SENSEX
NIFTY
GOLD
USD/INR

Weather

36    C

ಡಿಜಿಟಲ್ ಸುದ್ದಿ ಮೂಲಗಳು

...

ಬಿಟ್ ಕಾಯಿನ್ ಪ್ರಕರಣ: ಶ್ರೀಕಿ, ನಲಪಾಡ್ ಸಹೋದರರು ಸೇರಿ ಕೇಂದ್ರದ ಮಾಜಿ ಸಚಿವರ ಪುತ್ರನ ಮೇಲೆ ಇಡಿ ದಾಳಿ

ಬೆಂಗಳೂರು:ರಾಜ್ಯ ರಾಜಕೀಯದಲ್ಲಿ ತೀವ್ರ ಸಂಚಲನಕ್ಕೆ ಕಾರಣವಾಗಿದ್ದ ಬಿಟ್ ಕಾಯಿನ್ ಪ್ರಕರಣ ಸಂಬಂಧ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ 2002 (ಪಿಎಂಎಲ್​ಎ) ಪ್ರಮುಖ ಆರೋಪಿ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಹಾಗೂ ಶಾಂತಿನಗರ ಕಾಂಗ್ರೆಸ್ ಶಾಸಕ ಹ್ಯಾರಿಸ್ ಪುತ್ರರಾದ ಮೊಹಮ್ಮದ್ ನಲಪಾಡ್, ಓಮರ್ ಫಾರೂಕ್ ನಲಪಾಡ್ ಮನೆ ಸೇರಿದಂತೆ ರಾಜ್ಯದ 12 ಕಡೆಗಳಲ್ಲಿ ಜಾರಿ ನಿರ್ದೇಶಾನಾಲಯ (ಇ.ಡಿ) ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಸೋಮವಾರ ಬೆಳ್ಳಂಬೆಳಗ್ಗೆ 6.30ರ ಸುಮಾರಿಗೆ ಇ.ಡಿ.ಅಧಿಕಾರಿಗಳ ತಂಡವು ನಗರದ ಮೆಗ್ರಾತ್ ರಸ್ತೆಯಲ್ಲಿರುವ ಶಾಸಕ ಮೊಹಮ್ಮದ್ ಹ್ಯಾರಿಸ್ […]

ಪ್ರಜಾ ಪ್ರಗತಿ 20 Apr 2026 10:06 pm

ಕೆಳ ಹಂತದ ಸಿಬ್ಬಂದಿ ಮೇಲೆ ದರ್ಪ : ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಸಮಯ ನೀಡುವಂತೆ ಕೋರಿ ಡಿಜಿಪಿಗೆ ಪತ್ರ

ಬೆಂಗಳೂರು:ರಾಜ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕೆಲವು ಐಪಿಎಸ್ ಅಧಿಕಾರಿಗಳು ಕೆಳ ಹಂತದ ಸಿಬ್ಬಂದಿ ಮೇಲೆ ದರ್ಪ, ತಾರತಮ್ಯವೆಸಗುತ್ತಿದ್ದಾರೆ. ಈ ಬಗ್ಗೆ ಕೂಲಂಕಷವಾಗಿ ಚರ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಸಮಯ ನೀಡುವಂತೆ ಕೋರಿ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ (ಡಿಸಿಆರ್​ಇ) ಎಸ್ಪಿ ಎಸ್.ಎಸ್. ಕಾಶಿ ಅವರು ಡಿಜಿಪಿಗೆ ಪತ್ರ ಬರೆದಿದ್ದಾರೆ. ಏ.15ರಿಂದ 29ರ ವರೆಗೆ ಎಂದಾದರೂ ಅರ್ಧ ಗಂಟೆ ಸಮಯ ನೀಡಿದರೆ ಪೊಲೀಸ್ ಸಿಬ್ಬಂದಿ ಮೇಲೆ ಕೆಲ ಐಪಿಎಸ್ ಅಧಿಕಾರಿಗಳು ಎಸಗುತ್ತಿರುವ ತಾರತಮ್ಯ, […]

