ಅಜ್ಜಿಯ ಹಿಂದೆ ಓಡಾಡುವುದು ಪಟ್ಟಾಪಟ್ಟೆ ಕರಿಬೆಕ್ಕು ಹುಲಿ ಎಂದೇ ತಿಳಿದಿದೆ ತನ್ನನ್ನು ಅಬ್ಬಾ ಎಂತಹ ಸೊಕ್ಕು! ಮಜ್ಜಿಗೆ, ಹಾಲು, ಏನೇ ಇರಲಿ, ಕೃಷ್ಣನಿಗೊಂದು ಪಾಲು! ಬೆಣ್ಣೆಯ ಕಡೆಯಲು ಕೂತರೆ ಅಜ್ಜಿ ನೆಕ್ಕುವುದು ಕಡಗೋಲು! ಹೂವನು ಬಿಡಿಸಲು ಹೋದರೆ ಅಜ್ಜಿ ಅಲ್ಲಿಗೆ ಬರುವನು ಕೃಷ್ಣ ಅಯ್ಯೋ ಹಸಿವಾಯಿತೆ ಕೃಷ್ಣನಿಗೆ ಎನ್ನುತ ಎದ್ದು ತಕ್ಷ್ಣ ಅಜ್ಜನಿಗೆಂದು ಮಾಡಿದ ಕಾಫಿ ಕೊಟ್ಟರೆ ಬಟ್ಟಲಿನಲ್ಲಿ ಒಂದೇ ನಿಮಿಷದಿ ಹೀರಿಬಿಡುವನು ಕೃಷ್ಣನು ಮಹಾಮಳ್ಳಿ! ಊರಿಗೆ ಹೋದಾಗೆಲ್ಲಾ ಅಜ್ಜಿ ಅಜ್ಜನದೇ ವಹಿವಾಟು, ಅಜ್ಜಿಯ ಮುದ್ದು ಮುಚ್ಚಟೆಗೆಲ್ಲ ಸ್ವಲ್ಪ ದಿನ ಫುಲ್ ಸ್ಟಾಪು ಅಡಿಗೆಮನೆಗೇ ನುಗ್ಗುವ ಕೃಷ್ಣ, ಅವನಿಗಿಲ್ಲ ಸಂಕೋಚ ಕುಡಿದು ತಪ್ಪಲೆಯ ತುಂಬಾ ಹಾಲು ಮಿಯಾಂವ್ ಎನ್ನುವನು, ಸಾಚಾ! ಮರಳಿ ಬಂದಾಗ ಅಜ್ಜಿಯು ಇವನು ಅವಳ ತೊಡೆಯ ಏರಿದರೆ ಬಾರೋ ಕೃಷ್ಣ ಬಾರೋ ಎಂದು ಮುದ್ಧಿನ ಸುರಿಮಳೆಧಾರೆ ಅಯ್ಯೋ ಸೊರಗಿಸಿಬಿಟ್ಟಿರಿ ಮಗುವನ್ನು ಹಾಕದೆ ಊಟ, ಪಾಪ! ಎನ್ನುತ ಹಾಲು ಸುರಿದು ಬಟ್ಟಲಿಗೆ ಕರೆವಳು, ಕುಡಿ ಬಾರಪ್ಪಾ! ಅವನಿಗೇನು ಆಗಿದೆಯೇ! ನೋಡು ಕಣ್ಣು ಬಿಟ್ಟು ಸರಿಯಾಗಿ! ಮೈ ಬಂದಿದೆ ಹಾಲೂ ಮೊಸರೂ ಬೆಣ್ಣೆ ಕದ್ದು ತಿಂದಿಹನು ತೇಗಿ! ಹೊತ್ತಿಗೆ ಕಾಫಿ ತಿಂಡಿ ಇಲ್ಲದೆ ಸೊರಗಿಹೋಗಿರುವೆ ನಾನು ಬಂದ ಕೂಡಲೇ ಅವನಿಗೆ ಉಪಚಾರ ಮಾಡುತ್ತಿರುವೆ ನೀನು! ಸಾಕು ಸುಮ್ಮನಿರಿ, ಕಣ್ಣು ಹಾಕದಿರಿ, ಎನ್ನುತ ಅಜ್ಜಿ ಬಿಗಿಯುವಳು ಮುಷ್ಟಿ! ಬಾರೋ ಕೃಷ್ಣಾ, ಉಪ್ಪು ನಿವಾಳಿಸಿ ತೆಗೆಯುವೆ ಕೆಟ್ಟ ದೃಷ್ಟಿ! ಅಜ್ಜಿಯ ಹಿಂದೆ ಓಡಾಡುವುದು ಪಟ್ಟಾಪಟ್ಟೆ ಕರಿಬೆಕ್ಕು ಹುಲಿ ಎಂದೇ ತಿಳಿದಿದೆ ತನ್ನನ್ನು ಅಬ್ಬಾ ಎಂತಹ ಸೊಕ್ಕು!
ಯೂಟ್ಯೂಬ್ ಚಾನಲ್ ಶುರು ಮಾಡಿ ಹಣ ಮಾಡುವುದು ಹೇಗೆ ಸಂಪೂರ್ಣ ಮಾಹಿತಿ ಸ್ಟೆಪ್ ಬೈ ಸ್ಟೆಪ್ ನೋಡಿ
ಯೂಟ್ಯೂಬ್ ಚಾನೆಲ್ ಶುರು ಮಾಡಿ ಹಣವನ್ನು ಹೇಗೆ ಗಳಿಸಬಹುದು ಎಂಬುದನ್ನು ಇಂದು ನಾವು ತಿಳಿದುಕೊಳ್ಳೋಣ. ನಾನು ಯೂಟ್ಯೂಬ್ ಚಾನೆಲ್ ಶುರು ಮಾಡಿ ಅಂತ ತಿಂಗಳಾಯಿತು. ಬಗ್ಗೆ ಸ್ವಲ್ಪ ತಿಳಿದುಕೊಂಡಿದ್ದೇವೆ. ಹಾಗಾಗಿ ಗೊತ್ತಿಲ್ಲದಂಥವರಿಗೆ ಕನ್ನಡ ಭಾಷೆಯಲ್ಲಿ ಮೊಬೈಲ್ ನಲ್ಲಿಯೇ youtube ಚಾನೆಲ್ ಅನ್ನು ಹೀಗೆ ಶುರು ಮಾಡಬಹುದು ಎಂಬುದನ್ನು ಹೇಳಿಕೊಡುತ್ತೇನೆ. ಎರಡು ಮೊಬೈಲ್ ಗಳು ಇದ್ದರೆ ತುಂಬಾ ಒಳ್ಳೆಯದು. ಮೊದಲನೆಯದಾಗಿ ನಾವು ಜಿಮೇಲ್ ಓಪನ್ ಮಾಡಿಕೊಳ್ಳಬೇಕು. ಜಿಮೇಲ್ ಓಪನ್ ಆದ ನಂತರ ಮೇಲ್ಭಾಗದಲ್ಲಿ ಮನುಷ್ಯನ ಚಿನ್ಹೆ ಆಕಾರದಲ್ಲಿ ಕಾಣಿಸುತ್ತದೆ […]
ಉಡಿಸಮ್ಮಾ ಅಜ್ಜಿಯ ಜರಿಸೀರೆ! ತೊಡಿಸಮ್ಮಾ ಕನ್ನಡಕ! ನಾನೂ ಹಾಕುವೆ ಅಜ್ಜಿಯ ವೇಷ ಧ್ವನಿಯಲಿ ನಟಿಸುತ ನಡುಕ! ಟವೆಲ್ ಸುತ್ತಿದರೂ ಪರವಾಗಿಲ್ಲ, ಸೀರೆಯು ತುಂಬಾ ಉದ್ದ! ಓಡಾಡಲು ತೊಂದರೆ ಆಗುವುದು ಬಿದ್ದರೆ ಅಯ್ಯೋ ಸದ್ಯ! ಮೂಗಿನ ಮೇಲೆ ಜಾರುವುದಮ್ಮಾ ಅಜ್ಜಿಯ ಹಳೇ ಚಷ್ಮಾ! ಮೇಲೇರಿಸಿ ದುರುಗುಟ್ಟುವೆ ನೋಡು, ಮುಂದಿದ್ಧವರು ಭಸ್ಮ! ಅಬ್ಬಾ ಏನು ಸೆಖೆ, ಸಾಕಾಯ್ತು, ನಿಂಬೆಯ ಪಾನಕ ಮಾಡೇ! ಬರುತಿದೆಯಲ್ಲೇ ಸುಟ್ಟ ವಾಸನೆ, ಹಾಲು ಉಕ್ಕಿತೋ ನೋಡೇ! ಮೂರು ಹೊತ್ತೂ ಈ ಹಾಳು ಮೊಬೈಲು ಎಲ್ಲಾ ಕೆಲಸ ಹಾಳು! ಕುಕ್ಕರ್ ಕೂಗಾಯಿತು ಮೂರು ಸಲ ಒಲೆ ಆರಿಸು ಮೇಲೇಳು! ಮೊಮ್ಮಗಳಿಗೆ ಮಲ್ಲಿಗೆಜಡೆ ಹಾಕಿ ನೋಡುವ ಆಸೆ ಇತ್ತು! ಯಾರು ಕೇಳುವರು ನಾ ಹೇಳಿದ್ದು ಮಾಡಿಕೊಂಡೆ ಬಾಬ್ ಕಟ್ಟು! ಉಡಿಸಮ್ಮಾ ಅಜ್ಜಿಯ ಜರಿಸೀರೆ! ತೊಡಿಸಮ್ಮಾ ಕನ್ನಡಕ! ನಾನೂ ಹಾಕುವೆ ಅಜ್ಜಿಯ ವೇಷ ಧ್ವನಿಯಲಿ ನಟಿಸುತ ನಡುಕ!
