SENSEX
NIFTY
GOLD
USD/INR

Weather

26    C

ಡಿಜಿಟಲ್ ಸುದ್ದಿ ಮೂಲಗಳು

... ...View News by News Source

ಧೂಳು ತಿನ್ನುತ್ತಿವೆ ಡಬಲ್ ಡೆಕ್ಕರ್ ಬಸ್: ಇದು ಯುಪಿಯ ಯೋಗಿ ಮಾಡೆಲ್!

ಉತ್ತರ ಪ್ರದೇಶ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಧೂಳು ಹಿಡಿಯುತ್ತಿದೆ. ಹೌದು ಸುಮಾರು 12 ಕೋಟಿ ಮೌಲ್ಯದ ಎಲೆಕ್ಟ್ರಿಕ್ ಡಬಲ್ ಡೆಕ್ಕರ್ ಎಸಿ ಬಸ್‌ಗಳು ವರ್ಕ್‌ ಶಾಪ್ ಸೇರಿವೆ. ಇದು ಉತ್ತರ ಪ್ರದೇಶದ ಯೋಗಿ ಮಾದರಿಯ ಆಡಳಿತವೇ? ಎಂದು ನೆಟ್ಟಿಗರು ಪ್ರಶ್ನೆ ಎತ್ತಿದ್ದಾರೆ. ಸುಮಾರು 12 ಕೋಟಿ ವೆಚ್ಚದ 8 ಎಸಿ ಡಬಲ್ ಡೆಕ್ಕರ್ ಎಲೆಕ್ಟ್ರಿಕ್ ಬಸ್‌ಗಳಲ್ಲಿ 6 ಚಾರ್ಜಿಂಗ್ ನಿಲ್ದಾಣದ ಕೊರತೆಯಿಂದಾಗಿ ಕಳೆದ ಹಲವಾರು ತಿಂಗಳುಗಳಿಂದ ಬಾರಾಬಂಕಿ ಬಸ್ ನಿಲ್ದಾಣ ಮತ್ತು ವರ್ಕ್ ಶಾಪ್‌ನಲ್ಲಿಯೇ ನಿಂತಿವೆ. ಕಳೆದ […]

ಕನ್ನಡ ದುನಿಯಾ 17 Jan 2026 2:53 pm

BREAKING: 25 ಲಕ್ಷ ಲಂಚ ಸ್ವೀಕರಿಸುತ್ತಿದ್ದ ಅಬಕಾರಿ ಡಿಸಿ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ

ಬೆಂಗಳೂರು: ಲಂಚದ ಹಣಕ್ಕೆ ಕೈಯೊಡ್ಡಿದಾಗಲೇ ಅಬಕಾರಿ ಡಿಸಿ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿರುವ ಘಟನೆ ಬೆಂಗಳೂರಿನ ಬ್ಯಾಟರಾಯನಪುರದಲ್ಲಿ ನಡೆದಿದೆ. ಜಗದೀಶ್ ನಾಯ್ ಲೋಕಾಯುಕ್ತ ಬಲೆಗೆ ಬಿದ್ದು ಬಂಧಿತರಾಗಿರುವ ಅಬಕಾರಿ ಡಿಸಿ. 25 ಲಕ್ಷ ರೂಪಾಯಿ ಲಂಚ ಪಡೆಯುತ್ತಿದ್ದಾಗಲೇ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ಅಬಕಾರಿ ಡಿಸಿ ಜಗದೀಶ್ ಅವರನ್ನು ಬಂಧಿಸಿದ್ದಾರೆ. ಮೈಕ್ರೋ ಬ್ರಿವೇರಿ, ಸಿಎಲ್ 7 ಲೈಸನ್ಸ್ ಗೆ 75 ಲಕ್ಷ ರೂಪಾಯಿ ಲಂಚದ ಬೇಡಿಕೆ ಇಟ್ಟಿದ್ದ ಜಗದೀಶ್, ಮೊದಲ ಕಂತಿನ […]

ಕನ್ನಡ ದುನಿಯಾ 17 Jan 2026 2:48 pm

ವೈದ್ಯಕೀಯ ಶಿಕ್ಷಣ ಇಲಾಖೆ ಹಾಗೂ ಅಜೀಂ ಪ್ರೇಮ್ ಜಿ ಪ್ರತಿಷ್ಠಾನ ನಡುವೆ ಒಡಂಬಡಿಕೆ: ಮಾನವ ಬಹು ಅಂಗಾಂಗ ಕಸಿ ಆಸ್ಪತ್ರೆಗೆ 5 ವರ್ಷಗಳಲ್ಲಿ 4000 ಕೋಟಿ ವೆಚ್ಚ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಸಾವಿರ ಆಸ್ಪತ್ರೆಗಳ ಚಾರಿಟಬಲ್ ಸೂಪರ್ ಸ್ಪೆಷಾಲಿಟಿ ಹಾಗೂ ಮಾನವ ಬಹು ಅಂಗಾಂಗ ಕಸಿ ಆಸ್ಪತ್ರೆಗೆ ಅಜೀಂ ಪ್ರೇಮ್ ಜಿ ಪ್ರತಿಷ್ಠಾನವು ಐದು ವರ್ಷಗಳಲ್ಲಿ 4000 ಕೋಟಿ ವೆಚ್ಚ ಮಾಡುವ ಗುರಿ ಹೊಂದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ವಿಧಾನ ಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಸಾವಿರ ಹಾಸಿಗೆಗಳ ಚಾರಿಟಬಲ್ ಸೂಪರ್ ಸ್ಪೆಷಾಲಿಟಿ ಹಾಗೂ ಮಾನವ ಬಹು ಅಂಗಾಂಗ ಕಸಿ ಆಸ್ಪತ್ರೆ ನಿರ್ಮಾಣ ಮತ್ತು ನಿರ್ವಹಣೆ ಕುರಿತು ವೈದ್ಯಕೀಯ ಶಿಕ್ಷಣ ಇಲಾಖೆ ಹಾಗೂ ಅಜೀಂ ಪ್ರೇಮ್ ಜಿ […]

ಕನ್ನಡ ದುನಿಯಾ 17 Jan 2026 2:26 pm

‘SBI’ಗ್ರಾಹಕರಿಗೆ ಬಿಗ್ ಶಾಕ್ : ATM ವಿತ್ ಡ್ರಾ ಮತ್ತು ‘ಬ್ಯಾಲೆನ್ಸ್ ಚೆಕ್’ಶುಲ್ಕ ಹೆಚ್ಚಳ.!

ನೀವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಗ್ರಾಹಕರಾಗಿದ್ದರೆ ನಿಮಗಾಗಿ ಒಂದು ಬಿಗ್ ನ್ಯೂಸ್ ಇದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ATM ವಹಿವಾಟು ಶುಲ್ಕಗಳನ್ನು ಪರಿಷ್ಕರಿಸಿದೆ. ಉಚಿತ ವಹಿವಾಟು ಮಿತಿಯನ್ನು ತಲುಪಿದ ನಂತರ ಬ್ಯಾಂಕ್ ATM ಬಳಕೆಯ ಶುಲ್ಕವನ್ನು ಹೆಚ್ಚಿಸಿದೆ. ಇದರರ್ಥ ನೀವು SBI ಗ್ರಾಹಕರಾಗಿದ್ದರೆ, ಮಾಸಿಕ ನಗದು ಹಿಂಪಡೆಯುವಿಕೆ ಮಿತಿಯನ್ನು ತಲುಪಿದ ನಂತರ ಬೇರೆ ಬ್ಯಾಂಕಿನ ATM ನಿಂದ ಪ್ರತಿ ನಗದು ಹಿಂಪಡೆಯುವಿಕೆಗೆ ₹23 (GST ಸೇರಿದಂತೆ) ವಿಧಿಸಲಾಗುತ್ತದೆ ಮತ್ತು ಬ್ಯಾಲೆನ್ಸ್ ಚೆಕ್ಗಳಂತಹ ಹಣಕಾಸುೇತರ […]

ಕನ್ನಡ ದುನಿಯಾ 17 Jan 2026 2:21 pm

BREAKING : ‘CM ಸಿದ್ದರಾಮಯ್ಯ’ತವರು ಕ್ಷೇತ್ರದಲ್ಲೇ ಮಹಿಳಾ ಅಧಿಕಾರಿಗೆ ಕೊಲೆ ಬೆದರಿಕೆ, FIR ದಾಖಲು.!

ಮೈಸೂರು : ಚಿಕ್ಕಬಳ್ಳಾಪುರದ ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆಗೆ ಅಶ್ಲೀಲ ನಿಂದನೆ, ಬೆದರಿಕೆ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಘಟನೆ ನಡೆದಿದೆ. ಸಿಎಂ ಸಿದ್ದರಾಮಯ್ಯ ತವರು ಕ್ಷೇತ್ರದಲ್ಲಿ ಮಹಿಳಾ ಅಧಿಕಾರಿಗೆ ಕೊಲೆ ಬೆದರಿಕೆ ಹಾಕಿದ ಘಟನೆ ನಡೆದಿದೆ. ಹೌದು ಮೈಸೂರು ದಕ್ಷಿಣ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಸ್ಥಳೀಯ ವ್ಯಕ್ತಿ ಪುಟ್ಟಸ್ವಾಮಿ ಎಂಬಾತ ಗ್ರಾಮದ ಆಡಳಿತ ಅಧಿಕಾರಿಗೆ ಕೊಲೆ ಬೆದರಿಕೆ ಹಾಕಿ ನಿಂದಿಸಿದ್ದಾನೆ ಎನ್ನಲಾಗಿದೆ. ಅವಾಚ್ಯ ಶಬ್ದಗಳಿಂದ ನಿಂದಿಸಿದ ಪುಟ್ಟಸ್ವಾಮಿ ಮಹಿಳಾ ಅಧಿಕಾರಿಗೆ ಕೊಲೆ ಬೆದರಿಕೆ […]

