SENSEX
NIFTY
GOLD
USD/INR

Weather

24    C

ಡಿಜಿಟಲ್ ಸುದ್ದಿ ಮೂಲಗಳು

... ...View News by News Source

‘ಭಾರತ್ ಪೆಟ್ರೋಲಿಯಂ’ಸಂಸ್ಥೆಯಲ್ಲಿ ನೇಮಕಾತಿ, ಇಂದೇ ಅರ್ಜಿ ಸಲ್ಲಿಸಿ

ಭಾರತ್ ಪೆಟ್ರೋಲಿಯಂ ಸಂಸ್ಥೆ, ಮಂಗಳೂರು ಪ್ರದೇಶದ ಭಂಟ್ವಾಳ ತಾಲ್ಲೂಕಿನಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಮಾರಾಟ ಕುರಿತಂತೆ ಸೇವೆಯನ್ನು ಒದಗಿಸಲು ಮಾಜಿ ಸೈನಿಕರಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಮುಖಾಂತರ ಜ. 12 ರೊಳಗಾಗಿ ಅರ್ಜಿಯನ್ನು ಸಲ್ಲಿಸುವಂತೆ ಶಿವಮೊಗ್ಗ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಹೆಚ್ಚಿನ ಮಾಹಿತಿಗಾಗಿ “www.bharatpetroleum.in“ ಜಾಲತಾಣವನ್ನು ಸಂಪರ್ಕಿಸಬಹುದಾಗಿದೆ.

ಕನ್ನಡ ದುನಿಯಾ 12 Jan 2026 12:57 pm

NPCIL ನಲ್ಲಿ 114 ಹುದ್ದೆಗಳ ಭರ್ತಿ; ₹55,000 ವರೆಗೆ ಸಂಬಳ

ಬೆಂಗಳೂರು: ಕೇಂದ್ರ ಸರ್ಕಾರದ ಪ್ರತಿಷ್ಠಿತ ಸಂಸ್ಥೆಯಾದ ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (NPCIL) ನಲ್ಲಿ ಉದ್ಯೋಗದ ಕನಸು ಕಾಣುತ್ತಿರುವವರಿಗೆ ಸುವರ್ಣಾವಕಾಶ ಒದಗಿಬಂದಿದೆ. ವಿವಿಧ ತಾಂತ್ರಿಕ ಮತ್ತು ತಾಂತ್ರಿಕೇತರ ವಿಭಾಗಗಳಲ್ಲಿ ಖಾಲಿ ಇರುವ ಒಟ್ಟು 114 ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಹೊರಬಿದ್ದಿದೆ. ಲಭ್ಯವಿರುವ ಹುದ್ದೆಗಳು: ಹುದ್ದೆಯ ಹೆಸರು ಸಂಖ್ಯೆ ಮಾಸಿಕ ವೇತನ ವೈಜ್ಞಾನಿಕ ಸಹಾಯಕ (Scientific Assistant) 02 ₹55,932 ಸ್ಟೈಪೆಂಡಿಯರಿ ಟ್ರೈನಿ/ಟೆಕ್ನಿಷಿಯನ್ 95 ₹34,286 ಸಹಾಯಕ ದರ್ಜೆ-1 (Assistant Grade-1) 15 ₹40,290 […]

ಕನ್ನಡ ದುನಿಯಾ 12 Jan 2026 12:50 pm

BREAKING: ಕಾನೂನು ವಿವಿ ಇಂಜಿನಿಯರ್ ವಿಠಲ ರಾಠೋಡ್ ಕೊಲೆ ಕೇಸ್: ದಂಪತಿ ಸೇರಿ ಮೂವರು ಅರೆಸ್ಟ್

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಕಾನೂನು ವಿವಿ ಇಂಜಿನಿಯರ್ ವಿಠಲ ರಾಠೋಡ್ ಕೊಲೆ ಕೇಸ್ ಗೆ ಸಂಬಂಧಿಸಿದಂತೆ ದಂಪತಿ ಸೇರಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಹುಬ್ಬಳ್ಳಿಯ ನವನಗರ ಠಾಣೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ಮೇಘವ್ ಹಾಗೂ ಆತನ ಪತ್ನಿ ವಿಮಲಾ ಹಾಗೂ ಭಗವಾನ್ ಎಂದು ಗುರುತಿಸಲಾಗಿದೆ. ಕಾನೂನು ವಿವಿ ಇಂಜಿನಿಯರ್ ವಿಠಲ ರಾಠೋಡ್ ನನ್ನು ನಿರ್ಮಾಣ ಹಂತದ ಕಟ್ಟಡದ ಮೇಲಿನಿಂದ ತಳ್ಳಿ ಹತ್ಯೆ ಮಾಡಿದ್ದರು. ಆದರೆ ವಿದ್ಯಾರ್ಥಿ ಕಟ್ಟಡದ ಮೇಲಿನಿಂದ ಆಕಸ್ನಿಕವಾಗಿ ಬಿದ್ದು ಮೃತಪಟ್ಟಿದ್ದಾನೆ ಎಂದು ಆರೋಪಿಗಳು […]

ಕನ್ನಡ ದುನಿಯಾ 12 Jan 2026 12:41 pm

Gold–Silver Update: ಚಿನ್ನದ ಬೆಲೆ ಏಕಾಏಕಿ ₹1,690 ರೂ ಏರಿಕೆ

ಆಭರಣ ಪ್ರಿಯರಿಗೆ ವಾರದ ಆರಂಭದಲ್ಲೇ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಜಾಗತಿಕ ರಾಜಕೀಯ ಅನಿಶ್ಚಿತತೆಯ ನಡುವೆ ಸುರಕ್ಷಿತ ಹೂಡಿಕೆಯಾಗಿ ಚಿನ್ನಕ್ಕೆ ಬೇಡಿಕೆ ಹೆಚ್ಚುತ್ತಿದ್ದು, ಇಂದು ಸೋಮವಾರ ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಹಿಂದೆಂದೂ ಕಾಣದ ಎತ್ತರಕ್ಕೆ ಏರಿವೆ.ಬೆಳ್ಳಿ ಬೆಲೆ ಕೂಡ ಚಿನ್ನದ ಹಾದಿಯಲ್ಲೇ ಸಾಗುತ್ತಿದೆ. ಇಂದು ಬೆಳ್ಳಿಯ ದರದಲ್ಲಿ ಪ್ರತಿ 100 ಗ್ರಾಂಗೆ 10-12 ರೂ. ಏರಿಕೆಯಾಗಿದೆ. ತಮಿಳುನಾಡು ಮತ್ತು ಕೇರಳದ ಕೆಲವೆಡೆ ಪ್ರತಿ 100 ಗ್ರಾಂ ಬೆಳ್ಳಿ ಬೆಲೆ ₹28,700 ತಲುಪಿದ್ದು, ಈ […]

ಕನ್ನಡ ದುನಿಯಾ 12 Jan 2026 12:30 pm

BREAKING: ರೇಣುಕಾಸ್ವಾಮಿ ಹತ್ಯೆ ಪ್ರಕರಣ: ಆರೋಪಿ ಪವಿತ್ರಾ ಗೌಡಗೆ ವಾರಕ್ಕೊಮ್ಮೆ ಮನೆಯೂಟ: ಆದೇಶ ಮಾರ್ಪಡಿಸಿದ ಕೋರ್ಟ್

ಬೆಂಗಳೂರು: ನಟ ದರ್ಶನ್ ಹಾಗೂ ಗ್ಯಾಂಗ್ ನಿಂದ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಎ1 ಆರೋಪಿಯಾಗಿರುವ ಪವಿತ್ರಾ ಗೌಡಗೆ ಮನೆಯೂಟ ಪೂರೈಕೆ ವಿಚಾರದಲ್ಲಿ ಕೋರ್ಟ್ ತನ್ನ ಆದೇಶ ಮಾರ್ಪಡಿಸಿದೆ. ಪರಪ್ಪನ ಅಗ್ರಹಾರ ಜೈಲು ಪಾಲಾಗಿರುವ ಪವಿತ್ರಾ ಗೌಡ, ನಟ ದರ್ಶನ್ ಹಾಗೂ ಗ್ಯಾಂಗ್, ಮನೆಯೂಟಕ್ಕಾಗಿ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ನಟ ದರ್ಶನ್ ಗೆ ಮನೆಯೂಟಕ್ಕೆ ಕೋರ್ಟ್ ನಿರಾಕರಿಸಿತ್ತು. ಪವಿತ್ರಾ ಗೌಡಗೆ ಪ್ರತಿದಿನ ಮನೆಯೂಟ ನೀಡಲು ಕೋರ್ಟ್ ಅವಕಾಶ ನೀಡಿತ್ತು. ಆದರೆ ಜೈಲಾಧಿಕಾರಿಗಳು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು. ಕೈದಿಯೊಬ್ಬಳಿಗೆ […]

ಕನ್ನಡ ದುನಿಯಾ 12 Jan 2026 12:27 pm

Post office Scheme : ಅಂಚೆ ಕಚೇರಿಯ ಈ ಯೋಜನೆಯಡಿ ಹೂಡಿಕೆ ಮಾಡಿದ್ರೆ ಪ್ರತಿ ತಿಂಗಳು ನಿಮ್ಮ ಖಾತೆಗೆ 9,250 ರೂ. ಜಮಾ!

