SENSEX
NIFTY
GOLD
USD/INR

Weather

16    C

ಡಿಜಿಟಲ್ ಸುದ್ದಿ ಮೂಲಗಳು

... ...View News by News Source

ಊರಿಗೆ ಬಂದರೂ ಮನೆಗೆ ಬಾರದೇ ವಾಪಸ್ ತೆರಳಿದ ‘ಬಿಗ್ ಬಾಸ್’ ವಿನ್ನರ್ ಗಿಲ್ಲಿ ನಟ

ಮಂಡ್ಯ: ಊರಿಗೆ ಬಂದರೂ ಮನೆಗೆ ಬಾರದೆ ‘ಬಿಗ್ ಬಾಸ್’ ವಿನ್ನರ್ ಗಿಲ್ಲಿ ನಟ ವಾಪಸ್ ತೆರಳಿದ್ದಾರೆ. ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಸ್ವಗ್ರಾಮ ದಡದಪುರದ ಮನೆಯ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿದ ಹಿನ್ನೆಲೆಯಲ್ಲಿ ವಾಪಸ್ ತೆರಳಿದ್ದಾರೆ. ದಡದಪುರದ ಬಸವೇಶ್ವರ ದೇವಾಲಯದವರೆಗೆ ಗಿಲ್ಲಿ ನಟನ ಮೆರವಣಿಗೆ ನಡೆಸಲಾಗಿದೆ. ಮಳವಳ್ಳಿಯ ದಂಡಿನ ಮಾರಮ್ಮನ ದೇವಸ್ಥಾನದಿಂದ ಮೆರವಣಿಗೆ ನಡೆಸಲಾಗಿತ್ತು. ದಡದಪುರದ ಬಸವೇಶ್ವರ ದೇವಾಲಯದವರೆಗೆ ಮೆರವಣಿಗೆಯಲ್ಲಿ ಗಿಲ್ಲಿ ನಟ ಬಂದಿದ್ದರು. ದೇವಾಲಯದವರೆಗೆ ಮೆರವಣಿಗೆಯಲ್ಲಿ ಬಂದು ನಂತರ ವಾಪಸ್ ತೆರಳಿದ್ದಾರೆ. ಮನೆಯ ಬಳಿ […]

ಕನ್ನಡ ದುನಿಯಾ 19 Jan 2026 9:41 pm

BREAKING: ಕೊಪ್ಪಳ ಜಿಲ್ಲಾಧಿಕಾರಿಗೆ ಉತ್ತಮ ಜಿಲ್ಲಾ ಚುನಾವಣಾಧಿಕಾರಿ ಪ್ರಶಸ್ತಿ

ಕೊಪ್ಪಳ: 2025-26ನೇ ಸಾಲಿನಲ್ಲಿ ಆಚರಿಸಲಿರುವ 16ನೇ ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ಜನವರಿ 19 ರಂದು ಭಾರತ ಚುನಾವಣಾ ಆಯೋಗದಿಂದ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದ್ದು, ಕೊಪ್ಪಳ ಜಿಲ್ಲೆಯ ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ ಅವರಿಗೆ ಉತ್ತಮ ಜಿಲ್ಲಾ ಚುನಾವಣಾಧಿಕಾರಿ ಪ್ರಶಸ್ತಿಯನ್ನು ನೀಡಲಾಗಿದೆ. ಭಾರತ ಚುನಾವಣಾ ಆಯೋಗದಿಂದ ಪ್ರತಿ ವರ್ಷ ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ಚುನಾವಣಾ ಕಾರ್ಯಗಳಲ್ಲಿ ಹಾಗೂ ಮತದಾರರ ಪಟ್ಟಿಗಳ ಪರಿಷ್ಕರಣಾ ಕಾರ್ಯಗಳಲ್ಲಿ ಉತ್ತಮ ಕೆಲಸ ನಿರ್ವಹಿಸಿದ ಜಿಲ್ಲಾ ಚುನಾವಣಾಧಿಕಾರಿಗಳಿಗೆ, ಅಪರ ಜಿಲ್ಲಾ ಚುನಾವಣಾಧಿಕಾರಿಗಳಿಗೆ, ಮತದಾರರ […]

ಕನ್ನಡ ದುನಿಯಾ 19 Jan 2026 9:29 pm

BREAKING: ಇತಿಹಾಸ ಸೃಷ್ಟಿಸಿದ ನೊವಾಕ್ ಜೊಕೊವಿಕ್: ಆಸ್ಟ್ರೇಲಿಯನ್ ಓಪನ್‌ ನಲ್ಲಿ 100 ನೇ ಗೆಲುವಿನೊಂದಿಗೆ ಪ್ರಮುಖ ದಾಖಲೆ ಬರೆದ ಮೊದಲ ಆಟಗಾರ

ಸರ್ಬಿಯನ್ ದಂತಕತೆ ನೊವಾಕ್ ಜೊಕೊವಿಕ್ 2026ರ ಆಸ್ಟ್ರೇಲಿಯನ್ ಓಪನ್‌ನ ಮೊದಲ ಸುತ್ತಿನಲ್ಲಿ ಪೆಡ್ರೊ ಮಾರ್ಟಿನೆಜ್ ಸವಾಲನ್ನು ಬದಿಗಿಟ್ಟು ಭರ್ಜರಿ ಗೆಲುವು ಸಾಧಿಸಿದರು. ತಮ್ಮ ದಾಖಲೆಯ 25 ನೇ ಗ್ರ್ಯಾಂಡ್ ಸ್ಲ್ಯಾಮ್‌ಗಾಗಿ ಶ್ರಮಿಸುತ್ತಿರುವ ಜೊಕೊವಿಕ್ ಮೆಲ್ಬೋರ್ನ್‌ನಲ್ಲಿ ತಮ್ಮ ಆರಂಭಿಕ ಪಂದ್ಯವನ್ನು 6-3, 6-2, ಸೆಟ್‌ಗಳಿಂದ ಗೆದ್ದು ಆಸ್ಟ್ರೇಲಿಯನ್ ಓಪನ್‌ನಲ್ಲಿ ತಮ್ಮ 100 ನೇ ಮುಖ್ಯ ಡ್ರಾ ಪಂದ್ಯವನ್ನು ಗೆದ್ದರು. ಮೆಲ್ಬೋರ್ನ್‌ನಲ್ಲಿ 100 ನೇ ಗೆಲುವಿನೊಂದಿಗೆ ಜೊಕೊವಿಕ್ ಇತಿಹಾಸ ಸೃಷ್ಟಿಸಿದ್ದಾರೆ. ಅವರು ಈಗ ಮೂರು ವಿಭಿನ್ನ ಮೇಲ್ಮೈಗಳಲ್ಲಿ ಕನಿಷ್ಠ 100 […]

ಕನ್ನಡ ದುನಿಯಾ 19 Jan 2026 8:40 pm

BIG NEWS: ಕರ್ತವ್ಯ ಪಥದಲ್ಲಿ ನಡೆಯುವ 77ನೇ ಗಣರಾಜ್ಯೋತ್ಸವಕ್ಕೆ 10 ಸಾವಿರ ವಿಶೇಷ ಅತಿಥಿಗಳಿಗೆ ಆಹ್ವಾನ

ನವದೆಹಲಿ: ಈ ವರ್ಷ ನವದೆಹಲಿಯ ಕರ್ತವ್ಯ ಪಥದಲ್ಲಿ ನಡೆಯುವ 77ನೇ ಗಣರಾಜ್ಯೋತ್ಸವ ಮೆರವಣಿಗೆಯನ್ನು ವೀಕ್ಷಿಸಲು ಸುಮಾರು 10 ಸಾವಿರ ವಿಶೇಷ ಅತಿಥಿಗಳನ್ನು ಆಹ್ವಾನಿಸಲಾಗಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ. ಆದಾಯ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಅನುಕರಣೀಯ ಕೆಲಸ ಮಾಡಿದವರು, ಅತ್ಯುತ್ತಮ ಸಾಧಕರು, ನವೋದ್ಯಮಗಳು, ಸ್ವಸಹಾಯ ಗುಂಪುಗಳು ಮತ್ತು ವಿವಿಧ ಸರ್ಕಾರಿ ಉಪಕ್ರಮಗಳ ಅಡಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವವರು ಅತಿಥಿಗಳಾಗಿರುತ್ತಾರೆ. ರಾಷ್ಟ್ರ ನಿರ್ಮಾಣ ಮತ್ತು ರಾಷ್ಟ್ರೀಯ ಪ್ರಾಮುಖ್ಯತೆಯ ಕಾರ್ಯಕ್ರಮಗಳಲ್ಲಿ ಜನ ಭಾಗೀದಾರಿಯನ್ನು ಹೆಚ್ಚಿಸುವಲ್ಲಿ ಅವರ ಕೊಡುಗೆಗಳನ್ನು ಗೌರವಿಸುವ ಉದ್ದೇಶದಿಂದ […]

