ರುತುರಾಜ್ ಗಾಯಕ್ವಾಡ್ ಮಿಂಚಿನ ಪ್ರದರ್ಶನಕ್ಕೆ ಕೊಹ್ಲಿ ದಾಖಲೆ ಡಮಾರ್; ಭಾರತ ಎ ತಂಡಕ್ಕೆ ಭರ್ಜರಿ ಗೆಲುವು
ದಕ್ಷಿಣ ಆಫ್ರಿಕಾ ಎ ವಿರುದ್ಧದ ಮೊದಲ ಅನಧಿಕೃತ ಏಕದಿನ ಪಂದ್ಯದಲ್ಲಿ ಭಾರತ ಎ ತಂಡದ ಬ್ಯಾಟರ್ ರುತುರಾಜ್ ಗಾಯಕ್ವಾಡ್ ಶತಕ ಬಾರಿಸಿ ವಿರಾಟ್ ಕೊಹ್ಲಿ ದಾಖಲೆ ಮುರಿದಿದ್ದಾರೆ.
ಚೆಸ್ ವಿಶ್ವಕಪ್ | ಅರ್ಜುನ್, ಹರಿಕೃಷ್ಣ ಪ್ರಿಕ್ವಾರ್ಟರ್ ಫೈನಲ್ಗೆ : ಪ್ರಜ್ಞಾನಂದಗೆ ಸೋಲು
ಪ್ರಜ್ಞಾನಂದ | Photo Credit : PTI ಅರ್ಪೋರ (ಗೋವಾ), ನ. 13: ಗೋವಾದ ಅರ್ಪೋರದಲ್ಲಿ ನಡೆಯುತ್ತಿರುವ ಚೆಸ್ ವಿಶ್ವಕಪ್ನಲ್ಲಿ ಗುರುವಾರ ನಡೆದ ನಾಲ್ಕನೇ ಸುತ್ತಿನ ಪಂದ್ಯಗಳಲ್ಲಿ ಅರ್ಜುನ್ ಎರಿಗೈಸಿ ಮತ್ತು ಪೆಂಟಾಲ ಹರಿಕೃಷ್ಣ ಭಾರತೀಯ ಅಭಿಯಾನವನ್ನು ಜೀವಂತವಾಗಿಟ್ಟಿದ್ದಾರೆ. ಅದೇ ವೇಳೆ, ಕಳೆದ ಆವೃತ್ತಿಯ ರನ್ನರ್ಸ್-ಅಪ್ ಆರ್. ಪ್ರಜ್ಞಾನಂದ ಟೈಬ್ರೇಕ್ನಲ್ಲಿ ಸೋಲನುಭವಿಸಿದ್ದಾರೆ. ಮೂರನೇ ಶ್ರೇಯಾಂಕದ ಅರ್ಜುನ್ ಹಂಗೇರಿಯ ಗ್ರ್ಯಾಂಡ್ಮಾಸ್ಟರ್ ಪೀಟರ್ ಲೆಕೊ ಅವರನ್ನು ಎರಡೂ ರ್ಯಾಪಿಡ್ ಪಂದ್ಯಗಳಲ್ಲಿ ಸೋಲಿಸಿ ಅಂತಿಮ 16ರ ಸುತ್ತಿನಲ್ಲಿ ಸ್ಥಾನ ಪಡೆದಿದ್ದಾರೆ. ಈ ಸುತ್ತಿನಲ್ಲಿ ಅವರು ಅಮೆರಿಕದ ಲೆವನ್ ಅರೋನಿಯನ್ರನ್ನು ಎದುರಿಸಲಿದ್ದಾರೆ. ಐದನೇ ಸುತ್ತಿನ ಕ್ಲಾಸಿಕಲ್ ಪಂದ್ಯಗಳಲ್ಲಿ ಪ್ರಣವ್ ವಿ. ಮತ್ತು ಕಾರ್ತಿಕ್ ವೆಂಕಟರಮಣ್ ಸೋಲನುಭವಿಸಿದರು. ಟೈಬ್ರೇಕ್ನಲ್ಲಿ ಮೂವರು ಭಾರತೀಯರಿದ್ದು, ಇಬ್ಬರು ಮುಂದಿನ ಸುತ್ತಿಗೆ ತೇರ್ಗಡೆಯಾಗಿದ್ದಾರೆ. ಮೊದಲ ರ್ಯಾಪಿಡ್ ಗೇಮ್ನಲ್ಲಿ ಸ್ವೀಡನ್ನ ನೀಲ್ಸ್ ಗ್ರಾಂಜೆಲಿಯಸ್ರನ್ನು ಹರಿಕೃಷ್ಣ ಡ್ರಾಕ್ಕೆ ಹಿಡಿದಿಟ್ಟರು. ಬಳಿಕ ಎರಡನೇ ರ್ಯಾಪಿಡ್ ಗೇಮ್ನಲ್ಲಿ ಅವರು ಗೆಲುವು ಪಡೆದರು. ಪ್ರಿಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅವರು ಮೆಕ್ಸಿಕೊದ ಜೋಸ್ ಎಡ್ವಾರ್ಡೊ ಮಾರ್ಟಿನೇಝ್ ಅಲ್ಕಾಂಟಾರ ಅವರನ್ನು ಎದುರಿಸಲಿದ್ದಾರೆ. ಎರಡನೇ ಶ್ರೇಯಾಂಕದ ಪ್ರಜ್ಞಾನಂದರನ್ನು ರಶ್ಯದ ಡನೀಲ್ ಡುಬೊವ್ ಸೋಲಿಸಿದರು. ಮೊದಲ ರ್ಯಾಪಿಡ್ ಗೇಮ್ ಡ್ರಾದಲ್ಲಿ ಮುಕ್ತಾಯಗೊಂಡ ಬಳಿಕ ಎರಡನೇ ರ್ಯಾಪಿಡ್ ಗೇಮ್ನಲ್ಲಿ ಡನೀಲ್, ಪ್ರಜ್ಞಾನಂದರನ್ನು ಸೋಲಿಸಿದರು.
ಇಸ್ಲಾಮಾಬಾದ್ನಲ್ಲಿ ಬಾಂಬ್ ಸ್ಫೋಟದ ಹಿನ್ನೆಲೆ : ತ್ರಿಕೋನ ಸರಣಿಯನ್ನು ರಾವಲ್ಪಿಂಡಿಗೆ ಸ್ಥಳಾಂತರಿಸಿದ ಪಿಸಿಬಿ
Photo Credit : PTI ಕರಾಚಿ, ನ.13: ಮುಂಬರುವ ಪಾಕಿಸ್ತಾನ, ಶ್ರೀಲಂಕಾ ಹಾಗೂ ಝಿಂಬಾಬ್ವೆ ಒಳಗೊಂಡಿರುವ ಟಿ-20 ತ್ರಿಕೋನ ಸರಣಿಯ ಎಲ್ಲ ಪಂದ್ಯಗಳನ್ನು ರಾವಲ್ಪಿಂಡಿಯಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ)ಗುರುವಾರ ದೃಢಪಡಿಸಿದೆ. ಇಸ್ಲಾಮಾಬಾದ್ನಲ್ಲಿ ಇತ್ತೀಚೆಗೆ ಆತ್ಮಾಹುತಿ ಬಾಂಬ್ ದಾಳಿ ನಡೆದ ಹಿನ್ನೆಲೆಯಲ್ಲಿ ಬಿಗಿ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಪಂದ್ಯಾವಳಿಯನ್ನು ಒಂದೇ ನಗರದಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ. ತ್ರಿಕೋನ ಸರಣಿಯು ನ.18ರಂದು ಆರಂಭವಾಗಲಿದ್ದು, ರಾವಲ್ಪಿಂಡಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿರುವ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ತಂಡವು ಝಿಂಬಾಬ್ವೆ ತಂಡವನ್ನು ಎದುರಿಸಲಿದೆ. ನ.29ರಂದು ನಡೆಯಲಿರುವ ಫೈನಲ್ ಸಹಿತ ಎಲ್ಲ ಪಂದ್ಯಗಳು ಸ್ಥಳೀಯ ಕಾಲಮಾನ ಸಂಜೆ 6ಕ್ಕೆ ಆರಂಭವಾಗಲಿದೆ. ಲೀಗ್ ಹಂತದಲ್ಲಿ ಪ್ರತೀ ತಂಡವು ನಾಲ್ಕು ಪಂದ್ಯಗಳನ್ನು ಆಡಲಿದೆ. ಅಗ್ರ ಎರಡು ತಂಡಗಳು ಫೈನಲ್ಗೆ ಪ್ರವೇಶಿಸಲಿವೆೆ. ಇಸ್ಲಾಮಾಬಾದ್ನಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ 12 ಜನರು ಮೃತಪಟ್ಟ ನಂತರ ಶ್ರೀಲಂಕಾ ಆಟಗಾರರು ತಮ್ಮ ಸುರಕ್ಷತೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರೂ ಪಾಕಿಸ್ತಾನದಲ್ಲಿ ಉಳಿದುಕೊಳ್ಳುವಂತೆ ಶ್ರೀಲಂಕಾ ಕ್ರಿಕೆಟ್ ಮಂಡಳಿಯು ತನ್ನ ಆಟಗಾರರಿಗೆ ಸೂಚಿಸಿದೆ. ಆಂತರಿಕ ಸಚಿವರಾಗಿರುವ ಪಿಸಿಬಿ ಅಧ್ಯಕ್ಷ ಮುಹ್ಸಿನ್ ಖಾನ್ ಅವರು ಶ್ರೀಲಂಕಾದ ಹೈ ಕಮಿಶನರ್ ಹಾಗೂ ಹಿರಿಯ ಅಧಿಕಾರಿಗಳನ್ನು ಭೇಟಿಯಾಗಿ, ಪ್ರವಾಸಿ ತಂಡಕ್ಕೆ ಉನ್ನತ ಮಟ್ಟದ ಭದ್ರತಾ ವ್ಯವಸ್ಥೆಗಳನ್ನು ಖಚಿತಪಡಿಸಿದ್ದಾರೆ.