ಅಂಚೆ ಕಚೇರಿ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡುವವರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದೆ. ಜನವರಿ 1, 2025 ರಿಂದ ಪ್ರಾರಂಭವಾಗುವ ಹೊಸ ತ್ರೈಮಾಸಿಕಕ್ಕೆ ಬಡ್ಡಿದರಗಳಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಇದರರ್ಥ ಹೂಡಿಕೆದಾರರಿಗೆ ಹಿಂದಿನ ಆಕರ್ಷಕ ಬಡ್ಡಿದರಗಳು ಲಭ್ಯವಿರುತ್ತವೆ. ಸುರಕ್ಷಿತ ಆದಾಯವನ್ನು ಬಯಸುವ ಸಾಮಾನ್ಯ ವ್ಯಕ್ತಿಗಾಗಿ ಅಂಚೆ ಕಚೇರಿ ಅನೇಕ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಅವುಗಳಲ್ಲಿ, ಮಾಸಿಕ ಆದಾಯ ಯೋಜನೆ (MIS) ಪ್ರಸ್ತುತ ಎಲ್ಲರ ಗಮನ ಸೆಳೆಯುತ್ತಿದೆ. ಪ್ರತಿ ತಿಂಗಳು ಸ್ಥಿರ ಆದಾಯವನ್ನು ಬಯಸುವವರಿಗೆ ಈ ಯೋಜನೆ ವರದಾನವಾಗಿದೆ. […]

ಕನ್ನಡ ದುನಿಯಾ 12 Jan 2026 12:26 pm

ಆಕಾಂಕ್ಷಿ V/S ಅಭ್ಯರ್ಥಿ: ಚಾಮರಾಜ ಕ್ಷೇತ್ರಕ್ಕೆ ಆರ್.ಅಶೋಕ ಭೇಟಿ!

2028ರ ವಿಧಾನಸಭೆ ಚುನಾವಣೆ ದೂರದಲ್ಲಿದ್ದರೂ ಮೈಸೂರು ನಗರದ ಚಾಮರಾಜ ಕ್ಷೇತ್ರ ಸುದ್ದಿಯಲ್ಲಿದೆ. ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ V/S ಅಭ್ಯರ್ಥಿ ಫೈಟ್ ಜೋರಾಗಿದೆ. ಮೈಸೂರು-ಕೊಡಗು ಕ್ಷೇತ್ರದ ಮಾಜಿ ಸಂಸದ ಪ್ರತಾಪ್ ಸಿಂಹ ಚಾಮರಾಜದಲ್ಲಿ ಟಿಕೆಟ್ ಬಯಸಿರುವುದು ಚರ್ಚೆಗೆ ಕಾರಣವಾಗಿದೆ. ವಿರೋಧ ಪಕ್ಷದ ನಾಯಕ ಆರ್.ಅಶೋಕ ಮೈಸೂರಿಗೆ ಭೇಟಿ ನೀಡಿದ್ದರು. ಚಾಮರಾಜ ವಿಧಾನಸಭಾ ಕ್ಷೇತ್ರದ ವಾರ್ಡ್ ನಂಬರ್ 23ರ ಗ್ರೀನ್ ಹೆರಿಟೇಜ್ ಹೋಟೆಲ್‌ನಲ್ಲಿ ಆರ್. ಅಶೋಕ್ ಬಿಜೆಪಿ ನಾಯಕರನ್ನು ಭೇಟಿ ಮಾಡಿದ್ದಾರೆ. ಮಾಜಿ ಸಂಸದ ಪ್ರತಾಪ್ ಸಿಂಹ, ಹಾಲಿ […]

ಕನ್ನಡ ದುನಿಯಾ 12 Jan 2026 12:03 pm

BREAKING : ‘ಕರೂರು ಕಾಲ್ತುಳಿತ’ದುರಂತ ಕೇಸ್ : ‘CBI ‘ಎದುರು ವಿಚಾರಣೆಗೆ ಹಾಜರಾದ ನಟ ವಿಜಯ್ |WATCH VIDEO

ಕರೂರ್ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಮತ್ತು ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥ ವಿಜಯ್ ಇಂದು ನವದೆಹಲಿಯಲ್ಲಿ ಕೇಂದ್ರ ತನಿಖಾ ದಳ (ಸಿಬಿಐ) ಮುಂದೆ ಹಾಜರಾದರು. ಕಳೆದ ವರ್ಷ ನಡೆದ ಕಾಲ್ತುಳಿತದ ತನಿಖೆಯ ಭಾಗವಾಗಿ ವಿಜಯ್ ಅವರಿಗೆ ಸಿಬಿಐ ಸಮನ್ಸ್ ಜಾರಿ ಮಾಡಿತ್ತು. ಅಕ್ಟೋಬರ್ 2025 ರಲ್ಲಿ, ಸುಪ್ರೀಂ ಕೋರ್ಟ್ ಈ ಘಟನೆಯ ಬಗ್ಗೆ ಸಿಬಿಐ ತನಿಖೆಗೆ ಆದೇಶಿಸಿತು. ತಮಿಳುನಾಡಿನಲ್ಲಿ ನಡೆದ ರಾಜಕೀಯ ರ್ಯಾಲಿಯಲ್ಲಿ ಸಂಭವಿಸಿದ ಭೀಕರ ಕಾಲ್ತುಳಿತದಲ್ಲಿ 41 ಜನರು ಸಾವನ್ನಪ್ಪಿದ ಸುಮಾರು ನಾಲ್ಕು […]

ಕನ್ನಡ ದುನಿಯಾ 12 Jan 2026 11:55 am

ರಿಲಯನ್ಸ್ ಫೌಂಡೇಷನ್ ವಿದ್ಯಾರ್ಥಿ ವೇತನ: ಕರ್ನಾಟಕದ 680 ವಿದ್ಯಾರ್ಥಿಗಳು ಆಯ್ಕೆ

2025-26ನೇ ಸಾಲಿನ ರಿಲಯನ್ಸ್ ಫೌಂಡೇಷನ್‌ನ ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿ ವೇತನಕ್ಕೆ ಕರ್ನಾಟಕದ ಒಟ್ಟು 680 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ದೇಶಾದ್ಯಂತ ಆಯ್ಕೆಯಾದ ಒಟ್ಟು 5,100 ವಿದ್ಯಾರ್ಥಿಗಳಲ್ಲಿ (5,000 ಪದವಿ ಮತ್ತು 100 ಸ್ನಾತಕೋತ್ತರ ವಿದ್ಯಾರ್ಥಿಗಳು) 680 ವಿದ್ಯಾರ್ಥಿಗಳು ಕರ್ನಾಟಕದವರಾಗಿದ್ದಾರೆ. ಅತ್ಯಂತ ಕಠಿಣವಾದ ರಾಷ್ಟ್ರೀಯ ಮಟ್ಟದ ಆಯ್ಕೆ ಪ್ರಕ್ರಿಯೆಯ ಮೂಲಕ ಈ ಫಲಿತಾಂಶ ಬಂದಿದ್ದು, ಇದು ಈ ಭಾಗದ ವಿದ್ಯಾರ್ಥಿಗಳ ಅತ್ಯುತ್ತಮ ಶೈಕ್ಷಣಿಕ ಪ್ರದರ್ಶನವನ್ನು ಎತ್ತಿ ತೋರಿಸುತ್ತದೆ. ಭಾರತದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪೋಷಿಸುವುದು ಮತ್ತು ಆರ್ಥಿಕ ಅಡೆತಡೆಗಳಿಲ್ಲದೆ ಅವರು […]

ಕನ್ನಡ ದುನಿಯಾ 12 Jan 2026 11:42 am

‘ಚೂಯಿಂಗ್ ಗಮ್’ ಜಿಗಿಯುವುದು ಆರೋಗ್ಯಕ್ಕೆ ಒಳ್ಳೆಯದೇ..? ಕೆಟ್ಟದ್ದೇ ತಿಳಿಯಿರಿ

ಹಲವರಿಗೆ ಚೂಯಿಂಗ್ ಗಮ್ ತಿನ್ನುವ ಅಭ್ಯಾಸವಿರುತ್ತದೆ. ಒಂದು ಸಣ್ಣ ತುಂಡು ಚೂಯಿಂಗ್ ಗಮ್ ಅನೇಕ ಕಾಯಿಲೆಗಳು ಮತ್ತು ಮಾನಸಿಕ ಅಸ್ವಸ್ಥತೆಗಳಿಂದ ಪರಿಹಾರವನ್ನು ನೀಡುತ್ತದೆ. ಹೌದು, ಇದು ನಮ್ಮ ಅಭಿಪ್ರಾಯವಲ್ಲ, ಆದರೆ ವಿಜ್ಞಾನದ ಅಭಿಪ್ರಾಯ. ಚೂಯಿಂಗ್ ಗಮ್ ನ ಪ್ರಯೋಜನಗಳು ಮತ್ತು ಅಡ್ಡಪರಿಣಾಮಗಳನ್ನು ಇಲ್ಲಿ ನೋಡೋಣ.. ಚೂಯಿಂಗ್ ಗಮ್ ಅನ್ನು ಮುಖ್ಯವಾಗಿ ನೈಸರ್ಗಿಕ ರಬ್ಬರ್ ಮರಗಳಿಂದ ಸಂಗ್ರಹಿಸಿದ ರಾಳದಿಂದ ತಯಾರಿಸಲಾಗುತ್ತದೆ., ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಚೂಯಿಂಗ್ ಗಮ್ಗಳನ್ನು ಸಿಂಥೆಟಿಕ್ ರಬ್ಬರ್ನಿಂದ ತಯಾರಿಸಲಾಗುತ್ತದೆ. ಇದಕ್ಕೆ ಇತರ ಹಲವು ಪದಾರ್ಥಗಳನ್ನು ಸಹ […]

