'ಕೆ.ಎಲ್ ರಾಹುಲ್ ದೊಡ್ಡ ಮ್ಯಾಚ್ ವಿನ್ನರ್' : ಕನ್ನಡಿಗನಿಗೆ ಸಲಾಂ ಎಂದ ಸ್ಕಾಟ್ ಸ್ಟೈರಿಸ್!
Scott Styris on KL Rahul comeback: ಮುಂಬರುವ ಏಷ್ಯಾ ಕಪ್ ಟೂರ್ನಿಯ ಭಾರತ ತಂಡಕ್ಕೆ ಮರಳಿದ ಆರಂಭಿಕ ಬ್ಯಾಟ್ಸ್ಮನ್ ಕೆ.ಎಲ್ ರಾಹುಲ್ ಅವರನ್ನು ನ್ಯೂಜಿಲೆಂಡ್ ಮಾಜಿ ಆಲ್ರೌಂಡರ್ ಸ್ಕಾಟ್ ಸ್ಟೈರಿಸ್ ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. ಅವರು ತಂಡದ ಅತ್ಯಂತ ಮೌಲ್ಯಯುತ ಆಟಗಾರ; ಈ ಕಾರಣದಿಂದಲೇ ತಂಡಕ್ಕೆ ಸುಲಭವಾಗಿ ಮರಳಲಿದ್ದಾರೆ ಎಂದು ಹೇಳಿದರು. ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿರುವ ಕನ್ನಡಿಗ ಕೆ.ಎಲ್ ರಾಹುಲ್ ಏಷ್ಯಾ ಕಪ್ ಟೂರ್ನಿಯ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಮರಳಲಿದ್ದಾರೆ.
asia cup 2022: ಟೀಮ್ ಇಂಡಿಯಾ ಆಯ್ಕೆ ಸರಿಯಿಲ್ಲ ಎಂದ ಆಕಾಶ್ ಚೋಪ್ರಾ!
India Squad For Asia Cup 2022: ಆಗಸ್ಟ್ 27ರಂದು ಬಹುನಿರೀಕ್ಷಿತ ಏಷ್ಯಾ ಕಪ್ ಟಿ20 ಕ್ರಿಕೆಟ್ ಟೂರ್ನಿ ಶುರುವಾಗಲಿದೆ. ಟೂರ್ನಿ ಸಲುವಾಗಿ ತಂಡ ಪ್ರಕಟಿಸಲು ಆಗಸ್ಟ್ 8 ಕೊನೇ ದಿನವಾಗಿತ್ತು. ಅಂತೆಯೇ ಸೋಮವಾರ ಭಾರತೀಯ ಕ್ರಿಕೆಟ್ ನಿಯಂತ್ರಂಣ ಮಂಡಳಿ (ಬಿಸಿಸಿಐ) ತಂಡ ಪ್ರಕಟ ಮಾಡಿದೆ. ಪ್ರಮುಖ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಗಾಯದ ಸಮಸ್ಯೆ ಕಾರಣ ಮಹತ್ವದ ಟೂರ್ನಿಗೆ ಅಲಭ್ಯರಾಗಿರುವುದು ಭಾರತ ತಂಡಕ್ಕೆ ಬಹುದೊಡ್ಡ ಹಿನ್ನಡೆ ತಂದೊಡ್ಡಿದೆ, ಈ ಸಂದರ್ಭದಲ್ಲಿ ಭಾರತ ತಂಡದ ಆಯ್ಕೆ ಬಗ್ಗೆ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಅಸಮಾಧಾನ ಹೊರಹಾಕಿದ್ದಾರೆ.
IND vs PAK: ಪಾಕ್ ವಿರುದ್ಧದ ಟಿ20 ಕದನಕ್ಕೆ ಟೀಮ್ ಇಂಡಿಯಾದ ಸಂಭಾವ್ಯ XI
India vs Pakistan Match in Asia Cup 2022: ಬಹುನಿರೀಕ್ಷಿತ ಏಷ್ಯಾ ಕಪ್ ಟಿ20 ಕ್ರಿಕೆಟ್ ಟೂರ್ನಿಗೆ ದಿನಗಣನೆ ಶುರುವಾಗಿದೆ. ಆಗಸ್ಟ್ 27ರಂದು ಟೂರ್ನಿ ಶುರುವಾಗಲಿದ್ದು, ಆಗಸ್ಟ್ 28ರಂದು ಭಾನುವಾರ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಸಾಂಪ್ರದಾಯಿಕ ಎದುರಾಳಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿದೆ. ಟೂರ್ನಿಗೆ ತಂಡ ಪ್ರಕಟಿಸಲು ಇದ್ದ ಕಡೇ ದಿನವಾದ ಸೋಮವಾರ (ಆಗಸ್ಟ್ 8) ಬಿಸಿಸಿಐ ತನ್ನ 15 ಸದಸ್ಯರ ಟೀಮ್ ಇಂಡಿಯಾ ಪ್ರಕಟ ಮಾಡಿದೆ. ಈ ಸಂದರ್ಭದಲ್ಲಿ ಭಾರತ ತಂಡದ ಅತ್ಯುತ್ತಮ ಪ್ಲೇಯಿಂಗ್ ಇಲೆವೆನ್ ವಿವರ ಇಲ್ಲಿದೆ.
