SENSEX
NIFTY
GOLD
USD/INR

Weather

25    C

ಡಿಜಿಟಲ್ ಸುದ್ದಿ ಮೂಲಗಳು

... ...View News by News Source

ಈಗೇನಾದ್ರೂ ಲೋಕಸಭಾ ಚುನಾವಣೆ ನಡೆದ್ರೆ ಯಾರು ಗೆಲ್ತಾರೆ? ಇಲ್ಲಿದೆ ಮೂಡ್​ ಆಫ್​ ದಿ ನೇಷನ್​ ಸಮೀಕ್ಷೆ ರಿಸಲ್ಟ್! Mood of the Nation ​

Mood of the Nation : ಮೂಡ್​ ಆಫ್​ ದಿ ನೇಷನ್​ (MOTN) ಸಮೀಕ್ಷೆಯಲ್ಲಿ ಅಚ್ಚರಿಯ ಫಲಿತಾಂಶ ಹೊರಬಿದ್ದಿದೆ. ಈಗೇನಾದರೂ ಲೋಕಸಭಾ ಚುನಾವಣೆ ನಡೆದರೆ ಬಿಜೆಪಿ ನೇತೃತ್ವದ ಎನ್​ಡಿಎ ಮೈತ್ರಿಕೂಟ 343 ಸ್ಥಾನಗಳನ್ನು ಗೆಲ್ಲಲಿದೆ ಎಂದು ಸಮೀಕ್ಷೆ ಭವಿಷ್ಯ ನುಡಿದಿದೆ. 2024ರ ಲೋಕಸಭಾ ಚುನಾವಣೆಯಲ್ಲಿ 232 ಸ್ಥಾನಗಳಲ್ಲಿ ಗೆಲುವು ಸಾಧಿಸಿರುವ ಕಾಂಗ್ರೆಸ್ ನೇತೃತ್ವದ ಇಂಡಿಯಾ ಒಕ್ಕೂಟ 188 ಸ್ಥಾನಗಳಿಗೆ ಕುಸಿಯುತ್ತದೆ. ಇಂಡಿಯಾ ಟುಡೇ ಮತ್ತು ಸಿವೋಟರ್, ಮೂಡ್ ಆಫ್ ದಿ ನೇಷನ್ (MOTN) ಸಮೀಕ್ಷೆಯನ್ನು 2025ರ ಜನವರಿ […] The post ಈಗೇನಾದ್ರೂ ಲೋಕಸಭಾ ಚುನಾವಣೆ ನಡೆದ್ರೆ ಯಾರು ಗೆಲ್ತಾರೆ? ಇಲ್ಲಿದೆ ಮೂಡ್​ ಆಫ್​ ದಿ ನೇಷನ್​ ಸಮೀಕ್ಷೆ ರಿಸಲ್ಟ್! Mood of the Nation ​ first appeared on ವಿಜಯವಾಣಿ .

ವಿಜಯವಾಣಿ 13 Feb 2025 7:09 am

ಇನ್ವೆಸ್ಟ್ ಕರ್ನಾಟಕ ಸಾಮರ್ಥ್ಯ ಜಾಗತಿಕ; ಕೇಂದ್ರ ಸಚಿವ ಪಿಯೂಷ್ ಗೋಯಲ್ ಶ್ಲಾಘನೆ

ಬೆಂಗಳೂರು: ‘ಕರ್ನಾಟಕ ಹಲವು ಜಗತ್ತು’ ಹೆಗ್ಗಳಿಕೆಗೆ ಇಂಬು ನೀಡಿದ ಸಾಮರ್ಥ್ಯ ಅನಾವರಣ, ರಾಜ್ಯದ ಬೆಳವಣಿಗೆ, ಆರ್ಥಿಕತೆ ವೃದ್ಧಿಗೆ ನೆರವಾದ 15 ಸಾಧಕ ಉದ್ಯಮಿಗಳಿಗೆ ಪುರಸ್ಕರಿಸಿ ಸಾರ್ಥಕತೆ ಮೆರೆದ ಕ್ಷಣಕ್ಕೆ ಬುಧವಾರದ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ಸಾಕ್ಷಿಯಾಯಿತು. ಭಾರತದ ರಫ್ತು ವಹಿವಾಟು 800 ಬಿಲಿಯನ್ ಡಾಲರ್ ತಲುಪಿದ್ದು, ಇದರಲ್ಲಿ ಕರ್ನಾಟಕದ್ದೇ ಸಿಂಹಪಾಲು ಎಂದು ಹೊಗಳಿದ ಕೇಂದ್ರ ಸಚಿವ ಪಿಯೂಷ್ ಗೋಯೆಲ್ ಮೆಚ್ಚುಗೆ ಗಿಟ್ಟಿಸಿಕೊಂಡರು. ಜಗತ್ತು, ಭಾರತ, ಕರ್ನಾಟಕದ ಮುಂದಿರುವ ಹಲವು ಸವಾಲುಗಳು, ವಿಪುಲ ಅವಕಾಶ, ಉದಯೋನ್ಮುಖ ತಂತ್ರಜ್ಞಾನ, […] The post ಇನ್ವೆಸ್ಟ್ ಕರ್ನಾಟಕ ಸಾಮರ್ಥ್ಯ ಜಾಗತಿಕ; ಕೇಂದ್ರ ಸಚಿವ ಪಿಯೂಷ್ ಗೋಯಲ್ ಶ್ಲಾಘನೆ first appeared on ವಿಜಯವಾಣಿ .

ವಿಜಯವಾಣಿ 13 Feb 2025 6:32 am

ಸಾಲ ಕಿರುಕುಳಕ್ಕೆ ಅಂಕುಶ; ಬಲವಂತದ ವಸೂಲಿ ದಂಧೆಗೆ ಸುಗ್ರೀವಾಜ್ಞೆ ಮೂಗುದಾರ

ಬೆಂಗಳೂರು: ಬಡ, ಮಧ್ಯಮ ವರ್ಗದ ಜನತೆ ಮೇಲಿನ ದೌರ್ಜನ್ಯ ತಪ್ಪಿಸುವ ಕರ್ನಾಟಕ ಕಿರು (ಮೈಕ್ರೋ) ಸಾಲ ಮತ್ತು ಸಣ್ಣ ಸಾಲ (ಬಲವಂತದ ಕ್ರಮಗಳ ಪ್ರತಿಬಂಧಕ) ಆಧ್ಯಾದೇಶಕ್ಕೆ ಬುಧವಾರ ರಾಜ್ಯಪಾಲರ ಅಂಕಿತ ಬಿದ್ದಿದೆ. ಈ ಬೆಳವಣಿಗೆ ಬೆನ್ನಲ್ಲೇ ಸರ್ಕಾರ ರಾಜ್ಯಪತ್ರದಲ್ಲೂ ಪ್ರಕಟಿಸಿದೆ. ಇದರೊಂದಿಗೆ ಬಲವಂತದ ಸಾಲ ವಸೂಲಿ ದಂಧೆ ನಿಲ್ಲಿಸಲು ರಾಜ್ಯ ಸರ್ಕಾರಕ್ಕೆ ಬಲಿಷ್ಠ ಕಾನೂನಾತ್ಮಕ ಅಸ್ತ್ರ ಸಿಕ್ಕಿದಂತಾಗಿದೆ. ಸುಗ್ರೀವಾಜ್ಞೆಗೆ ಅಂಕಿತ ಹಾಕುವ ಜತೆಯಲ್ಲೇ ರಾಜ್ಯಪಾಲರು ಸರ್ಕಾರಕ್ಕೆ ಮೂರು ಪ್ರಮುಖ ಸಲಹೆಗಳನ್ನು ನೀಡಿದ್ದಾರೆ. ಮುಂಬರುವ ವಿಧಾನಮಂಡಲ ಅಧಿವೇಶನದಲ್ಲಿ ಈ […] The post ಸಾಲ ಕಿರುಕುಳಕ್ಕೆ ಅಂಕುಶ; ಬಲವಂತದ ವಸೂಲಿ ದಂಧೆಗೆ ಸುಗ್ರೀವಾಜ್ಞೆ ಮೂಗುದಾರ first appeared on ವಿಜಯವಾಣಿ .

ವಿಜಯವಾಣಿ 13 Feb 2025 6:30 am

ನಂಬಿಕೆ ವಿಚಾರದಲ್ಲಿ ಸ್ತ್ರೀ ಶೋಷಣೆ: ವಕೀಲೆ ಪಿ.ಕುಞೌಯಿಷಾ ಹೇಳಿಕೆ

ಕಾಸರಗೋಡು: ನಂಬಿಕೆ, ಆಚಾರದ ಹೆಸರಿನಲ್ಲಿ ಮಹಿಳೆಯರ ಶೋಷಣೆ ಕೊನೆಗೊಳಿಸಬೇಕು ಎಂದು ರಾಜ್ಯ ಮಹಿಳಾ ಆಯೋಗದ ಸದಸ್ಯೆ ಪಿ.ಕುಞೌಯಿಷಾ ತಿಳಿಸಿದ್ದಾರೆ. ಕಾಸರಗೋಡು ಸರ್ಕಾರಿ ಅತಿಥಿ ಗೃಹದಲ್ಲಿ ನಡೆದ ಜಿಲ್ಲಾಮಟ್ಟದ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಧಾರ್ಮಿಕ ಆಚಾರಗಳ ನೆಪದಲ್ಲಿ ಸಮಾಜಲ್ಲಿ ನಡೆಯುವ ಅನೇಕ ವಿಚಾರಗಳು ಕೆಲವು ಮಹಿಳೆಯರನ್ನು ಮಾನಸಿಕ, ದೈಹಿಕ ಹಾಗೂ ಆರ್ಥಿಕವಾಗಿ ಶೋಷಿಸುವ ಒಂದು ಮಾರ್ಗ. ಮನೆಯಲ್ಲಿ ತಲೆದೋರುವ ಸಮಸ್ಯೆಗಳ ನೆಪದಲ್ಲಿ ವಿವಾಹವಾಗಿ ಆಗಮಿಸಿದ ಮಹಿಳೆಯ ಶೋಷಣೆ ನಡೆಸಲಾಗುತ್ತಿದ್ದು, ಇದಕ್ಕೆ ಮಹಿಳೆಯ ಗಂಡ, ಅತ್ತೆ–ಮಾವ ಸಮಾನ ಕಾರಣರಾಗುತ್ತಿದ್ದಾರೆ. […] The post ನಂಬಿಕೆ ವಿಚಾರದಲ್ಲಿ ಸ್ತ್ರೀ ಶೋಷಣೆ: ವಕೀಲೆ ಪಿ.ಕುಞೌಯಿಷಾ ಹೇಳಿಕೆ first appeared on ವಿಜಯವಾಣಿ .

