SENSEX
NIFTY
GOLD
USD/INR

Weather

27    C

ಡಿಜಿಟಲ್ ಸುದ್ದಿ ಮೂಲಗಳು

... ...View News by News Source

ಕ್ಲಾಸ್ ರೂಮ್ ನಲ್ಲಿಯೇ ವಿದ್ಯಾರ್ಥಿನಿ ಮೇಲೆ ಗುಂಡಿನ ದಾಳಿ: ಬಳಿಕ ತನ್ನ ತಲೆಗೂ ಗುಂಡಿಟ್ಟುಕೊಂಡು ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಮಕ್ಕಳ ಮನಸ್ಥಿತಿ ಕ್ಷುಲ್ಲಕ ಕಾರಣಕ್ಕೂ ಸೇಡು ತೀರಿಸಿಕೊಳ್ಳುವುದು, ಅವಮಾನ ಎಂದು ಸಾವಿಗೆ ಶರಣಗುವಂತಹ ಸ್ಥಿತಿಗೆ ತಲುಪುತ್ತಿರುವುದು ಆತಂಕಕಾರಿ ಬೆಳವಣಿಗೆ. ಇಲ್ಲೋರ್ವ ವಿದ್ಯಾರ್ಥಿ, ವಿದ್ಯಾರ್ಥಿನಿ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆಗೈದಿದ್ದು, ಬಳಿಕ ತಾನೂ ಗುಂಡು ಹಾರಾಸಿಕೊಂಡು ಆತ್ಮಹತ್ಯೆ ಶರಣಾಗಿರುವ ಘಟನೆ ನಡೆದಿದೆ. ಪಂಜಾಬ್ ನ ತರಾನ್ ತರಾನ್ ಜಿಲ್ಲೆಯ ಶಾಲೆಯೊಂದರಲ್ಲಿ ಈ ಘಟನೆ ನಡೆದಿದೆ. ಶಾಲೆಯ ಕ್ಲಾಸ್ ರೂಂ ನಲ್ಲಿ ವಿದ್ಯಾರ್ಥಿಯೊಬ್ಬ ಪಕ್ಕದಲ್ಲಿದ್ದ ವಿದ್ಯಾರ್ಥಿನಿಯನ್ನು ಗುಂಡಿಟ್ಟು ಕೊಂದಿದ್ದಾನೆ. ಕ್ಷಣ ಮಾತ್ರದಲ್ಲಿಯೇ ತನ್ನ ತಲೆಗೂ […]

ಕನ್ನಡ ದುನಿಯಾ 9 Feb 2026 1:55 pm

ಕೇವಲ ೪ ರನ್ ಅಂತರದಲ್ಲಿ ಸೋತರೂ ವಿಶ್ವದ ಮನಗೆದ್ದ ನೇಪಾಳ; ವೆಸ್ಟ್ ಇಂಡೀಸ್‌ಗೆ ಕಾಡುತ್ತಿದೆ ನೇಪಾಳಿ ಪಡೆಯ ಭೀತಿ

ವಿಶ್ವಕಪ್‌ನ ತನ್ನ ಮೊದಲ ಪಂದ್ಯದಲ್ಲಿ ಬಲಿಷ್ಠ ಇಂಗ್ಲೆಂಡ್ ತಂಡಕ್ಕೆ ಬೆವರು ಇಳಿಸಿದ ನೇಪಾಳ, ಇಡೀ ವಿಶ್ವದ ಗಮನ ಸೆಳೆದಿದೆ. ೧೮೫ ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ ನೇಪಾಳ, ಅಂತಿಮ ಎಸೆತದವರೆಗೂ ಹೋರಾಡಿ ೧೮೦ ರನ್ ಗಳಿಸುವ ಮೂಲಕ ಕ್ರಿಕೆಟ್ ಪ್ರೇಮಿಗಳ ಮನ ಗೆದ್ದಿದೆ. ದಕ್ಷಿಣ ಆಫ್ರಿಕಾದ ವೇಗದ ಮಾಂತ್ರಿಕ ಡೇಲ್ ಸ್ಟೇನ್ ಕೂಡ ನೇಪಾಳದ ಪ್ರದರ್ಶನಕ್ಕೆ ಫಿದಾ ಆಗಿದ್ದು, ಆ ತಂಡಕ್ಕೆ ತರಬೇತಿ ನೀಡಲು ಆಸಕ್ತಿ ವ್ಯಕ್ತಪಡಿಸಿದ್ದಾರೆ. ವೇಳಾಪಟ್ಟಿ ಮತ್ತು ಸ್ಥಳ: ನೇಪಾಳ ತಂಡವು ತನ್ನ ಲೀಗ್ […]

ಕನ್ನಡ ದುನಿಯಾ 9 Feb 2026 1:52 pm

ಶ್ರೀಲಂಕಾದ ಡಿಜಿಟಲ್ ವೀಸಾ: ಇನ್ನು ದ್ವೀಪ ರಾಷ್ಟ್ರದ ಪ್ರವಾಸ ಸುಲಭ

ಸಮುದ್ರ ತೀರ, ಬೆಟ್ಟ-ಗುಡ್ಡಗಳು, ಹಸಿರು ಪರಿಸರದ ಮೂಲಕ ಶ್ರೀಲಂಕಾ ವಿದೇಶದ ಪ್ರವಾಸಿಗರನ್ನು ಬೆರಗುಗೊಳಿಸುತ್ತದೆ, ಸೆಳೆಯುತ್ತಿದೆ. ಪ್ರವಾಸೋದ್ಯಮಕ್ಕೆ ಹೆಸರುವಾಸಿಯಾದ ಶ್ರೀಲಂಕಾ ಈಗ ಪ್ರವಾಸ ಮತ್ತು ಅಲ್ಲಿ ಕೆಲಸ ಮಾಡಲು ಇಚ್ಛಿಸುವ ಜನರ ಅನುಕೂಲಕ್ಕಾಗಿ ಹೊಸ ಅವಕಾಶ ನೀಡಿದೆ, ದೇಶವು ಅಧಿಕೃತವಾದ ತನ್ನ ಡಿಜಿಟಲ್ ನೋಮ್ಯಾಡ್ ವೀಸಾ ಘೋಷಣೆ ಮಾಡಿದೆ. ಇದು ವಿದೇಶಿ ವೃತ್ತಿಪರರಿಗೆ ಒಂದು ವರ್ಷದವರೆಗೆ ದ್ವೀಪದಲ್ಲಿ ವಾಸಿಸಲು ಮತ್ತು ಕೆಲಸ ಮಾಡಲು ಅವಕಾಶ ನೀಡುತ್ತದೆ. ಈ ಹೊಸ ವೀಸಾ ಪ್ರಯಾಣ ಮತ್ತು ದೀರ್ಘಾವಧಿಯ ವಾಸ್ತವ್ಯವನ್ನು ಉತ್ತೇಜಿಸುವ ಮೂಲಕ […]

ಕನ್ನಡ ದುನಿಯಾ 9 Feb 2026 1:42 pm

ಕೇಂದ್ರ ಸರ್ಕಾರ ಬೆಂಗಳೂರಿಗೆ, ಕನ್ನಡಿಗರಿಗೆ ನೀಡಿರುವುದು ಖಾಲಿ ಡಬ್ಬಾ: ತೇಜಸ್ವಿ ಸೂರ್ಯ ತಮ್ಮ ಬದ್ಧತೆಯನ್ನು ದೆಹಲಿಯಲ್ಲಿ ಪ್ರದರ್ಶಿಸಲಿ: ಡಿ.ಕೆ.ಸುರೇಶ್ ತಿರುಗೇಟು

ಬೆಂಗಳೂರು: ಸಂಸದ ತೇಜಸ್ವಿ ಸೂರ್ಯ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಖಾಲಿ ಟ್ರಂಕ್ ಹಿಡಿದು ಮೆಟ್ರೋದಲ್ಲಿ ಪ್ರತಿಭಟನೆ ಮಾಡಿದ್ದು, ಈ ಬಗ್ಗೆ ಮಾಜಿ ಸಂಸದ ಡಿ.ಕೆ.ಸುರೇಶ್ ಕಿಡಿಕಾರಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಡಿ.ಕೆ.ಸುರೇಶ್, ತೇಜಸ್ವಿ ಸೂರ್ಯ ಖಾಲಿ ಟ್ರಂಕ್ ನ್ನು ಹಿಡಿದು ರಾಜ್ಯ ಸರ್ಕಾರದ ವಿರುದ್ಧವಲ್ಲ, ಕೇಂದ್ರ ಸರ್ಕಾರದ ವಿರುದ್ಧವೇ ಪ್ರತಿಭಟಿಸಿದರೆ ಒಳಿತು. ಅವರು ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಕೊಟ್ಟಿರುವ ಕೊಡುಗೆ ಖಾಲಿ ಟ್ರಂಕ್ ಎಂಬುದನ್ನು ಪರೋಕ್ಷವಾಗಿ ತೋರಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ. ತೇಜಸ್ವಿ ಸೂರ್ಯ ತಮ್ಮ ಬದ್ಧತೆಯನ್ನು ದೆಹಲಿಯಲ್ಲಿ […]

ಕನ್ನಡ ದುನಿಯಾ 9 Feb 2026 1:32 pm

ಉಳಿದ ಚಪಾತಿಯಿಂದ ಮಾಡಿ ಕುರುಕುರು ಸ್ಪ್ರಿಂಗ್ ರೋಲ್: ಇಲ್ಲಿದೆ ಸಿಂಪಲ್ ರೆಸಿಪಿ!

