BREAKING: ಶಿವಮೊಗ್ಗ ಜಿಲ್ಲಾಧಿಕಾರಿಯಾಗಿ ಪ್ರಭುಲಿಂಗ ಕವಲಿಕಟ್ಟಿ
ಶಿವಮೊಗ್ಗ: ಐಎಎಸ್ ಅಧಿಕಾರಿ ಪ್ರಭುಲಿಂಗ ಕವಲಿಕಟ್ಟಿ ಅವರನ್ನು ಶಿವಮೊಗ್ಗ ಜಿಲ್ಲೆಯ ಜಿಲ್ಲಾಧಿಕಾರಿಯನ್ನಾಗಿ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. 2013 ರ ಬ್ಯಾಚ್ನ ಐಎಎಸ್ ಅಧಿಕಾರಿ ಆಗಿರುವ ಪ್ರಭುಲಿಂಗ ಕವಲಿಕಟ್ಟಿ, ಪ್ರಸ್ತುತ ಬೆಂಗಳೂರಿನ ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಮೂಲತಃ ಧಾರವಾಡ ಜಿಲ್ಲೆಯವರಾದ ಪ್ರಭುಲಿಂಗ ಕವಲಿಕಟ್ಟಿ, ಈ ಹಿಂದೆ ಹಟ್ಟಿ ಚಿನ್ನದ ಗಣಿ ಕಂಪನಿ ವ್ಯವಸ್ಥಾಪಕ ನಿರ್ದೇಶಕರಾಗಿ, ಉತ್ತರ ಕನ್ನಡದ ಜಿಲ್ಲಾಧಿಕಾರಿಯಾಗಿ ಕೆಲಸ ನಿರ್ವಹಿಸಿದ್ದರು. ಪ್ರಸ್ತುತ ಬೆಂಗಳೂರಿನ ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇದೀಗ […]
BREAKING: ಪೊಲೀಸರ ವಿಶೇಷ ಕಾರ್ಯಾಚರಣೆ, ನ್ಯೂ ಇಯರ್ ಪಾರ್ಟಿಗೆ ಡ್ರಗ್ಸ್ ಸಪ್ಲೈ ಮಾಡ್ತಿದ್ದ ಓರ್ವ ಅರೆಸ್ಟ್
ಬೆಂಗಳೂರು: ನ್ಯೂ ಇಯರ್ ಪಾರ್ಟಿಗೆ ಡ್ರಗ್ಸ್ ಸಪ್ಲೈ ಮಾಡುತ್ತಿದ್ದವನನ್ನು ದೇವನಹಳ್ಳಿ ಠಾಣೆ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ನೈಜೀರಿಯಾ ಮೂಲದ ಆರೋಪಿಯನ್ನು ಬಂಧಿಸಲಾಗಿದೆ. ಏರ್ಪೋರ್ಟ್ ಬ್ಯಾಕ್ ಗೇಟ್ ಸಮೀಪ ಡ್ರಗ್ಸ್ ಮಾರಾಟ ಮಾಡುವಾಗ ದಾಳಿ ನಡೆಸಿ ಬಂಧಿಸಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತನಿಂದ 21 ಗ್ರಾಂ ಕೊಕೇನ್ ಮತ್ತು 30 ಗ್ರಾಂ ಎಂಡಿಎಂಎ ಮಾದಕ ವಸ್ತು ವಶಕ್ಕೆ ಪಡೆಯಲಾಗಿದೆ. ಹೆಚ್ಚಿನ ವಿಚಾರಣೆ ನಡೆಸಲಾಗಿದೆ.
ಬೆಂಗಳೂರು: ರಾಜ್ಯಪಾಲ ಥಾವರ್ ಚಂದ್ ಗೆಹ್ಲೊಟ್ ಅವರು ಹೊಸ ವರ್ಷದ ಶುಭಾಶಯ ಕೋರಿದ್ದಾರೆ. ಹೊಸ ವರ್ಷ ನಮ್ಮ ದೇಶವನ್ನು ಶಾಂತಿ ಸಮೃದ್ಧಿ ಮತ್ತು ಏಕತೆ ಮಾರ್ಗದಲ್ಲಿ ಮುನ್ನಡೆಸುವ ಅವಕಾಶ ಒದಗಿಸಲು ಎಂದು ತಿಳಿಸಿದ್ದಾರೆ. ಹೊಸ ವರ್ಷ ಎಲ್ಲರಿಗೂ ಸಂತೋಷ, ಸಮೃದ್ಧಿ ತರಲಿ ಎಂದು ಹಾರೈಸಿದ್ದಾರೆ. ದೇಶದ ಭವಿಷ್ಯದತ್ತ ನಾವೆಲ್ಲರೂ ಒಟ್ಟಾಗಿ ಮುನ್ನಡೆಯೋಣ ಎಂದು ರಾಜ್ಯಪಾಲರು ಶುಭಾಶಯ ಕೋರಿದ್ದಾರೆ.
ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ ಮಾಡಲಾಗಿದೆ. 23 ಐಪಿಎಸ್ ಅಧಿಕಾರಿಗಳಿಗೆ ಡಿಐಜಿಪಿ ಹುದ್ದೆಗೆ, ಇಬ್ಬರು ಡಿಐಜಿಪಿಗಳಿಗೆ ಐಜಿಪಿಯಾಗಿ ಬಡ್ತಿ ನೀಡಿ ಸರ್ಕಾರ ಆದೇಶ ಹೊರಡಿಸಿದೆ. ಮೂವರು ಅಡಿಷನಲ್ ಎಸ್ಪಿಗಳಿಗೆ ಎಸ್ಪಿಗಳಾಗಿ ಬಡ್ತಿ ನೀಡಲಾಗಿದೆ. 20 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಭೀಮಶಂಕರ ಗುಳೇದ್ – ಡಿಐಜಿಪಿ, ಸಿಐಡಿ, ಆರ್ಥಿಕ ಅಪರಾಧ ಇಲಾಕಿಯಾ ಕರುಣಾಗರನ್ – ಡಿಐಜಿಪಿ, ವೈರ್ ಲೆಸ್ ವೇದಮೂರ್ತಿ – ಡಿಐಜಿಪಿ, ರಾಜ್ಯ ಗುಪ್ತಚರ ಹನುಮಂತರಾಯ – ಡಿಐಜಿಪಿ, […]
ಶಿಕ್ಷಕರು, ಉಪನ್ಯಾಸಕರ ಮಕ್ಕಳಿಗೆ ಗುಡ್ ನ್ಯೂಸ್: ವಿದ್ಯಾರ್ಥಿ ವೇತನ ಮಂಜೂರು ಮಾಡಲು ಪ್ರತಿಭಾವಂತರಿಂದ ಅರ್ಜಿ ಆಹ್ವಾನ
ಬೆಂಗಳೂರು: 2024-25ನೇ ಸಾಲಿಗಾಗಿ ಶಿಕ್ಷಕರ ಮಕ್ಕಳಿಗೆ ಪ್ರತಿಭಾವಂತ ವಿದ್ಯಾರ್ಥಿ ವೇತನ ಮಂಜೂರು ಮಾಡಲು ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. 2024-26ನೇ ಸಾಲಿಗೆ ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿಯಿಂದ ಎಸ್ಎಸ್ಎಲ್ಸಿಯಿಂದ ಸ್ನಾತಕೋತ್ತರವರೆಗೆ ಅತಿ ಹೆಚ್ಚು ಪಡೆದ ಶಿಕ್ಷಕರುಗಳ/ಉಪನ್ಯಾಸಕರು/ಪ್ರಾಂಶುಪಾಲರು/ ನಿವೃತ್ತ ಶಿಕ್ಷಕರು/ ನಿವೃತ್ತ ಉಪನ್ಯಾಸಕರು/ಪ್ರಾಂಶುಪಾಲರ ಮಕ್ಕಳಿಗೆ ಪ್ರತಿಭಾವಂತ ವಿದ್ಯಾರ್ಥಿ ವೇತನವನ್ನು ಮಂಜೂರು ಮಾಡುವ ಸಲುವಾಗಿ ONLINE ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಪ್ರತಿಭಾವಂತ ವಿದ್ಯಾರ್ಥಿ ವೇತನಕ್ಕಾಗಿ ಬರುವ ಭೌತಿಕ ಅರ್ಜಿಗಳನ್ನು ಈ ಕಛೇರಿಯಲ್ಲಿ ಪರಿಗಣಿಸಲಾಗುವುದಿಲ್ಲ. ನಿಧಿಗಳ ಕಛೇರಿಯಿಂದ ಈಗಾಗಲೇ ಆನ್ಲೈನ್ನಲ್ಲಿ […]
ಭೋಪಾಲ್ನಲ್ಲಿ ವಿಚಿತ್ರ ದರೋಡೆ: ಬೆದರಿಸುವ ಶ್ವಾನಗಳಿಗೆ ಮಾಂಸದ ಚೂರು ನೀಡಿ 18 ಲಕ್ಷ ರೂ. ಲೂಟಿ!