ವಿಜಯವಾಣಿ 31 Jan 2025 7:02 pm

ಆನೆ ಕಂದಕ ದುರಸ್ತಿ: ರೆಂಜಿಲಾಡಿ ಗ್ರಾಮಸ್ಥರಿಂದ ಅರಣ್ಯಾಧಿಕಾರಿಗೆ ಮನವಿ

ಕಡಬ: ಕಡಬ ತಾಲೂಕಿನ ರೆಂಜಿಲಾಡಿ ಗ್ರಾಮದಲ್ಲಿ ಅರಣ್ಯದಂಚಿನಲ್ಲಿ ನಿರ್ಮಾಣ ಮಾಡಲಾಗಿರುವ ಆನೆ ಕಂದಕವನ್ನು ವಿಸ್ತರಿಸುವಂತೆ ರೆಂಜಿಲಾಡಿ ಗ್ರಾಮಸ್ಥರ ನಿಯೋಗ ಸುಬ್ರಹ್ಮಣ್ಯ ವಲಯ ಅರಣ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಸುಬ್ರಹ್ಮಣ್ಯ ವಲಯ ಅರಣ್ಯಾಧಿಕಾರಿ ಕಚೇರಿಗೆ ರೆಂಜಿಲಾಡಿ ಭಾಗದ ಹೇರ, ಆಲಾಟ, ಎಲುವಾಳೆ, ಮಲ್ಯೋಡಿ, ನಿಡ್ಡೋ ಪ್ರದೇಶದ ಗ್ರಾಮಸ್ಥರ ನಿಯೋಗ ತೆರಳಿ ಮನವಿ ಸಲ್ಲಿಸಿದರು. ಪ್ರಮುಖರಾದ ಮೃತ್ಯುಂಜಯ ಭಿಡೆ ಕೆರೆತೋಟ, ಗಣೇಶ್ ಭಟ್ ನಿಡ್ಡೋ, ಚಂದ್ರಶೇಖರ ಗೌಡ ಎಲುವಾಳೆ, ಚಂದ್ರಶೇಖರ ಕಾಮತ್, ಸೀತಾರಾಮ ಎಲುವಾಳೆ, ಭಾಸ್ಕರ ಗೌಡ ಎಲುವಾಳೆ, ರಮೇಶ್ ಎಲುವಾಳೆ, […] The post ಆನೆ ಕಂದಕ ದುರಸ್ತಿ: ರೆಂಜಿಲಾಡಿ ಗ್ರಾಮಸ್ಥರಿಂದ ಅರಣ್ಯಾಧಿಕಾರಿಗೆ ಮನವಿ first appeared on ವಿಜಯವಾಣಿ .

ವಿಜಯವಾಣಿ 31 Jan 2025 6:55 pm

ಠಾಣೆಯಲ್ಲೇ ಸರ್ವಿಸ್​ ರಿವಲ್ವರ್​ನಿಂದ ಆತ್ಮಹತ್ಯೆ ಮಾಡಿಕೊಂಡ ಸಬ್​​ಇನ್​ಸ್ಪೆಕ್ಟರ್​​​​!: ಕಾರಣ ಹೀಗಿದೆ..| Revolver

ಆಂಧ್ರಪ್ರದೇಶ: ಠಾಣೆಯಲ್ಲೇ ಸರ್ವಿಸ್​ ರಿವಲ್ವರ್​ನಿಂದ( Revolver) ಸಬ್​​ಇನ್​ಸ್ಪೆಕ್ಟರ್​​​​ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಲ್ಲಿನ ಪಶ್ಚಿಮ ಗೋದಾವರಿ ಜಿಲ್ಲೆಯ ತನಕು ಗ್ರಾಮಾಂತರ ಠಾಣೆಯಲ್ಲಿ ಶುಕ್ರವಾರ ನಡೆದಿದೆ. ಇದನ್ನೂ ಓದಿ:ಬಾಲಿವುಡ್​ ಬಿಗ್​ಬಿ ಅಭಿನಯದ ಈ ಸಿನಿಮಾಗಳು ಇದುವರೆಗೂ ತೆರೆಕಂಡಿಲ್ಲ; ಅದರ ಹಿಂದಿನ ಕಾರಣ ಹೀಗಿದೆ.. | Amithabh Bachchan ಸಬ್​​ಇನ್​ಸ್ಪೆಕ್ಟರ್ ಎ.ಜಿ.ಎಸ್. ಮೂರ್ತಿ ಮೃತ. ಇತ್ತೀಚಿಗೆ ಭ್ರಷ್ಟಚಾರದ ಆರೋಪ ಇತನ ಮೇಲೆ ಹೊರಿಸಲಾಗಿತ್ತು. ವಿರುದ್ಧ ವಿಚಾರಣೆ ಬಾಕಿ ಇತ್ತು. ಇದೇ ವಿಚಾರವಾಗಿ ಇಂದು ಮುಂಜಾನೆ ಠಾಣೆಗೆ ಬಂದಿದ್ದ ಠಾಣೆಯಲ್ಲಿಯೇ ಮೂರ್ತಿ […] The post ಠಾಣೆಯಲ್ಲೇ ಸರ್ವಿಸ್​ ರಿವಲ್ವರ್​ನಿಂದ ಆತ್ಮಹತ್ಯೆ ಮಾಡಿಕೊಂಡ ಸಬ್​​ಇನ್​ಸ್ಪೆಕ್ಟರ್​​​​!: ಕಾರಣ ಹೀಗಿದೆ..| Revolver first appeared on ವಿಜಯವಾಣಿ .

ವಿಜಯವಾಣಿ 31 Jan 2025 6:55 pm

ಅರಿತು ಬಾಳುವುದೇ ನೈಜ ಸಾಮರ್ಥ್ಯ: ಮುಖ್ಯಶಿಕ್ಷಕಿ ಪರಿಮಳ ಹೇಳಿಕೆ

ಬೆಳ್ತಂಗಡಿ: ಇನ್ನೊಬ್ಬರನ್ನು ತುಳಿದು ಬದುಕುವ ಸಾಮರ್ಥ್ಯ ವ್ಯರ್ಥ. ಆದರೆ ಇನ್ನೊಬ್ಬರನ್ನು ಅರಿತು ಜತೆಯಾಗಿ ಬದುಕಿ ಬಾಳುವುದು ಸಾಮರ್ಥ್ಯ. ಬೇರೆ–ಬೇರೆ ಊರುಗಳಿಂದ ಬೇರೆ–ಬೇರೆ ಹಿನ್ನ್ನೆಲೆ ಹೊಂದಿರುವವರು ರುಡ್‌ಸೆಟ್ ಸಂಸ್ಥೆಗೆ ಬಂದು ಒಟ್ಟಾಗಿ ಒಂದೇ ಮನೆಯವರಂತೆ ಕಲಿತಿದ್ದಾರೆ. ಈ ಸಂಸ್ಥೆಯಲ್ಲಿ ವೃತ್ತಿ ಕೌಶಲದ ಜತೆಗೆ ಜೀವನ ಕೌಶಲ ಕಲಿಸಿ ಅದನ್ನು ಅಳವಡಿಸಿಕೊಂಡು ನಡೆಯಿರಿ ಎಂದು ಧರ್ಮಸ್ಥಳದ ಎಸ್.ಡಿ.ಎಂ. ಆಂಗ್ಲ ಮಾಧ್ಯಮ ಶಾಲೆಯ ಮುಖ್ಯಶಿಕ್ಷಕಿ ಪರಿಮಳ ಹೇಳಿದರು. ಉಜಿರೆ ರುಡ್‌ಸೆಟ್ ಸಂಸ್ಥೆಯಲ್ಲಿ 30 ದಿನದ ವಸ್ತ್ರ ವಿನ್ಯಾಸ ತರಬೇತಿ ಸಮಾರೋಪ ಸಮಾರಂಭದಲ್ಲಿ […] The post ಅರಿತು ಬಾಳುವುದೇ ನೈಜ ಸಾಮರ್ಥ್ಯ: ಮುಖ್ಯಶಿಕ್ಷಕಿ ಪರಿಮಳ ಹೇಳಿಕೆ first appeared on ವಿಜಯವಾಣಿ .

ವಿಜಯವಾಣಿ 31 Jan 2025 6:53 pm

ಜೈ ಬಾಪೂ, ಜೈ ಸಂವಿಧಾನ, ಜೈ ಭೀಮ ಕಾರ್ಯಕ್ರಮ

ಬೀದರ್: ರಾಷ್ಟ್ರೀಯ ವಿದ್ಯಾರ್ಥಿ ಕಾಂಗ್ರೆಸ್(ಎನ್‍ಎಸ್‍ಯುಐ) ವತಿಯಿಂದ ಮಹಾತ್ಮ ಗಾಂಧಿಜಿ ಹುತಾತ್ಮರಾದ ದಿನದ ಪ್ರಯುಕ್ತ ನಗರದ ಅಂಬೇಡ್ಕರ್ ವೃತ್ತದಲ್ಲಿ ಗುರುವಾರ ಜೈ ಬಾಪೂ, ಜೈ ಸಂವಿಧಾನ, ಜೈ ಭೀಮ ಕಾರ್ಯಕ್ರಮ ನಡೆಯಿತು. ರಾಷ್ಟ್ರೀಯ ವಿದ್ಯಾರ್ಥಿ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ವರುಣ್ ಚೌಧರಿ ಮಾತನಾಡಿ, ಮಹಾತ್ಮ ಗಾಂಧಿಜಿ ಅವರನ್ನು ಹತ್ಯೆ ಮಾಡಿದ್ದೇ ರಾಷ್ಟ್ರೀಯ ಸ್ವಯಂ ಸೇವಕ ಸಂಘ. ಗಾಂಧಿಜಿ ಅವರ ವಿಚಾರಗಳನ್ನು ಹತ್ಯೆ ಮಾಡುವ ಕೆಲಸವೂ ಸಂಘ ಹಾಗೂ ಬಿಜೆಪಿಯಿಂದ ನಡೆಯುತ್ತಿದೆ ಎಂದು ಆರೋಪಿಸಿದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು […] The post ಜೈ ಬಾಪೂ, ಜೈ ಸಂವಿಧಾನ, ಜೈ ಭೀಮ ಕಾರ್ಯಕ್ರಮ first appeared on ವಿಜಯವಾಣಿ .

