ಶ್ರೇಯಸ್ ಸಂಪೂರ್ಣವಾಗಿ ಫಿಟ್ ಆಗಿದ್ದು, ಆಡಲು ಸಿದ್ಧರಾಗಿದ್ದಾರೆ. ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್ (CoE) ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ಸ್ವತಃ ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್ ಅವರಿಗೆ ಪತ್ರ ಬರೆದು, ಶ್ರೇಯಸ್ ಅಯ್ಯರ್ ಅವರ ಫಿಟ್ನೆಸ್ ಕ್ಲಿಯರೆನ್ಸ್ ಬಗ್ಗೆ ತಿಳಿಸಿದ್ದಾರೆ.
ಅಂಡರ್-19 ಏಕದಿನ ಸರಣಿ: ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ ಸತತ ಮೂರನೇ ಜಯ
ಸೂರ್ಯವಂಶಿ, ಆ್ಯರೊನ್ ಜಾರ್ಜ್ ಶತಕ
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ಅಂಡರ್-19 ತಂಡವು 50 ಓವರ್ಗಳಲ್ಲಿ 7 ವಿಕೆಟ್ಗೆ 388 ರನ್ ಗಳಿಸಿತು. ನಂತರ ನಿಧಾನಗತಿ ಓವರ್ ದರದಿಂದಾಗಿ ಪೆನಾಲ್ಟಿಯಾಗಿ ಐದು ರನ್ಗಳನ್ನು ನೀಡಲಾಯಿತು. ಇದರಿಂದ ದಕ್ಷಿಣ ಆಫ್ರಿಕಾ ತಂಡ 389ರ ಬದಲಾಗಿ 394 ರನ್ಗಳನ್ನ ಬೆನ್ನಟ್ಟುವಂತಾಯಿತು. ಆದರೆ ಭಾರತದ ಬೌಲಿಂಗ್ ದಾಳಿಗೆ ತತ್ತರಿಸಿದ ಅತಿಥೇಯ ತಂಡ ಕೇವಲ 160 ರನ್ಗಳಿಗೆ ಆಲೌಟ್ ಆಯಿತು.
Ashes: ಆಂಗ್ಲರ ವಿರುದ್ಧ ವಿಜೃಂಭಿಸಿದ ಆಸೀಸ್ ಪಡೆ! 134 ವರ್ಷಗಳ ಹಳೆಯ ದಾಖಲೆ ಬ್ರೇಕ್ ಮಾಡಿದ ಆಸ್ಟ್ರೇಲಿಯಾ
2025-26ರ ಆ್ಯಷಸ್ ಸರಣಿಯ ಭಾಗವಾಗಿ ಸಿಡ್ನಿಯಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಅಂತಿಮ ಟೆಸ್ಟ್ನ ಮೊದಲ ಇನ್ನಿಂಗ್ಸ್ನಲ್ಲಿ ಈ ಸಾಧನೆ ಮಾಡಲಾಯಿತು. ಈ ಪಂದ್ಯದಲ್ಲಿ, ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ನಲ್ಲಿ 133.5 ಓವರ್ಗಳಲ್ಲಿ 567 ರನ್ಗಳ ಬೃಹತ್ ಸ್ಕೋರ್ ಗಳಿಸಿತು. ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಟ್ರಾವಿಸ್ ಹೆಡ್ (163) ಮತ್ತು ನಾಯಕ ಸ್ಟೀವ್ ಸ್ಮಿತ್ (138) ಭರ್ಜರಿ ಶತಕಗಳನ್ನು ಬಾರಿಸಿದರು.
T20 World Cup 2026: ಎಲ್ಲರ ಚಿತ್ತ ಚುಟುಕು ಕ್ರಿಕೆಟ್ ಸಮರದತ್ತ! ಈ ಐವರು ಆಟಗಾರರಿಗೆ ಇದು ಕೊನೆಯ ಟಿ20 ವಿಶ್ವಕಪ್?
ಭಾರತ ಮತ್ತು ಶ್ರೀಲಂಕಾ ಆತಿಥ್ಯ ವಹಿಸಲಿರುವ ಮುಂಬರುವ ಟಿ20 ವಿಶ್ವಕಪ್ 2026 ರ ಟೂರ್ನಿ ಫೆಬ್ರವರಿ 7 ರಂದು ಆರಂಭವಾಗಲಿದೆ. ಈ ಮೆಗಾ ಐಸಿಸಿ ಟೂರ್ನಿಯಲ್ಲಿ ಒಟ್ಟು 20 ತಂಡಗಳು ಕಣಕ್ಕಿಳಿಯುತ್ತಿವೆ.
Team India: ಗಂಭೀರ್ಗೆ ಶಾಕ್ ಕೊಡಲು ಬಿಸಿಸಿಐ ಸಿದ್ಧತೆ! ಭಾರತ ತಂಡದಲ್ಲಿ ಶೀಘ್ರವೇ ಬದಲಾವಣೆ ಪರ್ವ
ಗೌತಮ್ ಗಂಭೀರ್ ಕೋಚ್ ಆಗಿ ಅಧಿಕಾರ ವಹಿಸಿಕೊಂಡ ನಂತರ ಭಾರತ ಸೀಮಿತ ಓವರ್ಗಳ ಸ್ವರೂಪಗಳಲ್ಲಿ (ಟಿ20, ಏಕದಿನ) ಅಭೂತಪರ್ವ ಯಶಸ್ಸು ಸಾಧಿಸುತ್ತಿದೆ. ಇಲ್ಲಿಯವರೆಗೂ ಅವರ ನೇತೃತ್ವದಲ್ಲಿ ಟಿ20 ಸರಣಿ ಕಳೆದುಕೊಂಡಿಲ್ಲ. ಏಕದಿನ ಸರಣಿಯಲ್ಲಿ ಕೇವಲ ಆಸೀಸ್ ವಿರುದ್ಧ ಮಾತ್ರ ಸೋಲು ಕಂಡಿದೆ. ಅದನ್ನ ಬಿಟ್ಟರೆ ಚಾಂಪಿಯನ್ ಟ್ರೋಫಿ ಸೇರಿ ಅತ್ಯುತ್ತಮ ದಾಖಲೆಯನ್ನೇ ಹೊಂದಿದ್ದಾರೆ.
