ಅಯ್ಯರ್ ಕಮ್ಬ್ಯಾಕ್, ನಿವೃತ್ತಿ ಹೊಂದಿದ್ರು ವಿರಾಟ್-ರೋಹಿತ್ಗೆ ಜಾಕ್ಪಾಟ್! ಆ 3 ಹೊಸಬರಿಗೂ ಚಾನ್ಸ್
ಬಿಸಿಸಿಐ 2025-26 ಸೆಂಟ್ರಲ್ ಕಾಂಟ್ರ್ಯಾಕ್ಟ್ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾರನ್ನು ಎ+ ದರ್ಜೆಯಲ್ಲಿ ಮುಂದುವರಿಸಲಿದೆ. ಶ್ರೇಯಸ್ ಅಯ್ಯರ್ ಎ ಕೆಟಗರಿಗೆ ಸೇರಲು ಸಾಧ್ಯತೆ ಇದೆ.
RCB vs GT: ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ ತಂಡಗಳ ನಡುವೆ ಏಪ್ರಿಲ್ 2ರ ಬುಧವಾರ ಐಪಿಎಲ್ನ 14ನೇ ಪಂದ್ಯ ನಡೆಯಲಿದೆ. ರಜತ್ ಪಾಟೀದಾರ್ ಮತ್ತು ಶುಭ್ಮನ್ ಗಿಲ್ ನಾಯಕತ್ವದ ತಂಡಗಳ ನಡುವಿನ ಪಂದ್ಯದ ಪ್ರಮುಖ 10 ಅಂಶಗಳು ಇಲ್ಲಿವೆ.
ಮಿಂಚಿದ ಪಂಜಾಬ್ ಬೌಲರ್ಸ್! ಲಕ್ನೋ ತಂಡವನ್ನ 171ಕ್ಕೆ ನಿಯಂತ್ರಿಸಿದ ಅಯ್ಯರ್ ಪಡೆ
ಐಪಿಎಲ್ 2025 ರ 13ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ 171 ರನ್ ಗಳಿಸಿತು. ನಿಕೋಲಸ್ ಪೂರನ್, ಆಯುಷ್ ಬದೋನಿ ಮತ್ತು ಅಬ್ದುಲ್ ಸಮದ್ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು.
ಟಿ20 ಕ್ರಿಕೆಟ್ | 8 ಸಾವಿರಕ್ಕೂ ಅಧಿಕ ರನ್ ಗಳಿಸಿದ ಭಾರತದ 5ನೇ ಆಟಗಾರ ಸೂರ್ಯಕುಮಾರ್
ಸೂರ್ಯಕುಮಾರ್ | PC : NDTV ಮುಂಬೈ: ಟಿ20 ಕ್ರಿಕೆಟ್ ನಲ್ಲಿ 8,000 ರನ್ ಪೂರೈಸಿದ ಭಾರತದ 5ನೇ ಆಟಗಾರ ಎನಿಸಿಕೊಂಡಿರುವ ಸೂರ್ಯಕುಮಾರ್ ಮಹತ್ವದ ಮೈಲಿಗಲ್ಲು ತಲುಪಿದ್ದಾರೆ. ಸೋಮವಾರ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ತಂಡ 8 ವಿಕೆಟ್ ಗಳ ಅಂತರದಿಂದ ಗೆದ್ದಿರುವ ಐಪಿಎಲ್ ಪಂದ್ಯದಲ್ಲಿ ಸೂರ್ಯ ಈ ಸಾಧನೆ ಮಾಡಿದ್ದಾರೆ. ಕೇವಲ 9 ಎಸೆತಗಳಲ್ಲಿ ಔಟಾಗದೆ 27 ರನ್ ಗಳಿಸಿದ ಸೂರ್ಯ ಅವರು ಮುಂಬೈ ತಂಡವು ಈ ಋತುವಿನಲ್ಲಿ ಗೆಲುವಿನ ಖಾತೆ ತೆರೆಯುವಲ್ಲಿ ತನ್ನದೇ ಆದ ಕೊಡುಗೆ ನೀಡಿದರು. ಸೂರ್ಯ ಅವರ ಸ್ಫೋಟಕ ಇನಿಂಗ್ಸ್ನಲ್ಲಿ 3 ಬೌಂಡರಿ ಹಾಗೂ 2 ಸಿಕ್ಸರ್ ಗಳಿದ್ದವು. ಸಿಕ್ಸರ್ ಸಿಡಿಸುವ ಮೂಲಕ ವಾಂಖೆಡೆ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್ ತಂಡವು ಗೆಲುವು ದಾಖಲಿಸಲು ನೆರವಾದರು. 8,000ಕ್ಕೂ ಅಧಿಕ ಟಿ20 ರನ್ ಗಳಿಸಿರುವ ಭಾರತೀಯ ಬ್ಯಾಟರ್ ಗಳ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ 12,976 ರನ್ಗಳ ಮೂಲಕ ಮೊದಲ ಸ್ಥಾನದಲ್ಲಿದ್ದಾರೆ. ಆ ನಂತರ 11,851 ರನ್ ಗಳಿಸಿರುವ ರೋಹಿತ್ ಶರ್ಮಾ ಅವರಿದ್ದಾರೆ. ಶಿಖರ್ ಧವನ್(9,797 ರನ್)ಹಾಗೂ ಸುರೇಶ್ ರೈನಾ(8,654 ರನ್)ಕ್ರಮವಾಗಿ 3ನೇ ಹಾಗೂ 4ನೇ ಸ್ಥಾನದಲ್ಲಿದ್ದಾರೆ. ಮುಂಬೈ ತಂಡವು ಸೋಮವಾರ ಕೆಕೆಆರ್ ವಿರುದ್ಧ 24ನೇ ಗೆಲುವು ದಾಖಲಿಸಿತು. ಐಪಿಎಲ್ ಇತಿಹಾಸದಲ್ಲಿ ಒಂದೇ ತಂಡದ ವಿರುದ್ಧ ಗರಿಷ್ಠ ಗೆಲುವಿನ ದಾಖಲೆ ನಿರ್ಮಿಸಿದೆ. ವಾಂಖಡೆ ಸ್ಟೇಡಿಯಮ್ ನಲ್ಲಿ ಕೆಕೆಆರ್ ವಿರುದ್ಧ ಮುಂಬೈನ 10ನೇ ಗೆಲುವು ಇದಾಗಿದೆ. ಈ ಮೂಲಕ ಒಂದೇ ಕ್ರೀಡಾಂಗಣದಲ್ಲಿ ಎದುರಾಳಿಯ ವಿರುದ್ಧ ಗರಿಷ್ಠ ಗೆಲುವು ದಾಖಲಿಸಿ ಮತ್ತೊಂದು ದಾಖಲೆ ನಿರ್ಮಿಸಿದೆ. ಮುಂಬೈ ತಂಡವ್ನ ಕೆಕೆಆರ್ ತಂಡವನ್ನು ಕೇವಲ 116 ರನ್ ಗೆ ನಿಯಂತ್ರಿಸಿತು. 