ಪ್ರಜಾ ಪ್ರಗತಿ 20 Apr 2026 10:03 pm

ಕರ್ನಾಟಕ ರಾಜ್ಯ ಚೆಸ್ ಚಾಂಪಿಯನ್‌ಶಿಪ್ಸ್ 2026 ವೇಳಾಪಟ್ಟಿ ಪ್ರಕಟ : ರಾಜ್ಯದ ವಿವಿಧೆಡೆ ಆಯೋಜನೆ: ವಿವಿಧ ವಯೋಮಾನದವರಿಗೆ ಪ್ರತ್ಯೇಕ ಸ್ಪರ್ಧೆ

ಬೆಂಗಳೂರು: ಕರ್ನಾಟಕ ರಾಜ್ಯ ಚೆಸ್ ಅಸೋಸಿಯೇಷನ್ ವತಿಯಿಂದ ರಾಜ್ಯಮಟ್ಟದ ವಾರ್ಷಿಕ ಚೆಸ್ ಚಾಂಪಿಯನ್‌ಶಿಪ್ಸ್ -2026ಅನ್ನು ಅಧಿಕೃತವಾಗಿ ರಾಜ್ಯದ ವಿವಿಧೆಡೆ ಆಯೋಜಿಸಿರುವುದಾಗಿ ಅಸೋಸಿಯೇಷನ್ ರಾಜ್ಯಾಧ್ಯಕ್ಷ ಟಿ.ಎನ್.ಮಧುಕರ್ ಹಾಗೂ ಕಾರ್ಯದರ್ಶಿ ತೇಜುಕುಮಾರ್ ತಿಳಿಸಿದ್ದಾರೆ. ದಕ್ಷಿಣ ಕನ್ನಡದಿಂದ ಚಾಲನೆ ಸಿಕ್ಕಿರುವ ರಾಜ್ಯಮಟ್ಟದ ಪಂದ್ಯಾವಳಿ 2026 ಆಗಸ್ಟ್ವರೆಗೆ ವಿವಿಧ ದಿನಾಂಕಗಳಂದು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಜರುಗಲಿದ್ದು, ಏಪ್ರಿಲ್ 24 ರಿಂದ 26 ಮೈಸೂರು ಚೆಸ್ ಸೆಂಟರ್ ವತಿಯಿಂದ 13ವರ್ಷದೊಳಗಿನವರಿಗೆ ಪಂದ್ಯಾವಳಿ ನಡೆಯಲಿದೆ. ಮೇ 1ರಿಂದ 4ರವರೆಗೆ ಬೆಂಗಳೂರಿನ ಇನ್ನೋವೇಟರ್ ಚೆಸ್ ಅಕಾಡೆಮಿಯಿಂದ ರಾಜ್ಯ […]

ಪ್ರಜಾ ಪ್ರಗತಿ 20 Apr 2026 9:57 pm

ದೇವರನ್ನು ನಂಬಿ, ಮೂಢನಂಬಿಕೆಗಳನ್ನು ತ್ಯಜಿಸಿ : ಮಾನವ ಸಮಾಜ ನಿರ್ಮಾಣದಲ್ಲಿ ಎಲ್ಲರೂ ಪಾಲುದಾರರಾಗಬೇಕು –ಮುಖ್ಯಮಂತ್ರಿ ಸಿದ್ದರಾಮಯ್ಯ

