20 ವರ್ಷಗಳ ದಾಂಪತ್ಯದ ನಂತರ ವೀರೇಂದ್ರ ಸೆಹ್ವಾಗ್-ಆರತಿ ಅಹ್ಲಾವತ್ ವಿಚ್ಛೇದನ? ಪರಸ್ಪರ ಅನ್ಫಾಲೋ, ಪ್ರತ್ಯೇಕ ವಾಸ
Virender Sehwag Aarti Ahlawat divorced?: ವೀರೇಂದ್ರ ಸೆಹ್ವಾಗ್ ಮತ್ತು ಪತ್ನಿ ಆರತಿ ಅಹ್ಲಾವತ್ 20 ವರ್ಷಗಳ ದಾಂಪತ್ಯ ಜೀವನದ ನಂತರ ವಿಚ್ಛೇದನ ಪಡೆಯಲು ನಿರ್ಧರಿಸಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ. ಇಬ್ಬರು ಪ್ರತ್ಯೇಕವಾಗಿ ವಾಸಿಸುತ್ತಿದ್ದು, ಇನ್ಸ್ಟಾಗ್ರಾಂನಲ್ಲಿ ಪರಸ್ಪರ ಅನ್ಫಾಲೋ ಮಾಡಿಕೊಂಡಿದ್ದಾರೆ.
9ನೇ ಕ್ರಮಾಂಕದಲ್ಲಿ ಸಿಡಿಲಬ್ಬರದ ಶತಕ! 2 ದಶಕಗಳಿಂದ ಅಪ್ಪನ ಹೆಸರಿನಲ್ಲಿದ್ದ ದಾಖಲೆ ಮುರಿದ ಪುತ್ರ
ಇಂಗ್ಲೆಂಡ್ ಲಯನ್ಸ್ ಪರ ಆಡುತ್ತಿರುವ ಯುವ ಆಟಗಾರ ಕ್ರಿಕೆಟ್ ಆಸ್ಟ್ರೇಲಿಯಾ ಇಲೆವೆನ್ ವಿರುದ್ಧ ಅದ್ಭುತ ಶತಕ ಗಳಿಸಿ ಗಮನ ಸೆಳೆದಿದ್ದಾರೆ. ಈ ಶತಕವೂ ವಿಶೇಷವಾಗಿದೆ ಏಕೆಂದರೆ ರಾಕಿ 9 ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವಾಗ ಬಂದಿದೆ. ಟೆಸ್ಟ್ ಮಾದರಿಯಲ್ಲಿ ಏಕದಿನದಂತೆ ಬ್ಯಾಟ್ ಬೀಸಿದ ರಾಕಿ 127 ಎಸೆತಗಳಲ್ಲಿ 108 ರನ್ ಗಳಿಸಿ ಕ್ರಿಕೆಟ್ ವಲಯದಲ್ಲಿ ಸುದ್ದಿಯಾಗಿದ್ದಾರೆ.
IND vs ENG: 2ನೇ ಟಿ20ಯಲ್ಲಿ ಭಾರತದಲ್ಲಿ ಒಂದು ಬದಲಾವಣೆ! ಆ ಯುವ ಆಟಗಾರ ತಂಡದಿಂದ ಔಟ್?
ಮೊದಲ ಟಿ20ಯಲ್ಲಿ ಸುಲಭ ಜಯ ಸಾಧಿಸಿದರೂ 2ನೇ ಟಿ20ಯಲ್ಲಿ ತಂಡದಲ್ಲಿ ಕೆಲವೊಂದು ಬದಲಾವಣೆಯಾಗಬಹುದು ಎನ್ನಲಾಗುತ್ತಿದೆ. 14 ತಿಂಗಳ ಸುದೀರ್ಘ ಅಂತರದ ಬಳಿಕ ಭಾರತ ತಂಡಕ್ಕೆ ಬಂದಿರುವ ಮೊಹಮ್ಮದ್ ಶಮಿಗೆ ಮೊದಲ ಪಂದ್ಯಕ್ಕೆ ಅಂತಿಮ ಟಿ20 ತಂಡದಲ್ಲಿ ಸ್ಥಾನ ನೀಡದಿರುವುದು ಎಲ್ಲರಲ್ಲೂ ಅಚ್ಚರಿ ಮೂಡಿಸಿತ್ತು.