ಭೋಪಾಲ್: ಮಧ್ಯಪ್ರದೇಶದ ರಾಜಧಾನಿ ಭೋಪಾಲ್ನಲ್ಲಿ ಈವರೆಗೆ ಕಾಣದಂತಹ ವಿಭಿನ್ನ ಶೈಲಿಯ ದರೋಡೆ ನಡೆದಿದೆ. ವಕೀಲರೊಬ್ಬರ ಮನೆಯಲ್ಲಿದ್ದ ಖತರ್ನಾಕ್ ಡೋಬರ್ಮನ್ ತಳಿಯ ನಾಯಿಗಳಿಗೆ ಮಾಂಸದ ಚೂರುಗಳನ್ನು ಹಾಕಿ ಸದ್ದಿಲ್ಲದಂತೆ ಮಾಡಿದ ಎಂಟು ಮಂದಿ ಮುಸುಕುಧಾರಿ ದರೋಡೆಕೋರರು, ಲಕ್ಷಾಂತರ ಮೌಲ್ಯದ ಚಿನ್ನಾಭರಣ ಹಾಗೂ 18 ಲಕ್ಷ ರೂಪಾಯಿ ನಗದು ದೋಚಿ ಪರಾರಿಯಾಗಿದ್ದಾರೆ. ಶ್ವಾನಗಳನ್ನು ಮೌನಗೊಳಿಸಲು ಮಾಂಸದ ತಂತ್ರ ಸೂರಜ್ ನಗರದ ಏರ್ಪೋರ್ಟ್ ರಸ್ತೆಯಲ್ಲಿರುವ ವಕೀಲ ಅಖಿಲೇಶ್ ಶ್ರೀವಾಸ್ತವ ಅವರ ಮನೆಯಲ್ಲಿ ಈ ಘಟನೆ ನಡೆದಿದೆ. ಅಖಿಲೇಶ್ ಅವರು ಚಿಕಿತ್ಸೆಗಾಗಿ ಇಂದೋರ್ಗೆ […]
ಆಸ್ತಿ ಪ್ರಕರಣದಲ್ಲಿ ಎಸ್ಸಿ/ಎಸ್ಟಿ ಕಾಯ್ದೆ ಬಳಕೆ ತಿರಸ್ಕರಿಸಿದ ಹೈಕೋರ್ಟ್ ಮಹತ್ವದ ಆದೇಶ: ಕ್ರಿಮಿನಲ್ ಕೇಸ್ ರದ್ದು
ನವದೆಹಲಿ: ಎರಡು ದಶಕಗಳ ಹಿಂದೆ ಮಾಡಲಾದ ಭೂ ಹಂಚಿಕೆಗಳಲ್ಲಿನ ಅಕ್ರಮಗಳು ಮತ್ತು ಸಂಬಂಧಿತ ಆದಾಯ ಪ್ರಕ್ರಿಯೆಗಳಿಂದ ಉಂಟಾದ ಎಸ್ಸಿ/ಎಸ್ಟಿ ಕಾಯ್ದೆಯಡಿ ಆರೋಪಗಳನ್ನು ಒಳಗೊಂಡಂತೆ ಕ್ರಿಮಿನಲ್ ಪ್ರಕರಣವನ್ನು ಅಲಹಾಬಾದ್ ಹೈಕೋರ್ಟ್ ರದ್ದುಗೊಳಿಸಿದೆ. ಕ್ರಿಮಿನಲ್ ಮೇಲ್ಮನವಿಯನ್ನು ಅನುಮತಿಸುತ್ತಾ, ನ್ಯಾಯಮೂರ್ತಿ ಶೇಖರ್ ಕುಮಾರ್ ಯಾದವ್ ಅವರ ಏಕಸದಸ್ಯ ಪೀಠವು ಪರಿಶಿಷ್ಟ ಜಾತಿಯ ಭೂಮಿ ಅಥವಾ ಮಾಹಿತಿದಾರರ ಜಾತಿ ಸ್ಥಿತಿಯನ್ನು ಉಲ್ಲೇಖಿಸುವುದು ವಿಶೇಷ ಕಾನೂನಿನ ನಿಬಂಧನೆಗಳನ್ನು ಅನ್ವಯಿಸಲು ಸಾಕಾಗುವುದಿಲ್ಲ ಎಂದು ಗಮನಿಸಿದೆ. ಪ್ರಕರಣವು ಪ್ರಧಾನವಾಗಿ ನಾಗರಿಕ ಮತ್ತು ಕಂದಾಯ ಸ್ವರೂಪದ್ದಾಗಿದೆ ಮತ್ತು ಮೊಕದ್ದಮೆಯು […]
ಚಾಣಕ್ಯ ನೀತಿ: ನಿಮ್ಮ ಈ 11 ರಹಸ್ಯಗಳನ್ನು ಸಂಬಂಧಿಕರಿಗೆ ತಿಳಿಸಬೇಡಿ, ತಿಳಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿ!
ಆಚಾರ್ಯ ಚಾಣಕ್ಯರ ನೀತಿಗಳು ಕೇವಲ ಇತಿಹಾಸಕ್ಕೆ ಸೀಮಿತವಾಗಿಲ್ಲ, ಅವು ಇಂದಿನ ಕಾಲಕ್ಕೂ ಅನ್ವಯಿಸುವ ಜೀವನ ಪಾಠಗಳಾಗಿವೆ. ಚಾಣಕ್ಯರ ಪ್ರಕಾರ, ವ್ಯಕ್ತಿಯು ತನ್ನ ಗೌರವ ಮತ್ತು ನೆಮ್ಮದಿಯನ್ನು ಕಾಪಾಡಿಕೊಳ್ಳಲು ಕೆಲವು ವಿಷಯಗಳನ್ನು ಅತ್ಯಂತ ಆಪ್ತರಿಂದಲೂ ಮುಚ್ಚಿಡಬೇಕು. ಸಂಬಂಧಿಕರಿಗೆ ಹೇಳಬಾರದು ಎಂದು ಚಾಣಕ್ಯರು ಎಚ್ಚರಿಸಿರುವ ಆ 11 ಪ್ರಮುಖ ವಿಷಯಗಳು ಇಲ್ಲಿವೆ: 1. ನಿಮ್ಮ ಆದಾಯ ಮತ್ತು ಸಂಪತ್ತು (Income and Wealth) ನಿಮ್ಮ ನಿಜವಾದ ಗಳಿಕೆ ಎಷ್ಟು ಎಂಬುದು ಯಾರಿಗೂ ತಿಳಿಯಬಾರದು. ನಿಮ್ಮ ಬಳಿ ಹಣ ಹೆಚ್ಚಿದೆ ಎಂದು […]
BREAKING: ಬೆಂಗಳೂರಿನಲ್ಲಿ ಮತ್ತೆ ಟೋಯಿಂಗ್ ಆರಂಭಿಸಿದ ಟ್ರಾಫಿಕ್ ಪೊಲೀಸರು
ಬೆಂಗಳೂರು: ಬೆಂಗಳೂರಿನಲ್ಲಿ ಮತ್ತೆ ಟೋಯಿಂಗ್ ಶುರುವಾಗಿದೆ. ಬೆಂಗಳೂರಿನಲ್ಲಿ ಟ್ರಾಫಿಕ್ ಪೊಲೀಸರು ಟೋಯಿಂಗ್ ಆರಂಭಿಸಿದ್ದಾರೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರದ(ಜಿಬಿಎ) ವತಿಯಿಂದ 6 ಟೋಯಿಂಗ್ ವಾಹನಗಳನ್ನು ಟ್ರಾಫಿಕ್ ಪೊಲೀಸರಿಗೆ ಹಸ್ತಾಂತರ ಮಾಡಲಾಗಿದೆ. ಇವತ್ತು 6 ಟೋಯಿಂಗ್ ವಾಹನಗಳನ್ನು ಬಳಕೆ ಮಾಡುತ್ತಿದ್ದೇವೆ ಎಂದು ಸಂಚಾರ ವಿಭಾಗದ ಜಂಟಿ ಪೋಲಿಸ್ ಆಯುಕ್ತ ಕಾರ್ತಿಕ್ ರೆಡ್ಡಿ ಹೇಳಿದ್ದಾರೆ. ಜಿಬಿಎ ವತಿಯಿಂದ ಅಧಿಕೃತವಾಗಿ ನೋಟಿಫಿಕೇಶನ್ ಆಗುತ್ತದೆ. ಇಂದು ಟೋಯಿಂಗ್ ಶುಲ್ಕ ಪಡೆಯುವುದಿಲ್ಲ. ಬೆಂಗಳೂರಿನಲ್ಲಿ ಇಂದು ಎಲ್ಲಾ ಫ್ಲೈ ಓವರ್ ಗಳನ್ನು ಬಂದ್ ಮಾಡಲಾಗುವುದು. ರಾತ್ರಿ 8 […]
BREAKING: ಚಿಕ್ಕಮಗಳೂರು ಎಸ್ಪಿ ವಿಕ್ರಂ ಆಮ್ಟೆ ವರ್ಗಾವಣೆ, ಬೆಂಗಳೂರು ಪೂರ್ವ ಡಿಸಿಪಿಯಾಗಿ ನೇಮಕ
ಬೆಂಗಳೂರು: ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ಅಧೀಕ್ಷಕ ವಿಕ್ರಂ ಆಮ್ಟೆ ಅವರನ್ನು ವರ್ಗಾವಣೆ ಮಾಡಲಾಗಿದೆ. ಬೆಂಗಳೂರು ಪೂರ್ವ ವಿಭಾಗದ ಡಿಸಿಪಿಯಾಗಿ ವಿಕ್ರಂ ಆಂಟಿ ಅವರನ್ನು ವರ್ಗಾವಣೆ ಮಾಡಲಾಗಿದೆ. ಚಿಕ್ಕಮಗಳೂರು ಎಸ್ಪಿ ಆಗಿ ಜಿತೇಂದ್ರ ಕುಮಾರ್ ದಯಾಮ ಅವರನ್ನು ನೇಮಕ ಮಾಡಲಾಗಿದೆ. ANF ಎಸ್ಪಿಯಾಗಿ ಜಿತೇಂದ್ರ ಕುಮಾರ್ ದಯಾಮ ಕಾರ್ಯ ನಿರ್ವಹಿಸುತ್ತಿದ್ದಾರೆ.
