SENSEX
NIFTY
GOLD
USD/INR

Weather

21    C

ಡಿಜಿಟಲ್ ಸುದ್ದಿ ಮೂಲಗಳು

... ...View News by News Source

ಭಾರತದಿಂದ ಪಾಕ್ ಗೆ ಮತ್ತೊಂದು ಮರ್ಮಾಘಾತ

ನವದೆಹಲಿ : ಗಡಿ ಪ್ರದೇಶಗಳಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಇತ್ತೀಚಿನ ಉದ್ವಿಗ್ನ ಪರಿಸ್ಥಿತಿಗಳು ಎರಡೂ ದೇಶಗಳ ನಡುವಿನ ಕ್ರಿಕೆಟ್ ಸಂಬಂಧಗಳ ಮೇಲೆ ದೀರ್ಘಕಾಲೀನ ಮತ್ತು ಶಾಶ್ವತ ಪರಿಣಾಮ ಬೀರಲಿದೆ. ಭಾರತ ಮತ್ತು ಪಾಕಿಸ್ತಾನ ಈಗಾಗಲೇ ದ್ವಿಪಕ್ಷೀಯ ಕ್ರಿಕೆಟ್ ಆಡಲು ವಿರೋಧಿಸುತ್ತಿದ್ದರೂ, ಎರಡೂ ದೇಶಗಳ ನಡುವಿನ ಹದಗೆಟ್ಟ ರಾಜಕೀಯ ಸಂಬಂಧಗಳು ಎರಡೂ ತಂಡಗಳ ನಡುವಿನ ಬಹು-ತಂಡಗಳ ಪಂದ್ಯಗಳಿಗೂ ಅಪಾಯವನ್ನುಂಟುಮಾಡಿವೆ. ಪಾಕಿಸ್ತಾನದ ಸಚಿವರು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ನ್ನು ಮುನ್ನಡೆಸುತ್ತಿರುವುದರಿಂದ ಬಿಸಿಸಿಐ ನೆರೆಯ ದೇಶವನ್ನು ಮತ್ತಷ್ಟು […]

ಪ್ರಜಾ ಪ್ರಗತಿ 19 May 2025 5:01 pm

ಬೆಂಗಳೂರು :24 ಗಂಟೆಗಳಲ್ಲಿ 103 ಮೀ.ಮೀ ದಾಖಲೆಯ ಮಳೆ….!

ಬೆಂಗಳೂರು: ಬೆಂಗಳೂರಿನಲ್ಲಿ ವರಣಾರ್ಭಟ ಮುಂದುವರೆದಿದ್ದು, ಕೇವಲ 24 ಗಂಟೆಗಳಲ್ಲಿ ಬರೊಬ್ಬರಿ 103 ಮಿ.ಮೀ ಮಳೆಯಾಗಿದ್ದು, ಮಳೆಯ ರೌದ್ರಾವತಾರದಿಂದ ಬರೊಬ್ಬರಿ 10 ಕಿ.ಮೀ ವರೆಗೂ ಟ್ರಾಫಿಕ್ ಜಾಮ್ ಉಂಟಾಗಿರುವ ಘಟನೆ ನಡೆದಿದೆ.ಸೋಮವಾರ ಸುರಿದ ಭಾರೀ ಮಳೆಯಿಂದಾಗಿ ಬೆಂಗಳೂರು ನಗರದ ಹಲವು ಭಾಗಗಳು ಜಲಾವೃತ್ತವಾಗಿದ್ದು, ರಸ್ತೆಗಳಲ್ಲಿ ನೀರು ನಿಂತು ಸವಾರರು ಪರದಾಡಿದರು. ಜನ ವಸತಿ ಪ್ರದೇಶಗಳು ಜಲಾವೃತಗೊಂಡಿದ್ದು, ಸಂಚಾರ ಅಸ್ತವ್ಯಸ್ತವಾಗಿದೆ. ಈ ಕುರಿತು ಮಾಹಿತಿ ನೀಡಿರುವ ಹವಾಮಾನ ಇಲಾಖೆ ಬೆಂಗಳೂರಿನಲ್ಲಿ ಕಳೆದ 24 ಗಂಟೆಗಳಲ್ಲಿ ದಾಖಲೆಯ […]

