ಕಾಫಾ ನೇಷನ್ಸ್ ಕಪ್ | ಚೆಟ್ರಿ ಕೈ ಬಿಟ್ಟಿದ್ದಕ್ಕೆ ಸ್ಪಷ್ಟನೆ ನೀಡಿದ ಖಾಲಿದ್ ಜಮೀಲ್
ಅವರಿಗೆ ಬಾಗಿಲುಗಳು ಮುಕ್ತವಾಗಿ ತೆರೆದಿವೆ ಎಂದ ಭಾರತ ತಂಡದ ಮುಖ್ಯ ಕೋಚ್
ಏಶ್ಯ ಕಪ್: ಭಾರತೀಯ ತಂಡದ ಆಯ್ಕೆಗೆ ಬುಮ್ರಾ ಲಭ್ಯ
ಜಸ್ಪ್ರೀತ್ ಬುಮ್ರಾ | PTI ಮುಂಬೈ, ಆ. 17: ಮುಂಬರುವ ಏಶ್ಯ ಕಪ್ ಕ್ರಿಕೆಟ್ ಪಂದ್ಯಾವಳಿಗೆ ತಾನು ಲಭ್ಯನಿರುವುದಾಗಿ ಭಾರತೀಯ ಕ್ರಿಕೆಟ್ ತಂಡದ ಮುಂಚೂಣಿಯ ವೇಗಿ ಜಸ್ಪ್ರೀತ್ ಬುಮ್ರಾ ಘೋಷಿಸಿದ್ದಾರೆ. ಪಂದ್ಯಾವಳಿಯು ಸೆಪ್ಟಂಬರ್ 9ರಿಂದ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ನಲ್ಲಿ ನಡೆಯಲಿದೆ. ಇತ್ತೀಚೆಗೆ ಇಂಗ್ಲೆಂಡ್ ನಲ್ಲಿ ನಡೆದ ಐದು ಪಂದ್ಯಗಳ ಆ್ಯಂಡರ್ಸನ್-ತೆಂಡುಲ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಬುಮ್ರಾ ಕೇವಲ ಮೂರು ಪಂದ್ಯಗಳಲ್ಲಿ ಆಡಿದ್ದರು. ಅವರ ಕೆಲಸದ ಒತ್ತಡವನ್ನು ನಿಭಾಯಿಸುವ ಹಾಗೂ ಆ ಮೂಲಕ ಅವರ ದೈಹಿಕ ಕ್ಷಮತೆಯನ್ನು ಕಾಪಾಡಿಕೊಳ್ಳುವ ಯೋಜನೆಯ ಭಾಗ ಅದಾಗಿತ್ತು. ಆದರೂ ಅವರು ಭಾರತದ ಪರಿಣಾಮಕಾರಿ ಬೌಲರ್ ಆಗಿ ಹೊರಹೊಮ್ಮಿದ್ದಾರೆ. ಅವರು ಸರಣಿಯಲ್ಲಿ 26ರ ಸರಾಸರಿಯಲ್ಲಿ 14 ವಿಕೆಟ್ಗಳನ್ನು ಗಳಿಸಿದ್ದಾರೆ. 31 ವರ್ಷದ ಬುಮ್ರಾರನ್ನು, ಮುಖ್ಯವಾಗಿ ಬಿಳಿ ಚೆಂಡಿನ ಕ್ರಿಕೆಟ್ (50 ಮತ್ತು 20 ಓವರ್ಗಳ ಕ್ರಿಕೆಟ್)ನಲ್ಲಿ ಬಿಟ್ಟು ಬಿಟ್ಟು ಬಳಸಲಾಗುತ್ತಿದೆ. ಅವರು ಬಿಳಿ ಚೆಂಡಿನ ಕ್ರಿಕೆಟ್ನಲ್ಲಿ ಕೊನೆಯದಾಗಿ ಆಡಿರುವುದು ಕಳೆದ ವರ್ಷದ ಜೂನ್ನಲ್ಲಿ ದಕ್ಷಿಣ ಆಫ್ರಿಕದ ವಿರುದ್ಧ ಟಿ20 ವಿಶ್ವಕಪ್ ಫೈನಲ್ನಲ್ಲಿ. ಅದೂ ಅಲ್ಲದೆ, 2023 ನವೆಂಬರ್ ನಲ್ಲಿ ಏಕದಿನ ವಿಶ್ವಕಪ್ ಪಂದ್ಯಾವಳಿಯ ಫೈನಲ್ ನಲ್ಲಿ ಆಡಿದ ಬಳಿಕ ಬುಮ್ರಾ ಯಾವುದೇ ಏಕದಿನ ಪಂದ್ಯದಲ್ಲೂ ಆಡಿಲ್ಲ. ಬೆನ್ನು ನೋವಿನಿಂದ ಬಳಲುತ್ತಿದ್ದ ಬುಮ್ರಾರನ್ನು ಈ ವರ್ಷದ ಆದಿ ಭಾಗದಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಗೂ ಆಯ್ಕೆ ಮಾಡಿರಲಿಲ್ಲ. ಏಶ್ಯ ಕಪ್ಗಾಗಿ ಭಾರತದ 15 ಸದಸ್ಯರ ತಂಡವನ್ನು ಆಯ್ಕೆ ಮಾಡಲು ಭಾರತದ ಮಾಜಿ ವೇಗದ ಬೌಲರ್ ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಯು ಮಂಗಳವಾರ ಮುಂಬೈಯಲ್ಲಿ ಸಭೆ ಸೇರುವ ನಿರೀಕ್ಷೆಯಿದೆ. ಈ ಬಾರಿಯ ಏಶ್ಯ ಕಪ್ ಪಂದ್ಯಾವಳಿಯನ್ನು ಟಿ20 ಮಾದರಿಯಲ್ಲಿ ಆಡಲಾಗುತ್ತದೆ.
ಆಸ್ಟ್ರೇಲಿಯ ಎ ತಂಡಕ್ಕೆ ಸಮಾಧಾನಕರ ಜಯ; ಭಾರತ ‘ಎ’ ಮಹಿಳೆಯರಿಗೆ ಸರಣಿ
ಅಜೇಯ 137 ರನ್ ಬಾರಿಸಿದ ಅಲಿಸಾ ಹೀಲಿ
ಸಿನ್ಸಿನಾಟಿ ಫೈನಲ್: ಕಾರ್ಲೋಸ್- ಸಿನ್ನರ್ ಮುಖಾಮುಖಿ
ಜನ್ನಿಕ್ ಸಿನ್ನರ್ ಮತ್ತು ಸ್ಪೇನ್ನ ಕಾರ್ಲೋಸ್ ಅಲ್ಕರಾಝ್ | PC : atptour.com ಸಿನ್ಸಿನಾಟಿ, ಆ. 17: ಎಟಿಪಿ-ಡಬ್ಲ್ಯುಟಿಎ ಸಿನ್ಸಿನಾಟಿ ಓಪನ್ ಟೆನಿಸ್ ಪಂದ್ಯಾವಳಿಯ ಫೈನಲ್ನಲ್ಲಿ ವಿಶ್ವದ ನಂಬರ್ ವನ್ ಇಟಲಿಯ ಜನ್ನಿಕ್ ಸಿನ್ನರ್ ಮತ್ತು ಸ್ಪೇನ್ ನ ಕಾರ್ಲೋಸ್ ಅಲ್ಕರಾಝ್ ಮುಖಾಮುಖಿಯಾಗಲಿದ್ದಾರೆ. ಹಾಲಿ ಟೆನಿಸ್ ಋತುವಿನಲ್ಲಿ, ಪ್ರಮುಖ ಪಂದ್ಯಾವಳಿಯೊಂದರ ಫೈನಲ್ನಲ್ಲಿ ಈ ಇಬ್ಬರು ಆಟಗಾರರು ಸೆಣಸುತ್ತಿರುವುದು ಇದು ನಾಲ್ಕನೇ ಬಾರಿಯಾಗಿದೆ. ಶನಿವಾರ ನಡೆದ ಸೆಮಿಫೈನಲ್ ಗಳಲ್ಲಿ, ಹಾಲಿ ಚಾಂಪಿಯನ್ ಸಿನ್ನರ್ 136ನೇ ರ್ಯಾಂಕ್ ನ ಫ್ರಾನ್ಸ್ ನ ಟೆರೆನ್ಸ್ ಅಟ್ಮೇನ್ರನ್ನು 7-6(7/4) ಸೆಟ್ಗಳಲ್ಲಿ ಸೋಲಿಸಿದರೆ, ಎರಡನೇ ಶ್ರೇಯಾಂಕದ ಕಾರ್ಲೋಸ್ ಜರ್ಮನಿಯ ಅಲೆಕ್ಸಾಂಡರ್ ಝ್ವೆರೆವ್ರನ್ನು 6-4, 6-3 ಸೆಟ್ಗಳಿಂದ ಮಣಿಸಿದರು. ಅಲೆಕ್ಸಾಂಡರ್ 32 ಡಿಗ್ರಿ ಸೆಲ್ಸಿಯಸ್ ಉಷ್ಣತೆ ಮತ್ತು ತೇವಾಂಶಕ್ಕೆ ಹೊಂದಿಕೊಳ್ಳಲಾಗದೆ ಅಸ್ವಸ್ಥರಾಗಿದ್ದರು. ಈ ಋತುವಿನಲ್ಲಿ, ಅಲ್ಕರಾಝ್ ಮತ್ತು ಸಿನ್ನರ್ ರೋಮ್, ರೋಲ್ಯಾಂಡ್ ಗ್ಯಾರೋಸ್ ಮತ್ತು ವಿಂಬಲ್ಡನ್ ನಲ್ಲಿ ಫೈನಲ್ನಲ್ಲಿ ಪರಸ್ಪರರನ್ನು ಎದುರಿಸಿದ್ದಾರೆ. ಈ ಪೈಕಿ ರೋಮ್ ಮತ್ತು ರೋಲ್ಯಾಂಡ್ ಗ್ಯಾರೋಸ್ ನಲ್ಲಿ ಅಲ್ಕರಾಜ್ ಪ್ರಶಸ್ತಿ ಗೆದ್ದರೆ, ಇತ್ತೀಚಿನ ವಿಂಬಲ್ಡನ್ ನಲ್ಲಿ ಸಿನ್ನರ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಶನಿವಾರ ನಡೆದ ಒಂದನೇ ಸೆಮಿಫೈನಲ್ನಲ್ಲಿ ತನ್ನ 24ನೇ ಹುಟ್ಟುಹಬ್ಬ ಆಚರಿಸುತ್ತಿದ್ದ ಸಿನ್ನರ್ ಎದುರಾಳಿ ಅಟ್ಮೇನ್ರ ಕನಸಿನ ಓಟವನ್ನು ಕೊನೆಗೊಳಿಸಿದರು. ಈಗ ಅವರು, 2014-15ರ ಬಳಿಕ ಸಿನ್ಸಿನಾಟಿಯಲ್ಲಿ ಬೆನ್ನು ಬೆನ್ನಿಗೆ ಪ್ರಶಸ್ತಿಗಳನ್ನು ಗೆದ್ದ ಮೊದಲ ಆಟಗಾರನಾಗುವ ನಿಟ್ಟಿನಲ್ಲಿ ಮುಂದುವರಿದಿದ್ದಾರೆ. 2014-15ರಲ್ಲಿ ರೋಜರ್ ಫೆಡರರ್ ಈ ಸಾಧನೆ ಮಾಡಿದ್ದರು. ಅಲ್ಕರಾಝ್ ಕೂಡ ಸಿನ್ಸಿನಾಟಿಯಲ್ಲಿ ತನ್ನ ಎರಡನೇ ಫೈನಲ್ ಆಡುತ್ತಿದ್ದಾರೆ. ಇದಕ್ಕೂ ಮೊದಲು, ಅವರು 2023ರ ಫೈನಲ್ನಲ್ಲಿ ನೊವಾಕ್ ಜೊಕೊವಿಕ್ ವಿರುದ್ಧ ಆಡಿ ಸೋತಿದ್ದರು. ಪಂದ್ಯ ಆರಂಭಕ್ಕೆ ಮುನ್ನ, ಹುಟ್ಟುಹಬ್ಬದ ಸಡಗರದಲ್ಲಿದ್ದ ಸಿನ್ನರ್ಗೆ ಅವರ ಎದುರಾಳಿ ಅಟ್ಮೇನ್ ಪೋಕೆಮಾನ್ ಕಾರ್ಡೊಂದನ್ನು ಉಡುಗೊರೆಯಾಗಿ ನೀಡಿದರು.
Asia Cup 2025: ರಾಹುಲ್ ಸೇರಿ ಈ ಐವರು ಸ್ಟಾರ್ ಆಟಗಾರರು ಏಷ್ಯಾ ಕಪ್ನಿಂದ ಔಟ್
ಏಷ್ಯಾ ಕಪ್ ಕ್ರಿಕೆಟ್ ಸರಣಿಗೆ 5 ಪ್ರಮುಖ ಆಟಗಾರರು ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಕಡಿಮೆ ಎಂದು ಹೇಳಲಾಗುತ್ತಿದೆ. ಈ ಪೋಸ್ಟ್ನಲ್ಲಿ ಇದರ ಬಗ್ಗೆ ನೋಡೋಣ.
ಏಷ್ಯಾಕಪ್ಗೆ 17 ಸದಸ್ಯರ ತಂಡ ಪ್ರಕಟಿಸಿದ ಪಾಕಿಸ್ತಾನ; ಬಾಬರ್, ರಿಜ್ವಾನ್ಗೆ ಟೀಮ್ನಿಂದ ಗೇಟ್ಪಾಸ್
ಪಾಕಿಸ್ತಾನ ಕ್ರಿಕೆಟ್ ತಂಡ 2025 ರ ಏಷ್ಯಾ ಕಪ್ಗಾಗಿ ತನ್ನ 17 ಸದಸ್ಯರ ತಂಡವನ್ನು ಪ್ರಕಟಿಸಿದೆ. ಈ ತಂಡದಲ್ಲಿ ಆಶ್ಚರ್ಯಕರ ರೀತಿಯಲ್ಲಿ ಬಾಬರ್ ಅಜಮ್ ಮತ್ತು ಮೊಹಮ್ಮದ್ ರಿಜ್ವಾನ್ ಇಬ್ಬರನ್ನೂ ಕೈಬಿಡಲಾಗಿದೆ.
ತಂದೆಯ ಹಾದಿಯಲ್ಲೇ ಮಗ; ಅರ್ಜುನ್ ತೆಂಡೂಲ್ಕರ್ ಗಿಂತ ಇಷ್ಟು ವರ್ಷ ದೊಡ್ಡವರು ಸಾನಿಯಾ ಚಂದೋಕ್!
ಅರ್ಜುನ್ ತೆಂಡೂಲ್ಕರ್, ಸಚಿನ್ ಅವರಂತೆ ತಮ್ಮಕ್ಕಿಂತ ಹಿರಿಯ ಸಾನಿಯಾ ಚಂದೋಕ್ ಅವರನ್ನು ಪ್ರೀತಿಸುತ್ತಿದ್ದು, ನಿಶ್ಚಿತಾರ್ಥ ಮಾಡಿದ್ದಾರೆ. ಸಾನಿಯಾ, ಮುಂಬೈನ ವ್ಯವಹಾರ ಕ್ಷೇತ್ರದಲ್ಲಿ ಖ್ಯಾತಿ ಪಡೆದಿದ್ದಾರೆ.
ಮಹಾರಾಜ ಟ್ರೋಫಿಯಲ್ಲಿ ತಹಾ ಬ್ಯಾಕ್ ಟು ಬ್ಯಾಕ್ ಶತಕ! IPLನಲ್ಲಿ ಈ ವರ್ಷವಾದ್ರೂ ಅವಕಾಶ ಕೊಡಿ
ತಹಾ ಆಗಸ್ಟ್ 12 ರಂದು, ಶಿವಮೊಗ್ಗ ಲಯನ್ಸ್ ವಿರುದ್ಧದ ಪಂದ್ಯದಲ್ಲಿ, ಕೇವಲ 53 ಎಸೆತಗಳಲ್ಲಿ 10 ಬೌಂಡರಿ ಮತ್ತು 6 ಸಿಕ್ಸರ್ಗಳೊಂದಿಗೆ 101 ರನ್ ಗಳಿಸಿದ್ದರು. ಈ ಪಂದ್ಯದಲ್ಲಿ ಹುಬ್ಬಳ್ಳಿ ತಂಡ 216 ರನ್ಗಳಿಸಿದರೆ, ಇದಕ್ಕೆ ಉತ್ತರವಾಗಿ ಶಿವಮೊಗ್ಗ 187 ರನ್ಗಳಿಸಿ 29 ರನ್ಗಳ ಸೋಲು ಕಂಡಿತ್ತು.