ಪ್ರತಿದಿನ ಅಡುಗೆ ಮನೆಯಲ್ಲಿ ಎದುರಾಗುವ ಸಾಮಾನ್ಯ ಸಮಸ್ಯೆ ಎಂದರೆ ರಾತ್ರಿ ಉಳಿದ ಚಪಾತಿಗಳು. ಇವುಗಳನ್ನು ಮತ್ತೆ ಬಿಸಿ ಮಾಡಿ ತಿನ್ನಲು ಹಲವರು ಇಷ್ಟಪಡುವುದಿಲ್ಲ, ಹಾಗೆಯೇ ಎಸೆಯಲು ಮನಸ್ಸು ಬರುವುದಿಲ್ಲ. ಆದರೆ ಒಂದು ಪುಟ್ಟ ಉಪಾಯದ ಮೂಲಕ ಈ ಹಳೇ ಚಪಾತಿಗಳನ್ನು ಸಂಜೆಯ ಸ್ನ್ಯಾಕ್ಸ್‌ಗೆ ಹೇಳಿಮಾಡಿಸಿದ ಗರಿಗರಿಯಾದ ಮತ್ತು ರುಚಿಕರವಾದ ಸ್ಪ್ರಿಂಗ್ ರೋಲ್ ಆಗಿ ಪರಿವರ್ತಿಸಬಹುದು. ಮನೆಯಲ್ಲಿರುವ ಸಾಮಾನ್ಯ ತರಕಾರಿಗಳನ್ನು ಬಳಸಿ ಹೋಟೆಲ್ ಶೈಲಿಯ ಈ ತಿಂಡಿಯನ್ನು ಹೇಗೆ ಮಾಡುವುದು ಎಂಬ ಮಾಹಿತಿ ಇಲ್ಲಿದೆ. ಬೇಕಾಗುವ ಸಾಮಗ್ರಿಗಳು: ಉಳಿದ […]

ಕನ್ನಡ ದುನಿಯಾ 9 Feb 2026 1:28 pm

ಶಾಓಲಿನ್ ಸನ್ಯಾಸಿಗಳ ಜೊತೆ ರೋಬೋಟ್‌ಗಳ ಫೈಟಿಂಗ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಯ್ತು ವಿಡಿಯೋ

ಚೀನಾದ ಹೆನಾನ್ ಪ್ರಾಂತ್ಯದ ವಿಶ್ವಪ್ರಸಿದ್ಧ ಶಾಓಲಿನ್ ದೇವಸ್ಥಾನವೊಂದು ಇದೀಗ ವಿಶಿಷ್ಟ ವಿದ್ಯಮಾನಕ್ಕೆ ಸಾಕ್ಷಿಯಾಗಿದೆ. ಶತಶತಮಾನಗಳಿಂದ ಕೇವಲ ಮನುಷ್ಯರಿಗಷ್ಟೇ ಸೀಮಿತವಾಗಿದ್ದ ಕಠಿಣ ‘ಶಾಓಲಿನ್ ಕುಂಗ್ ಫೂ’ ಸಮರ ಕಲೆಯನ್ನು ಇದೀಗ ಹ್ಯೂಮನಾಯ್ಡ್ ರೋಬೋಟ್‌ಗಳು ಕಲಿಯುತ್ತಿವೆ. ಅಲ್ಲಿನ ಬೌದ್ಧ ಸನ್ಯಾಸಿಗಳ ಜೊತೆಗೂಡಿ ಯಂತ್ರಮಾನವರು ಸಮರ ಕಲೆಯ ಪಟ್ಟುಗಳನ್ನು ಪ್ರದರ್ಶಿಸುತ್ತಿರುವ ದೃಶ್ಯಗಳು ಜಗತ್ತಿನಾದ್ಯಂತ ಸಂಚಲನ ಮೂಡಿಸಿವೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋಗಳಲ್ಲಿ ಸನ್ಯಾಸಿಗಳ ಚಲನವಲನಗಳನ್ನು ರೋಬೋಟ್‌ಗಳು ಅತ್ಯಂತ ನಿಖರವಾಗಿ ಅನುಕರಿಸುತ್ತಿವೆ. ಒಬ್ಬ ಗುರು ತನ್ನ ಶಿಷ್ಯನಿಗೆ ಕಲಿಸುವಂತೆಯೇ ಇಲ್ಲಿ ಸನ್ಯಾಸಿಗಳು […]

ಕನ್ನಡ ದುನಿಯಾ 9 Feb 2026 1:23 pm

ಗಗನದಲ್ಲೇ ಹಾರಲಿದೆ ಟ್ಯಾಕ್ಸಿ: ಮೆಟ್ರೋ ನಗರಗಳ ಟ್ರಾಫಿಕ್ ಸಮಸ್ಯೆಗೆ ಬರಲಿದೆ ಹೈಟೆಕ್ ಮುಕ್ತಿ!

ದೇಶದ ಪ್ರಮುಖ ಮೆಟ್ರೋ ನಗರಗಳಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ವಾಹನ ದಟ್ಟಣೆ ಮತ್ತು ಟ್ರಾಫಿಕ್ ಸಮಸ್ಯೆಗೆ ಮುಕ್ತಿ ಹಾಡಲು ಸಿಐಐ (Confederation of India Industries) ಮಹತ್ವದ ಯೋಜನೆಯೊಂದನ್ನು ಮುಂದಿಟ್ಟಿದೆ. ಇನ್ನು ಮುಂದೆ ಗಂಟೆಗಟ್ಟಲೆ ರಸ್ತೆಯಲ್ಲಿ ಕಾಯುವ ಬದಲು, ಕೇವಲ ಕೆಲವೇ ನಿಮಿಷಗಳಲ್ಲಿ ಒಂದು ನಗರದಿಂದ ಮತ್ತೊಂದು ನಗರಕ್ಕೆ ತಲುಪಲು ‘ಏರ್ ಟ್ಯಾಕ್ಸಿ’ (Air Taxi) ವ್ಯವಸ್ಥೆ ಜಾರಿಗೆ ಬರಲಿದೆ. ಇದಕ್ಕಾಗಿ ಪ್ರತ್ಯೇಕ ರಸ್ತೆ ಅಥವಾ ಜಾಗದ ಅವಶ್ಯಕತೆ ಇಲ್ಲದೆ, ಕಟ್ಟಡಗಳ ಮೇಲ್ಛಾವಣಿಯನ್ನೇ ಲ್ಯಾಂಡಿಂಗ್ ಪ್ಯಾಡ್‌ಗಳಾಗಿ ಬಳಸಿಕೊಳ್ಳುವ […]

ಕನ್ನಡ ದುನಿಯಾ 9 Feb 2026 1:03 pm

ಆರ್ಮಿ ಆಫೀಸರ್ ಆಗಬೇಕಿದ್ದವನು ಇಂದು ಬಾಲಿವುಡ್ ಸೂಪರ್ ಸ್ಟಾರ್: ಈ ನಟನ ಸಂಭಾವನೆ ಕೇಳಿದರೆ ದಂಗಾಗುತ್ತೀರಿ

ಬಾಲಿವುಡ್‌ನಲ್ಲಿ ಹಿನ್ನೆಲೆ ಇಲ್ಲದೆ ನೆಲೆಯೂರುವುದು ಸುಲಭದ ಮಾತಲ್ಲ. ಆದರೆ ಹರಿಯಾಣದ ರೋಹ್ಟಕ್ ಮೂಲದ ಜೈದೀಪ್ ಅಹ್ಲಾವತ್ ತಮ್ಮ ಪ್ರತಿಭೆಯ ಮೂಲಕ ಇಂದು ಚಿತ್ರರಂಗದ ಅನಿವಾರ್ಯ ನಟನಾಗಿ ಬೆಳೆದಿದ್ದಾರೆ. ಇಂದು ಪ್ರತಿ ಪ್ರಾಜೆಕ್ಟ್‌ಗೆ ಕೋಟ್ಯಂತರ ರೂಪಾಯಿ ಸಂಭಾವನೆ ಪಡೆಯುತ್ತಿರುವ ಈ ನಟನ ಆರಂಭಿಕ ಕನಸು ಕಲೆ ಆಗಿರಲಿಲ್ಲ ಎಂಬುದು ವಿಶೇಷ. ಜೈದೀಪ್ ಮೂಲತಃ ಭಾರತೀಯ ಸೇನೆಯಲ್ಲಿ ಅಧಿಕಾರಿಯಾಗಬೇಕೆಂದು ಕನಸು ಕಂಡವರು. ಇದಕ್ಕಾಗಿ ಅವರು ಎಸ್‌ಎಸ್‌ಬಿ (SSB) ಪರೀಕ್ಷೆಗಳನ್ನು ಕೂಡ ಬರೆದಿದ್ದರು. ಆದರೆ ಸತತ ಪ್ರಯತ್ನದ ಹೊರತಾಗಿಯೂ ಸಂದರ್ಶನದಲ್ಲಿ ವಿಫಲರಾದಾಗ […]