ರಾಣೇಬೆನ್ನೂರು : ಮಾನವ ಸಮಾಜ ನಿರ್ಮಾಣದಲ್ಲಿ ಎಲ್ಲರೂ ಪಾಲುದಾರರಾಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು. ಅವರು ರಾಣಿಬೆನ್ನೂರಿನ ನಿಟ್ಟೂರು ಗ್ರಾಮದಲ್ಲಿ ಆಯೋಜಿಸಲಾಗಿದ್ದ ಶ್ರೀ ಬೀರೇಶ್ವರ ಸ್ವಾಮಿ ದೇವಸ್ಥಾನದ 50 ನೇ ವರ್ಷದ ಸುವರ್ಣ ಮಹೋತ್ಸವ ಹಾಗೂ ಶ್ರೀ ಭಕ್ತ ಕನಕದಾಸರ ಮಹಾದ್ವಾರದ ಉದ್ಘಾಟನೆ ಹಾಗೂ ಧರ್ಮ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ನಿಟ್ಟೂರಿನ ದೇವಸ್ಥಾನಕ್ಕೆ ವಿವಿಧ ಜಿಲ್ಲೆಗಳಿಂದ ಭಕ್ತರು ಆಗಮಿಸುತ್ತಾರೆ. ಬೀರಲಿಂಗೇಶ್ವರ ದೇವಸ್ಥಾನ ನಿಟ್ಟೂರಿಗೆ ಮಾತ್ರ ಸೀಮಿತವಾಗಿಲ್ಲ. ದೇವನೊಬ್ಬ ನಾಮ ಹಲವು ಎಂದು ಅರ್ಥೆಸಿಕೊಳ್ಳಬೇಕೆಂದರು. ನಾಡು ಸರ್ವಜನಾಂಗದ […]

ಪ್ರಜಾ ಪ್ರಗತಿ 19 Apr 2026 9:52 pm

ವಿಪಕ್ಷಗಳು ಎಂದಿಗೂ ಮಹಿಳಾ ಮೀಸಲಾತಿ ಬಯಸಲ್ಲ : ಕೇಂದ್ರ ಮಾಜಿ ಸಚಿವ ಅನುರಾಗ್ ಠಾಕೂರ್ ವಾಗ್ದಾಳಿ

ಬೆಂಗಳೂರು: ಕಾಂಗ್ರೆಸ್ ಎಂದಿಗೂ ಮಹಿಳಾ ಮೀಸಲಾತಿ ಬಯಸಲ್ಲ. ಕೇವಲ ಅವರ ಕುಟುಂಬದವರಿಗೆ ಮಾತ್ರ ಅಧಿಕಾರ ಬೇಕು ಎಂದು ಮಾಜಿ ಕೇಂದ್ರ ಸಚಿವ ಅನುರಾಗ್ ಠಾಕೂರ್ ವಾಗ್ದಾಳಿ ನಡೆಸಿದರು. ಮಲ್ಲೇಶ್ವರಂ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಮಹಿಳೆಯರ ಬೆನ್ನಿಗೆ ಚೂರಿ ಹಾಕಿದ್ದು ಕಾಂಗ್ರೆಸ್ ಮತ್ತು ವಿಪಕ್ಷ. ಐದು ಬಾರಿ ಮಹಿಳಾ ಮೀಸಲಾತಿ ಬಿಲ್ ನಿಲ್ಲಿಸಿದ್ದಾರೆ. ಅವರಿಗೆ ನಾಚಿಕೆ ಆಗಬೇಕು. 2023ರಲ್ಲಿ ಚುನಾವಣೆ ಇದೆ ಎನ್ನುವ ಕಾರಣಕ್ಕೆ ಕಾಂಗ್ರೆಸ್ ಬಿಲ್ ಪರ ನಿಂತಿತು. ಈಗ ಅದೇ ಕಾಂಗ್ರೆಸ್ ಮಹಿಳೆಯರ […]