ಕಳೆದ ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದಿದ್ದ ವೇಗದ ಬೌಲರ್ ಜಾಕೋಬ್ ಡಫಿ ಕೂಡ ನ್ಯೂಜಿಲೆಂಡ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಐಪಿಎಲ್ನಲ್ಲಿ ಆರ್ಸಿಬಿ ಪರ ಆಡಲಿರುವ ಡಫಿ ಕಳೆದ ವರ್ಷ ತನ್ನ ಅತ್ಯುತ್ತಮ ಪ್ರದರ್ಶನದ ಬಲದಿಂದ ಅವರು ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ.
ಕಪಿಲ್ ದೇವ್ ಭಾರತೀಯ ಕ್ರಿಕೆಟ್ನಲ್ಲಿ ಶಾಶ್ವತವಾಗಿ ಉಳಿಯುವ ಹೆಸರು. 80ರ ದಶಕದಲ್ಲಿ ಭಾರತಕ್ಕೆ ಚೊಚ್ಚಲ ವಿಶ್ವಕಪ್ ಗೆಲ್ಲಿಸಿ ಕೊಟ್ಟ ನಾಯಕ ಕಪಿಲ್ ದೇವ್. ಹೀಗಾಗಿ ಕಪಿಲ್ ದೇವ್ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಹೃದಯದಲ್ಲಿ ವಿಶೇಷ ಸ್ಥಾನವನ್ನ ಪಡೆದಿದ್ದಾರೆ. ಇಂದಿಗೂ ಕಪಿಲ್ ದೇವ್ ಸೃಷ್ಟಿಸಿದ ಅನೇಕ ದಾಖಲೆಗಳನ್ನು ಯಾರೂ ಮುರಿಯಲು ಸಾಧ್ಯವಾಗಿಲ್ಲ.
PAK U19 vs SA U19: ಅಂಡರ್ 19 ಕ್ರಿಕೆಟ್ನಲ್ಲಿ ವೇಗದ ಶತಕ! ವೈಭವ್ ದಾಖಲೆ ಮುರಿದ ಪಾಕಿಸ್ತಾನದ ಯುವಕ
ಪಾಕಿಸ್ತಾನದ ಯುವ ಬ್ಯಾಟ್ಸ್ಮನ್ ಸಮೀರ್ ಮಿನ್ಹಾಸ್ 19 ವರ್ಷದೊಳಗಿನವರ ಕ್ರಿಕೆಟ್ನಲ್ಲಿ ಇತಿಹಾಸ ನಿರ್ಮಿಸಿದ್ದಾರೆ. ಅವರು ಭಾರತದ ವೈಭವ್ ಸೂರ್ಯವಂಶಿ ಅವರ ಯೂತ್ ಏಕದಿನ ಪಂದ್ಯದಲ್ಲಿ ಅತ್ಯಂತ ವೇಗದ ಶತಕ ಗಳಿಸಿದ ವಿಶ್ವ ದಾಖಲೆಯನ್ನು ಮುರಿದಿದ್ದಾರೆ.
ಭಾರತ ಅಂಡರ್ 19 ಮತ್ತು ದಕ್ಷಿಣ ಆಫ್ರಿಕಾ ಅಂಡರ್ 19 ನಡುವಿನ ಕೊನೆಯ ಏಕದಿನ ಪಂದ್ಯದಲ್ಲಿ ಭಾರತ ಮೊದಲು ಬ್ಯಾಟಿಂಗ್ ಮಾಡಿ ಬೃಹತ್ ಮೊತ್ತದತ್ತಾ ದಾಪುಗಾಲಿಟ್ಟಿದೆ. ವೈಭವ್ ಸೂರ್ಯವಂಶಿ ಈ ಪಂದ್ಯದಲ್ಲಿ ಮತ್ತೊಮ್ಮೆ ಮಿಂಚಿದರು, ಕೇವಲ 63 ಎಸೆತಗಳಲ್ಲಿ ಶತಕ ಗಳಿಸಿ ಹಲವು ದಾಖಲೆಗಳನ್ನ ನಿರ್ಮಿಸಿದ್ದಾರೆ.
ಭಾರತ ಮತ್ತು ಬಾಂಗ್ಲಾದೇಶ ನಡುವಿನ ಕ್ರೀಡಾ ಸಂಬಂಧಗಳಲ್ಲಿನ ಉದ್ವಿಗ್ನತೆ ಮತ್ತೊಂದು ಹಂತಕ್ಕೆ ಹೋಗುತ್ತಿದೆ. ಭಾರತದ ಕ್ರೀಡಾ ನಿರೂಪಕಿ ರಿಧಿಮಾ ಪಾಠಕ್ ಅವರನ್ನು ಬಿಪಿಎಲ್ ಹೋಸ್ಟಿಂಗ್ ಪ್ಯಾನೆಲ್ನಿಂದ ತೆಗೆದುಹಾಕಿದೆ ಎಂದು ಕೆಲವು ಬಾಂಗ್ಲಾದೇಶ ಮಾಧ್ಯಮ ವರದಿಗಳು ಹೇಳಿಕೊಂಡಿವೆ. ಆದರೆ, ಈ ಬಗ್ಗೆ ನಿರೂಪಕಿ ಮೌನ ಮುರಿದಿದ್ದಾರೆ.
ಐಪಿಎಲ್ 2026 ರ ಹರಾಜಿನ ಮೊದಲು, ಮುಂಬೈ ಇಂಡಿಯನ್ಸ್ ಅರ್ಜುನ್ ತೆಂಡೂಲ್ಕರ್ ಅವರನ್ನು ಲಖನೌ ಸೂಪರ್ ಜೈಂಟ್ಸ್ ಗೆ ಮಾರಾಟ ಮಾಡಿತ್ತು. ಇದಕ್ಕೆ ಪ್ರತಿಯಾಗಿ ಮುಂಬೈ ಶಾರ್ದೂಲ್ ಠಾಕೂರ್ ಅವರನ್ನು ಖರೀದಿಸಿತು. ಅರ್ಜುನ್ ಐಪಿಎಲ್ 2026 ರಲ್ಲಿ ಲಖನೌ ಪರ ಆಡುವುದನ್ನು ಕಾಣಬಹುದು. ಆದರೆ ಅವರ ಫಾರ್ಮ್ ಲಖನೌ ಸೂಪರ್ ಜೈಂಟ್ಸ್ಗೆ ಕಳವಳಕಾರಿಯಾಗಿದೆ.