1983ರ ವಿಶ್ವಕಪ್ ಹೀರೋಗೂ ಕೊಹ್ಲಿಯೇ ಸ್ಪೋರ್ತಿಯಂತೆ! 60ರ ವಯಸ್ಸಲ್ಲಿ ಜಿಮ್ ಶುರು ಮಾಡಿದ್ರಂತೆ ಈ ದಿಗ್ಗಜ
ಭಾರತದ 2016 ರ ವೆಸ್ಟ್ ಇಂಡೀಸ್ ಪ್ರವಾಸದ ಸಮಯದಲ್ಲಿ, ಅವರು ತಮ್ಮ ಪತ್ನಿಯೊಂದಿಗೆ ಆಂಟಿಗುವಾದ ಕಡಲತೀರದಲ್ಲಿ ಬೆಳಗಿನ ವಾಕಿಂಗ್ಗೆ ಹೋಗಿದ್ದರು ಎಂದು ಪಾಟೀಲ್ ನೆನಪಿಸಿಕೊಂಡರು.
ಶಮಿಯಂತಹ ಬೌಲರ್ ಕಡೆಗಣಿಸಲು ಸಾಧ್ಯವೆ? ಗಂಭೀರ್-ಅಗರ್ಕರ್ಗೆ ಶಾಕ್ ಕೊಟ್ಟ ಗಿಲ್ ಹೇಳಿಕೆ
ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ಸರಣಿಗಳ ನಂತರ, ಶಮಿಯನ್ನ ದಕ್ಷಿಣ ಆಫ್ರಿಕಾ ಸರಣಿಗೂ ಆಯ್ಕೆ ಮಾಡಲಾಗಿಲ್ಲ. ರಣಜಿ ಟ್ರೋಫಿಯಲ್ಲಿ ಬಂಗಾಳ ಪರ ಅನುಭವಿ ವೇಗದ ಬೌಲರ್ ಉತ್ತಮ ಪ್ರದರ್ಶನ ನೀಡಿದ್ದರೂ ಸಹ, ನಿರಂತರವಾಗಿ ನಡೆಯುತ್ತಿರುವ ಚರ್ಚೆಗೆ ನಾಂದಿ ಹಾಡಿದೆ. ಶಮಿಯಂತಹ ನುರಿತ ಬೌಲರ್ ಅನ್ನು ಮೀರಿ, ಬೇರೆ ಬೌಲರ್ ನೋಡುವುದು ತುಂಬಾ ಕಷ್ಟ ಎಂದು ಗಿಲ್ ಹೇಳಿದ್ದಾರೆ.
IPL 2026: ಟ್ರೇಡಿಂಗ್ ಮೂಲಕ ಮುಂಬೈ ಸೇರಿದ ಇಬ್ಬರು ಸ್ಟಾರ್ ಪ್ಲೇಯರ್ಸ್
ಐಪಿಎಲ್ 2026 ರ ಮಿನಿ ಹರಾಜಿಗೂ ಮುನ್ನ ಮುಂಬೈ ಇಂಡಿಯನ್ಸ್ ಟ್ರೇಡಿಂಗ್ ಮಾಡುವ ಮೂಲಕ ಇಬ್ಬರು ಸ್ಟಾರ್ ಆಟಗಾರರನ್ನು ತಂಡಕ್ಕೆ ಸೇರಿಸಿಕೊಂಡಿದೆ.
IPL 2026: ಶಾರ್ದೂಲ್ ಠಾಕೂರ್ ಮಾತ್ರವಲ್ಲ, ಈ ಇಬ್ಬರು ಬೌಲರ್ಗಳ ಮೇಲೆ ಕಣ್ಣಿಟ್ಟಿದೆ ಮುಂಬೈ ಇಂಡಿಯನ್ಸ್
ಐಪಿಎಲ್ 2026 ರ ಆವೃತ್ತಿಗೆ ಮುಂಬೈ ಇಂಡಿಯನ್ಸ್ ತಂಡವು ತಮ್ಮ ಸ್ಪಿನ್ ವಿಭಾಗವನ್ನು ಬಲಪಡಿಸಲು ಇಬ್ಬರು ಬೌಲರ್ಗಳನ್ನ ಮರಳಿ ಕರೆತರಲು ಸಜ್ಜಾಗುತ್ತಿದೆ.
ಇನ್ನೊಂದು ಸಿಕ್ಸರ್ ಸಿಡಿಸಿದ್ರೆ ಸಾಕು! ಆಲ್ಟೈಮ್ ರೆಕಾರ್ಡ್ ಬ್ರೇಕ್ ಮಾಡಿ ಚರಿತ್ರೆ ಸೃಷ್ಟಿಸ್ತಾರೆ ಪಂತ್
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಕಾಲಿಗೆ ಚೆಂಡು ಬಿದ್ದಿದ್ದರಿಂದ ಮೂಳೆ ಮುರಿತಗೊಂಡು 3 ತಿಂಗಳಿಗೂ ಹೆಚ್ಚು ಸಮಯ ವಿಶ್ರಾಂತಿ ಪಡೆದಿದ್ದ ಪಂತ್, ಇದೀಗ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಮರಳಲಿದ್ದಾರೆ.
IND vs SA Test: ಟೀಮ್ ಇಂಡಿಯಾದಲ್ಲಿ ಆಲ್ರೌಂಡರ್ಗಳ ದಂಡು; ಮೊದಲ ಟೆಸ್ಟ್ನಲ್ಲಿ ಯಾರಿಗೆ ಅವಕಾಶ?
ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೆ ಟೀಮ್ ಇಂಡಿಯಾದ ಆಡುವ ಹನ್ನೊಂದರ ಬಳಗದಲ್ಲಿ ಆಲ್ರೌಂಡರ್ಗಳ ಆಯ್ಕೆಯ ಕುರಿತು ಶುಭಮನ್ ಗಿಲ್ ಹೇಳಿದ್ದೇನು?
