SENSEX
NIFTY
GOLD
USD/INR

Weather

20    C

ಡಿಜಿಟಲ್ ಸುದ್ದಿ ಮೂಲಗಳು

... ...View News by News Source

BREAKING: ಪ್ರಧಾನಿ ಮೋದಿ ಜತೆ ದೂರವಾಣಿಯಲ್ಲಿ ಮಾತನಾಡಿದ ಡೊನಾಲ್ಡ್ ಟ್ರಂಪ್: ರಾಯಭಾರಿ ಸೆರ್ಗಿಯೊ ಗೋರ್

ನವದೆಹಲಿ ಮತ್ತು ವಾಷಿಂಗ್ಟನ್ ನಡುವೆ ನಡೆಯುತ್ತಿರುವ ವ್ಯಾಪಾರ ಉದ್ವಿಗ್ನತೆಯ ನಡುವೆ ಸೋಮವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದ್ದಾರೆ ಎಂದು ಭಾರತದಲ್ಲಿನ ಅಮೆರಿಕದ ರಾಯಭಾರಿ ಸೆರ್ಗಿಯೊ ಗೋರ್ ಹೇಳಿದ್ದಾರೆ, ಅವರು ಕರೆಯ ಕುರಿತು ಯಾವುದೇ ಹೆಚ್ಚಿನ ವಿವರಗಳನ್ನು ನೀಡಿಲಿಲ್ಲ, , “ಟ್ಯೂನ್ ಆಗಿರಿ” ಎಂದು ಹೇಳಿದ್ದಾರೆ. ಟ್ರಂಪ್ ರಷ್ಯಾದ ಕಚ್ಚಾ ತೈಲ ಖರೀದಿಯನ್ನು ಮುಂದುವರೆಸಿದ್ದಕ್ಕಾಗಿ ಭಾರತದ ಮೇಲೆ 50% ಸುಂಕಗಳನ್ನು ವಿಧಿಸಿದ ನಂತರ ಭಾರತ-ಯುಎಸ್ ವ್ಯಾಪಾರ ಒಪ್ಪಂದದಲ್ಲಿನ ವಿಳಂಬದ […]

ಕನ್ನಡ ದುನಿಯಾ 2 Feb 2026 10:14 pm

ಪಿಜಿ ವೈದ್ಯಕೀಯ ಕೋರ್ಸ್ ಅಭ್ಯರ್ಥಿಗಳಿಗೆ ಮುಖ್ಯ ಮಾಹಿತಿ: 3ನೇ ಸುತ್ತಿನ ಸೀಟು ಹಂಚಿಕೆ ಆಪ್ಷನ್ ಎಂಟ್ರಿಗೆ ಅವಕಾಶ

ಸ್ನಾತಕೋತ್ತರ ವೈದ್ಯಕೀಯ ಕೋರ್ಸ್ ಗಳಿಗೆ 3ನೇ ಸುತ್ತಿನ ಸೀಟು ಹಂಚಿಕೆಗೆ ಆಪ್ಷನ್ಸ್ ದಾಖಲಿಸಲು ಫೆ.5ರಿಂದ ಫೆ.9ರಂದು ಬೆಳಿಗ್ಗೆ 8 ಗಂಟೆವರೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅವಕಾಶ ನೀಡಿದೆ. MCC ಅಖಿಲ ಭಾರತ ಕೋಟಾದ 3ನೇ ಸುತ್ತಿನ ಸೀಟು ಹಂಚಿಕೆಯ ವೇಳಾ ಪಟ್ಟಿ ಪರಿಷ್ಕರಿಸಿದ ಕಾರಣ ಫೆ.2ರ ಬದಲಿಗೆ ಫೆ.5ರಿಂದ ಇಚ್ಛೆ ಆಯ್ಕೆಗಳನ್ನು ದಾಖಲಿಸಲು ಅವಕಾಶ ನೀಡಲಾಗಿದೆ. ತಾತ್ಕಾಲಿಕ ಸೀಟು ಹಂಚಿಕೆಯನ್ನು ಫೆ.9ರಂದು ಸಂಜೆ 5ಗಂಟೆಗೆ ಹಾಗೂ ಅಂತಿಮ ಸೀಟು ಹಂಚಿಕೆ ಫಲಿತಾಂಶವನ್ನು ಫೆ.10ರಂದು ಮಧ್ಯಾಹ್ನ 1 ಗಂಟೆ […]

ಕನ್ನಡ ದುನಿಯಾ 2 Feb 2026 8:55 pm

ತಾಂತ್ರಿಕ ದೋಷ: ಸಂಚಾರ ಸ್ಥಗಿತಗೊಳಿಸಿದ ವಿಮಾನದಲ್ಲಿ ಯಾವುದೇ ಸಮಸ್ಯೆ ಕಂಡುಬಂದಿಲ್ಲ: ಏರ್ ಇಂಡಿಯಾ ವಕ್ತಾರ

ಬೆಂಗಳೂರು: ಇಂಧನ ನಿಯಂತ್ರಣ ಸ್ವಿಚ್‌ ನಲ್ಲಿ ಸಂಭವನೀಯ ಸಮಸ್ಯೆ ಪತ್ತೆಯಾದ ನಂತರ ಸೋಮವಾರ ಕರ್ನಾಟಕದ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಏರ್ ಇಂಡಿಯಾ ಬೋಯಿಂಗ್ 787-8 ಡ್ರೀಮ್‌ಲೈನರ್ ವಿಮಾನವನ್ನು ಸ್ಥಗಿತಗೊಳಿಸಲಾಗಿದೆ ಎಂದು ಟಾಟಾ ಒಡೆತನದ ವಿಮಾನಯಾನ ಸಂಸ್ಥೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. AI 132 ವಿಮಾನವು ಲಂಡನ್‌ನ ಹೀಥ್ರೂ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ಹಾರುತ್ತಿತ್ತು. ಸಂಪೂರ್ಣ ತಪಾಸಣೆಯ ನಂತರ ಯಾವುದೇ ಸಮಸ್ಯೆಗಳು ಕಂಡುಬಂದಿಲ್ಲ ಎಂದು ಏರ್ ಇಂಡಿಯಾ ಅಧಿಕಾರಿ ತಿಳಿಸಿದ್ದಾರೆ, ಪರಿಸ್ಥಿತಿಯ ಬಗ್ಗೆ ನಾಗರಿಕ ವಿಮಾನಯಾನ ನಿಯಂತ್ರಕರಾದ […]

ಕನ್ನಡ ದುನಿಯಾ 2 Feb 2026 8:40 pm

ನಾನು ಆ ಕಡೆ ತಲೆ ಹಾಕಿಯೂ ಮಲಗಲ್ಲ: ಬಿಜೆಪಿಗೆ ಬನ್ನಿ ಎಂದ ವಿಧಾನ ಪರಿಷತ್ ಸದಸ್ಯರಿಗೆ ಸಿಎಂ ಸಿದ್ಧರಾಮಯ್ಯ ಪ್ರತಿಕ್ರಿಯೆ

ಬೆಂಗಳೂರು(ವಿಧಾನ ಪರಿಷತ್): ನಾನು ಬಿಜೆಪಿಯವರ ಕಡೆ ನೋಡಿ ಮಾತನಾಡುವುದಿಲ್ಲ. ಸಭಾಪತಿಗಳ ಪೀಠದ ಕಡೆ ನೋಡಿ ಮಾತನಾಡುತ್ತೇನೆ ಎಂದು ಸಿಎಂ ಸಿದ್ಧರಾಮಯ್ಯ ಹೇಳಿದ್ದಾರೆ. ವಿಧಾನ ಪರಿಷತ್ ನಲ್ಲಿ ಮಾತನಾಡಿದ ಸಿಎಂ, ಬಿಜೆಪಿಯವರ ಕಡೆ ನೋಡಿದರೆ ಎಲ್ಲರೂ ಎದ್ದು ನಿಂತುಬಿಡುತ್ತಾರೆ. ನಾರಾಯಣಸ್ವಾಮಿ ನಾನು ಚೆನ್ನಾಗಿದ್ದೇನೆ ಎಂದು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ವಿಪಕ್ಷ ನಾಯಕ ನಾರಾಯಣಸ್ವಾಮಿ ನಿಮ್ಮ ಜೊತೆ ಬರಲ್ಲ ಎಂದಿದ್ದಾರೆ. ನಾರಾಯಣಸ್ವಾಮಿ ಇರುವ ಕಡೆಗೆ ನಾನೇ ಹೋಗುತ್ತೇನೆ ಎಂದು ಸಿಎಂ ಹೇಳಿದ್ದಾರೆ. ಹಾಗಾದ್ರೆ ನೀವು ಬಿಜೆಪಿಗೆ ಬರುತ್ತೀರಾ ಎಂದು […]

ಕನ್ನಡ ದುನಿಯಾ 2 Feb 2026 8:19 pm

ಏರ್ಟೆಲ್ ಗ್ರಾಹಕರಿಗೆ ಗುಡ್ ನ್ಯೂಸ್: ಉಚಿತ ಅಡೋಬ್ ಎಕ್ಸ್‌ಪ್ರೆಸ್ ಪ್ರೀಮಿಯಂ ಒಳಗೊಂಡ ಅತ್ಯಂತ ಅಗ್ಗದ ರೀಚಾರ್ಜ್ ಯೋಜನೆ ಪ್ರಾರಂಭ