Hondisi Bareyiri: 'ಹೊಂದಿಸಿ ಬರೆಯಿರಿ' ಎಂದ 'ಕೆಜಿಎಫ್' ನಟಿ ಅರ್ಚನಾ ಜೋಯಿಸ್
ಕೆಜಿಎಫ್ ಸಿನಿಮಾದಲ್ಲಿ ತಾಯಿಯ ಪಾತ್ರ ನಿರ್ವಹಿಸಿ ಗಮನ ಸೆಳೆದಿದ್ದ ನಟಿ ಆರ್ಚನಾ ಜೋಯಿಸ್ ‘ಹೊಂದಿಸಿ ಬರೆಯಿರಿ’ ಸಿನಿಮಾದಲ್ಲಿ ವಿಭಿನ್ನ ಪಾತ್ರದಲ್ಲಿ ನಟಿಸಿದ್ದಾರೆ. ರಾಮೇನಹಳ್ಳಿ ಜಗನ್ನಾಥ್ ಎಂಬ ಟೆಕ್ಕಿ ನಿರ್ದೇಶನ ಮಾಡಿರುವ ಈ ಸಿನಿಮಾದಲ್ಲಿ ಏಳು ಯುವಕ, ಯುವತಿಯರ ಕಥೆಯನ್ನು ಹೇಳಲಾಗುತ್ತಿದೆ. ಆ ಚಿತ್ರದಲ್ಲಿ ಅರ್ಚನಾ ಅವರ ಪಾತ್ರ ಹೇಗಿದೆ?
Maharaja Trophy 2022: ಶಿವಮೊಗ್ಗ ಸ್ಟೈಕರ್ಸ್ ವಿರುದ್ಧ ಮೈಸೂರು ವಾರಿಯರ್ಸ್ಗೆ ಭರ್ಜರಿ ಜಯ!
Mysore Warriors vs Shivamogga Strikers Highlights: ಶ್ರೇಯಸ್ ಗೋಪಾಲ್(62) ಅವರ ಬ್ಯಾಟಿಂಗ್ ಹಾಗೂ ಶುಭಾಂಗ್ ಹೆಗ್ಡೆ(11ಕ್ಕೆ 4) ಅವರ ಸ್ಪಿನ್ ಮೋಡಿಯ ನೆರವಿನಿಂದ ಮೈಸೂರು ವಾರಿಯರ್ಸ್ ತಂಡ, 2022ರ ಮಹಾರಾಜ ಟ್ರೋಫಿ ಟೂರ್ನಿಯ ಎರಡನೇ ಪಂದ್ಯದಲ್ಲಿ ಶಿವಮೊಗ್ಗ ಸ್ಟೈಕರ್ಸ್ ವಿರುದ್ಧ 69 ರನ್ಗಳ ಭರ್ಜರಿ ಗೆಲುವು ಪಡೆದುಕೊಂಡಿದೆ. ಆ ಮೂಲಕ ಚುಟುಕು ಟೂರ್ನಿಯಲ್ಲಿ ಶುಭಾರಂಭ ಕಂಡಿದೆ. 62 ರನ್ ಗಳಿಸಿದ ಶ್ರೇಯಸ್ ಗೋಪಾಲ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
Commonwealth Games 2022: ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್ನಲ್ಲಿ ಲಕ್ಷ್ಯ ಸೇನ್ಗೆ ಚಿನ್ನ!