ಏಶ್ಯಕಪ್: ಚಾಂಪಿಯನ್ ಗಳ ಸಂಪೂರ್ಣ ಪಟ್ಟಿ, ಫಲಿತಾಂಶಗಳತ್ತ ಒಂದು ನೋಟ
Photo: X | Asia Cup ಹೊಸದಿಲ್ಲಿ, ಆ.16: ಏಶ್ಯಕಪ್ ಉಪಖಂಡದ ಪ್ರಮುಖ ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯಾವಳಿಯಾಗಿದ್ದು, 1984ರಲ್ಲಿ ಏಶ್ಯನ್ ಕ್ರಿಕೆಟ ಕೌನ್ಸಿಲ್(ಎಸಿಸಿ)ಬ್ಯಾನರ್ ನಡಿ ಮೊದಲ ಬಾರಿ ನಡೆದಿತ್ತು. ಮುಂಬರುವ ಐಸಿಸಿ ಜಾಗತಿಕ ಟೂರ್ನಿಯನ್ನು ಆಧರಿಸಿ 2016ರಿಂದ 50 ಓವರ್ ಹಾಗೂ 20 ಓವರ್ಗಳ ಮಾದರಿಯಲ್ಲಿ ಏಶ್ಯಕಪ್ ಟೂರ್ನಿಯನ್ನು ನಡೆಸಲಾಗುತ್ತಿದೆ. ಮೂರು ದಶಕಗಳಿಂದ ಉಪಖಂಡದ ಅಗ್ರ ಕ್ರಿಕೆಟ್ ದೇಶಗಳು ಮಾತ್ರ ಸ್ಪರ್ಧಾವಳಿಯಲ್ಲಿ ಭಾಗವಹಿಸುತ್ತಿವೆ. ಭಾರತ, ಶ್ರೀಲಂಕಾ ಹಾಗೂ ಪಾಕಿಸ್ತಾನ ತಂಡಗಳು ಈ ಪಂದ್ಯಾವಳಿಯಲ್ಲಿ ಪ್ರಾಬಲ್ಯ ಸಾಧಿಸುತ್ತಾ ಬಂದಿವೆ. ಈ ಮೂರು ತಂಡಗಳು ಈ ತನಕದ ಪ್ರಶಸ್ತಿಗಳನ್ನು ತಮ್ಮೊಳಗೆ ಹಂಚಿಕೊಂಡಿವೆ. ಭಾರತ ತಂಡವು 8 ಬಾರಿ ಏಶ್ಯಕಪ್ ಪ್ರಶಸ್ತಿಯನ್ನು ಜಯಿಸಿ ಚಾಂಪಿಯನ್ ಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದರೆ, ಶ್ರೀಲಂಕಾ ತಂಡ ಆರು ಹಾಗೂ ಪಾಕಿಸ್ತಾನ ತಂಡವು 2 ಬಾರಿ ಏಶ್ಯಕಪ್ ಗೆದ್ದುಕೊಂಡಿದೆ. ಬಾಂಗ್ಲಾದೇಶ ತಂಡವು ಹಲವು ಬಾರಿ ಫೈನಲ್ ಗೆ ತಲುಪಿದ್ದರೂ ಈ ತನಕ ಪ್ರಶಸ್ತಿ ಗೆದ್ದಿಲ್ಲ. ಈ ಪಂದ್ಯಾವಳಿಯು ಭಾರತ, ಪಾಕಿಸ್ತಾನ ಹಾಗೂ ಶ್ರೀಲಂಕಾ ತಂಡಗಳ ನಡುವಿನ ತೀವ್ರ ಹಣಾಹಣಿ ಹಾಗೂ ಸ್ಪರ್ಧೆಗೆ ವೇದಿಕೆ ಒದಗಿಸಿದೆ. ವಿಶೇಷವೆಂದರೆ ಶ್ರೀಲಂಕಾ ತಂಡ ಮಾತ್ರ ಪ್ರತೀ ಆವೃತ್ತಿಯಲ್ಲೂ ಆಡಿದೆ. 2025ರ ಆವೃತ್ತಿಯ ಸ್ಪರ್ಧಾವಳಿಯಲ್ಲಿ 8 ತಂಡಗಳು ಭಾಗವಹಿಸಲಿದ್ದು, ಸೆಪ್ಟಂಬರ್ 9ರಂದು ನಡೆಯಲಿರುವ ಆರಂಭಿಕ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡವು ಹಾಂಕಾಂಗ್ ತಂಡವನ್ನು ಎದುರಿಸಲಿದೆ. ತಂಡಗಳನ್ನು ಎರಡು ಗುಂಪುಗಳಾಗಿ ವಿಭಜಿಸಲಾಗಿದ್ದು, ಪ್ರತೀ ಗುಂಪಿನಲ್ಲಿ ನಾಲ್ಕು ತಂಡಗಳಿವೆ. ಪ್ರತೀ ತಂಡಗಳು ಮೂರು ಪಂದ್ಯಗಳನ್ನು ಆಡಲಿವೆ. ಹಾಲಿ ಚಾಂಪಿಯನ್ ಭಾರತ ತಂಡವು ಸೆಪ್ಟಂಬರ್ 10ರಂದು ಯುಎಇ ತಂಡವನ್ನು ಎದುರಿಸುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ. ಏಶ್ಯಕಪ್ ಫೈನಲ್ ನ ಸಂಪೂರ್ಣ ಪಟ್ಟಿ ಇಂತಿದೆ ವರ್ಷ ವಿನ್ನರ್ ಫಲಿತಾಂಶ ಆತಿಥೇಯ ದೇಶ 1984 ಭಾರತ ರೌಂಡ್-ರಾಬಿನ್ ನಲ್ಲಿ ಭಾರತಕ್ಕೆ ಅಗ್ರ ಸ್ಥಾನ ಯುಎಇ 1986 ಶ್ರೀಲಂಕಾ ಪಾಕಿಸ್ತಾನದ ವಿರುದ್ಧ 5 ವಿಕೆಟ್ ಜಯ ಶ್ರೀಲಂಕಾ 1988 ಭಾರತ ಶ್ರೀಲಂಕಾ ವಿರುದ್ಧ 6 ವಿಕೆಟ್ ಜಯ ಬಾಂಗ್ಲಾದೇಶ 1990 ಭಾರತ ಶ್ರೀಲಂಕಾ ವಿರುದ್ಧ 7 ವಿಕೆಟ್ ಗೆಲುವು ಭಾರತ 1995 ಭಾರತ ಶ್ರೀಲಂಕಾ ವಿರುದ್ಧ 8 ವಿಕೆಟ್ ಗೆಲುವು ಯುಎಇ 1997 ಶ್ರೀಲಂಕಾ ಭಾರತದ ವಿರುದ್ಧ 8 ವಿಕೆಟ್ ಗೆಲುವು ಶ್ರೀಲಂಕಾ 2000 ಪಾಕಿಸ್ತಾನ ಶ್ರೀಲಂಕಾ ಎದುರು 39 ರನ್ ಜಯ ಬಾಂಗ್ಲಾದೇಶ 2004 ಶ್ರೀಲಂಕಾ ಭಾರತದ ವಿರುದ್ಧ 25 ರನ್ ಗೆಲುವು ಶ್ರೀಲಂಕಾ 2008 ಶ್ರೀಲಂಕಾ ಭಾರತ ವಿರುದ್ಧ 100 ರನ್ ಗೆಲುವು ಪಾಕಿಸ್ತಾನ 2010 ಭಾರತ ಶ್ರೀಲಂಕಾ ವಿರುದ್ಧ 81 ರನ್ ಜಯ ಶ್ರೀಲಂಕಾ 2012 ಪಾಕಿಸ್ತಾನ ಬಾಂಗ್ಲಾದೇಶ ವಿರುದ್ಧ 2 ರನ್ ಜಯ ಬಾಂಗ್ಲಾದೇಶ 2014 ಶ್ರೀಲಂಕಾ ಪಾಕಿಸ್ತಾನದ ವಿರುದ್ಧ 5 ವಿಕೆಟ್ ಜಯ ಬಾಂಗ್ಲಾದೇಶ 2016 ಭಾರತ ಬಾಂಗ್ಲಾದೇಶ ವಿರುದ್ಧ 8 ವಿಕೆಟ್ ಗೆಲುವು ಬಾಂಗ್ಲಾದೇಶ 2018 ಭಾರತ ಬಾಂಗ್ಲಾದೇಶ ವಿರುದ್ಧ 3 ವಿಕೆಟ್ ಜಯ ಯುಎಇ 2022 ಶ್ರೀಲಂಕಾ ಪಾಕಿಸ್ತಾನ ವಿರುದ್ಧ 23 ರನ್ ಗೆಲುವು ಯುಎಇ 2023 ಭಾರತ ಶ್ರೀಲಂಕಾ ವಿರುದ್ಧ 10 ವಿಕೆಟ್ ಜಯ ಪಾಕಿಸ್ತಾನ/ಶ್ರೀಲಂಕಾ 2025 ----- ------------------- ಯುಎಇ
ತನ್ನದೇ ದಾಖಲೆ ಮುರಿದ ‘ಬೇಬಿ ಎಬಿ’ ಖ್ಯಾತಿಯ ಬ್ರೆವಿಸ್
