ಹಿರಿಯರ ತ್ಯಾಗ ನೆನೆಸುವ ಕಾರ್ಯ : ಕೆ.ಟಿ.ಸುವರ್ಣ ಹೇಳಿಕೆ
ಉಳ್ಳಾಲ: ಅದೆಷ್ಟೋ ಮಂದಿಯ ತ್ಯಾಗ, ಜೀವ ಬಲಿದಾನದಿಂದ ಲಭಿಸಿದ ಸ್ವಾತಂತ್ರೃ ದಿನವನ್ನು ಸಂಭ್ರಮಿಸುವ ಜತೆ ಹಿರಿಯರ ತ್ಯಾಗ ನೆನೆಸುವ ಕಾರ್ಯವೂ ಆಗಬೇಕು, ಬಲಿಷ್ಠ ಭಾರತ ನಿರ್ಮಾಣಕ್ಕೆ ಪ್ರತಿಯೊಬ್ಬರ ಶ್ರಮ ಅಗತ್ಯ ಎಂದು ಸಮೃದ್ಧಿ ಹೌಸಿಂಗ್ ಸೊಸೈಟಿ ಗೌರವಾಧ್ಯಕ್ಷ ಕೆ.ಟಿ.ಸುವರ್ಣ ಹೇಳಿದರು. ಸಮೃದ್ಧಿ ಹೌಸಿಂಗ್ ಸೊಸೈಟಿ ಆಶ್ರಯದಲ್ಲಿ ತೊಕ್ಕೊಟ್ಟು ಗಣೇಶ್ ನಗರದಲ್ಲಿ ನಡೆದ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣಗೈದು ಮಾತನಾಡಿದರು. ಸಮೃದ್ಧಿ ಹೌಸಿಂಗ್ ಸೊಸೈಟಿ ಅಧ್ಯಕ್ಷ ಭರತ್ ಕುಮಾರ್, ಕೋಶಾಧಿಕಾರಿ ರಾಜೇಶ್ ಕೆರೆಬೈಲ್, ನಿವೃತ್ತ ಎಎಸ್ಐ ಬಾಲಕೃಷ್ಣ, ಅರುಣ್ ಕುಮಾರ್, ಸೂರ್ಯಪ್ರಕಾಶ್ […] The post ಹಿರಿಯರ ತ್ಯಾಗ ನೆನೆಸುವ ಕಾರ್ಯ : ಕೆ.ಟಿ.ಸುವರ್ಣ ಹೇಳಿಕೆ first appeared on ವಿಜಯವಾಣಿ .
Asia Cup 2025: ಇದೇ ಸೆ.9ರಿಂದ 28 ರವರೆಗೆ ದುಬೈನಲ್ಲಿ ನಡೆಯಲಿರುವ ಏಷ್ಯಾ ಕಪ್ 2025ರ ಟೂರ್ನಿಗೆ ಸದ್ಯ ಭಾರೀ ಕುತೂಹಲ ಕೆರಳಿದೆ. ನಾಯಕನಾಗಿ ಯಾರು ತಂಡವನ್ನು ಮುನ್ನಡೆಸಲಿದ್ದಾರೆ? ಯಾರೆಲ್ಲ ಸ್ಥಾನ ಪಡೆಯಲಿದ್ದಾರೆ? ಆರಂಭಿಕ ಬ್ಯಾಟರ್ಗಳು ಯಾರಿರಲಿದ್ದಾರೆ? ಎಂಬ ಹತ್ತು ಹಲವು ವಿಷಯಗಳು ಸದ್ಯ ಕ್ರಿಕೆಟ್ ಪ್ರಿಯರಲ್ಲಿ ಕಾಡುತ್ತಿದೆ. ಇದನ್ನೂ ಓದಿ:ವಿದ್ಯಾರ್ಥಿಗಳ ಭವಿಷ್ಯಕ್ಕೆ ಬೆಳಕಾಗುವ ಸಂಕಲ್ಪ : ಲಾಂಛನ ಬಿಡುಗಡೆ ಕಾರ್ಯಕ್ರಮದಲ್ಲಿ ಯುವರಾಜ್ ಜೈನ್ ಹೇಳಿಕೆ ಭಾರತದ ಟೆಸ್ಟ್ ತಂಡವನ್ನು ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಯಶಸ್ವಿಯಾಗಿ ಕೊನೆಯವರೆಗೂ […] The post ಟೀಮ್ ಇಂಡಿಯಾಗೆ ಪಂಜಾಬ್ ಕಿಂಗ್ಸ್ ಬ್ಯಾಟರ್ ಎಂಟ್ರಿ! ಇಬ್ಬರು ಸ್ಟಾರ್ ಬ್ಯಾಟರ್ಸ್ ಅಲಭ್ಯ? ಹೀಗಿದೆ ವರದಿ | Asia Cup 2025 first appeared on ವಿಜಯವಾಣಿ .
ಸೇಂಟ್ ಮೇರಿಸ್ನಲ್ಲಿ ಸಾಂಸ್ಕೃತಿಕ ಸಂಭ್ರಮ
ಕಿನ್ನಿಗೋಳಿ: ಕಿನ್ನಿಗೋಳಿ ಸೇಂಟ್ ಮೇರಿಸ್ ವಿಶೇಷ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಸೇಂಟ್ ಮಿಲಾಗ್ರಿಸ್ ಕೋ ಆಪರೇಟಿವ್ ಸೊಸೈಟಿ ಕಿನ್ನಿಗೋಳಿ ಶಾಖೆ ವತಿಯಿಂದ ಮಕ್ಕಳಿಗೆ ಉಡುಗೊರೆ ನೀಡಿ, ಸಿಹಿತಿಂಡಿ ವಿತರಿಸಲಾಯಿತು. ಕಿನ್ನಿಗೋಳಿ ಪಪಂ ಮುಖ್ಯಾಧಿಕಾರಿ ಜಯಶಂಕರ್, ಮೂಲ್ಕಿ ಠಾಣೆ ಪಿಎಸ್ಐ ಉಮೇಶ್ ಕುಮಾರ್ ಎಂ.ಎನ್., ಎ.ಎಸ್.ಐ ಹರಿಶೇಖರ್, ಶಾಲಾ ಸಂಚಾಲಕ ಫಾ.ಜೋಕಿಂ ಫರ್ನಾಂಡಿಸ್, ಮಿಲಾಗ್ರಿಸ್ ಸೊಸೈಟಿ ಕಿನ್ನಿಗೋಳಿ ಬ್ರಾಂಚ್ ಮ್ಯಾನೇಜರ್ ಮನಿಷಾ ರೈ, ಲಿಯೋ ಮಾಸ್ಕರಿನಸ್, ಹಿಲ್ಡಾ ಡಿಸೋಜ, ಶಾಲಾ ಪಾಲನ ಸಮಿತಿ […] The post ಸೇಂಟ್ ಮೇರಿಸ್ನಲ್ಲಿ ಸಾಂಸ್ಕೃತಿಕ ಸಂಭ್ರಮ first appeared on ವಿಜಯವಾಣಿ .
ಪ್ರಜಾಸೌಧ, ಪ್ರವಾಸಿ ಮಂದಿರ ಲೋಕಾರ್ಪಣೆ ಶೀಘ್ರ : ಶಾಸಕ ಉಮಾನಾಥ ಎ.ಕೋಟ್ಯಾನ್ ಮಾಹಿತಿ
ಮೂಲ್ಕಿ: ಮೂಲ್ಕಿ ತಾಲೂಕು ಅಭಿವೃದ್ಧಿಗೆ ಮಾಡಲಾದ ಪ್ರಾಮಾಣಿಕ ಪ್ರಯತ್ನದಿಂದ ಶೀಘ್ರದಲ್ಲಿ ತಾಲೂಕು ವ್ಯಾಪ್ತಿಯ ಎಲ್ಲ ಕಚೇರಿಗಳನ್ನು ಒಂದೇ ಸೂರಿನಡಿ ಕಲ್ಪಿಸುವ ನೂತನವಾಗಿ ನಿರ್ಮಾಣಗೊಂಡ ಬಹುಕೋಟಿ ವೆಚ್ಚದ ಪ್ರಜಾಸೌಧ, ನೂತನ ಪ್ರವಾಸಿ ಮಂದಿರ ಲೋಕಾರ್ಪಣೆ ನಡೆಯಲಿದೆ ಎಂದು ಶಾಸಕ ಉಮಾನಾಥ ಎ.ಕೋಟ್ಯಾನ್ ಹೇಳಿದರು. ಕಾರ್ನಾಡು ಗಾಂಧಿ ಮೈದಾನದಲ್ಲಿ ಮೂಲ್ಕಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಸ್ವಾತಂತ್ರ್ಯೋತ್ಸವದಲ್ಲಿ ಮಾತನಾಡಿದರು. ಮೂಲ್ಕಿ ತಾಲೂಕು ತಹಸೀಲ್ದಾರ್ ಶ್ರೀಧರ ಮುಂದಲಮನಿ ಧ್ವಜಾರೋಹಣ ನೆರವೇರಿಸಿದರು. ಮೂಲ್ಕಿ ನಪಂ ಅಧ್ಯಕ್ಷ ಸತೀಶ್ ಅಂಚನ್, ಮಾಜಿ […] The post ಪ್ರಜಾಸೌಧ, ಪ್ರವಾಸಿ ಮಂದಿರ ಲೋಕಾರ್ಪಣೆ ಶೀಘ್ರ : ಶಾಸಕ ಉಮಾನಾಥ ಎ.ಕೋಟ್ಯಾನ್ ಮಾಹಿತಿ first appeared on ವಿಜಯವಾಣಿ .
ಬಂಟಕಲ್ ಕಾಲೇಜು ವಿದ್ಯಾರ್ಥಿಗಳಿಗೆ ಬಹುಮಾನ
ಶಿರ್ವ: ಬಂಟಕಲ್ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮತ್ತು ಡಾಟಾ ಸೈನ್ಸ್ ವಿಭಾಗದ 2ನೇ ವರ್ಷದ ವಿದ್ಯಾರ್ಥಿಗಳಾದ ಹಿತೇಶ್ ಎ., ಯತಿಕಾ ಪಿ.ಅಮೀನ್, ಶಮಾ ಪಟವರ್ಧನ್ ಅವರು ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಹ್ಯಾಕ್ಸ್ಕೈ ಪ್ಯಾನ್ ಇಂಡಿಯಾ ಸೈಬರ್ ಸೆಕ್ಯುರಿಟಿ ಹ್ಯಾಕಥಾನ್ನಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಸೈಬರ್ ಬೆದರಿಕೆ, ತಪ್ಪು ಮಾಹಿತಿ, ಆಳವಾದ ಪತ್ತೆ ಸೇರಿದಂತೆ ಸಮಕಾಲೀನ ಡಿಜಿಟಲ್ ಭದ್ರತಾ ಸವಾಲುಗಳಿಗೆ ಅತ್ಯಾಧುನಿಕ ಪರಿಹಾರಗಳನ್ನು ಅಭಿವೃದ್ಧಿ ಪಡಿಸಲು ಈ ಸ್ಪರ್ಧೆ ಆಯೋಜಿಸಲಾಗಿತ್ತು. ಗ್ರಾಮಸಭೆಯನ್ನೇ ಮೀರಿಸಿದ […] The post ಬಂಟಕಲ್ ಕಾಲೇಜು ವಿದ್ಯಾರ್ಥಿಗಳಿಗೆ ಬಹುಮಾನ first appeared on ವಿಜಯವಾಣಿ .
