SENSEX
NIFTY
GOLD
USD/INR

Weather

17    C

ಡಿಜಿಟಲ್ ಸುದ್ದಿ ಮೂಲಗಳು

... ...View News by News Source

WPL 2026 Final: ಮತ್ತೊಮ್ಮೆ ಡೆಲ್ಲಿ ಧೂಳೀಪಟ; ದಾಖಲೆಯ ಚೇಸ್ ಮಾಡಿ ಗೆದ್ದು ಎರಡನೇ ಬಾರಿ ಟ್ರೋಫಿ ಎತ್ತಿಹಿಡಿದ ಆರ್‌ಸಿಬಿ

ವಡೋದರಾದ ಕೊತಾಂಬಿ ಬಿಸಿಎ ಕ್ರೀಡಾಂಗಣದಲ್ಲಿ ನಡೆದ ವುಮೆನ್ಸ್ ಪ್ರೀಮಿಯರ್ ಲೀಗ್ 2026ರ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 6 ವಿಕೆಟ್‌ಗಳ ಗೆಲುವನ್ನು ದಾಖಲಿಸಿ ಎರಡನೇ ಬಾರಿಗೆ ಟ್ರೋಫಿ ಎತ್ತಿ ಹಿಡಿದಿದೆ. ಪಂದ್ಯದಲ್ಲಿ ಟಾಸ್ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬೌಲಿಂಗ್ ಆರಿಸಿಕೊಂಡಿದ್ದು, ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 203 ರನ್ ಕಲೆಹಾಕಿ […]

ಕನ್ನಡ ದುನಿಯಾ 5 Feb 2026 11:23 pm

ನಾಗರಿಕ ಸೇವಾ ಪರೀಕ್ಷೆ ಅಧಿಸೂಚನೆ ಬಿಡುಗಡೆ: 933 ಹುದ್ದೆಗಳಿಗೆ ಯುಪಿಎಸ್ಸಿ ಅರ್ಜಿ ಆಹ್ವಾನ

ನವದೆಹಲಿ: ಕೇಂದ್ರ ಲೋಕಸೇವಾ ಆಯೋಗ(ಯುಪಿಎಸ್ಸಿ) ನಾಗರೀಕ ಸೇವಾ ಪರೀಕ್ಷೆ 2026ಕ್ಕೆ ಅಧಿಸೂಚನೆ ಬಿಡುಗಡೆ ಮಾಡಿದೆ. ಈ ವರ್ಷ ಒಟ್ಟು 933 ಹುದ್ದೆಗಳ ಭರ್ತಿ ಸಂಬಂಧ ಲೋಕಸೇವಾ ಆಯೋಗ ಅಧಿಸೂಚನೆ ಹೊರಡಿಸಿದೆ. ಆಡಳಿತಾತ್ಮಕ ಹುದ್ದೆಗಳನ್ನು ಬಯಸುವ ಅಭ್ಯರ್ಥಿಗಳು ಫೆಬ್ರವರಿ 24ರ ವರೆಗೆ ಪರೀಕ್ಷೆಗೆ ಅರ್ಜಿ ಸಲ್ಲಿಸಬಹುದಾಗಿದೆ. ನಾಗರಿಕ ಸೇವಾ ಪರೀಕ್ಷೆ ಮೂರು ಹಂತಗಳಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಮುಖ್ಯ ಪರೀಕ್ಷೆ ಮತ್ತು ವ್ಯಕ್ತಿತ್ವ ಪರೀಕ್ಷೆ ಸಂದರ್ಶನ ಇರಲಿದೆ. ಅಭ್ಯರ್ಥಿಗಳು ಅರ್ಜಿ ಶುಲ್ಕ ಸೇರಿದಂತೆ ಇತರೆ ಮಾಹಿತಿಗಾಗಿ ಕೇಂದ್ರ ಲೋಕಸೇವಾ […]

ಕನ್ನಡ ದುನಿಯಾ 5 Feb 2026 9:48 pm

ಕೆಎಸ್ಆರ್ಟಿಸಿ ತರಬೇತಿ ಕೇಂದ್ರಗಳಲ್ಲಿ ಭಾರಿ ವಾಹನ ಚಾಲನಾ ತರಬೇತಿಗೆ ಅರ್ಜಿ

ಬೆಂಗಳೂರು: ಕೆಎಸ್ಆರ್ಟಿಸಿ ತರಬೇತಿ ಕೇಂದ್ರಗಳಲ್ಲಿ ಪರಿಶಿಷ್ಟ ಜಾತಿಯ ಅಭ್ಯರ್ಥಿಗಳಿಗೆ ಭಾರಿ ವಾಹನ ಚಾಲನಾ ತರಬೇತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಸಮಾಜ ಕಲ್ಯಾಣ ಇಲಾಖೆಯ ಪಿಎಂ ಅಜಯ್ ಯೋಜನೆಯಡಿ ಈ ಚಾಲನಾ ತರಬೇತಿ ನೀಡಲಾಗುವುದು. 45 ವರ್ಷದೊಳಗಿನ ವಯೋಮಿತಿಯ ಆಸಕ್ತರು ಸಮೀಪದ ತರಬೇತಿ ಕೇಂದ್ರದಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಒಂದು ತಿಂಗಳ ತರಬೇತಿ ಇದಾಗಿದ್ದು ಊಟ ಮತ್ತು ವಸತಿ ಉಚಿತವಾಗಿ ಒದಗಿಸಲಾಗುತ್ತದೆ. Ksrtcjobs,Karnataka.gov.in ವೆಬ್ ಸೈಟ್ ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಮಾಹಿತಿಗಾಗಿ ಚಿಕ್ಕಮಗಳೂರು: 96060 37746, ಮಾಲೂರು: 77609 94432, […]

ಕನ್ನಡ ದುನಿಯಾ 5 Feb 2026 9:37 pm

WPL 2026 Final: ಜೆಮಿಮಾ ಅರ್ಧಶತಕ, ಹೆನ್ರಿ ಬೌಂಡರಿ ಸುರಿಮಳೆ; ಆರ್‌ಸಿಬಿಗೆ 200+ ಗುರಿ ನೀಡಿದ ಡೆಲ್ಲಿ

ವಡೋದರಾದ ಕೋಟಂಬಿ ಬಿಸಿಎ ಕ್ರೀಡಾಂಗಣದಲ್ಲಿ ವುಮೆನ್ಸ್ ಪ್ರೀಮಿಯರ್ ಲೀಗ್ 2026ರ ಫೈನಲ್ ಪಂದ್ಯ ಇಂದು ( ಫೆಬ್ರವರಿ 5 ) ನಡೆಯುತ್ತಿದ್ದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಿವೆ. ಪಂದ್ಯದಲ್ಲಿ ಟಾಸ್ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬೌಲಿಂಗ್ ಆರಿಸಿಕೊಂಡಿದ್ದು, ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 203 ರನ್ ಕಲೆಹಾಕಿ ರಾಯಲ್ ಚಾಲೆಂಜರ್ಸ್ […]

ಕನ್ನಡ ದುನಿಯಾ 5 Feb 2026 9:26 pm

BIG BREAKING: ಬ್ಯಾಲೆಟ್ ಪೇಪರ್ ನಲ್ಲೇ ಗ್ರಾಮ ಪಂಚಾಯಿತಿ ಚುನಾವಣೆ: ಸಂಪುಟ ಸಭೆ ಮಹತ್ವದ ನಿರ್ಧಾರ

ಬೆಂಗಳೂರು: ಬ್ಯಾಲೆಟ್ ಪೇಪರ್ ನಲ್ಲೇ ಗ್ರಾಮ ಪಂಚಾಯಿತಿ ಚುನಾವಣೆ ನಡೆಸಲು ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯ 5 ಪಾಲಿಕೆಗಳಿಗೆ ಬ್ಯಾಲೆಟ್ ಪೇಪರ್ ಮೂಲಕ ನಡೆಸಲು ಈ ಹಿಂದೆ ತೀರ್ಮಾನ ಕೈಗೊಳ್ಳಲಾಗಿತ್ತು. ಇದೀಗ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿಯೂ ಮತಯಂತ್ರಗಳ ಬದಲಿಗೆ ಬ್ಯಾಲೆಟ್ ಪೇಪರ್ ನಲ್ಲಿ ಚುನಾವಣೆ ನಡೆಸಲು ತೀರ್ಮಾನಿಸಲಾಗಿದೆ. ಇದಕ್ಕಾಗಿ ಕಾಯ್ದೆ ಬದಲಾಯಿಸಲಾಗುವುದು. ವಿಧಾನಸೌಧದಲ್ಲಿ ಇಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಮತಪತ್ರದ ಮೂಲಕವೇ ಗ್ರಾಮ ಪಂಚಾಯಿತಿ […]

ಕನ್ನಡ ದುನಿಯಾ 5 Feb 2026 9:03 pm

ಅಪಘಾತದಲ್ಲಿ ಆಟೋ ಚಾಲಕನ ಮೆದುಳು ನಿಷ್ಕ್ರಿಯ: ಪತಿ ಸಾವಿನಲ್ಲೂ ಸಾರ್ಥಕತೆ ಮೆರೆದ ಪತ್ನಿ

ಚಿಕ್ಕಮಗಳೂರು: ಆಟೋ ಅಪಘಾತದಲ್ಲಿ ಚಾಲಕನ ಮೆದುಳು ನಿಷ್ಕ್ರಿಯವಾಗಿದ್ದ ಹಿನ್ನೆಲೆಯಲ್ಲಿ ಅಂಗಾಂಗಳನ್ನು ಕುಟುಂಬದ ಸದಸ್ಯರು ದಾನ ಮಾಡಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಕೊಪ್ಪದ ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ನೆರವೇರಿಸಲಾಗಿದೆ. ಚಾಲಕ ಮಂಜುನಾಥ್ ಅಪಘಾತದಲ್ಲಿ ಗಾಯೊಂಡು ಮೆದುಳು ನಿಷ್ಕ್ರಿಯವಾಗಿದ್ದ ಹಿನ್ನೆಲೆ ಶಸ್ತ್ರಚಿಕಿತ್ಸೆಯ ಮೂಲಕ ದೇಹದಿಂದ ಅಂಗಾಂಗಗಳನ್ನು ವೈದ್ಯರು ಹೊರಗೆ ತೆಗೆದಿದ್ದಾರೆ. ಮಣಿಪಾಲ್ ಆಸ್ಪತ್ರೆಯ ವೈದ್ಯರ ತಂಡ ಅಂಗಾಂಗಗಳನ್ನು ಹೊರಗೆ ತೆಗೆದಿದೆ. ಕೊಪ್ಪ ಪಟ್ಟಣದಿಂದ ಜೀರೋ ಟ್ರಾಫಿಕ್ ನಲ್ಲಿ ಮಂಗಳೂರಿನ ಎಜೆ ಆಸ್ಪತ್ರೆಗೆ, ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ಅಂಗಾಂಗಗಳನ್ನು ವೈದ್ಯರ ತಂಡ […]

ಕನ್ನಡ ದುನಿಯಾ 5 Feb 2026 8:45 pm

BREAKING: ಮನೆಯಲ್ಲಿ ಅಕ್ರಮವಾಗಿ ನಾಡ ಬಂದೂಕು ತಯಾರಿಸಿ ಮಾರಾಟ: ಕಾರ್ಪೆಂಟರ್ ಅರೆಸ್ಟ್

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ಶಿಕಾರಿಪುರ ಉಪವಿಭಾಗದ ಶಿಕಾರಿಪುರ ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯ ಭದ್ರಾಪುರ ಗ್ರಾಮದಲ್ಲಿ ಅಕ್ರಮವಾಗಿ ನಾಡ ಬಂದೂಕು ತಯಾರಿಸಿ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಕಾರ್ಪೆಂಟರ್ ಬಂಧಿಸಲಾಗಿದೆ. ಭದ್ರಾಪುರದ 3 ನೇ ಕ್ರಾಸ್ ವಾಸಿಯಾದ ಲಕ್ಷ್ಮಣಪ್ಪ ಬಿನ್ ಮಲ್ಲಪ್ಪ, ಕಾರ್ಪೆಂಟರ್ ಕೆಲಸ ಇವರು ತಮ್ಮ ಮನೆಯ ಪಕ್ಕದಲ್ಲಿರುವ ಅವರ ಹಳೆಯ ಮನೆಯಲ್ಲಿ ಅಕ್ರಮವಾಗಿ ನಾಡ ಬಂದೂಕು ತಯಾರಿಸಿ ಮಾರಾಟ ಮಾಡಲು ಇಟ್ಟುಕೊಂಡಿರುವ ಬಗ್ಗೆ ದಿ:-04-02-2026ರಂದು ಬಾತ್ಮೀದಾರರಿಂದ ಮಾಹಿತಿ ಬಂದೆ. ಠಾಣಾ ಎ.ಎಸ್.ಐ ವಿಜಯ ಸ್ಥಳಕ್ಕೆ […]

ಕನ್ನಡ ದುನಿಯಾ 5 Feb 2026 8:00 pm

ಮನೆಯಲ್ಲೇ ತಯಾರಿಸಿ ಅಪ್ಪಟ ಅರೇಬಿಕ್ ಶೈಲಿಯ ಬಾಕ್ಲಾವಾ: ಇಲ್ಲಿದೆ ಹಂತ ಹಂತವಾದ ಸುಲಭ ವಿಧಾನ

ಬಾಕ್ಲಾವಾ ಎಂದರೆ ನೆನಪಾಗುವುದು ಅದರ ಪದರ ಪದರಗಳ ನಡುವಿನ ಕುರುಕುಲು ಸವಿ ಮತ್ತು ಜೇನಿನಂತಹ ಪಾಕದ ಸಿಹಿ. ಹೋಟೆಲ್‌ಗಳಲ್ಲಿ ಮಾತ್ರ ಸಿಗುವ ಈ ಅದ್ಭುತ ಸಿಹಿ ತಿನಿಸನ್ನು ಈಗ ನೀವು ನಿಮ್ಮ ಮನೆಯ ಅಡುಗೆ ಮನೆಯಲ್ಲೇ ತಯಾರಿಸಬಹುದು. ಸರಿಯಾದ ಅಳತೆ ಮತ್ತು ವಿಧಾನವನ್ನು ಅನುಸರಿಸಿದರೆ ಬೇಕರಿಯಂತೆಯೇ ರುಚಿಯಾದ ಬಾಕ್ಲಾವಾವನ್ನು ಸವಿಯಬಹುದು. ಬೇಕಾಗುವ ಸಾಮಗ್ರಿಗಳು ಪದರಗಳನ್ನು ತಯಾರಿಸಲು 250 ಗ್ರಾಂ ಫೈಲೋ ಪೇಸ್ಟ್ರಿ ಶೀಟ್‌ಗಳು, ನುಣ್ಣಗೆ ಪುಡಿ ಮಾಡಿದ 200 ಗ್ರಾಂ ಮಿಶ್ರಿತ ಒಣ ಹಣ್ಣುಗಳು ಮತ್ತು ಹಚ್ಚಲು […]

ಕನ್ನಡ ದುನಿಯಾ 5 Feb 2026 8:00 pm

T20 World Cup 2026: ಭಾರತ vs ಪಾಕ್ ಪಂದ್ಯ ರದ್ದು? ಪತ್ರಿಕಾಗೋಷ್ಠಿಯಲ್ಲಿ ತುಟಿಬಿಚ್ಚಿದ ಸೂರ್ಯ

ಮುಂಬೈ: ನಾಡಿದ್ದು ( ಫೆಬ್ರವರಿ 7 ) ಬಹು ನಿರೀಕ್ಷಿತ ಕ್ರಿಕೆಟ್ ಮಿನಿ ಸಮರ ಐಸಿಸಿ ಪುರುಷರ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಆರಂಭವಾಗಲಿದೆ. ವಿಶ್ವದ ಒಟ್ಟು 20 ತಂಡಗಳು ಈ ಬಾರಿಯ ಟೂರ್ನಿಯಲ್ಲಿ ಭಾಗವಹಿಸುತ್ತಿವೆ. ಭಾರತ ಗ್ರೂ ‘ಎ’ನಲ್ಲಿದ್ದು, ಪಾಕಿಸ್ತಾನ ಸಹ ಇದೇ ಗುಂಪಿನಲ್ಲಿದೆ. ಜತೆಗೆ ಕ್ರಿಕೆಟ್ ಶಿಶುಗಳಾದ ನಮೀಬಿಯಾ, ನೆದರ್ಲೆಂಡ್ಸ್ ಹಾಗೂ ಯುಎಸ್ಎ ತಂಡಗಳು ಸಹ ಇವೆ. ಟೂರ್ನಿಯ ಉದ್ಘಾಟನಾ ಪಂದ್ಯ ಫೆಬ್ರವರಿ 7ರಂದು ಪಾಕಿಸ್ತಾನ ಹಾಗೂ ನೆದರ್ಲೆಂಡ್ಸ್ ತಂಡಗಳ ನಡುವೆ ನಡೆಯಲಿದ್ದು, ಅದೇ […]

ಕನ್ನಡ ದುನಿಯಾ 5 Feb 2026 7:56 pm

ಉಡುಪಿ ಯುವಕನಿಗೆ ಜಾಕ್ ಪಾಟ್: ಯುಎಇಯ ಬಿಗ್ ಟಿಕೆಟ್ ಲಕ್ಕಿ ಡ್ರಾದಲ್ಲಿ 49 ಕೋಟಿ ರೂ. ಬಹುಮಾನ

ಯುಎಇಯಲ್ಲಿ ಜನಪ್ರಿಯವಾಗಿರುವ ಬಿಗ್ ಟಿಕೆಟ್ ಲಕ್ಕಿ ಡ್ರಾದಲ್ಲಿ ಕರ್ನಾಟಕದ ಯುವಕ ಭಾರಿ ಮೊತ್ತದ ಲಾಟರಿ ಗೆದ್ದಿದ್ದು, ಭಾರಿ ಮೊತ್ತವನ್ನು ಗಳಿಸಿದ್ದಾರೆ. ಉಡುಪಿ ಜಿಲ್ಲೆಯ ಕಟಪಾಡಿ ಮಟ್ಟುವಿನ ನಿವಾಸಿ ಶಾಂತನು ಶೆಟ್ಟಿಗಾರ್ ಅಬುಧಾಬಿಯಲ್ಲಿ ನಡೆದ ಡ್ರಾದಲ್ಲಿ ಸುಮಾರು 49 ಕೋಟಿ ರೂ. ಮೊತ್ತದ 20 ಮಿಲಿಯನ್ ದಿರ್ಹಮ್‌ಗಳನ್ನು ಗೆದ್ದಿದ್ದಾರೆ. ಬಿಗ್ ಟಿಕೆಟ್ ಡ್ರಾದಲ್ಲಿ ಹಲವಾರು ಇತರ ಬಹುಮಾನಗಳಿವೆ, ಐದು ವಿಜೇತರು ತಲಾ 1 ಮಿಲಿಯನ್ ದಿರ್ಹಮ್‌ಗಳು ಮತ್ತು ಒಂದು ಐಷಾರಾಮಿ ಕಾರನ್ನು ಗೆದ್ದರು, ಪ್ರಸ್ತುತ ಒಮಾನ್‌ನಲ್ಲಿ ಚಿಲ್ಲರೆ ವ್ಯಾಪಾರ […]

ಕನ್ನಡ ದುನಿಯಾ 5 Feb 2026 7:45 pm

ಸಲ್ಮಾನ್ ಖಾನ್ ಧರಿಸಿದ ಜಾಕೆಟ್ ಬೆಲೆ ಕೇಳಿದರೆ ಬೆಚ್ಚಿಬೀಳ್ತೀರಾ: ಫಾರ್ಚುನರ್ ಕಾರಿಗಿಂತಲೂ ದುಬಾರಿ ಈ ಉಡುಪು