ಕನ್ನಡ ದುನಿಯಾ 17 Jan 2026 1:53 pm

BREAKING: ಬೆಂಗಳೂರಿನಲ್ಲಿ ಮತ್ತೊಂದು ಭೀಕರ ಅಪಘಾತ: ಸ್ಥಳದಲ್ಲೇ ಮೂವರು ದುರ್ಮರಣ

ದೇವನಹಳ್ಳಿ: ಟಿಪ್ಪರ್ ಲಾರಿ ಹಾಗೂ ಬೈಕ್ ನಡುವೆ ಸಂಬವಿಸಿದ ಭೀಕರ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿಯ ಅಗಲಕೋಟೆ ಬಳಿ ನಡೆದಿದೆ. ವೇಗವಾಗಿ ಬಂದ ಟಿಪ್ಪರ್ ಚಾಲಕ ಬೈಕ್ ಗೆ ಗುದ್ದಿ ಟಿಪ್ಪರ್ ಸಮೇತ ಪರಾರಿಯಾಗಿದ್ದಾನೆ. ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಾಲೇಜು ವಿದ್ಯಾರ್ಥಿ ತೌಸಿಫ್ ಸೇರಿದಂತೆ ಮೂವರು ಮೃತ ಪಟ್ಟಿದ್ದಾರೆ. ಇಬ್ಬರ ಗುರುತು ಪತ್ತೆಯಾಗಿಲ್ಲ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕನ್ನಡ ದುನಿಯಾ 17 Jan 2026 1:53 pm

ಪೋಸ್ಟ್ ಆಫೀಸ್ ಪಿಪಿಎಫ್ ಪವರ್: ನಿತ್ಯ ₹400 ಉಳಿಸಿ ₹40 ಲಕ್ಷದ ಒಡೆಯರಾಗಿ ಭವಿಷ್ಯದ ಭದ್ರತೆಗೆ ಇಲ್ಲಿದೆ ಬೆಸ್ಟ್ ಪ್ಲಾನ್

ಬೆಂಗಳೂರು: ನೀವು ಯಾವುದೇ ರಿಸ್ಕ್ ಇಲ್ಲದೆ ಕೋಟ್ಯಾಧಿಪತಿಯಾಗುವ ಕನಸು ಕಾಣುತ್ತಿದ್ದೀರಾ? ಹಾಗಿದ್ದರೆ ಅಂಚೆ ಇಲಾಖೆಯ ‘ಪಬ್ಲಿಕ್ ಪ್ರಾವಿಡೆಂಟ್ ಫಂಡ್’ (PPF) ನಿಮಗಾಗಿ ಇರುವ ಪಕ್ಕಾ ಲಾಭದ ಹಾದಿ. ಕೇಂದ್ರ ಸರ್ಕಾರದ ನೇರ ನಿಯಂತ್ರಣದಲ್ಲಿರುವ ಈ ಯೋಜನೆಯಲ್ಲಿ ಹಣ ಹೂಡಿದರೆ ನಿಮ್ಮ ಅಮೂಲ್ಯವಾದ ಉಳಿತಾಯಕ್ಕೆ ನೂರಕ್ಕೆ ನೂರರಷ್ಟು ಸುರಕ್ಷತೆ ಇರುತ್ತದೆ. ಪಿಪಿಎಫ್ (PPF) ಯಾಕೆ ಬೆಸ್ಟ್? ಬಡ್ಡಿಯ ಬಂಪರ್: ಸದ್ಯ ಈ ಯೋಜನೆಯಲ್ಲಿ ಶೇ. 7.1 ರಷ್ಟು ವಾರ್ಷಿಕ ಬಡ್ಡಿ ನೀಡಲಾಗುತ್ತಿದೆ. ಇದು ಅನೇಕ ಬ್ಯಾಂಕ್‌ಗಳ ಎಫ್‌ಡಿ (FD) […]

ಕನ್ನಡ ದುನಿಯಾ 17 Jan 2026 1:44 pm

Business Idea : ಖರೀದಿಸಿ ಮಾರಾಟ ಮಾಡಿ, ಲಕ್ಷಗಟ್ಟಲೆ ಲಾಭ ಗಳಿಸಿ !

ವ್ಯವಹಾರಕ್ಕೆ ಭಾರಿ ಹಣ ಬೇಕು ಎಂದು ಹಲವರು ಭಾವಿಸುತ್ತಾರೆ. ಕಚೇರಿ, ಕಾರ್ಖಾನೆ, ಕಾರ್ಮಿಕರು ಮತ್ತು ಸರಕುಗಳ ತಯಾರಿಕೆ ಬಹಳಷ್ಟು. ಆದರೆ, ವಾಸ್ತವವಾಗಿ, ನೀವು ಸರಿಯಾದ ವ್ಯವಹಾರ ಮಾಡಿದರೆ, ಇವುಗಳಲ್ಲಿ ಯಾವುದೂ ಇಲ್ಲದೆ ನೀವು ಲಕ್ಷಗಳನ್ನು ಗಳಿಸಬಹುದು. ಈಗ ಅಂತಹ ವ್ಯವಹಾರದ ಬಗ್ಗೆ ತಿಳಿದುಕೊಳ್ಳಲು ಪ್ರಯತ್ನಿಸೋಣ. ಏಲಕ್ಕಿ, ಮೆಣಸು ಮತ್ತು ಲವಂಗದಂತಹ ಬೆಳೆಗಳನ್ನು ನಮ್ಮ ದೇಶದ, ಕೇರಳ ರಾಜ್ಯದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಾತ್ರ ಬೆಳೆಯಲಾಗುತ್ತದೆ. ಪ್ರಪಂಚದಾದ್ಯಂತ ಇವುಗಳಿಗೆ ಭಾರಿ ಬೇಡಿಕೆಯಿದೆ. ಅದಕ್ಕಾಗಿಯೇ ಕೇಂದ್ರ ಸರ್ಕಾರವು ಕೇರಳದ ಇಡುಕ್ಕಿ ಪ್ರದೇಶದಲ್ಲಿ […]

ಕನ್ನಡ ದುನಿಯಾ 17 Jan 2026 1:33 pm

BREAKING: ಡಿಸಿಎಂ ಡಿ.ಕೆ.ಶಿವಕುಮಾರ್ ದಾವೊಸ್ ಪ್ರವಾಸ ದಿಢೀರ್ ರದ್ದು

ಬೆಂಗಳೂರು: ಮಹತ್ವದ ಬೆಳವಣಿಗೆಯೊಂದರಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ದಾವೊಸ್ ಪ್ರವಾಸ ರದ್ದಾಗಿದೆ. ಜನವರಿ 18ರಂದು ನಿಗದಿಯಾಗಿದ್ದ ವರ್ಲ್ಡ್ ಏಕನಾಮಿಕ್ ಫೋರಂ ಕಾರ್ಯಕ್ರಮದಲ್ಲಿ ಭಾಗವಹಿಸುವ ಹಿನ್ನೆಲೆಯಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ದಾವೊಸ್ ಗೆ ತೆರಳಬೇಕಿತ್ತು. ಆದರೆ ಕೊನೆ ಕ್ಷಣದಲ್ಲಿ ಪ್ರವಾಸ ರದ್ದಾಗಿದೆ ಎಂದು ತಿಳಿದುಬಂದಿದೆ. ಬೆಂಗಳೂರು ಹಾಗೂ ನವದೆಹಲಿಯಲ್ಲಿ ಅಧಿಕೃತ ಕಾರ್ಯಕ್ರಮಗಳು ಇರುವ ಹಿನ್ನೆಲೆಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ದಾವೊಸ್ ಪ್ರವಾಸ ರದ್ದು ಮಾಡಿದ್ದಾರೆ ಎಂದು ತಿದುಬಂದಿದೆ. ಡಿಸಿಎಂ ಡಿ.ಕೆ.ಶಿವಕುಮಾರ್ ದೆಹಲಿಯಲ್ಲಿದ್ದು, ಎಐಸಿಸಿ ನಾಯಕರ ಜೊತೆಗಿನ ಸರಣಿ ಸಭೆಯಲ್ಲಿ ಭಾಗಿಯಾಗಿದ್ದಾರೆ. […]

ಕನ್ನಡ ದುನಿಯಾ 17 Jan 2026 1:30 pm

ದಕ್ಷಿಣ ದಿಕ್ಕಿನ ಮನೆ ಎಂದರೆ ಭಯವೇ? ವಾಸ್ತು ಪ್ರಕಾರ ಇದು ಸಮೃದ್ಧಿಯ ದಿಕ್ಕೂ ಹೌದು: ಹೇಗೆ ಗೊತ್ತಾ?

ಸಾಮಾನ್ಯವಾಗಿ ಮನೆ ಖರೀದಿಸುವಾಗ ಅಥವಾ ಕಟ್ಟುವಾಗ ದಕ್ಷಿಣ ದಿಕ್ಕು ಎಂದರೆ ಸಾಕು, ಅನೇಕರು ಬೆಚ್ಚಿಬೀಳುತ್ತಾರೆ ಅಯ್ಯೋ ಅದು ಯಮನ ದಿಕ್ಕು, ಮೃತ್ಯು ಭಯ ಇರುತ್ತದೆ ಎಂಬುದು ಸಾಮಾನ್ಯ ನಂಬಿಕೆ. ಆದರೆ ವಾಸ್ತು ಶಾಸ್ತ್ರದ ಪ್ರಕಾರ ದಕ್ಷಿಣ ದಿಕ್ಕು ಕೇವಲ ಅಶುಭವಲ್ಲ; ಇದು ಧೈರ್ಯ, ಸ್ಥಿರತೆ ಮತ್ತು ಸಮೃದ್ಧಿಯ ಸಂಕೇತವೂ ಹೌದು. ದಕ್ಷಿಣ ಭಾರತದ ಹೆಮ್ಮೆಯ ತಿರುಪತಿ ವೆಂಕಟೇಶ್ವರ ದೇವಸ್ಥಾನವೇ ಇದಕ್ಕೆ ದೊಡ್ಡ ಸಾಕ್ಷಿ. ದಕ್ಷಿಣ ದಿಕ್ಕಿನ ವಾಸ್ತು ರಹಸ್ಯಗಳು: ವಾಸ್ತು ಪ್ರಕಾರ ದಕ್ಷಿಣ ದಿಕ್ಕು ಭೂ ತತ್ವಕ್ಕೆ […]