ವಿದ್ಯಾರ್ಥಿಗಳಲ್ಲಿ ದೇಶ ಸೇವೆಗೈಯುವ ಸಂಕಲ್ಪ: ದೇವಿ ಕುಮಾರ್ ಕೆ.ಬಿ.ಮಚ್ಚಾರು ಹೇಳಿಕೆ
ಕಟೀಲು: ವಿದ್ಯಾರ್ಥಿಗಳು ತಮ್ಮ ಶಿಕ್ಷಣ ಮುಗಿಸಿ ಸೇನೆಗೆ ಸೇರಿ ದೇಶ ಸೇವೆ ಮಾಡುವ ಸಂಕಲ್ಪ ಮಾಡಬೇಕು, ನಮ್ಮ ದೇಶಕ್ಕೆ ಸ್ವಾತಂತ್ರೃ ತಂದು ಕೊಡಲು ಹೋರಾಡಿದ ಹೋರಾಟಗಾರರನ್ನು ಸದಾ ನೆನಪಿಸಿಕೊಳ್ಳುವುದಲ್ಲದೆ, ಭಾರತಕ್ಕೆ ನಮ್ಮಿಂದಾದ ಕೊಡುಗೆ ನೀಡಬೇಕು ಎಂದು ಭಾರತೀಯ ವಾಯು ಸೇನೆ ನಿವೃತ್ತ ಅಧಿಕಾರಿ ದೇವಿ ಕುಮಾರ್ ಕೆ.ಬಿ.ಮಚ್ಚಾರು ಹೇಳಿದರು. ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಹಾಗೂ ಸಮೂಹ ಶಿಕ್ಷಣ ಸಂಸ್ಥೆಗಳ ಎರಡು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳ ಸಮ್ಮುಖದಲ್ಲಿ ಕಟೀಲು ರಥಬೀದಿಯಲ್ಲಿ ಸ್ವಾತಂತ್ರ್ಯೋತ್ಸವ ಧ್ವಜಾರೋಹಣಗೈದು ಮಾತನಾಡಿದರು. ದೇಗುಲದ ಆಡಳಿತ ಮಂಡಳಿ […] The post ವಿದ್ಯಾರ್ಥಿಗಳಲ್ಲಿ ದೇಶ ಸೇವೆಗೈಯುವ ಸಂಕಲ್ಪ: ದೇವಿ ಕುಮಾರ್ ಕೆ.ಬಿ.ಮಚ್ಚಾರು ಹೇಳಿಕೆ first appeared on ವಿಜಯವಾಣಿ .
ವಿದ್ಯಾರ್ಥಿಗಳ ಭವಿಷ್ಯಕ್ಕೆ ಬೆಳಕಾಗುವ ಸಂಕಲ್ಪ : ಲಾಂಛನ ಬಿಡುಗಡೆ ಕಾರ್ಯಕ್ರಮದಲ್ಲಿ ಯುವರಾಜ್ ಜೈನ್ ಹೇಳಿಕೆ
ಮೂಡುಬಿದಿರೆ: ದೇಹಕ್ಕೆ ಶಿರ ಪ್ರಧಾನವೆಂಬತೆ, ಸಂಸ್ಥೆಯ ಉದ್ದೇಶ, ಸಂಕಲ್ಪ, ಬದ್ಧತೆಗಳ ಸಂದೇಶವನ್ನು ಹೊಂದಿದ ಲಾಂಛನ ಸಂಸ್ಥೆಗೆ ಶಿರೋಭೂಷಣವಿದ್ದಂತೆ. ಬೆಳಕಿನ ಪ್ರತೀಕ ಎಕ್ಸಲೆಂಟ್ ಲಾಂಛನದಲ್ಲಿ ಪುಸ್ತಕದ ಸಂಸ್ಕಾರ ಜ್ಯೋತಿಯ ಬೆಳಕಿದೆ. ವಿದ್ಯಾರ್ಥಿಗಳ ಭವಿಷ್ಯಕ್ಕೆ ಬೆಳಕೆನ್ನುವ ಸಂಕಲ್ಪವಿದೆ ಎಂದು ಎಕ್ಸಲೆಂಟ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಯುವರಾಜ್ ಜೈನ್ ಹೇಳಿದರು. ಕಲ್ಲಬೆಟ್ಟು ಎಕ್ಸಲೆಂಟ್ ಸಂಸ್ಥೆಗಳ ನೂತನ ಲಾಂಛನ ಅನಾವರಣ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮೂಡುಬಿದಿರೆ ತಹಸೀಲ್ದಾರ್ ಶ್ರೀಧರ್ ಎಸ್.ಮುಂದಲಮನಿ ಲಾಂಛನ ಅನಾವರಣಗೊಳಿಸಿದರು. ಮಾಜಿ ಸಚಿವ, ಸಂಸ್ಥೆಯ ಗೌರವಾಧ್ಯಕ್ಷ ಕೆ.ಅಭಯಚಂದ್ರ ಜೈನ್, […] The post ವಿದ್ಯಾರ್ಥಿಗಳ ಭವಿಷ್ಯಕ್ಕೆ ಬೆಳಕಾಗುವ ಸಂಕಲ್ಪ : ಲಾಂಛನ ಬಿಡುಗಡೆ ಕಾರ್ಯಕ್ರಮದಲ್ಲಿ ಯುವರಾಜ್ ಜೈನ್ ಹೇಳಿಕೆ first appeared on ವಿಜಯವಾಣಿ .
ವಿದ್ಯಾರ್ಥಿಯ ಸಾಮರ್ಥ್ಯ ಪೋಷಿಸುವ ಕಾರ್ಯ : ಟೆಡ್ಎಕ್ಸ್ ಎಐಇಟಿ ಕಾರ್ಯಕ್ರಮ ಉದ್ಘಾಟಿಸಿ ಗಣೇಶ್ ಕಾರ್ಣಿಕ್ ಹೇಳಿಕೆ
ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ ಶಿಕ್ಷಣವೆಂಬುದು ಕೇವಲ ಪದವಿ ಅಥವಾ ಉದ್ಯೋಗಕ್ಕೆ ಸೀಮಿತವಾಗಬಾರದು. ಅದು ವಿದ್ಯಾರ್ಥಿಯೊಳಗಿನ ಅಸಾಧಾರಣ ಸಾಮರ್ಥ್ಯವನ್ನು ಪೋಷಿಸಿ, ಮಾನವೀಯ ಮೌಲ್ಯ ಬೆಳೆಸುವ ಶಕ್ತಿಯಾಗಿ ಕೆಲಸ ಮಾಡಬೇಕು. ಆಳ್ವಾಸ್ ಸಂಸ್ಥೆ ಇಂತಹ ಅವಕಾಶಗಳ ಮಹಾಪೂರವನ್ನು ತನ್ನ ವಿದ್ಯಾರ್ಥಿಗಳಿಗೆ ಒದಗಿಸುತ್ತಿದೆ. ಪ್ರತಿಯೊಬ್ಬರಲ್ಲೂ ಅಡಗಿರುವ ಶಕ್ತಿ ಮತ್ತು ಪ್ರತಿಭೆ ಹೊರತೆಗೆಯುವುದು ನಿಜವಾದ ಶಿಕ್ಷಣದ ಧ್ಯೇಯವಾಗಬೇಕು ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಗಣೇಶ್ ಕಾರ್ಣಿಕ್ ಹೇಳಿದರು. ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ಚೊಚ್ಚಲ ಬಾರಿಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆತಿಥ್ಯದಲ್ಲಿ ಜ್ಞಾನ, ಅನುಭವ […] The post ವಿದ್ಯಾರ್ಥಿಯ ಸಾಮರ್ಥ್ಯ ಪೋಷಿಸುವ ಕಾರ್ಯ : ಟೆಡ್ಎಕ್ಸ್ ಎಐಇಟಿ ಕಾರ್ಯಕ್ರಮ ಉದ್ಘಾಟಿಸಿ ಗಣೇಶ್ ಕಾರ್ಣಿಕ್ ಹೇಳಿಕೆ first appeared on ವಿಜಯವಾಣಿ .
ಸಹಕಾರ ಸಂಸ್ಥೆಗಳಿಗೆ ನಂಬಿಕೆಯೇ ಜೀವಾಳ
ಸಾಗರ: ಸಹಕಾರ ಕಾನೂನುಗಳಲ್ಲಿ ಹೆಚ್ಚು ಬದಲಾವಣೆಗಳು ಆಗುತ್ತಿವೆ. ಗ್ರಾಹಕರಿಗೆ ಕಾನೂನು ಬಗ್ಗೆ ಪ್ರಾಥಮಿಕ ಮಾಹಿತಿ ನೀಡುವುದು ಸಹಕಾರ ಸಂಸ್ಥೆಗಳ ಕರ್ತವ್ಯ ಎಂದು ಸಾಗರ ಪಟ್ಟಣ ಹೌಸ್ ಬಿಲ್ಡಿಂಗ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಕೆ.ಸತೀಶ್ ಹೇಳಿದರು. ನಗರದ ಶಾರದಾಂಬಾ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ಸಾಗರ ಟೌನ್ ಹೌಸ್ ಬಿಲ್ಡಿಂಗ್ ಸೊಸೈಟಿ ಸರ್ವಸದಸ್ಯರ ಸಭೆಯಲ್ಲಿ ಸಾಧಕರಿಗೆ ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿ, ಸಹಕಾರ ಸಂಸ್ಥೆಗಳಿಗೆ ನಂಬಿಕೆಯೇ ಜೀವಾಳ ಎಂದು ತಿಳಿಸಿದರು. 68 ವರ್ಷಗಳಿಂದ ನಮ್ಮ ಸಂಸ್ಥೆ ಗೃಹ […] The post ಸಹಕಾರ ಸಂಸ್ಥೆಗಳಿಗೆ ನಂಬಿಕೆಯೇ ಜೀವಾಳ first appeared on ವಿಜಯವಾಣಿ .