ಕನ್ನಡ ದುನಿಯಾ 12 Jan 2026 11:39 am

ಅಮೆರಿಕದಲ್ಲಿ ಬಿಹಾರಿ ಬಾಬು ಹವಾ: 780 ರೂಪಾಯಿಗೆ ಒಂದು ಕಪ್ ಟೀ! ಬೆಲೆ ಕೇಳಿ ದಂಗಾದ ಭಾರತೀಯರು

ತನ್ನ ಮೂಲ ಬೇರುಗಳನ್ನು ಮರೆಯದೆ, ವಿದೇಶಿ ನೆಲದಲ್ಲಿ ಬಿಹಾರಿ ಅಸ್ಮಿತೆಯೊಂದಿಗೆ ಬದುಕು ಕಟ್ಟಿಕೊಂಡಿರುವ ವ್ಯಕ್ತಿಯೊಬ್ಬರು ಈಗ ಇಂಟರ್ನೆಟ್ ಸೆನ್ಸೇಷನ್ ಆಗಿದ್ದಾರೆ. ಲಾಸ್ ಏಂಜಲೀಸ್‌ನಂತಹ ದುಬಾರಿ ನಗರದಲ್ಲಿ ಹಿಂದಿಯಲ್ಲೇ ಮಾತನಾಡುತ್ತಾ ಚಹಾ ಮತ್ತು ಪೋಹಾ (ಅವಲಕ್ಕಿ) ಮಾರಾಟ ಮಾಡುತ್ತಿರುವ ಇವರ ಪ್ರಾಮಾಣಿಕ ಶ್ರಮಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಶಾಕ್ ನೀಡುವ ಬೆಲೆ ಪಟ್ಟಿ: ಅಮೆರಿಕದ ಜೀವನ ವೆಚ್ಚ ಮತ್ತು ಅಲ್ಲಿನ ಬಾಡಿಗೆಯನ್ನು ಗಮನದಲ್ಲಿಟ್ಟುಕೊಂಡು ಇವರು ನಿಗದಿಪಡಿಸಿರುವ ಬೆಲೆಗಳು ಭಾರತೀಯರಿಗೆ ಅಚ್ಚರಿ ಮೂಡಿಸಿವೆ: ನೆಟ್ಟಿಗರ ತಮಾಷೆಯ ಪ್ರತಿಕ್ರಿಯೆ: ಜನವರಿ 2026ರಲ್ಲಿ […]

ಕನ್ನಡ ದುನಿಯಾ 12 Jan 2026 11:37 am

BIG NEWS: ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮಗೆ ಅಶ್ಲೀಲ ಮೆಸೇಜ್: ಆರೋಪಿ ಅರೆಸ್ಟ್

ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಕ್ಷೇತ್ರದ ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮ ಅವರಿಗೆ ಅಶ್ಲೀಲ ಕಮೆಂಟ್ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಲಾಗಿದೆ. ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮ ಅವರ ಬಟ್ಟೆ ವಿಚಾರವಾಗಿ ಇನ್ಸ್ ಟ್ರಾ ಗ್ರಾಂ ನಲ್ಲಿ ಅವಮಾನಕಾರಿ ಕಮೆಂಟ್ ಗಳು ಬರುತ್ತಿದ್ದವು. ಈ ಹಿನ್ನೆಲೆಯಲ್ಲಿ ನಯನಾ ಮೋಟಮ್ಮ ಅವರ ಪಿಎ ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ನಡೆಸಿದ ಪೊಲೀಸರು ಅಶ್ಲೀಲ ಕಮಂಟೆ ಮಾಡಿದ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತನನ್ನು ರಾಮನಗರ ಮೂಲದ ಯಕ್ಷಿತ್ ರಾಜ್ ಎಂದು […]

ಕನ್ನಡ ದುನಿಯಾ 12 Jan 2026 11:36 am

15 ಲಕ್ಷದ ಆಫರ್ ನೋಡಿ ಹಳೆಯ ಕೆಲಸಕ್ಕೆ ಗುಡ್-ಬೈ ಹೇಳಿದ ಟೆಕ್ಕಿಗೆ ಕೊನೆಯ ಕ್ಷಣದಲ್ಲಿ ಶಾಕ್ ನೀಡಿದ ಕಂಪನಿ

ಬೆಂಗಳೂರು: ಐಟಿ ಲೋಕದಲ್ಲಿ ಅನುಭವವೇ ಆಸ್ತಿ. ಐಟಿ ವಲಯದಲ್ಲಿ ಕೆಲಸ ಬದಲಿಸುವುದು ಒಂದು ಕಲೆ. ಆದರೆ ಈ ಕಲೆ ಸ್ವಲ್ಪ ತಪ್ಪಿದರೂ ಎಂತಹ ಸಂಕಷ್ಟ ಎದುರಾಗಬಹುದು ಎಂಬುದಕ್ಕೆ ಈ ಘಟನೆಯೇ ಸಾಕ್ಷಿ.ಸುಮಾರು 2.5 ವರ್ಷಗಳ ಕಾಲ .NET ಡೆವಲಪರ್ ಆಗಿ ಕೆಲಸ ಮಾಡುತ್ತಿದ್ದ ಯುವಕನೊಬ್ಬನಿಗೆ ವಾರ್ಷಿಕ 10 ಲಕ್ಷ ರೂಪಾಯಿ (10 LPA) ಸಂಬಳವಿತ್ತು. ಸಂಬಳ ಚೆನ್ನಾಗಿದ್ದರೂ, ಕಂಪನಿಯೊಳಗಿನ ಅತಿಯಾದ ಕೆಲಸದ ಒತ್ತಡ ಮತ್ತು ಸಹೋದ್ಯೋಗಿಗಳ ನಡುವಿನ ಆಫೀಸ್ ಪಾಲಿಟಿಕ್ಸ್ ಆತನ ನೆಮ್ಮದಿ ಕೆಡಿಸಿತ್ತು. ಹೀಗಿರುವಾಗ, ಕೇವಲ […]

ಕನ್ನಡ ದುನಿಯಾ 12 Jan 2026 11:25 am

ಕನ್ನಡಿಗರಲ್ಲದವರು ಕೆಲಸಕ್ಕೆ ಬೇಕು: ಬೆಂಗಳೂರಿನ ಖಾಸಗಿ ಕಂಪನಿಯ ಪ್ರಕಟಣೆಗೆ ಕೆರಳಿದ ಕನ್ನಡಿಗರು

ಬೆಂಗಳೂರು: ಕನ್ನಡಿಗರಲ್ಲದ ನಾನ್ ಕನ್ನಡಿಗರು ಕೆಲಸಕ್ಕೆ ಬೇಕು ಎಂದು ಬೆಂಗಳೂರಿನ ಖಾಸಗಿ ಕಂಪನಿಯೊಂದು ಪ್ರಕಟಿಸಿರುವುದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನೆಲೆಯೂರಿರುವ ಖಾಸಗಿ ಕಂಪಿನೊಂದು ಹೆಚ್ ಆರ್ ಹುದ್ದೆಗೆ ನಾನ್ ಕನ್ನಡಿಗರು ಬೇಕು ಎಂದು ಪ್ರಕಟಣೆ ಹೊರಡಿಸಿದೆ. ಇದು ಕನ್ನಡಿಗರನ್ನು ಕೆರಳಿಸಿದೆ. ಕರ್ನಾಟಕದಲ್ಲಿಯೇ ಕಂಪನಿ ತೆಗೆದು ಈಗ ಕರ್ನಾಟಕದವರು ಕೆಲಸಕ್ಕೆ ಬೇಡ ಎಂದರೆ ಆ ಕಂಪನಿಯಾಕೆ ಇಲ್ಲಿರಬೇಕು? ಎಂದು ರಕ್ಷಣಾ ವೇದಿಕೆ ಕಾರ್ಯಕರ್ತರು ಕಿಡಿಕಾರಿದ್ದಾರೆ. ಬೆಂಗಳೂರ್ನ ಜೆಪಿ ನಗರದಲ್ಲಿರುವ ಸ್ಕಿಲ್ ಸೋನಿಕ್ಸ್ ಎಂಬ ಕಂಪನಿ […]

ಕನ್ನಡ ದುನಿಯಾ 12 Jan 2026 11:22 am

ವಿವಿಧ ದೇವಾಲಯಗಳಲ್ಲಿ ವಸ್ತ್ರ ಸಂಹಿತೆ ಜಾರಿ, ಭೇಟಿಗೂ ಮುನ್ನ ತಿಳಿಯಿರಿ

ಇಂದು ದೇಶದಾದ್ಯಂತ ಅನೇಕ ಕ್ಷೇತ್ರಗಳಲ್ಲಿ ವಸ್ತ್ರ ಸಂಹಿತೆ ಜಾರಿಯಲ್ಲಿದ್ದು, ದೇವಸ್ಥಾನಗಳು, ಗುರುದ್ವಾರಗಳು, ಚರ್ಚುಗಳು, ಮಸೀದಿಗಳು ಸೇರಿದಂತೆ ವಿವಿಧ ಪ್ರಾರ್ಥನಾ ಸ್ಥಳಗಳು, ಖಾಸಗಿ ಸಂಸ್ಥೆಗಳು, ಶಾಲಾ–ಕಾಲೇಜುಗಳು, ನ್ಯಾಯಾಲಯಗಳು, ಪೊಲೀಸ್ ಇಲಾಖೆ ಮುಂತಾದೆಡೆಗಳಲ್ಲಿ ಶಿಷ್ಟ ಹಾಗೂ ಸಂಯಮಿತ ವೇಷಭೂಷಣ ಪಾಲನೆ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ದೇವಸ್ಥಾನಗಳ ಪಾವಿತ್ರ್ಯತೆ, ಸಂಸ್ಕೃತಿಯ ಗೌರವ ಮತ್ತು ಶಿಸ್ತುಬದ್ಧ ವಾತಾವರಣವನ್ನು ಕಾಪಾಡುವ ಉದ್ದೇಶದಿಂದ, ದೇವಸ್ಥಾನಗಳಿಗೆ ಬರುವ ಭಕ್ತರು ಯೋಗ್ಯ ವೇಷಭೂಷಣವನ್ನು ಧರಿಸುವಂತೆ ಜಾಗೃತಿ ಮೂಡಿಸುವ ಕಾರ್ಯವನ್ನು ಕರ್ನಾಟಕ ಮಂದಿರ ಮಹಾಸಂಘದಿಂದ ಕೈಗೊಳ್ಳಲಾಗಿದೆ. ಈ ದಿಶೆಯಲ್ಲಿ ಚಂದಾಪುರದಲ್ಲಿರುವ […]

ಕನ್ನಡ ದುನಿಯಾ 12 Jan 2026 11:15 am

‘ಹಾಸಿಗೆ ಹಿಡಿದಾಗ ಬಯಲಾಯ್ತು ಗಂಡನ ಅಸಲಿ ಮುಖ’: ದಾಂಪತ್ಯದ ಕರಾಳ ಅಧ್ಯಾಯ ಬಿಚ್ಚಿಟ್ಟ ಬಾಕ್ಸರ್ ಮೇರಿ ಕೋಮ್!

