ರಾಜ್ಯದ ಎಲ್ಲಾ ಶಾಲೆಗಳಲ್ಲಿ ಮಕ್ಕಳಿಗೆ ನೀರು ಕುಡಿಯಲು ‘ವಾಟರ್ ಬೆಲ್’ ಬಾರಿಸಲು ಸುತ್ತೋಲೆ
ಬೆಂಗಳೂರು: ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಲ್ಲಿ ಮಕ್ಕಳಿಗೆ ನೀರು ಕುಡಿಯುವಂತೆ ನೆನಪಿಸಲು ವಾಟರ್ ಬೆಲ್(ನೀರಿನ ಗಂಟೆ)ಬಾರಿಸುವ ಕುರಿತು ಸುತ್ತೋಲೆ ಹೊರಡಿಸಲಾಗಿದೆ. ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ. ಶಾಲೆಗಳಲ್ಲಿ ಮಕ್ಕಳಿಗೆ ಆಗಾಗೆ, ನೀರು ಕುಡಿಯಬೇಕೆಂಬ ಅರಿವು ಅಷ್ಟಾಗಿ ಇರುವುದಿಲ್ಲ. ಮಕ್ಕಳ ಆರೋಗ್ಯದ ಹಿತದೃಷ್ಠಿಯಿಂದ ಶಾಲೆಗಳಲ್ಲಿ ಮಕ್ಕಳಿಗೆ ಆಗಾಗೆ, ನೀರು ಕುಡಿಯುವಂತೆ ಜ್ಞಾಪಿಸಲು “ವಾಟರ್ ಬೆಲ್” (ನೀರಿನ ಗಂಟೆ) ಬಾರಿಸುವುದು ಸೂಕ್ತವಾಗಿರುತ್ತದೆ. ಮಕ್ಕಳ ಬೆಳವಣಿಗೆಗೆ ಮತ್ತು ಆರೋಗ್ಯಕ್ಕೆ ನೀರು ಅತ್ಯವಶ್ಯಕವಾಗಿರುತ್ತದೆ. ಏಕೆಂದರೆ ಇದು ದೇಹದ ಉಷ್ಣತೆಯನ್ನು […]
ಯುಜಿಸಿ ನೆಟ್ ಪರೀಕ್ಷೆ ಕೀ ಉತ್ತರ ಪ್ರಕಟ: ಅಭ್ಯರ್ಥಿಗಳಿಗೆ ಇಲ್ಲಿದೆ ಮುಖ್ಯ ಮಾಹಿತಿ
ನವದೆಹಲಿ: ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ-ರಾಷ್ಟ್ರೀಯ ಅರ್ಹತಾ ಪರೀಕ್ಷೆ(UGC NET) ಕೀ ಉತ್ತರ ಬಿಡುಗಡೆಯಾಗಿದ್ದು, ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್- ugcnet.nta.nic.in ನಲ್ಲಿ UGC NET ಉತ್ತರ ಕೀ 2025 ಅನ್ನು ಪರಿಶೀಲಿಸಬಹುದು ಮತ್ತು ಡೌನ್ಲೋಡ್ ಮಾಡಬಹುದು. ಅಭ್ಯರ್ಥಿಗಳು UGC NET ಉತ್ತರ ಕೀ 2025 PDF ಅನ್ನು ಪರಿಶೀಲಿಸಲು ಮತ್ತು ಡೌನ್ಲೋಡ್ ಮಾಡಲು ಈ ಹಂತಗಳನ್ನು ಅನುಸರಿಸಬಹುದು. UGC NET ಕೀ ಉತ್ತರ 2025 ಅನ್ನು ಡೌನ್ಲೋಡ್ ಮಾಡಲು, ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್- ugcnet.nta.nic.in ಗೆ ಭೇಟಿ ನೀಡಿ […]
ಹೆದ್ದಾರಿಗಳಲ್ಲಿ ಅಪಘಾತ ತಡೆಗೆ NHAI ಮತ್ತೊಂದು ಮಹತ್ವದ ಕ್ರಮ
ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(NHA)I ರಾಷ್ಟ್ರೀಯ ಹೆದ್ದಾರಿ ಬಳಕೆದಾರರಿಗೆ ನೈಜ-ಸಮಯದ ಸುರಕ್ಷತಾ ಎಚ್ಚರಿಕೆಗಳನ್ನು ನೀಡಲು ಪೈಲಟ್ ಉಪಕ್ರಮವನ್ನು ಪ್ರಾರಂಭಿಸಿದೆ. ವಿಶೇಷವಾಗಿ ಮಂಜು ಮತ್ತು ಕಡಿಮೆ ಗೋಚರತೆಯ ಪರಿಸ್ಥಿತಿಗಳಲ್ಲಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಹಠಾತ್ ದನಗಳ ಚಲನೆಯಿಂದ ಉಂಟಾಗುವ ಅಪಘಾತಗಳನ್ನು ಕಡಿಮೆ ಮಾಡುವ ಗುರಿಯನ್ನು ಈ ಉಪಕ್ರಮ ಹೊಂದಿದೆ. ಜೈಪುರ-ಆಗ್ರಾ ಮತ್ತು ಜೈಪುರ-ರೇವಾರಿ ರಾಷ್ಟ್ರೀಯ ಹೆದ್ದಾರಿ ಕಾರಿಡಾರ್ಗಳಲ್ಲಿ ಪೈಲಟ್ ಉಪಕ್ರಮವನ್ನು ಜಾರಿಗೆ ತರಲಾಗುತ್ತಿದೆ, ಇವುಗಳನ್ನು ಬೀದಿ ದನಗಳ ಚಲನೆಗೆ ಗುರಿಯಾಗುವ ಪ್ರದೇಶಗಳಾಗಿ ಗುರುತಿಸಲಾಗಿದೆ. ಪೈಲಟ್ ಯೋಜನೆಯಡಿಯಲ್ಲಿ, ರಾಷ್ಟ್ರೀಯ ಹೆದ್ದಾರಿ ಪ್ರಯಾಣಿಕರಿಗೆ […]
ವಿಬಿ ಜಿ ರಾಮ್ ಜಿ ಕಾಯ್ದೆ ಬಗ್ಗೆ ಚರ್ಚಿಸಿ ನಿರ್ಣಯ ಕೈಗೊಳ್ಳಲು ಜ. 22ರಿಂದ 31ರವರೆಗೆ ವಿಶೇಷ ಅಧಿವೇಶನ
ವಿಬಿ ಜಿ ರಾಮ್ ಜಿ ನೂತನ ಕಾಯ್ದೆಯು ಸಮಾಜದ ಮೇಲೆ ಬೀರುವ ಸಾಮಾಜಿಕ ಹಾಗೂ ಆರ್ಥಿಕ ಪರಿಣಾಮಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಹಾಗೂ ಜಾಗೃತಿ ಮೂಡಿಸುವ ತುರ್ತು ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಜನವರಿ 22 ರಿಂದ 31ರ ವರೆಗೆ ವಿಶೇಷ ಅಧಿವೇಶನ ನಡೆಸಿ, ನೂತನ ಕಾಯ್ದೆಯ ಕುರಿತು ವಿಸ್ತೃತವಾಗಿ ಚರ್ಚಿಸಿ, ನಿರ್ಣಯ ಕೈಗೊಳ್ಳಲು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.
