ಮಲಗಿದ್ದ ಗಂಡನ ಮೇಲೆ ಬಿಸಿ ಎಣ್ಣೆ ಸುರಿದು ಮೆಣಸಿನ ಪುಡಿ ಎರಚಿದ ಹೆಂಡತಿ! husband
husband: ಮನೆಯಲ್ಲಿ ಮಲಗಿದ್ದ ಗಂಡನ ಮೇಲೆ ಪತ್ನಿಯೊಬ್ಬಳು ಬಿಸಿ ಎಣ್ಣೆ ಮತ್ತು ಮೆಣಸಿನ ಪುಡಿಯಿಂದ ಹಲ್ಲೆ ನಡೆಸಿದ್ದಾಳೆ. ಈ ಘಟನೆ ದೆಹಲಿಯಲ್ಲಿ ನಡೆದಿದೆ. ಪತ್ನಿಯ ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿದ್ದ ಗಂಡ ಕಿರುಚಿಕೊಂಡಿದ್ದು, ಸ್ಥಳೀಯರು ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಸ್ತುತ ಆತನಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಮಹಿಳೆ ಪತ್ನಿಗೆ ಈ ರೀತಿಯಾಗಿ ಹಿಂಸೆ ನೀಡಲು ಕಾರಣವು ಇದೆ ಎನ್ನಲಾಗಿದೆ. ನಡೆದಿದ್ದೇನು?: ಅಂಬೇಡ್ಕರ್ ನಿವಾಸಿ 28 ವರ್ಷದ ದಿನೇಶ್ ಕೆಲವು ವರ್ಷಗಳ ಹಿಂದೆ ವಿವಾಹವಾದರು. ಅವರಿಗೆ 8 ವರ್ಷದ ಮಗಳು […] The post ಮಲಗಿದ್ದ ಗಂಡನ ಮೇಲೆ ಬಿಸಿ ಎಣ್ಣೆ ಸುರಿದು ಮೆಣಸಿನ ಪುಡಿ ಎರಚಿದ ಹೆಂಡತಿ! husband first appeared on ವಿಜಯವಾಣಿ .
ಕೊಲೆಗೂ ಮುನ್ನ ವೆಂಕಟೇಶ-ರವಿ ಟಾಕ್ ವಾರ್
ಕೊಪ್ಪಳ : ಗಂಗಾವತಿ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ವೆಂಕಟೇಶ್ ಕೊಲೆ ನಡೆವ ಮುನ್ನ ಆರೋಪಿ ರವಿ ಹಾಗೂ ವೆಂಕಟೇಶ ದೂರವಾಣಿಯಲ್ಲಿ ಪರಸ್ಪರ ಜಗಳ ಆಡಿಕೊಂಡಿದ್ದರು. ಇವರಿಬ್ಬರ ಆಡಿಯೋ ಸಂಭಾಷಣೆ ಸದ್ಯ ವೈರಲ್ ಆಗಿದೆ. ಹಳೇ ದ್ವೇಷಕ್ಕೆ ಕೊಲೆ ನಡೆದಿದ್ದು ನಾಲ್ವರು ಆರೋಪಿಗಳು ಶರಣಾಗಿದ್ದಾರೆ. ಕೊಲೆ ಸಂಚಿಗೂ ಮೊದಲು ಟಾಕ್ ವಾರ್ ನಡೆಸಿದ್ದ ವೆಂಕಟೇಶ-ರವಿ ಪರಸ್ಪರ ಅವಾಚ್ಯ ಶಬ್ದ ಬಳಸಿ ನಿಂದಿಸಿಕೊಂಡಿದ್ದಾರೆ. ಒಂದು ನೀ ಇರಬೇಕು. ಇಲ್ಲ ನಾನಿರಬೇಕು. ಅಪ್ಪನಿಗೆ ಹುಟ್ಟಿದ್ದರೆ ಹೊರಗೆ ಬಾ ನೋಡಿಕೊಳ್ಳುವೆ. ನಿನ್ನ ಜೊತೆಗಿರು […] The post ಕೊಲೆಗೂ ಮುನ್ನ ವೆಂಕಟೇಶ-ರವಿ ಟಾಕ್ ವಾರ್ first appeared on ವಿಜಯವಾಣಿ .
ಕರ್ನಾಟಕದಲ್ಲಿಯೂ ಮಹಿಳಾ ನೌಕರರಿಗೆ ಋತುಚಕ್ರ ರಜೆ! Menstrual Sick Leave
ಬೆಂಗಳೂರು: (Menstrual Sick Leave) ರಾಜ್ಯದ ಸರ್ಕಾರಿ ಮತ್ತು ಖಾಸಗಿ ವಲಯಗಳ ಮಹಿಳಾ ಉದ್ಯೋಗಿಗಳಿಗೆ ಒಡಿಶಾ ಮಾದರಿಯಲ್ಲಿ ತಿಂಗಳಿಗೆ ಒಂದು ದಿನ ವೇತನಸಹಿತ ಮುಟ್ಟಿನ ರಜೆ ನೀಡಬೇಕೆಂಬ ಬೇಡಿಕೆ ಮತ್ತೆ ಮುನ್ನೆಲೆಗೆ ಬಂದಿದ್ದು, ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಗಂಭೀರ ಚಿಂತನೆ ನಡೆಸಿದೆ. ಸುಪ್ರೀಂ ಕೋರ್ಟ್ ಆಶಯಕ್ಕೆ ಅನುಗುಣವಾಗಿ ಈ ನೀತಿ ಜಾರಿಗೆ ತರಲು ರಾಜ್ಯ ಸರ್ಕಾರ ಮುಂದಾಗಿದೆ. ಈ ಸಂಬಂಧ ಪ್ರಸ್ತಾವನೆ ಸಚಿವ ಸಂಪುಟದ ಮುಂದೆ ಬಂದಿರುವುದಾಗಿ ತಿಳಿದು ಬಂದಿದೆ. ರಾಜ್ಯದ ಸರ್ಕಾರಿ ಮತ್ತು ಖಾಸಗಿ […] The post ಕರ್ನಾಟಕದಲ್ಲಿಯೂ ಮಹಿಳಾ ನೌಕರರಿಗೆ ಋತುಚಕ್ರ ರಜೆ! Menstrual Sick Leave first appeared on ವಿಜಯವಾಣಿ .
ದಿವಾಳಿ ಅರ್ಜಿ ವಾಪಸ್; ಸಲ್ಮಾನ್ಗೆ ಎನ್ಸಿಎಲ್ಎಟಿಯಿಂದ ಅನುಮತಿ
ನವದೆಹಲಿ: ಜೆರಾಯ್ ಫಿಟ್ನೆಸ್ ವಿರುದ್ಧ ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿಯ (ಎನ್ಸಿಎಲ್ ಎಟಿ) ಮುಂದೆ ದಾಖಲಿಸಿದ್ದ ದಿವಾಳಿತನದ ಅರ್ಜಿಯನ್ನು ಬಾಲಿವುಡ್ ನಟ ಸಲ್ಮಾನ್ ಖಾನ್ ಬುಧವಾರ ಹಿಂಪಡೆದಿದ್ದಾರೆ. 7.24 ಕೋಟಿ ರೂ. ವಿವಾದವನ್ನು ಒಪ್ಪಂದದ ಷರತ್ತುಗಳ ಆಧಾರದಲ್ಲಿ ಇತ್ಯರ್ಥಗೊಳಿಸಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಸಲ್ಮಾನ್ ಖಾನ್ ಪರ ವಕೀಲರು ಡಿಮ್ಯಾಂಡ್ ಡ್ರಾಫ್ಟ್ನ್ನು ಒಪ್ಪಿಗೆ ಷರತ್ತುಗಳ ಪ್ರಕಾರ ಸ್ವೀಕರಿಸಲಾಗಿದೆ ಎಂದು ತಿಳಿಸಿ, ಅರ್ಜಿ ಹಿಂಪಡೆಯಲು ಅನುಮತಿ ಕೋರಿದರು. ಎನ್ ಸಿಎಲ್ಎಟಿ ಅಧ್ಯಕ್ಷ ನ್ಯಾ. ಅಶೋಕ್ ಭೂಷಣ್ […] The post ದಿವಾಳಿ ಅರ್ಜಿ ವಾಪಸ್; ಸಲ್ಮಾನ್ಗೆ ಎನ್ಸಿಎಲ್ಎಟಿಯಿಂದ ಅನುಮತಿ first appeared on ವಿಜಯವಾಣಿ .
Yuzvendra Chahal : ಭಾರತೀಯ ಕ್ರಿಕೆಟಿಗ ಯುಜ್ವೇಂದ್ರ ಚಾಹಲ್ ತಮ್ಮ ಮಾಜಿ ಪತ್ನಿ ಧನಶ್ರೀ ವರ್ಮಾ ಇತ್ತೀಚೆಗೆ ತಮ್ಮ ವಿರುದ್ಧ ಹೊರಿಸಿರುವ ವಂಚನೆ ಆರೋಪಗಳಿಗೆ ಮೊದಲ ಬಾರಿಗೆ ಸಾರ್ವಜನಿಕವಾಗಿ ಪ್ರತಿಕ್ರಿಯಿಸಿದ್ದಾರೆ. ಆರೋಪಗಳನ್ನು ಆಧಾರರಹಿತ ಎಂದು ಅವರು ತಳ್ಳಿಹಾಕಿದರು ಮತ್ತು ಈ ವಿಷಯವು ಅವರ ಆಟ ಅಥವಾ ಜೀವನದ ಮೇಲೆ ಯಾವುದೇ ರೀತಿಯಲ್ಲಿ ಪರಿಣಾಮ ಬೀರಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಜನಪ್ರಿಯ ರಿಯಾಲಿಟಿ ಶೋವೊಂದರಲ್ಲಿ ಭಾಗವಹಿಸುತ್ತಿದ್ದ ಧನಶ್ರೀ ವರ್ಮಾ, ಮದುವೆಯಾದ ಎರಡು ತಿಂಗಳೊಳಗೆ ಚಾಹಲ್ ತನಗೆ ಮೋಸ ಮಾಡಿದ್ದಾರೆ ಎಂದು […] The post ಎರಡೇ ತಿಂಗಳಲ್ಲಿ ನಾನು ಮೋಸ ಮಾಡಿದರೆ, ನಾಲ್ಕೂವರೆ ವರ್ಷ ಬದುಕಲು ಹೇಗೆ ಸಾಧ್ಯ?: ಯುಜ್ವೇಂದ್ರ ಚಾಹಲ್..Yuzvendra Chahal first appeared on ವಿಜಯವಾಣಿ .