23ರ ಹರೆಯದ ಎಡಗೈ ವೇಗಿ ಅಶ್ವನಿ ಕುಮಾರ್ 24 ರನ್ ಗೆ 4 ವಿಕೆಟ್ ಗಳನ್ನು ಪಡೆದು ಮಿಂಚಿದರು. ರಿಕೆಲ್ಟನ್ ಔಟಾಗದೆ 62 ರನ್ ಗಳಿಸಿ ಮುಂಬೈ ಈ ಋತುವಿನಲ್ಲಿ ಮೊದಲ ಗೆಲುವು ದಾಖಲಿಸಲು ನೆರವಾದರು. ಈ ಗೆಲುವಿನ ಮೂಲಕ ಮುಂಬೈ ಸತತ 2 ಸೋಲಿನಿಂದ ಹೊರ ಬಂತು. ►ಟಿ20 ಕ್ರಿಕೆಟ್ ನಲ್ಲಿ 8,000ಕ್ಕೂ ಅಧಿಕ ರನ್ ಗಳಿಸಿದ ಭಾರತೀಯ ಆಟಗಾರರು ವಿರಾಟ್ ಕೊಹ್ಲಿ-12,976 ರನ್ ರೋಹಿತ್ ಶರ್ಮಾ-11,851 ರನ್ ಶಿಖರ್ ಧವನ್-9,797 ರನ್ ಸುರೇಶ್ ರೈನಾ-8,654 ರನ್ ಸೂರ್ಯಕುಮಾರ್ ಯಾದವ್-8,007 ರನ್
ಚೊಚ್ಚಲ ಐಪಿಎಲ್ ಪಂದ್ಯದಲ್ಲಿ 4 ವಿಕೆಟ್ ಕಬಳಿಸಿದ ಭಾರತದ ಮೊದಲ ಬೌಲರ್ ಅಶ್ವನಿ ಕುಮಾರ್
ಅಶ್ವನಿ ಕುಮಾರ್ | PC : PTI ಮುಂಬೈ: ಐಪಿಎಲ್ ಟಿ20 ಟೂರ್ನಿಯಲ್ಲಿ ಆಡಿರುವ ತನ್ನ ಮೊತ್ತ ಮೊದಲ ಪಂದ್ಯದಲ್ಲಿ ಪಂಜಾಬ್ ಬೌಲರ್ ಅಶ್ವನಿ ಕುಮಾರ್ ಅಮೋಘ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆದರು. ಎಡಗೈ ವೇಗದ ಬೌಲರ್ ಕುಮಾರ್ ಸೋಮವಾರ ವಾಂಖೆಡೆ ಸ್ಟೇಡಿಯಮ್ ನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ತನ್ನ ಮೊದಲ ಎಸೆತದಲ್ಲಿ ವಿಕೆಟ್ ಉರುಳಿಸಿದ್ದಲ್ಲದೆ, 3 ಓವರ್ ಗಳ ಸ್ಪೆಲ್ ನಲ್ಲಿ 24 ರನ್ ನೀಡಿ 4 ವಿಕೆಟ್ ಗಳನ್ನು ತನ್ನದಾಗಿಸಿಕೊಂಡರು. ಮೊಹಾಲಿಯ ವೇಗದ ಬೌಲರ್ ಕುಮಾರ್ 4 ವಿಕೆಟ್ ಗೊಂಚಲು ಕಬಳಿಸಿ ಬ್ಯಾಟಿಂಗ್ ಸ್ನೇಹಿ ವಾಂಖೆಡೆ ಕ್ರೀಡಾಂಗಣದ ಪಿಚ್ ನಲ್ಲಿ ಕೆಕೆಆರ್ ತಂಡವನ್ನು 116 ರನ್ ಗೆ ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರವಹಿಸಿದರು. ಗೆಲ್ಲಲು ಸುಲಭ ಸವಾಲು ಪಡೆದ ಮುಂಬೈ ತಂಡವನ್ನು ರಿಕೆಲ್ಟನ್ ಹಾಗೂ ಸೂರ್ಯಕುಮಾರ್ ಯಾದವ್ ಗೆಲುವಿನ ದಡ ಸೇರಿಸಿದರು. 23ರ ಹರೆಯದ ಅಶ್ವನಿ ಕುಮಾರ್ ಕೆಕೆಆರ್ ನಾಯಕ ಅಜಿಂಕ್ಯ ರಹಾನೆ, ರಿಂಕು ಸಿಂಗ್, ಮನೀಶ್ ಪಾಂಡೆ ಹಾಗೂ ಆಂಡ್ರೆ ರಸೆಲ್ ವಿಕೆಟ್ ಗಳನ್ನು ಕಬಳಿಸಿದರು. ಆಟಗಾರರ ಹರಾಜಿನಲ್ಲಿ 30 ಲಕ್ಷ ರೂ.ಗೆ ಮುಂಬೈ ತಂಡವನ್ನು ಸೇರಿದ್ದ ಅಶ್ವನಿ ಕುಮಾರ್ ಇದೀಗ 4 ವಿಕೆಟ್ ಉರುಳಿಸಿ ದಾಖಲೆ ಪುಸ್ತಕದಲ್ಲಿ ಸ್ಥಾನ ಪಡೆದಿದ್ದಾರೆ. ಐಪಿಎಲ್ ನ ಚೊಚ್ಚಲ ಪಂದ್ಯದಲ್ಲಿ 4 ವಿಕೆಟ್ ಗೊಂಚಲು ಪಡೆದ ಭಾರತದ ಮೊದಲ ಬೌಲರ್ ಆಗಿ ಹೊರಹೊಮ್ಮಿದ್ದಾರೆ. ಆತಂಕದಿಂದ ಊಟವನ್ನೇ ಮಾಡದ ಅಶ್ವನಿ, ಪಂದ್ಯಕ್ಕೆ ಮೊದಲು ನಾನು ಬಾಳೆಹಣ್ಣು ಮಾತ್ರ ಸೇವಿಸಿದ್ದೆ ಎಂದು ಹೇಳಿದ್ದಾರೆ. ಅಶ್ವನಿ ಅವರ ಮೊದಲ ಎಸೆತದಲ್ಲೇ ರಹಾನೆ ಔಟಾದರು. 2ನೇ ಓವರ್ ನಲ್ಲಿ ರಿಂಕು ಸಿಂಗ್ ವಿಕೆಟ್ ಒಪ್ಪಿಸಿದರು. 