ಒಂದೇ ಇನ್ನಿಂಗ್ಸ್ನಲ್ಲಿ 9 ವಿಕೆಟ್! ರಣಜಿಯಲ್ಲಿ ಇತಿಹಾಸ ಸರಷ್ಟಿಸಿದ 24ರ ಯುವಕ
ಹರಿಯಾಣದ ಅನ್ಶುಲ್ ಕಾಂಬೋಜ್ ಇದೇ ಆವೃತ್ತಿಯಲ್ಲಿ ಕೇರಳದ ವಿರುದ್ಧ 49ಕ್ಕೆ10 ವಿಕೆಟ್ ಸಾಧನೆ ಮಾಡಿ ಇತಿಹಾಸ ಸೃಷ್ಟಿಸಿದ್ದರು. ಮುಂಬೈ ತಂಡದ ಪರ 2012ರಲ್ಲಿ ಅಂಕಿತ್ ಚೌವಾಣ್ 23ಕ್ಕೆ9 ವಿಕೆಟ್ ಪಡೆದು 2ನೇ ಬೆಸ್ಟ್ ಬೌಲಿಂಗ್ ಆಗಿದೆ. ಇದೀಗ ದೇಸಾಯಿ ರಣಜಿ ಇತಿಹಾಸದ 3ನೇ ಅತ್ಯುತ್ತಮ ಬೌಲಿಂಗ್ ದಾಖಲಿಸಿದ್ದಾರೆ.
RCB In Trouble: ಇಷ್ಟ ಬೇಗ ಈ ಸಲನೂ ಕಪ್ಪು, ಲಾಲಿ ಪಪ್ಪು ಅಂತಿದ್ಯಾಕೆ ಆರ್ಸಿಬಿ ಫ್ಯಾನ್ಸ್? ಇದೇ ಕಾರಣ
RCB Fans: ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಡಿದ ಇಂಗ್ಲೆಂಡ್ ತಂಡ ಆರ್ಸಿಬಿ ಫ್ಯಾನ್ಸ್ ಶಾಕ್ ಕೊಟ್ಟಿದೆ. ಯಾಕಂದ್ರೆ ಆರ್ಸಿಬಿ ಖರೀದಿಸಿರೋ ಮೂವರು ಸ್ಟಾರ್ ಆಟಗಾರರು ಇಂಗ್ಲೆಂಡ್ ತಂಡದಲ್ಲಿದ್ದಾರೆ. ನಿನ್ನೆ ಪಂದ್ಯದಲ್ಲಂತೂ ಅಟ್ಟರ್ ಫ್ಲಾಪ್ ಆಗಿದ್ದಾರೆ.
Most Wickets: ಇಂಗ್ಲೆಂಡ್ ವಿರುದ್ಧ 2 ವಿಕೆಟ್! ಟಿ20 ಕ್ರಿಕೆಟ್ನಲ್ಲಿ ಚರಿತ್ರೆ ಸೃಷ್ಟಿಸಿದ ಅರ್ಷದೀಪ್
ಇಂಗ್ಲೆಂಡ್ ವಿರುದ್ಧದ ಐದು ಟಿ20 ಸರಣಿಯ ಭಾಗವಾಗಿ ಕೋಲ್ಕತ್ತಾದಲ್ಲಿ ನಡೆಯುತ್ತಿರುವ ಮೊದಲ ಟಿ20 ಪಂದ್ಯದಲ್ಲಿ ಅರ್ಷದೀಪ್ ಸಿಂಗ್ ತಮ್ಮ ಮೊದಲ ಸ್ಪೆಲ್ನಲ್ಲೇ 2 ವಿಕೆಟ್ ಪಡೆಯುವ ಮೂಲಕ ಟಿ20 ಕ್ರಿಕೆಟ್ನಲ್ಲಿ ಇತಿಹಾಸ ಸೃಷ್ಟಿಸಿದರು.
