ಭಾರತದ ವಿಚಾರದಲ್ಲಿ ಮೃದುವಾಯ್ತಾ ಅಮೆರಿಕದ ಧೋರಣೆ?
ವಾಷಿಂಗ್ಟನ್: ಭಾರತ ಮತ್ತು ಯುಎಸ್ ನಡುವೆ ವ್ಯಾಪಾರ ಮಾತುಕತೆಗಳು ಮುಂದುವರಿಯುತ್ತಿದ್ದು, ಈವರೆಗೆ ಸಿಗದೇ ಇರುವಂತಹ ಅತ್ಯುತ್ತಮ ಕೊಡುಗೆಗಳನ್ನು ಭಾರತ ನೀಡಿದೆ ಎಂದು ಯುಎಸ್ ವ್ಯಾಪಾರ ಪ್ರತಿನಿಧಿ ಜೇಮಿಸನ್ ಗ್ರೀರ್ ತಿಳಿಸಿದ್ದಾರೆ. ಸೆನೆಟ್ ವಿನಿಯೋಗ ಉಪಸಮಿತಿಯ ವಿಚಾರಣೆಯಲ್ಲಿ ಮಂಗಳವಾರ ಮಾತನಾಡಿದ ಅವರು, ಯುಎಸ್ ಟಿಆರ್ ತಂಡವು ನವದೆಹಲಿಯೊಂದಿಗೆ ಮಾತುಕತೆಯನ್ನು ಮುಂದುವರಿಸಿದ್ದು, ಸೂಕ್ಷ್ಮ ಅಡೆತಡೆಗಳನ್ನು ನಿವಾರಿಸುವ ಕೆಲಸ ಮಾಡುತ್ತಿದೆ. ಈ ಬಾರಿ ಭಾರತದಿಂದ ಇದುವರೆಗೆ ಪಡೆಯದೇ ಇರುವಂತಹ ಅತ್ಯುತ್ತಮ ಕೊಡುಗೆಗಳನ್ನು ನೀಡಿದೆ ಎಂದು ಹೇಳಿದರು. […]
ವಿಧಾನಸಭೆಯಲ್ಲೂ ಸದ್ದು ಮಾಡಿದ ಸೈಬರ್ ಕ್ರೈಂ…..!
ಬೆಳಗಾವಿ ಪ್ರತಿದಿನ ಸಹಸ್ರಾರು ಜನ ಸೈಬರ್ ವಂಚನೆಗೆ ತುತ್ತಾಗುತ್ತಿದ್ದು, ಮಂಗಳವಾರ ಇದೇ ವಿಚಾರ ವಿಧಾನಸಭೆಯಲ್ಲಿ ಪ್ರತಿಧ್ವನಿಸಿತು. ಬಿಜೆಪಿ ಶಾಸಕ ಸಿಮೆಂಟ್ ಮಂಜು ಪ್ರಶ್ನೆಗೆ ಉತ್ತರಿಸಿದ ಗೃಹಸಚಿವ ಪರಮೇಶ್ವರ್, ದೇಶ-ವಿದೇಶಗಳಲ್ಲಿ ಇಂದು ಆನ್ಲೈನ್ ಬೆಟ್ಟಿಂಗ್ ಹೆಚ್ಚಾಗಿದೆ. ಕಳ್ಳತನ, ಸುಲಿಗೆ, ದರೋಡೆ, ಡಕಾಯಿತಿ ಪ್ರಕರಣಗಳಿಗಿಂತ ಸೈಬರ್ ಅಪರಾಧಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದರು. ಕರ್ನಾಟಕದಲ್ಲಿ 2023 ರ ನವೆಂಬರ್ 15 ರಿಂದ ಈವರೆಗೆ 57,733 ಸೈಬರ್ ಅಪರಾಧ ಪ್ರಕರಣಗಳು ದಾಖಲಾಗಿವೆ. 5,474 ಕೋಟಿ ರೂ. ವಂಚನೆ […]
ಅಲ್ಟ್ರಾ-ಪ್ರೀಮಿಯಂ ಟಕಿಲಾ ಬ್ರ್ಯಾಂಡ್ ಪರಿಚಯಿಸಿದ ಯುವರಾಜ್ ಸಿಂಗ್
