ಕಾಯಂ ಬೋಧಕ ಹುದ್ದೆಗಳ ಮಂಜೂರಾತಿಗೆ ಪ್ರಸ್ತಾವ
ದಾವಣಗೆರೆ : ನಗರದ ದೃಶ್ಯಕಲಾ ಮಹಾವಿದ್ಯಾಲಯಕ್ಕೆ ಅಗತ್ಯವಿರುವ ಕಾಯಂ ಬೋಧಕರ ಹುದ್ದೆಗಳ ಮಂಜೂರಾತಿ ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಡಿ. ಕುಂಬಾರ ಹೇಳಿದರು. ಮಹಾವಿದ್ಯಾಲಯದ ವಜ್ರ ಮಹೋತ್ಸವ ಸಮಾರೋಪದ ಅಂಗವಾಗಿ ಶುಕ್ರವಾರ ಆಯೋಜಿಸಿದ್ದ ರಾಷ್ಟ್ರೀಯ ಕಾರ್ಯಾಗಾರ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಈ ಕುರಿತು ಸಿಂಡಿಕೇಟ್ ಮತ್ತು ಸಲಹಾ ಸಮಿತಿ ಸದಸ್ಯರೊಂದಿಗೆ ಚರ್ಚಿಸಲಾಗುವುದು. ಮುಂಬರುವ ದಿನಗಳಲ್ಲಿ ಸಿಎಂ ಹಾಗೂ ಶಿಕ್ಷಣ ಸಚಿವರ ಬಳಿಗೆ ನಿಯೋಗ ತೆಗೆದುಕೊಂಡು ಹೋಗುವ ಚಿಂತನೆಯಿದೆ ಎಂದು ತಿಳಿಸಿದರು. ದೃಶ್ಯಕಲಾ […] The post ಕಾಯಂ ಬೋಧಕ ಹುದ್ದೆಗಳ ಮಂಜೂರಾತಿಗೆ ಪ್ರಸ್ತಾವ first appeared on ವಿಜಯವಾಣಿ .
ಅಂತರ ಕಾಲೇಜು ಮ್ಯಾನೇಜ್ಮೆಂಟ್ ಫೆಸ್ಟ್
ದಾವಣಗೆರೆ : ನಗರದ ಜೈನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಎಂಬಿಎ ವಿಭಾಗದಿಂದ ಬುಧವಾರ, ಪದವಿ ವಿದ್ಯಾರ್ಥಿಗಳಿಗೆ ಅಂತರ ಕಾಲೇಜು ಮ್ಯಾನೇಜ್ಮೆಂಟ್ ಫೆಸ್ಟ್ ‘ಇನ್ಫ್ಯೂಷನ್ 2025’ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ವಿವಿಧ ಪದವಿ ಕಾಲೇಜುಗಳಿಂದ 14 ತಂಡಗಳು ವ್ಯಾಪಾರ, ರಸಪ್ರಶ್ನೆ, ಅತ್ಯುತಮ ಮಾರಾಟಗಾರ ಹಾಗು ತಂಡದ ಗುರಿಗಳು ಎಂಬ ಸುತ್ತುಗಳಲ್ಲಿ ಭಾಗವಹಿಸಿದ್ದವು ಎಂದು ವಿಭಾಗದ ಮುಖ್ಯಸ್ಥ ಡಾ. ಡಿ. ಸುಹಾಸ್ ಹಾಗೂ ಪ್ರಾಚಾರ್ಯ ಮತ್ತು ನಿರ್ದೇಶಕ ಡಾ. ಡಿ.ಬಿ. ಗಣೇಶ್ ತಿಳಿಸಿದರು. ಸಲಹೆಗಾರ ಡಾ. ಮಂಜಪ್ಪ ಇನ್ನಿತರರು […] The post ಅಂತರ ಕಾಲೇಜು ಮ್ಯಾನೇಜ್ಮೆಂಟ್ ಫೆಸ್ಟ್ first appeared on ವಿಜಯವಾಣಿ .
ಎಚ್ಎಸ್ವಿ ತವರು ಜಿಲ್ಲೆಯ ನೆನಪಿನ ಬುತ್ತಿ
ದಾವಣಗೆರೆ :ಶುಕ್ರವಾರ ನಿಧನರಾದ ನಾಡಿನ ಹಿರಿಯ ಕವಿ ಡಾ.ಎಚ್.ಎಸ್. ವೆಂಕಟೇಶ ಮೂರ್ತಿ ಅವರು ಜನಿಸಿದ್ದು, ಬಾಲ್ಯವನ್ನು ಕಳೆದಿದ್ದು ದಾವಣಗೆರೆ ಜಿಲ್ಲೆಯ ಹೊದಿಗೆರೆ ಗ್ರಾಮದಲ್ಲಿ. ಸಾರಸ್ವತ ಲೋಕದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಎಚ್ಎಸ್ವಿ ಅವರ ಬದುಕಿನ ಬೇರುಗಳು ಈ ಜಿಲ್ಲೆಯಲ್ಲಿವೆ. ಸುಮಧುರ ನೆನಪುಗಳ ಬುತ್ತಿಯನ್ನು ಅವರು ಬಿಟ್ಟು ಹೋಗಿದ್ದಾರೆ. ವೆಂಕಟೇಶ ಮೂರ್ತಿ ಅವರು ವಾಸಿಸುತ್ತಿದ್ದ ಹೆಂಚಿನ ಮನೆ ಈಗಲೂ ಹೊದಿಗೆರೆ ಗ್ರಾಮದಲ್ಲಿದೆ. ಬೆಂಗಳೂರಿನಲ್ಲಿ ನೆಲೆ ಕಂಡುಕೊಂಡರೂ ತವರು ಜಿಲ್ಲೆಯ ಸಂಪರ್ಕವನ್ನು ಅವರು ಬಿಟ್ಟಿರಲಿಲ್ಲ. ಊರಿನಲ್ಲಿ ಗಣೇಶೋತ್ಸವ ಸೇರಿದಂತೆ […] The post ಎಚ್ಎಸ್ವಿ ತವರು ಜಿಲ್ಲೆಯ ನೆನಪಿನ ಬುತ್ತಿ first appeared on ವಿಜಯವಾಣಿ .
ದಾವಣಗೆರೆ : ‘ಡಾ.ಎಚ್.ಎಸ್. ವೆಂಕಟೇಶ ಮೂರ್ತಿ ಅವರು ಬಾಲ್ಯದಲ್ಲಿ ಚಿಣ್ಣಿದಾಂಡುನಲ್ಲಿ ಎತ್ತಿದ ಕೈ. ಗೋಲಿ ಆಟದಲ್ಲಿ ಒಳ್ಳೇ ಗುರಿಕಾರರಾಗಿದ್ದರು. ನಾವು ಕೂಡಿ ಆಡಿದ ಆ ದಿನಗಳನ್ನು ಮರೆಯುವಂತಿಲ್ಲ’ ಎಂದು, ಎಚ್ಎಸ್ವಿ ಅವರ ಬಾಲ್ಯ ಸ್ನೇಹಿತರಾದ ಈಶ್ವರಚಂದ್ರ ಅವರು ನೆನಪು ಮಾಡಿಕೊಂಡರು. ನಮಗಾಗ 10-12 ವರ್ಷ ವಯಸ್ಸು. ದೀಪಾವಳಿ ಸಂದರ್ಭದಲ್ಲಿ ನಮ್ಮೂರಿಗೆ ಒಬ್ಬ ಅಳಿಯಂದಿರು ಬಂದಿದ್ದರು. ಅವರೂ ನಮ್ಮ ಜತೆ ಸೇರಿ ಆಟಕ್ಕೆ ಬಂದರು. ಎಚ್ಎಸ್ವಿ ಅವರು ದಾಂಡು ಬೀಸಿದ ಹೊಡೆತಕ್ಕೆ ‘ಅಳಿಯಂದಿರ’ ಕೈಯಲ್ಲಿದ್ದ ವಾಚು ಪುಡಿ ಪುಡಿಯಾಗಿತ್ತಂತೆ. […] The post ಚಿಣ್ಣಿದಾಂಡು ಆಟದಲ್ಲಿ ಎತ್ತಿದ ಕೈ first appeared on ವಿಜಯವಾಣಿ .
ಪ್ರವಾಸಿತಾಣದ ತಪ್ಪಲಿನಲ್ಲಿ ಬೀದಿನಾಯಿಗಳ ನಾಪತ್ತೆ, ಚಿರತೆ ಕೈವಾಡಕ್ಕೆ ಸ್ಥಳೀಯರಲ್ಲಿ ಆತಂಕ
ಚಿಕ್ಕಬಳ್ಳಾಪುರ: ಪ್ರವಾಸಿ ತಾಣ ಸ್ಕಂದಗಿರಿ, ಪಾಪಾಘ್ನಿ ಮಠ ಸೇರಿ ಸುತ್ತಮುತ್ತಲ ಪ್ರದೇಶಗಳಲ್ಲಿ ಚಿರತೆಯು ನಾಯಿಗಳು ಎಳೆದುಕೊಂಡು ತಿಂದು ತೇಗುತ್ತಿರುವ ಪ್ರಕರಣಗಳ ಹಿನ್ನೆಲೆಯಲ್ಲಿ ಆತಂಕ ಮೂಡಿದೆ.ಇತ್ತೀಚೆಗೆ ಬೀದಿನಾಯಿಗಳು, ಮನೆಯ ಆವರಣದಲ್ಲಿ ಕಟ್ಟಿ ಹಾಕಿರುವ ಸಾಕು ನಾಯಿಗಳು ಸೇರಿ ನಾಲ್ಕೆ$ದು ನಾಯಿಗಳು ನಾಪತ್ತೆಯಾಗಿವೆ. ಪ್ರಾರಂಭದಲ್ಲಿ ಒಂದೆರಡು ದಿನದಲ್ಲಿ ಮತ್ತೆ ಕಾಣಿಸಿಕೊಳ್ಳುವ ನಿರೀೆ ಹೊಂದಲಾಗಿತ್ತು. ಇದರ ನಡುವೆ ಚಿರತೆಯೊಂದು ಬಂದು ಮನೆಯ ಆವರಣದಲ್ಲಿ ನಾಯಿಯನ್ನು ಎಳೆದುಕೊಂಡು ಹೋಗಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸ್ಥಳಿಯರ ಆತಂಕ ಹೆಚ್ಚಿಸಿದೆ. ಪೊಲೀಸ್ ಹಾಗೂ ಅರಣ್ಯ […] The post ಪ್ರವಾಸಿತಾಣದ ತಪ್ಪಲಿನಲ್ಲಿ ಬೀದಿನಾಯಿಗಳ ನಾಪತ್ತೆ, ಚಿರತೆ ಕೈವಾಡಕ್ಕೆ ಸ್ಥಳೀಯರಲ್ಲಿ ಆತಂಕ first appeared on ವಿಜಯವಾಣಿ .