ವಿಜಯವಾಣಿ 31 Jan 2025 6:51 pm

ಮತದಾನದ ಪ್ರಾಮುಖ್ಯದ ಅರಿವು: ಡಾ.ಶಲೀಪ್ ಎ.ಪಿ. ಸಲಹೆ

ಬೆಳ್ತಂಗಡಿ: ಉಜಿರೆಯ ಶ್ರೀ ಧ.ಮಂ. ಕಾಲೇಜಿನಲ್ಲಿ ರಾಜ್ಯಶಾಸ್ತ್ರ ವಿಭಾಗದ ವತಿಯಿಂದ ರಾಷ್ಟ್ರೀಯ ಮತದಾರರ ದಿನ ಆಚರಣೆ ನಡೆಯಿತು. ಕಾಲೇಜಿನ ಉಪಪ್ರಾಂಶುಪಾಲೆ, ಆಡಳಿತಾಂಗ ಕುಲಸಚಿವೆ ಹಾಗೂ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ.ಶಲೀಪ್ ಎ.ಪಿ. ಅಧ್ಯಕ್ಷತೆ ವಹಿಸಿ ಮಾತನಾಡಿ, ಮತದಾನದ ಪ್ರಾಮುಖ್ಯ ಏನೆಂದು ಅರಿತುಕೊಳ್ಳಬೇಕಾಗಿದೆ. ಯಾವುದೇ ಚುನಾವಣೆ ನಡೆದರೂ ಮತದಾರರು ಅದನ್ನು ಗಂಭೀರವಾಗಿ ಪರಿಗಣಿಸಬೇಕು. ಭಾರತವು ಜಗತ್ತಿನ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ದೇಶ. ಇಲ್ಲಿಯವರೆಗೆ ಸುಮಾರು 99.1 ಕೋಟಿ ಜನರು ಮತದಾರರ ಪಟ್ಟಿಯಲ್ಲಿ ಅಧಿಕೃತವಾಗಿ ದಾಖಲಾಗಿದ್ದಾರೆ. ಮತದಾನದ ಮಹತ್ವದ ಬಗ್ಗೆ […] The post ಮತದಾನದ ಪ್ರಾಮುಖ್ಯದ ಅರಿವು: ಡಾ.ಶಲೀಪ್ ಎ.ಪಿ. ಸಲಹೆ first appeared on ವಿಜಯವಾಣಿ .

ವಿಜಯವಾಣಿ 31 Jan 2025 6:51 pm

ಫೆ.22ರಂದು ಪಡ್ರೆ ಚಂದು ಪ್ರಶಸ್ತಿ ಪ್ರದಾನ

ಕಾಸರಗೋಡು: ಪೆರ್ಲದ ಪಡ್ರೆ ಚಂದು ಸ್ಮಾರಕ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರದ ಇಪ್ಪತ್ತೈದನೇ ವಾರ್ಷಿಕೋತ್ಸವ, ಪ್ರಶಸ್ತಿ ಪ್ರದಾನ, ಮಕ್ಕಳ ಯಕ್ಷಗಾನ ಬಯಲಾಟ ಫೆ.22, 23ರಂದು ಕೇಂದ್ರದ ಸಭಾಂಗಣದಲ್ಲಿ ಜರುಗಲಿದೆ. 22ರಂದು ಬೆಳಗ್ಗೆ 9ಕ್ಕೆ ಶ್ರೀ ಮಹಾಗಣಪತಿ ಹೋಮ, ಭಜನೆ, ಶ್ರೀ ಸತ್ಯನಾರಾಯಣ ಪೂಜೆ, 10.30ಕ್ಕೆ ಕೇಂದ್ರದ ವಿದ್ಯಾರ್ಥಿಗಳಿಂದ ಯಕ್ಷಗಾನ ತಾಳಮದ್ದಳೆ, ಮಧ್ಯಾಹ್ನ 2.30ಕ್ಕೆ ಕೇಂದ್ರದ ವಿದ್ಯಾರ್ಥಿಗಳಿಂದ ಪೂರ್ವರಂಗ, 2.30ಕ್ಕೆ ‘ವರಾಹಾವತಾರ’ಯಕ್ಷಗಾನ ಬಯಲಾಟ, ಸಂಜೆ 6ಕ್ಕೆ ಶ್ರೀದುರ್ಗಾಪೂಜೆ ನೆರವೇರಲಿದೆ. 23ರಂದು ಬೆಳಗ್ಗೆ 10.30ಕ್ಕೆ ನಾಟ್ಯಗುರು ಸಬ್ಬಣಕೋಡಿ ರಾಮಭಟ್ ಅವರ […] The post ಫೆ.22ರಂದು ಪಡ್ರೆ ಚಂದು ಪ್ರಶಸ್ತಿ ಪ್ರದಾನ first appeared on ವಿಜಯವಾಣಿ .

ವಿಜಯವಾಣಿ 31 Jan 2025 6:49 pm

ಶ್ರೀ ವೀರುಪಾಕ್ಷ ಶಿವಾಚಾರ್ಯರ ಕಾರ್ಯ ಅವಿಸ್ಮರಣೀಯ

ಹುಮನಾಬಾದ್: ಧರ್ಮ ಪ್ರಚಾರದ ಜತೆಗೆ ಶೈಕ್ಷಣಿಕ ಅಭಿವೃದ್ಧಿಗೆ ಶ್ರಮಿಸುತ್ತ ಭಕ್ತರಿಗೆ ಧರ್ಮೋಪದೇಶ ನೀಡುತ್ತಿರುವ ಸರಳ ಸಜ್ಜನಿಕೆ ವ್ಯಕ್ತಿತ್ವದ ಜಿ್ಲೆಯ ಅತ್ಯಂತ ಹಿರಿಯ ಸ್ವಾಮಿಗಳಾಗಿರುವ ತಾಲೂಕಿನ ಹುಡುಗಿ ಗ್ರಾಮದ ಹಿರೇಮಠದ ಪೀಠಾಧಿಪತಿ ಶ್ರೀ ವೀರುಪಾಕ್ಷ ಶಿವಾಚಾರ್ಯರ ಕಾರ್ಯ ಅವಿಸ್ಮರಣೀಯವಾಗಿದೆ ಎಂದು ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ ಹೇಳಿದರು. ಹುಡುಗಿ ಗ್ರಾಮದ ಹಿರೇಮಠದಲ್ಲಿ ಭಕ್ತ ವೃಂದ, ಶ್ರೀ ಕರಿಬಸವೇಶ್ವರ ಶಾಲೆ ಹಾಗೂ ಗ್ರಾಮಸ್ಥರ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ಮಠದ ಪಿಠಾಧಿಪತಿ ಶ್ರೀ ವೀರುಪಾಕ್ಷ ಶಿವಾಚಾರ್ಯರ ೯೬ನೇ ಜನ್ಮ ವರ್ಧಂತಿ ಮಹೋತ್ಸವ ಮತ್ತು […] The post ಶ್ರೀ ವೀರುಪಾಕ್ಷ ಶಿವಾಚಾರ್ಯರ ಕಾರ್ಯ ಅವಿಸ್ಮರಣೀಯ first appeared on ವಿಜಯವಾಣಿ .

ವಿಜಯವಾಣಿ 31 Jan 2025 6:48 pm

ಯಕ್ಷ ಭಾರತಿ ಆಮಂತ್ರಣ ಬಿಡುಗಡೆ

ಬೆಳ್ತಂಗಡಿ: ಕನ್ಯಾಡಿ ಯಕ್ಷಭಾರತಿಯ ದಶಮಾನೋತ್ಸವ ಸಮಾರಂಭವು ಫೆ.8ರಂದು ಉಜಿರೆಯ ಶ್ರೀರಾಮಕೃಷ್ಣ ಸಭಾಂಗಣದಲ್ಲಿ ನಡೆಯಲಿದ್ದು ಆಮಂತ್ರಣ ಪತ್ರಿಕೆಯನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಬಿಡುಗಡೆಗೊಳಿಸಿ ಶುಭಹಾರೈಸಿದರು. ಯಕ್ಷಭಾರತಿ ಅಧ್ಯಕ್ಷ ರಾಘವೇಂದ್ರ ಬೈಪಡಿತಾಯ ಉಜಿರೆ, ಕಾರ್ಯದರ್ಶಿ ದಿವಾಕರ ಆಚಾರ್ಯ ಗೇರುಕಟ್ಟೆ, ದಶಮಾನೋತ್ಸವ ಸಮಿತಿ ಅಧ್ಯಕ್ಷ ರವೀಂದ್ರ ಶೆಟ್ಟಿ ಬಳಂಜ, ಕಾರ್ಯದರ್ಶಿ ವಿದ್ಯಾಕುಮಾರ್ ಕಾಂಚೋಡು, ಟ್ರಸ್ಟಿಗಳಾದ ಹರೀಶ್ ರಾವ್ ಮುಂಡ್ರುಪ್ಪಾಡಿ, ಕುಸುಮಾಕರ ಕುತ್ತೋಡಿ, ಭವ್ಯಹೊಳ್ಳ ಉಜಿರೆ, ಸಂಚಾಲಕ ಮಹೇಶ ಕನ್ಯಾಡಿ, ಸುದರ್ಶನ್ ಕೆ.ವಿ.ಕನ್ಯಾಡಿ, ಶ್ರೀನಿವಾಸ ರಾವ್ ಕಲ್ಮಂಜ, […] The post ಯಕ್ಷ ಭಾರತಿ ಆಮಂತ್ರಣ ಬಿಡುಗಡೆ first appeared on ವಿಜಯವಾಣಿ .