ದಕ್ಷಿಣ ಆಫ್ರಿಕಾ ಟೆಸ್ಟ್ ಸರಣಿ! ಬಾಬರ್ ಹಿಂದಿಕ್ಕಿ ಏಷ್ಯಾದ ನಂ 1 ಬ್ಯಾಟರ್ ಎನಿಸಿಕೊಳ್ಳಲು ಗಿಲ್ ಸಜ್ಜು
ದಕ್ಷಿಣ ಆಫ್ರಿಕಾ ವಿರುದ್ಧ ಭಾರತದ ಟೆಸ್ಟ್ ಸರಣಿ ನಾಳೆಯಿಂದ (ನವೆಂಬರ್ 14) ಆರಂಭವಾಗಲಿದೆ. ಈ ಪಂದ್ಯ ವಿಶ್ವಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಅಗ್ರ 2 ಸ್ಥಾನ ಪಡೆಯಲು ಭಾರತಕ್ಕೆ ನಿರ್ಣಾಯಕವಾಗಿದೆ. ತಮ್ಮ ನಾಯಕತ್ವದಲ್ಲಿ 3ನೇ ಸರಣಿಯನ್ನಾಡಲಿರುವ ಗಿಲ್ ಈ ಪಂದ್ಯದಲ್ಲಿ ಹಲವು ದಾಖಲೆಗಳನ್ನ ಬ್ರೇಕ್ ಮಾಡಲಿದ್ದಾರೆ.
ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಬಲ ತುಂಬಲು ಬಂದ ಆಸೀಸ್ ಮಾಜಿ ದಿಗ್ಗಜ
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026ರ ಆವೃತ್ತಿಗೂ ಮುನ್ನ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಮಹತ್ವದ ಹೆಜ್ಜೆ ಇಟ್ಟಿದೆ. ಆಸ್ಟ್ರೇಲಿಯಾ ತಂಡದ ಮಾಜಿ ದಿಗ್ಗಜ ನಾಯಕ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಬಲ ತುಂಬಲು ಬಂದಿದ್ದಾರೆ.
Team India: ರೋಹಿತ್ ಶರ್ಮಾ ಅಭಿಮಾನಿಗಳಿಗೆ ಶಾಕ್ ಕೊಟ್ಟ ಮುಂಬೈ ಕ್ರಿಕೆಟ್ ಅಸೋಸಿಯೇಷನ್!
ಭಾರತ ಪರ ಆಡಲು ಬಯಸಿದರೆ ದೇಶೀಯ ಕ್ರಿಕೆಟ್ ಆಡಲೇಬೇಕು ಎಂದು ಬಿಸಿಸಿಐ ಮತ್ತು ತಂಡದ ಮ್ಯಾನೇಜ್ಮೆಂಟ್ ಇಬ್ಬರಿಗೂ ತಿಳಿಸಿದೆ. ಇಬ್ಬರೂ ಟೆಸ್ಟ್- ಟಿ20 ಎರಡು ಸ್ವರೂಪಗಳಿಂದ ನಿವೃತ್ತರಾಗಿರುವುದರಿಂದ, ಅವರು ಮತ್ತೆ ಫಿಟ್ನೆಸ್ ಪಡೆಯಲು ದೇಶೀಯ ಕ್ರಿಕೆಟ್ ಆಡಬೇಕಾಗುತ್ತದೆ.
Team India: ಟಿ20 ವಿಶ್ವಕಪ್ಗೂ ಮುನ್ನ ಭಾರತಕ್ಕೆ ಆನೆಬಲ! ಸ್ಟಾರ್ ಪ್ಲೇಯರ್ ಕಮ್ಬ್ಯಾಕ್ ಖಚಿತ
2026ರ ಟಿ 20 ವಿಶ್ವಕಪ್ನಲ್ಲಿ ಭಾರತ ತನ್ನ ಪ್ರಶಸ್ತಿಯನ್ನು ಉಳಿಸಿಕೊಳ್ಳಲು ತಯಾರಿ ನಡೆಸುತ್ತಿದೆ. ಈ ಮೆಗಾ ಟೂರ್ನಮೆಂಟ್ಗೆ ತಯಾರಿ ನಡೆಸಲು ಮೆನ್ ಇನ್ ಬ್ಲೂ ಹಲವಾರು ವೈಟ್-ಬಾಲ್ ಸರಣಿಗಳ ಮೂಲಕ ಭರ್ಜರಿ ತಯಾರಿ ನಡೆಸುತ್ತಿದೆ.
ಶ್ರೀಲಂಕಾ ಆಟಗಾರರ ಬೆದರಿಕೆ ಮಣಿದ ಪಾಕಿಸ್ತಾನ! ಸಂಪೂರ್ಣ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಿದ ಪಿಸಿಬಿ
ನವೆಂಬರ್ 29 ರಂದು ನಡೆಯುವ ಫೈನಲ್ ಪಂದ್ಯ ಸೇರಿದಂತೆ ಐದು ಪಂದ್ಯಗಳನ್ನು ಲಾಹೋರ್ನಲ್ಲಿ ಆಯೋಜಿಸಲು ಮೂಲತಃ ನಿರ್ಧರಿಸಲಾಗಿತ್ತು, ಆದರೆ ಈಗ ಮೂರು ಮಂಡಳಿಗಳು ರಾವಲ್ಪಿಂಡಿಯಲ್ಲಿ ಮಾತ್ರ ಪಂದ್ಯಗಳನ್ನು ಆಯೋಜಿಸಲು ಒಪ್ಪಿಕೊಂಡಿವೆ ಎಂದು ಪಿಸಿಬಿ ಹೇಳಿಕೆಯಲ್ಲಿ ತಿಳಿಸಿದೆ.
ಲಖನೌ- ಮುಂಬೈ ನಡುವೆ ಟ್ರೇಡಿಂಗ್ ಸಕ್ಸಸ್? ಮಿನಿ ಹರಾಜಿಗೂ ಮುನ್ನ 2 ತಂಡಗಳ ನಡುವೆ ಆಟಗಾರರ ಅದಲು ಬದಲು!
ಐಪಿಎಲ್ ಟ್ರೇಡ್ ಪ್ರೋಟೋಕಾಲ್ಗಳ ಪ್ರಕಾರ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಯಾವುದೇ ಆಟಗಾರರ ವರ್ಗಾವಣೆಯನ್ನು ಔಪಚಾರಿಕವಾಗಿ ಅನುಮೋದಿಸಿ ಬಹಿರಂಗಪಡಿಸಬೇಕಾಗುತ್ತದೆ. ಆದಾಗ್ಯೂ, ಮುಂಬೈ ಕ್ರಿಕೆಟ್ ಸರ್ಕ್ಯೂಟ್ನ ಮೂಲಗಳು ಕಳೆದ ಕೆಲವು ವಾರಗಳಿಂದ ಮುಂಬೈ ಮತ್ತು ಎಲ್ಎಸ್ಜಿ ಈ ವಿಚಾರವಾಗಿ ಚರ್ಚೆ ನಡೆಸಿವೆ ಎಂದು ತಿಳಿದುಬಂದಿದೆ.
IND vs SA: ಭಾರತ ಟೆಸ್ಟ್ ತಂಡದಿಂದ ಸ್ಟಾರ್ ಆಟಗಾರನ ಕೈಬಿಟ್ಟ ಬಿಸಿಸಿಐ!
ನವೆಂಬರ್ 14 ರಿಂದ ಆರಂಭವಾಗಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೂ ಮುನ್ನ ಬಿಸಿಸಿಐ ಭಾರತ ತಂಡದಿಂದ ಸ್ಟಾರ್ ಆಟಗಾರನನ್ನು ಬಿಡುಗಡೆ ಮಾಡಿದೆ.
ಇಂಗ್ಲೆಂಡ್ ವಿರುದ್ಧ ಆಶಸ್ ಟೆಸ್ಟ್ ಸರಣಿ ಆರಂಭಕ್ಕೂ ಮುನ್ನ ಆಸ್ಟ್ರೇಲಿಯಾ ತಂಡಕ್ಕೆ ಡಬಲ್ ಶಾಕ್!
ಇಂಗ್ಲೆಂಡ್ ವಿರುದ್ಧ ಐದು ಪಂದ್ಯಗಳ ಆಶಸ್ ಟೆಸ್ಟ್ ಸರಣಿ ಆರಂಭಕ್ಕೂ ಮುನ್ನ ಆಸ್ಟ್ರೇಲಿಯಾ ತಂಡ ಡಬಲ್ ಶಾಕ್ ಎದುರಿಸಿದೆ.