Lakshya Sen won Gold Medal: ಬರ್ಮಿಂಗ್ಹ್ಯಾಮ್ನಲ್ಲಿ ನಡೆಯುತ್ತಿರುವ 2022ರ ಕಾಮನ್ವೆಲ್ತ್ ಕ್ರೀಡಾಕೂಟದ ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್ನಲ್ಲಿ ಭಾರತದ ಲಕ್ಷ್ಯ ಸೇನ್ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾರೆ. ಸೋಮವಾರ ನಡೆದಿದ್ದ ಫೈನಲ್ ಹಣಾಹಣಿಯಲ್ಲಿ ಮಲೇಷ್ಯಾದ ಎನ್ಜಿ ಟಿಝಿ ಯಂಗ್ ವಿರುದ್ಧ 19-21, 21-9 ಹಾಗೂ 21-16 ಅಂತರದಲ್ಲಿ ಗೆದ್ದು ಚೊಚ್ಚಲ ಸ್ವರ್ಣ ಪದಕ ತನ್ನದಾಗಿಸಿಕೊಂಡರು. ಇದಕ್ಕೂ ಮುನ್ನ ಪಿವಿ ಸಿಂಧೂ ಅವರು ಮಹಿಳೆಯರ ಸಿಂಗಲ್ಸ್ನಲ್ಲಿ ಚೊಚ್ಚಲ ಪದಕ ಗೆದ್ದು ಇತಿಹಾಸ ಸೃಷ್ಟಿಸಿದ್ದರು.
ವೈವಿದ್ಯತೆ ಬೇಕು, ಭಾರತದ ವಿಶ್ವಕಪ್ ತಂಡಕ್ಕೆ ಸೂಕ್ತ ವೇಗಿಯನ್ನು ಆಯ್ಕೆ ಮಾಡಿದ ರವಿ ಶಾಸ್ತ್ರಿ!
India's T20 World Cup Squad 2022: ಇದೇ ವರ್ಷ ಅಕ್ಟೋಬರ್ ಮತ್ತು ನವೆಂಬರ್ನಲ್ಲಿ ಆಸ್ಟ್ರೇಲಿಯಾದಲ್ಲಿ ಐಸಿಸಿ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿ ನಡೆಯಲಿದೆ. ಈ ಸಲುವಾಗಿ ಎಲ್ಲ ತಂಡಗಳು ಸಮರಾಭ್ಯಾಸದಲ್ಲಿ ತೊಡಗಿದ್ದು, ಟೀಮ್ ಇಂಡಿಯಾ ಕೂಡ ಸಾಲು ಸಾಳು ದ್ವಿಪಕ್ಷೀಯ ಟಿ20 ಕ್ರಿಕೆಟ್ ಸರಣಿಗಳನ್ನು ಆಡಿ ಸಮರ್ಥ ಆಟಗಾರರ ಬಲಿಷ್ಠ ತಂಡ ರಚಿಸುವ ಪ್ರಯತ್ನದಲ್ಲಿದೆ. ಈ ಬಗ್ಗೆ ಮಾತನಾಡಿರುವ ಭಾರತ ತಂಡದ ಮಾಜಿ ಮುಖ್ಯ ಕೋಚ್ ರವಿ ಶಾಸ್ತ್ರಿ ತಂಡದ ಬೌಲಿಂಗ್ ವಿಭಾಗಕ್ಕೆ ವೈವಿದ್ಯತೆ ತಂದುಕೊಡಬಲ್ಲ ಪರಿಣಾಮಕಾರಿ ವೇಗಿಯನ್ನು ಹೆಸರಿಸಿದ್ದಾರೆ.
Chandan Shetty: ಚಂದನ್ ಶೆಟ್ಟಿ ನಟನೆಯ 'ಎಲ್ರ ಕಾಲೆಳಿಯತ್ತೆ ಕಾಲ' ಚಿತ್ರದ ಫಸ್ಟ್ ಸಾಂಗ್ ರಿಲೀಸ್
'ಬಿಗ್ ಬಾಸ್' ಖ್ಯಾತಿಯ ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ ಹಾಗೂ ಅರ್ಚರ್ನಾ ಕೊಟ್ಟಿಗೆ ಮುಖ್ಯಭೂಮಿಕೆಯಲ್ಲಿರುವ 'ಎಲ್ರ ಕಾಲೆಳಿಯತ್ತೆ ಕಾಲ' ಸಿನಿಮಾದ ಮೊದಲ ಹಾಡು ರಿಲೀಸ್ ಆಗಿದ್ದು, ಸಿನಿಮಾದ ಶೂಟಿಂಗ್ ಸಂಪೂರ್ಣಗೊಂಡಿದೆ.