ಕನ್ನಡ ದುನಿಯಾ 9 Feb 2026 12:50 pm

ಮದ್ಯಪಾನವಿಲ್ಲ, ಆದ್ರೂ ಲಿವರ್ ಡ್ಯಾಮೇಜ್? ಭಾರತೀಯರಲ್ಲಿ ಹೊಸ ರೋಗದ ಆತಂಕ

ಭಾರತದಲ್ಲಿ ಈಗ ಮದ್ಯಪಾನಕ್ಕಿಂತಲೂ ಅಪಾಯಕಾರಿ ರೀತಿಯಲ್ಲಿ ಲಿವರ್ (ಯಕೃತ್ತು) ಸಂಬಂಧಿತ ಕಾಯಿಲೆಗಳು ಹರಡುತ್ತಿವೆ. ಇತ್ತೀಚಿನ ‘ಲ್ಯಾನ್ಸೆಟ್’ ಅಧ್ಯಯನದ ಪ್ರಕಾರ, ಭಾರತದ ಸುಮಾರು ಶೇ. 38.9 ರಷ್ಟು ವಯಸ್ಕರು ‘ಫ್ಯಾಟಿ ಲಿವರ್’ ಸಮಸ್ಯೆಯಿಂದ ಬಳಲುತ್ತಿದ್ದಾರೆ. ವಿಶೇಷವೆಂದರೆ, ಈ ಕಾಯಿಲೆಗೆ ಮದ್ಯಪಾನ ಕಾರಣವಲ್ಲ, ಬದಲಾಗಿ ಬದಲಾದ ಜೀವನಶೈಲಿ, ಬೊಜ್ಜು ಮತ್ತು ಮಧುಮೇಹವೇ ಮುಖ್ಯ ಕಾರಣ ಎಂದು ಸಂಶೋಧನೆ ತಿಳಿಸಿದೆ. ಈ ಸ್ಥಿತಿಯನ್ನು ವೈದ್ಯಕೀಯ ಭಾಷೆಯಲ್ಲಿ ‘ಮೆಟಬಾಲಿಕ್ ಡಿಸ್ಫಂಕ್ಷನ್ ಅಸೋಸಿಯೇಟೆಡ್ ಸ್ಟೀಟೋಟಿಕ್ ಲಿವರ್ ಡಿಸೀಸ್’ (MASLD) ಎಂದು ಕರೆಯಲಾಗುತ್ತದೆ. ಭಾರತದ 27 […]

ಕನ್ನಡ ದುನಿಯಾ 9 Feb 2026 12:47 pm

ಮೂಲಾಂಕ 1 ರವರಿಗೆ 2026 ಹೇಗಿರಲಿದೆ? ಸಂಖ್ಯಾಶಾಸ್ತ್ರಜ್ಞರು ನೀಡಿದ ಈ ಎಚ್ಚರಿಕೆ ಮಾತುಗಳನ್ನು ಮರೆಯಬೇಡಿ

ಸಂಖ್ಯಾಶಾಸ್ತ್ರದ ಪ್ರಕಾರ 2026ರ ವರ್ಷವು ಮೂಲಾಂಕ 1 ರ ಜನರಿಗೆ ಅತ್ಯಂತ ಮಹತ್ವದ ಬದಲಾವಣೆಯ ಕಾಲವಾಗಿದೆ. ಯಾವುದೇ ತಿಂಗಳ 1, 10, 19 ಅಥವಾ 28 ರಂದು ಜನಿಸಿದವರ ಮೂಲಾಂಕ ‘1’ ಆಗಿರುತ್ತದೆ. ಸೂರ್ಯನ ಅಧಿಪತ್ಯವಿರುವ ಈ ಮೂಲಾಂಕದವರಿಗೆ 2026 ನೇ ವರ್ಷವು ನಾಯಕತ್ವದ ಪರೀಕ್ಷೆಯ ಕಾಲವೂ ಹೌದು. ಈ ವರ್ಷದ ಒಟ್ಟು ಮೊತ್ತ 10 (2+0+2+6) ಆಗಿದ್ದು, ಇದು ಮತ್ತೆ 1 ಕ್ಕೆ ಬಂದು ನಿಲ್ಲುತ್ತದೆ. ಹೀಗಾಗಿ ಈ ವರ್ಷದಲ್ಲಿ ಮೂಲಾಂಕ 1 ರವರು ತಮ್ಮ […]

ಕನ್ನಡ ದುನಿಯಾ 9 Feb 2026 12:39 pm

ಹುಬ್ಬಳ್ಳಿಯ ಸಿದ್ದಾರೂಢ ಮಠಕ್ಕೆ ಭೇಟಿ ನೀಡಿದ ಗಾಯಕ ಸೋನು ನಿಗಮ್

ಹುಬ್ಬಳ್ಳಿ: ಖ್ಯಾತ ಗಾಯಕ ಸೋನು ನಿಗಮ್ ಹುಬ್ಬಳ್ಲಿಯ ಸಿದ್ದಾರೂಢ ಮಠಕ್ಕೆ ಭೇಟಿ ನೀಡಿ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಹುಬ್ಬಳ್ಳಿಗೆ ಆಗಮಿಸಿದ್ದ ಗಾಯಗ ಸೋನು ನಿಗಮ್ ಇಂದು ಬೆಳಿಗ್ಗೆ ಸಿದ್ದಾರೂಢ ಮಠಕ್ಕೆ ಭೇಟಿ ನೀಡಿ ಸಿದ್ಧಾರೂಢರ ದರ್ಶನ ಪಡೆದರು. ಗದ್ದುಗೆಗೆ ವಿಶೇಶ ಪೂಜೆ ನೆರವೇರಿಸಿದರು. ಇದೇ ವೇಳೆ ಸಿದ್ದಾರೂಢರ ಗದ್ದುಗೆ ಬಳಿ ಸೋನು ನಿಗಮ್ 10 ನಿಮಿಷ ಧ್ಯಾನ ಮಾಡಿದ್ದು ವಿಶೇಷವಾಗಿತ್ತು. ಬಳಿಕ ಮಠದ ಟ್ರಸ್ಟ್ ವತಿಯಿಂದ ಗಾಯಕ ಸೋನು ನಿಗಮ್ ಅವರಿಗೆ ಶಾಲು ಹೊದಿಸಿ ಸನ್ಮಾನಿಸಿ […]

ಕನ್ನಡ ದುನಿಯಾ 9 Feb 2026 12:37 pm

ಜಿಬಿಎ ಚುನಾವಣೆ: ಶಿಷ್ಯರಿಗೆ ಟಿಕೆಟ್ ಕೊಡಿಸುವ ಉತ್ಸಾಹದಲ್ಲಿದ್ದ ಬಿಜೆಪಿ ಶಾಸಕರಿಗೆ ಹೈಕಮಾಂಡ್ ಶಾಕ್!

ಕರ್ನಾಟಕದ ಪ್ರತಿಪಕ್ಷ ಬಿಜೆಪಿ ಗ್ರೇಟರ್ ಬೆಂಗಳೂರು ಅಥಾರಿಟಿ (ಜಿಬಿಎ) ಚುನಾವಣೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ಅದರಲ್ಲೂ ಮುಂಬೈ ಮಹಾನಗರ ಪಾಲಿಕೆ, ತಿರುವನಂತಪುರಂ ಪಾಲಿಕೆ ಚುನಾವಣೆಯಲ್ಲಿ ಜಯಗಳಿಸಿದ ಬಳಿಕ ಕರ್ನಾಟಕದ ರಾಜಧಾನಿ ಮೇಲೆ ಬಿಜೆಪಿ ಹೈಕಮಾಂಡ್ ಕಣ್ಣು ನೆಟ್ಟಿದೆ. ಹೈಕಮಾಂಡ್ ಜಿಬಿಎ ಚುನಾವಣೆಗೆ ಉಸ್ತುವಾರಿಯಾಗಿ ರಾಮ್ ಮಾಧವ್ ನೇಮಕ ಮಾಡಿದೆ. ಸಹ-ಉಸ್ತುವಾರಿಗಳು ಸತೀಶ್ ಪೂನಿಯಾ ಮತ್ತು ಸಂಜಯ್ ಉಪಾಧ್ಯಾಯ. ಕಳೆದ ವಾರ ಮೂವರು ಸಹ ಬೆಂಗಳೂರು ನಗರಕ್ಕೆ ಆಗಮಿಸಿದ್ದರು ರಾಜ್ಯದ ಪಕ್ಷದ ನಾಯಕರ ಜೊತೆ ಸಭೆ ನಡೆಸಿದರು. ಜಿಬಿಎ […]

ಕನ್ನಡ ದುನಿಯಾ 9 Feb 2026 12:23 pm

ಬೆಂಗಳೂರು ಏರ್ ಪೋರ್ಟ್ ನಲ್ಲಿ ರನ್ ವೇಗೆ ಹಾರಿ ಬಂದ ಬೃಹತ್ ಜಾಹೀರಾತು ಬಲೂನು: ಸ್ವಲ್ಪದರಲ್ಲಿ ತಪ್ಪಿದ ಭಾರಿ ಅನಾಹುತ!

ಬೆಂಗಳೂರು: ಕೆಲ ದಿನಗಳ ಹಿಂದೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರನ್ ವೇಗೆ ನಾಯಿ ನುಗ್ಗಿ ಅವಾಂತರ ಸೃಷ್ಟಿ ಮಾಡಿತ್ತು. ಭದ್ರತಾ ಲೋಪದ ಬಗ್ಗೆ ವರದಿಯಾಗಿತ್ತು. ಇದೀಗ ಜಾಹಿರಾತಿನ ಬೃಹತ್ ಬಲೂನ್ ಒಂದು ರನ್ ವೇಗೆ ಹಾರಿ ಬಂದು ಬಿದ್ದಿರುವ ಘಟನೆ ನಡೆದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತರಾಷ್ಟ್ರಿಯ ವಿಮಾನ ನಿಲ್ದಾಣದಲ್ಲಿ ರನ್ ವೇಕೆ ಏಕಾಏಕಿ ಬೃಹತ್ ಬಲೂನ್ ಒಂದು ಹಾರಿ ಬಂದಿದೆ. ಈ ಸಂದರ್ಭದಲ್ಲಿ ವಿಮಾನ ಹಾರಾಟವಿರಲಿಲ್ಲವಾದ್ದರಿಂದ ಭಾರಿ ಅನಾಹುತವೊಂದು ತಪ್ಪಿದಂತಾಗಿದೆ. […]