Ayushman Bharat |ಯಶಸ್ವಿನಿ ಯೋಜನೆ ಫಲಾನುಭವಿಗಳಿಗಿಲ್ಲ ಆಯುಷ್ಮಾನ್ ಭಾರತ್
ಬೆಂಗಳೂರು: ಯಶಸ್ವಿನಿ ಯೋಜನೆಯ ಫಲಾನುಭವಿಗಳನ್ನು ಆಯುಷ್ಮಾನ್ ಭಾರತ್ -ಆರೋಗ್ಯ ಕರ್ನಾಟಕ (ಎಬಿಎಆರ್ಕೆ) ಯೋಜನೆಯಿಂದ ಹೊರಗಿಡುವಂತೆ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ. ಸಹಕಾರ ಇಲಾಖೆಯಿಂದ ಯಶಸ್ವಿನಿ ಹಾಗೂ ಆರೋಗ್ಯ ಇಲಾಖೆಯಿಂದ ಎಬಿಎಆರ್ ಕೆ ಯೋಜನೆ ಅನುಷ್ಠಾನಗೊಳಿಸಲಾಗಿದೆ. ಈ ಪೈಕಿ ಹೆಚ್ಚಿನ ಕುಟುಂಬಗಳು ಎರಡೂ ಯೋಜನೆಯ ಫಲಾನುಭವಿಗಳಾಗಿದ್ದಾರೆ. ಎರಡೂ ಯೋಜನೆಗಳು ಪ್ರತಿ ಕುಟುಂಬಕ್ಕೆ ವಾರ್ಷಿಕ ತಲಾ 5 ಲಕ್ಷದವರೆಗೆ ಆರೋಗ್ಯ ಸೇವಾ ಸೌಲಭ್ಯ ಒದಗಿಸುತ್ತದೆ. ಆದ್ದರಿಂದ ಫಲಾನುಭವಿಗಳು ಯಾವುದಾದರೂ ಒಂದು ಯೋಜನೆಯಡಿ ಪ್ರಯೋಜನ ಪಡೆಯಬೇಕು ಎಂದು ತಿಳಿಸಲಾಗಿದೆ. ಸುವರ್ಣ ಆರೋಗ್ಯ […] The post Ayushman Bharat | ಯಶಸ್ವಿನಿ ಯೋಜನೆ ಫಲಾನುಭವಿಗಳಿಗಿಲ್ಲ ಆಯುಷ್ಮಾನ್ ಭಾರತ್ first appeared on ವಿಜಯವಾಣಿ .
BBK |ಜಾಲಿವುಡ್ ಸ್ಟುಡಿಯೋ ರೀ ಓಪನ್ಗೆ ಡಿಸಿಎಂ ಡಿಕೆಶಿ ಸೂಚನೆ; ಸ್ಪಂದಿಸಿದಕ್ಕಾಗಿ ಧನ್ಯವಾಧಗಳು ಎಂದ ಕಿಚ್ಚ ಸುದೀಪ್
BBK: ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಚಿತ್ರಿಕರಣ ನಡೆಯುತ್ತಿರುವ ಬಿಡದಿಯಲ್ಲಿರುವ ಜಾಲಿವುಡ್ ಸ್ಟುಡಿಯೋ ಸೀಲ್ ತೆಗೆಯಲು ಸೂಚನೆ ನೀಡಿರುವ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ಗೆ ಕಾರ್ಯಕ್ರಮ ನಿರೂಪಕ, ನಟ ಕಿಚ್ಚ ಸುದೀಪ್ ಧನ್ಯವಾಧಗಳನ್ನು ತಿಳಿಸಿದ್ದಾರೆ. ತಮ್ಮ ಎಕ್ಸ್ ಖಾತೆಯಲ್ಲಿ ಡಿಸಿಎಂ ಪೋಸ್ಟ್ ರೀಟ್ವೀಟ್ ಮಾಡಿರುವ ಸುದೀಪ್, ಸಕಾಲಿಕ ಬೆಂಬಲ ನೀಡಿದ್ದಕ್ಕಾಗಿ, ನನ್ನ ಕರೆಗೆ ತಕ್ಷಣ ಸ್ಪಂದಿಸಿದ್ದಕ್ಕಾಗಿ ಗೌರವಾನ್ವಿತ ಉಪಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ಸರ್ ಅವರಿಗೆ ಹೃತ್ಪೂರ್ವಕವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಇತ್ತೀಚೆಗೆ ನಡೆದ ಅವ್ಯವಸ್ಥೆ ಮತ್ತು […] The post BBK | ಜಾಲಿವುಡ್ ಸ್ಟುಡಿಯೋ ರೀ ಓಪನ್ಗೆ ಡಿಸಿಎಂ ಡಿಕೆಶಿ ಸೂಚನೆ; ಸ್ಪಂದಿಸಿದಕ್ಕಾಗಿ ಧನ್ಯವಾಧಗಳು ಎಂದ ಕಿಚ್ಚ ಸುದೀಪ್ first appeared on ವಿಜಯವಾಣಿ .
ಹುಬ್ಬಳ್ಳಿ: ಇಲ್ಲಿಯ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ಐಟಿಐ, ಕೋಪಾ ವಿದ್ಯಾರ್ಹತೆ ಹೊಂದಿದ ಶಿಶಿಕ್ಷುದಾರರನ್ನು ತರಬೇತಿಗೆ ನಿಯೋಜಿಸಿಕೊಳ್ಳುವ ಹಿನ್ನೆಲೆಯಲ್ಲಿ ಅ. 17ರಂದು ಬೆಳಗ್ಗೆ 11ಕ್ಕೆ ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರ ಕಚೇರಿಯಲ್ಲಿ ಸಂದರ್ಶನಕ್ಕೆ ಹಾಜರಾಗಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗೆ ನಿಗಮದ ವೆಬ್ ಸೈಟ್ ವೀಕ್ಷಿಸಬಹುದು ಎಂದು ಪ್ರಕಟಣೆ ತಿಳಿಸಿದೆ. The post ಶಿಶಿಕ್ಷುದಾರರ ಸಂದರ್ಶನ 17ರಂದು first appeared on ವಿಜಯವಾಣಿ .
ಹುಬ್ಬಳ್ಳಿ: ಇಲ್ಲಿಯ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಪದಾಧಿಕಾರಿಗಳ ಹಾಗೂ ಆಡಳಿತ ಮಂಡಳಿ ಸದಸ್ಯರ ಸಭೆಯನ್ನು ಅ. 15ರಂದು ಮಧ್ಯಾಹ್ನ 12.30ಕ್ಕೆ ಕೆಸಿಸಿಐನಲ್ಲಿ ಆಯೋಜಿಸಲಾಗಿದೆ. ಸಂಸ್ಥೆಯ ಬೈಲಾ ಅನ್ವಯ 18 ಸದಸ್ಯರನ್ನು ಒಂದು ವರ್ಷದ ಅವಧಿಗೆ ಆಡಳಿತ ಮಂಡಳಿಗೆ ನೇಮಿಸಿಕೊಳ್ಳಲಾಗುತ್ತದೆ. ಸಂಘ ಸಂಸ್ಥೆಗಳ ಪ್ರತಿನಿಧಿಗಳು 8, ಕಂಪನಿ ಮತ್ತು ಸೊಸೈಟಿಯ ಪ್ರತಿನಿಧಿಗಳು 5 ಹಾಗೂ ವೃಕ್ತಿ ಮತ್ತು ಫರ್ಮ ಪ್ರತಿನಿಧಿಗಳು ಐವರು ಸೇರಿ 18 ಜನರನ್ನು ನೇಮಿಸುವುದು ಸೇರಿ ವಿವಿಧ ವಿಷಯಗಳ ಚರ್ಚೆ ನಡೆಯಲಿದೆ ಎಂದು ಸಂಸ್ಥೆಯ ಗೌರವ […] The post ಕೆಸಿಸಿಐ ಸಭೆ 15ರಂದು first appeared on ವಿಜಯವಾಣಿ .
ಮಂಗಳೂರಿನಲ್ಲಿ ಬಿಐಎಸ್ ಪಾಲುದಾರರ ಸಮಾವೇಶ
ಹುಬ್ಬಳ್ಳಿ: ಮಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಭಾರತೀಯ ಮಾನಕ ಸಂಸ್ಥೆ (ಬಿಐಎಸ್) ಹುಬ್ಬಳ್ಳಿ ಶಾಖೆ ಕಚೇರಿಯ ವತಿಯಿಂದ ಬುಧವಾರ ಪಾಲುದಾರರ ಸಮಾವೇಶ ಏರ್ಪಡಿಸಲಾಗಿತ್ತು. ದಕ್ಷಿಣ ಕನ್ನಡ ಜಿಲ್ಲೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಂದ ಸರ್ಕಾರಿ ಇಲಾಖೆಗಳು, ಕೈಗಾರಿಕೆ, ಶೈಕ್ಷಣಿಕ ಮತ್ತು ಎನ್ ಜಿಒಗಳು ಸೇರಿದಂತೆ ವಿವಿಧ ವಲಯಗಳ 170ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದರು. ಪಾಲುದಾರರ ತೊಡಗಿಸಿಕೊಳ್ಳುವಿಕೆಯನ್ನು ಹೆಚ್ಚಿಸುವುದು ಮತ್ತು ಈ ಪ್ರದೇಶದಲ್ಲಿ ಗುಣಮಟ್ಟ ಮತ್ತು ಪ್ರಮಾಣೀಕರಣದ ಸಂಸ್ಕೃತಿಯನ್ನು ಉತ್ತೇಜಿಸಲು ಬಿಐಎಸ್ ನ ಪ್ರಯತ್ನಗಳಲ್ಲಿ ಈ ಸಮಾವೇಶವು ಮಹತ್ವದ ಹೆಜ್ಜೆಯಾಗಿದೆ. […] The post ಮಂಗಳೂರಿನಲ್ಲಿ ಬಿಐಎಸ್ ಪಾಲುದಾರರ ಸಮಾವೇಶ first appeared on ವಿಜಯವಾಣಿ .