ಹಿತ್ತಲ ತೋಟದ ಹಲಸಿನ ಮರಕ್ಕೆ ಕಟ್ಟಿರುವಳಮ್ಮ ಉಯ್ಯಾಲೆ ಕೂಡಿಸಿ ನನ್ನನು ತೂಗುವಳಮ್ಮ ಆಡಿಸುವಳು ಕೆಳಗೆ, ಮೇಲೆ! ನಾನು ತೂಗಿದೆಡೆ ಬೌವೌ ಎನ್ನುತ ತಾನೂ ಬರುವನು ರಾಮಹರಿ ನನ್ನ ತೊಡೆ ಮೇಲೆ ಕೂತು ಜೋಕಾಲಿ ಆಡುವುದವನಿಗೆ ನಿತ್ಯಚರಿ! ಬಿಡುವಿಲ್ಲದೆ ಇದ್ದರೆ ಅಮ್ಮನಿಗೆ ಅಜ್ಜಿಯ ಹೋಗಿ ಕೇಳುವೆನು ನಡುಬಗ್ಗಿದ್ದರೂ ಹೇಗೋ ಎದ್ದು ಹುಡುಗಿಯಾಗಿಬಿಡುವಳು ತಾನೂ! ಅಜ್ಜಿಯ ಕೂಡಿಸಿದೆನು ನಾನೊಮ್ಮೆ ಮಾಡಿದೆ ತುಂಬಾ ಬಲವಂತ ಜೀವವ ಕೈಯಲಿ ಹಿಡಿದು ಕುಳಿತಳು ನೆನೆಯುತ ಬಾಯಲಿ ಭಗವಂತ! ಬೀಸುವ ತಂಗಾಳಿಯದೋ ಅಥವಾ ಜೋಕಾಲಿಯದೋ ತಿಳಿಯದು, ಮಾಯೆ! ಮಾಯವಾಯ್ತು ಅಜ್ಜಿಯ ಮುಖದಿಂದ ಬಿದ್ದುಬಿಡುವ ಭೀತಿಯ ಛಾಯೆ! ಬಾಲ್ಯದ ಸಖಿಯರ ನೆನೆದು ಮುಖದಲ್ಲಿ ಮೂಡಿತು ನಗೆ ಕಾಮನಬಿಲ್ಲು ಎಷ್ಟೆತ್ತರ ನೂಕುತ್ತಿದ್ದರು ಗೊತ್ತೇ ಎನ್ನಲು ಮಿಂಚಿತು ಬಿಳಿಹಲ್ಲು! ಅಮ್ಮನು ನೋಡಿದಳು ಬೆರಗಾಗಿ ಅಜ್ಜಿ ಆಡುವುದು ಉಯ್ಯಾಲೆ ಉಕ್ಕಿತು ನಗೆ ಹಾಲುಕ್ಕಿದ ಹಾಗೆ ಕಾಯಲಿಟ್ಟದ್ದು ಒಲೆ ಮೇಲೆ! ಹಿತ್ತಲ ತೋಟದ ಹಲಸಿನ ಮರಕ್ಕೆ ಕಟ್ಟಿರುವಳಮ್ಮ ಉಯ್ಯಾಲೆ ಕೂಡಿಸಿ ನನ್ನನು ತೂಗುವಳಮ್ಮ ಆಡಿಸುವಳು ಕೆಳಗೆ, ಮೇಲೆ! - ಸಿ. ಪಿ. ರವಿಕುಮಾರ್ ಏಪ್ರಿಲ್ ೨೩, ೨೦೨೪
ಕಾವಲಿ ಮೇಲೆ ಕಾದಿದೆ ಕೆಂಪಗೆ ಬಿಸಿಬಿಸಿ ರೊಟ್ಟಿ ನನಗೂ ಬೇಕು! ಕಾವಲಿ ಹಾಗೆ ಕಾದಿದೆ ಹೊಟ್ಟೆ ಬಿಸಿಬಿಸಿ ರೊಟ್ಟಿ ತಟ್ಟೆಗೆ ಹಾಕು! ಪರಿಮಳ ಬರುತಿದೆ ಘಮಘಮ ಎಂದು ಇರಲಾಗದು ಬರಿಹೊಟ್ಟೆಯೊಳಿನ್ನು ಕೈತೊಳೆದಾಗಿದೆ, ಬೇಕಾದರೆ ನೋಡು ಹೇಳುವೆನೇ ಎಂದಾದರೂ ಸುಳ್ಳನ್ನು! ಗುಂಡಗೆ ಕೆಂಪಗೆ ಗರಿಗರಿ ರೊಟ್ಟಿ ಮೇಲ್ಗಡೆ ಕರಗುವ ತುಪ್ಪದ ಗಟ್ಟಿ ಮುರಿಯಿತೇ ಅಯ್ಯೋ ಪರವಾಗಿಲ್ಲ ಮುರಿದೇ ಬಾಯಿಗೆ ಹಾಕುವೆನಲ್ಲ! ರುಚಿರುಚಿಯಾಗಿದೆ ಬಿಸಿಬಿಸಿ ರೊಟ್ಟಿ ಇದು ಒನ್ ಹಂಡ್ರೆಡ್ ಪರ್ಸೆಂಟ್ ಬಿಟ್ಟಿ! ಏನಮ್ಮಾ ಹಾಕಿದೆ ಈ ಅದ್ಭುತ ರುಚಿಗೆ ಹೇಳಿಬಿಡಮ್ಮಾ ಸೀಕ್ರೆಟ್ ನನಗೆ! ಎಂದರೆ ನಗುವಳು ಗಲ್ಲವ ಹಿಂಡುತ್ತಾ ಪ್ರೀತಿ ಎಂಬುದೇ ಸೀಕ್ರೆಟ್ ಪುಟ್ಟಾ! ಇರುವುದು ಅಮ್ಮಂದಿರ ಬಳಿ ಮಾತ್ರ ಎಲ್ಲಾಕಡೆಗೂ ಸಿಕ್ಕಿಬಿಡುತ್ತಾ! ಕಾವಲಿ ಮೇಲೆ ಕಾದಿದೆ ಕೆಂಪಗೆ ಬಿಸಿಬಿಸಿ ರೊಟ್ಟಿ ನನಗೂ ಬೇಕು ಕಾವಲಿ ಹಾಗೆ ಕಾದಿದೆ ಹೊಟ್ಟೆ ಬಿಸಿಬಿಸಿ ರೊಟ್ಟಿ ತಟ್ಟೆಗೆ ಹಾಕು
ನಮಸ್ಕಾರ ಪ್ರಿಯ ವೀಕ್ಷಕರೆ, ಒಂದು ಮುಖ್ಯವಾದ ವಿಷಯವನ್ನು ತಿಳಿದುಕೊಳ್ಳೋಣ ಅದೇನಪ್ಪ ಅಂದ್ರೆ ಕಾಲಿಗೆ ಕಪ್ಪು ದಾರ ಯಾತಕ್ಕೋಸ್ಕರ ಕಟ್ಟಿಕೊಳ್ಳಬೇಕು ಯಾರು ಕಟ್ಟಿಕೊಳ್ಳಬೇಕು ಕಪ್ಪು ದಾರ ಯಾವಾಗ ಕಟ್ಟಿಕೊಳ್ಳಬೇಕು ಕಪ್ಪು ದಾರ ಧರಿಸುವುದರಿಂದ ಎಂತಹ ಫಲ ಸಿಗುತ್ತೆ ಅಂದ್ರೆ ನೋಡಿ . ಅಂದ್ರೆ ನೋಡಿ ಕಾಲಿಗೆ ಕಪ್ಪು ದಾರ ಯಾರು ಬೇಕಾದರೂ ಕಟ್ಟಿಕೊಳ್ಳಬಹುದು. ಮಹಿಳೆಯರು ಪುರುಷರು ಚಿಕ್ಕವರು ದೊಡ್ಡವರು ಯಾರು ಬೇಕಾದರೂ ಕಪ್ಪುದಾರವನ್ನು ಧರಿಸಬಹುದು. ತಪ್ಪು ದಾರ ಕಾಲಿಗೆ ಧರಿಸುವುದರಿಂದ ದೃಷ್ಟಿ ದೋಷಗಳು ಅನ್ನೋದು ಕಡಿಮೆ ಆಗುತ್ತೆ ನರ […]
ದಕ್ಷಿಣ ದಿಕ್ಕಿಗೆ ಮುಖ್ಯದ್ವಾರ ಇದ್ದರೆ ಈ ಅನಾಹುತ ಆ ಮನೆಯಲ್ಲಿ ಖಂಡಿತವಾಗಿ ಆಗುತ್ತದೆ.. ಎಚ್ಚರ