ಕನ್ನಡ ದುನಿಯಾ 17 Jan 2026 1:19 pm

BIG NEWS: ಒಂಟಿ ಮಹಿಳೆಯನ್ನು ಹತ್ಯೆಗೈದು ಹೃದಯಾಘಾತವೆಂದು ನಾಟಕವಾಡಿದ್ದ ಆರೋಪಿ ಅರೆಸ್ಟ್

ಬಾಗಲಕೋಟೆ: ಒಂಟಿ ಮಹಿಳೆ ಶವವಾಗಿ ಪತ್ತೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಮಹಿಳೆಯನ್ನು ಬರ್ಬರವಾಗಿ ಹತ್ಯೆಗೈದ ಆರೋಪಿ ಹೃದಯಾಗಾತ ಎಂದು ಆಸ್ಪತ್ರೆಗೆ ಸೇರಿಸುವ ನಾಟಕವಾಡಿರುವ ಘಟನೆ ಬಾಗಲಕೋಟೆ ಜಿಲ್ಲೆಯಲ್ಲಿ ನಡೆದಿದೆ. ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಹಿರೇಪಡಸಲಗಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಅನೈತಿಕ ಸಂಬಂಧ ಹಿನ್ನೆಲೆಯಲ್ಲಿ ಪ್ರಿಯಕರನೇ ಮಹಿಳೆಯನ್ನು ಹತ್ಯೆಗೈದು, ಹೃದಯಾಘಾತ ಎಂದು ನಾಟಕವಾಡಿದ್ದ. ಆಸ್ಪತ್ರೆಗೆ ಸೇರಿಸಲು ಯತ್ನಿಸಿದ್ದ. ಅನುಮಾನಗೊಂಡ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಿಸಿದಾಗ ತಾನೇ ಕೊಲೆಗೈದಿದ್ದಾಗಿ ಬಾಯ್ಬಿಟ್ಟಿದ್ದಾನೆ. ಯಮನವ್ವ ಕೊಲೆಯಾದ ಮಹಿಳೆ. ಶ್ರೀಶೈಲ […]

ಕನ್ನಡ ದುನಿಯಾ 17 Jan 2026 1:07 pm

‘ಸುಂದರ ಹುಡುಗಿ ಪುರುಷನ ಗಮನ ಬೇರೆಡೆ ಸೆಳೆಯಬಲ್ಲಳು ‘: ವಿವಾದ ಸೃಷ್ಟಿಸಿದ ಕಾಂಗ್ರೆಸ್ ಶಾಸಕನ ಹೇಳಿಕೆ.!

ಮಧ್ಯಪ್ರದೇಶದ ಭಂದೇರ್‌ನ ಕಾಂಗ್ರೆಸ್ ಶಾಸಕ ಫೂಲ್ ಸಿಂಗ್ ಬರಯ್ಯ ಅವರು ನೀಡಿರುವ ಹೇಳಿಕೆಯೊಂದು ವಿವಾದಕ್ಕೆ ಕಾರಣವಾಗಿದೆ. ಭಾರತದಲ್ಲಿ ಹೆಚ್ಚಿನ ಅತ್ಯಾಚಾರಗಳು ಪರಿಶಿಷ್ಟ ಜಾತಿ (SC), ಪರಿಶಿಷ್ಟ ಪಂಗಡ (ST) ಮತ್ತು ಇತರ ಹಿಂದುಳಿದ ವರ್ಗಗಳ (OBC) ಸಮುದಾಯಗಳಲ್ಲಿ ನಡೆಯುತ್ತವೆ ಎಂದು ಹೇಳಿಕೊಂಡ ನಂತರ ಭಾರಿ ವಿವಾದವನ್ನು ಹುಟ್ಟುಹಾಕಿದರು. ಅವರು ತಮ್ಮ ಹೇಳಿಕೆಯ ಹಿಂದಿನ ಅತ್ಯಾಚಾರ ಸಿದ್ಧಾಂತವನ್ನು ವಿವರಿಸುತ್ತಾ, ಪ್ರಯಾಣ ಮಾಡುವಾಗ ಒಬ್ಬ ವ್ಯಕ್ತಿಯು “ಅತ್ಯಂತ ಸುಂದರ ಮಹಿಳೆ”ಯನ್ನು ನೋಡಿದರೆ, ಅವರ ಮನಸ್ಸು ವಿಚಲಿತವಾಗಬಹುದು, ಇದು ಅತ್ಯಾಚಾರಕ್ಕೆ ಕಾರಣವಾಗಬಹುದು […]

ಕನ್ನಡ ದುನಿಯಾ 17 Jan 2026 1:03 pm

ಬೀದಿಯಲ್ಲಿ ಹೋಗೋ ದಾಸಯ್ಯನನ್ನು ಕರೆದು ಸಿಎಂ ಮಾಡಿದರೂ ಹೈಕಮಾಂಡ್ ಹೇಳಿದರೆ ನಾವು ಒಪ್ಪುತ್ತೇವೆ: ಸಚಿವ ಜಮೀರ್ ಅಹ್ಮದ್

ಹುಬ್ಬಳ್ಳಿ: ರಾಜ್ಯದಲ್ಲಿ ಯಾವ ಕ್ರಾಂತಿಯೂ ಇಲ್ಲ, ಭ್ರಾಂತಿಯೂ ಇಲ್ಲ. 2028ರವರೆಗೆ ಸಿದ್ದರಾಮಯ್ಯನವರೇ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ ಎಂದು ಸಚಿವ ಜಮೀರ್ ಅಹ್ಮದ್ ತಿಳಿಸಿದ್ದಾರೆ. ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರ ಮತ್ತೆ ಮುನ್ನೆಲೆಗೆ ಬಂದಿರುವ ಕುರಿತು ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯಿಸಿದ ಸಚಿವ ಜಮೀರ್ ಅಹ್ಮದ್, ಯಾವ ಬದಲಾವಣೆಯೂ ಆಗುವುದಿಲ್ಲ. ಸಿದ್ದರಾಮಯ್ಯನವರೇ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ. ಸೆಪ್ಟೆಂಬರ್ ಕ್ರಾಂತಿ ಎಂದರು, ನವೆಂಬರ್ ಕ್ರಾಂತಿ ಎಂದರು ನವೆಂಬರ್ ಹೋಗಿ ಡಿಸೆಂಬರ್ ಕೂಡ ಕಳೆದು ಹೋಯಿತು. ಯಾವ ಕ್ರಾಂತಿಯೂ ಆಗಿಲ್ಲ. ಯುಗಾದಿಗೂ ಯಾಅವ ಕ್ರಾಂತಿ ಆಗಲ್ಲ. ಸಿದ್ದರಾಮಯ್ಯನವರೇ […]

ಕನ್ನಡ ದುನಿಯಾ 17 Jan 2026 12:56 pm

ವಿಡಿಯೋ: 45 ಲಕ್ಷ ರೂ. ಚಿನ್ನವಿದ್ದ ಬ್ಯಾಗ್ ವಾಪಸ್ ಕೊಟ್ಟ ಪೌರ ಕಾರ್ಮಿಕ ಮಹಿಳೆ

ಚಿನ್ನ, ಬೆಳ್ಳಿ ದರಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ರಸ್ತೆಯಲ್ಲಿ ಚಿನ್ನ ತುಂಬಿದ್ದ ಬ್ಯಾಗ್ ಸಿಕ್ಕಿದರೆ ಬಿಡುವುದುಂಟೆ?. ಆದರೆ ತಮಿಳುನಾಡಿನ ಚೆನ್ನೈನಲ್ಲಿ ಪದ್ಮ ಎಂಬ ಪೌರಕಾರ್ಮಿಕ ಮಹಿಳೆ ತೋರಿದ ಪ್ರಾಮಾಣಿಕತೆಯ ಬಗ್ಗೆ ಈಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ. ಚೆನ್ನೈ ಪೌರಕಾರ್ಮಿಕ ಮಹಿಳೆ ಪ್ರಾಮಾಣಿಕತೆಯಿಂದ 45 ಲಕ್ಷ ರೂ. ಮೌಲ್ಯದ ಚಿನ್ನವಿದ್ದ ಬ್ಯಾಗ್‌ ಅನ್ನು ಮರಳಿ ನೀಡಿದ್ದಾರೆ. ಚೆನ್ನೈನ ಟಿ.ನಗರದ ದೇವಾಲಯವೊಂದರ ಬಳಿ ಪದ್ಮ ಅವರಿಗೆ ಸುಮಾರು 45 ಲಕ್ಷ ಮೌಲ್ಯದ 45 ಸವರನ್ ಚಿನ್ನದ ಆಭರಣಗಳಿದ್ದ ಬ್ಯಾಗ್ ಸಿಕ್ಕಿತು. […]

ಕನ್ನಡ ದುನಿಯಾ 17 Jan 2026 12:56 pm

ಸಕ್ಕರೆ ತಿಂದರೂ ಹೆಚ್ಚಾಗಲ್ಲ ಶುಗರ್ ಮಧುಮೇಹಿಗಳ ಪಾಲಿನ ಸಂಜೀವಿನಿಯೇ ಈ ಟಗಟೋಸ್?

ಟೇಬಲ್ ಶುಗರ್ (ನಾವು ಬಳಸುವ ಸಕ್ಕರೆ) ಬದಲಿಗೆ ಈಗ ವಿಜ್ಞಾನಿಗಳು ‘ಟಗಟೋಸ್‘ (Tagatose) ಎಂಬ ಹೊಸ ಪರ್ಯಾಯವನ್ನು ಅಭಿವೃದ್ಧಿಪಡಿಸಿದ್ದಾರೆ. ಇದು ಸಕ್ಕರೆಯಷ್ಟೇ ಸಿಹಿಯಾಗಿದ್ದರೂ, ಶೇಕಡಾ 60 ರಷ್ಟು ಕಡಿಮೆ ಕ್ಯಾಲರಿಗಳನ್ನು ಹೊಂದಿದೆ ಮತ್ತು ರಕ್ತದಲ್ಲಿ ಇನ್ಸುಲಿನ್ ಮಟ್ಟವನ್ನು ಹೆಚ್ಚಿಸುವುದಿಲ್ಲ ಎಂಬುದು ವಿಶೇಷ. ಸಂಶೋಧನೆಯ ಪ್ರಮುಖ ಅಂಶಗಳು: 92% ಸಕ್ಕರೆಯಷ್ಟೇ ಸಿಹಿ: ಟಗಟೋಸ್ ರುಚಿಯಲ್ಲಿ ಶೇ. 92 ರಷ್ಟು ಸಾಮಾನ್ಯ ಸಕ್ಕರೆಯನ್ನು ಹೋಲುತ್ತದೆ. ಆದರೆ ಸಕ್ಕರೆಯಲ್ಲಿರುವ ಕ್ಯಾಲರಿಗಳ ಮೂರನೇ ಒಂದು ಭಾಗದಷ್ಟು ಮಾತ್ರ ಇದರಲ್ಲಿರುತ್ತದೆ. ಇನ್ಸುಲಿನ್ ಏರಿಕೆಯಿಲ್ಲ: ಇದು […]