ಮಲೆನಾಡಿನಲ್ಲಿ ಕಾಡಾನೆಗಳ ಹಿಂಡು ಸಂಚಾರ: ಅಡಕೆ, ಕಾಫಿ, ಬಾಳೆ ನಾಶ
ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆ ಮಲೆನಾಡು ಭಾಗದಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದೆ. 17 ಕಾಡಾನೆಗಳು ಚಿಕ್ಕಮಗಳೂರು ಜಿಲ್ಲೆ ಎನ್ಆರ್ ಪುರ ತಾಲೂಕಿನ ಮಡಬೂರು ಗ್ರಾಮದ ಬಳಿ ಸಂಚರಿಸಿವೆ. 17 ಕಾಡಾನೆಗಳ ಹಿಂಡು ಬಿಂದಾಸ್ ಆಗಿ ರಸ್ತೆ ದಾಟಿದೆ. ಮುತ್ತಿನ ಕೊಪ್ಪ, ಶೆಟ್ಟಿ ಕೊಪ್ಪ, ಮಡಬೂರು ಸುತ್ತಮುತ್ತ ಕಾಡಾನೆಗಳು ಓಡಾಡುತ್ತಿವೆ. ಎನ್ಆರ್ ಪುರ ವಲಯ ಅರಣ್ಯ ವ್ಯಾಪ್ತಿಯ ಗ್ರಾಮಗಳು ಇವಾಗಿವೆ. ಅಡಕೆ, ಕಾಫಿ, ಬಾಳೆ ಬೆಳೆಯನ್ನು ಕಾಡಾನೆಗಳು ನಾಶ ಮಾಡುತ್ತಿದ್ದು, ಸೆರೆಹಿಡಿದು ಸ್ಥಳಾಂತರ ಮಾಡುವಂತೆ ರೈತರು ಆಗ್ರಹಿಸಿದ್ದಾರೆ. ಅರಣ್ಯ ಇಲಾಖೆಯ […]
ಇವಿ ಚಾರ್ಜಿಂಗ್, ಬ್ಯಾಟರಿ ವಿನಿಮಯ ಕೇಂದ್ರಗಳ ಸ್ಥಾಪನೆಗೆ ಭೂಮಿ ಬಾಡಿಗೆ, ಭೋಗ್ಯಕ್ಕೆ ನೀಡಲು ಅವಕಾಶ
ಬೆಸ್ಕಾಂನಿಂದ ಲ್ಯಾಂಡ್ ಅಗ್ರಿಗೇಟರ್ ಪೋರ್ಟಲ್ ಬಿಡುಗಡೆ ಮಾಡಲಾಗಿದೆ. ಭೂಮಿಯನ್ನು ಬಾಡಿಗೆ ಭೋಗ್ಯಕ್ಕೆ ನೀಡಲು ಅವಕಾಶ ಕಲ್ಪಿಸಲಾಗಿದೆ. ರಾಜ್ಯಾದ್ಯಂತ ಇವಿ ಚಾರ್ಜಿಂಗ್ ಕೇಂದ್ರಗಳು ಬ್ಯಾಟರಿ ವಿನಿಮಯ ಕೇಂದ್ರ ಸ್ಥಾಪನೆಗೆ ಅವಕಾಶ ಕಲ್ಪಿಸಲಾಗಿದೆ. ಇ.ವಿ ಚಾರ್ಜಿಂಗ್ ಹಾಗೂ ಬ್ಯಾಟರಿ ವಿನಿಮಯ ಕೇಂದ್ರಗಳ ಸ್ಥಾಪನೆ, ತ್ವರಿತ ವಿದ್ಯುತ್ ಸಂಪರ್ಕಕ್ಕೆ ಏಕಗವಾಕ್ಷಿ ವ್ಯವಸ್ಥೆಯನ್ನು ಹೊಂದಿರುವ ‘ಲ್ಯಾಂಡ್ ಅಗ್ರಿಗೇಟರ್ ಪೋರ್ಟಲ್’ ಅನ್ನು ಬೆಸ್ಕಾಂ ಆರಂಭಿಸಿದೆ. ಭೂ ಮಾಲೀಕರು, ಸರ್ಕಾರಿ ಇಲಾಖೆಗಳು, ಖಾಸಗಿ ಸಂಸ್ಥೆಗಳು ಇ.ವಿ ಚಾರ್ಜಿಂಗ್ ಹಾಗೂ ಬ್ಯಾಟರಿ ವಿನಿಮಯ ಕೇಂದ್ರಗಳನ್ನು ಸ್ಥಾಪಿಸಲು ಹಾಗೂ […]
ಧಾರವಾಡ: ಶಾಲಾ ಮಕ್ಕಳ ಅಪಹರಣ ಕೇಸ್, ತನಿಖೆಗೆ ಸಮಿತಿ ನೇಮಕ
ಧಾರವಾಡದಲ್ಲಿ ನಡೆದ ಸರ್ಕಾರಿ ಶಾಲಾ ಮಕ್ಕಳ ಅಪಹರಣ ಪ್ರಕರಣ ಭಾರೀ ಚರ್ಚೆಗೆ ಕಾರಣವಾಗಿತ್ತು. ಈ ಕುರಿತು ತನಿಖೆ ಮಾಡಿ ವರದಿ ನೀಡಲು ಜಿಲ್ಲಾ ಪಂಚಾಯತಿ ಸಿಇಓ ಅವರು ಅಧಿಕಾರಿಗಳ ಸಮಿತಿ ರಚಿಸಿದ್ದಾರೆ. ಜಿಲ್ಲಾಧಿಕಾರಿ ದಿವ್ಯ ಪ್ರಭು ಇಂದು ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ, ಅಪಹರಣದಿಂದ ಸುರಕ್ಷಿತವಾಗಿ ಪಾರಾಗಿ, ಜಿಲ್ಲಾ ಆಸ್ಪತ್ರೆಯ ಸಖಿ ವಾರ್ಡದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಕ್ಕಳ ಆರೋಗ್ಯ ವಿಚಾರಿಸಿ, ಸಾಂತ್ವನ ಹೇಳಿದರು. ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, “ಜನವರಿ 12 ರಂದು ಜರುಗಿದ ಕಮಲಾಪುರ ಸರಕಾರಿ […]
ಇರುಮುಡಿ ಹೊತ್ತು ಅಯ್ಯಪ್ಪ ಸ್ವಾಮಿ ದರ್ಶನ ಪಡೆದ ಶಿವಣ್ಣ
ಮಕರ ಸಂಕ್ರಮಣದ ಅಂಗವಾಗಿ ನಟ ಶಿವರಾಜ್ ಕುಮಾರ್ ಇರುಮುಡಿ ಹೊತ್ತು ಶ್ರೀ ಅಯ್ಯಪ್ಪ ಸ್ವಾಮಿ ದರ್ಶನವನ್ನು ಪಡೆದರು. ಶಿವರಾಜ್ ಕುಮಾರ್ ಪತ್ನಿ ಗೀತಾ ಶಿವರಾಜ್ ಕುಮಾರ್ ಜೊತೆ ಮಾಲೆ ಧರಿಸಿ, ಇರುಮುಡಿ ಹೊತ್ತು ದೇವಾಲಯಕ್ಕೆ ಭೇಟಿ ನೀಡಿದರು. ಬುಧವಾರ ಕರ್ನಾಟಕದ ಶಬರಿಮಲೆ ಎಂದೇ ಖ್ಯಾತವಾಗಿರುವ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಬೆಜ್ಜವಳ್ಳಿಯಲ್ಲಿ ಶ್ರೀ ಅಯ್ಯಪ್ಪಸ್ವಾಮಿ ದೇವಾಲಯಕ್ಕೆ ಶಿವರಾಜ್ ಕುಮಾರ್ ದಂಪತಿ ಭೇಟಿ ನೀಡಿದರು. ದೇವರ ದರ್ಶನದ ಬಳಿಕ ದೇವಾಲಯದಲ್ಲಿ ನಡೆದ ಮಕರ ಸಂಕ್ರಾಂತಿ ಉತ್ಸವ ಹಾಗೂ ಪೀಠ […]
ಇರಾನ್ ಪ್ರತಿಭಟನೆ: ದೇಶ ತೊರೆಯುವಂತೆ ಭಾರತೀಯರಿಗೆ ತುರ್ತು ಸಲಹೆ
ಇರಾನ್ನಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಈವರೆಗೆ ಸುಮಾರು 2,000 ಮಂದಿ ಮೃತಪಟ್ಟಿದ್ದಾರೆ. ಈಗ ಪ್ರತಿಭಟನೆ ಇನ್ನಷ್ಟು ಹೆಚ್ಚಾಗುತ್ತಿದ್ದು, ಅಲ್ಲಿರುವ ಭಾರತೀಯರಿಗೆ ದೇಶ ತೊರೆಯುವಂತೆ ತುರ್ತು ಸಲಹೆ ನೀಡಲಾಗಿದೆ. ಇರಾನ್ನಲ್ಲಿ ಪ್ರತಿಭಟನೆಗಳು ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಅಲ್ಲಿರುವ ಭಾರತೀಯ ನಾಗರಿಕರಿಗೆ ಭಾರತೀಯ ರಾಯಭಾರ ಕಚೇರಿಯು ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಲಭ್ಯವಿರುವ ಸಾರಿಗೆ ಸೌಲಭ್ಯಗಳನ್ನು ಬಳಸಿಕೊಂಡು ತಕ್ಷಣವೇ ದೇಶವನ್ನು ತೊರೆಯುವಂತೆ ರಾಯಭಾರ ಕಚೇರಿಯು ಸೂಚಿಸಿದೆ. “ಭಾರತ ಸರ್ಕಾರವು ಜನವರಿ 5, 2025ರಂದು ಹೊರಡಿಸಿದ ಮಾರ್ಗಸೂಚಿಯ ಮುಂದುವರಿದ ಭಾಗವಾಗಿ, ಇರಾನ್ನಲ್ಲಿ ಪ್ರಸ್ತುತ ಉದ್ಭವಿಸಿರುವ […]
ಹೋಳಿ ಹಬ್ಬದಂದೇ ವರ್ಷದ ಮೊದಲ ಚಂದ್ರಗ್ರಹಣ: ಭಾರತದ ಮೇಲೆ ಏನು ಪ್ರಭಾವ? ಇಲ್ಲಿದೆ ಗ್ರಹಣದ ಸಂಪೂರ್ಣ ವಿವರ!