ಬೌಲರ್ಸ್, ಅಭಿಷೇಕ್ ಅಬ್ಬರಕ್ಕೆ ಇಂಗ್ಲೆಂಡ್ ಧೂಳೀಪಟ! ಮೊದಲ ಪಂದ್ಯದಲ್ಲಿ ಗೆದ್ದು ಬೀಗಿದ ಭಾರತ
ಐದು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಗೆಲುವಿನೊಂದಿಗೆ ಆರಂಭಿಸಿದೆ. ಕೋಲ್ಕತ್ತಾದ ಈಡನ್ ಗಾರ್ಡನ್ಸ್ನಲ್ಲಿ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ ನೀಡಿದ್ದ 133 ರನ್ಗಳ ಗುರಿಯನ್ನ 12.5 ಓವರ್ಗಳಲ್ಲಿ ಗೆದ್ದು ಬೀಗಿತ್ತು.
ಅಭಿಷೇಕ್ ಶರ್ಮಾ ಸುನಾಮಿ ಬ್ಯಾಟಿಂಗ್; ಮೊದಲ ಟಿ20ಐನಲ್ಲಿ ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು
England vs india 1st T20I Result: ಇಂಗ್ಲೆಂಡ್ ವಿರುದ್ಧದ ಮೊದಲ ಟಿ20ಐ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಗೆಲುವು ದಾಖಲಿಸಿದೆ. 7 ವಿಕೆಟ್ಗಳ ಅಮೋಘ ಜಯದೊಂದಿಗೆ ಸರಣಿಯಲ್ಲಿ 1-0 ಅಂತರದಲ್ಲಿ ಮುನ್ನಡೆ ಸಾಧಿಸಿದೆ.
IND vs ENG: ಮೊದಲ ಟಿ20ಯಲ್ಲಿ ಭಾರತ ಬೌಲಿಂಗ್ ಆಯ್ಕೆ! ಶಮಿಗೆ ಇಂದೂ ಸಿಗದ ಚಾನ್ಸ್; ಪ್ಲೇಯಿಂಗ್ ಇಲ್ಲಿದೆ
ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಆದರೆ 15 ತಿಂಗಳ ನಂತರ ಕಮ್ಬ್ಯಾಕ್ ಮಾಡಿರುವ ಮೊಹಮ್ಮದ್ ಶಮಿಗೆ ಅವಕಾಶ ಸಿಕ್ಕಿಲ್ಲ.
2 ವಿಕೆಟ್ ಪಡೆದರೆ ದಿಗ್ಗಜರ ಪಟ್ಟಿಗೆ ಸೇರಲಿದ್ದಾರೆ 15 ತಿಂಗಳ ಬಳಿಕ ಕಮ್ಬ್ಯಾಕ್ ಮಾಡಿದ ಶಮಿ!
ಪಾದದ ಮತ್ತು ಮೊಣಕಾಲಿನ ಗಾಯಗಳಿಂದಾಗಿ ಶಮಿ ಕಳೆದ 15 ತಿಂಗಳಿಂದ ಭಾರತ ತಂಡದಿಂದ ಹೊರಗುಳಿದಿದ್ದಾರೆ. 2023ರ ಏಕದಿನ ವಿಶ್ವಕಪ್ನ ಫೈನಲ್ನಲ್ಲಿ ಅವರು ಕೊನೆಯ ಬಾರಿಗೆ ಟೀಂ ಇಂಡಿಯಾ ಪರ ಆಡಿದ್ದರು. ಇದೀಗ ಗಾಯದಿಂದ ಚೇತರಿಸಿಕೊಂಡು, ಬೆಂಗಾಲ್ ಪರ ದೇಶಿ ಕ್ರಿಕೆಟ್ ಆಡಿ ಟೀಮ್ ಇಂಡಿಯಾಗೆ ಮರಳಿದ್ದಾರೆ.