ನವದೆಹಲಿ: ಆಯ್ದ ರೀಚಾರ್ಜ್ ಯೋಜನೆಗಳೊಂದಿಗೆ ಏರ್‌ಟೆಲ್ ಇತ್ತೀಚೆಗೆ ಉಚಿತ ಅಡೋಬ್ ಎಕ್ಸ್‌ಪ್ರೆಸ್ ಪ್ರೀಮಿಯಂ ಚಂದಾದಾರಿಕೆಯನ್ನು ನೀಡಲು ಏರ್ಟೆಲ್ ಪ್ರಾರಂಭಿಸಿದೆ. ಅಡೋಬ್ ಎಕ್ಸ್‌ಪ್ರೆಸ್ ಪ್ರೀಮಿಯಂ ಬಳಕೆದಾರರಿಗೆ ಬಳಸಲು ಸುಲಭವಾದ ಪರಿಕರಗಳು ಮತ್ತು ಸಿದ್ಧ-ಸಿದ್ಧ ಟೆಂಪ್ಲೇಟ್‌ಗಳನ್ನು ಬಳಸಿಕೊಂಡು ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳು, ಚಿತ್ರಗಳು, ವೀಡಿಯೊಗಳು, ಫ್ಲೈಯರ್‌ಗಳು ಮತ್ತು ಹೆಚ್ಚಿನದನ್ನು ರಚಿಸಲು ಅನುಮತಿಸುತ್ತದೆ. ಅಡೋಬ್ ಫೈರ್‌ಫ್ಲೈನ ಜನರೇಟಿವ್ AI ನಿಂದ ನಡೆಸಲ್ಪಡುವ ಅಡೋಬ್ ಎಕ್ಸ್‌ಪ್ರೆಸ್ ಪ್ರೀಮಿಯಂ ವಿಷಯ ರಚನೆಯನ್ನು ಸರಳಗೊಳಿಸಲು ವಿನ್ಯಾಸಗೊಳಿಸಲಾಗಿದೆ. ಈ ಪ್ರಯೋಜನವು ಏರ್ಟೆಲ್ ಬಳಕೆದಾರರಿಗೆ ಉಚಿತವಾಗಿ ಲಭ್ಯವಿದೆ ಮತ್ತು […]

ಕನ್ನಡ ದುನಿಯಾ 2 Feb 2026 8:00 pm

ಎಲ್ಲ ಹೋಟೆಲ್, ರೆಸ್ಟೋರೆಂಟ್‌, ರಸ್ತೆ ಬದಿ ಆಹಾರಗಳಲ್ಲಿ ನಿಷೇಧಿತ ವಸ್ತು, ಕೃತಕ ಬಣ್ಣ ಬಳಸದಂತೆ ಆದೇಶ

ರಸ್ತೆ ಬದಿ ದೊರೆಯುವ ಗೋಬಿ ಮಂಚೂರಿ, ಪಾನಿಪೂರಿ ಮುಂತದಾ ಚಾಟ್ಸ್ ಗಳಲ್ಲಿ ಕೃತಕ ಬಣ್ಣ ಹಾಗೂ ನಿಷೇಧಿತ ವಸ್ತುಗಳನ್ನು ಬೆರೆಸದಂತೆ ಸರ್ಕಾರ ಆದೇಶಿಸಿದೆ. ಅದರಂತೆ ಸರ್ಕಾರದ ಆದೇಶ ಪಾಲನೆಯಾಗುತ್ತಿರುವ ಬಗ್ಗೆ ಇಲಾಖೆ ಎಚ್ಚರಿಕೆ ವಹಿಸಿ ಖಾತ್ರಿಪಡಿಸಿಕೊಳ್ಳಬೇಕು ಎಂದು ಕೊಪ್ಪಳ ಜಿಲ್ಲಾಧಿಕಾರಿಗಳು ಹಾಗೂ ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ಪ್ರಾಧಿಕಾರದ ಜಿಲ್ಲಾ ಮಟ್ಟದ ಸಲಹಾ ಸಮಿತಿಯ ಅಧ್ಯಕ್ಷರಾದ ಡಾ.ಸುರೇಶ ಬಿ.ಇಟ್ನಾಳ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ […]

ಕನ್ನಡ ದುನಿಯಾ 2 Feb 2026 7:48 pm

ಅಜ್ಜಿ ಅಂತ್ಯ ಸಂಸ್ಕಾರ ಮುಗಿಸಿ ಮನೆಗೆ ತೆರಳುತ್ತಿದ್ದ ಮೊಮ್ಮಗ ಅಪಘಾತದಲ್ಲಿ ಸಾವು

ಧಾರವಾಡ: ಅಜ್ಜಿ ಅಂತ್ಯಸಂಸ್ಕಾರ ಮುಗಿಸಿ ಮನೆಗೆ ತೆರಳುತ್ತಿದ್ದ ಮೊಮ್ಮಗ ಅಪಘಾತದಲ್ಲಿ ಮೃತಪಟ್ಟ ಘಟನೆ ಧಾರವಾಡ ತಾಲೂಕಿನ ಶಿವಳ್ಳಿ ಸಮೀಪ ನಡೆದಿದೆ. ಧಾರವಾಡ ನಿವಾಸಿ ವಿನಾಯಕ(23) ಮೃತಪಟ್ಟವರು ಎಂದು ಹೇಳಲಾಗಿದೆ. ವಿನಾಯಕನ ಅಜ್ಜಿಯ ಸಂಸ್ಕಾರ ಸುಳ್ಳ ಗ್ರಾಮದಲ್ಲಿ ನಡೆಸಲಾಗಿತ್ತು. ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಬೈಕ್ ನಲ್ಲಿ ಸುಳ್ಳ ಗ್ರಾಮಕ್ಕೆ ಹೋಗಿದ್ದ ವಿನಾಯಕ ಅಂತಿಮ ವಿಧಿವಿಧಾನ ಮುಗಿದ ನಂತರ ಧಾರವಾಡಕ್ಕೆ ವಾಪಸ್ ತೆರಳುವಾಗ ಅಪಘಾತ ಸಂಭವಿಸಿದೆ. ವೇಗವಾಗಿದ್ದ ಬೈಕ್ ನಿಯಂತ್ರಣ ತಪ್ಪಿ ರಸ್ತೆ ಪಕ್ಕಕ್ಕೆ ಬಿದ್ದಿದೆ. ತಲೆಗೆ ಬಲವಾದ ಪೆಟ್ಟು ಬಿದ್ದು […]

ಕನ್ನಡ ದುನಿಯಾ 2 Feb 2026 7:33 pm

BIG NEWS: ಸಿಎಂ ಸಿದ್ದರಾಮಯ್ಯ ಹುಲಿಯಾ ಬದಲು ಇಲಿಯಾ ಆಗಿದ್ದಾರೆ: ವಿಪಕ್ಷ ನಾಯಕ ಆರ್‌.ಅಶೋಕ್ ವ್ಯಂಗ್ಯ

ಬೆಂಗಳೂರು: ವಿಬಿ ಜಿ ರಾಮ್‌ ಜಿ ಕಾಯ್ದೆಗೆ ರಾಷ್ಟ್ರಪತಿ ಸಹಿ ಹಾಕಿ ಜಾರಿಯಾಗಿದೆ. ಕಾಂಗ್ರೆಸ್ ಸರ್ಕಾರ, ರಾಜ್ಯಪಾಲರ ಭಾಷಣದ ಮೂಲಕ ಕೇವಲ ಸುಳ್ಳುಗಳನ್ನೇ ಹೇಳಿಸಲು ಹೊರಟಿತ್ತು. ಸಿಎಂ ಸಿದ್ದರಾಮಯ್ಯನವರು ಹುಲಿಯಾ ಬದಲು ಇಲಿಯಾ ಆಗಿದ್ದಾರೆ ಎಂದು ವಿಪಕ್ಷ ನಾಯಕ ಆರ್‌.ಅಶೋಕ್ ಟೀಕಿಸಿದ್ದಾರೆ. ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದಲ್ಲಿ ಮಾತನಾಡಿದ ಆರ್.ಅಶೋಕ್, ವಿಬಿ ಜಿ ರಾಮ್‌ ಜಿ ಕಾಯ್ದೆಗೆ ರಾಷ್ಟ್ರಪತಿ ಸಹಿ ಹಾಕಿ ಜಾರಿಯಾಗಿದೆ. ಮಹಾತ್ಮ ಗಾಂಧೀಜಿ ಹೆಸರನ್ನು ತೆಗೆದುಹಾಕಿದ್ದೇಕೆ ಎಂದು ಕಾಂಗ್ರೆಸ್‌ ನಾಯಕರು ಪ್ರಶ್ನಿಸುತ್ತಿದ್ದಾರೆ. […]

ಕನ್ನಡ ದುನಿಯಾ 2 Feb 2026 7:23 pm

ಕೌಟುಂಬಿಕ ವಿಚಾರಕ್ಕೆ ಗಲಾಟೆಯಾಗಿ ಪತ್ನಿ ಕೊಲೆ: ಪತಿ ಅರೆಸ್ಟ್

ಉಡುಪಿ: ಕೌಟುಂಬಿಕ ವಿಚಾರದಲ್ಲಿ ಗಲಾಟೆಯಾಗಿ ಪತ್ನಿ ಕೊಲೆಗೈದ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಪತಿಯಿಂದ ಹಲ್ಲೆಗೊಳಗಾದ ಪತ್ನಿ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಕೊಲೆ ಯತ್ನ ಪ್ರಕರಣವನ್ನು ಕೊಲೆ ಪ್ರಕರಣವಾಗಿ ಪರಿವರ್ತಿಸಲಾಗಿದೆ. ಕಾರ್ಕಳದ ನೂರಾಳ್ ಬೆಟ್ಟು ಗ್ರಾಮದ ಸುನಿಲ್ ಕುಮಾರ್(44) ಬಂಧಿತ ಆರೋಪಿ. ಸುನಿಲ್ ಕುಮಾರ್ ಮತ್ತು ಆತನ ಪತ್ನಿ ಗೀತಾ ಅವರ ನಡುವೆ ಜನವರಿ 27ರಂದು ಗಲಾಟೆಯಾಗಿದೆ. ಈ ವೇಳೆ ಪತ್ನಿಯನ್ನು ಹೊಡೆದು ತೀವ್ರವಾಗಿ ಥಳಿಸಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ […]

ಕನ್ನಡ ದುನಿಯಾ 2 Feb 2026 7:18 pm

ಧೈರ್ಯವಿದ್ದವನು ಒಬ್ಬನೇ ಬಹುಮತ ಸಾಧಿಸಬಲ್ಲ: ಸಿದ್ದರಾಮಯ್ಯ ಸೇರಿ 139 ಶಾಸಕರೂ ನನ್ನ ಬಲ: ಡಿಸಿಎಂ ಡಿ.ಕೆ.ಶಿವಕುಮಾರ್