T20 World Cup: ಬಾಂಗ್ಲಾಗೆ ಬಿಗ್ ಶಾಕ್ ಕೊಟ್ಟ ಐಸಿಸಿ; ಇದೆಲ್ಲಾ ನಡೆಯೋದಿಲ್ಲ ಅಂತ ಖಡಕ್ ವಾರ್ನಿಂಗ್!
T20 World Cup 2026 ಭಾರತ ಮತ್ತು ಶ್ರೀಲಂಕಾ ಸಂಯುಕ್ತ ಆಯೋಜನೆ, ಬಾಂಗ್ಲಾದೇಶದ ಭದ್ರತಾ ಮನವಿಗೆ ICC ತಿರಸ್ಕಾರ, ಪಂದ್ಯಗಳು ಭಾರತದಲ್ಲೇ ನಡೆಯಲಿವೆ ಎಂದು ಸ್ಪಷ್ಟನೆ.
ವಿಶ್ವ ಚಾಂಪಿಯನ್ ಭಾರತ ಮಹಿಳಾ ತಂಡದ ಆಟಗಾರ್ತಿ ಕ್ರಾಂತಿ ಗೌಡ್ ಅವರ ತಂದೆ ಮುನ್ನಾ ಸಿಂಗ್ ಅವರನ್ನು 13 ವರ್ಷಗಳ ನಂತರ ಮಧ್ಯಪ್ರದೇಶ ಪೊಲೀಸ್ ಇಲಾಖೆಯಲ್ಲಿ ಮತ್ತೆ ನೇಮಿಸಲಾಗಿದೆ.
ICC ಟೆಸ್ಟ್ ರ್ಯಾಂಕಿಂಗ್ಸ್ | ಎರಡು ಸ್ಥಾನ ಮೇಲೇರಿದ ಹರ್ಮನ್ಪ್ರೀತ್; ಮೊದಲ ಸ್ಥಾನ ಕಳೆದುಕೊಂಡ ದೀಪ್ತಿ
Photo Credit : PTI ದುಬೈ, ಜ. 6: ಭಾರತೀಯ ಕ್ರಿಕೆಟ್ ತಂಡದ ನಾಯಕಿ ಹರ್ಮನ್ಪ್ರೀತ್ ಕೌರ್ ಮಂಗಳವಾರ ಬಿಡುಗಡೆಯಾದ ಹೊಸ ಐಸಿಸಿ ಮಹಿಳಾ ಟಿ20 ರ್ಯಾಂಕಿಂಗ್ ನಲ್ಲಿ ಬ್ಯಾಟಿಂಗ್ ವಿಭಾಗದಲ್ಲಿ ಎರಡು ಸ್ಥಾನಗಳನ್ನು ಮೇಲೇರಿ 13ನೇ ಸ್ಥಾನವನ್ನು ತಲುಪಿದ್ದಾರೆ. ತಿರುವನಂತಪುರದಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಟ್ವೆಂಟಿ20 ಸರಣಿಯ ಐದನೇ ಹಾಗೂ ಕೊನೆಯ ಪಂದ್ಯದಲ್ಲಿ ಅವರ ಪಂದ್ಯ ಗೆಲ್ಲಿಸಿದ ಬ್ಯಾಟಿಂಗ್ ಪ್ರದರ್ಶನ ರ್ಯಾಂಕಿಂಗ್ ನಲ್ಲಿ ಪ್ರಮುಖ ಪಾತ್ರ ವಹಿಸಿದೆ. ಆ ಪಂದ್ಯವನ್ನು ಭಾರತ 15 ರನ್ ಗಳಿಂದ ಗೆದ್ದಿದೆ. ಇದರೊಂದಿಗೆ ಐದು ಪಂದ್ಯಗಳ ಸರಣಿಯನ್ನು ಭಾರತೀಯ ಮಹಿಳಾ ತಂಡ ಕ್ಲೀನ್ಸ್ವೀಪ್ ಮಾಡಿದೆ. ಹರ್ಮನ್ಪ್ರೀತ್ 43 ಎಸೆತಗಳಲ್ಲಿ 68 ರನ್ ಗಳನ್ನು ಸಿಡಿಸಿದ್ದಾರೆ. ಸ್ಮೃತಿ ಮಂಧಾನ ಮತ್ತು ಶೆಫಾಲಿ ವರ್ಮ ಕ್ರಮವಾಗಿ ತಮ್ಮ ಮೂರನೇ ಮತ್ತು ಆರನೇ ಸ್ಥಾನಗಳನ್ನು ಕಾಯ್ದುಕೊಂಡಿದ್ದಾರೆ. ಅದೇ ವೇಳೆ ಆಸ್ಟ್ರೇಲಿಯಾದ ಬೆತ್ ಮೂನಿ ಅಗ್ರ ಸ್ಥಾನವನ್ನು ಕಾಯ್ದುಕೊಂಡಿದ್ದಾರೆ. ಆದರೆ ಜೆಮಿಮಾ ರೋಡ್ರಿಗ್ಸ್ ಅಗ್ರ 10ರಿಂದ ಜಾರಿ 12ನೇ ಸ್ಥಾನಕ್ಕೆ ಕುಸಿದಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಭಾರತದ ದೀಪ್ತಿ ಶರ್ಮಾ ಅಗ್ರ ಸ್ಥಾನವನ್ನು ಕಳೆದುಕೊಂಡಿದ್ದಾರೆ. ಆಸ್ಟ್ರೇಲಿಯಾದ ಅನಾಬೆಲ್ ಸದರ್ಲ್ಯಾಂಡ್ ಅಗ್ರ ಸ್ಥಾನಕ್ಕೆ ಏರಿದ್ದಾರೆ. ಭಾರತೀಯ ಎಡಗೈ ಸ್ಪಿನ್ನರ್ ಶ್ರೀ ಚರಣಿ ಐದು ಸ್ಥಾನಗಳನ್ನು ಗಳಿಸಿ 47ನೇ ಸ್ಥಾನಕ್ಕೆ ಏರಿದ್ದಾರೆ.