3 ಎಸೆತಗಳ ನಂತರ ಮನೀಶ್ ವಿಕೆಟ್ ಒಪ್ಪಿಸಿದರು. ರಸೆಲ್ ಅವರು ಅಶ್ವನಿ 4ನೇ ಹಾಗೂ ಕೊನೆಯ ಬಲಿಪಶುವಾದರು. ‘‘ನನಗೆ ಈ ಅವಕಾಶ ಲಭಿಸಿದ್ದು ಹಾಗೂ ಈ ಪ್ರಶಸ್ತಿ ಸಿಗುತ್ತಿರುವುದು ಪ್ರಮುಖ ವಿಚಾರವಾಗಿದೆ. ನನ್ನ ಕೆಲಸ ನಾನು ಮಾಡಿದ್ದೆ. ಇದನ್ನೆಲ್ಲಾ ಎಂದಿಗೂ ಯೋಚಿಸಿರಲಿಲ್ಲ. ಈ ಪ್ರಶಸ್ತಿ ಗೆದ್ದಿರುವುದಕ್ಕೆ ಖುಷಿ ಇದೆ. ಮೊಹಾಲಿ ಜಿಲ್ಲೆಯ ಝಂಝೇರಿಯವನಾದ ನಾನು ಕಠಿಣ ಪರಿಶ್ರಮ ಹಾಗೂ ದೇವರ ದಯೆಯಿಂದ ಇಲ್ಲಿದ್ದೇನೆ’’ ಎಂದು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ನಂತರ ಅಶ್ವನಿ ಹೇಳಿದರು. ►ಚೊಚ್ಚಲ ಐಪಿಎಲ್ ಪಂದ್ಯದಲ್ಲಿ ಅಶ್ವನಿ ಕುಮಾರ್ ಸಾಧನೆ 4/24: ಚೊಚ್ಚಲ ಐಪಿಎಲ್ ಪಂದ್ಯದಲ್ಲಿ ನಾಲ್ಕು ವಿಕೆಟ್ ಗೊಂಚಲು(4-24)ಪಡೆದ ಭಾರತದ ಮೊದಲ ಬೌಲರ್ ಅಶ್ವನಿ. 6: ಅಶ್ವನಿ ಸಹಿತ ಕೇವಲ ಆರು ಬೌಲರ್ ಗಳು ಮಾತ್ರ ಐಪಿಎಲ್ ಟೂರ್ನಿಯ ಚೊಚ್ಚಲ ಪಂದ್ಯದಲ್ಲಿ 4 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್ ಗಳನ್ನು ಪಡೆದಿದ್ದಾರೆ. ಪಟ್ಟಿಯಲ್ಲಿ ಅಲ್ಝಾರಿ ಜೋಸೆಫ್(6-12), ಆಂಡ್ರೆ ಟೈ(5-17)ಹಾಗೂ ಶುಐಬ್ ಅಖ್ತರ್(4-11)ಅವರಿದ್ದಾರೆ. 15: ಐಪಿಎಲ್ ನಲ್ಲಿ ಅಶ್ವನಿ ಮೊದಲ ಪಂದ್ಯದಲ್ಲೇ ವಿಕೆಟ್ ಪಡೆದ 15ನೇ ಬೌಲರ್ ಆಗಿದ್ದಾರೆ. ಮಥೀಶ ಪಥಿರನ ಈ ಸಾಧನೆ ಮಾಡಿದ ಕೊನೆಯ ಬೌಲರ್. ಹನುಮ ವಿಹಾರಿ ಈ ಸಾಧನೆ ಗೈದ ಕೊನೆಯ ಭಾರತೀಯ ಬೌಲರ್.
ಬಡವರಿಗೂ ಬದುಕಲು ಬಿಡಿ: ಅಗ್ರಸ್ಥಾನದಲ್ಲಿರುವ ಆರ್ಸಿಬಿಯನ್ನು ಅಣಕಿಸಿದ ಸೆಹ್ವಾಗ್
ಸೆಹ್ವಾಗ್ | PC : PTI ಹೊಸದಿಲ್ಲಿ: ಅತ್ಯಂತ ಶ್ರೀಮಂತ ಕ್ರಿಕೆಟ್ ಟೂರ್ನಿ 2025ರ ಆವೃತ್ತಿಯ ಐಪಿಎಲ್ ನಲ್ಲಿ ಮೊದಲೆರಡು ಪಂದ್ಯಗಳನ್ನು ಗೆದ್ದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಕನಸಿನ ಆರಂಭ ಪಡೆದಿದೆ. ಹಾಲಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು 7 ವಿಕೆಟ್ ಗಳಿಂದ ಅದರದೇ ನೆಲದಲ್ಲಿ ಸೋಲಿಸಿ ಶುಭಾರಂಭ ಮಾಡಿರುವ ಆರ್ಸಿಬಿ ತಂಡ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಕೂಡ ಅದರದೇ ಕ್ರೀಡಾಂಗಣದಲ್ಲಿ 50 ರನ್ನಿಂದ ಮಣಿಸಿತ್ತು. ಸತತ ಎರಡು ಪಂದ್ಯಗಳ ಗೆಲುವಿನ ಮೂಲಕ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದೆ. ಪಂದ್ಯಾವಳಿಯಲ್ಲಿ ಭರ್ಜರಿ ಆರಂಭ ಪಡೆದು, ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೂ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಆರ್ಸಿಬಿ ತಂಡವನ್ನು ಅಣಕಿಸಿದ್ದಾರೆ. ಈ ತಂಡವನ್ನು ಗರೀಬ್(ಬಡವರು)ಎಂದು ಕರೆದಿದ್ದಾರೆ. ಈ ತನಕ ಐಪಿಎಲ್ ಪ್ರಶಸ್ತಿಯನ್ನು ಗೆಲ್ಲದ ಆರ್ಸಿಬಿಯಂತಹ ತಂಡಗಳು ಅಂಕಪಟ್ಟಿಯಲ್ಲಿ ಅಗ್ರ ಸ್ಥಾನಗಳನ್ನು ಆನಂದಿಸುವ ಅವಕಾಶ ಪಡೆಯಬೇಕು ಎಂದು ಸೆಹ್ವಾಗ್ ವ್ಯಂಗ್ಯವಾಡಿದರು. ‘‘ಬಡವರು ಐಪಿಎಲ್ ಪಾಯಿಂಟ್ ಪಟ್ಟಿಯಲ್ಲಿ ಮೇಲಿರಲಿ, ಅವರು ಫೋಟೊಗಳನ್ನು ಕ್ಲಿಕ್ ಮಾಡಲಿ, ಅವರು ಎಷ್ಟು ಕಾಲ ಅಗ್ರಸ್ಥಾನದಲ್ಲಿ ಇರುತ್ತಾರೆಂದು ಯಾರಿಗೆ ಗೊತ್ತು’’ ಎಂದು ಕ್ರಿಕ್ಬಝ್ನಲ್ಲಿ ನಡೆದ ಚಾಟ್ ನಲ್ಲಿ ಸೆಹ್ವಾಗ್ ತಿಳಿಸಿದರು. ‘‘ನಾನು ಹಣದ ಬಗ್ಗೆ ಮಾತನಾಡುತ್ತಿದ್ದೇನೆಂದು ನೀವು ಭಾವಿಸಿದ್ದೀರಾ? ಖಂಡಿತಾ ಇಲ್ಲ, ಅವರೆಲ್ಲರೂ ಹಣದ ವಿಷಯದಲ್ಲಿ ಶ್ರೀಮಂತರು. ಫ್ರಾಂಚೈಸಿಗಳು ಪ್ರತಿ ಋತುವಿನಲ್ಲಿ 400-500 ಕೋಟಿ ರೂ. ಗಳಿಸುತ್ತವೆ. ನಾನು ಹಣದ ಬಗ್ಗೆ ಮಾತನಾಡುತ್ತಿಲ್ಲ. ಒಂದೇ ಒಂದು ಟ್ರೋಫಿಯನ್ನು ಗೆಲ್ಲದ ತಂಡವನ್ನು ನಾನು ಗರೀಬ್ ಎಂದು ಕರೆಯುತ್ತಿದ್ದೇನೆ’’ ಎಂದು ಸೆಹ್ವಾಗ್ ಹೇಳಿದರು. ಆರ್ಸಿಬಿ ಅಲ್ಲದೆ, ಪಂಜಾಬ್ ಕಿಂಗ್ಸ್, ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಲಕ್ನೊ ಸೂಪರ್ ಜಯಂಟ್ಸ್ನಂತಹ ತಂಡಗಳು ಕೂಡ ಇನ್ನೂ ಐಪಿಎಲ್ ಪ್ರಶಸ್ತಿಯನ್ನು ಗೆದ್ದಿಲ್ಲ.
ಬೆಂಗಳೂರಿನಲ್ಲಿ ನಡೆಯುವ ಐಪಿಎಲ್ ಪಂದ್ಯಗಳಿಗೆ ನಮ್ಮ ಮೆಟ್ರೋ ಸೇವೆ ವಿಸ್ತರಣೆ, ಬಿಎಂಟಿಸಿ ವಿಶೇಷ ಬಸ್ ವ್ಯವಸ್ಥೆ
Chinnaswamy Stadium: ಬೆಂಗಳೂರಿನಲ್ಲಿ ನಡೆಯುವ ಐಪಿಎಲ್ ಪಂದ್ಯಗಳಿಗೆ ನಮ್ಮ ಮೆಟ್ರೋ ಸೇವೆ ವಿಸ್ತರಣೆ ಮಾಡಿದೆ. ಜೊತೆಗೆ ಬಿಎಂಟಿಸಿ ವಿಶೇಷ ಬಸ್ ವ್ಯವಸ್ಥೆಯನ್ನೂ ಮಾಡಲಾಗಿದೆ. ಅದರ ವಿವರ ಇಂತಿದೆ.
30 ಕೋಟಿ ಕೊಟ್ಟರೂ ಕಡಿಮೆ, ಅಂಥಾ ಬೌಲರ್ ಕೈಬಿಟ್ಟು ಕೈಸುಟ್ಟುಕೊಂಡ ಕೆಕೆಆರ್! ಡೆಲ್ಲಿಗೆ ಜಾಕ್ ಪಾಟ್
2024ರ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮಾರ್ಗದರ್ಶಕ ಗೌತಮ್ ಗಂಭೀರ್ ಈಗ ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗಿ ನೇಮಕಗೊಂಡಿದ್ದಾರೆ. ಅಲ್ಲದೆ, ತಂಡದ ನಾಯಕ ಶ್ರೇಯಸ್ ಅಯ್ಯರ್ ಕೂಡ KKRನಿಂದ ಹೊರಬಂದು ಪಂಜಾಬ್ ಕಿಂಗ್ಸ್ ಸೇರಿಕೊಂಡಿದ್ದಾರೆ. ಈ ಬದಲಾವಣೆಗಳಿಂದಾಗಿ 2025ರ ಋತುವಿನಲ್ಲಿ KKR ದುರ್ಬಲ ಸ್ಥಿತಿಯಲ್ಲಿದೆ ಎಂದು ಕ್ರೀಡಾ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಒಂದೇ ಒಂದು ಗೆಲುವು 6ನೇ ಸ್ಥಾನಕ್ಕೆ ಲಗ್ಗೆಯಿಟ್ಟ ಮುಂಬೈ! ಪಾತಾಳಕ್ಕೆ ಕುಸಿದ ಹಾಲಿ ಚಾಂಪಿಯನ್ ಕೆಕೆಆರ್!
ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ತಂಡವು ಐಪಿಎಲ್ 2025ರಲ್ಲಿ KKR ವಿರುದ್ಧ 8 ವಿಕೆಟ್ಗಳಿಂದ ಗೆದ್ದು, ಪಾಯಿಂಟ್ ಟೇಬಲ್ನಲ್ಲಿ 6ನೇ ಸ್ಥಾನಕ್ಕೇರಿತು.
ನಿವೃತ್ತಿ ದಿನಾಂಕ ಬಹಿರಂಗಪಡಿಸಿದ ವಿರಾಟ್ ಕೊಹ್ಲಿ; 16 ವರ್ಷಗಳ ನಂತರ ಈ ಐಸಿಸಿ ಟ್ರೋಫಿ ಗೆದ್ದುಕೊಡಲು ಕಾತರ
Virat Kohli: ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ಗೆಲುವಿನ ನಂತರ ನಿವೃತ್ತಿ ವದಂತಿಗಳ ಮಧ್ಯೆ ಬ್ಯಾಟಿಂಗ್ ಸೂಪರ್ ಸ್ಟಾರ್ ವಿರಾಟ್ ಕೊಹ್ಲಿ ತಮ್ಮ ಯೋಜನೆಗಳ ಬಗ್ಗೆ ಪ್ರಮುಖ ಸುಳಿವು ನೀಡಿದ್ದಾರೆ.