ಆರು ಬಾರಿ ವಿಶ್ವ ಚಾಂಪಿಯನ್ ಆಗಿರುವ ‘ಮ್ಯಾಗ್ನಿಫಿಸೆಂಟ್ ಮೇರಿ’ ಎಂದೇ ಖ್ಯಾತರಾದ ಮೇರಿ ಕೋಮ್, ತಮ್ಮ ದಾಂಪತ್ಯ ಜೀವನ ಅಂತ್ಯಗೊಂಡಿರುವ ವಿಷಯವನ್ನು ಅಧಿಕೃತವಾಗಿ ಹಂಚಿಕೊಂಡಿದ್ದಾರೆ. 2025ರಲ್ಲಿ ಅವರು ಪತಿ ಓನ್ಲರ್ ಅವರಿಂದ ವಿಚ್ಛೇದನ ಪಡೆದಿದ್ದು, ಸದ್ಯ ಫರಿದಾಬಾದ್‌ನಲ್ಲಿ ನೆಲೆಸಿದ್ದಾರೆ. ನಂಬಿಕೆಯೇ ದ್ರೋಹವಾಯಿತು: ಮೇರಿ ಕೋಮ್ ಅವರು ಹೇಳುವಂತೆ, 2022ರ ಕಾಮನ್‌ವೆಲ್ತ್ ಗೇಮ್ಸ್‌ಗಿಂತ ಮೊದಲು ತಮಗೆ ಗಾಯವಾಗಿ ಹಾಸಿಗೆ ಹಿಡಿದಿದ್ದಾಗ ಪತಿಯ ಅಸಲಿ ಮುಖ ಬಯಲಾಯಿತಂತೆ. “ನಾನು ಸ್ಪರ್ಧೆಗಳಲ್ಲಿ ಬ್ಯುಸಿಯಾಗಿದ್ದಾಗ ಹಣಕಾಸಿನ ವಿಚಾರದಲ್ಲಿ ತಲೆಹಾಕುತ್ತಿರಲಿಲ್ಲ. ಆದರೆ ನಾನು ನಡೆಯಲು […]

ಕನ್ನಡ ದುನಿಯಾ 12 Jan 2026 11:13 am

BIG NEWS : ‘ನಮ್ಮ ಮೆಟ್ರೋ’ ಪ್ರಯಾಣಿಕರಿಗೆ ಬಿಗ್ ಶಾಕ್ : ಶೀಘ್ರವೇ ಟಿಕೆಟ್ ದರ 5 % ಏರಿಕೆ |Namma Metro

ಬೆಂಗಳೂರು : ‘ನಮ್ಮ ಮೆಟ್ರೋ’ ಪ್ರಯಾಣಿಕರಿಗೆ ಬಿಗ್ ಶಾಕ್ ಎದುರಾಗಿದ್ದು, ನಮ್ಮ ಮೆಟ್ರೋ ದರ ಏರಿಕೆ ಮಾಡಲು ‘BMRCL’ ಮುಂದಾಗಿದೆ ಎನ್ನಲಾಗಿದೆ. ಹೌದು, ಈಗಾಗಲೇ ದಿನನಿತ್ಯ ವಸ್ತುಗಳ ಬೆಲೆ ಹೆಚ್ಚಳದಿಂದ ಜನರು ಹೈರಾಣಾಗಿದ್ದು, ಇದರ ನಡುವೆ ಬಿಎಂಆರ್ ಸಿಎಲ್ ಟಿಕೆಟ್ ದರ ಹೆಚ್ಚಳದ ಶಾಕ್ ನೀಡಲಿದೆ. ಮತ್ತೆ ಟಿಕೆಟ್ ದರ ಏರಿಕೆಗೆ ಬಿಎಂಆರ್ ಸಿಎಲ್ ನಿರ್ಧರಿಸಿದ್ದು, ಈಈಗ 5 % ದರ ಏರಿಕೆಗೆ ಬಿಎಂಆರ್ ಸಿಲ್ ಸಿದ್ದತೆ ನಡೆಸುತ್ತಿದೆ. ಶುಲ್ಕ ನಿಗದಿ ಸಮತಿ ಪ್ರತಿ ವರ್ಷ ಟಿಕೆಟ್ […]

ಕನ್ನಡ ದುನಿಯಾ 12 Jan 2026 10:57 am

ವೆನೆಜುವೆಲಾದ ಹಂಗಾಮಿ ಅಧ್ಯಕ್ಷ ನಾನೇ ಎಂದ ಡೊನಾಲ್ಡ್ ಟ್ರಂಪ್: ಟ್ರುತ್ ಸೋಷಿಯಲ್ ನಲ್ಲಿ ಪ್ರಕಟಿಸಿದ ಅಮೆರಿಕ ಅಧ್ಯಕ್ಷ

ನ್ಯೂಯಾರ್ಕ್: ವೆನೆಜುವೆಲಾದ ಹಂಗಾಮಿ ಅಧ್ಯಕ್ಷ ನಾನೇ ಎಂದು ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ. ತಮ್ಮದೇ ಒಡೆತನದ ಟ್ರುತ್ ಸೋಷಿಯಲ್ ನಲ್ಲಿ ಈ ಕುರಿತು ಭಾವಚಿತ್ರವನ್ನು ಪ್ರಕಟಿಸಿದ್ದಾರೆ. ಟ್ರುತ್ ಸೋಷಿಯಲ್ ಟ್ರಪ್ ಒಡೆತನದ್ದಾಗಿದ್ದು, ಇದರಲ್ಲಿ ಪ್ರಕಟವಾದ ಪೋಸ್ಟ್ ತೀವ್ರ ಕುತೂಹಲ ಮೂಡಿಸಿದೆ. ವೆನುಜುವೆಲಾದ ಹಂಗಾಮಿ ಅಧ್ಯಕ್ಷ ನಾನೇ. 2026ರ ಜನವರಿಯಲ್ಲಿ ಡೊನಾಲ್ಡ್ ಟ್ರಂ ವೆನುಜುವೆಲಾದ ಹಂಗಾಮಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು ಎಂದು ಬರೆಯಲಾಗಿದೆ. ಇತ್ತೀಚೆಗೆ ಅಮೆರಿಕಾ ಸೇನಾಪಡೆಗಳು ವೆನೆಜುವೆಲಾದ ರಾಜಧಾನಿ ಕರಾಕಸ್ ಮೇಲೆ ವಾಯುದಾಳಿ ನಡೆಸುವ ಮೂಲಕ […]

ಕನ್ನಡ ದುನಿಯಾ 12 Jan 2026 10:49 am

Big Update: ಬೆಂಗಳೂರು-ತುಮಕೂರು ರೈಲು ಪ್ರಯಾಣಿಕರ ಗಮನಕ್ಕೆ

ಬೆಂಗಳೂರು-ತುಮಕೂರು ನಡುವೆ ಪ್ರತಿದಿನ ಸಾವಿರಾರು ಜನರು ಸಂಚಾರವನ್ನು ನಡೆಸುತ್ತಾರೆ. ಉಭಯ ನಗರದ ನಡುವೆ ರೈಲಿನಲ್ಲಿ ಪ್ರಯಾಣಿಸುವ ಜನರ ಸಮಸ್ಯೆಗಳ ಪರಿಹಾರಕ್ಕಾಗಿ ಬೆಂಗಳೂರು-ತುಮಕೂರು ರೈಲು ಪ್ರಯಾಣಿಕರ ವೇದಿಕೆಯನ್ನು ಸ್ಥಾಪನೆ ಮಾಡಲಾಗಿದೆ. ವೇದಿಕೆಯ ಸಭೆಯಲ್ಲಿ ಹಲವಾರು ವಿಚಾರಗಳ ಕುರಿತು ಚರ್ಚೆಗಳು ನಡೆದಿವೆ. ಜನವರಿ 1,2026 ರಿಂದ ಕೆಲವು ರೈಲುಗಳ ಸಂಚಾರ ಸಮಯದಲ್ಲಿ ಆಗಿರುವ ಬದಲಾವಣೆಗಳಾಗಿದ್ದು ಇದರಿಂದ ನಿತ್ಯ ಉದ್ಯೋಗಕ್ಕಾಗಿ ತೆರಳುವ ಪ್ರಯಾಣಿಕರಿಗೆ ತೀವ್ರ ತೊಂದರೆಯಾಗಿದೆ. ಈ ಬಗ್ಗೆ ಸ್ಪಷ್ಟ‌ ಮಾಹಿತಿ ಪಡೆಯಲು ರೈಲು ಪ್ರಯಾಣಿಕರೊಂದಿಗೆ ಸಭೆ ನಡೆಸಿ ಚರ್ಚಿಸಿ ಮಾಹಿತಿ […]

ಕನ್ನಡ ದುನಿಯಾ 12 Jan 2026 10:32 am

BREAKING : ಷೇರುಪೇಟೆಯಲ್ಲಿ ‘ಸೆನ್ಸೆಕ್ಸ್’ 400 ಅಂಕ ಕುಸಿತ, 25,600 ಕ್ಕಿಂತ ಕೆಳಗಿಳಿದ ‘ನಿಫ್ಟಿ’ |Share Market