Gaza Peace Plan |ಶಾಂತಿ ಯೋಜನೆಯ ಮೊದಲ ಹಂತಕ್ಕೆ ಇಸ್ರೇಲ್, ಹಮಾಸ್ ಒಪ್ಪಿಗೆ: ಡೊನಾಲ್ಡ್ ಟ್ರಂಪ್
Gaza Peace Plan: ಗಾಜಾದಲ್ಲಿ ಹೋರಾಟವನ್ನು ನಿಲ್ಲಿಸಲು, ಒತ್ತೆಯಾಳುಗಳು ಮತ್ತು ಕೈದಿಗಳನ್ನು ಬಿಡುಗಡೆ ಮಾಡಲು ಅಮೆರಿಕದ ಮಧ್ಯಸ್ಥಿಕೆಯ ಶಾಂತಿ ಯೋಜನೆಯ ಮೊದಲ ಹಂತಕ್ಕೆ ಇಸ್ರೇಲ್ ಮತ್ತು ಹಮಾಸ್ ಒಪ್ಪಿಕೊಂಡಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುರುವಾರ (ಅ 9) ಘೋಷಿಸಿದರು. ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಟ್ರಂಪ್, ಎಲ್ಲಾ ಒತ್ತೆಯಾಳುಗಳನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಮತ್ತು ಬಲವಾದ, ಬಾಳಿಕೆ ಬರುವ ಮತ್ತು ಶಾಶ್ವತ ಶಾಂತಿಯತ್ತ ಮೊದಲ ಹೆಜ್ಜೆಯಾಗಿ ಇಸ್ರೇಲ್ ತಮ್ಮ ಸೈನಿಕರನ್ನು ಹಿಂತೆಗೆದುಕೊಳ್ಳುತ್ತದೆ ಎಂದು […] The post Gaza Peace Plan | ಶಾಂತಿ ಯೋಜನೆಯ ಮೊದಲ ಹಂತಕ್ಕೆ ಇಸ್ರೇಲ್, ಹಮಾಸ್ ಒಪ್ಪಿಗೆ: ಡೊನಾಲ್ಡ್ ಟ್ರಂಪ್ first appeared on ವಿಜಯವಾಣಿ .
ಮಹಿಳೆಯರ ಏಕದಿನ ವಿಶ್ವಕಪ್: ಇಂದು ದಕ್ಷಿಣ ಆಫ್ರಿಕಾ ಎದುರಾಳಿ; ಭಾರತಕ್ಕೆ ಹ್ಯಾಟ್ರಿಕ್ ಗೆಲುವಿನ ತವಕ
ವಿಶಾಖಪಟ್ಟಣ: ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿರುವ ಆತಿಥೇಯ ಭಾರತ ತಂಡ ಐಸಿಸಿ ಮಹಿಳಯರ ಏಕದಿನ ವಿಶ್ವಕಪ್ ಟೂರ್ನಿಯ ತನ್ನ ಮೂರನೇ ಲೀಗ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಸವಾಲು ಎದುರಿಸಲಿದೆ. ಗುರುವಾರ ವೈಎಸ್ಆರ್ ರೆಡ್ಡಿ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಉಭಯ ತಂಡಗಳು ಗೆಲುವಿನ ಲಯ ಕಾಯ್ದುಕೊಳ್ಳುವ ತವಕದಲ್ಲಿವೆ. ಸಾಂಪ್ರದಾಯಿಕ ಎದುರಾಳಿ ಪಾಕ್ ವಿರುದ್ಧದ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಭಾರತ, ಹಿಂದಿನ ಎರಡು ಪಂದ್ಯಗಳಲ್ಲಿ ನೀಡಿದ ಪ್ರದರ್ಶನಕ್ಕಿಂತ ಸುಧಾರಿತ ನಿರ್ವಹಣೆ ತೋರಬೇಕಿದೆ. ಫೀಲ್ಡಿಂಗ್ ಹಾಗೂ ಅಗ್ರ ಕ್ರಮಾಂಕ ಬ್ಯಾಟರ್ಗಳಿಂದ ಉತ್ತಮ […] The post ಮಹಿಳೆಯರ ಏಕದಿನ ವಿಶ್ವಕಪ್: ಇಂದು ದಕ್ಷಿಣ ಆಫ್ರಿಕಾ ಎದುರಾಳಿ; ಭಾರತಕ್ಕೆ ಹ್ಯಾಟ್ರಿಕ್ ಗೆಲುವಿನ ತವಕ first appeared on ವಿಜಯವಾಣಿ .
ಚಾಂಪಿಯನ್ಸ್ ಟ್ರೋಫಿ ಗೆಲುವಿನ ಕ್ರೆಡಿಟ್ ದ್ರಾವಿಡ್ಗೆ ಸಲ್ಲಬೇಕೆಂದ ರೋಹಿತ್; ಗಂಭೀರ್ಗೆ ಪರೋಕ್ಷ ಟಾಂಗ್!
ಮುಂಬೈ: ರೋಹಿತ್ ಶರ್ಮ ತನ್ನ ನಾಯಕತ್ವದಲ್ಲಿ ಹಾಲಿ ವರ್ಷ ಐಸಿಸಿ ಚಾಂಪಿಯನ್ಸ್ ಟ್ರೋಫಿ ಏಕದಿನ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದ ಶ್ರೇಯವನ್ನು ಮಾಜಿ ಕೋಚ್ ರಾಹುಲ್ ದ್ರಾವಿಡ್ಗೆ ನೀಡಿದ್ದಾರೆ. ಈ ಮೂಲಕ ಹಾಲಿ ಮುಖ್ಯ ಕೋಚ್ ಗೌತಮ್ ಗಂಭೀರ್ಗೆ ಪರೋಕ್ಷವಾಗಿ ಟಾಂಗ್ ನೀಡಿರುವರೇ ಎಂಬ ಪ್ರಶ್ನೆಯೂ ಎದ್ದಿದೆ. ಮಂಗಳವಾರ ರಾತ್ರಿ ನಡೆದ ಸಿಯೆಟ್ ಕ್ರಿಕೆಟ್ ರೇಟಿಂಗ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ರೋಹಿತ್, ದ್ರಾವಿಡ್ ಕೋಚ್ ಆಗಿದ್ದ ಅವಧಿಯಲ್ಲಿ ಅನುಸರಿಸಲಾದ ಪ್ರಕ್ರಿಯೆಗಳಿಂದಲೇ ಚಾಂಪಿಯನ್ಸ್ ಟ್ರೋಫಿ ಒಲಿಯಿತು. ದ್ರಾವಿಡ್ ಕೋಚ್ […] The post ಚಾಂಪಿಯನ್ಸ್ ಟ್ರೋಫಿ ಗೆಲುವಿನ ಕ್ರೆಡಿಟ್ ದ್ರಾವಿಡ್ಗೆ ಸಲ್ಲಬೇಕೆಂದ ರೋಹಿತ್; ಗಂಭೀರ್ಗೆ ಪರೋಕ್ಷ ಟಾಂಗ್! first appeared on ವಿಜಯವಾಣಿ .
ಸಾಲದ ಸುಳಿಯಲ್ಲಿ ಬಲಾಢ್ಯ ರಾಷ್ಟ್ರಗಳು: ಆದಾಯಕ್ಕಿಂತ ಖರ್ಚು ಅಧಿಕ
ಜಗತ್ತಿನ ಕಣ್ಣಿಗೆ ಇವು ವಿಶ್ವದ ಬಲಾಢ್ಯ ರಾಷ್ಟ್ರಗಳು. ಅವುಗಳ ಅಭಿವೃದ್ಧಿ ಕಣ್ಣು ಕೊರೈಸುವಂತಿದೆ. ಆದರೆ, ಒಳಹೊಕ್ಕು ನೋಡಿದಾಗ ನೈಜ ಪರಿಸ್ಥಿತಿ ಅರಿವಿಗೆ ಬರುತ್ತದೆ. ಇತ್ತೀಚಿನ ವರ್ಷಗಳಲ್ಲಿ ಈ ರಾಷ್ಟ್ರಗಳು ಸಾಲದ ಮೇಲೆ ಸಾಲ ಮಾಡುತ್ತಿದ್ದು, ವರ್ಷದಿಂದ ವರ್ಷಕ್ಕೆ ಈ ಪ್ರಮಾಣ ಹೆಚ್ಚುತ್ತಲೇ ಇದೆ. ಈ ಪರಿಯ ಸಾಲ ಮುಂದೆ ಸಂಕಷ್ಟಕ್ಕೆ ದೂಡಲಿದೆ, ಆರ್ಥಿಕವಾಗಿ ಬಿಕ್ಕಟ್ಟಿನ ಸ್ಥಿತಿ ಸೃಷ್ಟಿಸಲಿದೆ ಎಂಬ ತಜ್ಞರ ಎಚ್ಚರಿಕೆಯನ್ನು ಆಳುಗರು ಕಡೆಗಣಿಸುತ್ತ, ‘ಸಾಲ ಮಾಡಿಯಾದರೂ, ತುಪ್ಪ ತಿನ್ನು’ ಎಂಬ ನೀತಿ ಮುಂದುವರಿಸಿದ್ದಾರೆ. ಇದಕ್ಕೆ ಕಡಿವಾಣ […] The post ಸಾಲದ ಸುಳಿಯಲ್ಲಿ ಬಲಾಢ್ಯ ರಾಷ್ಟ್ರಗಳು: ಆದಾಯಕ್ಕಿಂತ ಖರ್ಚು ಅಧಿಕ first appeared on ವಿಜಯವಾಣಿ .