ವಿಜಯವಾಣಿ 31 Jan 2025 6:48 pm

TP Meeting 2 ಹಾಸ್ಟೆಲ್‌ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ

ಕಾರವಾರ TP Meeting: ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಇಲಾಖೆ ಹಾಸ್ಟೆಲ್‌ಗಳ ಸುತ್ತ ಸ್ವಚ್ಛತೆ ಕಾಪಾಡಿ ಎಂದು ಕಾರವಾರ ತಾಲೂಕು ಪಂಚಾಯಿತಿ ಆಡಳಿತಾಧಿಕಾರಿ ಸೋಮಶೇಖರ ಮೇಸ್ತ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ತಾಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು. ಮಾಜಾಳಿ ಹಾಗೂ ಇನ್ನೂ ಕೆಲವೆಡೆ ಹಾಸ್ಟೆಲ್‌ಗಳ ಸುತ್ತ ಸ್ವಚ್ಛತೆ ಇಲ್ಲದಿರುವುದು ಕಂಡುಬಂದಿದೆ. ಅದನ್ನು ಸ್ವಚ್ಛ ಮಾಡಿಸಿ. ಕಿನ್ನರ, ದೇವಮಕ್ಕಿ ವಸತಿ ನಿಲಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು ಪೂರೈಕೆಗೆ ವ್ಯವಸ್ಥೆ ಮಾಡಿ ಎಂದು ಸೂಚಿಸಿದರು. […] The post TP Meeting 2 ಹಾಸ್ಟೆಲ್‌ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ first appeared on ವಿಜಯವಾಣಿ .

ವಿಜಯವಾಣಿ 26 Nov 2024 11:19 pm

Bye Election ಚಿತ್ತಾಕುಲಾ ಗ್ರಾಪಂಗೆ 350 ಮತ ಪಡೆದ ಸುಭಾಷ ದುರ್ಗೇಕರ್ ಆಯ್ಕೆ

ಕಾರವಾರ:ಇಲ್ಲಿನ ಚಿತ್ತಾಕುಲಾ ಗ್ರಾಮ ಪಂಚಾಯಿತಿ 2 ನೇ ವಾರ್ಡ್ (ಸೀಬರ್ಡ್ ಕಾಲನಿ) ಸದಸ್ಯ ಸ್ಥಾನಕ್ಕೆ ನಡೆದ Bye Election ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಸುಭಾಷ ದುರ್ಗೇಕರ್ ಮಂಗಳವಾರ ಚುನಾಯಿತರಾದರು. ಗ್ರಾಮ ಪಂಚಾಯಿತಿ ಅಧ್ಯಕ್ಷ, ಉತ್ತರ ಕನ್ನಡ ಸಹಕಾರ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ರಾಜು ತಾಂಡೇಲ ಅವರು ಕೆಲ ತಿಂಗಳ ಹಿಂದೆ ಹೃದಯಾಘಾತದಿಂದ ನಿಧನರಾಗಿದ್ದರು. ಅವರಿಂದ ಖಾಲಿಯಾದ ಗ್ರಾಪಂ ಸದಸ್ಯ ಸ್ಥಾನ ತುಂಬುವ ಸಲುವಾಗಿ ಉಪ ಚುನಾವಣೆ ನಡೆದಿತ್ತು. Bye Election ಉದಯ ಬಿಣಗೆ, ಉಮೇಶ […] The post Bye Election ಚಿತ್ತಾಕುಲಾ ಗ್ರಾಪಂಗೆ 350 ಮತ ಪಡೆದ ಸುಭಾಷ ದುರ್ಗೇಕರ್ ಆಯ್ಕೆ first appeared on ವಿಜಯವಾಣಿ .

ವಿಜಯವಾಣಿ 26 Nov 2024 11:05 pm

ಆನ್‌ಲೈನ್ ಕೋಚಿಂಗ್ ಸದುಪಯೋಗ ಪಡೆಯಲಿ

ಸಿದ್ದಾಪುರ: ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧರಾಗುವ ವಿದ್ಯಾರ್ಥಿಗಳು ಕೋಚಿಂಗ್ ಕೇಂದ್ರಗಳಿಗೆ ಲಕ್ಷಾಂತರ ರೂ. ವ್ಯಯಿಸಬೇಕಾಗಿದ್ದು ಇದರಿಂದ ಬಡವರಿಗೆ ತುಂಬಾ ಹೊರೆಯಾಗುತ್ತಿದೆ. ರಾಜ್ಯದ ಎಲ್ಲ ಮಕ್ಕಳಿಗೆ ಅನುಕೂಲವಾಗಲೆಂದು ಸರ್ಕಾರದಿಂದ ಉಚಿತ ಆನ್‌ಲೈನ್ ಕೋಚಿಂಗ್ ಪ್ರಾರಂಭಿಸಲಾಗಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು. ಪಟ್ಟಣದ ಹಾಳದಕಟ್ಟಾ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಗಣಕ ವಿಜ್ಞಾನ ಪ್ರಯೋಗಾಲಯ ಉದ್ಘಾಟಿಸಿ ಅವರು ಸೋಮವಾರ ಮಾತನಾಡಿದರು. ಸಿಇಟಿ, ನೀಟ್ ಮತ್ತಿತರ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗುವ ರಾಜ್ಯದ ಎಲ್ಲ ವಿದ್ಯಾರ್ಥಿಗಳಿಗೆ ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕದಲ್ಲಿ […] The post ಆನ್‌ಲೈನ್ ಕೋಚಿಂಗ್ ಸದುಪಯೋಗ ಪಡೆಯಲಿ first appeared on ವಿಜಯವಾಣಿ .

ವಿಜಯವಾಣಿ 26 Nov 2024 10:57 pm

ಯಕ್ಷಗಾನದಿಂದ ಸಂಸ್ಕಾರ ವರ್ಗಾವಣೆ ಕಾರ್ಯ

ಯಲ್ಲಾಪುರ: ಸಂಸ್ಕಾರವನ್ನು ಪೀಳಿಗೆಯಿಂದ ಪೀಳಿಗೆಗೆ ವರ್ಗಾಯಿಸುವ ಕಾರ್ಯವನ್ನು ಯಕ್ಷಗಾನ ಕಲೆ ನಿರಂತರವಾಗಿ ಮಾಡಿಕೊಂಡು ಬಂದಿದೆ ಎಂದು ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ಹೇಳಿದರು. ತಾಲೂಕಿನ ಮಾಗೋಡ ಮಹಾಗಣಪತಿ ದೇವಸ್ಥಾನದಲ್ಲಿ ಸೋಮವಾರ ರಾತ್ರಿ ಯಕ್ಷಗಾನ ಹಾಗೂ ಗೌರವಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಹಿರಿಯ ಕಲಾವಿದರ ಸಾಧನೆಯನ್ನು ಸ್ಮರಿಸುವುದು, ಅವರನ್ನು ಗೌರವಿಸುವುದರಿಂದ ಯುವ ಕಲಾವಿದರಿಗೆ ಸ್ಪೂರ್ತಿದೊರೆಯುತ್ತದೆ ಎಂದರು. ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಿರಿಯ ಭಾಗವತ ವಿದ್ವಾನ್ ಗಣಪತಿ ಭಟ್ಟ ಮೊಟ್ಟೆಗದ್ದೆ ಅವರನ್ನು ಗೌರವಿಸಿ ಅಭಿನಂದಿಸಲಾಯಿತು. […] The post ಯಕ್ಷಗಾನದಿಂದ ಸಂಸ್ಕಾರ ವರ್ಗಾವಣೆ ಕಾರ್ಯ first appeared on ವಿಜಯವಾಣಿ .

ವಿಜಯವಾಣಿ 26 Nov 2024 10:55 pm

ಕ್ರೀಡಾಪಟುಗಳಿಗೆ ಬೇಡ ಮಾದಕ ದ್ರವ್ಯದ ನಂಟು

ದಾಂಡೇಲಿ: ಕ್ರೀಡೆಯೊಂದಿಗೆ ಮಾದಕ ದ್ರವ್ಯ ತಳುಕು ಹಾಕಿಕೊಂಡಿದೆ. ಮಾದಕ ದ್ರವ್ಯ ಸೇವನೆಯಿಂದಾಗಿ ದೊಡ್ಡ ದೊಡ್ಡ ಕ್ರೀಡಾಪಟು ಕ್ರೀಡೆಯಿಂದ ಅನರ್ಹರಾಗುತ್ತಿರುವುದು ನೋವಿನ ಸಂಗತಿ ಎಂದು ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಬಿ.ಎಂ. ಪಾಟೀಲ ಹೇಳಿದರು. ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಕರ್ನಾಟಕ ವಿಶ್ವವಿದ್ಯಾಲಯ ಪುರುಷ ಮತ್ತು ಮಹಿಳಾ ಕುಸ್ತಿ ಪಂದ್ಯಾವಳಿ ಹಾಗೂ ವಿಶ್ವವಿದ್ಯಾಲಯದ ತಂಡದ ಆಯ್ಕೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಕ್ರೀಡೆಯಲ್ಲಿ ರಾಷ್ಟ್ರಮಟ್ಟದ ಸಾಧನೆ ಮಾಡಿದವರಿಗೆ ಉತ್ತಮ ಉದ್ಯೋಗಗಳು ಮನೆ ಬಾಗಿಲಿಗೆ ಬರುತ್ತವೆ. ಕ್ರೀಡಾಪಟುಗಳು ಸದುಪಯೋಗ […] The post ಕ್ರೀಡಾಪಟುಗಳಿಗೆ ಬೇಡ ಮಾದಕ ದ್ರವ್ಯದ ನಂಟು first appeared on ವಿಜಯವಾಣಿ .

ವಿಜಯವಾಣಿ 26 Nov 2024 10:50 pm

ವೈಯಕ್ತಿಕ ವಿಚಾರ ಮಾತನಾಡಿದರೆ ಸರಿ ಇರಲ್ಲ…!