ಷೇರುಪೇಟೆಯಲ್ಲಿ ಇಂದು ‘ಸೆನ್ಸೆಕ್ಸ್’ 400 ಅಂಕ ಕುಸಿತಗೊಂಡಿದ್ದು, ನಿಫ್ಟಿ’ 25,600 ಕ್ಕಿಂತ ಕೆಳಗಿಳಿದಿದೆ. ಈ ಮೂಲಕ ಲಾಭದ ನಿರೀಕ್ಷೆಯಲ್ಲಿದ್ದ ಹೂಡಿಕೆದಾರರು ನಷ್ಟದ ಭೀತಿಯಲ್ಲಿದ್ದಾರೆ. ಎಲ್ & ಟಿ, ಪವರ್ ಗ್ರಿಡ್, ಆರ್ಐಎಲ್, ಅದಾನಿ ಪೋರ್ಟ್ಸ್, ಎಟರ್ನಲ್, ಬಿಇಎಲ್, ಭಾರ್ತಿ ಏರ್ಟೆಲ್, ಇನ್ಫೋಸಿಸ್, ಅಲ್ಟ್ರಾಟೆಕ್ ಸಿಮೆಂಟ್, ಐಸಿಐಸಿಐ ಬ್ಯಾಂಕ್, ಟೆಕ್ ಎಂ, ಬಜಾಜ್ ಫಿನ್ಸರ್ವ್ ಮತ್ತು ಇಂಡಿಗೊ ಸೆನ್ಸೆಕ್ಸ್ ನ ಪ್ರಮುಖ ಷೇರುಗಳು ಶೇ. 1 ರಷ್ಟು ಕುಸಿದವು. ಹೆಚ್ಚಿನ ಲಾಭ ಗಳಿಸಿದ ಷೇರುಗಳಲ್ಲಿ, ಎಚ್ಯುಎಲ್, ಐಟಿಸಿ ಮತ್ತು […]

ಕನ್ನಡ ದುನಿಯಾ 12 Jan 2026 10:26 am

ಅಬ್ಬಬ್ಬಾ ಏನ್ ಚಳಿ… ಕಾಶ್ಮೀರದಂತಾದ ಬೆಂಗಳೂರು: ಇನ್ನೂ ಒಂದು ವಾರ ಮುಂದುವರೆಯಲಿದೆ ಇದೇ ವಾತಾವರಣ

ಬೆಂಗಳೂರು: ರಾಜ್ಯಾದ್ಯಂತ ಮೈ ಕೊರೆವ ಚಳಿಗೆ ಜನರು ಗಢಗಢ ನಡುಗುತ್ತಿದ್ದಾರೆ. ದಿನದಿಂದ ದಿನಕ್ಕೆ ತಾಪಮಾನ ಕುಸಿಯುತ್ತಿದ್ದು, ಶೀತಗಾಳಿ ಹೆಚ್ಚಾಗಿದೆ. ರಾಜ್ಯ ರಾಜಧಾನಿ ಬೆಂಗಳೂರು ಕಾಶ್ಮೀರದಂತಾಗಿದ್ದು, ಶೀತದಲೆಗೆ ಜನರು ತತ್ತರಿಸುತ್ತಿದ್ದಾರೆ. ಬೆಂಗಳೂರಿನ ಹಲವೆಡೆ ಎರಡು ಮೂರು ದಿನಗಳಿಂದ ತುಂತುರು ಮಳೆಯಾಗುತ್ತಿದ್ದು, ದಟ್ಟವಾದ ಮೋಡ ಕವಿದ ವಾತಾವಣ ಚಳಿ ಪ್ರಮಾಣ ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ. ಬೆಂಗಳೂರಿನಲ್ಲಿ ಇನ್ನೂ ಒಂದು ವಾರಗಳ ಕಾಲ ಶೀತಗಾಳಿ, ಚಳಿ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ, ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ಶೀತಗಾಳಿ ಹೆಚ್ಚಾಗಳು […]

ಕನ್ನಡ ದುನಿಯಾ 12 Jan 2026 10:15 am

ಗಂಟಲಿನಲ್ಲಿ ‘ಮೀನಿನ ಮುಳ್ಳು’ಸಿಲುಕಿಕೊಂಡರೆ ಚಿಂತಿಸ್ಬೇಡಿ.! ತಕ್ಷಣ ಹೀಗೆ ಮಾಡಿ

ಮೀನು ದೇಹಕ್ಕೆ ಅನೇಕ ಪ್ರಮುಖ ಪೋಷಕಾಂಶಗಳನ್ನು ಹೊಂದಿರುತ್ತದೆ. ಮೀನಿನಲ್ಲಿ ಪ್ರೋಟೀನ್ ಮತ್ತು ಒಮೆಗಾ-3 ಕೊಬ್ಬಿನಾಮ್ಲಗಳು ಸಮೃದ್ಧವಾಗಿವೆ. ಇದರಲ್ಲಿ ಇತರ ಅನೇಕ ಖನಿಜಗಳು ಮತ್ತು ವಿಟಮಿನ್ಗಳಿವೆ. ಅದಕ್ಕಾಗಿಯೇ ಅನೇಕ ಜನರು ಮೀನುಗಳನ್ನು ಸಂತೋಷದಿಂದ ತಿನ್ನುತ್ತಾರೆ. ಮೀನಿನಲ್ಲಿರುವ ಮುಳ್ಳುಗಳಿಂದಾಗಿ ಕೆಲವರು ಅವುಗಳನ್ನು ತಿನ್ನಲು ಹೆದರುತ್ತಾರೆ. ಕೆಲವೊಮ್ಮೆ ಈ ಸಣ್ಣ ಮುಳ್ಳುಗಳು ಗಂಟಲಿನಲ್ಲಿ ಸಿಲುಕಿಕೊಳ್ಳುತ್ತವೆ. ಅವುಗಳನ್ನು ತೆಗೆದುಹಾಕಲು ತುಂಬಾ ಕಷ್ಟ. ಇದಕ್ಕಾಗಿ ಹಲವು ಮಾರ್ಗಗಳನ್ನು ಪ್ರಯತ್ನಿಸಲಾಗುತ್ತದೆ. ವೈದ್ಯರ ಬಳಿಗೆ ಹೋಗುವ ಮೊದಲು, ಕೆಲವು ಮನೆಮದ್ದುಗಳನ್ನು ಪ್ರಯತ್ನಿಸಿ. ಇದರೊಂದಿಗೆ, ಬೆನ್ನುಮೂಳೆಯು ತಕ್ಷಣವೇ ಹೊರಬರುತ್ತದೆ. […]

ಕನ್ನಡ ದುನಿಯಾ 12 Jan 2026 10:04 am

ಕಾಂಗ್ರೆಸ್-ಡಿಎಂಕೆ ಮೈತ್ರಿ ಬಿಕ್ಕಟ್ಟು: ಕಾಂಗ್ರೆಸ್ ಬೇಡಿಕೆ ಒಪ್ಪದ ಡಿಎಂಕೆ!

ಕಾಂಗ್ರೆಸ್-ಡಿಎಂಕೆ ನಡುವಿನ ಮೈತ್ರಿ 2026ರ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿಯೂ ಮುಂದುವರೆಯಲಿದೆಯೇ?. ಈಗ ನಡೆಯುತ್ತಿರುವ ಬೆಳವಣಿಗೆ ನೋಡಿದರೆ ಮೈತ್ರಿಕೂಟ ಬಿಕ್ಕಟ್ಟಿನಲ್ಲಿದೆ. ಈ ವರ್ಷ ಏಪ್ರಿಲ್ ಅಥವ ಮೇ ತಿಂಗಳಿನಲ್ಲಿ 234 ಸೀಟುಗಳಿಗೆ ಚುನಾವಣೆ ನಡೆಯಬೇಕಿದೆ. ಹಾಲಿ ರಾಜ್ಯದಲ್ಲಿ ಇದೇ ಮೈತ್ರಿಕೂಟ ಅಧಿಕಾರದಲ್ಲಿದೆ. ತಮಿಳುನಾಡು ರಾಜಕೀಯದಲ್ಲಿ ಒಂದು ಮಾದರಿಯಿದೆ. ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ರಚನೆಯಾದರೂ ಸಹ ಪಾಲುದಾರರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡುವುದು ಬಹಳ ಅಪರೂಪ. ಈಗ ಅಧಿಕಾರ ಹಂಚಿಕೆ ಸೂತ್ರವನ್ನು ಕಾಂಗ್ರೆಸ್ ಮುಂದಿಟ್ಟಿದೆ, ಆದರೆ ಡಿಎಂಕೆ ತಿರಸ್ಕಾರ ಮಾಡಿದೆ. […]

ಕನ್ನಡ ದುನಿಯಾ 12 Jan 2026 9:56 am

BIG UPDATE : ಬೆಂಗಳೂರಲ್ಲಿ ‘ಟೆಕ್ಕಿ’ಸಾವಿಗೆ ಬಿಗ್ ಟ್ವಿಸ್ಟ್ : ‘ಸೆಕ್ಸ್’ಗೆ ನಿರಾಕರಿಸಿದ್ದಕ್ಕೆ ಕೊಂದು ಮನೆಗೆ ಬೆಂಕಿ ಹಚ್ಚಿದ ಯುವಕ