ಬೆಂಗಳೂರು: ರಾಜಕೀಯದಲ್ಲಿ ಎಲ್ಲವೂ ಸಾಧ್ಯ. ರಾಜಕೀಯ ಎಂಬುದು ಸಾಧ್ಯತೆಗಳ ಕಲೆ. ದೃಢವಾದ ನಿಲುವು, ಸಂಕಲ್ಪ ಹೊಂದಿದ್ದರೆ, ಒಬ್ಬನೇ ಸಾಕು. ಆತನ ಜೊತೆ 140 ಜನರೂ ಇರುತ್ತಾರೆ, ಇನ್ನೂ ಜಾಸ್ತಿನೂ ಆಗುತ್ತಾರೆ. ನೋಡೋಣ 2028ರಲ್ಲಿ ಏನಾಗುತ್ತದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆ ವೇಳೆ ವಿಪಕ್ಷ ನಾಯಕ ಆರ್.ಅಶೋಕ್ ಅಧಿಕಾರ ಹಂಚಿಕೆ ವಿಚಾರ ಪ್ರಸ್ತಾಪಿಸಿ, ಕಳೆದ ಒಂದು ತಿಂಗಳಿಂದ ಡಿ.ಕೆ. ಶಿವಕುಮಾರ್ ಅವರ ಮಾತು, ಟ್ವೀಟ್ ಗಳು ನೂರು […]

ಕನ್ನಡ ದುನಿಯಾ 2 Feb 2026 7:04 pm

ಅಂಚೆಪಾಲಕ, ಸಹಾಯಕ ಅಂಚೆಪಾಲಕರ ಹುದ್ದೆಗೆ ಅರ್ಜಿ ಆಹ್ವಾನ

ಶಿವಮೊಗ್ಗ: ಅಂಚೆ ಇಲಾಖೆ ವತಿಯಿಂದ ಶಾಖಾ ಅಂಚೆಪಾಲಕ, ಸಹಾಯಕ ಅಂಚೆಪಾಲಕ ಮತ್ತು ಡಾಕ್ ಸೇವಕ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಶಿವಮೊಗ್ಗ ಅಂಚೆ ವಿಭಾಗದಲ್ಲಿ 57 ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಿದ್ದು ವೆಬ್ ಸೈಟ್ https://indiapost.gov.in/gdsonlineengagement ಮೂಲಕ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬೇಕು. ಅರ್ಜಿ ನೋಂದಣಿ ಮಾಡಲು ಫೆ.14 ಹಾಗೂ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಮತ್ತು ಶುಲ್ಕ‌ಪಾವತಿಸಲು ಫೆ.16 ಕಡೆಯ ದಿನವಾಗಿದೆ. ಎಲ್ಲ ಹುದ್ದೆಗಳಿಗೆ 10ನೇ ತರಗತಿ ತೇರ್ಗಡೆ ಕಡ್ಡಾಯ. ಕನ್ನಡವನ್ನು ಹತ್ತನೇ […]

ಕನ್ನಡ ದುನಿಯಾ 2 Feb 2026 7:02 pm

ತಲೆನೋವಿಗೆ ಗುಡ್ ಬೈ ಹೇಳಲು ಆಯುರ್ವೇದದಲ್ಲಿದೆ ಅದ್ಭುತ ಚಿಕಿತ್ಸೆ: ಇಲ್ಲಿದೆ ಸಂಪೂರ್ಣ ಮಾಹಿತಿ

ತಲೆನೋವು ಇಂದು ಪ್ರತಿಯೊಬ್ಬರನ್ನೂ ಕಾಡುವ ಸಾಮಾನ್ಯ ಆರೋಗ್ಯ ಸಮಸ್ಯೆ. ಆದರೆ ಆಯುರ್ವೇದವು ತಲೆನೋವನ್ನು ಕೇವಲ ನೋವು ಎಂದು ನೋಡದೆ, ದೇಹದ ದೋಷಗಳ ಏರುಪೇರಿನ ಸಂಕೇತವಾಗಿ ಪರಿಗಣಿಸುತ್ತದೆ. ತಲೆನೋವಿನ ಮೂಲ ಕಾರಣವನ್ನು ಪತ್ತೆಹಚ್ಚಿ, ಜೀವನಶೈಲಿಯಲ್ಲಿ ಬದಲಾವಣೆ ತಂದುಕೊಳ್ಳುವ ಮೂಲಕ ಇದನ್ನು ಶಾಶ್ವತವಾಗಿ ಗುಣಪಡಿಸಬಹುದು ಎಂದು ಆಯುರ್ವೇದ ಹೇಳುತ್ತದೆ. ಆಯುರ್ವೇದದಲ್ಲಿ ತಲೆನೋವಿನ ವರ್ಗೀಕರಣ: ದೋಷಗಳ ಆಧಾರದ ಮೇಲೆ ತಲೆನೋವನ್ನು ಮುಖ್ಯವಾಗಿ ಮೂರು ವಿಧಗಳಾಗಿ ವಿಂಗಡಿಸಲಾಗಿದೆ: ವಾತಜ ತಲೆನೋವು: ಅತಿಯಾದ ಕೆಲಸ, ನಿದ್ರೆಯ ಕೊರತೆ ಮತ್ತು ಒತ್ತಡದಿಂದ ಉಂಟಾಗುತ್ತದೆ. ಇದು ತೀವ್ರವಾದ […]

ಕನ್ನಡ ದುನಿಯಾ 2 Feb 2026 7:00 pm

ಕ್ಯಾರೆಟ್ ಹಲ್ವಾ ಬಿಡಿ ಹೊಸ ರುಚಿಯ ಟೊಮೆಟೊ ಹಲ್ವಾ ಟ್ರೈ ಮಾಡಿ: ಅತಿಥಿಗಳ ಮನಗೆಲ್ಲೋದು ಗ್ಯಾರಂಟಿ

ಟೊಮೆಟೊ ಅಂದ ತಕ್ಷಣ ನಮಗೆ ಸಾಂಬಾರ್ ರಸಂ ಅಥವಾ ಸಲಾಡ್ ನೆನಪಾಗುವುದು ಸಹಜ. ಆದರೆ ಇದೇ ಟೊಮೆಟೊ ಬಳಸಿ ಬಾಯಲ್ಲಿ ಇಟ್ಟರೆ ಕರಗುವಂತಹ ಅದ್ಭುತ ಸಿಹಿ ತಯಾರಿಸಬಹುದು ಎಂಬುದು ನಿಮಗೆ ಗೊತ್ತೇ? ಹೌದು ಕ್ಯಾರೆಟ್ ಹಲ್ವಾ ರುಚಿಯನ್ನೂ ಮೀರಿಸುವಂತಹ ವಿಭಿನ್ನ ಟೊಮೆಟೊ ಹಲ್ವಾ ಈಗ ಫುಡ್ ಪ್ರೇಮಿಗಳ ಹೊಸ ಸೆನ್ಸೇಷನ್ ಭಾರತೀಯರ ಅಡುಗೆಮನೆಯಲ್ಲಿ ಹಲ್ವಾಗೆ ವಿಶೇಷ ಸ್ಥಾನವಿದೆ. ಕ್ಯಾರೆಟ್ ಕುಂಬಳಕಾಯಿ ಅಥವಾ ಸೋರೆಕಾಯಿಯಿಂದ ಮಾಡಿದ ಹಲ್ವಾಗಳನ್ನು ನಾವೆಲ್ಲಾ ಸವಿದಿದ್ದೇವೆ. ಆದರೆ ಸಿಹಿ ಮತ್ತು ಲಘು ಹುಳಿಯ ವಿಶಿಷ್ಟ […]

ಕನ್ನಡ ದುನಿಯಾ 2 Feb 2026 6:04 pm

ಅಲ್ಲು ಅರ್ಜುನ್ ಸಿನಿಮಾದಲ್ಲಿ ದಿವ್ಯಾಭಾರತಿ ಇಲ್ಲ ವೈರಲ್ ಫೋಟೋ ಹಿಂದಿನ ರಹಸ್ಯ ಬಯಲು

ಟಾಲಿವುಡ್ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಮತ್ತು ಸ್ಟಾರ್ ಡೈರೆಕ್ಟರ್ ಅಟ್ಲೀ ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ ‘AA22’ ಚಿತ್ರದ ಬಗ್ಗೆ ದಿನಕ್ಕೊಂದು ಹೊಸ ಸುದ್ದಿಗಳು ಹರಿದಾಡುತ್ತಿವೆ. ಇತ್ತೀಚೆಗಷ್ಟೇ ಈ ಸಿನಿಮಾದಲ್ಲಿ ದಕ್ಷಿಣದ ಬೆಡಗಿ ದಿವ್ಯಾಭಾರತಿ ಕೂಡ ನಟಿಸುತ್ತಿದ್ದಾರೆ ಎಂಬ ಮಾತು ಗಾಂಧಿನಗರದಲ್ಲಿ ಭಾರಿ ಸದ್ದು ಮಾಡಿತ್ತು. ಇದಕ್ಕೆ ಪುಷ್ಠಿ ನೀಡುವಂತೆ ಅಲ್ಲು ಅರ್ಜುನ್ ಮತ್ತು ದಿವ್ಯಾಭಾರತಿ ಒಟ್ಟಾಗಿರುವ ಫೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಆದರೆ ಈಗ ಈ ಫೋಟೋ ಹಿಂದಿರುವ ಅಸಲಿ ರಹಸ್ಯ ಬಯಲಾಗಿದೆ. ಬ್ಯಾಚುಲರ್ ಚಿತ್ರದ […]

ಕನ್ನಡ ದುನಿಯಾ 2 Feb 2026 6:00 pm

ಶಶಿ ತರೂರ್  V/S ಕಾಂಗ್ರೆಸ್‌: ತಾತ್ಕಾಲಿಕ ಕದನ ವಿರಾಮ!

