SENSEX
NIFTY
GOLD
USD/INR

Weather

28    C

ಡಿಜಿಟಲ್ ಸುದ್ದಿ ಮೂಲಗಳು

... ...View News by News Source

ಗಡಿಯಾರವೇ ಇಲ್ಲದ ಕಾಲದಲ್ಲೂ ಮಿಸ್ ಆಗುತ್ತಿರಲಿಲ್ಲ ಸೆಕೆಂಡ್ ಲೆಕ್ಕ: ಇದು ನಮ್ಮ ಪೂರ್ವಜರ ಸೈಂಟಿಫಿಕ್ ಐಡಿಯಾ

ಬೆಳಗ್ಗೆ ಎದ್ದ ಕೂಡಲೇ ಸ್ನೂಜ್ ಬಟನ್ ಒತ್ತೋದ್ರಿಂದ ಹಿಡಿದು, ಆಫೀಸ್ ಅಥವಾ ಸ್ಕೂಲ್ ಬಸ್ ಹಿಡಿಯೋವರೆಗೆ ನಾವು ಪ್ರತಿ ಸೆಕೆಂಡಿಗೂ ಗಡಿಯಾರದ ಗುಲಾಮರು ಒಂದೇ ಒಂದು ನಿಮಿಷ ಮಿಸ್ ಆದ್ರೂ ಇಡೀ ದಿನವೇ ಹಳಿ ತಪ್ಪಿದಂತಾಗುತ್ತೆ. ಆದ್ರೆ ಫ್ರೆಂಡ್ಸ್, ಈ ಡಿಜಿಟಲ್ ಕಾಲಕ್ಕೂ ಮುನ್ನ, ಅಂದ್ರೆ ನಮ್ಮ ಅಜ್ಜ-ಮುತ್ತಜ್ಜರ ಕಾಲದಲ್ಲಿ ಅಲಾರಾಂಗಳೇ ಇಲ್ಲದೆ ಇಡೀ ಜಗತ್ತು ಎಷ್ಟು ಪರ್ಫೆಕ್ಟ್ ಆಗಿ ಓಡ್ತಿತ್ತು ಗೊತ್ತಾ? ಇವತ್ತು ಜೇಬಿಂದ ಫೋನ್ ತೆಗೆದ್ರೆ ಸಾಕು ಟೈಮ್ ಗೊತ್ತಾಗುತ್ತೆ. ಆದ್ರೆ ಅಂದು ಯಾವುದೇ […]

ಕನ್ನಡ ದುನಿಯಾ 7 Feb 2026 4:28 pm

ಒಂದು ಹೆಜ್ಜೆ, ಒಂದು ದೇವಾಲಯ ಭಾರತದಲ್ಲಿರುವ ಸಾವಿರ ದೇವಾಲಯಗಳ ಊರು ಯಾವುದು?

ನಮ್ಮ ಭಾರತವು ವೈವಿಧ್ಯಮಯ ಸಂಪ್ರದಾಯ ಹಾಗೂ ಅಚಲ ನಂಬಿಕೆಗಳ ಬೀಡು. ಇಲ್ಲಿನ ಪ್ರತಿ ನಗರವೂ ತನ್ನದೇ ಆದ ವಿಶಿಷ್ಟ ಇತಿಹಾಸವನ್ನು ಹೊಂದಿದ್ದು, ತಮಿಳುನಾಡಿನ ಕಾಂಚೀಪುರಂ ಈ ಸಾಲಿನಲ್ಲಿ ಅಗ್ರಪಂಕ್ತಿಗೆ ಸೇರುತ್ತದೆ. ಪ್ರಾಚೀನ ಪಲ್ಲವ ಸಾಮ್ರಾಜ್ಯದ ರಾಜಧಾನಿಯಾಗಿದ್ದ ಈ ನಗರವನ್ನು ಭಕ್ತಿಯಿಂದ ಸಾವಿರ ದೇವಾಲಯಗಳ ನಗರ ಎಂದೇ ಕರೆಯಲಾಗುತ್ತದೆ. ಭಾರತದ ಅತ್ಯಂತ ಪವಿತ್ರವಾದ ಏಳು ಮೋಕ್ಷಪುರಿಗಳಲ್ಲಿ ಒಂದಾಗಿರುವ ಕಾಂಚೀಪುರಂ ಒಂದು ವಿಶಿಷ್ಟವಾದ ಆಧ್ಯಾತ್ಮಿಕ ಹಿನ್ನೆಲೆಯನ್ನು ಹೊಂದಿದೆ. ಇಲ್ಲಿನ ವಿಶೇಷತೆಯೆಂದರೆ ನಗರದ ಯಾವುದೇ ಶಿವ ದೇವಾಲಯಗಳಲ್ಲಿ ಅಂಬಾಳ್ (ಪಾರ್ವತಿ) ದೇವಿಗೆ […]

ಕನ್ನಡ ದುನಿಯಾ 7 Feb 2026 3:37 pm

ಶರೀರದೊಳಗೆ ಶ್ವಾಸಕೋಶವೇ ಇರಲಿಲ್ಲ, ಆದರೂ ಉಸಿರಾಟ ನಿಲ್ಲಲಿಲ್ಲ; ವಿಜ್ಞಾನದ ಪವಾಡಕ್ಕೆ ಸಾಕ್ಷಿಯಾದ ಶಿಕಾಗೋ ಆಸ್ಪತ್ರೆ

ವೈದ್ಯಕೀಯ ವಿಜ್ಞಾನ ದಿನದಿಂದ ದಿನಕ್ಕೆ ಅಸಾಧ್ಯವಾದುದನ್ನು ಸಾಧ್ಯವಾಗಿಸುತ್ತಿದೆ. ಅಮೆರಿಕದ ಶಿಕಾಗೋದಲ್ಲಿ ನಡೆದ ಒಂದು ವಿಶೇಷ ಶಸ್ತ್ರಚಿಕಿತ್ಸೆ ಈಗ ಇಡೀ ವಿಶ್ವದ ಗಮನ ಸೆಳೆದಿದೆ. ತೀವ್ರವಾಗಿ ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬನ ದೇಹದಿಂದ ಎರಡೂ ಶ್ವಾಸಕೋಶಗಳನ್ನು ಹೊರತೆಗೆದ ಮೇಲೂ ಆತ ಬರೋಬ್ಬರಿ ಎರಡು ದಿನಗಳ ಕಾಲ ಬದುಕಿ ಉಳಿದಿದ್ದಾನೆ. ಇದು ಕೇಳಲು ಅಚ್ಚರಿಯಾದರೂ ಸತ್ಯ. ವಾಯು ಮಾಲಿನ್ಯ ಮತ್ತು ವಿವಿಧ ಸೋಂಕುಗಳಿಂದಾಗಿ ಶ್ವಾಸಕೋಶದ ಕಾಯಿಲೆಗಳು ಹೆಚ್ಚುತ್ತಿರುವ ಈ ಕಾಲದಲ್ಲಿ, ನಾರ್ತ್ ವೆಸ್ಟರ್ನ್ ಮೆಡಿಸಿನ್ ಕ್ಯಾನಿಂಗ್ ಥೊರಾಸಿಕ್ ಇನ್‌ಸ್ಟಿಟ್ಯೂಟ್‌ನ ವೈದ್ಯರು […]

ಕನ್ನಡ ದುನಿಯಾ 7 Feb 2026 3:11 pm

ರಾಜ್ಯ ಸರ್ಕಾರದಿಂದ MSIL ಚಿಟ್ಸ್ ಸಾಫ್ಟ್‌’ವೇರ್ , ಮೊಬೈಲ್ ಆ್ಯಪ್ ಬಿಡುಗಡೆ.! ಏನಿದರ ಪ್ರಯೋಜನ

ಬೆಂಗಳೂರು: ಸರ್ಕಾರಿ ಸ್ವಾಮ್ಯದ ಮೈಸೂರು ಸೇಲ್ಸ್ ಇಂಟರ್ ನ್ಯಾಷನಲ್ ಲಿಮಿಟೆಡ್ (MSIL) ತನ್ನ ಚಿಟ್ ಫಂಡ್ ವ್ಯವಹಾರದಲ್ಲಿ ಪಾರದರ್ಶಕತೆ ಮತ್ತು ಸುಲಭ ಸೇವೆ ಒದಗಿಸಲು ಹೊಸ ಹಂತಕ್ಕೆ ಕಾಲಿಟ್ಟಿದೆ. ರಾಜ್ಯ ಸರ್ಕಾರವು ಇಂದು ಅಧಿಕೃತವಾಗಿ MSIL ಚಿಟ್ಸ್ ಸಾಫ್ಟ್‌ವೇರ್ ಮತ್ತು ಮೊಬೈಲ್ ಆ್ಯಪ್ ಅನ್ನು ಬಿಡುಗಡೆ ಮಾಡಿದೆ. ಮೈಸೂರು ಸೇಲ್ಸ್ ಇಂಟರ್ ನ್ಯಾಷನಲ್ ಲಿಮಿಟೆಡ್‌‌ನ ನೂತನ ಚಿಟ್ಸ್ ಸಾಫ್ಟ್‌ವೇರ್ ಹಾಗೂ ಮೊಬೈಲ್ ಆ್ಯಪ್ ಬಿಡುಗಡೆಗೊಳಿಸಿ ಸಿಎಂ ಸಿದ್ದರಾಮಯ್ಯ ಮಾಹಿತಿ ನೀಡಿದ್ದಾರೆ. ಎಂಎಸ್ಐಎಲ್ ಸರ್ಕಾರಿ ಸಂಸ್ಥೆಯು ಹಲವು ದಶಕಗಳಿಂದ […]

ಕನ್ನಡ ದುನಿಯಾ 7 Feb 2026 2:59 pm

T20 World Cup 2026: ನೆದರ್ಲೆಂಡ್ಸ್ ವಿರುದ್ಧ ಸೋತೇಬಿಟ್ರು ಎನ್ನುವಾಗ ಕೈಹಿಡಿದ ಬೌಲರ್; ಗೆದ್ದು ಮಾನ ಉಳಿಸಿಕೊಂಡ ಪಾಕ್