ಬ್ಯಾಟಿಂಗ್ ನಲ್ಲಿ ಅಗ್ರ ಸ್ಥಾನ ಉಳಿಸಿಕೊಂಡ ರೋಹಿತ್: ಐಸಿಸಿ ಏಕದಿನ ರ್ಯಾಂಕಿಂಗ್ಸ್
ರೋಹಿತ್ ಶರ್ಮಾ | Photo Credit : PTI ದುಬೈ, ನ. 12: ಭಾರತದ ರೋಹಿತ್ ಶರ್ಮಾ ಬುಧವಾರ ಬಿಡುಗಡೆಗೊಂಡ ನೂತನ ಪುರುಷರ ಐಸಿಸಿ ಏಕದಿನ ರ್ಯಾಂಕಿಂಗ್ಸ್ ನಲ್ಲಿ ಬ್ಯಾಟಿಂಂಗ್ ವಿಭಾಗದಲ್ಲಿ ಅಗ್ರ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಬ್ಯಾಟಿಂಗ್ ವಿಭಾಗದಲ್ಲಿ ಭಾರತೀಯ ತಂಡದ ನಾಯಕ ಶುಭಮನ್ ಗಿಲ್ ತನ್ನ ನಾಲ್ಕನೇ ಸ್ಥಾನವನ್ನು ಉಳಿಸಿಕೊಂಡಿದ್ದರೆ, ವಿರಾಟ್ ಕೊಹ್ಲಿ ಐದನೇ ಸ್ಥಾನಕ್ಕೆ ಏರಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಇಂಗ್ಲೆಂಡ್ನ ಜೋಫ್ರಾ ಆರ್ಚರ್ ಎರಡನೇ ಸ್ಥಾನಕ್ಕೆ ಏರಿದ್ದಾರೆ. ಆ ಮೂಲಕ ಅವರು ದಕ್ಷಿಣ ಆಫ್ರಿಕಾದ ಕೇಶವ ಮಹಾರಾಜ್ ರನ್ನು ಮೂರನೇ ಸ್ಥಾನಕ್ಕೆ ತಳ್ಳಿದ್ದಾರೆ. ಆಲ್ರೌಂಡರ್ ವಿಭಾಗದಲ್ಲಿ ಶ್ರೀಲಂಕಾದ ವನಿಂದು ಹಸರಂಗ ತನ್ನ 10ನೇ ಸ್ಥಾನವನ್ನು ಉಳಿಸಿಕೊಂಡಿದ್ದಾರೆ.
ಆರ್ಸಿಬಿಯ ತವರು ಪಂದ್ಯಗಳು ಪುಣೆಗೆ ಸ್ಥಳಾಂತರ?
Photo Credit : PTI ಬೆಂಗಳೂರು, ನ. 12: 2026ರ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯಾವಳಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡವು ತನ್ನೆಲ್ಲಾ ತವರು ಪಂದ್ಯಗಳನ್ನು ಪುಣೆಯಲ್ಲಿ ಆಡುವ ಸಾಧ್ಯತೆಯಿದೆ. ಜೂನ್ 4ರಂದು ಆರ್ಸಿಬಿಯ ವಿಜಯ ಯಾತ್ರೆಯ ವೇಳೆ ನಡೆದ ಭೀಕರ ಕಾಲ್ತುಳಿತದಲ್ಲಿ 12 ಮಂದಿ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಈಗ ಅಮಾನತಿನಲ್ಲಿದೆ. ಹಾಗಾಗಿ, ಅಲ್ಲಿ ಪಂದ್ಯಗಳು ನಡೆಯುವುದಿಲ್ಲ. ಕಾಲ್ತುಳಿತ ಘಟನೆಯ ಬಳಿಕ ಈ ಮೈದಾನದಲ್ಲಿ ಪಂದ್ಯಗಳನ್ನು ನಡೆಸಲು ಅಧಿಕಾರಿಗಳು ಅನುಮೋದನೆ ನೀಡಿಲ್ಲ. ಹಾಗಾಗಿ, 2026ರಲ್ಲಿ ನಡೆಯಲಿರುವ ಐಸಿಸಿ ಪುರುಷರ ಟಿ20 ವಿಶ್ವಕಪ್ ನ ಪಂದ್ಯಗಳಿಗಾಗಿಯೂ ಚಿನ್ನಸ್ವಾಮಿ ಸ್ಟೇಡಿಯಂಯನ್ನು ಪರಿಗಣಿಸಲಾಗಿಲ್ಲ. ‘‘ಚಿನ್ನಾಸ್ವಾಮಿ ಕ್ರೀಡಾಂಗಣಕ್ಕೆ ಸಂಬಂಧಿಸಿ ಹಲವಾರು ಅನಿಶ್ಚಿತತೆಗಳಿವೆ. ಅದು ತನ್ನ ವಿನ್ಯಾಸವನ್ನು ಮರುಪರಿಶೀಲಿಸಬೇಕಾಗಿದೆ. ಸರಕಾರಿ ಅಧಿಕಾರಿಗಳು ಇದರ ಬಗ್ಗೆ ಪರಿಶೀಲನೆ ನಡೆಸಬೇಕಾಗಿದೆ. ಹಾಗಾಗಿ ಈ ಮೈದಾನವನ್ನು ಪರಿಗಣಿಸಲಾಗಿಲ್ಲ’’ ಎಂದು ಐಸಿಸಿ ಮೂಲವೊಂದು ಹೇಳಿದೆ. ಐಪಿಎಲ್ನಲ್ಲಿ ಪ್ರತಿ ವರ್ಷ ಎಮ್. ಚಿನ್ನಾಸ್ವಾಮಿ ಸ್ಟೇಡಿಯಂನಲ್ಲಿ ಆರ್ಸಿಬಿಯ ಏಳು ಲೀಗ್ ಪಂದ್ಯಗಳು ನಡೆಯುತ್ತವೆ. ಇದಕ್ಕೆ ಹೆಚ್ಚುವರಿಯಾಗಿ 2014 ಮತ್ತು 2016ರಲ್ಲಿ ಐಪಿಎಲ್ ಫೈನಲ್ ಕೂಡ ನಡೆದಿತ್ತು. ಆರ್ಸಿಬಿಯ ತವರು ಪಂದ್ಯಗಳನ್ನು ಪುಣೆಯಲ್ಲಿ ನಡೆಸುವ ಬಗ್ಗೆ ಈಗ ಮಾತುಕತೆಗಳು ನಡೆಯುತ್ತಿವೆ ಎಂದು ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್ (ಎಮ್ಸಿಎ) ಕಾರ್ಯದರ್ಶಿ ಕಮಲೇಶ್ ಪಿಸಲ್ ಹೇಳಿದ್ದಾರೆ. ‘‘ಈ ಬಗ್ಗೆ ಮಾತುಕತೆಗಳು ನಡೆಯುತ್ತಿವೆ, ಆದರೆ ಯಾವುದೂ ಅಂತಿಮಗೊಂಡಿಲ್ಲ. ಕಾಲ್ತುಳಿತ ಸಂಭವಿಸಿದ ಹಿನ್ನೆಲೆಯಲ್ಲಿ ಅವರಿಗೆ ಕರ್ನಾಟಕದಲ್ಲಿ ಸಮಸ್ಯೆಯಿದೆ. ಹಾಗಾಗಿ, ಅವರು ಮೈದಾನಕ್ಕಾಗಿ ಹುಡುಕಾಡುತ್ತಿದ್ದಾರೆ. ನಮ್ಮ ಸ್ಟೇಡಿಯಮನ್ನು ನಾವು ಅವರಿಗೆ ಕೊಡಲು ಮುಂದೆ ಬಂದಿದ್ದೇವೆ. ಪ್ರಾಥಮಿಕ ಮಾತುಕತೆಗಳು ನಡೆದಿವೆ ಮತ್ತು ಕೆಲವು ತಾಂತ್ರಿಕ ಸಮಸ್ಯೆಗಳಿವೆ. ಅವುಗಳನ್ನು ಬಗೆಹರಿಸಬೇಕಾಗಿದೆ. ಎಲ್ಲವೂ ಸರಿಯಾಗಿ ನಡೆದರೆ ಆರ್ಸಿಬಿ ಪಂದ್ಯಗಳು ಪುಣೆಯಲ್ಲಿ ನಡೆಯುತ್ತವೆ’’ ಎಂದು ಅವರು ನುಡಿದರು.