ಪ್ರಜಾ ಪ್ರಗತಿ 19 May 2025 4:55 pm

ವಿದೇಶಾಂಗ ಸಚಿವ ಎಸ್ ಜೈಶಂಕರ್ ಮೌನ ‘ಶಾಪ’ : ರಾಹುಲ್ ಗಾಂಧಿ

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೋಮವಾರ ವಿದೇಶಾಂಗ ಸಚಿವ ಎಸ್. ಜೈಶಂಕರ್ ವಿರುದ್ಧ ವಾಗ್ದಾಳಿ ನಡೆಸಿದ್ದು, ಆಪರೇಷನ್ ಸಿಂಧೂರ ಅಡಿಯಲ್ಲಿ ಮಿಲಿಟರಿ ಕಾರ್ಯಾಚರಣೆಯ ಬಗ್ಗೆ ಪಾಕಿಸ್ತಾನಕ್ಕೆ ಮಾಹಿತಿ ನೀಡಿರುವ ಅವರು, ಆ ಸಮಯದಲ್ಲಿ ಭಾರತ ಕಳೆದುಕೊಂಡ ವಿಮಾನಗಳ ಸಂಖ್ಯೆಯ ಬಗ್ಗೆ ಮಾತ್ರ ಮೌನವಾಗಿರುವುದು ‘ಶಾಪ’ ಎಂದು ಹೇಳಿದ್ದಾರೆ. ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ದಲ್ಲಿನ ಭಯೋತ್ಪಾದಕ ನೆಲೆಗಳ ಮೇಲೆ ಮಿಲಿಟರಿ ದಾಳಿ ನಡೆಸುವ ಮೊದಲು ವಿದೇಶಾಂಗ ಸಚಿವರು ಪಾಕಿಸ್ತಾನಕ್ಕೆ […]

ಪ್ರಜಾ ಪ್ರಗತಿ 19 May 2025 4:47 pm

ಬಿಜೆಪಿ ನಾಯಕ ವಿಜಯ್‌ ಷಾ ಗೆ ‘ಸುಪ್ರೀಂ’ತಪರಾಕಿ….!

ನವದೆಹಲಿ: ಪಹಲ್ಗಾಮ್ ಉಗ್ರ ದಾಳಿಗೆ ಉತ್ತರವಾಗಿ ಭಾರತೀಯ ಸೇನೆ ನಡೆಸಿದ್ದ ಆಪರೇಷನ್ ಸಿಂಧೂರ ಸೇನಾ ಕಾರ್ಯಾಚರಣೆ ಕುರಿತು ಸುದ್ದಿಮಾಧ್ಯಮಗಳಿಗೆ ಬ್ರೀಫಿಂಗ್ ಮಾಡಿದ್ದ ಕರ್ನಲ್ ಸೋಫಿಯಾ ಖುರೇಷಿ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಮಧ್ಯ ಪ್ರದೇಶ ಬಿಜೆಪಿ ನಾಯಕ ವಿಜಯ್ ಶಾ ವಿರುದ್ಧ ಸುಪ್ರೀಂ ಕೋರ್ಟ್ ಮತ್ತೆ ಚಾಟಿ ಬೀಸಿದ್ದು, ಅವರು ಸಲ್ಲಿಸಿದ್ದ ಕ್ಷಮೆಯಾಚನೆಯನ್ನು ಸರ್ವೋಚ್ಛ ನ್ಯಾಯಾಲಯ ತಿರಸ್ಕರಿಸಿದೆ. ಕರ್ನಲ್ ಸೋಫಿಯಾ ಖುರೇಷಿಯನ್ನು ಭಯೋತ್ಪಾದಕರ ಸಹೋದರಿ ಎಂದು ಕರೆದಿದ್ದ ವಿಜಯ್ ಶಾ ವಿರುದ್ಧ ದಾಖಲಾಗಿದ್ದ […]

ಪ್ರಜಾ ಪ್ರಗತಿ 19 May 2025 4:41 pm

ಬೆಂಗಳೂರು : ಓಲಾ ಕಂಪನಿಯ ಟೆಕ್ಕಿ ಆತ್ಮಹತ್ಯೆ…..!