2026ರಲ್ಲಿ ಭಾರತ ತಂಡ ಆಡಲಿರುವ ಮೊದಲ ಏಕದಿನ ಸರಣಿಗೆ ಭಾರತ ತಂಡವನ್ನ ಘೋಷಿಸಲಾಗಿದೆ. ಕೆಲವು ಗಾಯಾಳುಗಳು ಕಮ್ಬ್ಯಾಕ್ ಮಾಡಿದರೆ, ಇನ್ನೂ ಕೆಲವು ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಿಂದ ಹೊರಬಿದ್ದಿದ್ದ ಕೆಲವರು ಮರಳಿದ್ದಾರೆ. ಆದರೆ ದೇಶಿ ಕ್ರಿಕೆಟ್ನಲ್ಲಿ ನಿರಂತರವಾಗಿ ಉತ್ತಮ ಪ್ರದರ್ಶನ ತೋರುತ್ತಿದ್ದರೂ ಕೆಲವು ಪ್ರತಿಭಾವಂತ ಕ್ರಿಕೆಟಿಗರಿಗೆ ಅವಕಾಶ ಸಿಗುತ್ತಿಲ್ಲ.
IND vs BAN: ಟಿ20 ವಿಶ್ವಕಪ್ ಪಂದ್ಯಗಳ ಭಾರತದಿಂದ ಸ್ಥಳಾಂತರಿಸಲು ಬಿಸಿಬಿ ಮನವಿ! ಐಸಿಸಿ ಮೊದಲ ರಿಯಾಕ್ಷನ್ ಹೀಗಿದೆ
ವರದಿಗಳ ಪ್ರಕಾರ, ಎರಡು ಮಂಡಳಿಗಳ ನಡುವಿನ ಉದ್ವಿಗ್ನತೆಯನ್ನು ಶಮನಗೊಳಿಸಲು ಐಸಿಸಿ ಬಿಸಿಸಿಐ ಮತ್ತು ಬಿಸಿಬಿ ನಡುವೆ ಮಧ್ಯಸ್ಥಿಕೆ ವಹಿಸಲು ಪ್ರಯತ್ನಿಸಿದೆ.
ವಿಜಯ್ ಹಜಾರೆ ಟ್ರೋಫಿಯಲ್ಲಿ ದ್ವಿಶತಕ ಗಳಿಸಿದ ಅಮೆರಿಕ ಮೂಲದ ಅಮನ್ ರಾವ್ ಯಾರು?
VHT 2025-26: 84 ಎಸೆತಗಳಲ್ಲಿ 162 ರನ್ ಚಚ್ಚಿದ 32ರ ಬ್ಯಾಟರ್! ಈ ವರ್ಷ ಇನ್ನೂ ಭಯಾನಕವಾಗಲಿದೆ ಪಂಜಾಬ್ ಕಿಂಗ್ಸ್
ಅನುಭವಿ ಬ್ಯಾಟ್ಸ್ಮನ್ ವಿಷ್ಣು ವಿನೋದ್ ಕೇವಲ 83 ಎಸೆತಗಳಲ್ಲಿ 162 ರನ್ಗಳ ಬಿರುಗಾಳಿಯ ಇನ್ನಿಂಗ್ಸ್ ಆಡುವ ಮೂಲಕ ಪ್ಲೇಯಿಂಗ್ ಇಲೆವೆನ್ನಲ್ಲಿ ಸ್ಥಾನ ಪಡೆಯಲು ತಾವು ಸಮರ್ಥ ಬ್ಯಾಟರ್ ಎಂದು ಮತ್ತೊಮ್ಮೆ ಮ್ಯಾನೇಜ್ಮೆಂಟ್ಗೆ ತೋರಿಸಿಕೊಂಡಿದ್ದಾರೆ.
ಗುಜರಾತ್ ಕಾಲೇಜು ಗ್ರೌಂಡ್ನಲ್ಲಿ ನಡೆದ ಈ ಪಂದ್ಯದಲ್ಲಿ ರಾಜಸ್ಥಾನ್ ತಂಡ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿತು. ಕರ್ನಾಟಕ ತಂಡ 50 ಓವರ್ಗಳಲ್ಲಿ 7 ವಿಕೆಟ್ಗಳ ನಷ್ಟಕ್ಕೆ 324 ರನ್ ಗಳಿಸಿತು. ಆರಂಭಿಕರಾದ ಮಯಾಂಕ್ ಅಗರ್ವಾಲ್ ಮೊದಲ ವಿಕೆಟ್ಗೆ 184 ರನ್ಗಳ ಭದ್ರ ಅಡಿಪಾಯ ಹಾಕಿದರು.
ಜೋ ರೂಟ್ ಮತ್ತು ಸ್ಟೀವನ್ ಸ್ಮಿತ್ ಟೆಸ್ಟ್ ಕ್ರಿಕೆಟ್ನಲ್ಲಿ ರನ್ ಗಳಿಸುತ್ತಿದ್ದಾರೆ. ವಿರಾಟ್ ಟೆಸ್ಟ್ ಆಡುವುದನ್ನು ಮುಂದುವರಿಸಬೇಕಿತ್ತು ಎಂದು ಸಂಜಯ್ ಮಂಜ್ರೇಕರ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮುಂಬೈನಿಂದ ಭಾರತ ಅಂಡರ್-19 ತಂಡದ ನಾಯಕನಾಗುವವರೆಗಿನ ಆಯುಷ್ ಮ್ಹಾತ್ರೆ ಅವರ ಕ್ರಿಕೆಟ್ ಪ್ರಯಾಣದ ಸಂಪೂರ್ಣ ಕಥೆ ಇಲ್ಲಿದೆ.
ಟೀಮ್ ಇಂಡಿಯಾದ ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್ ಕ್ಯಾನ್ಸರ್ ವಿರುದ್ಧ ಹೋರಾಡಿದ ತಮ್ಮ ಭಯಾನಕ ಅನುಭವವನ್ನು ಹಂಚಿಕೊಂಡಿದ್ದಾರೆ.