ಕೂಡಲಸಂಗಮ: ನನ್ನ ಬಗ್ಗೆ ವೈಯಕ್ತಿಕವಾಗಿ ಮಾತನಾಡಿದರೆ ಸರಿ ಇರಲ್ಲ. ನಾನು ವಿಭೂತಿ ಧರಿಸುವ ಬಗ್ಗೆ ಮಾತನಾಡುವುದು ಸೂಕ್ತವಲ್ಲ. ವೈಯಕ್ತಿಕವಾಗಿ ನನ್ನ ಹಾಗೂ ನನ್ನ ಕುಟುಂಬದ ಬಗ್ಗೆ ಹೇಳಿಕೆ ನೀಡಿದರೆ ನಾನೂ ಎಲ್ಲಾ ಬಿಟ್ಟು ನಿಲ್ಲಬೇಕಾಗುತ್ತದೆ ಎಂದು ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ಹೇಳಿದರು. ಮಂಗಳವಾರ ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದಲ್ಲಿ ನಡೆದ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಮಹಾಸಭಾದ ರಾಜ್ಯ ಕಾರ್ಯಕಾರಣಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕೂಡಲಸಂಗಮದ […] The post ವೈಯಕ್ತಿಕ ವಿಚಾರ ಮಾತನಾಡಿದರೆ ಸರಿ ಇರಲ್ಲ…! first appeared on ವಿಜಯವಾಣಿ .

ವಿಜಯವಾಣಿ 26 Nov 2024 10:43 pm

ಇತರೆ ಸಮುದಾಯದವರನ್ನು ಸದಸ್ಯರನ್ನಾಗಿಸುವಂತೆ ಒತ್ತಾಯಿಸಿ ಧರಣಿ

ರಾಯಚೂರು: ಪರಿಶಿಷ್ಟ ಜಾತಿಗಳಲ್ಲಿ ಮೀಸಲಾತಿ ವರ್ಗೀಕರಣ ಜಾರಿಗಾಗಿ ದತ್ತಾಂಶ ಪರಿಶೀಲನೆ ಮಾಡಲು ಆಯೋಗವೊಂದನ್ನು ರಾಜ್ಯ ಸರ್ಕಾರ ರಚಿಸಿದೆ. ಈ ಆಯೋಗಕ್ಕೆ ಪ.ಜಾಯ ವಿವಿಧ ಸಮುದಾಯಗಳ ತಲಾ ಒಬ್ಬ ಪ್ರತಿನಿಧಿಯನ್ನು ಸದಸ್ಯರನ್ನಾಗಿ ನೇಮಕ ಮಾಡಬೇಕೆಂದು ಒತ್ತಾಯಿಸಿ ಮಾದಿಗ ಸಮಾಜದಿಂದ ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಭಾನುವಾರ ಧರಣಿ ನಡೆಸಲಾಯಿತು. ಮೀಸಲಾತಿ ವರ್ಗೀಕರಣ ಜಾರಿ ಮಾಡಲು ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶ ಎಚ್.ಎನ್.ನಾಗಮೋಹನ್‌ದಾಸ್ ಅವರ ಆಯೋಗವನ್ನು ರಚಿಸಲಾಗಿದೆ. ಇದರಿಂದ ಪಾರದರ್ಶಕ ದತ್ತಾಂಶ ಪರಿಶೀಲನೆ ಸಾಧ್ಯವಾಗುವುದಿಲ್ಲ ಆದ್ದರಿಂದ ಕೂಡಲೇ ಮಾದಿಗ, ಛಲವಾದಿ, ಲಂಬಾಣಿ, ಭೋವಿ, […] The post ಇತರೆ ಸಮುದಾಯದವರನ್ನು ಸದಸ್ಯರನ್ನಾಗಿಸುವಂತೆ ಒತ್ತಾಯಿಸಿ ಧರಣಿ first appeared on ವಿಜಯವಾಣಿ .

ವಿಜಯವಾಣಿ 26 Nov 2024 10:34 pm

ಪಶ್ಚಿಮ ವಲಯ ಕಮಲಾನಗರದಲ್ಲಿ ಮೂರು ಅಂತಸ್ತಿನ ಕಟ್ಟಡ ಬೀಳುವ ಸಾಧ್ಯತೆ: ಇಂದು ತೆರವು ಕಾರ್ಯ | Building Collapse

Building Collapse : ಪಶ್ಚಿಮ ವಲಯದ ಮಹಾಲಕ್ಷ್ಮೀಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಮಲಾನಗರದಲ್ಲಿ ತಳಪಾಯದ ಗೋಡೆ ಶೇ. 20 ರಷ್ಟು ಕುಸಿದಿದ್ದು, ಇಂದು ತೆರವು ಕಾರ್ಯವನ್ನು ಪ್ರಾರಂಭಿಸಲಾಗುವುದು. ಕಮಲಾನಗರ 3ನೇ ಮುಖ್ಯರಸ್ತೆಯ ಬಳಿ ದ್ವಿತೀಯ ನೀರುಗಾಲುವೆಗೆ ಹೊಂದಿಕೊಂಡಂತಿರುವ 3 ಅಂತಸ್ತಿನ ಮನೆಯನ್ನು ಸುಮಾರು 20-25 ವರ್ಷಗಳ ಹಿಂದೆ ನಿರ್ಮಿಸಲಾಗಿದೆ. ತಳಭಾಗದಲ್ಲಿ ದ್ವಿತೀಯ ನೀರುಗಾಲುವೆಯ ಮೂಲಕ ಬರುವ ನೀರು, ಮನೆಯ ತಳಪಾಯದಕ್ಕೆ ಹೋಗಿರುವ ಕಾರಣ, ತಳಪಾಯದ ನೀರಿನ ಸಂಪ್(ನೀರಿನ‌ ಟ್ಯಾಂಕ್) ಹಾಗೂ ಶೇ. 20 ರಷ್ಟು ತಳಪಾಯದ ಗೋಡೆ […] The post ಪಶ್ಚಿಮ ವಲಯ ಕಮಲಾನಗರದಲ್ಲಿ ಮೂರು ಅಂತಸ್ತಿನ ಕಟ್ಟಡ ಬೀಳುವ ಸಾಧ್ಯತೆ: ಇಂದು ತೆರವು ಕಾರ್ಯ | Building Collapse first appeared on ವಿಜಯವಾಣಿ .

ವಿಜಯವಾಣಿ 25 Oct 2024 6:48 am

ಐತಿಹಾಸಿಕ ಹಲಗಲಿಯಲ್ಲಿ ಡಾಲಿಗೆ ಕಾಂತಾರ ಲೀಲಾ ಜೋಡಿ!

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಸುಕೇಶ್​ ಡಿ. ನಿರ್ದೇಶಿಸುತ್ತಿರುವ ಐತಿಹಾಸಿಕ “ಹಲಗಲಿ’ ಸಿನಿಮಾ ಪ್ರಾರಂಭದಿಂದಲೂ ಸುದ್ದಿಯಾಗುತ್ತಿದೆ. ಮೊದಲು ಚಿತ್ರಕ್ಕೆ ಡಾರ್ಲಿಂಗ್​ ಕೃಷ್ಣ ನಾಯಕನಾಗಿ ಆಯ್ಕೆಯಾಗಿದ್ದರು. ಆದರೆ, ಎರಡು ವರ್ಷಗಳ ಕಾಲ ಸಮಯ ನೀಡುವುದು ಕಷ್ಟಕರವೆಂದು ಅವರು ತಂಡದಿಂದ ಹೊರನಡೆದರು. ಆ ಬಳಿಕ ಡಾಲಿ ಧನಂಜಯ ಚಿತ್ರಕ್ಕೆ ನಾಯಕನಾಗಿ ಆಯ್ಕೆಯಾಗಿದ್ದರು. ಹಾಗಾದರೆ, “ಹಲಗಲಿ’ಗೆ ನಾಯಕಿ ಯಾರಿರಬಹುದು ಎಂಬ ಕುತೂಹಲ ಹಲವರಲ್ಲಿತ್ತು. ಇದೀಗ “ಕಾಂತಾರ’ ಚಿತ್ರದ ಲೀಲಾ, ಸಪ್ತಮಿ ಗೌಡ ನಾಯಕಿಯಾಗಿ ಚಿತ್ರತಂಡ ಸೇರಿಕೊಂಡಿದ್ದಾರೆ. ಎರಡು ಭಾಗಗಳಲ್ಲಿ ರೆಡಿಯಾಗುತ್ತಿರುವ ಈ ಚಿತ್ರವನ್ನು […] The post ಐತಿಹಾಸಿಕ ಹಲಗಲಿಯಲ್ಲಿ ಡಾಲಿಗೆ ಕಾಂತಾರ ಲೀಲಾ ಜೋಡಿ! first appeared on ವಿಜಯವಾಣಿ .

ವಿಜಯವಾಣಿ 25 Oct 2024 6:30 am

ಇಂದಿನಿಂದ ಹಾಸನಾಂಬೆ ದಿವ್ಯದರ್ಶನ

ಹಾಸನ: ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನ ಜಿಲ್ಲೆಯ ಅಧಿದೇವತೆ ಹಾಸನಾಂಬೆ ದೇವಿಯ ದೇಗುಲದ ಬಾಗಿಲನ್ನು ಗುರುವಾರ ಶಾಸ್ತ್ರೋಕ್ತವಾಗಿ ತೆರೆಯಲಾಯಿತು. ಅಶ್ವಿನಿ ಮಾಸದ ಪೌರ್ಣಿಮೆ ನಂತರದ ಗುರುವಾರ ಮಧ್ಯಾಹ್ನ ಸರಿಯಾಗಿ 12.10ಕ್ಕೆ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಸಿದ್ಧಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ, ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ಹಾಗೂ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ವಿಧಿವಿಧಾನಗಳೊಂದಿಗೆ ದೇವಾಲಯದ ಬಾಗಿಲನ್ನು ತೆರೆದು ಹಾಸನಾಂಬೆ ದರ್ಶನಕ್ಕೆ ಅನುವು ಮಾಡಿಕೊಡಲಾಯಿತು. ಗುರುವಾರ ಬೆಳಗ್ಗೆಯಿಂದಲೇ ಅರ್ಚಕರ ತಂಡವು ದೇವಿಯ ಆಭರಣಗಳು ಮತ್ತು […] The post ಇಂದಿನಿಂದ ಹಾಸನಾಂಬೆ ದಿವ್ಯದರ್ಶನ first appeared on ವಿಜಯವಾಣಿ .