ಬೆಂಗಳೂರಿನ ರಾಮಮೂರ್ತಿ ನಗರದಲ್ಲಿ ಒಂದು ಭಯಾನಕ ಘಟನೆ ಬೆಳಕಿಗೆ ಬಂದಿದೆ. ಸಾಫ್ಟ್ವೇರ್ ಎಂಜಿನಿಯರ್ ಸಾವಿನ ಪ್ರಕರಣದಲ್ಲಿ ಆಘಾತಕಾರಿ ವಿಷಯಗಳು ಬೆಳಕಿಗೆ ಬಂದಿವೆ. ಆರಂಭದಲ್ಲಿ, ಮಹಿಳೆ ಬೆಂಕಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿತ್ತು, ಆದರೆ ಇದು ನಿಜವಲ್ಲ. ಈ ಪ್ರಕರಣದಲ್ಲಿ ಮೃತ ಟೆಕ್ಕಿಯ ನೆರೆಮನೆಯ ಯುವಕನನ್ನು ಬಂಧಿಸಲಾಗಿದೆ. ಶರ್ಮಿಳಾ ಅವರ ಅನುಮಾನಾಸ್ಪದ ಸಾವು ಬಂಧಿತ ಆರೋಪಿಯನ್ನು ಕೊಡಗು ಜಿಲ್ಲೆಯ ವಿರಾಜಪೇಟೆಯ ಮೂಲದ ಕರ್ನಲ್ ಕುರೈ ಎಂದು ಗುರುತಿಸಲಾಗಿದೆ, ಈತ ಬೆಂಗಳೂರಿನ ಮೃತ ಯುವತಿಯ ನೆರೆಹೊರೆಯ ನಿವಾಸಿ. ಈ ಘಟನೆ ಜನವರಿ […]

ಕನ್ನಡ ದುನಿಯಾ 12 Jan 2026 9:49 am

BREAKING: ಎಸ್.ಎಸ್.ಎಲ್.ಸಿ ಪೂರ್ವ ಸಿದ್ಧತಾ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ: ಶಿಕ್ಷಕರು ಸೇರಿ 8 ಆರೋಪಿಗಳು ಅರೆಸ್ಟ್

ಬೆಂಗಳೂರು:ಎಸ್.ಎಸ್.ಎಲ್.ಸಿ ಪೂರ್ವ ಸಿದ್ಧತಾ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಉತ್ತರ ವಿಭಾಗದ ಪೊಲೀಸರು ಶಿಕ್ಷಕರು, ವಿದ್ಯಾರ್ಥಿಗಳು ಸೇರಿ 8 ಆರೋಪಿಗಳನ್ನು ಬಂಧಿಸಿದ್ದಾರೆ. ತುಮಕೂರು, ರಾಮನಗರ, ಕಲಬುರಗಿ ಶಾಲೆಗಳ ಶಿಕ್ಷಕರು ಸೇರಿ 8 ಆರೋಪಿಗಳನ್ನು ಬೆಂಗಳೂರು ಉತ್ತರ ವಿಭಾಗದ ಸೈಬರ್ ಪೊಲೀಸರು ಬಂಧಿಸಿದ್ದಾರೆ. ಎಸ್.ಎಸ್.ಎಲ್.ಸಿ ಪೂರ್ವ ಸಿದ್ಧತಾ ಪರೀಕ್ಷೆಯ ಹಿಂದಿ ವಿಷಯದ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿತ್ತು. ಈ ಬಗ್ಗೆ ಪದವಿ ಪೂರ್ವ ಶಿಕ್ಷಣ ಇಲಾಖೆ ಅಧಿಕಾರಿಗಳು ದೂರು ನೀಡಿದ್ದರು. ಪೊಲೀಸರ ತನಿಖೆ ವೇಳೆ ಪ್ರಶ್ನೆ […]

ಕನ್ನಡ ದುನಿಯಾ 12 Jan 2026 9:48 am

BIG NEWS: ಜಮ್ಮು-ಕಾಶ್ಮೀರದ ಗಡಿಯಲ್ಲಿ ಪಾಕಿಸ್ತಾನಿ ಡ್ರೋನ್ ಗಳು ಪತ್ತೆ: ಹೈ ಅಲರ್ಟ್ ಘೋಷಣೆ

ಶ್ರೀನಗರ: ಜಮ್ಮು-ಕಾಶ್ಮೀರದ ಅಂತರಾಷ್ಟ್ರೀಯ ಗಡಿ ಹಾಗೂ ನಿಯಂತ್ರಣ ರೇಖೆ ಬಳಿ ಪಾಕಿಸ್ತಾನದ ಐದು ಡ್ರೋನ್ ಗಳು ಪತ್ತೆಯಾಗಿವೆ. ಗಣರಾಜ್ಯೋತ್ಸವಕ್ಕೂ ಮುನ್ನ ಪಾಕಿಸ್ತಾನ ಭಾರತದ ಗಡಿಗಳ ಬಳಿ ಡ್ರೋನ್ ಚಟುವಟಿಕೆಗಳನ್ನು ಹೆಚ್ಚಿಸಿದ್ದು ಭದ್ರತಾ ಪಡೆಗಳು ಕಟ್ಟೆಚ್ಚರ ವಹಿಸಿದ್ದಾರೆ. ಜಮ್ಮು-ಕಾಶ್ಮೀರದ ಅಂತರಾಷ್ಟ್ರೀಯ ಗಡಿ ಮತ್ತು ಎಲ್ ಒಸಿಯ ವಿವಿಧ ಪ್ರದೇಶಗಳಲ್ಲಿ ಒಟ್ಟು ಐದು ಡ್ರೋನ್ ಗಳು ಪತ್ತೆಯಾಗಿವೆ. ಪೂಂಚ್, ನೌಶೇರಾ, ಧರ್ಮಶಾಲಾ, ರಾಮಗಢ ಮತ್ತು ಪರಾಖ್ ಪ್ರದೇಶಗಳಲ್ಲಿ ಡ್ರೋನ್ ಗಳು ಕಾಣಿಸಿಕೊಂಡಿರುವ ಬಗ್ಗೆ ವರದಿಯಾಗಿದೆ. ಎಲ್ಲಾ ಡ್ರೋನ್ ಗಳು ಭಾರತದ […]

ಕನ್ನಡ ದುನಿಯಾ 12 Jan 2026 9:40 am

BREAKING : ಬಾರದ ‘ಗೃಹಲಕ್ಷ್ಮಿ’ ಹಣ : ಹುಬ್ಬಳ್ಳಿಯಲ್ಲಿ ಬೃಹತ್ ಮಹಿಳಾ ಸಮಾವೇಶಕ್ಕೆ ಬಿಜೆಪಿ ನಿರ್ಧಾರ.!

ಬೆಂಗಳೂರು : ಸರಿಯಾದ ಸಮಯಕ್ಕೆ ‘ಗೃಹಲಕ್ಷ್ಮಿ’ಹಣ ಬಾರದ ಹಿನ್ನೆಲೆ ಹಾಗೂ ಕೆಲವು ತಿಂಗಳಿನಿಂದ ಬಾಕಿ ಉಳಿದಿರುವ ಗೃಹಲಕ್ಷ್ಮಿ ಹಣ ಬಿಡುಗಡೆಗೆ ಒತ್ತಾಯಿಸಿ ಬಿಜೆಪಿ ಬೃಹತ್ ಸಮಾವೇಶ ನಡೆಸಲು ನಿರ್ಧರಿಸಿದೆ. ಹುಬ್ಬಳ್ಳಿಯಲ್ಲಿ ಬೃಹತ್ ಮಹಿಳಾ ಮಹಿಳಾ ಸಮಾವೇಶಕ್ಕೆ ಬಿಜೆಪಿ ನಿರ್ಧರಿಸಿದ್ದು, ಫೆಬ್ರವರಿ ಮೊದಲ ಅಥವಾ 2 ನೇ ವಾರದಲ್ಲಿ ಸಮಾವೇಶ ನಡೆಸಲು ಬಿಜೆಪಿ ನಾಯಕರು ಚಿಂತನೆ ನಡೆಸಿದ್ದಾರೆ. ಮಹಿಳೆಯರನ್ನು ಅಸ್ತ್ರವಾಗಿಟ್ಟುಕೊಂಡು ಬಿಜೆಪಿ ರಾಜ್ಯ ಸರ್ಕಾರದ ವಿರುದ್ಧ ಹೋರಾಟ ನಡೆಸಲಿದೆ. ಗೃಹಲಕ್ಷ್ಮಿಯರನ್ನು ಕಣಕ್ಕಿಳಿಸುವ ಮೂಲಕ ಮಹಿಳಾ ಸಮಾವೇಶದ ಮೂಲಕ ಗೃಹಲಕ್ಷ್ಮಿ […]

ಕನ್ನಡ ದುನಿಯಾ 12 Jan 2026 9:33 am

ಜನವರಿ ಎಂಬ ಡಿವೋರ್ಸ್ ಮಂತ್: ಹೊಸ ವರ್ಷದ ಆರಂಭದಲ್ಲೇ ಮುರಿಯುತ್ತಿವೆಯೇ ಮನಸ್ಸುಗಳು?

ಬೆಂಗಳೂರು: ಪ್ರತಿ ಹೊಸ ವರ್ಷದ ಆರಂಭದಲ್ಲಿ ಸೋಷಿಯಲ್ ಮೀಡಿಯಾ ಹೊಸ ವರ್ಷ–ಹೊಸ ನಾನು (New Year, New Me) ಎಂಬ ಘೋಷಣೆಗಳಿಂದ ತುಂಬಿರುತ್ತದೆ. ಜೀವನದಲ್ಲಿ ಹೊಸ ಬದಲಾವಣೆ ತರಬೇಕೆಂಬ ನಿರ್ಧಾರಗಳ ನಡುವೆ, ಅನೇಕ ದಂಪತಿಗಳು ಅನಿರೀಕ್ಷಿತವಾಗಿ ವಿಚ್ಛೇದನ ಎಂಬ ದಾರಿಯನ್ನು ಆಯ್ದುಕೊಳ್ಳುತ್ತಾರೆ. ಇದೇ ಕಾರಣಕ್ಕೆ ಕಾನೂನು ವಲಯದಲ್ಲಿ ಜನವರಿಯನ್ನು ಅನೌಪಚಾರಿಕವಾಗಿ ವಿಚ್ಛೇದನ ತಿಂಗಳು (Divorce Month) ಎಂದು ಕರೆಯಲಾಗುತ್ತದೆ. ಒಂದೆಡೆ ಹೊಸ ಆಸೆಗಳ ಸಂಭ್ರಮ ನಡೆಯುತ್ತಿದ್ದರೆ, ಇನ್ನೊಂದೆಡೆ ಫ್ಯಾಮಿಲಿ ಕೋರ್ಟ್‌ಗಳು ವಿಚ್ಛೇದನ ಅರ್ಜಿಗಳಿಂದ ತುಂಬುತ್ತಿರುವುದು ಗಮನಾರ್ಹ. ಇದು […]