ಮುಂಬಯಿ ಭಾರತ ತಂಡದ ಮಾಜಿ ಆಲ್ರೌಂಡರ್, ಎರಡು ವಿಶ್ವಕಪ್ ವಿಜೇತ ತಂಡದ ಸದಸ್ಯ ಯುವರಾಜ್ ಸಿಂಗ್ ಅವರು ಅಲ್ಟ್ರಾ-ಪ್ರೀಮಿಯಂ ಟಕಿಲಾ ಬ್ರ್ಯಾಂಡ್ ಸ್ಥಾಪಿಸುವ ಮೂಲಕ ಮದ್ಯ ಲೋಕದ ಬ್ಯುಸಿನೆಸ್ಗೆ ಕಾಲಿಟ್ಟಿದ್ದಾರೆ. “ಫಿನೋ” ಹೆಸರಿನ ಅಲ್ಟ್ರಾ-ಪ್ರೀಮಿಯಂ ಟಕಿಲಾ ಬ್ರ್ಯಾಂಡ್ವೊಂದನ್ನು ಯುವಿ ಭಾರತದಲ್ಲಿ ಬಿಡುಗಡೆ ಮಾಡಿದ್ದಾರೆ. “ಫಿನೋ” ಅನ್ನು ಭಾರತದಲ್ಲಿ ಹರಿಯಾಣ, ದೆಹಲಿ, ಮಹಾರಾಷ್ಟ್ರ ಮತ್ತು ಆಯ್ದ ಸುಂಕ ರಹಿತ ಅಂಗಡಿಗಳಲ್ಲಿ ಮಾರಾಟ ಮಾಡಲಿದ್ದಾರೆ. ಈ ಮದ್ಯದ ಆರಂಭಿಕ ಬೆಲೆ ಸುಮಾರು 14,000 ರೂ. “ವೈಫಲ್ಯವು […]
ಕಾಂಡ್ಲಾ ಸಂರಕ್ಷಣಾ ಅಭಿಯಾನಕ್ಕೆ ಚಾಲನೆ: ಕಾಂಡ್ಲಾ ಸಂರಕ್ಷಣೆ ಎಲ್ಲರ ಜವಾಬ್ದಾರಿಯಾಗಲಿ:ಕೃಷ್ಣೇಗೌಡ
ಕುಮಟ: ಕಾಂಡ್ಲಾ ಸಾಗರ ತೀರಗಳ ರಕ್ಷಾ ಕವಚ ಇದ್ದಂತೆ ಎಂದು ಕುಮಟಾ ಉಪವಿಭಾಗೀಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೃಷ್ಣೇಗೌಡ ಹೇಳಿದರು.ಇಂದು ಕಿಮಾನಿ ಅಘನಾಶಿನಿ ನದಿ ತೀರದಲ್ಲಿ ಆಸ್ಟರ್ ಡಿ.ಎಮ್. ಫೌಂಡೇಶನ್ನ ಆಸ್ಟರ್ ವಾಲೆಂಟೀರ್ಸ್, ಸ್ಕೊಡ್ವೆಸ್ ಸಂಸ್ಥೆ ಹಾಗೂ ಅರಣ್ಯ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕಾಂಡ್ಲಾ ಸಂರಕ್ಷಣಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು. ಕಾಂಡ್ಲಾ ವನಗಳು ಅತೀ ಹೆಚ್ಚು ಆಮ್ಲಜನಕ ಉತ್ಪಾದಿಸುವ ಸಸ್ಯ ಪ್ರಬೇಧಗಳಾಗಿರುವುದರಿಂದ ಈ ಪ್ರದೇಶದಲ್ಲಿ ವಿಶಿಷ್ಟ ರೀತಿಯ ಜೀವ ವೈವಿಧ್ಯ ಸರಪಳಿಗಳು […]
ಕೃಷ್ಣಿ ಶಿರೂರಗೆ ಪ್ರೇಮ್ಜಿ ಅಚೀವರ್ಸ್ ಅವಾರ್ಡ್