ಹಿಂದೂ ಧರ್ಮ ಮತ್ತು ಜ್ಯೋತಿಷ್ಯ ಶಾಸ್ತ್ರದಲ್ಲಿ ಚಂದ್ರಗ್ರಹಣಕ್ಕೆ ವಿಶೇಷ ಮಹತ್ವವಿದೆ. 2026ನೇ ವರ್ಷದಲ್ಲಿ ಒಟ್ಟು ನಾಲ್ಕು ಗ್ರಹಣಗಳು ಸಂಭವಿಸಲಿವೆಯಾದರೂ, ಭಾರತದಲ್ಲಿ ಕೇವಲ ಒಂದು ಚಂದ್ರಗ್ರಹಣ ಮಾತ್ರ ಗೋಚರಿಸಲಿದೆ. ಹೀಗಾಗಿ ಈ ಗ್ರಹಣವು ಧಾರ್ಮಿಕವಾಗಿ ಅತ್ಯಂತ ಪ್ರಮುಖವೆಂದು ಪರಿಗಣಿಸಲ್ಪಟ್ಟಿದೆ. ಗ್ರಹಣದ ದಿನಾಂಕ ಮತ್ತು ವಿಶೇಷತೆ: 2026ರ ಮೊದಲ ಚಂದ್ರಗ್ರಹಣವು ಮಾರ್ಚ್ 3, ಮಂಗಳವಾರದಂದು ಸಂಭವಿಸಲಿದೆ. ವಿಶೇಷವೆಂದರೆ, ಈ ದಿನದಂದೇ ‘ಹೋಲಿಕಾ ದಹನ’ (ಚೋಟಿ ಹೋಳಿ) ಆಚರಿಸಲಾಗುತ್ತಿದ್ದು, ಹಬ್ಬದ ದಿನವೇ ಗ್ರಹಣ ಬಂದಿರುವುದು ಭಕ್ತರಲ್ಲಿ ಹೆಚ್ಚಿನ ಕುತೂಹಲ ಮೂಡಿಸಿದೆ. ಇದು […]
ಆಕಾಶದ ಎತ್ತರದಲ್ಲಿದೆ ಈ ಹೋಟೆಲ್! 4,891 ಕೋಟಿ ವೆಚ್ಚದ ಈ ಕಟ್ಟಡದ ಒಂದು ದಿನದ ಬಾಡಿಗೆ ಎಷ್ಟು ಗೊತ್ತಾ?
ವಿಶ್ವದ ಅತ್ಯಂತ ಎತ್ತರದ ಕಟ್ಟಡ ‘ಬುರ್ಜ್ ಖಲೀಫಾ’ ಹೊಂದಿರುವ ದುಬೈ ನಗರವು ಈಗ ಮತ್ತೊಂದು ವಿಶ್ವ ದಾಖಲೆಗೆ ಸಾಕ್ಷಿಯಾಗಿದೆ. ವಿಶ್ವದ ಅತ್ಯಂತ ಎತ್ತರದ ಹೋಟೆಲ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ‘ಸಿಯೆಲ್ ದುಬೈ ಮರೀನಾ’ (Ciel Dubai Marina) ಅಥವಾ ‘ಸಿಯೆಲ್ ಟವರ್’ ಈಗ ಪ್ರವಾಸಿಗರ ಪ್ರಮುಖ ಆಕರ್ಷಣೆಯಾಗಿದೆ. ದುಬೈ ಮರೀನಾದ ಅತ್ಯಂತ ಸುಂದರ ಪ್ರದೇಶದಲ್ಲಿ ಈ ಬೃಹತ್ ಹೋಟೆಲ್ ನಿರ್ಮಾಣವಾಗಿದೆ. ಬರೋಬ್ಬರಿ 377 ಮೀಟರ್ ಎತ್ತರ! ಈ ಹೋಟೆಲ್ನ ಎತ್ತರ ಬರೋಬ್ಬರಿ 377 ಮೀಟರ್ (1,237 ಅಡಿ). […]
ಬೆಂಗಳೂರು: ಬ್ಯಾಂಕಿಂಗ್ ಕ್ಷೇತ್ರದಲ್ಲಿ ವೃತ್ತಿಜೀವನ ರೂಪಿಸಿಕೊಳ್ಳಲು ಬಯಸುವವರಿಗೆ ಯುಕೋ ಬ್ಯಾಂಕ್ ಭರ್ಜರಿ ಸಿಹಿಸುದ್ದಿ ನೀಡಿದೆ. 2026-27ನೇ ಸಾಲಿನ ನೇಮಕಾತಿ ಅಡಿಯಲ್ಲಿ ಚಾರ್ಟರ್ಡ್ ಅಕೌಂಟೆಂಟ್ (CA) ಹಾಗೂ ವಿವಿಧ ತಜ್ಞ ಅಧಿಕಾರಿ (Specialist Officer) ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಹೊರಡಿಸಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಈ ನೇಮಕಾತಿಯ ಪ್ರಮುಖ ಮಾಹಿತಿಗಳು ಇಲ್ಲಿವೆ: ಯಾವೆಲ್ಲಾ ಹುದ್ದೆಗಳಿವೆ? (ಒಟ್ಟು 173 ಹುದ್ದೆಗಳು)ಈ ನೇಮಕಾತಿ ಅಭಿಯಾನದ ಮೂಲಕ ಬ್ಯಾಂಕ್ ಈ ಕೆಳಗಿನ […]
ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್ 2026: ಸ್ಮಾರ್ಟ್ಫೋನ್ಗಳ ಮೇಲೆ 50% ವರೆಗೆ ರಿಯಾಯಿತಿ
ಬೆಂಗಳೂರು: 2026ರ ವರ್ಷದ ಮೊದಲ ಬೃಹತ್ ಸೇಲ್ ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್ ಜನವರಿ 16ರಿಂದ ಅಬ್ಬರದಿಂದ ಆರಂಭವಾಗಲಿದೆ. ಈ ಸೇಲ್ನಲ್ಲಿ ಕೇವಲ ರಿಯಾಯಿತಿಯ ಹೆಸರಲ್ಲದೆ, ನಿಜವಾಗಿಯೂ ಅತ್ಯುತ್ತಮ ಬೆಲೆಯಲ್ಲಿ ಸಿಗುವ ಗ್ಯಾಜೆಟ್ಗಳನ್ನು ಗುರುತಿಸುವುದು ಮುಖ್ಯ. ನೀವು ಹೊಸ ಸ್ಮಾರ್ಟ್ಫೋನ್ ಅಥವಾ ಗ್ಯಾಜೆಟ್ ಖರೀದಿಸಲು ಕಾಯುತ್ತಿದ್ದೀರಾ? ಹಾಗಿದ್ದರೆ ನಿಮಗೊಂದು ಗುಡ್ ನ್ಯೂಸ್ ಅಮೆಜಾನ್ ತನ್ನ ಬಹುನಿರೀಕ್ಷಿತ ಗ್ರೇಟ್ ರಿಪಬ್ಲಿಕ್ ಡೇ ಸೇಲ್ 2026 ಅನ್ನು ಅದ್ಧೂರಿಯಾಗಿ ಘೋಷಿಸಿದೆ. ಎಲೆಕ್ಟ್ರಾನಿಕ್ ಉತ್ಪನ್ನಗಳ ಮೇಲೆ ಭರ್ಜರಿ ದರ ಕಡಿತವಿದ್ದು, […]
JOB ALERT : ಶಿಸ್ತು ಮತ್ತು ಜಾಗೃತ ಹುದ್ದೆಗೆ ಹಾಗೂ NCC ಬೋಧಕರ ನೇಮಕಾತಿಗೆ ಅರ್ಜಿ ಆಹ್ವಾನ
ಶಿವಮೊಗ್ಗ : ಕರ್ನಾಟಕ ಮತ್ತು ಗೋವಾ ಎನ್.ಸಿ.ಸಿ ನಿರ್ದೇಶನಾಲಯವು 2026-27ನೇ ಸಾಲಿಗಾಗಿ ಓರ್ವ ನಿವೃತ್ತ ಸೈನ್ಯಾಧಿಕಾರಿಯನ್ನು ಒಪ್ಪಂದದ ಮೇರೆಗೆ ಶಿಸ್ತು ಮತ್ತು ಜಾಗೃತ ಹುದ್ದೆಗೆ ಹಾಗೂ ಮಾಜಿ ಸೈನಿಕರನ್ನು 30 ಎನ್.ಸಿ.ಸಿ. ಬೋಧಕರ ಹುದ್ದೆಗಳಿಗೆ ಕೆಲವು ಷರತ್ತುಗಳೊಂದಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತರು ಅರ್ಜಿಯನ್ನು ಇಮೇಲ್ “adperskardte@gmail.com“ ಮೂಲಕ ಮತ್ತು ಅಂಚೆ ವಿಳಾಸ NCC Dte (Karnataka and Goa), KSCMF Building, 4th Floor, No-8, Cunningham Road, Bengaluru – 560001 ಮೂಲಕ ಜ.25 ರೊಳಗಾಗಿ […]