ಕನ್ನಡ ದುನಿಯಾ 12 Jan 2026 9:29 am

Big Update: ತುಂಗಭದ್ರಾ ಡ್ಯಾಂ ನೂತನ ಕ್ರಸ್ಟ್ ಗೇಟ್ ಅಳವಡಿಕೆ ಕಾಮಗಾರಿ

ಹಲವು ಜಿಲ್ಲೆಗಳು, ಮೂರು ರಾಜ್ಯಗಳ ರೈತರ ಜೀವನಾಡಿ ತುಂಗಭದ್ರಾ ಡ್ಯಾಂ. ಈಗಾಗಲೇ ಡ್ಯಾಂನ ಎಲ್ಲಾ 33 ಕ್ರಸ್ಟ್‌ ಗೇಟ್ ಬದಲಾವಣೆ ಕಾಮಗಾರಿ ನಡೆಯುತ್ತಿದೆ. ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರು, ಅಧಿಕಾರಿಗಳು ಡ್ಯಾಂಗೆ ಭೇಟಿ ನೀಡಿ ನೂತನ ಕ್ರಸ್ಟ್ ಗೇಟ್ ಅಳವಡಿಕೆ ಕಾರ್ಯ ಪರಿಶೀಲನೆ ಮಾಡಿದರು. ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ಎಸ್. ತಂಗಡಗಿ, ಕೊಪ್ಪಳ ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ, ಜಿಲ್ಲಾ ಪಂಚಾಯತ್ ಮುಖ್ಯ […]

ಕನ್ನಡ ದುನಿಯಾ 12 Jan 2026 9:23 am

ಶಬರಿಮಲೆಯಲ್ಲಿ ‘ಮಕರ ಜ್ಯೋತಿ’ದರ್ಶನಕ್ಕೆ ಸಕಲ ವ್ಯವಸ್ಥೆ : ಇಷ್ಟು ಜನ ಭಕ್ತರಿಗೆ ಮಾತ್ರ ಅವಕಾಶ !

ಶಬರಿಮಲೆ ಮಕರ ಜ್ಯೋತಿ ದರ್ಶನಕ್ಕೆ ಅಧಿಕಾರಿಗಳು ವ್ಯಾಪಕ ವ್ಯವಸ್ಥೆಗಳನ್ನು ಮಾಡಿದ್ದಾರೆ. ಮಕರ ಸಂಕ್ರಾಂತಿಯ ದಿನದಂದು ಮಣಿಕಂಠನ ಮಕರ ಜ್ಯೋತಿಯನ್ನು ನೋಡಲು ಲಕ್ಷಾಂತರ ಭಕ್ತರು ಸೇರುತ್ತಾರೆ. ಜನಸಂದಣಿಯನ್ನು ನಿಯಂತ್ರಿಸಲು ದರ್ಶನ ಕೋಟಾ ಮತ್ತು ವರ್ಚುವಲ್ ಕ್ಯೂ ನಿಯಮಗಳನ್ನು ಜಾರಿಗೆ ತರಲಾಗುತ್ತಿದೆ. ಪಂಬಾ ಮತ್ತು ನೀಲಕ್ಕಲ್ ಮಾರ್ಗಗಳಲ್ಲಿ ನಿರ್ಬಂಧಗಳು ಮತ್ತು ಬಿಗಿ ಭದ್ರತೆಯ ನಡುವೆ ಭಕ್ತರು ಶಾಂತಿಯುತವಾಗಿ ದರ್ಶನ ಪಡೆಯುವಂತೆ ಕ್ರಮ ಕೈಗೊಳ್ಳಲಾಗಿದೆ. ಭಕ್ತರ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು, ಸಾರಿಗೆಗಾಗಿ 1000 ಕ್ಕೂ ಹೆಚ್ಚು ವಿಶೇಷ ಬಸ್‌ಗಳನ್ನು ವ್ಯವಸ್ಥೆ ಮಾಡಲಾಗಿದೆ. ಮಕರ […]

ಕನ್ನಡ ದುನಿಯಾ 12 Jan 2026 9:14 am

BIG UPDATE : ಬೆಂಗಳೂರಲ್ಲಿ ಟೆಕ್ಕಿ ಶರ್ಮಿಳಾ ನಿಗೂಢ ಸಾವಿಗೆ ಬಿಗ್ ಟ್ವಿಸ್ಟ್ : ಯುವಕನಿಂದ ರೇಪ್ &ಮರ್ಡರ್ ಶಂಕೆ.!

ಬೆಂಗಳೂರು : ಬೆಂಗಳೂರಿನಲ್ಲಿ ಮಹಿಳಾ ಟೆಕ್ಕಿ ಶರ್ಮಿಳಾ ನಿಗೂಢ ಸಾವು ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ತನಿಖೆಯ ವೇಳೆ ಹಲವು ವಿಚಾರಗಳು ಬೆಳಕಿಗೆ ಬಂದಿದೆ. ಟೆಕ್ಕಿ ಶರ್ಮಿಳಾರನ್ನು ಆರೋಪಿ ಕರ್ನಲ್ ಕುರೈನ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದಾನೆ ಎಂದು ಶಂಕಿಸಲಾಗಿದೆ. ಕರ್ನಲ್ ಕುರೈನ ವಿರುದ್ಧ ಅತ್ಯಾಚಾರ ಕೇಸ್ ದಾಖಲಿಸಿರುವ ಪೊಲೀಸರು ಆತನನ್ನು ವಿಚಾರಣೆ ನಡೆಸುತ್ತಿದ್ದಾರೆ. ರಾಮಮೂರ್ತಿ ಪೊಲೀಸ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು. ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ಮೂಲದ ಟೆಕ್ಕಿ ಶರ್ಮಿಳಾ ಅವರನ್ನು […]

ಕನ್ನಡ ದುನಿಯಾ 12 Jan 2026 8:48 am

‘BSNL’ಗ್ರಾಹಕರಿಗೆ ಬಂಪರ್ ಆಫರ್ : ಜಸ್ಟ್ 1 ರೂ.ಗೆ ಸಿಮ್ ಖರೀದಿಸಿ 1 ತಿಂಗಳು ಉಚಿತ ಕರೆ, ಡೇಟಾ ಪಡೆಯಿರಿ

ಪ್ರಮುಖ ಟೆಲಿಕಾಂ ಕಂಪನಿ ‘BSNL ತನ್ನ ಗ್ರಾಹಕರಿಗೆ ಬಂಪರ್ ಆಫರ್ ಘೋಷಿಸಿದೆ. ಇದು ಫ್ರೀಡಂ ಯೋಜನೆಯನ್ನು ಮತ್ತೆ ತಂದಿದೆ. ಈ ಆಫರ್ ಅಡಿಯಲ್ಲಿ, ರೂ. 1 ಗೆ ಹೊಸ ಸಿಮ್ ಕಾರ್ಡ್ ನೀಡಲಾಗುವುದು. ಕೇವಲ ಒಂದು ರೂಪಾಯಿಗೆ ಸಿಮ್ ಕಾರ್ಡ್ ಮಾತ್ರವಲ್ಲದೆ, ಒಂದು ತಿಂಗಳವರೆಗೆ ಅನಿಯಮಿತ ಕರೆಗಳನ್ನು ಸಹ ಉಚಿತವಾಗಿ ನೀಡಲಾಗುವುದು. ಅಲ್ಲದೆ, 2GB ಹೈ-ಸ್ಪೀಡ್ ಡೇಟಾ ಮತ್ತು 100 SMS 30 ದಿನಗಳವರೆಗೆ ಲಭ್ಯವಿರುತ್ತದೆ. ಅಂದರೆ ನೀವು ಕೇವಲ ಒಂದು ರೂಪಾಯಿಗೆ ಒಂದು ತಿಂಗಳವರೆಗೆ ಉಚಿತ […]

ಕನ್ನಡ ದುನಿಯಾ 12 Jan 2026 8:36 am

OMG : 15 ವರ್ಷಗಳಿಂದ ಹಲ್ಲುಜ್ಜಿಲ್ಲ, 35 ವರ್ಷಗಳಿಂದ ಸೋಪು ಮುಟ್ಟಿಲ್ಲ : ಇದು ಆರೋಗ್ಯ ತಜ್ಞರ ಜೀವನಶೈಲಿ

ಖ್ಯಾತ ಆರೋಗ್ಯ ತಜ್ಞ ರಾಜು ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯರಾಗಿದ್ದು, ಆರೋಗ್ಯ ಸಲಹೆಗಳನ್ನು ಹಂಚಿಕೊಳ್ಳುತ್ತಾರೆ.ಇತ್ತೀಚೆಗೆ ಅವರು ನೀಡಿದ ಸಂದರ್ಶನವೊಂದು ಈಗ ವೈರಲ್ ಆಗುತ್ತಿದೆ. ಅವರು ತಮ್ಮ ಜೀವನಶೈಲಿಯ ಬಗ್ಗೆ ಹೇಳಿದ್ದನ್ನು ಕೇಳಿ ಅನೇಕರು ಆಶ್ಚರ್ಯಚಕಿತರಾಗಿದ್ದಾರೆ. ದಶಕಗಳಿಂದ ನಾವು ಪ್ರತಿದಿನ ಮಾಡುವ ಕೆಲಸಗಳಿಂದ ಅವರು ದೂರವಿದ್ದರೂ, ಅವರು ಹೇಗೆ ಆರೋಗ್ಯವಾಗಿದ್ದಾರೆ ಎಂಬುದು ಈಗ ದೊಡ್ಡ ಚರ್ಚೆಗೆ ಕಾರಣವಾಗಿದೆ. ಸಾಮಾನ್ಯವಾಗಿ, ನಾವು ಬೆಳಿಗ್ಗೆ ಎದ್ದ ತಕ್ಷಣ ಹಲ್ಲುಜ್ಜದೆ ಕಾಫಿ ಕೂಡ ಕುಡಿಯುವುದಿಲ್ಲ. ಆದರೆ ಕಳೆದ 15 ವರ್ಷಗಳಿಂದ ಮಂಟೇನಾ ಹಲ್ಲುಜ್ಜುವುದಿಲ್ಲ […]

ಕನ್ನಡ ದುನಿಯಾ 12 Jan 2026 8:21 am

Rain alert : ವಾಯುಭಾರ ಕುಸಿತ : ಬೆಂಗಳೂರು ಸೇರಿ ರಾಜ್ಯದ ಕೆಲವು ಜಿಲ್ಲೆಗಳಲ್ಲಿ 3 ದಿನ ಮಳೆ ಮುನ್ಸೂಚನೆ.!