ಪ್ರಜಾ ಪ್ರಗತಿ 19 Apr 2026 9:49 pm

ಮಹಿಳಾ ಮೀಸಲು ಮಸೂದೆ: ಬಿಜೆಪಿಗೆ ಮುಖಭಂಗ: ಕಾಂಗ್ರೆಸ್

ಬೆಂಗಳೂರು : ಶಾಸನಸಭೆಗಳಲ್ಲಿ ಮಹಿಳೆಯರಿಗೆ ಮೂರನೇ ಒಂದರಷ್ಟು ಮೀಸಲಾತಿ ಕಲ್ಪಿಸುವ ನೈಜ ಬದ್ಧತೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರಕ್ಕೆ ಇಲ್ಲ. ಸರ್ವಾಧಿಕಾರಿ ಧೋರಣೆ, ಏಕಪಕ್ಷೀಯವಾಗಿ ಕೈಗೊಂಡ ನಿರ್ಧಾರಕ್ಕೆ ಸಂಸದೀಯ ವ್ಯವಸ್ಥೆಯಲ್ಲಿ ಮುಖಭಂಗವಾಗಿದ್ದು, ಇದು ಪ್ರಜಾಪ್ರಭುತ್ವ ವ್ಯವಸ್ಥೆಯ ನೈಜ ಗೆಲುವು ಎಂದು ಎಐಸಿಸಿ ಎಸ್.ಸಿ ವಿಭಾಗದ ರಾಷ್ಟಿಯ ಸಂಯೋಜಕರು ಹಾಗೂ ಮಹಾರಾಷ್ಟ ಉಸ್ತುವಾರಿ ಡಾ. ಆನಂದ ಕುಮಾರ್ ಟೀಕಿಸಿದ್ದಾರೆ. ಸಂಸತ್ತಿನಲ್ಲಿ ಬಿದ್ದುಹೋಗಿರುವ ಮಹಿಳಾ ಮೀಸಲಾತಿ ಮಸೂದೆಯೇ ಅಲ್ಲ ಬದಲಾಗಿ ಮಹಿಳೆಯರ ಹೆಸರಿನಲ್ಲಿ ತರಲು ಯತ್ನಿಸಿದ್ದ ಅಸಾಂವಿಧಾನಿಕ ಕ್ಷೇತ್ರ […]

ಪ್ರಜಾ ಪ್ರಗತಿ 19 Apr 2026 9:44 pm

ನಾನು ಕುಳಿತಿರುವ ಜಾಗಕ್ಕೆ ಶಕ್ತಿ ಇದೆ : ಕಾಲವೇ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಕೊಡುತ್ತದೆ

ಬೆಂಗಳೂರು / ಗದಗ: ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಂದು ಗದಗ ಜಿಲ್ಲೆಯ ಲಕ್ಷೆ್ಮಶ್ವರದಲ್ಲಿರುವ ಪ್ರಸಿದ್ಧ ಮುಕ್ತಿ ಮಂದಿರಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದರು. ಡಿಕೆಶಿ ಅವರ ದಿಢೀರ್ ಭೇಟಿಯ ರಾಜಕೀಯ ವಲಯದಲ್ಲಿ ಗಮನ ಸೆಳೆದಿದೆ. ಮುಕ್ತಿಮಂದಿರವು ಬಾಳೆಹೊನ್ನೂರು ರಂಭಾಪುರಿ ಪೀಠದ ಶಾಖಾ ಮಠವಾಗಿದೆ. ಪೂಜೆಗೂ ಮುನ್ನ ಮುಕ್ತಿ ಮಂದಿರದ ಸ್ವಾಮೀಜಿ ವಿಮಲ ರೇಣುಕಾ ಶಿವಾಚಾರ್ಯ ಸ್ವಾಮೀಜಿ ಅವರು ಹಾರ ಹಾಕಿ ಡಿ.ಕೆ.ಶಿವಕುಮಾರ್ ಅವರನ್ನು ಸ್ವಾಗತಿಸಿದರು. ಬಳಿಕ ಕೆಲವೇ ಕೆಲ ಮುಖಂಡರೊAದಿಗೆ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. […]