ಬಾಲಿವುಡ್ ಸುಲ್ತಾನ್ ಸಲ್ಮಾನ್ ಖಾನ್ ತಮ್ಮ ಸಿನಿಮಾಗಳಿಗಿಂತ ಹೆಚ್ಚಾಗಿ ತಮ್ಮ ಜೀವನಶೈಲಿಯಿಂದಲೇ ಸದಾ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗೆ ಸಾರ್ವಜನಿಕವಾಗಿ ಕಾಣಿಸಿಕೊಂಡ ಸಲ್ಲು ಭಾಯ್ ಧರಿಸಿದ್ದ ಚರ್ಮದ ಜಾಕೆಟ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಈ ಒಂದು ಜಾಕೆಟ್ ಬೆಲೆ ಕೇಳಿದರೆ ಸಾಮಾನ್ಯ ಜನರು ಒಂದು ಕ್ಷಣ ದಂಗಾಗುವುದು ಗ್ಯಾರಂಟಿ. ಏಕೆಂದರೆ ಇದರ ಬೆಲೆ ಭಾರತದ ಜನಪ್ರಿಯ ಟೊಯೋಟಾ ಫಾರ್ಚುನರ್ ಎಸ್‌ಯುವಿ ಕಾರಿಗಿಂತಲೂ ಹೆಚ್ಚಿದೆ ಎಂದು ವರದಿಯಾಗಿದೆ. ಜಾಕೆಟ್ ಬೆಲೆ ಎಷ್ಟು ಗೊತ್ತೇ ಫ್ಯಾಷನ್ ಲೋಕದ ಮಾಹಿತಿ […]

ಕನ್ನಡ ದುನಿಯಾ 5 Feb 2026 7:30 pm

ಸರ್ಕಾರಿ ನೌಕರರಿಗೆ ಮುಖ್ಯ ಮಾಹಿತಿ: ಸರ್ವೋತ್ತಮ ಸೇವಾ ಪ್ರಶಸ್ತಿಗೆ ಅರ್ಜಿ: ರಾಜ್ಯಮಟ್ಟಕ್ಕೆ 50 ಸಾವಿರ ರೂ. ಬಹುಮಾನ

2026ನೇ ಸಾಲಿನ ರಾಜ್ಯ ಮಟ್ಟ ಹಾಗೂ ಶಿವಮೊಗ್ಗ ಜಿಲ್ಲಾ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. 2026ನೇ ಸಾಲಿನ ರಾಜ್ಯ ಮಟ್ಟದ ಹಾಗೂ ಶಿವಮೊಗ್ಗ ಜಿಲ್ಲಾ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿ ಪಡೆಯಲು ರಾಜ್ಯ ಸರ್ಕಾರದ ಅರ್ಹ ಅಧಿಕಾರಿ-ನೌಕರರು ತಮ್ಮ ನಾಮನಿರ್ದೇಶನಗಳನ್ನು ಆನ್‌ಲೈನ್ ಮೂಲಕ ಸಲ್ಲಿಸಬಹುದಾಗಿದೆ. ರಾಜ್ಯ ಮಟ್ಟಕ್ಕೆ 30 ಪ್ರಶಸ್ತಿ ಹಾಗೂ ಶಿವಮೊಗ್ಗ ಜಿಲ್ಲೆಗೆ 10 ಜಿಲ್ಲಾ ಮಟ್ಟದ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ರಾಜ್ಯ ಮಟ್ಟದ ಪ್ರಶಸ್ತಿ ತಲಾ 50 ಸಾವಿರ ಹಾಗೂ ಜಿಲ್ಲಾ ಮಟ್ಟದ […]

ಕನ್ನಡ ದುನಿಯಾ 5 Feb 2026 7:25 pm

WPL 2026 Final: ಮೆಗಾ ಹಣಾಹಣಿಯಲ್ಲಿ ಆರ್‌ಸಿಬಿ vs ಡೆಲ್ಲಿ ಮುಖಾಮುಖಿ; ಟಾಸ್ ಹಾಗೂ ಪ್ಲೇಯಿಂಗ್ 11 ಮಾಹಿತಿ

ವಡೋದರಾದ ಕೋಟಂಬಿ ಬಿಸಿಎ ಕ್ರೀಡಾಂಗಣದಲ್ಲಿ ವುಮೆನ್ಸ್ ಪ್ರೀಮಿಯರ್ ಲೀಗ್ 2026ರ ಫೈನಲ್ ಪಂದ್ಯ ಇಂದು ( ಫೆಬ್ರವರಿ 5 ) ನಡೆಯುತ್ತಿದ್ದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಿವೆ. ಪಂದ್ಯದಲ್ಲಿ ಟಾಸ್ ಗೆದ್ದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬೌಲಿಂಗ್ ಆರಿಸಿಕೊಂಡಿದ್ದು, ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದೆ. ಆರ್‌ಸಿಬಿ ಆಡುವ ಬಳಗ: ಗ್ರೇಸ್ ಹ್ಯಾರಿಸ್, ಸ್ಮೃತಿ ಮಂಧಾನಾ (ನಾಯಕಿ), ಜಾರ್ಜಿಯಾ ವಾಲ್, ರಿಚಾ ಘೋಷ್ (ವಿಕೆಟ್ ಕೀಪರ್), ರಾಧಾ ಯಾದವ್, […]

ಕನ್ನಡ ದುನಿಯಾ 5 Feb 2026 7:22 pm

ಐಐಟಿ ಪದವಿ ಬಿಟ್ಟು ಲಂಡನ್‌ನಲ್ಲಿ ಪಾನಿ ಪುರಿ ಮಾರಾಟ: 6 ಸಾವಿರ ರೂ. ಬೆಲೆಯ ಊಟದ ವಿಶೇಷತೆ ಏನು ಗೊತ್ತೇ?

ಉನ್ನತ ಶಿಕ್ಷಣ ಪಡೆದು ವಿದೇಶಗಳಲ್ಲಿ ದೊಡ್ಡ ಕಂಪನಿಗಳಲ್ಲಿ ಕೆಲಸ ಮಾಡುವುದು ಅದೆಷ್ಟೋ ಯುವಕರ ಕನಸು. ಆದರೆ ಐಐಟಿ ಪದವೀಧರ ದಂಪತಿಯೊಬ್ಬರು ಲಂಡನ್‌ನ ಅದ್ದೂರಿ ಕಾರ್ಪೊರೇಟ್ ಬದುಕನ್ನು ಬದಿಗಿಟ್ಟು, ಭಾರತೀಯ ಮೂಲದ ಪಾನಿ ಪುರಿ ಮಾರುವ ಮೂಲಕ ಸುದ್ದಿಯಲ್ಲಿದ್ದಾರೆ. ಅಂಕಿತಾ ಖಾಂತೆ ಮತ್ತು ಅಮನ್ ಕೃಷ್ಣ ಎಂಬ ದಂಪತಿ ಲಂಡನ್‌ನಲ್ಲಿ ದಿ ಬೌಜಿ ಕ್ಲಬ್ ಎಂಬ ವಿಶಿಷ್ಟ ಭೋಜನ ಕೂಟವನ್ನು ಆರಂಭಿಸಿದ್ದು, ಅಲ್ಲಿ ಒಂದು ಹೊತ್ತಿನ ಊಟಕ್ಕೆ ತಲಾ 6,000 ರೂಪಾಯಿ ಚಾರ್ಜ್ ಮಾಡುತ್ತಿದ್ದಾರೆ. ಐಐಟಿ ಪದವೀಧರರ ಸಾಹಸ […]

ಕನ್ನಡ ದುನಿಯಾ 5 Feb 2026 7:00 pm

ಧೂಮಪಾನ ಚಟದಿಂದ ಮುಕ್ತಿ ಪಡೆಯಲು ಪಾಲಿಸಬೇಕಾದ ಮುಖ್ಯ ನಿಯಮಗಳು

ಧೂಮಪಾನವು ಕೇವಲ ಒಂದು ಅಭ್ಯಾಸವಲ್ಲ, ಅದು ಶ್ವಾಸಕೋಶದ ಕಾಯಿಲೆ, ಹೃದಯದ ಸಮಸ್ಯೆ ಮತ್ತು ಕ್ಯಾನ್ಸರ್‌ನಂತಹ ಮಾರಕ ರೋಗಗಳಿಗೆ ಆಹ್ವಾನ. ಆರೋಗ್ಯಕರ ಜೀವನಕ್ಕಾಗಿ ಈ ಕೆಳಗಿನ ಸರಳ ಮತ್ತು ಪರಿಣಾಮಕಾರಿ ಹಂತಗಳನ್ನು ಅನುಸರಿಸಿ: 1.ಸಂಕಲ್ಪವೇ ಮೊದಲ ಹೆಜ್ಜೆ (Strong Resolve)ಧೂಮಪಾನ ತೊರೆಯಲು ಒಂದು ಬಲವಾದ ಕಾರಣವನ್ನು ಕಂಡುಕೊಳ್ಳಿ. ನಿಮ್ಮ ಕುಟುಂಬ ಮತ್ತು ನಿಮ್ಮ ಆರೋಗ್ಯವೇ ನಿಮ್ಮ ಅತಿದೊಡ್ಡ ಪ್ರೇರಣೆಯಾಗಿರಲಿ. 2.ಸರಿಯಾದ ಯೋಜನೆ ರೂಪಿಸಿ (Plan Ahead)ಯಾವುದೋ ಒಂದು ದಿನಾಂಕವನ್ನು ಕೊನೆಯ ದಿನ ಎಂದು ನಿಗದಿಪಡಿಸಿ. ದಿಢೀರ್ ನಿಲ್ಲಿಸಲು ಕಷ್ಟವಾದರೆ, […]

ಕನ್ನಡ ದುನಿಯಾ 5 Feb 2026 5:30 pm

23ಕ್ಕೆ ಪಿಎಚ್‌ಡಿ, ಐನ್ ಸ್ಟೈನ್‌ಗೆ ಸವಾಲು ಹಾಕಿದ್ದ ಬಿಹಾರದ ಪ್ರತಿಭೆ: ಮಾನಸಿಕ ಕಾಯಿಲೆಯಿಂದ ಬಲಿಯಾದ ಮೇಧಾವಿಯ ಜೀವನಗಾಥೆ!