ಡೆವಾಲ್ಡ್ ಬ್ರೆವಿಸ್ | PC : @ProteasMenCSA ಕೈರ್ನ್ಸ್, ಆ.16: ದಕ್ಷಿಣ ಆಫ್ರಿಕಾದ ಯುವ ಬ್ಯಾಟರ್, ‘ಬೇಬಿ ಎಬಿ’ ಎಂದೇ ಕರೆಯಲ್ಪಡುತ್ತಿರುವ ಡೆವಾಲ್ಡ್ ಬ್ರೆವಿಸ್ ಅವರು ಆಸ್ಟ್ರೇಲಿಯ ತಂಡದ ವಿರುದ್ಧ ಶನಿವಾರ ನಡೆದ ಸರಣಿ ನಿರ್ಣಾಯಕ 3ನೇ ಟಿ20 ಪಂದ್ಯದಲ್ಲಿ ತನ್ನ ದೇಶದ ಪರ ವೇಗದ ಅರ್ಧಶತಕ ದಾಖಲಿಸಿದರು. ಬ್ರೆವಿಸ್ ಕೇವಲ 22 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಕಳೆದ ವಾರ ಡಾರ್ವಿನ್ ನಲ್ಲಿ ನಡೆದ 2ನೇ ಟಿ20 ಪಂದ್ಯದ ವೇಳೆ ನಿರ್ಮಿಸಿದ್ದ ತನ್ನದೇ ದಾಖಲೆಯನ್ನು ಮುರಿದರು. 2ನೇ ಟಿ20 ಪಂದ್ಯದಲ್ಲಿ ಬ್ರೆವಿಸ್ 25 ಎಸೆತಗಳಲ್ಲಿ 50 ರನ್ ಪೂರ್ಣಗೊಳಿಸಿದ್ದರು. 2009ರಲ್ಲಿ ಮೆಲ್ಬರ್ನ್ ನಲ್ಲಿ ಜೆಪಿ ಡುಮಿನಿ 31 ಎಸೆತಗಳಲ್ಲಿ ಅರ್ಧಶತಕ ಪೂರೈಸಿ ದಕ್ಷಿಣ ಆಫ್ರಿಕಾದ ಪರ ವೇಗದ ಅರ್ಧಶತಕ ಗಳಿಸಿದ್ದರು. 22ರ ಹರೆಯದ ಬ್ರೆವಿಸ್ ಆಸ್ಟ್ರೇಲಿಯದ ನೆಲದಲ್ಲಿ ಆಸ್ಟ್ರೇಲಿಯದ ವಿರುದ್ಧ ಕ್ಷಿಪ್ರವಾಗಿ ಅರ್ಧಶತಕ ಗಳಿಸಿ ಹಳೆಯ ದಾಖಲೆಯೊಂದನ್ನು ಮುರಿದರು. ಇಂಗ್ಲೆಂಡ್ ಬ್ಯಾಟರ್ ರವಿ ಬೋಪಾರ 2014ರಲ್ಲಿ ಹೊಬರ್ಟ್ ನಲ್ಲಿ 23 ಎಸೆತಗಳಲ್ಲಿ ಅರ್ಧಶತಕ ಗಳಿಸಿದ್ದರು. ನಾಥನ್ ಎಲ್ಲಿಸ್ 12ನೇ ಓವರ್ ನಲ್ಲಿ ಬ್ರೆವಿಸ್ ಅವರ ಇನಿಂಗ್ಸ್ ಗೆ ತೆರೆ ಎಳೆದರು. ಬ್ರೆವಿಸ್ 26 ಎಸೆತಗಳಲ್ಲಿ 6 ಸಿಕ್ಸರ್, 1 ಬೌಂಡರಿ ಒಳಗೊಂಡ 53 ರನ್ ಗಳಿಸಿ ಔಟಾದ ನಂತರ ದಕ್ಷಿಣ ಆಫ್ರಿಕಾದ ರನ್ ವೇಗಕ್ಕೆ ಕಡಿವಾಣ ಬಿತ್ತು. ಹಾರ್ಡ್ ಕಟ್ ಶಾಟ್ ಮೂಲಕ ತನ್ನ ಮೊದಲ ಬೌಂಡರಿ ಗಳಿಸಿ ತನ್ನ ಇನಿಂಗ್ಸ್ ನ್ನು ಆಕ್ರಮಣಕಾರಿಯಾಗಿ ಆರಂಭಿಸಿದ ಬ್ರೆವಿಸ್ ಅವರು ಜೋಶ್ ಹೇಝಲ್ ವುಡ್ ಬೌಲಿಂಗ್ ನಲ್ಲಿ ಸಿಕ್ಸರ್ ಸಿಡಿಸಿದರು. ಆ್ಯರೊನ್ ಹಾರ್ಡಿ ಬೌಲಿಂಗ್ ನಲ್ಲಿ 2 ಸಿಕ್ಸರ್ ಗಳನ್ನು ಸಿಡಿಸುವ ಮೂಲಕ ತನ್ನ ಬ್ಯಾಟಿಂಗ್ ಶಕ್ತಿ ಅನಾವರಣಗೊಳಿಸಿದರು. ಹಾರ್ಡಿ ಬೌಲಿಂಗ್ ನಲ್ಲಿ ಇನ್ನೆರಡು ಸಿಕ್ಸರ್ ಸಿಡಿಸಿ ಮುಗಿಬಿದ್ದರು. ಸತತ 4 ಸಿಕ್ಸರ್ ಗಳನ್ನು ಸಿಡಿಸುವ ಮೂಲಕ ಅರ್ಧಶತಕ ಪೂರೈಸಿದರು. 2ನೇ ಟಿ20 ಪಂದ್ಯದಲ್ಲಿ ಬ್ರೆವಿಸ್ 56 ಎಸೆತಗಳಲ್ಲಿ ಔಟಾಗದೆ 125 ರನ್ ಗಳಿಸಿದ್ದರು. 41 ಎಸೆತಗಳಲ್ಲಿ ಶತಕವನ್ನು ಪೂರೈಸಿದ್ದ ಬ್ರೆವಿಸ್ ಅವರು ಡೇವಿಡ್ ಮಿಲ್ಲರ್(35 ಎಸೆತ)ನಂತರ ವೇಗದ ಶತಕ ಗಳಿಸಿದ ದಕ್ಷಿಣ ಆಫ್ರಿಕಾದ 2ನೇ ಬ್ಯಾಟರ್ ಎನಿಸಿಕೊಂಡಿದ್ದರು. ಮಿಲ್ಲರ್ 2017ರಲ್ಲಿ ಬಾಂಗ್ಲಾದೇಶ ವಿರುದ್ಧ ಈ ದಾಖಲೆ ನಿರ್ಮಿಸಿದ್ದರು.
3ನೇ ಟಿ20 | ಮ್ಯಾಕ್ಸ್ ವೆಲ್ ಅಬ್ಬರದ ಬ್ಯಾಟಿಂಗ್; ಕೊನೆಯ ಓವರ್ ನಲ್ಲಿ ಆಸ್ಟ್ರೇಲಿಯಕ್ಕೆ ಜಯ, ಸರಣಿ ಕೈವಶ
ಮ್ಯಾಕ್ಸ್ವೆಲ್ | PC : X ಕೈರ್ನ್ಸ್, ಆ.16: ಆಸ್ಟ್ರೇಲಿಯ ಕ್ರಿಕೆಟ್ ತಂಡವು ಅತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧ ಶನಿವಾರ ನಡೆದ 3ನೇ ಹಾಗೂ ಕೊನೆಯ ಟಿ20 ಅಂತರ್ರಾಷ್ಟ್ರೀಯ ಪಂದ್ಯದಲ್ಲಿ ಕೊನೆಯ ಓವರ್ ನಲ್ಲಿ 2 ವಿಕೆಟ್ ಗಳ ಅಂತರದಿಂದ ರೋಚಕ ಜಯ ದಾಖಲಿಸಿದೆ. ಈ ಮೂಲಕ 3 ಪಂದ್ಯಗಳ ಟಿ20 ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡಿದೆ. ಕೇವಲ 36 ಎಸೆತಗಳಲ್ಲಿ 8 ಬೌಂಡರಿ, 2 ಸಿಕ್ಸರ್ ಸಹಿತ ಔಟಾಗದೆ 62 ರನ್ ಗಳಿಸಿ ಅಬ್ಬರಿಸಿದ ಗ್ಲೆನ್ ಮ್ಯಾಕ್ಸ್ ವೆಲ್ ಗೆಲುವಿನ ರೂವಾರಿಯಾಗಿದ್ದು, ಸೀಮಿತ ಓವರ್ ಕ್ರಿಕೆಟ್ ನಲ್ಲಿ ಮತ್ತೊಮ್ಮೆ ಆಸ್ಟ್ರೇಲಿಯದ ಮ್ಯಾಚ್ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. ಕೈರ್ನ್ಸ್ನಲ್ಲಿ ಮೊತ್ತ ಮೊದಲ ಬಾರಿ ನಡೆದ ಟಿ20 ಪಂದ್ಯ ವೀಕ್ಷಿಸಲು ಪ್ರೇಕ್ಷಕರು ಕಿಕ್ಕಿರಿದು ನೆರೆದಿದ್ದರು. ಉಭಯ ತಂಡಗಳ ನಡುವಿನ ಈ ಪಂದ್ಯವು ಪ್ರೇಕ್ಷಕರಿಗೆ ಮನರಂಜನೆ ನೀಡಿತು. ಗೆಲ್ಲಲು 173 ರನ್ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯ ತಂಡಕ್ಕೆ ಕೊನೆಯ ಎರಡು ಎಸೆತಗಳಲ್ಲಿ 4 ರನ್ ಅಗತ್ಯವಿತ್ತು. ಆಗ ರಿವರ್ಸ್ ಸ್ಕೂಪ್ ಮೂಲಕ ಬೌಂಡರಿ ಬಾರಿಸಿ ಮ್ಯಾಜಿಕ್ ಮಾಡಿದ ಮ್ಯಾಕ್ಸ್ ವೆಲ್ ಕೇವಲ 1 ಎಸೆತ ಇರವಾಗ ರೋಚಕ ಗೆಲುವು ತಂದುಕೊಟ್ಟರು. ಆ್ಯಡಮ್ ಝಂಪಾ ಮೈದಾನ ದೆಲ್ಲಡೆ ಕುಣಿದಾಡಿ ಮ್ಯಾಕ್ಸ್ ವೆಲ್ ರನ್ನು ಅಪ್ಪಿಕೊಂಡು ಸಂಭ್ರಮಿಸಿದರು. ಮ್ಯಾಕ್ಸ್ ವೆಲ್ ಈ ಹಿಂದೆ ಸಾಕಷ್ಟು ಬಾರಿ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟಿದ್ದರು. ಈ ಬಾರಿ ತನ್ನದೇ ಶೈಲಿಯಲ್ಲಿ ತಂಡವನ್ನು ಗೆಲುವಿನ ದಡ ಸೇರಿಸಿ ತನ್ನ ಸಾಮರ್ಥ್ಯವನ್ನು ಟೀಕಿಸುತ್ತಿದ್ದವರಿಗೆ ಉತ್ತರ ನೀಡಿದ್ದಾರೆ. ಈ ಸಾಹಸಕ್ಕೆ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಸರಣಿಯಲ್ಲಿ ಒಟ್ಟು 150 ರನ್ ಗಳಿಸಿದ್ದ ಟಿಮ್ ಡೇವಿಡ್ ಸರಣಿಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಇನಿಂಗ್ಸ್ ಆರಂಭಿಸಿದ ನಾಯಕ ಮಿಚೆಲ್ ಮಾರ್ಷ್(54 ರನ್) ಹಾಗೂ ಟ್ರಾವಿಸ್ ಹೆಡ್(19 ರನ್) 8 ಓವರ್ ಗಳಲ್ಲಿ 66 ರನ್ ಜೊತೆಯಾಟ ನಡೆಸಿದರು. 