ಮೊದಲ ಏಕದಿನ: ಶ್ರೀಲಂಕಾ ವಿರುದ್ಧ ಪಾಕಿಸ್ತಾನಕ್ಕೆ ರೋಚಕ ಜಯ
ಸಲ್ಮಾನ್ ಅಲಿ ಶತಕ, ರವೂಫ್ ಗೆ ನಾಲ್ಕು ವಿಕೆಟ್
ಆರ್ಸಿಬಿ ಮೂವರು ಆಲ್ರೌಂಡರ್ ಉಳಿಸಿಕೊಳ್ಳೋದು ಪಕ್ಕಾ; ಮುಂದಿನ ಸಲನೂ ಕಪ್ ನಮ್ದೇ ಎಂದ ಫ್ಯಾನ್ಸ್
ಐಪಿಎಲ್ 2025 ರಲ್ಲಿ ಚೊಚ್ಚಲ ಪ್ರಶಸ್ತಿಯನ್ನು ಗೆಲ್ಲವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ಇತಿಹಾಸ ಸೃಷ್ಟಿಸಿತ್ತು. ಇದೀಗ ಮುಂಬರುವ ಆವೃತ್ತಿಗೂ ಟ್ರೋಫಿ ಉಳಿಸಿಕೊಳ್ಳಲು ಆರ್ಸಿಬಿ ಮಾಸ್ಟರ್ ಪ್ಲಾನ್ ಮಾಡುತ್ತಿದೆ.
ವಿಶ್ವಚಾಂಪಿಯನ್ ಗೆದ್ದ ಬಳಿಕ ಗುಕೇಶ್ ಆಟದಲ್ಲಿ ಹಿನ್ನಡೆ ಅನುಭವಿಸುತ್ತಿರುವುದೇಕೆ? ಕೋಚ್ ಹೇಳಿದ್ದೇನು?
2025 ರಲ್ಲಿ ವಿಜ್ಕ್ ಆನ್ ಜೀಯಲ್ಲಿ ನಡೆದ ಟಾಟಾ ಸ್ಟೀಲ್ ಚೆಸ್ ಟೂರ್ನಮೆಂಟ್ನಲ್ಲಿ ಅವರು ಪ್ರಶಸ್ತಿಯನ್ನ ಗೆಲ್ಲುವ ಕೊನೆಯ ಹಂತಕ್ಕೆ ಬಂದು ಎಡವಿದ್ದು ಅವರ ಅಭಿಮಾನಿಗಳಲ್ಲಿ ಭಾರಿ ನಿರಾಸೆಯನ್ನು ಮೂಡಿಸಿದೆ.
ಭಾರತ- ದಕ್ಷಿಣ ಆಫ್ರಿಕಾ ನಡುವೆ ಹೈವೋಲ್ಟೇಜ್ ಕದನ! ಸ್ಟೇಡಿಯಂ ಸುತ್ತಾ ಹೈ ಅಲರ್ಟ್?
ಕೋಲ್ಕತ್ತಾದ ಈಡನ್ ಗಾರ್ಡನ್ಸ್ನಲ್ಲಿ ನವೆಂಬರ್ 14 ರಿಂದ ಆರಂಭವಾಗಲಿರುವ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೊದಲ ಟೆಸ್ಟ್ ಪಂದ್ಯಕ್ಕೆ ಭದ್ರತೆಯನ್ನು ಹೆಚ್ಚಿಸಲಾಗಿದೆ.
ಕಾಲ್ಬೆರಳುಗಳಿಂದಲೇ ಬಾಣ ಬಿಟ್ಟು ವಿಶ್ವ ಮಟ್ಟದಲ್ಲಿ ಭಾರತದ ಹೆಸರನ್ನು ರಾರಾಜಿಸಿದ್ದಾಳೆ ಈ ಬಿಲ್ಲುಗಾರ್ತಿ
ಎಡರೂ ಕೈಗಳಿಲ್ಲದೇ ಜನಿಸಿದ ಈಕೆ, ಕ್ರೀಡಾಲೋಕದಲ್ಲಿ ಮಾಡಿದ ಸಾಧನೆ ದೊಡ್ಡದು. ಕೈ ಇಲ್ಲದಿದ್ರೆ ಏನಾಯ್ತು, ಕಾಲಿದೆಯೆಲ್ಲಾ ಅಂತಾ ಅವುಗಳನ್ನೇ ತನ್ನ ಕೈ ಎಂದು ಭಾವಿಸಿ, ಇಂದು ಬಿಲ್ಲುಗಾರಿಕೆಯಲ್ಲಿ ಭಾರತದ ಹೆಸರನ್ನು ವಿಶ್ವಮಟ್ಟದಲ್ಲಿ ಜನಪ್ರಿಯಗೊಳಿಸಿದ್ದಾಳೆ.
ಸಿಎಸ್ಕೆ ಸೇರುವ ಮುನ್ನ ಜಡೇಜಾ ಯಾವೆಲ್ಲಾ ಫ್ರಾಂಚೈಸಿಗಳ ಪರ ಆಡಿದ್ರು ಗೊತ್ತಾ?
ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸೇರುವ ಮುನ್ನ ರವೀಂದ್ರ ಜಡೇಜಾ ಹಲವು ಫ್ರಾಂಚೈಸಿಗಳ ಪರ ಆಡಿದ್ದಾರೆ. ಈ ಕುರಿತು ಮಾಹಿತಿ ಇಲ್ಲಿದೆ.
IND vs SA: ಭಾರತ vs ದಕ್ಷಿಣ ಆಫ್ರಿಕಾ ಮುಖಾಮುಖಿಯಲ್ಲಿ ಹೆಚ್ಚು ರನ್ಗಳಿಸಿದ ಟಾಪ್ 8 ಬ್ಯಾಟರ್ಸ್ ಇವರು!
ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ 2 ಪಂದ್ಯಗಳ ಟೆಸ್ಟ್ ಸರಣಿ ನವೆಂಬರ್ 14 ರಿಂದ ಕೋಲ್ಕತ್ತಾದ ಈಡೆನ್ ಗಾರ್ಡನ್ ಮೈದಾನದಲ್ಲಿನ ನಡೆಯಲಿದೆ. ಈ ಸರಣಿಗೂ ಮುನ್ನ ಎರಡು ದೇಶಗಳ ಟೆಸ್ಟ್ ಮುಖಾಮುಖಿಯಲ್ಲಿ ಅತಿ ಹೆಚ್ಚು ರನ್ಗಳಿಸಿದ ಟಾಪ್ ಬ್ಯಾಟರ್ ಯಾರೆಂಬುದನ್ನ ಈ ಸುದ್ದಿಯಲ್ಲಿ ತಿಳಿಯೋಣ.
ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಪಂದ್ಯಗಳಲ್ಲಿ ಹೆಚ್ಚು ಸೆಂಚುರಿ ಸಿಡಿಸಿದ ಭಾರತೀಯ ಯಾರು?
ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟೆಸ್ಟ್ ಸರಣಿ ನವೆಂಬರ್ 14ರಿಂದ ಆರಂಭವಾಗಲಿದೆ. ಇದಕ್ಕೂ ಮುನ್ನ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ಟಾಪ್ -5 ಭಾರತೀಯರು ಯಾರೆಂದು ನೋಡೋಣ
IPL 2026: ಆರ್ಸಿಬಿ ಅಭಿಮಾನಿಗಳಿಗೆ ಬಿಗ್ ಶಾಕ್ ಕೊಟ್ಟ ಬಿಸಿಸಿಐ!
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡದ ತವರು ಪಂದ್ಯಗಳು ಎಂ ಚಿನ್ನಸ್ವಾಮಿ ಕ್ರೀಡಾಂಗಣದಿಂದ ಬೇರೆ ಕಡೆಗೆ ಸ್ಥಳಾಂತರವಾಗುತ್ತಿವೆ.