‘ನಿಮ್ಮ ಸುರಕ್ಷತೆ ನಮ್ಮ ಆದ್ಯತೆ’: ಹೊಸ ವರ್ಷ ಸಂಭ್ರಮಾಚರಣೆ ವೇಳೆ ಸಲಹೆ, ಸೂಚನೆ ಪಾಲಿಸಲು ಸಿಎಂ ಸಿದ್ದರಾಮಯ್ಯ ಮನವಿ
ಹೊಸ ವರ್ಷದ ಸಂಭ್ರಮಾಚರಣೆಯ ಸಂದರ್ಭದಲ್ಲಿ ನಿಮ್ಮ ಸುರಕ್ಷತೆಯನ್ನು ನಾವು ಆದ್ಯತೆಯಾಗಿಟ್ಟುಕೊಂಡಿದ್ದೇವೆ. ಹೀಗಾಗಿ ಹೆಚ್ಚುವರಿ ಗಸ್ತು ವ್ಯವಸ್ಥೆ, ತುರ್ತು ಪ್ರತಿಕ್ರಿಯಾ ಘಟಕ ಹಾಗೂ ಅಗತ್ಯ ಬೆಂಬಲ ವ್ಯವಸ್ಥೆಯೊಂದಿಗೆ ಬೆಂಗಳೂರು ನಗರ ಪೊಲೀಸರು ಸಕಲ ತಯಾರಿ ಮಾಡಿಕೊಂಡಿದ್ದಾರೆ. ಸಂಭ್ರಮಾಚರಣೆಯ ಸಂದರ್ಭದಲ್ಲಿ ಪೊಲೀಸರು ನೀಡುವ ಸಲಹೆ, ಸೂಚನೆಗಳನ್ನು ತಪ್ಪದೇ ಪಾಲಿಸಿ, ಸುಗಮ ಸಂಚಾರಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಬೆಂಗಳೂರು ನಗರ ಪೊಲೀಸರೊಂದಿಗೆ ಸಹಕರಿಸಿ ಎಂದು ತಮ್ಮೆಲ್ಲರಲ್ಲಿ ಮನವಿ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.
ಆಕ್ಲೆಂಡ್ ನ ಸ್ಕೈ ಟವರ್ ನಿಂದ ಅದ್ಭುತ ಪಟಾಕಿ ಸಿಡಿಸುವುದರೊಂದಿಗೆ ನ್ಯೂಜಿಲೆಂಡ್ 2026ರ ಹೊಸ ವರ್ಷವನ್ನು ಅದ್ಧೂರಿಯಾಗಿ ಸ್ವಾಗತಿಸಿದೆ. ಬುಧವಾರ ಆಕ್ಲೆಂಡ್ನಲ್ಲಿ ಅದ್ಭುತ ಪಟಾಕಿಗಳೊಂದಿಗೆ, ನ್ಯೂಜಿಲೆಂಡ್ 2025 ಕ್ಕೆ ವಿದಾಯ ಹೇಳಿ 2026 ಅನ್ನು ಸ್ವಾಗತಿಸಲಾಯಿತು. ನ್ಯೂಜಿಲೆಂಡ್ನ ಅತಿ ಎತ್ತರದ ಕಟ್ಟಡವಾದ ಸ್ಕೈ ಟವರ್, ನಗರದ ಮಧ್ಯಭಾಗದಲ್ಲಿ ಅದ್ಭುತ ಪಟಾಕಿ ಪ್ರದರ್ಶನವನ್ನು ಏರ್ಪಡಿಸಿತು, ಮಳೆಯಿಂದ ಆವೃತವಾದ ಆಚರಣೆಯೊಂದಿಗೆ ಹೊಸ ವರ್ಷವನ್ನು ಸ್ವಾಗತಿಸಿದ ಮೊದಲ ಪ್ರಮುಖ ಮಹಾನಗರವಾಗಿದೆ. 2025 ಕ್ಕೆ ವಿದಾಯ ಹೇಳುವ ಮೊದಲ ರಾಷ್ಟ್ರಗಳು ದಕ್ಷಿಣ ಪೆಸಿಫಿಕ್ನಲ್ಲಿರುವ […]
ಕೋಗಿಲು ನಿವಾಸಿಗಳ ಪೌರತ್ವದ ಬಗ್ಗೆ NIA ತನಿಖೆ
ಕೋಗಿಲು ಬಡಾವಣೆಯಲ್ಲಿ ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಶೆಡ್ಗಳನ್ನು ನಿರ್ಮಾಣ ಮಾಡಲಾಗಿತ್ತು. ಸುಮಾರು 167 ಶೆಡ್ಗಳನ್ನು ಡಿಸೆಂಬರ್ 20ರಂದು ತೆರವುಗೊಳಿಸಲಾಗಿತ್ತು. ಈ ವಿಚಾರ ಈಗ ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ. ವಿರೋಧ ಪಕ್ಷದ ನಾಯಕ ಆರ್.ಅಶೋಕ, ಮಾಜಿ ಉಪಮುಖ್ಯಮಂತ್ರಿ ಡಾ. ಸಿ. ಎನ್. ಅಶ್ವತ್ಥ್ ನಾರಾಯಣ್, ರಾಜ್ಯ ಕಾರ್ಯದರ್ಶಿ ತಮ್ಮೇಶ್ ಗೌಡ, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್. ಹರೀಶ್ ಮುಂತಾದವರು ಇಂದು ಕೋಗಿಲು ಪ್ರದೇಶಕ್ಕೆ ಭೇಟಿ ನೀಡಿದರು. ಆರ್. ಅಶೋಕ್ ಮತ್ತು ವಿಧಾನ ಪರಿಷತ್ ವಿಪಕ್ಷ ನಾಯಕ […]
ಚಾಮರಾಜನಗರ: ಮತ್ತೊಂದು ಹುಲಿ ಸೆರೆ, ನಿಟ್ಟುಸಿರು ಬಿಟ್ಟ ಜನರು
ಚಾಮರಾಜನಗರ ತಾಲ್ಲೂಕಿನ ಕಲ್ಪುರ ಭಾಗದಲ್ಲಿ ಸಂಚಾರ ಮಾಡುತ್ತಿದ್ದ ಮತ್ತೊಂದು ಹುಲಿಯನ್ನು ಅರವಳಿಕೆ ಚುಚ್ಚುಮದ್ದು ನೀಡಿ ಸೆರೆ ಹಿಡಿಯಲಾಗಿದೆ. ಕಳೆದ 10 ದಿನಗಳಿಂದ ತಾಯಿ ಹುಲಿ ಹಾಗೂ 4 ಹುಲಿ ಮರಿಗಳ ಸೆರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಕೂಂಬಿಂಗ್ ಕಾರ್ಯಾಚರಣೆ ನಡೆಸಿದ್ದರು. 5 ಸಾಕಾನೆಗಳನ್ನು ಬಳಸಿಕೊಂಡು ಹುಲಿಯನ್ನು ಹೇಗಾದರೂ ಮಾಡಿ ಸೆರೆ ಹಿಡಿಯಬೇಕು ಎಂದು ಪಣ ತೊಟ್ಟಿದ್ದರು. ಚಾಮರಾಜನಗರ ತಾಲ್ಲೂಕಿನ ನಂಜೇದೇವನಪುರ, ಉಡಿಗಾಲ, ವೀರನಪುರ, ಕೆ.ಕೆ.ಹುಂಡಿ ಸೇರಿದಂತೆ ಏಳು ಗ್ರಾಮಗಳಲ್ಲಿ ಬಿಳಿಗಿರಿರಂಗನ ಬೆಟ್ಟ ಹುಲಿ ಸಂರಕ್ಷಿತಾರಣ್ಯದ ಅಧಿಕಾರಿಗಳು ಕಾರ್ಯಾಚರಣೆ […]
ಭಾರತೀಯ ಮಾರುಕಟ್ಟೆಯಲ್ಲಿ ಅದರಲ್ಲೂ ವಿಶೇಷವಾಗಿ 80 ಮತ್ತು 90ರ ದಶಕದಲ್ಲಿ ‘ವಿಮಲ್’ ಎಂಬ ಹೆಸರು ಮನೆಮಾತಾಗಿತ್ತು. ಟೆಲಿವಿಷನ್ ಜಾಹೀರಾತುಗಳಿಂದ ಹಿಡಿದು ಅಂತರಾಷ್ಟ್ರೀಯ ಕ್ರಿಕೆಟ್ ಮೈದಾನಗಳವರೆಗೆ ‘ಓನ್ಲಿ ವಿಮಲ್’ ಎಂಬ ಟ್ಯಾಗ್ ಲೈನ್ ಒಂದು ಸಂಚಲನವನ್ನೇ ಸೃಷ್ಟಿಸಿತ್ತು. ಆದರೆ ಈ ಐಕಾನಿಕ್ ಬ್ರ್ಯಾಂಡ್ ಆ ಹೆಸರನ್ನು ಪಡೆದಿದ್ದು ಯಾರಿಂದ ಮತ್ತು ಆ ವ್ಯಕ್ತಿ ಇಂದು ಏನು ಮಾಡುತ್ತಿದ್ದಾರೆ ಎಂಬ ಕುತೂಹಲಕಾರಿ ಮಾಹಿತಿ ಇಲ್ಲಿದೆ. ಧೀರೂಭಾಯಿ ಅಂಬಾನಿ ಮತ್ತು ವಿಮಲ್ ಬ್ರ್ಯಾಂಡ್ ಉದಯ ಧೀರೂಭಾಯಿ ಅಂಬಾನಿ ಅವರು 1958ರಲ್ಲಿ ವಿದೇಶದಿಂದ […]
ಆಪರೇಷನ್ ಬಳಿಕ ಬದಲಾಯ್ತು ಹುಡುಗನ ಭಾಷೆ ಅಚ್ಚರಿಗೊಳಿಸುತ್ತೆ ಹೆತ್ತವರನ್ನೇ ಗುರುತಿಸಲಾಗದ ಈ ವಿಲಕ್ಷಣ ಸ್ಥಿತಿ !