Vijay Hazare Trophy: ವಿಜಯ್ ಹಜಾರೆ ಟ್ರೋಫಿ ಪ್ಲೇಟ್ ಫೈನಲ್ನಲ್ಲಿ ಮಣಿಪುರ ಬಗ್ಗುಬಡಿದ ಚಾಂಪಿಯನ್ ಆದ ಬಿಹಾರ!
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಮಣಿಪುರ 47.5 ಓವರ್ಗಳಲ್ಲಿ ಕೇವಲ 169 ರನ್ಗಳಿಗೆ ಪತನಗೊಂಡಿತು. ಈ ಸಾಧಾರಣ ಗುರಿಯನ್ನ ಬಿಹಾರ ತಂಡ 31.2 ಓವರ್ಗಳಲ್ಲಿ 170 ರನ್ಗಳಿಸಿ ಗೆಲುವು ಸಾಧಿಸಿತು.
ಆ್ಯಷಸ್ ಸರಣಿಯ ಸಿಡ್ನಿ ಟೆಸ್ಟ್ನಲ್ಲಿ ಶತಕ ಗಳಿಸುವ ಮೂಲಕ ಟ್ರಾವಿಸ್ ಹೆಡ್ ಅಪರೂಪದ ದಾಖಲೆ ಸೃಷ್ಟಿಸಿದ್ದಾರೆ.
Aman Rao: 12 ಫೋರ್ಸ್, 13 ಸಿಕ್ಸರ್ಸ್,ಅಜೇಯ 200 ರನ್! ಆರ್ಆರ್ಗೆ ಸಿಕ್ಕ ಮತ್ತೊಬ್ಬ ವಿಧ್ವಂಸಕ ಬ್ಯಾಟ್ಸ್ಮನ್
ಐಪಿಎಲ್ 2026ರಲ್ಲಿ ರಾಜಸ್ಥಾನ್ ರಾಯಲ್ಸ್ ಆಯ್ಕೆಯಾದ ಯುವ ಪ್ರತಿಭೆ, ವಿಜಯ್ ಹಜಾರೆ ಟ್ರೋಫಿಯಲ್ಲಿ ಬೆಂಗಾಲ್ ವಿರುದ್ಧ ಡಬಲ್ ಸೆಂಚುರಿ ಸಿಡಿಸಿ ಸಂಚಲನ ಮೂಡಿಸಿದ್ದಾರೆ.
Shubman Gill: ವೈಟ್ಬಾಲ್ನಲ್ಲಿ ಟೀಮ್ ಇಂಡಿಯಾ ನಾಯಕ ಮತ್ತೆ ವಿಫಲ! ಎದುರಾಯ್ತು ಪ್ರಿನ್ಸ್ಗೆ ಹೊಸ ಸಂಕಷ್ಟ
ವೈಟ್ ಬಾಲ್ ಕ್ರಿಕೆಟ್ನಲ್ಲಿ ಟೀಮ್ ಇಂಡಿಯಾ ನಾಯಕ ಶುಭಮನ್ ಗಿಲ್ ಕಳಪೆ ಫಾರ್ಮ್ ಮುಂದುವರಿಸಿದ್ದು, ಹೊಸ ಸಂಕಷ್ಟ ಎದುರಾಗಿದೆ.
ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗೂ ಮುನ್ನ ವಿಜಯ್ ಹಜಾರೆ ಟ್ರೋಫಿಯಲ್ಲಿ ಶ್ರೇಯಸ್ ಅಯ್ಯರ್ ತಮ್ಮ ಬ್ಯಾಟಿಂಗ್ ಫಿಟ್ನೆಸ್ ಸಾಬೀತುಪಡಿಸಿದ್ದಾರೆ.
Achievement: ಬೈರಾಪುರದಿಂದ ಬಂಗಾಳದವರೆಗೆ, ಬಡ ಆಟೋ ಡ್ರೈವರ್ ಮಗಳ ಮಹಾನ್ ಸಾಧನೆ!
ಚಿಕ್ಕಮಗಳೂರು ಬೈರಾಪುರದ ತನುಶ್ರೀ ಬಿ.ವಿ. ಪಶ್ಚಿಮ ಬಂಗಾಳದಲ್ಲಿ ನಡೆದ 51ನೇ ರಾಷ್ಟ್ರಮಟ್ಟದ ಜೂನಿಯರ್ ಬಾಲಕಿಯರ ಕಬಡ್ಡಿ ಪಂದ್ಯಾವಳಿಗೆ ಕರ್ನಾಟಕವನ್ನು ಪ್ರತಿನಿಧಿಸಿ ಜಿಲ್ಲೆಗೆ ಹೆಮ್ಮೆ ತಂದಿದ್ದಾಳೆ.
Vijay Hazare: ವಿಜಯ್ ಹಜಾರೆ ಟ್ರೋಫಿಯಲ್ಲಿ ಚರಿತ್ರೆ ಸೃಷ್ಠಿಸಿದ ಪಡಿಕ್ಕಲ್! ಈ ಸಾಧನೆ ಮಾಡಿದ ಮೊದಲ ಕ್ರಿಕೆಟರ್
ಕನ್ನಡಿಗ ದೇವದತ್ ಪಡಿಕ್ಕಲ್ ವಿಜಯ್ ಹಜಾರೆ ಟ್ರೋಫಿಯಲ್ಲಿ ತಮ್ಮ ಅಮೋಘ ಬ್ಯಾಟಿಂಗ್ ಪ್ರದರ್ಶನವನ್ನ ಮುಂದುವರಿಸಿದ್ದಾರೆ. ಜನವರಿ 6ರಂದು ನಡೆದ ರಾಜಸ್ಥಾನ್ ವಿರುದ್ಧದ ಪಂದ್ಯದಲ್ಲಿ ಕೇವಲ 9 ರನ್ಗಳಿಂದ ಶತಕ ವಂಚಿತರಾದರು. ಆದರೂ ಈ ಟೂರ್ನಿಯಲ್ಲಿ ಐತಿಹಾಸಿಕ ಸಾಧನೆ ಪಾತ್ರರಾದರು.