ಕನ್ನಡ ವಿರೋಧಿ ಹೇಳಿಕೆ ಖಂಡಿಸುವಲ್ಲೂ ಕನ್ನಡಿಗರ ಅಸಡ್ಡೆ
ಚಿಕ್ಕಬಳ್ಳಾಪುರ: ನಟ ಕಮಲ್ ಹಾಸನ್ ತಮಿಳಿನಿಂದ ಕನ್ನಡ ಹುಟ್ಟಿದೆ ಎಂಬ ಆಕ್ಷೇಪಾರ್ಹ ಹೇಳಿಕೆಯನ್ನೂ ಖಂಡಿಸುವಲ್ಲೂ ಕನ್ನಡಿಗರಲ್ಲಿ ಅಸಡ್ಡೆ ಧೋರಣೆ ಕಂಡು ಬರುತ್ತಿದೆ. ವಿರೋಧವು ಕೆಲವರಿಗೆ ಮಾತ್ರ ಸೀಮಿತವಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಸಂತೋಷ್ ಹಾನಗಲ್ ಕಿಡಿಕಾರಿದ್ದಾರೆ.ಈಗಾಗಲೇ ಉತ್ತರದ ಕಡೆಗೆ ಮಹಾರಾಷ್ಟ್ರ, ದಕ್ಷಿಣದಲ್ಲಿ ಕೇರಳ, ಪೂರ್ವದಲ್ಲಿ ಆಂಧ್ರ ಸೇರಿ ನಾಲ್ಕು ದಿಕ್ಕುಗಳಲ್ಲೂ ಕರ್ನಾಟಕದ ಭಾಗವನ್ನು (ಬೆಳಗಾವಿ, ಕಾಸರಗೋಡು, ಬಳ್ಳಾರಿ) ಕಸಿದುಕೊಳ್ಳುವ ಯತ್ನವಾಗಿದೆ. ನಾಡು ನುಡಿಯ ಬಗ್ಗೆ ನಿರಂತರವಾಗಿ ಕಡೆಗಣನೆಯ ಹೇಳಿಕೆಗಳು, ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಪ್ರಮಾಣ […] The post ಕನ್ನಡ ವಿರೋಧಿ ಹೇಳಿಕೆ ಖಂಡಿಸುವಲ್ಲೂ ಕನ್ನಡಿಗರ ಅಸಡ್ಡೆ first appeared on ವಿಜಯವಾಣಿ .
ತಡರಾತ್ರಿ ವೇಗವಾಗಿ ಬಂದು ನೀರಿಗೆ ಬಿದ್ದ ವಾಹನ:ಚಾಲಕ ಸಾವು, ಇಬ್ಬರು ಪಾರು
ಚಿಕ್ಕಬಳ್ಳಾಪುರ: ಚಿಂತಾಮಣಿ ತಾಲೂಕಿನ ಬಟ್ಲಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಅತಿವೇಗ, ಅಜಾಗರೂಕತೆಯಿಂದ ನಿಯಂತ್ರಣ ತಪ್ಪಿದ ಕಾರು ರಸ್ತೆ ಪಕ್ಕದ ನೀರಿನ ಗುಂಡಿಗೆ ಬಿದ್ದಿದ್ದು ಚಾಲಕ ಮೃತಪಟ್ಟಿದ್ದಾನೆ. ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ಗೋಗಲವಾರಪಲ್ಲಿ ಗ್ರಾಮದ ಎಸ್. ಆದರ್ಶ (21) ಮೃತ. ಕಾರಿನಲ್ಲಿದ್ದ ಚಿಂತಾಮಣಿ ತಾಲೂಕಿನ ತಮ್ಮೇಪಲ್ಲಿ ಗ್ರಾಮದ ಟಿ.ಎನ್. ಶರತ್ (21), ಹೊಸಕೋಟೆಯ ಭರತ್ ಮತ್ತು ರಿಯಾನ್ ಅಪಾಯದಿಂದ ಪಾರಾಗಿದ್ದಾರೆ. ಕಾರು ಜಖಂಗೊಂಡಿದೆ.ಮೂವರು ಬೆಂಗಳೂರಿನಲ್ಲಿ ಕೆಲಸ ನಿರ್ವಹಿಸುತ್ತಿದ್ದು ಸೋಗಲವಾರಪಲ್ಲಿಯ ಆದರ್ಶ ಅವರ ಮನೆಗೆ ಊಟಕ್ಕೆ ಬಂದಿದ್ದರು. ತಡರಾತ್ರಿ ವಾಪಸ್ […] The post ತಡರಾತ್ರಿ ವೇಗವಾಗಿ ಬಂದು ನೀರಿಗೆ ಬಿದ್ದ ವಾಹನ:ಚಾಲಕ ಸಾವು, ಇಬ್ಬರು ಪಾರು first appeared on ವಿಜಯವಾಣಿ .
ರಕ್ಷಣಾ ಕ್ಷೇತ್ರದಲ್ಲಿ ಅಸುರಕ್ಷಿತ ಸ್ಥಿತಿ ಆತಂಕ, ರಾಜ್ಯ ಕಾಂಗ್ರೆಸ್ ಸರ್ಕಾರದ ಅಸಮರ್ಥತೆ ಕಾರಣ
ಚಿಕ್ಕಬಳ್ಳಾಪುರ: ರಕ್ಷಣಾ ಕ್ಷೇತ್ರದ ವಿಚಾರದಲ್ಲಿ ಕರ್ನಾಟಕದ ಅಸುರಕ್ಷಿತ ಸ್ಥಿತಿಗೆ ರಾಜ್ಯ ಸರ್ಕಾರದ ಅಸಮರ್ಥತೆ ಕಾರಣ ಎಂದು ಕಿಡಿಕಾರಿರುವ ಸಂಸದ ಡಾ.ಕೆ.ಸುಧಾಕರ್, ದಶಕದ ಹಿಂದೆ ವಿಭಜನೆಯಾಗಿ ಪುನರ್ ನಿಮಾರ್ಣವಾಗುತ್ತಿರುವ ನೆರೆಯ ಆಂಧ್ರ ರಾಜ್ಯಕ್ಕೆ ಹೋಲಿಸಿಕೊಂಡು ಅಸುರಕ್ಷಿತವಾಗುವಷ್ಟು ಕರ್ನಾಟಕದ ರಕ್ಷಣಾ ಮತ್ತು ಏರೋಸ್ಪೇಸ್ ಕೈಗಾರಿಕಾ ವ್ಯವಸ್ಥೆ ದುರ್ಬಲವಾಗಿದೆಯೇ ಎಂದು ಪ್ರಶ್ನಿಸಿದ್ದಾರೆ.ಈ ಕುರಿತು ಪತ್ರಿಕೆಗೆ ತಿಳಿಸಿರುವ ಅವರು, ಭಾರತದಲ್ಲಿ ಏರೋಸ್ಪೇಸ್ ಮತ್ತು ರಕ್ಷಣಾ ಕ್ಷೇತ್ರಗಳಲ್ಲಿ ನಾವೀನ್ಯತೆ ಮತ್ತು ಉತ್ಪಾದನೆಯೊಂದಿಗೆ ಕರ್ನಾಟಕ ಮುಂಚೂಣಿಯಲ್ಲಿದೆ. ರಕ್ಷಣಾ ಕ್ಷೇತ್ರಕ್ಕಾಗಿ ತಯಾರಿಸಲಾದ ವಿಮಾನ ಮತ್ತು ಹೆಲಿಕಾಪ್ಟರ್ಗಳಲ್ಲಿ ಸುಮಾರು […] The post ರಕ್ಷಣಾ ಕ್ಷೇತ್ರದಲ್ಲಿ ಅಸುರಕ್ಷಿತ ಸ್ಥಿತಿ ಆತಂಕ, ರಾಜ್ಯ ಕಾಂಗ್ರೆಸ್ ಸರ್ಕಾರದ ಅಸಮರ್ಥತೆ ಕಾರಣ first appeared on ವಿಜಯವಾಣಿ .
ಕಾಂಗ್ರೆಸ್ ಸೇರಲು ಬಿಜೆಪಿ, ಜೆಡಿಎಸ್ ಶಾಸಕರ ಅನೇಕರು ತುದಿಗಾಲಲ್ಲಿ ನಿಂತಿದ್ದಾರೆ, ಡಿಕೆಶಿ ಓಕೆ ಎಂದರೆ ಸಾಕು
ಚಿಕ್ಕಬಳ್ಳಾಪುರ: ಬಿಜೆಪಿಯಿಂದ ಉಚ್ಚಾಟಿತ ಶಾಸಕರಾದ ಎಸ್.ಟಿ.ಸೋಮಶೇಖರ್, ಶಿವರಾಮ್ ಹೆಬ್ಬಾರ್ ಅವರು ಮೊದಲಿನಿಂದಲೂ ಕಾಂಗ್ರೆಸ್ನೊಂದಿಗೆ ಗುರುತಿಸಿಕೊಂಡಿದ್ದಾರೆ. ರಾಜ್ಯ ವಿಪಕ್ಷ ನಾಯಕ ಆರ್.ಅಶೋಕ್, ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ರಾಜ್ಯ ಜೆಡಿಎಸ್ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೊರತುಪಡಿಸಿದಂತೆ ಆ ಪಕ್ಷಗಳಲ್ಲಿನ ಅನೇಕರು ಕಾಂಗ್ರೆಸ್ಗೆ ಬರಲು ತುದಿಗಾಲಿನಲ್ಲಿ ನಿಂತಿದ್ದಾರೆ ಎಂದು ಶಾಸಕ ಪ್ರದಿಪ್ ಈಶ್ವರ್ ಅಯ್ಯರ್ ತಿಳಿಸಿದ್ದಾರೆ. ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಹತಾಶ ಭಾವನೆಯಲ್ಲಿ ಬಿಜೆಪಿಯು ಶಾಸಕರನ್ನು ಉಚ್ಚಾಟಿಸಿದೆ. ಆ ಪಕ್ಷದಿಂದ ಅನೇಕರು ಕಾಂಗ್ರೆಸ್ಗೆ ಬಂದು ಬಿಟ್ಟರೆ ಏನು ಮಾಡುತ್ತಾರೆ ಎಂದು […] The post ಕಾಂಗ್ರೆಸ್ ಸೇರಲು ಬಿಜೆಪಿ, ಜೆಡಿಎಸ್ ಶಾಸಕರ ಅನೇಕರು ತುದಿಗಾಲಲ್ಲಿ ನಿಂತಿದ್ದಾರೆ, ಡಿಕೆಶಿ ಓಕೆ ಎಂದರೆ ಸಾಕು first appeared on ವಿಜಯವಾಣಿ .