37 ಎಸೆತಗಳಲ್ಲಿ 3 ಬೌಂಡರಿ ಹಾಗೂ 5 ಸಿಕ್ಸರ್ ಗಳ ಸಹಿತ 54 ರನ್ ಗಳಿಸಿದ ಮಾರ್ಷ್ ಅವರು ಆಸ್ಟ್ರೇಲಿಯಕ್ಕೆ ಆಸರೆಯಾದರು. ಆದರೆ 13 ಎಸೆತಗಳಲ್ಲಿ 3 ವಿಕೆಟ್ ಗಳನ್ನು ಉರುಳಿಸಿದ ದಕ್ಷಿಣ ಆಫ್ರಿಕಾ ತಂಡ ತಿರುಗೇಟು ನೀಡಿತು. ಹೆಡ್, ಜೋಶ್ ಇಂಗ್ಲಿಸ್(0) ಹಾಗೂ ಮಾರ್ಷ್ ಬೆನ್ನುಬೆನ್ನಿಗೆ ಔಟಾದರು. ಕ್ಯಾಮರೂನ್ ಗ್ರೀನ್(9 ರನ್) ಅಲ್ಪ ಮೊತ್ತಕ್ಕೆ ಔಟಾದಾಗ ಆಸ್ಟ್ರೇಲಿಯ 88 ರನ್ಗೆ 4ನೇ ವಿಕೆಟ್ ಕಳೆದುಕೊಂಡಿತು. ಆಗ 5ನೇ ವಿಕೆಟ್ ಗೆ ಟಿಮ್ ಡೇವಿಡ್(17 ರನ್) ಜೊತೆ 14 ಎಸೆತಗಳಲ್ಲಿ 32 ರನ್ ಸೇರಿಸಿದ ಮ್ಯಾಕ್ಸ್ ವೆಲ್ ತಂಡವನ್ನು ಆಧರಿಸಿದರು. ಡೇವಿಡ್ ಹಾಗೂ ಹಾರ್ಡಿ(1 ರನ್) ಕಾಗಿಸೊ ರಬಾಡ (2-32)ಎಸೆದ 14ನೇ ಓವರ್ ನಲ್ಲಿ ವಿಕೆಟ್ ಒಪ್ಪಿಸಿದಾಗ ಡ್ವಾರ್ಶುಯಿಸ್(1) ಅವರೊಂದಿಗೆ 7ನೇ ವಿಕೆಟ್ ಗೆ 29 ಎಸೆತಗಳಲ್ಲಿ 41 ರನ್ ಸೇರಿಸಿದ ಮ್ಯಾಕ್ಸ್ ವೆಲ್ ಆಸ್ಟ್ರೇಲಿಯವನ್ನು ಗೆಲುವಿನತ್ತ ಮುನ್ನಡೆಸಿದರು. ಆಸ್ಟ್ರೇಲಿಯ ಟಿ20 ಕ್ರಿಕೆಟ್ ನಲ್ಲಿ ಸದ್ಯ ಭರ್ಜರಿ ಫಾರ್ಮ್ ನಲ್ಲಿದೆ. ಸ್ಕಾಟ್ಲ್ಯಾಂಡ್, ಪಾಕಿಸ್ತಾನ, ವೆಸ್ಟ್ ಇಂಡೀಸ್ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧ ಸರಣಿ ಜಯಿಸಿದರೆ, ಇಂಗ್ಲೆಂಡ್ ವಿರುದ್ಧ ಸರಣಿ ಸಮಬಲಗೊಳಿಸಿತ್ತು. ದಕ್ಷಿಣ ಆಫ್ರಿಕಾ 172/7: ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ದಕ್ಷಿಣ ಆಫ್ರಿಕಾ ತಂಡ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ಗಳ ನಷ್ಟಕ್ಕೆ 172 ರನ್ ಕಲೆ ಹಾಕಿತು. ಯುವ ಆಟಗಾರ ಡೆವಾಲ್ಡ್ ಬ್ರೆವಿಸ್(53 ರನ್, 26 ಎಸೆತ)ಮತ್ತೊಮ್ಮೆ ಬಿರುಸಿನ ಬ್ಯಾಟಿಂಗ್ ಮೂಲಕ ತಂಡಕ್ಕೆ ಶಕ್ತಿ ತುಂಬಿದರು. ರಾಸ್ಸಿ ವಾನ್ ಡರ್ ಡುಸ್ಸೆನ್(ಔಟಾಗದೆ 38, 26 ಎಸೆತ), ಟ್ರಿಸ್ಟನ್ ಸ್ಟಬ್ಸ್(25 ರನ್, 23 ಎಸೆತ) ಹಾಗೂ ಪ್ರಿಟೋರಿಯಸ್(24 ರನ್, 15 ಎಸೆತ)ಎರಡಂಕೆಯ ಸ್ಕೋರ್ ಗಳಿಸಿದರು. ಮೊದಲ ಓವರ್ ನ 5ನೇ ಎಸೆತದಲ್ಲಿ ನಾಯಕ ಮರ್ಕ್ರಮ್ ವಿಕೆಟನ್ನು ಕಳೆದುಕೊಂಡ ದಕ್ಷಿಣ ಆಫ್ರಿಕಾ ಕಳಪೆ ಆರಂಭ ಪಡೆಯಿತು. ಪ್ರಿಟೋರಿಯಸ್ ಹಾಗೂ ರಿಕೆಲ್ಟನ್(13 ರನ್)2ನೇ ವಿಕೆಟ್ ಗೆ 30 ರನ್ ಸೇರಿಸಿ ಇನಿಂಗ್ಸ್ ರಿಪೇರಿಗೆ ಯತ್ನಿಸಿದರು. ಪ್ರಿಟೋರಿಯಸ್ ಹಾಗೂ ರಿಕೆಲ್ಟನ್ ವಿಕೆಟ್ ಒಪ್ಪಿಸಿದಾಗ 4ನೇ ವಿಕೆಟ್ ಗೆ 61 ರನ್ ಜೊತೆಯಾಟ ನಡೆಸಿದ ಬ್ರೆವಿಸ್ ಹಾಗೂ ಸ್ಟಬ್ಸ್ ತಂಡವು ಸ್ಪರ್ಧಾತ್ಮಕ ಮೊತ್ತ ಗಳಿಸುವಲ್ಲಿ ನೆರವಾದರು. ಆಸ್ಟ್ರೇಲಿಯದ ಬೌಲಿಂಗ್ ವಿಭಾಗದಲ್ಲಿ ನಾಥನ್ ಎಲ್ಲಿಸ್(3-31) ಯಶಸ್ವಿ ಪ್ರದರ್ಶನ ನೀಡಿದರು. ಆ್ಯಡಮ್ ಝಂಪಾ(2-24) ಹಾಗೂ ರಬಾಡ(2-30) ತಲಾ ಎರಡು ವಿಕೆಟ್ ಗಳನ್ನು ಪಡೆದರು. ಸಂಕ್ಷಿಪ್ತ ಸ್ಕೋರ್ ದಕ್ಷಿಣ ಆಫ್ರಿಕಾ: 20 ಓವರ್ ಗಳಲ್ಲಿ 172/7 (ಡೆವಾಲ್ಡ್ ಬ್ರೆವಿಸ್ 53, ರಾಸ್ಸಿ ವಾನ್ ಡರ್ ಡುಸೆನ್ ಔಟಾಗದೆ 38, ಸ್ಟಬ್ಸ್ 25, ಪ್ರಿಟೋರಿಯಸ್ 24, ಎಲ್ಲಿಸ್ 3-31, ಝಂಪಾ 2-24, ಹೇಝಲ್ ವುಡ್ 2-30)
ಒಂದೂ ಶತಕ ಸಿಡಿಸದ 21 ವರ್ಷದ ಯುವಕನಿಗೆ ಇಂಗ್ಲೆಂಡ್ ನಾಯಕತ್ವ! 136 ವರ್ಷದ ಹಳೆಯ ದಾಖಲೆ ಬ್ರೇಕ್
ಐರ್ಲೆಂಡ್ ವಿರುದ್ಧದ T20 ಸರಣಿಗೆ ಇಂಗ್ಲೆಂಡ್ ತಂಡದಲ್ಲಿ ರೆಹಾನ್ ಅಹ್ಮದ್, ಸನ್ನಿ ಬೇಕರ್, ಜೋಸ್ ಬಟ್ಲರ್, ಆದಿಲ್ ರಶೀದ್, ಫಿಲ್ ಸಾಲ್ಟ್ ಮತ್ತು ಇತರರು ಸೇರಿದ್ದಾರೆ. ಸನ್ನಿ ಬೇಕರ್ಗೆ ಇದು ಮೊದಲ ಅಂತರರಾಷ್ಟ್ರೀಯ ಕರೆಯಾಗಿದೆ
Dhoni: ಆತ ನನ್ನ ಕರಿಯರ್ ಅಂತ್ಯವಾಯಿತು! ಸೆಹ್ವಾಗ್ ಬೆನ್ನಲ್ಲೇ ಧೋನಿ ಮೇಲೆ ಮತ್ತೊಬ್ಬ ಕ್ರಿಕೆಟಿಗ ಅರೋಪ
ಭಾರತ ತಂಡದಲ್ಲಿ ಪ್ರಮುಖ ವೇಗಿಯಾಗಿ ಹೊರಹೊಮ್ಮಿದ ಇರ್ಫಾನ್ ಪಠಾಣ್ 2009 ರಲ್ಲಿ ತಂಡದಿಂದ ಹೊರಬಿದ್ದರು. ಇರ್ಫಾನ್ ಪಠಾಣ್ ಅಕ್ಟೋಬರ್ 2012 ರಲ್ಲಿ ಭಾರತ ಪರ ತಮ್ಮ ಕೊನೆಯ ಪಂದ್ಯವನ್ನು ಆಡಿದರು. ಅದರ ನಂತರ, ಅವರು ತಂಡಕ್ಕೆ ಮರಳಲು ಸಾಧ್ಯವಾಗಲಿಲ್ಲ ಮತ್ತು 2020ರಲ್ಲಿ ನಿವೃತ್ತಿ ಘೋಷಿಸಿದರು.