SHOCKING : ವಿಪರೀತವಾಗಿ ‘ಮದ್ಯ’ ಸೇವಿಸಿದ್ರೆ ಮಕ್ಕಳು ಆಗೋದು ಕಷ್ಟ : ಅಧ್ಯಯನ
ಮದ್ಯ ಸೇವನೆ ಆರೋಗ್ಯಕ್ಕೆ ಹಾನಿಕಾರಕ. ಆದರೆ, ಮದ್ಯ ಮಾರಾಟ ಕಡಿಮೆಯಾಗುತ್ತಿಲ್ಲ. ಹಬ್ಬ ಹರಿದಿನಗಳಲ್ಲಿ… ವಿಶೇಷ ಸಂದರ್ಭಗಳಲ್ಲಿ… ಮದ್ಯ ಸೇವನೆ ಹೆಚ್ಚು ಹೆಚ್ಚುತ್ತಿದೆ. ಹೆಚ್ಚುತ್ತಿರುವ ಮದ್ಯ ಸೇವನೆಯೊಂದಿಗೆ, ಹಲವು ರೀತಿಯ ಆರೋಗ್ಯ ಸಮಸ್ಯೆಗಳು ಉದ್ಭವಿಸುತ್ತಿವೆ. ಒತ್ತಡದಲ್ಲಿದ್ದರೂ ಸಹ.. ಮದ್ಯವು ಪಾರ್ಟಿಗೆ ಒಂದು ಮಾರ್ಗವಾಗಿದೆ. ಇತ್ತೀಚಿನ ದಿನಗಳಲ್ಲಿ ಮದ್ಯ ಸೇವನೆಯಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳಲ್ಲಿ ಫಲವತ್ತತೆಯ ಮೇಲೆ ಪರಿಣಾಮ ಹೆಚ್ಚಾಗಿದೆ ಎಂದು ತಜ್ಞರು ಹೇಳುತ್ತಾರೆ. ಇದಕ್ಕೆ ಚಿಕಿತ್ಸೆ ಪಡೆಯುವವರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ. ಅಧ್ಯಯನ ಏನು ಹೇಳುತ್ತದೆ..? ನಿಯಮಿತವಾಗಿ ಮದ್ಯ […]
ಉಡುಪಿ ಪರ್ಯಾಯ 2026: ಭಕ್ತರಿಗೆ ವಿಶೇಷ ಸೂಚನೆಗಳು
ಉಡುಪಿ 2026ರ ಪರ್ಯಾಯ ಮಹೋತ್ಸವಕ್ಕೆ ಸಿದ್ಧವಾಗಿದೆ. ಸಾವಿರಾರು ಭಕ್ತರು ಈ ಸಮಯದಲ್ಲಿ ಉಡುಪಿಗೆ ಭೇಟಿ ನೀಡಲಿದ್ದಾರೆ. ಆದ್ದರಿಂದ ಜಿಲ್ಲಾಡಳಿತ ವಾಹನ ಸಂಚಾರ ಮಾರ್ಗ ಬದಲಾವಣೆ ಮಾಡಿ ಆದೇಶವನ್ನು ಹೊರಡಿಸಿದೆ. ಈ ಕುರಿತು ಉಡುಪಿ ಡಿಸಿ ಸ್ವರೂಪ ಟಿ.ಕೆ. ಅಧಿಸೂಚನೆ ಹೊರಡಿಸಿದ್ದಾರೆ. 17/01/2026 ಮತ್ತು 18/01/2026 ರಂದು ಉಡುಪಿ ಶ್ರೀ ಕೃಷ್ಣ ಮಠದ ಪರ್ಯಾಯ ಮಹೋತ್ಸವದ ಹಿನ್ನೆಲೆಯಲ್ಲಿ ಸುಗಮ ಸಂಚಾರ, ವಾಹನ ಸಂಚಾರ ನಿಷೇಧ ಮತ್ತು ಬದಲಿ ಮಾರ್ಗದ ಕುರಿತು ಅಧಿಸೂಚನೆ ಎಂಬ ವಿಷಯವನ್ನು ಅಧಿಸೂಚನೆ ಒಳಗೊಂಡಿದೆ. ಉಡುಪಿ […]
– 40 ಅಂಕ ಪಡೆದ SC,ST, OBC ಅಭ್ಯರ್ಥಿಗಳು ಕೂಡ ವೈದ್ಯರಾಗಬಹುದು ! NEET-PG ಕಟ್-ಆಫ್ನಲ್ಲಿ ಐತಿಹಾಸಿಕ ಬದಲಾವಣೆ
NEET-PG 2025-26 ರ ಕಟ್-ಆಫ್ಗಳಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ. ರಾಷ್ಟ್ರೀಯ ಪರೀಕ್ಷಾ ಮಂಡಳಿ (NBEMS) ಖಾಲಿ ಇರುವ ಸೀಟುಗಳನ್ನು ಭರ್ತಿ ಮಾಡಲು ಅರ್ಹತಾ ಶೇಕಡಾವಾರು ಪ್ರಮಾಣವನ್ನು ಐತಿಹಾಸಿಕವಾಗಿ ಕಡಿತಗೊಳಿಸಿದೆ. ಈ ಹೊಸ ಬದಲಾವಣೆಯು 0 ಅಥವಾ ಋಣಾತ್ಮಕ ಅಂಕಗಳನ್ನು ಹೊಂದಿರುವ SC, ST ಮತ್ತು OBC ವಿದ್ಯಾರ್ಥಿಗಳಿಗೆ MD, MS ಮತ್ತು DNB ಕೋರ್ಸ್ ಗಳಿಗೆ ಪ್ರವೇಶ ಪಡೆಯಲು ಅನುವು ಮಾಡಿಕೊಡುತ್ತದೆ. ಈ ಹೊಸ ಬದಲಾವಣೆಯು ವೈದ್ಯಕೀಯ ಜಗತ್ತಿನಲ್ಲಿ ಚರ್ಚೆಯನ್ನು ಹುಟ್ಟುಹಾಕಿದೆ ಮತ್ತು ಗಣನೀಯ ವಿರೋಧವನ್ನು ಎದುರಿಸುತ್ತಿದೆ. ಋಣಾತ್ಮಕ […]
ಕರ್ತವ್ಯ ನಿರತ ಮಹಿಳಾ ಅಧಿಕಾರಿ ಜೊತೆ ಅಸಭ್ಯ ಪುಂಡನಂತೆ ವರ್ತಿಸಿರುವುದು ಅಕ್ಷಮ್ಯ : ಬಿ.ವೈ ವಿಜಯೇಂದ್ರ ಕಿಡಿ
ಬೆಂಗಳೂರು : ಕರ್ತವ್ಯ ನಿರತ ಮಹಿಳಾ ಅಧಿಕಾರಿ ಮೇಲೆ ಅಸಭ್ಯ ಪುಂಡನಂತೆ ವರ್ತಿಸಿರುವುದು ಅಕ್ಷಮ್ಯ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಕಿಡಿಕಾರಿದ್ದಾರೆ. ಶಿಡ್ಲಘಟ್ಟ ಪೌರಾಯುಕ್ತೆಗೆ ಅಶ್ಲೀಲವಾಗಿ ನಿಂದಿಸಿದ ಕಾಂಗ್ರೆಸ್ ಮುಖಂಡನ ವಿರುದ್ಧ ವಿಜಯೇಂದ್ರ ಕಿಡಿಕಾರಿದ್ದಾರೆ. ರಾಜ್ಯವನ್ನು ಗೂಂಡಾರಾಜ್ಯವನ್ನಾಗಿ ಪರಿವರ್ತಿಸಿರುವ ಈ ಸರ್ಕಾರದಲ್ಲಿ ಕಾನೂನು-ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ, ಕಾಂಗ್ರೆಸ್ ಮುಖಂಡರುಗಳು ಇದಕ್ಕೆ ತಕ್ಕಂತೆ ಪುಡಿರೌಡಿಗಳಂತೆ ವರ್ತಿಸುತ್ತಿರುವುದು ಆ ಪಕ್ಷದ ಸಂಸ್ಕೃತಿಗೆ ಕನ್ನಡಿ ಹಿಡಿದಿದೆ. ಶಿಡ್ಲಘಟ್ಟದ ಕಾಂಗ್ರೆಸ್ ಮುಖಂಡ ನಿಯಮಬಾಹಿರವಾಗಿ ಕೃತ್ಯ ಎಸಗಿರುವುದು ಮಾತ್ರವಲ್ಲದೆ ಒಬ್ಬ ಕರ್ತವ್ಯ ನಿರತ […]