ಕೈಲಾಗದವರ ಕೊನೆಯ ಅಸ್ತ್ರವೇ ಆಪಪ್ರಚಾರ; ರಾಹುಲ್ ಗಾಂಧಿ ವಿರುದ್ದ ಅಶೋಕ್ ವಾಗ್ದಾಳಿ
ಬೆಂಗಳೂರು: ಕೈಲಾಗದವರ ಕೊನೆಯ ಅಸ್ತ್ರವೇ ಆಪಪ್ರಚಾರ ಎಂದು ರಾಹುಲ್ ಗಾಂಧಿ ಅವರ ವಿರುದ್ದ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ. ಎಕ್ಸ್ನಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಚುನಾವಣಾ ಆಯೋಗ ಮತ್ತು ಮತದಾರರ ಪಟ್ಟಿಯ ಬಗ್ಗೆ ಮಾಡಿರುವ ಆರೋಪಗಳು ಆಧಾರರಹಿತ ಮತ್ತು ಸುಳ್ಳು ಎಂದಿದ್ದಾರೆ. ಒಂದು ವೇಳೆ ನಿಮ್ಮ ಆರೋಪಗಳಿಗೆ ಪುರಾವೆ ಇದ್ದರೆ, ಮುಂದಿನ 7 ದಿನಗಳಲ್ಲಿ ಅಫಿಡವಿಟ್ ಸಲ್ಲಿಸಿ, ಇಲ್ಲದಿದ್ದರೆ ಇಡೀ ದೇಶಕ್ಕೆ ಕ್ಷಮೆಯಾಚಿಸಬೇಕು ಎಂದು ರಾಹುಲ್ ಗಾಂಧಿ ಅವರಿಗೆ ಚುನಾವಣಾ ಆಯೋಗ […] The post ಕೈಲಾಗದವರ ಕೊನೆಯ ಅಸ್ತ್ರವೇ ಆಪಪ್ರಚಾರ; ರಾಹುಲ್ ಗಾಂಧಿ ವಿರುದ್ದ ಅಶೋಕ್ ವಾಗ್ದಾಳಿ first appeared on ವಿಜಯವಾಣಿ .
ಮಾನಸಿಕ, ದೈಹಿಕ ಸದೃಢತೆಗೆ ಕರಾಟೆ ಸಹಕಾರಿ
ಹನೂರು: ಪ್ರತಿಯೊಬ್ಬರೂ ಶ್ರದ್ಧೆಯಿಂದ ತರಬೇತಿ ಪಡೆಯುವುದರ ಮೂಲಕ ಉತ್ತಮ ಕರಾಟೆ ಪಟುಗಳಾಗಿ ಹೊರಹೊಮ್ಮಬೇಕು ಎಂದು ಶಾಸಕ ಎಂ.ಆರ್ ಮಂಜುನಾಥ್ ತಿಳಿಸಿದರು. ಪಟ್ಟಣದ ಶ್ರೀ ಮಹದೇಶ್ವರ ಕ್ರೀಡಾಂಗಣದಲ್ಲಿ ಭಾನುವಾರ ಗುರು ಪರಶುರಾಮ ಕರಾಟೆ ಅಕಾಡೆಮಿ ವತಿಯಿಂದ ಕರಾಟೆ ತರಬೇತಿಯಲ್ಲಿ ಪ್ರಾವಿಣ್ಯ ಮತ್ತು ಉತ್ತಮ ಕೌಶಲ ಹೊಂದಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು. ಮಾನಸಿಕ ಹಾಗೂ ದೈಹಿಕ ಸದೃಢತೆಗೆ ಕ್ರೀಡೆ ಎಷ್ಟು ಅಗತ್ಯವೋ ಅದೇ ರೀತಿ ಕರಾಟೆ ಕೂಡ ಒಂದು. ಕರಾಟೆ ಕಲಿಯುವುದರಿಂದ ಜೀವನದಲ್ಲಿ ಧೈರ್ಯ ತಂದುಕೊಡುತ್ತದೆ. ಜೀವಕ್ಕೆ […] The post ಮಾನಸಿಕ, ದೈಹಿಕ ಸದೃಢತೆಗೆ ಕರಾಟೆ ಸಹಕಾರಿ first appeared on ವಿಜಯವಾಣಿ .
ಈಶ್ವರಮಂಗಲದಲ್ಲಿ ಮೊಸರು ಕುಡಿಕೆ ಉತ್ಸವ
ಪುತ್ತೂರು ಗ್ರಾಮಾಂತರ: ಈಶ್ವರಮಂಗಲ ಜಾಗೃತ ಹಿಂದು ಜಾಗರಣ ಸಂಟನೆ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯಕ್ತ 10ನೇ ವರ್ಷದ ಈಶ್ವರಮಂಗಲ ಮೊಸರುಕುಡಿಕೆ ಉತ್ಸವ ಸಾರ್ವಜನಿಕ ಸತ್ಯನಾರಾಯಣ ಪೂಜೆ, ಶ್ರೀಕೃಷ್ಣ ವೇಷಧಾರಿ ಪುಟಾಣಿಗಳ ಬೃಹತ್ ಶೋಭಾಯಾತ್ರೆ, ಶ್ರೀಕೃಷ್ಣ ನೃತ್ಯೋತ್ಸವ, ಅಟ್ಟಿಮಡಿಕೆ ಕಬಾತ್ ಒಡೆಯುವ ಸಾಹಸಮಯ ಸ್ಪರ್ಧೆಗಳೊಂದಿಗೆ ನಡೆಯಿತು. ಉದ್ಯಮಿ ಕೃಷ್ಣ ಭಟ್ ಕೊಂಬೆಟ್ಟು ಶೋಭಾಯಾತ್ರೆಗೆ ಚಾಲನೆ ನೀಡಿದರು. ಈಶ್ವರಮಂಗಲ ಪೇಟೆಯಲ್ಲಿ ಅಟ್ಟಿಮಡಿಕೆ ಹೊಡೆಯುವುದರೊಂದಿಗೆ ಸಾಗಿದ ಭವ್ಯ ಶೋಭಾಯಾತ್ರೆ ಪಂಚಲಿಂಗೇಶ್ವರ ದೇವಸ್ಥಾನದ ತನಕ ನಡೆಯಿತು. ಬಳಿಕ ದೇವಸ್ಥಾನ ವಠಾರದಲ್ಲಿ ಬೃಹತ್ ಕಬಾತ್ […] The post ಈಶ್ವರಮಂಗಲದಲ್ಲಿ ಮೊಸರು ಕುಡಿಕೆ ಉತ್ಸವ first appeared on ವಿಜಯವಾಣಿ .
ತಂತ್ರಜ್ಞಾನ ಕ್ರಾಂತಿಗೆ ರಾಜೀವ್ ಗಾಂಧಿ ಬುನಾದಿ
ಬೆಂಗಳೂರು: ದೇಶದ ಯುವಕರಿಗೆ 18ನೇ ವಯಸ್ಸಿಗೆ ಮತದಾನದ ಹಕ್ಕು ಮತ್ತು ತಂತ್ರಜ್ಞಾನ ಕ್ರಾಂತಿಗೆ ಬುನಾದಿ ಹಾಕಿದ್ದು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಮರಿಸಿದ್ದಾರೆ. ನಗರದ ಕಂಠೀರವ ಸ್ಟೇಡಿಯಂ ಬಳಿ ಭಾನುವಾರ ಆಯೋಜಿಸಿದ್ದ ‘ರನ್ ಫಾರ್ ರಾಜೀವ್’ ಮ್ಯಾರಥಾನ್ಗೆ ಚಾಲನೆ ನೀಡಿ ಮಾತನಾಡಿದರು. ನಾನು ಚಿಕ್ಕ ವಯಸ್ಸಿನಲ್ಲಿ 10-15 ಕಿ.ಮೀ ಓಡುತ್ತಿದ್ದೆ. ಯುವಕರಿಗೆ 21 ವರ್ಷಕ್ಕೆ ಮತದಾನದ ಹಕ್ಕು ನೀಡಲಾಗಿತ್ತು. ಅದನ್ನು 18 ವರ್ಷಕ್ಕೆ ಇಳಿಸಿದ್ದು ರಾಜೀವ್ ಗಾಂಧಿ. ಈ ನಿರ್ಧಾರವನ್ನು ಪ್ರತಿಪಕ್ಷದವರು […] The post ತಂತ್ರಜ್ಞಾನ ಕ್ರಾಂತಿಗೆ ರಾಜೀವ್ ಗಾಂಧಿ ಬುನಾದಿ first appeared on ವಿಜಯವಾಣಿ .
ಸರ್ವರ್ ಸಮಸ್ಯೆ ನೀಗಿಸಲು ಕ್ರಮಕ್ಕೆ ಮುಂದಾದ ಸರ್ಕಾರ: ಸುರಕ್ಷತೆಗೂ ಆದ್ಯತೆ ನೀಡಲು ಸೂಚನೆ
ಬೆಂಗಳೂರು: ಕಂದಾಯ ಇಲಾಖೆಯಲ್ಲಿ ಡಿಜಿಟಲೀಕರಣ ಮೂಲಕ ಆಧುನೀಕರಣ ಹೆಚ್ಚುತ್ತಿರುವ ಬೆನ್ನಲ್ಲಿಯೇ ಸರ್ವರ್ ಸಮಸ್ಯೆಯೂ ಕಾಡತೊಡಗಿದೆ. ಯಾವುದೇ ಒತ್ತಡಗಳನ್ನು ನಿಭಾಯಿಸುವ ನಿಟ್ಟಿನಲ್ಲಿ ಸರ್ವರ್ಗಳು ಕೆಲಸ ಮಾಡುವಂತ ವ್ಯವಸ್ಥೆ ಆಗಬೇಕು. ಆರ್ಟಿಫಿಷಿಯಲ್ ಇಂಟಲ್ಜೆನ್ಸಿ ಮೂಲಕ ಹ್ಯಾಕ್ ಮಾಡುವ ಪ್ರಯತ್ನಗಳನ್ನು ವಿಲಗೊಳಿಸಬೇಕು. ನಮ್ಮ ತಂತ್ರಾಂಶಗಳು ಎಲ್ಲವೂ ಭದ್ರವಾಗಿರಬೇಕು. ಈ ನಿಟ್ಟಿನಲ್ಲಿ ಅಗತ್ಯವಿರುವ ಎಲ್ಲಾ ರೀತಿಯ ಕ್ರಮ ತೆಗೆದುಕೊಳ್ಳಬೇಕು ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ಅವರು ಕಟ್ಟು ನಿಟ್ಟಿನ ಸೂಚನೆ ನೀಡಿದ್ದಾರೆ. ನೋಂದಣಿ ಇಲಾಖೆಯಲ್ಲಿಯೂ ಮಹತ್ವದ ಕ್ರಮಗಳನ್ನು ತೆಗೆದುಕೊಳ್ಳಲಾಗಿದ್ದು, ಸಾರ್ವಜನಿಕವಾಗಿ ಉತ್ತಮ […] The post ಸರ್ವರ್ ಸಮಸ್ಯೆ ನೀಗಿಸಲು ಕ್ರಮಕ್ಕೆ ಮುಂದಾದ ಸರ್ಕಾರ: ಸುರಕ್ಷತೆಗೂ ಆದ್ಯತೆ ನೀಡಲು ಸೂಚನೆ first appeared on ವಿಜಯವಾಣಿ .