ಡಿ.12ರಿಂದ ಲಿಯೊನೆಲ್ ಮೆಸ್ಸಿ ಭಾರತ ಪ್ರವಾಸ ಆರಂಭ
ಲಿಯೊನೆಲ್ ಮೆಸ್ಸಿ | PC : PTI ಹೊಸದಿಲ್ಲಿ, ಆ.15: ಅರ್ಜೆಂಟೀನದ ಸೂಪರ್ಸ್ಟಾರ್ ಲಿಯೊನೆಲ್ ಮೆಸ್ಸಿ ಅವರ ಬಹು ನಿರೀಕ್ಷಿತ ಭಾರತದ ಪ್ರವಾಸಕ್ಕೆ ಅಂತಿಮ ಅನುಮತಿ ದೊರೆತಿದ್ದು, ಮೆಸ್ಸಿ ಅವರು ಡಿಸೆಂಬರ್ 12ರಂದು ಕೋಲ್ಕತಾಕ್ಕೆ ಭೇಟಿ ನೀಡುವ ಮೂಲಕ ತನ್ನ ಪ್ರವಾಸ ಆರಂಭಿಸಲಿದ್ದಾರೆ ಎಂದು ಕಾರ್ಯಕ್ರಮದ ಪ್ರವರ್ತಕರಾದ ಸತದ್ರು ದತ್ತ ಶುಕ್ರವಾರ ಹೇಳಿದ್ದಾರೆ. 2025ರ ಭಾರತದ ಪ್ರವಾಸದ ವೇಳೆ ಮೆಸ್ಸಿ ಅವರು ಕೋಲ್ಕತಾ ನಗರಕ್ಕೆ ಮೊದಲು ಆಗಮಿಸಲಿದ್ದು, ಆ ನಂತರ ಅಹ್ಮದಾಬಾದ್, ಮುಂಬೈ ಹಾಗೂ ಹೊಸದಿಲ್ಲಿಗೆ ತೆರಳಲಿದ್ದಾರೆ. ಡಿಸೆಂಬರ್ 15ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಅವರ ನಿವಾಸದಲ್ಲಿ ಭೇಟಿಯಾಗುವ ಮೂಲಕ ತನ್ನ ಭಾರತದ ಪ್ರವಾಸವನ್ನು ಮೆಸ್ಸಿ ಕೊನೆಗೊಳಿಸಲಿದ್ದಾರೆ. ಅರ್ಜೆಂಟೀನದ ಫುಟ್ಬಾಲ್ ದಿಗ್ಗಜ ಮೆಸ್ಸಿ 2011ರ ನಂತರ ಮೊದಲ ಬಾರಿ ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ. 2011ರಲ್ಲಿ ಕೋಲ್ಕತಾದ ಸಾಲ್ಟ್ಲೇಕ್ ಕ್ರೀಡಾಂಗಣದಲ್ಲಿ ವೆನೆಜುವೆಲಾ ತಂಡದ ವಿರುದ್ಧ ಫಿಫಾ ಸೌಹಾರ್ದ ಪಂದ್ಯವನ್ನಾಡಲು ತನ್ನ ರಾಷ್ಟ್ರೀಯ ತಂಡದೊಂದಿಗೆ ಮೆಸ್ಸಿ ಭಾರತಕ್ಕೆ ಆಗಮಿಸಿದ್ದರು. ‘‘ಮೆಸ್ಸಿ ಅವರು ಆಗಸ್ಟ್ 28ರಿಂದ ಸೆಪ್ಟಂಬರ್ 1ರ ನಡುವೆ ಅಧಿಕೃತ ಪೋಸ್ಟರ್ ನೊಂದಿಗೆ ಎಲ್ಲ ವಿವರಗಳು ಹಾಗೂ ಅವರ ಪ್ರವಾಸದ ಸಣ್ಣ ಪರಿಚಯದೊಂದಿಗೆ ಪೋಸ್ಟ್ ಮಾಡಲಿದ್ದಾರೆ’’ ಎಂದು ದತ್ತ ಪಿಟಿಐಗೆ ತಿಳಿಸಿದ್ದಾರೆ. ಈ ವರ್ಷದ ಆರಂಭದಲ್ಲಿ ಮೆಸ್ಸಿಯ ತಂದೆಯವರನ್ನು ಭೇಟಿಯಾಗಿರುವ ದತ್ತಾ ಅವರು ಪ್ರಸ್ತಾವನೆಯನ್ನು ಮಂಡಿಸಿದರು. ಫೆಬ್ರವರಿ 28ರಂದು ಮೆಸ್ಸಿ ಸ್ವತಃ ತನ್ನ ನಿವಾಸದಲ್ಲಿ ದತ್ತಾರನ್ನು ಭೇಟಿಯಾಗಿ 45 ನಿಮಿಷ ಚರ್ಚಿಸಿದ್ದಾರೆ. ‘‘ನಾನು ಯೋಜನೆಯನ್ನು ಹಾಗೂ ನಾವು ಏನು ಮಾಡಲು ಬಯಸಿದ್ದೇವೆ ಎಂಬುದನ್ನು ವಿವರಿಸಿದೆ. ಅದು ಯೋಗ್ಯವಾಗಿದೆ ಎಂದು ಅವರಿಗೆ ಮನವರಿಕೆಯಾಯಿತು. ಅವರು ಭಾರತಕ್ಕೆ ಬರಲು ಸಿದ್ಧರಾಗಿದ್ದಾರೆ’’ಎಂದು ದತ್ತ ಹೇಳಿದರು. ಮೆಸ್ಸಿ ಅವರು ಡಿಸೆಂಬರ್ 12ರಂದು ರಾತ್ರಿ ಕೋಲ್ಕತಾಕ್ಕೆ ಆಗಮಿಸಲಿದ್ದಾರೆ. ಎರಡು ದಿನ ಹಾಗೂ ಒಂದು ರಾತ್ರಿಯನ್ನು ಕೋಲ್ಕತಾದಲ್ಲಿ ಕಳೆಯಲಿದ್ದಾರೆ. ಡಿ.13ರಂದು ಸಂಜೆ ಮೆಸ್ಸಿ ಅವರು ಅದಾನಿ ಪ್ರತಿಷ್ಠಾನ ಆಯೋಜಿಸಿರುವ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಅಹ್ಮದಾಬಾದ್ ಗೆ ಪ್ರಯಾಣಿಸಲಿದ್ದಾರೆ. ಡಿಸೆಂಬರ್ 14ರಂದು ಮುಂಬೈಗೆ ತೆರಳಲಿದ್ದು, ಬ್ರೆಬೋರ್ನ್ ಹಾಗೂ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಡಿಸೆಂಬರ್ 15ರಂದು ಮೆಸ್ಸಿ ಅವರು ಪ್ರಧಾನಿ ಮೋದಿ ಅವರನ್ನು ಅವರ ನಿವಾಸದಲ್ಲಿ ಭೇಟಿಯಾಗಲಿದ್ದಾರೆ. ಫಿರೋಝ್ ಶಾ ಕೋಟ್ಲಾ ಸ್ಟೇಡಿಯಂನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
IND vs AUS: ಟಿ20 ಸರಣಿ ಸೋಲಿಗೆ ಸೇಡು ತೀರಿಸಿಕೊಂಡ ಭಾರತ ಎ ಮಹಿಳಾ ತಂಡ! ಐತಿಹಾಸಿಕ ODI ಸರಣಿ ಜಯ
ಬ್ರಿಸ್ಬೇನ್ನಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ಆಸೀಸ್ ತಂಡವನ್ನು 2 ವಿಕೆಟ್ಗಳಿಂದ ಸೋಲಿಸಿತು. ಇದಕ್ಕೂ ಮೊದಲು, ಆಸ್ಟ್ರೇಲಿಯಾ ವಿರುದ್ಧ ಇದೇ ಮೈದಾನದಲ್ಲಿ ನಡೆದ ಮೊದಲ ಏಕದಿನ ಪಂದ್ಯವನ್ನು ಭಾರತ ಇದೇ ರೀತಿಯಲ್ಲಿ ಗೆದ್ದುಕೊಂಡಿತು.