ಕನ್ನಡ ದುನಿಯಾ 17 Jan 2026 12:30 pm

ಮೆಕ್ಕೆಜೋಳ ಖರೀದಿ: ಚಿತ್ರದುರ್ಗದ ರೈತರಿಗೆ ಅಪ್‌ಡೇಟ್

ಚಿತ್ರದುರ್ಗ ಜಿಲ್ಲೆಯಲ್ಲಿ ಮಾರುಕಟ್ಟೆ ಮಧ್ಯ ಪ್ರವೇಶ ಯೋಜನೆಯಡಿ ಮೆಕ್ಕೆಜೋಳ ಖರೀದಿ ಕುರಿತು ರೈತರಿಗೆ ಅಪ್‌ಡೇಡ್ ನೀಡಲಾಗಿದೆ. ರೈತರಿಂದ ಖರೀದಿ ಮಾಡುವ ಜೋಳಕ್ಕೆ ಪ್ರತಿ ಕ್ವಿಂಟಾಲ್‍ಗೆ ರೂ. 2,150 ನಿಗದಿ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಹೇಳಿದ್ದಾರೆ. ಸರ್ಕಾರದ ಆದೇಶದಂತೆ 2025-26ರ ಮುಂಗಾರು ಹಂಗಾಮಿಗೆ ಮಾರುಕಟ್ಟೆ ಮಧ್ಯ ಪ್ರವೇಶ ಯೋನೆಯಡಿಯಲ್ಲಿ ಮೆಕ್ಕೆಜೋಳವನ್ನು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಏಕೀಕೃತ ವೇದಿಕೆಯಡಿಯಲ್ಲಿ ರೈತರು ಮಾರಾಟ ಮಾಡಬಹುದಾಗಿದೆ. ಈ ಯೋಜನೆಯಡಿ ಪ್ರತಿ ಕ್ವಿಂಟಲ್‍ಗೆ 2,150 ರೂ. ನಿಗದಿಪಡಿಸಲಾಗಿದೆ. ರೈತರಿಂದ ಮೆಕ್ಕೆಜೋಳ ಖರೀದಿಸಲು […]

ಕನ್ನಡ ದುನಿಯಾ 17 Jan 2026 12:23 pm

ಪ್ರತಿ ‘ಸ್ಮಾರ್ಟ್ ಫೋನ್’ಗೂ ಎಕ್ಸ್ ಪೈರಿ ಡೇಟ್ ಇರುತ್ತೆ ! ಎಷ್ಟು ವರ್ಷಕ್ಕೊಮ್ಮೆ ಮೊಬೈಲ್ ಬದಲಾಯಿಸಬೇಕು

ಇಂದಿನ ಯುಗದಲ್ಲಿ ಮೊಬೈಲ್ ಫೋನ್ಗಳು ಕೇವಲ ಮಾತನಾಡಲು ಅಲ್ಲ. ಬ್ಯಾಂಕಿಂಗ್, ಪಾವತಿ, ಶಿಕ್ಷಣ, ಕೆಲಸ, ಸಾಮಾಜಿಕ ಮಾಧ್ಯಮ, ಮನರಂಜನೆ ಎಲ್ಲವೂ ಒಂದೇ ಸಾಧನದಲ್ಲಿದೆ.ನಾವು ಬೆಳಿಗ್ಗೆ ಎದ್ದ ಕ್ಷಣದಿಂದ ರಾತ್ರಿ ಮಲಗುವ ಕ್ಷಣದವರೆಗೆ, ನಮ್ಮ ಫೋನ್ಗಳು ನಮ್ಮ ಕೈಯಲ್ಲಿರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಫೋನ್ ಸರಿಯಾಗಿ ಕಾರ್ಯನಿರ್ವಹಿಸದಿದ್ದರೆ ಅಥವಾ ಸುರಕ್ಷಿತವಾಗಿಲ್ಲದಿದ್ದರೆ, ಹಾನಿ ತಾಂತ್ರಿಕವಾಗಿ ಮಾತ್ರವಲ್ಲದೆ ಆರ್ಥಿಕವಾಗಿಯೂ ಇರುತ್ತದೆ. ಜಗತ್ತಿನಲ್ಲಿ ಎಕ್ಸ್ ಪೈರಿ ಡೇಟ್ ಇಲ್ಲದ ಕೆಲವು ವಿಷಯಗಳಿವೆ. ಸ್ಮಾರ್ಟ್ಫೋನ್ಗಳಿಗೂ ಮುಕ್ತಾಯ ದಿನಾಂಕವಿದೆ ಎಂದು ಬಹಳ ಜನರಿಗೆ ಗೊತ್ತಿಲ್ಲ. ಅಂದರೆ, ಸ್ವಲ್ಪ […]

ಕನ್ನಡ ದುನಿಯಾ 17 Jan 2026 12:20 pm

BREAKING: ಕಾರು-ಬೈಕ್ ಭೀಕರ ಅಪಘಾತ: ಯುವಕ ಸ್ಥಳದಲ್ಲೇ ದುರ್ಮರಣ

ಬೆಳಗಾವಿ: ಕಾರು ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬೈಕ್ ನಲ್ಲಿದ್ದ ಯುವಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಬೆಳಗಾವಿ-ಬಾಗಲಕೋಟೆ ರಸ್ತೆಯ ಮುರಗೋಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಸೊಪ್ಪಡ್ಲ ಗ್ರಾಮದ ಲಕ್ಕಣ್ಣ ಬಸಪ್ಪ ಮೃತ ದುರ್ದೈವಿ. ದಿವ್ಯ ಎಂಬ ಯುವತಿ ವೇಗವಾಗಿ ಕಾರು ಚಲಾಯಿಸಿಕೊಂಡು ಬರುತ್ತಿದ್ದರು. ಮುರಗೋಡ ಬಳಿ ನಿಯಂತ್ರಣ ತಪ್ಪಿದ ಕಾರು ಬೈಕ್ ಗೆ ಡಿಕ್ಕಿಯಾಗಿದೆ. ಅಪಘಾತದ ರಭಸಕ್ಕೆ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದ ಮೂವರು ಗಂಭೀರವಾಗಿ […]

ಕನ್ನಡ ದುನಿಯಾ 17 Jan 2026 12:14 pm

BREAKING: ಅಸಲಿ ಅಭ್ಯರ್ಥಿಗಳ ಬದಲು ನಕಲಿ ಅಭ್ಯರ್ಥಿಗಳಿಂದ ಪರೀಕ್ಷೆ: ಸರ್ಕಾರಿ ಕೆಲಸ ಗಿಟ್ಟಿಸಿಕೊಂಡಿದ್ದ 7 ಅಭ್ಯರ್ಥಿಗಳ ವಿರುದ್ಧ FIR ದಾಖಲು

ಬೆಂಗಳೂರು: ಅಸಲಿ ಅಭ್ಯರ್ಥಿಗಳ ಬದಲು ನಕಲಿ ಅಭ್ಯರ್ಥಿಗಳು ಪರೀಕ್ಷೆ ಬರೆದು ಸರ್ಕಾರಿ ಕೆಲಸ ಗಿಟ್ಟಿಸಿಕೊಂಡಿರುವ ಘಟನೆ ಬೆಳಕಿಗೆ ಬಂದಿದ್ದು, 7 ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ. 2018, 2022ರಲ್ಲಿ ಎಂಟಿಎಸ್ ಹುದ್ದೆಗೆ ನಡೆದಿದ್ದ ಪರೀಕ್ಷೆಯಲ್ಲಿ ಈ ರೀತಿ ಅಕ್ರಮಗಳು ನಡೆದಿದೆ. ಅರಣ್ಯ ಇಲಾಖೆ ಹಾಗೂ ಶಿಕ್ಷಣ ಮಂಡಳಿ ನಡೆಸಿದ್ದ ವುಡ್ ಸೈನ್ಸ್ ಟೆಕ್ನಾಲಜಿ ಅಭ್ಯರ್ಥಿಗಳಿಗೆ ನಡೆಸಿದ್ದ ಪರೀಕ್ಷೆಯಲ್ಲಿ ಅಸಲಿ ಅಭ್ಯರ್ಥಿಗಳ ಬದಲಾಗಿ ನಕಲಿ ಅಭ್ಯರ್ಥಿಗಳು ಪರೀಕ್ಷೆ ಬರೆದು ಅಭ್ಯರ್ಥಿಗಳು ಸರ್ಕಾರಿ ಕೆಲಸವನ್ನೂ ಗಿಟ್ಟಿಸಿಕೊಂಡಿದ್ದಾರೆ. ಬೇರೊಬ್ಬರ ಕೈಯಲ್ಲಿ ಪರೀಕ್ಷೆ […]

ಕನ್ನಡ ದುನಿಯಾ 17 Jan 2026 12:03 pm

ಹೊಟ್ಟೆ ತುಂಬಾ ತಿಂದರೂ ತೂಕ ಹೆಚ್ಚಲ್ಲ! ಫಿಟ್ನೆಸ್ ಕೋಚ್ ಹಂಚಿಕೊಂಡ ’50 ಮ್ಯಾಜಿಕ್ ಆಹಾರಗಳ’ಪಟ್ಟಿ ಇಲ್ಲಿದೆ

ತೂಕ ಇಳಿಸಿಕೊಳ್ಳುವ ಪ್ರಯತ್ನದಲ್ಲಿರುವವರಿಗೆ ‘ಅತಿಯಾಗಿ ತಿನ್ನುವುದು’ (Overeat) ಎಂಬ ಪದವೇ ಒಂದು ಭಯ ಹುಟ್ಟಿಸುವ ವಿಷಯ. ಆದರೆ, ಆನ್‌ಲೈನ್ ಫಿಟ್ನೆಸ್ ತರಬೇತುದಾರ ‘ಕೆವ್’ (Kev) ಅವರು ಹಂಚಿಕೊಂಡಿರುವ ಒಂದು ಪಟ್ಟಿ ಈಗ ಎಲ್ಲರ ಗಮನ ಸೆಳೆಯುತ್ತಿದೆ. ಜನವರಿ 13ರಂದು ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ’50 ಆಹಾರಗಳ ಚೀಟ್ ಶೀಟ್’ ಪ್ರಕಾರ, ಕೆಲವು ಪದಾರ್ಥಗಳನ್ನು ಎಷ್ಟು ತಿಂದರೂ ನೀವು ದಪ್ಪಗಾಗುವುದಿಲ್ಲ! ತೂಕ ಇಳಿಕೆಗೆ ‘ವಾಲ್ಯೂಮ್ ಈಟಿಂಗ್’ (Volume Eating) ರಹಸ್ಯ: ಹೆಚ್ಚಿನ ಡಯಟ್ ಪ್ಲಾನ್‌ಗಳು ವಿಫಲವಾಗಲು ಕಾರಣವೆಂದರೆ ಹಸಿವನ್ನು […]