ಕೊಲಂಬೊ: ಪ್ರೇಮದಾಸ ಕ್ರೀಡಾಂಗಣದಲ್ಲಿ 2026ರ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ ಉದ್ಘಾಟನಾ ಪಂದ್ಯ ನಡೆದಿದ್ದು, ಪಾಕಿಸ್ತಾನ ಬೌಲಿಂಗ್ ಆಲ್‌ರೌಂಡರ್‌ನ ಸಹಾಯದಿಂದ ನೆದರ್ಲೆಂಡ್ಸ್ ವಿರುದ್ಧ 3 ವಿಕೆಟ್‌ಗಳ ಗೆಲುವನ್ನು ದಾಖಲಿಸಿ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ಪಂದ್ಯದಲ್ಲಿ ಟಾಸ್ ಗೆದ್ದು ಫೀಲ್ಡಿಂಗ್ ಆರಿಸಿಕೊಂಡ ಪಾಕಿಸ್ತಾನ ಎದುರಾಳಿ ನೆದರ್ಲೆಂಡ್ಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ಅದರಂತೆ ನೆದರ್ಲೆಂಡ್ಸ್ 19.5 ಓವರ್‌ಗಳಲ್ಲಿ 147ಕ್ಕೆ ಆಲ್‌ಔಟ್ ಆಗಿ ಪಾಕಿಸ್ತಾನಕ್ಕೆ 148 ರನ್‌ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನಟ್ಟಲು ಮುಂದಾದ ಪಾಕಿಸ್ತಾನ ಗೆಲ್ಲಲು […]

ಕನ್ನಡ ದುನಿಯಾ 7 Feb 2026 2:53 pm

ಗರ್ಭಿಣಿಯರನ್ನು ಹಾವುಗಳು ಕಚ್ಚುವುದಿಲ್ಲವೇ ? ವಿಜ್ಞಾನ ಹೇಳೋದೇನು ತಿಳಿಯಿರಿ

ಭಾರತೀಯ ಗ್ರಾಮೀಣ ಭಾಗಗಳಲ್ಲಿ ಒಂದು ಬಲವಾದ ನಂಬಿಕೆಯಿದೆ. “ಗರ್ಭಿಣಿ ಸ್ತ್ರೀಯರನ್ನು ಹಾವುಗಳು ಕಚ್ಚುವುದಿಲ್ಲ”. ಕೇಳಲು ಅಚ್ಚರಿ ಎನಿಸಿದರೂ, ತಲೆಮಾರುಗಳಿಂದ ಈ ಮಾತು ಜನಪದ ಕಥೆಗಳಲ್ಲಿ ಮತ್ತು ಹಿರಿಯರ ಅನುಭವದ ಮಾತುಗಳಲ್ಲಿ ಹಾಸುಹೊಕ್ಕಾಗಿದೆ. ಸೃಷ್ಟಿಗೆ ಮೂಲವಾದ ಮಾತೃತ್ವವನ್ನು ಪ್ರಕೃತಿಯೇ ರಕ್ಷಿಸುತ್ತದೆ ಎಂಬುದು ಕೆಲವರ ವಾದವಾದರೆ, ಇದರ ಹಿಂದೆ ವೈಜ್ಞಾನಿಕ ಕಾರಣಗಳಿವೆ ಎಂಬುದು ಮತ್ತೆ ಕೆಲವರ ಅಭಿಪ್ರಾಯ. ಅಷ್ಟಕ್ಕೂ ಈ ನಿಗೂಢ ನಂಬಿಕೆಯ ಹಿಂದೆ ಧರ್ಮ, ಜ್ಯೋತಿಷ್ಯ ಮತ್ತು ವಿಜ್ಞಾನ ಏನು ಹೇಳುತ್ತವೆ? ಇಲ್ಲಿದೆ ಮಾಹಿತಿ. ೧. ಪೌರಾಣಿಕ ಹಿನ್ನೆಲೆ: […]

ಕನ್ನಡ ದುನಿಯಾ 7 Feb 2026 2:49 pm

ಅಂಡರ್ 19 ವಿಶ್ವಕಪ್ ಗೆದ್ದ ಬೆನ್ನಲ್ಲೇ ಬಾಂಗ್ಲಾದೇಶ ಕಾಲೆಳೆದ ವೈಭವ್ ಸೂರ್ಯವಂಶಿ; ವಿಡಿಯೊ

ನಿನ್ನೆ ( ಫೆಬ್ರವರಿ 6 ) ಹರಾರೆ ಕ್ರೀಡಾಂಗಣದಲ್ಲಿ ನಡೆದ ಅಂಡರ್ 19 ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಭಾರತ ಇಂಗ್ಲೆಂಡ್ ವಿರುದ್ಧ 100 ರನ್‌ಗಳ ಗೆಲುವನ್ನು ದಾಖಲಿಸಿ ಆರನೇ ಬಾರಿಗೆ ಅಂಡರ್ 19 ವಿಶ್ವಕಪ್ ಟ್ರೋಫಿಯನ್ನು ಎತ್ತಿಹಿಡಿದಿದೆ. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ವೈಭವ್ ಸೂರ್ಯವಂಶಿ ದಾಖಲೆಯ ಶತಕದ ನೆರವಿನಿಂದ 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ ಬರೋಬ್ಬರಿ 411 ರನ್ ಕಲೆಹಾಕಿ ಇಂಗ್ಲೆಂಡ್‌ಗೆ 412 ರನ್‌ಗಳ ಕಠಿಣ ಗುರಿಯನ್ನು ನೀಡಿತ್ತು. ಈ ಗುರಿಯನ್ನು […]

ಕನ್ನಡ ದುನಿಯಾ 7 Feb 2026 2:19 pm

ಮಗ ಶಿಕ್ಷಕನಾದರೂ ಬುದ್ಧಿ ಮಾತ್ರ ಮೃಗೀಯ; 80 ವರ್ಷದ ತಾಯಿಯನ್ನು ಅನಾಥವಾಗಿ ಬಿಟ್ಟು ಹೋದ ಕಟುಕನ ಕೃತ್ಯಕ್ಕೆ ಜಗತ್ತೇ ಉಗಿದಿದೆ

ಮಧ್ಯಪ್ರದೇಶದ ಮಂದಸೌರ್ ಜಿಲ್ಲೆಯ ಬಸ್ ನಿಲ್ದಾಣವೊಂದು ಮನಕಲಕುವ ಘಟನೆಗೆ ಸಾಕ್ಷಿಯಾಗಿದೆ. ಸುಮಾರು 80 ವರ್ಷದ ವೃದ್ಧೆಯೊಬ್ಬರು ತುಂಬಿದ ಬಸ್ ನಿಲ್ದಾಣದಲ್ಲಿ ಅನಾಥವಾಗಿ ಕುಳಿತು ಕಣ್ಣೀರಿಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ನೂರಾರು ಜನರ ನಡುವೆ ಅಸಹಾಯಕಳಾಗಿ ರೋದಿಸುತ್ತಿದ್ದ ಈ ತಾಯಿಯ ಸ್ಥಿತಿ ಕಂಡು ಸಾರ್ವಜನಿಕರು ಮರುಗಿದ್ದಾರೆ. ವೈರಲ್ ಆಗಿರುವ ವಿಡಿಯೋದಲ್ಲಿರುವ ಮಾಹಿತಿಯ ಪ್ರಕಾರ, ಈ ವೃದ್ಧೆಯನ್ನು ಆಕೆಯ ಮಗನೇ ಅನಾಥವಾಗಿ ಬಿಟ್ಟು ಹೋಗಿದ್ದಾನೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ವಿಶೇಷವೆಂದರೆ ಆ ಮಗ ವೃತ್ತಿಯಲ್ಲಿ […]

ಕನ್ನಡ ದುನಿಯಾ 7 Feb 2026 2:00 pm

ಶಿವಮೊಗ್ಗ : ನಾಳೆ, ನಾಡಿದ್ದು ಜಿಲ್ಲೆಯ ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ |Power Cut

ಶಿವಮೊಗ್ಗ : ನಾಳೆ, ನಾಡಿದ್ದು ಜಿಲ್ಲೆಯ ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ( Power Cut) ಎಂದು ಪ್ರಕಟಣೆ ತಿಳಿಸಿದೆ. ಶಿವಮೊಗ್ಗ, ತಾವರೆಚಟ್ನಹಳ್ಳಿ ವಿದ್ಯುತ್ ಸ್ವೀಕರಣ ಕೇಂದ್ರದಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿದ್ದು, ಫೆ.08 ಮತ್ತು 09 ರಂದು ಬೆಳಗ್ಗೆ 09.00 ರಿಂದ ಸಂಜೆ 5.00 ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ. ಕುವೆಂಪುನಗರದ ಸೂಡ ಸಿ ಮತ್ತು ಡಿ ಬ್ಲಾಕ್, ಶಿವಕುಮಾರ‍ಸ್ವಾಮಿ ಲೇಔಟ್ ಮತ್ತು ಇನ್ಫ್ರಾ ಸಿಟಿ ಹಾಗೂ ಕೊಮ್ಮನಾಳ್, ಬಿಕ್ಕೋನಹಳ್ಳಿ, ಬೂದಿಗೆರೆ, ಬೀರನಕೆರೆ, […]

ಕನ್ನಡ ದುನಿಯಾ 7 Feb 2026 1:51 pm

SHOCKING : ಬಿಹಾರದಲ್ಲಿ ಕರ್ನಾಟಕದ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ : ‘ಫ್ರೀ ಫೈರ್’ಗೇಮ್ ಚಟಕ್ಕೆ ಇಡೀ ಸಂಸಾರ ಬಲಿ !