ಶಶಿ ತರೂರು ತಿರುವನಂತಪುರಂ ಕ್ಷೇತ್ರದ ಕಾಂಗ್ರೆಸ್ ಸಂಸದ. ಆದರೆ ಆಪರೇಷನ್ ಸಿಂಧೂರ್ ಬಳಿಕ ಶಶಿ ತರೂರ್ ನಡೆಯನ್ನು ಕಾಂಗ್ರೆಸಿಗರು ಅಚ್ಚರಿಯಿಂದ ನೋಡುವಂತೆ ಮಾಡಿದೆ. ಅಗಾಧ ಇಂಗ್ಲಿಶ್ ಜ್ಞಾನ ಹೊಂದಿರುವ ಶಶಿ ತರೂರ್ ಮಾತು ಅರ್ಥ ಮಾಡಿಕೊಳ್ಳುವುದು ಎಷ್ಟು ಕಠಿಣವೋ?, ಅವರ ಮುಂದಿನ ನಡೆ ಅಂದಾಜಿಸುವುದು ಅಷ್ಟೇ ಸವಾಲಾಗಿದೆ. ಆದರೆ ಈಗ ಕಾಂಗ್ರೆಸ್ ಮತ್ತು ಶಶಿ ತೂರೂರ್ ನಡುವೆ ಕದನ ವಿರಾಮ ಏರ್ಪಟ್ಟಿದೆ. 4 ದಿನಗಳ ಹಿಂದೆ ಶಶಿ ತರೂರ್ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, […]

ಕನ್ನಡ ದುನಿಯಾ 2 Feb 2026 5:30 pm

ನೇಲ್ ಕಟರ್‌ನ ಕೆಳಭಾಗದಲ್ಲಿ ಸಣ್ಣ ರಂಧ್ರವೇಕೆ ಇರುತ್ತೆ? ಹೆಚ್ಚಿನವರಿಗೆ ತಿಳಿಯದ ಅಸಲಿ ಸತ್ಯ ಇಲ್ಲಿದೆ

ನಮ್ಮ ದೈನಂದಿನ ಜೀವನದಲ್ಲಿ ಅತಿ ಹೆಚ್ಚು ಬಳಸುವ ವಸ್ತುಗಳಲ್ಲಿ ನೇಲ್ ಕಟರ್ ಅಥವಾ ಉಗುರು ಕತ್ತರಿಸುವ ಸಾಧನವೂ ಒಂದು. ವಾರಕ್ಕೊಮ್ಮೆ ನೆನಪಾಗುವ ಈ ಪುಟ್ಟ ವಸ್ತುವನ್ನು ನಾವು ಬಳಸುತ್ತೇವೆಯೇ ಹೊರತು, ಅದರ ವಿನ್ಯಾಸದ ಬಗ್ಗೆ ಎಂದೂ ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ ನೀವು ಗಮನಿಸಿರಬಹುದು, ಪ್ರತಿಯೊಂದು ನೇಲ್ ಕಟರ್‌ನ ಕೆಳಭಾಗದಲ್ಲಿ ಒಂದು ಸಣ್ಣ ರಂಧ್ರವಿರುತ್ತದೆ. ಇದು ಕೇವಲ ವಿನ್ಯಾಸಕ್ಕಾಗಿ ಅಥವಾ ಅಲಂಕಾರಕ್ಕಾಗಿ ಇರುವುದಲ್ಲ, ಇದರ ಹಿಂದೆ ಒಂದು ನಿರ್ದಿಷ್ಟ ಉದ್ದೇಶವಿದೆ. ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಈ ರಂಧ್ರದ ಬಗ್ಗೆ ಭಾರಿ […]

ಕನ್ನಡ ದುನಿಯಾ 2 Feb 2026 5:30 pm

ರೈಲಿನಲ್ಲಿ ಮಗನಿಗಾಗಿ ಕಾಯ್ದಿರಿಸಿದ ಸೀಟಿನಲ್ಲಿ ಚಪ್ಪಲಿ ಇಟ್ಟ ತಾಯಿ: ಹಣದ ಅಹಂಕಾರದ ಪರಮಾವಧಿ

ಸೋಷಿಯಲ್ ಮೀಡಿಯಾದಲ್ಲಿ ಈಗ ಒಂದು ವಿಚಿತ್ರ ವಿಡಿಯೋ ಭಾರಿ ಚರ್ಚೆಗೆ ಗ್ರಾಸವಾಗಿದೆ. ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರು ತಮ್ಮ ಮಗನಿಗಾಗಿ ಕಾಯ್ದಿರಿಸಿದ್ದ ಸೀಟಿನಲ್ಲಿ ಚಪ್ಪಲಿಯನ್ನು ಕೂರಿಸಿರುವ ವಿಡಿಯೋವನ್ನು ಹಂಚಿಕೊಂಡಿದ್ದು, ಇದು ಇಂಟರ್ನೆಟ್‌ನಲ್ಲಿ ಪರ-ವಿರೋಧದ ಚರ್ಚೆಯನ್ನು ಹುಟ್ಟುಹಾಕಿದೆ. ಸುಮಾರು ಏಳೆಂಟು ಗಂಟೆಗಳ ಕಾಲ ಪ್ರಯಾಣ ಮಾಡಬೇಕಿದ್ದ ಈ ಕುಟುಂಬ, ತಲಾ 1,500 ರಿಂದ 1,700 ರೂಪಾಯಿ ನೀಡಿ ಒಟ್ಟು ಮೂರು ಸೀಟುಗಳನ್ನು ಬುಕ್ ಮಾಡಿತ್ತು. ಆದರೆ ಇಷ್ಟೊಂದು ಹಣ ನೀಡಿ ಸೀಟು ಬುಕ್ ಮಾಡಿದರೂ, ಆಕೆಯ […]

ಕನ್ನಡ ದುನಿಯಾ 2 Feb 2026 5:19 pm

BREAKING: ರಂಜಾನ್: ಉರ್ದು ಪ್ರಾಥಮಿಕ, ಪ್ರೌಢಶಾಲೆಗಳ ಅವಧಿಯಲ್ಲಿ ಬದಲಾವಣೆ

ಬೆಂಗಳೂರು: ರಂಜಾನ್ ತಿಂಗಳಲ್ಲಿ ರಾಜ್ಯದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಅವಧಿಯಲ್ಲಿ ಬದಲಾವಣೆ ಮಾಡಿ ಉರ್ದು ಹಾಗೂ ಅಲ್ಪಸಂಖ್ಯಾತ ಭಾಷಾ ಶಾಲೆಗಳ ನಿರ್ದೇಶನಾಲಯ ಸುತ್ತೋಲೆ ಹೊರಡಿಸಿದೆ. ರಂಜಾನ್ ತಿಂಗಳಲ್ಲಿ ಉಪವಾಸ ಹಿನ್ನೆಲೆಯಲ್ಲಿ ಉರ್ದು ಪ್ರಾಥಮಿಕ, ಪ್ರೌಢಶಾಲೆಗಳ ಅವಧಿಯಲ್ಲಿ ಬದಲಾವಣೆ ಮಾಡಲಾಗಿದೆ. ಪ್ರತಿದಿನ ಅರ್ಧಗಂಟೆ ಮೊದಲು ತೆರಳಲು ಅವಕಾಶ ನೀಡಲಾಗಿದೆ. ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳಿಗೆ ಅರ್ಧಗಂಟೆ ಮುಂಚಿತವಾಗಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರನ್ನು ಕಳುಹಿಸುವಂತೆ ಸೂಚನೆ ನೀಡಲಾಗಿದೆ. ರಂಜಾನ್ ಮಾಸದಲ್ಲಿ ಉಪವಾಸದ ವ್ರತ ಇರುವ ಕಾರಣಕ್ಕೆ ಕೇವಲ ರಂಜಾನ್ ಮಾಸದ […]

ಕನ್ನಡ ದುನಿಯಾ 2 Feb 2026 5:17 pm

ನೋಯ್ಡಾ ರಸ್ತೆಯಲ್ಲಿ ಎಂಜಿ ಹೆಕ್ಟರ್ ಕಾರಿನಲ್ಲಿದ್ದವರ ಪುಂಡಾಟ: ಮಹಿಳೆಗೆ ಪ್ಲೈಯಿಂಗ್ ಕಿಸ್ ಕೊಟ್ಟವರಿಗೆ ಬಿತ್ತು ಬೇಡಿ

ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡುರಸ್ತೆಯಲ್ಲೇ ಮಹಿಳೆಗೆ ಕಿರುಕುಳ ನೀಡಿದ ಇಬ್ಬರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ. ಕೆಂಪು ಬಣ್ಣದ ಎಂಜಿ ಹೆಕ್ಟರ್ ಕಾರಿನಲ್ಲಿ ಬಂದ ಇಬ್ಬರು ವ್ಯಕ್ತಿಗಳು, ಪಕ್ಕದ ಕಾರಿನಲ್ಲಿದ್ದ ಮಹಿಳೆಗೆ ಪ್ಲೈಯಿಂಗ್ ಕಿಸ್ ನೀಡಿ ಅಸಭ್ಯವಾಗಿ ವರ್ತಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ ಈ ಕ್ರಮ ಕೈಗೊಳ್ಳಲಾಗಿದೆ. ವೈರಲ್ ಆಗಿರುವ ವಿಡಿಯೋದಲ್ಲಿ, ಆರೋಪಿಯು ತನ್ನ ಐಷಾರಾಮಿ ಕಾರಿನ ಕಿಟಕಿಯಿಂದ ಮಹಿಳೆಯ ಕಡೆಗೆ ಅಸಭ್ಯವಾಗಿ ಕೈ ಸನ್ನೆ ಮಾಡುವುದು ಮತ್ತು ಫ್ಲೈಯಿಂಗ್ ಕಿಸ್ ನೀಡುವುದನ್ನು ಕಾಣಬಹುದು. […]