ಕನ್ನಡ ದುನಿಯಾ 9 Feb 2026 12:10 pm

Gold Rate Rise:ವಾರದ ಆರಂಭವೇ ಚಿನ್ನ-ಬೆಳ್ಳಿ ಶಾಕ್: ಚಿನ್ನ ₹2,240 ಏರಿಕೆ,ಬೆಳ್ಳಿ ದರ ₹3 ಲಕ್ಷಕ್ಕೆ ಜಿಗಿತ

ಇನ್ನೇನು ಚಿನ್ನದ ಬೆಲೆ ಇಳಿಕೆಯಾಗಲಿದೆ ಸ್ವಲ್ಪ ಕಾದು ಆಮೇಲೆ ಖರೀದಿಸೋಣ ಎಂದು ಕಾದಿದ್ದ ಗ್ರಾಹಕರಿಗೆ ಇಂದು ದೊಡ್ಡ ಬರೆ ಬಿದ್ದಿದೆ. ಬಜೆಟ್ ನಂತರ ಇಳಿಕೆಯ ಹಾದಿಯಲ್ಲಿದ್ದ ಹಳದಿ ಲೋಹದ ಬೆಲೆ ಇಂದು ಬೆಂಗಳೂರಿನಲ್ಲಿ ಊಹೆಗೂ ಮೀರಿದಷ್ಟು ಏರಿಕೆ ಕಂಡು ಹೂಡಿಕೆದಾರರ ಜೇಬಿಗೆ ಕತ್ತರಿ ಹಾಕಿದೆ.ಫೆಬ್ರವರಿ ಎರಡನೇ ವಾರದ ಆರಂಭವೇ ಚಿನ್ನ ಮತ್ತು ಬೆಳ್ಳಿ ಪ್ರಿಯರಿಗೆ ಕಹಿ ಸುದ್ದಿ ಹೊತ್ತು ತಂದಿದೆ. ಇಂದು (ಫೆಬ್ರವರಿ 9, 2026) ಮಾರುಕಟ್ಟೆಯಲ್ಲಿ ಬೆಲೆಗಳು ರಾಕೆಟ್ ವೇಗದಲ್ಲಿ ಏರಿವೆ. ಇಂದಿನ ದರ ಪಟ್ಟಿ […]

ಕನ್ನಡ ದುನಿಯಾ 9 Feb 2026 12:04 pm

ಟೀಮ್ ಇಂಡಿಯಾಗೆ ಗೌತಮ್ ಗಂಭೀರ್ ಸ್ಪೆಷಲ್ ಡಿನ್ನರ್: ದೆಹಲಿಯ ನಿವಾಸದಲ್ಲಿ ಆತಿಥ್ಯ ಸ್ವೀಕರಿಸಿದ ಸೂರ್ಯಕುಮಾರ್ ಪಡೆ

ಟಿ20 ವಿಶ್ವಕಪ್ 2026ರ ತನ್ನ ಎರಡನೇ ಗುಂಪು ಹಂತದ ಪಂದ್ಯಕ್ಕಾಗಿ ದೆಹಲಿಗೆ ಆಗಮಿಸಿರುವ ಭಾರತ ತಂಡಕ್ಕೆ ಮುಖ್ಯ ಕೋಚ್ ಗೌತಮ್ ಗಂಭೀರ್ ಆತಿಥ್ಯ ನೀಡಿದ್ದಾರೆ. ಫೆಬ್ರವರಿ 12 ರಂದು ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಮೀಬಿಯಾ ವಿರುದ್ಧ ಪಂದ್ಯ ನಡೆಯಲಿದ್ದು, ಇದಕ್ಕೂ ಮುನ್ನ ತಂಡದ ಆಟಗಾರರಲ್ಲಿ ಆತ್ಮವಿಶ್ವಾಸ ಮತ್ತು ಒಗ್ಗಟ್ಟು ಹೆಚ್ಚಿಸಲು ಗಂಭೀರ್ ಈ ಔತಣಕೂಟ ಏರ್ಪಡಿಸಿದ್ದರು. ಗೌತಮ್ ಗಂಭೀರ್ ಅವರ ದೆಹಲಿಯ ಖಾಸಗಿ ನಿವಾಸದಲ್ಲಿ.ನಾಯಕ ಸೂರ್ಯಕುಮಾರ್ ಯಾದವ್ ಸೇರಿದಂತೆ ಇಡೀ ಭಾರತೀಯ ತಂಡ ಮತ್ತು ಪೋಷಕ ಸಿಬ್ಬಂದಿ. […]

ಕನ್ನಡ ದುನಿಯಾ 9 Feb 2026 11:26 am

Big Update: 8th Pay Commission, ಸರ್ಕಾರಿ ನೌಕರರ ಗಮನಕ್ಕೆ

ಕೇಂದ್ರ ಸರ್ಕಾರಿ ನೌಕರರಿಗೆ 8ನೇ ವೇತನ ಆಯೋಗದ ಕುರಿತು ಬಿಗ್ ಅಪ್‌ಡೇಟ್ ಇದೆ. ನಿವೃತ್ತ ನ್ಯಾಯಮೂರ್ತಿ ರಂಜನಾ ಪ್ರಕಾಶ್ ದೇಸಾಯಿ ನೇತೃತ್ವದಲ್ಲಿ ಕೇಂದ್ರ ಸರ್ಕಾರ 8ನೇ ಕೇಂದ್ರ ವೇತನ ಆಯೋಗವನ್ನು ಘೋಷಣೆ ಮಾಡಿದೆ. ಜನವರಿ 2025ರಲ್ಲಿ ಸರ್ಕಾರವು ಅಧಿಕೃತವಾಗಿ ಆಯೋಗ ಸ್ಥಾಪನೆ ಮಾಡಿದೆ. ಆಯೋಗ ಸುಮಾರು 50 ಲಕ್ಷ ಕೇಂದ್ರ ನೌಕರರು ಮತ್ತು 65-69 ಲಕ್ಷ ಪಿಂಚಣಿದಾರರಿಗೆ ಅನುಕೂಲವಾಗುವಂತೆ ವೇತನ, ಭತ್ಯೆಗಳು ಮತ್ತು ಪಿಂಚಣಿ ಪರಿಷ್ಕರಣೆಗೆ ಶಿಫಾರಸು ಮಾಡಲಿದೆ. ಈಗ 8ನೇ ವೇತನ ಆಯೋಗ ತನ್ನ ವೆಬ್‌ […]

ಕನ್ನಡ ದುನಿಯಾ 9 Feb 2026 11:21 am

ನಿಮ್ಮ ಆಸ್ತಿ ಮಕ್ಕಳಿಗೆ ಸಿಗಬೇಕೆ? ನಾಮಿನಿ ಜೊತೆ ವಿಲ್ ಇಲ್ಲದಿದ್ದರೆ ಸಂಕಷ್ಟ ಗ್ಯಾರಂಟಿ

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಹಿರಿಯ ನಾಗರಿಕರು ತಮ್ಮ ನಿವೃತ್ತಿ ಜೀವನದ ಉಳಿತಾಯವನ್ನು ಮಕ್ಕಳಿಗಾಗಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ಆದರೆ, ಒಂದು ಸಣ್ಣ ತಪ್ಪು ನಿಮ್ಮ ಮಕ್ಕಳನ್ನು ಮುಂದೆ ದೊಡ್ಡ ಕಾನೂನು ಸಂಕಷ್ಟಕ್ಕೆ ತಳ್ಳಬಹುದು. ಹೌದು ನಿಮ್ಮ ಹೂಡಿಕೆಗೆ ನೀವು ನಾಮಿನಿ ನೇಮಿಸಿದ ತಕ್ಷಣ ಅವರೇ ಮಾಲೀಕರು ಎಂದು ಭಾವಿಸಬೇಡಿ ಹಣಕಾಸು ತಜ್ಞರ ಪ್ರಕಾರ ನಿಮ್ಮ ಆಸ್ತಿ ಜಗಳವಿಲ್ಲದೆ ಮಕ್ಕಳಿಗೆ ಸೇರಬೇಕೆಂದರೆ ಕೇವಲ ನಾಮಿನಿ ಸಾಕಾಗುವುದಿಲ್ಲ, ಅದರ ಜೊತೆಗೆ ಒಂದು ನೋಂದಾಯಿತ ವಿಲ್ (Registered Will) ಇರುವುದು […]

ಕನ್ನಡ ದುನಿಯಾ 9 Feb 2026 11:16 am

ಹೆಡ್‌ಪೋನ್ ಹಾಕಿಕೊಂಡು ಪಬ್ಜಿ ಆಡುವಾಗ ಹೈ-ಬಿಪಿ, ಬ್ರೈನ್ ಹ್ಯಾರ್ಮೇಜ್‌, ಯುವಕ ಸಾವು

ಪಬ್ಜಿ ಗೇಮ್ ಮತ್ತೊಂದು ಅನಾಹುತ ಸೃಷ್ಟಿಸಿದೆ. ಕಿವಿಗೆ ಹೆಡ್‌ಫೋನ್ ಹಾಕಿಕೊಂಡು ಪಬ್ಜಿ ಗೇಮ್ ಆಡುತ್ತಿದ್ದ ಯುವಕನ ರಕ್ತದೊತ್ತಡ ಇದ್ದಕ್ಕಿದ್ದಂತೆ ಹೆಚ್ಚಾಗಿದ್ದು, ಮೆದುಳಿನ ನರ ಒಡೆದು ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಮೇರಠ್‌ ಎಂಬ ಪ್ರದೇಶದಲ್ಲಿ ಪಬ್ಜಿ ಗೇಮ್ ಚಟಕ್ಕೆ ಬಲಿಯಾದ ಯುವಕ ಮೊಹಮ್ಮದ್ ಕೈಫ್ (22). ಈತ ಶುಕ್ರವಾರ ರಾತ್ರಿ ಗೇಮ್ ಆಡುತ್ತಿದ್ದಾಗ ಹಠಾತ್ತಾಗಿ ರಕ್ತದೊತ್ತಡ 300ರ ಗಡಿ ದಾಟಿದೆ, ಇದರಿಂದಾಗಿ ಮೆದುಳಿನ ನರ ಒಡೆದಿದೆ. ತಕ್ಷಣ ಆತನನ್ನು ದೆಹಲಿಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಚಿಕಿತ್ಸೆ […]