ರಾಜಗೀರ್ (ಬಿಹಾರ): ಆನ್ಲೈನ್ ಗೇಮ್ ವ್ಯಸನ ಎಷ್ಟು ಅಪಾಯಕಾರಿ ಎಂಬುದಕ್ಕೆ ಸಾಕ್ಷಿಯಾಗಿ ಬಿಹಾರದಲ್ಲಿ ಒಂದು ಹೃದಯವಿದ್ರಾವಕ ಘಟನೆ ನಡೆದಿದೆ. ಕರ್ನಾಟಕ ಮೂಲದ (ಬೆಂಗಳೂರು/ತುಮಕೂರು) ಒಂದೇ ಕುಟುಂಬದ ನಾಲ್ವರು ಸದಸ್ಯರು ಬಿಹಾರದ ನಾಲಂದಾ ಜಿಲ್ಲೆಯ ರಾಜಗೀರ್ನಲ್ಲಿರುವ ಧರ್ಮಶಾಲೆಯೊಂದರಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆಯ ವಿವರ:ಕರ್ನಾಟಕದ ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಈ ಕುಟುಂಬವು ಸುಮಾರು ಒಂದು ವಾರದ ಹಿಂದೆ ಬಿಹಾರದ ಪ್ರವಾಸಿ ತಾಣವಾದ ರಾಜಗೀರ್ಗೆ ಭೇಟಿ ನೀಡಿತ್ತು. ಅಲ್ಲಿನ ಧರ್ಮಶಾಲೆಯೊಂದರಲ್ಲಿ ತಂಗಿದ್ದ ಇವರ ಕೊಠಡಿಯಿಂದ ದುರ್ವಾಸನೆ ಬರುತ್ತಿದ್ದನ್ನು […]

ಕನ್ನಡ ದುನಿಯಾ 7 Feb 2026 1:45 pm

ಮೈದಾನದಲ್ಲೇ ಕುಸಿದು ಬಿದ್ದ ಆಟಗಾರ: ರತ್ನಗಿರಿಯಲ್ಲಿ ಕ್ರಿಕೆಟ್ ಪಂದ್ಯದ ವೇಳೆ ಲೈವ್ ಕ್ಯಾಮೆರಾದಲ್ಲೇ ಸೆರೆಯಾಯ್ತು ಕ್ರೀಡಾಪಟುವಿನ ಸಾವು

ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯಲ್ಲಿ ಕ್ರೀಡಾಭಿಮಾನಿಗಳು ಬೆಚ್ಚಿಬೀಳುವಂತಹ ಘಟನೆಯೊಂದು ನಡೆದಿದೆ. ಸ್ಥಳೀಯ ಕ್ರಿಕೆಟ್ ಪಂದ್ಯವೊಂದು ನಡೆಯುತ್ತಿದ್ದಾಗಲೇ ಪ್ರವೀಣ್ ಪವಾರ್ ಎಂಬ ಆಟಗಾರ ಹೃದಯಾಘಾತದಿಂದ ಪಿಚ್ ಮೇಲೆಯೇ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಈ ಘಟನೆಯ ದೃಶ್ಯಗಳು ನೇರ ಪ್ರಸಾರವಾಗುತ್ತಿದ್ದ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆತಂಕ ಮೂಡಿಸಿವೆ. ರತ್ನಗಿರಿಯ ಚಿಂಚಖಾರಿ ಎಂಬಲ್ಲಿ ಪಂದ್ಯ ನಡೆಯುತ್ತಿದ್ದಾಗ ಈ ದುರಂತ ಸಂಭವಿಸಿದೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಪ್ರವೀಣ್ ಪವಾರ್ ಅವರು ಪಂದ್ಯದ ವೇಳೆ ಅತ್ಯಂತ ಸಕ್ರಿಯರಾಗಿದ್ದರು. ಅಂಪೈರ್ ಬಳಿ ನಿಂತಿದ್ದ ಅವರು ಇದ್ದಕ್ಕಿದ್ದಂತೆ […]

ಕನ್ನಡ ದುನಿಯಾ 7 Feb 2026 1:15 pm

ಮಹಾಶಿವರಾತ್ರಿ ಹಬ್ಬ ಫೆ. 15 ಅಥವಾ 16 ಕ್ಕೋ..? ಗೊಂದಲಕ್ಕೆ ತೆರೆ ಎಳೆದ ಜ್ಯೋತಿಷಿಗಳು !

ಬೆಂಗಳೂರು: ಪ್ರತಿ ವರ್ಷದಂತೆ ಈ ಬಾರಿಯೂ ಮಹಾ ಶಿವರಾತ್ರಿ ಹಬ್ಬದ ದಿನಾಂಕದ ಬಗ್ಗೆ ಭಕ್ತರಲ್ಲಿ ಗೊಂದಲ ಉಂಟಾಗಿದೆ. ಕೆಲವು ಕ್ಯಾಲೆಂಡರ್‌ಗಳಲ್ಲಿ ಫೆಬ್ರವರಿ 15 ಎಂತಿದ್ದರೆ, ಇನ್ನು ಕೆಲವು ಕಡೆ ಫೆಬ್ರವರಿ 16 ಎಂದು ನಮೂದಿಸಲಾಗಿದೆ. ಈ ಗೊಂದಲಕ್ಕೆ ಜ್ಯೋತಿಷಿಗಳು ಶಾಸ್ತ್ರೋಕ್ತವಾಗಿ ಉತ್ತರ ನೀಡಿದ್ದಾರೆ. ಹಿಂದೂ ಪಂಚಾಂಗದ ಪ್ರಕಾರ, ಮಾಘ ಮಾಸದ ಕೃಷ್ಣ ಪಕ್ಷದ ಚತುರ್ದಶಿ ತಿಥಿಯಂದು ಮಹಾ ಶಿವರಾತ್ರಿಯನ್ನು ಆಚರಿಸಲಾಗುತ್ತದೆ. 2026ರಲ್ಲಿ ಈ ಚತುರ್ದಶಿ ತಿಥಿಯು ಎರಡು ದಿನಗಳ ಕಾಲ ಹರಡಿಕೊಂಡಿದೆ: ಜ್ಯೋತಿಷಿಗಳು ಹೇಳೋದು ಫೆಬ್ರವರಿ 15 […]

ಕನ್ನಡ ದುನಿಯಾ 7 Feb 2026 1:12 pm

ಕಿವಿಯಲ್ಲಿ ಇಯರ್‌ಫೋನ್ ಇಟ್ಟುಕೊಳ್ಳುವ ಮುನ್ನ ಹುಷಾರ್: ಸ್ಫೋಟದ ತೀವ್ರತೆಗೆ ಯುವತಿಯ ಶ್ರವಣ ಶಕ್ತಿ ಸಾವು

ಇತ್ತೀಚಿನ ದಿನಗಳಲ್ಲಿ ವಯಸ್ಸಿನ ಭೇದವಿಲ್ಲದೆ ಪ್ರತಿಯೊಬ್ಬರೂ ವೈರ್‌ಲೆಸ್ ಇಯರ್‌ಬಡ್ಸ್‌ಗಳನ್ನು ಬಳಸುತ್ತಿದ್ದಾರೆ. ಆದರೆ, ತುರ್ಕಿಯಲ್ಲಿ ನಡೆದ ಭೀಕರ ಘಟನೆಯೊಂದು ಈಗ ಇಡೀ ವಿಶ್ವವನ್ನೇ ಬೆಚ್ಚಿಬೀಳಿಸಿದೆ. ಯುವತಿಯೊಬ್ಬಳು ಇಯರ್‌ಬಡ್ಸ್ ಧರಿಸಿದ್ದಾಗ ಅದು ಕಿವಿಯಲ್ಲೇ ಸ್ಫೋಟಗೊಂಡಿದ್ದು, ಇದರ ಪರಿಣಾಮವಾಗಿ ಆಕೆ ಶಾಶ್ವತವಾಗಿ ಕೇಳುವ ಸಾಮರ್ಥ್ಯವನ್ನು ಕಳೆದುಕೊಂಡಿದ್ದಾಳೆ. ಈ ಘಟನೆಯ ಬಗ್ಗೆ ಬ್ರ್ಯಾಂಡ್‌ನ ಫೋರಂನಲ್ಲಿ ಮಾಹಿತಿ ಹಂಚಿಕೊಳ್ಳಲಾಗಿದ್ದು, ಸ್ಫೋಟಕ್ಕೆ ನಿಖರವಾದ ಕಾರಣವೇನೆಂಬುದು ಇನ್ನೂ ತಿಳಿದುಬಂದಿಲ್ಲ. ಇಯರ್‌ಫೋನ್ ಇಲ್ಲದೆ ಜೀವನವೇ ಇಲ್ಲ ಎನ್ನುವಂತಾಗಿರುವ ಈ ಕಾಲದಲ್ಲಿ, ಇಂತಹ ಘಟನೆಗಳು ಸ್ಮಾರ್ಟ್‌ಫೋನ್ ಬಳಕೆದಾರರಲ್ಲಿ ಭೀತಿ ಹುಟ್ಟಿಸಿವೆ. […]

ಕನ್ನಡ ದುನಿಯಾ 7 Feb 2026 1:11 pm

BREAKING : ಮುಂಬೈ ಮಹಾನಗರ ಪಾಲಿಕೆಯ ನೂತನ ಮೇಯರ್ ಆಗಿ ಬಿಜೆಪಿಯ ‘ರಿತು ತಾವ್ಡೆ’ಆಯ್ಕೆ !