ಎಂದಿನಂತೆ ರಾತ್ರಿ ಊಟದ ನಂತರ ಮೊಮ್ಮಕ್ಕಳು ‘ಅಜ್ಜಾ ಕಥೀ ಹೇಳ್ರೀ’ ಎಂದು ಕೇಳಿದರು. ನಗುತ್ತ ಅಜ್ಜ ಕಥೆ ಹೇಳಲಾರಂಭಿಸಿದರು. ಗೋವರ್ಧನ ಪರ್ವತವನ್ನು ಎತ್ತಿಹಿಡಿದ ಕೃಷ್ಣನ ಕಥೆ. ಇಂದ್ರ ದೇವರು ಕೋಪಗೊಂಡು ಧಾರಾಕಾರವಾಗಿ ಮಳೆಗೈಯ್ಯುತ್ತಿದ್ದಾರೆ. ಶ್ರೀಕೃಷ್ಣ ತನ್ನ ಕಿರು ಬೆರಳಿನಿಂದಲೇ ಗೋವರ್ಧನ ಗಿರಿಯನ್ನು ಎತ್ತಿ ಹಿಡಿದ. ಗೋಕುಲವಾಸಿಗಳೆಲ್ಲ ಗಾಬರಿಯಾದರು. ‘ಕೃಷ್ಣಾ ನಿನೊಬ್ಬನೇ ಹೇಗೆ ಎತ್ತಿ ಹಿಡಿದೀಯಾ..! ನಾವೂ ಕೈ ಜೋಡಿಸುತ್ತೇವೆ’ ಎಂದು ಗಾಬರಿಯಿಂದ ಎಲ್ಲರೂ ಒಂದೊಂದು ಕೋಲನ್ನು ತಂದು ಕೃಷ್ಣನೊಂದಿಗೆ ಗೋವರ್ಧನ ಪರ್ವತಕ್ಕೆ ಹಿಡಿದರು. ಸವೋತ್ತಮನಾದ ಶ್ರೀಕೃಷ್ಣ ಮುಗುಳ್ನಗುತ್ತ, […] The post ಹೃದಯ ಶ್ರೀಮಂತಿಕೆಯಿಂದ ಬಾಳೋಣ first appeared on ವಿಜಯವಾಣಿ .
ಸಂಪಾದಕೀಯ: ಎಐ ದುರ್ಬಳಕೆಗೆ ಕಡಿವಾಣ
‘ಕೃತಕ ಬುದ್ಧಿಮತ್ತೆಯಿಂದ (ಎಐ) ವ್ಯಕ್ತಿಗಳ ಯಥಾವತ್ ನಕಲು ವಿಡಿಯೋ, ಧ್ವನಿ ಅನುಕರಣೆ ಮಾಡಿ ಅಮಾಯಕರಿಗೆ ವಂಚನೆ ಮಾಡುತ್ತಿರುವುದನ್ನು ತಡೆಯಲು ಹಣಕಾಸು ತಂತ್ರಜ್ಞಾನ ಕಂಪನಿಗಳು ಗಮನ ಹರಿಸಬೇಕು’ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ ಹೇಳಿದ್ದಾರೆ. ಇದು ಸಮಸ್ಯೆಯ ಗಂಭೀರತೆಗೆ ಸಾಕ್ಷಿ. ಎಐ ತಂತ್ರಜ್ಞಾನದ ಕರಾಳ ಮುಖ ಹಲವು ಸಮಸ್ಯೆಗಳನ್ನು ತಂದೊಡ್ಡಿದ್ದು, ಹಣಕಾಸು ಕ್ಷೇತ್ರಕ್ಕಂತೂ ದೊಡ್ಡ ಸವಾಲಾಗಿ ಬದಲಾಗಿದೆ. ‘ನನ್ನದೇ ಹಲವಾರು ಡೀಪ್ಫೇಕ್ ವಿಡಿಯೋಗಳು ಆನ್ಲೈನ್ನಲ್ಲಿ ಪ್ರಸಾರವಾಗುತ್ತಿವೆ. ಇವು ಜನರನ್ನು ದಾರಿ ತಪ್ಪಿಸುತ್ತಿವೆ ಮತ್ತು ಸತ್ಯವನ್ನು […] The post ಸಂಪಾದಕೀಯ: ಎಐ ದುರ್ಬಳಕೆಗೆ ಕಡಿವಾಣ first appeared on ವಿಜಯವಾಣಿ .
ವರುಷಕ್ಕೊಮ್ಮೆ ದರ್ಶನ ಕರುಣಿಸುವ ದೇವಿ ಹಾಸನಾಂಬೆ
ವಿಶ್ವದಾದ್ಯಂತ ಜನಜನಿತವಾಗಿರುವ ಹಾಸನಾಂಬೆ ಇಂದಿನಿಂದ (ಅ.9) ಹದಿನೈದು ದಿನಗಳ ಕಾಲ ದರ್ಶನ ನೀಡಲಿದ್ದಾಳೆ. ತಾಯಿಯ ದರ್ಶನಕ್ಕೆ ಲಕ್ಷಾಂತರ ಜನರು ಬರುವ ನಿರೀಕ್ಷೆಯಲ್ಲಿ ಜಿಲ್ಲಾಡಳಿತ ಯೋಜಿತ ತಯಾರಿ ಮಾಡಿಕೊಳ್ಳುತ್ತಿದೆ. ತಂತ್ರಜ್ಞಾನಾಧಾರಿತ ಹತ್ತು ಹಲವು ಅನುಕೂಲಗಳುಳ್ಳ ಅದ್ದೂರಿ ವ್ಯವಸ್ಥೆಯಡಿ ದೇವಿ ದರ್ಶನ ಕೊಡಲು ಸಜ್ಜಾಗಿದ್ದಾಳೆ. ಅತ್ಯಂತ ಮಡಿಯ ದೇವತೆ ಹಾಸನಾಂಬೆ. ಆಕೆಗೆ ನೇಮನಿಷ್ಠೆ, ಸ್ನಾನ, ಉಪವಾಸ, ನೈವೇದ್ಯ ಮತ್ತು ಪೂಜಾ ಕೈಂಕರ್ಯಗಳೆಲ್ಲಾ ಶಿಸ್ತುಬದ್ಧವಾಗಿಯೇ ನಡೆಯಬೇಕು. ಅದೇ ಕಾರಣಕ್ಕೆ ವರುಷಕ್ಕೊಮ್ಮೆ ಮಾತ್ರ ದೇವಾಲಯದ ಬಾಗಿಲು ತೆರೆಯುವ ಪದ್ಧತಿ ಬಂದಿರಬಹುದು ಎನ್ನುತ್ತಾರೆ ದೇವಿಯ […] The post ವರುಷಕ್ಕೊಮ್ಮೆ ದರ್ಶನ ಕರುಣಿಸುವ ದೇವಿ ಹಾಸನಾಂಬೆ first appeared on ವಿಜಯವಾಣಿ .
ನಮ್ಮ ದೇಶದ ಸಂಸ್ಕಾರ, ಸಂಸ್ಕೃತಿಯು ಧರ್ಮನೀತಿ, ಆಚಾರ- ವಿಚಾರಗಳ ಮೇಲೆ ನಿಂತಿದೆ. ಆದರೆ ಇಂದಿನ ದಿನಮಾನಕ್ಕನುಸರಿಸಿ ರೀತಿ-ನೀತಿಗಳು ಬದಲಾಗುತ್ತಿವೆ. ಈ ಬಗ್ಗೆ ಮಹಾಜ್ಞಾನಿ ಸ್ವತಂತ್ರ ಸಿದ್ಧಲಿಂಗೇಶ್ವರರು ತಮ್ಮ ವಚನದಲ್ಲಿ ಹೀಗೆ ತಿಳಿಸುತ್ತಾರೆ. ಜೊಳ್ಳು ಮಾತೆಂದಡೆ ನಲಿನಲಿದು ನುಡಿವರು/ಕಾಳು ಕೆಲಸವೆಂದರೆ ನಲಿನಲಿದು ಮಾಡುವರು/ ಶ್ರೀಗುರು ಸೇವೆಯಂದಡೆ ನಿತ್ಯ ಲಿಂಗಾರ್ಚನೆ/ಮತ್ತೆ ಪಂಚಾಕ್ಷರಿ ಜಪವೆಂದರೆ ಅಳಲುವರು ಬಳಲುವರು/ ಇಂತಪ್ಪ ದುರುಳರಿಗೆ ದುಃಖವೇ ಪ್ರಾಪ್ತಿಯಲ್ಲದೆ ನಿಜಸುಖವೆಂಬುದಿಲ್ಲ… ನಮ್ಮ ಶರಣರು ಮಾತು ಜ್ಯೋತಿರ್ಲಿಂಗ ಎಂದಿದ್ದಾರೆ. ಅದಕ್ಕೆ ಅಷ್ಟು ಬೆಲೆ ಇತ್ತು. ಮತ್ತೆ ನುಡಿದರೆ ಮುತ್ತಿನ […] The post ಒಳ್ಳೆಯದಕ್ಕೆ ಸಮಯವಿಲ್ಲ first appeared on ವಿಜಯವಾಣಿ .
ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ಹಣಕಾಸಿನ ತೊಂದರೆ ನಿವಾರಣೆ ನಿಮ್ಮ ಪ್ರತಿಭೆಗೆ ಸೂಕ್ತ ಅವಕಾಶ ಸಿಗಲಿದೆ
ಮೇಷ: ಸಂಗಾತಿಯ ಆರೋಗ್ಯದಲ್ಲಿ ಸುಧಾರಣೆ. ಗಾಬರಿ ತರುವ ಘಟನೆ ನಡೆಯಬಹುದು. ಕಲಾವಿದರಿಗೆ ಮನೋಧೈರ್ಯ ದ್ವಿಗುಣ. ಶುಭಸಂಖ್ಯೆ:1 ವೃಷಭ: ವಾಹನ ಚಾಲನೆಯಲ್ಲಿ ಎಚ್ಚರ. ಉದ್ಯೋಗದಲ್ಲಿ ಅಭಿವೃದ್ಧಿ, ಹಣದ ಹರಿವು ಹೆಚ್ಚಲಿದೆ. ಅಲಂಕಾರಿಕ ವಸ್ತು ಖರೀದಿಯಲ್ಲಿ ಲಾಭ. ಶುಭಸಂಖ್ಯೆ: 1 ಮಿಥುನ: ಕೋರ್ಟ್ ಕೆಲಸ ಕಾರ್ಯಗಳಲ್ಲಿ ಸಾಫಲ್ಯ. ತಲೆನೊವು ಪರಿಹಾರವಾಗಲಿದೆ. ತರಕಾರಿ ವ್ಯಾಪಾರಿಗಳಿಗೆ ದೊಡ್ಡಮಟ್ಟದ ಲಾಭ. ಶುಭಸಂಖ್ಯೆ: 6 ಕಟಕ: ಆಮದು ರಫ್ತು ವ್ಯವಹಾರದಲ್ಲಿ ಒಳ್ಳೆಯ ಅಭಿವೃದ್ಧಿ. ನಿರೀಕ್ಷೆಯಲ್ಲಿದ್ದವರಿಗೆ ವಿವಾಹ ಕೂಡಿ ಬರಲಿದೆ. ಪ್ರಯಾಣದಲ್ಲಿ ಅನುಕೂಲ. ಶುಭಸಂಖ್ಯೆ:5 ಸಿಂಹ: ಸಾರ್ವಜನಿಕವಾಗಿ […] The post ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ಹಣಕಾಸಿನ ತೊಂದರೆ ನಿವಾರಣೆ ನಿಮ್ಮ ಪ್ರತಿಭೆಗೆ ಸೂಕ್ತ ಅವಕಾಶ ಸಿಗಲಿದೆ first appeared on ವಿಜಯವಾಣಿ .
ದಾವಣಗೆರೆ : ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ವಿವಿಧ ಯೋಜನೆಗಳನ್ನು ವಿಪ್ರ ಸಮಾಜದವರು ಸದುಪಯೋಗ ಪಡಿಸಿಕೊಳ್ಳಬೇಕು. ಹೆಚ್ಚು ಸಂಖ್ಯೆಯ ಫಲಾನುಭವಿಗಳು ಅರ್ಜಿ ಸಲ್ಲಿಸಬೇಕು ಎಂದು ಮಂಡಳಿಯ ಜಿಲ್ಲಾ ಸಂಯೋಜನಾಧಿಕಾರಿ ಸಿದ್ದೇಶ್ ಮನವಿ ಮಾಡಿದರು. ಬ್ರಾಹ್ಮಣ ಸಮಾಜ ಸೇವಾ ಸಂಘದಿಂದ ನಗರದ ಪಿಜೆ ಬಡಾವಣೆಯ ಬ್ರಾಹ್ಮಣ ವಿದ್ಯಾರ್ಥಿ ನಿಲಯದಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ, ಮಂಡಳಿಯ ವಿವಿಧ ಯೋಜನೆಗಳ ಕುರಿತು ಅರಿವು ಮೂಡಿಸಿದರು. ಸಮಾಜದ ಆರ್ಥಿಕವಾಗಿ ಹಿಂದುಳಿದವರಿಗೆ 2025-26 ನೇ ಸಾಲಿನಿಂದ ವಿಪ್ರ ಸ್ವ ಉದ್ಯಮ ನೇರಸಾಲ ಯೋಜನೆಗೆ ಅರ್ಜಿ […] The post ಮಂಡಳಿ ಯೋಜನೆಗಳ ಸದುಪಯೋಗವಾಗಲಿ first appeared on ವಿಜಯವಾಣಿ .
ಕೇಶ ವಿನ್ಯಾಸಗಾರರಿಗೆ ಕಿಟ್ ವಿತರಣೆ
ದಾವಣಗೆರೆ :ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರ 58ನೇ ಜನ್ಮದಿನದ ಹಿನ್ನೆಲೆಯಲ್ಲಿ ಜಿಲ್ಲೆಯ ಕೇಶ ವಿನ್ಯಾಸಗಾರರಿಗೆ 500 ಕಿಟ್ಗಳನ್ನು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ತಮ್ಮ ಗೃಹ ಕಚೇರಿಯ ಆವರಣದಲ್ಲಿ ಮಂಗಳವಾರ ವಿತರಿಸಿದರು. ಸ್ಥಳೀಯ ಕೇಶ ವಿನ್ಯಾಸಗಾರರ ವೃತ್ತಿ ಜೀವನಕ್ಕೆ ಅಗತ್ಯವಾದ ಆಧಾರವನ್ನು ಒದಗಿಸುವುದರ ಜತೆಗೆ, ಅವರ ಸ್ವಾವಲಂಬನೆಗೆ ಬಲ ನೀಡುವ ಉದ್ದೇಶದಿಂದ ಎಸ್.ಎಸ್.ಎಂ. ಫೌಂಡೇಶನ್ನಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್, ಕಿಟ್ನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡು ವೃತ್ತಿಜೀವನ ನಡೆಸಬೇಕೆಂದು […] The post ಕೇಶ ವಿನ್ಯಾಸಗಾರರಿಗೆ ಕಿಟ್ ವಿತರಣೆ first appeared on ವಿಜಯವಾಣಿ .
ಮುಖ್ಯಾಧಿಕಾರಿ ವಿರುದ್ಧ ಸಿಡಿದೆದ್ದ ಜಗಳೂರು ಪಪಂ ಸದಸ್ಯರು: ‘ಬೋಗಸ್’ಬಿಲ್ ಸೃಷ್ಟಿಸಿ ಭಾರೀ ಅವ್ಯವಹಾರ ಆರೋಪ
ಜಗಳೂರು: ಜಗಳೂರು: ಪಟ್ಟಣ ಪಂಚಾಯಿತಿ (ಪಪಂ) ಯಲ್ಲಿ ಬೋಗಸ್ ಬಿಲ್ಗಳನ್ನು ಸೃಷ್ಟಿಸಿ ಲಕ್ಷಾಂತರ ರೂಪಾಯಿಗಳ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ, ಪಪಂ ಸದಸ್ಯರು ಮುಖ್ಯಾಧಿಕಾರಿ ಲೋಕ್ಯಾನಾಯ್ಕ ಅವರ ವಿರುದ್ಧ ಸಿಡಿದೆದ್ದಿದ್ದಾರೆ. ಮುಖ್ಯಾಧಿಕಾರಿಗಳು “ಆನೆ ನಡೆದದ್ದೇ ದಾರಿ” ಎನ್ನುವಂತೆ ವರ್ತಿಸುತ್ತಿದ್ದು, ಚುನಾಯಿತ ಸದಸ್ಯರನ್ನು ಲೆಕ್ಕಕ್ಕೇ ಇಟ್ಟಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಸದಸ್ಯರು, ಬುಧವಾರ ನಡೆದ ಸಭೆಯಲ್ಲಿ ಅಧ್ಯಕ್ಷ ಕೆ.ಎಸ್. ನವೀನ್ಕುಮಾರ್ ಅವರಿಗೆ ಲಿಖಿತ ದೂರು ನೀಡಿದರು. ಲೆಕ್ಕಪತ್ರಕ್ಕೆ ಒತ್ತಾಯ, ಮಾಹಿತಿ ನೀಡಲು ಮುಖ್ಯಾಧಿಕಾರಿ ನಿರಾಕರಣೆ ಸಭೆಯಲ್ಲಿ ಸದಸ್ಯರು ಮುಖ್ಯಾಧಿಕಾರಿಯವರನ್ನು […] The post ಮುಖ್ಯಾಧಿಕಾರಿ ವಿರುದ್ಧ ಸಿಡಿದೆದ್ದ ಜಗಳೂರು ಪಪಂ ಸದಸ್ಯರು: ‘ಬೋಗಸ್’ ಬಿಲ್ ಸೃಷ್ಟಿಸಿ ಭಾರೀ ಅವ್ಯವಹಾರ ಆರೋಪ first appeared on ವಿಜಯವಾಣಿ .
ಲೋಕಾಯುಕ್ತ ಬಲೆಗೆ ಬಿದ್ದ ಹಂಡ್ಲಿ ಗ್ರಾಪಂ ಅಧ್ಯಕ್ಷೆ
ಶನಿವಾರಸಂತೆ: ಗುತ್ತಿಗೆದಾರ ಕಡೆಯವರಿಂದ ಬುಧವಾರ ಲಂಚ ಸ್ವೀಕರಿಸುತ್ತಿದ್ದ ಹಂಡ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಗುತ್ತಿಗೆದಾರರಿಗೆ ಬಿಲ್ ಪಾಸ್ ಮಾಡಿಕೊಡಲು 25 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದ ಗ್ರಾಪಂ ಅಧ್ಯಕ್ಷೆ ಸುಧಾ ಈರೇಶ್ ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದಿದ್ದಾರೆ. ಗ್ರಾಮದ ಗುತ್ತಿಗೆದಾರ ಹಮೀದ್ ಅವರಿಗೆ 14.70 ಲಕ್ಷ ರೂ. ಕಾಮಗಾರಿಯ ಬಿಲ್ಪಾಸ್ ಮಾಡಲು ಅಧ್ಯಕ್ಷೆ ಸುಧಾ 25 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಹಮೀದ್ ಅವರ ಗುತ್ತಿಗೆ ಕೆಲಸ ನೋಡಿಕೊಳ್ಳುತ್ತಿದ್ದ ಭರತ್ ಅವರಿಂದ ಗ್ರಾಮ […] The post ಲೋಕಾಯುಕ್ತ ಬಲೆಗೆ ಬಿದ್ದ ಹಂಡ್ಲಿ ಗ್ರಾಪಂ ಅಧ್ಯಕ್ಷೆ first appeared on ವಿಜಯವಾಣಿ .