ಶಿರಸಿ: ಹುಬ್ಬಳ್ಳಿಯ ಪ್ರೇಮ್ಜಿ ಫೌಂಡೇಷನ್ ಹಾಗೂ ಪಿ ಆ್ಯಂಡ್ ಜಿ ಮೀಡಿಯಾ ಕಮ್ಯೂನಿಕೇಶನ್ ಸಂಯುಕ್ತಾಶ್ರಯದಲ್ಲಿ ಕೊಡಲ್ಪಡುವ 2025 ನೇ ಸಾಲಿನ ಪ್ರೇಮ್ಜಿ ಅಚೀವರ್ಸ್ ಅವಾರ್ಡ್ ನ ಮಾಧ್ಯಮ ರತ್ನ ರಾಜ್ಯ ಪ್ರಶಸ್ತಿಗೆ ಹಿರಿಯ ಪತ್ರಕರ್ತೆ ಕೃಷ್ಣಿ ಶಿರೂರ ಆಯ್ಕೆಯಾಗಿದ್ದಾರೆ. ಡಿಸೆಂಬರ್ 21ರಂದು ಸಂಜೆ 6ಗಂಟೆಗೆ ಹುಬ್ಬಳ್ಳಿಯ ನವೀನ್ ಪಂಚತಾರ ಹೋಟೆಲ್ ನಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಜಿಲ್ಲೆಯವರಾದ ಕೃಷ್ಣಿ ಶಿರೂರ್ ಶಿರಸಿಯಲ್ಲಿ ಕೂಡ ಪ್ರಜಾವಾಣಿ ವರದಿಗಾರರಾಗಿ ಕಾರ್ಯ ಮಾಡಿದ್ದು, […]
ಕುಡತಿನಿ ಭೂ ಸಂತ್ರಸ್ತರ ಬೇಡಿಕೆಗಳನ್ನು ಮಾನವೀಯತೆಯ ಆಧಾರದಲ್ಲಿ ಪರಿಹರಿಸಿ : ವೈ.ಎಂ. ಸತೀಶ್
ಬೆಳಗಾವಿ/ಬಳ್ಳಾರಿ ಒಂದು ಸಾವಿರದ ಎಂಭತ್ತೊಂಬತ್ತು ದಿನಗಳಿಂದ ಕುಡತಿನಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ 12000 ಎಕರೆ ಭೂಮಿಯ ಭೂ ಸಂತ್ರಸ್ತ ರೈತರ ಬೇಡಿಕೆಗಳನ್ನು ಮಾನವೀಯತೆಯ ಆಧಾರದ ಮೇಲೆ ಶೀಘ್ರದಲ್ಲೇ ಈಡೇರಿಸಬೇಕು ಎಂದು ಬಳ್ಳಾರಿ – ವಿಜಯನಗರ ಸ್ಥಳೀಯ ಸಂಸ್ಥೆಗಳ ವಿಧಾನಪರಿಷತ್ ಸದಸ್ಯರಾದ ವೈ.ಎಂ. ಸತೀಶ್ ಅವರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಬೆಳಗಾವಿಯ `ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದ ಎರಡನೇ ದಿನವಾದ ಮಂಗಳವಾರ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಹಾಗೂ ಮೂಲಭೂತ ಅಭಿವೃದ್ಧಿ ಸಚಿವರಾದ ಎಂ.ಬಿ. […]
ಆ್ಯಶಸ್ ಸರಣಿಯಿಂದ ಜೋಶ್ ಹ್ಯಾಜಲ್ವುಡ್ ಔಟ್…..!