ಭಾರತೀಯ ಇತಿಹಾಸದಲ್ಲಿ ಶ್ರೀನಿವಾಸ ರಾಮಾನುಜನ್ ನಂತರ ಅಷ್ಟೇ ಪ್ರಭಾವಶಾಲಿ ಗಣಿತಜ್ಞ ಎಂದು ಯಾರನ್ನಾದರೂ ಗುರುತಿಸುವುದಾದರೆ ಅದು ವಶಿಷ್ಠ ನಾರಾಯಣ ಸಿಂಗ್. ಬಿಹಾರದ ಬಸಂತಪುರ ಎಂಬ ಪುಟ್ಟ ಹಳ್ಳಿಯಲ್ಲಿ 1942ರಲ್ಲಿ ಜನಿಸಿದ ಈ ಅಪ್ರತಿಮ ಪ್ರತಿಭೆ, ಇಡೀ ವಿಶ್ವವೇ ಭಾರತದ ಕಡೆಗೆ ತಿರುಗಿ ನೋಡುವಂತೆ ಮಾಡಿದ್ದರು. ಆದರೆ ವಿಧಿಯ ಆಟ ಈ ಮೇಧಾವಿಯ ಜೀವನವನ್ನು ಅಯೋಮಯಗೊಳಿಸಿತು. 23ನೇ ವಯಸ್ಸಿಗೆ ಪಿಎಚ್‌ಡಿ ಮತ್ತು ನಾಸಾ ಪಯಣ ವಶಿಷ್ಠ ನಾರಾಯಣ ಸಿಂಗ್ ಅವರ ಬುದ್ಧಿವಂತಿಕೆ ಎಷ್ಟಿತ್ತೆಂದರೆ, ಅವರ ಕಾಲೇಜು ದಿನಗಳಲ್ಲೇ ರಾಜ್ಯಪಾಲರು […]

ಕನ್ನಡ ದುನಿಯಾ 5 Feb 2026 5:00 pm

ನಿಜವಾಗುತ್ತಿದೆಯೇ ಬಾಬಾ ವಂಗಾ ಭವಿಷ್ಯ: ಚಿನ್ನ ಮತ್ತು ಬೆಳ್ಳಿ ದರದಲ್ಲಿ ಭಾರಿ ಏರಿಳಿತ, ಹೂಡಿಕೆದಾರರಲ್ಲಿ ಆತಂಕ

ವಿಶ್ವದ ಪ್ರಖ್ಯಾತ ಅತೀಂದ್ರಿಯ ಶಕ್ತಿ ಎನಿಸಿಕೊಂಡಿರುವ ಬಲ್ಗೇರಿಯಾದ ಬಾಬಾ ವಂಗಾ ಅವರ ಭವಿಷ್ಯವಾಣಿಗಳು ಈಗ ಮತ್ತೆ ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿವೆ. 2026ರಲ್ಲಿ ಜಗತ್ತು ತೀವ್ರ ಹಣದ ಬಿಕ್ಕಟ್ಟನ್ನು ಎದುರಿಸಲಿದೆ ಮತ್ತು ಕಾಗದದ ನೋಟುಗಳ ಮೌಲ್ಯ ಕುಸಿಯಲಿದೆ ಎಂದು ಅವರು ದಶಕಗಳ ಹಿಂದೆಯೇ ನುಡಿದಿದ್ದ ಮಾತುಗಳು ಈಗಿನ ಆರ್ಥಿಕ ಪರಿಸ್ಥಿತಿಗೆ ತಾಳೆಯಾಗುತ್ತಿರುವುದು ಹೂಡಿಕೆದಾರರಲ್ಲಿ ಆತಂಕ ಮತ್ತು ಆಶ್ಚರ್ಯ ಮೂಡಿಸಿದೆ. ನೋಟುಗಳ ಮೌಲ್ಯ ಕುಸಿತ ಮತ್ತು ಲೋಹಗಳ ಯುಗ ಬಾಬಾ ವಂಗಾ ಅವರ ಭವಿಷ್ಯವಾಣಿಯ ಪ್ರಕಾರ, ಬ್ಯಾಂಕುಗಳು ನೀಡುವ […]

ಕನ್ನಡ ದುನಿಯಾ 5 Feb 2026 4:30 pm

SHOCKING : ಹನಿಮೂನ್ ಮರ್ಡರ್ 2.0 : ಲವರ್ ಜೊತೆ ಸೇರಿ ಪತಿಯನ್ನೇ ಹಿಟ್ &ರನ್ ಮಾಡಿ ಕೊಂದ ಪಾಪಿ ಪತ್ನಿ.!

ಸಿನಿಮೀಯ ಮಾದರಿಯಲ್ಲಿ ಪತಿಯನ್ನೇ ಹತ್ಯೆ ಮಾಡುತ್ತಿರುವ ಪ್ರಕರಣಗಳು ಸಮಾಜದಲ್ಲಿ ನೈತಿಕತೆಯ ಅಧಃಪತನಕ್ಕೆ ಹಿಡಿದ ಕನ್ನಡಿಯಂತಿದೆ. ಇತ್ತೀಚಿನ ದಿನಗಳಲ್ಲಿ ಇಂತಹ ‘ಹನಿಮೂನ್ ಮರ್ಡರ್’ ಅಥವಾ ವಿವಾಹೇತರ ಸಂಬಂಧಕ್ಕಾಗಿ ಸಂಗಾತಿಯನ್ನೇ ಕೊಲ್ಲುವ ಪ್ರಕರಣಗಳು ಹೆಚ್ಚುತ್ತಿರುವುದು ಆತಂಕಕಾರಿ ಸಂಗತಿ. ಇದೀಗ ರಾಜಸ್ಥಾನದಲ್ಲಿ ಮತ್ತೊಂದು ಆಘಾತಕಾರಿ ಘಟನೆ ನಡೆದಿದೆ. ನವವಿವಾಹಿತ ದಂಪತಿಗಳಾದ ಆಶಿಶ್ ಮತ್ತು ಅಂಜು ಅವರು ತಂಗಾಳಿಯಲ್ಲಿ ವಾಯುವಿಹಾರಕ್ಕೆ ಹೋದಾಗ ವಾಹನವೊಂದು ಅವರಿಗೆ ಡಿಕ್ಕಿ ಹೊಡೆಯಿತು. ಈ ಘಟನೆಯಲ್ಲಿ ಆಶಿಶ್ ಸ್ಥಳದಲ್ಲೇ ಸಾವನ್ನಪ್ಪಿದರೆ, ಅಂಜು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು ಮತ್ತು ಅವರ ಚಿನ್ನಾಭರಣಗಳನ್ನು […]

ಕನ್ನಡ ದುನಿಯಾ 5 Feb 2026 4:13 pm

‘ಪಾಸ್ ಪೋರ್ಟ್’ನಿಯಮಗಳಲ್ಲಿ ಹಲವು ಬದಲಾವಣೆ : ಫೆ. 15 ರಿಂದ ಹೊಸ ರೂಲ್ಸ್ ಜಾರಿ

ದೇಶಾದ್ಯಂತ ಪಾಸ್ ಪೋರ್ಟ್ ಅರ್ಜಿ ಪ್ರಕ್ರಿಯೆಯನ್ನು ಸುಲಭಗೊಳಿಸಲು ಮತ್ತು ಭದ್ರತೆಯನ್ನು ಬಲಪಡಿಸಲು ಭಾರತ ಸರ್ಕಾರವು ಹೊಸ ನಿಯಮಗಳನ್ನು ಪರಿಚಯಿಸಿದೆ. ಈ ಹೊಸ ನಿಯಮಗಳು ಫೆಬ್ರವರಿ 15 ರ ನಂತರ ಸಂಪೂರ್ಣವಾಗಿ ಜಾರಿಗೆ ಬರಲಿವೆ. ಪಾಸ್ಪೋರ್ಟ್ಗಾಗಿ ಅರ್ಜಿ ಸಲ್ಲಿಸುವವರು ಹೊಸ ನಿಯಮಗಳ ಪ್ರಕಾರವೇ ದಾಖಲೆಗಳನ್ನು ಸಲ್ಲಿಸಬೇಕೆಂದು ಅಧಿಕಾರಿಗಳು ಸೂಚಿಸಿದ್ದಾರೆ. ಪಾಸ್ ಪೋರ್ಟ್ ನಿಯಮಗಳಲ್ಲಿ ಹಲವು ಬದಲಾವಣೆ ಡಿಜಿಟಲೀಕರಣ: ಕಾಗದದ ಕೆಲಸವನ್ನು ಕಡಿಮೆ ಮಾಡಲು ಪ್ರಕ್ರಿಯೆಯನ್ನು ಡಿಜಿಟಲೈಸ್ ಮಾಡಲಾಗಿದೆ. ಆಧಾರ್ ಮತ್ತು ಸರ್ಕಾರ ನೀಡಿದ ಇತರ ಡಿಜಿಟಲ್ ಐಡಿಗಳನ್ನು ಕಡ್ಡಾಯಗೊಳಿಸಲಾಗಿದೆ. […]

ಕನ್ನಡ ದುನಿಯಾ 5 Feb 2026 3:59 pm

BREAKING : ಶಾಸಕ ‘ಸತೀಶ್ ಸೈಲ್‌’ಗೆ ಬಿಗ್ ರಿಲೀಫ್: E.D ಪ್ರಕರಣದಲ್ಲಿ ಹೈಕೋರ್ಟ್‌ನಿಂದ ಜಾಮೀನು ಮಂಜೂರು !