ನೆದರ್ಲೆಂಡ್ಸ್ನಲ್ಲಿ ನಡೆದ ಅಚ್ಚರಿಯ ಘಟನೆಯೊಂದು ಈಗ ವೈದ್ಯಕೀಯ ಲೋಕದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಸಾಮಾನ್ಯ ಮಂಡಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ 17 ವರ್ಷದ ಬಾಲಕನೊಬ್ಬ ಆಪರೇಷನ್ ಥಿಯೇಟರ್ನಿಂದ ಹೊರಬಂದ ನಂತರ ತನ್ನ ಮಾತೃಭಾಷೆಯನ್ನೇ ಮರೆತು ಕೇವಲ ವಿದೇಶಿ ಭಾಷೆಯಲ್ಲಿ ಮಾತನಾಡಲಾರಂಭಿಸಿದ ವಿಲಕ್ಷಣ ಪ್ರಕರಣವೊಂದು ವರದಿಯಾಗಿದೆ. ಮಾತೃಭಾಷೆ ಮರೆತು ಇಂಗ್ಲಿಷ್ನಲ್ಲಿ ಸಂಭಾಷಣೆ ಫುಟ್ಬಾಲ್ ಆಟದ ವೇಳೆ ಗಾಯಗೊಂಡಿದ್ದ ಈ ಬಾಲಕನನ್ನು ಶಸ್ತ್ರಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಪರೇಷನ್ ಯಶಸ್ವಿಯಾಗಿ ಮುಗಿದ ನಂತರ ಅರಿವಳಿಕೆ ಪ್ರಭಾವದಿಂದ ಹೊರಬಂದ ಬಾಲಕ ಎಲ್ಲರನ್ನೂ ಆಶ್ಚರ್ಯಚಕಿತಗೊಳಿಸಿದ. ನೆದರ್ಲೆಂಡ್ಸ್ನ ನಿವಾಸಿಯಾದ […]
ಸೂರ್ಯಕುಮಾರ್ ಯಾದವ್ ಮೆಸೇಜ್ ಮಾಡುತ್ತಿದ್ದರು! ಬಾಲಿವುಡ್ ನಟಿಯ ಸ್ಫೋಟಕ ಹೇಳಿಕೆಯಿಂದ ಕ್ರಿಕೆಟ್ ಲೋಕದಲ್ಲಿ ಸಂಚಲನ
ಭಾರತೀಯ ಕ್ರಿಕೆಟ್ ಮತ್ತು ಚಿತ್ರರಂಗದ ನಡುವಿನ ಸಂಬಂಧ ಹಳೆಯದು. ಆದರೆ ಆಗಾಗ್ಗೆ ಕೇಳಿಬರುವ ಕೆಲವು ಗಾಸಿಪ್ಗಳು ತೀವ್ರ ಚರ್ಚೆಗೆ ಕಾರಣವಾಗುತ್ತವೆ. ಇದೀಗ ಟೀಮ್ ಇಂಡಿಯಾದ ಟಿ20 ನಾಯಕ ಸೂರ್ಯಕುಮಾರ್ ಯಾದವ್ ಅವರ ಹೆಸರನ್ನು ಉಲ್ಲೇಖಿಸಿ ಬಾಲಿವುಡ್ ನಟಿ ಮತ್ತು ಮಾಡೆಲ್ ಒಬ್ಬರು ನೀಡಿರುವ ಹೇಳಿಕೆ ಕ್ರೀಡಾ ಮತ್ತು ಸಿನಿಮಾ ವಲಯದಲ್ಲಿ ದೊಡ್ಡ ಮಟ್ಟದ ಸಂಚಲನ ಸೃಷ್ಟಿಸಿದೆ. ಸೂರ್ಯಕುಮಾರ್ ಬಗ್ಗೆ ನಟಿ ಖುಷಿ ಮುಖರ್ಜಿ ಹೇಳಿದ್ದೇನು? ಖ್ಯಾತ ರಿಯಾಲಿಟಿ ಶೋ ಸ್ಪ್ಲಿಟ್ಸ್ವಿಲ್ಲಾ ಮೂಲಕ ಗುರುತಿಸಿಕೊಂಡಿರುವ ನಟಿ ಖುಷಿ ಮುಖರ್ಜಿ […]
ಶೋರೂಮ್ ಮುಂದೆ ಧಗಧಗನೆ ಉರಿದ ಇ-ರಿಕ್ಷಾ! ಸರ್ವಿಸ್ ನೀಡದ ಕಂಪನಿಗೆ ತನ್ನದೇ ಗಾಡಿ ಸುಟ್ಟು ಪಾಠ ಕಲಿಸಿದ ಮಾಲೀಕ
ಬಜಾಜ್ ಶೋರೂಮ್ ಒಂದರ ಮುಂದೆ ಯುವಕನೊಬ್ಬ ತನ್ನ ಸ್ವಂತ ಇ-ರಿಕ್ಷಾಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ನಾಟಕೀಯ ಘಟನೆ ರಾಜಸ್ಥಾನದ ಜೋಧ್ಪುರದಲ್ಲಿ ನಡೆದಿದೆ. ಪದೇ ಪದೇ ದೂರು ನೀಡಿದರೂ ಕಂಪನಿಯು ದೋಷಪೂರಿತ ವಾಹನವನ್ನು ಸರಿಪಡಿಸದ ಅಥವಾ ಬದಲಿಸಿಕೊಡದ ಹಿನ್ನೆಲೆಯಲ್ಲಿ ಈ ಆಕ್ರೋಶದ ಪ್ರತಿಭಟನೆ ನಡೆದಿದೆ. ಈ ಘಟನೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಏನಿದು ಘಟನೆ? ಮೋಹನ್ ಸೋಲಂಕಿ ಎಂಬುವವರು ಈ ಇ-ರಿಕ್ಷಾದ ಮಾಲೀಕರು. ಇವರು ಇ-ರಿಕ್ಷಾ ಖರೀದಿಸಿದ ದಿನದಿಂದಲೂ ಅದರ ಬ್ಯಾಟರಿಯಲ್ಲಿ […]
BREAKING : ‘ಕೋಗಿಲು ಲೇಔಟ್’ಒತ್ತುವರಿ ತೆರವು : ‘ಸತ್ಯಶೋಧನಾ ತಂಡ’ರಚಿಸಿ ಬಿ.ವೈ ವಿಜಯೇಂದ್ರ ಆದೇಶ.!
ಬೆಂಗಳೂರು : ಕೋಗಿಲು ಲೇಔಟ್ ಒತ್ತುವರಿ ತೆರವು ವಿಚಾರ ಸಂಬಂಧ ಸತ್ಯಶೋಧನಾ ತಂಡ ರಚಿಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಆದೇಶ ಹೊರಡಿಸಿದ್ದಾರೆ. ಬೆಂಗಳೂರು ಯಲಹಂಕದ ಕೋಗಿಲು ಲೇಔಟ್ ಬಳಿ 200 ಕ್ಕೂ ಅಧಿಕ ಮನೆಗಳನ್ನು ಕಾಂಗ್ರೆಸ್ ಸರ್ಕಾರ ನೆಲಸಮ ಮಾಡಿರುವ ಕುರಿತು ಅದರ ಹಿಂದಿರುವ ಸತ್ಯಾಸತ್ಯತೆಯನ್ನು ಬಯಲಿಗೆಳೆಯುವ ನಿಟ್ಟಿನಲ್ಲಿ ರಾಜ್ಯಾಧ್ಯಕ್ಷರಾದ ವಿಜಯೇಂದ್ರ ಯಡಿಯೂರಪ್ಪ ಅವರು ಸತ್ಯಶೋಧನಾ ತಂಡ ರಚಿಸಿ ಆದೇಶ ಹೊರಡಿಸಿದ್ದಾರೆ ಎಂದು ಬಿಜೆಪಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದೆ. ಏನಿದೆ ಆದೇಶದಲ್ಲಿ..?ಬೆಂಗಳೂರಿನ ಯಲಹಂಕದ ಕೋಗಿಲು […]
SHOCKING : ಮದ್ಯದ ನಶೆಯಲ್ಲಿ ತಾಯಿಗೆ ತಮಾಷೆ : ನೇಣು ಕುಣಿಕೆಗೆ ಸಿಲುಕಿ ಬೆಂಗಳೂರಲ್ಲಿ ಯುವಕ ದಾರುಣ ಸಾವು.!