Baby Names: ಬೆಳಕು ಮತ್ತು ಭರವಸೆ ಸಾರುವ ಮುದ್ದಾದ ಮಕ್ಕಳ ಹೆಸರುಗಳಿವು! ಆಧುನಿಕ ಪೋಷಕರಿಗಾಗಿ ಅತ್ಯುತ್ತಮ
ಮಗುವಿನಲ್ಲಿ ಆತ್ಮವಿಶ್ವಾಸ ಮತ್ತು ಮಾನಸಿಕ ಧೈರ್ಯವನ್ನು ತುಂಬುತ್ತವೆ. ಜನವರಿ 2026 ರ ಹೊಸ ಟ್ರೆಂಡ್ನಲ್ಲಿ ವಿಶಿಷ್ಟ ಮತ್ತು ಅರ್ಥಪೂರ್ಣ ಹೆಸರುಗಳಿಗೆ ಅತಿ ಹೆಚ್ಚು ಬೇಡಿಕೆಯಿದೆ. ನಿಮ್ಮ ಮನೆಯ ಮುದ್ದಾದ ಕಂದಮ್ಮನಿಗಾಗಿ ಆರಿಸಬಹುದಾದ ಕೆಲವು ಅಪರೂಪದ ಹೆಸರುಗಳ ಪಟ್ಟಿ ಇಲ್ಲಿದೆ.
ಹೊಸ ವರ್ಷವನ್ನ ಮೂರು ವಿಶ್ವಕಪ್ ವಿಜೇತ ನಾಯಕರೊಡನೆ ಆಚರಿಸಿದ ನೀತಾ ಅಂಬಾನಿ!
ರಿಲಯನ್ಸ್ ಫೌಂಡೇಶನ್ ಸಂಸ್ಥಾಪಕಿ ಮತ್ತು ಅಧ್ಯಕ್ಷೆ ನೀತಾ ಅಂಬಾನಿ ಸೋಮವಾರ ಭಾರತದ ವಿಶ್ವ ಚಾಂಪಿಯನ್ಗಳನ್ನು ಸನ್ಮಾನಿಸಿದ್ದಾರೆ.
ಬಾಂಗ್ಲಾದೇಶದ ಮನವಿ ಬಳಿಕ ಟಿ20 ವಿಶ್ವಕಪ್ ವೇಳಾಪಟ್ಟಿ ಪರಿಷ್ಕರಣೆಗೆ ICC ಮುಂದು?
Photo Credit : @ICCMediaComms ದುಬೈ, ಜ. 5: ತನ್ನ ಪಂದ್ಯಗಳನ್ನು ಭಾರತದಿಂದ ಶ್ರೀಲಂಕಾಗೆ ಸ್ಥಳಾಂತರಿಸುವಂತೆ ಕೋರಿ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ)ಯು ಐಸಿಸಿಗೆ ಮನವಿ ಮಾಡಿದ ಬಳಿಕ, ಐಸಿಸಿ ಟಿ20 ವಿಶ್ವಕಪ್ ಪಂದ್ಯಾವಳಿಯು ಗೊಂದಲದ ಗೂಡಾಗಿದೆ. ಪಂದ್ಯಾವಳಿ ಆರಂಭಗೊಳ್ಳಲು ಕೇವಲ ಒಂದು ತಿಂಗಳು ಇರುವಾಗ ಬಿಕ್ಕಟ್ಟು ಕಾಣಿಸಿರುವುದು ಆತಂಕಕ್ಕೆ ಕಾರಣವಾಗಿದೆ. ಪಂದ್ಯಾವಳಿಯು ಫೆಬ್ರವರಿ 7ರಂದು ಆರಂಭಗೊಳ್ಳಲಿದೆ. ತನ್ನ ಆಟಗಾರರ ಭದ್ರತೆಯ ಬಗ್ಗೆ ‘‘ಹೆಚ್ಚುತ್ತಿರುವ ಕಳವಳಗಳ’’ನ್ನು ಉಲ್ಲೇಖಿಸಿ, ತನ್ನ ವಿಶ್ವಕಪ್ ಪಂದ್ಯಗಳ ಸ್ಥಳಾಂತರಕ್ಕೆ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಮನವಿ ಮಾಡಿದೆ. ಇದು ಐಸಿಸಿ ಮತ್ತು ಅದರ ಅಧ್ಯಕ್ಷ ಜಯ್ ಶಾರಿಗೆ ಭಾರೀ ಸವಾಲೊಂದನ್ನು ಒಡ್ಡಿದೆ. ಸಂಘಟಕರು ಈಗ ಕೊನೆಯ ಹಂತದಲ್ಲಿ, ಶ್ರೀಲಂಕಾದಲ್ಲಿ ಮೈದಾನಗಳ ವ್ಯವಸ್ಥೆ ಮಾಡಬೇಕಾಗಿದೆ ಹಾಗೂ ಆಟಗಾರರಿಗೆ ವಾಸ್ತವ್ಯಗಳನ್ನು ಕಲ್ಪಿಸಬೇಕಾಗಿದೆ. ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ ಕೋರಿಕೆಯಂತೆ, ಐಸಿಸಿ ಈಗಾಗಲೇ ವೇಳಾಪಟ್ಟಿಯನ್ನು ಪರಿಷ್ಕರಿಸುವ ಕೆಲಸವನ್ನು ಮಾಡುತ್ತಿದೆ ಎಂಬುದಾಗಿ ವರದಿಗಳು ಹೇಳಿವೆ. ಮುಹಮ್ಮದ್ ಯೂನುಸ್ ನೇತೃತ್ವದ ಮಧ್ಯಂತರ ಸರಕಾರದಲ್ಲಿ ಯುವ ಮತ್ತು ಕ್ರೀಡಾ ಸಲಹೆಗಾರ ಆಸಿಫ್ ನಝ್ರುಲ್ ರ ಹೇಳಿಕೆಯು ಪರಿಸ್ಥಿತಿಯ ರಾಜಕೀಯ ಮಹತ್ವಕ್ಕೆ ಕನ್ನಡಿ ಹಿಡಿದಿದೆ. ‘‘ಬಾಂಗ್ಲಾದೇಶದ ಕ್ರಿಕೆಟ್, ಕ್ರಿಕೆಟಿಗರು ಮತ್ತು ದೇಶಕ್ಕೆ ಆಗುವ ಯಾವುದೇ ಅವಮಾನವನ್ನು ನಾವು ಸಹಿಸುವುದಿಲ್ಲ. ಗುಲಾಮಗಿರಿಯ ದಿನಗಳು ಮುಗಿದವು’’ ಎಂಬುದಾಗಿ ಅವರು ಫೇಸ್ ಬುಕ್ನಲ್ಲಿ ಬರೆದಿದ್ದಾರೆ.