ಬೆಂಗಳೂರು: ಅಕ್ರಮ ಅದಿರು ರಫ್ತು ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ED) ದಾಖಲಿಸಿದ್ದ ಪ್ರಕರಣದಲ್ಲಿ ಕಾರವಾರ ಶಾಸಕ ಸತೀಶ್ ಸೈಲ್ ಅವರಿಗೆ ಕರ್ನಾಟಕ ಹೈಕೋರ್ಟ್ ಬಿಗ್ ರಿಲೀಫ್ ನೀಡಿದೆ. ಅನಾರೋಗ್ಯದ ಹಿನ್ನೆಲೆಯಲ್ಲಿ ನ್ಯಾಯಾಲಯವು ಅವರಿಗೆ ಜಾಮೀನು ಮಂಜೂರು ಮಾಡಿದೆ. ನ್ಯಾಯಮೂರ್ತಿ ಸುನಿಲ್ ದತ್ ಯಾದವ್ ಅವರಿದ್ದ ಪೀಠವು ಈ ಆದೇಶವನ್ನು ಹೊರಡಿಸಿದೆ.ಶಾಸಕರಿಗೆ ಲಿವರ್ (ಯಕೃತ್ತು) ಸಮಸ್ಯೆಯಿದ್ದು, ಚಿಕಿತ್ಸೆಯ ಅಗತ್ಯವಿರುವ ಕಾರಣ ‘ವೈದ್ಯಕೀಯ ಆಧಾರದ ಮೇಲೆ’ ಜಾಮೀನು ನೀಡಲಾಗಿದೆ.5 ಲಕ್ಷ ರೂಪಾಯಿ ಮೌಲ್ಯದ ಬಾಂಡ್ ಮತ್ತು ಒಬ್ಬರ ಶ್ಯೂರಿಟಿ […]

ಕನ್ನಡ ದುನಿಯಾ 5 Feb 2026 3:30 pm

SHOCKING : ಕೋತಿಗಳ ಕಾಟಕ್ಕೆ ಬೆಚ್ಚಿ ಬಿದ್ದು ಹಾಸ್ಟೆಲ್ ಕಟ್ಟಡದಿಂದ ಬಿದ್ದ ವಿದ್ಯಾರ್ಥಿನಿ : ಗಂಭೀರ ಗಾಯ.!

ಧಾರವಾಡ : ಕರ್ನಾಟಕ ವಿಶ್ವವಿದ್ಯಾಲಯದ ಕ್ಯಾಂಪಸ್’ನಲ್ಲಿ ಕೋತಿಗಳ ಹಾವಳಿ ಮಿತಿಮೀರಿದ್ದು, ಈ ಉಪಟಳಕ್ಕೆ ಹೆದರಿ ಓರ್ವ ವಿದ್ಯಾರ್ಥಿನಿ ಹಾಸ್ಟೆಲ್ ಕಟ್ಟಡದಿಂದ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿರುವ ಆಘಾತಕಾರಿ ಘಟನೆ ನಡೆದಿದೆ. ವಿಶ್ವವಿದ್ಯಾಲಯದ ಸರಸ್ವತಿ ನಿಲಯ (ಸಂಶೋಧನಾ ವಿದ್ಯಾರ್ಥಿನಿಯರ ಹಾಸ್ಟೆಲ್) ದಲ್ಲಿ ಈ ಘಟನೆ ಸಂಭವಿಸಿದೆ. ಸಂಶೋಧನಾ ವಿದ್ಯಾರ್ಥಿನಿ ಇವೆಂಜಲಿನಾ ಅವರು ಹಾಸ್ಟೆಲ್ ಕಟ್ಟಡದ ಮೇಲೆ ಓದುತ್ತಾ ಕುಳಿತಿದ್ದರು. ಈ ವೇಳೆ ಏಕಾಏಕಿ ಕೋತಿಗಳ ಹಿಂಡು ಅವರ ಮೇಲೆ ನುಗ್ಗಿದೆ. ಕೋತಿಗಳ ದಾಳಿಯಿಂದ ಗಾಬರಿಗೊಂಡ ವಿದ್ಯಾರ್ಥಿನಿ, ಅವುಗಳಿಂದ ತಪ್ಪಿಸಿಕೊಳ್ಳಲು […]

ಕನ್ನಡ ದುನಿಯಾ 5 Feb 2026 3:18 pm

BIG NEWS : ಪ್ರಧಾನಿ ಮೋದಿ ಮೇಲೆ ದಾಳಿಗೆ ವಿರೋಧ ಪಕ್ಷಗಳ ಪಿತೂರಿ : ಲೋಕಸಭಾ ಸಚಿವಾಲಯದಿಂದ ಸ್ಪೋಟಕ ಹೇಳಿಕೆ.!

ನವದೆಹಲಿ: ಸಂಸತ್ತಿನ ಬಜೆಟ್ ಅಧಿವೇಶನದ ಏಳನೇ ದಿನದಂದು ಅಭೂತಪೂರ್ವ ಮತ್ತು ಆಘಾತಕಾರಿ ಘಟನೆಯೊಂದು ನಡೆದಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ದಾಳಿ ಮಾಡಲು ವಿರೋಧ ಪಕ್ಷಗಳು ಸಂಚು ರೂಪಿಸಿದ್ದವು ಎಂದು ಲೋಕಸಭಾ ಸಚಿವಾಲಯ (Lok Sabha Secretariat) ಸ್ಫೋಟಕ ಹೇಳಿಕೆ ನೀಡಿದೆ. ವಿರೋಧ ಪಕ್ಷದ ಮಹಿಳಾ ಸಂಸದರು ಒಟ್ಟಾಗಿ ಪ್ರಧಾನಿ ಮೋದಿ ಅವರ ಕುರ್ಚಿಯನ್ನು ಮುತ್ತಿಗೆ ಹಾಕಿ ದಾಳಿ ಮಾಡಲು ಯೋಜಿಸಿದ್ದರು ಎಂದು ಸಚಿವಾಲಯ ತಿಳಿಸಿದೆ. ಈ ಪಿತೂರಿಯಲ್ಲಿ ಮಹಿಳಾ ಸದಸ್ಯರನ್ನು ‘ಗುರಾಣಿ’ಯಾಗಿ ಬಳಸಿಕೊಳ್ಳಲಾಗಿತ್ತು ಎಂಬ […]

ಕನ್ನಡ ದುನಿಯಾ 5 Feb 2026 2:58 pm

‘MRP’ಗಿಂತ ಹೆಚ್ಚಿನ ಹಣ ಪಡೆದ ಫ್ಲಿಪ್‌ಕಾರ್ಟ್ ಮೇಲೆ ದೂರು : ಪರಿಹಾರ ನೀಡಲು ಆಯೋಗದಿಂದ ಆದೇಶ

ಶಿವಮೊಗ್ಗ ಜಿಲ್ಲೆಯ ಮಂಡಘಟ್ಟದ ಶಿವಕುಮಾರ್ ಎಸ್. ಎಂಬುವವರು ಬೆಂಗಳೂರು ಫ್ಲಿಪ್‌ಕಾರ್ಟ್ ಮುಖ್ಯ ವ್ಯವಸ್ಥಾಪಕರು ಹಾಗೂ ಉತ್ತರ ಪ್ರದೇಶದ ಮುಜಫರ್‌ನಗರದ ಶ್ರೀ ಲಕ್ಷ್ಮೀ ಪೈಂಟ್ಸ್ ಹೌಸ್ ಇವರುಗಳ ವಿರುದ್ಧ ಒಂದು ಲೀಟರ್ ಏಷಿಯನ್ ವುಡ್ ಪ್ರೈಮರ್‌ಗೆ ಎಂ.ಆರ್.ಪಿ ಗಿಂತ ಹೆಚ್ಚಿನ ಹಣ ಪಡೆದಿರುತ್ತಾರೆ ಎಂದು ನೀಡಿದ ದೂರನ್ನು ಸೇವಾನ್ಯೂನ್ಯತೆ ಎಸಗಿರುತ್ತಾರೆ ಎಂದು ನೀಡಿದ್ದ ದೂರನ್ನು ಆಲಿಸಿದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಎದುರುದಾರರಿಂದ ದೂರುದಾರರಿಗೆ ಸೂಕ್ತ ಪರಿಹಾರ ನೀಡುವಂತೆ ತೀರ್ಪು ನೀಡಿದೆ. ದೂರುದಾರರು ಎದುರುದಾರರಿಂದ ಒಂದು ಲೀಟರ್ […]

ಕನ್ನಡ ದುನಿಯಾ 5 Feb 2026 2:26 pm

ಮಕ್ಕಳ ಕಣ್ಣಿಗೆ ಹಚ್ಚುವ ಕಾಡಿಗೆ ದೃಷ್ಟಿ ಮತ್ತು ಮಿದುಳಿನ ಮೇಲೆ ಎಂತಹ ಪರಿಣಾಮ ಬೀರುತ್ತೆ ತಿಳಿಯಿರಿ

ಮಕ್ಕಳ ಅಂದವನ್ನು ಹೆಚ್ಚಿಸಲು ಮತ್ತು ದೃಷ್ಟಿಯಿಂದ ರಕ್ಷಿಸಲು ಕಣ್ಣಿಗೆ ಕಾಡಿಗೆ ಹಚ್ಚುವುದು ಭಾರತೀಯರಲ್ಲಿ ಶತಮಾನಗಳಿಂದ ನಡೆದುಬಂದ ಸಂಪ್ರದಾಯ. ಕಾಡಿಗೆ ಹಚ್ಚುವುದರಿಂದ ಕಣ್ಣುಗಳು ದೊಡ್ಡದಾಗಿ ಕಾಣುತ್ತವೆ ಹಾಗೂ ಮಗುವಿಗೆ ಯಾವುದೇ ಕೆಟ್ಟ ದೃಷ್ಟಿ ತಗುಲುವುದಿಲ್ಲ ಎಂಬುದು ತಲೆಮಾರುಗಳ ನಂಬಿಕೆ. ಆದರೆ, ಪವಿತ್ರವೆಂದು ಭಾವಿಸುವ ಈ ಸಂಪ್ರದಾಯ ಇಂದು ಮಕ್ಕಳ ಪಾಲಿಗೆ ಆರೋಗ್ಯದ ಸಂಕಷ್ಟವಾಗಿ ಪರಿಣಮಿಸುತ್ತಿದೆ ಹೌದು ನಾವು ಪ್ರೀತಿಯಿಂದ ಮಗುವಿನ ಕಣ್ಣಿಗೆ ಹಚ್ಚುವ ಕಾಡಿಗೆಯ ಹಿಂದೆ ಅಡಗಿರುವ ಆಘಾತಕಾರಿ ಸತ್ಯವೊಂದನ್ನು ಆಧುನಿಕ ವೈದ್ಯಕೀಯ ವಿಜ್ಞಾನವು ಬಯಲಿಗೆಳೆದಿದೆ ಇತ್ತೀಚೆಗೆ ಉತ್ತರ […]

ಕನ್ನಡ ದುನಿಯಾ 5 Feb 2026 2:18 pm

BREAKING : ಸಾರ್ವಜನಿಕ ಸ್ಥಳದಲ್ಲಿ ಸಿಗರೇಟ್ ಸೇದಿ ಫೋಟೋಶೂಟ್ : ಬಿಗ್ ಬಾಸ್ ಮಾಜಿ ಸ್ಪರ್ಧಿ ರಜತ್ ವಿರುದ್ಧ ‘FIR’ದಾಖಲು.!