ಬೆಂಗಳೂರು : ಮದ್ಯದ ನಶೆಯಲ್ಲಿ ತಾಯಿಗೆ ತಮಾಷೆ ಮಾಡಲು ಹೋಗಿ ನೇಣು ಕುಣಿಕೆಗೆ ಸಿಲುಕಿ ಬೆಂಗಳೂರಲ್ಲಿ ಯುವಕ ದಾರುಣವಾಗಿ ಮೃತಪಟ್ಟಂತಹ ಘಟನೆ ನಡೆದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ರೋಹಿತ್ ನಗರದಲ್ಲಿ ಈ ಘಟನೆ ನಡೆದಿದೆ. ಮೃತ ಯುವಕನನ್ನು ವಿಜಯ್ ಕುಮಾರ್ (28) ಎಂದು ಗುರುತಿಸಲಾಗಿದೆ. ಏನಿದು ಘಟನೆ ನಿನ್ನೆ ಸಂಜೆ ವಿಜಯ್ ಕುಮಾರ್ ಕಂಠಪೂರ್ತಿ ಕುಡಿದು ಮನೆಗೆ ಹೋಗಿದ್ದನು. ನಂತರ ತಾಯಿ ಬಳಿ ಖರ್ಚಿಗೆ ಹಣ ಕೇಳಿದ್ದಾನೆ. ಆಕೆ ಕೊಡಲ್ಲ ಎಂದಿದ್ದಾಳೆ. ಇಷ್ಟಕ್ಕೆ ವಿಜಯ್ ಕುಮಾರ್ […]
JOB ALERT : ‘ನಬಾರ್ಡ್’ನಲ್ಲಿ ಭರ್ಜರಿ ಉದ್ಯೋಗವಕಾಶ, ತಿಂಗಳಿಗೆ 70,000 ಸಂಬಳ |NABARD recruitment 2025
ದುನಿಯಾ ಡಿಜಿಟಲ್ ಡೆಸ್ಕ್ : ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ (ನಬಾರ್ಡ್) ತನ್ನ ಅಧಿಕೃತ ಪೋರ್ಟಲ್ nabard.org ನಲ್ಲಿ ಯುವ ವೃತ್ತಿಪರರ ನೇಮಕಾತಿ 2026 ಗಾಗಿ ಅಧಿಸೂಚನೆಯನ್ನು ಪ್ರಕಟಿಸಿದೆ. ಈ ನೇಮಕಾತಿ ಪ್ರಕ್ರಿಯೆಯ ಮೂಲಕ ನಬಾರ್ಡ್ 44 ಯುವ ವೃತ್ತಿಪರರನ್ನು ನೇಮಿಸಿಕೊಳ್ಳಲು ಯೋಜಿಸಿದೆ. ಈ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ನೀಡಲಾಗುತ್ತದೆ ಮತ್ತು ಆಯ್ದ ಅಭ್ಯರ್ಥಿಗಳಿಗೆ ಗ್ರಾಮೀಣಾಭಿವೃದ್ಧಿ ನೀತಿಗಳು, ಕಾರ್ಯಕ್ರಮ ಮೌಲ್ಯಮಾಪನ ಮತ್ತು ಕೃಷಿ ಮತ್ತು ಗ್ರಾಮೀಣ ಹಣಕಾಸುಗೆ ಸಂಬಂಧಿಸಿದ ಕಾರ್ಯತಂತ್ರದ ಯೋಜನೆಗಳಂತಹ ಕ್ಷೇತ್ರಗಳಲ್ಲಿ ಪ್ರಾಯೋಗಿಕ […]
ನನ್ನ ವಿರುದ್ಧ 17 ಕೇಸ್ ಇದೆ…ಇನ್ನೂ ಹಾಕೋಕೆ ಹೇಳಿ, ಆದ್ರೆ ದಾರಿ ತಪ್ಪಿಸಬೇಡಿ : ಪ್ರತಾಪ್ ಸಿಂಹ ತಿರುಗೇಟು.!
ಬೆಂಗಳೂರು : ನನ್ನ ವಿರುದ್ಧ 17 ಕೇಸ್ ಇದೆ, ಇನ್ನೂ ಹಾಕೋಕೆ ಹೇಳಿ ಆದ್ರೆ ದಾರಿ ತಪ್ಪಿಸಬೇಡಿ ಎಂದು ಪ್ರತಾಪ್ ಸಿಂಹ ತಿರುಗೇಟು ನೀಡಿದ್ದಾರೆ. ದ್ವೇಷ ಭಾಷಣ ಪ್ರತಿಬಂಧಕ ಕಾಯಿದೆ ಕುರಿತಾದ ಪೋಸ್ಟ್ ಒಂದಕ್ಕೆ ಪ್ರತಾಪ್ ಸಿಂಹ ತಿರುಗೇಟು ನೀಡಿದ್ದಾರೆ. ‘ನಮ್ಮ ಸಿದ್ದರಾಮಯ್ಯ ‘ ಹೆಸರಿನ ಫೇಸ್ ಬುಕ್ ಪೋಸ್ಟ್ ಗೆ ಅವರು ತಿರುಗೇಟು ನೀಡಿದ್ದಾರೆ. ”ಎರಡು ಮತ್ತು ಮೂರು ವರ್ಷಗಳ ಹಳೆ ಹೇಳಿಕೆಗಳನ್ನು Cut and Paste ಮಾಡಿ, ದ್ವೇಷ ಭಾಷಣ ಪ್ರತಿಬಂಧಕ ಕಾಯಿದೆಗೆ ಪ್ರತಾಪ್ […]
ಹೊಸ ವರ್ಷಾಚರಣೆ: ಮೈಸೂರಿನಲ್ಲಿ ಅಬಕಾರಿ ಪೊಲೀಸರು ಅಲರ್ಟ್
ಹೊಸ ವರ್ಷದ ಸಂಭ್ರಮದ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಅಕ್ರಮ ಮದ್ಯ ಹಾಗೂ ಮಾದಕ ವಸ್ತುಗಳ ಮಾರಾಟ ತಡೆಯಲು ಅಬಕಾರಿ ಇಲಾಖೆ ಸಂಪೂರ್ಣ ಅಲರ್ಟ್ ಆಗಿದೆ. ಬೆಳ್ಳಂಬೆಳಗ್ಗೆಯೇ ಅಬಕಾರಿ ಪೊಲೀಸರು ಅಕ್ರಮ ಮದ್ಯ, ಡ್ರಗ್ಸ್ ಮಾರಾಟ ಜಾಲದ ಮೇಲೆ ತೀವ್ರ ಶೋಧಕಾರ್ಯ ಆರಂಭಿಸಿದ್ದಾರೆ. ಇತ್ತೀಚೆಗೆ ಮೈಸೂರು ಹಾಗೂ ಬೆಂಗಳೂರು ನಗರಗಳಲ್ಲಿ ಡ್ರಗ್ಸ್ ಫ್ಯಾಕ್ಟರಿಗಳು ತಲೆ ಎತ್ತಿರುವ ಹಿನ್ನೆಲೆಯಲ್ಲಿ ಅಬಕಾರಿ ಇಲಾಖೆ ಹೆಚ್ಚುವರಿ ಎಚ್ಚರಿಕೆ ವಹಿಸಿದೆ. ಎಣ್ಣೆ ಹೊಡೆದು ತೂರಾಡುವವರ ಚಲನವಲನಗಳ ಮೇಲೆ ಪೊಲೀಸರು ಕಣ್ಣಿಟ್ಟಿದ್ದು, ಮದ್ಯದ ಅಂಗಡಿಗಳ […]
GOOD NEWS : ಮುಷ್ಕರದ ನಡುವೆ ಸ್ವಿಗ್ಗಿ, ಜೊಮಾಟೊ ವಿತರಣಾ ನೌಕರರಿಗೆ ಗುಡ್ ನ್ಯೂಸ್ : ಪ್ರೋತ್ಸಾಹ ಧನ ಹೆಚ್ಚಳ.!
ದೇಶಾದ್ಯಂತ ನಡೆಯುತ್ತಿರುವ ಗಿಗ್ ಮತ್ತು ಪ್ಲಾಟ್ಫಾರ್ಮ್ ಕಾರ್ಮಿಕರ ಮುಷ್ಕರದ ನಡುವೆ ಕಾರ್ಯಾಚರಣೆಯನ್ನು ಸ್ಥಿರಗೊಳಿಸಲು ಸ್ವಿಗ್ಗಿ ಮತ್ತು ಜೊಮಾಟೊ ಪೀಕ್ ಅವರ್ಗಳು ಮತ್ತು ವರ್ಷಾಂತ್ಯದ ದಿನಗಳಲ್ಲಿ ವಿತರಣಾ ಪ್ರೋತ್ಸಾಹ ಧನ ಹೆಚ್ಚಿಸಿವೆ ಎಂದು ವರದಿ ತಿಳಿಸಿದೆ. ಆಹಾರ ವಿತರಣೆ ಮತ್ತು ಆನ್ಲೈನ್ ಆರ್ಡರ್ಗಳಿಗೆ ಅತ್ಯಂತ ಜನನಿಬಿಡ ದಿನಗಳಲ್ಲಿ ಒಂದಾದ ಹೊಸ ವರ್ಷದ ಮುನ್ನಾದಿನದ ಮೊದಲು ಪ್ರೋತ್ಸಾಹಕಗಳ ಹೆಚ್ಚಳವಾಗಿದೆ, ಏಕೆಂದರೆ ಕಾರ್ಮಿಕ ಸಂಘಗಳು ಹೊಸ ಪ್ರತಿಭಟನೆಗಳಿಗೆ ಕರೆ ನೀಡಿವೆ. ರಜೆಯ ಅವಧಿಯಲ್ಲಿ ಆರ್ಡರ್ಗಳಲ್ಲಿ ತೀವ್ರ ಏರಿಕೆಗೆ ವೇದಿಕೆಗಳು ಸಿದ್ಧವಾಗುತ್ತಿದ್ದರೂ, ವೇತನ, […]
2026ರಲ್ಲಿ ಈ ನಾಲ್ಕು ರಾಶಿಯವರ ಅದೃಷ್ಟವೇ ಬದಲಾಗಲಿದೆ: ಅಂದುಕೊಂಡ ಕನಸುಗಳೆಲ್ಲಾ ನನಸಾಗುವ ಕಾಲ ಸಮೀಪಿಸಿದೆ!