Test Cricket: ಭಾರತದಲ್ಲಿ ಅತಿ ಹೆಚ್ಚು ಟೆಸ್ಟ್ ಪಂದ್ಯಗಳಿಗೆ ಆತಿಥ್ಯವಹಿಸಿದ ಸ್ಟೇಡಿಯಂ ಯಾವುದು ಗೊತ್ತಾ?
ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾ ವಿರುದ್ಧ ಈಡನ್ ಗಾರ್ಡನ್ನಲ್ಲಿ ಟೆಸ್ಟ್ ಸರಣಿಯನ್ನ ಆರಂಭಿಸಲಿದೆ. ಈ ಸುದ್ದಿಯಲ್ಲಿ ಟೀಮ್ ಇಂಡಿಯಾ ಯಾವ ಐದು ಮೈದಾನಗಳಲ್ಲಿ ಅತಿ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಆಡಿದೆ? ಎಂಬುದನ್ನ ತಿಳಿದುಕೊಳ್ಳೋಣ.
ಅತ್ಯುತ್ತಮ ಫಾರ್ಮ್ನಲ್ಲಿರುವ ಆಯುಷ್, ವೈಭವ್ ಸೂರ್ಯವಂಶಿಯ್ನ ಭಾರತ U19 ತಂಡದಿಂದ ಕೈಬಿಟ್ಟಿದ್ದೇಕೆ?
ವೈಭವ್ ಸೂರ್ಯವಂಶಿ ಅಫ್ಘಾನಿಸ್ತಾನದೊಂದಿಗಿನ ತ್ರಿಕೋನ ಸರಣಿಯ ಭಾಗವಾಗುವುದು ಸಹಜ ಎಂಬ ಅಭಿಪ್ರಾಯಗಳಿದ್ದವು. ಅಂತಹ ಸಮಯದಲ್ಲಿ, ಈ ಸರಣಿಯನ್ನು ಆಡುವ ಎರಡು ಭಾರತೀಯ ತಂಡಗಳಲ್ಲಿ ವೈಭವ್ ಅವರ ಹೆಸರು ಇಲ್ಲದಿರುವುದು ಆಶ್ಚರ್ಯಕರವಾಗಿತ್ತು. ಅದೇ ರೀತಿ, ಆಯ್ಕೆದಾರರು ಸರಣಿಗೆ ನಾಯಕ ಆಯುಷ್ ಮ್ಹಾತ್ರೆ ಅವರನ್ನು ಆಯ್ಕೆ ಮಾಡಿಲ್ಲ.
ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗೆ ಪಂತ್ ಕಮ್ಬ್ಯಾಕ್! ಆ ಒಂದು ಸ್ಥಾನಕ್ಕೆ ಮೂವರಿಂದ ಪೈಪೋಟಿ
ದಕ್ಷಿಣ ಆಫ್ರಿಕಾ ಈ ಪ್ರವಾಸವನ್ನು ಮೊದಲು ಟೆಸ್ಟ್ ಸರಣಿಯೊಂದಿಗೆ ಪ್ರಾರಂಭಿಸಲಿದೆ. ಮೊದಲ ಟೆಸ್ಟ್ ನವೆಂಬರ್ 14 ರಿಂದ ಆರಂಭವಾಗಲಿದೆ. ಈ ಟೆಸ್ಟ್ ಪಂದ್ಯವು ಕೋಲ್ಕತ್ತಾದ ಈಡನ್ ಗಾರ್ಡನ್ಸ್ನಲ್ಲಿ ನಡೆಯಲಿದೆ.
ಸೈಲೆಂಟ್ ಆಗಿ ಎರಡನೇ ಮದುವೆಯಾದ ಖ್ಯಾತ ಕ್ರಿಕೆಟಿಗ! ಫೋಟೋ ವೈರಲ್ ಆಗ್ತಿದ್ದಂತೆ ಇನ್ಸ್ಟಾದಲ್ಲಿ ಸ್ಪಷ್ಟನೆ!
ತನ್ನ ಬಗ್ಗೆ ಊಹಾಪೋಹಗಳು ಹೆಚ್ಚಾಗುತ್ತಿದ್ದಂತೆ, ಸ್ವತಃ ಅವರೇ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಹಾಕಿದ್ದು, ಚಿತ್ರದಲ್ಲಿರುವ ಮಹಿಳೆ ನಿಜವಾಗಿಯೂ ತನ್ನ ಪತ್ನಿ ಎಂದು ಸ್ಪಷ್ಟಪಡಿಸಿದ್ದಾರೆ.
ಬಿಸಿಸಿಐ ಆದೇಶಕ್ಕೆ ತಲೆಬಾಗಿಸಿದ ರೋಹಿತ್! ದಕ್ಷಿಣ ಆಫ್ರಿಕಾ ಸರಣಿಗೂ ಮುನ್ನ ಹಿಟ್ಮ್ಯಾನ್ ಮಹತ್ವದ ನಿರ್ಧಾರ
ಟೆಸ್ಟ್ ಮತ್ತು ಟಿ20 ಅಂತಾರಾಷ್ಟ್ರೀಯ ಪಂದ್ಯಗಳಿಂದ ನಿವೃತ್ತರಾದ ನಂತರ, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಕೇವಲ ಏಕದಿನ ಕ್ರಿಕೆಟ್ ಆಡುತ್ತಾರೆ. ಹೀಗಾಗಿ, ಅವರ ಪಂದ್ಯ ಫಿಟ್ನೆಸ್ ಪ್ರಮುಖ ಸಮಸ್ಯೆಯಾಗಿದೆ.
ಯಶಸ್ವಿ ಜೈಸ್ವಾಲ್ ಅಲ್ಲ, ಧ್ರುವ್ ಜುರೆಲ್ ಕೂಡ ಅಲ್ಲ! 36 ವರ್ಷದ ಸ್ಟಾರ್ ಪ್ಲೇಯರ್ ರಾಜಸ್ಥಾನ್ ಕ್ಯಾಪ್ಟನ್
ವರದಿಗಳ ಪ್ರಕಾರ, ರಾಜಸ್ಥಾನ್ ರಾಯಲ್ಸ್ ತಂಡವು ತೆಗೆದುಕೊಳ್ಳಲಿರುವ ದೊಡ್ಡ ಬದಲಾವಣೆಯೆಂದರೆ, ಅವರ ಸ್ಟಾರ್ ಮ್ಯಾನ್ ಮತ್ತು ನಾಯಕ ಸಂಜು ಸ್ಯಾಮ್ಸನ್ ಅವರನ್ನು ಎಲ್ಲಾ ರೀತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ಗೆ ಬಿಟ್ಟುಕೊಡುವುದು. ಇದರರ್ಥ ಈ ತಂಡಗಳು ಈಗ ಹೊಸ ನಾಯಕನನ್ನು ಹುಡುಕುತ್ತಿದ್ದಾರೆ.