ಮೈಸೂರು : ಬಿಗ್ ಬಾಸ್ ಕನ್ನಡ ಸೀಸನ್ 11ರ ಮಾಜಿ ಸ್ಪರ್ಧಿ ರಜತ್ ವಿರುದ್ಧ ಎಫ್ಐಆರ್ (FIR) ದಾಖಲಾಗಿದೆ. ಮೈಸೂರಿನ ಲಕ್ಷ್ಮೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಪ್ರಕರಣ ಅವರ ಫೋಟೋಶೂಟ್ ಗೆ ಸಂಬಂಧಪಟ್ಟದ್ದಾಗಿದೆ. ಹೌದು. ವಿವಾದಗಳ ಮೂಲಕವೇ ಸುದ್ದಿಯಾಗುವ ಬಿಗ್ ಬಾಸ್ ಕನ್ನಡ ಸೀಸನ್ 11ರ ಮಾಜಿ ಸ್ಪರ್ಧಿ ರಜತ್ ವಿರುದ್ಧ ಈಗ ಮೈಸೂರಿನಲ್ಲಿ ಎಫ್ಐಆರ್ ದಾಖಲಾಗಿದೆ. ಪಾರಂಪರಿಕ ಕಟ್ಟಡವೊಂದರ ಮುಂದೆ ನಿಯಮ ಮೀರಿ ಫೋಟೋಶೂಟ್ ಮಾಡಿಸಿರುವುದು ಈ ಕಾನೂನು ಸಂಕಷ್ಟಕ್ಕೆ ಕಾರಣವಾಗಿದೆ. ರಜತ್ […]

ಕನ್ನಡ ದುನಿಯಾ 5 Feb 2026 1:36 pm

ಕೋಟ್ಯಾಂತರ ರೂ. ವಂಚನೆ ಪ್ರಕರಣ : ‘ಅಲ್ ಫಲಾಹ್’ವಿವಿಯ ಅಧ್ಯಕ್ಷ ಜವಾದ್ ಅಹ್ಮದ್ ಸಿದ್ದಿಕಿ ಅರೆಸ್ಟ್.!

ಫರೀದಾಬಾದ್ : ಹರಿಯಾಣದ ಫರೀದಾಬಾದ್‌ನಲ್ಲಿರುವ ಅಲ್ ಫಲಾಹ್ ವಿಶ್ವವಿದ್ಯಾಲಯವು ಮತ್ತೊಮ್ಮೆ ತನಿಖಾ ಸಂಸ್ಥೆಗಳ ಕಣ್ಣಿಗೆ ಬಿದ್ದಿದೆ. ದೆಹಲಿ ಪೊಲೀಸರ ಕ್ರೈಮ್ ಬ್ರಾಂಚ್ ವಿಭಾಗವು ವಿಶ್ವವಿದ್ಯಾಲಯದ ಅಧ್ಯಕ್ಷ ಜವಾದ್ ಅಹ್ಮದ್ ಸಿದ್ದಿಕಿ ಅವರನ್ನು ವಂಚನೆ ಮತ್ತು ನಕಲಿ ದಾಖಲೆ ಸೃಷ್ಟಿಸಿದ ಆರೋಪದ ಮೇಲೆ ಬಂಧಿಸಿದೆ. ಬಂಧನದ ನಂತರ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಪೊಲೀಸರು ನಾಲ್ಕು ದಿನಗಳ ಕಸ್ಟಡಿಗೆ ಪಡೆದಿದ್ದಾರೆ. ಈ ಹಿಂದೆ ಭಯೋತ್ಪಾದಕ ಜಾಲಕ್ಕೆ ಸಂಬಂಧಿಸಿದ ತನಿಖೆಯ ಸಂದರ್ಭದಲ್ಲಿ ಈ ವಿಶ್ವವಿದ್ಯಾಲಯದ ಹೆಸರು ಕೇಳಿಬಂದಿತ್ತು. ಎನ್‌ಐಎ (NIA) ಮತ್ತು […]

ಕನ್ನಡ ದುನಿಯಾ 5 Feb 2026 1:24 pm

ಬೆಂಗಳೂರಲ್ಲಿ ಪೋಷಕರ ಬೈಗುಳಕ್ಕೆ ನೊಂದ 13 ರ ಬಾಲಕಿ : ‘ಆ‍ಧಾರ್ ಕಾರ್ಡ್’ಹಿಡಿದು ತಮ್ಮನ ಜೊತೆ ಪರಾರಿ.!

ಬೆಂಗಳೂರು : ಬೆಂಗಳೂರಿನಲ್ಲಿ ನಡೆದ ಈ ಘಟನೆ ಇಡೀ ರಾಜ್ಯದ ಗಮನ ಸೆಳೆದಿದೆ. ಪೋಷಕರ ಬೈಗುಳಕ್ಕೆ ಮನನೊಂದ ಮಕ್ಕಳು ಮನೆ ಬಿಟ್ಟು ಹೋಗಿದ್ದು, ಪೋಷಕರು ಕಂಗಾಲಾಗಿದ್ದರು. ಕೊನೆಗೆ ಆಗಿದ್ದೇನು..? ಈ ಸುದ್ದಿ ಓದಿ. ಹೌದು, ಬೆಂಗಳೂರಿನ ಮಾರತಹಳ್ಳಿ ಸಮೀಪದ ಅಶ್ವತ್ಥನಗರದ ನಿವಾಸಿಗಳಾದ ಈ ಇಬ್ಬರು ಮಕ್ಕಳು ಟ್ಯೂಷನ್ ಕ್ಲಾಸ್ಗೆ ಚಕ್ಕರ್ ಹಾಕಿದ್ದರು. ಈ ವಿಷಯ ತಿಳಿದ ಪೋಷಕರು ಮಕ್ಕಳನ್ನು ಬೈದಿದ್ದರು. ಇದರಿಂದ ಮನನೊಂದ 13 ವರ್ಷದ ಬಾಲಕಿ ತನ್ನ 9 ವರ್ಷದ ತಮ್ಮನನ್ನು ಕರೆದುಕೊಂಡು ಮನೆಯಿಂದ ಹೊರಬಂದಿದ್ದಾಳೆ. […]

ಕನ್ನಡ ದುನಿಯಾ 5 Feb 2026 12:56 pm

ನಿಮ್ಮ ರೋಗನಿರೋಧಕ ಶಕ್ತಿ ಕಡಿಮೆ ಆಗಿದೆಯೇ? ದೇಹ ನೀಡುವ ಈ 5 ಮುನ್ಸೂಚನೆಗಳನ್ನು ಇಂದೇ ತಿಳಿಯಿರಿ

ನವದೆಹಲಿ: ಬದಲಾಗುತ್ತಿರುವ ಹವಾಮಾನ, ಮಿತಿಮೀರಿದ ಮಾಲಿನ್ಯ ಮತ್ತು ಒತ್ತಡದ ಜೀವನಶೈಲಿಯ ನಡುವೆ ನಮ್ಮ ದೇಹದ ಕಾವಲುಗಾರನಂತೆ ಕೆಲಸ ಮಾಡುವುದು ರೋಗನಿರೋಧಕ ವ್ಯವಸ್ಥೆ (Immunity System). ಆದರೆ ಈ ರಕ್ಷಾಕವಚ ದುರ್ಬಲಗೊಂಡಾಗ ದೇಹವು ಕೆಲವು ಸೌಮ್ಯ ಸಂಕೇತಗಳನ್ನು ನೀಡುತ್ತದೆ. ಇದನ್ನು ಸರಿಯಾದ ಸಮಯದಲ್ಲಿ ಗುರುತಿಸದಿದ್ದರೆ ದೊಡ್ಡ ಆರೋಗ್ಯ ಸಮಸ್ಯೆಗಳಿಗೆ ದಾರಿಯಾಗಬಹುದು. ದೆಹಲಿ ವೈದ್ಯಕೀಯ ಸಂಘದ ಮಾಜಿ ಅಧ್ಯಕ್ಷ ಡಾ. ಅನಿಲ್ ಬನ್ಸಾಲ್ ಅವರು ತಿಳಿಸುವಂತೆ, ದುರ್ಬಲ ರೋಗನಿರೋಧಕ ಶಕ್ತಿಯನ್ನು ಪತ್ತೆಹಚ್ಚಲು ಈ ಕೆಳಗಿನ 5 ಪ್ರಮುಖ ಲಕ್ಷಣಗಳ ಬಗ್ಗೆ […]

ಕನ್ನಡ ದುನಿಯಾ 5 Feb 2026 12:52 pm

GOOD NEWS : ಉದ್ಯೋಗಾಂಕ್ಷಿಗಳಿಗೆ ಗುಡ್ ನ್ಯೂಸ್ : ‘ಕಾಗ್ನಿಜೆಂಟ್’ ನಲ್ಲಿ 25,000 ಫ್ರೆಶರ್’ಗಳ ನೇಮಕಾತಿ.!