ರಸ್ತೆಯಲ್ಲಿ ನೀರು ನಿಂತು ಸಂಚಾರಕ್ಕೆ ತೊಂದರೆ
ಹನೂರು: ತಾಲೂಕಿನ ಮಂಗಲ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಸಮೀಪದಲ್ಲಿ ರೈತರು ಜಮೀನುಗಳಿಗೆ ತೆರಳುವ ರಸ್ತೆಯಲ್ಲಿ ನೀರು ನಿಲ್ಲುವಂತಾಗಿದ್ದು, ಸಂಚರಿಸಲು ತುಂಬ ತೊಂದರೆಯಾಗಿದೆ ಎಂದು ರೈತರು ದೂರಿದ್ದಾರೆ. ಹಿಂದೆ ಈ ರಸ್ತೆಯು (ಓಣಿ) ಸಮತಟ್ಟಿನಿಂದ ಕೂಡಿತ್ತು. ಮಳೆಗಾಲದ ವೇಳೆ ಯಥೇಚ್ಛವಾದ ನೀರು ಈ ರಸ್ತೆಯ ಮೂಲಕ ಗ್ರಾಮದ ಕೆರೆಗೆ ಹರಿದು ಬರುತ್ತಿತ್ತು. ಆದರೆ ಕಳೆದ ನಾಲ್ಕೈದು ವರ್ಷದ ಹಿಂದೆ ಖಾಸಗಿ ವ್ಯಕ್ತಿಯೊಬ್ಬರೂ ಲೇಔಟ್ ನಿರ್ಮಿಸಿದ ಪರಿಣಾಮ ಈ ರಸ್ತೆಗೆ ಮಣ್ಣು ಸುರಿದು ಎತ್ತರ ಮಾಡಿದ್ದಾರೆ. ಪಕ್ಕದಲ್ಲಿ ಚರಂಡಿ ನಿರ್ಮಿಸಿದರೂ […] The post ರಸ್ತೆಯಲ್ಲಿ ನೀರು ನಿಂತು ಸಂಚಾರಕ್ಕೆ ತೊಂದರೆ first appeared on ವಿಜಯವಾಣಿ .
ವಿದ್ಯಾರ್ಥಿಗಳು ಮೈಗೂಡಿಸಿ ಯೋಧರ ಆದರ್ಶ : ಚಾರುಕೀರ್ತಿ ಭಟ್ಟಾರಕ ಶ್ರೀ ಆಶೀರ್ವಚನ
ಬೆಳ್ತಂಗಡಿ: ಪ್ರಕೃತಿ ಆಸ್ವಾದನೆಯು ನಮ್ಮ ಮನಸ್ಸಿಗೆ ಮುದ ನೀಡಲಿದ್ದು, ಪೂರ್ವಜರು ಕಾಪಾಡಿಕೊಂಡು ಬಂದ ಪ್ರಕೃತಿಯನ್ನು ಉಳಿಸುವ ಜವಾಬ್ದಾರಿ ನಮ್ಮ ಮೇಲಿದೆ. ಯೋಧರು ದೇಶ ಕಾಯುವ ಜತೆಗೆ ಪ್ರಕೃತಿ ಆರಾಧಕರಾಗಿದ್ದು, ವಿದ್ಯಾರ್ಥಿಗಳು ಯೋಧರ ಆದರ್ಶಗಳನ್ನು ಮೈಗೂಡಿಸಿ ಶೈಕ್ಷಣಿಕ ಸಾಧನೆ ಮಾಡಬೇಕು ಎಂದು ಮೂಡುಬಿದರೆ ಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟರಕ ಸ್ವಾಮೀಜಿ ನುಡಿದರು. ಎಕ್ಸೆಲ್ ಸಮೂಹ ವಿದ್ಯಾಸಂಸ್ಥೆಗಳ ವತಿಯಿಂದ ಕಾಲೇಜಿನ ಅರಮಲೆಬೆಟ್ಟ ಕ್ಯಾಂಪಸ್ನಲ್ಲಿ ಶನಿವಾರ ನಡೆದ ರಕ್ಷಕ ನಮನ 2025 ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ವಿಶ್ರಾಂತ ಶಿಕ್ಷಕ ಕಜಂಪಾಡಿ ಸುಬ್ರಹ್ಮಣ್ಯ […] The post ವಿದ್ಯಾರ್ಥಿಗಳು ಮೈಗೂಡಿಸಿ ಯೋಧರ ಆದರ್ಶ : ಚಾರುಕೀರ್ತಿ ಭಟ್ಟಾರಕ ಶ್ರೀ ಆಶೀರ್ವಚನ first appeared on ವಿಜಯವಾಣಿ .
ಬೆಂಗಳೂರು: ಜನರೊಂದಿಗೆ ಜನತಾದಳ ಅಭಿಯಾನ ನಡೆಸುತ್ತಿರುವ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಅವರು 55 ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರವಾಸ ಮುಗಿಸಿದ್ದು, ಮುಂದಿನ ಭಾಗವಾಗಿ ಮೈಸೂರು ಜಿಲ್ಲೆಯಲ್ಲಿ ಅಭಿಯಾನ ಮುಂದುವರಿಸಲಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಈಗಾಗಲೇ ನೆಲಮಂಗಲ ವಿಧಾನಸಭಾ ಕ್ಷೇತ್ರದಲ್ಲಿ ಅಭಿಯಾನ ನಡೆದಿದ್ದು, ಈ ವಾರದೊಳಗೆ ಯಶವಂತಪುರ ಕ್ಷೇತ್ರದಲ್ಲಿ ಅಭಿಯಾನ ಆಯೋಜಿಸಲು ಸಿದ್ಧತೆಗಳು ಬಿರುಸಿನಿಂದ ನಡೆಯುತ್ತಿವೆ. ವಿಧಾನಸಭೆ ಅಧಿವೇಶನ ಮುಗಿದ ಮೇಲೆ ಮೈಸೂರು ಜಿಲ್ಲೆಯಲ್ಲಿ ಪ್ರವಾಸ ಹಮ್ಮಿಕೊಳ್ಳುವಂತೆ ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರು ಸಲಹೆ ನೀಡಿರುವ ಹಿನ್ನೆಲೆಯಲ್ಲಿ […] The post ಜನರೊಂದಿಗೆ ಜನತಾದಳ ಅಭಿಯಾನ: 55 ವಿಧಾನಸಭಾ ಕ್ಷೇತ್ರದಲ್ಲಿ ಮುಗಿದ ಪ್ರವಾಸ, 7 ಸಾವಿರ ಕಿ.ಮೀ.ಸುತ್ತಾಟ, ಮೈಸೂರಿನಲ್ಲಿ ಸಭೆ first appeared on ವಿಜಯವಾಣಿ .
ಗ್ರಾಮಸಭೆಯನ್ನೇ ಮೀರಿಸಿದ ವಾರ್ಡ್ ಸಭೆ
ಹರಿಪ್ರಸಾದ್ ನಂದಳಿಕೆ ಶಿರ್ವ ಗ್ರಾಮಸಭೆಗಳಲ್ಲಿ ಬೆರಳೆಣಿಕೆಯಷ್ಟೇ ಊರಿನ ಗ್ರಾಮಸ್ಥರು ಭಾಗವಹಿಸುತ್ತಾರೆ. ಕೆಲವು ಕಡೆಗಳಲ್ಲಿ ಕಾಟಾಚಾರಕ್ಕೆ ಗ್ರಾಮಸಭೆಗಳು ನಡೆಯುತ್ತವೆ. ಆದರೆ ಶಿರ್ವ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದ ವಾರ್ಡ್ ಸಭೆ ಉಡುಪಿ ಜಿಲ್ಲೆಯಲ್ಲಿಯೇ ವಾದರಿ ವಾರ್ಡ್ ಸಭೆಯಾಗಿ ಗಮನ ಸೆಳೆದಿದೆ. ಗ್ರಾಮಸಭೆಯ ಪೂರ್ವಭಾವಿಯಾಗಿ ನಡೆಯುವ ವಾರ್ಡ್ ಸಭೆಗಳು ಕಾಟಾಚಾರಕ್ಕೆ ನಡೆಯುತ್ತವೆ. ಈ ಸಭೆಗೆ ವಾರ್ಡ್ ಪ್ರತಿನಿಧಿಗಳೇ ಗೈರಾಗುತ್ತಾರೆ. ಕೆಲವೇ ಕೆಲ ಅಧಿಕಾರಿಗಳು ಭಾಗವಹಿಸಿ ಮಾಹಿತಿ ನೀಡುತ್ತಾರೆ. ಆದರೆ ಇತ್ತೀಚೆಗೆ ನಡೆದ ಶಿರ್ವದ ವಾರ್ಡ್ 1 ಮತ್ತು 19ರ ಬಂಟಕಲ್ಲು […] The post ಗ್ರಾಮಸಭೆಯನ್ನೇ ಮೀರಿಸಿದ ವಾರ್ಡ್ ಸಭೆ first appeared on ವಿಜಯವಾಣಿ .