ಸಿಡ್ನಿ ಆಸ್ಟ್ರೇಲಿಯಾದ ವೇಗದ ಬೌಲರ್ ಜೋಶ್ ಹ್ಯಾಜಲ್ವುಡ್ ಆಶಸ್ ಸರಣಿಯಿಂದ ಹೊರಬಿದ್ದಿದ್ದಾರೆ. ಆಸ್ಟ್ರೇಲಿಯಾದ ದೇಶೀಯ ಶೆಫೀಲ್ಡ್ ಶೀಲ್ಡ್ ಸ್ಪರ್ಧೆಯಲ್ಲಿ ಆಡುವಾಗ ಬಲಗೈ ಸೀಮರ್ ಮಂಡಿರಜ್ಜು ನೋವಿಗೆ ಒಳಗಾಗಿದ್ದರು ಮತ್ತು ನಂತರ ಮೊದಲ ಎರಡು ಟೆಸ್ಟ್ಗಳಿಂದ ಹೊರಗುಳಿದಿದ್ದರು. ಗಾಯದಿಂದ ಸಂಪೂರ್ಣ ಚೇತರಿಕೆ ಕಾರಣ ಕಾರಣ ಅವರನ್ನು ಸರಣಿಯಿಂದ ಕೈಬಿಡಲಾಗಿದೆ. ಜೋಶ್ ಹ್ಯಾಜಲ್ವುಡ್ 2025-26ರ ಆಶಸ್ ಸರಣಿಯ ಉಳಿದ ಪಂದ್ಯಗಳಿಂದ ಹೊರಗುಳಿದಿದ್ದಾರೆ ಎಂದು ಕೋಚ್ ಆಂಡ್ರ್ಯೂ ಮೆಕ್ಡೊನಾಲ್ಡ್ ಮಂಗಳವಾರ ದೃಢಪಡಿಸಿದ್ದಾರೆ. ಫೆಬ್ರವರಿಯಲ್ಲಿ ಆಸ್ಟ್ರೇಲಿಯಾದ ಟಿ […]
ನನ್ನ ಸಂಬಳ ನನಗೆ ಸಾಕು; ಸರ್ಕಾರಿ ಕಚೇರಿ ಎದುರಲ್ಲಿ “ಲಂಚ ಬೇಡ”ಬೋರ್ಡ್ ಹಾಕಿದ ದಕ್ಷ ಅಧಿಕಾರಿ
ನಾಗ್ಪುರ: ಸರ್ಕಾರಿ ಕೆಲಸ ಅಂದ್ರೆ ದೇವರ ಕೆಲಸ ಎಂದು ಪ್ರತಿ ಸರ್ಕಾರಿ ಕಚೇರಿಗಳಲ್ಲಿ ಬರೆದಿರುತ್ತದೆ. ಆದರೆ, ಅಧಿಕಾರಿಗಳು ಮಾತ್ರ ಲಂಚ ಭ್ರಷ್ಟರಾಗಿರುತ್ತಾರೆ ಎಂಬ ಆರೋಪ ಕೇಳಿಬರುತ್ತದೆ. ಇದೀಗ ನಾಗ್ಪುರದ ವಿಭಾಗೀಯ ಆಯುಕ್ತರ ಕಚೇರಿ ಸಾರ್ವಜನಿಕರ ಗಮನ ಸೆಳೆದಿದೆ. ಆದಾಯ ಹೆಚ್ಚುವರಿ ಆಯುಕ್ತ ರಾಜೇಶ್ ಖವಾಲೆ ಅವರ ಕಚೇರಿ ಹೊರಭಾಗದಲ್ಲಿ ಅಸಾಮಾನ್ಯ ನಾಮಫಲಕವೊಂದು ಕಾಣಿಸಿಕೊಂಡ ನಂತರ ಅದು ಸಾರ್ವಜನಿಕರ ಗಮನ ಸೆಳೆಯಿತು. ನನ್ನ ಸಂಬಳದಿಂದ ತೃಪ್ತನಾಗಿದ್ದೇನೆ ಎಂಬ ಫಲಕ ಹಾಕಿದ್ದಾರೆ. ಈ ಸಂದೇಶವು […]
ತೆರೆಮೇಲೆ ಯಶ್ರನ್ನು ನೋಡಲು 100 ದಿನಗಳಷ್ಟೇ ಬಾಕಿ….!
ಬೆಂಗಳೂರು : ʻರಾಕಿಂಗ್ ಸ್ಟಾರ್ʼ ಯಶ್ ಅವರು ಕೊನೆಯದಾಗಿ ತೆರೆಮೇಲೆ ಕಾಣಿಸಿಕೊಂಡಿದ್ದು 2022ರ ಏಪ್ರಿಲ್ನಲ್ಲಿ. ಇದೀಗ ಅವರ ಮುಂದಿನ ಸಿನಿಮಾ ʻಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್ ʼ ಮೇಲಿದೆ. ಈ ಚಿತ್ರದ ಮೂಲಕ ನಾಲ್ಕು ವರ್ಷಗಳ ನಂತರ ಯಶ್ ಅವರು ತೆರೆಮೇಲೆ ಕಾಣಿಸಿಕೊಳ್ಳಲಿದ್ದು, ಸದ್ಯ ಟಾಕ್ಸಿಕ್ ರಿಲೀಸ್ಗೆ 100 ದಿನಗಳು ಬಾಕಿ ಇವೆ. ಈ ಚಿತ್ರವು ಮುಂದಿನ ವರ್ಷ ಮಾರ್ಚ್ 19ರಂದು ತೆರೆಗೆ ಬರಲಿದೆ. ಸದ್ಯ ಈ ಚಿತ್ರದ ಬಗ್ಗೆ ಒಂದಷ್ಟು […]