ಕನ್ನಡ ದುನಿಯಾ 19 Jan 2026 8:12 pm

ಪತ್ರಕರ್ತರ ಸೋಗಿನಲ್ಲಿ ಹಲ್ಲೆ, ಸುಲಿಗೆ ಯತ್ನ: ಮೂವರು ಅರೆಸ್ಟ್

ಚಾಮರಾಜನಗರ: ಪತ್ರಕರ್ತರ ಹೆಸರಲ್ಲಿ ಕಾಮಗಾರಿ ನಿರ್ವಹಿಸುತ್ತಿದ್ದ ಮೇಸ್ತ್ರಿ ಬಳಿ ಲಕ್ಷಾಂತರ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟು, ಹಣ ಕೊಡಲು ಒಪ್ಪದಿದ್ದಾಗ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಪುನೀತ್, ಶೇಖರ್, ಪುರುಷೋತ್ತಮ್ ಬಂಧಿತ ಆರೋಪಿಗಳು. ಯಳಂದೂರು –ಬಿಆರ್ ಹಿಲ್ಸ್ ಮಾರ್ಗದ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಕಾಮಗಾರಿ ಕಳಪೆಯಾಗಿದೆ ಎಂದು ಪತ್ರಕರ್ತರ ಸೋಗಿನಲ್ಲಿ ಈ ಮೂವರು ತೆರಳಿದ್ದಾರೆ. ಕಾಮಗಾರಿ ನಿರ್ವಹಿಸುತ್ತಿದ್ದ ಮೇಸ್ತ್ರಿ ಚೆಲುವರಾಜ್ ಬಳಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಹಣ ಕೊಡಲು ಒಪ್ಪದಿದ್ದಾಗ ಹಲ್ಲೆ ನಡೆಸಿದ್ದಾರೆ. ಕಾಮಗಾರಿ […]

ಕನ್ನಡ ದುನಿಯಾ 19 Jan 2026 7:59 pm

BREAKING: ದಂಪತಿಯನ್ನು ಕೊಂದ ಹಂತಕನಿಗೆ ಜೀವಾವಧಿ ಶಿಕ್ಷೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಮುಲ್ಕಿ ತಾಲೂಕಿನ ಏಳಿಂಜೆ ಗ್ರಾಮದ ಮುತ್ತಯ್ಯಕೆರೆ ಅಗಿಂದಕಾಡು ಬಳಿ ನಡೆದ ನಡೆದಿದ್ದ ದಂಪತಿ ಕೊಲೆ ಪ್ರಕರಣದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆಲ್ಫೋನ್ಸ್ ಸಾಲ್ದಾನ ಎಂಬಾತನಿಗೆ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಸೋಮವಾರ ಜೀವಾವಧಿ ಶಿಕ್ಷೆ ವಿಧಿಸಿದೆ. 2020ರ ಏಪ್ರಿಲ್ 29ರಂದು ಆಲ್ಫೋನ್ಸ್ ಸಾಲ್ಟಾನ ಮನೆಯ ಬಳಿಯ ವಿನ್ಸೆಂಟ್ ಡಿಸೋಜಾ ಮತ್ತು ಅವರ ಪತ್ನಿ ಹೆಲೆನ್ ಡಿಸೋಜಾ ಅವರನ್ನು ಕೊಲೆ ಮಾಡಿದ್ದ. ಮುಲ್ಕಿ ಪೊಲೀಸ್ ಠಾಣೆಯ ಅಂದಿನ ನಿರೀಕ್ಷಕ ಜಯರಾಮ […]

ಕನ್ನಡ ದುನಿಯಾ 19 Jan 2026 7:35 pm

Good News: ಔಷಧ ಪ್ಯಾಕೆಟ್‌ಗಳ ಮೇಲೆ ಬರಲಿದೆ QR ಕೋಡ್

“ಇಡೀ ರಾಜ್ಯದ ಜನತೆಗೆ ಗುಣಮಟ್ಟದ ಹಾಗೂ ಸಮಾನ ಆರೋಗ್ಯ ಸೇವೆ ಒದಗಿಸುವ ಬದ್ಧತೆಯೊಂದಿಗೆ ನಮ್ಮ ಸರ್ಕಾರ ಸದಾ ನವೀನ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುತ್ತ ಬಂದಿದೆ” ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ಮೈಸೂರಿನ ಜೆಎಸ್‌ಎಸ್ ಕಾಲೇಜ್ ಆಫ್ ಫಾರ್ಮಸಿಯಲ್ಲಿ ಜಪಾನ್-ಭಾರತ ಸಹಯೋಗದ ಜಿಕಾ (JICA) ಬೆಂಬಲಿತ IMPACT-VIP ಕಾರ್ಯಕ್ರಮದಲ್ಲಿ ದೃಷ್ಟಿ‌ ವಿಶೇಷ ಚೇತನರ ಸಬಲೀಕರಣ ಕುರಿತು ನಡೆದ ಅರ್ಥಪೂರ್ಣ ಚರ್ಚೆಯಲ್ಲಿ ಸಚಿವರು ಭಾಗವಹಿಸಿ ಮಾತನಾಡಿದರು. “ಔಷಧ ಬಳಕೆಯ ಕ್ಷೇತ್ರದಲ್ಲಿಯೂ ದೃಷ್ಟಿ‌ ವಿಶೇಷ […]

ಕನ್ನಡ ದುನಿಯಾ 19 Jan 2026 6:53 pm

BREAKING: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ನಿತಿನ್ ನಬಿನ್ ಅವಿರೋಧ ಆಯ್ಕೆ, ನಾಳೆ ಪ್ರಮಾಣ ವಚನ

ನವದೆಹಲಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ನಿತಿನ್ ನಬಿನ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕೇಸರಿ ಪಕ್ಷದ ಮುಖ್ಯಸ್ಥರಾಗಿದ್ದ ಜೆ.ಪಿ. ನಡ್ಡಾ ಬದಲಿಗೆ ನಿತಿನ್ ನಬಿಲ್ ಅವರನ್ನು ಆಯ್ಕೆ ಮಾಡಲಾಗಿದೆ. ಈಗಾಗಲೇ ನಿತಿನ್ ನಬಿನ್ ಅವರನ್ನು ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷರಾಗಿ ನೇಮಿಸಲಾಗಿದ್ದು, ಇದೀಗ ಅವರು ಅವಿರೋಧವಾಗಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ನಾಳೆ ಕೇಸರಿ ಪಕ್ಷದ ಮುಖ್ಯಸ್ಥರಾಗಿ ನಿತಿನ್ ನಬಿನ್ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಸರ್ವಾನುಮತದ ನಿರ್ಣಯದಲ್ಲಿ, ನಿತಿನ್ ನಬಿನ್ ಅವರನ್ನು ವಿರೋಧವಿಲ್ಲದೆ ಭಾರತೀಯ ಜನತಾ ಪಕ್ಷದ (ಬಿಜೆಪಿ) ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. […]

ಕನ್ನಡ ದುನಿಯಾ 19 Jan 2026 6:45 pm

ಚುನಾವಣಾ ಆಯೋಗದ ಎಸ್ಐಆರ್ ಪ್ರಕ್ರಿಯೆ: ಮತದಾರರಿಗೆ ಅನ್ಯಾಯವಾಗದಂತೆ ಕಾರ್ಯನಿರ್ವಹಿಸಿ: ಬಿಎಲ್ ಓ ಗಳಿಗೆ ಸಿಎಂ ಸೂಚನೆ

ಬೆಳಗಾವಿ: ಚುನಾವಣಾ ಆಯೋಗ ನಡೆಸುವ ಎಸ್ಐಆರ್ ವಿಚಾರದಲ್ಲಿ ಕಾಂಗ್ರೆಸ್ ಎಂದಿಗೂ ರಾಜಕೀಯ ಮಾಡುವುದಿಲ್ಲ. ಆದರೆ ನಿಜವಾದ ಮತದಾರರು ಪಟ್ಟಿಯಿಂದ ಹೊರಗುಳಿಯಬಾರದು ಎಂಬುದಷ್ಟೇ ನಮ್ಮ ಕಾಳಜಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಚುನಾವಣಾ ಆಯೋಗ ನಡೆಸುವ ಎಸ್ಐಆರ್ ಪ್ರಕ್ರಿಯೆಯಂತೆ ರಾಜ್ಯದ 3 ಕೋಟಿ ಮತದಾರರು ಮ್ಯಾಪ್ ಆಗಿಲ್ಲವೆಂದು ತಿಳಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಎಸ್ಐಆರ್ ಪ್ರಕ್ರಿಯೆ ಎಚ್ಚರಿಕೆಯಿಂದ ನಡೆಯಬೇಕಿದ್ದು, ಯಾವುದೇ ಮತದಾರರಿಗೆ ಅನ್ಯಾಯವಾಗದಂತೆ ಕಾರ್ಯನಿರ್ವಹಿಸಬೇಕು ಎಂದು ಬಿಎಲ್ ಓ ಗಳಿಗೆ ಸೂಚಿಸಲಾಗಿದೆ ಎಂದರು. […]

ಕನ್ನಡ ದುನಿಯಾ 19 Jan 2026 6:38 pm

BREAKING: ಶಾಲಾ ಬಸ್ ಗೆ ಟ್ರಕ್ ಡಿಕ್ಕಿ: ಭೀಕರ ಅಪಘಾತದಲ್ಲಿ 12 ಮಕ್ಕಳು ಸಾವು

ಜೋಹಾನ್ಸ್‌ಬರ್ಗ್: ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್‌ ನ ನೈಋತ್ಯದಲ್ಲಿ ಶಾಲಾ ಮಿನಿಬಸ್‌ ಗೆ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ಸುಮಾರು 12 ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗೌಟೆಂಗ್ ಪ್ರಾಂತ್ಯದಲ್ಲಿ ಸೋಮವಾರ ಈ ಘಟನೆ ನಡೆದಿದೆ. ಹೆಚ್ಚಿನ ಮಕ್ಕಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತುರ್ತು ಸೇವೆಗಳ ಸಿಬ್ಬಂದಿ ತಿಳಿಸಿದ್ದಾರೆ. ಅಪಘಾತದ ಸ್ವಲ್ಪ ಸಮಯದ ನಂತರ ಹನ್ನೊಂದು ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಘೋಷಿಸಲಾಗಿದೆ. ಗಂಭೀರ ಗಾಯಗಳೊಂದಿಗೆ ಆಸ್ಪತ್ರೆಗೆ ಸಾಗಿಸಲಾದ ಮತ್ತೊಂದು ಮಗು ನಂತರ ಚಿಕಿತ್ಸೆಯ ಸಮಯದಲ್ಲಿ ಸಾವನ್ನಪ್ಪಿದೆ. ಖಾಸಗಿಯಾಗಿ […]