ಸಮಾಜ ಒಗ್ಗೂಡಿಸುವಲ್ಲಿ ಭಜನೆಯ ಪಾತ್ರ ಪ್ರಮುಖ; ಡಾ.ವಾದಿರಾಜ ತಾಯಲೂರು ಅಭಿಮತ
ಬೆಂಗಳೂರು : ಸನಾತನ ಧರ್ಮ, ಸಂಸ್ಕೃತಿ ಉಳಿವಿಗೆ ಭಜನೆ ಬಹಳ ಪ್ರಮುಖ ಮಾಧ್ಯಮವಾಗಿದ್ದು, ಸಮಜಾವನ್ನು ಒಗ್ಗೂಡಿಸುವಲ್ಲಿ ಭಜನೆಯ ಪಾತ್ರ ಪ್ರಮುಖವಾಗಿದೆ ಎಂದು ಶ್ರೀನಿವಾಸ ಉತ್ಸವ ಬಳಗದ ಸಂಸ್ಥಾಪಕ ಅಧ್ಯಕ್ಷ ಡಾ.ವಾದಿರಾಜ ತಾಯಲೂರು ಹೇಳಿದ್ದಾರೆ. ಬಸವನಗುಡಿಯ ಗೋವರ್ಧನ ಕ್ಷೇತ್ರ ಪುತ್ತಿಗೆ ಮಠ ಮತ್ತು ಅಮೃತ ಶಿಶು ನಿವಾಸದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಅಖಿಲ ಕರ್ನಾಟಕ ಭಜನಾ ಪರಿಷತ್ತು ಮತ್ತು 20ನೇ ಸಾರ್ವಜನಿಕ ಕೃಷ್ಣ ಜನ್ಮಾಷ್ಟಮಿ ಉತ್ಸವ ಸಮಿತಿ ಜಂಟಿಯಾಗಿ ಆಯೋಜಿಸಿದ್ದ ಭಜನಾ ಸ್ಪರ್ಧೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ವಿವಿಧ […] The post ಸಮಾಜ ಒಗ್ಗೂಡಿಸುವಲ್ಲಿ ಭಜನೆಯ ಪಾತ್ರ ಪ್ರಮುಖ; ಡಾ.ವಾದಿರಾಜ ತಾಯಲೂರು ಅಭಿಮತ first appeared on ವಿಜಯವಾಣಿ .
ನಿರಂತರ ಅನ್ನ, ಹಣ ಪಡೆಯಲು ಶಿಕ್ಷಣ ಅಗತ್ಯ
ಹುಬ್ಬಳ್ಳಿ: ವ್ಯಕ್ತಿಯೊಬ್ಬರಿಗೆ ಒಂದು ದಿನ ಅನ್ನ ಮತ್ತು ಹಣ ನೀಡಬಹುದು. ನಿರಂತರವಾಗಿ ನೀಡಲಾಗುವುದಿಲ್ಲ. ಆ ವ್ಯಕ್ತಿಯೇ ನಿರಂತರವಾಗಿ ಅನ್ನ ಮತ್ತು ಹಣ ಪಡೆಯುವಂತಾಗಲು ವಿದ್ಯಾದಾನ ಮಾಡಬೇಕು ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ ಅಭಿಪ್ರಾಯಪಟ್ಟರು. ತಾಲೂಕಿನ ವರೂರಿನ ನವಗ್ರಹ ತೀರ್ಥದ ಸಭಾಭವನದಲ್ಲಿ ಎಸ್ಡಿಎಂ ಜೈನ ಮಠ ಟ್ರಸ್ಟ್ ವತಿಯಿಂದ ಭಾನುವಾರ ಏರ್ಪಡಿಸಿದ್ದ ಎಜಿಎಂ ರೂರಲ್ ಅಭಿಯಾಂತ್ರಿಕ ಮತ್ತು ತಾಂತ್ರಿಕ ಮಹಾವಿದ್ಯಾಲಯದ ಹೊಸ ಕಟ್ಟಡ ನಿರ್ಮಾಣಕ್ಕೆ ನವರತ್ನ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವ್ಯಕ್ತಿಯ ಬಳಿ ಎಷ್ಟು […] The post ನಿರಂತರ ಅನ್ನ, ಹಣ ಪಡೆಯಲು ಶಿಕ್ಷಣ ಅಗತ್ಯ first appeared on ವಿಜಯವಾಣಿ .
ಎಂಎಸ್ಪಿಸಿ ಸಂಸ್ಥೆ ಸದಸ್ಯರಿಗೆ ತರಬೇತಿ
ಕುಶಾಲನಗರ: ಶಿಶು ಅಭಿವೃದ್ಧಿ ಯೋಜನಾ ಇಲಾಖೆ, ಮಹಿಳೆಯರು ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಅಂಗನವಾಡಿ ಫಲಾನುಭವಿಗಳಿಗೆ ಪೂರೈಕೆಯಾಗುವ ಪೂರಕ ಪೌಷ್ಟಿಕ ಆಹಾರ ಪದಾರ್ಥ ತಯಾರಿಸುವ ಎಂಎಸ್ಪಿಸಿ ಸಂಸ್ಥೆ ಸದಸ್ಯರಿಗೆ ಪುನಶ್ಚೇತನ ತರಬೇತಿ ಕಾರ್ಯಾಗಾರವನ್ನು ಕೂಡಿಗೆಯ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು. ತರಬೇತಿಗೆ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ದೇವಿ.ಬಿ.ಮುಧೋಳ ಚಾಲನೆ ನೀಡಿದರು. ಜಿಲ್ಲೆಯ ಆಹಾರ ಸುರಕ್ಷತೆ ವಿಭಾಗದ ನಿಯೋಜಿತ ಅಧಿಕಾರಿ ಎ.ಐ.ಮಂಜುನಾಥ ಅವರು ಎಂಎಸ್ಪಿಸಿ ಮತ್ತು ಎಡಬ್ಲುೃಸಿಯಲ್ಲಿ ಆಹಾರ ಗುಣಮಟ್ಟ ಕಾಯ್ದೆ ಅಡಿ […] The post ಎಂಎಸ್ಪಿಸಿ ಸಂಸ್ಥೆ ಸದಸ್ಯರಿಗೆ ತರಬೇತಿ first appeared on ವಿಜಯವಾಣಿ .
ಕುಶಾಲನಗರದಲ್ಲಿ ಜಿಲ್ಲಾ ಮಟ್ಟದ ಕವಿಗೋಷ್ಠಿ
ಕುಶಾಲನಗರ: ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ವತಿಯಿಂದ 79ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಜಿಲ್ಲಾ ಮಟ್ಟದ ಕವಿಗೋಷ್ಠಿಯನ್ನು ಕುಶಾಲನಗರದ ಮಹಿಳಾ ಸಮಾಜ ಸಭಾಂಗಣದಲ್ಲಿ ಭಾನುವಾರ ಆಯೋಜಿಸಲಾಗಿತ್ತು. ಜಿಪಂ ಮಾಜಿ ಅಧ್ಯಕ್ಷರಾದ ಕೆ.ಪಿ.ಚಂದ್ರಕಲಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇಂತಹ ಕಾರ್ಯಕ್ರಮ ಎಲ್ಲ ಕವಿಗಳಿಗೆ ಸ್ಫೂರ್ತಿದಾಯಕ. ಸ್ಪರ್ಧಾತ್ಮಕ ಪ್ರಪಂಚದಲ್ಲಿ ದಿನನಿತ್ಯ ಹಲವರು ಪ್ರತಿಭೆಗಳು ಹೊರ ಹೊಮ್ಮುತ್ತಿದ್ದಾರೆ. ಈ ಕಲೆಯನ್ನು ಉಳಿಸಿಕೊಳ್ಳಬೇಕಾಗಿದೆ ಎಂದು ಕಿವಿಮಾತು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಜಿಲ್ಲಾಧ್ಯಕ್ಷ ಡಾ.ಎಚ್.ಎಂ.ರಘು ಕೋಟಿ ಮಾತನಾಡಿ, ತಮ್ಮ […] The post ಕುಶಾಲನಗರದಲ್ಲಿ ಜಿಲ್ಲಾ ಮಟ್ಟದ ಕವಿಗೋಷ್ಠಿ first appeared on ವಿಜಯವಾಣಿ .
ಹುಬ್ಬಳ್ಳಿ: ಮಳೆ, ಕಾರ್ಮಿಕರ ಕೊರತೆ ನೆಪ ಬಿಟ್ಟು ಕಾಮಗಾರಿ ಬೇಗ ಪೂರ್ಣಗೊಳಿಸಬೇಕು ಎಂದು ಶಾಸಕ ಮಹೇಶ ಟೆಂಗಿನಕಾಯಿ, ಗುತ್ತಿಗೆದಾರರು ಹಾಗೂ ಅಧಿಕಾರಿಗಳ ವಿರುದ್ಧ ಗರಂ ಆದರು. ಇಲ್ಲಿಯ ಚನ್ನಮ್ಮ ವೃತ್ತದಿಂದ ಬಸವ ವನ ವೃತ್ತದವರೆಗೆ ಮೇಲ್ಸೇತುವೆ ಕಾಮಗಾರಿ ಭಾನುವಾರ ವೀಕ್ಷಿಸಿದ ಶಾಸಕರು, ಕಳೆದ ಬಾರಿ ವೀಕ್ಷಣೆ ಮಾಡಿದ ವೇಳೆ ಕಾಮಗಾರಿ ಪ್ರಗತಿಯಲ್ಲಿತ್ತು. ಈಗ ನೆಪ ಹೇಳಿ ಕಾಮಗಾರಿ ವಿಳಂಬ ಮಾಡುತ್ತಿರುವುದು ಗಮನಕ್ಕೆ ಬಂದಿದೆ ಎಂದು ಸಿಟ್ಟಾದರು. ನಿಗದಿತ ಅವಧಿಯಲ್ಲಿ ಕೆಲಸ ಮಾಡಬೇಕು. ಇಲ್ಲವಾದರೆ ವ್ಯಾಪಾರಸ್ಥರಿಗೆ, ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿದೆ. […] The post ನೆಪ ಬಿಡಿ, ಕೆಲಸ ಮಾಡಿ first appeared on ವಿಜಯವಾಣಿ .