ಚಿಕ್ಕಬಳ್ಳಾಪುರ : ಶಿಡ್ಲಘಟ್ಟ ಪೌರಾಯುಕ್ತೆಗೆ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಅಶ್ಲೀಲವಾಗಿ ನಿಂದಿಸಿದ್ದಾರೆ ಎಂಬ ಆರೋಪಗಳು ಕೇಳಿಬಂದಿದ್ದು, ಚಿಕ್ಕಬಳ್ಳಾಪುರದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಕಲ್ಟ್ ಚಿತ್ರದ ಬ್ಯಾನರ್ ತೆರವುಗೊಳಿಸಿದ್ದಕ್ಕೆ : ಶಿಡ್ಲಘಟ್ಟ ಪೌರಾಯುಕ್ತೆ ಅಮೃತಾ ಗೌಡಗೆ ಕರೆ ಮಾಡಿದ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಅಶ್ಲೀಲವಾಗಿ ನಿಂದಿಸಿ, ಜೀವ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಬೆದರಿಕೆ ಹಾಕಿದ್ದಕ್ಕೆ ಅಮೃತಾ ಗೌಡ ಕಣ್ಣೀರಿಟ್ಟಿದ್ದಾರೆ. ನಾನು ಮೊದಲು ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದೆ, ತಂದೆಯ ಆಸೆಯಂತೆ ಈ ಕೆಲಸಕ್ಕೆ ಬಂದೆ. ಆದರೆ ನನಗೆ […]
ಸಂಕ್ರಾಂತಿ ದಿನವೇ ಗಗನಕ್ಕೇರಿದ ಚಿನ್ನ-ಬೆಳ್ಳಿ ಬೆಲೆ; ₹3 ಲಕ್ಷದತ್ತ ಬೆಳ್ಳಿ ಓಟ
ಬೆಂಗಳೂರು: ನೀವು ಚಿನ್ನ ಅಥವಾ ಬೆಳ್ಳಿಯನ್ನು ಖರೀದಿಸುವ ಪ್ಲಾನ್ ಮಾಡಿದ್ದೀರಾ? ಹಾಗಿದ್ದರೆ ಈ ಸುದ್ದಿ ನಿಮ್ಮ ಜೇಬಿಗೆ ಕತ್ತರಿ ಹಾಕೋದು ಗ್ಯಾರಂಟಿ! ಕಳೆದ ಆರು ದಿನಗಳಿಂದ ಚಿನ್ನದ ಬೆಲೆ ನಿರಂತರವಾಗಿ ಏರುತ್ತಲೇ ಸಾಗಿದ್ದು, ಪ್ರತಿದಿನ ಹೊಸ ದಾಖಲೆ ಬರೆಯುತ್ತಿದೆ. ಇನ್ನೊಂದೆಡೆ ಬೆಳ್ಳಿಯ ಬೆಲೆ ಯಾರೂ ಊಹಿಸದ ಮಟ್ಟಕ್ಕೆ ಜಿಗಿಯುತ್ತಿದ್ದು, ಗ್ರಾಹಕರು ಬೆಚ್ಚಿಬೀಳುವಂತಾಗಿದೆ.ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಏರುಪೇರುಗಳಿಂದಾಗಿ ಚಿನ್ನದ ಬೆಲೆ ಗ್ರಾಮ್ಗೆ ಬರೋಬ್ಬರಿ ₹100 ರಷ್ಟು ಏರಿಕೆಯಾಗಿದೆ.ಬೆಳ್ಳಿ ಬೆಲೆ ಬರೋಬ್ಬರಿ 15 ರೂ ಏರಿಕೆ ಆಗಿದೆ.ಪ್ರತಿ ಕಿಲೋ ಬೆಳ್ಳಿಯ ಬೆಲೆ […]
ಬಿಳಿಜೋಳ ಖರೀದಿ ಕೇಂದ್ರ ಆರಂಭ : ರೈತರಿಗೆ ಮುಖ್ಯ ಮಾಹಿತಿ
ಬೆಂಗಳೂರು : 2025-26 ನೇ ಸಾಲಿನ ಮುಂಗಾರು ಋತುವಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಜಿಲ್ಲೆಯ ರೈತರಿಂದ ಬಿಳಿಜೋಳವನ್ನು ಖರೀದಿಸುವ ಬಗ್ಗೆ ಜಿಲ್ಲಾಧಿಕಾರಿಗಳು ಸುತ್ತೋಲೆ ಹೊರಡಿಸಿದ್ದಾರೆ. ಮೇಲ್ಕಾಣಿಸಿದ ವಿಷಯಕ್ಕೆ ಸಂಬಂಧಿಸಿದಂತೆ, 2025-26 ನೇ ಸಾಲಿನ ಮುಂಗಾರು ಋತುವಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಬಿಳಿಜೋಳವನ್ನು ಖರೀದಿಗೆ ಸಂಬಂಧಿಸಿದಂತೆ. ಈಗಾಗಲೇ ಖರೀದಿ ಕೇಂದ್ರಗಳನ್ನು ಗುರುತಿಸಲಾಗಿದ್ದು, ತಾಲ್ಲೂಕುವರು ಖರೀದಿ ಕೇಂದ್ರಗಳ(ಸರ್ಕಾರದಿಂದ ಅನುಮೋದಿಸಲ್ಪಟ್ಟ) ಪಟ್ಟಿಯನ್ನು ಈ ಪತ್ರದೊಂದಿಗೆ ಅಡಕಗೊಳಿಸಿದೆ. ಪ್ರಯುಕ್ತ ಮುಂಗಾರು ಋತುವಿನಲ್ಲಿ ಬಿಳಿಜೋಳವನ್ನು ಬೆಳೆದಿರುವ ಆಸಕ್ತ ರೈತರು ಸದರಿ ಯೋಜನೆಯಡಿ […]
ಪ್ರೀತಿ ಅನ್ನೋದು ನಂಬಿಕೆಯ ಮೇಲೆ ನಿಂತಿರುತ್ತೆ ಅನ್ನೋದು ಹಳೆಯ ಮಾತು ಆದರೆ ಅದೇ ಪ್ರೀತಿಗೆ ವಿಮೆ (Insurance) ಮಾಡಿಸಿ ಲಕ್ಷಾಂತರ ರೂಪಾಯಿ ಲಾಭ ಗಳಿಸಬಹುದು ಅಂತ ನೀವು ಯಾವತ್ತಾದರೂ ಯೋಚಿಸಿದ್ದೀರಾ? ಸಾಮಾನ್ಯವಾಗಿ ನಾವು ಹೆಲ್ತ್ ಅಥವಾ ಲೈಫ್ ಇನ್ಶೂರೆನ್ಸ್ ಬಗ್ಗೆ ಕೇಳಿರುತ್ತೇವೆ, ಚೀನಾದ ಯುವತಿಯೊಬ್ಬಳು ತಾನು ಪ್ರೀತಿಸಿದ ಹುಡುಗನಿಗೆ ಪ್ರಪೋಸ್ ಮಾಡುವ ಮೊದಲೇ ಈ ವಿಚಿತ್ರ ಲವ್ ಇನ್ಶೂರೆನ್ಸ್ (Love Insurance) ಮಾಡಿಸಿ ಈಗ ಮದುವೆಯಾದ ಬೆನ್ನಲ್ಲೇ ಬರೋಬ್ಬರಿ 1.25 ಲಕ್ಷ ರೂಪಾಯಿ ಹಣವನ್ನು ಬಂಪರ್ ಉಡುಗೊರೆಯಾಗಿ […]
Rice Bugs : ಅಕ್ಕಿಯಲ್ಲಿ ಹುಳುಗಳಿದ್ರೆ ಒಂದು ರೂಪಾಯಿ ಖರ್ಚಿಲ್ಲದೇ ಜಸ್ಟ್ ಹೀಗೆ ಕ್ಲೀನ್ ಮಾಡಿ.!
ಅಕ್ಕಿಯಲ್ಲಿ ಹುಳ ಆಗಿದ್ಯಾ..? ಚಿಂತಿಸಬೇಡಿ… ಇದಕ್ಕೆ ಇಲ್ಲಿದೆ ಪರಿಹಾರ..ಇದಕ್ಕೆ 1 ರೂಪಾಯಿ ಕೂಡ ಖರ್ಚಾಗುವುದಿಲ್ಲ.. ಈ ಸಣ್ಣ ಕೆಲಸ ಮಾಡಿದರೆ ಎಲ್ಲಾ ಕೀಟಗಳು ಹೋಗುತ್ತದೆ.ಅಕ್ಕಿ ಖರೀದಿಸಿದ ಕೆಲವೇ ದಿನಗಳಲ್ಲಿ, ಪ್ರತಿ ಮನೆಯಲ್ಲೂ ಹಿಟ್ಟು ಹುಳಗಳ ಸಮಸ್ಯೆ ಇರುತ್ತದೆ. ಅವುಗಳನ್ನು ಎತ್ತಿಕೊಳ್ಳಲು ಅಥವಾ ತಿನ್ನಲು ಸಾಧ್ಯವಾಗದೆ, ಅನೇಕ ಜನರು ಅಕ್ಕಿಯನ್ನು ಎಸೆಯುತ್ತಾರೆ. ಆದರೆ ಅಡುಗೆಮನೆಯಲ್ಲಿ ಕಂಡುಬರುವ ವಸ್ತುಗಳ ಸಹಾಯದಿಂದ ನೀವು ಕೀಟಗಳನ್ನು ತೊಡೆದುಹಾಕಬಹುದು. ಒಂದು ವರ್ಷದ ನಂತರವೂ ನಿಮ್ಮ ಅಕ್ಕಿ ಕೆಡದಂತೆ ನೋಡಿಕೊಳ್ಳಲು ಈ 5 ಸರಳ ಸಲಹೆಗಳನ್ನು […]
ಇದ್ರೆ ನೆಮ್ಮದಿಯಾಗಿ ಇರಬೇಕು: TCS ಬಿಟ್ಟು ಅರಣ್ಯ ಇಲಾಖೆಗೆ ಸೇರಿದ ಟೆಕ್ಕಿ!