ಬಿಗ್ಬ್ಯಾಷ್ ಲೀಗ್ ಆಡ್ತಾರಂತೆ ಕಿಂಗ್ ಕೊಹ್ಲಿ! 2 ವರ್ಷಕ್ಕೆ ಒಪ್ಪಂದ ಆಗಿದೆ ಎಂದ ಸಿಡ್ನಿ ಸಿಕ್ಸರ್ಸ್!
Vira Kohli: ಬಿಗ್ಬ್ಯಾಷ್ ಲೀಗ್ನಲ್ಲಿ ಕಿಂಗ್ ವಿರಾಟ್ ಕೊಹ್ಲಿ ಆಡ್ತಾರೆ ಅಂತ ಸಿಡ್ನಿ ಸಿಕ್ಸರ್ಸ್ ತಂಡ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದೆ. ಇದನ್ನು ನೋಡಿದ ವಿರಾಟ್ ಅಭಿಮಾನಿಗಳು ಫುಲ್ ಥ್ರಿಲ್ ಆಗಿದ್ದಾರೆ.
IPL 2025: ಪಂದ್ಯ ಗೆಲ್ಲುತ್ತಿದ್ದಂತೆ ಪಾಂಡ್ಯ ಉಮ್ಮ ಉಮ್ಮ ಅಂತ ಕಿಸ್ ಕೊಟ್ಟಿದ್ಯಾರಿಗೆ? ಇಲ್ಲಿದೆ ನೋಡಿ
Hardik Pandya: ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಗೆದ್ದು, ಪ್ಲೇಆಫ್ ರೇಸ್ನಲ್ಲಿ ತಮ್ಮ ಸ್ಥಾನವನ್ನು ಬಲಪಡಿಸಿಕೊಂಡಿತು. ಪಂದ್ಯ ಗೆದ್ದ ನಂತರ, ಹಾರ್ದಿಕ್ ಪಾಂಡ್ಯ ಕಿಸ್ ಕೊಟ್ಟಿದ್ದಾರೆ. ಅದು ಯಾರಿಗೆ ಅನ್ನೋದು ಈಗಿನ ಬಿಸಿಬಿಸಿ ಚರ್ಚೆ.
IPL 2025: ಏಕಾಏಕಿ ರಾಜಸ್ಥಾನ್ ರಾಯಲ್ಸ್ ತಂಡ ತೊರೆದು ಬೆಂಗಳೂರಿಗೆ ಬಂದಿದ್ಯಾಕೆ ಸಂಜು ಸ್ಯಾಮ್ಸನ್?
Sanju Samson: ಗುವಾಹಟಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಜಯಗಳಿಸಿದ ನಂತರ ರಾಜಸ್ಥಾನ್ ರಾಯಲ್ಸ್ ತಂಡವು ಚಂಡೀಗಢಕ್ಕೆ ಹಾರಿತು. ಆದರೆ ಸಂಜು ಹೋಗಲಿಲ್ಲ. ಅವರು ಬೆಂಗಳೂರಿನಲ್ಲಿರುವ ಬಿಸಿಸಿಐನ ಸೆಂಟರ್ ಆಫ್ ಎಕ್ಸಲೆನ್ಸ್ಗೆ ಬಂದಿದ್ಧಾರೆ.
IPL 2025: ಐಪಿಎಲ್ ಪ್ರಸಕ್ತ ಆವೃತ್ತಿಯಲ್ಲಿ ಈಗಾಗಲೇ 12 ಪಂದ್ಯಗಳು ನಡೆದಿವೆ. ಕೊನೆಯ ಪಂದ್ಯದಲ್ಲಿ ಕೆಕೆಆರ್ ವಿರುದ್ಧ ಮುಂಬೈ ಇಂಡಿಯನ್ಸ್ ಗೆದ್ದು ಬೀಗಿದೆ. ಇದರೊಂದಿಗೆ ಅಂಕಪಟ್ಟಿಯಲ್ಲಿ ಖಾತೆ ತೆರೆದಿದೆ. ಆದರೂ ಆರ್ಸಿಬಿ ತಂಡ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲೇ ಭದ್ರವಾಗಿದೆ. ಇಂಡಿಯನ್ ಪ್ರೀಮಿಯರಲ್ ಲೀಗ್ 2025ರ ಅಂಕಪಟ್ಟಿ ಇಲ್ಲಿದೆ.
18 ವರ್ಷ, 264 ಪಂದ್ಯಗಳು! ಮುಂಬೈ ಇಂಡಿಯನ್ಸ್ ಪರ ಎರಡು ಬಾರಿ ಮಾತ್ರ ಸಂಭವಿಸಿದೆ ಈ ವಿಶೇಷ ದಾಖಲೆ
ಕೆಕೆಆರ್ ವಿರುದ್ಧದ ಪಂದ್ಯದ ಮೂಲಕ ಐಪಿಎಲ್ಗೆ ಪಾದಾರ್ಪಣೆ ಮಾಡಿದ ಅಶ್ವಿನಿ ಕುಮಾರ್ ತಾವು ಎಸೆದ ಮೊದಲ ಓವರ್ನಲ್ಲೇ ಅನುಭವಿ ಅಜಿಂಕ್ಯಾ ರಹಾನೆ ಅವರ ವಿಕೆಟ್ ಪಡೆಕೊಂಡರು.
ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಪರ ಪದಾರ್ಪಣೆ ಮಾಡಿದ ಪಂಜಾಬ್ ಮೂಲದ ಆಟಗಾರ ಅಶ್ವನಿ ಕುಮಾರ್, ಆಕರ್ಷಣೆಯ ಕೇಂದ್ರಬಿಂದುವಾಗಿದ್ದಾರೆ. ಚೊಚ್ಚಲ ಐಪಿಎಲ್ ಪಂದ್ಯದ ಮೊದಲ ಎಸೆತದಲ್ಲಿ ವಿಕೆಟ್ ಪಡೆಯುವ ಜೊತೆಗೆ 4 ಪ್ರಮುಖ ವಿಕೆಟ್ ಪಡೆದಿದ್ದಾರೆ.