ಬೆಂಗಳೂರು: ರಾಜ್ಯದ ರಾಜಧಾನಿಯಲ್ಲಿ ಓಲಾ ಕಂಪನಿಯ ಟೆಕ್ಕಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಈ ಬಗ್ಗೆ ಹೆಚ್ಚಿನ ವಿಚಾರಣೆಯಿಂದ, ಈ ಟೆಕ್ಕಿಗೆ ಅತಿಯಾದ ಕೆಲಸದ ಒತ್ತಡವಿತ್ತು ಎಂದು ಗೊತ್ತಾಗಿದೆ. ಇದನ್ನು ತಾಳಲಾರದೇ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಹೇಳಲಾಗಿದೆ. ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ಸಿ) ಪದವೀಧರರಾದ ನಿಖಿಲ್ ಸೋಮವಂಶಿ ಮೃತ ಟೆಕ್ಕಿ ಎಂದು ಗುರುತಿಸಲಾಗಿದೆ. ಕೋರಮಂಗಲ ಭಾಗದಲ್ಲಿರುವ ಓಲಾದ AI ಘಟಕದಲ್ಲಿ ನಿಖಿಲ್ ಸೋಮವಂಶಿ ಮೆಷಿನ್ ಲರ್ನಿಂಗ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. […]

ಪ್ರಜಾ ಪ್ರಗತಿ 19 May 2025 1:30 pm

ಬೇಡಜಂಗಮರನ್ನು ಎಸ್ಸಿ ಪಟ್ಟಿಯಿಂದ ಕೈಬಿಡಬೇಕು : ಹೆಚ್.ಆಂಜನೇಯ

ಚಿತ್ರದುರ್ಗ ಒಳಮೀಸಲಾತಿ ಜಾರಿಗಾಗಿ 30 ವರ್ಷಗಳ ಹೋರಾಟ ಒಂದು ಭಾಗವಾಗಿದ್ದರೇ, ಈಗ ಜಾತಿಗಣತಿ ಸರ್ವೇ ಕಾರ್ಯದಲ್ಲಿ ಪಾಲ್ಗೊಳ್ಳುವುದು ಮತ್ತೊಂದು ಪ್ರಮುಖ ಭಾಗವಾಗಿದೆ ಎಂದು ಮಾಜಿ ಸಚಿವ ಹೆಚ್.ಆಂಜನೇಯ ಹೇಳಿದರು.ನಗರದ ಪ್ರವಾಸಿ ಮಂದಿರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಒಳಮೀಸಲಾತಿ 3 ದಶಕದ ಹೋರಾಟಕ್ಕೆ ಸುಪ್ರೀಂ ಕೋರ್ಟ್ ತೀರ್ಪು ಬಲ ಕೊಟ್ಟಿದೆ. ಈಗಾಗಲೇ ಆಂಧ್ರ, ತೆಲಂಗಾಣ, ಹರಿಯಾಣದಲ್ಲಿ ಜಾರಿಗೊಳಿಸಲಾಗಿದೆ. ಅದೇ ರೀತಿ ರಾಜ್ಯದಲ್ಲಿ ಸಿದ್ದರಾಮಯ್ಯ ಮುಂದಾಗಿದ್ದಾರೆ ಎಂದರು. ಹೊಲೆ-ಮಾದಿಗರು ರಾಜ್ಯದಲ್ಲಿ ಒಳಮೀಸಲಾತಿ ಜಾರಿಗೆ ಬಹುದೊಡ್ಡ ಅಡ್ಡಿ. […]

ಪ್ರಜಾ ಪ್ರಗತಿ 19 May 2025 1:23 pm

ಮಳೆಯಿಂದ ಸಮಸ್ಯೆಯಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ….!

ಬೆಂಗಳೂರು: ಬಿಬಿಎಂಪಿ ಮಹದೇವಪುರ ವಲಯ ವ್ಯಾಪ್ತಿಯಲ್ಲಿ ಬರುವ ಸಾಯಿ ಲೇಔಟ್ ಜಲಾವೃತವಾಗುವುದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಕ್ರಮ ಕೈಗೊಳ್ಳಲಾಗುವುದೆಂದು ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ರವರು ತಿಳಿಸಿದರು.ನಗರದಲ್ಲಿ ನಿನ್ನೆ ಸುರಿದ ಮಳೆಯಿಂದಾಗಿ ಸಮಸ್ಯೆಯಾಗಿರುವ ಪ್ರದೇಶಗಳಿಗೆ ಭೇಟಿ ನಿಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆ ನಗರದಲ್ಲಿ ಜೋರು ಮಳೆಯಾಗಿದ್ದು, ಅಧಿಕಾರಿಗಳೆಲ್ಲಾ ರಾತ್ರಿ 1 ಗಂಟೆಯವರೆಗೆ ಫೀಲ್ಡ್ ನಲ್ಲೇ ಇದ್ದು, ಮೇಲ್ವಿಚಾರಣೆ ಮಾಡಿ ಇರುವ ಸಮಸ್ಯೆಯನ್ನು ಬಗೆಹರಿಸಿದ್ದಾರೆ ಎಂದು ತಿಳಿಸಿದರು. ಸಾಯಿ ಲೇಔಟ್ […]