ಕೊಹ್ಲಿಯವರ ಅನಪೇಕ್ಷಿತ ದಾಖಲೆ ಸರಿಗಟ್ಟಿದ ಬಾಬರ್ ಅಝಂ
PC | ndtv ರಾವಲ್ಪಿಂಡಿ: ಸತತವಾಗಿ ಅತಿಹೆಚ್ಚು ಇನಿಂಗ್ಸ್ ಗಳಲ್ಲಿ ಶತಕ ಗಳಿಸಲಾಗದೇ ಔಟ್ ಆದ ಅನಪೇಕ್ಷಿತ ದಾಖಲೆಯ ಪಟ್ಟಿಯಲ್ಲಿ ಪಾಕಿಸ್ತಾನದ ಸ್ಟಾರ್ ಬ್ಯಾಟ್ಸ್ ಮನ್ ಬಾಬರ್ ಅಝಂ ಅವರು ಭಾರತದ ವಿರಾಟ್ ಕೊಹ್ಲಿಯವರ ದಾಖಲೆಯನ್ನು ಸರಿಗಟ್ಟಿದ್ದಾರೆ. ಮಂಗಳವಾರ ನಡೆದ ಶ್ರೀಲಂಕಾ ವಿರುದ್ಧದ ಪ್ರಥಮ ಏಕದಿನ ಪಂದ್ಯದ 24ನೇ ಓವರ್ ನಲ್ಲಿ ಔಟ್ ಆಗುವ ಮೂಲಕ ಅಝಂ ಸತತ 83 ಇನಿಂಗ್ಸ್ ಗಳಲ್ಲಿ ಶತಕ ಸಾಧಿಸಲಾಗದ ಕುಖ್ಯಾತಿಗೆ ಪಾತ್ರರಾದರು. ಅಝಂ ಈ ಪಂದ್ಯದಲ್ಲಿ 51 ಎಸೆತಗಳಲ್ಲಿ ಕೇವಲ 29 ರನ್ ಬಾರಿಸಿ ನಿರಾಶೆ ಮೂಡಿಸಿದರು. ಶ್ರೀಲಂಕಾದ ಸ್ಪಿನ್ನರ್ ವನಿಂದು ಹಸರಂಗ ಅವರ ನಿಬ್ಬೆರಗಾಗಿಸುವ ಎಸೆತದಲ್ಲಿ ಅಝಂ ವಿಕೆಟ್ ಒಪ್ಪಿಸಿದರು. ಆಫ್ಸ್ಟಂಪ್ ಆಚೆಗೆ ಲ್ಯಾಂಡ್ ಆದ ಚೆಂಡು ಯಾರೂ ನಿರೀಕ್ಷಿದಷ್ಟು ಸ್ಪಿನ್ ಆಗಿ ಬಾಬರ್ ಅವರ ರಕ್ಷಣಾ ಕೋಟೆಯನ್ನು ಭೇದಿಸಿ ಸ್ಟಂಪ್ ಚದುರಿಸಿತು. ಶ್ರೀಲಂಕಾ ಕೋಚ್ ಸನತ್ ಜಯಸೂರ್ಯ ಕೂಡಾ ಸ್ಪಿನ್ ಮೋಡಿಗೆ ರೋಮಾಂಚನಗೊಂಡಿದ್ದ, ಅವರ ಪ್ರತಿಕ್ರಿಯೆ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬಾಬರ್ 2023ರ ಏಷ್ಯಾಕಪ್ನಲ್ಲಿ ನೇಪಾಳ ವಿರುದ್ಧ ಮೂರಂಕಿಯ ಸ್ಕೋರ್ ದಾಖಲಿಸಿದ ಬಳಿಕ 83 ಇನಿಂಗ್ಸ್ ಗಳಲ್ಲಿ ಶತಕ ಸಾಧಿಸುವುದು ಸಾಧ್ಯವಾಗಿಲ್ಲ. ಏಷ್ಯಾದ ಬ್ಯಾಟ್ಸ್ ಮನ್ ಗಳ ಪೈಕಿ 88 ಇನಿಂಗ್ಸ್ ಗಳೊಂದಿಗೆ ಸನತ್ ಜಯಸೂರ್ಯ ಅಗ್ರಸ್ಥಾನದಲ್ಲಿದ್ದಾರೆ.
2026ರ ಐಪಿಎಲ್ ಹರಾಜು ಅಬುಧಾಬಿಯಲ್ಲಿ
ಮುಂಬೈ, ನ. 11: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026ರ ಆವೃತ್ತಿಯ ಆಟಗಾರರ ಮೆಗಾ ಹರಾಜು ಡಿಸೆಂಬರ್ 14 ಮತ್ತು 17ರ ನಡುವೆ ಅಬುಧಾಬಿಯಲ್ಲಿ ನಡೆಯಲಿದೆ. ಐಪಿಎಲ್ ಆಟಗಾರರ ಹರಾಜು ಭಾರತದಿಂದ ಹೊರಗೆ ನಡೆಯುತ್ತಿರುವುದು ಇದು ಸತತ ಮೂರನೇ ಬಾರಿಯಾಗಿದೆ. 2024ರ ಹರಾಜು ದುಬೈಯಲ್ಲಿ ನಡೆದರೆ, 2025ರ ಹರಾಜು ಸೌದಿ ಅರೇಬಿಯದ ಜಿದ್ದಾದಲ್ಲಿ ನಡೆದಿತ್ತು. ಹತ್ತು ಐಪಿಎಲ್ ತಂಡಗಳು ತಾವು ಉಳಿಸಿಕೊಳ್ಳುವ ಆಟಗಾರರ ಪಟ್ಟಿಯನ್ನು ನವೆಂಬರ್ 15ರೊಳಗೆ ಸಿದ್ಧಪಡಿಸಬೇಕಾಗಿದೆ.
2026ರ ವಿಶ್ವಕಪ್ ಕೊನೆಯದು: ರೊನಾಲ್ಡೊ
ಹೊಸದಿಲ್ಲಿ, ನ. 11: ನಾನು ಕ್ರೀಡಾ ಬದುಕಿನ ಕೊನೆಯನ್ನು ತಲುಪಿದ್ದು, 2026ರ ಫಿಫಾ ವಿಶ್ವಕಪ್ ನನ್ನ ಕೊನೆಯ ವಿಶ್ವಕಪ್ ಆಗಲಿದೆ ಎಂದು ಪೋರ್ಚುಗಲ್ ಫುಟ್ಬಾಲ್ ತಾರೆ ಕ್ರಿಸ್ಟಿಯಾನೊ ರೊನಾಲ್ಡೊ ಮಂಗಳವಾರ ಘೋಷಿಸಿದ್ದಾರೆ. ನೀವು ವಿಶ್ವಕಪ್ಗೆ ಯಾವಾಗ ವಿದಾಯ ಹೇಳುವಿರಿ? ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ರೊನಾಲ್ಡೊ, ‘‘ಶೀಘ್ರವೇ’’ ಎಂದರು. ‘‘ನನಗೆ ‘ಶೀಘ್ರ’ ಎಂದರೆ 10 ವರ್ಷಗಳು’’ ಎಂದು ಅವರು ಮತ್ತೆ ಹೇಳಿದರಾದರೂ, ‘‘ಇಲ್ಲ, ನಾನು ಹಾಸ್ಯ ಮಾಡುತ್ತಿದ್ದೇನೆ’’ ಎಂದರು. ‘‘ನನಗೆ 41 ವರ್ಷ ಆಗುತ್ತಿದೆ. ಇದು ಸರಿಯಾದ ಸಮಯ ಎಂದು ನನಗನಿಸುತ್ತದೆ’’ ಎಂದರು. ಫುಟ್ಬಾಲ್ ದಿಗ್ಗಜ ರೊನಾಲ್ಡೊ ಕ್ಲಬ್ ಗಳು ಮತ್ತು ದೇಶಕ್ಕಾಗಿ 950ಕ್ಕೂ ಅಧಿಕ ಗೋಲುಗಳನ್ನು ಬಾರಿಸಿದ್ದಾರೆ. ಅವರು 2002ರಲ್ಲಿ ಸ್ಪೋರ್ಟಿಂಗ್ ಸಿಪಿ ಕ್ಲಬ್ ಮೂಲಕ ತನ್ನ ಕ್ರೀಡಾ ಜೀವನ ಆರಂಭಿಸಿದರು. ಅವರು ಈಗ ಸೌದಿ ಅರೇಬಿಯದ ಅಲ್-ನಸ್ರ್ ಕ್ಲಬ್ ಪರವಾಗಿ ಆಡುತ್ತಿದ್ದಾರೆ. ‘‘ಈ ಕ್ಷಣದಲ್ಲಿ ನಾನು ಅತ್ಯುತ್ತಮವಾಗಿದ್ದೇನೆ ಎಂದು ನನಗನಿಸುತ್ತಿದೆ. ಈಗಲೂ ನಾನು ವೇಗ ಮತ್ತು ತೀಕ್ಷ್ಣತೆ ಹೊಂದಿದ್ದೇನೆ. ರಾಷ್ಟ್ರೀಯ ತಂಡದಲ್ಲಿ ಆಡುವುದನ್ನು ಆನಂದಿಸುತ್ತಿದ್ದೇನೆ. ಆದರೆ, ಪ್ರಾಮಾಣಿಕವಾಗಿ ಹೇಳಬೇಕೆಂದರೆ, ‘ಶೀಘ್ರವೇ’ ಎಂದರೆ ಇನ್ನು ಒಂದು ಅಥವಾ ಎರಡು ವರ್ಷಗಳು’’ ಎಂದರು. ರೊನಾಲ್ಡೊ ಅವರೀಗ 2026ರ ವಿಶ್ವಕಪ್ ಗೆ ಸಿದ್ಧತೆಗಳನ್ನು ನಡೆಸುತ್ತಿದ್ದಾರೆ.