ಟ್ರಾಫಿಕ್ ನಡುವೆ ಹಸುವಿನ ಮೇಲೆ ಸವಾರಿ ಮಾಡಿದ ಬಾಲಕ
ನವದೆಹಲಿ ನಗರದ ಜನರನ್ನು ಹೈರಾಣಾಗಿಸುವ ಸಮಸ್ಯೆಗಳಲ್ಲಿ ಟ್ರಾಫಿಕ್ ಕೂಡ ಒಂದಾಗಿದೆ. ಅದರಲ್ಲೂ ಬೆಂಗಳೂರು, ಮುಂಬೈ, ದೆಹಲಿಯಂತಹ ನಗರ ಪ್ರದೇಶದದಲ್ಲಿ ಈ ಸಮಸ್ಯೆ ದುಪ್ಪಟ್ಟಾಗಿದೆ. ಇಂತಹ ಬಿಡುವಿಲ್ಲದ ರಸ್ತೆ ಮಧ್ಯದಲ್ಲಿ ಒಂದು ಅಚ್ಚರಿಯ ದೃಶ್ಯ ಎಲ್ಲರ ಗಮನ ಸೆಳೆದಿದೆ. ಹೌದು, ಹೈದರಾಬಾದ್ನಲ್ಲಿ ಕಂಡು ಬಂದ ಈ ದೃಶ್ಯ ಗಮನ ಸೆಳೆದಿದೆ. ತೀವ್ರ ವಾಹನಗಳ ದಟ್ಟಣೆ ನಡುವೆಯೂ ಒಬ್ಬ ಬಾಲಕ ಹಸುವಿನ ಮೇಲೆ ಕೂತು ಬಹಳ ಸಲೀಸಾಗಿ ಸವಾರಿ ಮಾಡಿದ್ದಾನೆ. ಘಟನೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ […]
ಮೋದಿ ಪ್ರಧಾನಿಯಾಗಿರುವಷ್ಟು ಅವಧಿ ನೆಹರೂ ದೇಶಕ್ಕಾಗಿ ಜೈಲಿನಲ್ಲಿದ್ದರು; ಪ್ರಿಯಾಂಕಾ ಗಾಂಧಿ ವಾಗ್ದಾಳಿ
ದೆಹಲಿ ಪ್ರಧಾನಿ ನರೇಂದ್ರ ಮೋದಿ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ವಿರುದ್ಧ ಕಿಡಿಕಾರಿದರು. ಮುಹಮ್ಮದ್ ಅಲಿ ಜಿನ್ನಾ ಅವರನ್ನು ಅನುಸರಿಸಿ ಜವಾಹರಲಾಲ್ ನೆಹರೂ ‘ವಂದೇ ಮಾತರಂ’ ಅನ್ನು ವಿರೋಧಿಸಿದ್ದರು ಮೋದಿ ಆರೋಪಿಸಿದರು. ಅದಾದ ಬಳಿ ವಯನಾಡು ಸಂಸದೆ ಪ್ರಿಯಾಂಕಾ ಗಾಂಧಿ ಮಾತನಾಡಿ ಮೋದಿ ಹೇಳಿಕೆಗೆ ತಿರುಗೇಟು ನೀಡಿದರು. ಮೋದಿ ಪ್ರಧಾನಿ ಹುದ್ದೆಯಲ್ಲಿರುವಷ್ಟು ಸಮಯ ನೆಹರೂ ದೇಶಕ್ಕಾಗಿ ಜೈಲಿನಲ್ಲಿ ಕಾಲ ಕಳೆದಿದ್ದರು ಎಂದು ವಾಗ್ದಾಳಿ ನಡೆಸಿದರು. ನೆಹರೂ ಅವರನ್ನು ಟೀಕಿಸುವ […]
ಸೋನಿಯಿಂದ ಹೊಸ ಕ್ಯಾಮೆರಾ ಬಿಡುಗಡೆ…..!