ಅಶ್ವಿನಿ ಕುಮಾರ್ ಬೌಲಿಂಗ್ ದಾಳಿಗೆ ತತ್ತರಿಸಿದ ಕೆಕೆಆರ್! ಮುಂಬೈಗೆ ಸುಲಭದ ಗುರಿ
ಯುವ ಬೌಲರ್ ಅಶ್ವಿನಿ ವೈಷ್ಣವ್ ಬೌಲಿಂಗ್ ದಾಳಿ ಎದುರಿಸಲಾಗದೆ ಪರದಾಡಿದ ಕೊಲ್ಕತ್ತಾ ನೈಟ್ ರೈಡರ್ಸ್ ಬ್ಯಾಟರ್ಗಳು ಒಬ್ಬರ ಹಿಂದೊಬ್ಬರಂತೆ ಪೆವಿಲಿಯನ್ ಪರೇಡ್ ನಡೆಸಿದರು.
MI vs KKR: W,W,W,W ಪಾದಾರ್ಪಣೆ ಪಂದ್ಯದಲ್ಲೇ ಬೊಂಬಾಟ್ ಬೌಲಿಂಗ್!
ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ನಾಯಕ ಹಾರ್ದಿಕ್ ಪಾಂಡ್ಯ (Hardik Pandya) ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು.
RCB ವಿರುದ್ಧ ಧೋನಿ 9ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದು ಈ ಒಂದೇ ಕಾರಣಕ್ಕೆ!
ಚೆನ್ನೈ ಸೂಪರ್ ಕಿಂಗ್ಸ್ ಮಾಜಿ ನಾಯಕ ಧೋನಿ 9ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದು ಟೀಕೆಗೆ ಕಾರಣವಾಯಿತು. ಕೋಚ್ ಫ್ಲೆಮಿಂಗ್ ಅವರ ಬ್ಯಾಟಿಂಗ್ ಕ್ರಮಾಂಕದ ಹಿಂದಿನ ಕಾರಣವನ್ನು ವಿವರಿಸಿದ್ದಾರೆ.
ಚೆಪಾಕ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಸಿಎಸ್ಕೆ ತಂಡವನ್ನು ಆರ್ಸಿಬಿ ಸೋಲಿಸಿತ್ತು. ಪಂದ್ಯದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಉಭಯ ತಂಡಗಳ ಅಭಿಮಾನಿಗಳ ನಡುವೆ ಟ್ರೋಲ್ಗಳು ನಡೆಯುತ್ತಿವೆ. ಇದೀಗ ಅಅಭಿಮಾನಿಗಳು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವಂತಿದೆ.
'ಐಪಿಎಲ್ನಿಂದ ರಿಯಾನ್ ಪರಾಗ್ರನ್ನು ಬ್ಯಾನ್ ಮಾಡಿ'! ರಿಯಾನ್ ಕುರಿತು ಹೀಗ್ಯಾಕಂತಿದ್ದಾರೆ ಫ್ಯಾನ್ಸ್
ರಾಜಸ್ಥಾನ ರಾಯಲ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 6 ರನ್ಗಳಿಂದ ಗೆದ್ದು ಮೊದಲ ಗೆಲುವು ದಾಖಲಿಸಿತು. ಇದೇ ಪಂದ್ಯದ ಬಳಿಕ ರಿಯಾನ್ ಪರಾಗ್ ತೋರಿದ ವರ್ತನೆ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಯಿತು.
IPL 2025 : ಮುಂಬೈ ಇಂಡಿಯನ್ಸ್ಗೆ ಗುಡ್ ನ್ಯೂಸ್, ಮ್ಯಾಚ್ ವಿನ್ನರ್ ಬರ್ತಿದ್ದಾರೆ!
IPL 2025: ಐಪಿಎಲ್ 2025ರಲ್ಲಿ ಮುಂಬೈ ಇಂಡಿಯನ್ಸ್ ಇನ್ನೂ ಗೆಲುವಿನ ಖಾತೆ ತೆರೆಯಿಲ್ಲ. ಬೋಲ್ಟ್, ಸ್ಯಾಂಟ್ನರ್ ಸೇರಿಸಿಕೊಂಡರೂ, ಮೊದಲ ಎರಡು ಪಂದ್ಯಗಳಲ್ಲಿ ಬೌಲಿಂಗ್ ಮತ್ತು ಬ್ಯಾಟಿಂಗ್ ವಿಫಲ. ಜಸ್ಪ್ರೀತ್ ಬುಮ್ರಾ ಶೀಘ್ರದಲ್ಲೇ ಮರಳುವ ನಿರೀಕ್ಷೆ.
RCB vs CSK: ಸಿಎಸ್ಕೆಗೆ ಅರಿಗಿಸಿಕೊಳ್ಳಲಾಗದ ಬಿಗ್ ಶಾಕ್! ಇದು ಆರ್ಸಿಬಿ ಆರ್ಭಟ, ಗತ್ತು ಅಂದ್ರೆ!
RCB: ಆರ್ಸಿಬಿ ಅಂದ್ರೆ ಒಂದು ಫ್ರಾಂಚೈಸಿ ಅಲ್ಲ, ಒಂದು ಕ್ರಿಕೆಟ್ ತಂಡವಷ್ಟೇ ಅಲ್ಲ. ಕೋಟ್ಯಂತರ ಅಭಿಮಾನಿಗಳ ಎಮೋಷನ್ ಅಂದ್ರೆ ತಪ್ಪಾಗಲ್ಲ. ನಮ್ಮ ಬದ್ಧ ಎದುರಾಳಿ ಚೆನ್ನೈ ವಿರುದ್ಧ ಆರ್ಸಿಬಿ ಗೆದ್ದು ಬೀಗಿದೆ. ಇದರ ಜೊತೆ ಆರ್ಸಿಬಿ ಅಭಿಮಾನಿಗಳು ಕೂಡ ಸಿಎಸ್ಕೆಗೆ ಬಿಗ್ ಶಾಕ್ ನೀಡಿದ್ದಾರೆ. ಏನದು ಅಂತೀರಾ ಮುಂದೆ ನೋಡಿ.
MI vs KKR: ತವರಿನಲ್ಲೇ ಮೊದಲ ಜಯ ಕಾಣುತ್ತಾ ಎಂಐ? 2ನೇ ಗೆಲುವಿನ ನಿರೀಕ್ಷೆಯಲ್ಲಿ ಕೆಕೆಆರ್!
MI vs KKR: ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಆತಿಥ್ಯ ವಹಿಸುತ್ತಿರುವುದರಿಂದ ಗೆಲುವು ಸಾಧಿಸದ ಮುಂಬೈ ಇಂಡಿಯನ್ಸ್ ಹೋಮ್ ಗ್ರೌಂಡ್ನಲ್ಲಿ ಮೊದಲ ಜಯದ ನಿರೀಕ್ಷೆಯಲ್ಲಿದೆ.