ಬಾದಾಮಿ : ಸರ್ಕಾರಿ ಶಾಲೆಯಲ್ಲಿ ದಾಖಲಾತಿ ಹೆಚ್ಚಿಸುವ ಮೂಲಕ ಸರ್ಕಾರದ ಸೌಲಭ್ಯಗಳನ್ನು ಸಾರ್ವಜನಿಕರಿಗೆ ತಲುಪಿಸಬೇಕು ಎಂದು ಶಾಸಕ ಭೀಮಸೇನ ಚಿಮ್ಮನಕಟ್ಟಿ ಹೇಳಿದರು. ತಾಲೂಕಿನ ಮುತ್ತಲಗೇರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ-2025 ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ಮಕ್ಕಳಿಗೆ ಶಿಕ್ಷಣದೊಂದಿಗೆ ಬದುಕುವ ಕಲೆ, ಸಂಸ್ಕೃತಿ ಕಲಿಸಬೇಕಿದೆ ಎಂದರು. ಸರ್ಕಾರಿ ಶಾಲೆಗಳು ಬದಲಾವಣೆಯಾಗಬೇಕಿದೆ. ಬಡವರಿಗೂ ಗುಣಮಟ್ಟದ ಶಿಕ್ಷಣ ಸಿಗಲಿ ಎಂಬ ಉದ್ದೇಶದಿಂದ ಕರ್ನಾಟಕ ಪಬ್ಲಿಕ್ ಸ್ಕೂಲ್, ಪಿಎಂಶ್ರೀ ಶಾಲೆಯಲ್ಲಿ […] The post ಶಿಕ್ಷಣದೊಂದಿಗೆ ಸಂಸ್ಕೃತಿ ಕಲಿಸಿ first appeared on ವಿಜಯವಾಣಿ .
ಮಹಾಲಿಂಗಪುರ: ಪೌರ ಕಾರ್ಮಿಕರ ಬೇಡಿಕೆಗಳು ನ್ಯಾಯಯುತವಾಗಿದ್ದು, ಸರ್ಕಾರ ಅವರ ಎಲ್ಲ ಬೇಡಿಕೆಗಳನ್ನು ಈಡೇರಿಸಲಿ ಎಂದು ಶಾಸಕ ಸಿದ್ದು ಸವದಿ ಹೇಳಿದರು. ಸ್ಥಳೀಯ ಪುರಸಭೆ ಆವರಣದಲ್ಲಿ ಶುಕ್ರವಾರ ಮುಷ್ಕರ ನಿರತ ಪೌರ ಕಾರ್ಮಿಕರನ್ನು ಭೇಟಿ ಮಾಡಿ ಮಾತನಾಡಿದ ಅವರು, ಪೌರ ಕಾರ್ಮಿಕರ ಗುತ್ತಿಗೆದಾರರು ಸರ್ಕಾರದಿಂದ ಹೆಚ್ಚು ಹಣ ಪಡೆದು ಕಾರ್ಮಿಕರಿಗೆ ಅಲ್ಪ ಸಂಭಾವನೆ ನೀಡುತ್ತಿದ್ದಾರೆ. ಅವರವರ ಪಾಲು ಸರಿಯಾಗಿ ಹಂಚಿಕೆಯಾಗುತ್ತಿಲ್ಲ. ಈ ಕುರಿತು ನಾನು ಅನೇಕ ಬಾರಿ ಅಧಿಕಾರಿಗಳೊಂದಿಗೆ ಮಾತನಾಡಿದ್ದೇವೆ. ಪೌರ ಕಾರ್ಮಿಕರ ಮುಷ್ಕರಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ. […] The post ಎಲ್ಲ ಬೇಡಿಕೆ ಈಡೇರಿಸಲಿ first appeared on ವಿಜಯವಾಣಿ .
ಬಾಯಾರಿಕೆ ನೆಪದಲ್ಲಿ ಮನೆಗೆ ಬಂದ ಕಳ್ಳರು, ವೃದ್ಧೆಯನ್ನು ಥಳಿಸಿ ಮಾಂಗಲ್ಯ ಸರದೊಂದಿಗೆ ಪರಾರಿ
ಚಿಕ್ಕಬಳ್ಳಾಪುರ: ತಾಲೂಕಿನ ಸುದ್ದಹಳ್ಳಿಯಲ್ಲಿ ವೃದ್ಧೆಯನ್ನು ಕಟ್ಟಿ ಹಾಕಿ ಹಲ್ಲೆ ನಡೆಸಿ ಬಳಿಕ ಮಾಂಗಲ್ಯಸರವನ್ನು ಕಿತು ಕಳ್ಳರು ಪರಾರಿಯಾಗಿದ್ದಾರೆ. ಆಂಜಿನಮ್ಮ (68) ಹಲ್ಲೆಗೊಳಗಾದವರು. ಗ್ರಾಮದಲ್ಲಿ ಹೊಸದಾಗಿ ನಿರ್ಮಿಸುತ್ತಿರುವ ಮನೆಯಲ್ಲಿದ್ದಾಗ ಬಂದ ಅಪರಿಚಿತರು ನೀರು ಕೊಡುವಂತೆ ವೃದ್ಧೆಯನ್ನು ಕೇಳಿದ್ದಾರೆ. ಆಕೆ ಒಳಗೆ ಹೋಗುತ್ತಿದ್ದಂತೆ ಹಿಂಬಾಲಿಸಿದ ದುಷ್ಕರ್ಮಿಗಳು ವೃದ್ಧೆಯ ಬಾಯಿ ಮುಚ್ಚಿ, ಹಲ್ಲೆ ನಡೆಸಿದ್ದಾರೆ. ಕೊನೆಗೆ ಕೊರಳಿನಲ್ಲಿದ್ದ ಚಿನ್ನದ ಸರವನ್ನು ಕಸಿದು ಪರಾರಿಯಾಗಿದ್ದಾರೆ. ಗಾಯಗೊಂಡಿದ್ದ ವೃದ್ಧೆ ಸಮೀಪದ ಹೂವಿನ ತೋಟದಲ್ಲಿ ಕೆಲಸ ಮಾಡುತ್ತಿದ್ದ ಕುಟುಂಬದವರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ […] The post ಬಾಯಾರಿಕೆ ನೆಪದಲ್ಲಿ ಮನೆಗೆ ಬಂದ ಕಳ್ಳರು, ವೃದ್ಧೆಯನ್ನು ಥಳಿಸಿ ಮಾಂಗಲ್ಯ ಸರದೊಂದಿಗೆ ಪರಾರಿ first appeared on ವಿಜಯವಾಣಿ .
ಸುದ್ದಿ ಮಾಡುವಾಗುವ ಸತ್ಯಾಸತ್ಯತೆ ಅರಿಯಿರಿ
ಜಮಖಂಡಿ : ಪತ್ರಕರ್ತರು ಅವಸರದಲ್ಲಿ ಸತ್ಯಾಸತ್ಯೆಯ ಪರಾಮರ್ಶೆ ಮಾಡದೆ ಸುದ್ದಿ ಕಳುಹಿಸಬಾರದು. ಮಾಹಿತಿ ಖಚಿತಪಡಿಸಿಕೊಂಡು ವರದಿ ಮಾಡಬೇಕು ಎಂದು ಮಾಜಿ ಶಾಸಕ ಆನಂದ ನ್ಯಾಮಗೌಡ ಹೇಳಿದರು. ನಗರದ ಬಾಗಲಕೋಟೆ ವಿಶ್ವವಿದ್ಯಾಲಯದಲ್ಲಿ ಪ್ರಸಾರಾಂಗ ವಿಭಾಗದ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ಸಮಾಜ ಹಾಗೂ ಮಾಧ್ಯಮಗಳು ಒಂದು ದಿನದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸುದ್ದಿಯಲ್ಲಿ ಸತ್ಯಾಂಶ ಇಲ್ಲದಿದ್ದರೆ ವ್ಯಕ್ತಿಯ ಚಾರಿತ್ರೃ ಹರಣಕ್ಕೂ ಕಾರಣವಾಗುತ್ತದೆ. ದೃಶ್ಯ ಮಾಧ್ಯಮಗಳು ತೀರ್ಪು ನೀಡುವುದು ಸಲ್ಲ. ನೈಜ್ ಸುದ್ದಿಗಳನ್ನು ಮಾತ್ರ ಬಿತ್ತರಿಸಬೇಕು ಎಂದರು. ಕೊಪ್ಪಳ […] The post ಸುದ್ದಿ ಮಾಡುವಾಗುವ ಸತ್ಯಾಸತ್ಯತೆ ಅರಿಯಿರಿ first appeared on ವಿಜಯವಾಣಿ .