Bigg Boss: ಬಿಗ್ ಬಾಸ್ ಕನ್ನಡ ಶೋ ಗೆ ಮತ್ತೆ ಅನುಮತಿ; ಸ್ಟುಡಿಯೋ ಓಪನ್ ಸಾಧ್ಯತೆ
Bigg Boss: ಮಂಗಳವಾರ (ಅ. 07) ಬಂದ್ ಮಾಡಿದ್ದ ಕನ್ನಡದ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡಗೆ ಮತ್ತೆ ಅನುಮತಿ ನೀಡಲಾಗಿದೆ. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಜಾಲಿವುಡ್ ಸ್ಟುಡಿಯೋ ಅನ್ನು ಸೀಜ್ ಮಾಡಲಾಗಿತ್ತು. ಆದರೆ ಇಂದು ಡಿಸಿಎಂ ಡಿಕೆಶಿ ಸೂಚನೆ ಮೇರೆಗೆ ರಿಯಾಲಿಟಿ ಶೋ ನಡೆಸಲು ಅನುಮತಿ ನೀಡಲಾಗಿದೆ ಎನ್ನಲಾಗಿದೆ. ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಡಿಸಿಎಂ ಡಿಕೆಶಿ, ಬಿಗ್ ಬಾಸ್ ಕನ್ನಡ ಚಿತ್ರೀಕರಣ ನಡೆಯುತ್ತಿರುವ ಬಿಡದಿಯಲ್ಲಿರುವ ಜಾಲಿವುಡ್ ಆವರಣದಲ್ಲಿ ಸೀಲ್ ತೆಗೆಯುವಂತೆ ಬೆಂಗಳೂರು […] The post Bigg Boss: ಬಿಗ್ ಬಾಸ್ ಕನ್ನಡ ಶೋ ಗೆ ಮತ್ತೆ ಅನುಮತಿ; ಸ್ಟುಡಿಯೋ ಓಪನ್ ಸಾಧ್ಯತೆ first appeared on ವಿಜಯವಾಣಿ .
ಮಹಿಳೆಯರ ಏಕದಿನ ವಿಶ್ವಕಪ್: ಆಸೀಸ್ ಆಘಾತದಿಂದ ಪಾರು; ಪಾಕ್ಗೆ ಹ್ಯಾಟ್ರಿಕ್ ಸೋಲು
ಕೊಲಂಬೊ: ಅಗ್ರ ಕ್ರಮಾಂಕದ ವೈಫಲ್ಯದ ನಡುವೆಯೂ ಅನುಭವಿ ಬೆಥ್ ಮೂನಿ (109 ರನ್, 114 ಎಸೆತ, 11 ಬೌಂಡರಿ) ದಿಟ್ಟ ಶತಕದ ಸಾಹಸ ಹಾಗೂ ಬೌಲರ್ಗಳ ಸಂಟಿತ ನಿರ್ವಹಣೆ ಬಲದಿಂದ ಹಾಲಿ ಚಾಂಪಿಯನ್ ಆಸ್ಟ್ರೆಲಿಯಾ ತಂಡ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ನಲ್ಲಿ ಪಾಕಿಸ್ತಾನ ಎದುರು 107 ರನ್ಗಳ ಬೃಹತ್ ಗೆಲುವು ದಾಖಲಿಸಿದೆ. ಇದರೊಂದಿಗೆ ಅಲೀಸಾ ಹೀಲಿ ಪಡೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದು, ಸತತ ಮೂರನೇ ಸೋಲಿಗೆ ತುತ್ತಾದ ಪಾಕ್ನ ಸೆಮಿೈನಲ್ ಹಾದಿ ಜಟಿಲಗೊಂಡಿದೆ. ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ಬುಧವಾರ […] The post ಮಹಿಳೆಯರ ಏಕದಿನ ವಿಶ್ವಕಪ್: ಆಸೀಸ್ ಆಘಾತದಿಂದ ಪಾರು; ಪಾಕ್ಗೆ ಹ್ಯಾಟ್ರಿಕ್ ಸೋಲು first appeared on ವಿಜಯವಾಣಿ .
ಮಾಗಡಿ ಕ್ರಿಕೆಟ್ ಅಕಾಡೆಮಿಗೆ ಅರ್ಜುನ ಕಪ್
ಬೆಂಗಳೂರು: ಎಂಟು ವರ್ಷಗಳ ಕಾಲ ದಸರಾ ಅಂಬಾರಿ ಹೊತ್ತ ಅರ್ಜುನ ಆನೆಯ ಸ್ಮರಣಾರ್ಥ ನಡೆದ ಎವಿಆರ್-ಅರ್ಜುನ ಕಪ್ 14 ವಯೋಮಿತಿ ಕ್ರಿಕೆಟ್ ಟೂರ್ನಿಯಲ್ಲಿ ಮಾಗಡಿ ಕ್ರಿಕೆಟ್ ಅಕಾಡೆಮಿ ತಂಡ ಪ್ರಶಸ್ತಿ ಗೆದ್ದುಕೊಂಡಿದೆ. ಸತ್ವ ಗ್ಲೋಬಲ್ ಸಿಟಿ ಗ್ರೌಂಡ್ನಲ್ಲಿ ಮಂಗಳವಾರ ನಡೆದ ಫೈನಲ್ ಪಂದ್ಯದಲ್ಲಿ ಮಾಗಡಿ ತಂಡ ಪ್ಲೇ ಸ್ಮಾರ್ಟ್ ಕ್ರಿಕೆಟ್ ಅಕಾಡೆಮಿ ತಂಡವನ್ನು 2 ರನ್ಗಳಿಂದ ರೋಚಕವಾಗಿ ಮಣಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಮಾಗಡಿ ಕ್ರಿಕೆಟ್ ಅಕಾಡೆಮಿ ತಂಡ, ಜಸ್ಪ್ರೀತ್ (36ಕ್ಕೆ 3), ಅಥರ್ವ ಕರಡಿ (40ಕ್ಕೆ […] The post ಮಾಗಡಿ ಕ್ರಿಕೆಟ್ ಅಕಾಡೆಮಿಗೆ ಅರ್ಜುನ ಕಪ್ first appeared on ವಿಜಯವಾಣಿ .
ದಾವಣಗೆರೆ :ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಶೂ ಎಸೆದ ಘಟನೆ ಖಂಡನೀಯ, ಕಳವಳಕಾರಿ ಹಾಗೂ ಅಸಭ್ಯವಾದುದು. ಇಂತಹ ಕೃತ್ಯಗಳು ನ್ಯಾಯಾಂಗದ ಗೌರವ ಮತ್ತು ಘನತೆಗೆ ಧಕ್ಕೆಯುಂಟು ಮಾಡುತ್ತವೆ ಎಂದು ಜಿಲ್ಲಾ ವಕೀಲರ ಸಂಘದ ನಿಕಟಪೂರ್ವ ಅಧ್ಯಕ್ಷ ಎಲ್.ಎಚ್. ಅರುಣಕುಮಾರ್ ತಿಳಿಸಿದ್ದಾರೆ. ಈ ನೆಲದ ಕಾನೂನು ಹಾಗೂ ಸಂವಿಧಾನಿಕ ಸ್ಥಾನಗಳನ್ನು ಗೌರವಿಸುವುದು ಎಲ್ಲರ ಜವಾಬ್ದಾರಿ. ಆದರೆ, ಅಸಭ್ಯತೆ, ಹಿಂಸೆ, ಅವಿನಯದ ನಡೆಗಳು ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ಆಶಯಗಳಿಗೆ ಹಾನಿ ಉಂಟು ಮಾಡುತ್ತವೆ. ಸ್ವತಂತ್ರ […] The post ಶೂ ಎಸೆತ ಪ್ರಕರಣ ಖಂಡನೀಯ first appeared on ವಿಜಯವಾಣಿ .
ರಜಂಗಳ ಪೇಟೆ ನಿವಾಸಿಗಳಿಂದ ಪ್ರತಿಭಟನೆ
ಗುಳೇದಗುಡ್ಡ : ಕುಡಿಯವ ನೀರು ಪೂರೈಕೆ, ಬೀದಿ ದೀಪ, ಕಸ ವಿಲೇವಾರಿ ಸೇರಿ ಮೂಲ ಸೌಕರ್ಯ ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಿ ಪಟ್ಟಣದ ರಜಂಗಳ ಪೇಟೆಯ ಸಾರ್ವಜನಿಕರು ಬುಧವಾರ ಪುರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.ಹಲಗೆ ಬಾರಿಸುತ್ತಾ, ಖಾಲಿ ಕೊಡಗಳೊಂದಿಗೆ ಪುರಸಭೆಗೆ ಆಗಮಿಸಿ ಆಕ್ರೋಶ ವ್ಯಕ್ತಪಡಿಸಿದರು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪುರಸಭೆಗೆ ಸಾಕಷ್ಟು ಅನುದಾನ ಕೊಡುತ್ತಿದ್ದರೂ, ಪಟ್ಟಣಕ್ಕೆ ಮೂಲ ಸೌಕರ್ಯ ನೀಡುತ್ತಿಲ್ಲ. ಅಲ್ಲದೇ ಇ-&ಖಾತಾ ಯೋಜನೆ ಕೆಲಸಗಳು ಸರಿಯಾಗಿ ಮಾಡುತ್ತಿಲ್ಲ. ಇದೇ ರೀತಿ ಮುಂದುವರಿದರೆ ಸಂಬಂಧಿಸಿದ ಸಚಿವರಿಗೆ […] The post ರಜಂಗಳ ಪೇಟೆ ನಿವಾಸಿಗಳಿಂದ ಪ್ರತಿಭಟನೆ first appeared on ವಿಜಯವಾಣಿ .