ವಿಜಯವಾಣಿ 25 Oct 2024 6:30 am

ಹಿಂದೆ ಸೋಲಿಸಿದವರಿಗೆ ಗೆಲ್ಲಿಸುವ ಹೊಣೆ!; ಬಿಜೆಪಿ ಗಾರುಡಿಗನ ರಥದಲ್ಲಿ ನಿಖಿಲ್​

ಬೆಂಗಳೂರು: ಚುನಾವಣೆ ರಾಜಕಾರಣದಲ್ಲಿ ಸಾಕಷ್ಟು ಕುತೂಹಲ, ಸ್ವಾರಸ್ಯ ಸಾಮಾನ್ಯ. ರಾಜಕೀಯ ನಾಯಕರು ತಮ್ಮ ಮಾತು ಮತ್ತು ನಡವಳಿಕೆಯಿಂದ ಅನೇಕ ವೈರುಧ್ಯವನ್ನು ಎದುರಿಸುವುದು ಸಹಜ. ಈ ಬಾರಿ ಉಪ ಚುನಾವಣೆಯಲ್ಲೂ ಅಂತಹ ಒಂದು ಪ್ರಸಂಗವಿದೆ. 2019ರ ಲೋಕಸಭೆ ಚುನಾವಣೆಯಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಕಣಕ್ಕಿಳಿದಿದ್ದರು. ಎಚ್.ಡಿ.ಕುಮಾರಸ್ವಾಮಿ ಈ ಚುನಾವಣೆಯನ್ನು ತಮ್ಮ ಪುತ್ರನ ರಾಜಕೀಯ ಪ್ರವೇಶಕ್ಕೆ ಲಾಂಚ್ ಪ್ಯಾಡ್ ಆಗಿ ಬಳಸಿದ್ದರು. ಅವರ ಎದುರಾಳಿಯಾಗಿದ್ದು ಪಕ್ಷೇತರ ಅಭ್ಯರ್ಥಿ ಸುಮಲತಾ. ಅವರ ಬೆನ್ನಿಗೆ ಬಿಜೆಪಿ […] The post ಹಿಂದೆ ಸೋಲಿಸಿದವರಿಗೆ ಗೆಲ್ಲಿಸುವ ಹೊಣೆ!; ಬಿಜೆಪಿ ಗಾರುಡಿಗನ ರಥದಲ್ಲಿ ನಿಖಿಲ್​ first appeared on ವಿಜಯವಾಣಿ .

ವಿಜಯವಾಣಿ 25 Oct 2024 6:25 am

ಪುಣೆಯಲ್ಲಿ ಪುಟಿದೆದ್ದ ಟೀಮ್ ಇಂಡಿಯಾ: ಭಾರತ ಸುಂದರ್ ಕಂಬ್ಯಾಕ್

ಪುಣೆ: ಮೂರು ವರ್ಷಗಳ ಬಳಿಕ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದ ತಮಿಳುನಾಡು ಆಲ್ರೌಂಡರ್ ವಾಷಿಂಗ್ಟನ್ ಸುಂದರ್ (58ಕ್ಕೆ 7) ನಡೆಸಿದ ಜೀವನಶ್ರೇಷ್ಠ ಬೌಲಿಂಗ್ ದಾಳಿಯ ನೆರವಿನಿಂದ ಭಾರತ ತಂಡ ಎರಡನೇ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ನ್ಯೂಜಿಲೆಂಡ್ ತಂಡವನ್ನು ಸಾಧಾರಣ ಮೊತ್ತಕ್ಕೆ ಕಟ್ಟಿಹಾಕಿದೆ. ಇದರೊಂದಿಗೆ ರೋಹಿತ್ ಶರ್ಮ ಪಡೆ ಮೊದಲ ದಿನದ ಗೌರವ ಸಂಪಾದಿಸಿದೆ. ಪುಣೆಯಲ್ಲಿ ಪುಟಿದೇಳುವ ಮೂಲಕ ಟೀಮ್ ಇಂಡಿಯಾ ತವರಿನ ಸತತ 18 ಟೆಸ್ಟ್ ಸರಣಿ ಗೆಲುವಿನ ಪ್ರಾಬಲ್ಯವನ್ನು ವಿಸ್ತರಿಸುವ ಭರವಸೆ ಮೂಡಿಸಿದೆ. ಎಂಸಿಎ ಕ್ರೀಡಾಂಗಣದಲ್ಲಿ […] The post ಪುಣೆಯಲ್ಲಿ ಪುಟಿದೆದ್ದ ಟೀಮ್ ಇಂಡಿಯಾ: ಭಾರತ ಸುಂದರ್ ಕಂಬ್ಯಾಕ್ first appeared on ವಿಜಯವಾಣಿ .

ವಿಜಯವಾಣಿ 25 Oct 2024 6:23 am

ಬೊಂಬೆಯಾಟಕ್ಕೆ ನಿಖಿಲ್ ಎಂಟ್ರಿ; ಶಿಗ್ಗಾಂವಿಯಲ್ಲಿ ಕಾಂಗ್ರೆಸ್ ಲೆಕ್ಕಾಚಾರ ಉಲ್ಟಾ

ಬೆಂಗಳೂರು: ವಿಧಾನಸಭಾ ಉಪ ಚುನಾವಣೆಯ ಅಭ್ಯರ್ಥಿಗಳ ಆಯ್ಕೆ ಕಸರತ್ತಿಗೆ ತೆರೆಬಿದ್ದ ಬೆನ್ನಲ್ಲೇ ಜಿದ್ದಾಜಿದ್ದಿನ ಹೋರಾಟಕ್ಕೆ ಅಖಾಡ ಅಣಿಯಾಗಿದೆ. ರಾಜ್ಯಾದ್ಯಂತ ಕುತೂಹಲ ಕೆರಳಿಸಿದ್ದ ಚನ್ನಪಟ್ಟಣದಲ್ಲಿ ಎನ್​ಡಿಎ ಅಭ್ಯರ್ಥಿಯಾಗಿ, ಜೆಡಿಎಸ್​ನ ನಿಖಿಲ್ ಕುಮಾರಸ್ವಾಮಿ ಕಣಕ್ಕಿಳಿದರೆ, ಕಾಂಗ್ರೆಸ್ ಬಾಕಿ ಉಳಿಸಿಕೊಂಡಿದ್ದ ಶಿಗ್ಗಾಂವಿಯಲ್ಲಿ ಯಾಸಿರ್ ಅಹ್ಮದ್ ಪಠಾಣ್​ಗೆ ಅವಕಾಶ ನೀಡಿದೆ. ನಾಮಪತ್ರ ಸಲ್ಲಿಕೆಗೆ ಅ.25 ಕೊನೇ ದಿನವಾಗಿದೆ. ಸಿಎಂ ಪವರ್ ಶೋ: ಚನ್ನಪಟ್ಟಣದ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್ ಗುರುವಾರ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಜತೆಗೂಡಿ ರೋಡ್ ಶೋ ಮೂಲಕ ಸಾಗಿ […] The post ಬೊಂಬೆಯಾಟಕ್ಕೆ ನಿಖಿಲ್ ಎಂಟ್ರಿ; ಶಿಗ್ಗಾಂವಿಯಲ್ಲಿ ಕಾಂಗ್ರೆಸ್ ಲೆಕ್ಕಾಚಾರ ಉಲ್ಟಾ first appeared on ವಿಜಯವಾಣಿ .

ವಿಜಯವಾಣಿ 25 Oct 2024 6:20 am

ಆಸ್ಟ್ರೇಲಿಯಾದ ಸ್ಪಿನ್ನರ್ ನಾಥನ್ ಲ್ಯಾನ್ ಹಿಂದಿಕ್ಕಿ 7ನೇ ಸ್ಥಾನಕ್ಕೇರಿದ ಅಶ್ವಿನ್

ಪುಣೆ: ಭಾರತದ ಅನುಭವಿ ಆ್ ಸ್ಪಿನ್ನರ್ ಆರ್.ಅಶ್ವಿನ್ ಟೆಸ್ಟ್ ಕ್ರಿಕೆಟ್‌ನಲ್ಲಿ ಸಾರ್ವಕಾಲಿಕ ಗರಿಷ್ಠ ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಆ್ ಸ್ಪಿನ್ನರ್ ನಾಥನ್ ಲ್ಯಾನ್ (530) ಅವರನ್ನು ಹಿಂದಿಕ್ಕಿ ಏಳನೇ ಸ್ಥಾನಕ್ಕೇರಿದರು. ಈ ಮೂಲಕ ಪ್ರಸ್ತುತ ಸಕ್ರಿಯ ಆಟಗಾರರ ಪೈಕಿ ಅಗ್ರಸ್ಥಾನಕ್ಕೆ ಜಿಗಿದಿದ್ದಾರೆ. ಕಿವೀಸ್‌ನ ಡೆವೊನ್ ಕಾನ್‌ವೇ ವಿಕೆಟ್ ಪಡೆಯುವ ಮೂಲಕ ಅಶ್ವಿನ್ 104 ಪಂದ್ಯಗಳಲ್ಲಿ 531ನೇ ವಿಕೆಟ್ ಸಾಧನೆ ಮಾಡಿದರು. ಸಾರ್ವಕಾಲಿಕ ಪಟ್ಟಿಯಲ್ಲಿ ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ (800), ಆಸ್ಟ್ರೇಲಿಯಾದ ಶೇನ್ ವಾರ್ನ್ (708), […] The post ಆಸ್ಟ್ರೇಲಿಯಾದ ಸ್ಪಿನ್ನರ್ ನಾಥನ್ ಲ್ಯಾನ್ ಹಿಂದಿಕ್ಕಿ 7ನೇ ಸ್ಥಾನಕ್ಕೇರಿದ ಅಶ್ವಿನ್ first appeared on ವಿಜಯವಾಣಿ .