ಕನ್ನಡ ದುನಿಯಾ 19 Jan 2026 6:34 pm

ರಾಜ್ಯದ ವಸತಿ ರಹಿತ ಫಲಾನುಭವಿಗಳಿಗೆ ಗುಡ್ ನ್ಯೂಸ್ : ಸರ್ಕಾರದಿಂದ 42,345 ಮನೆಗಳ ವಿತರಣೆ

ಧಾರವಾಡ : ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಸ್ವಂತ ಮನೆ ಎಂಬ ಕನಸನ್ನು ನನಸಾಗಿಸುವ ಮಹತ್ವದ ಯೋಜನೆಯನ್ನು ಜನವರಿ 24, 2026 ರಂದು ಹುಬ್ಬಳ್ಳಿಯಲ್ಲಿ ಹಮ್ಮಿಕೊಳ್ಳಲಾಗಿದ್ದು, ಮನೆಗಳ ಲೋಕಾರ್ಪಣೆ ಕಾರ್ಯಕ್ರಮವು ಸರ್ಕಾರದ ಜನಪರ ಕಾರ್ಯಗಳಿಗೆ ಪ್ರತೀಕವಾಗಿದ್ದು, ಇದನ್ನು ಅತ್ಯಂತ ವ್ಯವಸ್ಥಿತವಾಗಿ ಹಾಗೂ ಯಶಸ್ವಿಯಾಗಿ ಆಯೋಜಿಸಲಾಗುತ್ತಿದೆ.ಜವಾಬ್ದಾರಿ ಹಂಚಿಕೆಯಾಗಿರುವ ಅಧಿಕಾರಿಗಳು ನಿಯಮಾನುಸಾರ ಕಾರ್ಯನಿರ್ವಹಿಸಬೇಕೆಂದು ಕಾರ್ಮಿಕ ಇಲಾಖೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಎಸ್. ಲಾಡ್ ಅವರು ಹೇಳಿದರು. ಅವರು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಪ್ರಧಾನ ಮಂತ್ರಿ […]

ಕನ್ನಡ ದುನಿಯಾ 19 Jan 2026 6:21 pm

WEF ಸಭೆಗೆ ಭಾರತ ಸರ್ಕಾರದ ವಿಶೇಷ ಪ್ರತಿನಿಧಿಯಾಗಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಭಾಗಿ: ಕರ್ನಾಟಕದಿಂದ ಕೇಂದ್ರ ಸಚಿವರ ಪೈಕಿ ಮೊದಲಿಗರು

ನವದೆಹಲಿ: ದಾವೋಸ್‌ನಲ್ಲಿ ಐದು ದಿನಗಳ ಕಾಲ ನಡೆಯಲಿರುವ ವಿಶ್ವ ಆರ್ಥಿಕ ವೇದಿಕೆ ಮಹತ್ವದ (WEF) ಸಭೆಯಲ್ಲಿ ಭಾರತ ಸರ್ಕಾರದ ಪ್ರಮುಖ ಪ್ರತಿನಿಧಿಯಾಗಿ ಕೇಂದ್ರದ ಹಿರಿಯ ಸಚಿವ ಪ್ರಲ್ಹಾದ ಜೋಶಿ ಪ್ರತಿನಿಧಿಸುತ್ತಿದ್ದಾರೆ. ವಿಶ್ವ ಮಟ್ಟದಲ್ಲಿ ಮಹತ್ವ ಪಡೆದಿರುವ WEF ಸಭೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಪರವಾಗಿ ಕೇಂದ್ರದ ವಿಶೇಷ ಪ್ರತಿನಿಧಿಯಾಗಿ ಕೇಂದ್ರ ಗ್ರಾಹಕ ವ್ಯವಹಾರ, ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ಅವರನ್ನು ಆಯ್ಕೆ ಮಾಡಿ ಕಳುಹಿಸಿದ್ದಾರೆ. ಪ್ರಲ್ಹಾದ ಜೋಶಿ, ಜಾಗತಿಕ ಮಟ್ಟದಲ್ಲಿ […]

ಕನ್ನಡ ದುನಿಯಾ 19 Jan 2026 6:16 pm

ರಾಜ್ಯದಲ್ಲಿ ‘SSLC’ಪೂರ್ವಸಿದ್ಧತಾ ಪರೀಕ್ಷೆ-2 , 3 ಕ್ಕೆ ಶಿಕ್ಷಣ ಇಲಾಖೆಯಿಂದ ‘ಮಾರ್ಗಸೂಚಿ’ಬಿಡುಗಡೆ

ಬೆಂಗಳೂರು : ರಾಜ್ಯದಲ್ಲಿ SSLC ಪೂರ್ವಸಿದ್ಧತಾ ಪರೀಕ್ಷೆ-2, 3 ನಡೆಸಲು ಶಿಕ್ಷಣ ಇಲಾಖೆ ಮಾರ್ಗಸೂಚಿ ಬಿಡುಗಡೆ ಮಾಡಿದೆ. 2025-26ನೇ ಸಾಲಿನ ಎಸ್.ಎಸ್.ಎಲ್.ಸಿ ಪೂರ್ವಸಿದ್ಧತಾ ಪರೀಕ್ಷೆ 1ನ್ನು ದಿನಾಂಕ: 05.01.2026 ರಿಂದ 10.01.2026 ರವರೆಗೆ ನಡೆಸಲಾಗಿರುತ್ತದೆ. ಪೂರ್ವ ಸಿದ್ಧತಾ ಪರೀಕ್ಷೆಗೆ ಮುಖ್ಯ ಪರೀಕ್ಷೆಯ ಮಾದರಿಯಂತೆ ಪ್ರಶ್ನೆ ಪತ್ರಿಕೆಗಳನ್ನು ಮಂಡಳಿಯಿಂದ ಸಿದ್ದಪಡಿಸಿ, ಅಯಾ ದಿನದ ಪ್ರಶ್ನೆಪತ್ರಿಕೆಯನ್ನು ವೇಳಾಪಟ್ಟಿಯಂತೆ ವಿಷಯವಾರು ಪ್ರಶ್ನೆಪತ್ರಿಕೆಯನ್ನು ಪರೀಕ್ಷಾ ದಿನದಂದು ಪೂರ್ವಾಹ್ನ 07.00 ಗಂಟೆಗೆ ಪ್ರೌಢಶಾಲೆಗಳ ಮುಖ್ಯಶಿಕ್ಷಕರ ಶಾಲಾ ಲಾಗಿನಲ್ಲಿ ಅಪ್ಲೋಡ್ ಮಾಡಲಾಗಿತ್ತು. ಸಂಬಂಧಿಸಿದ ಪ್ರೌಢ ಶಾಲಾ […]

ಕನ್ನಡ ದುನಿಯಾ 19 Jan 2026 6:11 pm

BIG News: ಹುಣಸೂರು ಜ್ಯುವೆಲ್ಲರಿ ಶಾಪ್ ದರೋಡೆ, ಇಬ್ಬರ ಬಂಧನ

ರಾಜ್ಯವನ್ನು ಬೆಚ್ಚಿ ಬೀಳಿಸಿದ್ದ ಹುಣಸೂರು ಬಸ್ ನಿಲ್ದಾಣದ ಹಿಂಭಾಗದಲ್ಲಿ ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ಚಿನ್ನಂಗಡಿ ದರೋಡೆ ಪ್ರಕರಣದ ಅಪ್‌ಡೇಟ್ ಸಿಕ್ಕಿದೆ. 5ಕ್ಕೂ ಹೆಚ್ಚು ಜನರ ಗ್ಯಾಂಗ್‌ ಅಂಗಡಿಗೆ ನುಗ್ಗಿ, ಸಿಬ್ಬಂದಿಗೆ ಗನ್ ತೋರಿಸಿ 4 ರಿಂದ 5 ಕೋಟಿ ರೂ. ಮೌಲ್ಯದ ಚಿನ್ನ ಮತ್ತು ವಜ್ರಾಭರಣಗಳನ್ನು ಡಿಸೆಂಬರ್ 28, 2025ರಂದು ದರೋಡೆ ಮಾಡಿ ಪರಾರಿಯಾಗಿತ್ತು. ಈಗ ಹುಣಸೂರು ಪಟ್ಟಣದ ಚಿನ್ನದ ಅಂಗಡಿಯಲ್ಲಿ ದರೋಡೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ದರೋಡೆಕೋರರನ್ನು ಬಂಧಿಸಲಾಗಿದೆ ಎಂದು ಮೈಸೂರು ಎಸ್‌ಪಿ […]

ಕನ್ನಡ ದುನಿಯಾ 19 Jan 2026 6:11 pm

‘ದ್ವಿತೀಯ PUC’ವಾರ್ಷಿಕ ಪರೀಕ್ಷೆಗೆ ಪ್ರಾಯೋಗಿಕ ಪರೀಕ್ಷೆಯ ಅಂಕ ನಮೂದು : ಪರೀಕ್ಷಾ ಮಂಡಳಿ ಮಹತ್ವದ ಆದೇಶ