ನಮಸ್ಕಾರ ನನ್ನೆಲ್ಲ ಪ್ರಿಯ ವೀಕ್ಷಕರಿಗೆ, ಮನಿ ಮುಂಚಿದ್ವಾರ ದಕ್ಷಿಣ ದಿಕ್ಕಿಗೆ ಮುಖ ಮಾಡಿದ್ಯ ಬದುಕಾಗುತ್ತೆ ಬರ್ಬಾರ್ದು ಅನ್ನೋ ರಹಸ್ಯ ಮಾಹಿತಿಯನ್ನು ಈ ವಿಡಿಯೋದಲ್ಲಿ ನಾನು ನಿಮಗೆ ತಿಳಿಸಿಕೊಡುತ್ತೇನೆ ಈ ವಿಡಿಯೋದ ಕೆಳಗಡೆ ಓಂ ನಮೋ ನಾರಾಯಣಾಯ ಅಂತ ಕಾಮೆಂಟ್ ಮಾಡೋದಕ್ಕೆ ಮರಿಬೇಡಿ ಇದನ್ನು ನೋಡಿದವರು ನಿಮ್ಮ ಬದುಕಿ ನುಚ್ಚುನೂರಾಗಲಿದೆ ಅಂತ ಭವಿಷ್ಯ ಹೇಳಿದ್ದಾರೆ. ಇಲ್ಲ ನೀವು ಉದ್ಧಾರಾನೇ ಆಗೋದಿಲ್ಲ ಅಪಶಕುನವನ್ನು ನೋಡಿದಿದ್ದಾರ. ಅದು ಹೋಗಲಿ ಇದೇ ದಕ್ಷಿಣ ದ್ವಾರದಿಂದಲೇ, ನಿಮ್ಮ ಕೇಡುಗಾಲ ಪ್ರವೇಶವಾಗಲಿದೆ ಅಂತ ಹೇಳಿಬಿಟ್ಟು. ನಿಮ್ಮನ್ನು […]
ನೀವು ಕೋಟ್ಯಾಧಿಪತಿಗಳಾಗುವುದು ಗ್ಯಾರೆಂಟಿ ಅಂಗೈಯನ್ನು ನೋಡಿಕೊಂಡು ಈ ಮಂತ್ರವನ್ನು ಹೇಳಿಕೊಳ್ಳಿ…ಚಮತ್ಕಾರ ನಡೆಯುತ್ತದೆ..
ನಮಸ್ಕಾರ ಪ್ರಿಯ ವೀಕ್ಷಕರೆ, ಪ್ರೀತಿಯ ವೀಕ್ಷಕರಿಗೆ ಇವತ್ತಿನ ಸರಣಿ ಸಂಚಿಕೆಗೆ ಪ್ರೀತಿಯ ಸ್ವಾಗತ ಸುಸ್ವಾಗತ ವೀಕ್ಷಕರೇ ಮುಂದಿನ ಕ್ಲಾಸ್ ಹತ್ರ ಬರ್ತಾ ಇದೆ ಏಪ್ರಿಲ್ 28ನೇ ತಾರೀಕು ಹೆಣ್ಣು ಮಕ್ಕಳಿಗಂತೂ ತುಂಬಾನೇ ಸ್ಪೆಷಲ್ ಎಕ್ಸ್ಪೀರಿಯನ್ಸ್ ಕೊಡುವಂತಹ ಒಂದು ಕ್ಲಾಸ್ ಆಗಿರುತ್ತೆ ಎಕ್ಸ್ಪೀರಿಯನ್ಸ್ ಅನ್ನೋದಕ್ಕಿಂತ ತುಂಬಾ ಕಲಿಬಹುದು ಮನೆನಲ್ಲಿ ಚಿಕ್ಕ ಒಂದು ಮಗಳು ಹುಟ್ಟಿದಾಗಿನಿಂದ ಅಪ್ಪ ಅಮ್ಮಂದಿರು ಮನೆಯವರೆಲ್ಲರೂ ಬುದ್ಧಿ ಹೇಳ್ತೇನೆ ಇರ್ತಾರೆ ಹೆಣ್ಮಕ್ಳು ಅಂದ್ರೆ ಹಾಗೆ ಇರಬೇಕು ಅಂತ ಆದರೆ ಒಂದು ಮನೆಗೆ ಲಕ್ಷ್ಮಿ ಬರಬೇಕು. ಶ್ರೀಮಂತಿಕೆ […]
ಸೈಬರ್ ಸೇಫ್ಟಿ ಅಂಕಣ: ಜೀವನವೇ ಸ್ಕ್ರೋಲಿಂಗ್: ನೀವು ಸಾಮಾಜಿಕ ಮಾಧ್ಯಮದ ವ್ಯಸನಿಯಾಗಿದ್ದೀರಾ?
ಸೈಬರ್ ಸೇಫ್ಟಿ ಅಂಕಣ: ಸಾಮಾಜಿಕ ಮಾಧ್ಯಮ ವ್ಯಸನವು ನಮ್ಮ ಜೀವನವನ್ನು ಎಷ್ಟು ಹಿಡಿದಿಟ್ಟಿದೆ ಎಂದು ಗುರುತಿಸಲು ಸುಲಭ ವಿಧಾನಗಳಿವೆ. ವ್ಯಸನದ ಚಿಹ್ನೆಗಳನ್ನು ಗುರುತಿಸಲು ಸಹಾಯ ಮಾಡಲು 5C ವಿಧಾನ ಎಂಬ ಫ್ರೇಮ್ವರ್ಕ್ ಪ್ರಸ್ತಾಪಿಸಿದ್ದಾರೆ. ಅವುಗಳಲ್ಲಿ ಇಲ್ಲಿ ನೋಡಲಾಗಿದೆ. The post ಸೈಬರ್ ಸೇಫ್ಟಿ ಅಂಕಣ: ಜೀವನವೇ ಸ್ಕ್ರೋಲಿಂಗ್: ನೀವು ಸಾಮಾಜಿಕ ಮಾಧ್ಯಮದ ವ್ಯಸನಿಯಾಗಿದ್ದೀರಾ? first appeared on Vistara News .
ಹೀಗಾಯಿತಂತೆ ಒಮ್ಮೆ, ಚಾರ್ಲಿ ಚಾಪ್ಲಿನ್ ರಂಗದ ಮೇಲೆ ಹೋಗಿ ಹೇಳಿದನಂತೆ ಒಂದು ಹಾಸ್ಯಪ್ರಸಂಗ. ಸಭಿಕರು ಹೊಟ್ಟೆ ಹುಣ್ಣಾಗುವಂತೆ ನಕ್ಕರು, ಬಿದ್ದುಹೋಗುವ ಹಾಗೆ ಸೂರು ತಟ್ಟಿದರು ಚಪ್ಪಾಳೆ. ಕಾದು ಕೂತರು ಮುಂದಿನ ಹಾಸ್ಯಚಟಾಕಿಗೆ. ಹೇಳಿದ ಪ್ರಸಂಗವನ್ನೇ ಚಾರ್ಲಿ ಹೇಳಿದನು ಮತ್ತೊಮ್ಮೆ. ಕೇಳಿ ನಕ್ಕರು ಹಲವರು, ಕೆಲವರು ಮಾಡಿದರು ಕರತಾಡನ. ಅದೇ ಹಾಸ್ಯಪ್ರಸಂಗ ಮೂರನೇ ಸಲ ಪುನರುಚ್ಚರಿಸಿ ಕಾದನಂತೆ ಚಾರ್ಲಿ ಸಭಿಕರ ಪ್ರತಿಕ್ರಿಯೆಗೆ. ಮೌನವಾಗಿತ್ತು ಸಭಾಭವನ. ಒಬ್ಬರೂ ನಗಲಿಲ್ಲ. ಏನಿದು ಹುಡುಗಾಟ ಎಂಬಂತಿತ್ತು ಎಲ್ಲರ ಭಾವ. ಆಗ ಹೇಳಿದನಂತೆ ಚಾರ್ಲಿ: ನೋಡಿದಿರಾ! ಒಂದೇ ನಗೆಪ್ರಸಂಗಕ್ಕೆ ನಗುವುದಿಲ್ಲ ಯಾರೂ ಪದೇಪದೇ ಅಳುವಿರಿ ಹೇಳಿ ಹಾಗಾದರೆ ಏಕೆ ಮತ್ತೆ ಮತ್ತೆ ನೆನೆನೆನೆದು ಹಳೆಯ ಯಾವುದೋ ದುಃಖವನ್ನು ಬಗೆ ಬಗೆದು? - ಸಿ. ಪಿ. ರವಿಕುಮಾರ್ ಏಪ್ರಿಲ್ ೨೦, ೨೦೨೪
ಈ ಹಣ್ಣಿನ ಮೇಲೆ ನಿಮ್ಮ ಹೆಸರಿನ ಮೊದಲ ಅಕ್ಷರ ಹಾಕಿದಾಗ ಶುಕ್ರ ದೆಶೆ ಬರಲಿದೆ..ಹಣದ ಹೊಳೆ ಹರಿಯುತ್ತದೆ..