‘ಇದ್ರೆನೆಮ್ಮದಿಯಾಗಿ ಇರಬೇಕು’ ಎಂಬುದು ನಟ ದರ್ಶನ್ ಅಭಿನಯದ ‘ಡೆವಿಲ್’ ಚಿತ್ರದ ಹಾಡು. ಜೀವನದಲ್ಲೂ ನೆಮ್ಮದಿ ಬೇಕು. ದೊಡ್ಡ ಕಂಪನಿ ಕೆಲಸ, ಕೈ ತುಂಬಾ ಸಂಬಳ ನೆಮ್ಮದಿ ತಂದು ಕೊಡುವುದಿಲ್ಲ ಎಂಬುದನ್ನು ಟೆಕ್ಕಿಯೊಬ್ಬ ಮನವರಿಕೆ ಮಾಡಿಕೊಟ್ಟಿದ್ದಾನೆ. ಹೌದು ಇದು ಮನೀಶ್ ಕುಮಾರ್ ಎಂಬ ಸಾಫ್ಟ್ವೇರ್ ಇಂಜಿನಿಯರ್ ಬದುಕಿನ ಕಥೆ. ಜಾರ್ಖಂಡ್ನ ದುಮ್ಕಾ ಎಂಬ ಹಳ್ಳಿಯಿಂದ ಬಂದ ಮನೀಶ್ ಕುಮಾರ್ ಕೋಲ್ಕತ್ತಾದಲ್ಲಿರುವ ಟಿಸಿಎಸ್ ಕಂಪನಿಯಲ್ಲಿ ಕೆಲಸ ಪಡೆಯುವಲ್ಲಿ ಯಶಸ್ವಿಯಾದರು. ಮಗನಿಗೆ ಟಿಸಿಎಸ್ನಂತಹ ಕಂಪನಿಯಲ್ಲಿ ಕೆಲಸ ಸಿಕ್ಕಾಗ ಪೋಷಕರು ಸಂತಸಗೊಂಡಿದ್ದರು. ಇದು […]
BREAKING : ಹೃದಯಾಘಾತದಿಂದ ಮಂಡ್ಯ ಮೂಲದ ‘BSF ಯೋಧ’ಸಾವು.!
ಮಂಡ್ಯ : ಹೃದಯಾಘಾತದಿಂದ ಮಂಡ್ಯ ಮೂಲದ ಯೋಧ ಸಾವನ್ನಪ್ಪಿದ ಘಟನೆ ಮಹಾರಾಷ್ಟ್ರದ ಚಾಕೋರು ಜಿಲ್ಲೆಯ ಲಾತೂರ್ ಬಿಎಸ್ ಎಫ್ ತರಬೇತಿ ಕೇಂದ್ರದಲ್ಲಿ ನಡೆದಿದೆ. ಮೃತ ಯೋಧರನ್ನು ಮಂಡ್ಯ ನಗರದ ತಾವರೆಗೆರೆ ಬಡಾವಣೆ ನಿವಾಸಿ ಎಂಬಿ ಮಾದೇಗೌಡ (44) ಎಂದು ಗುರುತಿಸಲಾಗಿದೆ.2000 ರಲ್ಲಿ ಮಾದೇಗೌಡ ಅವರು ಬಿಎಸ್ ಎಫ್ ಗೆ ನೇಮಕಗೊಂಡಿದ್ದರು. 25 ವರ್ಷದಲ್ಲಿ ದೇಶದ ವಿವಿಧ ಕಡೆ ಸೇವೆ ಸಲ್ಲಿಸಿದ್ದರು.ಈಗಾಗಲೇ ಯೋಧನ ಮೃತದೇಹ ಮಂಡ್ಯಕ್ಕೆ ಆಗಮಿಸಿದ್ದು, ಇಂದು ಸಂಜೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಲಿದೆ. ಈ […]
ದುನಿಯಾ ಡಿಜಿಟಲ್ ಡೆಸ್ಕ್ : BSF (ಗಡಿ ಭದ್ರತಾ ಪಡೆ) ಅಧಿಕೃತ ಅಧಿಸೂಚನೆಯ ಮೂಲಕ ಕಾನ್ಸ್ಟೇಬಲ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದ್ದು, ಅರ್ಜಿ ಸಲ್ಲಿಸಲು ನಾಳೆಯೇ (ಜನವರಿ 15) ಕೊನೆಯ ದಿನವಾಗಿದೆ. ಸರ್ಕಾರಿ ಹುದ್ದೆ ನಿರೀಕ್ಷೆಯಲ್ಲಿರುವ ಆಸಕ್ತ ಅರ್ಹ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು 15-ಜನವರಿ-2026 ರೊಳಗೆ ಅರ್ಜಿ ಸಲ್ಲಿಸಬಹುದು. ಬಿಎಸ್ಎಫ್ ಹುದ್ದೆಯ ಅಧಿಸೂಚನೆ ಸಂಸ್ಥೆಯ ಹೆಸರು: ಗಡಿ ಭದ್ರತಾ ಪಡೆ (ಬಿಎಸ್ಎಫ್)ಹುದ್ದೆಗಳ ಸಂಖ್ಯೆ: 549 ಉದ್ಯೋಗ […]
ಬೆಂಗಳೂರು ನಗರದ ಅತಿ ಉದ್ದದ ಡಬಲ್ ಡೆಕ್ಕರ್ ಫ್ಲೈ ಓವರ್, ಯೋಜನೆ ವಿವರ
ಬೆಂಗಳೂರು ನಗರದಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಲು ಡಬಲ್ ಡೆಕ್ಕರ್ ಫ್ಲೈ ಓವರ್ ಯೋಜನೆ ರೂಪಿಸಲಾಗುತ್ತಿದೆ. ನಗರದ ಮೊದಲ ಡಬಲ್ ಡೆಕ್ಕರ್ ಫ್ಲೈ ಓವರ್ ರಾಗಿಗುಡ್ಡ–ಸಿಲ್ಕ್ ಬೋರ್ಡ್ ನಡುವೆ ನಿರ್ಮಾಣ ಮಾಡಲಾಗಿದೆ. ಇದು ಇನ್ನೂ ಎರಡು ಬದಿಯ ವಾಹನ ಸಂಚಾರಕ್ಕೆ ಮುಕ್ತವಾಗಿಲ್ಲ. ಈಗ ಬಿಎಂಆರ್ಸಿಎಲ್ ಬೆಂಗಳೂರು ನಗರದ ಅತ್ಯಂತ ಉದ್ದದ ಡಬಲ್ ಡೆಕ್ಕರ್ ಫ್ಲೈ ಓವರ್ ಯೋಜನೆಗೆ ಟೆಂಡರ್ ಕರೆದಿದೆ. ನಮ್ಮ ಮೆಟ್ರೋ ಹಂತ-3 ಯೋಜನೆಯಡಿ ಈ ಡಬಲ್ ಡೆಕ್ಕರ್ ಫ್ಲೈ ಓವರ್ ನಿರ್ಮಾಣವಾಗಲಿದ್ದು, ಮೇಲೆ ಮೆಟ್ರೋ, […]
ALERT : ನಾಯಿಗಳು ಬೆನ್ನಟ್ಟಿದ್ರೆ ಅಪ್ಪಿ ತಪ್ಪಿಯೂ ಈ ತಪ್ಪು ಮಾಡಬೇಡಿ.! ನಿಮ್ಮ ಜೀವಕ್ಕೆ ಅಪಾಯ
ಮೊದಲು ಹಳ್ಳಿಗಳಲ್ಲಿ ಮಾತ್ರ ಕೇಳಿಬರುತ್ತಿದ್ದ ಬೀದಿ ನಾಯಿಗಳ ಭಯ ಈಗ ನಗರದ ಎಲ್ಲಾ ಗಲ್ಲಿಗೂ ಆವರಿಸಿದೆ. ಶಾಲೆಗೆ ಹೋಗುವ ಮಕ್ಕಳು, ಬೆಳಗಿನ ನಡಿಗೆಗೆ ಹೋಗುವ ವೃದ್ಧರು ಮತ್ತು ಒಂಟಿ ಮಹಿಳೆಯರ ಮೇಲೆ ನಾಯಿಗಳು ದಾಳಿ ಮಾಡುತ್ತಿರುವುದು ಆತಂಕಕಾರಿ ವಿಚಾರವಾಗಿದೆ. ನಾಯಿಯನ್ನು ಎದುರಿಸುವಾಗ ನಾವು ಮಾಡುವ ಕೆಲವು ಸಣ್ಣ ತಪ್ಪುಗಳು ಸಾವಿಗೆ ಕಾರಣವಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ. ಅವು ಯಾವುವು ಈಗ ತಿಳಿದುಕೊಳ್ಳೋಣ. 1) ಓಡುವುದು ಎಂದರೆ ಬೇಟೆಗೆ ಆಹ್ವಾನಿಸುವುದುನಾಯಿ ಬೊಗಳಿದಾಗ, ನಮ್ಮ ಮೆದುಳು ನೀಡುವ ಮೊದಲ ಆಜ್ಞೆ […]
ಪಿಂಚಣಿದಾರರಿಗೆ ‘EPFO’ಗುಡ್ ನ್ಯೂಸ್ : ಮನೆ ಬಾಗಿಲಲ್ಲೇ ಸಿಗಲಿದೆ ಉಚಿತ ‘ಡಿಜಿಟಲ್ ಜೀವನ್ ಪ್ರಮಾಣ ಪತ್ರ’ ಸೇವೆ
ಪಿಂಚಣಿದಾರರಿಗೆ ಗುಡ್ ನ್ಯೂಸ್.. ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ಉಚಿತ ಸೇವೆಗಳನ್ನು ಪ್ರಾರಂಭಿಸಿದೆ. ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (IPPB) ಸಹಯೋಗದೊಂದಿಗೆ, ನೌಕರರ ಪಿಂಚಣಿ ಯೋಜನೆ (EPS) ಪಿಂಚಣಿದಾರರಿಗೆ ಉಚಿತ ಮನೆ ಬಾಗಿಲಿಗೆ ಸೇವೆಗಳನ್ನು ಪ್ರಾರಂಭಿಸಿದೆ. ಈ ಉಚಿತ ಸೇವೆಗಳ ಮೂಲಕ, ಪಿಂಚಣಿದಾರರು ತಮ್ಮ ಡಿಜಿಟಲ್ ಲೈಫ್ ಸರ್ಟಿಫಿಕೇಟ್ (DLC) ಅನ್ನು ಮನೆಯಿಂದಲೇ ಸುಲಭವಾಗಿ ಸಲ್ಲಿಸಬಹುದು. ಇದು ಅವರು ತಮ್ಮ ಕೆಲಸವನ್ನು ಪೂರ್ಣಗೊಳಿಸಲು ಮತ್ತು ಎಲ್ಲಿಯೂ ಹೋಗದೆ ತಮ್ಮ ಪಿಂಚಣಿ ಪಡೆಯುವಲ್ಲಿನ ತೊಂದರೆ ಮತ್ತು ವಿಳಂಬವನ್ನು […]
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕಪ್ಪು ಬಣ್ಣದ ಬಟ್ಟೆ ಅದೃಷ್ಟಕ್ಕೆ ಹೇಗೆ ಪ್ರಭಾವ ಬೀರುತ್ತದೆ?