ಕನ್ನಡ ದುನಿಯಾ 17 Jan 2026 12:01 pm

‘PF’ಖಾತೆದಾರರಿಗೆ ಗುಡ್ ನ್ಯೂಸ್ : ಇನ್ಮುಂದೆ ‘UPI’ನಿಂದ ನೇರವಾಗಿ ನಿಮ್ಮ ಹಣ ಹಿಂಪಡೆಯಬಹುದು

ನಮ್ಮ ದೀರ್ಘಕಾಲದಿಂದ ಉಳಿಸಿಕೊಂಡಿರುವ ಭವಿಷ್ಯ ನಿಧಿಯನ್ನು (PF) ಹಿಂಪಡೆಯಬೇಕಾದಾಗಲೆಲ್ಲಾ, ನಾವು ಫಾರ್ಮ್ಗಳನ್ನು ಭರ್ತಿ ಮಾಡಬೇಕಾಗುತ್ತದೆ. ನಾವು ಅನುಮೋದನೆಗಳಿಗಾಗಿ ಕಾಯಬೇಕಾಗುತ್ತದೆ.ಇದಕ್ಕೆ ಬಹಳ ಸಮಯ ಹಿಡಿಯುತ್ತದೆ. ಇದೀಗ ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ಗುಡ್ ನ್ಯೂಸ್ ನೀಡಿದೆ. ಏಪ್ರಿಲ್ನಿಂದ ಲಭ್ಯವಾಗುವ ಹೊಸ ವ್ಯವಸ್ಥೆಯೊಂದಿಗೆ, ನೀವು ಸೆಕೆಂಡುಗಳಲ್ಲಿ ನಿಮ್ಮ ಹಣವನ್ನು ಹಿಂಪಡೆಯಬಹುದು. ಇಪಿಎಫ್ಒ ಯುಪಿಐ ಆಧಾರಿತ ಹಣ ಹಿಂಪಡೆಯುವ ವ್ಯವಸ್ಥೆಯನ್ನು ಜಾರಿಗೆ ತರಲು ಸಿದ್ಧತೆ ನಡೆಸುತ್ತಿದೆ. ಈ ಹೊಸ ವ್ಯವಸ್ಥೆ ಏಪ್ರಿಲ್ನಿಂದ ಲಭ್ಯವಾಗುವ ಸಾಧ್ಯತೆಯಿದೆ ಎಂದು ಅಧಿಕೃತ ಮೂಲಗಳು ಬಹಿರಂಗಪಡಿಸಿವೆ. […]

ಕನ್ನಡ ದುನಿಯಾ 17 Jan 2026 11:58 am

ಪೊಲೀಸ್ ಠಾಣೆಯಿಂದ ಮಾಯವಾಗಿ ಅಪಘಾತದ ಜಾಗಕ್ಕೇ ಮರಳುತ್ತಿತ್ತು ಆ ಬುಲೆಟ್ ರಾಜಸ್ಥಾನದ ಬುಲೆಟ್ ಬಾಬಾನ ರೋಚಕ ಕಥೆ

ರಾಜಸ್ಥಾನದ ಪಾಲಿ-ಜೋಧ್‌ಪುರ ಹೆದ್ದಾರಿಯಲ್ಲಿ ಸಾಗುವಾಗ ಪ್ರತಿಯೊಬ್ಬ ವಾಹನ ಸವಾರನೂ ಅರಿವಿಲ್ಲದೆಯೇ ತನ್ನ ವಾಹನದ ವೇಗ ತಗ್ಗಿಸಿ, ಭಕ್ತಿಯಿಂದ ತಲೆಬಾಗುವ ಒಂದು ವಿಚಿತ್ರ ಹಾಗೂ ಅದ್ಭುತ ದೇವಾಲಯವಿದೆ. ಅದುವೇ ‘ಓಂ ಬನ್ನಾ ಧಾಮ್’ ಅಥವಾ ಜನಪ್ರಿಯವಾಗಿ ‘ಬುಲೆಟ್ ಬಾಬಾ ಮಂದಿರ’. ಮಂತ್ರಘೋಷಗಳಿಗಿಂತ ಹೆಚ್ಚಾಗಿ ಎಂಜಿನ್ ಸದ್ದಿನ ನಡುವೆ ನೆಲೆಸಿರುವ ಈ ಮಂದಿರದ ಹಿಂದೆ ಒಂದು ರೋಚಕ ಇತಿಹಾಸವಿದೆ. ಲೆಜೆಂಡ್ ಓಂ ಬನ್ನಾ ಮತ್ತು ಆ ಭೀಕರ ಅಪಘಾತ: ಈ ಕಥೆ ಆರಂಭವಾಗುವುದು ಓಂ ಸಿಂಗ್ ರಾಥೋಡ್ ಅಥವಾ ಪ್ರೀತಿಯ […]

ಕನ್ನಡ ದುನಿಯಾ 17 Jan 2026 11:51 am

ತರಕಾರಿ ತರಲು ಹೋಗಿದ್ದೆ, ವಾಪಸ್ ಬಂದ್ರೆ ಡೋರ್ ಲಾಕ್: ನಡುರಸ್ತೆಯಲ್ಲೇ ಪೊಲೀಸರ ಮುಂದೆ ಅಳಲು ತೋಡಿಕೊಂಡ ವ್ಯಕ್ತಿ

ಸೋಷಿಯಲ್ ಮೀಡಿಯಾದಲ್ಲಿ ಸದ್ಯ ವಿಡಿಯೋವೊಂದು ಸಖತ್ ವೈರಲ್ ಆಗುತ್ತಿದ್ದು, ವ್ಯಕ್ತಿಯೊಬ್ಬ ತನ್ನ ಪತ್ನಿ ಮನೆಯ ಬಾಗಿಲು ತೆಗೆಯುತ್ತಿಲ್ಲ ಎಂದು ನೇರವಾಗಿ ಪೊಲೀಸರಿಗೇ ಕರೆ ಮಾಡಿದ್ದಾನೆ. ತಾನು ಕೇವಲ ತರಕಾರಿ ತರಲು ಮಾರುಕಟ್ಟೆಗೆ ಹೋಗಿದ್ದೆ, ವಾಪಸ್ ಬಂದಾಗ ಪತ್ನಿ ಬಾಗಿಲು ತೆರೆಯುತ್ತಿಲ್ಲ ಎಂದು ಈತ ಗಾಬರಿಯಿಂದ ಪೊಲೀಸರಿಗೆ ದೂರು ನೀಡಿದ ಘಟನೆ ಈಗ ನೆಟ್ಟಿಗರ ನಡುವೆ ಭಾರಿ ಚರ್ಚೆ ಹುಟ್ಟುಹಾಕಿದೆ. ನಡೆದಿದ್ದೇನು? ವೈರಲ್ ವಿಡಿಯೋದ ಪ್ರಕಾರ, ಆಶಿಶ್ ಎಂಬ ವ್ಯಕ್ತಿ ಮಾರುಕಟ್ಟೆಗೆ ಹೋಗಿ ಅರ್ಧ ಗಂಟೆಯ ನಂತರ ಮನೆಗೆ […]

ಕನ್ನಡ ದುನಿಯಾ 17 Jan 2026 11:38 am

ಕೊಲೆಸ್ಟ್ರಾಲ್ ಸಮಸ್ಯೆಯೇ? ಔಷಧಿ ಇಲ್ಲದೆ ಕೆಟ್ಟ ಕೊಲೆಸ್ಟ್ರಾಲ್ ಕರಗಿಸಲು ಇಲ್ಲಿವೆ 8 ನೈಸರ್ಗಿಕ ಸೂತ್ರ

ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ (LDL) ಪ್ರಮಾಣ ಹೆಚ್ಚಾದಂತೆ ಹೃದಯಾಘಾತ ಮತ್ತು ಪಾರ್ಶ್ವವಾಯುವಿನಂತಹ ಗಂಭೀರ ಕಾಯಿಲೆಗಳ ಅಪಾಯವೂ ಹೆಚ್ಚಾಗುತ್ತದೆ. ಔಷಧಿಗಳಿಲ್ಲದೆ, ನೈಸರ್ಗಿಕವಾಗಿ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಮತ್ತು ನಿಮ್ಮ ಹೃದಯವನ್ನು ರಕ್ಷಿಸಲು ಇಲ್ಲಿವೆ 8 ಸರಳ ಮಾರ್ಗಗಳು: 1. ಕಾರ್ಬೋಹೈಡ್ರೇಟ್ ಸೇವನೆ ಕಡಿಮೆ ಮಾಡಿ: ಅತಿಯಾದ ಕಾರ್ಬೋಹೈಡ್ರೇಟ್ (ಪಿಷ್ಟ) ಸೇವನೆಯು ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸಬಹುದು. ಆದ್ದರಿಂದ, ಬಿಳಿ ಅಕ್ಕಿ, ಮೈದಾ ಮತ್ತು ಸಕ್ಕರೆಯ ಅಂಶವಿರುವ ಆಹಾರಗಳನ್ನು ಮಿತಗೊಳಿಸುವುದು ಉತ್ತಮ. 2. ಸಂಸ್ಕರಿಸಿದ ಮತ್ತು ಜಿಡ್ಡು ಪದಾರ್ಥಗಳಿಂದ […]