ಈ ಹಣ್ಣಿನ ಮೇಲೆ ನಿಮ್ಮ ಹೆಸರಿನ ಮೊದಲ ಅಕ್ಷರ ಹಾಕಿದಾಗ ಶುಕ್ರ ದೆಶೆ ಬರಲಿದೆ..ಹಣದ ಹೊಳೆ ಹರಿಯುತ್ತದೆ..
ಈ ಸರಳ ಪೂಜೆ ಮಾಡಿ ಸಾಕು ನೀವು ಕೂಡ ಬೇಗ ಶ್ರೀಮಂತರಾಗಬಹುದು..ಹೋದ ಹಣವೆಲ್ಲಾ ಮತ್ತೆ ನಿಮ್ಮ ಬಳಿಗೆ ಬರುತ್ತದೆ
ಈ ಸರಳ ಪೂಜೆ ಮಾಡಿ ಸಾಕು ನೀವು ಕೂಡ ಬೇಗ ಶ್ರೀಮಂತರಾಗಬಹುದು..ಹೋದ ಹಣವೆಲ್ಲಾ ಮತ್ತೆ ನಿಮ್ಮ ಬಳಿಗೆ ಬರುತ್ತದೆ
ಮೋದಿನ ಸೋಲಿಸಲು ಹೊರಟ ಗೀತ ಶಿವರಾಜ್ ಕುಮಾರ್ ಆಸ್ತಿ ಎಷ್ಟು ಗೊತ್ತಾ? ಕೇಳುದ್ರೇನೆ ತಲೆ ತಿರುಗುತ್ತದೆ..
ಮೋದಿನ ಸೋಲಿಸಲು ಹೊರಟ ಗೀತ ಶಿವರಾಜ್ ಕುಮಾರ್ ಆಸ್ತಿ ಎಷ್ಟು ಗೊತ್ತಾ? ಕೇಳುದ್ರೇನೆ ತಲೆ ತಿರುಗುತ್ತದೆ..
ಕೇವಲ 14 ಲಕ್ಷದೊಳಗೆ ತೊಟ್ಟಿ ಮನೆ ಲೋ ಬಜೆಟ್ಟಿನ ಸುಂದರ ತೊಟ್ಟಿ ಮನೆ...ಹೇಗೆ ಕಟ್ಟಿಸಬೇಕು ಎಲ್ಲಾ ಹಂತ ಹಂತವಾಗಿ ಮಾಹಿತಿ ನೋಡಿ
ಹೀಗೆ ಮಾಡಿದ್ರೆ ಸಾಕು ಹಣ ನಿಮ್ಮನ್ನು ಯಾವಾಗಲೂ ಹುಡುಕಿ ಬರುತ್ತದೆ..ಪವರ್ ಫುಲ್ ರೆಮಿಡಿ
ಹೀಗೆ ಮಾಡಿದ್ರೆ ಸಾಕು ಹಣ ನಿಮ್ಮನ್ನು ಯಾವಾಗಲೂ ಹುಡುಕಿ ಬರುತ್ತದೆ..ಪವರ್ ಫುಲ್ ರೆಮಿಡಿ
ಸತತ ಅಭಿವೃದ್ಧಿ ಕೆಲಸಗಳನ್ನು ಮಾಡಿ ಜನರಿಂದ 3 ಬಾರಿ ಗೆದ್ದು ಬೆಂಗಳೂರು ಸೆಂಟ್ರಲ್ ನಲ್ಲಿ ಮತ್ತೊಮ್ಮೆ ವಿಜಯ ಕಹಳೆ ಮೊಳಗಿಸಲು ಸಜ್ಜಾದ ಮಾನ್ಯ ಪಿ.ಸಿ ಮೋಹನ್
4 ಮನೆ,9 ಸೈಟ್ ಮಾರಿ ಬಾಡಿಗೆ ಮನೆಯಲ್ಲಿ ಜೀವನ ದ್ವಾರಕೀಶ್ ಕಣ್ಣೀರಿನ ಕಥೆ 51 ವಯಸ್ಸಿನಲ್ಲಿ 2 ನೇ ಮದುವೆ ಆಗಿದ್ದು ಹೇಗೆ ?
ಲಕ್ಷ್ಮಿ ದೇವಿಯು ನಿಮ್ಮ ಮನೆಗೆ ಬರುವ ಮುನ್ನ ಈ ವಿಶೇಷ 16 ಸೂಚನೆ ನೀಡುತ್ತಾಳೆ..ಗಂಟೆ,ಬಾಗಿಲು ಎಲ್ಲವೂ ಹೇಗೆ
ಲಕ್ಷ್ಮಿ ದೇವಿಯು ನಿಮ್ಮ ಮನೆಗೆ ಬರುವ ಮುನ್ನ ಈ ವಿಶೇಷ 16 ಸೂಚನೆ ನೀಡುತ್ತಾಳೆ..ಗಂಟೆ,ಬಾಗಿಲು ಎಲ್ಲವೂ ಹೇಗೆ
ಮೇ ಒಂದರಿಂದ ಗುರು ಸಂಚಾರ ಇನ್ನೂ ಒಂದು ವರ್ಷ ಈ 6 ರಾಶಿಗೆ ಉದ್ಯೋಗದಲ್ಲಿ ಭಾರಿ ಬದಲಾವಣೆ ಕಾದಿದೆ
ಮೇ ಒಂದರಿಂದ ಗುರು ಸಂಚಾರ ಇನ್ನೂ ಒಂದು ವರ್ಷ ಈ 6 ರಾಶಿಗೆ ಉದ್ಯೋಗದಲ್ಲಿ ಭಾರಿ ಬದಲಾವಣೆ ಕಾದಿದೆ
ಧವಳ ಧಾರಿಣಿ ಅಂಕಣ: ರಾಮಾಯಣದ ಪೂರ್ವ ರಂಗ
ಧವಳ ಧಾರಿಣಿ ಅಂಕಣ: ರಾಮಾಯಣವನ್ನು ರಚಿಸಿದ ಮುನಿಗೆ ತನ್ನ ಕಾವ್ಯದ ಮೇಲೆ ಮೋಹವುಂಟಾಯಿತು. ಮತ್ತೆ ಮತ್ತೆ ಕಾವ್ಯಾನುಸಂಧಾನವನ್ನು ಮಾಡತೊಡಗಿದ. ಕವಿಗೆ ಪ್ರತಿಯೊಂದು ಕೃತಿಯೂ ಮಕ್ಕಳಂತೆ. ಕೃತಿ ಆತನನ್ನು ಮೋಹಪರವಶತೆಗೆ ಈಡುಮಾಡುತ್ತದೆ. The post ಧವಳ ಧಾರಿಣಿ ಅಂಕಣ: ರಾಮಾಯಣದ ಪೂರ್ವ ರಂಗ first appeared on Vistara News .