ಸರ್ಕಾರಿ ಗೌರವಗಳೊಂದಿಗೆ ಯೋಧನ ಅಂತ್ಯಕ್ರಿಯೆ
ಕೆರೂರ ಚಂಡಿಗಢದಲ್ಲಿ ಸೇನಾ ತರಬೇತಿ ವೇಳೆ ಹೃದಯಾಘಾತದಿಂದ ಮೃತಪಟ್ಟ ಯೋಧ ಉಪೇಂದ್ರ ಸೋಮನಾಥ ರಾಠೋಡ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ಸ್ವ-ಗ್ರಾಮ ಚಿಂಚಲಕಟ್ಟಿ ಎಲ್.ಟಿಯಲ್ಲಿ ಶುಕ್ರವಾರ ನೆರವೇರಿತು. ಕಳೆದ ಮಾರ್ಚ್ನಲ್ಲಿ ಅಸ್ಸಾಂ ರೈಫಲ್ಸ್ ಸೇನೆಗೆ ಆಯ್ಕೆಯಾಗಿದ್ದ ಉಪೇಂದ್ರ, ಮೂರು ತಿಂಗಳಿಂದ ಚಂಡಿಗಢದಲ್ಲಿ ಸೇನಾ ತರಬೇತಿ ಪಡೆಯುತ್ತಿದ್ದರು. ತರಬೇತಿ ವೇಳೆಯೇ ಹೃದಯಾಘಾತದಿಂದ ಬುಧವಾರ ಮೃತಪಟ್ಟಿದ್ದಾರೆ. ಯೋಧನ ಪಾರ್ಥಿವ ಶರೀರ ಚಂಡಿಗಢದಿಂದ ವಿಮಾನ ಮೂಲಕ ಶುಕ್ರವಾರ ಬೆಳಗ್ಗೆ ಬೆಳಗಾವಿಗೆ ತರಲಾಯಿತು. ಅಲ್ಲಿಂದ ರಸ್ತೆ ಮಾರ್ಗವಾಗಿ ಸೇನಾ ಆಂಬುಲೆನ್ಸ್ನಲ್ಲಿ ಕೆರೂರ ಪಟ್ಟಣಕ್ಕೆ […] The post ಸರ್ಕಾರಿ ಗೌರವಗಳೊಂದಿಗೆ ಯೋಧನ ಅಂತ್ಯಕ್ರಿಯೆ first appeared on ವಿಜಯವಾಣಿ .
ಮಳೆಯ ನಡುವೆ ಕರೊನಾ ಸೋಂಕು ಪ್ರಕರಣಗಳ ಪತ್ತೆ, ಮುಂಜಾಗ್ರತಾ ಕ್ರಮಗಳ ಪಾಲನೆಗೆ ಸೂಚನೆ
ಚಿಕ್ಕಬಳ್ಳಾಪುರ: ಮಳೆಗಾಲದಲ್ಲಿ ಸಾಂಕ್ರಾಮಿಕ ರೋಗಗಳು ವರದಿಯಾಗುತ್ತಿರುವುದರ ನಡುವೆ ಸೋಂಕು ಪತ್ತೆ ಪರೀಕ್ಷೆ ಗಳನ್ನು ಕೈಗೊಳ್ಳುತ್ತಿರುವ ಸಂದರ್ಭದಲ್ಲಿ 4 ಕರೊನಾ ಸಕ್ರಿಯ ಪ್ರಕರಣಗಳು ಪತ್ತೆಯಾಗಿವೆ.ಪರೀಕ್ಷೆಗಾಗಿ ಬೆಂಗಳೂರಿನ ನಿಮ್ಹಾನ್ಸ್ ವೈದ್ಯಕಿಯ ಸಂಸ್ಥೆಗೆ ಕಳುಹಿಸಿರುವ ಜಿಲ್ಲೆಯ 13 ಜನರ ರಕ್ತದ ಮಾದರಿಗಳಲ್ಲಿ 4 ಜನರಲ್ಲಿ ಕರೊನಾ ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಸೋಂಕು ನಿಯಂತ್ರಣಕ್ಕೆ ವಿವಿಧ ಇಲಾಖೆಗಳು ಪರಸ್ಪರ ಸಮನ್ವಯದೊಂದಿಗೆ ಕಾರ್ಯ ನಿರ್ವಹಿಸಲು ಸೂಚಿಸಲಾಗಿದೆ. ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಅಪರ ಜಿಲ್ಲಾಧಿಕಾರಿ ಡಾ ಎನ್.ಭಾಸ್ಕರ್ ಅಧ್ಯಕ್ಷತೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕರೊನಾ ನಿಯಂತ್ರಣ […] The post ಮಳೆಯ ನಡುವೆ ಕರೊನಾ ಸೋಂಕು ಪ್ರಕರಣಗಳ ಪತ್ತೆ, ಮುಂಜಾಗ್ರತಾ ಕ್ರಮಗಳ ಪಾಲನೆಗೆ ಸೂಚನೆ first appeared on ವಿಜಯವಾಣಿ .
ಕೂಳಗೆರೆ ಗ್ರಾಪಂಗೆ ರೇಖಾ ನಂಜುಂಡಸ್ವಾಮಿ ಅಧ್ಯಕ್ಷೆ
ಮದ್ದೂರು: ತಾಲೂಕಿನ ಕೂಳಗೆರೆ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಎನ್ಡಿಎ ಬೆಂಬಲಿತ ಅಭ್ಯರ್ಥಿ ರೇಖಾ ನಂಜುಂಡಸ್ವಾಮಿ ಚುನಾಯಿತರಾದರು. ಉಮಾಪುಟ್ಟಸ್ವಾಮಿ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಚುನಾವಣೆ ವೇಳೆ ಎನ್ಡಿಎ ಬೆಂಬಲಿತ ಅಭ್ಯಥಿಯಾಗಿ ರೇಖಾ ನಂಜುಂಡಸ್ವಾಮಿ ಮತ್ತು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಉಮಾ ನಿಂಗರಾಜ್ ನಾಮಪತ್ರ ಸಲ್ಲಿಸಿದರು. ಒಟ್ಟು 15 ಮತಗಳ ಪೈಕಿ ಅರೆಕಲ್ಲು ದೊಡ್ಡಿ ಗ್ರಾಮದ ಗ್ರಾಪಂ ಸದಸ್ಯ ತಿಬ್ಬೇಗೌಡ ಗೈರುಹಾಜರಿ ನಡುವೆ ನಡೆದ ಚುನಾವಣೆಯಲ್ಲಿ ರೇಖಾ ನಂಜುಂಡಸ್ವಾಮಿ 8 ಮತಗಳು ಪಡೆದು […] The post ಕೂಳಗೆರೆ ಗ್ರಾಪಂಗೆ ರೇಖಾ ನಂಜುಂಡಸ್ವಾಮಿ ಅಧ್ಯಕ್ಷೆ first appeared on ವಿಜಯವಾಣಿ .
ಮದ್ದೂರು: ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡಿದ ಹಲವಾರು ವಿದ್ಯಾರ್ಥಿಗಳು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದ್ದಾರೆ. ಮಹಾನ್ ವ್ಯಕ್ತಿಗಳಾಗಿ ಸಮಾಜದಲ್ಲಿ ಗುರುತಿಸಿಕೊಂಡಿದ್ದಾರೆ ಎಂದು ಶಾಸಕ ಕೆ.ಎಂ.ಉದಯ್ ಮೆಚ್ಚುಗೆ ವ್ಯಕ್ತಪಡಿಸಿದರು. ತಾಲೂಕಿನ ಕದಲೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ನಡೆದ ಶಾಲಾ ಪ್ರಾರಂಭೋತ್ಸವ, ಉಚಿತ ಪಠ್ಯ ಪುಸ್ತಕ ಮತ್ತು ಸಮವಸ್ತ್ರ ವಿತರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರಾಜ್ಯ ಹಾಗೂ ದೇಶವನ್ನು ಆಳುತ್ತಿರುವವರು, ವಿವಿಧ ಕ್ಷೇತ್ರಗಳಲ್ಲಿ ಅದ್ವಿತೀಯ ಸಾಧನೆ ಮಡುತ್ತಿರುವವರು ಕೂಡ ಸರ್ಕಾರಿ ಶಾಲೆಯಲ್ಲಿ […] The post ಸರ್ಕಾರಿ ಶಾಲೆಯ ಎಂಬ ಕೀಳರಿಮೆ ಬೇಡ first appeared on ವಿಜಯವಾಣಿ .
ವಿದ್ಯಾರ್ಥಿಗಳಿಗೆ ಗುಲಾಬಿ ಹೂವಿನ ಸ್ವಾಗತ
ಹನೂರು: ತಾಲೂಕಿನ ಲೊಕ್ಕನಹಳ್ಳಿಯಲ್ಲಿ ಕರ್ನಾಟಕ ಪಬ್ಲಿಕ್ ಶಾಲೆ ಆರಂಭೋತ್ಸವದ ಹಿನ್ನೆಲೆಯಲ್ಲಿ ಶುಕ್ರವಾರ ಆಗಮಿಸಿದ ಮಕ್ಕಳನ್ನು ಶಿಕ್ಷಕರು ಹಾಗೂ ಎಸ್ಡಿಎಂಸಿ ಸಮಿತಿ ಸದಸ್ಯರು ಗುಲಾಬಿ ಹಾಗೂ ಸಿಹಿ ನೀಡಿ ಬರಮಾಡಿಕೊಂಡರು. ಶಾಲೆಯನ್ನು ತಳಿರು, ತೋರಣ ಹಾಗೂ ಬಣ್ಣಬಣ್ಣದ ರಂಗೋಲಿಯಿಂದ ಸಿಂಗರಿಸಲಾಗಿತ್ತು. ಆವರಣದಲ್ಲಿ ಹಬ್ಬದ ವಾತವರಣ ಮನೆ ಮಾಡಿತ್ತು. ಲವಲವಿಕೆಯಿಂದ ಆಗಮಿಸಿದ್ದ ಮಕ್ಕಳ ಮೊಗದಲ್ಲಿ ಕಲಿಕಾ ಸಂಭ್ರಮ ಮನೆ ಮಾಡಿತ್ತು. ಕೆಲವು ವಿದ್ಯಾರ್ಥಿನಿಯರು ಕಳಸವನ್ನು ಹೊತ್ತು ತಂದದ್ದು, ಶಾಲಾ ಆರಂಭಕ್ಕೆ ಮೆರುಗು ತಂದಿತು. ಮಕ್ಕಳಿಗೆ ಸಮವಸ್ತ್ರ ಹಾಗೂ ಪಠ್ಯಪುಸ್ತಕವನ್ನು ವಿತರಿಸಲಾಯಿತು. […] The post ವಿದ್ಯಾರ್ಥಿಗಳಿಗೆ ಗುಲಾಬಿ ಹೂವಿನ ಸ್ವಾಗತ first appeared on ವಿಜಯವಾಣಿ .