ಮುಂಬೈ : ದೇಶದ ಅತ್ಯಂತ ಶ್ರೀಮಂತ ಮಹಾನಗರ ಪಾಲಿಕೆಯಾದ ಬೃಹನ್ಮುಂಬೈ ಮಹಾನಗರ ಪಾಲಿಕೆಯಲ್ಲಿ (BMC) ಐತಿಹಾಸಿಕ ಬದಲಾವಣೆ ಸಂಭವಿಸಿದೆ. ಕಳೆದ 25 ವರ್ಷಗಳಿಂದ ಪಾಲಿಕೆಯನ್ನು ಆಳುತ್ತಿದ್ದ ಶಿವಸೇನೆಯ ಕೈಯಿಂದ ಮೇಯರ್ ಪಟ್ಟ ಇದೀಗ ಬಿಜೆಪಿಯ ಪಾಲಾಗಿದೆ. ಬಿಜೆಪಿಯ ರಿತುತಾವ್ಡೆ ಅವರು ಮುಂಬೈನ ನೂತನ ಮೇಯರ್ ಆಗಿ ಆಯ್ಕೆಯಾಗಿದ್ದಾರೆ. :1997ರಿಂದ ಸತತವಾಗಿ ಬಿಎಂಸಿಯಲ್ಲಿ ಅಧಿಕಾರ ಚಲಾಯಿಸುತ್ತಿದ್ದ ಶಿವಸೇನೆ (ಈಗಿನ ಯುಬಿಟಿ ಬಣ), ಕಾಲು ಶತಮಾನದ ನಂತರ ಮೊದಲ ಬಾರಿಗೆ ಮೇಯರ್ ಪಟ್ಟವನ್ನು ಕಳೆದುಕೊಂಡಿದೆ. ಘಾಟ್ಕೋಪರ್‌ನ ಎರಡು ಬಾರಿಯ ಕಾರ್ಪೊರೇಟರ್ […]

ಕನ್ನಡ ದುನಿಯಾ 7 Feb 2026 1:01 pm

T20 World Cup 2026: ಟೂರ್ನಿ ಆರಂಭ; ಮೊದಲ ಪಂದ್ಯದಲ್ಲಿ ಪಾಕಿಸ್ತಾನಕ್ಕೆ ಸಾಮಾನ್ಯ ಗುರಿ ನೀಡಿದ ನೆದರ್ಲೆಂಡ್ಸ್

ಕೊಲಂಬೊ: ಪ್ರೇಮದಾಸ ಕ್ರೀಡಾಂಗಣದಲ್ಲಿ 2026ರ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ ಉದ್ಘಾಟನಾ ಪಂದ್ಯ ನಡೆಯುತ್ತಿದ್ದು, ಈ ಪಂದ್ಯದಲ್ಲಿ ಪಾಕಿಸ್ತಾನ ಹಾಗೂ ನೆದರ್ಲೆಂಡ್ಸ್ ತಂಡಗಳು ಮುಖಾಮುಖಿಯಾಗಿವೆ. ಪಂದ್ಯದಲ್ಲಿ ಟಾಸ್ ಗೆದ್ದು ಫೀಲ್ಡಿಂಗ್ ಆರಿಸಿಕೊಂಡ ಪಾಕಿಸ್ತಾನ ಎದುರಾಳಿ ನೆದರ್ಲೆಂಡ್ಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ಅದರಂತೆ ನೆದರ್ಲೆಂಡ್ಸ್ 19.5 ಓವರ್‌ಗಳಲ್ಲಿ 147ಕ್ಕೆ ಆಲ್‌ಔಟ್ ಆಗಿ ಪಾಕಿಸ್ತಾನಕ್ಕೆ 148 ರನ್‌ಗಳ ಗುರಿಯನ್ನು ನೀಡಿದೆ. ನೆದರ್ಲೆಂಡ್ಸ್ ಪರ ಆರಂಭಿಕರಾಗಿ ಕಣಕ್ಕಿಳಿದ ಮೈಕೆಲ್ ಲೆವಿಟ್ 24, ಮ್ಯಾಕ್ಸ್ ಓಡೌಡ್ 5, ಬಾಸ್ ಡಿ […]

ಕನ್ನಡ ದುನಿಯಾ 7 Feb 2026 12:56 pm

ಸ್ಕೂಟಿಗೆ ಕಬ್ಬು ತುಂಬಿದ್ದ ಟ್ರ್ಯಾಕ್ಟರ್ ಡಿಕ್ಕಿ: ಅಪಘಾತದಲ್ಲಿ ಮಹಿಳೆ ಸ್ಥಳದಲ್ಲೇ ಸಾವು

ಬೆಳಗಾವಿ: ಎಲೆಕ್ಟ್ರಿಕ್ ಸ್ಕೂಟಿ ಹಾಗೂ ಕಬ್ಬು ತುಂಬಿದ ಟ್ರ್ಯಾಕ್ಟರ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಸ್ಕೂಟಿಯಲ್ಲಿದ್ದ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಸಂಗನಕೇರಿ ಬಳಿ ಈ ದುರಂತ ಸಂಭವಿಸಿದೆ. ವಡೇರಹಟ್ಟಿ ನಿವಾಸಿ ಅನಿತಾ ಡೂಗನವರ (26) ಮೃತ ಮಹಿಳೆ ಎಂದು ಗುರುತಿಸಲಾಗಿದೆ. ಮಹಿಳೆ ಅನಿತಾ ತನ್ನ ಗಂಡನ ಜೊತೆ ಲೋಳಸೂರ ಬಸ್ ನಿಲ್ದಾಣಕ್ಕೆ ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಕಬ್ಬು ತುಂಬಿದ ಟ್ರ್ಯಾಕ್ಟರ್ ಸ್ಕೂಟಿಗೆ […]

ಕನ್ನಡ ದುನಿಯಾ 7 Feb 2026 12:49 pm

BREAKING : ಸಾಲಗಾರನ ಮನೆ ಎದುರೇ ಬೆಂಕಿ ಹಚ್ಚಿಕೊಂಡು ಕೊಡಗಿನ ಉದ್ಯಮಿ ಆತ್ಮಹತ್ಯೆ : ಮಕ್ಕಳ ರಕ್ಷಣೆ, ಪತ್ನಿ ಸ್ಥಿತಿ ಗಂಭೀರ.!

ನಂಬಿ ಕೊಟ್ಟ ಸಾಲ ವಾಪಸ್ ಬಾರದಿದ್ದಕ್ಕೆ ಮನನೊಂದ ಕೊಡಗಿನ ಉದ್ಯಮಿಯೊಬ್ಬರು ತನ್ನ ಕುಟುಂಬದೊಂದಿಗೆ ಕಾರಿಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಭೀಕರ ಘಟನೆ ಕೇರಳದ ವಯನಾಡಿನಲ್ಲಿ ನಡೆದಿದೆ. ಈ ದುರ್ಘಟನೆಯಲ್ಲಿ ಉದ್ಯಮಿ ಸಾವನ್ನಪ್ಪಿದ್ದು, ಪತ್ನಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಘಟನೆಯ ಹಿನ್ನೆಲೆಕೊಡಗು ಮೂಲದ ಉದ್ಯಮಿ ಸಜೀರ್, ಕೇರಳದ ವಯನಾಡ್ ನಿವಾಸಿ ಬಾಪು ಎಂಬುವವರಿಗೆ ಸುಮಾರು 20 ಲಕ್ಷ ರೂಪಾಯಿ ಸಾಲ ನೀಡಿದ್ದರು ಎನ್ನಲಾಗಿದೆ. ಆದರೆ, ಸಾಲ ಪಡೆದಿದ್ದ ಬಾಪು ಹಣವನ್ನು ವಾಪಸ್ ನೀಡದೆ ಸಜೀರ್ ಅವರಿಗೆ ಹಲವು […]

ಕನ್ನಡ ದುನಿಯಾ 7 Feb 2026 12:39 pm

12 ದಿನಗಳ ಕಾಲ ರಸ್ತೆಯಲ್ಲೇ ವಾಸವಿದ್ದ ಸಾವಿರಾರು ಜನ: ಚೀನಾದಲ್ಲಿ ನಡೆದ ವಿಶ್ವದ ಭೀಕರ ಟ್ರಾಫಿಕ್ ಜಾಮ್‌ನ ಕಥೆ ಇಲ್ಲಿದೆ

ಇತ್ತೀಚೆಗೆ ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇನಲ್ಲಿ ಉಂಟಾದ 32 ಗಂಟೆಗಳ ಟ್ರಾಫಿಕ್ ಜಾಮ್ ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿತ್ತು. ಆದರೆ, ವಿಶ್ವದ ಇತಿಹಾಸದಲ್ಲೇ ಅತ್ಯಂತ ಭೀಕರ ಎನ್ನಲಾದ ಟ್ರಾಫಿಕ್ ಜಾಮ್ ಬರೋಬ್ಬರಿ 12 ದಿನಗಳ ಕಾಲ ನಡೆದಿತ್ತು ಎಂದರೆ ನೀವು ನಂಬಲೇಬೇಕು. 100 ಕಿಲೋಮೀಟರ್‌ಗಿಂತಲೂ ಹೆಚ್ಚು ಉದ್ದದ ಈ ವಾಹನಗಳ ಸಾಲು ಜಗತ್ತನ್ನೇ ಅಚ್ಚರಿಗೊಳಿಸಿತ್ತು. ಚೀನಾದಲ್ಲಿ ನಡೆದ ಆ 12 ದಿನಗಳ ನರಕ ಸದೃಶ ದೃಶ್ಯ 2010ರ ಆಗಸ್ಟ್‌ನಲ್ಲಿ ಚೀನಾದ ಬೀಜಿಂಗ್-ಟಿಬೆಟ್ ಎಕ್ಸ್‌ಪ್ರೆಸ್‌ವೇನಲ್ಲಿ ಈ ಮಹಾನ್ ಟ್ರಾಫಿಕ್ ಜಾಮ್ ಸಂಭವಿಸಿತ್ತು. ಹೆದ್ದಾರಿಯಲ್ಲಿ […]

ಕನ್ನಡ ದುನಿಯಾ 7 Feb 2026 12:30 pm

BIG UPDATE : ಓಲಾ, ಉಬರ್, ರ್ಯಾಪಿಡೋ ಚಾಲಕರಿಂದ ದೇಶವ್ಯಾಪಿ ಮುಷ್ಕರ : ಪ್ರಮುಖ ಬೇಡಿಕೆಗಳೇನು ?