IPL 2025, CSK: ಕೆಟ್ಟ ದಾಖಲೆ ಬರೆದು ಇತಿಹಾಸ ಬರೆದು ಸಿಎಸ್ಕೆ; ಬರೋಬ್ಬರಿ 7 ವರ್ಷದಿಂದ ಅದೇ ರಾಗ!
ಸೋಲುಂಡಿರುವ ಪಂದ್ಯಗಳಲ್ಲಿ ಚೆನ್ನೈ ತಂಡ ಬರೋಬ್ಬರಿ 7 ಬಾರಿ ಟಾಸ್ ಗೆದ್ದು ಎದುರಾಳಿಗೆ ಬ್ಯಾಟಿಂಗ್ ನೀಡಿ ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. ಉಳಿದ ಎರಡು ಬಾರಿ ಟಾಸ್ ಸೋತು ಬೌಲಿಂಗ್ ಮಾಡಿತ್ತು.
ಇದೇ ವರ್ಷ ನಡೆಯಲಿದೆ ಭಾರತ-ಆಸ್ಟ್ರೇಲಿಯಾ ನಡುವೆ 3 ODI, 5 ಟಿ20 ಕದನ! ಸರಣಿಯ ಪೂರ್ಣ ವೇಳಾಪಟ್ಟಿ ಇಲ್ಲಿದೆ
ಈ ಸರಣಿ ಅಕ್ಟೋಬರ್ 19, 2025ರಂದು ಪ್ರಾರಂಭವಾಗಲಿದೆ. ಕ್ರಿಕೆಟ್ ಆಸ್ಟ್ರೇಲಿಯಾ ತನ್ನ 2025ರ ತವರು ಬೇಸಿಗೆ ವೇಳಾಪಟ್ಟಿಯನ್ನು ಮಾರ್ಚ್ 30, 2025ರಂದು ಬಿಡುಗಡೆ ಮಾಡಿದೆ. ಈ ಬಾರಿಯ ವೇಳಾಪಟ್ಟಿ ಆಸ್ಟ್ರೇಲಿಯಾದ ಎಲ್ಲಾ ರಾಜ್ಯಗಳು ಮತ್ತು ಪ್ರದೇಶಗಳನ್ನು ಒಳಗೊಂಡಿದ್ದು, ಪಂದ್ಯಗಳು ದೇಶದ ವಿವಿಧ ಭಾಗಗಳಲ್ಲಿ ನಡೆಯಲಿವೆ.
ಸುಲಭವಾಗಿ ಗೆಲ್ಲಬಹುದಾದ ಪಂದ್ಯವನ್ನ ಕೈಚೆಲ್ಲಿದ CSK! ರಾಜಸ್ಥಾನ್ ವಿರುದ್ಧ ಚೆನ್ನೈ ಸೋಲಿಗೆ 5 ಕಾರಣಗಳಿವು
ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಗೆದ್ದು ಭರವಸೆ ಮೂಡಿಸಿದ್ದ ಚೆನ್ನೈ ತಂಡ, ನಂತರ ಸತತ ಎರಡು ಸೋಲುಗಳನ್ನು ಕಂಡಿದೆ—ಮೊದಲು ಆರ್ಸಿಬಿ ವಿರುದ್ಧ ಚೆಪಾಕ್ನಲ್ಲಿ ಮತ್ತು ಈಗ ರಾಜಸ್ಥಾನ ರಾಯಲ್ಸ್ ವಿರುದ್ಧ ಗುವಾಹಟಿಯಲ್ಲಿ. ಈ ಸೋಲುಗಳು ತಂಡದ ಈ ಋತುವಿನ ಯಶಸ್ಸಿನ ಮೇಲೆ ಪ್ರಶ್ನೆಗಳನ್ನು ಎತ್ತಿವೆ.
IPL 2025: ಸೀಸನ್ನ ಮೊದಲ ಗೆಲುವಿನ ನಿರೀಕ್ಷೆಯಲ್ಲಿ ಮುಂಬೈ; ಎಂಐ vs ಕೆಕೆಆರ್ ಐಪಿಎಲ್ ಪಂದ್ಯದ 10 ಅಂಶಗಳು
ಐಪಿಎಲ್ 18ನೇ ಆವೃತ್ತಿಯ 12ನೇ ಪಂದ್ಯದಲ್ಲಿ ಮಾಜಿ ಚಾಂಪಿಯನ್ ತಂಡಗಳು ಮುಖಾಮುಖಿಯಾಗುತ್ತಿವೆ. 5 ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವು ಕೋಲ್ಕತ್ತಾ ನೈಟ್ ರೈಡರ್ಸ್ (Mumbai Indians vs Kolkata Knight Riders) ತಂಡವನ್ನು ಎದುರಿಸಲಿದೆ. ಇಂದಿನ (ಮಾರ್ಚ್ 31) ಪಂದ್ಯದಲ್ಲಿ ಮುಂಬೈ ತಂಡ ಗೆಲುವು ಸಾಧಿಸಬೇಕಾದ ಅನಿವಾರ್ಯತೆ ಇದೆ.
ಗ್ಲೆನ್ ಫಿಲಿಪ್ಸ್ ಪಕ್ಕಕ್ಕಿಡಿ, ಪತಿರಾಣ ಹಿಡಿದ ಈ ಫ್ಲೈಯಿಂಗ್ ಕ್ಯಾಚ್ ವಿಡಿಯೋ ನೋಡಿ! ವಾವ್ ಅಂತೀರಾ
ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ನಡುವಿನ ಐಪಿಎಲ್ ಪಂದ್ಯದಲ್ಲಿ ಮಥಿಷ ಪತಿರಾನ ಅದ್ಭುತ ಕ್ಯಾಚ್ ಹಿಡಿದು ವೈರಲ್ ಆಗಿದ್ದಾರೆ. ರಾಜಸ್ಥಾನ 182 ರನ್ ಗಳಿಸಿತು.
ಇನ್ಸ್ಟಾಗ್ರಾಮ್ ಫಾಲೊವರ್ಸ್; ಸಿಎಸ್ಕೆ ಹಿಂದಿಕ್ಕಿದ ಆರ್ಸಿಬಿ
ಇನ್ಸ್ಟಾಗ್ರಾಮ್ ಫಾಲೊವರ್ಸ್; ಸಿಎಸ್ಕೆ ಹಿಂದಿಕ್ಕಿದ ಆರ್ಸಿಬಿ
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡದ ಪರ ಪದಾರ್ಪಣೆ ಪಂದ್ಯದಲ್ಲೇ ಲೆಗ್ ಸ್ಪಿನ್ನರ್ ಝೀಶನ್ ಅನ್ಸಾರಿ ಅಮೋಘ ಪ್ರದರ್ಶನ ನೀಡಿದ್ದಾರೆ. ತಮ್ಮ ಚೊಚ್ಚಲ ಪಂದ್ಯದಲ್ಲೇ 3 ಪ್ರಮುಖ ವಿಕೆಟ್ ಕಬಳಿಸಿದ ಬೌಲರ್, ತಂಡದ ಸೋಲಿನ ನಡುವೆಯೂ ಗಮನಸೆಳೆದಿದ್ದಾರೆ.