ಕನ್ನಡ ದುನಿಯಾ 2 Feb 2026 5:08 pm

ಹಿಮಲೋಕವಾಗಿ ಬದಲಾದ ನಯಾಗರ ಜಲಪಾತ: ಮೈಕೊರೆಯುವ ಚಳಿಯ ನಡುವೆ ಮನಮೋಹಕ ದೃಶ್ಯ

ಉತ್ತರ ಅಮೆರಿಕಾದಲ್ಲಿ ಬೀಸುತ್ತಿರುವ ಭೀಕರ ಶೀತಗಾಳಿಯಿಂದಾಗಿ ವಿಶ್ವಪ್ರಸಿದ್ಧ ನಯಾಗರ ಜಲಪಾತವು ಈಗ ಶ್ವೇತವರ್ಣದ ಹಿಮದ ಸಿರಿಯಾಗಿ ಕಂಗೊಳಿಸುತ್ತಿದೆ. ಕಳೆದ ಕೆಲವು ದಿನಗಳಿಂದ ಕೆನಡಾ ಮತ್ತು ನ್ಯೂಯಾರ್ಕ್‌ನಾದ್ಯಂತ ತಾಪಮಾನವು ಶೂನ್ಯಕ್ಕಿಂತ ಕೆಳಕ್ಕೆ ಕುಸಿದಿದ್ದು, ಜಲಪಾತದ ಸುತ್ತಮುತ್ತಲಿನ ಪರಿಸರವೆಲ್ಲವೂ ಹಿಮದಿಂದ ಆವೃತವಾಗಿದೆ. ಈ ವಿಶಿಷ್ಟ ದೃಶ್ಯವನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರು ತಂಡೋಪತಂಡವಾಗಿ ಜಲಪಾತದತ್ತ ಧಾವಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಸುಂದರ ದೃಶ್ಯದ ವಿಡಿಯೋಗಳು ಮತ್ತು ಫೋಟೋಗಳು ಭಾರಿ ವೈರಲ್ ಆಗುತ್ತಿವೆ. ಜಲಪಾತದಿಂದ ಚಿಮ್ಮುವ ನೀರಿನ ಹನಿಗಳು ಗಾಳಿಯಲ್ಲೇ ಹೆಪ್ಪುಗಟ್ಟುತ್ತಿದ್ದು, ಪಾದಚಾರಿ ಮಾರ್ಗಗಳು […]

ಕನ್ನಡ ದುನಿಯಾ 2 Feb 2026 5:00 pm

ಸರ್ಕಾರಿ ಆಸ್ಪತ್ರೆಗಳಲ್ಲಿ ಇಸ್ಕಾನ್ ಊಟ, ಉಪಹಾರ: ದರಪಟ್ಟಿ

ಸರ್ಕಾರಿ ಆಸ್ಪತ್ರೆಗಳಲ್ಲಿ ಉತ್ತಮ ಗುಣಮಟ್ಟದ ಊಟ, ಉಪಹಾರ ದೊರೆಯುವುದಿಲ್ಲ ಎಂದು ಆರೋಪಿಸುವ ಜನರು ಹೆಚ್ಚು. ಆದರೆ ಈಗ ಸರ್ಕಾರ ಸರ್ಕಾರಿ ಆಸ್ಪತ್ರೆಗಳ ರೋಗಿಗಳಿಗೆ ಪೌಷ್ಟಿಕ ಹಾಗೂ ಗುಣಮಟ್ಟದ ಆಹಾರ ಪೂರೈಕೆ ನಮ್ಮ ಆದ್ಯತೆ ಎಂದು ಹೇಳಿದ್ದು, ಹೊಸ ಘೋಷಣೆ ಮಾಡಿದೆ. ಈ ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವ ದಿನೇಶ್ ಗುಂಡೂರಾವ್ ಮಾಹಿತಿ ನೀಡಿದ್ದಾರೆ. ನಮ್ಮ ಸರ್ಕಾರದ ಪ್ರಮುಖ ಆಶಯವಾದ ‘ಸಶಕ್ತ ಮತ್ತು ಆರೋಗ್ಯವಂತ ಕರ್ನಾಟಕ’ ನಿರ್ಮಾಣದ ನಿಟ್ಟಿನಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ […]

ಕನ್ನಡ ದುನಿಯಾ 2 Feb 2026 4:52 pm

ಸಿ.ಜೆ.ರಾಯ್ ಆತ್ಮಹತ್ಯೆ ಪ್ರಕರಣ: ನ್ಯಾಯಾಂಗ ತನಿಖೆಗೆ ಆಗ್ರಹಿಸಿ ಕೇಂದ್ರ ವಿತ್ತ ಸಚಿವೆಗೆ ಪತ್ರ ಬರೆದ ಕೇರಳ ಸಿಎಂ

ಬೆಂಗಳೂರು: ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ, ಉದ್ಯಮಿ ಸಿ.ಜೆ.ರಾಯ್ ಆತ್ಮಹತ್ಯೆ ಪ್ರಕರಣದ ಬಗ್ಗೆ ನ್ಯಾಯಾಂಗ ತನಿಖೆಗೆ ಆಗ್ರಹಿಸಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರಿಗೆ ಪತ್ರ ಬರೆದಿದ್ದಾರೆ. ಆದಾಯ ತೆರಿಗೆ ಶೋಧ ಕಾರ್ಯಾಚರಣೆ ವೇಳೆ ನಡೆದ ಈ ದುರಂತ ಘಟನೆ ದೇಶದ ತೆರಿಗೆ ಆಡಳಿತದ ಮೇಲೆ ಕಪ್ಪು ಚುಕ್ಕೆಯಾಗಿದ್ದು, ಇಂತಹ ಘಟನೆಗಳು ಮರುಕಳಿಸದಂತೆ ತಡೆಯಲು ನಿಷ್ಪಕ್ಷಪಾತ ತನಿಖೆ ಅನಿವಾರ್ಯ ಎಂದು ಒತ್ತಾಯಿಸಿದ್ದಾರೆ. ಜನವರಿ 30, 2026ರಂದು ಆದಾಯ ತೆರಿಗೆ ಐದಿಕಾರಿಗಳು ಶೋಧ […]

ಕನ್ನಡ ದುನಿಯಾ 2 Feb 2026 4:41 pm

BREAKING: ದುಡಿದು ಸಾಲ ತೀರಿಸು ಎಂದು ಬುದ್ಧಿ ಹೇಳಿದ್ದಕ್ಕೆ ಪತ್ನಿಯನ್ನೇ ಕೊಲೆಗೈದ ಪತಿ

ಹುಬ್ಬಳ್ಳಿ: ಮಾಡಿದ ಸಾಲವನ್ನು ದುಡಿದು ತೀರಿಸು ಎಂದು ಪತ್ನಿ ಬುದ್ಧಿವಾದ ಹೇಳಿದ್ದಕ್ಕೆ ಕೋಪಗೊಂಡ ಪತಿ ಮಹಾಶಯ ಪತ್ನಿಯನ್ನೇ ಕೊಲೆಗೈದಿರುವ ಘಟನೆ ಹುಬ್ಬಳ್ಳಿಯ ರಾಮಲಿಂಗೇಶ್ವರ ನಗರದಲ್ಲಿ ನಡೆದಿದೆ. ತೆಹಸೀನ್ (28) ಪತಿಯಿಂದಲೇ ಕೊಲೆಯಾದ ಮಹಿಳೆ. ಇರ್ಫಾನ್ ಪತ್ನಿಯನ್ನು ಕೊಂದ ಪತಿ. ಮನೆಯ ಮುಂದೆಯೇ ಪತ್ನಿಯ ಕತ್ತು ಕೊಯ್ದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ ಪಾಪಿ. ಕೊಲೆ ಬಳಿಕ ಕೆಲ ಕಾಲ ತಲೆಮರೆಸಿಕೊಂಡಿದ್ದ ಇರ್ಫಾನ್, ಬಳಿಕ ಮಗುವಿನೊಂದಿಎ ಕೇಶ್ವಾಪುರ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ. ಸಾಲ ತೀರಿಸು ಎಂದು ಪತ್ನಿ ಹೇಳಿದ್ದಳು. […]

ಕನ್ನಡ ದುನಿಯಾ 2 Feb 2026 4:02 pm

ALERT : ‘SBI’ಗ್ರಾಹಕರೇ ಎಚ್ಚರ ! ನಿಮ್ಮ ಮೊಬೈಲ್’ಗೆ ಬಂದ ಈ ಮೆಸೇಜ್ ಕ್ಲಿಕ್ ಮಾಡಿದ್ರೆ ಅಕೌಂಟ್ ಖಾಲಿ.!

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಒಂದು ಪ್ರಮುಖ ಎಚ್ಚರಿಕೆಯನ್ನು ಹಂಚಿಕೊಂಡಿದೆ. ಇತ್ತೀಚಿನ ದಿನಗಳಲ್ಲಿ ಸೈಬರ್ ವಂಚಕರು ಸುಶಿಕ್ಷಿತರನ್ನೂ ಸಹ ಮೋಸಗೊಳಿಸಲು ಹೊಸ ಹಾದಿಗಳನ್ನು ಕಂಡುಕೊಳ್ಳುತ್ತಿದ್ದಾರೆ. ಪ್ರಸ್ತುತ ‘ರಿವಾರ್ಡ್ ಪಾಯಿಂಟ್ಸ್’ (Reward Points) ಹೆಸರಿನಲ್ಲಿ ಗ್ರಾಹಕರನ್ನು ಲೂಟಿ ಮಾಡಲಾಗುತ್ತಿದೆ ಎಂದು SBI ತಿಳಿಸಿದೆ. ವಂಚನೆ ನಡೆಯುವುದು ಹೇಗೆ ?ಮೋಸಗಾರರು ಎಸ್ಎಂಎಸ್ (SMS) ಅಥವಾ ವಾಟ್ಸಾಪ್ ಮೂಲಕ ಗ್ರಾಹಕರಿಗೆ ಸಂದೇಶ ಕಳುಹಿಸುತ್ತಾರೆ. “ನಿಮ್ಮ ಖಾತೆಯಲ್ಲಿ ಸಾವಿರಾರು ರಿವಾರ್ಡ್ ಪಾಯಿಂಟ್ಸ್ಗಳಿವೆ, ಅವು ಶೀಘ್ರದಲ್ಲೇ ಕಾಲಾವಧಿ ಮುಗಿಯಲಿವೆ […]