ನವದೆಹಲಿ : ದೇಶದ ಪ್ರಮುಖ ನಗರಗಳಲ್ಲಿ ಇಂದು ಆ್ಯಪ್ ಆಧಾರಿತ ಸಾರಿಗೆ ವ್ಯವಸ್ಥೆ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. ಚಾಲಕರ ಶೋಷಣೆ ಮತ್ತು ಸರ್ಕಾರದ ನೀತಿಗಳನ್ನು ವಿರೋಧಿಸಿ ‘ಇಂಡಿಯನ್ ಫೆಡರೇಶನ್ ಆಫ್ ಆಪ್ ಬೇಸ್ಡ್ ಟ್ರಾನ್ಸ್ಪೋರ್ಟ್ ವರ್ಕರ್ಸ್’ (IFAT) ಮತ್ತು ತೆಲಂಗಾಣ ಗಿಗ್ ವರ್ಕರ್ಸ್ ಯೂನಿಯನ್ (TGPWU) ನೀಡಿರುವ ‘ಆಲ್ ಇಂಡಿಯಾ ಬ್ರೇಕ್ಡೌನ್’ ಕರೆಗೆ ಚಾಲಕರಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಹೌದು. ದೇಶಾದ್ಯಂತ ಅಪ್ಲಿಕೇಶನ್ ಆಧಾರಿತ ಸಾರಿಗೆ ವಲಯದಲ್ಲಿ ಕೆಲಸ ಮಾಡುವ ಲಕ್ಷಾಂತರ ಚಾಲಕರು ಇಂದು (ಫೆಬ್ರವರಿ 7, 2026) […]

ಕನ್ನಡ ದುನಿಯಾ 7 Feb 2026 12:23 pm

JOB ALERT : ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್ : ಭಾರತೀಯ ರೈಲ್ವೇ ಇಲಾಖೆಯಲ್ಲಿ 1.5 ಲಕ್ಷ ಹುದ್ದೆಗಳ ನೇಮಕಾತಿ.!

ನವದೆಹಲಿ : ಭಾರತೀಯ ರೈಲ್ವೆಯಲ್ಲಿ ಉದ್ಯೋಗಕ್ಕಾಗಿ ಕಾಯುತ್ತಿರುವ ಉದ್ಯೋಗಾಂಕ್ಷಿಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ. ಭಾರತೀಯ ರೈಲ್ವೇ ಇಲಾಖೆಯಲ್ಲಿ ಶೀಘ್ರವೇ 1.5 ಲಕ್ಷ ಹುದ್ದೆಗಳಿಗೆ ನೇಮಕಾತಿ ನಡೆಸಲಿದೆ ಎಂದು ತಿಳಿದು ಬಂದಿದೆ. ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಇತ್ತೀಚೆಗೆ ಈ ಬಗ್ಗೆ ಅಧಿಕೃತ ಮಾಹಿತಿಯನ್ನು ನೀಡಿದ್ದಾರೆ. ಸುಮಾರು 1.5 ಲಕ್ಷ (1,50,000) ಹೊಸ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಇನ್ನು ಮುಂದೆ ರೈಲ್ವೆ ನೇಮಕಾತಿಯಲ್ಲಿ ಗೊಂದಲ ಇರುವುದಿಲ್ಲ. ಪ್ರತಿ ವರ್ಷ ಜನವರಿಯಿಂದ ಆರಂಭವಾಗಿ ವಿವಿಧ ಹಂತಗಳಲ್ಲಿ […]

ಕನ್ನಡ ದುನಿಯಾ 7 Feb 2026 12:05 pm

BIG NEWS: ಸಿಎಂ ಆಗುವ ಆಸೆ ಎಲ್ಲರಿಗೂ ಇದೆ: ಸಮಯವೇ ಉತ್ತರ ನೀಡುತ್ತದೆ ಎಂದ ಡಿಸಿಎಂ ಡಿ.ಕೆ.ಶಿವಕುಮಾರ್

ಮಂಗಳೂರು: ನಾನು ಮುಖ್ಯಮಂತ್ರಿಯಾಗಬೇಕು ಎಂಬ ಕನಸು ಜನರಿಗೂ ಇದೆ, ಶಾಸಕರಿಗೂ ಇದೆ, ನಿಮಗೆ ಮಾಧ್ಯಮದವರಿಗೂ ಇದೆ. ಪಕ್ಷ ಏನು ಹೇಳುತ್ತದೆ ಅದನ್ನು ಕೇಳಬೇಕು. ಎಲ್ಲದಕ್ಕೂ ಸಮಯವೇ ಉತ್ತರ ನೀಡುತ್ತದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ಸಿಎಂ ಆಗಬೇಕು ಎಂಬ ಆಸೆ ಎಲ್ಲರಿಗೂ ಇದೆ. ನಾನು ಸಿಎಂ ಆಗಬೇಕು ಎಂಬ ಕನಸು ಜನರಿಗೆ, ಶಾಸಕರಿಗೆ ಎಲ್ಲರಿಗೂ ಇದೆ. ಆದರೆ ಪಕ್ಷ ಏನು ಹೇಳುತ್ತದೆ ಅದನ್ನು ಕೇಳಬೇಕು ಎಂದರು. ರಾಜ್ಯ ಬಜೆಟ್ ಬಳಿಕ […]

ಕನ್ನಡ ದುನಿಯಾ 7 Feb 2026 12:03 pm

BIG NEWS: ಶಾಸಕ ಶಿವಲಿಂಗೇಗೌಡ ಹೇಳಿಕೆಗೆ ನಟ ಜಗ್ಗೇಶ್ ತಿರುಗೇಟು: ಒಮ್ಮೆ ಸಂಘಕ್ಕೆ ಭೇಟಿ ನೀಡಿ ಎಂದು ಆಹ್ವಾನ

ಬೆಂಗಳೂರು: ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡ ವಿಧಾನಸಭೆಯಲ್ಲಿ ಮಾತನಾಡುತ್ತಾ ಆರ್.ಎಸ್.ಎಸ್ ವಿರುದ್ಧ ವಾಗ್ದಾಳಿ ನಡೆಸಿದ್ದರು. ಹಗುರವಗೈ ಮಾತನಾಡಿದ್ದರು. ಇದೇ ವಿಚಾರವಾಗಿ ಶಾಸಕರಿಗೆ ತಿರುಗೇಟು ನೀದಿರುವ ನಟ ಜಗ್ಗೇಶ್, ಶಿವಲಿಂಗೇಗೌಡರನ್ನು ಸಂಘಕ್ಕೆ ಭೇಟಿ ನೀಡುವಂತೆ ಆಹ್ವಾನ ನೀಡಿದ್ದಾರೆ. ಆರ್​​ಎಸ್​​ಎಸ್​ ಬಗ್ಗೆ ಶಾಸಕ ಶಿವಲಿಂಗೇಗೌಡ ಅವರು ಹಗುರವಾಗಿ ಮಾತನಾಡಿದ್ದನ್ನು ಬಿಜೆಪಿ ಹಾಗೂ ಆರ್.ಎಸ್.ಎಸ್ ನಾಯಕರನ್ನು ಕೆರಳಿಸಿತ್ತು. ಶಾಸಕರು ಆಡಿರುವ ಮಾತು ಸರಿಯಲ್ಲ ಎಂದು ಕಿಡಿಕಾರಿದ್ದರು. ಈಗ ನಟ ಹಾಗೂ ರಾಜ್ಯ ಸಭಾ ಸದಸ್ಯ ಜಗ್ಗೇಶ್ ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯೆ […]

ಕನ್ನಡ ದುನಿಯಾ 7 Feb 2026 11:31 am

BREAKING : ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಶಂಕಿತ ಉಗ್ರ ಸಾವು.!

ಬೆಂಗಳೂರು : ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಯಾಗಿದ್ದ ಶಂಕಿತ ಭಯೋತ್ಪಾದಕ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ. ಶಂಕಿತ ಭಯೋತ್ಪಾದಕ ಸಾಧಿಕ್ ಪಾಷಾ (47) ಸಾವನ್ನಪ್ಪಿದ್ದಾನೆ ಎಂದು ವರದಿಯಾಗಿದೆ.ಪ್ರಾಥಮಿಕ ವರದಿಗಳ ಪ್ರಕಾರ, ಆತ ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಎನ್ನಲಾಗಿದೆ. ಸದ್ದುಗುಂಟೆ ಪಾಳ್ಯದಲ್ಲಿ ನಡೆದ ಸ್ಪೋಟಕ ವಸ್ತು ಸಂಗ್ರಹ ಪ್ರಕರಣದಲ್ಲಿ ಈತನನನ್ನು ಪೊಲೀಸರು ಬಂಧಿಸಿದ್ದರು. 2020 ರಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿ ಈತನನ್ನು ಇರಿಸಲಾಗಿತ್ತು. ಸದ್ದುಗುಂಟೆ ಪಾಳ್ಯದಲ್ಲಿ ನಡೆದ ಸ್ಪೋಟಕ ವಸ್ತು ಸಂಗ್ರಹ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ ಐ […]