ಧೋನಿಯಿಂದ ಬೇಸತ್ತು 2008ರಲ್ಲೇ ನಿವೃತ್ತಿ ಘೋಷಿಸುವವನಿದ್ದೆ! ಸೆಹ್ವಾಗ್ ಶಾಕಿಂಗ್ ಹೇಳಿಕೆ
251 ಏಕದಿನ ಪಂದ್ಯಗಳಲ್ಲಿ, ವೀರೇಂದ್ರ ಸೆಹ್ವಾಗ್ 15 ಶತಕಗಳು ಮತ್ತು ಒಂದು ದ್ವಿಶತಕದ ಸಹಾಯದಿಂದ 104 ಕ್ಕಿಂತ ಹೆಚ್ಚು ಸ್ಟ್ರೈಕ್ ರೇಟ್ನೊಂದಿಗೆ 8273 ರನ್ ಗಳಿಸಿದ್ದಾರೆ. ಇದಲ್ಲದೆ, ಧೋನಿ ನಾಯಕತ್ವದಲ್ಲಿ ಟೀಮ್ ಇಂಡಿಯಾ 2011 ರ ಏಕದಿನ ವಿಶ್ವಕಪ್ ಅನ್ನು ತನ್ನ ತವರು ನೆಲದಲ್ಲಿ ಗೆಲ್ಲುವಲ್ಲಿ ವೀರೇಂದ್ರ ಪ್ರಮುಖ ಪಾತ್ರ ವಹಿಸಿದ್ದಾರೆ.
ಏಷ್ಯಾಕಪ್ನಿಂದ ಇಬ್ಬರು ವಿಧ್ವಂಸಕ ಆಟಗಾರರಿಗೆ ನೋ ಚಾನ್ಸ್! ಟೆಸ್ಟ್ ಕಡೆ ಗಮನ ನೀಡಲು ಬಿಸಿಸಿಐ ಸೂಚನೆ!
2025ರ ಏಷ್ಯಾ ಕಪ್ ಸೆಪ್ಟೆಂಬರ್ನಲ್ಲಿ ನಡೆಯಲಿದೆ. ಇದು ಸೆಪ್ಟೆಂಬರ್ 9 ರಿಂದ 28 ರವರೆಗೆ ಯುಎಇಯಲ್ಲಿ ನಡೆಯಲಿದೆ. ಒಟ್ಟು 8 ತಂಡಗಳು ಭಾಗವಹಿಸುತ್ತಿವೆ. ಭಾರತ ಮತ್ತು ಪಾಕಿಸ್ತಾನದ ಜೊತೆಗೆ ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ ಭಾಗವಹಿಸುತ್ತಿವೆ.
IPLನಲ್ಲಿ ಸತತ 520, 539 ರನ್, ಟೆಸ್ಟ್ನಲ್ಲೂ ಗೋಲ್ಡನ್ ಫಾರ್ಮ್! ಆದ್ರೂ ಈತ ಏಷ್ಯಾಕಪ್ ಆಡೋದು ಡೌಟ್!
ಏಷ್ಯಾ ಕಪ್ಗಾಗಿ ಭಾರತೀಯ ತಂಡದಲ್ಲಿ ಸ್ಥಾನ ಪಡೆಯಲು ಸುಮಾರು 25ಕ್ಕೂ ಹೆಚ್ಚು ಆಟಗಾರರು ಪೈಪೋಟಿ ನಡೆಸುತ್ತಿದ್ದಾರೆ. ಕಳೆದ ಒಂದು ವರ್ಷದಿಂದ ಬಿಸಿಸಿಐ ಟಿ20 ಸ್ವರೂಪಕ್ಕೆ ಒಂದು ತಂಡವನ್ನು ಮತ್ತು ಏಕದಿನ ಮತ್ತು ಟೆಸ್ಟ್ಗಳಿಗೆ ಇನ್ನೊಂದು ತಂಡವನ್ನು ಕಣಕ್ಕಿಳಿಸುತ್ತಿದೆ. ಏಷ್ಯಾ ಕಪ್ನಲ್ಲೂ ಟೀಮ್ ಇಂಡಿಯಾ ಅದೇ ಸೂತ್ರದೊಂದಿಗೆ ಕಣಕ್ಕೆ ಇಳಿಯುತ್ತದೆಯೇ ಎಂದು ಕಾದು ನೋಡಬೇಕಾಗಿದೆ.
ಸಂಜು ಸ್ಯಾಮ್ಸನ್ರನ್ನ ತಂಡಕ್ಕೆ ಸೇರಿಸಿಕೊಳ್ಳಲು ಕೆಕೆಆರ್ ಈ ಮೂವರಲ್ಲಿ ಒಬ್ಬರನ್ನ ಬಿಡಲೇಬೇಕಾಗುತ್ತದೆ!
ಸಿಎಸ್ಕೆ ಹಾಗೂ ಕೆಕೆಆರ್ (CSK and KKR) ಫ್ರಾಂಚೈಸಿಗಳು ಸಂಜು ಸ್ಯಾಮ್ಸನ್ಗಾಗಿ ಪ್ರಯತ್ನ ಪಡುತ್ತಿವೆ. ಚೆನ್ನೈ ತಂಡ ಟ್ರೇಡಿಂಗ್ನಲ್ಲಿ ಒಂದು ಹೆಜ್ಜೆ ಮುಂದಕ್ಕೆ ಹೋಗಿದ್ದು, ಟ್ರೇಡಿಂಗ್ ಆಟಗಾರರನ್ನ ಬಿಟ್ಟುಕೊಡುವ ಹಂತಕ್ಕೆ ಹೋಗಿತ್ತು. ಆದರೆ ರಾಯಲ್ಸ್ ಸಿಎಸ್ಕೆ ನಾಯಕ ಋತುರಾಜ್ ಗಾಯಕ್ವಾಡ್, ರವೀಂದ್ರ ಜಡೇಜಾ ಅಥವಾ ಶಿವಂ ದುಬೆಗೆ ಬೇಡಿಕೆ ಇಟ್ಟಿದ್ದರಿಂದ ಟ್ರೇಡಿಂಗ್ ಮಾತುಕತೆ ಅರ್ಧಕ್ಕೆ ನಿಂತಿದೆ.
ಯುವಿ ಪ್ರಕಾರ ಆಂಡರ್ಸನ್-ತೆಂಡೂಲ್ಕರ್ ಸರಣಿಯ ಬೆಸ್ಟ್ ಮೂಮೆಂಟ್ ಇದಂತೆ
ಟಿಂ ಇಂಡಿಯಾದ ಮಾಜಿ ಸ್ಟಾರ್ ಆಟಗಾರ ಯುವರಾಜ್ ಸಿಂಗ್ ಟೂರ್ನಿಯ ಮೆಮೊರೆಬಲ್ ಮೂವ್ಮೆಂಟ್ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ಹಾಗಿದ್ರೆ, ಅವರು ಹೇಳಿದ ಮೆಮೊರೆಬಲ್ ಮೂವ್ಮೆಂಟ್ ಯಾವುದು ಎಂದು ನೋಡೋಣ ಬನ್ನಿ.