ರಿಂಕು ಸಿಂಗ್ ಔಟ್, 26 ತಿಂಗಳ ನಂತರ ಶಮಿ ಕಣಕ್ಕೆ; ಇಂಗ್ಲೆಂಡ್ ಮೊದಲ ಟಿ20 ಪಂದ್ಯಕ್ಕೆ ಭಾರತ ಸಂಭಾವ್ಯ XI
Indias likely XI: ಕೋಲ್ಕತ್ತಾದ ಈಡನ್ ಗಾರ್ಡನ್ಸ್ನಲ್ಲಿ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಮೊದಲ ಟಿ20ಐಗೆ ಭಾರತದ ಸಂಭಾವ್ಯ XI ಇಲ್ಲಿದೆ. ಮೊಹಮ್ಮದ್ ಶಮಿ ತಂಡಕ್ಕೆ ಮರಳಿದರೆ, ರಿಂಕು ಸಿಂಗ್ ತಂಡದಿಂದ ಹೊರಗುಳಿಯುವ ಸಾಧ್ಯತೆ ಇದೆ.
ಇಂಗ್ಲೆಂಡ್ ವಿರುದ್ಧ ಅತಿ ಹೆಚ್ಚು ರನ್ಗಳಿಸಿದ ಭಾರತದ ಆಟಗಾರ ಯಾರು? ಟಾಪ್ 5 ಲಿಸ್ಟ್ ಇಲ್ಲಿದೆ
ಬುಧವಾರ (ನಾಳೆ) ಜನವರಿ 22ರಿಂದ ಟಿ20 ಸರಣಿ ಆರಂಭವಾಗಲಿದೆ. ಮೊದಲ ಪಂದ್ಯ ಕೋಲ್ಕತ್ತಾದಲ್ಲಿ ನಡೆಯಲಿದೆ. ಎರಡೂ ತಂಡಗಳು ಈಗಾಗಲೇ ಕೋಲ್ಕತ್ತಾ ತಲುಪಿ ಅಭ್ಯಾಸ ಆರಂಭಿಸಿವೆ. ಸುಂದರ್, ನಿತೀಶ್ ಹೊರೆತುಪಡಿಸಿ ಆಸ್ಟ್ರೇಲಿಯಾ ಪ್ರವಾಸದಲ್ಲಿ ಆಡಿದ ಎಲ್ಲಾ ಆಟಗಾರರು ಈ ಟಿ20 ಸರಣಿಯಿಂದ ದೂರ ಉಳಿದಿದ್ದಾರೆ.
IND vs SA: ಇಂಗ್ಲೆಂಡ್ ವಿರುದ್ಧ ಮೊದಲ ಟಿ20! ಯಾರಿಂದಲೂ ಸಾಧ್ಯವಾಗದ ವಿಶ್ವದಾಖಲೆ ಮೇಲೆ ತಿಲಕ್ ಕಣ್ಣು
ಸಂಜು ಸ್ಯಾಮ್ಸನ್, ರಿಲೇ ರುಸ್ಸೋ, ಮತ್ತು ಫಿಲ್ ಸಾಲ್ಟ್ ಟಿ20 ಕ್ರಿಕೆಟ್ನಲ್ಲಿ ಸತತ ಎರಡು ಶತಕಗಳನ್ನು ಗಳಿಸಿದ್ದಾರೆ. ಆದರೆ ಈ ಮೂವರಿಗೆ ಮೂರನೇ ಶತಕ ಗಳಿಸಲು ಸಾಧ್ಯವಾಗಿಲ್ಲ. ಈಗ ತಿಲಕ್ ಅವರಿಗೆ ಈ ಅಪರೂಪದ ಸಾಧನೆ ಮಾಡುವ ಅವಕಾಶ ಸಿಕ್ಕಿದೆ.