ಪ್ರಜಾ ಪ್ರಗತಿ 19 Apr 2026 9:28 pm

ಅಮೆರಿಕ -ಇರಾನ್ ಮಾತುಕತೆ ವಿಳಂಬ

ನವದೆಹಲಿ : ಅಮೆರಿಕಾ ಮತ್ತು ಇರಾನ್ ನಡುವಿನ ನಡೆಯುತ್ತಿರುವ ಮಾತುಕತೆಗಳಲ್ಲಿ ಕೆಲವು ಪ್ರಗತಿ ಕಂಡುಬAದಿದ್ದರೂ, ಅಂತಿಮ ಒಪ್ಪಂದಕ್ಕೆ ಇನ್ನೂ ಬಹಳ ದೂರವಿದೆ ಎಂದು ಇರಾನ್ ಸಂಸತ್ ಸ್ಪೀಕರ್ ತಿಳಿಸಿದ್ದಾರೆ. ರಾಜ್ಯ ದೂರದರ್ಶನಕ್ಕೆ ನೀಡಿದ ಸಂದರ್ಶನದಲ್ಲಿ ಅವರು, ಮಾತುಕತೆಗಳಲ್ಲಿ ಹಲವಾರು ಅಂತರಗಳು ಇನ್ನೂ ಉಳಿದಿವೆ ಎಂದು ಹೇಳಿ, ಅಂತಿಮ ಷರತ್ತುಗಳ ಬಗ್ಗೆ ಚರ್ಚಿಸುವ ಹಂತಕ್ಕೂ ಇನ್ನೂ ತಲುಪಿಲ್ಲವೆಂದು ಸ್ಪಷ್ಟಪಡಿಸಿದರು. ಈ ಮಧ್ಯೆ, ಅಮೆರಿಕ ನೌಕಾಪಡೆ ಇರಾನ್ ಬಂದರುಗಳ ಮೇಲೆ ನಿರ್ಬಂಧ ಮುಂದುವರಿಸುತ್ತಿರುವ ಹಿನ್ನೆಲೆಯಲ್ಲಿ, ಇರಾನ್ ಮತ್ತೆ ಹೊರ್ಮುಜ್ ಮೂಲಕ […]

ಪ್ರಜಾ ಪ್ರಗತಿ 19 Apr 2026 9:26 pm

ಬಿಜೆಪಿ ಪಥನ ಆರಂಭ / ವಿಪಕ್ಷಗಳಿಂದ ಮಹಿಳೆಯರಿಗೆ ದ್ರೋಹ : ಮಹಿಳಾ ಮೀಸಲಾತಿ ಸಮರ ಮೋದಿ ವರ್ಸಸ್ ದೀದಿ ಜಟಾಪಟಿ

ರಾಜ್ಯದಲ್ಲೂ ಭುಗಿಲೆದ್ದ ಮಹಿಳಾ ಮೀಸಲಾತಿ ಜಿದ್ದಾಜಿದ್ದಿ : ಸಿಎಂ – ಡಿಸಿಎಂ ವಾಗ್ದಾಳಿ ನವದೆಹಲಿ: ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ 33 ರಷ್ಡು ಮೀಸಲಾತಿ ನೀಡುವ ಮಹಿಳಾ ಮಸೂದೆಯನ್ನು ತಡೆಯಲು ಟಿಎಂಸಿ, ಕಾಂಗ್ರೆಸ್ ಜೊತೆ ಒಪ್ಪಂದ ಮಾಡಿಕೊಂಡಿದೆ. ಪಶ್ವಿಮ ಬಂಗಾಳದಲಿ ಮಹಾ ಜಂಗಲ್ ರಾಜ್ ಸರ್ಕಾರಕ್ಕೆ ತಕ್ಕ ಪಾಠ ಕಲಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಇಂದಿಲ್ಲಿ ಮನವಿ ಮಾಡಿದ್ದು ಮಹಿಳಾ ಮೀಸಲಾತಿಯಿಂದಲೇ ಪ್ರಧಾನಿ ನರೇಂದ್ರ ಮೋದಿ ಪತನ ಆರಂಭ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ […]

ಪ್ರಜಾ ಪ್ರಗತಿ 19 Apr 2026 9:24 pm