ಕನ್ನಡ ದುನಿಯಾ 2 Feb 2026 3:57 pm

8 ವರ್ಷದ ಬಾಲಕಿ ಮೇಲೆ ಕ್ಯಾನ್ಸರ್ ಪೀಡಿತ ವೃದ್ಧನಿಂದ ಲೈಂಗಿಕ ದೌರ್ಜನ್ಯ

ಹುಬ್ಬಳ್ಳಿ: 8 ವರ್ಷದ ಬಾಲಕಿ ಮೇಲೆ ಕ್ಯಾನ್ಸರ್ ಪೀಡಿತ 75 ವರ್ಷದ ವೃದ್ಧನೊಬ್ಬ ಲೈಂಗಿಕ ದೌರ್ಜನ್ಯವೆಸಗಿರುವ ಘೋರ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಜನವರಿ 29 ರಂದು ನಡೆದಿರುವ ಈ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಹುಬ್ಬಳ್ಳಿ-ಧಾರವಾಡ ಜನರು ಬೆಚ್ಚಿ ಬಿದ್ದಿದ್ದಾರೆ. ಪಕ್ಕದ ಮನೆಯ ಬಾಲಕಿ ಮೇಲೆ ವೃದ್ಧ ಅಟ್ಟಹಾಸ ಮೆರೆದಿದ್ದಾನೆ ಎಂದು ತಿಳಿದುಬಂದಿದೆ. ಪಕ್ಕದ ಮನೆಯ 8 ವರ್ಷದ ಬಾಲಕಿಯನ್ನು ಚಾಅಕೊಲೇಟ್ ಕೊಡುತ್ತೇನೆ ಎಂದು ಮನೆಗೆ ಕರೆದ 75 ವರ್ಷದ ವೃದ್ಧ, ಲೈಂಗಿಕ ದೌರ್ಜನ್ಯವೆಸಗಿದ್ದಾನೆ. ವಿಷಯ ತಿಳಿದ […]

ಕನ್ನಡ ದುನಿಯಾ 2 Feb 2026 3:49 pm

ಟಿ-20 ವಿಶ್ವಕಪ್ ಬಹಿಷ್ಕರಿಸಿದ ಪಾಕ್: ಭಾರತದ ನಡೆ ಏನು?

ಐಸಿಸಿ ಪುರುಷರ ಟಿ-20 ವಿಶ್ವಕಪ್‌ ಅನ್ನು ಪಾಕಿಸ್ತಾನ ಬಹಿಷ್ಕಾರ ಮಾಡಿದೆ. ಬಾಂಗ್ಲಾದೇಶ ಈಗಾಗಲೇ ಟೂರ್ನಿಯಿಂದ ಹೊರ ಹೋಗಿದೆ. ಫೆಬ್ರವರಿ 15ರಂದು ಭಾರತ-ಪಾಕಿಸ್ತಾನ ಪಂದ್ಯ ನಡೆಯಬೇಕಿತ್ತು. ಈಗ ಪಾಕ್ ನಿಲುವಿನ ಕುರಿತು ಚರ್ಚೆಗಳು ನಡೆಯುತ್ತಿವೆ. ಪಾಕಿಸ್ತಾನ ತನ್ನ ತೀರ್ಮಾನ ಘೋಷಿಸಿದ ನಂತರ ಭಾರತ ತಂಡದ ನಡೆ ಏನು? ಎಂಬುದು ಚರ್ಚೆಯ ವಿಚಾರವಾಗಿದೆ. ಭಾರತ ತಂಡ ಶ್ರೀಲಂಕಾಕ್ಕೆ ಪ್ರಯಾಣಿಸಲಿದೆ ಮತ್ತು ಪಾಕಿಸ್ತಾನ ಜೊತೆಗಿನ ಪಂದ್ಯದ ದಿನದ ಎಲ್ಲಾ ಔಪಚಾರಿಕ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲಿದೆ. ಬಿಸಿಸಿಐ ಮೂಲಗಳ ಪ್ರಕಾರ ಭಾರತವು ಐಸಿಸಿ ಪಂದ್ಯದ […]

ಕನ್ನಡ ದುನಿಯಾ 2 Feb 2026 3:48 pm

Post office Scheme : ಅಂಚೆ ಕಚೇರಿಯ ಬಂಪರ್ ಯೋಜನೆ : ಜಸ್ಟ್ 200 ರೂ. ಠೇವಣಿ ಮಾಡಿದ್ರೆ ಸಿಗುತ್ತೆ 10 ಲಕ್ಷ .!

ಪೋಸ್ಟ್ ಆಫೀಸ್ ರಿಕರಿಂಗ್ ಡಿಪಾಸಿಟ್ (RD) ಯೋಜನೆಯು ಸಾಮಾನ್ಯ ಜನರಿಗೆ ಆರ್ಥಿಕ ಭದ್ರತೆಯನ್ನು ಒದಗಿಸುತ್ತಾ, ಹತ್ತು ವರ್ಷಗಳಲ್ಲಿ ಸುಮಾರು 10 ಲಕ್ಷ ರೂಪಾಯಿಗಳವರೆಗೆ ಹಣ ಗಳಿಸುವ ಅವಕಾಶವನ್ನು ನೀಡುತ್ತದೆ. ಪ್ರಸ್ತುತ ಆರ್ಥಿಕ ಪರಿಸ್ಥಿತಿಯಲ್ಲಿ, ವಿಶೇಷವಾಗಿ ಶೇರ್ ಮಾರ್ಕೆಟ್‌ನಂತಹ ಅಪಾಯಕಾರಿ ಹೂಡಿಕೆಗಳಿಂದ ದೂರವಿರಲು ಬಯಸುವವರಿಗೆ ಇದು ಅತ್ಯಂತ ಸುರಕ್ಷಿತ ಮತ್ತು ಸ್ಥಿರವಾದ ಪರ್ಯಾಯ ಮಾರ್ಗವಾಗಿದೆ. ಈ ಯೋಜನೆಯ ಪ್ರಕಾರ, ನೀವು ದಿನಕ್ಕೆ 200 ರೂಪಾಯಿಯಂತೆ ಉಳಿತಾಯ ಮಾಡಿ ಪೋಸ್ಟ್ ಆಫೀಸ್‌ನಲ್ಲಿ ಡಿಪಾಸಿಟ್ ಮಾಡಿದರೆ, ಹತ್ತು ವರ್ಷಗಳ ನಂತರ 10 […]

ಕನ್ನಡ ದುನಿಯಾ 2 Feb 2026 3:44 pm

BREAKING : ಬೆಂಗಳೂರಲ್ಲಿ ಘೋರ  ದುರಂತ : 4ನೇ ಮಹಡಿಯಿಂದ ಆಯತಪ್ಪಿ ಬಿದ್ದು ಯುವಕ ಸಾವು !

ಬೆಂಗಳೂರು : ಬೆಂಗಳೂರಲ್ಲಿ ಘೋರ ದುರಂತ ಸಂಭವಿಸಿದ್ದು, 4ನೇ ಮಹಡಿಯಿಂದ ಆಯತಪ್ಪಿ ಬಿದ್ದು ಯುವಕ ದಾರುಣವಾಗಿ ಮೃತಪಟ್ಟ ಘಟನೆ ನಡೆದಿದೆ. 4 ನೇ ಮಹಡಿಯಿಂದ ಬಿದ್ದು ಯುವಕ ಸಾವನ್ನಪ್ಪಿದ ಘಟನೆ ಬೆಂಗಳೂರಿನ ಭಾರತೀನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ನಡೆದಿದೆ. ಸಂಬಂಧಿಕರ ಮನೆಗೆ ಬಂದಾಗ ಈ ದುರ್ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. ಮೃತ ಯುವಕನನ್ನು ಇರ್ಫಾನ್ ಮುಲ್ಲಾನಿ (26 ) ಎಂದು ಗುರುತಿಸಲಾಗಿದೆ. ಇದು ಆಕಸ್ಮಿಕವಾಗಿ ನಡೆದ ಘಟನೆಯೇ ಅಥವಾ ಇದರ ಹಿಂದೆ ಬೇರೆ ಯಾವುದಾದರೂ […]

ಕನ್ನಡ ದುನಿಯಾ 2 Feb 2026 3:38 pm

BIG NEWS: ರಾಜ್ಯಪಾಲರ 2 ಸಾಲಿನ ಭಾಷಣದ ಮೇಲೆ ನಡೆದ ಚರ್ಚೆಗೆ ಸಿಎಂ ಸಿದ್ದರಾಮಯ್ಯ ಉತ್ತರ

ಬೆಂಗಳೂರು: ರಾಜ್ಯಪಾಲರ ಭಾಷಣದ ಮೇಲೆ ವಿಧಾನಸಭೆಯಲ್ಲಿ ನಡೆದ ಚರ್ಚೆಗೆ ಮುಖ್ಯಮಂತ್ರಿ ಸಿದ್ದರಮಯ್ಯ ಉತ್ತರ ನೀಡಿದ್ದಾರೆ. ವಿಧಾನಮಂಡಲ ವಿಶೇಷ ಜಂಟಿ ಅಧಿವೇಶನದಲ್ಲಿ ಉಭಯ ಸದನಗಳನ್ನು ಉದ್ದೇಶಿಸಿ ಮಾತನಾಡಬೇಕಿದ್ದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಕೇವಲ ಎರಡು ಸಾಲಿನಲ್ಲಿ ಭಾಷಣ ಮುಗಿಸಿ ಸದನದಲ್ಲಿ ನಿರ್ಗಮಿಸಿದ್ದ ಘಟನೆ ಭಾರಿ ಚರ್ಚೆಗೆ ಕಾರಣವಾಗಿತ್ತು. ಇಂದು ವಿಧಾನಸಭೆಯಲ್ಲಿ ನಡೆದ ಚರ್ಚೆ ವೇಳೆ ಸಿಎಂ ಸಿದ್ದರಾಮಯ್ಯ ರಾಜ್ಯಪಾಲರ ಭಾಷಣದ ಮೇಲೆ ಉತ್ತರ ನೀಡಿದ್ದಾರೆ. ರಾಜ್ಯಪಾಲರು ಪೂರ್ತಿ ಭಾಷಣ ಓದದೆ ತರಾತುರಿಯಲ್ಲಿ ಹೋಗಿದ್ದಾರೆ. ಭಾಷಣದಲ್ಲಿದ್ದ “ಜೈ ಸಂವಿಧಾನ” […]