ಪುಸ್ತಕ ಅಲಂಕಾರಕ್ಕಲ್ಲ, ಜ್ಞಾನವನ್ನು ಹೆಚ್ಚಿಸುವ ಸಾಧನವಾಗಬೇಕು: ಡಾ.ಎಸ್.ಶಿವರಾಜಪ್ಪ
ಮೈಸೂರು: ಪುಸ್ತಕ ಅಲಂಕಾರಕ್ಕಲ್ಲ, ಜ್ಞಾನವನ್ನು ಹೆಚ್ಚಿಸುವ ಸಾಧನವಾಗಬೇಕು ಎಂದ ನಟರಾಜ ಪ್ರತಿಷ್ಠಾನದ ವಿಶೇಷಾಧಿಕಾರಿ ಡಾ.ಎಸ್.ಶಿವರಾಜಪ್ಪ ಅಭಿಪ್ರಾಯಪಟ್ಟರು. ನಗರದ ನಟರಾಜ ಕಲ್ಯಾಣ ಮಂಟಪದಲ್ಲಿ ಸಮಾಜ ಸೇವಕ ಚಂದ್ರು ಸೇವಾ ಸಮಿತಿಯಿಂದ ಶನಿವಾರ ಆಯೋಜಿಸಿದ್ದ ಚಂದ್ರು ಅವರ ಪುಣ್ಯಸ್ಮರಣೆ ಹಾಗೂ ಸಾಹಿತಿ ನಗರ್ಲೆ ಶಿವಕುಮಾರ್ ಅವರು ರಚಿಸಿರುವ ಪ್ರತಿಬಿಂಬ ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು. ಇತ್ತೀಚೆಗೆ ಅಶ್ಲೀಲ ಸಾಹಿತ್ಯ ಬರುತ್ತಿದ್ದು, ನಮ್ಮ ಸಂಸ್ಕೃತಿ, ಪರಂಪರೆಯನ್ನು ವಿನಾಶದತ್ತ ಕೊಂಡೊಯ್ಯುತ್ತಿದೆ. ಉತ್ತಮ ಸಾಹಿತಿಗಳನ್ನು ಪ್ರೋತ್ಸಾಹಿಸುವ ಕೆಲಸವಾಗಬೇಕು ಎಂದರು. ಪುಸ್ತಕ ನಾಡು, ನುಡಿ, ಸಂಸ್ಕೃತಿ ಉಳಿಸುವಂತಾಗಬೇಕು, […] The post ಪುಸ್ತಕ ಅಲಂಕಾರಕ್ಕಲ್ಲ, ಜ್ಞಾನವನ್ನು ಹೆಚ್ಚಿಸುವ ಸಾಧನವಾಗಬೇಕು: ಡಾ.ಎಸ್.ಶಿವರಾಜಪ್ಪ first appeared on ವಿಜಯವಾಣಿ .
ಶ್ರೀಯೋಗಿ ನಾರೇಯಣ ಬಣಜಿಗ (ಬಲಿಜ) ಸಂಘದಿಂದ ಪ್ರತಿಭಾ ಪುರಸ್ಕಾರ
ಮೈಸೂರು: ಶ್ರೀಯೋಗಿ ನಾರೇಯಣ ಬಣಜಿಗ (ಬಲಿಜ) ಸಂಘದಿಂದ ಅ.12 ರಂದು ಸಮುದಾಯದ ವಧು-ವರರ ಸಮಾವೇಶ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಸರಸ್ವತಿಪುರಂ (ಕುಕ್ಕರಹಳ್ಳಿಕೆರೆ ಬಳಿ) ರಾಧಾಕೃಷ್ಣ ಮಾರ್ಗದಲ್ಲಿರುವ ಸಂಘದ ಆವರಣದಲ್ಲಿ ಕಾರ್ಯಕ್ರಮ ಜರುಗಲಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಎಚ್.ಆರ್. ಗೋಪಾಲಕೃಷ್ಣ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಬೆಳಗ್ಗೆ 10.30ಕ್ಕೆ ಮಾಜಿ ಸಚಿವ ಡಾ.ಎಂ.ಆರ್.ಸೀತಾರಾಂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತರೆಡ್ಡಿ, ಸಂಘದ ಅಧ್ಯಕ್ಷ ಎಂ.ನಾರಾಯಣ, ಗೌರವಾಧ್ಯಕ್ಷ ಎಚ್.ಎ.ವೆಂಕಟೇಶ್, ಸರ್ವ ಬಣಜಿಗ (ಜಲಿಜ) ಸಂಘದ ಅಧ್ಯಕ್ಷ ಕೆ.ಎನ್.ಮೋಹನ್ಕುಮಾರ್, […] The post ಶ್ರೀಯೋಗಿ ನಾರೇಯಣ ಬಣಜಿಗ (ಬಲಿಜ) ಸಂಘದಿಂದ ಪ್ರತಿಭಾ ಪುರಸ್ಕಾರ first appeared on ವಿಜಯವಾಣಿ .
ಹತ್ತು ದಿನಗಳಲ್ಲಿ ನಗರಕ್ಕೆ ಲಕ್ಷಾಂತರ ಜನರ ಭೇಟಿ
ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾದಲ್ಲಿ ನಗರಕ್ಕೆ ಪ್ರವಾಸಿಗರ ದಂಡೇ ಬಂದಿದ್ದು, ಕೇವಲ ಹತ್ತು ದಿನಗಳಲ್ಲಿ ಲಕ್ಷಾಂತರ ಜನರು ಭೇಟಿ ನೀಡಿದ್ದಾರೆ. ಅರಮನೆಗೆ ಹತ್ತು ದಿನಗಳಲ್ಲಿ ಭೇಟಿ ನೀಡಿದವರ ಸಂಖ್ಯೆ 3 ಲಕ್ಷ ದಾಟಿದ್ದು, ಮೃಗಾಲಯಕ್ಕೆ 1.56 ಲಕ್ಷ ಜನರು ಭೇಟಿ ನೀಡಿದ್ದಾರೆ. ಆದರೆ ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಮೃಗಾಲಯಕ್ಕೆ ಭೇಟಿ ನೀಡಿದವರ ಸಂಖ್ಯೆ 9 ಸಾವಿರ ಕಡಿಮೆಯಾಗಿದೆ. ಕಳೆದ ವರ್ಷ 1.65 ಲಕ್ಷ ಜನ ಭೇಟಿ ನೀಡಿದ್ದರು. ಅರಮನೆ, ಚಾಮುಂಡಿಬೆಟ್ಟ, ಕೆ.ಆರ್.ಎಸ್ ಸೇರಿದಂತೆ ಇನ್ನಿತರ […] The post ಹತ್ತು ದಿನಗಳಲ್ಲಿ ನಗರಕ್ಕೆ ಲಕ್ಷಾಂತರ ಜನರ ಭೇಟಿ first appeared on ವಿಜಯವಾಣಿ .
ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣಪ್ಪ ಕುರಬರ ಸೂಚನೆ ಬಸ್ ನಿಲ್ದಾಣಗಳಲ್ಲಿ ಸ್ವಚ್ಛತೆ ಕಾಪಾಡಿ
ವಿಜಯಪುರ:ಜಿಲ್ಲೆಯ ವ್ಯಾಪ್ತಿಯ ಬಸ್ ನಿಲ್ದಾಣಗಳಲ್ಲಿ ಸ್ವಚ್ಛತೆ, ಕುಡಿಯುವ ನೀರು, ಶೌಚಗೃಹ ನಿರ್ವಹಣೆಗೆ ಕ್ರಮ ತೆಗೆದುಕೊಳ್ಳಲಾಗಿದೆ. ಜತೆಗೆ ಪ್ರಯಾಣಿಕ ಸ್ನೇಹಿ ಶೌಚಗೃಹ ನಿರ್ವಹಣೆಗೆ ಕಾರ್ಮಿಕ ಇಲಾಖೆಯಡಿ ನೋಂದಾಯಿತ ಗುತ್ತಿಗೆದಾರರಿಗೆ ಇ&ಟೆಂಡರ್ ಮೂಲಕ ಆಯ್ಕೆ ಮಾಡಿ ಪರವಾನಗಿ ನೀಡಲಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣಪ್ಪ ಕುರಬರ ಹೇಳಿದರು. ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಸ್ಥಳಿಯ ವಿಭಾಗ, ಜಿಲ್ಲಾಡಳಿತ ಹಾಗೂ ರೋಟರಿ ಕ್ಲಬ್ಗಳ ಸಹಯೋಗದಲ್ಲಿ ಪ್ರಯಾಣಿಕರಲ್ಲಿ ಸ್ವಚ್ಛತೆಯ ಅರಿವು ಮೂಡಿಸುವ ಉದ್ದೇಶದಿಂದ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ […] The post ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣಪ್ಪ ಕುರಬರ ಸೂಚನೆ ಬಸ್ ನಿಲ್ದಾಣಗಳಲ್ಲಿ ಸ್ವಚ್ಛತೆ ಕಾಪಾಡಿ first appeared on ವಿಜಯವಾಣಿ .
ದಸರಾ ಮಹೋತ್ಸವಕ್ಕೆ ವಿದ್ಯುತ್ ದೀಪಾಲಂಕಾರದ ಮೆರಗು
ಮೈಸೂರು: ದಸರಾ ಮಹೋತ್ಸವಕ್ಕೆ ಮೆರುಗು ನೀಡುವ ವಿದ್ಯುತ್ ದೀಪಾಲಂಕಾರ 21 ದಿನಗಳ ಕಾಲ ಮಿನುಗಲಿದ್ದು, ಜನರನ್ನು ತನ್ನತ್ತ ಆಕರ್ಷಿಸುತ್ತಿದೆ. ನಾಡಹಬ್ಬ ದಸರೆಯ ಪ್ರಮುಖ ಆಕರ್ಷಣೆ ಜಂಬೂಸವಾರಿ, ಪಂಜಿನ ಕವಾಯತನ್ನು ಕಂಡು ಸಂತಸಗೊಂಡಿರುವ ಜನ, ಈಗ ವಿದ್ಯುತ್ ದೀಪಾಲಂಕಾರ ನೋಡಲು ಮುಗಿ ಬೀಳುತ್ತಿದ್ದಾರೆ. ವಿದ್ಯುತ್ ದೀಪಾಲಂಕಾರ ಮುಂದುವರಿದಿರುವುದರಿಂದ ದಸರಾ ಮುಗಿದರೂ ಅದರ ಸಂಭ್ರಮ ಮುಂದುವರಿದಿದೆ. 136 ಕಿ.ಮೀ ದೀಪಾಲಂಕಾರ: ದಸರಾ ಹಿನ್ನೆಲೆಯಲ್ಲಿ ಈ ಬಾರಿ ನಗರದ 136 ಕಿ.ಮೀ ವ್ಯಾಪ್ತಿಯ ರಸ್ತೆಗಳು ಹಾಗೂ 118 ವೃತ್ತಗಳಲ್ಲಿ ದೀಪಾಲಂಕಾರ ಮಾಡಲಾಗಿದೆ. […] The post ದಸರಾ ಮಹೋತ್ಸವಕ್ಕೆ ವಿದ್ಯುತ್ ದೀಪಾಲಂಕಾರದ ಮೆರಗು first appeared on ವಿಜಯವಾಣಿ .