ಬೆಂಗಳೂರು : 2026ರ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗೆ ಸಂಬಂಧಿಸಿದಂತೆ. NSQF ಪ್ರಾಯೋಗಿಕ ಪರೀಕ್ಷೆಯ ಅಂಕಗಳನ್ನು ನಮೂದು ಮಾಡುವ ಕುರಿತು ಪರೀಕ್ಷಾ ಮಂಡಳಿ ಸುತ್ತೋಲೆ ಹೊರಡಿಸಿದೆ. 2026ರ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗೆ ಸಂಬಂಧಿಸಿದಂತೆ, NSQF ಪ್ರಾಯೋಗಿಕ ಪರೀಕ್ಷೆಯ (Practical Exam) ಅಂಕಗಳನ್ನು Online ನಲ್ಲಿ Update ಮಾಡುವ ಕುರಿತು ಮತ್ತು ಅಂಕಗಳನ್ನು ಹಿಂದಿನ ವರ್ಷಗಳಂತಯೇ Mark List ಗಳಲ್ಲಿ ನಮೂದು ಮಾಡುವ ಸಂದರ್ಭದಲ್ಲಿ ಈ ಕೆಳಕಂಡ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ತಿಳಿಸಿದೆ. NSQF ಪ್ರಾಯೋಗಿಕ ಪರೀಕ್ಷಾ […]

ಕನ್ನಡ ದುನಿಯಾ 19 Jan 2026 5:52 pm

ಬೆಂಗಳೂರಿಗೆ ಬ್ಯಾಡ್ ನ್ಯೂಸ್: ಸಬ್ ಅರ್ಬನ್ ರೈಲು ಯೋಜನೆ ಇನ್ನೂ ವಿಳಂಬ

ಬೆಂಗಳೂರು ನಗರದ ಸಂಚಾರ ದಟ್ಟಣೆ ಕಡಿಮೆ ಮಾಡುವ ಮಹತ್ವದ ಯೋಜನೆ ಬೆಂಗಳೂರು ಉಪನಗರ ರೈಲು ಯೋಜನೆ (ಬಿಎಸ್‌ಆರ್‌ಪಿ) ಅಥವ ಬೆಂಗಳೂರು ಸಬ್ ಅರ್ನ್ ರೈಲು ಯೋಜನೆ. 2026ರಲ್ಲಿ ರೈಲು ಓಡಿಸುವ ಗುರಿ ಹೊಂದಲಾಗಿತ್ತು. ಆದರೆ ಈಗ ಯೋಜನೆಯ ಗಡುವು ಬದಲಾಗಿದೆ, ಯೋಜನೆ ಮತ್ತಷ್ಟು ವಿಳಂಬವಾಗಲಿದೆ. 4 ಕಾರಿಡಾರ್‌ಗಳ 148 ಕಿ.ಮೀ.ಉದ್ದದ ಬೆಂಗಳೂರು ಸಬ್ ಅರ್ಬನ್ ರೈಲು ಯೋಜನೆಯನ್ನು 40 ತಿಂಗಳಲ್ಲಿ ಪೂರ್ಣಗೊಳಿಸಲು ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ್ದ ಗಡುವು 2025ರ ಅಕ್ಟೋಬರ್‌ನಲ್ಲಿಯೇ ಮುಕ್ತಾಯಗೊಂಡಿದೆ. ಕರ್ನಾಟಕ ಸರ್ಕಾರ […]

ಕನ್ನಡ ದುನಿಯಾ 19 Jan 2026 5:50 pm

 ‘PM ಕಿಸಾನ್’ಪ್ರೋತ್ಸಾಹಧನ ಪಡೆಯಲು ಕೇಂದ್ರ ಸರ್ಕಾರದ ರೈತರ ಗುರುತಿನ ಚೀಟಿ ಕಡ್ಡಾಯ

ಭಾರತ ಸರ್ಕಾರವು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ರಾಜ್ಯದಲ್ಲಿ ಜಾರಿಗೊಳಿಸಿದ್ದು ಮಾರ್ಗಸೂಚಿಯಂತೆ ದಿನಾಂಕ 01-02-2010ರ ಪೂರ್ವದಲ್ಲಿ ಭೂ ಒಡೆತನ ಹೊಂದಿರುವ ಪ್ರತಿ ಅರ್ಹ ಸಣ್ಣ/ ಅತಿಸಣ್ಣ/ ಮಧ್ಯಮ/ ದೊಡ್ಡ ರೈತರ ಕುಟುಂಬಕ್ಕೆ ಕೇಂದ್ರ ಸರ್ಕಾರದಿಂದ ಒಂದು ವರ್ಷಕ್ಕೆ ರೂ.6000/-ಗಳನ್ನು, ತಿಂಗಳಿಗೊಮ್ಮೆ 3 ಕಂತುಗಳಲ್ಲಿ ರೂ.2000/- ರಂತೆ ಪ್ರೋತ್ಸಾಹ ಧನವನ್ನು ಇಲ್ಲಿಯವರೆಗೆ ಪಾವತಿಸಲಾಗುತ್ತಿದೆ. ಈ ಪ್ರೋತ್ಸಾಹಧನವನ್ನು ಮುಂದುವರಿಸಲು ಪ್ರೂಟ್ಸ್ ತಂತ್ರಾಂಶದ ಗುರುತಿನ ಸಂಖ್ಯೆಯಂತೆ ಕೇಂದ್ರ ಸರ್ಕಾರವು ಅಗ್ರಿಸ್ಟ್ಯಾಕ್ ಯೋಜನೆ ಅಡಿ ಗುರುತಿನ ಸಂಖ್ಯೆಯನ್ನು ಸೃಜಿಸುವುದು ಕಡ್ಡಾಯಗೊಳಿಸಲಾಗಿದೆ. […]

ಕನ್ನಡ ದುನಿಯಾ 19 Jan 2026 5:35 pm

Viral:ತಿಂಗಳಿಗೆ ₹45,000 ಸಂಪಾದನೆ, ಬೆಂಗಳೂರಿನ ಈ ಮಹಿಳಾ ಆಟೋ ಚಾಲಕಿಯ ಸ್ವಾಭಿಮಾನದ ಬದುಕಿಗೆ ಫಿದಾ ಆದ ನೆಟ್ಟಿಗರು

ಬೆಂಗಳೂರು:ಬೆಂಗಳೂರು ಅಂದ್ರೆ ಬರೀ ಟ್ರಾಫಿಕ್ ಜಾಮ್, ಸಿಗ್ನಲ್ ಕಾಯುವ ಕಿರಿಕಿರಿ ಮಾತ್ರವಲ್ಲ ಇಲ್ಲಿ ಜೀವನ ಕಟ್ಟಿಕೊಳ್ಳುವ ಸ್ಪೂರ್ತಿದಾಯಕ ಕಥೆಗಳಿಗೂ ಬರವಿಲ್ಲ ಇತ್ತೀಚೆಗೆ ಸಿಲಿಕಾನ್ ಸಿಟಿಯ ಟೆಕ್ಕಿಯೊಬ್ಬರು ಬುಕ್ ಮಾಡಿದ ಆಟೋ ಹತ್ತಿರ ಬಂದಾಗ ಅವರಿಗೆ ಕಾದಿತ್ತು ಒಂದು ಸಿಹಿ ಅಚ್ಚರಿ. ಆಟೋ ಸೀಟಿನಲ್ಲಿ ಕುಳಿತಿದ್ದು ಸಾಮಾನ್ಯ ಚಾಲಕನಲ್ಲ ಬದಲಾಗಿ ಆತ್ಮವಿಶ್ವಾಸದ ನಗು ಹೊತ್ತ ಮಹಿಳಾ ಚಾಲಕಿ. ಕೋರಮಂಗಲದ ಈ ಮಹಿಳಾ ಚಾಲಕಿಯ ಕಾಯಕ ನಿಷ್ಠೆ ಮತ್ತು ಕಠಿಣ ಪರಿಶ್ರಮವನ್ನು ಕಂಡ ಟೆಕ್ಕಿ ಸ್ನೇಹಾ ಪ್ರಭು ಮತ್ತು ಅವರ […]

ಕನ್ನಡ ದುನಿಯಾ 19 Jan 2026 5:32 pm

ಒಬ್ಬ ವ್ಯಕ್ತಿ ಎಷ್ಟು ‘ಬಿಯರ್’ಕುಡಿಯಬಹುದು ? ವೈದ್ಯರು ಏನು ಹೇಳುತ್ತಾರೆ..?

ತೆಲಂಗಾಣ : ಸಂಕ್ರಾಂತಿ ಹಬ್ಬವು ಇಬ್ಬರು ಯುವಕರ ಕುಟುಂಬಗಳಲ್ಲಿ ದುರಂತವನ್ನುಂಟು ಮಾಡಿತು. ಪೈಪೋಟಿ ನಡೆಸಿ ಹೆಚ್ಚು ಬಿಯರ್ ಕುಡಿದು ಇಬ್ಬರು ಯುವಕರು ಸಾವನ್ನಪ್ಪಿದರು. ಈ ಘಟನೆ ಅನ್ನಮಯ ಜಿಲ್ಲೆಯಲ್ಲಿ ಸಂಚಲನ ಮೂಡಿಸಿದೆ. ಚೆನ್ನೈ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡುವ ಅವಳಕುಂಟ ಮಣಿಕುಮಾರ್ (34) ಮತ್ತು ವೇಮುಲ ಪುಷ್ಪರಾಜ್ (26) ಹಬ್ಬದ ಸಂದರ್ಭದಲ್ಲಿ ತಮ್ಮ ಸ್ನೇಹಿತರೊಂದಿಗೆ ಪಾರ್ಟಿ ಮಾಡಲು ತಮ್ಮ ಊರಿಗೆ ಬಂದರು. ಪಾರ್ಟಿಯ ಸಮಯದಲ್ಲಿ, ಮಣಿಕುಮಾರ್ ಮತ್ತು ಪುಷ್ಪರಾಜ್ ಇಬ್ಬರೂ ಮಧ್ಯಾಹ್ನ 3 ರಿಂದ ಸಂಜೆ 7.30 […]