ಯುವಪೀಳಿಗೆ ಶಿಕ್ಷಣದೊಂದಿಗೆ ಸಂಸ್ಕೃತಿ ಅರಿವು ಅಗತ್ಯ
ಉಡುಪಿ: ಯುವ ಪೀಳಿಗೆ ವಿದ್ಯಾಭ್ಯಾಸದ ಜತೆಗೆ ಸಂಸತಿ ಮತ್ತು ಸಂಸ್ಕಾರ ಮೈಗೂಡಿಸಿಕೊಳ್ಳಬೇಕು. ಸೇವೆಯ ಮೂಲಕ ಜೀವನದ ಸಾಫಲ್ಯತೆಯನ್ನು ಕಾಣಬೇಕು. ವಿದ್ಯಾರ್ಥಿಗಳು ಭವಿಷ್ಯದಲ್ಲಿ ಉದ್ಯೋಗ ಪಡೆದು ಅಥವಾ ಉದ್ಯಮ ಸ್ಥಾಪಿಸುವ ಮೂಲಕ ಸಮಾಜದ ಋಣವನ್ನು ತೀರಿಸುವ ಸಂಕಲ್ಪ ಕೈಗೊಳ್ಳಬೇಕು ಎಂದು ಹಿರಿಯ ಲೆಕ್ಕಪರಿಶೋಧಕ ಸಿ.ಎ.ಕಮಲಾಕ್ಷ ಕಾಮತ್ ಹೇಳಿದ್ದಾರೆ. ಅಂಬಾಗಿಲು ಅಮೃತ ಗಾರ್ಡನ್ ಆಡಿಟೋರಿಯಂನಲ್ಲಿ ಜಿಎಸ್ಬಿ ಸಮಾಜ ಹಿತರಕ್ಷಣಾ ವೇದಿಕೆ ಮತ್ತು ಮುದರಂಗಡಿ ಸಮರ್ಪಣಾ ಚಾರಿಟೇಬಲ್ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ಭಾನುವಾರ ನಡೆದ 11ನೇ ವರ್ಷದ ವಿದ್ಯಾ ಪೋಷಕ ನಿಧಿ […] The post ಯುವಪೀಳಿಗೆ ಶಿಕ್ಷಣದೊಂದಿಗೆ ಸಂಸ್ಕೃತಿ ಅರಿವು ಅಗತ್ಯ first appeared on ವಿಜಯವಾಣಿ .
ಜಡೇಜಾ ಜಗತ್ತಿನ ಅತ್ಯುತ್ತಮ ಆಲ್ರೌಂಡರ್ ಎಂದ ಅಸ್ಟ್ರೇಲಿಯಾ ಮಾಜಿ ಸ್ಟಾರ್ ವೇಗಿ| Ravindra Jadeja
Ravindra Jadeja: ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯಲ್ಲಿ ಅದ್ಭುತ ಪ್ರದರ್ಶನ ತೋರಿದ ಭಾರತದ ಸ್ಟಾರ್ ಅಲ್ರೌಂಡರ್ ರವೀಂದ್ರ ಜಡೇಜಾರನ್ನು ಜಗತ್ತಿನ ಅತ್ಯುತ್ತಮ ಅಲ್ರೌಂಡರ್ ಎಂದು ಆಸ್ಟ್ರೇಲಿಯಾದ ಬೌಲಿಂಗ್ ದಂತಕಥೆ ಬ್ರೇಟ್ ಲಿ ಹೋಗಳಿದ್ದಾರೆ. ಈ ಬಗ್ಗೆ ತಮ್ಮ ಯೂಟ್ಯೂಬ್ ಚಾನೆಲ್ ಮಾತನಾಡಿರುವ ಲೀ, ಜಡೇಜಾ ಗಾಯಗೊಂಡಿರುವುದನ್ನು ನಾನು ನೋಡಿಲ್ಲ. ಜಡೇಜಾ ಭಾರತಕ್ಕಾಗಿ ಈಗಾಗಲೇ 85 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ದೇಶಕ್ಕಾಗಿ 100 ಟೆಸ್ಟ್ ಪಂದ್ಯಗಳನ್ನು ಆಡುತ್ತಾರೆ ಎಂದು ನಾನು ನಂಬುತ್ತೇನೆ. ನನ್ನ ಅಭಿಪ್ರಾಯದಲ್ಲಿ ಪ್ರಕಾರ, ದೇಶಕ್ಕಾಗಿ 100 […] The post ಜಡೇಜಾ ಜಗತ್ತಿನ ಅತ್ಯುತ್ತಮ ಆಲ್ರೌಂಡರ್ ಎಂದ ಅಸ್ಟ್ರೇಲಿಯಾ ಮಾಜಿ ಸ್ಟಾರ್ ವೇಗಿ| Ravindra Jadeja first appeared on ವಿಜಯವಾಣಿ .
ಮಕ್ಕಳು ತುಳು ಸಂಸ್ಕೃತಿ ಅರಿವು ಅಗತ್ಯ
ಉಡುಪಿ: ಮಕ್ಕಳಿಗೆ ಎಳವೆಯಲ್ಲೇ ತುಳು ಸಂಸ್ಕೃತಿ ಬಗ್ಗೆ ಅರಿವು ಮೂಡಿಸಬೇಕು. ಇದರಿಂದ ಭಾಷೆ ಉಳಿಯಲು ಸಾಧ್ಯ ಎಂದು ಕನ್ನಡ ಮತ್ತು ಸಂಸ್ಕೃತಿಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಹೇಳಿದ್ದಾರೆ. ತುಳುಕೂಟದ ವತಿಯಿಂದ ಕನ್ನಡ ಮತ್ತು ಸಂಸತಿ ಇಲಾಖೆ ಸಹಕಾರದಲ್ಲಿ 30 ನೇ ವರ್ಷದ ಪಣಿಯಾಡಿ ತುಳು ಕಾದಂಬರಿ ಪ್ರಶಸ್ತಿ ಸಮಾರಂಭದಲ್ಲಿ ಅವರು ಮಾತನಾಡಿದರು. ಎಸ್ಎಸ್ಎಲ್ಸಿಯಲ್ಲಿ ತುಳು ಅಧ್ಯಯನಕ್ಕೆ ಅವಕಾಶ ಮಾಡಿಕೊಡುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಮಕ್ಕಳು ತುಳು ಭಾಷೆ ಪರೀೆಗಷ್ಟೇ ಸೀಮಿತಗೊಳಿಸದೇ ಮುಂದಿನ ಜೀವನದಲ್ಲಿಯೂ ತುಳು ಸೊಗಡನ್ನು ಅಳವಡಿಸಕೊಳ್ಳಬೇಕು ಎಂದರು. […] The post ಮಕ್ಕಳು ತುಳು ಸಂಸ್ಕೃತಿ ಅರಿವು ಅಗತ್ಯ first appeared on ವಿಜಯವಾಣಿ .
ಜಿಲ್ಲಾಮಟ್ಟದ ಜ್ಯೂನಿಯರ್ ಅಥ್ಲೆಟಿಕ್ ಮೀಟ್ ಉದ್ಘಾಟನೆ
ಉಡುಪಿ: ಜಿಲ್ಲಾ ಅಮೆಚ್ಯುರ್ ಅಥ್ಲೆಟಿಕ್ ಅಸೋಸಿಯೇಶನ್ ವತಿಯಿಂದ ಜಿಲ್ಲಾ ಕಿರಿಯರ ಕ್ರೀಡಾಕೂಟ ಶನಿವಾರ ಅಜ್ಜರಕಾಡು ಮಹಾತ್ಮಾಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಜರಗಿತು. ಶಾಸಕ ಯಶ್ಪಾಲ್ ಸುವರ್ಣ ಕ್ರೀಡಾಕೂಟ ಉದ್ಘಾಟಿಸಿದರು. ಜಿಲ್ಲಾ ಅಮೆಚ್ಯುರ್ ಅಥ್ಲೆಟಿಕ್ ಅಸೋಸಿಯೇಶನ್ ಅಧ್ಯಕ್ಷ ಹರಿಪ್ರಸಾದ್ ರೈ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಮಣಿಪಾಲ ವಿಕೆ ಗ್ರೂಪ್ ಅಧ್ಯಕ್ಷ ಕೆ.ಎಂ.ಶೆಟ್ಟಿ, ಕರ್ನಾಟಕ ಅಥ್ಲೆಟಿಕ್ ಅಸೋಸಿಯೇಶನ್ನ ಉಪಾಧ್ಯಕ್ಷ ಮಹೇಶ್ ಠಾಕೂರು, ಲಯನ್ಸ್ ಜಿಲ್ಲಾ ಗವರ್ನರ್ ಸ್ವಪ್ನಾ ಸುರೇಶ್, ಉಡುಪಿ […] The post ಜಿಲ್ಲಾಮಟ್ಟದ ಜ್ಯೂನಿಯರ್ ಅಥ್ಲೆಟಿಕ್ ಮೀಟ್ ಉದ್ಘಾಟನೆ first appeared on ವಿಜಯವಾಣಿ .
ವಿವಿಧ ಕಲೆಗಳಲ್ಲಿ ಮಕ್ಕಳನ್ನು ತೊಡಗಿಸಿ…
ಪಾಲಕರಿಗೆ ಎಚ್.ಕೆ. ಗಂಗಾಧರ ಕರೆ ಗಣೇಶನ ಚಿತ್ರ ಬಿಡಿಸುವ ಸ್ಪರ್ಧೆ ಉದ್ಘಾಟನೆ ವಿಜಯವಾಣಿ ಸುದ್ದಿಜಾಲ ಉಡುಪಿ ಇಂದಿನ ಅನೇಕ ಪಾಲಕರು ಕೆಲಸದ ಒತ್ತಡದಿಂದಾಗಿ ಮಕ್ಕಳ ಪಾಲನೆಗೆ ಸಮಯಾವಕಾಶ ಇಲ್ಲದ್ದರಿಂದ ಅವರಿಗೆ ಮೊಬೈಲ್ ನೀಡತೊಡಗಿದ್ದಾರೆ. ಇದು ಸರಿಯಾದ ಕ್ರಮವಲ್ಲ. ಅತಿಯಾಗಿ ಮೊಬೈಲ್ ಬಳಕೆಯಿಂದ ಮಕ್ಕಳಲ್ಲಿ ನಕಾರಾತ್ಮಕ ಧೋರಣೆ ಬೆಳೆಯುತ್ತದೆ. ಹೀಗಾಗಿ ಚಿತ್ರಕಲೆ, ಸಂಗೀತ, ನೃತ್ಯ ಮುಂತಾದ ಕಲೆಗಳಲ್ಲಿ ಮಕ್ಕಳನ್ನು ಆಸಕ್ತರನ್ನಾಗಿಸಬೇಕು. ವಿವಿಧ ಸ್ಪರ್ಧೆಗಳಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರಣೆ ನೀಡಬೇಕು ಎಂದು ಕೆನರಾ ಬ್ಯಾಂಕ್ ಮಣಿಪಾಲ ವೃತ್ತ ಕಚೇರಿಯ ಮಹಾ ಪ್ರಬಂಧಕ […] The post ವಿವಿಧ ಕಲೆಗಳಲ್ಲಿ ಮಕ್ಕಳನ್ನು ತೊಡಗಿಸಿ… first appeared on ವಿಜಯವಾಣಿ .