ನಾವು ಧರಿಸುವ ಬಟ್ಟೆ ಕೇವಲ ನಮ್ಮ ಅಂದವನ್ನು ಹೆಚ್ಚಿಸುವುದಲ್ಲ, ಬದಲಿಗೆ ನಮ್ಮ ಹಣೆಬರಹದ ಮೇಲೂ ಪ್ರಭಾವ ಬೀರುತ್ತದೆ ಎಂದರೆ ನೀವು ನಂಬುತ್ತೀರಾ? ಹೌದು, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನಾವು ತೊಡುವ ಪ್ರತಿಯೊಂದು ಬಣ್ಣದ ಹಿಂದೆ ಒಂದು ಗ್ರಹದ ಶಕ್ತಿಯಡಗಿರುತ್ತದೆ. 12ರಾಶಿಗಳಿಗೂ ಅವುಗಳದ್ದೇ ಆದ ಲಕ್ಕಿ ಕಲರ್ಸ್ಇ ವೆ. ಆದರೆ, ಎಲ್ಲ ಬಣ್ಣಗಳಿಗಿಂತಲೂ ಹೆಚ್ಚಾಗಿ ‘ಕಪ್ಪು’ ಬಣ್ಣದ ವಿಷಯದಲ್ಲಿ ಕೆಲವು ರಾಶಿಯವರು ಅತೀ ಹೆಚ್ಚು ಜಾಗರೂಕರಾಗಿರಬೇಕು ಎಂದು ಜ್ಯೋತಿಷಿಗಳು ಎಚ್ಚರಿಸುತ್ತಿದ್ದಾರೆ 12 ರಾಶಿಗಳಿಗೂ ಅವುಗಳದ್ದೇ ಆದ ಲಕ್ಕಿ ಕಲರ್ಸ್ […]
ಬೆಂಗಳೂರಲ್ಲಿ ಗಣರಾಜ್ಯೋತ್ಸವದ ಪರೇಡ್ ವೀಕ್ಷಿಸಲು ಸಾರ್ವಜನಿಕರಿಗೆ E-Pass ವ್ಯವಸ್ಥೆ, ಜಸ್ಟ್ ಹೀಗೆ ಪಡೆಯಿರಿ
ಬೆಂಗಳೂರು : : ಬೆಂಗಳೂರು ನಗರದಲ್ಲಿ ಫೀಲ್ಡ್ ಮಾರ್ಷಲ್ ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ಜನವರಿ 26 ರಂದು ನಡೆಯಲಿರುವ ರಾಜ್ಯ ಮಟ್ಟದ 77ನೇ ಗಣರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮ ವೀಕ್ಷಿಸಿಸಲು ಸಾರ್ವಜನಿಕರಿಗೆ E-Pass ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿಗಳಾದ ಜಿ. ಜಗದೀಶ ರವರು ತಿಳಿಸಿದ್ದಾರೆ. ಆಸಕ್ತರು ಸೇವಾ ಸಿಂಧು ವೆಬ್ ಸೈಟ್ (www.sevasindhu.karnataka.gov.in ) ನಲ್ಲಿ ಜನವರಿ 14 2026 ರಿಂದ ಜನವರಿ 24, 2026 ರ ಸಂಜೆ 5.00 ಗಂಟೆಯೊಳಗೆ ಸೇವಾ ಸಿಂಧು […]
Post office Scheme : ‘ಅಂಚೆ ಕಚೇರಿ’ಯ ಅದ್ಬುತ ಯೋಜನೆ : 1 ಲಕ್ಷ ರೂ.ಠೇವಣಿ ಇಟ್ಟರೆ 44,995 ರೂ. ಬಡ್ಡಿ ಸಿಗುತ್ತದೆ
ಆರ್ಬಿಐ ಬಡ್ಡಿದರಗಳನ್ನು ಕಡಿತಗೊಳಿಸಿದ ನಂತರ ಅನೇಕ ಬ್ಯಾಂಕುಗಳು ಸ್ಥಿರ ಠೇವಣಿಗಳ (ಎಫ್ಡಿ) ಬಡ್ಡಿದರಗಳನ್ನು ಕಡಿಮೆ ಮಾಡಿದ್ದರೆ, ಮತ್ತೊಂದೆಡೆ, ಅಂಚೆ ಕಚೇರಿ ಗ್ರಾಹಕರು ತಮ್ಮ ಉಳಿತಾಯ ಖಾತೆಗಳ ಮೇಲೆ ಬಂಪರ್ ಬಡ್ಡಿಯನ್ನು ಮೊದಲಿನಂತೆ ಪಡೆಯುವುದನ್ನು ಮುಂದುವರಿಸುತ್ತಾರೆ. ಜನವರಿ 1 ರಿಂದ ಪ್ರಾರಂಭವಾದ ಪ್ರಸಕ್ತ ಹಣಕಾಸು ವರ್ಷದ ನಾಲ್ಕನೇ ಮತ್ತು ಕೊನೆಯ ತ್ರೈಮಾಸಿಕಕ್ಕೆ ಅಂಚೆ ಕಚೇರಿ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರಗಳಲ್ಲಿ ಹಣಕಾಸು ಸಚಿವಾಲಯ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ. ಈ ಯೋಜನೆಯ ಬಗ್ಗೆ ತಿಳಿದುಕೊಳ್ಳೋಣ. ಇದರಲ್ಲಿ, ನೀವು ಕೇವಲ 1 […]
GOOD NEWS : ‘ನಮ್ಮ ಮೆಟ್ರೋ’ ಪ್ರಯಾಣಿಕರಿಗೆ QR ಕೋಡ್ ಆಧಾರಿತ ಅನ್’ಲಿಮಿಟೆಡ್ ಪಾಸ್ : ನಾಳೆಯಿಂದಲೇ ಜಾರಿ
ಬೆಂಗಳೂರು : ನಮ್ಮ ಮೆಟ್ರೋ ಪ್ರಯಾಣಿಕರಿಗಾಗಿ ಬಿಎಂಆರ್ಸಿಎಲ್ 1, 3 ಹಾಗೂ 5 ದಿನಗಳ ಅನ್ಲಿಮಿಟೆಡ್ ಕ್ಯೂಆರ್ ಕೋಡ್ ಪಾಸ್ ಸೇವೆ ಆರಂಭಿಸಿದೆ. ಜನವರಿ 15ರಿಂದ ಚಾಲ್ತಿಗೆ ಬರಲಿದೆ. ಇದುವರೆಗೆ ಅನಿಯಮಿತ ಪ್ರಯಾಣ ಪಾಸ್ಗಳು, ಕೇವಲ ಕಾಂಟ್ಯಾಕ್ಟ್ಲೆಸ್ ಸ್ಮಾರ್ಟ್ ಕಾರ್ಡ್ಗಳ (ಸಿಎಸ್ಸಿ) ಮೂಲಕವೇ ಲಭ್ಯವಾಗುತ್ತಿದ್ದು, ₹50 ಭದ್ರತಾ ಠೇವಣಿ ಪಾವತಿಸುವುದು ಕಡ್ಡಾಯವಾಗಿತ್ತು. ಇದೀಗ ಮೊಬೈಲ್ ಕ್ಯೂಆರ್ ಕೋಡ್ ಪಾಸ್ಗಳ ಪರಿಚಯದೊಂದಿಗೆ, ಪಾಸ್ಗಳು ಮೊಬೈಲ್ ಫೋನ್ಗಳಲ್ಲಿ ಡಿಜಿಟಲ್ ರೂಪದಲ್ಲಿ ಲಭ್ಯವಾಗುತ್ತವೆ. ಪ್ರಯಾಣಿಕರಿಗೆ ಯಾವುದೇ ಭದ್ರತಾ ಠೇವಣಿ ಪಾವತಿಸುವ ಅಗತ್ಯವಿರುವುದಿಲ್ಲ. […]
ರಾಜ್ಯಸಭೆಗೆ ಮರು ಆಯ್ಕೆ ಬೇಡ ಎಂದ ಕಾಂಗ್ರೆಸ್ನ ಹಿರಿಯ ನಾಯಕ!