ಕನ್ನಡ ದುನಿಯಾ 17 Jan 2026 11:35 am

ಬೆಂಗಳೂರು-ಮುಂಬೈ ನಡುವೆ ದುರಂತೋ ಎಕ್ಸ್‌ಪ್ರೆಸ್ ರೈಲು ಆರಂಭ

ಬೆಂಗಳೂರು-ಮುಂಬೈ ನಡುವೆ ಸೂಪರ್ ಫಾಸ್ಟ್ ರೈಲು ಓಡಿಸಲು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಈಗಾಗಲೇ ಒಪ್ಪಿಗೆ ನೀಡಿದ್ದಾರೆ. ಈ ರೈಲನ್ನು ಉತ್ತರ ಕರ್ನಾಟಕದ ಮೂಲಕ ಓಡಿಸಬೇಕು ಎಂದು ಆ ಭಾಗದ ಸಂಸದರು ಮನವಿಯನ್ನು ಸಲ್ಲಿಸಿದ್ದು, ಅದಕ್ಕೂ ಅನುಮೋದನೆ ಸಿಕ್ಕಿದೆ. ಸದ್ಯದ ಮಾಹಿತಿ ಪ್ರಕಾರ ಕರ್ನಾಟಕದ ರಾಜಧಾನಿ ಬೆಂಗಳೂರು ಮತ್ತು ಮಹಾರಾಷ್ಟ್ರದ ರಾಜಧಾನಿ ಮುಂಬೈ ನಡುವೆ ದುರಂತೋ ಎಕ್ಸ್‌ಪ್ರೆಸ್ ರೈಲು ಆರಂಭವಾಗಲಿದೆ. ಈ ಕುರಿತು 2026-27ನೇ ಸಾಲಿನ ಬಜೆಟ್‌ನಲ್ಲಿ ಘೋಷಣೆ ಮಾಡುವ ನಿರೀಕ್ಷೆ ಇದೆ. ಅಧಿಕಾರಿಗಳ ಮಾಹಿತಿ […]

ಕನ್ನಡ ದುನಿಯಾ 17 Jan 2026 11:32 am

ಜಾಲಿ ರಾಂಚರ್ ಮಿಠಾಯಿ ಪ್ರಿಯರೇ ಎಚ್ಚರ ಮಕ್ಕಳ ಫೇವರಿಟ್ ಚಾಕೊಲೇಟ್‌ನಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ

ಅಮೆರಿಕಾದ ಜನಪ್ರಿಯ ಸಿಹಿ ಮಿಠಾಯಿಗಳಾದ ಜಾಲಿ ರಾಂಚರ್ (Jolly Rancher) ಉತ್ಪನ್ನಗಳಲ್ಲಿ ಕ್ಯಾನ್ಸರ್ ಕಾರಕ ಅಂಶಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ, ಬ್ರಿಟನ್ (UK) ಮಾರುಕಟ್ಟೆಯಿಂದ ಇವುಗಳನ್ನು ತುರ್ತಾಗಿ ವಾಪಸ್ ಪಡೆಯಲಾಗುತ್ತಿದೆ (Recall). ಈ ಮಿಠಾಯಿಗಳಲ್ಲಿ ಬಳಸಲಾದ ಪದಾರ್ಥಗಳು ಆರೋಗ್ಯಕ್ಕೆ ಹಾನಿಕಾರಕ ಎಂದು ಆಹಾರ ಸುರಕ್ಷತಾ ಸಂಸ್ಥೆ (FSA) ಎಚ್ಚರಿಕೆ ನೀಡಿದೆ. ಏನಿದು ಅಪಾಯ? ಈ ಮಿಠಾಯಿಗಳಲ್ಲಿ ಮಿನರಲ್ ಆಯಿಲ್ ಆರೊಮ್ಯಾಟಿಕ್ ಹೈಡ್ರೋಕಾರ್ಬನ್ (MOAH) ಮತ್ತು ಮಿನರಲ್ ಆಯಿಲ್ ಸ್ಯಾಚುರೇಟೆಡ್ ಹೈಡ್ರೋಕಾರ್ಬನ್ (MOSH) ಎಂಬ ರಾಸಾಯನಿಕಗಳು ಪತ್ತೆಯಾಗಿವೆ. ಬ್ರಿಟನ್‌ನ ಆಹಾರ […]

ಕನ್ನಡ ದುನಿಯಾ 17 Jan 2026 11:30 am

ಅಪ್ಪನಿಗೆ ಏಡ್ಸ್ ಬಂದಾಗ ಯಾರೂ ನಮ್ಮ ಜೊತೆ ಮಾತಾಡಲಿಲ್ಲ: ತಾಯಿಯ ಶವದ ಮುಂದೆ 10 ವರ್ಷದ ಬಾಲಕನ ಕಣ್ಣೀರು

ಉತ್ತರ ಪ್ರದೇಶದ ಏಟಾ (Etah) ಜಿಲ್ಲೆಯಿಂದ ಮನುಕುಲವೇ ತಲೆತಗ್ಗಿಸುವಂತಹ ಅತ್ಯಂತ ದುಃಖದಾಯಕ ಘಟನೆಯೊಂದು ವರದಿಯಾಗಿದೆ. ಎಚ್‌ಐವಿ (HIV) ಪೀಡಿತ ತಾಯಿಯನ್ನು ಉಳಿಸಿಕೊಳ್ಳಲು ಹರಸಾಹಸ ಪಟ್ಟ 10 ವರ್ಷದ ಪುಟ್ಟ ಬಾಲಕನೊಬ್ಬ, ಕೊನೆಗೆ ಆಕೆ ಮೃತಪಟ್ಟಾಗ ಶವಪರೀಕ್ಷಾ ಕೇಂದ್ರದ ಹೊರಗೆ ಕುಳಿತು ಅಳುತ್ತಿರುವ ದೃಶ್ಯ ಕಲ್ಲುಮನಸ್ಸಿನವರನ್ನೂ ಕರಗಿಸುವಂತಿದೆ. ಘಟನೆಯ ವಿವರ: ಏಟಾ ಜಿಲ್ಲೆಯ ಜೈತ್ರಾ ಪೊಲೀಸ್ ಠಾಣಾ ವ್ಯಾಪ್ತಿಯ ನಾಗ್ಲಾ ಧೀರಜ್ ಗ್ರಾಮದ 45 ವರ್ಷದ ಮಹಿಳೆಯೊಬ್ಬರು ಎಚ್‌ಐವಿ ಮತ್ತು ಏಡ್ಸ್‌ನಿಂದ ಬಳಲುತ್ತಿದ್ದರು. ಕಳೆದ ವರ್ಷವಷ್ಟೇ ಇವರ ಪತಿ […]

ಕನ್ನಡ ದುನಿಯಾ 17 Jan 2026 11:29 am

SHOCKING: ಗೋವಾದಲ್ಲಿ ಮತ್ತೊಂದು ಬರ್ಬರ ಹತ್ಯೆ: ಸ್ನೇಹಿತೆಯರನ್ನೇ ಕತ್ತು ಸೀಳಿ ಕೊಲೆಗೈದ ರಷ್ಯಾ ವ್ಯಕ್ತಿ

ಪಣಜಿ: ರಷ್ಯಾ ಮೂಲದ ವ್ಯಕ್ತಿಯೊಬ್ಬ ಗೋವಾದಲ್ಲಿ ತನ್ನ ಸ್ನೇಹಿತೆಯರನ್ನೇ ಕತ್ತು ಸೀಳಿ ಬರ್ಬರವಾಗಿ ಹತ್ಯೆಗೈದಿರುವ ಘಟನೆ ನಡೆದಿದೆ. ಉತ್ತರ ಗೋವಾದ ಅರಾಂಬೋಲ್ ಹಾಗೂ ಮೊರ್ಜಿಮ್ ಗ್ರಾಮದಲ್ಲಿ ವಾಸವಾಗಿದ್ದ ಎಲೆನಾ ವನೀತಾ (37) ಹಾಗೂ ಎಲೆನಾ ಕಸ್ತನೋವಾ (37) ಕೊಲೆಯಾದ ಸ್ನೇಹಿತೆಯರು. ಅಲೆಕ್ಸಿ ಲಿಯೊನೊವ್ ಎಂಬ ರಷ್ಯನ್ ವ್ಯಕ್ತಿ ಇಬ್ಬರನ್ನೂ ಹತ್ಯೆ ಮಾಡಿದ್ದಾನೆ. ಎರಡು ದಿನಗಳ ಹಿಂದೆ ಜನವರಿ 14ರಂದು ಆರೋಪಿ ಮೊರ್ಜಿಮ್ ನಲ್ಲಿ ವಾಸವಿದ್ದ ಎಲೆನಾ ವನಿವಾ ಅವರನ್ನು ಕತ್ತು ಸೋಳಿ ಕೊಲೆಗೈದಿದ್ದಾನೆ. ಒಂದು ದಿನದ ಬಳಿಕ […]

ಕನ್ನಡ ದುನಿಯಾ 17 Jan 2026 11:22 am

ಝಾನ್ಸಿ ಹೋಟೆಲ್‌ನಲ್ಲಿ ಪತ್ನಿ-ಪ್ರಿಯಕರನ ರೆಡ್ ಹ್ಯಾಂಡ್ ಆಗಿ ಹಿಡಿದ ಪತಿ: ಬೆಡ್ ಅಡಿಯಲ್ಲಿ ಅವಿತಿದ್ದ ಆಸಾಮಿಯನ್ನು ಎಳೆದು ತಂದ ಪೊಲೀಸರು

ಉತ್ತರ ಪ್ರದೇಶದ ಝಾನ್ಸಿಯಲ್ಲಿ ನಡೆದ ಹೈಡ್ರಾಮಾ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಹೋಟೆಲ್ ರೂಮ್‌ವೊಂದರಲ್ಲಿ ಪತ್ನಿಯು ಪ್ರಿಯಕರನೊಂದಿಗೆ ಇರುವುದನ್ನು ಪತಿ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದು, ಈ ವೇಳೆ ಪ್ರಿಯಕರ ಬೆಡ್ ಕೆಳಗೆ ಅಡಗಿಕೊಂಡಿರುವ ವಿಡಿಯೋ ಈಗ ವೈರಲ್ ಆಗಿದೆ. ಘಟನೆಯ ವಿವರ: ಬೆಡ್ ಕೆಳಗೆ ಅವಿತಿದ್ದ ಪ್ರಿಯಕರ! ಜನೆವರಿ 11ರಂದು ಝಾನ್ಸಿಯ ನವಾಬಾದ್ ಪ್ರದೇಶದ ಬಸ್ ನಿಲ್ದಾಣದ ಸಮೀಪವಿರುವ ‘ಕರ್ಮ ಗೆಸ್ಟ್ ಹೌಸ್’ನಲ್ಲಿ ಈ ಘಟನೆ ನಡೆದಿದೆ. ತನ್ನ ಪತ್ನಿ ಬೇರೊಬ್ಬ ವ್ಯಕ್ತಿಯೊಂದಿಗೆ […]