ಮೊದಲ ಟಿ20ಗೆ ಪ್ಲೇಯಿಂಗ್ XI ಪ್ರಕಟಿಸಿದ ECB! RCB ಸ್ಟಾರ್ ಓಪನರ್, 4 ವರ್ಷಗಳ ನಂತರ ವೇಗಿ ಕಮ್ಬ್ಯಾಕ್
2011ರಲ್ಲಿ ಕೋಲ್ಕತ್ತಾದಲ್ಲಿ ಉಭಯ ತಂಡಗಳು ಕೊನೆಯ ಬಾರಿ ಮುಖಾಮುಖಿಯಾಗಿದ್ದವು. ಅಕ್ಟೋಬರ್ 29, 2011 ರಂದು ಇಂಗ್ಲೆಂಡ್ ತಂಡ ಟೀಮ್ ಇಂಡಿಯಾವನ್ನು 6 ವಿಕೆಟ್ ಗಳಿಂದ ಸೋಲಿಸಿತು. ಇದೀಗ ಟೀಮ್ ಇಂಡಿಯಾ ಈಗ 14 ವರ್ಷಗಳ ನಂತರ ಕೋಲ್ಕತ್ತಾ ಅಭಿಮಾನಿಗಳ ಮುಂದೆ ಇಂಗ್ಲೆಂಡ್ ವಿರುದ್ಧ ಸೇಡು ತೀರಿಸಿಕೊಳ್ಳಲು ಹೊರಟಿದೆ.
ತಂದೆಗೆ ʼಸೂಪರ್ ಬೈಕ್ʼ ಉಡುಗೊರೆ ನೀಡಿದ ರಿಂಕು ಸಿಂಗ್
Photo Credit: IG/sonulefti0700 ಮುಂಬೈ: ಕ್ರಿಕೆಟಿಗ ರಿಂಕು ಸಿಂಗ್ ತನ್ನ ತಂದೆಗೆ ಸೂಪರ್ ಬೈಕೊಂದನ್ನು ಉಡುಗೊರೆ ನೀಡಿದ್ದು, ಅದರ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ತನ್ನ ತಂದೆ ಖಂಚಂದ್ ಸಿಂಗ್ ಗೆ ಕವಾಸಕಿ ನಿಂಜಾ 400 ಸ್ಪೋರ್ಟ್ಸ್ ಬೈಕ್ ಅನ್ನು ಉಡುಗೊರೆ ನೀಡುವ ಮೂಲಕ ರಿಂಕು ಸಿಂಗ್ ಸುದ್ದಿಯಲ್ಲಿದ್ದಾರೆ. ಈ ಬೈಕ್ ನ ಬೆಲೆ ಬರೋಬ್ಬರಿ 5 ಲಕ್ಷ ರೂಪಾಯಿ ಎಂದು ಹೇಳಲಾಗಿದೆ. ರಿಂಕು ಸಿಂಗ್ ತಂದೆ ಈ ಬೈಕ್ ಓಡಿಸುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಮನೆಮನೆಗೆ ಗ್ಯಾಸ್ ವಿತರಿಸುವ ಕೆಲಸ ಮಾಡುತ್ತಿರುವ ಖಂಚಂದ್ ಸಿಂಗ್, ತಮ್ಮ ಪುತ್ರನೊಬ್ಬ ಕ್ರಿಕೆಟಿಗನಾಗಬೇಕು ಎಂದು ಆಸೆ ಪಟ್ಟಿದ್ದರು. ಆ ಆಸೆಯನ್ನು ರಿಂಕು ಸಿಂಗ್ ನೆರವೇರಿಸಿದ್ದಾರೆ. ಐಪಿಎಲ್ ನಿಂದ ಹಿಡಿದು ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನದವರೆಗೆ ಮಿಂಚುತ್ತಿರುವ ರಿಂಕು ಸಿಂಗ್, ಸದ್ಯ ಭಾರತ ತಂಡದಲ್ಲಿನ ವಿಶ್ವಾಸಾರ್ಹ ಆಟಗಾರನಾಗಿದ್ದಾರೆ. View this post on Instagram A post shared by Sonu Lefti (@sonulefti0700)
ಚೊಚ್ಚಲ ಪಂದ್ಯದಲ್ಲೇ ವೈಷ್ಣವಿ ಹ್ಯಾಟ್ರಿಕ್ ಸಾಧನೆ; ಮಲೇಷ್ಯಾ 31ಕ್ಕೆ ಆಲೌಟ್, ಭಾರತಕ್ಕೆ ಭರ್ಜರಿ ಗೆಲುವು!