ಅಪ್ಪ ಟೈಲರ್, ಕ್ರಿಕೆಟ್ ತರಬೇತಿಗೆ 300 ರೂಪಾಯಿ ಕೂಡ ಇರಲಿಲ್ಲ! ಡಿಸಿ ವಿರುದ್ಧ 3 ವಿಕೆಟ್
ಹೈದರಾಬಾದ್ ತಂಡ ಸೋತರೂ ಕೂಡ ಐಪಿಎಲ್ಗೆ ಪಾದಾರ್ಪಣೆ ಮಾಡಿದ ಯುವ ಬೌಲರ್ ಒಬ್ಬ ಕ್ರಿಕೆಟ್ ಜಗತ್ತಿನಲ್ಲಿ ಚರ್ಚೆಯ ವಿಷವಾಗಿದ್ದಾರೆ. ಅವರು ಇಂದಿನ ಪಂದ್ಯದಲ್ಲಿ ಹೈದರಾಬಾದ್ ಪರ ವಿಕೆಟ್ ಪಡೆದ ಏಕೈಕ ಬೌಲರ್ ಎನಿಸಿಕೊಂಡಿದ್ದಾರೆ.
ಆಸಿಸ್ ವೇಗಿಯಿಂದ ಹೊಸ ರೆಕಾರ್ಡ್! ಡಿಸಿ ಪರ ಯಾವುದೇ ಬೌಲರ್ ಮಾಡದ ವಿಶೇಷ ದಾಖಲೆ ಬರೆದ ಸ್ಟಾರ್ಕ್
ಆಸ್ಟ್ರೇಲಿಯಾದ ಅನುಭವಿ ವೇಗಿ ಮಿಚೆಲ್ ಸ್ಟಾರ್ಕ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಈ ಹಿಂದೆ ಯಾವುದೇ ವೇಗದ ಬೌಲರ್ ಮಾಡದ ವಿಶೇಷ ದಾಖಲೆ ಒಂದನ್ನು ತಮ್ಮ ಹೆಸರಿಗೆ ಸೇರಿಸಿಕೊಂಡಿದ್ದಾರೆ.
ಮುಂಬೈ ಇಂಡಿಯನ್ಸ್ vs ಕೋಲ್ಕತ್ತಾ ನೈಟ್ ರೈಡರ್ಸ್: ನಾಳಿನ ಐಪಿಎಲ್ ಪಂದ್ಯದ 10 ಪ್ರಮುಖ ಅಂಶಗಳು
ಮುಂಬೈ ಇಂಡಿಯನ್ಸ್ vs ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳ ನಡುವೆ ಮಾರ್ಚ್ 31ರಂದು ಪಂದ್ಯ ನಡೆಯಲಿದೆ. ಉಭಯ ತಂಡಗಳಿಗೂ ಈ ಪಂದ್ಯದಲ್ಲಿ ಗೆಲುವು ಅನಿವಾರ್ಯವಾಗಿದೆ. ಪಂದ್ಯಕ್ಕೆ ಸಂಬಂಧಿಸಿದ 10 ಪ್ರಮುಖ ಅಂಶಗಳು ಇಲ್ಲಿವೆ.
ಸ್ಟಾರ್ಕ್ ಬೌಲಿಂಗ್ ದಾಳಿಗೆ ಹೈದರಾಬಾದ್ ಉಡೀಸ್! ಡಿಸಿಗೆ ಸಾಧಾರಣ ಗುರಿ ನೀಡಿದ ಎಸ್ಆರ್ಹೆಚ್
ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಸನ್ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಿದ್ದು, ಹೈದರಾಬಾದ್ 163 ರನ್ಗಳಿಗೆ ಆಲೌಟ್ ಆಗಿ 164 ರನ್ಗಳ ಗುರಿ ನೀಡಿದೆ.
ಅಕ್ಟೋಬರ್ನಲ್ಲಿ ಟೀಮ್ ಇಂಡಿಯಾದ ಆಸ್ಟ್ರೇಲಿಯಾ ಪ್ರವಾಸ; 3 ಏಕದಿನ ಹಾಗೂ 5 ಪಂದ್ಯಗಳ ಟಿ20 ಸರಣಿಯ ವೇಳಾಪಟ್ಟಿ ಇಲ್ಲಿದೆ
ಮುಂಬರುವ ಅಕ್ಟೋಬರ್ ಹಾಗೂ ನವೆಂಬರ್ ತಿಂಗಳಲ್ಲಿ ಭಾರತ ಕ್ರಿಕೆಟ್ ತಂಡ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದೆ. ಕಾಂಗರೂಗಳ ವಿರುದ್ಧ 3 ಏಕದಿನ ಹಾಗೂ 5 ಟಿ20 ಪಂದ್ಯಗಳನ್ನಾಡಲಿದೆ. ಸರಣಿಯ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ.
ಪವರ್ಪ್ಲೇನಲ್ಲಿ 4 ವಿಕೆಟ್ ಕಳೆದುಕೊಂಡ್ರು ಡೋಂಟ್ ಕೇರ್! ಡೆಲ್ಲಿ ಬೆವರಿಳಿಸಿದ 22ರ ಅನಿಕೇತ್ ವರ್ಮಾ ಯಾರು?
ಪವರ್ಪ್ಲೇ ಮುಗಿಯುವುದರೊಳಗೆ ಪ್ರಮುಖ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ಹಂತದಲ್ಲಿ ಬ್ಯಾಟಿಂಗ್ ಬಂದ 22ರ ಹರೆಯದ ಅನಿಕೇತ್ ವರ್ಮಾ ಡೆಲ್ಲಿ ಬೌಲರ್ಗಳ ಬೆವರಿಳಿಸಿದರು.
ರೋಹಿತ್ ಶರ್ಮಾ ಇತಿಹಾಸ; ಈ ಮೈಲಿಗಲ್ಲು ತಲುಪಿದ ಮೊದಲ ಭಾರತೀಯ
ರೋಹಿತ್ ಶರ್ಮಾ ಇತಿಹಾಸ; ಈ ಮೈಲಿಗಲ್ಲು ತಲುಪಿದ ಮೊದಲ ಭಾರತೀಯ