ಸ್ಟಾರ್ ಬೌಲರ್ ಗಳ ಕೆಲಸದ ಒತ್ತಡ ನಿಭಾಯಿಸುವ ಬಿಸಿಸಿಐ ಕ್ರಮ ಸಮರ್ಥಿಸಿದ ಭುವನೇಶ್ವರ್
ಜಸ್ಪ್ರಿತ್ ಬುಮ್ರಾ | PC : PTI ಹೊಸದಿಲ್ಲಿ, ಆ.14: ಸ್ಟಾರ್ ಬೌಲರ್ ಗಳ ಕೆಲಸದ ಒತ್ತಡವನ್ನು ನಿಭಾಯಿಸುವ ಕುರಿತು ಚರ್ಚೆ ನಡೆಯುತ್ತಿರುವಾಗಲೇ ಭಾರತದ ವೇಗಿ ಭುವನೇಶ್ವರ ಕುಮಾರ್ ಅವರು ಜಸ್ಪ್ರಿತ್ ಬುಮ್ರಾರ ಬೆಂಬಲಕ್ಕೆ ನಿಂತಿದ್ದಾರೆ. ಇಂಗ್ಲೆಂಡ್ ವಿರುದ್ಧದ 2025ರ ಆವೃತ್ತಿಯ ಆ್ಯಂಡರ್ಸನ್-ತೆಂಡುಲ್ಕರ್ ಟ್ರೋಫಿ ಟೂರ್ನಿಗಿಂತ ಮೊದಲು ಐದು ಟೆಸ್ಟ್ ಪಂದ್ಯಗಳ ಪೈಕಿ ಬುಮ್ರಾ ಅವರು ಮೂರೇ ಪಂದ್ಯವನ್ನು ಆಡಲಿದ್ದಾರೆ ಎಂದು ಆಯ್ಕೆದಾರರು ನಿರ್ಧರಿಸಿದ್ದರು. ಈ ಹೆಜ್ಜೆಯು ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ‘ಪೋಡ್ಕಾಸ್ಟ್ ಟಾಕ್’ನೊಂದಿಗೆ ಮಾತನಾಡಿದ ಭುವನೇಶ್ವರ್, ಈ ನಿರ್ಧಾರವನ್ನು ಬಲವಾಗಿ ಸಮರ್ಥಿಸಿಕೊಂಡರು. ‘‘ಬುಮ್ರಾ ಅವರು ಎಲ್ಲ ಮಾದರಿಯ ಕ್ರಿಕೆಟ್ ನಲ್ಲಿ ಎಷ್ಟು ವರ್ಷದಿಂದ ಆಡುತ್ತಿದ್ದಾರೆ ಎನ್ನುವುದನ್ನು ಪರಿಗಣಿಸಬೇಕು. ಈ ಎಲ್ಲ ಮಾದರಿಯಲ್ಲಿ ಆಡುವುದು ಕಷ್ಟಕರ. ಬುಮ್ರಾ ಹೊಂದಿರುವ ಬೌಲಿಂಗ್ ಶೈಲಿಯಿಂದ ಅವರಿಗೆ ಹಾಗೂ ಇತರರಿಗೆ ಯಾವುದೇ ಸಮಯದಲ್ಲಿ ಗಾಯವಾಗಬಹುದು’’ ಎಂದರು. ‘‘ಐದು ಪಂದ್ಯಗಳಲ್ಲಿ ಮೂರರಲ್ಲಿ ಆಡುವುದರಿಂದ ನನಗೆ ಏನೂ ಸಮಸ್ಯೆ ಇಲ್ಲ. ಆ ಮೂರು ಪಂದ್ಯಗಳಲ್ಲಿ ಬುಮ್ರಾ ಉತ್ತಮವಾಗಿ ಆಡಬಲ್ಲರು ಎಂದು ಆಯ್ಕೆ ಸಮಿತಿಗೆ ಗೊತ್ತಿತ್ತು. ಬುಮ್ರಾ ಅವರು ಎಲ್ಲ ಐದು ಪಂದ್ಯಗಳಲ್ಲಿ ಆಡದೇ ಇದ್ದರೂ ಮೂರು ಪಂದ್ಯಗಳಲ್ಲಿ ಮಹತ್ವದ ಕೊಡುಗೆ ನೀಡಿದ್ದಾರೆ’’ ಎಂದು ಭುವಿ ಹೇಳಿದರು. ‘‘ಹಲವು ವರ್ಷಗಳಿಂದ ಎಲ್ಲ ಮಾದರಿಯ ಕ್ರಿಕೆಟ್ ನಲ್ಲಿ ಆಡುವುದು ಎಷ್ಟು ಕಷ್ಟ ಎನ್ನುವುದು ಜನರಿಗೆ ಅರ್ಥವಾಗುವುದಿಲ್ಲ. ಬುಮ್ರಾ ಯಾವಾಗಲೂ ಕಠಿಣ ಪರಿಸ್ಥಿತಿಯಲ್ಲಿ ಬೌಲಿಂಗ್ ಮಾಡುತ್ತಾರೆ. ಇದರಿಂದ ಮಾನಸಿಕ ಹಾಗೂ ದೈಹಿಕ ಒತ್ತಡ ಉಂಟಾಗುತ್ತದೆ. ದೀರ್ಘ ಸಮಯದ ತನಕ ಆಡಬೇಕಾದರೆ ಕೆಲಸದ ಒತ್ತಡವನ್ನು ನಿಭಾಯಿಸುವುದು ಅಗತ್ಯ’’ ಎಂದು ಭುವನೇಶ್ವರ ಹೇಳಿದರು. ಇಂಗ್ಲೆಂಡ್ ತಂಡದ ವಿರುದ್ಧ ಸರಣಿಯಲ್ಲಿ ಬುಮ್ರಾ ಅವರು ಮೂರೇ ಪಂದ್ಯಗಳನ್ನು ಆಡಿದ್ದರೂ 2 ಬಾರಿ ಐದು ವಿಕೆಟ್ ಗೊಂಚಲು ಸಹಿತ ಒಟ್ಟು 14 ವಿಕೆಟ್ ಗಳನ್ನು ಉರುಳಿಸಿ ತನ್ನ ಮೇಲಿಟ್ಟಿರುವ ನಂಬಿಕೆಯನ್ನು ಉಳಿಸಿಕೊಂಡಿದ್ದರು. 207 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ಬುಮ್ರಾ ಅವರು 457 ವಿಕೆಟ್ ಗಳನ್ನು ಉರುಳಿಸಿ ಭಾರತದ ಬೌಲಿಂಗ್ ದಾಳಿಯ ಪ್ರಮುಖ ಅಸ್ತ್ರವಾಗಿ ಉಳಿದುಕೊಂಡಿದ್ದಾರೆ. ್..
LSG ಯನ್ನ 7,090 ಕೋಟಿಗೆ ಖರೀದಿಸಿದಾಗ ಹುಚ್ಚ ಅಂದ್ರು, ಈಗ ಅದರ ಮೌಲ್ಯ ಕೇಳಿದ್ರ ಶಾಕ್ ಆಗ್ತಾರೆ: ಗೋಯಂಕಾ
ಲಖನೌ ಸೂಪರ್ ಜೈಂಟ್ಸ್ ಕಳೆದ ನಾಲ್ಕು ಸೀಸನ್ಗಳಲ್ಲಿ ಆಡಿದ್ದು, ಎರಡು ಬಾರಿ ಪ್ಲೇಆಫ್ಗೆ ತಲುಪಿದೆ. ಇದರಿಂದ ತಂಡದ ಮೌಲ್ಯ 13,147 ಕೋಟಿ ರೂ.ಗಳಿಗೆ ಏರಿದೆ. ಗೋಯೆಂಕಾ ಅವರು ಒಂದು ಸಂದರ್ಭದಲ್ಲಿ ಹೇಳಿದ್ದಾರೆ.
15 ಸ್ಥಾನಕ್ಕೆ 25ಕ್ಕೂ ಹೆಚ್ಚು ಆಟಗಾರರಿಂದ ಪೈಪೋಟಿ! ಯಾರಿಗೆ ಸಿಗುತ್ತೇ ಏಷ್ಯಾಕಪ್ನಲ್ಲಿ ಚಾನ್ಸ್?
ಮುಂಬರುವ ಏಷ್ಯಾಕಪ್ಗೆ 15 ಆಟಗಾರರನ್ನು ಆಯ್ಕೆ ಮಾಡುವುದು ಬಿಸಿಸಿಐ ಆಯ್ಕೆದಾರರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಮೀಸಲು ಪಟ್ಟಿಯಲ್ಲಿ ಹೆಚ್ಚುವರಿ ಮೂವರು ಆಟಗಾರರನ್ನು ಆಯ್ಕೆ ಮಾಡುವ ಸಾಧ್ಯತೆಯಿದೆ.
ಐಪಿಎಲ್ನಲ್ಲಿಸತತ 3 ಸೀಸನ್ನಲ್ಲಿ 625, 435, 559 ರನ್! ಆದ್ರೂ ಇವರಿಗೆ ಏಷ್ಯಾಕಪ್ನಲ್ಲಿ ಸ್ಥಾನ ಡೌಟ್
2025ರ ಏಷ್ಯಾ ಕಪ್ ಸೆಪ್ಟೆಂಬರ್ 9 ರಿಂದ ಯುಎಇಯಲ್ಲಿ ನಡೆಯಲಿದೆ. ಒಟ್ಟು 8 ತಂಡಗಳು ಭಾಗವಹಿಸುತ್ತಿವೆ. ಅವುಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಗುಂಪು 'ಎ' ನಲ್ಲಿ ಭಾರತ, ಪಾಕಿಸ್ತಾನ, ಓಮನ್ ಮತ್ತು ಯುಎಇ ಸೇರಿವೆ, ಆದರೆ ಗುಂಪು 'ಬಿ' ನಲ್ಲಿ ಅಫ್ಘಾನಿಸ್ತಾನ, ಬಾಂಗ್ಲಾದೇಶ, ಹಾಂಗ್ ಕಾಂಗ್ ಮತ್ತು ಶ್ರೀಲಂಕಾ ಸೇರಿವೆ. ಫೈನಲ್ ಸೆಪ್ಟೆಂಬರ್ 28 ರಂದು ನಡೆಯಲಿದೆ.
ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ ಸಚಿನ್ ಪುತ್ರ! ಅಕ್ಕಾ ಸಾರಾಗೂ ಅರ್ಜುನ್ ಮದುವೆಯಾಗುತ್ತಿರುವುದೇಕೆ?
25 ವರ್ಷದ ಅರ್ಜುನ್ ತೆಂಡೂಲ್ಕರ್ ಮುಂಬೈ ಮೂಲದ ಉದ್ಯಮಿ ರವಿ ಘಾಯ್ (Ravi Ghai) ಅವರ ಮೊಮ್ಮಗಳಾದ ಸಾನಿಯಾ ಚಂದೋಕ್ ಅವರೊಂದಿಗೆ ಖಾಸಗಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.