ಇನ್ನೊಂದು ಆ್ಯಶಸ್ ಪ್ರವಾಸಕ್ಕೆ ಮರಳುವ ಸೂಚನೆ ನೀಡಿದ ರೂಟ್
ಜೋ ರೂಟ್ | Photo Credit : @ICC ಸಿಡ್ನಿ, ಜ. 5: ನಾನು ಆಸ್ಟ್ರೇಲಿಯಕ್ಕೆ ಇನ್ನೊಂದು ಆ್ಯಶಸ್ ಪ್ರವಾಸ ಕೈಗೊಳ್ಳುವುದನ್ನು ಎದುರು ನೋಡುತ್ತಿದ್ದೇನೆ ಎಂದು ಇಂಗ್ಲೆಂಡ್ ಕ್ರಿಕೆಟ್ ತಂಡದ ಜೋ ರೂಟ್ ಹೇಳಿದ್ದಾರೆ. ಆಸ್ಟ್ರೇಲಿಯ ವಿರುದ್ಧದ ಐದನೇ ಆ್ಯಶಸ್ ಟೆಸ್ಟ್ನ ಮೊದಲ ಇನಿಂಗ್ಸ್ನಲ್ಲಿ 160 ರನ್ ಗಳನ್ನು ಸಿಡಿಸಿದ ಬಳಿಕ ಅವರು ಈ ಹೇಳಿಕೆ ನೀಡಿದ್ದಾರೆ. 35 ವರ್ಷದ ರೂಟ್ ಸೋಮವಾರ ಹಾಲಿ ಆ್ಯಶಸ್ ಸರಣಿಯಲ್ಲಿ ತನ್ನ ಎರಡನೇ ಶತಕವನ್ನು ಬಾರಿಸಿದರು. ಇದು ಅವರ 41ನೇ ಟೆಸ್ಟ್ ಶತಕವಾಗಿದೆ. ಅವರೀಗ ಗರಿಷ್ಠ ಟೆಸ್ಟ್ ಶತಕದಾರರ ಪಟ್ಟಿಯಲ್ಲಿ ಆಸ್ಟ್ರೇಲಿಯದ ರಿಕಿ ಪಾಂಟಿಂಗ್ ಜೊತೆಗೆ ಮೂರನೇ ಸ್ಥಾನದಲ್ಲಿದ್ದಾರೆ. ಇಂಗ್ಲೆಂಡ್ ಇನ್ನು ಆಸ್ಟ್ರೇಲಿಯ ಪ್ರವಾಸಕ್ಕೆ ಹೋಗುವಾಗ ರೂಟ್ಗೆ 39 ವರ್ಷ ಪ್ರಾಯವಾಗಿರುತ್ತದೆ. ಹಾಗಾಗಿ, ಅವರ ಹಾಲಿ ಆಸ್ಟ್ರೇಲಿಯ ಪ್ರವಾಸವು ಕೊನೆಯದಾಗಿರುವ ಸಾಧ್ಯತೆಯಿದೆ ಎಂದು ಕ್ರಿಕೆಟ್ ಪಂಡಿತರು ಅಭಿಪ್ರಾಯಪಡುತ್ತಾರೆ. ಆದರೆ, ಹಾಗೆ ಆಗಲಾರದು ಎಂಬ ಸೂಚನೆಯನ್ನು ರೂಟ್ ನೀಡಿದ್ದಾರೆ. ಇದು ನಿಮ್ಮ ಕೊನೆಯ ಆಸ್ಟ್ರೇಲಿಯ ಪ್ರವಾಸವೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘‘ನೀವು ಅದರ ಬಗ್ಗೆ ಸ್ವಲ್ಪ ಹೆಚ್ಚಾಗಿಯೇ ಯೋಚನೆ ಮಾಡುತ್ತಿರುವಂತೆ ಕಾಣುತ್ತಿದೆ’’ ಎಂದು ಹೇಳಿದರು. ನಾಲ್ಕು ವರ್ಷಗಳ ಬಳಿಕ ನೀವು ಆಸ್ಟ್ರೇಲಿಯಕ್ಕೆ ಮರಳುತ್ತೀರಾ ಎಂಬ ನೇರ ಪ್ರಶ್ನೆಯನ್ನು ಕೇಳಿದಾಗ, ‘‘ಯಾರಿಗೆ ಗೊತ್ತು? ನೋಡುವ. ನಾನು ಬರಲು ಸಿದ್ಧನಿದ್ದೇನೆ. ಆದರೆ, ಪರಿಸ್ಥಿತಿ ಯಾವ ರೀತಿ ಇರುತ್ತದೆ ಎಂದು ನಾವು ನೋಡಬೇಕಾಗಿದೆ’’ ಎಂದರು.
ಸಿದ್ಧಗೊಳ್ಳದ ರಿಂಗ್: ವಿಳಂಬವಾಗಿ ಆರಂಭಗೊಂಡ ರಾಷ್ಟ್ರೀಯ ಬಾಕ್ಸಿಂಗ್ ಚಾಂಪಿಯನ್ಶಿಪ್!