ಕೇರಂ ಪಂದ್ಯಾವಳಿಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆ
ಕುಂದಾಪುರ: ಸಿಐಎಸ್ಸಿಇ ಗೇಮ್ಸ್ ಮತ್ತು ಸ್ಪೋರ್ಟ್ಸ್– 2025ರ ಅಂಗವಾಗಿ ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯಲ್ಲಿ ನಡೆದ ಪ್ರಾದೇಶಿಕ ಮಟ್ಟದ ಕೇರಂ ಟೂರ್ನಮೆಂಟ್ ಸ್ಪರ್ಧೆಯಲ್ಲಿ ಹಲವು ವಿದ್ಯಾರ್ಥಿಗಳು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. * ಫಲಿತಾಂಶ: 14 ವಯೋಮಿತಿಯ ಹುಡುಗರ ಸಿಂಗಲ್ಸ್ನಲ್ಲಿ ಪ್ರಜ್ವಲ್ ಎಸ್. ಹಾಗೂ ಡಬಲ್ಸ್ನಲ್ಲಿ ಕರಣ್ ಆರ್.ನಾಯ್ಕ, ನೂಥನ್ ಸ್ವರೂಪ್ ಎನ್. ಮತ್ತು ಹುಡುಗಿಯರ ಸಿಂಗಲ್ಸ್ನಲ್ಲಿ ಎಂ.ಮಿಲನಾ ಹಾಗೂ ಡಬಲ್ಸ್ನಲ್ಲಿ ಆರಾಧ್ಯ ಎಂ. ಮತ್ತು ದೀಕ್ಷಿತಾ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. 17 ವಯೋಮಿತಿಯ ಹುಡುಗರ ಸಿಂಗಲ್ಸ್ನಲ್ಲಿ ನಿಶಾಂತ್ ಹಾಗೂ […] The post ಕೇರಂ ಪಂದ್ಯಾವಳಿಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆ first appeared on ವಿಜಯವಾಣಿ .
ಉಪರಾಷ್ಟ್ರಪತಿ ಚುನಾವಣೆಗೆ ಸಿ.ಪಿ. ರಾಧಾಕೃಷ್ಣನ್ NDA ಅಭ್ಯರ್ಥಿ; ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಘೋಷಣೆ
ನವದೆಹಲಿ: ಮುಂಬರುವ ಉಪರಾಷ್ಟ್ರಪತಿ ಚುನಾವಣೆಗೆ ಸಿ.ಪಿ. ರಾಧಾಕೃಷ್ಣನ್ರನ್ನು ಎನ್ಡಿಎ ಅಭ್ಯರ್ಥಿಯಾಗಿ ಬಿಜೆಪಿ ಅಧಿಕೃತವಾಗಿ ಘೋಷಿಸಿದೆ. ದೆಹಲಿಯಲ್ಲಿ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ, ಪ್ರಸ್ತುತ ಮಹಾರಾಷ್ಟ್ರ ರಾಜ್ಯಪಾಲರಾಗಿರುವ ರಾಧಾಕೃಷ್ಣನ್ರನ್ನು ಎನ್ಡಿಎ ಅಭ್ಯರ್ಥಿಯಾಗಿ ಕಣಕ್ಕಿಳಿಸುವುದಾಗಿ ಘೋಷಿಸಿದ್ದಾರೆ. ಇದನ್ನೂ ಓದಿ:ತಾನು ಪ್ರೀತಿಸಿದ್ದ ಯುವತಿ ಪತಿಗೆ ಸ್ಪೀಕರ್ ಬಾಂಬ್ ಗಿಫ್ಟ್! ಪಾಗಲ್ ಪ್ರೇಮಿಯ ಭಯಾನಕ ಸ್ಕೆಚ್ ಬಟಾಬಯಲು| Bomb Speaker #WATCH | Delhi: Maharashtra Governor CP Radhakrishnan will be the NDA’s candidate for the […] The post ಉಪರಾಷ್ಟ್ರಪತಿ ಚುನಾವಣೆಗೆ ಸಿ.ಪಿ. ರಾಧಾಕೃಷ್ಣನ್ NDA ಅಭ್ಯರ್ಥಿ; ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಘೋಷಣೆ first appeared on ವಿಜಯವಾಣಿ .
ವರುಣನ ಆರ್ಭಟಕ್ಕೆ ಮತ್ತೆ ನಲುಗಿದ ಮಲೆನಾಡು
ಸಕಲೇಶಪುರ : ಕಳೆದ ಎರಡು ದಿನಗಳಿಂದ ಭಾರಿ ಮಳೆ ಸಿರಿಯುತ್ತಿರುವುದರಿಂದ ತಾಲೂಕಿನ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಮೇ ಎರಡನೇ ವಾರದಿಂದ ಆರಂಭವಾದ ಮಳೆ ಜುಲೈ ತಿಂಗಳ ಆರಂಭದಲ್ಲಿ ಅಲ್ಪ ಬಿಡುವು ನೀಡಿತ್ತಾದರೂ ಮತ್ತೆ ಆರ್ಭಟಿಸುತ್ತಿದೆ. ಪರಿಣಾಮ ನದಿ, ತೊರೆಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಹೆದ್ದಾರಿ ಸಂಚಾರ ದುಸ್ಥರ: ರಾಷ್ಟ್ರೀಯ ಹೆದ್ದಾರಿ 75 ರ ಶಿರಾಡಿಘಾಟ್ನಲ್ಲಿ ಶನಿವಾರ ಸಂಜೆ ಮೇಘಸ್ಪೋಟ ಸಂಭವಿಸಿದ್ದು ಎರಡು ಗಂಟೆಯ ಕನಿಷ್ಠ ಅವಧಿಯಲ್ಲಿ 400 ಮಿ.ಮೀಟರ್ ಮಳೆ ಸುರಿದ ಪರಿಣಾಮ ಘಾಟ್ರಸ್ತೆಯಲ್ಲಿ ಹೊಳೆಯಂತೆ […] The post ವರುಣನ ಆರ್ಭಟಕ್ಕೆ ಮತ್ತೆ ನಲುಗಿದ ಮಲೆನಾಡು first appeared on ವಿಜಯವಾಣಿ .
ಬಿ.ಎಲ್. ಸಂತೋಷ್ಗೆ ಅವಹೇಳನ; ಶಾಸಕ ಯಶ್ಪಾಲ್ ಆಕ್ರೋಶ
ಕಠಿಣ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಆಗ್ರಹ ವಿಜಯವಾಣಿ ಸುದ್ದಿಜಾಲ ಉಡುಪಿ ಧರ್ಮಸ್ಥಳ ಕ್ಷೇತ್ರದ ಕುರಿತು ನಡೆಯುತ್ತಿರುವ ಅಪಪ್ರಚಾರದ ವಿರುದ್ಧ ಸೆಡ್ಡು ಹೊಡೆದು, ಕ್ಷೇತ್ರದಪರ ನಿಂತ ರಾಷ್ಟೀಯ ಸ್ವಯಂ ಸೇವಕ ಸಂಘದ ಹಿರಿಯ ಪ್ರಚಾರಕ ಬಿ.ಎಲ್. ಸಂತೋಷ್ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡುತ್ತಿರುವ ಹಿಂದು ವಿರೋಧಿಗಳ ನಡೆಗೆ ಶಾಸಕ ಯಶ್ಪಾಲ್ ಸುವರ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಧರ್ಮಸ್ಥಳ ಕ್ಷೇತ್ರದ ಪರವಾಗಿ ನಿಲ್ಲುವವರನ್ನು ವ್ಯವಸ್ಥಿತವಾಗಿ ತೇಜೋವಧೆ ಮಾಡುವ ಪಿತೂರಿ ಮುಂದುವರಿದಿದೆ. ತನ್ಮೂಲಕ ಬಿ.ಎಲ್. ಸಂತೋಷ್ ಅವರ ವಿರುದ್ಧ ಮಾತನಾಡಿ ಮಾನಸಿಕ […] The post ಬಿ.ಎಲ್. ಸಂತೋಷ್ಗೆ ಅವಹೇಳನ; ಶಾಸಕ ಯಶ್ಪಾಲ್ ಆಕ್ರೋಶ first appeared on ವಿಜಯವಾಣಿ .
ಅವಿಭಕ್ತ ಕುಟುಂಬಗಳಲ್ಲಿ ಕಿರಿಯರಿಗೆ ಸಿಗುತ್ತಿತ್ತು ನೈತಿಕ ಬೆಂಬಲ
ಕುಂದಾಪುರ: ಇಂದಿನ ದಿನಗಳಲ್ಲಿ ಬಹಳ ಕಡೆಗಳಲ್ಲಿ ವಿಭಕ್ತ ಕುಟುಂಬ ನೋಡುತ್ತಿದ್ದೇವೆ. ಅವಿಭಕ್ತ ಕುಟುಂಬಗಳಲ್ಲಿ ಬಹಳಷ್ಟು ಸಹಾಯ, ಅನುಕೂಲಗಳಿರುತ್ತಿತ್ತು. ಯುವಜನರಿಗೆ ಬೇಕಾದ ನೈತಿಕ ಬೆಂಬಲ ಹಾಗೂ ಹೇಗೆ ಜೀವನ ನಡೆಸಬೇಕೆಂದು ಹಿರಿಯರು ತೋರಿಸಿಕೊಟ್ಟಿದ್ದಾರೆ ಎಂದು ಉಡುಪಿ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ ಹೇಳಿದರು. ಭಾರತೀಯ ರೆಡ್ಕ್ರಾಸ್ ಸಂಸ್ಥೆ ಕುಂದಾಪುರ ತಾಲೂಕು ಶಾಖೆ ವತಿಯಿಂದ ವಕ್ವಾಡಿಯಲ್ಲಿ 8 ಕೋಟಿ ರೂ. ವೆಚ್ಚದಲ್ಲಿ ನಿರ್ವಾಣಗೊಳ್ಳಲಿರುವ ರೆಡ್ಕ್ರಾಸ್ ಹೋಮ್ ಫಾರ್ ಸೀನಿಯರ್ ಸಿಟಿಜನ್ಸ್ ಕಟ್ಟಡದ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಭಾರತೀಯ ರೆಡ್ಕ್ರಾಸ್ ಸಂಸ್ಥೆ […] The post ಅವಿಭಕ್ತ ಕುಟುಂಬಗಳಲ್ಲಿ ಕಿರಿಯರಿಗೆ ಸಿಗುತ್ತಿತ್ತು ನೈತಿಕ ಬೆಂಬಲ first appeared on ವಿಜಯವಾಣಿ .