ಹನೂರು ಪಟ್ಟಣ ಪಂಚಾಯತ್ನಲ್ಲಿ ಅಮಾನವೀಯ ಘಟನೆ; ಪೌರಕಾರ್ಮಿಕರಿಂದಲೇ ಮಲ ಹೊರಿಸಿದ ಅಧಿಕಾರಿಗಳು
ಚಾಮರಾಜನಗರ, ಎ.15: ಮಲ ಹೊರುವ ಪದ್ಧತಿ ವಿರುದ್ಧ ಜಾಗೃತಿ ಮೂಡಿಸಿ ಕ್ರಮಕ್ಕೆ ಮುಂದಾಗಬೇಕಾದ ಸ್ಥಳೀಯ ಸಂಸ್ಥೆ ಪಟ್ಟಣ ಪಂಚಾಯತ್ ಅಧಿಕಾರಿಗಳೇ ಪೌರಕಾರ್ಮಿಕರಿಂದ ಮಲ ಹೊರಿಸುವ ಮೂಲಕ ಅಮಾನವೀಯ ಕೃತ್ಯ ಎಸಗಿರುವ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ವರದಿಯಾಗಿದೆ. ಚಾಮರಾಜನಗರ ಜಿಲ್ಲೆಯ ಹನೂರು ಪಟ್ಟಣ ಪಂಚಾಯತ್ ಕಚೇರಿ ಸಮೀಪದ ಖಾಸಗಿ ಬಸ್ ನಿಲ್ದಾಣದಲ್ಲಿರುವ ಸಾರ್ವಜನಿಕ ಶೌಚಾಲಯದ ಬೃಹತ್ ಗುಂಡಿಯಲ್ಲಿ ತುಂಬಿದ ಮಲವನ್ನು ಗುರುವಾರ ಮುಂಜಾನೆ ಅವೈಜ್ಞಾನಿಕವಾಗಿ ಪಟ್ಟಣ ಪಂಚಾಯತ್ ಜೆಸಿಬಿ ಯಂತ್ರದಿಂದ ಪಟ್ಟಣದಲ್ಲಿನ ಕಸ ಸಾಗಿಸುವ ಟ್ರ್ಯಾಕ್ಟರ್ಗೆ ತುಂಬಿ ಸಾಗಿಸಲಾಗುತ್ತಿತ್ತು. ಆಗ ಬಹುತೇಕ ಪಾಲು ಮಲ ಪಟ್ಟಣ ಪಂಚಾಯತ್ಗೆ ಸೇರಿದ ವಾಣಿಜ್ಯ ಸಂಕೀರ್ಣದ ಅಂಗಡಿ ಮಳಿಗೆಗಳ ಎದುರು ಹಾಗೂ ರಸ್ತೆಯುದ್ದಕ್ಕೂ ಚದುರಿ ಬಿದ್ದಿತ್ತು. ಇದರಿಂದಾಗಿ ಇಡೀ ಪರಿಸರದಲ್ಲಿ ಕೆಟ್ಟ ವಾಸನೆ ಹಬ್ಬಿದ್ದು, ಪ್ರಯಾಣಿಕರು,ಜನಸಾಮಾನ್ಯರು, ಸ್ಥಳೀಯ ಪರಿಸರದ ನಿವಾಸಿಗಳು ಮೂಗುಮುಚ್ಚಿಕೊಂಡೇ ಸಮಯ ಕಳೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಆನಂತರ ಪಟ್ಟಣ ಪಂಚಾಯತ್ ಅಧಿಕಾರಿಗಳು, ಹನೂರು ಪಟ್ಟಣ ಪಂಚಾಯತ್ನ ಪೌರ ಕಾರ್ಮಿಕರಿಂದ ರಸ್ತೆಯುದ್ದಕ್ಕೂ ರಾಶಿ ರಾಶಿಯಾಗಿ ಬಿದ್ದಿದ್ದ ಮಲವನ್ನು ಪ್ಲಾಸ್ಟಿಕ್ ಬುಟ್ಟಿಗೆ ತುಂಬಿ ತಲೆ ಮೇಲೆ ಹೊತ್ತು ಪಟ್ಟಣದ ಕಸ ಸಾಗಿಸುವ ಟೆಂಪೋದಲ್ಲಿ ತುಂಬಿಸಿದ್ದಾರೆ. ಈ ಅಮಾನವೀಯ ದೃಶ್ಯವನ್ನು ಬಸ್ ನಿಲ್ದಾಣದಲ್ಲಿದ್ದ ಖಾಸಗಿ ವ್ಯಕ್ತಿಗಳು ಸೆರೆಹಿಡಿದು ವೀಡಿಯೊವನ್ನು ಮಾಧ್ಯಮಗಳಿಗೆ ನೀಡಿದ್ದಾರೆ. ಅಲ್ಲದೆ ಘಟನೆಯ ದೃಶ್ಯಾವಳಿಗಳು ಪ.ಪಂ. ಕಟ್ಟಡದ ಮುಖ್ಯ ದ್ವಾರದಲ್ಲೇ ಅಳವಡಿಸಿರುವ ಸಿಸಿ ಕ್ಯಾಮರಾದಲ್ಲೂ ಸೆರೆಯಾಗಿದೆ. ಹನೂರು ಪಟ್ಟಣ ಪಂಚಾಯತ್ನಲ್ಲಿ ಮಲ ಸಾಗಿಸಲೆಂದೇ ಸೈಕಿಂಗ್ ಯಂತ್ರವಿದೆಯಾದರೂ ಅದನ್ನು ಬಳಸದೆ ಪಂಚಾಯತ್ ಅಧಿಕಾರಿಗಳು ಜೆಸಿಬಿ ಹಾಗೂ ಕಸ ಸಾಗಣೆ ಟ್ರ್ಯಾಕ್ಟರ್ ಮತ್ತು ಟೆಂಪೋವನ್ನು ಬಳಸಿಕೊಳ್ಳುವುದರ ಜತೆಗೆ ಪೌರಕಾರ್ಮಿಕರನ್ನು ಬಳಸಿಕೊಂಡಿರುವುದು ಅಕ್ಷಮ್ಯ ಅಪರಾಧವಾಗಿದೆ. ಇದೂ ಸಾಲದೆಂಬಂತೆ ಸಾರ್ವಜನಿಕ ಶೌಚಾಲಯದ ಶೌಚ ಗುಂಡಿಯಿಂದ ಹೊರೆತೆಗೆಯಲಾದ ಮಲವನ್ನು ತೆರೆದ ವಾಹನಗಳಲ್ಲಿ ತುಂಬಿಕೊಂಡು, ಸಾಗಿಸಲಾಗಿತ್ತು. ಈ ಸಂದರ್ಭ ಬಹುಪಾಲು ಮಲವನ್ನು ಸಾರ್ವಜನಿಕ ಪ್ರದೇಶದ ಹಾದಿಯುದ್ದಕ್ಕೂ ಎಲ್ಲೆಂದರಲ್ಲಿ ಚೆಲ್ಲಿಕೊಂಡು ಹೋಗುವುದರ ಜತೆಗೆ ಬಯಲು ಪ್ರದೇಶದಲ್ಲೇ ಸುರಿಯಲಾಗಿದೆ. ಸ್ವಚ್ಛತೆಗೆ ಆದ್ಯತೆ ನೀಡದೆ ಅನೈರ್ಮಲ್ಯಕ್ಕೆ ಮೂಲ ಕಾರಣ ರಾಗುವ ಮೂಲಕ ಸಾಂಕ್ರಾಮಿಕ ರೋಗ ರುಜಿನಗಳಿಗೆ ನಾಂದಿ ಹಾಡಿದ ಹನೂರು ಪ. ಪಂ ಅಧಿಕಾರಿಗಳು ಹಾಗೂ ಆರೋಗ್ಯ ನಿರೀಕ್ಷಕಿಯವರು ನಾಗರಿಕರ ಜೀವದ ಜತೆ ಚೆಲ್ಲಾಟ ಆಡಿದ್ದಾರೆ ಎಂದು ಸ್ಥಳೀಯರ ಆರೋಪವಾಗಿದೆ. ಕಾರ್ಮಿಕರ ದಿನಾಚರಣೆಯಂದು ಪೌರಕಾರ್ಮಿಕರನ್ನು ಸನ್ಮಾನಿಸುವಂತಹ ಬೂಟಾಟಿಕೆ ತೋರುವ ಪಂಚಾಯತ್ ಅಧಿಕಾರಿಗಳು ವಾಸ್ತವದಲ್ಲಿ ಅವರಿಂದಲೇ ಮಲ ಹೊರಿಸುವ ಮೂಲಕ ಅಮಾನವೀಯವಾಗಿ ನಡೆಸಿಕೊಂಡಿದ್ದಾರೆ. ಈ ಅಮಾನುಷ ಕೃತ್ಯವೆಸಗಿದ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಂಡು ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಹಾಗೂ ಮುಂದೆಂದೂ ಮಲ ಹೊರುವ ಪದ್ಧತಿ ಮರುಕಳಿಸದಂತೆ ಕಠಿಣ ಕಾನೂನು ಕ್ರಮಕೈಗೊಳ್ಳುವಂತೆ ಪ್ರಬುದ್ಧ ನಾಗರಿಕರು ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ.