ಹೊಸ ವರ್ಷ ಅಂದಮೇಲೆ ಪ್ರತಿಯೊಬ್ಬರಿಗೂ ತಮ್ಮ ಭವಿಷ್ಯದ ಬಗ್ಗೆ ನೂರಾರು ಕನಸುಗಳು ಮತ್ತು ನಿರೀಕ್ಷೆಗಳಿರುತ್ತವೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮುಂಬರುವ 2026ನೇ ವರ್ಷವು ಕೆಲವು ರಾಶಿಯವರಿಗೆ ಅತ್ಯಂತ ಫಲಪ್ರದವಾಗಲಿದ್ದು, ಅವರ ದೀರ್ಘಕಾಲದ ಆಸೆಗಳು ಈಡೇರಲಿವೆ. ಸವಾಲುಗಳ ನಡುವೆಯೂ ಈ ರಾಶಿಯವರು ತಮ್ಮ ಗುರಿಯತ್ತ ಗಮನಹರಿಸಿ ಯಶಸ್ಸಿನ ಶಿಖರ ಏರಲಿದ್ದಾರೆ ಎಂದು ಭವಿಷ್ಯವಾಣಿ ತಿಳಿಸಿದೆ. ಆ ಅದೃಷ್ಟವಂತ ರಾಶಿಗಳು ಯಾವುವು ಎಂಬ ಮಾಹಿತಿ ಇಲ್ಲಿದೆ. ಮೇಷ ರಾಶಿ: ಉತ್ಸಾಹವೇ ಯಶಸ್ಸಿನ ಗುಟ್ಟು ಮೇಷ ರಾಶಿಯವರು ತಾವು ಅಂದುಕೊಂಡ ಕೆಲಸವನ್ನು […]
Shocking News: ನಂಜನಗೂಡು ಪೊಲೀಸ್ ಠಾಣೆ ಪಕ್ಕದಲ್ಲೇ ಸರಣಿ ಕಳ್ಳತನ
ನಂಜನಗೂಡು ಪಟ್ಟಣದಲ್ಲಿ ಸರಣಿ ಕಳ್ಳತನ ಪ್ರಕರಣಗಳು ಬೆಳಕಿಗೆ ಬಂದಿದ್ದು, ನಗರವಾಸಿಗಳಲ್ಲಿ ಆತಂಕ ಮೂಡಿಸಿದೆ. ಈ ಕಳ್ಳತನಗಳು ಪೊಲೀಸ್ ಠಾಣೆ ಸಮೀಪದಲ್ಲೇ ಆಗಿದ್ದು, ಜನರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಪ ಪಟ್ಟಣದ ಆರ್.ಪಿ. ರಸ್ತೆಯಲ್ಲಿರುವ ಸುಮಾರು 14 ರಿಂದ 16 ಅಂಗಡಿಗಳಲ್ಲಿ ಕಳ್ಳತನ ಹಾಗೂ ಕಳ್ಳತನಕ್ಕೆ ಯತ್ನ ನಡೆದಿರುವ ಘಟನೆ ಕಳೆದ ತಡರಾತ್ರಿ ಸಂಭವಿಸಿದೆ. ಪಟ್ಟಣ ಪೊಲೀಸ್ ಠಾಣೆಯ ಪಕ್ಕದಲ್ಲಿರುವ ಬಾಯ್ಸ್ ಮಿಡಲ್ ಶಾಲೆಯ ಆವರಣದಲ್ಲಿನ ಹಾಲಿನ ಡೈರಿಯಲ್ಲಿ ಸುಮಾರು 2 ಸಾವಿರ ರೂ. ನಗದು ಕಳ್ಳತನವಾಗಿದ್ದು, ಎದುರಿನ ಕೋಳಿ […]
ಬಸ್ಸಿನಲ್ಲಿ ಯುವತಿಗೆ ಅಸಭ್ಯವಾಗಿ ಸ್ಪರ್ಶಿಸಿದ ವೃದ್ಧ: ರೊಚ್ಚಿಗೆದ್ದ ಮಹಿಳೆಯಿಂದ ಸಾರ್ವಜನಿಕವಾಗಿ ಚಪ್ಪಲಿ ಸೇವೆ!
ಸಾರ್ವಜನಿಕ ಸಾರಿಗೆಯಲ್ಲಿ ಮಹಿಳೆಯರ ಸುರಕ್ಷತೆ ಎಂಬುದು ಇಂದಿಗೂ ದೊಡ್ಡ ಪ್ರಶ್ನೆಯಾಗಿಯೇ ಉಳಿದಿದೆ. ಇದಕ್ಕೆ ಪುಷ್ಟಿ ನೀಡುವಂತೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಯುವತಿಯೊಬ್ಬಳಿಗೆ ವೃದ್ಧನೊಬ್ಬ ಅಸಭ್ಯವಾಗಿ ವರ್ತಿಸಿದ ಘಟನೆ ನಡೆದಿದ್ದು, ಆತನಿಗೆ ಯುವತಿ ಪಾಠ ಕಲಿಸಿದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ. ಸಹನೆಯ ಕಟ್ಟೆ ಒಡೆದಾಗ ನಡೆದಿದ್ದೇನು? ವೈರಲ್ ಆಗಿರುವ ವಿಡಿಯೋದಲ್ಲಿ ಬಸ್ಸಿನ ಸೀಟಿನಲ್ಲಿ ಕುಳಿತಿದ್ದ ವೃದ್ಧನೊಬ್ಬ ತನ್ನ ಪಕ್ಕದಲ್ಲೇ ಕುಳಿತಿದ್ದ ಯುವತಿಗೆ ಮೊಣಕೈ ಮೂಲಕ ಅಸಭ್ಯವಾಗಿ ಸ್ಪರ್ಶಿಸಲು ಯತ್ನಿಸುತ್ತಿರುವುದು ಕಂಡುಬಂದಿದೆ. ಆರಂಭದಲ್ಲಿ ಯುವತಿ ಇದನ್ನು […]
‘ಡಾರ್ಕ್ ಮೋಡ್’ನಿಮ್ಮ ಮೊಬೈಲ್ ನಲ್ಲಿ ಬ್ಯಾಟರಿ ಬಾಳಿಕೆ ಹೆಚ್ಚಿಸುತ್ತದೆಯೇ ? ಅಚ್ಚರಿಯ ಕಾರಣಗಳು ಇಲ್ಲಿವೆ !
ದುನಿಯಾ ಡಿಜಿಟಲ್ ಡೆಸ್ಕ್ : ಇತ್ತೀಚಿನ ದಿನಗಳಲ್ಲಿ ಬಹುತೇಕ ಎಲ್ಲಾ ಸ್ಮಾರ್ಟ್ಫೋನ್ಗಳು ಡಾರ್ಕ್ ಮೋಡ್ನೊಂದಿಗೆ ಬರುತ್ತವೆ. ಅನೇಕ ಬಳಕೆದಾರರು ಇದನ್ನು ಆನ್ನಲ್ಲಿಯೇ ಇಡುತ್ತಾರೆ. ಇದು ಬ್ಯಾಟರಿಯನ್ನು ಉಳಿಸುತ್ತದೆ ಮತ್ತು ಕಣ್ಣಿನ ಒತ್ತಡವನ್ನು ಕಡಿಮೆ ಮಾಡುತ್ತದೆ ಎಂದು ಅವರು ನಂಬುತ್ತಾರೆ. ಮೊದಲ ನೋಟದಲ್ಲಿ, ಡಾರ್ಕ್ ಸ್ಕ್ರೀನ್ ಕಣ್ಣುಗಳಿಗೆ ಹಿತಕರವಾಗಿ ತೋರುತ್ತದೆ. ಏಕೆಂದರೆ ಅದು ಪ್ರಕಾಶಮಾನವಾದ ಬೆಳಕಿಗೆ ಹಾನಿ ಮಾಡುವುದಿಲ್ಲ. ಅದಕ್ಕಾಗಿಯೇ ಜನರು ಕಡಿಮೆ ಹೊಳಪು ಬ್ಯಾಟರಿ ಬಳಕೆಯನ್ನು ಕಡಿಮೆ ಮಾಡುತ್ತದೆ ಎಂದು ಭಾವಿಸುತ್ತಾರೆ. ಆದರೆ ವಾಸ್ತವವು ವಿಭಿನ್ನವಾಗಿದೆ.ಮೇಕ್ ಯೂಸ್ […]
ಆನೆಗೂ ಬಂತು ಹೇರ್ ಸ್ಟೈಲ್ ಕ್ರೇಜ್: ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಯಿತು ಗಜರಾಜನ ‘ಪರ್ಫೆಕ್ಟ್ ಹೇರ್ ಫ್ಲಿಪ್’ವಿಡಿಯೋ!