ಕನ್ನಡ ದುನಿಯಾ 9 Feb 2026 11:12 am

BREAKING: ದೆಹಲಿಯ 9 ಶಾಲೆಗಳಿಗೆ ಬಾಂಬ್ ಬೆದರಿಕೆ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ 9 ಶಾಲೆಗಳಿಗೆ ಮತ್ತೆ ದುಷ್ಕರ್ಮಿಗಳು ಬಾಂಬ್ ಬೆದರಿಕೆ ಹಾಕಿದ್ದಾರೆ. ಕೆಲ ದಿನಗಳ ಹಿಂದಷ್ಟೆ ಹಲವು ಶಾಲೆಗಳಿಗೆ ಬಾಂಬ್ ಬೆದರಿಕೆ ಸಂದೇಶ ಬಂದಿತ್ತು. ಪರಿಶೀಲನೆ ಬಳಿಕ ಇದೊಂದು ಹುಸಿ ಬಾಂಬ್ ಬೆದರಿಕೆ ಎಂಬುದು ದೃಢಪಟ್ಟಿತ್ತು. ಇದರ ಬೆನ್ನಲ್ಲೇ ಇದೀಗ ಮತ್ತೆ ದೆಹಲಿಯ 9 ಶಾಲೆಗಳಿಗೆ ಬಾಂಬ್ ಬೆದರಿಕೆ ಕರೆ ಬಂದಿದೆ. ಇಂದು ಬೆಳಿಗ್ಗೆ 8:30ರಿಂದ 9 ಗಂಟೆ ಸುಮಾರಿಗೆ ದೆಹಲಿಯ ವಿವಿಧ ಶಾಲೆಗಳಿಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಹಾಕಲಾಗಿದೆ. ಇ-ಮೇಲ್ ಮೂಲಕ […]

ಕನ್ನಡ ದುನಿಯಾ 9 Feb 2026 11:07 am

this for testing purposes

draft draadrrtjjsadkljsldns

ಕನ್ನಡ ದುನಿಯಾ 9 Feb 2026 10:57 am

SHOCKING NEWS: ತಾಯಿಯ ಖಾಸಗಿ ಫೋಟೋಗಳನ್ನು ಪ್ರಿಯಕರನಿಗೆ ಕಳುಹಿಸಿದ ಮಗಳು

ಬೆಂಗಳೂರು: ಬರಬರುತ್ತಾ ಇಂದಿನ ಯುವ ಜನತೆಯ ಮನಸ್ಥಿತಿ ಯಾವ ಮಟ್ಟಕ್ಕೆ ಇಳಿಯುತ್ತಿದೆ. ಇಲ್ಲೋರ್ವ ಮಗಳು ತನ್ನ ತಾಯಿಯ ಖಾಸಗಿ ಫೋಟೋಗಳನ್ನು ತನ್ನ ಪ್ರಿಯಕರನಿಗೆ ಕಳುಹಿಸಿರುವ ವಿಲಕ್ಷಣ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಮಗಳು ತನ್ನ ಪ್ರಿಯಕರನಿಗೆ ತನ್ನ ತಾಯಿ, ಸಂಬಂಧಿಕರ ಖಾಸಗಿ ಫೋಟೋ, ವಿಡಿಯೋಗಳನ್ನು ಕಳುಹಿಸಿದ್ದು, ಮಗಳು ಹಾಗೂ ಆಕೆಯ ಪ್ರೊಯಕರನ ವಿರುದ್ಧ ತಾಯಿ ಬೆಂಗಳೂರಿನ ಬ್ಯಾಟರಾಯನಪುರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ವಿದ್ಯಾಭ್ಯಾಸಕ್ಕೆಂದು 23 ವರ್ಷದ ಮಗಳು ಪೋಷಕರ ಬಳಿ ಮೊಬೈಲ್ ಪಡೆದುಕೊಂಡಿದ್ದಳು. ತಿಂಗಳ ಹಿಂದೆ ಅಪರುಚಿತ […]

ಕನ್ನಡ ದುನಿಯಾ 9 Feb 2026 10:47 am

‘ಮೆಟ್ರೋ’ನಿಲ್ದಾಣದಲ್ಲಿ ಲವರ್ ಜೊತೆ ಸಿಕ್ಕಿಬಿದ್ದ ಮಗ : ಅಲ್ಲೇ ಮದುವೆ ಫಿಕ್ಸ್ ಮಾಡಿದ ತಾಯಿ |WATCH VIDEO

ನವದೆಹಲಿ : ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿರುವ ಘಟನೆಯೊಂದರಲ್ಲಿ, ತಾಯಿಯೊಬ್ಬರು ತನ್ನ ಮಗನನ್ನು ಆತನ ಗೆಳತಿಯೊಂದಿಗೆ ಮೆಟ್ರೋ ನಿಲ್ದಾಣದಲ್ಲಿ ರೆಡ್-ಹ್ಯಾಂಡ್ ಆಗಿ ಹಿಡಿದಿದ್ದಾರೆ. ಆದರೆ, ಅಲ್ಲಿ ಗಲಾಟೆ ಮಾಡುವ ಬದಲು, ಅವರು ಸ್ಥಳದಲ್ಲೇ ಇಬ್ಬರಿಗೂ ನಿಶ್ಚಿತಾರ್ಥದ ಆರಂಭಿಕ ಶಾಸ್ತ್ರವಾದ ‘ರೋಕಾ’ (Roka) ಮಾಡುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ. ಘಟನೆ ನಡೆದಿದ್ದು ಹೇಗೆ ? ‘X’ (ಟ್ವಿಟರ್) ನಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ, ಮೆಟ್ರೋ ನಿಲ್ದಾಣದ ಬೆಂಚ್ ಮೇಲೆ ಮಗ ಮತ್ತು ಆತನ ಗೆಳತಿ ಕುಳಿತಿರುವುದು ಕಾಣಿಸುತ್ತದೆ. ಈ […]

ಕನ್ನಡ ದುನಿಯಾ 9 Feb 2026 10:31 am

ತಮಿಳುನಾಡು ಚುನಾವಣೆ: ಟಿವಿಕೆ ಮುಖ್ಯಸ್ಥ ವಿಜಯ್ ಕ್ಷೇತ್ರ ಹುಡುಕಾಟ, ‘ವಿ’ಅಕ್ಷರ!

ತಮಿಳುನಾಡು ವಿಧಾನಸಭೆ ಚುನಾವಣೆ 2026ರ ತಯಾರಿ ಜೋರಾಗಿದೆ. 234 ಸದಸ್ಯ ಬಲದ ವಿಧಾನಸಭೆಗೆ ಏಪ್ರಿಲ್ ಅಥವ ಮೇ ತಿಂಗಳಿನಲ್ಲಿ ಚುನಾವಣೆ ನಡೆಯಲಿದೆ. ಈ ಬಾರಿಯ ಚುನಾವಣೆಯಲ್ಲಿ ರಾಜ್ಯದಲ್ಲಿ ಕುತೂಹಲ ಮೂಡಿಸಿರುವುದು ನಟ ವಿಜಯ್ ಸ್ಥಾಪನೆ ಮಾಡಿರುವ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷ. ತಮಿಳುನಾಡು ಮತ್ತು ಪುದುಚೇರಿ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದಾರೆ. ಕೇಂದ್ರ ಚುನಾವಣಾ ಆಯೋಗ ಈಗಾಗಲೇ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷಕ್ಕೆ ‘ವಿಷಲ್’ ಚಿಹ್ನೆಯನ್ನು ನೀಡಿದೆ. ಪಕ್ಷ ವಿಜಯ್ ಅವರನ್ನು ಮುಖ್ಯಮಂತ್ರಿ […]

ಕನ್ನಡ ದುನಿಯಾ 9 Feb 2026 10:18 am

BIG NEWS: ಭೀಕರ ಅಗ್ನಿ ಅವಘಡ: ನಾಲ್ಕು ಗೋದಾಮುಗಳು ಬೆಂಕಿಗಾಹುತಿ

ಮೈಸೂರು: ಗೋದಾಮಿನಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, ನಾಲ್ಕು ಗೋದಾಮುಗಳು ಬೆಂಕಿಗಾಹುತಿಯಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಮೈಸೂರು ನಗರದ ಹೊರವಲಯದ ಕೆಸರೆ ಬಡಾವಣೆಯಲ್ಲಿರೋ ಗೋದಾಮುಗಳು ಬೆಂಕಿಗಾಹುತಿಯಾಗಿವೆ. ಗೋಡೌನ್ ನಲ್ಲಿ ಹಳೆಯ ವಸ್ತುಗಳನ್ನು ಸಂಗ್ರಹಿಸಿಡಲಾಗುತ್ತಿದ್ದು . ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದ್ದು, ನೋಡ ನೋಡುತ್ತಿದ್ದಂತೆ ಇಡೀ ಗೋದಾಮಿಗೆ ಬೆಂಕಿ ವ್ಯಾಪಿಸಿದೆ. ಬೆಂಕಿಯ ಕೆನ್ನಾಲಿಗೆ ಸುತ್ತಮುತ್ತಲೂ ಹರಡಿದ್ದು, ಅಕ್ಕಪಕ್ಕದಲ್ಲಿದ್ದ ಇತರ ಗೋಡೌನ್ ಗೂ ಹಬ್ಬಿದೆ. ಮುಗಿಲೆತ್ತರದವರೆಗೆ ಗೋದಾಮು ಹೊತ್ತಿ ಉರಿದಿದ್ದು ದಟ್ಟ ಹೊಗೆ ಆವರಿಸಿದೆ. ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳ ಬೆಂಕಿ ನಂದಿಸಲು […]

ಕನ್ನಡ ದುನಿಯಾ 9 Feb 2026 10:00 am

SHOCKING: ಸರಗಳ್ಳರಿಂದ ಬಿಡಿಸಿಕೊಳ್ಳುವಾಗ ಕುಸಿದು ಬಿದ್ದು ಮಹಿಳೆ ಸಾವು

ಬೆಂಗಳೂರು: ಸರಗಳ್ಳರಿಂದ ಬಿಡಿಸಿಕೊಳ್ಳುವಾಗ ಕುಸಿದು ಬಿದ್ದು ಮಹಿಳೆ ಸಾವನ್ನಪ್ಪಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಹುಸ್ಕೂರು ಗ್ರಾಮದಲ್ಲಿ ನಡೆದಿದೆ. ಜ್ಯೋತಿ(45) ಮೃತಪಟ್ಟವರು ಎಂದು ಹೇಳಲಾಗಿದೆ. ಜ್ಯೋತಿ ಮನೆ ಮುಂದೆ ಕಸಗೂಡಿಸುತ್ತಿದ್ದಾಗ ಮಾಂಗಲ್ಯ ಸರ ಕಸಿದು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಸರಗಳವು ಮಾಡುವಾಗ ಕಳ್ಳರು ಸ್ಪ್ರೇ ಸಿಂಪಡಿಸಿದ್ದರಿಂದ ಕುಸಿದು ಬಿದ್ದು ಜ್ಯೋತಿ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಮಾದನಾಯಕನಹಳ್ಳಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೆಚ್ಚಿನ ವಿವರ ನಿರೀಕ್ಷಿಸಲಾಗಿದೆ.

ಕನ್ನಡ ದುನಿಯಾ 9 Feb 2026 9:51 am

BIG NEWS: ಫ್ಲೈಓವರ್ ಮೇಲೆ ನಿಂತಿದ್ದ ಕಾರಿನಲ್ಲಿ ಮೂರು ಶವ ಪತ್ತೆ

ನವದೆಹಲಿ: ಫ್ಲೈ ಓವರ್ ಮೇಲೆ ನಿಂತಿದ್ದ ಕಾರಿನಲ್ಲಿ ಮೂರು ಶವ ಪತ್ತೆಯಾಗಿರುವ ಘಟನೆ ದೆಹಲಿಯ ಪೀರಗಢಿಯಲ್ಲಿ ನಡೆದಿದೆ. ಪೀರಗಢಿ ಫ್ಲೈಓವರ್ ಮೇಲೆ ನಿಲ್ಲಿಸಿದ್ದ ಕಾರೊಂದರಲ್ಲಿ ಮೂರು ಶವಗಳು ಪತ್ತೆಯಾಗಿವೆ. ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಬಾಪ್ರೋಲಾ ನಿವಾಸಿ ರಣಧೀರ್ ಸಿಂಗ್(60) ಲಕ್ಷ್ಮೀ ದೇವಿ (40) ಹಾಗೂ ಶಿವ ನರೇಶ್ ಸಿಂಗ್ (47) ಮೃತ ದುರ್ದೈವಿಗಳು. ಮೂವರ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಸ್ಥಳಕ್ಕಗಮಿಸಿರುವ ಪೊಲೀಸರು ತನಿಖೆ ನಡೆಸಿದ್ದಾರೆ. ಬಹಳ ಸಮಯದಿಂದ ಕಾರು ನಿಂತಲ್ಲೇ ನಿಂತಿತ್ತು. […]

ಕನ್ನಡ ದುನಿಯಾ 9 Feb 2026 9:46 am

40 ದಾಟಿದ ಮಹಿಳೆಯರಲ್ಲಿ ಹೆಚ್ಚುತ್ತಿದೆ ಮೂಳೆ ಸವೆತ: ಆಸ್ಟಿಯೊಪೊರೋಸಿಸ್ ತಡೆಗಟ್ಟುವುದು ಹೇಗೆ?

ಬೆಂಗಳೂರು: ಮೂಳೆಗಳ ಸಾಂದ್ರತೆ ಕಡಿಮೆಯಾಗಿ ಅವುಗಳ ಬಲ ಕುಂದುವ ಸ್ಥಿತಿಯನ್ನು ಆಸ್ಟಿಯೊಪೊರೋಸಿಸ್ ಎನ್ನಲಾಗುತ್ತದೆ. ಇದು ಕೇವಲ ವಿಟಮಿನ್ ಅಥವಾ ಕ್ಯಾಲ್ಸಿಯಂ ಕೊರತೆಯಲ್ಲ ಬದಲಾಗಿ ಮೂಳೆಗಳು ಒಳಗಿನಿಂದ ಸ್ಪಂಜಿನಂತೆ ಪೊಳ್ಳಾಗಿ ಸಣ್ಣ ಪೆಟ್ಟಿಗೂ ಮುರಿಯುವ ಅಪಾಯಕಾರಿ ಸ್ಥಿತಿ.ಭಾರತದಲ್ಲಿ ಪ್ರತಿ 5 ಮಹಿಳೆಯರಲ್ಲಿ ಒಬ್ಬರು ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂಬ ಆತಂಕಕಾರಿ ವಿಷಯವನ್ನು ತಜ್ಞರು ಹೊರಹಾಕಿದ್ದಾರೆ. ಈ ಕಾಯಿಲೆ ಯಾರನ್ನು ಹೆಚ್ಚು ಕಾಡುತ್ತದೆ?ಋತುಬಂಧಕ್ಕೊಳಗಾದ ಮಹಿಳೆಯರು: ಋತುಬಂಧದ (Menopause) ನಂತರ ಈಸ್ಟ್ರೊಜೆನ್ ಹಾರ್ಮೋನ್ ಮಟ್ಟ ಕಡಿಮೆಯಾಗುವುದರಿಂದ ಮಹಿಳೆಯರಲ್ಲಿ ಮೂಳೆ ಸಾಂದ್ರತೆಯು ಶೇ. […]

ಕನ್ನಡ ದುನಿಯಾ 9 Feb 2026 9:45 am

ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧ ಪೂರೈಕೆ, ವಿತರಣೆಗೆ ಇ- ಔಷಧ ಸಾಫ್ಟ್ವೇರ್ ಅಳವಡಿಕೆ

ಕಲಬುರಗಿ: ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧ ಪೂರೈಕೆ ವಿತರಣೆಗಾಗಿ ಇ- ಔಷಧ ಸಾಫ್ಟ್ವೇರ್ ಅಳವಡಿಸಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ಭಾನುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ರಾಜ್ಯದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಅಗತ್ಯ ಔಷಧ ತೀವ್ರ ಕೊರತೆ ಪತ್ತೆಯಾಗಿದೆ. ರಾಜ್ಯದ ಪ್ರತಿಯೊಂದು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಎಷ್ಟು ಔಷದ ಸ್ಟಾಕ್ ಇದೆ, ಯಾವ ಔಷಧ ದಿನಾಂಕ ಮುಗಿದಿದೆ ಎನ್ನುವ ಎಲ್ಲಾ ಮಾಹಿತಿ ಇ- ಔಷಧ ಸಾಫ್ಟ್ವೇರ್ ಮೂಲಕ […]

ಕನ್ನಡ ದುನಿಯಾ 9 Feb 2026 9:40 am

ಹೋಳಿ ಹಬ್ಬಕ್ಕೆ ರೈಲ್ವೆ ಇಲಾಖೆ ಬಂಪರ್ ಕೊಡುಗೆ: 1,500 ವಿಶೇಷ ರೈಲುಗಳ ಸಂಚಾರ

ನವದೆಹಲಿ: ಬಣ್ಣಗಳ ಹಬ್ಬ ಹೋಳಿ ಹತ್ತಿರವಾಗುತ್ತಿದ್ದಂತೆ ಊರಿಗೆ ಹೋಗುವವರಿಗೆ ರೈಲ್ವೆ ಇಲಾಖೆ ಭರ್ಜರಿ ಸಿಹಿ ಸುದ್ದಿ ನೀಡಿದೆ. ರೈಲುಗಳಲ್ಲಿನ ವಿಪರೀತ ಜನದಟ್ಟಣೆ ತಪ್ಪಿಸಲು ಈ ಬಾರಿ ದಾಖಲೆ ಮಟ್ಟದ 1,410ಕ್ಕೂ ಹೆಚ್ಚು ವಿಶೇಷ ರೈಲುಗಳನ್ನು ಓಡಿಸಲು ನಿರ್ಧರಿಸಲಾಗಿದೆ. ಪ್ರಯಾಣಿಕರ ಸಂಖ್ಯೆ ಹೆಚ್ಚಾದರೆ ಈ ಸಂಖ್ಯೆ 1,500ರ ಗಡಿ ದಾಟಲಿದೆ,ಕಳೆದ ವರ್ಷಕ್ಕೆ (2025) ಹೋಲಿಸಿದರೆ ಈ ಬಾರಿ ಸುಮಾರು 300ಕ್ಕೂ ಹೆಚ್ಚು ಹೆಚ್ಚುವರಿ ರೈಲುಗಳ ವ್ಯವಸ್ಥೆ ಮಾಡಿರುವುದು ವಿಶೇಷ. ಎಲ್ಲಿ ಎಷ್ಟು ರೈಲುಗಳು? (ವಲಯವಾರು ಲಿಸ್ಟ್) ಪ್ರಯಾಣಿಕರ ಅನುಕೂಲಕ್ಕಾಗಿ […]