10 ಸ್ನಾತಕೋತ್ತರ ಕೋರ್ಸ್ ಗಳಿಗೆ ಸಿಇಟಿ ರದ್ದುಗೊಳಿಸಲು ಪರೀಕ್ಷಾ ಪ್ರಾಧಿಕಾರ ಪ್ರಸ್ತಾವ
Photo: twitter/KEA ಬೆಂಗಳೂರು, ಎ.14: ಬಯೋ ಟೆಕ್ನಾಲಜಿ, ಸಿವಿಲ್ ಇಂಜಿನಿಯರಿಂಗ್, ಇಲೆಕ್ಟ್ರಿಕಲ್ ಸೈನ್ಸ್ ಸೇರಿದಂತೆ ಒಟ್ಟು 10 ಕೋರ್ಸ್ಗಳಿಗೆ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ರದ್ದುಗೊಳಿಸಬೇಕು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಪ್ರಸ್ತಾವ ಸಲ್ಲಿಸಿರುವುದು ಇದೀಗ ಬಹಿರಂಗವಾಗಿದೆ. ಪ್ರವೇಶ ಪರೀಕ್ಷೆಗೆ ನೋಂದಣಿ ಕುಸಿತಗೊಂಡಿದೆ ಎಂಬ ಕಾರಣವನ್ನು ಮುಂದಿರಿಸಿರುವ ಕರ್ನಾಟಕ ಪ್ರವೇಶ ಪ್ರಾಧಿಕಾರವು ಪ್ರವೇಶ ಪರೀಕ್ಷೆಯನ್ನೇ ರದ್ದುಗೊಳಿಸಬೇಕು ಎಂದು ಪ್ರಸ್ತಾವ ಸಲ್ಲಿಸಿದೆ. ಇದಕ್ಕೆ ಸಂಬಂಧಿಸಿದಂತೆ ಟಿಪ್ಪಣಿ ಹಾಳೆಗಳು (ಕಡತ ಸಂಖ್ಯೆ;ED/498/TEC/2023 Computer number 1254637) he-file.inಗೆ ಲಭ್ಯವಾಗಿವೆ. ಪಾಲಿಮರ್ ಸೈನ್ಸ್, ಟೆಕ್ಸ್ಟೈಲ್ ಟೆಕ್ನಾಲಜಿ, ಕೆಮಿಕಲ್ ಇಂಜಿನಿಯರಿಂಗ್, ಪರಿಸರ ಇಂಜಿನಿಯರಿಂಗ್, ಬಯೋ ಟೆಕ್ನಾಲಜಿ, ವಾಸ್ತುಶಿಲ್ಪ, ಮೆಕ್ಯಾನಿಕಲ್ ಸೈನ್ಸ್, ಇಲೆಕ್ಟ್ರಿಕಲ್ ಸೈನ್ಸ್, ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ಮತ್ತು ಸಿವಿಲ್ ಇಂಜಿನಿಯರಿಂಗ್ಗೆ 2022-23ನೇ ಸಾಲಿನಲ್ಲಿ ಒಟ್ಟು 7,056 ವಿದ್ಯಾರ್ಥಿಗಳು ಪ್ರವೇಶ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು. 2023-24ರಲ್ಲಿ 6,427 ವಿದ್ಯಾರ್ಥಿಗಳು ನೋಂದಾಯಿಸಿದ್ದರು. ಈ ಅಂಕಿ ಅಂಶದ ಪ್ರಕಾರ ಕಳೆದ ವರ್ಷಕ್ಕೆ ಹೋಲಿಸಿದರೇ ಒಂದೇ ವರ್ಷದಲ್ಲಿ 629 ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿದೆ. ಈ ಅಂಶವನ್ನೇ ಮುಂದಿರಿಸಿಕೊಂಡಿರುವ ಕೆಇಎಯು ಪ್ರವೇಶ ಪರೀಕ್ಷೆ ಬದಲಿಗೆ ಸೆಮಿಸ್ಟರ್ನಲ್ಲಿ ಗಳಿಸಿರುವ ಅಂಕಗಳನ್ನಾಧರಿಸಿ ಪ್ರವೇಶ ಕಲ್ಪಿಸಬೇಕು ಎಂದು ಪ್ರತಿಪಾದಿಸಿರುವ ಕ್ರಮಕ್ಕೆ ಶಿಕ್ಷಣ ಇಲಾಖೆಯಲ್ಲಿಯೇ ಆಕ್ಷೇಪ ವ್ಯಕ್ತವಾಗಿವೆ. ಎಂ.ಟೆಕ್ ಪದವಿಯ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ರದ್ದುಗೊಳಿಸಿ ಎಂ.ಟೆಕ್ ಪದವಿ ಆಕಾಂಕ್ಷಿ ವಿದ್ಯಾರ್ಥಿಗಳಿಗೆ ಅವರ ಸ್ನಾತಕ ಪದವಿಯ ಎಲ್ಲ ವರ್ಷಗಳ ಸೆಮಿಸ್ಟರ್ಗಳ ಸರಾಸರಿ ಅಂಕಗಳ ಆಧಾರದ ಮೇಲೆ ಎಂ.ಟೆಕ್ ಪದವಿಗೆ ಪ್ರವೇಶ ನೀಡುವುದು ಸೂಕ್ತ ಎಂದು ಪ್ರಾಧಿಕಾರವು ತನ್ನ ಪ್ರಸ್ತಾವದಲ್ಲಿ ವಿವರಿಸಿದೆ. ಕೆಇಎ ಯು ತನ್ನ ಪ್ರಸ್ತಾವದಲ್ಲಿ 10 ವಿಷಯಗಳಿಗೆ ಪ್ರವೇಶ ಪರೀಕ್ಷೆ ಮಾಡುವುದರಿಂದ ಪ್ರಾಧಿಕಾರಕ್ಕೆ ಆರ್ಥಿಕ ನಷ್ಟವುಂಟಾಗುತ್ತಿದೆ. ಅಲ್ಲದೇ ಮಾನವ ಸಂಪನ್ಮೂಲದ ಮೇಲೆ ಅನಾವಶ್ಯಕ ಕಾರ್ಯ ಒತ್ತಡ ಉಂಟಾಗುತ್ತಿದೆ. ಹೀಗಾಗಿ ಎಂ.ಟೆಕ್ ಕೋರ್ಸ್ಗೆ ಪ್ರವೇಶ ಪರೀಕ್ಷೆ ರದ್ದುಪಡಿಸಬೇಕು ಎಂದು ಪ್ರಾಧಿಕಾರವು ತನ್ನ ಪ್ರಸ್ತಾವದಲ್ಲಿ ಹೇಳಿದೆ. ಇದಕ್ಕೆ ಉನ್ನತ ಶಿಕ್ಷಣ ಇಲಾಖೆಯ ಅಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಕುರಿತು ಸಚಿವ ಡಾ.ಎಂ.ಸಿ.ಸುಧಾಕರ್ ಅವರೊಂದಿಗೂ ಅಧಿಕಾರಿಗಳು ಚರ್ಚಿಸಿದ್ದಾರೆ ಎಂದು ತಿಳಿದು ಬಂದಿದೆ. ‘ಕೆಇಎಯು ಉನ್ನತ ಶಿಕ್ಷಣ ಇಲಾಖೆಯ ಅಧೀನದಲ್ಲಿ ಕರ್ತವ್ಯ ನಿರ್ವಹಿಸುವ ಪ್ರಾಧಿಕಾರವಾ ಗಿದೆ. ಇದು ಸರಕಾರದ ಒಂದು ಭಾಗವಾಗಿರುತ್ತದೆ. ಸರಕಾರದ ಉದ್ದೇಶವು ಲಾಭಗಳಿಸುವ ಉದ್ದೇಶ ಆಗಬಾರದು. ಸರಕಾರಕ್ಕೆ ಸೇವಾಭಾವನೆ ಇರಬೇಕಾಗುತ್ತದೆ. ಆದ್ದರಿಂದ ಎಂ.ಟೆಕ್ ಕೋರ್ಸ್ ಗಳಿಗೆ ಕೆಇಎಯಿಂದ ಅಭ್ಯರ್ಥಿಗಳಿಗೆ ಪ್ರವೇಶ ಪರೀಕ್ಷೆ ನಡೆಸಿ ಸೀಟುಗಳನ್ನು ಭರ್ತಿ ಮಾಡುವ ಕ್ರಮವು ಸರಿ ಇರುತ್ತದೆ. ಸೆಮಿಸ್ಟರ್ಗಳಲ್ಲಿ ಪಡೆಯುವ ಅಂಕಗಳ ಆಧಾರದ ಮೇಲೆ ಪ್ರವೇಶಾತಿ ನೀಡುವ ಕ್ರಮವ ಸರಿ ಇರುವುದಿಲ್ಲ. ಒಂದು ವೇಳೆ ಸೆಮಿಸ್ಟರ್ಗಳಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಪ್ರವೇಶಾತಿ ನೀಡಿದಲ್ಲಿ ಭ್ರಷ್ಟಾಚಾರಕ್ಕೆ ಅವಕಾಶ ಮಾಡಿಕೊಟ್ಟಂತಾಗುತ್ತದೆ. ಆದ್ದರಿಂದ ಕೆಇಎ ಪ್ರಸ್ತಾವವನ್ನು ಕೈ ಬಿಡಬಹುದಾಗಿದೆ,’ ಎಂದು ಶಾಖಾಧಿಕಾರಿ ಶಾಂತಪ್ಪ ದನ್ನೇನವರ್ ಅವರು ಟಿಪ್ಪಣಿಯಲ್ಲಿ ದಾಖಲಿಸಿರುವುದು ಗೊತ್ತಾಗಿದೆ. ಅಲ್ಲದೇ ಇಲಾಖೆಯ ಅಧೀನ ಕಾರ್ಯದರ್ಶಿ ಮಹಾಂತಪ್ಪ ಎಸ್ ತುರಕನೂರು ಅವರೂ ಸಹ ಶಾಖಾಧಿಕಾರಿಯ ಅಭಿಪ್ರಾಯವನ್ನೇ ಎತ್ತಿ ಹಿಡಿದಿದ್ದಾರೆ. ‘ಎಂ.