ಕನ್ನಡ ದುನಿಯಾ 19 Jan 2026 5:30 pm

BIG NEWS: ಐಪಿಎಸ್ ಅಧಿಕಾರಿ ರಾಮಚಂದ್ರ ರಾವ್ ರಾಸಲೀಲೆ ಪ್ರಕರಣ: ಶಿಸ್ತು ಕ್ರಮ ಕೈಗೊಳ್ಳುತ್ತೇವೆ: ಸಿಎಂ ಸಿದ್ದರಾಮಯ್ಯ

ಬೆಳಗಾವಿ: ಐಪಿಎಸ್ ಅಧಿಕಾರಿ ರಾಮಚಂದ್ರ ರಾವ್ ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥರು ಯಾರೇ ಆಗಿರಲಿ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಬೆಳಗಾವಿ ಜಿಲ್ಲೆಯ ನಂದಗಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಐಪಿಎಸ್ ಅಧಿಕಾರಿ ರಾಮಚಂದ್ರ ರಾವ್ ರಾಸಲೀಲೆ ಪ್ರಕರಣದ ಬಗ್ಗೆ ನನಗೆ ಬೆಳಿಗ್ಗೆ ಗೊತ್ತಾಯಿತು. ಈ ಬಗ್ಗೆ ವಿಚಾರಣೆ ಮಾಡಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ಕಾನೂನಿಗಿಂತ ದೊಡ್ದವರು ಯಾರೂ ಇಲ್ಲ. ತಪ್ಪಿತಸ್ಥ ಯಾರೇ ಆಗಿರಲಿ, ಎಷ್ಟು ದೊಡ್ದ ವ್ಯಕ್ತಿಯೇ ಆಗಿರಲಿ […]

ಕನ್ನಡ ದುನಿಯಾ 19 Jan 2026 5:22 pm

‘ಸ್ವಾತಂತ್ರ್ಯದ ಓಟ’ಕಾದಂಬರಿಯ ರಂಗಪ್ರಯೋಗಕ್ಕೆ ಕಲಾವಿದರಿಂದ ಅರ್ಜಿ ಆಹ್ವಾನ : ಅವಧಿ ವಿಸ್ತರಣೆ

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಬೊಳುವಾರು ಮೊಹಮ್ಮದ್ ಕುಂಞ ಅವರ ಸ್ವಾತಂತ್ರ್ಯದ ಓಟ ಕಾದಂಬರಿಯನ್ನು ನಾಟಕ ರೂಪದಲ್ಲಿ ರಂಗಾಯಣ, ಶಿವಮೊಗ್ಗ ನಿರ್ಮಾಣ ಮಾಡಿ ರಾಜ್ಯಾದ್ಯಂತ ಪ್ರದರ್ಶಿಸುವ ಯೋಜನೆ ಹಮ್ಮಿಕೊಂಡಿದ್ದು, ಈ ಯೋಜನೆಗೆ 2026 ರ ಫೆಅಬ್ರವರಿಯಿಂದ 2026 ರ ಜೂನ್‌ವರೆಗೆ ಐದು ತಿಂಗಳ ಅವಧಿಗೆ ರೆಪರ್ಟರಿ ಕಲಾವಿದರಲ್ಲದೇ 15 ಜನ ಆಸಕ್ತ ಹಾಗೂ ಅನುಭವಿ ಕಲಾವಿದರಿಂದ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು ಜ. 28 ರವರೆಗೆ ವಿಸ್ತರಿಸಲಾಗಿದೆ. ಕಲಾವಿದರ ವಯಸ್ಸು ಕನಿಷ್ಟ 20 […]

ಕನ್ನಡ ದುನಿಯಾ 19 Jan 2026 5:13 pm

BREAKING : ಮೈಸೂರಿನ ಖಾಸಗಿ ಹೋಟೆಲ್ ನಲ್ಲಿ ‘RFO’ನಿಗೂಢ ಸಾವು.!

ಮೈಸೂರು : ನಗರದ ಖಾಸಗಿ ಹೋಟೆಲ್ ಒಂದರಲ್ಲಿ ಆರ್ ಎಫ್ ಒ ಶವವಾಗಿ ಪತ್ತೆಯಾದ ಘಟನೆ ಮೈಸೂರು ಕೇಂದ್ರ ಬಸ್ ನಿಲ್ದಾಣದ ಬಳಿಯಿರುವ ಹೋಟೆಲ್ ನಲ್ಲಿ ನಡೆದಿದೆ. ಟಿ ನರಸೀಪುರ ಆರ್ ಎಫ್ ಒ ಕಾಂತರಾಜ್ ಚೌಹಾಣ್ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ. ಕಾಂತರಾಜ್ ಅವರು 15 ದಿನದ ಹಿಂದೆಯಷ್ಟೇ ನರಸೀಪುರಕ್ಕೆ ವರ್ಗಾವಣೆಯಾಗಿದ್ದರು ಯುವರಾಜ್ ಗೆಲಾಕ್ಸಿ ಹೋಟೆಲ್ ಸಮೀಪದ ಕುಮಾರನ್ ಜ್ಯುವೆಲರ್ಸ್ ಹಿಂಭಾಗದ ಕಾರಿಡಾರ್ ನಲ್ಲಿ ಕಾಂತರಾಜ್ ಶವವಾಗಿ ಪತ್ತೆಯಾಗಿದ್ದಾರೆ. ಅವರ ಜೊತೆ ಸ್ನೇಹಿತ ಮಲ್ಲನಗೌಡ […]

ಕನ್ನಡ ದುನಿಯಾ 19 Jan 2026 5:05 pm

ಚಳಿಗಾಲದಲ್ಲಿ ನಿಮ್ಮ ಕಾರಿನ ಮೈಲೇಜ್ ಕಡಿಮೆಯಾಗಿದೆಯೇ ? ಹೆಚ್ಚಿಸಲು ಈ ಟ್ರಿಕ್ಸ್ ಬಳಸಿ

ಚಳಿಗಾಲದಲ್ಲಿ ಕಾರು ಓಡಿಸುವುದರಿಂದ ಮೈಲೇಜ್ ಕಡಿಮೆಯಾಗುತ್ತದೆ ಎಂದು ನಾವು ಕೇಳಿದ್ದೇವೆ. ನೀವು ಕಾರು ಹೊಂದಿದ್ದರೆ, ಮೈಲೇಜ್ ಸಮಸ್ಯೆಗಳನ್ನು ಸಹ ನೀವು ಗಮನಿಸಬಹುದು. ಇದು ಹಲವು ಕಾರಣಗಳಿಗಾಗಿ ಸಂಭವಿಸಬಹುದು. ಆದರೆ ನೀವು ನಿಮ್ಮ ಮೈಲೇಜ್ ಅನ್ನು ಶೇಕಡಾ 20 ರಿಂದ 30 ರಷ್ಟು ಹೆಚ್ಚಿಸಬಹುದು. ಇದಕ್ಕಾಗಿ ಕೆಲವು ಅತ್ಯುತ್ತಮ ಸಲಹೆಗಳಿವೆ. ಚಳಿಗಾಲದಲ್ಲಿ ನೀವು ಈ ಸಲಹೆಗಳನ್ನು ಅನುಸರಿಸಿದರೆ, ನಿಮ್ಮ ಪೆಟ್ರೋಲ್-ಡೀಸೆಲ್ ವೆಚ್ಚಗಳು ಗಮನಾರ್ಹವಾಗಿ ಕಡಿಮೆಯಾಗುತ್ತವೆ. ನೀವು ಪ್ರತಿ ತಿಂಗಳು ಬಹಳಷ್ಟು ಹಣವನ್ನು ಉಳಿಸುತ್ತೀರಿ.

ಕನ್ನಡ ದುನಿಯಾ 19 Jan 2026 4:51 pm

BREAKING: ರಾಸಲೀಲೆ ಪ್ರಕರಣ: ಹಿರಿಯ ಪೊಲೀಸ್ ಅಧಿಕಾರಿ ರಾಮಚಂದ್ರ ರಾವ್ ಮೊದಲ ಪ್ರತಿಕ್ರಿಯೆ

ಬೆಂಗಳೂರು: ಕಚೇರಿಯಲ್ಲಿ ಕರ್ತವ್ಯದಲ್ಲಿದ್ದಾಗಲೇ ಮಹಿಳೆಯರೊಂದಿಗೆ ರಾಸಲೀಲೆಯಲ್ಲಿ ತೊಡಗಿದ್ದ ತಮ್ಮದೇ ವಿಡಿಯೋ ವೈರಲ್ ಆಗಿರುವ ಪ್ರಕರಣ ಸಂಬಂಧ ಹಿರಿಯ ಪೊಲೀಸ್ ಅಧಿಕಾರಿ ಡಾ.ರಾಮಚಂದ್ರ ರಾವ್ ಪ್ರತಿಕ್ರಿಯೆ ನೀಡಿದ್ದಾರೆ. ರಾಸಲೀಲೆ ಪ್ರಕರಣದ ವಿಡಿಯೋ ವೈರಲ್ ಆಗಿತ್ತಿದ್ದಂತೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಭೇಟಿಗೆ ಬಂದ ರಾಮಚಂದ್ರ ರಾವ್ ಅವರನ್ನು ಭೇಟಿಯಾಗಲು ಗೃಹ ಸಚಿವರು ನಿರಾಕರಿಸಿದ್ದಾರೆ. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ರಾಮಚಂದ್ರ ರಾವ್, ಗೃಹ ಸಚಿವರು ಅನಾರೋಗ್ಯ ಕಾರಣಕ್ಕೆ ಭೇಟಿಯಾಗಲು ನಿರಾಕರಿಸಿದ್ದಾರೆ ಎಂದು ತಿಳಿಸಿದ್ದಾರೆ. ರಾಸಲೀಲೆ ವಿಡಿಯೋ ವಿಚಾರವಾಗಿ, ಇದು ಹಳೆಯ […]