ಕನ್ನಡ ದುನಿಯಾ 9 Feb 2026 8:53 am

T20 World Cup 2026: ಬ್ಯಾಗ್ ಪ್ಯಾಕ್ ಮಾಡಿ ರೆಡಿ ಆಗು; ವಿಶ್ವಕಪ್‌ಗೆ ಕರೆತಂದ ಆ ಒಂದು ಫೋನ್ ಕಾಲ್ ಬಿಚ್ಚಿಟ್ಟ ಸಿರಾಜ್

ಪ್ರಸ್ತುತ ನಡೆಯುತ್ತಿರುವ ಟಿ ಟ್ವೆಂಟಿ ವಿಶ್ವಕಪ್ 2026 ಟೂರ್ನಿಯಲ್ಲಿ ಟೀಮ್ ಇಂಡಿಯಾ ತನ್ನ ಮೊದಲ ಪಂದ್ಯವನ್ನು ಗೆದ್ದು ಶುಭಾರಂಭ ಮಾಡಿದೆ. ಫೆಬ್ರವರಿ 7ರಂದು ವಾಂಖೆಡೆಯಲ್ಲಿ ನಡೆದ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ ವಿರುದ್ಧದ ಪಂದ್ಯದಲ್ಲಿ ಭಾರತ ಮೊದಲು ಬ್ಯಾಟಿಂಗ್ ಮಾಡಿ ಸೂರ್ಯಕುಮಾರ್ ಯಾದವ್ 84 ರನ್‌ಗಳ ಸಹಾಯದಿಂದ 161 ರನ್ ಕಲೆಹಾಕಿ 162 ರನ್‌ಗಳ ಗುರಿಯನ್ನು ನೀಡಿತ್ತು. ಅತ್ತ ಬೌಲಿಂಗ್‌ನಲ್ಲಿ ಭಾರತವನ್ನು ಕಾಡಿದ್ದ ಅಮೆರಿಕಾ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 132 ರನ್ ಕಲೆಹಾಕಿ 29 […]

ಕನ್ನಡ ದುನಿಯಾ 9 Feb 2026 8:44 am

ಈ 4 ಅಭ್ಯಾಸಗಳಿಂದ ದೂರವಿದ್ದರೆ ಕ್ಯಾನ್ಸರ್ ಬರಲು ಸಾಧ್ಯವೇ ಇಲ್ಲ : ಸಂಶೋಧನೆ

ನವದೆಹಲಿ: ಕ್ಯಾನ್ಸರ್ ಎನ್ನುವ ಹೆಸರು ಕೇಳಿದರೆ ಇಂದಿಗೂ ಅನೇಕರು ಬೆಚ್ಚಿಬೀಳುತ್ತಾರೆ. ಆದರೆ, ಇತ್ತೀಚಿನ ಸಂಶೋಧನೆಯೊಂದು ಈ ಭಯಕ್ಕೆ ಮದ್ದನ್ನು ನೀಡಿದೆ. ನಾವು ನಮ್ಮ ಜೀವನಶೈಲಿಯಲ್ಲಿ ಸಣ್ಣ ಬದಲಾವಣೆಗಳನ್ನು ಮಾಡಿಕೊಂಡರೆ ಮತ್ತು ಪರಿಸರವನ್ನು ಸುಧಾರಿಸಿದರೆ, ಬರಲಿರುವ ಒಟ್ಟು ಕ್ಯಾನ್ಸರ್ ಪ್ರಕರಣಗಳಲ್ಲಿ ಶೇಕಡಾ 38 ಕ್ಕಿಂತ ಹೆಚ್ಚಿನ ಪ್ರಕರಣಗಳನ್ನು ತಡೆಗಟ್ಟಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ಮತ್ತು ‘ನೇಚರ್ ಮೆಡಿಸಿನ್’ ವರದಿ ತಿಳಿಸಿದೆ. 19 ಮಿಲಿಯನ್ ಪ್ರಕರಣಗಳ ಆಳವಾದ ವಿಶ್ಲೇಷಣೆಸಂಶೋಧಕರು 2022 ರಿಂದ ದಾಖಲಾದ ಸುಮಾರು 1.9 ಕೋಟಿ […]

ಕನ್ನಡ ದುನಿಯಾ 9 Feb 2026 8:39 am

ನಿಮ್ಮ ರಾಶಿಗೆ ವಜ್ರ ಒಲಿಯುವುದೇ? ತಿಳಿಯದಿದ್ದರೆ ಆಪತ್ತು ಗ್ಯಾರಂಟಿ

ನವರತ್ನಗಳಲ್ಲಿ ಅತ್ಯಂತ ಅಮೂಲ್ಯ ಹಾಗೂ ರತ್ನಗಳ ರಾಜ ಎಂದೇ ಕರೆಯಲ್ಪಡುವ ವಜ್ರ (Diamond) ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ? ಆದರೆ, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ವಜ್ರ ಕೇವಲ ಆಭರಣವಲ್ಲ; ಅದು ಶುಕ್ರ ಗ್ರಹದ ಸಂಕೇತ. ಸರಿಯಾದ ರಾಶಿಯವರು ಇದನ್ನು ಧರಿಸಿದರೆ ಕುಬೇರ ಯೋಗ ಲಭಿಸುತ್ತದೆ, ಆದರೆ ತಪ್ಪು ರಾಶಿಯವರು ಧರಿಸಿದರೆ ಸಮಸ್ಯೆಗಳು ಬೆನ್ನಟ್ಟಬಹುದು. ನಿಮ್ಮ ರಾಶಿಗೆ ವಜ್ರ ಶುಭವೇ? ಧರಿಸುವ ಸರಿಯಾದ ವಿಧಾನ ಯಾವುದು? ಇಲ್ಲಿದೆ ಸಂಪೂರ್ಣ ಮಾಹಿತಿ. ಶುಕ್ರನ ಕೃಪೆಗಾಗಿ ವಜ್ರಜ್ಯೋತಿಷ್ಯದಲ್ಲಿ ಶುಕ್ರನನ್ನು ಸೌಂದರ್ಯ, ಐಶ್ವರ್ಯ, […]

ಕನ್ನಡ ದುನಿಯಾ 9 Feb 2026 8:24 am

ತಿರುಪತಿ ಲಡ್ಡುಗೆ ಕಲಬೆರಕೆ ತುಪ್ಪ: ಸಿಬಿಐ ತನಿಖೆಯಲ್ಲಿ ಶಾಕಿಂಗ್ ಮಾಹಿತಿ ಬಹಿರಂಗ

ತಿರುಪತಿ: ವಿಶ್ವದ ಶ್ರೀಮಂತ ದೇವಾಲಯ ಎಂದೇ ಹೇಳಲಾಗುವ ತಿರುಪತಿ ತಿರುಮಲ ಶ್ರೀ ವೆಂಕಟೇಶ್ವರ ದೇಗುಲದ ಲಡ್ಡು ಪ್ರಸಾದದಲ್ಲಿ ಕಲಬೆರಕೆ ತುಪ್ಪ ಬಳಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ವಿಚಾರ ಬೆಳಕಿಗೆ ಬಂದಿದೆ. 2019 ರಿಂದ 2024ರ ಅವಧಿಯಲ್ಲಿ ಲಡ್ಡು ಪ್ರಸಾದಕ್ಕೆ ರಾಸಾಯನಿಕ ಯುಕ್ತವಾದ ತುಪ್ಪ ಬಳಕೆ ಮಾಡಿರುವುದು ಪ್ರಯೋಗಾಲಯದ ಪರೀಕ್ಷೆಯಲ್ಲಿ ದೃಢಪಟ್ಟಿತ್ತು. ಇದರ ಬಗ್ಗೆ ಗೊತ್ತಿದ್ದರೂ ಟಿಟಿಡಿ ತುಪ್ಪ ಖರೀದಿ ಮುಂದುವರೆಸಿತ್ತು ಎಂದು ಸಿಬಿಐ ಬಹಿರಂಗಪಡಿಸಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ವಿಶೇಷ ತನಿಖಾ ತಂಡ ಆಂಧ್ರಪ್ರದೇಶ ಸರ್ಕಾರಕ್ಕೆ […]

ಕನ್ನಡ ದುನಿಯಾ 9 Feb 2026 8:23 am

100 ಕೋಟಿ ಆಂಡ್ರಾಯ್ಡ್ ಫೋನ್’ಗಳು ಇನ್ನು ಅಸುರಕ್ಷಿತ ! ಈ ಪಟ್ಟಿಯಲ್ಲಿ ನಿಮ್ಮ ಮೊಬೈಲ್ ಇದೆಯೇ ಚೆಕ್ ಮಾಡಿ