ವನ್ಯಜೀವಿಗಳ ಲೋಕದಲ್ಲಿ ಆಗಾಗ್ಗೆ ನಗು ತರಿಸುವಂತಹ ಘಟನೆಗಳು ನಡೆಯುತ್ತಿರುತ್ತವೆ. ಇದೀಗ ಆನೆಯೊಂದು ತನ್ನದೇ ಸ್ಟೈಲ್ನಲ್ಲಿ ಮಾಡಿದ ‘ಹೇರ್ ಫ್ಲಿಪ್’ ವಿಡಿಯೋ ಅಂತರಾಷ್ಟ್ರೀಯ ಮಟ್ಟದಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರನ್ನು ಅಚ್ಚರಿಗೊಳಿಸಿದೆ. ಆನೆಯ ಈ ವಿಚಿತ್ರ ಮತ್ತು ತಮಾಷೆಯ ವರ್ತನೆ ನೋಡಿ ಜನರು ಫಿದಾ ಆಗಿದ್ದಾರೆ. ಹುಲ್ಲಿನ ಕಟ್ಟು ತಲೆಯ ಮೇಲೆ ಬಿದ್ದಾಗ… ವೈರಲ್ ಆಗಿರುವ ಪುಟ್ಟ ವಿಡಿಯೋ ಕ್ಲಿಪ್ನಲ್ಲಿ ಆನೆಯೊಂದು ತನಗಿಷ್ಟ ಬಂದಂತೆ ಆಟವಾಡುತ್ತಿರುತ್ತದೆ. ಈ ವೇಳೆ ಅದು ಒಂದಿಷ್ಟು ಹುಲ್ಲಿನ ಕಟ್ಟುಗಳನ್ನು ತನ್ನ ಸೊಂಡಿಲಿನಿಂದ ಮೇಲೆಕ್ಕೆ ಎಸೆಯುತ್ತದೆ. […]
“ಮಿತವಾಗಿ ಮದ್ಯಪಾನ ಮಾಡಿದರೆ ಆರೋಗ್ಯಕ್ಕೆ ಏನೂ ಆಗುವುದಿಲ್ಲ” ಎಂಬುದು ಅನೇಕರ ನಂಬಿಕೆ. ಆದರೆ ಗುಜರಾತ್ನ ವಡೋದರಾದ ಖ್ಯಾತ ರೇಡಿಯಾಲಜಿಸ್ಟ್ ಡಾ. ಹರ್ಷ್ ವ್ಯಾಸ್ ಅವರು ಹಂಚಿಕೊಂಡಿರುವ ಒಂದು ವೈದ್ಯಕೀಯ ವರದಿ ಈ ನಂಬಿಕೆಯನ್ನು ಅಕ್ಷರಶಃ ಹುಸಿಗೊಳಿಸಿದೆ. ಕೇವಲ 28 ವರ್ಷದ ಯುವಕನೊಬ್ಬ ಅನಿರೀಕ್ಷಿತವಾಗಿ ಲಿವರ್ ವೈಫಲ್ಯಕ್ಕೆ ಒಳಗಾಗಿರುವ ಘಟನೆ ಈಗ ವೈದ್ಯಕೀಯ ಲೋಕದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಬೆಚ್ಚಿಬೀಳಿಸುವ ಅಲ್ಟ್ರಾಸೌಂಡ್ ರಿಪೋರ್ಟ್ ಡಾ. ಹರ್ಷ್ ವ್ಯಾಸ್ ಇತ್ತೀಚೆಗೆ ತಮ್ಮ ಇನ್ಸ್ಟಾಗ್ರಾಮ್ ಪುಟದಲ್ಲಿ ಯುವಕನೊಬ್ಬನ ಲಿವರ್ ಸ್ಕ್ಯಾನಿಂಗ್ ಫೋಟೋವನ್ನು […]
ಭಾರತದಲ್ಲೂ ಇದೆ ಇಂತಹದೊಂದು ವಿಸ್ಮಯ ನಗರ: ಇಲ್ಲಿ ಒಂದೇ ಒಂದು ಟ್ರಾಫಿಕ್ ಸಿಗ್ನಲ್ ಇಲ್ಲದಿದ್ರೂ ಜಾಮ್ ಆಗಲ್ಲ ರಸ್ತೆ!
ಭಾರತದ ಯಾವುದೇ ನಗರಕ್ಕೆ ಹೋದರೂ ವಾಹನ ಸವಾರರನ್ನು ಕಾಡುವ ಮೊದಲ ಸಮಸ್ಯೆ ಎಂದರೆ ಅದು ಟ್ರಾಫಿಕ್ ಸಿಗ್ನಲ್ಗಳು. ಸಿಗ್ನಲ್ ಬಿದ್ದಾಗ ನಿಮಿಷಗಟ್ಟಲೆ ಕಾಯುವುದು, ಹಾರ್ನ್ ಸದ್ದು ಹಾಗೂ ಟ್ರಾಫಿಕ್ ಜಾಮ್ ಕಿರಿಕಿರಿ ಸಾಮಾನ್ಯ. ಆದರೆ, ಭಾರತದಲ್ಲೇ ಒಂದು ನಗರವಿದೆ, ಅಲ್ಲಿ ನೀವು ಎಷ್ಟೇ ದೂರ ಪ್ರಯಾಣಿಸಿದರೂ ಒಂದೇ ಒಂದು ಟ್ರಾಫಿಕ್ ಸಿಗ್ನಲ್ ನಿಮಗೆ ಎದುರಾಗುವುದಿಲ್ಲ! ಹೌದು, ರಾಜಸ್ಥಾನದ ಕೋಟಾ ನಗರ ಇಂದು ದೇಶದ ಮೊದಲ ‘ಸಿಗ್ನಲ್ ಮುಕ್ತ’ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಶಿಕ್ಷಣದ ಕಾಶಿಯಲ್ಲಿ ಟ್ರಾಫಿಕ್ […]
2026ರ ಹೊಸ ವರ್ಷದ ಸ್ವಾಗತಕ್ಕೆ ದೇಶಾದ್ಯಂತ ಸಿದ್ಧತೆಗಳು ನಡೆಯುತ್ತಿವೆ. ಈ ಪಾರ್ಟಿ ಮೂಡ್ ನಡುವೆಯೇ ಸಾಮಾಜಿಕ ಜಾಲತಾಣಗಳಲ್ಲಿ ಗಂಡಂದಿರ ನಿದ್ದೆಗೆಡಿಸುವ ಸುದ್ದಿಯೊಂದು ವೇಗವಾಗಿ ಹರಡುತ್ತಿದೆ. “ಪತ್ನಿಯ ಒಪ್ಪಿಗೆಯಿಲ್ಲದೆ ಮದ್ಯಪಾನ ಮಾಡಿದರೆ ಪತಿಗೆ ಮೂರು ವರ್ಷ ಜೈಲು ಶಿಕ್ಷೆಯಾಗಬಹುದು” ಎಂಬ ವರದಿಗಳು ಗಲಿಬಿಲಿ ಸೃಷ್ಟಿಸಿವೆ. ಆದರೆ, ಈ ಕಾನೂನು ಕೇವಲ ಕುಡಿಯುವುದಕ್ಕೆ ಮಾತ್ರ ಸಂಬಂಧಿಸಿದ್ದೇ ಅಥವಾ ಇದರ ಹಿಂದೆ ಬೇರೆ ಅರ್ಥವಿದೆಯೇ? ಇಲ್ಲಿದೆ ಪೂರ್ಣ ಮಾಹಿತಿ. ಏನಿದು ಹೊಸ ಕಾನೂನು? ಕಳೆದ ಜುಲೈ 1, 2024 ರಿಂದ ಜಾರಿಗೆ […]
ಅಂತ್ಯಕ್ರಿಯೆಯ ವೇಳೆ ಚಿತೆಯ ಸುತ್ತ ಮಡಿಕೆ ಹೊತ್ತು ತಿರುಗುವುದೇಕೆ? ಮಡಿಕೆಯನ್ನು ಒಡೆಯುವ ಹಿಂದಿನ ಅಸಲಿ ಕಾರಣವೇನು?
ಹಿಂದೂ ಸಂಪ್ರದಾಯದಲ್ಲಿ ಜನನದಿಂದ ಮರಣದವರೆಗೆ ಹದಿನಾರು ಸಂಸ್ಕಾರಗಳಿವೆ. ಅದರಲ್ಲಿ ಅಂತಿಮವಾದುದು ‘ಅಂತ್ಯಸಂಸ್ಕಾರ’. ಸ್ಮಶಾನದಲ್ಲಿ ಚಿತೆಗೆ ಬೆಂಕಿ ಇಡುವ ಮೊದಲು ನಡೆಸುವ ‘ಮಡಿಕೆ ಒಡೆಯುವ’ ವಿಧಿಯನ್ನು ನಾವೆಲ್ಲರೂ ನೋಡಿರುತ್ತೇವೆ. ಮೇಲ್ನೋಟಕ್ಕೆ ಇದು ಕೇವಲ ಒಂದು ಆಚರಣೆಯಂತೆ ಕಂಡರೂ, ಇದರ ಹಿಂದೆ ಜೀವನದ ಸತ್ಯ ಮತ್ತು ಆತ್ಮದ ಪಯಣದ ಕುರಿತಾದ ಆಳವಾದ ಅರ್ಥಗಳಿವೆ. ದೇಹ ಮತ್ತು ಆತ್ಮದ ಸಂಕೇತ ಹಿಂದೂ ತತ್ವಶಾಸ್ತ್ರದ ಪ್ರಕಾರ, ಮನುಷ್ಯನ ದೇಹವು ಮಣ್ಣಿನ ಮಡಿಕೆಯಂತೆ. ಮಡಿಕೆಯನ್ನು ಮಣ್ಣಿನಿಂದ ಮಾಡಿ ಹೇಗೆ ಮಣ್ಣಿಗೇ ಸೇರಿಸಲಾಗುತ್ತದೆಯೋ, ಹಾಗೆಯೇ ಪಂಚಭೂತಗಳಿಂದಾದ […]
BIG ALERT : ‘ಪ್ಯಾನ್- ಆಧಾರ್ ಕಾರ್ಡ್’ಲಿಂಕ್’ಗೆ ಇನ್ನು ಕೆಲವೇ ಗಂಟೆಗಳು ಬಾಕಿ.. ಇಲ್ಲದಿದ್ದರೆ 1,000 ರೂ.ದಂಡ..!