ಸಾಕಷ್ಟು ಸಂಚಾರಿ ನಿಯಮಗಳ ಉಲ್ಲಂಘನೆ, ಸವಾರನಿಗೆ ದಂಡ ವಿಧಿಸಿ ಚಾಲನಾ ಪರವಾನಗಿ ರದ್ದು
ಚಿಕ್ಕಬಳ್ಳಾಪುರ: ಚಿಂತಾಮಣಿ ನಗರಠಾಣೆಯ ಪೊಲೀಸರು ಬುಲೆಟ್ ದ್ವಿಚಕ್ರ ವಾಹನಕ್ಕೆ ಅಳವಡಿಸಿದ್ದ ಡಿಫೆಕ್ಟಿವ್ ಸೈಲೆನ್ಸರ್ನ್ನು ತೆಗೆಸಿದ್ದು ನ್ಯಾಯಾಲಯವು ದ್ವಿಚಕ್ರ ವಾಹನ ಚಾಲಕನ ಚಾಲನಾ ಪರವಾನಗಿಯನ್ನು ಮೂರು ತಿಂಗಳ ಕಾಲ ಅಮಾನತ್ತು ಪಡಿಸಿ, 11,500 ರೂಗಳ ದಂಡ ಸಹ ವಿಧಿಸಿದೆ.ಚಿಂತಾಮಣಿ ನಗರಠಾಣೆಯ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಶಹಬೂದ್ದೀನ್ ಗಸ್ತು ಮಾಡುತ್ತಿದ್ದಾಗ ಬುಲೆಟ್ ದ್ವಿಚಕ್ರ ವಾಹನವನ್ನು ಚಾಲನೆ ಮಾಡಿಕೊಂಡು ಬಂದಿದ್ದು ತ್ರಿಬಲ್ ರೈಡಿಂಗ್, ವಿತೌಟ್ ಹೆಲೈಟ್ ಮೂಲಕ ನಿಯಮ ಉಲ್ಲಂಘನೆ, ಅಲ್ಟ್ರಾನೇಟಿವ್ ವೆಹಿಕಲ್, ಡಿಪೆಕ್ಟಿವ್ ಸೈಲೆನ್ಸರ್ ಕಂಡು ಬಂದಿದೆ. ಇದರ ಬಗ್ಗೆ […] The post ಸಾಕಷ್ಟು ಸಂಚಾರಿ ನಿಯಮಗಳ ಉಲ್ಲಂಘನೆ, ಸವಾರನಿಗೆ ದಂಡ ವಿಧಿಸಿ ಚಾಲನಾ ಪರವಾನಗಿ ರದ್ದು first appeared on ವಿಜಯವಾಣಿ .
ಕೇವಲ ಐದಾರು ನಿಮಿಷದ ಮಳೆಗೆ ಜಲಾವೃತಗೊಂಡ ಪ್ರದೇಶಗಳು
ಚಿಕ್ಕಬಳ್ಳಾಪುರ: ಕೇವಲ ಐದಾರು ನಿಮಿಷ ಸುರಿದ ಮಳೆಗೆ ಜಿಲ್ಲಾ ಕೇಂದ್ರದಲ್ಲಿನ ಎಂ.ಜಿ.ರಸ್ತೆಯ ಪ್ರಮುಖ ಭಾಗಗಳ ಜತೆಗೆ ವಿವಿಧ ಪ್ರದೇಶಗಳು ಜಲಾವೃತಗೊಂಡು ಜನರು ತೊಂದರೆ ಅನುಭವಿಸುವಂತಾಯಿತು.ದರ್ಗಾ ಮೊಹಲ್ಲಾ, ಗ್ಯಾರೇಜ್ ರಸ್ತೆ, ಹೊಸ ಖಾಸಗಿ ಬಸ್ ನಿಲ್ದಾಣ ಸಮೀಪ ಚರಂಡಿಯಲ್ಲಿನ ನೀರು ತ್ಯಾಜ್ಯದೊಂದಿಗೆ ರಸ್ತೆಗೆ ಹರಿಯಿತು. ಇದರಿಂದ ಟ್ರಾಫಿಕ್ ಜಾಮ್ ಉಂಟಾಯಿತು. ಇದರ ಕಿರಿಕಿರಿಗೆ ಸ್ಥಳಿಯರು ಅಧಿಕಾರಿಗಳಿಗೆ ಇಡೀ ಶಾಪ ಹಾಕಿದರು. ಪ್ರತಿ ಬಾರಿಯೂ ಮಳೆಗಾಲ ಪೂರ್ವ ಸಿದ್ಧತೆ ಹಾಗೂ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದಿಲ್ಲ. ಮಳೆಯ ಆವಾಂತರಗಳಿಗೆ ಹಲವು ಸಮಸ್ಯೆಗಳನ್ನು […] The post ಕೇವಲ ಐದಾರು ನಿಮಿಷದ ಮಳೆಗೆ ಜಲಾವೃತಗೊಂಡ ಪ್ರದೇಶಗಳು first appeared on ವಿಜಯವಾಣಿ .
ಹಬ್ಬದ ಸಂಭ್ರಮಾಚರಣೆಯಲ್ಲಿ ಸರ್ಕಾರಿ ಶಾಲಾ ಪ್ರಾರಂಭೋತ್ಸವ, ಹೂವು, ಚಾಕಲೇಟ್ ನೀಡಿದ ಶಿಕ್ಷಕರು
ಚಿಕ್ಕಬಳ್ಳಾಪುರ: ಜಿಲ್ಲೆಯ ವಿವಿಧ ಶಾಲೆಗಳಲ್ಲಿ ಪ್ರಸಕ್ತ ಸಾಲಿನ 2025-26 ನೇ ಸಾಲಿನ ತರಗತಿಗಳು ಶುಕ್ರವಾರ ಸಂಭ್ರಮದಿಂದ ಪ್ರಾರಂಭವಾಗಿದ್ದು ಎಲ್ಲ ಕಡೆ ಖುಷಿಯ ವಾತಾವರಣ ಕಂಡು ಬಂತು.ಹೌದು! ತಳಿರು ತೋರಣಗಳಿಂದ ಸಿಂಗಾರ, ಗುಲಾಬಿ ಹೂವು ನೀಡುವುದರ ಜತೆಗೆ ಆರತಿ ಬೆಳಗಿ ಸ್ವಾಗತ, ಖುಷಿಯ ಮಾತುಗಳ ಸಂವಾದ, ಸವಿರುಚಿಯ ಸಿಹಿಯೂಟ, ಕಲಿಕೋಪಕರಣಗಳ ವಿತರಣೆ, ನಲಿ ಕಲಿ ಸೇರಿದಂತೆ ವಿವಿಧ ಚಟುವಟಿಕೆಯು ಸಂತಸದಲ್ಲಿ ನಿರ್ವಹಣೆಯಾಯಿತು. ಇದಕ್ಕೆ ಶಾಲೆಯ ಶಿಕ್ಷಕರು, ಎಸ್ಡಿಎಂಸಿ ಸದಸ್ಯರು, ಸ್ಥಳಿಯ ಮುಖಂಡರು, ವಿವಿಧ ಇಲಾಖೆಯ ಅಧಿಕಾರಿಗಳು ಸಾಕ್ಷಿಯಾದರು.ಇನ್ನು ನೆರೆಹೊರೆಯವರಿಗೆ […] The post ಹಬ್ಬದ ಸಂಭ್ರಮಾಚರಣೆಯಲ್ಲಿ ಸರ್ಕಾರಿ ಶಾಲಾ ಪ್ರಾರಂಭೋತ್ಸವ, ಹೂವು, ಚಾಕಲೇಟ್ ನೀಡಿದ ಶಿಕ್ಷಕರು first appeared on ವಿಜಯವಾಣಿ .
ವಸತಿ ಶಾಲೆ ಮಕ್ಕಳ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ
ಮುಂಡಗೋಡ: ನಿಮ್ಮ ಮಕ್ಕಳನ್ನು ಎಷ್ಟು ಪ್ರೀತಿಯಿಂದ ನೋಡಿಕೊಳ್ಳುತ್ತಿರೋ ಅಷ್ಟೇ ಪ್ರೀತಿಯಿಂದ ವಸತಿ ಶಾಲೆಯ ಮಕ್ಕಳನ್ನು ನೋಡಿಕೊಳ್ಳಬೇಕು. ಅವರ ರಕ್ಷಣೆ ನಮ್ಮ, ನಿಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು. ತಾಲೂಕಿನ ಪಾಳಾ ಗ್ರಾಮದಲ್ಲಿ ಶುಕ್ರವಾರ ನೂತನವಾಗಿ ನಿರ್ವಿುಸಿರುವ ಇಂದಿರಾಗಾಂಧಿ ವಸತಿ ಶಾಲೆ ಪ್ರಾರಂಭೋತ್ಸವ ಮತ್ತು ಕಟ್ಟಡ ಪೂಜೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ತಾಲೂಕಿನಲ್ಲಿ ಇಂದಿರಾಗಾಂಧಿ ವಸತಿ ಶಾಲೆ ಬಿಟ್ಟು ಉಳಿದೆಲ್ಲ ಶಾಲಾ ಕಾಲೇಜ್ಗಳಿಗೂ ಸ್ವಂತ ಕಟ್ಟಡಗಳಿದ್ದವು. ಹೀಗಾಗಿ 18 ಕೋಟಿ ರೂ. ವೆಚ್ಚದಲ್ಲಿ ವಿಶಾಲವಾದ ಪ್ರದೇಶದಲ್ಲಿ […] The post ವಸತಿ ಶಾಲೆ ಮಕ್ಕಳ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ first appeared on ವಿಜಯವಾಣಿ .
ಹೊಸಪೇಟೆ: ರಾಜ್ಯ ಸರ್ಕಾರ ಜನೌಷಧಿ ಕೇಂದ್ರಗಳನ್ನು ಮುಚ್ಚುವ ಆದೇಶ ಹೊರಡಿಸಿರುವುದನ್ನು ಖಂಡಿಸಿ ರಾಜ್ಯ ಸರ್ಕಾರದ ವಿರುದ್ಧ ವಿಜಯನಗರ ಜಿಲ್ಲಾ ಘಟಕದಿಂದ ನಗರದ ಉಪವಿಭಾಗ ಮಟ್ಟದ ಸರ್ಕಾರಿ ಆಸ್ಪತ್ರೆ ಎದುರು ಶುಕ್ರವಾರ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಲಾಯಿತು. ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ರೆಡ್ಡಿ ಮಾತನಾಡಿ, ರಾಜ್ಯ ಸರ್ಕಾರ ಪ್ರಧಾನ ಮಂತ್ರಿ ಜನೌಷಧಿ ಮಳಿಗೆ ಮುಚ್ಚೋದಕ್ಕೆ ಆದೇಶ ಹೊರಡಿಸಿದೆ. ಸರ್ಕಾರದ ದುರುದ್ದೇಶದಿಂದ ಜನೌಷಧಿ ಮಳಿಗೆ ಮುಚ್ಚುತ್ತಿದೆ. ಈ ಕೇಂದ್ರಗಳಲ್ಲಿ ಬಡವರಿಗೆ ಕೈಗೆಟುಕುವ ದರದಲ್ಲಿ ಔಷಧಿಗಳು ದೊರೆಯುತ್ತಿದ್ದವು. ಸರ್ಕಾರಿ ಆಸ್ಪತ್ರೆಗೆ […] The post ಮೆಡಿಕಲ್ ಮಾಫಿಯಾಕ್ಕೆ ಸಹಕಾರಿ first appeared on ವಿಜಯವಾಣಿ .