ಕನ್ನಡ ದುನಿಯಾ 17 Jan 2026 11:19 am

ಜನವರಿ 20 ರಿಂದ ಶನಿಯ ನಕ್ಷತ್ರ ಬದಲಾವಣೆ: ಈ 3 ರಾಶಿಗಳ ಪಾಲಿಗೆ ಶುರುವಾಗಲಿದೆ ಸುವರ್ಣ ಕಾಲ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗ್ರಹಗಳ ರಾಜಕುಮಾರ ಎಂದು ಕರೆಯಲ್ಪಡುವ ಶನಿದೇವನು ಜನವರಿ 20 ರಂದು ತನ್ನ ನಕ್ಷತ್ರವನ್ನು ಬದಲಾಯಿಸಲಿದ್ದಾನೆ. ಶನಿಯು ಉತ್ತರಾ ಭಾದ್ರಪದ ನಕ್ಷತ್ರಕ್ಕೆ ಪ್ರವೇಶಿಸುತ್ತಿದ್ದು, ಇದು ಕೆಲವು ರಾಶಿಗಳ ಪಾಲಿಗೆ ಅದೃಷ್ಟದ ಬಾಗಿಲನ್ನು ತೆರೆಯಲಿದೆ. ಆಧ್ಯಾತ್ಮಿಕತೆ, ಸ್ಥಿರತೆ ಮತ್ತು ಕರ್ಮ ಫಲಗಳಿಗೆ ಹೆಸರುವಾಸಿಯಾದ ಈ ನಕ್ಷತ್ರ ಬದಲಾವಣೆಯು ಆರ್ಥಿಕ ಸಂಕಷ್ಟಗಳಿಂದ ಮುಕ್ತಿ ನೀಡಲಿದೆ. ಶನಿಯ ಈ ನಕ್ಷತ್ರ ಸಂಚಾರದಿಂದ ವಿಶೇಷವಾಗಿ ಲಾಭ ಪಡೆಯಲಿರುವ ಆ 3 ರಾಶಿಗಳು ಇಲ್ಲಿವೆ: ೧. ಮಿಥುನ ರಾಶಿ (Gemini): ಮಿಥುನ […]

ಕನ್ನಡ ದುನಿಯಾ 17 Jan 2026 11:06 am

BREAKING : ದೆಹಲಿ-NCR ನಲ್ಲಿ ದಟ್ಟ ಮಂಜು : ಹಲವು ವಿಮಾನಗಳ ಹಾರಾಟದಲ್ಲಿ ವ್ಯತ್ಯಯ

ಶನಿವಾರ ರಾಷ್ಟ್ರ ರಾಜಧಾನಿಯ ಹಲವು ಭಾಗಗಳಲ್ಲಿ ದಟ್ಟವಾದ ಮಂಜು ಆವರಿಸಿದ್ದು, ನಗರದಾದ್ಯಂತ ಗೋಚರತೆ ತೀವ್ರವಾಗಿ ಕಡಿಮೆಯಾಗಿದ್ದು, ಗಾಳಿಯ ಗುಣಮಟ್ಟ ಹದಗೆಟ್ಟಿದೆ. ತೀವ್ರ ಶೀತಗಾಳಿಯ ನಡುವೆಯೂ, ದೆಹಲಿಯಲ್ಲಿ ಕನಿಷ್ಠ ತಾಪಮಾನ 4.4 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಶುಕ್ರವಾರದ ಮಟ್ಟಕ್ಕಿಂತ ಸ್ವಲ್ಪ ಹೆಚ್ಚಾಗಿದೆ. ಮಾಲಿನ್ಯದ ಮಟ್ಟ ಹೆಚ್ಚಾಗಿದ್ದರಿಂದ ರಸ್ತೆಗಳು ಮತ್ತು ಕಟ್ಟಡಗಳು ದಟ್ಟವಾದ ಮಬ್ಬಿನಿಂದ ಆವೃತವಾಗಿರುವುದನ್ನು ಐಟಿಒ ಪ್ರದೇಶದ ದೃಶ್ಯಗಳು ತೋರಿಸಿವೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ಪ್ರಕಾರ, ಈ ಪ್ರದೇಶದಲ್ಲಿ ವಾಯು ಗುಣಮಟ್ಟ ಸೂಚ್ಯಂಕ (AQI) 402 […]

ಕನ್ನಡ ದುನಿಯಾ 17 Jan 2026 10:45 am

ಮಹಿಳಾ ಇ-ಆಟೋ ಅಭಿಯಾನ: ಹರ್ಬಲೈಫ್ ಇಂಡಿಯಾದಿಂದ ಪರಿಸರ ಸ್ನೇಹಿ ಸಾರಿಗೆ ಕ್ರಾಂತಿಗೆ ಮುನ್ನುಡಿ

ಹರ್ಬಲೈಫ್ಇಂಡಿಯಾ ಬೆಂಗಳೂರು ನಗರದಲ್ಲಿ 115 ಚಾಲಕಿಯರನ್ನು ಯಶಸ್ವಿಯಾಗಿ ಸಬಲೀಕರಣಗೊಳಿಸಿದ ಬಳಿಕ ಮೈಸೂರು ನಗರಕ್ಕೆ ಕಾಲಿಟ್ಟಿದೆ. ಮೈಸೂರಿನ 75ಕ್ಕೂ ಹೆಚ್ಚು ಮಹಿಳೆಯರಿಗೆ ಸುಸ್ಥಿರ ಜೀವನೋಪಾಯ, ಇವಿ ಚಾಲನೆ ಕೌಶಲ ಮತ್ತು ಆರ್ಥಿಕ ಸ್ವಾತಂತ್ರ್ಯ ಹೊಂದುವ ಅವಕಾಶ ಕಲ್ಪಿಸಿ ಪರಿಸರ ಸ್ನೇಹಿ ಸಾರಿಗೆ ಕ್ರಾಂತಿಗೆ ಮುನ್ನುಡಿಯನ್ನು ಬರೆದಿದೆ. ಪ್ರತಿಷ್ಠಿತ ಆರೋಗ್ಯ ಮತ್ತು ಜೀವನಶೈಲಿ ಸಂಸ್ಥೆ ಆಗಿರುವ ಹರ್ಬಲೈಫ್ ಇಂಡಿಯಾ ಸಂಸ್ಥೆಯು ಶಿಶು ಮಂದಿರ ಸಂಸ್ಥೆಯ ಸಹಯೋಗದೊಂದಿಗೆ ತನ್ನ ಮಹತ್ವಾಕಾಂಕ್ಷೆಯ ‘ಇಕೋ ವೀಲ್ಸ್ ಮಹಿಳಾ ಯೋಜನೆ’ಯನ್ನು ಮೈಸೂರಿನಲ್ಲಿ ಆರಂಭಿಸಿದ್ದು, ಅಭಿಯಾನಕ್ಕೆ ಚಾಲನೆ […]

ಕನ್ನಡ ದುನಿಯಾ 17 Jan 2026 10:36 am

ಪ್ರಶ್ನೆ ಪತ್ರಿಕೆ ಸೋರಿಕೆ ತಡೆಗೆ ಪಿಯು ಬೋರ್ಡ್ ನಿಂದ ಕಠಿಣ ಕ್ರಮ: ಶಿಕ್ಷಣ ಸಂಸ್ಥೆ-ಕಾಲೇಜುಗಳು ಬ್ಲಾಕ್ ಲಿಸ್ಟ್ ಗೆ; ಅನುದಾನ ಮಾನ್ಯತೆಯೂ ರದ್ದು

ಬೆಂಗಳೂರು: ಎಸ್.ಎಸ್.ಎಲ್.ಸಿ, ಪಿಯುಸಿ ಸೇರಿದಂತೆ ವಿವಿಧ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗುತ್ತಿರುವ ಪ್ರಕರಣ ಬೆನ್ನಲ್ಲೇ ಎಚ್ಚೆತ್ತಿರುವ ಪಿಯು ಬೋರ್ಡ್ ಪ್ರಶ್ನೆ ಪತ್ರಿಕೆ ಸೋರಿಕೆ ತಡೆಗೆ ಕಠಿಣ ಕ್ರಮಕ್ಕೆ ಮುಂದಾಗಿದೆ. ಪರೀಕ್ಷೆಗೂ ಮುನ್ನವೇ ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನೆ ಪತ್ರಿಕೆಗಳನ್ನು ಲೀಕ್ ಮಾಡಿ ಕಿಡಿಗೇಡಿಗಳು ವಿದ್ಯಾರ್ಥಿಗಳ ಬವಿಷ್ಯದ ಜೊತೆ ಆಟವಾಡುತ್ತಿದ್ದಾರೆ. ಇಂತಹ ಕಿಡಿಗೇಡಿಗಳ ಹುಚ್ಚಾಟಕ್ಕೆ ಬ್ರೇಕ್ ಹಾಕಲು ಪಿಯು ಬೋರ್ಟ್ ಹೊಸ ಅಸ್ತ್ರ ಪ್ರಯೋಗಿಸಿದೆ. ಕೆಲದಿನಗಳಿಂದೆ ಎಸ್.ಎಸ್.ಎಸ್.ಎಲ್.ಸಿ ಪೂರ್ವಸಿದ್ಧತಾ ಪರೀಕ್ಷೆ ಪ್ರಶ್ನೆ ಪತ್ರಿಕೆ ಹಾಗೂ ಪಿಯು ಪ್ರಶ್ನೆ ಪತ್ರಿಕೆಗಳು ಸಾಮಾಜಿಕ […]

ಕನ್ನಡ ದುನಿಯಾ 17 Jan 2026 10:35 am

BREAKING : ಗದಗದ ಆಂಜನೇಯ ದೇವಸ್ಥಾನದಲ್ಲಿ ನಿಗೂಢ ‘ಗೆಜ್ಜೆ ಶಬ್ದ’ : ಗ್ರಾಮಸ್ಥರಿಂದ ರಾತ್ರಿಯಿಡೀ ಜಾಗರಣೆ.!