ರಾಜ್ಯಸಭೆಯ ಸುಮಾರು 75 ಸೀಟುಗಳಿಗೆ 2026ರಲ್ಲಿ ಚುನಾವಣೆ ನಡೆಯಬೇಕಿದೆ. ಎನ್ಡಿಎ, ಇಂಡಿಯಾ ಮೈತ್ರಿಕೂಟದಲ್ಲಿ ಯಾರಿಗೆ ಎಷ್ಟು ಸೀಟು? ಎಂಬ ಲೆಕ್ಕಾಚಾರಗಳು ಸಾಗಿವೆ. ಇಂತಹ ಹೊತ್ತಿನಲ್ಲಿಯೇ ಕಾಂಗ್ರೆಸ್ನ ಹಿರಿಯ ನಾಯಕರೊಬ್ಬರು ರಾಜ್ಯಸಭೆಗೆ ಮರು ಆಯ್ಕೆ ಬೇಡ ಎಂದು ಘೋಷಣೆ ಮಾಡಿದ್ದಾರೆ. ಮಧ್ಯ ಪ್ರದೇಶದ ಮಾಜಿ ಸಿಎಂ ದಿಗ್ವಿಜಯ್ ಸಿಂಗ್ (78) 3ನೇ ಬಾರಿಗೆ ರಾಜ್ಯಸಭೆಗೆ ಮರು ಆಯ್ಕೆ ಬೇಡ ಎಂದು ಮಂಗಳವಾರ ಘೋಷಣೆ ಮಾಡಿದ್ದಾರೆ. ಅವರ ರಾಜ್ಯಸಭೆ ಸದಸ್ಯತ್ವದ ಅವಧಿ ಏಪ್ರಿಲ್ 19, 2026ರಂದು ಅಂತ್ಯವಾಗಲಿದೆ. ದಿಗ್ವಿಜಯ್ ಸಿಂಗ್ […]
BREAKING : ಬೆಂಗಳೂರಲ್ಲಿ ಮಹಿಳೆಯನ್ನು ಕೊಚ್ಚಿ ಕೊಂದಿದ್ದ ಆರೋಪಿ ನೇಣು ಬಿಗಿದುಕೊಂಡು ಆತ್ಮಹತ್ಯೆ.!
ಬೆಂಗಳೂರು : ಮಹಿಳೆಯನ್ನು ಕೊಚ್ಚಿ ಕೊಂದಿದ್ದ ಆರೋಪಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ನಡೆದಿದೆ. ಕೊಳೂರಿನಲ್ಲಿ 69 ವರ್ಷದ ವೀರಭದ್ರಯ್ಯ ಎಂಬಾತ ನೇಣಿಗೆ ಶರಣಾಗಿದ್ದಾನೆ ಎಂದು ತಿಳಿದು ಬಂದಿದೆ. ಕಳೆದ ಶನಿವಾರ ಈತ ದಾಕ್ಷಾಯಿಣಮ್ಮನನ್ನು ಕೊಚ್ಚಿ ಕೊಂದಿದ್ದನು. ನಂತರ ಈತ ಪರಾರಿಯಾಗಿದ್ದನು. ಆದರೆ ಈತ ಅಕ್ಕನ ತೋಟದಲ್ಲಿ ನೇಣು ಬಿಗಿದುಕೊಂಡು ಸೂಸೈಡ್ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ. ಹಣಕಾಸಿನ ವಿಚಾರಕ್ಕೆ ಜಗಳ ನಡೆದು ದಾಕ್ಷಾಯಿಣಮ್ಮನನ್ನು ಈತ ಕೊಚ್ಚಿ ಕೊಂದಿದ್ದನು ಎನ್ನಲಾಗಿತ್ತು. ಸದ್ಯ ಘಟನಾ […]
BIG NEWS : ಕರ್ನಾಟಕದಲ್ಲಿ ‘ಪೋಕ್ಸೋ’ ಕಾಯಿದೆಯಡಿ ವಿಧಿಸಲಾಗುವ ದಂಡ, ಶಿಕ್ಷೆಯ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ.!
ದುನಿಯಾ ಡಿಜಿಟಲ್ ಡೆಸ್ಕ್ : ಕರ್ನಾಟಕದಲ್ಲಿ ಪೋಕ್ಸೋ ಕಾಯಿದೆಯಡಿ ವಿಧಿಸಲಾಗುವ ದಂಡ, ಶಿಕ್ಷೆಯ ಕುರಿತು ನಿಮಗೆಷ್ಟು ಗೊತ್ತು..! ಪೋಕ್ಸೋ ಕಾಯಿದೆ (POCSO Act) ಎಂದರೆ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯಿದೆ, 2012, ಇದು 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಲೈಂಗಿಕ ದೌರ್ಜನ್ಯ, ಕಿರುಕುಳ, ಶೋಷಣೆ ಮತ್ತು ದುರುಪಯೋಗದಿಂದ ರಕ್ಷಿಸುವ ಭಾರತದ ಸಮಗ್ರ ಕಾನೂನಾಗಿದೆ; ಈ ಕಾಯ್ದೆಯು ಲೈಂಗಿಕ ದೌರ್ಜನ್ಯದ ಅಪರಾಧಗಳಿಗೆ ಕಠಿಣ ಶಿಕ್ಷೆಗಳನ್ನು ವಿಧಿಸುತ್ತದೆ, ಈ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ. ಮನೆಯಿಂದ ಶಾಲಾ […]
ಬಿಜೆಪಿ-ಜೆಡಿಎಸ್ ಮೈತ್ರಿಗೊಂದಲ ಬಗೆಹರಿಸಲು ಕುಮಾರಸ್ವಾಮಿ ಎಂಟ್ರಿ!
ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು 2024ರ ಲೋಕಸಭೆ ಚುನಾವಣೆಯಿಂದ ಕರ್ನಾಟಕದಲ್ಲಿ ಮೈತ್ರಿ ಮಾಡಿಕೊಂಡಿವೆ. 2028ರ ವಿಧಾನಸಭೆ ಚುನಾವಣೆಗೂ ಮೈತ್ರಿಮುಂದುವರಿಯುವ ಸೂಚನೆ ಇದೆ. ಆದರೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮೈತ್ರಿ ಇದೆಯೇ?, ಇಲ್ಲವೇ? ಎಂಬುದು ಎಲ್ಲರ ಪ್ರಶ್ನೆಯಾಗಿದೆ. ಗ್ರೇಟರ್ ಬೆಂಗಳೂರು ಅಥಾರಿಟಿ (ಜಿಬಿಎ), ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗಳು ಬರಲಿದ್ದು, ಬಿಜೆಪಿ-ಜೆಡಿಎಸ್ ಮೈತ್ರಿ ಮುಂದುವರೆಯುವ ಕುರಿತು ಅಂತಿಮ ತೀರ್ಮಾನವಾಗಿಲ್ಲ. ಎರಡೂ ಪಕ್ಷದಲ್ಲೂ ಈ ಕುರಿತು ಮಾತುಕತೆಗಳು ನಡೆಯುತ್ತಿವೆ. ಕರ್ನಾಟಕದಲ್ಲಿ ಲೋಕಸಭೆ, ವಿಧಾನಸಭೆ ಚುನಾವಣೆಗೆ ಮಾತ್ರ ಬಿಜೆಪಿ-ಜೆಡಿಎಸ್ ಮೈತ್ರಿ. […]
ಥೈಲ್ಯಾಂಡ್ನ ಈಶಾನ್ಯದಲ್ಲಿ ಕ್ರೇನ್ ರೈಲಿನ ಮೇಲೆ ಬಿದ್ದು ಹಳಿತಪ್ಪಿದ ಪರಿಣಾಮ ಕನಿಷ್ಠ 22 ಮಂದಿ ಸಾವನ್ನಪ್ಪಿ ಹಲವರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಥೈಲ್ಯಾಂಡ್ನಲ್ಲಿ ನಿರ್ಮಾಣ ಹಂತದ ಕಾಮಗಾರಿ ನಡೆಯುವ ವೇಳೆ ಕ್ರೇನ್ ಕುಸಿದು ರೈಲಿನ ಮೇಲೆ ಬಿದ್ದ ಪರಿಣಾಮ ಕನಿಷ್ಠ22 ಜನರು ಸಾವನ್ನಪ್ಪಿದ್ದಾರೆ ಮತ್ತು 30 ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ರೈಲು ಥೈಲ್ಯಾಂಡ್ ರಾಜಧಾನಿ ಬ್ಯಾಂಕಾಕ್ನಿಂದ ದೇಶದ ಈಶಾನ್ಯ ಪ್ರದೇಶಕ್ಕೆ ಪ್ರಯಾಣಿಸುತ್ತಿತ್ತು. ಬ್ಯಾಂಕಾಕ್ನಿಂದ ಈಶಾನ್ಯಕ್ಕೆ 230 ಕಿ.ಮೀ ದೂರದಲ್ಲಿರುವ ನಖೋನ್ ರಾಟ್ಚಸಿಮಾ ಪ್ರಾಂತ್ಯದ […]

21 C