ಕನ್ನಡ ದುನಿಯಾ 2 Feb 2026 3:27 pm

Luxury Watch:ಭಾರತದಲ್ಲಿ ಕೇವಲ 3 ಜನರ ಬಳಿ ಮಾತ್ರ ಇದೆ ಈ ಅಪರೂಪದ ಗಡಿಯಾರ ಇದರ ಬೆಲೆ ಕೇಳಿದ್ರೆ ನೀವು ದಂಗಾಗ್ತೀರಾ

ಕೇವಲ 70 ರೂಪಾಯಿ ಅಥವಾ 70 ಸಾವಿರವಲ್ಲ, ಬರೋಬ್ಬರಿ 70 ಕೋಟಿ ರೂಪಾಯಿ ಹೌದು ಒಂದು ವಾಚ್‌ನ ಬೆಲೆ ಇಷ್ಟಿರಲು ಸಾಧ್ಯವೇ ಎಂದು ನೀವು ಅಚ್ಚರಿ ಪಡಬಹುದು. ಆದರೆ, ವಿಶ್ವವಿಖ್ಯಾತ ಪಾಟೆಕ್ ಫಿಲಿಪ್ (Patek Philippe) ಕಂಪನಿಯ ರೈನ್ಬೋ ಮಿನಿಟ್ ರಿಪೀಟರ್ ಎನ್ನುವ ಗಡಿಯಾರ ಇಂದು ಜಾಗತಿಕ ಮಾರುಕಟ್ಟೆಯಲ್ಲಿ ಇಷ್ಟೊಂದು ಭಾರಿ ಮೊತ್ತಕ್ಕೆ ಮಾರಾಟವಾಗುತ್ತಿದೆ. ಇದು ಕೇವಲ ಸಮಯ ತೋರಿಸುವ ಯಂತ್ರವಲ್ಲ ಅತ್ಯಾಧುನಿಕ ತಂತ್ರಜ್ಞಾನ ಮತ್ತು ಅತೀ ಅಮೂಲ್ಯವಾದ ಆಭರಣಗಳ ಅದ್ಭುತ ಸಂಗಮ ಇದರ ಮಾರುಕಟ್ಟೆ ಮೌಲ್ಯ […]

ಕನ್ನಡ ದುನಿಯಾ 2 Feb 2026 3:20 pm

SHOCKING : ಅಪ್ರಾಪ್ತ ಬಾಲಕಿ ಮೇಲೆ ‘ಗ್ಯಾಂಗ್ ರೇಪ್’ಎಸಗಿ ವಿಡಿಯೋ ಮಾಡಿ ವೈರಲ್ : 7 ಆರೋಪಿಗಳು ಅರೆಸ್ಟ್.!

ಮಧ್ಯಪ್ರದೇಶದ ನರಸಿಂಗ್ಪುರ ಜಿಲ್ಲೆಯಲ್ಲಿ ಅಮಾನವೀಯ ಸಾಮೂಹಿಕ ಅತ್ಯಾಚಾರ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ದೇಶವನ್ನೇ ಬೆಚ್ಚಿಬೀಳಿಸಿದೆ. ಡಿಸೆಂಬರ್ 29 ರಂದು ಮುಂಗ್ವಾನಿ ಪ್ರದೇಶದ ಮಾಛಾ ನದಿ ಸಮೀಪದ ಅರಣ್ಯ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಏನಿದು ಘಟನೆ 16 ವರ್ಷದ ಬಾಲಕಿ ತನ್ನ ಸ್ನೇಹಿತನೊಂದಿಗೆ ಮೋಟಾರ್ ಸೈಕಲ್ನಲ್ಲಿ ದೇವಸ್ಥಾನಕ್ಕೆ ಹೋಗುತ್ತಿದ್ದಾಗ, ಅಪ್ರಾಪ್ತ ಬಾಲಕ ಸೇರಿ ಎಂಟು ಜನರ ಗುಂಪು ಅವರನ್ನು ತಡೆದಿದೆ. ಆರೋಪಿಗಳು ಅವರನ್ನು ಬೆದರಿಸಿ, ಬಾಲಕಿಯನ್ನು ಬಲವಂತವಾಗಿ ಸ್ಕೂಟರ್ ಮೇಲೆ ಕೂರಿಸಿಕೊಂಡು ಹತ್ತಿರದ ಕಾಡಿಗೆ ಕರೆದೊಯ್ದಿದ್ದಾರೆ. ಬಾಲಕಿಯ […]

ಕನ್ನಡ ದುನಿಯಾ 2 Feb 2026 3:05 pm

Shocking News: ಹಾವು ಕಡಿತ, ಭಾರತದ ಬಗ್ಗೆ ಆತಂಕಕಾರಿ ಮಾಹಿತಿ ಬಹಿರಂಗ

ಭಾರತದಲ್ಲಿ ಹಾವು ಕಡಿತ ಭಾರೀ ಬಿಕ್ಕಟ್ಟು ಸೃಷ್ಟಿ ಮಾಡಿದೆ. ಪ್ರತಿ ವರ್ಷ ಸಾವಿರಾರು ಜನರು ಹಾವು ಕಡಿತಕ್ಕೆ ಬಲಿಯಾಗುತ್ತಿದ್ದಾರೆ. ಪ್ರಾಥಮಿಕ ಚಿಕಿತ್ಸೆ ಕೊರತೆ, ಜನರ ಮೂಢನಂಬಿಕೆ ಸೇರಿದಂತೆ ವಿವಿಧ ಕಾರಣಕ್ಕೆ ಜನರು ಹಾವಿಗೆ ಜೀವ ನೀಡುತ್ತಿದ್ದಾರೆ. ರೈತ ದೇವೇಂದ್ರ ಮಲ್ಬರಿ ಎಲೆಗಳನ್ನು ಸಂಗ್ರಹ ಮಾಡುವಾಗ ಹಾವು ಆತನ ಕಾಲಿಗೆ ಕಚ್ಚಿತ್ತು. “ನನಗೆ ಹಾವು ಕಚ್ಚಿದ ನಾಲ್ಕು ದಿನಗಳ ನಂತರ ನೋವು ಅಸಹನೀಯವಾದಾಗ. ಆಸ್ಪತ್ರೆಗೆ ಹೋದೆ. ಈ ವಿಳಂಬ ನನಗೆ ದುಬಾರಿಯಾಯಿತು” ಎಂದು ಅವರು ಹೇಳುತ್ತಾರೆ. ಹಾವು ಕಡಿತದಿಂದ […]

ಕನ್ನಡ ದುನಿಯಾ 2 Feb 2026 2:56 pm

‘ಪಾಕ್’ಮೂಲದ ದಲಿತ ಹಿಂದೂಗಳಿಗೆ ಮನೆ ಕೊಡಿ : ದೆಹಲಿಯಲ್ಲಿ ತೆರವು ಕಾರ್ಯಾಚರಣೆಗೆ ಸುಪ್ರೀಂಕೋರ್ಟ್ ತಡೆ.!

ಪಾಕಿಸ್ತಾನದಿಂದ ವಲಸೆ ಬಂದ ಪರಿಶಿಷ್ಟ ಜಾತಿಯ ಹಿಂದೂಗಳ ಪರಿಸ್ಥಿತಿಯ ಬಗ್ಗೆ ಸುಪ್ರೀಂ ಕೋರ್ಟ್ ಸೋಮವಾರ ಕಳವಳ ವ್ಯಕ್ತಪಡಿಸಿದೆ. ಈ ಜನರಿಗೆ ಕೇವಲ ಭಾರತೀಯ ಪೌರತ್ವ ನೀಡುವುದು ಮಾತ್ರ ಸಾಕಾಗುವುದಿಲ್ಲ, ಅವರಿಗೆ ಗೌರವಯುತವಾದ ವಸತಿಯನ್ನು ಒದಗಿಸುವುದನ್ನು ಸರ್ಕಾರ ಖಚಿತಪಡಿಸಿಕೊಳ್ಳಬೇಕು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ದೆಹಲಿಯ ಮಜ್ನು ಕಾ ಟಿಲಾ ಪ್ರದೇಶದ ಸಿಗ್ನೇಚರ್ ಬ್ರಿಡ್ಜ್ ಸಮೀಪ ವಾಸಿಸುತ್ತಿರುವ ಈ ಕುಟುಂಬಗಳ ಸ್ಥಳಾಂತರಕ್ಕೆ ಸಂಬಂಧಿಸಿದ ವಿಚಾರಣೆಯ ಸಂದರ್ಭದಲ್ಲಿ ಈ ಮಹತ್ವದ ಹೇಳಿಕೆಗಳು ಬಂದಿವೆ.: ನ್ಯಾಯಮೂರ್ತಿ ಎಂ.ಎಂ. ಸುಂದ್ರೇಶ್ ಮತ್ತು ನ್ಯಾಯಮೂರ್ತಿ ಎನ್. […]

ಕನ್ನಡ ದುನಿಯಾ 2 Feb 2026 2:49 pm

‘ಬಜೆಟ್ ನೋಡಿ, ನನ್ನ ಸೀರೆಯನ್ನಲ್ಲ’ : ಟೀಕಾಕಾರರಿಗೆ ನಿರ್ಮಲಾ ಸೀತಾರಾಮನ್ ಖಡಕ್ ಉತ್ತರ..!