ನವದೆಹಲಿ: ಸೋನಿ ಇಂಡಿಯಾ ತನ್ನ ಜನಪ್ರಿಯ ಅಲ್ಫಾ 7 ಪೂರ್ಣ-ಫ್ರೇಮ್ ಮಿರರ್ಲೆಸ್ ಶ್ರೇಣಿ ಯಲ್ಲಿ ಬಹು ನಿರೀಕ್ಷಿತ ಐದನೇ ಪೀಳಿಗೆಯ ಐಎಲ್ಸಿಇ-7ವಿ ( ILCE-7V) ಕ್ಯಾಮೆರಾ ಪರಿಚಯಿಸಿದೆ.ಇದು ಸರಿಸುಮಾರು 33.0 ಪರಿಣಾಮಕಾರಿ ಎಂಪಿ (ಮೆಗಾಪಿಕ್ಸಲ್) ಹೊಂದಿರುವ ಹೊಸದಾಗಿ ಅಭಿವೃದ್ಧಿಪಡಿಸಲಾದ ಭಾಗಶಃ ಸ್ಟ್ಯಾಕ್ಡ್ ಎಕ್ಸ್ಮೋರ್ ಆರ್ಎಸ್™ ಸಿಎಂಒಎಸ್ ಇಮೇಜ್ ಸೆನ್ಸರ್ನಿಂದ ಕಾರ್ಯನಿರ್ವಹಿಸಲಿದೆ. ಹೊಸ ಇಮೇಜ್ ಪ್ರೊಸೆಸಿಂಗ್ ಎಂಜಿನ್ BIONZ XR2™ ಇತ್ತೀಚಿನ α™ (ಅಲ್ಪಾ ಟಿಎಂ) ಸರಣಿಯ ಎಐ ಸಂಸ್ಕರಣಾ ಘಟಕದ ಕಾರ್ಯಗಳನ್ನು […]
ಪಾಕಿಸ್ತಾನದಲ್ಲಿ LeT ಮತ್ತು JeM ಸಭೆ…..
ನವದೆಹಲಿ ಪಾಕಿಸ್ತಾನದ ಬಹಾವಲ್ಪುರದಲ್ಲಿ ಜೈಶ್, ಲಷ್ಕರ್ ಭಯೋತ್ಪಾದಕರು ಸಭೆ ನಡೆಸಿರುವ ಫೋಟೊ ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸಿಕೊಂಡಿದೆ. ಏಪ್ರಿಲ್ನಲ್ಲಿ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ 26 ಜನರ ಸಾವಿಗೆ ಕಾರಣವಾದ ಲಷ್ಕರ್-ಎ-ತೈಬಾ ಮತ್ತು ನವೆಂಬರ್ನಲ್ಲಿ ದೆಹಲಿಯ ಕೆಂಪುಕೋಟೆ ಬಳಿ 15 ಜನರ ಸಾವಿಗೆ ಕಾರಣವಾದ ಜೈಶ್-ಎ-ಮೊಹಮ್ಮದ್ ಎಂಬ ಎರಡು ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕ ಗುಂಪುಗಳ ಉಗ್ರರ ಸಭೆ ಇದಾಗಿದ್ದು, ಫೋಟೊ ವೈರಲ್ ಆಗಿದೆ. ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಭಾರತ ಆಪರೇಷನ್ ಸಿಂದೂರ್ ಮೂಲಕ […]
ಕರ್ನಾಟಕ ತಂಡಕ್ಕೆ ಹ್ಯಾಟ್ರಿಕ್ ಸೋಲಿನ ಆಘಾತ…..
ಅಹಮದಾಬಾದ್: ಪ್ರಸ್ತುತ ನಡೆಯುತ್ತಿರುವ 2025ರ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯಲ್ಲಿ ಕರ್ನಾಟಕ ತಂಡ ಹ್ಯಾಟ್ರಿಕ್ ಸೋಲು ಅನುಭವಿಸಿದೆ. ಕಠಿಣ ಹೋರಾಟ ನಡೆಸಿದ ಹೊರತಾಗಿಯೂ ತೀವ್ರ ರೋಚಕತೆ ಕೆರಳಿಸಿದ್ದ ಸೂಪರ್ ಓವರ್ ಥ್ರಿಲ್ಲರ್ನಲ್ಲಿ ತ್ರಿಪುರ ಎದುರು ಕರ್ನಾಟಕ ತಂಡ ಸೋಲು ಅನುಭವಿಸಿದೆ. ಒಟ್ಟಾರೆ ಈ ಟೂರ್ನಿಯಲ್ಲಿ ಕರ್ನಾಟಕ ತಂಡ, ಒಟ್ಟು ಐದು ಪಂದ್ಯಗಳ ಸೋಲು ಅನುಭವಿಸಿದೆ. ಕೇವಲ ಎರಡು ಜಯಗಳೊಂದಿಗೆ ಎಲೈಟ್ ಡಿ ಪಾಯಿಂಟ್ಸ್ ಟೇಬಲ್ನಲ್ಲಿ ಐದನೇ ಸ್ಥಾನಕ್ಕೆ ಕುಸಿದಿದೆ. ಸೋಮವಾರ […]

18 C