ಕನ್ನಡ ದುನಿಯಾ 19 Jan 2026 4:46 pm

ಬರೇಲಿ: ಖಾಲಿ ಮನೆಯಲ್ಲಿ ನಮಾಜ್‌ : 12 ಮಂದಿ ಪೊಲೀಸ್ ವಶಕ್ಕೆ ವಿಡಿಯೋ ವೈರಲ್

ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಮೊಹಮ್ಮದ್‌ಗಂಜ್ ಗ್ರಾಮದಲ್ಲಿ ಅನುಮತಿ ಇಲ್ಲದೆ ಖಾಲಿ ಮನೆಯೊಂದರಲ್ಲಿ ನಮಾಜ್ ಪ್ರಾರ್ಥನೆ ಸಲ್ಲಿಸುತ್ತಿದ್ದ 12 ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಘಟನೆಯ ಹಿನ್ನೆಲೆ ಏನು? ಪೊಲೀಸ್ ವರಿಷ್ಠಾಧಿಕಾರಿ (ದಕ್ಷಿಣ) ಅನ್ಶಿಕಾ ವರ್ಮಾ ಅವರ ಹೇಳಿಕೆಯಂತೆ, ಗ್ರಾಮದ ಖಾಲಿ ಮನೆಯೊಂದನ್ನು ಕಳೆದ ಕೆಲವು ವಾರಗಳಿಂದ ತಾತ್ಕಾಲಿಕ ಮದರಸಾ ಆಗಿ ಬಳಸಲಾಗುತ್ತಿದೆ ಎಂಬ ದೂರುಗಳು ಗ್ರಾಮಸ್ಥರಿಂದ ಬಂದಿದ್ದವು. ಈ ಮಾಹಿತಿಯನ್ನು ಆಧರಿಸಿ ಮುನ್ನೆಚ್ಚರಿಕಾ ಕ್ರಮವಾಗಿ […]

ಕನ್ನಡ ದುನಿಯಾ 19 Jan 2026 4:46 pm

IT ಉದ್ಯೋಗಿಗಳಿಗೆ ಗುಡ್ ನ್ಯೂಸ್ : ಭಾರತದಲ್ಲಿ ದೈತ್ಯ ಕಂಪನಿಯ ವಿಸ್ತರಣೆ, 50,000 ಹೊಸ ಉದ್ಯೋಗ ಸೃಷ್ಟಿ.!.

ಭಾರತವು ಜಾಗತಿಕ ತಂತ್ರಜ್ಞಾನ ಮತ್ತು ಸೇವೆಗಳ ಕೇಂದ್ರವಾಗಿ ವೇಗವಾಗಿ ಹೊರಹೊಮ್ಮುತ್ತಿದೆ. ಈ ಸಂದರ್ಭದಲ್ಲಿ, ಪ್ರಮುಖ ಜಾಗತಿಕ ಸಲಹಾ ಸಂಸ್ಥೆ ‘ಡೆಲಾಯ್ಟ್’ ತನ್ನ ಕಾರ್ಯಾಚರಣೆಯನ್ನು ಬೃಹತ್ ಪ್ರಮಾಣದಲ್ಲಿ ವಿಸ್ತರಿಸಲು ನಿರ್ಧರಿಸಿದೆ. ಹೌದು, ದೇಶದಲ್ಲಿ ಪ್ರಸ್ತುತ 1.40 ಲಕ್ಷ ಉದ್ಯೋಗಿಗಳ ಜೊತೆಗೆ 50,000 ವೃತ್ತಿಪರರನ್ನು ನೇಮಿಸಿಕೊಳ್ಳುವುದಾಗಿ ಕಂಪನಿ ಘೋಷಿಸಿದೆ. ಇದು ಭಾರತದಲ್ಲಿ ಒಟ್ಟು ಡೆಲಾಯ್ಟ್ ಉದ್ಯೋಗಿಗಳ ಸಂಖ್ಯೆಯನ್ನು ಸುಮಾರು 1.90 ಲಕ್ಷಕ್ಕೆ ಕೊಂಡೊಯ್ಯುತ್ತದೆ. ಐಟಿ ಮತ್ತು ಸೇವಾ ವಲಯದಲ್ಲಿ ಉದ್ಯೋಗಗಳನ್ನು ಹುಡುಕುತ್ತಿರುವವರಿಗೆ ಇದು ಶುಭ ಸುದ್ದಿ. ಸಾವಿರಾರು ಹೊಸ ಉದ್ಯೋಗಗಳು […]

ಕನ್ನಡ ದುನಿಯಾ 19 Jan 2026 4:27 pm

ಶಾಲೆಯಿಂದ ಬರುವಾಗಲೇ ನದಿಗೆ ಜಿಗಿದ ಬಾಲಕಿ ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ ಕಂಡು ಕಣ್ಣೀರಿಟ್ಟ ನೆಟ್ಟಿಗರು

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಸಿಸಿಟಿವಿ (CCTV) ದೃಶ್ಯಾವಳಿಯು ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಶಾಲೆಯಿಂದ ಹಿಂದಿರುಗುತ್ತಿದ್ದ ಅಪ್ರಾಪ್ತ ಬಾಲಕಿಯೊಬ್ಬಳು ಏಕಾಏಕಿ ಸೇತುವೆಯಿಂದ ನದಿಗೆ ಜಿಗಿದ ಹೃದಯವಿದ್ರಾವಕ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಘಟನೆಯ ಕುರಿತಾದ ಪ್ರಮುಖ ವಿವರಗಳು ಮತ್ತು ಸದ್ಯದ ಅಪ್‌ಡೇಟ್ ಇಲ್ಲಿದೆ: ಘಟನೆಯ ವಿವರ: ಘಟನೆ: ಶಾಲಾ ಸಮವಸ್ತ್ರದಲ್ಲಿದ್ದ ವಿದ್ಯಾರ್ಥಿನಿಯೊಬ್ಬಳು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ, ಇದ್ದಕ್ಕಿದ್ದಂತೆ ಸೇತುವೆಯ ತಡೆಗೋಡೆ ಹತ್ತಿ ನದಿಗೆ ಜಿಗಿದಿದ್ದಾಳೆ. ರಕ್ಷಣೆಗೆ ಧಾವಿಸಿದ ವ್ಯಕ್ತಿ: ವಿಡಿಯೋದಲ್ಲಿ ಕಾಣುವಂತೆ, ಹತ್ತಿರದಲ್ಲೇ ಇದ್ದ ವ್ಯಕ್ತಿಯೊಬ್ಬರು ಬಾಲಕಿ […]

ಕನ್ನಡ ದುನಿಯಾ 19 Jan 2026 4:26 pm

FACT CHECK : ಕೇಂದ್ರ ಸರ್ಕಾರದಿಂದ 500 ರೂ. ನೋಟು ನಿಷೇಧ .! ಇಲ್ಲಿದೆ ವೈರಲ್ ಸುದ್ದಿಯ ಅಸಲಿಯತ್ತು

ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ 500 ರೂಪಾಯಿ ನೋಟುಗಳನ್ನು ರದ್ದುಗೊಳಿಸಲಾಗುತ್ತಿದೆ ಎಂಬ ವದಂತಿಗಳು ಹರಡುತ್ತಿವೆ. ಕೇಂದ್ರವು ಈಗಾಗಲೇ ಈ ಬಗ್ಗೆ ಸ್ಪಷ್ಟನೆ ನೀಡಿದ್ದರೂ, ಈಗ ಪಿಐಬಿ (PIB) ಕೂಡ ಸ್ಪಷ್ಟನೆ ನೀಡಿದೆ. 500 ರೂಪಾಯಿ ನೋಟುಗಳು ದೇಶದಿಂದ ಕಣ್ಮರೆಯಾಗಲಿವೆಯೇ? ಇತ್ತೀಚೆಗೆ, ಈ ನೋಟುಗಳ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ದೊಡ್ಡ ಕೋಲಾಹಲ ಉಂಟಾಗಿದೆ. ಈ ವರ್ಷ ಮಾರ್ಚ್ ವರೆಗೆ ಮಾತ್ರ ಅವು ಎಟಿಎಂಗಳಲ್ಲಿ ಇರುತ್ತವೆ ಮತ್ತು ನಂತರ ಅವು ಕಣ್ಮರೆಯಾಗುತ್ತವೆ ಎಂದು ಹೇಳಲಾಗುತ್ತಿದೆ. ಸಾಮಾನ್ಯವಾಗಿ, ಈ ನೋಟುಗಳನ್ನು ರದ್ದುಗೊಳಿಸಲಾಗುತ್ತದೆ ಎಂಬ […]

ಕನ್ನಡ ದುನಿಯಾ 19 Jan 2026 4:10 pm

BIG NEWS: ಡಿಜಿಪಿ ರಾಮಚಂದ್ರ ರಾವ್ ರಾಸಲೀಲೆ ವಿಡಿಯೋ ವರಲ್: ಕಚೇರಿಯಲ್ಲಿ ಕರ್ತವ್ಯದಲ್ಲಿದ್ದಾಗಲೇ ಮಹಿಳೆಯರೊಂದಿಗೆ ಅಸಭ್ಯ ವರ್ತನೆ

ಬೆಂಗಳೂರು: ಡಿಜಿಪಿ ರಾಮಚಂದ್ರ ರಾವ್ ಕರ್ತವ್ಯದ ವೇಳೆ ಕಚೇರಿಯಲ್ಲಿಯೇ ರಾಸಲೀಲೆಯಲ್ಲಿ ತೊಡಗಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಇಲಾಖೆಯ ಮಾನ ಮರ್ಯಾದೆಯನ್ನು ಹರಾಜು ಹಾಕಿರುವ ಘಟನೆ ಬೆಳಕಿಗೆ ಬಂದಿದೆ. ಅಕ್ರಮ ಚಿನ್ನ ಸಾಗಾಣಿಕೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟಿ ರನ್ಯಾ ರಾವ್ ಅವರ ಮಲತಂದೆ ಡಿಜಿಪಿ ರಾಮಚಂದ್ರ ರಾವ್ ಕಚೇರಿಯಲ್ಲಿಯೇ ಮಹಿಳೆಯರ ಜೊತೆ ಸರಸ ಸಲ್ಲಾಪದಲ್ಲಿ ತೊಡಗಿರುವ ಅಸಭ್ಯ ವಿಡಿಯೋಗಳು ವೈರಲ್ ಆಗಿವೆ. ನಟಿ ರನ್ಯಾರಾವ್ ಚಿನ್ನ ಕಳ್ಳ ಸಾಗಾಣೆ ಪ್ರಕರಣದಲ್ಲಿಯೂ […]

ಕನ್ನಡ ದುನಿಯಾ 19 Jan 2026 4:06 pm

BREAKING : ‘ಉನ್ನಾವೋ ಅತ್ಯಾಚಾರ’ಕೇಸ್ : ಶಿಕ್ಷೆ ರದ್ದುಗೊಳಿಸುವಂತೆ ಕುಲದೀಪ್ ಸೆಂಗಾರ್ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್.!