ಹೊಸಪೇಟೆ: ಜಿಲ್ಲೆಯಲ್ಲಿ ನಡೆಯುತ್ತಿರುವ ಪರಿಶಿಷ್ಟ ಜಾತಿ ಸಮಗ್ರ ಸಮೀಕ್ಷೆಯಲ್ಲಿ ವಲಸೆ ಹೋಗಿರುವ ಪರಿಶಿಷ್ಟ ಕುಟುಂಬಗಳ ಮಾಹಿತಿಯನ್ನು ಒದಗಿಸುವಂತೆ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ತಿಳಿಸಿದರು. ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪರಿಶಿಷ್ಟ ಜಾತಿ ಸಮಗ್ರ ಸಮೀಕ್ಷೆ ಕುರಿತಂತೆ ಸಮುದಾಯದ ಮುಖಂಡರು, ವಿವಿಧ ಸಂಘ-ಸAಸ್ಥೆಗಳ ಪದಾಧಿಕಾರಿಗಳೊಂದಿಗೆ ಏರ್ಪಡಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಗುರುವಾರ ಮಾತನಾಡಿದರು. ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್ ಏಕಸದಸ್ಯ ವಿಚಾರಣಾ ಆಯೋಗ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆಯಲ್ಲಿ ಜಿಲ್ಲಾ ವ್ಯಾಪ್ತಿಯಲ್ಲಿ ಕೆಲವೆಡೆ ಉದ್ಯೋಗಕ್ಕಾಗಿ ಬೇರೆಡೆ ವಲಸೆ ಮತ್ತು ಇನ್ನಿತರ ಕಾರಣಗಳಿಂದ […] The post ವಲಸೆ ಹೋದ ಕುಟುಂಬಗಳ ಮಾಹಿತಿ ನೀಡಿ first appeared on ವಿಜಯವಾಣಿ .
ಗುಳೇದಗುಡ್ಡ: ಆಪರೇಷನ್ ಸಿಂಧೂರ ಕಾರ್ಯಾಚರಣೆ ಯಶಸ್ವಿಯಾದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಇತ್ತೀಚೆಗೆ ನಗರ ಸುಧಾರಣಾ ಸಮಿತಿ ವತಿಯಿಂದ ತಿರಂಗಾ ಯಾತ್ರೆ ಮೆರವಣಿಗೆ ನಡೆಸಲಾಯಿತು. ಮೆರವಣಿಗೆ ಪಟ್ಟಣದ ಭಂಡಾರಿ ಕಾಲೇಜು ಸರ್ಕಲ್ದಿಂದ ಪ್ರಾರಂಭವಾಗಿ ಪವಾರ ಕ್ರಾಸ್, ಝಳಕಿ ಗಂಟಿ, ಪುರಸಭೆ, ಸರಾಫ್ ಬಜಾರ್, ಕಂಠಿಪೇಟೆ, ಗಚ್ಚಿನಕಟ್ಟಿ, ಚೌಬಜಾರ್, ಅರಳಿಕಟ್ಟಿ ಮುಖಾಂತರ ಹಾಯ್ದು ಪುರಸಭೆ ಎದುರಿನ ಸಾರ್ವಜನಿಕ ಕಟ್ಟೆ ಹತ್ತಿರ ಬಂದು ವೇದಿಕೆ ಕಾರ್ಯಕ್ರಮವಾಗಿ ರೂಪುಗೊಂಡಿತು. ಮೆರವಣಿಗೆಯಲ್ಲಿ ಗುರುಸಿದ್ಧೇಶ್ವರ ಮಠದ ಬಸವರಾಜ ಶ್ರೀಗಳು, ಕಮತಗಿ-ಕೋಟೆಕಲ್ ಹುಚ್ಚೇಶ್ವರ ಮಠದ ಹೊಳೆಹುಚ್ಚೇಶ್ವರ ಶ್ರೀಗಳು, ಅಮರೇಶ್ವರ […] The post ತಿರಂಗಾ ಯಾತ್ರೆ ಮೆರವಣಿಗೆ first appeared on ವಿಜಯವಾಣಿ .
ಹೊಸಪೇಟೆ: ತುಂಗಭದ್ರಾ ಜಲಾಶಯದ 32 ಕ್ರಸ್ಟ್ ಗೇಟ್ಗಳ ಬದಲಾವಣೆ ಕರೆಯಲಾಗಿದ್ದ ಟೆಂಡರ್ಗೆ ಮತ್ತೆ ನಾಲ್ಕು ಕಂಪನಿಗಳು ಅರ್ಜಿ ಸಲ್ಲಿಸಿವೆ. ಈ ಹಿಂದೆ ಕರೆಯಲಾಗಿದ್ದ ಟೆಂಡರ್ಗೆ ಅರ್ಜಿ ಸಲ್ಲಿಸಿದ್ದ ನಾಲ್ಕು ಗುತ್ತಿಗೆ ಕಂಪನಿಗಳು ಅರ್ಹತೆ ಹೊಂದದ ಹಿನ್ನೆಲೆ ಈಗ ತುಂಗಭದ್ರಾ ಮಂಡಳಿ ಮರು ಟೆಂಡರ್ ಕರೆದಿತ್ತು. ಕಾಮಗಾರಿ ಮರು ಟೆಂಡರ್ಗೆ ಗುಜರಾತ ಹಾಗೂ ತೆಲಂಗಾಣ ರಾಜ್ಯಗಳ ಕಂಪನಿಗಳು ಅರ್ಜಿ ಸಲ್ಲಿಸಿವೆ ಎಂದು ಟಿಬಿಬಿ ಅಧಿಕಾರಿಗಳು ತಿಳಿಸಿದರು. ತುಂಗಭದ್ರಾ ಜಲಾಶಯದ ಗೇಟ್ ಗಳ ಬದಲಾವಣೆಗೆ ಪರಿಣತ ತಜ್ಞರು ಸಲಹೆ ನೀಡಿದ್ದಾರೆ. […] The post ಮತ್ತೆ ನಾಲ್ಕು ಕಂಪನಿಗಳಿAದ ಅರ್ಜಿ first appeared on ವಿಜಯವಾಣಿ .
ನಿವೃತ್ತಿಯಾದ ಹಿರಿಯರಿಗೆ ಬೀಳ್ಕೊಡುಗೆ
ಹೊಸಪೇಟೆ: ಕನ್ನಡ ವಿವಿಯ ಹಸ್ತಪ್ರತಿಶಾಸ್ತ ಹಾಗೂ ಸಂಗೀತ ಮತ್ತು ನೃತ್ಯ ವಿಭಾಗ ಸಹಯೋಗದಲ್ಲಿ ಮೇ 31ರಂದು ಸೇವಾ ನಿವೃತ್ತಿ ಹೊಂದುತ್ತಿರುವ ಭೋಧಕ ಹಾಗೂ ಭೋಧಕೇತರ ಸಿಬಂದಿಗೆ ಬೀಳ್ಕೊಡುಗೆ ಸಮಾರಂಭ ನಡೆಯಿತು. ಭಾಷಾಂತರ ಅಧ್ಯಯನ ವಿಭಾಗದ ಹಿರಿಯ ಪ್ರಾಧ್ಯಾಪಕ ಡಾ.ಎ.ಮೋಹನ ಕುಂಟಾರ್, ಬುಡಕಟ್ಟು ಅಧ್ಯಯನ ವಿಭಾಗದ ಹಿರಿಯ ಪ್ರಾಧ್ಯಾಪಕ ಡಾ.ಚಲುವರಾಜು ಹಾಗೂ ಆಡಳಿತಾಂಗ ಉಪಕುಲಸಚಿವ ಡಾ.ಎ.ವೆಂಕಟೇಶ, ಮತ್ತು ಕಳೆದ ಏಪ್ರಿಲ್ನಲ್ಲಿ ಸೇವಾ ನಿವೃತ್ತರಾದ ಜವಾನರಾದ ಗೌಳಿ ನಾಗರಾಜ ಬೀಳ್ಕೊಡುಗೆ ನೀಡಲಾಯಿತು. ಹಸ್ತಪ್ರತಿಶಾಸ್ತ ಹಾಗೂ ಸಂಗೀತ ಮತ್ತು ನೃತ್ಯ ವಿಭಾಗದ […] The post ನಿವೃತ್ತಿಯಾದ ಹಿರಿಯರಿಗೆ ಬೀಳ್ಕೊಡುಗೆ first appeared on ವಿಜಯವಾಣಿ .
ಹೊಸಪೇಟೆ: ವಿವಿಧ ಬೇಡಿಕೆ ಈಡೇರಿಕೆಗೆ ಕಳೆದ ಮೂರುದಿನಗಳಿಂದ ಇಲ್ಲಿನ ನಗರಸಭೆ ಮುಂದೆ ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿರುವ ಕರ್ನಾಟಕ ರಾಜ್ಯ ಪೌರಸೇವಾ ನೌಕರರ ಸಂಘದ ಪದಾಧಿಕಾರಿಗಳಿಗೆ ಶಾಸಕ ಎಚ್.ಆರ್.ಗವಿಯಪ್ಪ ಭರ್ಜರಿ ಬಾಡೂಟ ಉಣ ಬಡಿಸಿದರು. ಕಳೆದ ಮೂರು ದಿನಗಳಿಂದ ಪೌರಸೇವಾ ನೌಕರರ ಸಂಘದ ನೇತೃತ್ವದಲ್ಲಿ ಕರ್ತವ್ಯಕ್ಕೆ ಗೈರಾಗಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಶಾಸಕ ಬೆಂಬಲ ಸೂಚಿಸಿದ್ದಾರೆ. 50 ಕೆಜಿ ಚಿಕನ್, 50 ಕೆ.ಜಿ ರೈಸ್ನಲ್ಲಿ ಬಿರ್ಯಾನಿ ತಯಾರಿಸಿ ಊಟದ ವ್ಯವಸ್ಥೆ ಮಾಡಿಸಿದರು. ಈಲ್ಲೆಯ ನಗರ, ಪಟ್ಟಣ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ […] The post ಧರಣಿನಿರತರಿಗೆ ಭರ್ಜರಿ ಬಾಡೂಟ first appeared on ವಿಜಯವಾಣಿ .