ಕನ್ನಡ ದುನಿಯಾ 7 Feb 2026 11:22 am

ದಾಂಡೇಲಿ-ಅಳ್ನಾವರ ನೂತನ ರೈಲು: ವೇಳಾಪಟ್ಟಿ, ಪ್ರಯೋಜನಗಳು

ದಾಂಡೇಲಿ-ಅಳ್ನಾವರ ನಡುವಿನ ನೂತನ ಡೆಮು ರೈಲು ಸೇವೆಗೆ ಫೆಬ್ರವರಿ 7ರ ಶನಿವಾರ ಚಾಲನೆ ಸಿಗಲಿದೆ. ದಾಂಡೇಲಿ ರೈಲ್ವೆ ನಿಲ್ದಾಣದಲ್ಲಿ ತುಮಕೂರ ಸಂಸದ, ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ರೈಲು ಸೇವೆಗೆ ಹಸಿರು ನಿಶಾನೆ ತೋರಿಸಲಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿರುವ ಅವರು, ‘ಕರ್ನಾಟಕದ ಜನತೆಗಾಗಿ ಸುಧಾರಿತ ರೈಲ್ವೆ ಸಂಪರ್ಕ ಫೆಬ್ರವರಿ 07 ಶನಿವಾರದಂದು ದಾಂಡೇಲಿ ರೈಲ್ವೆ ನಿಲ್ದಾಣದಲ್ಲಿ ದಾಂಡೇಲಿ-ಅಳ್ನಾವರ ನಡುವೆ ನೂತನ ಡೆಮು ರೈಲು ಸೇವೆಗೆ ಹಸಿರು ನಿಶಾನೆ ತೋರಲಾಗುವುದು’ ಎಂದು […]

ಕನ್ನಡ ದುನಿಯಾ 7 Feb 2026 11:20 am

PNB Recruitment 2026: ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಲ್ಲಿ 5,138 ಹುದ್ದೆಗಳ ಭರ್ತಿ ಆರಂಭ

ಬೆಂಗಳೂರು: ಬ್ಯಾಂಕಿಂಗ್ ಕ್ಷೇತ್ರದಲ್ಲಿ ವೃತ್ತಿಜೀವನ ಆರಂಭಿಸುವ ಕನಸು ಹೊತ್ತಿರುವ ಯುವಜನತೆಗೆ ದೇಶದ ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕ್ ಆದ ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) ಭರ್ಜರಿ ಸಿಹಿ ಸುದ್ದಿ ನೀಡಿದೆ. ದೇಶಾದ್ಯಂತ ಇರುವ ತನ್ನ ವಿವಿಧ ಶಾಖೆಗಳಲ್ಲಿ ಖಾಲಿ ಇರುವ ಬರೋಬ್ಬರಿ 5,138 ಗ್ರಾಜುಯೇಟ್ ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ಬ್ಯಾಂಕ್ ಅಧಿಕೃತವಾಗಿ ಹಸಿರು ನಿಶಾನೆ ತೋರಿಸಿದೆ. ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪೂರೈಸಿದ ಅಭ್ಯರ್ಥಿಗಳಿಗೆ ಇದು ಸುವರ್ಣಾವಕಾಶವಾಗಿದ್ದು, ಬ್ಯಾಂಕಿಂಗ್ ಪ್ರಪಂಚದ ಪ್ರಾಯೋಗಿಕ ಜ್ಞಾನ ಪಡೆಯಲು ಈ […]

ಕನ್ನಡ ದುನಿಯಾ 7 Feb 2026 11:16 am

Gold Rate Today: ಚಿನ್ನ ಪ್ರಿಯರಿಗೆ ಬಿಗ್ ಶಾಕ್ ಒಂದೇ ದಿನದಲ್ಲಿ ₹28,900 ದಿಢೀರ್ ಏರಿಕೆ

ಬೆಂಗಳೂರು: ಕಳೆದ ಎರಡು ದಿನಗಳಿಂದ ಸತತವಾಗಿ ಇಳಿಕೆ ಕಂಡು ನಿಟ್ಟುಸಿರು ಬಿಟ್ಟಿದ್ದ ಚಿನ್ನದ ಪ್ರಿಯರಿಗೆ ಇಂದು (ಶನಿವಾರ, ಫೆಬ್ರವರಿ 7) ದೊಡ್ಡ ಆಘಾತ ಎದುರಾಗಿದೆ. ವಾರವಿಡೀ ಕುಸಿತದ ಹಾದಿಯಲ್ಲಿದ್ದ ಹಳದಿ ಲೋಹದ ಬೆಲೆ, ಇಂದು ದಿಢೀರನೆ ಏರಿಕೆಯಾಗುವ ಮೂಲಕ ಗ್ರಾಹಕರ ಲೆಕ್ಕಾಚಾರವನ್ನು ಉಲ್ಟಾ ಮಾಡಿದೆ. ಕಳೆದ ಎರಡು ದಿನಗಳ ಇಳಿಕೆಯ ಹಾದಿ:ಶನಿವಾರದ ಏರಿಕೆಗೂ ಮುನ್ನ ಚಿನ್ನದ ಮಾರುಕಟ್ಟೆ ಸಖತ್ ಕೂಲ್ ಆಗಿತ್ತು.ಗುರುವಾರ (ಫೆ. 05): 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಬರೋಬ್ಬರಿ ₹502 ಇಳಿಕೆಯಾಗಿತ್ತು.ಶುಕ್ರವಾರ (ಫೆ. 06): […]

ಕನ್ನಡ ದುನಿಯಾ 7 Feb 2026 11:16 am

BREAKING : ಹಿರಿಯ ಪತ್ರಕರ್ತ ಕೆ.ವಿ.ಶ್ರೀನಿವಾಸನ್ ನಿಧನ : CM ಸಿದ್ದರಾಮಯ್ಯ ಸಂತಾಪ.!

ಬೆಂಗಳೂರು : ಮೈಸೂರಿನ ಪತ್ರಿಕೋದ್ಯಮ ವಲಯದಲ್ಲಿ “ಬ್ರದರ್ ” ಎಂದು ಪ್ರೀತಿಯಿಂದ ಕರೆಯಲ್ಪಡುತ್ತಿದ್ದ ಹಿರಿಯ ಪತ್ರಕರ್ತ ಕೆ.ವಿ. ಶ್ರೀನಿವಾಸನ್ ಅವರು ಶುಕ್ರವಾರ ಸಂಜೆ ಹುಣಸೂರು ತಾಲ್ಲೂಕಿನ ಕಲ್ಕುಣಿಕೆ ಗ್ರಾಮದಲ್ಲಿ ನಿಧನರಾದರು. ಅವರಿಗೆ 81 ವರ್ಷ ವಯಸ್ಸಾಗಿತ್ತು ಮತ್ತು ವಯೋಸಹಜ ಸಮಸ್ಯೆಗಳಿಂದಾಗಿ ಕೆಲವು ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. .ಶ್ರೀನಿವಾಸನ್ ನಿಧನಕ್ಕೆ ಸಿಎಂ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ. ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿದ ಸಿಎಂ ಸಿದ್ದರಾಮಯ್ಯ ‘ನಾಡಿನ ಹಿರಿಯ ಪತ್ರಕರ್ತ, ಪತ್ರಿಕಾ ವಲಯದಲ್ಲಿ ‘ಬ್ರದರ್’ ಎಂದೇ ಕರೆಯಲ್ಪಡುತ್ತಿದ್ದ ಗಾಂಧಿವಾದಿ ಹೋರಾಟಗಾರರೂ […]

ಕನ್ನಡ ದುನಿಯಾ 7 Feb 2026 11:06 am

’61 ಲಕ್ಷ ನಗದು, 2.5 ಕೆಜಿ ಚಿನ್ನ : 35 ವರ್ಷಗಳ ಸೇವೆಯಲ್ಲಿ 30 ಕೋಟಿ ಬಾಚಿಕೊಂಡ ಸರ್ಕಾರಿ ಅಧಿಕಾರಿ.!

ವರ್ಷಕ್ಕೆ ಸುಮಾರು 15 ರಿಂದ 16 ಲಕ್ಷ ರೂಪಾಯಿ ಸಂಬಳ ಪಡೆಯುವ ಸರ್ಕಾರಿ ಅಧಿಕಾರಿಯೊಬ್ಬರು, ತಮ್ಮ ಇಡೀ 35 ವರ್ಷಗಳ ಸೇವೆಯಲ್ಲಿ ಖರ್ಚು-ವೆಚ್ಚಗಳನ್ನು ಕಳೆದು ಗರಿಷ್ಠ 5 ರಿಂದ 6 ಕೋಟಿ ರೂಪಾಯಿ ಉಳಿಸಬಹುದು. ಆದರೆ, ಆಂಧ್ರಪ್ರದೇಶದ ನಿವೃತ್ತ ಇಂಜಿನಿಯರ್ ಒಬ್ಬರ ಮನೆಯ ಮೇಲೆ ನಡೆದ ಎಸಿಬಿ (ACB) ದಾಳಿಯಲ್ಲಿ ಬರೋಬ್ಬರಿ 30 ಕೋಟಿ ರೂಪಾಯಿ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದೆ. ಏನಿದು ಘಟನೆ ?ಆಂಧ್ರಪ್ರದೇಶದ ಪಂಚಾಯತ್ ರಾಜ್ ಇಲಾಖೆಯ ನಿವೃತ್ತ ಸೂಪರಿಂಟೆಂಡಿಂಗ್ ಇಂಜಿನಿಯರ್ ಕಲ್ಲೇಪಲ್ಲಿ ಶ್ರೀನಿವಾಸ […]

ಕನ್ನಡ ದುನಿಯಾ 7 Feb 2026 10:59 am

ಆತ್ಮಹತ್ಯೆ ಮಾಡಿಕೊಳ್ಳಲು ಹೋದವರ ಮನಸ್ಸು ಬದಲಿಸಿತ್ತು ಈ ಹಾಡು: ಲತಾ ಮಂಗೇಶ್ಕರ್ ಕಂಠದ ಆ ಜಾದೂ ಇಲ್ಲಿದೆ

ಭಾರತೀಯ ಚಿತ್ರರಂಗದ 50, 60 ಮತ್ತು 70ರ ದಶಕವನ್ನು ಸುವರ್ಣ ಯುಗವೆಂದು ಕರೆಯಲಾಗುತ್ತದೆ. ಆ ಕಾಲದ ಹಾಡುಗಳು ಕೇವಲ ಮನೋರಂಜನೆ ನೀಡದೆ, ಜೀವನದ ಮೌಲ್ಯಗಳನ್ನು ತಿಳಿಸಿಕೊಡುತ್ತಿದ್ದವು. ಅಂತಹ ಹಾಡುಗಳಲ್ಲಿ ಒಂದು, ಗಾನಕೋಗಿಲೆ ಲತಾ ಮಂಗೇಶ್ಕರ್ ಅವರು ಹಾಡಿರುವ ‘ಛೋಡ್ ದೇ ಸಾರಿ ದುನಿಯಾ ಕಿಸಿ ಕೆ ಲಿಯೆ‘ (Chhod De Saari Duniya Kisi Ke Liye). ಈ ಹಾಡು ಬಿಡುಗಡೆಯಾದಾಗ ಭಾರತದಲ್ಲಿ ಆತ್ಮಹತ್ಯೆ ಪ್ರಕರಣಗಳ ಸಂಖ್ಯೆಯನ್ನು ಕಡಿಮೆ ಮಾಡುವಷ್ಟು ದೊಡ್ಡ ಪ್ರಭಾವ ಬೀರಿತ್ತು ಎಂದರೆ ನೀವು […]

ಕನ್ನಡ ದುನಿಯಾ 7 Feb 2026 10:52 am

ಅಮೆರಿಕ ಜೊತೆ ವ್ಯಾಪಾರ ಒಪ್ಪಂದ: ಭಾರತಕ್ಕೆ ಹೇಗೆ ಲಾಭ?