ವಿಜಯವಾಣಿ 25 Oct 2024 6:17 am

ಟ್ರುಡೊ ತಲೆದಂಡಕ್ಕೆ ಹೆಚ್ಚಿದ ಒತ್ತಡ; ಪಕ್ಷದ ಆಂತರಿಕ ಸಭೆಯಲ್ಲಿ ನಿಲುವಳಿ

ಒಟ್ಟಾವಾ: ಭಾರತ ವಿರೋಧಿ ನಿಲುವು, ಖಲಿಸ್ತಾನಿ ಉಗ್ರರ ಜತೆಗಿನ ಮೈತ್ರಿ ಹಿನ್ನೆಲೆಯಲ್ಲಿ ಚರ್ಚೆಗೆ ಗ್ರಾಸವಾಗಿದ್ದ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಅವರ ರಾಜೀನಾಮೆಗೆ ಒತ್ತಡ ಹೆಚ್ಚಾಗುತ್ತಿದೆ. ಸ್ವಪಕ್ಷವಾದ ಲಿಬರಲ್ ಪಾರ್ಟಿ ಸಂಸದರೇ ರಾಜೀನಾಮೆಗೆ ಆಗ್ರಹಿಸಿ ದ್ದಾರೆ. ಬುಧವಾರ ನಡೆದ ಪಕ್ಷದ ಆಂತರಿಕ ಸಭೆಯಲ್ಲಿ ಭಿನ್ನಮತೀಯ ಸಂಸದರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕೆನಡಾದ ಹೌಸ್ ಆಫ್ ಕಾಮನ್ಸ್ ಅಧಿವೇಶನ ನಡೆಯುತ್ತಿದ್ದಾಗ ಸಾಪ್ತಾಹಿಕ ಕಾಕಸ್ ಸಭೆಗಳು ನಡೆಯುತ್ತವೆ. ಈ ವೇಳೆ ಸಂಸದರು ತಮ್ಮ ಕಳವಳಗಳು ಮತ್ತು […] The post ಟ್ರುಡೊ ತಲೆದಂಡಕ್ಕೆ ಹೆಚ್ಚಿದ ಒತ್ತಡ; ಪಕ್ಷದ ಆಂತರಿಕ ಸಭೆಯಲ್ಲಿ ನಿಲುವಳಿ first appeared on ವಿಜಯವಾಣಿ .

ವಿಜಯವಾಣಿ 25 Oct 2024 6:15 am

ಐಪಿಎಲ್​ ರಿಟೇನ್​ ಕುತೂಹಲ: ಯಾರು ಉಳಿಕೆ? ಯಾರು ರಿಲೀಸ್​? ಇಲ್ಲಿದೆ ಎಲ್ಲ 10 ತಂಡಗಳ ಲೆಕ್ಕಾಚಾರ…

ಬೆಂಗಳೂರು: ಐಪಿಎಲ್​ 18ನೇ ಆವೃತ್ತಿಯ ಆಟಗಾರರ ಹರಾಜಿಗೆ ಮುನ್ನ ಎಲ್ಲ 10 ತಂಡಗಳು ರಿಟೇನ್​ ಪಟ್ಟಿ ಸಲ್ಲಿಸಲು ಇನ್ನು ಒಂದು ವಾರವಷ್ಟೇ ಬಾಕಿ ಇದ್ದು, ಕ್ರಿಕೆಟ್​ ಪ್ರೇಮಿಗಳ ಕುತೂಹಲ ಗರಿಗೆದರಿದೆ. ಅಕ್ಟೋಬರ್​ 31ರ ಸಂಜೆ 5 ಗಂಟೆಯೊಳಗೆ ಎಲ್ಲ ತಂಡಗಳು ರಿಟೇನ್​ ಆಟಗಾರರ ಪಟ್ಟಿ ಅಂತಿಮಗೊಳಿಸಬೇಕಾಗಿದೆ. ಆದರೆ ಈಗಾಗಲೆ ಎಲ್ಲ ತಂಡಗಳ ರಿಟೇನ್​ ಲೆಕ್ಕಾಚಾರದ ಬಗ್ಗೆ ವಿವಿಧ ವರದಿಗಳು ಹರಿದಾಡುತ್ತಿವೆ. ಈ ಪೈಕಿ ಕೆಲವು ಅಧಿಕೃತ ಮೂಲಗಳ ವರದಿಯಾಗಿದ್ದರೆ, ಇನ್ನು ಕೆಲವು ಬರೀ ಊಹಾಪೋಹಗಳೂ ಆಗಿರಬಹುದು. ಅಂಥ […] The post ಐಪಿಎಲ್​ ರಿಟೇನ್​ ಕುತೂಹಲ: ಯಾರು ಉಳಿಕೆ? ಯಾರು ರಿಲೀಸ್​? ಇಲ್ಲಿದೆ ಎಲ್ಲ 10 ತಂಡಗಳ ಲೆಕ್ಕಾಚಾರ… first appeared on ವಿಜಯವಾಣಿ .

ವಿಜಯವಾಣಿ 25 Oct 2024 6:11 am

ಭಾರತ-ಕಿವೀಸ್​ ನಡುವಿನ ಪುಣೆ ಟೆಸ್ಟ್​ ವೇಳೆ ಸ್ಟೇಡಿಯಂನಲ್ಲಿ ಕುಡಿಯುವ ನೀರಿಗಾಗಿ ಪ್ರೇಕ್ಷಕರ ಹಾಹಾಕಾರ!

ಪುಣೆ: ಭಾರತ-ಕಿವೀಸ್​ 2ನೇ ಟೆಸ್ಟ್​ ನಡುವೆ ಎಂಸಿಎ ಸ್ಟೇಡಿಯಂನಲ್ಲಿ ಪ್ರೇಕ್ಷಕರು ಕುಡಿಯುವ ನೀರಿಗಾಗಿ ಪರದಾಡಿದರು. ಮೊದಲ ದಿನದಾಟಕ್ಕೆ ಸುಮಾರು 18 ಸಾವಿರ ಪ್ರೇಕ್ಷಕರು ಹಾಜರಾಗಿದ್ದರು. ಆದರೆ ಸ್ಟೇಡಿಯಂಗೆ ನೀರಿನ ಬಾಟಲಿಗಳು ಸರಿಯಾಗಿ ಪೂರೈಕೆಯಾಗಿರಲಿಲ್ಲ. ಇದರಿಂದಾಗಿ ಭಾರಿ ಬಿಸಿಲಿನ ನಡುವೆ ಪ್ರೇಕ್ಷಕರು ಭೋಜನ ವಿರಾಮದ ವೇಳೆಗೆ ಬಾಯಾರಿಕೆ ಆದಾಗ ಸಾಕಷ್ಟು ನೀರು ಸಿಗದೆ ಬಳಲಿದರು. ಇದರ ಲಾಭವೆತ್ತಲು ಯತ್ನಿಸಿದ ಕೆಲ ಮಾರಾಟಗಾರರು, ಇದ್ದ ಅಲ್ಪಸ್ವಲ್ಪ ನೀರನ್ನು 100 ಎಂಎಲ್​ಗೆ 80 ರೂ.ನಂತೆ ಮಾರಾಟ ಮಾಡಿ ಕ್ರಿಕೆಟ್​ ಪ್ರೇಮಿಗಳನ್ನು ದೋಚಿದರು. […] The post ಭಾರತ-ಕಿವೀಸ್​ ನಡುವಿನ ಪುಣೆ ಟೆಸ್ಟ್​ ವೇಳೆ ಸ್ಟೇಡಿಯಂನಲ್ಲಿ ಕುಡಿಯುವ ನೀರಿಗಾಗಿ ಪ್ರೇಕ್ಷಕರ ಹಾಹಾಕಾರ! first appeared on ವಿಜಯವಾಣಿ .

ವಿಜಯವಾಣಿ 25 Oct 2024 6:03 am

ಯಾವುದೋ ದಾರಿಯಲ್ಲಿ ಅಭಿಮನ್ಯು; ಭಿನ್ನ, ವಿಭಿನ್ನ ಪಾತ್ರಗಳಲ್ಲಿ ಸನ್​ ಆಫ್​ ಕಾಶೀನಾಥ್​

ವಿಜಯವಾಣಿ ಸುದ್ದಿಜಾಲ ಬೆಂಗಳೂರು ನಟ, ನಿರ್ದೇಶಕ ಕಾಶೀನಾಥ್​ ಪುತ್ರ ಅಭಿಮನ್ಯು ಕಾಶೀನಾಥ್​ ಕಮ್​ಬ್ಯಾಕ್​ ಮಾಡುತ್ತಿರುವ ಸಿನಿಮಾ “ಎಲ್ಲಿಗೆ ಪಯಣ ಯಾವುದೋ ದಾರಿ’. ಕಿರಣ್​ ಸೂರ್ಯ ನಿರ್ದೇಶನದ ಈ ಸಿನಿಮಾ ಇಂದು ತೆರೆಗೆ ಬರಲಿದೆ. “ಬಾಜಿ’ ಮತ್ತು “12 ಎಎಂ ಮಧ್ಯರಾತ್ರಿ’ ಚಿತ್ರಗಳ ಬಳಿಕ ಸುದೀರ್ಘ 12 ವರ್ಷಗಳ ನಂತರ ಅಭಿ ಮತ್ತೆ ವಾಪಸ್ಸಾಗಿರುವುದು ಈ ಸಿನಿಮಾ ಬಗ್ಗೆ ಕುತೂಹಲ ಹೆಚ್ಚಿಸಿದೆ. ಚಿತ್ರರಂಗದಿಂದ ದೂರವಿದ್ದಿದ್ದು ಯಾಕೆ? ಕಮ್​ಬ್ಯಾಕ್​ ಹೇಗಾಯಿತು? ಜತೆಗೆ ಮುಂದಿನ ಯೋಜನೆಗಳ ಬಗ್ಗೆ ಅಭಿಮನ್ಯು ವಿಜಯವಾಣಿ ಜತೆ […] The post ಯಾವುದೋ ದಾರಿಯಲ್ಲಿ ಅಭಿಮನ್ಯು; ಭಿನ್ನ, ವಿಭಿನ್ನ ಪಾತ್ರಗಳಲ್ಲಿ ಸನ್​ ಆಫ್​ ಕಾಶೀನಾಥ್​ first appeared on ವಿಜಯವಾಣಿ .