ಅಂತಾರಾಷ್ಟ್ರೀಯ ಐಟಿ ಸೇವಾ ದೈತ್ಯ ಸಂಸ್ಥೆ ಕಾಗ್ನಿಜೆಂಟ್ (Cognizant) ಮಹತ್ವದಅಂತಾರಾಷ್ಟ್ರೀಯ ಐಟಿ ಸೇವಾ ದೈತ್ಯ ಸಂಸ್ಥೆ ಕಾಗ್ನಿಜೆಂಟ್ (Cognizant) ಮಹತ್ವದ ಘೋಷಣೆಯೊಂದನ್ನು ಮಾಡಿದೆ. ಹೌದು. 2026ರ ಸಾಲಿನಲ್ಲಿ ಬರೋಬ್ಬರಿ 24,000 ದಿಂದ 25,000 ಫ್ರೆಶರ್‌’ಗಳನ್ನು ನೇಮಿಸಿಕೊಳ್ಳುವುದಾಗಿ ಕಂಪನಿ ತಿಳಿಸಿದೆ. ಕ್ಯಾಂಪಸ್ ನೇಮಕಾತಿಯನ್ನು ವೇಗಗೊಳಿಸುವ ಮೂಲಕ, ಕಂಪನಿಯು ತನ್ನ ‘ಬಾಟಮ್ ಆಫ್ ದಿ ಪಿರಮಿಡ್’ (Bottom of the Pyramid) ತಂತ್ರದ ಅಡಿಯಲ್ಲಿ ಪ್ರತಿಭಾವಂತರನ್ನು ಹೆಚ್ಚಿಸಿಕೊಳ್ಳಲು ಯೋಜಿಸಿದೆ. ಇದು 2025ಕ್ಕೆ ಹೋಲಿಸಿದರೆ ಸುಮಾರು ಶೇ. 20 ರಷ್ಟು ಹೆಚ್ಚಳವಾಗಿದೆ. […]

ಕನ್ನಡ ದುನಿಯಾ 5 Feb 2026 12:24 pm

ALERT : ಸಾರ್ವಜನಿಕರೇ ಎಚ್ಚರ : ಈ 10 ವಹಿವಾಟುಗಳನ್ನು ಮಾಡಿದ್ರೆ ‘IT’ನೋಟಿಸ್ ಬರಬಹುದು.!

ನೀವು ಪ್ರತಿದಿನ ನಿಮ್ಮ ಉಳಿತಾಯ ಖಾತೆಯಿಂದ ಪಾವತಿಗಳು, ವರ್ಗಾವಣೆಗಳು ಮತ್ತು ನಗದು ಹಿಂಪಡೆಯುವಿಕೆಗಳನ್ನು ಮಾಡುತ್ತೀರಿ. ಆದರೆ ಈ ದೈನಂದಿನ ಕೆಲಸಗಳು ಸಹ ಕೆಲವೊಮ್ಮೆ ಆದಾಯ ತೆರಿಗೆ ಇಲಾಖೆಯ ತನಿಖೆಗೆ ಒಳಪಡಬಹುದು ಎಂಬುದು ನಿಮಗೆ ತಿಳಿದಿದೆಯೇ? ಉಳಿತಾಯ ಖಾತೆ ಕೇವಲ ಹಣವನ್ನು ಸಂಗ್ರಹಿಸಲು ಮತ್ತು ಖರ್ಚು ಮಾಡಲು ಇರುವ ಮಾರ್ಗ ಎಂದು ನೀವು ಭಾವಿಸಿದರೆ, ಇಂದಿನ ದಿನಗಳಲ್ಲಿ ಆದಾಯ ತೆರಿಗೆ ಇಲಾಖೆಯು ಪ್ರತಿ ಪ್ರಮುಖ ವಹಿವಾಟನ್ನು ಮೇಲ್ವಿಚಾರಣೆ ಮಾಡಬಲ್ಲದು ಎಂದು ತಿಳಿದುಕೊಳ್ಳಿ. ವಿಶೇಷವಾಗಿ ನಿಮ್ಮ ಖಾತೆಗೆ ದೊಡ್ಡ ಮೊತ್ತದ […]

ಕನ್ನಡ ದುನಿಯಾ 5 Feb 2026 12:14 pm

ದೆಹಲಿಯಲ್ಲಿ 15 ದಿನಗಳಲ್ಲಿ 800 ಮಂದಿ ಮಿಸ್ಸಿಂಗ್.. ! ರಾಜಧಾನಿಯಲ್ಲಿ ನಡೆಯುತ್ತಿರುವುದೇನು ?

ನವದೆಹಲಿ : ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆಯುತ್ತಿರುವ ಮಿಸ್ಸಿಂಗ್ ಪ್ರಕರಣ ದೇಶವನ್ನೇ ಬೆಚ್ಚಿ ಬೀಳಿಸಿದೆ. ಹೌದು. 2026ರ ವರ್ಷದ ಮೊದಲ 15 ದಿನಗಳಲ್ಲಿ (ಜನವರಿ 1 ರಿಂದ 15 ರವರೆಗೆ) ಬರೋಬ್ಬರಿ 800ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ ಎಂದು ದೆಹಲಿ ಪೊಲೀಸರು ಅಂಕಿಅಂಶಗಳನ್ನು ಬಿಡುಗಡೆ ಮಾಡಿದ್ದಾರೆ. ಅಂದರೆ, ಸರಾಸರಿ ದಿನಕ್ಕೆ 54 ಮಂದಿ ನಾಪತ್ತೆಯಾಗುತ್ತಿದ್ದಾರೆ. ಇವರಲ್ಲಿ ಮಹಿಳೆಯರು ಮತ್ತು ಹೆಣ್ಣು ಮಕ್ಕಳ ಸಂಖ್ಯೆಯೇ ಹೆಚ್ಚಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ. ನಾಪತ್ತೆಯಾದ 800 ಮಂದಿಯಲ್ಲಿ 509 ಮಹಿಳೆಯರು ಮತ್ತು […]

ಕನ್ನಡ ದುನಿಯಾ 5 Feb 2026 11:57 am

ಬಂಗಾರ ಪ್ರಿಯರಿಗೆ ಬಂಪರ್ ಗಿಫ್ಟ್: ಏರಿದಷ್ಟೇ ವೇಗವಾಗಿ ಕುಸಿದ ಚಿನ್ನದ ದರ: ಒಂದೇ ದಿನ ಭರ್ಜರಿ ₹5,000 ಇಳಿಕೆ ಬೆಳ್ಳಿಯೂ ಅಗ್ಗ

ಬೆಂಗಳೂರು: ಬುಧವಾರವಷ್ಟೇ ಬರೋಬ್ಬರಿ 6600 ರೂಪಾಯಿ ಏರಿಕೆ ಕಂಡು ಆಭರಣ ಪ್ರಿಯರಲ್ಲಿ ದಿಗಿಲು ಹುಟ್ಟಿಸಿದ್ದ ಚಿನ್ನದ ದರ ಇಂದು ಅಷ್ಟೇ ವೇಗವಾಗಿ ಕುಸಿತ ಕಂಡಿದೆ. ಫೆಬ್ರವರಿ 5, 2026ರ ಗುರುವಾರದಂದು ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಭಾರೀ ಇಳಿಕೆ ಹಾದಿ ಹಿಡಿಯುವ ಮೂಲಕ ಗ್ರಾಹಕರಿಗೆ ಕೊಂಚ ನಿರಾಳ ತಂದಿದೆ. ನಿನ್ನೆ ಏರಿಕೆ ಕಂಡಂತ ಚಿನ್ನದ ದರ ಇಂದು ದಿಢೀರ್ ತಿರುವು ಪಡೆದಿದೆ. 24 ಕ್ಯಾರೆಟ್ ಮಾತ್ರವಲ್ಲದೆ 22 ಕ್ಯಾರೆಟ್ ಹಾಗೂ 18 ಕ್ಯಾರೆಟ್ ಚಿನ್ನದ ದರಗಳೂ ಕೂಡ […]

ಕನ್ನಡ ದುನಿಯಾ 5 Feb 2026 11:36 am

ಟ್ಯಾಕ್ಸಿ ಸಿಗದೆ ಪರದಾಡಿದ ಕುಟುಂಬಕ್ಕೆ ವರದಾನವಾದ ಬ್ಲಿಂಕಿಟ್: ಉಚಿತ ಅಂಬುಲೆನ್ಸ್ ಸೇವೆ ಕಂಡು ನೆಟ್ಟಿಗರು ಫಿದಾ

ತುರ್ತು ಸಂದರ್ಭದಲ್ಲಿ ಸಹಾಯಕ್ಕೆ ಬರುವುದು ದೇವರೆಂದು ನಂಬುವ ಭಾರತೀಯರಿಗೆ ಈಗ ತಂತ್ರಜ್ಞಾನವೂ ಅಂತಹದ್ದೇ ನೆರವು ನೀಡುತ್ತಿದೆ. ಮುಂಬೈನ ಯುವತಿಯೊಬ್ಬಳು ದೆಹಲಿಯಲ್ಲಿರುವ ತನ್ನ ಕುಟುಂಬಕ್ಕೆ ಎದುರಾದ ವೈದ್ಯಕೀಯ ತುರ್ತು ಪರಿಸ್ಥಿತಿಯಲ್ಲಿ ಬ್ಲಿಂಕಿಟ್ ಸಂಸ್ಥೆಯ ಅಂಬುಲೆನ್ಸ್ ಸೇವೆ ಹೇಗೆ ಸಮಯಕ್ಕೆ ಸರಿಯಾಗಿ ನೆರವಾಯಿತು ಎಂಬುದನ್ನು ಹಂಚಿಕೊಂಡಿದ್ದಾರೆ. ಕೇವಲ ಹಣ ಗಳಿಕೆಯಷ್ಟೇ ಅಲ್ಲದೆ ಮಾನವೀಯತೆಯ ದೃಷ್ಟಿಯಿಂದ ಈ ಸೇವೆ ಉಚಿತವಾಗಿ ದೊರೆತದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಸಂಕಷ್ಟದ ಆ ಮುಂಜಾನೆ ಮುಂಬೈನಲ್ಲಿರುವ ಪ್ರಾಚಿ ಎಂಬ ಯುವತಿಗೆ ಬೆಳಿಗ್ಗೆ 4 ಗಂಟೆಗೆ ದೆಹಲಿಯಿಂದ […]

ಕನ್ನಡ ದುನಿಯಾ 5 Feb 2026 11:30 am

ಲವರ್ ಜೊತೆ ಮಹಿಳೆ ಅಕ್ರಮ ಸಂಬಂಧ : ಹೋಟೆಲ್ ರೂಮ್’ಗೆ ನುಗ್ಗಿದ ಪತಿಗೆ ಶಾಕಿಂಗ್ ಉತ್ತರ |WATCH VIDEO