ನಿಮ್ಮ ಸ್ಮಾರ್ಟ್ಫೋನ್ 2021 ಅಥವಾ ಅದಕ್ಕಿಂತ ಹಳೆಯದಾಗಿದ್ದರೆ ನೀವು ಈಗಲೇ ಜಾಗರೂಕರಾಗಬೇಕಿದೆ. ವಿಶ್ವದಾದ್ಯಂತ 100 ಕೋಟಿಗೂ ಹೆಚ್ಚು ಆಂಡ್ರಾಯ್ಡ್ ಬಳಕೆದಾರರ ಸಂಕಷ್ಟ ಹೆಚ್ಚಾಗಲಿದೆ. ಆಂಡ್ರಾಯ್ಡ್ 12 ಅಥವಾ ಅದಕ್ಕಿಂತ ಹಳೆಯ ಆವೃತ್ತಿಗಳಲ್ಲಿ ಕಾರ್ಯನಿರ್ವಹಿಸುವ ಸ್ಮಾರ್ಟ್ಫೋನ್ಗಳಿಗೆ ಇನ್ನು ಮುಂದೆ ಭದ್ರತಾ ಅಪ್ಡೇಟ್ಗಳನ್ನು (Security Updates) ನೀಡುವುದಿಲ್ಲ ಎಂದು ಟೆಕ್ ದೈತ್ಯ ಗೂಗಲ್ ಸ್ಪಷ್ಟಪಡಿಸಿದೆ. ಇದರ ನೇರ ಅರ್ಥವೇನೆಂದರೆ, ವಿಶ್ವದ ಸುಮಾರು 100 ಕೋಟಿಗೂ ಹೆಚ್ಚು ಫೋನ್ಗಳು ಈಗ ಹ್ಯಾಕರ್ಗಳ ಗುರಿಯಾಗಲಿವೆ. ದತ್ತಾಂಶ ಮತ್ತು ಮಾಧ್ಯಮ ವರದಿಗಳ ಪ್ರಕಾರ, ಸುಮಾರು […]

ಕನ್ನಡ ದುನಿಯಾ 9 Feb 2026 8:20 am

ಯುವತಿಯರಿಗೆ ಆಮಿಷವೊಡ್ಡಿ ಮನೆಗೆ ಕರೆಸಿಕೊಂಡು ವೇಶ್ಯಾವಾಟಿಕೆ: ಮೂವರು ಮಹಿಳೆಯರಿಗೆ ಕಠಿಣ ಶಿಕ್ಷೆ

ಶಿವಮೊಗ್ಗ: ಹಣ ನೀಡುವ ಆಮಿಷವೊಡ್ಡಿ ಮನೆಗೆ ಯುವತಿಯರನ್ನು ಕರೆಸಿಕೊಂಡು ವೇಶ್ಯಾವಾಟಿಕೆಗೆ ಬಳಸುತ್ತಿದ್ದ ಭದ್ರಾವತಿಯ ಮೂವರು ಮಹಿಳೆಯರಿಗೆ ನಾಲ್ಕನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ 10 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 1.61 ಲಕ್ಷ ರೂ. ದಂಡ ವಿಧಿಸಿ ಶನಿವಾರ ಆದೇಶಿಸಿದೆ. ಭದ್ರಾವತಿಯ ಚಂದ್ರಕಲಾ, ಶಿಲ್ಪಾ ಮತ್ತು ಕವಿತಾ ಶಿಕ್ಷೆಗೆ ಒಳಗಾದವರು. 2021ರ ಡಿಸೆಂಬರ್ 24ರಂದು ಭದ್ರಾವತಿಯ ಮನೆಯೊಂದರ ಮೇಲೆ ಐಪಿಎಸ್ ಅಧಿಕಾರಿ ಜಿತೇಂದ್ರ ಕುಮಾರ್ ದಯಾಮ ನೇತೃತ್ವದಲ್ಲಿ ದಾಳಿ ನಡೆಸಲಾಗಿತ್ತು. ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪದ […]

ಕನ್ನಡ ದುನಿಯಾ 9 Feb 2026 8:11 am

BIG NEWS : ಫೆಬ್ರವರಿ 12 ರಂದು ‘ಭಾರತ್ ಬಂದ್’, ದೇಶಾದ್ಯಂತ ಪ್ರತಿಭಟನೆ |Bharath Bandh

ಅಮೆರಿಕ ಮತ್ತು ಭಾರತದ ನಡುವಿನ ವ್ಯಾಪಾರ ಒಪ್ಪಂದದಿಂದಾಗಿ (Trade Deal) ಪ್ರಮುಖ ವಸ್ತುಗಳು ಮತ್ತು ಸೇವೆಗಳ ಮೇಲಿನ ಸುಂಕಗಳು ಕಡಿಮೆಯಾಗಲಿವೆ. ಇದರಿಂದ ಭಾರತದಿಂದ ರಫ್ತು ಹೆಚ್ಚಾಗಲಿದ್ದು, ಆರ್ಥಿಕತೆ ಸುಧಾರಿಸಲಿದೆ ಎಂದು ತಜ್ಞರು ಭಾವಿಸಿದ್ದಾರೆ. ಆದರೆ, ಈ ವ್ಯಾಪಾರ ಒಪ್ಪಂದದಿಂದ ರೈತರಿಗೆ ನಷ್ಟವಾಗುವ ಸಾಧ್ಯತೆಯಿದೆ ಎಂದು ರೈತ ಸಂಘಟನೆಗಳು ಹೇಳುತ್ತಿವೆ. ಭಾರತದ ಕೃಷಿ ಕ್ಷೇತ್ರವನ್ನು ಅಮೆರಿಕದ ಬಹುರಾಷ್ಟ್ರೀಯ ಕಂಪನಿಗಳಿಗೆ ಸಂಪೂರ್ಣವಾಗಿ ಒಪ್ಪಿಸುವುದೇ ಈ ಅಮೆರಿಕ-ಭಾರತ ಟ್ರೇಡ್ ಡೀಲ್ ಎಂದು ಅವು ಆಪಾದಿಸುತ್ತಿವೆ. ಈ ಒಪ್ಪಂದದಿಂದ ರೈತರಿಗೆ ಆಗುತ್ತಿರುವ ಅನ್ಯಾಯವನ್ನು […]

ಕನ್ನಡ ದುನಿಯಾ 9 Feb 2026 8:04 am

ಕ್ರಿಶ್ಚಿಯನ್ ಧರ್ಮಕ್ಕೆ ಸೇರಿದ ಪತ್ನಿ: ಮತಾಂತರವಾಗಲು ಪತಿ, ಮಕ್ಕಳಿಗೂ ಕಿರುಕುಳ

ಶಿವಮೊಗ್ಗ: ತಮ್ಮ ಪತ್ನಿ ಪ್ರಿಯತಾ ಆರ್. ಸ್ವಯಂ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದು, ತನ್ನಷ್ಟಕ್ಕೆ ತಾನು ಇರದೆ ನನಗೆ ಮತ್ತು ನನ್ನ ಇಬ್ಬರು ಹೆಣ್ಣು ಮಕ್ಕಳಿಗೂ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳ್ಳುವಂತೆ ಒತ್ತಾಯ ಮಾಡಿ ಮಾನಸಿಕ ಕಿರುಕುಳ ನೀಡುತ್ತಿದ್ದು, ಪತ್ನಿಯ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಭದ್ರಾವತಿಯ ಬೊಮ್ಮನಕಟ್ಟೆ ನಿವಾಸಿ ಬಿ.ವಿನಯ್ ಪೇಪರ್ ಟೌನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. 2011ರಲ್ಲಿ ನಾನು ಮತ್ತು ಹಾಸನ ಜಿಲ್ಲೆಯ ಪ್ರಿಯತಾ ಬೇಲೂರು ತಾಲೂಕಿನ ಹಳೇಬಿಡು ಬನಶಂಕರಿ ಕಲ್ಯಾಣ ಮಂಟಪದಲ್ಲಿ ಲಿಂಗಾಯತ ಕುಂಬಾರ […]

ಕನ್ನಡ ದುನಿಯಾ 9 Feb 2026 7:57 am

T20 World Cup 2026: ನಾವು ಸ್ಟ್ರಾಂಗ್ ಎನ್ನುತ್ತಿದ್ದ 4 ತಂಡಗಳ ಸೊಕ್ಕು ಮುರಿದ ಕ್ರಿಕೆಟ್ ಶಿಶುಗಳು; ಉಳಿದ ರನ್ ಮರ್ಯಾದೆ!

ಕಳೆದ ಕೆಲ ವರ್ಷಗಳಿಂದ ಟಿ ಟ್ವೆಂಟಿ ಕ್ರಿಕೆಟ್‌ನಲ್ಲಿ ರನ್‌ ಹೊಳೆ ಸರಾಗವಾಗಿ ಹರಿದು ಬಂದಿತ್ತು. ಈ ಹಿಂದಿನ ಟಿ ಟ್ವೆಂಟಿ ಪಂದ್ಯಗಳಿಗೆ ಹೋಲಿಸಿದರೆ ಆ ರನ್ ಹೊಳೆ ಭಾರೀ ಹೆಚ್ಚಿತ್ತು. ಈ ಹಿಂದೆ ಟಿ ಟ್ವೆಂಟಿ ಪಂದ್ಯಗಳಲ್ಲಿ 180ರಿಂದ 200 ಪೈಪೋಟಿಯ ಗುರಿಯಾಗಿತ್ತು. ಆದರೆ ಇತ್ತೀಚೆಗಿನ ದಿನಗಳಲ್ಲಿ ಅದಕ್ಕಿಂತ ಹೆಚ್ಚಿನ ಮೊತ್ತಗಳನ್ನು ತಂಡಗಳು ಕಲೆಹಾಕಲಾರಂಭಿಸಿದ್ದವು. ಇದು ಕ್ರಿಕೆಟ್ ಕಟ್ಟಾಭಿಮಾನಿಗಳಿಗೆ ಬೇಸರವನ್ನುಂಟುಮಾಡಿದ್ದು ಸುಳ್ಳಲ್ಲ. ದುಬಾರಿ ಟಾರ್ಗೆಟ್ ಆಸೆಗೆ ಬಿದ್ದ ತಂಡಗಳು ಟಿ ಟ್ವೆಂಟಿ ಕ್ರಿಕೆಟ್‌ನ ರೋಚಕತೆಯನ್ನು ಹಾಳುಮಾಡುತ್ತಿವೆ ಎಂದು […]

ಕನ್ನಡ ದುನಿಯಾ 9 Feb 2026 7:51 am