ಡಿಸೆಂಬರ್ 31 ರ ಗಡುವಿಗೆ ಕೆಲವೇ ಗಂಟೆಗಳು ಬಾಕಿ ಇರುವಾಗ, ದೇಶಾದ್ಯಂತ ಲಕ್ಷಾಂತರ ಭಾರತೀಯ ತೆರಿಗೆದಾರರು ತಮ್ಮ ಪ್ಯಾನ್ (PAN) ಅನ್ನು ಆಧಾರ್ನೊಂದಿಗೆ ಲಿಂಕ್ ಮಾಡಲು ಧಾವಿಸುತ್ತಿದ್ದಾರೆ. ಹಣಕಾಸು ಸಚಿವಾಲಯದ ಅಡಿಯಲ್ಲಿ ಬರುವ ಕೇಂದ್ರೀಯ ನೇರ ತೆರಿಗೆ ಮಂಡಳಿ (CBDT) ಅರ್ಹ ನಾಗರಿಕರಿಗೆ ಈ ಪ್ರಕ್ರಿಯೆಯನ್ನು ಕಡ್ಡಾಯಗೊಳಿಸಿದೆ. ತಮ್ಮ ಪ್ಯಾನ್-ಆಧಾರ್ ಅನ್ನು ಲಿಂಕ್ ಮಾಡದವರು ಇಂದು ಮಧ್ಯರಾತ್ರಿ ಮುಗಿದ ನಂತರ, ಅಂದರೆ ಜನವರಿ 1, 2026 ರಿಂದ ಗಂಭೀರ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ. ದೇಶಾದ್ಯಂತದ […]
Good News: ವಂದೇ ಭಾರತ್ ರೈಲು, ಮಂಗಳೂರಿಗೆ ಗುಡ್ನ್ಯೂಸ್ ಕೊಟ್ಟ ಸಚಿವ
ಭಾರತೀಯ ರೈಲ್ವೆ ಸಕಲೇಶಪುರ-ಸುಬ್ರಹ್ಮಣ್ಯ ಘಾಟ್ ವಿಭಾಗದ ವಿದ್ಯುದೀಕರಣ ಕಾಮಗಾರಿಯನ್ನು ಪೂರ್ಣಗೊಳಿಸುವ ಮೂಲಕ ಐತಿಹಾಸಿಕ ಮೈಲಿಗಲ್ಲು ಸ್ಥಾಪಿಸಿದೆ. ಇದರಿಂದಾಗಿ ರಾಜಧಾನಿ ಬೆಂಗಳೂರು ಮತ್ತು ಕರಾವಳಿ ಭಾಗದ ಸಂಪರ್ಕ ಇನ್ನಷ್ಟು ಸುಲಭವಾಗಲಿದೆ. ಕರಾವಳಿಗೆ ವಂದೇ ಭಾರತ್ ರೈಲು ಓಡಿಸಲು ಸಹ ಅನುಕೂಲವಾಗಲಿದೆ. ಈ ಕುರಿತು ಮಾತನಾಡಿದ ಕೇಂದ್ರ ರೈಲ್ವೆ, ಮಾಹಿತಿ ಮತ್ತು ಪ್ರಸಾರ ಹಾಗೂ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್, “ಈಗ ನಾವು ಈ ಮಾರ್ಗದ ಮೂಲಕ ಮಂಗಳೂರಿಗೆ ವಂದೇ ಭಾರತ್ ರೈಲನ್ನು ಓಡಿಸಲು ಸಾಧ್ಯವಾಗುತ್ತದೆ” […]
BIG NEWS : ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯಲ್ಲಿ ‘ಮೊಬೈಲ್ ಆಧಾರಿತ ಹಾಜರಾತಿ’ಕಡ್ಡಾಯ
ಬೆಂಗಳೂರು : ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯು ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಮೊಬೈಲ್ ಆಧಾರಿತ ಹಾಜರಾತಿಯನ್ನು ಕಡ್ಡಾಯವಾಗಿ ಜಾರಿಗೊಳಿಸಿ ಆದೇಶ ಹೊರಡಿಸಿದೆ. ಇಲಾಖೆಯು ಈಗಾಗಲೇ ಚಾಲ್ತಿಯಲ್ಲಿದ್ದ ಬಯೋಮೆಟ್ರಿಕ್ ಹಾಜರಾತಿಯನ್ನು ರದ್ದುಗೊಳಿಸಿ, ಮೊಬೈಲ್ ಆಧಾರಿತ ಹಾಜರಾತಿಯ (ಕರ್ನಾಟಕ ಹಾಜರಾತಿ ನಿರ್ವಹಣಾ ವ್ಯವಸ್ಥೆ) ಮೂಲಕ ಕಡ್ಡಾಯವಾಗಿ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹಾಜರಾತಿ ನೀಡಬೇಕೆಂದು ಎಂದು ಸೂಚಿಸಿದೆ. ಈ ಹೊಸ ಹಾಜರಾತಿ ವ್ಯವಸ್ಥೆಯನ್ನು ಅನುಸರಿಸದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ವೇತನವನ್ನು ಕಡಿತಗೊಳಿಸುವುದರ ಜೊತೆಗೆ ನಡತೆ ನಿಯಮದ ಉಲ್ಲಂಘನೆ […]
BREAKING : ಚಿತ್ರದುರ್ಗ ಬಸ್ ದುರಂತ : ಮತ್ತೋರ್ವ ಗಾಯಾಳು ಸಾವು, ಸಾವಿನ ಸಂಖ್ಯೆ 8 ಕ್ಕೇರಿಕೆ.!
ಚಿತ್ರದುರ್ಗ : ಚಿತ್ರದುರ್ಗ ಬಸ್ ದುರಂತದಲ್ಲಿ ಗಾಯಗೊಂಡಿದ್ದ ಮತ್ತೋರ್ವ ಗಾಯಾಳು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದು, ಸಾವಿನ ಸಂಖ್ಯೆ 8 ಕ್ಕೇರಿಕೆಯಾಗಿದೆ. ಮೃತರನ್ನು ಮಂಜುನಾಥ್ ಎಂದು ಗುರುತಿಸಲಾಗಿದೆ. ಚಿತ್ರದುರ್ಗದಲ್ಲಿ ನಡೆದ ಬಸ್ ಅಪಘಾತದಲ್ಲಿ ಶೇ.40 ರಷ್ಟು ಸುಟ್ಟು ಗಾಯಗೊಂಡಿದ್ದ ಮಂಜುನಾಥ್ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದರು. ಬೆಂಕಿಯಲ್ಲಿ ಶ್ವಾಸಕೋಶ ಸುಟ್ಟು ಹೋಗಿದ್ದರಿಂದ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಸಮೀಪದ ಗೊರ್ಲತ್ತು ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಮತ್ತು ಖಾಸಗಿ ಬಸ್ […]
Big Breaking: ಕೇರಳ ಸಿಎಂ, ಕೆ.ಸಿ.ವೇಣುಗೋಪಾಲ್ ಜೊತೆ ವೇದಿಕೆ ಹಂಚಿಕೊಂಡ ಸಿದ್ದರಾಮಯ್ಯ!
ರಾಷ್ಟ್ರಮಟ್ಟದಲ್ಲಿ ಸುದ್ದಿಯಾದ ಕೋಗಿಲು ಬಡಾವಣೆಯಲ್ಲಿ ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಶೆಡ್ ತೆರವು ಕಾರ್ಯಾಚರಣೆ ಬಳಿಕ ಸಿಎಂ ಸಿದ್ದರಾಮಯ್ಯ ಕೇರಳದಲ್ಲಿದ್ದಾರೆ. ಅವರು ಕೇರಳ ಸಿಎಂ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಸಂಸದ ಕೆ.ಸಿ.ವೇಣುಗೋಪಾಲ್ ಜೊತೆ ವೇದಿಕೆ ಹಂಚಿಕೊಂಡಿದ್ದಾರೆ. ಬುಧವಾರ ಸಿಎಂ ಸಿದ್ದರಾಮಯ್ಯ ಕೇರಳ ಪ್ರವಾಸದಲ್ಲಿದ್ದಾರೆ. ತಿರುವನಂತಪುರಂ ಜಿಲ್ಲೆಯ ಶಿವಗಿರಿ ಮಠದಲ್ಲಿ ಶ್ರೀ ನಾರಾಯಣ ಧರ್ಮಸಂಗಮ ಟ್ರಸ್ಟ್ ಆಯೋಜಿಸಿರುವ ಮಠದ ಯಾತ್ರಾರ್ಥಿಗಳ ಸಮಾವೇಶದಲ್ಲಿ ಪಾಲ್ಗೊಂಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಕೇರಳ ಸರ್ಕಾರದ ಸಚಿವ ವಿ.ಎನ್.ವಾಸವನ್, ಸಂಸದ […]

20 C