ಗದಗ : ಆಂಜನೇಯ ದೇಗುಲದಲ್ಲಿ ನಿಗೂಢ ಗೆಜ್ಜೆ ಶಬ್ದ ಕೇಳಿಬಂದಿದ್ದು, ಅದನ್ನು ಕೇಳಿಸಿಕೊಳ್ಳಲು ಗ್ರಾಮಸ್ಥರು ರಾತ್ರಿಯಿಡೀ ಜಾಗರಣೆ ಮಾಡಿದ್ದಾರೆ. ಗದಗ ಜಿಲ್ಲೆಯ ಕೊರ್ಲಹಳ್ಳಿಯಲ್ಲಿರುವ ಆಂಜನೇಯ ದೇವಾಲಯದಲ್ಲಿ ಈ ಘಟನೆ ನಡೆದಿದೆ. ಆಂಜನೇಯ ದೇವಾಲಯದ ಗರ್ಭಗುಡಿಯಿಂದ ನಿಗೂಡ ಗೆಜ್ಜೆ ಶಬ್ದ ಕೇಳಿಬರುತ್ತಿದೆ ಎಂಬ ಸುದ್ದಿ ಕಳೆದ ರಾತ್ರಿ ಗ್ರಾಮದಲ್ಲಿ ಹರಡಿದ್ದು, ಊರಿನ ಜನರೆಲ್ಲಾ ದೇವಸ್ಥಾನದಲ್ಲಿ ದೌಡಾಯಿಸಿದ್ದಾರೆ. ಕೊರ್ಲಹಳ್ಳಿಯಲ್ಲಿರುವ ಆಂಜನೇಯ ದೇವಾಲಯದಲ್ಲಿರುವ ನಡೆದ ಘಟನೆ ಗ್ರಾಮಸ್ಥರ ಅಚ್ಚರಿಗೆ ಕಾರಣವಾಗಿದೆ. ನಿಗೂಢವಾದ ಗೆಜ್ಜೆ ಶಬ್ದಕ್ಕೆ ಕಾರಣ ಏನು ಎಂಬುದು ಇನ್ನಷ್ಟೇ ತಿಳಿದು […]

ಕನ್ನಡ ದುನಿಯಾ 17 Jan 2026 10:32 am

‘PAN ಕಾರ್ಡ್’ಕಳೆದುಹೋದ್ರೆ ಚಿಂತಿಸ್ಬೇಡಿ.! ಸೆಕೆಂಡುಗಳಲ್ಲಿ ಜಸ್ಟ್ ಹೀಗೆ ಡೂಪ್ಲಿಕೇಟ್ ಕಾರ್ಡ್ ಪಡೆಯಿರಿ.!

ಆಧಾರ್ ಕಾರ್ಡ್ ಜೊತೆಗೆ ಭಾರತದಲ್ಲಿ ವಾಸಿಸುವ ಪ್ರತಿಯೊಬ್ಬರಿಗೂ ಅಗತ್ಯವಾದ ಮತ್ತೊಂದು ದಾಖಲೆ ಪ್ಯಾನ್ ಕಾರ್ಡ್.ಬ್ಯಾಂಕ್ ಖಾತೆ ತೆರೆಯಲು ಅಥವಾ ಹೊಸ ಕೆಲಸಕ್ಕೆ ಸೇರುವಾಗ ಸಂಬಳ ಪಡೆಯಲು ಪ್ಯಾನ್ ಕಾರ್ಡ್ ಅಗತ್ಯವಿದೆ. ರೂ. 50 ಸಾವಿರಕ್ಕಿಂತ ಹೆಚ್ಚಿನ ಬ್ಯಾಂಕ್ ವಹಿವಾಟುಗಳಿಗೂ ಇದು ಕಡ್ಡಾಯವಾಗಿದೆ. ಅಂತಹ ಪ್ಯಾನ್ ಕಾರ್ಡ್ ಇಲ್ಲದೆ, ಯಾವುದೇ ಹಣಕಾಸಿನ ಚಟುವಟಿಕೆಗಳು ಮತ್ತು ವಹಿವಾಟುಗಳನ್ನು ನಡೆಸಲಾಗುವುದಿಲ್ಲ. ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಈ ಪ್ರಮಾಣಪತ್ರವೂ ಅಗತ್ಯವಿದೆ. ಇತರ ಸೇವೆಗಳನ್ನು ಪಡೆಯಲು ಪ್ಯಾನ್ ಕಾರ್ಡ್ ಸರ್ಕಾರಿ ಪರಿಶೀಲನಾ ದಾಖಲೆಯಾಗಿಯೂ […]

ಕನ್ನಡ ದುನಿಯಾ 17 Jan 2026 10:20 am

ಕೇವಲ 24 ಗಂಟೆಗಳಲ್ಲಿ ತಯಾರಾದ ಭಾರತೀಯ ಸಿನಿಮಾ. 30 ಸ್ಟಾರ್ ನಟರಿರುವ ಚಿತ್ರದ ಕಥೆ ಕೇಳಿದ್ರೆ ದಂಗಾಗ್ತೀರಾ

ಸಾಮಾನ್ಯವಾಗಿ ಒಂದು ಸಿನಿಮಾ ತಯಾರಾಗಲು ತಿಂಗಳುಗಳು ಅಥವಾ ವರ್ಷಗಳೇ ಬೇಕು. ಆದರೆ ಕೇವಲ 24 ಗಂಟೆಗಳಲ್ಲಿ ಚಿತ್ರೀಕರಣಗೊಂಡು ವಿಶ್ವ ದಾಖಲೆ ನಿರ್ಮಿಸಿದ ಭಾರತೀಯ ಸಿನಿಮಾ ಎಂದರೆ ಅದು ‘ಸುಯಂವರಂ’ (Suyamvaram). 1999ರಲ್ಲಿ ಬಿಡುಗಡೆಯಾದ ಈ ತಮಿಳು ಚಿತ್ರವು ಚಿತ್ರರಂಗದ ಇತಿಹಾಸದಲ್ಲೇ ಒಂದು ಅಚ್ಚರಿಯ ಪ್ರಯೋಗ. ಈ ಚಿತ್ರದ ಬಗ್ಗೆ ನೀವು ತಿಳಿದಿರಲೇಬೇಕಾದ ಕುತೂಹಲಕಾರಿ ಸಂಗತಿಗಳು ಇಲ್ಲಿವೆ: ದಾಖಲೆಗಳ ಸರದಾರ ಈ ‘ಸುಯಂವರಂ’ ಈ ಚಿತ್ರವು ಚಿತ್ರೀಕರಣದಿಂದ ಹಿಡಿದು ಪೋಸ್ಟ್ ಪ್ರೊಡಕ್ಷನ್ ವರೆಗಿನ ಎಲ್ಲಾ ಕೆಲಸಗಳನ್ನು ಕೇವಲ 23 […]

ಕನ್ನಡ ದುನಿಯಾ 17 Jan 2026 10:18 am

BREAKING: ಲಕ್ಕುಂಡಿಯಲ್ಲಿ 2ನೇ ದಿನದ ಉತ್ಖನನದ ವೇಳೆ ಪುರಾತನ ವಸ್ತು ಪತ್ತೆ

ಗದಗ: ಗದಗ ಜಿಲ್ಲೆಯ ಐತಿಹಾಸಿಕ ಲಕ್ಕುಂಡಿಯಲ್ಲಿ ನಿಧಿಗಳು, ಐತಿಹಾಸಿಕ ವಸ್ತುಗಳು ಪತ್ತೆಯಾಗುತ್ತಿರುವ ಹಿನ್ನೆಲೆಯಲ್ಲಿ ಗದಗ ಜಿಲ್ಲಾಡಳಿತ ಲಕ್ಕುಂಡಿಯಲ್ಲಿ ಉತ್ಖನನ ಕಾರ್ಯ ಆರಂಭಿಸಿದೆ. ಜನವರಿ 16ರಿಂದ ಉತ್ಖನನ ಕಾರ್ಯ ಆರಂಭವಾಗಿದ್ದು, ಇಂದು ಎರಡನೇ ದಿನಕ್ಕೆ ಕಾಲಿಟ್ಟಿದೆ. ಲಕ್ಕುಂಡಿಯ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಎದುರಿನಿಂದ ಉತ್ಖನನ ಕಾರ್ಯ ಆರಂಭವಾಗಿದೆ. ಎರಡನೇ ದಿನದ ಉತ್ಖನನದ ವೇಳೆ ಮಣ್ಣಿನಲ್ಲಿ ಪುರಾತನ ವಸ್ತುವೊಂದು ಪತ್ತೆಯಾಗಿದೆ. ನಿನ್ನೆಯಿಂದ ಈವರೆಗೆ ವೀರಭದ್ರೇಶ್ವರ ದೇವಸ್ಥಾದ ಬಳಿ 10 ಮೀಟರ್ ಉದ್ದ ಹಾಗೂ 10 ಮೀಟರ್ ಅಗಲ ಉತ್ಖನನ ಮಾಡಲಾಗಿದೆ. […]

ಕನ್ನಡ ದುನಿಯಾ 17 Jan 2026 10:14 am

ಕೈ ಹಿಡಿದು ಕಾಣಿಸಿಕೊಂಡಿದ್ದೇ ಮುಳುವಾಯ್ತಾ? ಧನುಷ್ ಜೊತೆಗಿನ ವಿವಾಹ ವದಂತಿಯ ನಡುವೆ ಮೃಣಾಲ್ ಮೊದಲ ಪ್ರತಿಕ್ರಿಯೆ

ಸಿನಿಮಾ ಲೋಕದಲ್ಲಿ ಸದ್ಯ ಕೇಳಿಬರುತ್ತಿರುವ ಅತಿ ದೊಡ್ಡ ಗಾಸಿಪ್ ಎಂದರೆ ಅದು ಮೃಣಾಲ್ ಠಾಕೂರ್ ಮತ್ತು ಕಾಲಿವುಡ್ ಸ್ಟಾರ್ ಧನುಷ್ ಅವರ ವಿವಾಹದ ಸುದ್ದಿ. ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಈ ಜೋಡಿ ಫೆಬ್ರವರಿಯಲ್ಲಿ ಮದುವೆಯಾಗಲಿದ್ದಾರೆ ಎಂಬ ಸುದ್ದಿಗಳು ದಟ್ಟವಾಗಿ ಹರಡುತ್ತಿವೆ. ಈ ಎಲ್ಲಾ ಚರ್ಚೆಗಳ ನಡುವೆ ಮೃಣಾಲ್ ಠಾಕೂರ್ ಹಂಚಿಕೊಂಡಿರುವ ಹೊಸ ಇನ್‌ಸ್ಟಾಗ್ರಾಮ್ ಪೋಸ್ಟ್ ಈಗ ಅಭಿಮಾನಿಗಳ ಗಮನ ಸೆಳೆದಿದೆ. ಮೃಣಾಲ್-ಧನುಷ್ ವಿವಾಹ ವದಂತಿ ಆರಂಭವಾಗಿದ್ದು ಹೇಗೆ? ಕಳೆದ ವರ್ಷ ಆಗಸ್ಟ್‌ನಲ್ಲಿ ‘ಸನ್ ಆಫ್ […]

ಕನ್ನಡ ದುನಿಯಾ 17 Jan 2026 10:03 am