ಹೊಸಪೇಟೆ: ಬೇಸಿಗೆ ರಜೆಯ ಕಾರಣಕ್ಕೆ ಬಾಗಿಲು ಮುಚ್ಚಿದ್ದ ಶಾಲೆಗಳು ಜಿಲ್ಲೆಯಾದ್ಯಂತ ಗುರುವಾರದಿಂದು ಪುನರಾರಂಭವಾದವು. ಸರ್ಕಾರಿ ಶಾಲೆಗಳಲ್ಲಿ ಜಿಲ್ಲೆಯಾದ್ಯಂತ ಮಂಗಳವಾರ ಮತ್ತು ಬುಧವಾರವೇ ಶಿಕ್ಷಕರು ಶಾಲಾ ಕೊಠಡಿಗಳು, ಶೌಚಾಲಯ, ಅಡುಗೆ ಮನೆ, ಶಾಲಾ ಆವರಣವನ್ನು ಸ್ವಚ್ಛಗೊಳಿಸಿ ಮಕ್ಕಳನ್ನು ಸ್ವಾಗತಿಸಲು ಸಿದ್ಧಗೊಳಿಸಿದ್ದರು. ಸರ್ಕಾರದ ಆದೇಶದಂತೆ ಜಿಲ್ಲೆಯಲ್ಲಿ ಒಂದನೇ ತರಗತಿಯಿಂದ ಎಸ್ಎಸ್ಎಲ್ಸಿ ವರೆಗೆ ತರಗತಿ ಆರಂಭಿಸಲಾಗಿದ್ದು, ಮಕ್ಕಳು ಹಾಗೂ ಪೋಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರು ತಳಿರು ತೋರಣ. ರಂಗು ರಂಗಿನ ರಂಗೋಲೆ ಹಾಕಿ ವಿದ್ಯಾರ್ಥಿಗಳಿಗೆ ಅದ್ಧೂರಿ ಸ್ವಾಗತ […] The post ಶಾಲೆಯಲ್ಲಿ ಆರಂಭವಾದ ಚಿಣ್ಣರ ಕಲರವ first appeared on ವಿಜಯವಾಣಿ .
ಮುಂಗಾರಿಗೆ ಕೃಷಿ ಇಲಾಖೆ ಭರದ ಸಿದ್ಧತೆ
ಮಂಜುನಾಥ ಅಯ್ಯಸ್ವಾಮಿ ಹೊಸಪೇಟೆ ರಾಜ್ಯದಲ್ಲಿ ಮುಂಗಾರು ಆರಂಭದ ಹಿನ್ನೆಲೆಯಲ್ಲಿ ಕೃಷಿ ಇಲಾಖೆಯು ಜಿಲ್ಲಾಡಳಿತದ ಸಹಯೋಗದಲ್ಲಿ ಕೃಷಿ ಚಟುವಟಿಕೆಗೆ ಸಂಬAಧಿಸಿದAತೆ ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದೆ. ಈ ವರ್ಷವು ಮುಂಗಾರು ಉತ್ತಮವಾಗಿದ್ದು, ಇಲಾಖೆಯು ರೈತರ ಮೊಗದಲ್ಲಿ ನಗು ಅರಳಿಸಲು ಸೌಲಭ್ಯದ ಜತೆಗೆ ಮಾಹಿತಿಯನ್ನು ನೀಡಲಾಗುತ್ತಿದೆ. ರಾಜ್ಯವನ್ನು ಮುಂಗಾರು ಪ್ರವೇಶ ಮಾಡಿದೆ. ಉತ್ತಮ ಮಳೆಯಾಗಲಿದೆ ಎಂಬ ಹವಾಮಾನ ತಜ್ಞರ ವರದಿ ರೈತರ ಮೊಗದಲ್ಲಿ ಮಂದಹಾಸ ಬೀರಿದೆ. ಈ ಸಲ ಮಳೆ ಚೆನ್ನಾಗಿ ಆಗಿ ರೈತರ ಬವಣೆಗೆ ರಿಲೀಫ್ ತರಲಿದೆ ಎಂಬ ಆಶಾಭಾವನೆಯೊಂದಿಗೆ […] The post ಮುಂಗಾರಿಗೆ ಕೃಷಿ ಇಲಾಖೆ ಭರದ ಸಿದ್ಧತೆ first appeared on ವಿಜಯವಾಣಿ .
ರಾಜಕಾಲುವೆ ಒತ್ತುವರಿ ತೆರವಿಗೆ ಧಮ್ಮು, ತಾಕತ್ತು ಇದೆಯೇ?
ನವದೆಹಲಿ: ಮಾನ್ಯತಾ ಟೆಕ್ಪಾಕ್ ಬಳಿ ರಾಜಕಾಲುವೆ ಒತ್ತುವರಿ ತೆರವುಮಾಡಲು ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಧಮ್ಮು, ತಾಕತ್ತು ಇದೆಯೇ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಸವಾಲು ಹಾಕಿದ್ದಾರೆ. ಮಾನ್ಯತಾ ಟೆಕ್ಪಾರ್ಕ್ ಬಳಿಗೆ ಶಿವಕುಮಾರ್ ಅವರೇ ಭೇಟಿ ಕೊಟ್ಟು ಮಳೆ, ನೆರೆ ಪರಿಸ್ಥಿತಿ ವೀಕ್ಷಣೆ ಮಾಡಿರುವುದೇನೋ ಸರಿ. ಅದು ಪ್ರವಾಹ ವೀಕ್ಷಣೆಗೋ ಅಥವಾ ರಾಜಕಾಲುವೆ ರಕ್ಕಸರ ರಕ್ಷಣೆಗೋ..? ಈ ಬಗ್ಗೆ ಬೆಂಗಳೂರು ಮಹಾಜನತೆಗೆ ಬೆಂಗಳೂರು ಉಸ್ತುವಾರಿ ಸಚಿವರು ಉತ್ತರಿಸಬೇಕು ಎಂದು ಒತ್ತಾಯಿಸಿದ್ದಾರೆ. ಡಿಸಿಎಂ ಅವರು ಪಾದಸ್ಪರ್ಶ ಮಾಡಿದ್ದ […] The post ರಾಜಕಾಲುವೆ ಒತ್ತುವರಿ ತೆರವಿಗೆ ಧಮ್ಮು, ತಾಕತ್ತು ಇದೆಯೇ? first appeared on ವಿಜಯವಾಣಿ .
ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಆಯುಕ್ತ ಎನ್. ಜಯರಾಮ್ ಶನಿವಾರ ಸೇವಾ ನಿವೃತ್ತಿಯಾಗಲಿದ್ದಾರೆ. ಆದರಿಂದ ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಮೇಜರ್ ಪಿ. ಮಣಿವಣ್ಣನ್ಗೆ ಬಿಡಿಎ ಆಯುಕ್ತ ಹುದ್ದೆಯನ್ನು ಸಮಪ್ರಭಾರ ಜವಾಬ್ದಾರಿವಹಿಸಿ ಸರ್ಕಾರ ಆದೇಶಿಸಿದೆ. ಇದೇ ವೇಳೆ ತರಬೇತಿನಿತರ ಐಎಎಸ್ ಅಧಿಕಾರಿ ಪಿ.ಪಿ. ಅರ್ಚನಾ ಅವರನ್ನು ಕರ್ನಾಟಕ ಕೇಡರ್ನಿಂದ ಕೇರಳ ಕೇಡರ್ಗೆ ಮಾರ್ಪಡಿಸಿ ರಾಜ್ಯ ಸೇವೆಯಿಂದ ವಿಮುಕ್ತಿಗೊಳಿಸಲಾಗಿದೆ. The post ಬಿಡಿಎ ಆಯುಕ್ತರಾಗಿ ಮಣಿವಣ್ಣನ್ first appeared on ವಿಜಯವಾಣಿ .
ಶಾಲೆ ಆರಂಭ ಶೇ.75ರಷ್ಟು ಪುಸ್ತಕ, ಸಮವಸ್ತ್ರ ಪೂರೈಕೆ
ಮಂಜುನಾಥ ಅಯ್ಯಸ್ವಾಮಿ ಹೊಸಪೇಟೆ ಎರಡು ತಿಂಗಳ ರಜೆ ನಂತರ ಜಿಲ್ಲಾದ್ಯಂತ ಸರ್ಕಾರಿ ಶಾಲೆಗಳು ಸೇರಿದಂತೆ ಎಲ್ಲ ಶಾಲೆಗಳು ಆರಂಭವಾಗುತ್ತಿವೆ. ಕೆಲವು ಖಾಸಗಿ ಶಾಲೆಗಳು ಈಗಾಗಲೇ ಶಾಲೆಗಳನ್ನು ತೆರೆದಿವೆ. ಮೇ.29ರಿಂದ ಸರ್ಕಾರಿ ಶಾಲೆಗಳು ಆರಂಭವಾಗುತಿದ್ದು, ಎಲ್ಲ ಶಾಲೆಗಳಿಗೂ ಈಗಾಗಲೇ ಸಮವಸ್ತಗಳ ಪೂರೈಕೆಯಾಗಿದೆ. ಸದ್ಯ ಈಗ ಶೇ.75ರಷ್ಟು ಪಠ್ಯ ಪುಸ್ತಕ, ಸಮವಸ್ತ್ರ ಪೂರೈಕೆಥಿಂgiಜe. ಹೊಸಪೇಟೆ, ಹಗರಿಬೊಮ್ಮನಹಳ್ಳಿ, ಕೂಡ್ಲಿಗಿ, ಕೊಟ್ಟೂರು, ಹರಪನಹಳ್ಳಿ, ಹೂವಿನಹಡಗಲಿ ತಾಲೂಕಿನಾದ್ಯಂತ ಶಾಲೆಗಳ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. 2 ತಿಂಗಳ ಬೇಸಿಗೆ ರಜೆ ಪೂರ್ಣಗೊಂಡು ಶಾಲೆಗಳು ಆರಂಭವಾಗುತ್ತಿದ್ದು, ಶಿಕ್ಷಕರು […] The post ಶಾಲೆ ಆರಂಭ ಶೇ.75ರಷ್ಟು ಪುಸ್ತಕ, ಸಮವಸ್ತ್ರ ಪೂರೈಕೆ first appeared on ವಿಜಯವಾಣಿ .