ಶೇ 18ರಷ್ಟು ಸುಂಕ, ಮಾರುಕಟ್ಟೆಗೆ ಅಮೆರಿಕ ಮಧ್ಯ ಪ್ರವೇಶ ಹೀಗೆ ಅಮೆರಿಕಾದೊಂದಿಗಿನ ಮಧ್ಯಂತರ ವ್ಯಾಪಾರ ಒಪ್ಪಂದದಿಂದ ಭಾರತ ಹೇಗೆ ಲಾಭ ಗಳಿಸುತ್ತದೆ? ಎಂಬುದರ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಭಾರತ ಮತ್ತು ಅಮೆರಿಕ ಮಧ್ಯಂತರ ವ್ಯಾಪಾರ ಒಪ್ಪಂದದ ಒಪ್ಪಿಕೊಂಡಿದ್ದು, ಈ ಕುರಿತು ಅಧಿಕೃತ ಘೋಷಣೆ ಮಾಡಿವೆ. ಭಾರತ ಮತ್ತು ಅಮೆರಿಕ ಅಂತಿಮವಾಗಿ ವ್ಯಾಪಾರ ಒಪ್ಪಂದವನ್ನು ಮಾಡಿಕೊಂಡಿವೆ. ಇದು ವಿಶಾಲವಾದ ಅಮೆರಿಕ-ಭಾರತ ದ್ವಿಪಕ್ಷೀಯ ವ್ಯಾಪಾರ ಒಪ್ಪಂದಕ್ಕೆ (ಬಿಟಿಎ) ಬಾಗಿಲು ತೆರೆಯುತ್ತದೆ. ಈ ಮಧ್ಯಂತರ ಒಪ್ಪಂದವು ಭಾರತದ ರಫ್ತುದಾರರಿಗೆ ಬಹುನಿರೀಕ್ಷಿತ ಪರಿಹಾರವನ್ನು […]

ಕನ್ನಡ ದುನಿಯಾ 7 Feb 2026 10:50 am

ಗುಜರಾತ್‌ನಲ್ಲಿ ಬೆಚ್ಚಿಬೀಳಿಸುವ ಅಪಘಾತ: ಟ್ರಕ್‌ನಿಂದ ಉರುಳಿಬಿದ್ದ ಕಂಟೈನರ್ ಅಡಿ ಸಿಲುಕಿ ಕಾರ್ಮಿಕನ ದುರ್ಮರಣ

ಗುಜರಾತ್‌ನ ವಲ್ಸಾದ್ ಜಿಲ್ಲೆಯಲ್ಲಿ ಶುಕ್ರವಾರ ಮಧ್ಯಾಹ್ನ ಎದೆನಡುಗಿಸುವ ಅಪಘಾತವೊಂದು ನಡೆದಿದೆ. ರಾಷ್ಟ್ರೀಯ ಹೆದ್ದಾರಿ 48ರ ಪಾರ್ಡಿ ಪ್ರದೇಶದ ಬಳಿ ವೇಗವಾಗಿ ಚಲಿಸುತ್ತಿದ್ದ ಟ್ರಕ್‌ನಿಂದ ಭಾರಿ ತೂಕದ ಕಂಟೈನರ್ ಒಂದು ಉರುಳಿಬಿದ್ದು, ಅದರ ಅಡಿಯಲ್ಲಿ ಸಿಲುಕಿದ ಕಾರ್ಮಿಕರೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜನರ ನಡುಕ ಹುಟ್ಟಿಸುವಂತಿದೆ. ಊಟ ಮಾಡುತ್ತಿದ್ದಾಗಲೇ ಬಂದಪ್ಪಳಿಸಿದ ಸಾವು ಘಟನೆ ನಡೆದ ಸ್ಥಳದಲ್ಲಿ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಕಾರ್ಮಿಕರಿಗಾಗಿ ತಾತ್ಕಾಲಿಕವಾಗಿ ಎರಡು ಶೆಡ್‌ಗಳನ್ನು ನಿರ್ಮಿಸಲಾಗಿತ್ತು. […]

ಕನ್ನಡ ದುನಿಯಾ 7 Feb 2026 10:39 am

T20 World Cup 2026: ಆ ಒಬ್ಬ ಆಡಿದ್ರೆ ಮಾತ್ರ ಭಾರತವನ್ನು ಸೋಲಿಸುವುದು ಕಷ್ಟ, ಇಲ್ಲದಿದ್ದರೆ ದುರ್ಬಲ ತಂಡ ಎಂದ ರಿಕಿ ಪಾಂಟಿಂಗ್

ಇಂದು ( ಫೆಬ್ರವರಿ 7 ) ಶ್ರೀಲಂಕಾದ ಕೊಲಂಬೊದಲ್ಲಿ ನಡೆಯಲಿರುವ ಪಾಕಿಸ್ತಾನ ಹಾಗೂ ನೆದರ್ಲೆಂಡ್ಸ್ ತಂಡಗಳ ನಡುವಿನ ಪಂದ್ಯದ ಮೂಲಕ 2026ರ ಟಿ ಟ್ವೆಂಟಿ ವಿಶ್ವಕಪ್ ಆರಂಭವಾಗಲಿದೆ. ಒಟ್ಟು 20 ತಂಡಗಳು ಟ್ರೋಫಿಗಾಗಿ ಪೈಪೋಟಿ ನಡೆಸಲಿದ್ದು, ಮೊದಲ ದಿನವೇ ಒಟ್ಟು ಮೂರು ಪಂದ್ಯಗಳು ನಡೆಯಲಿವೆ. ಇದೇ ದಿನ ಭಾರತ ಮೂರನೇ ಪಂದ್ಯದಲ್ಲಿ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ ವಿರುದ್ಧ ಕಣಕ್ಕಿಳಿದು ತನ್ನ ಮೊದಲ ಪಂದ್ಯವನ್ನಾಡಲಿದೆ. ಇನ್ನು 2024ರ ಟಿ ಟ್ವೆಂಟಿ ವಿಶ್ವಕಪ್ ಗೆದ್ದು ಹಾಲಿ ಚಾಂಪಿಯನ್ ಎನಿಸಿಕೊಂಡಿರುವ […]

ಕನ್ನಡ ದುನಿಯಾ 7 Feb 2026 10:31 am

BREAKING : ವಂಚನೆ ಪ್ರಕರಣ : ಸಂಸದ ‘ಪಪ್ಪು ಯಾದವ್’ಅರೆಸ್ಟ್ |Pappu Yadav arrested

ಬಿಹಾರದ ಪೂರ್ಣಿಯಾ ಕ್ಷೇತ್ರದ ಸಂಸದ ರಾಜೇಶ್ ರಂಜನ್ ಅಲಿಯಾಸ್ ಪಪ್ಪು ಯಾದವ್ ಅವರನ್ನು ಪಾಟ್ನಾ ಪೊಲೀಸರು ಶುಕ್ರವಾರ ಮಧ್ಯರಾತ್ರಿ ಬಂಧಿಸಿದ್ದಾರೆ. ಸುಮಾರು 31 ವರ್ಷಗಳಷ್ಟು ಹಳೆಯದಾದ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಕ್ರಮ ಕೈಗೊಳ್ಳಲಾಗಿದೆ. ಹೌದು. ಈ ಬಂಧನವು 1995ರಲ್ಲಿ ಪಾಟ್ನಾದ ಗರ್ದನಿಬಾಗ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ (ಸಂಖ್ಯೆ 552/95) ಸಂಬಂಧಿಸಿದ್ದಾಗಿದೆ. ವಂಚನೆಯ ಮೂಲಕ ಮನೆ ಬಾಡಿಗೆಗೆ ಪಡೆದ ಆರೋಪ ಇವರ ಮೇಲಿದೆ. ಶುಕ್ರವಾರ ರಾತ್ರಿ ಸುಮಾರು 9:30ಕ್ಕೆ ಪೊಲೀಸರು ಪಪ್ಪು ಯಾದವ್ ಅವರ ಪಾಟ್ನಾ […]