ವಿಜಯವಾಣಿ 25 Oct 2024 6:00 am

ಈ ರಾಶಿಯವರಿಗಿಂದು ಆಕಸ್ಮಿಕ ಧನಾಗಮನ: ನಿತ್ಯಭವಿಷ್ಯ

ಮೇಷ:ಪತ್ನಿಯ ಆರೋಗ್ಯಕ್ಕಾಗಿ ಧನವ್ಯಯ. ಗೃಹ ನಿರ್ವಣದ ಕೆಲಸಕ್ಕೆ ಪ್ರಯತ್ನದ ಅಗತ್ಯವಿದೆ. ಸಾಹಸ ಕಾರ್ಯದತ್ತ ಆಸಕ್ತಿ. ಶುಭಸಂಖ್ಯೆ: 5 ವೃಷಭ:ವಿವಾದಗಳಲ್ಲಿ ಸಿಲುಕಿಕೊಳ್ಳುವ ಅಪಾಯವಿದೆ. ದುಬಾರಿ ವಸ್ತುಗಳ ಕಳವು ಆಗಬಹುದು. ವಿವಾಹ ಕಾರ್ಯಕ್ಕೆ ಅಡೆತಡೆ. ಶುಭಸಂಖ್ಯೆ: 1 ಮಿಥುನ:ಸಹೋದ್ಯೋಗಿಗಳೊಂದಿಗೆ ಅನವಶ್ಯಕ ಜಗಳ. ಕುಟುಂಬದಲ್ಲಿ ಶುಭ ಕಾರ್ಯದ ಸಂಭ್ರಮ. ಅನಾರೋಗ್ಯ ಕಾಡಬಹುದು. ಶುಭಸಂಖ್ಯೆ: 5 ಕಟಕ:ವಿವಾಹಾಕಾಂಕ್ಷಿಗಳಿಗೆ ಶುಭ ಸಮಾಚಾರ. ಪತಿಯ ಆರೋಗ್ಯದಲ್ಲಿ ಚೇತರಿಕೆ ಕಾಣಲಿದೆ. ವ್ಯಾಪಾರದಲ್ಲಿ ಶತ್ರುಗಳಿಗೆ ಸೋಲು. ಶುಭಸಂಖ್ಯೆ: 3 ಸಿಂಹ:ಶತ್ರುಗಳಿಂದ ತೊಂದರೆಯಾಗಬಹುದು. ಆಕಸ್ಮಿಕ ಧನಾಗಮನ. ಸಣ್ಣಪುಟ್ಟ ಗಾಯವಾಗುವ ಸಾಧ್ಯತೆ. […] The post ಈ ರಾಶಿಯವರಿಗಿಂದು ಆಕಸ್ಮಿಕ ಧನಾಗಮನ: ನಿತ್ಯಭವಿಷ್ಯ first appeared on ವಿಜಯವಾಣಿ .

ವಿಜಯವಾಣಿ 25 Oct 2024 5:55 am

ಏಕರೂಪ ಶಿಕ್ಷಣ ವ್ಯವಸ್ಥೆ ಜಾರಿಗೆ ಬರಲಿ

ಮುದ್ದೇಬಿಹಾಳ: ದೇಶದಲ್ಲಿ ಏಕರೂಪ ಶಿಕ್ಷಣ ಪದ್ಧತಿ ಜಾರಿಗೆ ಬರಬೇಕು. ಬಡವರಿಗೊಂಡು, ಶ್ರೀಮಂತರಿಗೊಂದು ರೀತಿಯ ಶಿಕ್ಷಣ ವ್ಯವಸ್ಥೆ ಸಮಾಜದ ಪ್ರಗತಿ, ಸೌಹಾರ್ದತೆಗೆ ಮಾರಕವಾಗಿದೆ ಎಂದು ಮುಖಂಡ ಶಾಂತಗೌಡ ಪಾಟೀಲ ನಡಹಳ್ಳಿ ಹೇಳಿದರು. ಇಲ್ಲಿನ ಮಹಾಂತೇಶ ನಗರದಲ್ಲಿರುವ ಮಹರ್ಷಿ ವಾಲ್ಮೀಕಿ ವೃತ್ತದಲ್ಲಿ ತಾಲೂಕು ಆಡಳಿತ, ಸಮಾಜ ಕಲ್ಯಾಣ ಇಲಾಖೆ, ಪುರಸಭೆ, ವಾಲ್ಮೀಕಿ ಸಮಾಜ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಗುರುವಾರ ಏರ್ಪಡಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸುಪ್ರೀಂಕೋರ್ಟ್ ಮೀಸಲಾತಿ ಬಗ್ಗೆ ವಿಶೇಷ ಆದೇಶ ಹೊರಡಿಸಿದೆ. ಈಗಾಗಲೇ ಮೀಸಲಾತಿ […] The post ಏಕರೂಪ ಶಿಕ್ಷಣ ವ್ಯವಸ್ಥೆ ಜಾರಿಗೆ ಬರಲಿ first appeared on ವಿಜಯವಾಣಿ .

ವಿಜಯವಾಣಿ 18 Oct 2024 12:28 am

Race: ಟಿವಿಎಸ್​ ರಾಷ್ಟ್ರೀಯ ಚಾಂಪಿಯನ್​ಷಿಪ್​ನಲ್ಲಿ ರಾಜ್ಯದ ಹರ್ಷಿತ್​ಗೆ ಪ್ರಶಸ್ತಿ

ಬೆಂಗಳೂರು: ಚೆನ್ನೈನ ಶ್ರೀಪೆರುಂಬುದೂರ್​ನಲ್ಲಿರುವ ಮದ್ರಾಸ್​ ಇಂಟರ್​ನ್ಯಾಷನಲ್​ ಸಕ್ಯೂರ್ಟ್​ನಲ್ಲಿ ಇತ್ತೀಚೆಗೆ ನಡೆದ ಟಿವಿಎಸ್​ ಒಎಂಸಿ ರಾಷ್ಟ್ರೀಯ ಮೋಟಾರು ಬೈಕ್​ ಚಾಂಪಿಯನ್​ಷಿಪ್​ನಲ್ಲಿ ಕರ್ನಾಟಕದ ಹರ್ಷಿತ್​ ವಿ. ಬೋಗರ್​ ಚಾಂಪಿಯನ್​ ಆಗಿ ಹೊರಹೊಮ್ಮಿದರು. ಅವರು 6 ರೇಸ್​ಗಳಲ್ಲಿ ಗೆಲುವು ಸಾಧಿಸಿದರೆ, 2 ರೇಸ್​ಗಳಲ್ಲಿ ರನ್ನರ್​ಅಪ್​ ಎನಿಸಿದರು. ಇನ್ನೊಂದು ರೇಸ್​ನಲ್ಲಿ 2ನೇ ರನ್ನರ್​ಅಪ್​ ಸ್ಥಾನ ಪಡೆದರು. ಒಟ್ಟಾರೆಯಾಗಿ 40 ಅಂಕಗಳ ಮುನ್ನಡೆಯೊಂದಿಗೆ ಅವರು ಪ್ರಶಸ್ತಿ ಗೆದ್ದುಕೊಂಡರು. ರ‍್ಯಾಂಪ್‌ ವಾಕ್​ ಮಾಡಿದ್ದೇ ತಡ ಮನು ಭಾಕರ್​ಗೂ​ ಶುರುವಾಯ್ತು ಹೊಸ ತಲೆನೋವು! Manu bhaker The post Race: ಟಿವಿಎಸ್​ ರಾಷ್ಟ್ರೀಯ ಚಾಂಪಿಯನ್​ಷಿಪ್​ನಲ್ಲಿ ರಾಜ್ಯದ ಹರ್ಷಿತ್​ಗೆ ಪ್ರಶಸ್ತಿ first appeared on ವಿಜಯವಾಣಿ .

ವಿಜಯವಾಣಿ 17 Oct 2024 11:45 pm

ದೊಡ್ಡಕಲ್ಲು ಬನ್ನಿ ಉತ್ಸವಕ್ಕೆ ಭವ್ಯ ಮೆರಗು

ಧನಂಜಯ ಎಸ್. ಹಕಾರಿ ದಾವಣಗೆರೆಸುಮಾರು 300 ವರ್ಷಗಳ ಇತಿಹಾಸ ಹೊಂದಿರುವ ಮಾದನಬಾವಿ ಗ್ರಾಮದ ದೊಡ್ಡಕಲ್ಲು ಕಟ್ಟೆಯ ಬನ್ನಿ ಮಹೋತ್ಸವ 3 ದಿನಗಳ ಕಾಲ ವಿಜೃಂಭಣೆಯಿಂದ ನಡೆಯಲಿದ್ದು, ಸುತ್ತಲಿನ ಹಳ್ಳಿಗಳ ಸಾವಿರಾರು ಭಕ್ತರ ಸಮ್ಮುಖದಲ್ಲಿ ದೇವರ ಪಲ್ಲಕ್ಕಿ ಮೆರವಣಿಗೆ ಹಬ್ಬದ ವಾತಾವರಣ ಇಮ್ಮಡಿಗೊಳಿಸಲಿದೆ. ಮೈಸೂರು ದಸರಾ ಮುಗಿದು ವಾರದ ಬಳಿಕ ಹೊನ್ನಾಳಿ ಮಾರಿಕೊಪ್ಪ ದೇವಸ್ಥಾನದ ಹಳದಮ್ಮ ದೇವಿ ಬನ್ನಿ ಉತ್ಸವ ನಡೆಯಲಿದೆ. ಪ್ರತಿವರ್ಷ ಭೂಮಿಹುಣ್ಣಿಮೆ ಅಸುಪಾಸಿನಲ್ಲಿ ಹಬ್ಬ ನಡೆಯಲಿದ್ದು, ಮಾರನೆಯ ದಿನ ಮಾದನಬಾವಿ ಗ್ರಾಮದ ದೊಡ್ಡಪ್ಪ ದೇವರು ಬನ್ನಿ […] The post ದೊಡ್ಡಕಲ್ಲು ಬನ್ನಿ ಉತ್ಸವಕ್ಕೆ ಭವ್ಯ ಮೆರಗು first appeared on ವಿಜಯವಾಣಿ .

ವಿಜಯವಾಣಿ 17 Oct 2024 11:44 pm