ಉತ್ತರ ಪ್ರದೇಶದ ಝಾನ್ಸಿಯಲ್ಲಿ ಪತಿಯ ಅನುಪಸ್ಥಿತಿಯ ಲಾಭ ಪಡೆದ ಪತ್ನಿಯೊಬ್ಬಳು ತನ್ನ ಪ್ರಿಯಕರನೊಂದಿಗೆ ಹೋಟೆಲ್ಗೆ ತೆರಳಿದ್ದಾಳೆ. ಇದನ್ನು ಗಮನಿಸಿದ ಪತಿ ಅವರನ್ನು ಹಿಂಬಾಲಿಸಿ ಹೋಟೆಲ್ನಲ್ಲಿ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಈ ವೇಳೆ ಹೋಟೆಲ್ ಆವರಣದಲ್ಲಿ ದೊಡ್ಡ ಮಟ್ಟದ ಗಲಾಟೆ ನಡೆದಿದ್ದು, ಜನರು ಜಮಾಯಿಸಿದ್ದಾರೆ. ಈ ಘಟನೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪತಿ ಹೋಟೆಲ್ ಕೋಣೆಗೆ ನುಗ್ಗಿ ಪತ್ನಿ ಮತ್ತು ಆಕೆಯ ಪ್ರಿಯಕರನನ್ನು ಹೊರಬರುವಂತೆ ಮಾಡಿದ್ದಾರೆ. ಕೋಣೆಯಿಂದ ಹೊರಬಂದ ಪತ್ನಿ ಮತ್ತು ಪತಿಯ […]

ಕನ್ನಡ ದುನಿಯಾ 5 Feb 2026 11:29 am

BREAKING : ‘ನಮ್ಮ ಮೆಟ್ರೋ’ಟಿಕೆಟ್ ದರ ಏರಿಕೆ ಮಾಡಿ ‘BMRCL’ಅಧಿಕೃತ ಆದೇಶ : ಫೆ.9 ರಿಂದ ಪರಿಷ್ಕೃತ ದರ ಜಾರಿ.!

ಬೆಂಗಳೂರು : ಬೆಂಗಳೂರಿನ ಜೀವನಾಡಿ ಎನಿಸಿಕೊಂಡಿರುವ ‘ನಮ್ಮ ಮೆಟ್ರೋ’ (BMRCL) ಪ್ರಯಾಣ ದರವನ್ನು ಏರಿಕೆ ಮಾಡಿ ಅಧಿಕೃತ ಆದೇಶ ಹೊರಡಿಸಿದೆ. ಹೌದು, ಮೆಟ್ರೋ ರೈಲುಗಳಲ್ಲಿ ಪ್ರತಿದಿನ ಸಂಚರಿಸುವ ಸಾವಿರಾರು ಪ್ರಯಾಣಿಕರಿಗೆ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ದರ ಏರಿಕೆಯ ಶಾಕ್ ನೀಡಿದೆ. ಫೆಬ್ರವರಿ 9, 2026 ರಿಂದ ಜಾರಿಗೆ ಬರುವಂತೆ ಮೆಟ್ರೋ ಟಿಕೆಟ್ ದರಗಳನ್ನು ಪರಿಷ್ಕರಿಸಿ ಅಧಿಕೃತ ಆದೇಶ ಹೊರಡಿಸಲಾಗಿದೆ. ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಮೆಟ್ರೋ ರೈಲ್ವೇಸ್ (ಕಾರ್ಯಾಚರಣೆ ಮತ್ತು […]

ಕನ್ನಡ ದುನಿಯಾ 5 Feb 2026 11:12 am

CBSE ಬೋರ್ಡ್ ಪರೀಕ್ಷೆ 2026: 10 ಮತ್ತು 12ನೇ ತರಗತಿ ಪ್ರವೇಶ ಪತ್ರ ಬಿಡುಗಡೆ: ಡೌನ್‌ಲೋಡ್ ಮಾಡುವುದು ಹೇಗೆ?

ನವದೆಹಲಿ: ಕೇಂದ್ರ ಪ್ರೌಢಶಿಕ್ಷಣ ಮಂಡಳಿ (CBSE) 2026ರ ಸಾಲಿನ 10 ಮತ್ತು 12ನೇ ತರಗತಿಯ ಬೋರ್ಡ್ ಪರೀಕ್ಷೆಗಳ ಪ್ರವೇಶ ಪತ್ರವನ್ನು (Admit Card) ಅಧಿಕೃತವಾಗಿ ಬಿಡುಗಡೆ ಮಾಡಿದೆ. ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ತಮ್ಮ ಶಾಲೆಯ ಮೂಲಕ ಪ್ರವೇಶ ಪತ್ರಗಳನ್ನು ಪಡೆದುಕೊಳ್ಳಬಹುದಾಗಿದೆ. ಪರೀಕ್ಷೆ ಯಾವಾಗ ಆರಂಭ?ಸಿಬಿಎಸ್‌ಇ ವೇಳಾಪಟ್ಟಿಯಂತೆ 10 ಮತ್ತು 12ನೇ ತರಗತಿಯ ಪರೀಕ್ಷೆಗಳು ಫೆಬ್ರವರಿ 17, 2026 ರಿಂದ ಪ್ರಾರಂಭವಾಗಲಿವೆ. ವಿದ್ಯಾರ್ಥಿಗಳಿಗೆ ನೇರ ಡೌನ್‌ಲೋಡ್ ಅವಕಾಶವಿಲ್ಲಸಿಬಿಎಸ್‌ಇ ಮಾರ್ಗಸೂಚಿಯ ಪ್ರಕಾರ, ವಿದ್ಯಾರ್ಥಿಗಳು ನೇರವಾಗಿ ಪ್ರವೇಶ ಪತ್ರಗಳನ್ನು ಡೌನ್‌ಲೋಡ್ ಮಾಡಲು […]

ಕನ್ನಡ ದುನಿಯಾ 5 Feb 2026 11:10 am

ಕ್ಷಮಿಸಿ ಮಮ್ಮಿ-ಪಪ್ಪಾ… : ಪೋಷಕರಿಗೆ ಆಘಾತ ತಂದ ಮೂವರು ಹೆಣ್ಣು ಮಕ್ಕಳ ಡೆತ್ ನೋಟ್.!

ಘಾಜಿಯಾಬಾದ್ : ಉತ್ತರ ಪ್ರದೇಶದ ಘಾಜಿಯಾಬಾದ್‘ನ ‘ಭಾರತ್ ಸಿಟಿ’ ಎಂಬ ವಸತಿ ಸಮುಚ್ಚಯದಲ್ಲಿ ಬುಧವಾರ ಮುಂಜಾನೆ ಯಾರೂ ಊಹಿಸದ ಭೀಕರ ಘಟನೆಯೊಂದು ಸಂಭವಿಸಿದೆ. ಒಂದೇ ಮನೆಯ ಮೂವರು ಅಪ್ರಾಪ್ತ ಸಹೋದರಿಯರು ಒಟ್ಟಾಗಿ ಸಾವಿಗೆ ಶರಣಾಗುವ ಮೂಲಕ ಇಡೀ ದೇಶವೇ ಬೆಚ್ಚಿಬೀಳುವಂತೆ ಮಾಡಿದ್ದಾರೆ. ಘಾಜಿಯಾಬಾದ್‘ನ ಅಪಾರ್ಟ್ಮೆಂಟ್ ಒಂದರ 9ನೇ ಮಹಡಿಯಿಂದ ಜಿಗಿದು ಮೂವರು ಅಪ್ರಾಪ್ತ ಸಹೋದರಿಯರು ಆತ್ಮಹತ್ಯೆ ಮಾಡಿಕೊಂಡ ಘಟನೆ ಎಲ್ಲರನ್ನು ಬೆಚ್ಚಿ ಬೀಳಿಸಿದೆ. ಈ ಘಟನೆ ಕುರಿತಾದ ಹಲವು ಆಘಾತಕಾರಿ ವಿಚಾರಗಳು ಒಂದೊಂದಾಗಿಯೇ ಹೊರ ಬರುತ್ತಿದೆ. ಬೆಳಗಿನ […]

ಕನ್ನಡ ದುನಿಯಾ 5 Feb 2026 10:51 am

ಸರ್ಜ್ ಪ್ರೈಸ್‌ಗೆ ಬ್ರೇಕ್ ಸಾರಥಿಯೇ ಮಾಲೀಕ: ಭಾರತ್ ಟ್ಯಾಕ್ಸಿ ಕ್ರಾಂತಿಗೆ ಅಮಿತ್ ಶಾ ಇಂದು ಚಾಲನೆ

ನವದೆಹಲಿ: ದೇಶದ ಟ್ಯಾಕ್ಸಿ ಮಾರುಕಟ್ಟೆಯಲ್ಲಿ ಹೊಸ ಕ್ರಾಂತಿ ಸೃಷ್ಟಿಸಲು ಸಜ್ಜಾಗಿರುವ, ಕೇಂದ್ರ ಸರ್ಕಾರದ ಬೆಂಬಲಿತ ‘ಭಾರತ್ ಟ್ಯಾಕ್ಸಿ’ (Bharat Taxi) ಆ್ಯಪ್‌ಗೆ ಇಂದು ಚಾಲನೆ ಸಿಗಲಿದೆ. ಕೇಂದ್ರ ಸಹಕಾರ ಸಚಿವ ಅಮಿತ್ ಶಾ ಅವರು ಇಂದು ಮಧ್ಯಾಹ್ನ 3 ಗಂಟೆಗೆ ದೆಹಲಿಯಲ್ಲಿ ಈ ಮಹತ್ವಾಕಾಂಕ್ಷಿ ಯೋಜನೆಗೆ ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ ಏನಿದು ಭಾರತ್ ಟ್ಯಾಕ್ಸಿ?ಇದು ಕೇವಲ ಮತ್ತೊಂದು ಟ್ಯಾಕ್ಸಿ ಆ್ಯಪ್ ಅಲ್ಲ ಇದು ಸಹಕಾರ ಮಾದರಿ (Cooperative Model) ಮೇಲೆ ನಡೆಯುವ ಸಂಸ್ಥೆ. ಸಹಕಾರ್ ಟ್ಯಾಕ್ಸಿ ಕೋ-ಆಪರೇಟಿವ್ […]

ಕನ್ನಡ ದುನಿಯಾ 5 Feb 2026 10:37 am