ವೈಷ್ಣವಿ ಶರ್ಮಾ ಚೊಚ್ಚಲ ಪಂದ್ಯದಲ್ಲೇ 5 ವಿಕೆಟ್ ಕಬಳಿಸಿ ಇತಿಹಾಸ ನಿರ್ಮಿಸಿದ್ದಾರೆ. ಮಲೇಷ್ಯಾ ತಂಡ 14.3 ಓವರ್ಗಳಲ್ಲಿ 31 ರನ್ಗಳಿಗೆ ಸೀಮಿತವಾಯಿತು. ಐಸಿಸಿ ಮಹಿಳಾ ಅಂಡರ್-19 ವಿಶ್ವಕಪ್ನ ಹಾಲಿ ಚಾಂಪಿಯನ್ ಭಾರತ ತಂಡವು ಸತತ ಎರಡನೇ ಪಂದ್ಯದಲ್ಲೂ ಮಾರಕ ಬೌಲಿಂಗ್ನಿಂದ ಎದುರಾಳಿ ತಂಡವನ್ನು ಬೆಚ್ಚಿಬೀಳಿಸಿದೆ.
12 ವರ್ಷಗಳ ಬಳಿಕ ರಣಜಿ ಪಂದ್ಯ ಆಡಲಿದ್ದಾರೆ ವಿರಾಟ್; ಕೊಹ್ಲಿ ಕಣಕ್ಕಿಳಿಯೋದು ಯಾರ ವಿರುದ್ಧ ಗೊತ್ತಾ?
ಈ ತಿಂಗಳ ಆರಂಭದಲ್ಲಿ ಆಸ್ಟ್ರೇಲಿಯಾದಲ್ಲಿ ಸರಣಿ ಸೋತ ನಂತರ ಫಿಟ್ನೆಸ್ ಸಮಸ್ಯೆ ಇಲ್ಲದಿದ್ದರೆ ಬಿಸಿಸಿಐ ತನ್ನ ಗುತ್ತಿಗೆ ಪಡೆದ ಕ್ರಿಕೆಟಿಗರಿಗೆ ದೇಶೀಯ ಕ್ರಿಕೆಟ್ ಆಡುವುದನ್ನು ಕಡ್ಡಾಯಗೊಳಿಸಿದೆ. ನವೆಂಬರ್ 2012ರಲ್ಲಿ ಗಾಜಿಯಾಬಾದ್ನಲ್ಲಿ ನಡೆದ ಪಂದ್ಯದಲ್ಲಿ ಉತ್ತರ ಪ್ರದೇಶದ ವಿರುದ್ಧ ದೆಹಲಿ ತಂಡದ ಪರ ಕೊಹ್ಲಿ ಕೊನೆಯ ಬಾರಿಗೆ ರಣಜಿ ಟ್ರೋಫಿ ಪಂದ್ಯವನ್ನು ಆಡಿದ್ದರು.
ಟಾಟಾ ಸ್ಟೀಲ್ ಚೆಸ್: ಅರ್ಜುನ್ ಎರಿಗೈಸಿ ವಿರುದ್ಧ ಪ್ರಜ್ಞಾನಂದ ಗೆಲುವು
ಅರ್ಜುನ್ ಎರಿಗೈಸಿ , ಪ್ರಜ್ಞಾನಂದ | PC : PTI ಹೊಸದಿಲ್ಲಿ: ಟಾಟಾ ಸ್ಟೀಲ್ ಚೆಸ್ ಟೂರ್ನಿ-2025 ಹಲವು ರೋಚಕ ಕ್ಷಣಗಳಿಗೆ ಸಾಕ್ಷಿಯಾಗಿದ್ದು, ಬಿಳಿ ಕಾಯಿಗಳೊಂದಿಗೆ ಭಾರತದ ನಂಬರ್ ವನ್ ಆಟಗಾರ ಅರ್ಜುನ್ ಎರಿಗೈಸಿ ವಿರುದ್ಧ ಗೆಲುವು ಸಾಧಿಸಿ ಪ್ರಜ್ಞಾನಂದ ದಿನದ ಸ್ಟಾರ್ ಸಾಧಕ ಎನಿಸಿದ್ದಾರೆ. ಎಂಟನೇ ನಡೆಯಲ್ಲಿ ಪ್ರಜ್ಞಾನಂದ ಅವರ ಕ್ವೀನ್ ಪಡೆದು ಬಿಗಿಹಿಡಿತ ಸಾಧಿಸಿದರು. ರಭಸದ ಆಟದ ಮೂಲಕ ಗಮನ ಸೆಳೆದ ಎರಿಗೈಸಿ 51ನೇ ನಡೆಯಲ್ಲಿ ಎಸಗಿದ ಪ್ರಮಾದ ಅವರ ಪಾಲಿಗೆ ಮುಳುವಾಯಿತು. ನಿರ್ಣಾಯಕ 56ನೇ ನಡೆಯಲ್ಲಿ ಅರ್ಜುನ್ ಮತ್ತೆ ತಪ್ಪು ಎಸಗಿ, 60ನೇ ನಡೆಯಲ್ಲಿ ಎದುರಾಳಿಗೆ ಆಟ ಬಿಟ್ಟುಕೊಡಬೇಕಾಯಿತು. ಸತತ ಎರಡು ಗೆಲುವಿನೊಂದಿಗೆ ಪ್ರಜ್ಞಾನಂದ ಇದೀಗ ಮೂರು ಪಂದ್ಯಗಳಿಂದ 2.5 ಅಂಕ ಕಲೆ ಹಾಕಿದ್ದಾರೆ. ನೆದರ್ಲೆಂಡ್ಸ್ ಆಯೋಜಿಸಿದ್ದ ಈ ಪ್ರತಿಷ್ಠಿತ ಟೂರ್ನಿಯಲ್ಲಿ ಇತಿಹಾಸದಲ್ಲೇ ಗರಿಷ್ಠ ಅಂದರೆ ಐದು ಮಂದಿ ಆಟಗಾರರು ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ. ಪ್ರಜ್ಞಾನಂದ ಅಗ್ರಸ್ಥಾನವನ್ನು ಕಾಯ್ದುಕೊಂಡಿದ್ದರೆ ಮತ್ತೊಬ್ಬ ಭಾರತೀಯ ಆಟಗಾರ ಲಿಯೋನ್ ಲೂಕ್ ಮೆಂಡೋನ್ಸಾ ಸತತ ಎರಡು ಸೋಲುಗಳ ಬಳಿಕ ತಿರುಗೇಟು ನೀಡಿದ್ದಾರೆ. ಲಿಯೋನ್ ಹಿರಿಯ ಆಟಗಾರ ಪೆಂಟಲ ಹರಿಕೃಷ್ಣ ವಿರುದ್ಧ ಅದ್ಭುತ ಪ್ರದರ್ಶನ ನೀಡಿದರು. ಏತನ್ಮಧ್ಯೆ ಡಿ.ಗುಕೇಶ್, ವಿಶ್ವದ ನಂ.2 ಆಟಗಾರ ಫ್ಯಾಬಿಯಾನೊ ಕರೂನಾ ವಿರುದ್ಧ ಕ್ಷಿಪ್ರ ಡ್ರಾ ಸಾಧಿಸಿದರು.
ರಣಜಿ ಟ್ರೋಫಿ ಆಡಲು ಸಜ್ಜಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಸಿರಾಜ್; ಕೆಎಲ್ ರಾಹುಲ್ ಅಲಭ್ಯ
ವಿರಾಟ್ ಕೊಹ್ಲಿ ರಣಜಿ ಟ್ರೋಫಿ ಆಡುವುದು ಬಹುತೇಕ ಖಚಿತವಾಗಿದೆ. ಇದೇ ವೇಳೆ ರೋಹಿತ್ ಶರ್ಮಾ ಹಾಗೂ ಮೊಹಮ್ಮದ್ ಸಿರಾಜ್ ಕೂಡಾ ದೇಶೀಯ ಕ್ರಿಕೆಟ್ಗೆ ಮರಳಲಿದ್ದಾರೆ. ಅತ್ತ ಕನ್ನಡಿಗ ಕೆಎಲ್ ರಾಹುಲ್ ಮುಂದಿನ ರಣಜಿ ಪಂದ್ಯ ಆಡುತ್ತಿಲ್ಲ.