ಟೆಕ್ ಕೋರ್ಸ್ಗಳಿಗೆ ಪ್ರವೇಶಾತಿಗೆ ಸಂಬಂಧಿಸಿದಂತೆ 2005ರಲ್ಲಿ ನಿಯಮವು ಜಾರಿಗೆ ಬಂದಿದೆ. ಇದರಿಂದಾಗಿ ಎಂಇ/ಎಂ.ಟೆಕ್ ಸ್ನಾತಕೋತ್ತರ ಕೋರ್ಸ್ ಪ್ರವೇಶಾತಿ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ಕೈಗೊಳ್ಳಲು ಸಾಧ್ಯವಾಗಿರುತ್ತದೆ. ಅಲ್ಲದೇ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಹಾಗೂ ಪ್ರವೇಶಾತಿ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ಕೈಗೊಳ್ಳಲು 2024-25ನೇ ಸಾಲಿನಿಂದ ಸಾಮಾನ್ಯ ಪ್ರವೇಶ ಪರೀಕ್ಷೆ ರದ್ದುಗೊಳಿಸದೆಯೇ ಹಾಲಿ ಚಾಲ್ತಿಯಲ್ಲಿರುವ ನಿಯಮಾವಳಿಗಳಂತೆ ಪ್ರವೇಶಾತಿ ಪ್ರಕ್ರಿಯೆ ಮುಂದುವರಿಸುವುದು ಸೂಕ್ತ,’ ಎಂದು ಅಭಿಪ್ರಾಯಿಸಿರುವುದು ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ. ಇಲೆಕ್ಟ್ರಿಕಲ್ ಸೈನ್ಸ್ ಇಂಜಿನಿಯರಿಂಗ್, ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್, ಸಿವಿಲ್ ಇಂಜಿನಿಯರಿಂಗ್ ವಿಷಯಗಳನ್ನು ಹೊರತುಪಡಿಸಿದರೇ ಉಳಿದ 7 ವಿಷಯಗಳಿಗೆ ಸಾವಿರಕ್ಕಿಂತ ಕಡಿಮೆ ಅಭ್ಯರ್ಥಿಗಳು ಎಂ.ಟೆಕ್ ಸಾಮಾನ್ಯ ಪ್ರವೇಶ ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದಾರೆ. ಇವರಲ್ಲಿ ಹಲವು ವಿದ್ಯಾರ್ಥಿಗಳು ಪರೀಕ್ಷೆಗೆ ಗೈರು ಹಾಜರಾಗಿದ್ದಾರೆ. ಇನ್ನೂ ಕೆಲವು ವಿದ್ಯಾರ್ಥಿಗಳಿಗೆ ಸೀಟ್ ದೊರೆತಿದ್ದರೂ ಎಂ.ಟೆಕ್ ಕೋರ್ಸ್ಗೆ ದಾಖಲಾತಿಯನ್ನೇ ಪಡೆದಿಲ್ಲ ಎಂಬುದು ಕೆಇಎಯು ತನ್ನ ಪ್ರಸ್ತಾವದಲ್ಲಿ ಮಾಹಿತಿ ಒದಗಿಸಿದೆ. ‘ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಈ ಎಲ್ಲಾ 10 ಎಂ.ಟೆಕ್ ವಿಷಯಗಳಿಗೆ ಸಂಬಂಧಿಸಿದಂತೆ ಪ್ರವೇಶ ಪರೀಕ್ಷೆಯನ್ನು ನಡೆಸುತ್ತಿರುವುದರಿಂದ ಆರ್ಥಿಕ ನಷ್ಟವುಂಟಾಗುತ್ತಿದೆ. ಅಲ್ಲದೇ ಪ್ರಾಧಿಕಾರದ ಮಾನವ ಸಂಪನ್ಮೂಲದ ಮೇಲೆ ಅನಾವಶ್ಯಕ ಕಾರ್ಯ ಒತ್ತಡ ಉಂಟಾಗುತ್ತದೆ. ಅಭ್ಯರ್ಥಿಗಳು ಸಹ ಎಂ.ಟೆಕ್ ಕೋರ್ಸ್ ಗಳಿಗೆ ದಾಖಲಾತಿ ಪಡೆದುಕೊಳ್ಳಲು ಆಸಕ್ತಿ ತೋರಿಸುತ್ತಿಲ್ಲ,’ ಎಂದು ಪ್ರಸ್ತಾವದಲ್ಲಿ ವಿವರಿಸಿರುವುದು ಗೊತ್ತಾಗಿದೆ. ಎಂ.ಟೆಕ್ ಕೋರ್ಸ್ಗಳಿಗೆ ಅಭ್ಯರ್ಥಿಗಳು ಆಸಕ್ತಿ ತೋರಿಸುತ್ತಿಲ್ಲ ಎಂಬ ಅಂಶವನ್ನು ಮುಂದಿರಿಸಿರುವ ಪ್ರಾಧಿಕಾರವು ಎಂಬಿಎ ಮತ್ತು ಎಂಸಿಎ ಪದವಿಗಳಿಗೆ ಮಾತ್ರ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಸಬೇಕು. ಅದರಲ್ಲಿ ವಿದ್ಯಾರ್ಥಿಗಳು ಗಳಿಸುವ ರ್ಯಾಂಕ್ ಆಧರಿಸಿ ಸ್ನಾತಕೋತ್ತರ ಪದವಿಗಳಿಗೆ ಪ್ರವೇಶ ನೀಡುವುದನ್ನು ಮುಂಬರುವ ವರ್ಷಗಳಲ್ಲಿಯೂ ಮುಂದುವರಿಸಬೇಕು ಎಂದಿದೆ. ಅದೇ ರೀತಿ ಎಂ.ಟೆಕ್ ಪದವಿಯ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ರದ್ದುಗೊಳಿಸಿ ಎಂ.ಟೆಕ್ ಪದವಿ ಆಕಾಂಕ್ಷಿ ವಿದ್ಯಾರ್ಥಿಗಳಿಗೆ ಅವರ ಸ್ನಾತಕ ಪದವಿಯ ಎಲ್ಲ ವರ್ಷಗಳ ಸೆಮಿಸ್ಟರ್ಗಳ ಸರಾಸರಿ ಅಂಕಗಳ ಆಧಾರದ ಮೇಲೆ ಎಂ.ಟೆಕ್ ಪದವಿಗೆ ಪ್ರವೇಶ ನೀಡುವುದು ಸೂಕ್ತ ಎಂದು ಪ್ರಾಧಿಕಾರವು ತನ್ನ ಪ್ರಸ್ತಾವದಲ್ಲಿ ವಿವರಿಸಿದೆ.
ಮನೆಯಲ್ಲಿ ಅಕ್ಕಿ ಏಲಕ್ಕಿ ಬಳಸಿ ನೀವು ಹಣ ಆಕರ್ಷಣೆ ಮಾಡುವುದು..ಮೂರು ಪರಿಣಾಮಕಾರಿ ರೆಮಿಡಿ ಹಣದ ಸಂಕಷ್ಟಕ್ಕೆ
ಮನೆಯಲ್ಲಿ ಅಕ್ಕಿ ಏಲಕ್ಕಿ ಬಳಸಿ ನೀವು ಹಣ ಆಕರ್ಷಣೆ ಮಾಡುವುದು..ಮೂರು ಪರಿಣಾಮಕಾರಿ ರೆಮಿಡಿ ಹಣದ ಸಂಕಷ್ಟಕ್ಕೆ
ವಿಡಿಯೋ ಒಂದು ಸಲ ನೋಡಿಬಿಡಿ ವೃಷಭ ರಾಶಿಗೆ ಈ ಖುಷಿ ಈ ನೋವು ಈ ವರ್ಷ ಇದ್ದೆ ಇದೆ..ಗುರು ಸಂಚಾರ ಫಲ ಹೇಗಿರುತ್ತದೆ ನೋಡಿ ನಿಮಗೆ
ಜೈಲ್ ಅನುಭವ ಹೇಗಿತ್ತು ಎಂದು ವಿಡಿಯೋ ಪೋಸ್ಟ್ ಮಾಡಿದ ಸೋನು ಶ್ರೀನಿವಾಸ್ ಗೌಡ..23 ವರ್ಷಕ್ಕೆ ಚಿಕ್ಕ ವಯಸ್ಸಿಗೆ ನೋಡಬಾರದ ಕಷ್ಟ ನೋಡಿದೆ ಎಂದು ಭಾವುಕಳಾದ ಸೋನು..