ಉನ್ನಾವೋ ಅತ್ಯಾಚಾರ ಸಂತ್ರಸ್ತೆಯ ತಂದೆಯ ಕಸ್ಟಡಿ ಸಾವಿನ ಪ್ರಕರಣದಲ್ಲಿ ತನಗೆ ವಿಧಿಸಲಾಗಿರುವ 10 ವರ್ಷಗಳ ಜೈಲು ಶಿಕ್ಷೆಯನ್ನು ಅಮಾನತುಗೊಳಿಸುವಂತೆ ಕೋರಿ ಮಾಜಿ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಂಗಾರ್ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ಸೋಮವಾರ ವಜಾಗೊಳಿಸಿದೆ, ಅಂತಹ ಪರಿಹಾರಕ್ಕೆ ಯಾವುದೇ ಹೊಸ ಸಂದರ್ಭವಿಲ್ಲ ಎಂದು ಹೇಳಿದೆ. ತೀರ್ಪು ಪ್ರಕಟಿಸಿದ ನ್ಯಾಯಮೂರ್ತಿ ರವೀಂದರ್ ದುಡೇಜಾ, ಮೇಲ್ಮನವಿಯ ವಿಚಾರಣೆಯಲ್ಲಿನ ವಿಳಂಬ ಮತ್ತು ಸೆಂಗಾರ್ ಈಗಾಗಲೇ ಅನುಭವಿಸಿದ ದೀರ್ಘಾವಧಿಯ ಜೈಲು ಶಿಕ್ಷೆಯ ಬಗ್ಗೆ ನ್ಯಾಯಾಲಯಕ್ಕೆ ಅರಿವಿದೆ ಎಂದು ಹೇಳಿದರು.ಕಸ್ಟಡಿಯಲ್ಲಿ ಸಾವಿಗೆ […]

ಕನ್ನಡ ದುನಿಯಾ 19 Jan 2026 3:58 pm

ರೈಲಿನಲ್ಲಿ ತುಪ್ಪ ಸಾಗಿಸಬಹುದೇ ? ‘ಭಾರತೀಯ ರೈಲ್ವೆ ಇಲಾಖೆ’ನಿಯಮಗಳನ್ನು ತಿಳಿಯಿರಿ

ಭಾರತೀಯ ರೈಲ್ವೆ ಪ್ರತಿದಿನ ಲಕ್ಷಾಂತರ ಪ್ರಯಾಣಿಕರನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗಿಸುತ್ತದೆ. ರೈಲು ಟಿಕೆಟ್ ಬುಕ್ ಮಾಡುವುದರಿಂದ ಹಿಡಿದು ನಿಮ್ಮ ಲಗೇಜುಗಳನ್ನು ಪ್ಯಾಕ್ ಮಾಡುವವರೆಗೆ ಪ್ರಯಾಣವು ಪ್ರಾರಂಭವಾಗುತ್ತದೆ. ಪ್ಯಾಕ್ ಮಾಡುವಾಗ, ನೀವು ಬಟ್ಟೆಗಳ ಜೊತೆಗೆ ಕೆಲವು ಆಹಾರ ಪದಾರ್ಥಗಳು ಮತ್ತು ಗೃಹೋಪಯೋಗಿ ವಸ್ತುಗಳನ್ನು ಪ್ಯಾಕ್ ಮಾಡುತ್ತೀರಿ. ಆದರೆ ನಿಮಗೆ ತಿಳಿದಿದೆಯೇ? ರೈಲು ಪ್ರಯಾಣದ ಸಮಯದಲ್ಲಿ ಕೆಲವು ವಸ್ತುಗಳನ್ನು ಸಾಗಿಸಲು ಹಲವು ನಿಯಮಗಳಿವೆ. ಅವರ ಪ್ರಕಾರ, ನೀವು ಏನು ಸಾಗಿಸಬಹುದು.. ನೀವು ಎಷ್ಟು ಸಾಗಿಸಬಹುದು.. ಅವುಗಳನ್ನು ಹೇಗೆ […]

ಕನ್ನಡ ದುನಿಯಾ 19 Jan 2026 2:55 pm

ಹೇಗೆ ಬದಲಾಗಲಿದೆ ಜೆಡಿಎಸ್ ಪಕ್ಷದ ಚಿಹ್ನೆ?

ಜಾತ್ಯಾತೀತ ಜನತಾದಳ (ಜೆಡಿಎಸ್) ಪಕ್ಷದ ಚಿಹ್ನೆ ಬದಲಾಗಲಿದೆ. ಹೌದು ಪಕ್ಷ ಸ್ಥಾಪನೆಗೊಂಡು 25 ವರ್ಷ ಪೂರ್ಣಗೊಂಡಿರುವ ಕಾರಣ ಚಿಹ್ನೆಯನ್ನು ಬದಲಾವಣೆ ಮಾಡುವ ಕುರಿತು ಪಕ್ಷದಲ್ಲಿ ಚರ್ಚೆಗಳು ನಡೆಯುತ್ತಿವೆ. ಕೆಲವು ದಿನಗಳ ಹಿಂದೆ ಪಕ್ಷದ ರಾಜ್ಯ ಕಚೇರಿ ಬೆಂಗಳೂರಿನ ಜೆ.ಪಿ. ಭವನದಲ್ಲಿ ಕೋರ್‌ ಕಮಿಟಿ ಅಧ್ಯಕ್ಷ ಎಂ.ಕೃಷ್ಟಾ ರೆಡ್ಡಿ ಹಾಗೂ ಇತರ ಪದಾಧಿಕಾರಿಗಳ ಸಭೆಯಲ್ಲಿ ಈ ಕುರಿತು ಒಂದು ಸುತ್ತಿನ ಸಭೆ ನಡೆದಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ.ದೇವೇಗೌಡ ಮತ್ತು ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಒಪ್ಪಿಗೆ ಪಡೆದು ಚಿಹ್ನೆಯನ್ನು ಬದಲಾವಣೆ […]

ಕನ್ನಡ ದುನಿಯಾ 19 Jan 2026 2:50 pm

BREAKING : ಅಮೆರಿಕದಲ್ಲಿ ಮಾದಕವಸ್ತು, ಲೈಂಗಿಕ ಕಳ್ಳಸಾಗಣೆ ಆರೋಪ : ಭಾರತೀಯ ಮೂಲದ ದಂಪತಿ ಅರೆಸ್ಟ್.!

ಮಾದಕವಸ್ತು ಮತ್ತು ಲೈಂಗಿಕ ಕಳ್ಳಸಾಗಣೆ ಆರೋಪದ ಮೇರೆಗೆ ಭಾರತೀಯ ಮೂಲದ ದಂಪತಿ ಮತ್ತು ಇತರ ಮೂವರನ್ನು ಬಂಧಿಸಲಾಗಿದೆ. ಅಮೆರಿಕದ ವರ್ಜೀನಿಯಾದಲ್ಲಿ ಅಪರಾಧ ಚಟುವಟಿಕೆಗಳ ಕೇಂದ್ರಬಿಂದುವಾಗಿರುವ ಮೋಟೆಲ್ನಲ್ಲಿ ಫೆಡರಲ್ ಮತ್ತು ಸ್ಥಳೀಯ ಏಜೆಂಟರು ನಡೆಸಿದ ದಾಳಿಯ ನಂತರ ಆರೋಪಿಗಳ ಬಂಧನವಾಗಿದೆ. ಉತ್ತರ ವರ್ಜೀನಿಯಾದ ಫೆಡರಲ್ ವಕೀಲರ ಪ್ರಕಾರ, 52 ವರ್ಷದ ಕೋಶಾ ಶರ್ಮಾ ಮತ್ತು 55 ವರ್ಷದ ತರುಣ್ ಶರ್ಮಾ ತಮ್ಮ ಮೋಟೆಲ್ ರೆಡ್ ಕಾರ್ಪೆಟ್ ಇನ್ನ ಮೂರನೇ ಮಹಡಿಯನ್ನು ಮಾದಕವಸ್ತು ಮಾರಾಟ ಮತ್ತು ವೇಶ್ಯಾವಾಟಿಕೆಗೆ ಬಳಸಿಕೊಂಡಿದ್ದು, ಕೆಳ […]

ಕನ್ನಡ ದುನಿಯಾ 19 Jan 2026 2:41 pm

BIG NEWS: ಪಿಯು ಕಾಲೇಜುಗಳಲ್ಲಿ ಮೊಬೈಲ್ ಬಳಕೆಗೆ ನಿರ್ಬಂಧ: ಮಹತ್ವದ ನಿರ್ಧಾರಕ್ಕೆ ಮುಂದಾದ ಪದವಿ ಪೂರ್ವ ಶಿಕ್ಷಣ ಇಲಾಖೆ!