ಕನ್ನಡ ದುನಿಯಾ 7 Feb 2026 10:29 am

ಬೆಂಗಳೂರಿನಲ್ಲಿ ಚಿರತೆ ಹಾವಳಿ: ವಾರದಿಂದ ಮನೆಯಿಂದ ಹೊರ ಬರಲೂ ಭಯಪಡುತ್ತಿರುವ ನಿವಾಸಿಗಳು

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಚಿರತೆ ಹಾವಳಿ ಹೆಚ್ಚಾಗಿದೆ. ಚಾಮರಾಜನಗರ, ಮೈಸೂರು, ಹಾಸನ ಭಾಗಗಳಲ್ಲಿ ಪ್ರತ್ಯಕ್ಷವಾಗುತ್ತಿದ್ದ ಚಿರತೆ ಈಗ ಬೆಂಗಳೂರಿನಲ್ಲಿಯೂ ಪ್ರತ್ಯಕ್ಷವಾಗಿದ್ದು, ಜನರು ಮನೆಯಿಂದ ಹೊರಬರಲು ಆತಂಕಪಡುವ ಸ್ಥಿತಿ ನಿರ್ಮಾಣವಾಗಿದೆ. ಬೆಂಗಳೂರಿನ ಅಂಜನಾಪುರದಲ್ಲಿ ಮತ್ತೆ ಚಿರತೆ ಕಾಣಿಸಿಕೊಂಡಿದೆ. ಮನೆಗಳ ಬಳಿ ಓಡಾಟ ನಡೆಸಿರುವ ದೃಶ್ಯ ಸಿಸಿಕ್ಯಾಮರಾದಲ್ಲಿ ಸೆರೆಯಾಗಿದೆ. ಕಳೆದ ಒಂದು ವಾರದಿಂದ ಅಂಜನಾಪುರದಲ್ಲಿ ಚಿರತೆ ಓಡಾಟ ನಡೆಸುತ್ತಿದೆ. ಸಿಸಿಕ್ಯಾಮರಾದಲ್ಲಿ ಚಿರತೆಯ ದೃಶ್ಯ ಸೆರೆಯಾಗಿದ್ದು, ಜನರು ಜೀವ ಭಯದಲ್ಲಿ ಬದುವಂತಾಗಿದೆ. ಈ ಭಾಗದಲ್ಲಿ ಮನೆ ಬಳಿ ಬಂದಿರುವ ಚಿರತೆ […]

ಕನ್ನಡ ದುನಿಯಾ 7 Feb 2026 10:26 am

ಕೆಲವರು ಏಕೆ ಬೇಗ ‘ಎಮೋಷನಲ್’ಆಗ್ತಾರೆ ? ಸೈಕಾಲಜಿ ಹೇಳುವ 10 ಅಚ್ಚರಿಯ ಸತ್ಯಗಳು !

‘ಬಲಹೀನರು’ ಎಂಬ ಪದವನ್ನು ಸಾಮಾನ್ಯವಾಗಿ ‘ಶಕ್ತಿಯಿಲ್ಲದವರು’ ಅಥವಾ ‘ದುರ್ಬಲರು’ (Weak people) ಎಂಬ ಅರ್ಥದಲ್ಲಿ ಬಳಸಲಾಗುತ್ತದೆ. ಆದರೆ ಸೈಕಾಲಜಿ ವಿಷಯಕ್ಕೆ ಬರುವುದಾದರೆ, ಅತಿಯಾಗಿ ಅಳುವವರನ್ನು ಬಲಹೀನರು ಎಂದು ಕರೆಯುವುದು ತಪ್ಪು. ಅಳುವುದು ಒಂದು ನೈಸರ್ಗಿಕ ಕ್ರಿಯೆ. ಹೇಗೆ ನಗುವುದು ಸಂತೋಷದ ಸಂಕೇತವೋ, ಅಳುವುದು ಮನಸ್ಸಿನ ಶುದ್ಧೀಕರಣದ ಸಂಕೇತ. ಹೌದು. ನಮ್ಮ ಸುತ್ತಮುತ್ತ ವಿವಿಧ ರೀತಿಯ ವ್ಯಕ್ತಿತ್ವದ ಜನರಿದ್ದಾರೆ. ಕೆಲವರು ಸಣ್ಣ ವಿಷಯಗಳಿಗೂ ಅತಿಯಾಗಿ ಬೇಸರಪಟ್ಟುಕೊಳ್ಳುತ್ತಾರೆ ಅಥವಾ ಯಾರಾದರೂ ಸಣ್ಣ ಮಾತು ಅಂದರೂ ಕೂಡಲೇ ಅತ್ತುಬಿಡುತ್ತಾರೆ. ಇಂತಹವರನ್ನು ನೋಡಿ […]

ಕನ್ನಡ ದುನಿಯಾ 7 Feb 2026 10:20 am

ಬೆಂಗಳೂರು-ಮೈಸೂರು ರಸ್ತೆ: ವಾಹನ ಸವಾರರ ಮೇಲೆ 25 ಐಟಿಎಂಎಸ್‌ ಕ್ಯಾಮರಾ ಕಣ್ಣು!

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇನಲ್ಲಿ ವಾಹನ ಸವಾರರು ಸಂಚಾರ ನಿಯಮಗಳನ್ನು ಉಲ್ಲಂಘನೆ ಮಾಡುತ್ತಾರೆ. ಆದರೆ ಅವರ ಮೇಲೆ ಕ್ಯಾಮರಾ ಕಣ್ಗಾವಲು ಇರುತ್ತದೆ. ಅತಿ ವೇಗವಾಗಿ ಹೋದರೆ ಮಾತ್ರ ದಂಡವಲ್ಲ ಎಲ್ಲಾ ಸಂಚಾರ ನಿಯಮ ಉಲ್ಲಂಘನೆ ಟ್ರಾಕ್ ಮಾಡಲಾಗುತ್ತದೆ. ಗೃಹ ಸಚಿವ ಡಾ.ಜಿ.ಪರಮೇಶ್ವರ ಈ ಕುರಿತು ವಿಧಾನಸಭೆ ಅಧಿವೇಶನದಲ್ಲಿ ಮಾಹಿತಿ ನೀಡಿದ್ದಾರೆ. ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ 25 ಐಟಿಎಂಎಸ್ ಕ್ಯಾಮರಾಗಳನ್ನು ಆಳವಡಿಕೆ ಮಾಡಲಾಗಿದ್ದು, ವಾಹನ ಸವಾರರ ಮೇಲೆ ಕಣ್ಗಾವಲು ಇಡಲಾಗಿದೆ ಎಂದು ಹೇಳಿದ್ದಾರೆ. Intelligent Traffic Management System (ITMS) […]

ಕನ್ನಡ ದುನಿಯಾ 7 Feb 2026 10:04 am

Weather Report: ಬೆಂಗಳೂರಿನಲ್ಲಿ ಮತ್ತೆ ಹೆಚ್ಚಿದ ಚಳಿಯ ಅಬ್ಬರ: 14 ಡಿಗ್ರಿಗಿಳಿದ ತಾಪಮಾನ

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮತ್ತೆ ಚಳಿಯ ಅಬ್ಬರ ಹೆಚ್ಚಾಗಿದೆ. ಬೆಂಗಳೂರಿನಲ್ಲಿ ಕೆಲ ದಿನಗಳಿಂದ ಶೀತಗಾಳಿ ಕಡಿಮೆಯಾಗಿತ್ತು. ಆದರೆ ಈಗ ಮತ್ತೆ ಶೀತಗಾಳಿ, ಚಳಿ ಹೆಚ್ಚಾಗಿದೆ. ಕರಾವಳಿ ಹಾಗೂ ಉತ್ತರ ಒಳನಾಡಿನಲ್ಲಿಯೂ ಮೈ ಕೊರೆವ ಚಳಿ ಜೊತೆಗೆ ಒಣಹವೆ ಮುಂದುವರೆಯಲಿದೆ. ದಕ್ಷಿಣ ಒಳನಾಡಿನಲ್ಲಿಯೂ ಶುಷ್ಕ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಬೆಂಗಳೂರಿನಲ್ಲಿ ಗಾಳಿ, ಮೈ ಕೊರೆವ ಚಳಿ ಪ್ರಮಾಣ ಹೆಚ್ಚಿದ್ದು, ತಾಪಮಾನ 14 ಡಿಗ್ರಿಗೆ ಕುಸಿದಿದೆ. ಜನರು ಬೆಚ್ಚನೆಯ […]

ಕನ್ನಡ ದುನಿಯಾ 7 Feb 2026 10:03 am

ಒಂದಲ್ಲ ಎರಡಲ್ಲ ಕಳೆದ 4 ವರ್ಷಗಳಲ್ಲಿ 7 ಐಸಿಸಿ ಟ್ರೋಫಿ ಗೆದ್ದ ಭಾರತ; ಇಲ್ಲಿದೆ ಸಂಪೂರ್ಣ ಪಟ್ಟಿ

ನಿನ್ನೆ ( ಫೆಬ್ರವರಿ 6 ) ಹರಾರೆ ಕ್ರೀಡಾಂಗಣದಲ್ಲಿ ನಡೆದ ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಇಂಗ್ಲೆಂಡ್ ವಿರುದ್ಧ 100 ರನ್‌ಗಳ ಭರ್ಜರಿ ಗೆಲುವು ಸಾಧಿಸುವ ಮೂಲಕ ಆರನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿತು. ವೈಭವ್ ಸೂರ್ಯವಂಶಿ 180 ಎಸೆತಗಳಲ್ಲಿ 175 ರನ್ ಚಚ್ಚಿ ಅಬ್ಬರಿಸಿದ್ದು ಈ ಗೆಲುವಿಗೆ ಪ್ರಮುಖ ಕಾರಣವಾಯಿತು. ಇನ್ನು ಈ ಟ್ರೋಫಿಯನ್ನು ಗೆಲ್ಲುವ ಮೂಲಕ ಭಾರತ 2022ರಿಂದ ಇಲ್ಲಿಯವರೆಗೆ ಒಟ್ಟು 7 ಐಸಿಸಿ ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ. ಹೀಗೆ ಕಳೆದ ನಾಲ್ಕು ವರ್ಷಗಳಲ್ಲಿ […]

ಕನ್ನಡ ದುನಿಯಾ 7 Feb 2026 9:58 am