ಅಲೆಮಾರಿಗಳಿಗೆ ಶೇ.1 ರಷ್ಟು ಪತ್ಯೇಕ ಮೀಸಲಾತಿ ನೀಡಿ
ವಿಜಯಪುರ:ಅಲೆಮಾರಿಗಳಿಗೆ ಶೇ. 1 ರಷ್ಟು ಪ್ರತ್ಯೇಕ ಮೀಸಲಾತಿ ನೀಡುವಂತೆ ಆಗ್ರಹಿಸಿ ಕರ್ನಾಟಕ ದಲಿತ ಸಂರ್ಷ ಸಮಿತಿ (ದಾದಾಸಾಹೇಬ ಡಾ. ಎಲ್. ಮೂರ್ತಿ ಸ್ಥಾಪಿತ) ವತಿಯಿಂದ ಮಂಗಳವಾರ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಿತು.ಇಲ್ಲಿನ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ಜಿಲ್ಲಾಧಿಕಾರಿ ಕಚೇರಿವರೆಗೆ ಆಗಮಿಸಿ ನಂತರ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಸಮಿತಿ ಜಿಲ್ಲಾಧ್ಯಕ್ಷ ಅಶೋಕ ಕರೆಕಲ್ಲ ಮಾತನಾಡಿ, ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿ ನೀಡುವ ನಿಟ್ಟಿನಲ್ಲಿ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್ ದಾಸ್ ಸಲ್ಲಿಸಿದ ವರದಿಯು […] The post ಅಲೆಮಾರಿಗಳಿಗೆ ಶೇ.1 ರಷ್ಟು ಪತ್ಯೇಕ ಮೀಸಲಾತಿ ನೀಡಿ first appeared on ವಿಜಯವಾಣಿ .
ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದ ಆಕರ್ಷಕ ಜಂಬೂ ಸವಾರಿಯಲ್ಲಿ ರಾಜ್ಯದಲ್ಲಿ ಗಾಂಧಿ ನಡೆದಾಡಿದ ಜಿಲ್ಲೆಗಳ ಐತಿಹಾಸಿಕ ಸ್ಥಳಗಳು ಸ್ತಬ್ಧಚಿತ್ರದಲ್ಲಿ ಬಿಂಬಿತವಾದವು. ನಾಡಹಬ್ಬದ ಮೆರವಣಿಗೆಯಲ್ಲಿ ಒಂದಕ್ಕೊಂದು ಸ್ಪರ್ಧೆಗೆ ಬಿದ್ದಂತೆ ನಿರ್ಮಿಸಲಾಗಿದ್ದ, ಸ್ತಬ್ಧಚಿತ್ರದಲ್ಲಿ ಸರ್ಕಾರದ ಪಂಚ ಗ್ಯಾರಂಟಿಗಳ ಜತೆಗೆ ಸಮಾಜ ಕಲ್ಯಾಣ ಇಲಾಖೆ ಹಾಗೂ ಅದರ ಅಡಿಯಲ್ಲಿ ಬರುವ ನಿಗಮಗಳ ಸ್ತಬ್ಧಚಿತ್ರಗಳದ್ದೇ ಪಾರುಪತ್ಯವಾಗಿತ್ತು. ಕಳೆದ ಬಾರಿ 51 ಸ್ತಬ್ಧಚಿತ್ರಗಳು ಸಾಗಿದ್ದರೆ ಈ ಬಾರಿ 62 ಸ್ತಬ್ಧಚಿತ್ರಗಳು ಭಾಗವಹಿಸಿದ್ದವು. ಅಲ್ಲದೇ ಕಲಾತಂಡಗಳು ಹೆಚ್ಚಾಗಿದ್ದರಿಂದ ಮೆರವಣಿಗೆ ಉದ್ದವಾಗಿದ್ದು, ಪುಷ್ಪಾರ್ಚನೆಗೆ ಸಮಯ […] The post ಜಂಬೂ ಸವಾರಿಯಲ್ಲಿ ‘ಗಾಂಧಿ ಸಂದೇಶ’ first appeared on ವಿಜಯವಾಣಿ .
ತ್ವರಿತ ಪರಿಹಾರ ಮತ್ತು ಪುನರ್ವಸತಿಗೆ ಮುಂದಾದ ರಾಜ್ಯ ಸರ್ಕಾರ ತುರ್ತು ಪರಿಹಾರಕ್ಕೆ ಯತ್ನಾಳ ಆಗ್ರಹ
ವಿಜಯಪುರ:ಉತ್ತರ ಕರ್ನಾಟಕದ ಭಾಗಗಳಲ್ಲಿ ಇತ್ತೀಚೆಗೆ ಸುರಿದ ಭಾರೀ ಮಳೆಯಿಂದ ಪ್ರವಾಹ ಪೀಡಿತ ಉಂಟಾದ ಪ್ರದೇಶಗಳಿಗೆ ತುರ್ತು ಪರಿಹಾರ ನೀಡುವಂತೆ ಒತ್ತಾಯಿಸಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಂಗಳವಾರ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.ಉತ್ತರ ಕರ್ನಾಟಕದ ಹಲವಾರು ಜಿಲ್ಲೆಗಳಲ್ಲಿ ಉಂಟಾಗಿರುವ ಪ್ರವಾಹದಿಂದ ದೊಡ್ಡ ಪ್ರಮಾಣದಲ್ಲಿ ಹಾನಿ ಮತ್ತು ಸ್ಥಳಾಂತರಕ್ಕೆ ಕಾರಣವಾಗಿದೆ. ಭೀಮಾ ನದಿಯ ದಡದಲ್ಲಿ ಉಂಟಾದ ಭಾರಿ ಪ್ರವಾಹವು 10 ಲ ಹೆಕ್ಟೇರ್ಗೂ ಅಧಿಕ ಪ್ರದೇಶದಲ್ಲಿ ಬೆಳೆ ನಷ್ಟಕ್ಕೆ ಕಾರಣವಾಗಿದೆ. ಅಲ್ಲದೆ, ರೈತರು […] The post ತ್ವರಿತ ಪರಿಹಾರ ಮತ್ತು ಪುನರ್ವಸತಿಗೆ ಮುಂದಾದ ರಾಜ್ಯ ಸರ್ಕಾರ ತುರ್ತು ಪರಿಹಾರಕ್ಕೆ ಯತ್ನಾಳ ಆಗ್ರಹ first appeared on ವಿಜಯವಾಣಿ .
ವಿಜಯಪುರ: ಆರ್ಎಸ್ಎಸ್ ೇತ್ರೀಯ ಕಾರ್ಯವಾಹ, ರಾಷ್ಟ್ರೀಯ ಶೈಕ್ಷಣಿಕ ಮಹಾಸಂದ ಅಖಿಲ ಭಾರತೀಯ ಅಧ್ಯ, ವಿ.ಪ. ಮಾಜಿ ಸದಸ್ಯ ಕೃ. ನರಹರಿ ಅವರ ನಿಧನ ಅಘಾತ ತಂದಿದೆ ಎಂದು ಬಿಜೆಪಿ ಜಿಲ್ಲಾಧ್ಯ ಗುರುಲಿಂಗಪ್ಪ ಅಂಗಡಿ ಹೇಳಿದರು.ನಗರದ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಸಂತಾಪ ಸೂಚಿಸಿ ಮಾತನಾಡಿದ ಅವರು, ನರಹರಿ ಅವರು ಆದರ್ಶದ ಬೆಳಕಾಗಿದ್ದವರು ಎಂದರು. ವಿ.ಪ. ಮಾಜಿ ಸದಸ್ಯ ಅರುಣ ಶಹಾಪೂರ ಮಾತನಾಡಿ, ನರಹರಿಯವರ ಅಗಲಿಕೆಯಿಂದ ಸಂ ಪರಿವಾರ, ಸಮಾಜ ಹಾಗೂ ದೇಶಕ್ಕೆ ತುಂಬಲಾರದ […] The post ಕೃ.ನರಹರಿ ನಿಧನಕ್ಕೆ ಸಂತಾಪ first appeared on ವಿಜಯವಾಣಿ .
ಕೆಎಲ್ಇ ಟೆಕ್ ವಿವಿ ಸಂಶೋಧಕರಿಗೆ ಸನ್ಮಾನ
ಹುಬ್ಬಳ್ಳಿ: ಇಲ್ಲಿಯ ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯದ ಎಂಟು ಮಂದಿ ಪ್ರಮುಖ ಸಂಶೋಧಕರು ಸ್ಟಾನ್ ಫೋರ್ಡ್ ವಿಶ್ವವಿದ್ಯಾಲಯ ಹಾಗೂ ಎಲ್ಸೆವಿಯರ್ ಪ್ರಕಟಿಸಿದ 2025ರ ವಿಶ್ವದ ಟಾಪ್ 2 ವಿಜ್ಞಾನಿಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಹಿನ್ನೆಲೆಯಲ್ಲಿ ಅವರನ್ನು ವಿಶ್ವವಿದ್ಯಾಲಯದ ವತಿಯಿಂದ ಗೌರವಿಸಲಾಯಿತು. ಡಾ. ತೇಜರಾಜ್ ಅಮ್ಮಿನಭಾವಿ, ಡಾ. ನಾಗರಾಜ ಶೆಟ್ಟಿ, ಡಾ. ಪ್ರಭುಗೌಡ ಪಾಟೀಲ, ಡಾ. ಶ್ವೇತಾ ಮಾಳೋದೆ, ಡಾ. ಮೋಹನಕೃಷ್ಣ ಗುಂಡ, ಡಾ. ವಿನಾಯಕ ಗಾಯತೊಂಡೆ, ಡಾ. ನಾಗರಾಜ ಬಾಣಾಪೂರಮಠ, ಡಾ. ಶರಣಬಸವ ಗಣಾಚಾರಿ ಅವರನ್ನು ಸನ್ಮಾನಿಸಲಾಯಿತು. ಸಂಶೋಧಕರನ್ನು […] The post ಕೆಎಲ್ಇ ಟೆಕ್ ವಿವಿ ಸಂಶೋಧಕರಿಗೆ ಸನ್ಮಾನ first appeared on ವಿಜಯವಾಣಿ .