ಟಿ ಎನ್ ಸೀತಾರಂ ಸೀರಿಯಲ್ ಖ್ಯಾತಿಯ ನಟ ಮಂಡ್ಯ ರವಿ..ಪ್ರತಿಭಾವಂತ ನಟನ ದುರಂತ ಬದುಕಿನ ಕಥೆ..ಮಂಡ್ಯ ರವಿ ತಂದೆ ಅವರು ಹೇಳಿದ್ದೇನು ನೋಡಿ
ಮೋದಿ ಬಗ್ಗೆ ರುದ್ರ ಪ್ರತಾಪ್ ಸ್ವಾಮೀಜಿ ಸ್ಪೋಟಕ ಭವಿಷ್ಯ ,ದೇಶ ನಡುಗಿಸುತ್ತಿರುವ ಯುವ ಸ್ವಾಮೀಜಿ ಯಾರು ? ಮುಂದೆ ರಾಜಕೀಯ ಭವಿಷ್ಯ ಏನಾಗಲಿದೆ ನೋಡಿ
ಧವಳ ಧಾರಿಣಿ ಅಂಕಣ: ರಾಮಾಯಣದ ಮಹಾ ಮಥನದ ಕಡೆಗೋಲು ಮಂಥರೆ
ಧವಳ ಧಾರಿಣಿ ಅಂಕಣ: ಮಂಥರೆಯ ಪಾತ್ರ ರಾಮಾಯಣದಲ್ಲಿ ಚಿಕ್ಕ ಮತ್ತು ಮಹತ್ವದ ಪಾತ್ರ. ಇನ್ನೇನು ತನ್ನ ಮನಸ್ಸಿನಂತೆ ನಡೆಯುತ್ತದೆ ಎನ್ನುವ ಕನಸಿನ ವಿಹಾರದಲ್ಲಿರುವ ದಶರಥನ ಸೌಧವನ್ನು ನುಚ್ಚುನೂರು ಮಾಡಿದವಳು ಅವಳು. ಆಕಾರದಲ್ಲಿ ಈಕೆ ಕುಬ್ಜೆ, ಕುರೂಪಿ ಇರಬಹುದು; ಸಿಕ್ಕ ಸಣ್ಣ ಅವಕಾಶದಲ್ಲಿ ರಾಮಾಯಣದಲ್ಲಿ ಬರುವ ಎಲ್ಲ ಪಾತ್ರಗಳಿಗೂ ಮಹತ್ತರ ತಿರುವನ್ನು ಕೊಟ್ಟವಳು ಈಕೆ. The post ಧವಳ ಧಾರಿಣಿ ಅಂಕಣ: ರಾಮಾಯಣದ ಮಹಾ ಮಥನದ ಕಡೆಗೋಲು ಮಂಥರೆ first appeared on Vistara News .
ರಾಜ್ಯದಲ್ಲಿ SC/ST ಗೆ ಸೇರಿದ ಜಾಗ ಖರೀದಿಸಬಹುದೇ ಕಾನೂನಿನಲ್ಲಿ ಏನಿದೆ..ಖರೀದಿ ಮಾಡಿದರೆ ಏನಾಗುತ್ತೆ ಇಲ್ಲಿದೆ ನೋಡಿ ಮಾಹಿತಿ
ಮೃತ ವ್ಯಕ್ತಿಗೆ ಸ್ನಾನ ಮಾಡಿಸಿದ ಮರುದಿನವೇ ಆ ವ್ಯಕ್ತಿ ಮನೆಯವರು ತುಂಬಾ ಶ್ರೀಮಂತ ಆಗುತ್ತಿದ್ದರು..ಕಾರಣ ಕೇಳಿ ಎಲ್ಲರೂ ಶಾಕ್..
ನಿಮ್ಮನೆ ಬಾಗಿಲು ಹೇಗಿರಬೇಕು ಗೊತ್ತಾ ? ಪಾಸಿಟಿವ್ ನೆಗೆಟಿವ್ ಎರಡೂ ಬರುವುದು ಬಾಗಿಲಿಂದಾನೆ..ಈ ರೀತಿ ಇರುವಂತೆ ನೋಡಿಕೊಳ್ಳಿ
ಯಾವ ದಿನ ಹುಟ್ಟಿದ್ದೀರಿ ಈಗಲೇ ನಿಮ್ಮ ಅದೃಷ್ಟ ತಿಳಿಯಿರಿ..ಯಾವ ದಿನ ಏನು ಫಲ ಸೋಮವಾರದಿಂದ ಭಾನುವಾರದವರೆಗೆ…
ಯಾವ ದಿನ ಹುಟ್ಟಿದ್ದೀರಿ ಈಗಲೇ ನಿಮ್ಮ ಅದೃಷ್ಟ ತಿಳಿಯಿರಿ..ಯಾವ ದಿನ ಏನು ಫಲ ಸೋಮವಾರದಿಂದ ಭಾನುವಾರದವರೆಗೆ...
ಜೋಶಿ ಸೋತರೆ ಧಾರವಾಡ ಅಸ್ಮಿತೆಯ ಗೆಲುವು
ಪ್ರಹ್ಲಾದ್ ಜೋಶಿ 20 ವರ್ಷಗಳಲ್ಲಿ ಧಾರವಾಡ ಲೋಕಸಭಾ ಕ್ಷೇತ್ರವನ್ನು ಮಾದರಿ ಮತಕ್ಷೇತ್ರವನ್ನಾಗಿ ರೂಪಿಸಬಹುದಿತ್ತು. ಕರ್ನಾಟಕ ಕಾಲೇಜು 2017ರಲ್ಲೇ ಶತಮಾನೋತ್ಸವ ಆಚರಿಸಿಕೊಂಡಿದೆ. ಕರ್ನಾಟಕ ವಿಶ್ವವಿದ್ಯಾನಿಲಯ ಸ್ಥಾಪನೆಯಾಗಿ 75 ವರ್ಷಗಳಾಗಿವೆ. ಭವ್ಯ ಪರಂಪರೆ ಹೊಂದಿರುವ ಈ ಕಾಲೇಜು ಮತ್ತು ವಿಶ್ವವಿದ್ಯಾನಿಲಯವನ್ನು ವಿಶೇಷ ಪ್ರಕರಣವೆಂದು ಕೇಂದ್ರೀಯ ವಿಶ್ವವಿದ್ಯಾನಿಲಯವನ್ನಾಗಿ ಮೇಲ್ದರ್ಜೆಗೆ ಏರಿಸಬಹುದಿತ್ತು. ಈ ಹೊತ್ತು ಕೇಂದ್ರ ಸರಕಾರದ ವಿಶೇಷ ಅನುದಾನದಲ್ಲಿ ನಡೆಯುವ ಜೈಪುರ ಸಂಗೀತೋತ್ಸವ ಜಗದ್ವಿಖ್ಯಾತಿ ಪಡೆದಿದೆ. ಹಾಗೆ ನೋಡಿದರೆ ಜೈಪುರ, ಧಾರವಾಡದ ಹಾಗೆ ಸಾಹಿತ್ಯ-ಸಂಗೀತ ಸೇರಿದಂತೆ ಸಾಂಸ್ಕೃತಿಕ ಕ್ಷೇತ್ರದಲ್ಲಿ ದಿಗ್ಗಜರನ್ನು ಸೃಷ್ಟಿಸಿಲ್ಲ. ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿರುವ ಹುಬ್ಬಳ್ಳಿ-ಧಾರವಾಡ ಹಾಳು ಕೊಂಪೆಯಂತಾಗಿದೆ. ಧಾರವಾಡ ಸೀಮೆಯ ಸಾಂಸ್ಕೃತಿಕ ಪರಂಪರೆ ಪರಿಚಯಿಸುವ ಮ್ಯೂಸಿಯಂ ಸ್ಥಾಪನೆ ಮಾಡಿದ್ದರೆ ಪ್ರಹ್ಲಾದ್ ಜೋಶಿಯವರ ಹೆಸರನ್ನು ಸರ್ ಸಿದ್ದಪ್ಪ ಕಂಬಳಿಯವರ ಹಾಗೆ ಜನ ಸದಾ ನೆನಪಿಸಿಕೊಳ್ಳುತ್ತಿದ್ದರು.
Iran-Israel War Explainer: ಇಸ್ರೇಲ್ ಮೇಲೆ ಇರಾನ್ ದಾಳಿಗೆ ಕ್ಷಣಗಣನೆ; ಮುಂದೇನಾಗಬಹುದು?
Iran-israel War Explainer: ಇಸ್ರೇಲ್ ವಿರುದ್ಧ ಯುದ್ಧ ಸನ್ನದ್ಧವಾಗಿ ನಿಂತಿರುವ ಇರಾನ್ ಅದರ ಪ್ರತಿಕ್ರಿಯೆಗಾಗಿ ಕಾಯುತ್ತಿದೆ. ಈ ನಡುವೆ ದೇಶಾದ್ಯಂತ ಯುದ್ಧದ ಸನ್ನಿವೇಶ ಉದ್ಭವವಾಗಿದ್ದು, ಇರಾನ್ ಗೆ ಯುದ್ಧ ನಡೆಸದಂತೆ ತಡೆಯುವ ಪ್ರಯತ್ನವನ್ನು ಯುಎಸ್ ಮಾಡುತ್ತಿದೆ. The post Iran-Israel War Explainer: ಇಸ್ರೇಲ್ ಮೇಲೆ ಇರಾನ್ ದಾಳಿಗೆ ಕ್ಷಣಗಣನೆ; ಮುಂದೇನಾಗಬಹುದು? first appeared on Vistara News .
ಕುಬೇರನ ಈ ಕಥೆ ಕೇಳಿದ್ರೆ ನಿಮ್ಮ ಕಷ್ಟಗಳೆಲ್ಲಾ ಕಳೆಯುತ್ತದೆ.ಜೀವನದಲ್ಲಿ ಶ್ರೀಮಂತಿಕೆ ಬರುತ್ತದೆ..
ಕುಬೇರನ ಈ ಕಥೆ ಕೇಳಿದ್ರೆ ನಿಮ್ಮ ಕಷ್ಟಗಳೆಲ್ಲಾ ಕಳೆಯುತ್ತದೆ.ಜೀವನದಲ್ಲಿ ಶ್ರೀಮಂತಿಕೆ ಬರುತ್ತದೆ..