ಆಂಜನೇಯಸ್ವಾಮಿ ಗರುಡ ಕಂಬ ಪ್ರತಿಷ್ಠಾಪನೆ
ಹಿರೀಸಾವೆ: ಹೋಬಳಿಯ ಅರಕೆರೆ ಗ್ರಾಮದಲ್ಲಿ ಆಂಜನೇಯಸ್ವಾಮಿಯ ಗರುಡ ಕಂಬದ ಪ್ರತಿಷ್ಠಾಪನೆ ಕಾರ್ಯಕ್ರಮ ಶನಿವಾರ ವಿವಿಧ ಪೂಜೆಗಳು, ಹೋಮಗಳೊಂದಿಗೆ ಜರುಗಿತು. ಬೆಳಗ್ಗೆ ಮೂಲ ಮೂರ್ತಿಗೆ ಅಭಿಷೇಕ ನಂತರ ಗಣ, ರಾಮತಾರಕ, ಆಂಜನೇಯ ಸೇರಿದಂತೆ ಇತರ ಹೋಮಗಳು ನಡೆದು, ಮಧ್ಯಾಹ್ನ 12 ಗಂಟೆಗೆ ಪೂರ್ಣಾಹುತಿ ನಡೆಯಿತು. ಆಂಜನೇಯಸ್ವಾಮಿಯ ಉತ್ಸವ ಮೂರ್ತಿಯ ಅಡ್ಡಪಲ್ಲಕ್ಕಿ ಉತ್ಸವ, ಪೂರ್ಣ ಕುಂಭಗಳ ಮೆರವಣಿಗೆ ಮಂಗಳವಾದ್ಯ ಚಂಡೆ ವಾದ್ಯದೊಂದಿಗೆ ಪ್ರಾರಂಭವಾಗಿ ಗ್ರಾಮದ ಪ್ರಮುಖ ಬೀದಿಯಲ್ಲಿ ಸಾಗಿತು. ಮಧ್ಯಾಹ್ನ 1.30ಕ್ಕೆ ಗರುಡ ಕಂಬದ ಕುಂಭಾಭಿಷೇಕವನ್ನು ಭಕ್ತರು ನಡೆಸಿದರು. ನಂತರ […] The post ಆಂಜನೇಯಸ್ವಾಮಿ ಗರುಡ ಕಂಬ ಪ್ರತಿಷ್ಠಾಪನೆ first appeared on ವಿಜಯವಾಣಿ .
ಕುಶಾಲನಗರದಲ್ಲಿ ವಿಶ್ವ ಛಾಯಾಗ್ರಹಣ ದಿನ ಇಂದು
ಸುಂಟಿಕೊಪ್ಪ: ಕೊಡಗು ಮತ್ತು ಕುಶಾಲನಗರ ತಾಲೂಕು ಪತ್ರಕರ್ತರ ಸಂಘದಿಂದ ಆ.19 ರಂದು ಕುಶಾಲನಗರದಲ್ಲಿ ವಿಶ್ವ ಛಾಯಾಗ್ರಹಣ ದಿನ ಆಯೋಜಿಸಲಾಗಿದೆ. ಕುಶಾಲನಗರದ ಗೌಡ ಸಮಾಜದ ಸಭಾಂಗಣದಲ್ಲಿ ಅಂದು ಬೆಳಗ್ಗೆ 10.30ಕ್ಕೆ ಆಯೋಜಿಸಿರುವ ಕಾರ್ಯಕ್ರಮವನ್ನು ಜಿಲ್ಲಾ ಛಾಯಾಗ್ರಾಹಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಆವರ್ತಿ ಮಹದೇವಪ್ಪ ಉದ್ಘಾಟಿಸಲಿದ್ದಾರೆ. ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ವಿಘ್ನೇಶ್ ಭೂತನಕಾಡು ಅಧ್ಯಕ್ಷತೆ ವಹಿಸಲಿದ್ದು, ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಅನಿಲ್, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಬಿ.ಬಿ.ಭಾರತೀಶ್, ಉದ್ಯಮಿ ಹೆನ್ರಿಕ್ ಮಾರ್ಟಿನ್ ಸೇರಿದಂತೆ ಅನೇಕರು ಪಾಲ್ಗೊಳ್ಳಲಿದ್ದಾರೆ. ಇದೇ […] The post ಕುಶಾಲನಗರದಲ್ಲಿ ವಿಶ್ವ ಛಾಯಾಗ್ರಹಣ ದಿನ ಇಂದು first appeared on ವಿಜಯವಾಣಿ .
ಎಚ್ಡಿಸಿಸಿ ಮತ್ತೆ ಜೆಡಿಎಸ್ ತೆಕ್ಕೆಗೆ
ಹಾಸನ: ಹಾಸನ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಆಡಳಿತ ಮಂಡಳಿಯ 13 ನಿರ್ದೇಶಕ ಸ್ಥಾನಗಳ ಪೈಕಿ 12 ಸ್ಥಾನಗಳಿಗೆ ಜೆಡಿಎಸ್ ಬೆಂಬಲಿಗರು ಅವಿರೋಧವಾಗಿ ಆಯ್ಕೆಯಾಗುವ ಮೂಲಕ ಮತ್ತೊಮ್ಮೆ ಜೆಡಿಎಸ್ ಹಿಡಿತ ಸಾಧಿಸಿದೆ. ಚನ್ನರಾಯಪಟ್ಟಣ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಕ್ಷೇತ್ರದಿಂದ ಶ್ರವಣಬೆಳಗೊಳ ಕ್ಷೇತ್ರದ ಶಾಸಕ ಸಿ.ಎನ್.ಬಾಲಕೃಷ್ಣ, ಹೊಳೆನರಸೀಪುರ ತಾಲೂಕಿನಿಂದ ವಿಧಾನ ಪರಿಷತ್ ಸದಸ್ಯ ಡಾ.ಸೂರಜ್ ರೇವಣ್ಣ, ಹಾಲು ಉತ್ಪಾದಕರ ಸಹಕಾರ ಸಂಘದಿಂದ ಬ್ಯಾಂಕಿನ ಹಾಲಿ ಅಧ್ಯಕ್ಷ, ಸೋಮನಹಳ್ಳಿ ನಾಗರಾಜು, ಅರಕಲಗೂಡು ತಾಲೂಕಿನಿಂದ ಮಾಜಿ ಅಧ್ಯಕ್ಷ ಹೊನ್ನವಳ್ಳಿ […] The post ಎಚ್ಡಿಸಿಸಿ ಮತ್ತೆ ಜೆಡಿಎಸ್ ತೆಕ್ಕೆಗೆ first appeared on ವಿಜಯವಾಣಿ .
ುಣಮಟ್ಟ ರಸ್ತೆ ಜನರ ಬಳಕೆಗೆ ಶೀಘ್ರ ಸಿಗುವಂತಾಗಲಿ
ನಾಪೋಕ್ಲು: ಇಲ್ಲಿನ ಕೊಡವ ಸಮಾಜ ರಸ್ತೆ ಅಭಿವೃದ್ಧಿಗೆ ವಿರಾಜಪೇಟೆ ಶಾಸಕ ಅಜ್ಜಿಕುಟ್ಟೀರ ಎಸ್.ಪೊನ್ನಣ್ಣ ಶನಿವಾರ ಭೂಮಿಪೂಜೆ ನೆರವೇರಿಸಿದರು. ಅತ್ಯಂತ ಜನಸಂಚಾರ ಹಾಗೂ ವಾಹನ ದಟ್ಟಣೆ ಇರುವ ಈ ರಸ್ತೆಯ ಅಭಿವೃದ್ಧಿಗಾಗಿ 20 ಲಕ್ಷ ರೂ.ಅನುದಾನ ನೀಡಲಾಗಿದ್ದು, ಗುಣಮಟ್ಟ ಕಾಯ್ದುಕೊಂಡು ಶೀಘ್ರ ರಸ್ತೆ ನಿರ್ಮಾಣವಾಗಿ ಜನರ ಬಳಕೆಗೆ ಬರುವಂತಾಗಲಿ ಎಂದರು. ಇದೇ ಸಂದರ್ಭದಲ್ಲಿ ನಾಪೋಕ್ಲು ಗ್ರಾಮ ಪಂಚಾಯಿತಿ ನೀಡಲಾದ ಮಲ ತ್ಯಾಜ್ಯ ನಿರ್ವಹಣಾ ಸಂಚಾರಿ ಘಟಕ ವಾಹನದ ಕೀಲಿಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷೆ ವನಜಾಕ್ಷಿ ರೇಣುಕೇಶ್ಗೆ ಶಾಸಕರು ಹಸ್ತಾಂತರ […] The post ುಣಮಟ್ಟ ರಸ್ತೆ ಜನರ ಬಳಕೆಗೆ ಶೀಘ್ರ ಸಿಗುವಂತಾಗಲಿ first appeared on ವಿಜಯವಾಣಿ .
ಪ್ರಜಾಪ್ರಭುತ್ವಕ್ಕಾಗಿ ಸಂವಿಧಾನವನ್ನು ರಕ್ಷಿಸಿ
ಸೊರಬ: ಸಂವಿಧಾನ ರಕ್ಷಿಸಿ ಪ್ರಜಾಪ್ರಭುತ್ವ ಉಳಿಸಿ. ಮತಗಳ್ಳರೇ ಅಧಿಕಾರ ಬಿಡಿ ಎಂದು ಶುಕ್ರವಾರ ಕಾಂಗ್ರೆಸ್ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಕಚೇರಿಯಿಂದ ತಹಸೀಲ್ದಾರ್ ಕಚೇರಿವರೆಗೂ ಮೆರವಣಿಗೆ ನಡೆಸಿದರು. ಸುಳ್ಳು ಭರವಸೆ ನೀಡುವ ಮೂಲಕ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಇದೀಗ ಮತಗಳ್ಳತನದ ಹಾದಿ ಹಿಡಿದಿದೆ. ಉದ್ಯೋಗ ಸೃಷ್ಟಿ, ಕಪ್ಪು ಹಣ ವಾಪಸ್ ತರುವ ಸುಳ್ಳು ಭರವಸೆ ನೀಡಿ ಅಧಿಕಾರಕ್ಕೆ ಬಂದ ಕೇಂದ್ರ ಸರ್ಕಾರ ಇದೀಗ ಮತಗಳ್ಳತನಕ್ಕೆ ನಿಂತಿದೆ. ಮಹಾದೇವಪುರ ಕ್ಷೇತ್ರವೊಂದರಲ್ಲಿಯೇ ಒಂದು ಲಕ್ಷಕ್ಕೂ ಅಧಿಕ ಮತಗಳನ್ನು […] The post ಪ್ರಜಾಪ್ರಭುತ್ವಕ್ಕಾಗಿ ಸಂವಿಧಾನವನ್ನು ರಕ್ಷಿಸಿ first appeared on ವಿಜಯವಾಣಿ .