ತ್ರಿಕೋನ ಸರಣಿ | ಭಾರತ ‘ಎ’, ‘ಬಿ’ ಅಂಡರ್- 19 ತಂಡಗಳು ಪ್ರಕಟ
ಹೊಸದಿಲ್ಲಿ, ನ.11: ಮುಂಬರುವ ಅಂಡರ್-19 ತ್ರಿಕೋನ ಸರಣಿಗಾಗಿ ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಮಂಗಳವಾರ ಭಾರತ ‘ಎ’ ಹಾಗೂ ಭಾರತ ‘ಬಿ’ ಅಂಡರ್-19 ತಂಡಗಳನ್ನು ಪ್ರಕಟಿಸಿದ್ದು, ಇದರಲ್ಲಿ ಅಫ್ಘಾನಿಸ್ತಾನ ಅಂಡರ್-19 ಮೂರನೇ ತಂಡವಾಗಿದೆ. ನವೆಂಬರ್ 17ರಂದು ಬೆಂಗಳೂರಿನ ಬಿಸಿಸಿಐ ಸಿಒಇನಲ್ಲಿ ಆರಂಭವಾಗಲಿರುವ ಪಂದ್ಯಾವಳಿಗೆ ಜೂನಿಯರ್ ಆಯ್ಕೆ ಸಮಿತಿಯು ತಂಡಗಳನ್ನು ಆಯ್ಕೆ ಮಾಡಿದೆ. ಆದರೆ ಯುವ ಬ್ಯಾಟಿಂಗ್ ಪ್ರತಿಭೆ ವೈಭವ ಸೂರ್ಯವಂಶಿ ತ್ರಿಕೋನ ಸರಣಿಯಲ್ಲಿ ಭಾರತದ ಎರಡೂ ತಂಡಗಳಲ್ಲಿ ಸ್ಥಾನ ಪಡೆದಿಲ್ಲ. ‘ವೈಭವ್ ಸೂರ್ಯವಂಶಿ ಅವರನ್ನು ಎಸಿಸಿ ರೈಸಿಂಗ್ ಸ್ಟಾರ್ಸ್ ಏಶ್ಯ ಕಪ್ಗೆ ಭಾರತ ‘ಎ’ ತಂಡಕ್ಕೆ ಆಯ್ಕೆ ಮಾಡಿರುವ ಹಿನ್ನೆಲೆಯಲ್ಲಿ ತ್ರಿಕೋನ ಸರಣಿಗೆ ಅವರನ್ನು ಪರಿಗಣಿಸಿಲ್ಲ’ ಎಂದು ಬಿಸಿಸಿಐ ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ. ಸೂರ್ಯವಂಶಿ ಈ ತಿಂಗಳಾಂತ್ಯದಲ್ಲಿ ದೋಹಾದಲ್ಲಿ ನಡೆಯಲಿರುವ ರೈಸಿಂಗ್ ಸ್ಟಾರ್ಸ್ ಏಶ್ಯ ಕಪ್ಗಾಗಿ ಜಿತೇಶ್ ಶರ್ಮಾ ನಾಯಕತ್ವದ ಭಾರತ ‘ಎ’ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಭಾರತ ‘ಎ’ ತಂಡವು ಒಮಾನ್, ಯುಎಇ ಹಾಗೂ ಪಾಕಿಸ್ತಾನ ‘ಎ’ ತಂಡಗಳೊಂದಿಗೆ ‘ಬಿ’ ಗುಂಪಿನಲ್ಲಿದೆ. ‘ಎ’ ಗುಂಪಿನಲ್ಲಿ ಬಾಂಗ್ಲಾದೇಶ ‘ಎ’, ಹಾಂಕಾಂಗ್, ಅಫ್ಘಾನಿಸ್ತಾನ ‘ಎ’ ಹಾಗೂ ಶ್ರೀಲಂಕಾ ‘ಎ’ ತಂಡಗಳಿದ್ದು, ಏಶ್ಯ ಕಪ್ ಟೂರ್ನಿಯು ನ.14ರಿಂದ 23ರ ತನಕ ನಡೆಯುವುದು. ತ್ರಿಕೋನ ಸರಣಿಯು ನ.17ರಂದು ಭಾರತದ ಅಂಡರ್-19 ‘ಎ’ ಹಾಗೂ ಭಾರತದ ಅಂಡರ್-19 ‘ಬಿ’ ತಂಡಗಳ ನಡುವಿನ ಪಂದ್ಯದ ಮೂಲಕ ಆರಂಭವಾಗಲಿದೆ. ತ್ರಿಕೋನ ಸರಣಿಯನ್ನು ಬೆಂಗಳೂರಿನ ಬಿಸಿಸಿಐನ ಸಿಒಇನಲ್ಲಿ ಆಡಲಾಗುತ್ತದೆ. ಭಾರತದ ಅಂಡರ್-19 ‘ಎ’ ತಂಡಕ್ಕೆ ವಿಹಾನ್ ಮಲ್ಹೋತ್ರಾ ನಾಯಕನಾಗಿದ್ದರೆ, ಅಭಿಜ್ಞಾ ಕುಂಡು ಉಪ ನಾಯಕ ಹಾಗೂ ವಿಕೆಟ್ಕೀಪರ್ ಆಗಿದ್ದಾರೆ. ಭಾರತದ ಅಂಡರ್-19 ‘ಬಿ’ ತಂಡಕ್ಕೆ ಆರೊನ್ ಜಾರ್ಜ್ ನಾಯಕನಾಗಿದ್ದು, ವೇದಾಂತ ತ್ರಿವೇದಿ ಉಪ ನಾಯಕನಾಗಿದ್ದಾರೆ. ಭಾರತದ ಅಂಡರ್-19 ‘ಎ’ ತಂಡ: ವಿಹಾನ್ ಮಲ್ಹೋತ್ರಾ(ನಾಯಕ), ಅಭಿಜ್ಞಾ ಕುಂಡು(ಉಪ ನಾಯಕ), ವಫಿ ಕಚ್ಚಿ, ವಂಶ್ ಆಚಾರ್ಯ, ವಿನೀತ್ ವಿ.ಕೆ., ಲಕ್ಷ್ಯ ರೈಚಂದಾನಿ, ಎ.ರಾಪೋಲ್, ಕಾನಿಷ್ಕ್ ಚೌಹಾಣ್, ಖಿಲನ್ ಎ. ಪಟೇಲ್, ಅನ್ಮೋಲ್ಜೀತ್ ಸಿಂಗ್, ಮುಹಮ್ಮದ್ ಎನಾನ್, ಹೆನಿಲ್ ಪಟೇಲ್, ಅಶುತೋಶ್ ಮಹಿದಾ, ಆದಿತ್ಯ ರಾವತ್. ಮುಹಮ್ಮದ್ ಮಲಿಕ್. ಭಾರತದ ಅಂಡರ್-19 ‘ಬಿ’ ತಂಡ: ಆ್ಯರೊನ್ ಜಾರ್ಜ್(ನಾಯಕ), ವೇದಾಂತ ತ್ರಿವೇದಿ(ಉಪ ನಾಯಕ), ಯುವರಾಜ್ ಗೊಹಿಲ್, ಮೌಲಿಯರಾಜ್ಸಿನ್ಹಾ ಚಾವ್ಡಾ, ರಾಹುಲ್ ಕುಮಾರ್, ಹರ್ವಂಶ್ ಸಿಂಗ್, ಅನ್ವಯ್ ದ್ರಾವಿಡ್, ಆರ್.ಎಸ್. ಅಂಬರೀಶ್, ಬಿ.ಕೆ. ಕಿಶೋರ್, ನಮನ್ ಪುಷ್ಪಕ್, ಹೇಮಚುಡೇಶನ್, ಉದ್ದವ್ ಮೋಹನ್, ಇಶಾನ್ ಸೂಡ್, ದೀಪೇಶ್, ರೋಹಿತ್ ದಾಸ್.

20 C