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸತತ ಒಂಬತ್ತನೇ ಬಾರಿಗೆ ಬಜೆಟ್ ಮಂಡಿಸಿದ್ದಾರೆ. ಈ ಸಂದರ್ಭದಲ್ಲಿ ಅವರು ಧರಿಸಿದ್ದ ಸೀರೆಯು ಎಲ್ಲರ ವಿಶೇಷ ಆಕರ್ಷಣೆಗೆ ಪಾತ್ರವಾಯಿತು. ದೇಶದ ಸಂಸ್ಕೃತಿ ಮತ್ತು ಸಂಪ್ರದಾಯವನ್ನು ಪ್ರತಿಬಿಂಬಿಸುವಂತೆ ಅವರು ಯಾವಾಗಲೂ ಕೈಮಗ್ಗದ ಸೀರೆಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಈ ಬಾರಿ ಅವರು ಭವ್ಯವಾದ ಕಾಂಜೀವರಂ (ಕಾಂಚೀಪುರಂ) ಪಟ್ಟು ಸೀರೆಯಲ್ಲಿ ಕಾಣಿಸಿಕೊಂಡರು. ಪ್ರತಿ ವರ್ಷ ಬಜೆಟ್ ಸಮಯದಲ್ಲಿ ಸಚಿವರು ಭಾರತೀಯ ಹಸ್ತಕಲೆ ಮತ್ತು ಸ್ಥಳೀಯ ಕೈವೃತ್ತಿಗಳನ್ನು ಉತ್ತೇಜಿಸುವಂತಹ ಸೀರೆಗಳನ್ನು ಆಯ್ಕೆ ಮಾಡುತ್ತಾರೆ. ಇದು […]

ಕನ್ನಡ ದುನಿಯಾ 2 Feb 2026 2:32 pm

ಟಿಕೆಟ್ ಇಲ್ಲದೆ ಎಸಿ ಕೋಚ್‌ನಲ್ಲಿ ಪೊಲೀಸ್ ಪುಂಡಾಟ: ಟಿಟಿಇಗೇ ಅವಾಜ್ ಹಾಕಿದ ಉತ್ತರ ಪ್ರದೇಶದ ಪೇದೆಗಳು

ಉತ್ತರ ಪ್ರದೇಶದಲ್ಲಿ ಕಾನೂನು ರಕ್ಷಕರೆನಿಸಿಕೊಂಡ ಪೊಲೀಸರೇ ಕಾನೂನು ಉಲ್ಲಂಘಿಸಿ ದರ್ಪ ತೋರಿಸಿರುವ ಘಟನೆ ನಡೆದಿದೆ. ಚಲಿಸುತ್ತಿರುವ ರೈಲಿನ ಸೆಕೆಂಡ್ ಎಸಿ ಕೋಚ್‌ನಲ್ಲಿ ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿದ್ದ ಇಬ್ಬರು ಪೊಲೀಸ್ ಪೇದೆಗಳು, ಟಿಕೆಟ್ ಕೇಳಿದ ರೈಲ್ವೆ ಸಿಬ್ಬಂದಿಗೆ (ಟಿಟಿಇ) ಅವಾಜ್ ಹಾಕಿರುವ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ವೈರಲ್ ಆಗಿರುವ ವಿಡಿಯೋದಲ್ಲಿ, ಸಮವಸ್ತ್ರದಲ್ಲಿದ್ದ ಪೊಲೀಸ್ ಅಧಿಕಾರಿಯೊಬ್ಬರು ಟಿಕೆಟ್ ಇಲ್ಲದೆ ಐಷಾರಾಮಿ ಎಸಿ ಕೋಚ್‌ನಲ್ಲಿ ಕುಳಿತಿರುವುದನ್ನು ಕಾಣಬಹುದು. ಟಿಟಿಇ ಟಿಕೆಟ್ ತೋರಿಸುವಂತೆ ಕೇಳಿದಾಗ, “ನಾನು ಟಿಕೆಟ್ […]

ಕನ್ನಡ ದುನಿಯಾ 2 Feb 2026 2:30 pm

ಫ್ಲೋರೈಡ್ ಮಿಶ್ರಿತ ನೀರು ಸೇವಿಸಿ ಕಿಡ್ನಿ ಕಳೆದುಕೊಂಡ 47 ಜನ: ಅಧಿಕಾರಿಗಳ ವಿರುದ್ಧ ಗ್ರಾಮಸ್ಥರ ಆಕ್ರೋಶ

ಚಾಮರಾಜನಗರ: ಜೀವಜಲವೇ ಕಲುಷಿತಗೊಂಡಿದ್ದು, ಅದೇ ನೀರನ್ನು ಸೇವಿಸಿದ ಗ್ರಾಮಸ್ಥರು ತಮ್ಮ ಕಿಡ್ನಿಯನ್ನೇ ಕಳೆದುಕೊಂಡಿರುವ ಕರುಣಾಜನಕ ಘಟನೆ ಚಾಮರಾಜನಗರ ಜಿಲ್ಲೆಯಲ್ಲಿ ನಡೆದಿದೆ. ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಾರ್ಟಳ್ಳಿ ಹಾಗೂ ಸುಳ್ವಾಡಿ ಗ್ರಾಮದಲ್ಲಿ ಫ್ಲೋರೈಡ್ ಮಿಶ್ರಿತ ನೀರು ಪೂರೈಕೆಯಾಗಿದ್ದು, ಈ ನೀರನ್ನು ಸೇವಿಸಿದ 47 ಜನರ ಕಿಡ್ನಿ ವೈಫಲ್ಯವಾಗಿದೆ. ಅಲ್ಲದೇ ಗ್ರಾಮದ ಹಲವು ವಿವಿಧ ರೀತಿಯ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ತಿಳಿದುಬಂದಿದೆ. ಮಾರ್ಟಳ್ಳಿ ಹಾಗೂ ಸುಳ್ವಾಡಿ ಗ್ರಾಮಗಳಲ್ಲಿ ಕಳೆದ 30 ವರ್ಷಗಳಿಂದ ಗ್ರಾಮ ಪಂಚಾಯಿತಿಯಿಂದ ಸರಬರಾಅಜಾಗುತ್ತಿರುವ ನೀರನ್ನೇ […]

ಕನ್ನಡ ದುನಿಯಾ 2 Feb 2026 2:27 pm

ಸಾಗರ ಮಾರಿಕಾಂಬಾ ಜಾತ್ರೆ ಹಿನ್ನೆಲೆ ತಾತ್ಕಾಲಿಕ ರಸ್ತೆ ಬದಲಾವಣೆ, ಇಲ್ಲಿದೆ ಮಾಹಿತಿ

ಶಿವಮೊಗ್ಗ : ಶಿವಮೊಗ್ಗ ಜಿಲ್ಲೆ ಸಾಗರ ಪೇಟೆಯಲ್ಲಿ ನಡೆಯಲಿರುವ ಶ್ರೀ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವ ಸಂದರ್ಭದಲ್ಲಿ ಸಾಗರದ ಪ್ರಮುಖ ರಸ್ತೆಗಳಲ್ಲಿ ಸಾರ್ವಜನಿಕರಿಗೆ, ಭಕ್ತಾದಿಗಳಿಗೆ ಅನುಕೂಲವಾಗುವಂತೆ ತಾತ್ಕಾಲಿಕವಾಗಿ ದ್ವಿಚಕ್ರ, ಲಘುವಾಹನಗಳು ಹಾಗೂ ಭಾರಿ ವಾಹನಗಳ ಸಂಚಾರ ನಿಷೇಧ, ನಿಲುಗಡೆ, ಮಾರ್ಗ ಬದಲಾವಣೆ ಮಾಡಿ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಆದೇಶ ನೀಡಿದ್ದಾರೆ. ಸಾಗರ ಟೌನ್ ಪೊಲೀಸ್ ಠಾಣೆಯ ಎದುರಿನ ಜೆ.ಸಿ. ವೃತ್ತದಿಂದ ಜೆ.ಸಿ.ರಸ್ತೆ ಮೂಲಕ ಸಾಗರ ಸರ್ಕಲ್ ಮಾರ್ಗವಾಗಿ ಐತಪ್ಪ ವೃತ್ತದವರೆಗೆ ಪ್ಯಾರಲಲ್ ರಸ್ತೆಗಳು, ಅಂಬೇಡ್ಕರ್ ಸರ್ಕಲ್ (ಲಿಂಬು […]

ಕನ್ನಡ ದುನಿಯಾ 2 Feb 2026 2:01 pm

BIG NEWS: ಆಡು ಮುಟ್ಟದ ಸೊಪ್ಪಿಲ್ಲ: ಲೂಟಿ ಹೊಡೆಯದ ಇಲಾಖೆಯಿಲ್ಲ: ಸರ್ಕಾರ ಪಾಪರ್ ಆಗಿದೆ: ಆರ್.ಅಶೋಕ್ ವಾಗ್ದಾಳಿ

ಬೆಂಗಳೂರು: ರಾಜ್ಯ ಸರ್ಕಾರದಲ್ಲಿ ಭ್ರಷ್ಟಾಚಾರ ಪ್ರತಿ ಇಲಾಖೆಯಲ್ಲಿಯೂ ನಡೆಯುತ್ತಿದೆ. ಸರ್ಕಾರ ದಿವಾಳಿಯಾಗಿದ್ದು, ಲೂಟಿ ಮಾಡುವುದನ್ನೇ ಕಾಯಕವನ್ನಾಗಿ ಮಾಡಿಕೊಂಡಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ. ವಿಧಾನಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಆರ್.ಅಶೋಕ್, ರಾಜ್ಯ ಸರ್ಕಾರ ಪಾಪರ್ ಆಗಿದೆ ಎಂದು ಬೋರ್ಡ್ ಹಾಕಿಕೊಳ್ಳಲಿ. ಸರ್ಕಾರದ ಖಜಾನೆಯಲ್ಲಿ ಹಣ ಇದೆಯೋ? ಇಲ್ಲವೋ? ಎಂದು ಪ್ರಶ್ನಿಸಿದ್ದಾರೆ. ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ. ಸರ್ಕಾರ ದಿವಾಳಿಯಾದಂತೆ ಕಾಣುತ್ತಿದೆ. ಪ್ರತಿಯೊಂದು ಇಲಾಖೆಯಲ್ಲಿಯೂ ಭ್ರಷ್ಟಾಚಾರ ನಡೆಯುತ್ತಿದೆ. ಆಡು ಮುಟ್ಟದ ಸೊಪ್ಪಿಲ್ಲ, ಲೂಟಿ ಹೊಡೆಯದ ಇಲಾಖೆ […]

ಕನ್ನಡ ದುನಿಯಾ 2 Feb 2026 2:00 pm