ಬೆಂಗಳೂರು : ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾದ ಪರಿಣಾಮ ಬೆಂಗಳೂರು ಸೇರಿ ಹಲವು ಜಿಲ್ಲೆಗಳಲ್ಲಿ 3 ದಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ವಾಯುಭಾರ ಕುಸಿತ ಹಿನ್ನೆಲೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ಚಾಮರಾಜನಗರ ಜಿಲ್ಲೆಗಳಲ್ಲಿ ಕೆಲವು ಭಾಗಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ರಾಜ್ಯದ ಹಲವು ಕಡೆ ಭಾರಿ ಶೀತಗಾಳಿ ಮುಂದುವರೆಯಲಿದ್ದು, ಬೀದರ್, ಕಲಬುರಗಿ, ವಿಜಯಪುರ, ಧಾರವಾಡ ಜಿಲ್ಲೆಗಳಿಗೆ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ. ಬೆಳಗಾವಿ, ಬಾಗಲಕೋಟೆ, ರಾಯಚೂರು, […]

ಕನ್ನಡ ದುನಿಯಾ 12 Jan 2026 8:05 am

ಮನೆ ಕಟ್ಟುವ ಪ್ಲಾನ್ ಇದೆಯೇ? ₹50 ಲಕ್ಷ ಲೋನ್ ಪಡೆದರೆ ನೀವು ತಿಂಗಳಿಗೆ ಕಟ್ಟಬೇಕಾದ ಇಎಂಐ ಮೊತ್ತ ಇಲ್ಲಿದೆ ನೋಡಿ

ಬೆಂಗಳೂರು: ಸ್ವಂತ ಮನೆಯೆಂಬುದು ಪ್ರತಿಯೊಬ್ಬ ಮಧ್ಯಮ ವರ್ಗದ ವ್ಯಕ್ತಿಯ ಜೀವಮಾನದ ಕನಸು. ಆದರೆ ಸಾಲ ಮತ್ತು ಇಎಂಐ (EMI) ಹೊರೆಗೆ ಹೆದರಿ ಸುಮ್ಮನಾಗುವವರೇ ಹೆಚ್ಚು. ಈಗ ಅಂತಹವರಿಗಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಸಿಹಿ ಸುದ್ದಿ ನೀಡಿದೆ. ಕಳೆದ ವರ್ಷ ರೆಪೋ ದರವನ್ನು ಶೇ. 1.25 ರಷ್ಟು ಕಡಿತಗೊಳಿಸಿರುವುದು ಈಗ ಗೃಹ ಸಾಲದ ಬಡ್ಡಿದರ ಇಳಿಕೆಗೆ ಕಾರಣವಾಗಿದೆ. ಬ್ಯಾಂಕ್ ಆಫ್ ಬರೋಡಾದಲ್ಲಿ ಕೇವಲ 7.20% ಬಡ್ಡಿ ರೆಪೋ ದರ ಕಡಿತದ ಲಾಭವನ್ನು ಸಾರ್ವಜನಿಕ ವಲಯದ ಬ್ಯಾಂಕುಗಳು […]

ಕನ್ನಡ ದುನಿಯಾ 12 Jan 2026 8:00 am

‘ಫಾರ್ಮಸಿಸ್ಟ್ ಅಪ್ರೆಂಟಿಸ್’ತರಬೇತಿಗೆ ಅರ್ಜಿ ಆಹ್ವಾನ, ತಿಂಗಳಿಗೆ ಸಿಗಲಿದೆ 8000 ರೂ ಸ್ಟೈಪಂಡ್.!

ಬೆಂಗಳೂರು : ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ, ಬೆಂಗಳೂರು ಇವರು ಕರ್ನಾಟಕ ರಾಜ್ಯದ ಡಿಪ್ಲೊಮಾ ಕಾಲೇಜುಗಳಿಂದ ಕಳೆದ ಎರಡು ವರ್ಷಗಳಲ್ಲಿ (2022-23 ಮತ್ತು 2023-24) ಡಿ. ಫಾರ್ಮ (ಫಾರ್ಮಸಿಯಲ್ಲಿ ಡಿಪ್ಲೊಮಾ) ಪೂರ್ಣಗೊಳಿಸಿ ಉತ್ತೀರ್ಣರಾಗಿರುವ ವಿದ್ಯಾರ್ಥಿಗಳಿಂದ 11 ತಿಂಗಳ ಅವಧಿಗೆ ಅಪ್ರೆಂಟೀಸ್‌ಶಿಪ್ ತರಬೇತಿಗಾಗಿ ಆನ್‌ಲೈನ್ ಮುಖಾಂತರ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಯ್ಕೆ ಪ್ರಕ್ರಿಯೆಯು ಮೆರಿಟ್ ಆಧಾರದ ಮೇಲೆ ನಡೆಯಲಿದೆ.ಆಯ್ಕೆಯಾದ ವಿದ್ಯಾರ್ಥಿಗಳನ್ನು ಕೌನ್ಸಲಿಂಗ್ ಆಧಾರದ ಮೇಲೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ (PHCs) ತರಬೇತಿಗೆ ನಿಯೋಜನೆ ಮಾಡಲಾಗುವುದು. ಅರ್ಜಿಯ ವಿವರಗಳನ್ನು ಕರ್ನಾಟಕ […]

ಕನ್ನಡ ದುನಿಯಾ 12 Jan 2026 7:48 am

BIG NEWS : ‘ರಾಜ್ಯ ಸರ್ಕಾರಿ’ನೌಕರರೇ ಗಮನಿಸಿ : ‘ಸಂಬಳ ಪ್ಯಾಕೇಜ್’ನಲ್ಲಿ ನೋಂದಾಯಿಸಲು ಜ. 16 ಕೊನೆಯ ದಿನ.!

ಬೆಂಗಳೂರು : ಸರ್ಕಾರದಿಂದ ನೇರವಾಗಿ / ಪರೋಕ್ಷವಾಗಿ ನೇಮಕಗೊಂಡಿರುವ ఎలా ‘ఎ’ ‘ಬಿ’ ಮತ್ತು ‘ಸಿ’ ಗುಂಪಿನ ಅರ್ಹ ಅಧಿಕಾರಿಗಳು/ನೌಕರರು ಕಡ್ಡಾಯವಾಗಿ ಸಂಬಳ ಪ್ಯಾಕೇಜಿನಲ್ಲಿ ನೋಂದಾಯಿಸಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳುವಲ್ಲಿ ಕಾಲಾವಧಿಯನ್ನು ವಿಸ್ತರಿಸುವ ಕುರಿತು ಸರ್ಕಾರ ಆದೇಶ ಹೊರಡಿಸಿದೆ. ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಉಲ್ಲೇಖಿತ ಪತ್ರದಲ್ಲಿ ಎಲ್ಲಾ ಅರ್ಹ “ಎ”, “ಬಿ” ಮತ್ತು “ಸಿ” ಗುಂಪಿನ ಅಧಿಕಾರಿಗಳು/ನೌಕರರಿಗೆ ಕಡ್ಡಾಯವಾಗಿ ಸಂಬಳ ಪ್ಯಾಕೇಜಿನಲ್ಲಿ ನೋಂದಾಯಿಸಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ಹಾಗೂ ದಿನಾಂಕ: 15.12.2025 ರೊಳಗಡೆ ನೋಂದಾಯಿಸಿಕೊಳ್ಳದ ಅಧಿಕಾರಿಗಳ ಸಂಬಳದ ವಿತರಣೆಯನ್ನು ತಡೆಹಿಡಿಯಲು ಕ್ರಮ ಕೈಗೊಳ್ಳಲು […]

ಕನ್ನಡ ದುನಿಯಾ 12 Jan 2026 7:39 am

BREAKING: ಶತಕ ವಂಚಿತ ವಿರಾಟ್ ಕೊಹ್ಲಿ: ನ್ಯೂಜಿಲೆಂಡ್ ವಿರುದ್ಧ ಭಾರತಕ್ಕೆ ರೋಚಕ ಜಯ

ಗುಜರಾತ್ ನ ವಡೋದರಾದಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ತಂಡ 4 ವಿಕೆಟ್ ಗಳಿಂದ ರೋಚಕ ಜಯಗಳಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ 50 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 300 ರನ್ ಗಳಿಸಿತು. 301 ಗೆಲುವಿನ ಗುರಿ ಪಡೆದ ಭಾರತ 49 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 306 ರನ್ ಗಳಿಸಿ 4 ವಿಕೆಟ್ ಗಳಿಂದ ಭರ್ಜರಿ ಜಯ ಗಳಿಸಿದೆ. ವಿರಾಟ್ ಕೊಹ್ಲಿ 7 ರನ್‌ಗಳಿಂದ ಶತಕ ವಂಚಿತರಾದರು. […]

ಕನ್ನಡ ದುನಿಯಾ 11 Jan 2026 9:45 pm