ಬೆಂಗಳೂರು: ಪದವಿ ಪೂರ್ವ ಕಾಲೇಜುಗಳಲ್ಲಿ ಮೊಬೈಲ್ ಬಳಕೆಗೆ ಬ್ರೇಕ್ ಹಾಕಲು ಪದವಿ ಪೂರ್ವ ಶಿಕ್ಷಣ ಇಲಾಖೆ ಮುಂದಾಗಿದೆ. ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣವನ್ನು ಗಂಭೀರವಾಗಿ ಪರುಗಣಿಸಿರುವ ಶಿಕ್ಷಣ ಇಲಾಖೆ ಪರೀಕ್ಷೆ ಸಂದರ್ಭಗಳಲ್ಲಿ ಮೊಬೈಲ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲು ಮುಂದಾಗಿದೆ ಎಂದು ತಿಳಿದುಬಂದಿದೆ. ರಾಜ್ಯದ ಪದವಿ ಪೂರ್ವ ಕಾಲೇಜುಗಳಲ್ಲಿ ಪರೀಕ್ಷೆ ವೇಳೆ ಮೊಬೈಲ್ ಬಳಕೆಯನ್ನು ಸಂಪೂರ್ಣ ನಿಷೇಧಿಸಲು ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ. ವಿದ್ಯಾರ್ಥಿಗಳಾದಿಯಾಗಿ ಶಿಕ್ಷಕರು, ಪ್ರಾಂಶುಪಾಲರಿಗೂ ಮೊಬೈಲ್ ಬಳಕೆ ನಿರ್ಬಂಧಿಸಲು ತೀರ್ಮಾನಿಸಿದೆ. ಈ ಕ್ರಮವು ಜನವರಿ 27ರಿಂದ […]

ಕನ್ನಡ ದುನಿಯಾ 19 Jan 2026 2:35 pm

ಒತ್ತುವರಿ ಜಾಗ ಪರಿಶೀಲಿಸಲು ಹೋಗಿದ್ದ ಮಹಿಳಾ ಅಧಿಕಾರಿಗೆ ಧಮ್ಕಿ ಪ್ರಕರಣ: 20 ಎಕರೆ ಜಾಗ ವಶಕ್ಕೆ ಪಡೆದ ಸರ್ಕಾರ

ಮೈಸೂರು: ಒತ್ತುವರಿ ಜಾಗ ಪರಿಶೀಲನೆಗೆ ತೆರಳಿದ್ದ ಮಹಿಳಾ ಅಧಿಕಾರಿಗೆ ವ್ಯಕ್ತಿಯೋರ್ವ ಸಿಎಂ ಸಿದ್ದರಾಮಯ್ಯ ಕ್ಷೇತ್ರದಲ್ಲೇ ಧಮ್ಕಿ ಹಾಕಿ ಬೆದರಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಒತ್ತುವರಿಯಾಗಿದ್ದ 20 ಎಕರೆ ಜಾಗವನ್ನು ಸರ್ಕಾರ ತನ್ನ ಸುಪರ್ದಿಗೆ ಪಡೆದುಕೊಂಡಿದೆ. ಮೈಸೂರು ಜಿಲ್ಲೆಯ ಗುಡಮಾದನಹಳ್ಳಿಯ ಗ್ರಾಮದಲ್ಲಿ ಒತ್ತುವರಿಯಾಗಿದ್ದ 20 ಎಕರೆ ಜಾಗವನ್ನು ಮೈಸೂರು ತಹಶಿಲ್ದಾರ್ ಮಹೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಒತ್ತುವರುಯಾಗಿದ್ದ ಜಾಗವನ್ನು ಸರ್ಕಾರದ ವಶಕ್ಕೆ ಪಡೆದಿದ್ದಾರೆ. ಕೆಲ ದಿನಗಳ ಹಿಂದೆ ಗುಡಮಾದನಹಳ್ಳಿಯಲ್ಲಿ ಒತ್ತುವರಿಯಾಗಿದ್ದ ಜಾಗ ವೀಕ್ಷಣೆಗೆ ತೆರಳಿದ್ದ ಗ್ರಾಮ ಆಡಳಿತ ಮಹಿಳಾ […]

ಕನ್ನಡ ದುನಿಯಾ 19 Jan 2026 2:16 pm

BREAKING : ಉತ್ತರ ಭಾರತದಲ್ಲಿ ಪ್ರಬಲ ಭೂಕಂಪ : ಲೇಹ್, ಲಡಾಖ್‌ನಲ್ಲಿ 5.7 ತೀವ್ರತೆಯ ಕಂಪನ

ಲಡಾಖ್’ ನ ಲೇಹ್ ಪ್ರದೇಶದಲ್ಲಿ ಸೋಮವಾರ ಬೆಳಿಗ್ಗೆ 5.7 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (NCS) ತಿಳಿಸಿದೆ. NCS ಪ್ರಕಾರ, ಭೂಕಂಪವು 11.51.14 IST ಕ್ಕೆ 171 ಕಿಲೋಮೀಟರ್ ಆಳದಲ್ಲಿ ಸಂಭವಿಸಿದೆ.ಭೂಕಂಪನವು 36.71 ಡಿಗ್ರಿ ಉತ್ತರ ಅಕ್ಷಾಂಶ ಮತ್ತು 74.32 ಡಿಗ್ರಿ ಪೂರ್ವ ರೇಖಾಂಶದಲ್ಲಿ ದಾಖಲಾಗಿದೆ. X ನಲ್ಲಿನ ಪೋಸ್ಟ್ನಲ್ಲಿ, ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರವು, “EQ of M: 5.7, ರಂದು: 19/01/2026 11:51:14 IST, ಅಕ್ಷಾಂಶ: 36.71 N, ಉದ್ದ: 74.32 […]

ಕನ್ನಡ ದುನಿಯಾ 19 Jan 2026 2:07 pm

BIG UPDATE : ‘ಸ್ಪೇನ್’ನಲ್ಲಿ ಭೀಕರ ರೈಲು ಅಪಘಾತ :  ಸಾವಿನ ಸಂಖ್ಯೆ 39 ಕ್ಕೆ ಏರಿಕೆ| WATCH VIDEO

ದಕ್ಷಿಣ ಸ್ಪೇನ್ನ ಆಂಡಲೂಸಿಯಾ ಪ್ರದೇಶದಲ್ಲಿ ಎರಡು ಹೈಸ್ಪೀಡ್ ರೈಲುಗಳು ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ 39 ಜನರು ಸಾವನ್ನಪ್ಪಿದ್ದಾರೆ ಮತ್ತು 70 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ರಾಯಿಟರ್ಸ್ ವರದಿ ಮಾಡಿದೆ.. ದಕ್ಷಿಣ ಸ್ಪೇನ್ನಲ್ಲಿ ಹೈಸ್ಪೀಡ್ ರೈಲು ಹಳಿತಪ್ಪಿ ಎದುರು ಹಳಿಗೆ ನುಗ್ಗಿದೆ. ಎದುರು ಹಳಿಗೆ ಬಂದು ಎದುರಿಗೆ ಬರುತ್ತಿದ್ದ ರೈಲಿಗೆ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ 39 ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವು ಜನರು ಗಾಯಗೊಂಡಿದ್ದಾರೆ ಎಂದು ದೇಶದ ಸಾರಿಗೆ ಸಚಿವರು ತಿಳಿಸಿದ್ದಾರೆ. ರೈಲು […]

ಕನ್ನಡ ದುನಿಯಾ 19 Jan 2026 1:53 pm

BIG NEWS: ಅಬಕಾರಿ ಇಲಾಖೆಯಲ್ಲಿ ಲಂಚಾವತಾರ ಪ್ರಕರಣ: ಮಾಹಿತಿ ಕೇಳಿದ ಸಿಎಂ: ಸಚಿವರು ನೀಡಿದ ಉತ್ತರವೇನು?

ಬೆಂಗಳೂರು: ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ, ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ವಿರುದ್ಧವೇ ಲಂಚದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವರಿಂದ ಮಾಹಿತಿ ಕೇಳಿದ್ದಾರೆ. ಲಂಚಾವತಾರ ಆರೋಪಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಸಚಿವ ಆರ್.ಬಿ.ತಿಮ್ಮಾಪುರ ಬಳಿ ಸ್ಪಷ್ಟನೆ ಕೇಳಿದ್ದಾರೆ. ಸಿಎಲ್ 7 ಲೈಸನ್ಸ್ ನೀಡಲು ಲಂಚಕ್ಕೆ ಬೇಡಿಕೆ ಇಟ್ಟಿರುವ ಆರೋಪ ಕೇಳಿಬಂದಿದ್ದು, ಆಡಿಯೋ ಆರೋಪದ ಬಗ್ಗೆಯೂ ಸ್ಪಷ್ಟನೆ ಕೇಳಿದ್ದಾರೆ. ಈ ಬಗ್ಗೆ ಸಮಜಾಯಿಷಿ ನೀಡಿರುವ ಸಚಿವರು ಅಧಿಕಾರಿಗಳತ್ತ ಬೊಟ್ಟು ಮಾಡಿದ್ದಾರೆ. ಅನಗತ್ಯವಾಗಿ ತನ್ನ ಮಗನ ವಿರುದ್ಧ ಆರೋಪ ಮಾಡುತ್ತಿದ್ದಾರೆ. […]

ಕನ್ನಡ ದುನಿಯಾ 19 Jan 2026 1:52 pm