿಗೆ ಚಾನ್ಸ್ ಸಿಗುತ್ತಾ?
IND vs AUS: ಭಾರತದ ಆಸ್ಟ್ರೇಲಿಯಾ ಪ್ರವಾಸಕ್ಕೂ ಮುನ್ನ ಏಕದಿನ ಸರಣಿಯ ಭವಿಷ್ಯ ನುಡಿದ ಫಿಂಚ್
ಆಕ್ಟೋಬರ್ 19 ರಿಂದ ಆರಂಭವಾಗಲಿರುವ ಭಾರತದ ಆಸ್ಟ್ರೇಲಿಯಾ ಪ್ರವಾಸಕ್ಕೂ ಮುನ್ನ ಏಕದಿನ ಸರಣಿಯ ಬಗ್ಗೆ ಆರೋನ್ ಫಿಂಚ್ ಭವಿಷ್ಯ ನುಡಿದಿದ್ದಾರೆ.