ಸಾಂದರ್ಭಿಕ ಚಿತ್ರ | Photo Credit : freepik ಹೊಸದಿಲ್ಲಿ, ಜ. 5: ಗ್ರೇಟರ್ ನೋಯಿಡದಲ್ಲಿ ನಡೆಯುತ್ತಿರುವ ಭಾರತದ ಸೀನಿಯರ್ ರಾಷ್ಟ್ರೀಯ ಬಾಕ್ಸಿಂಗ್ ಚಾಂಪಿಯನ್ಶಿಪ್ಸ್ ರವಿವಾರ ವಿಳಂಬವಾಗಿ ಆರಂಭಗೊಂಡಿದೆ. ಪಂದ್ಯಗಳು ನಡೆಯಬೇಕಾಗಿದ್ದ ಎರಡು ಅಖಾಡಗಳು ನಿರ್ಮಾಣವಾಗಿರಲಿಲ್ಲ. ಮಧ್ಯಾಹ್ನ ನಡೆಯಬೇಕಾಗಿದ್ದ ಸ್ಪರ್ಧೆಗಳಲ್ಲಿ ಭಾಗವಹಿಸುವುದಕ್ಕಾಗಿ ಬಾಕ್ಸರ್ಗಳು ಗೌತಮ್ ಬುದ್ಧ ವಿಶ್ವವಿದ್ಯಾನಿಲಯಕ್ಕೆ ಬಂದಾಗ ಅವರನ್ನು ಖಾಲಿ ನೆಲಗಳು ಸ್ವಾಗತಿಸಿದವು. ಪಂದ್ಯ ಮಧ್ಯಾಹ್ನ 2 ಗಂಟೆಗೆ ಆರಂಭವಾಗಬೇಕಾಗಿತ್ತು. ಆದರೆ ಅಂತಿಮವಾಗಿ ಅದು ಸಂಜೆ 6:30ಕ್ಕೆ ಆರಂಭಗೊಂಡಿತು. ಸಾಮಾನ್ಯವಾಗಿ, ಯಾವುದೇ ರಾಷ್ಟ್ರೀಯ ಬಾಕ್ಸಿಂಗ್ ಸ್ಪರ್ಧೆಯು ಆರಂಭಗೊಳ್ಳುವ ಕನಿಷ್ಠ ಒಂದು ದಿನ ಮೊದಲು ರಿಂಗ್ ಗಳನ್ನು ಹಾಕಲಾಗುತ್ತದೆ. ಆದರೆ, ಇಲ್ಲಿ ಪಂದ್ಯದ ದಿನದಂದೇ ರಿಂಗ್ ಗಳನ್ನು ಹಾಕಲಾಗುತ್ತಿತ್ತು. ರಿಂಗ್ ಗಳನ್ನು ಅವಸರವಸರವಾಗಿ ಹಾಕಲಾಯಿತು. ಆಗ ಕಾಯುವಂತೆ ಬಾಕ್ಸರ್ಗಳಿಗೆ ತಿಳಿಸಲಾಯಿತು. ಆರಂಭಿಕ ದಿನವಾದ ರವಿವಾರ ಪುರುಷರ ವಿಭಾಗದಲ್ಲಿ 42 ಮತ್ತು ಮಹಿಳೆಯರ ವಿಭಾಗದಲ್ಲಿ 38 ಸ್ಪರ್ಧೆಗಳು ನಡೆಯಬೇಕಾಗಿದ್ದವು. ಆದರೆ, ನಾಲ್ಕು ಗಂಟೆಗಳ ವಿಳಂಬದಿಂದಾಗಿ ನಿಗದಿತ ಎಲ್ಲಾ ಪಂದ್ಯಗಳನ್ನು ಆಡಲು ಸಾಧ್ಯವಾಗಲಿಲ್ಲ.
ವಿರಾಟ್ ಕೊಹ್ಲಿಗೆ ಬಿಗ್ ಆಫರ್ ಕೊಟ್ಟ ವಿಶ್ವದ ನಂ. 1 ಯೂಟ್ಯೂಬರ್! ಈ ಬಾರಿಯಾದ್ರೂ ಆತನ ಕನಸು ನನಸಾಗುತ್ತಾ?
ವಿಶ್ವದ ನಂಬರ್-1 ಯೂಟ್ಯೂಬರ್ ಮಿಸ್ಟರ್ ಬೀಸ್ಟ್ ವಿರಾಟ್ ಕೊಹ್ಲಿ ಅವರಿಗೆ ಬಿಗ್ ಆಫರ್ ನೀಡಿದ್ದಾರೆ.
ಇನ್ಮುಂದೆ ಆರ್ಸಿಬಿ ಜೊತೆ ಮಿಂಚಲಿದೆ ನಮ್ಮ 'ನಂದಿನಿ'!
Nandini-RCB:ವಿರಾಟ್ ಕೊಹ್ಲಿ ಜರ್ಸಿ ಮೇಲೆ ನಂದಿನಿ! RCBಗೆ ಜೊತೆಯಾಗಲಿದೆ ಕರುನಾಡಿನ ಹೆಮ್ಮೆಯ ಬ್ರ್ಯಾಂಡ್; ಅಮುಲ್ ಹಿಂದಿಕ್ಕಿ ಐಪಿಎಲ್ ಪ್ರಾಯೋಜಕತ್ವಕ್ಕೆ ಕೆಎಂಎಫ್ ಭರ್ಜರಿ ಪ್ಲಾನ್. ಆ ಕುರಿತ ವರದಿ ಇಲ್ಲಿದೆ:
ವೈಭವ್-ಅಭಿಗ್ಯಾನ್ ಸಿಡಿಲಬ್ಬರ: ದಕ್ಷಿಣ ಆಫ್ರಿಕಾ ವಿರುದ್ಧ ಸರಣಿ ವಶಪಡಿಸಿಕೊಂಡ ಯಂಗ್ ಟೈಗರ್ಸ್
ಸೌತ್ ಆಫ್ರಿಕಾ ನೀಡಿದ್ದ ಗುರಿಯನ್ನು ಬೆನ್ನಟ್ಟಿದ ಭಾರತಕ್ಕೆ ನಾಯಕ ವೈಭವ್ ಸೂರ್ಯವಂಶಿ ಅಕ್ಷರಶಃ ಚಂಡಮಾರುತದಂತೆ ಅಪ್ಪಳಿಸಿದರು. ಕೇವಲ 24 ಎಸೆತಗಳನ್ನು ಎದುರಿಸಿದ ಅವರು ಅಜೇಯ 68 ರನ್ ಚಚ್ಚಿದರು.

15 C