ಹರಿಖಂಡಿಗೆಯಲ್ಲಿ ಕಾಶೀಮಠಾಧೀಶರ ಮೊಕ್ಕಾಂ
ಕೊಕ್ಕರ್ಣೆ: ಹರಿಖಂಡಿಗೆ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದಲ್ಲಿ ಕಾಶೀಮಠಾಧಿಪತಿ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ ಮೊಕ್ಕಾಂ ಮತ್ತು ಶ್ರೀ ಸುಧೀಂದ್ರ ತೀರ್ಥ ಸಭಾಭವನದ ಉದ್ಘಾಟನೆ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದ ವಿವರ ಮೇ 30ರಂದು ಶ್ರೀ ಸುಧೀಂದ್ರ ತೀರ್ಥ ಸಭಾಭವನದಲ್ಲಿ ರಾತ್ರಿ ವಾಸ್ತು ಹಾಗೂ ಸುದರ್ಶನ ಹವನ, 31ರಂದು ದೇವರ 98ನೇ ಪುನಃ ಪ್ರತಿಷ್ಠಾಪನಾ ವರ್ಧಂತಿ ಹಾಗೂ ಸಮಾರಾಧನೆ, ಜೂನ್ 1ರಂದು ಶ್ರೀ ಸುಕೃತೀಂದ್ರ ಸಭಾಭವನದಲ್ಲಿ ದೇವ ವಾಸ್ತು ಸುದರ್ಶನ ಹವನ ನಡೆಯಲಿದೆ. 4ರಂದು ಸಂಜೆ ಕಲ್ಯಾಣಪುರ ಮೊಕ್ಕಾಂನಿಂದ […] The post ಹರಿಖಂಡಿಗೆಯಲ್ಲಿ ಕಾಶೀಮಠಾಧೀಶರ ಮೊಕ್ಕಾಂ first appeared on ವಿಜಯವಾಣಿ .
ಗುಣಮಟ್ಟದ ಶಿಕ್ಷಣದಿಂದ ಭವಿಷ್ಯ ಉಜ್ವಲ
ರಿಪ್ಪನ್ಪೇಟೆ: ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವುದರಿಂದ ಭವಿಷ್ಯ ಉಜ್ವಲವಾಗಲಿದೆ ಎಂದು ಹೊಂಬುಜ ಜೈನಮಠದ ಶ್ರೀ ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು. ಹೊಂಬುಜ ಜೈನಮಠದಲ್ಲಿ ಗುರುವಾರ ನವೋದಯ, ಮೊರಾರ್ಜಿ, ಏಕಲವ್ಯ ಶಾಲೆಗಳಿಗೆ ಆಯ್ಕೆಯಾದ ಮಕ್ಕಳು ಹಾಗೂ ತರಬೇತಿ ನೀಡಿದ ಶಿಕ್ಷಕ ವೃಂದಕ್ಕೆ ಅಭಿನಂದನೆ ಸಲ್ಲಿಸಿ ಮಾತನಾಡಿದರು. ಗ್ರಾಮೀಣ ಪ್ರದೇಶದ ಮಕ್ಕಳಿಗೆ ಮೌಲ್ಯಯುತ ಶಿಕ್ಷಣದ ಕೊರತೆಯಿದೆ. ಅಂತಹ ಕೊರತೆಯನ್ನು ನೀಗಿಸಿ, ರಾಜ್ಯದ ಪ್ರತಿಷ್ಠಿತ ಮೊರಾರ್ಜಿ, ಏಕಲವ್ಯ, ನವೋದಯ ಶಾಲೆಗಳಿಗೆ ದಾಖಲಾಗಲು ಪೂರ್ವ ತಯಾರಿ, ತರಬೇತಿ ನೀಡುತ್ತಿರುವ ಹಳೇ ನವೋದಯ ವಿದ್ಯಾರ್ಥಿಗಳ […] The post ಗುಣಮಟ್ಟದ ಶಿಕ್ಷಣದಿಂದ ಭವಿಷ್ಯ ಉಜ್ವಲ first appeared on ವಿಜಯವಾಣಿ .
29 ವರ್ಷದಿಂದ ತಲೆಮರೆಸಿಕೊಂಡಿದ್ದ ಆರೋಪಿ ಸೆರೆ
29 ವರ್ಷದಿಂದ ತಲೆಮರೆಸಿಕೊಂಡಿದ್ದ ಆರೋಪಿ ಸೆರೆ ಚಿಕ್ಕೋಡಿ :ಜಾತಿ ನಿಂದನೆ ಪ್ರಕರಣದಡಿ 1989 ರಲ್ಲಿ ಬಂಧನವಾಗಿ ಪ್ರಕರಣ ವಿಚಾರಣೆಯಲ್ಲಿದ್ದಾಗ 1996ರಿಂದ ಪರಾರಿ ಯಾಗಿದ್ದ ಆರೋಪಿಯನ್ನು ಹುಕ್ಕೇರಿ ತಾಲೂಕಿನ ಸಂಕೇಶ್ವರ ಪೊಲೀಸರು ಗುರುವಾರ ಬಂಧಿಸಿದ್ದಾರೆ. ಚಿಕ್ಕೋಡಿ ಪಟ್ಟಣದ ಜಾರಿ ಗಲ್ಲಿ ನಿವಾಸಿ ನಿಯಾಜಅಹ್ಮದ ಸಾಹೇಬಲಾಲ ಪೀರಜಾದೆ ತಲೆ ಎಂಬುವನನ್ನು 29 ವರ್ಷಗಳ ಬಳಿಕೆ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಈತನನ್ನು ಕೊಲ್ಲಾಪುರ ಜಿಲ್ಲೆಯ ಔರವಾಡದಲ್ಲಿಬಂಧಿಸಲಾಗಿದ್ದು, ಗುರುವಾರ ಸಂಕೇಶ್ವರ ಪೋಲಿಸರು ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದಾರೆ. The post 29 ವರ್ಷದಿಂದ ತಲೆಮರೆಸಿಕೊಂಡಿದ್ದ ಆರೋಪಿ ಸೆರೆ first appeared on ವಿಜಯವಾಣಿ .
ಮಕ್ಕಳಿಗೆ ಕ್ರೀಡೆಗಳಲ್ಲೂ ಆಸಕ್ತಿ ಮೂಡಿಸಿ
ಭದ್ರಾವತಿ: ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸುವ ಮೂಲಕ ಸರ್ಕಾರಿ ಶಾಲೆಗಳನ್ನು ಉಳಿಸುವ ಪ್ರಯತ್ನಕ್ಕೆ ಮುಂದಾಗಬೇಕು. ಖಾಸಗಿ ಶಾಲೆಗಳ ವ್ಯಾಮೋಹ ಕೈಬಿಡಬೇಕು ಎಂದು ನಗರಸಭಾ ಅಧ್ಯಕ್ಷೆ ಗೀತಾ ರಾಜ್ಕುಮಾರ್ ಹೇಳಿದರು. ಹಳೇನಗರದ ಪಿಎಂಶ್ರೀ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಸ್ವಾಗತ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಕ್ಕಳಿಗೆ ಉತ್ತಮ ಶಿಕ್ಷಣದ ಜತೆಗೆ ಕ್ರೀಡೆಗಳಲ್ಲೂ ಆಸಕ್ತಿ ಮೂಡಿಸಬೇಕು ಎಂದರು. ನಗರಸಭಾ ಸದಸ್ಯ ಬಿ.ಕೆ.ಮೋಹನ್ ಮಾತನಾಡಿ, ಶಿಕ್ಷಕರೂ ಸೇರಿ ಸರ್ಕಾರಿ ನೌಕರಿಯಲ್ಲಿರುವ ಪ್ರತಿಯೊಬ್ಬರೂ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಕಡ್ಡಾಯವಾಗಿ […] The post ಮಕ್ಕಳಿಗೆ ಕ್ರೀಡೆಗಳಲ್ಲೂ ಆಸಕ್ತಿ ಮೂಡಿಸಿ first appeared on ವಿಜಯವಾಣಿ .
ದಾನಿಗಳ ಸಹಕಾರದಿಂದ ಶಾಲೆಗಳ ಅಭಿವೃದ್ಧಿ
ಸೊರಬ: ಗ್ರಾಮೀಣ ಭಾಗದಲ್ಲಿ ಸರ್ಕಾರಿ ಶಾಲೆಗಳು ಪ್ರಗತಿ ಹೊಂದಲು ಮೂಲ ಸೌಲಭ್ಯ ಮುಖ್ಯ. ಸರ್ಕಾರದ ಜತೆಗೆ ಸಮಾಜದಲ್ಲಿ ಸೇವಾ ಭಾವನೆ ಹೊಂದಿದವರು ವಿವಿಧ ಕೊಡುಗೆಗಳನ್ನು ನೀಡಿದಾಗ ಶಾಲೆ ಪ್ರಗತಿ ಹೊಂದಲು ಸಾಧ್ಯ ಎಂದು ನಿವೃತ್ತ ಶಿಕ್ಷಕ ಬಸವಣ್ಯಪ್ಪ ಮೂಲೇರ್ ಹೇಳಿದರು. ತಾಲೂಕಿನ ಕುಮ್ಮೂರು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಪ್ರಸಕ್ತ ಶೈಕ್ಷಣಿಕ ವರ್ಷಕ್ಕೆ ಮಕ್ಕಳನ್ನು ಸ್ವಾಗತ ಕೋರುವ ಮತ್ತು ಎರಡು ವರ್ಷ ಶಿಕ್ಷಣದಲ್ಲಿ ಹರುಷ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಮಾಜದಲ್ಲಿ ಅನೇಕ ಸೇವಾ ಟ್ರಸ್ಟ್, ಸಂಘ ಸಂಸ್ಥೆಗಳು, […] The post ದಾನಿಗಳ ಸಹಕಾರದಿಂದ ಶಾಲೆಗಳ ಅಭಿವೃದ್ಧಿ first appeared on ವಿಜಯವಾಣಿ .