ಪ್ರಜಾ ಪ್ರಗತಿ 19 May 2025 1:17 pm

ಧಾರಹುಬ್ಬಳ್ಳಿ – ಧಾರವಾಡದಲ್ಲಿ ಮೊಬೈಲ್ ಸಿಮ್ ವ್ಯಾಪಕ ಮಾರಾಟ….!

ಹುಬ್ಬಳ್ಳಿ: ಹುಬ್ಬಳ್ಳಿ – ಧಾರವಾಡದಲ್ಲಿ ಕೆಲ ದಿನಗಳಲ್ಲಿ ವ್ಯಾಪಕ ಪ್ರಮಾಣದಲ್ಲಿ ಮೊಬೈಲ್ ಸಿಮ್ ಮಾರಾಟ ಆಗಿವೆ. ಸಮಾಜ ಘಾತುಕ, ದೇಶ ವಿರೋಧಿ ಶಕ್ತಿಗಳು ಖರೀದಿಸಿರುವ ಅನುಮಾನವಿದ್ದು, ಕೂಡಲೇ ಗೃಹ ಇಲಾಖೆ ತನಿಖೆ ನಡೆಸಬೇಕು ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ಉಪ ನಾಯಕ ಅರವಿಂದ ಬೆಲ್ಲದ ಒತ್ತಾಯಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಒಂದು ವಾರದ ಆಸುಪಾಸಿನಲ್ಲಿಯೇ ಈ ರೀತಿ ವ್ಯಾಪಕ ಪ್ರಮಾಣದಲ್ಲಿ ಮೊಬೈಲ್ ಸಿಮ್ ಮಾರಾಟ ಆದ ಬಗ್ಗೆ ಮಾಹಿತಿ […]

ಪ್ರಜಾ ಪ್ರಗತಿ 19 May 2025 1:13 pm

ಹೈದರಾಬಾದ್‌ನಲ್ಲಿ ಸ್ಫೋಟದ ಸಂಚು: ಇಬ್ಬರು ಶಂಕಿತರ ಬಂಧನ

ಹೈದರಾಬಾದ್​: ನಗರದಲ್ಲಿ ಬಾಂಬ್ ಸ್ಫೋಟ ಮಾಡಲು ಸಂಚು ರೂಪಿಸಿದ್ದ ಇಬ್ಬರು ಶಂಕಿತ ಉಗ್ರರನ್ನು ತೆಲಂಗಾಣ ಹಾಗೂ ಆಂಧ್ರ ಪ್ರದೇಶ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.ಕಾರ್ಯಾಚರಣೆಯಲ್ಲಿ ಐಸಿಸ್ ಜೊತೆ ಸಂಪರ್ಕ ಹೊಂದಿದ್ದ ಇಬ್ಬರು ಶಂಕಿತರನ್ನು ಬಂಧಿಸಲಾಗಿದೆ. ವಿಜಯನಗರದ ಸಿರಾಜ್ ಉರ್ ರೆಹಮಾನ್ (29) ಮತ್ತು ಸೈಯದ್ ಸಮೀರ್ (28) ಸೌದಿ ಅರೇಬಿಯಾದಲ್ಲಿ ಐಸಿಸ್ ಘಟಕದೊಂದಿಗೆ ಸಂಪರ್ಕ ಹೊಂದಿದ್ದಾರೆಂದು ಪೊಲೀಸರು ಶಂಕಿಸಿದ್ದಾರೆ. ಆರೋಪಿಗಳಿಂದ ಅಮೋನಿಯಾ, ಸಲ್ಫರ್ ಮತ್ತು ಅಲ್ಯೂಮಿನಿಯಂ ಪುಡಿ ಸೇರಿದಂತೆ ಸ್ಫೋಟಕ […]

ಪ್ರಜಾ ಪ್ರಗತಿ 19 May 2025 1:09 pm

ಪಹಣಿಯಲ್ಲಿ ರೈತರ ಹೆಸರನ್ನು ಹಾಕಲಿ: ಯತ್ನಾಳ್

ಬೆಂಗಳೂರು: ಪಹಣಿಯಲ್ಲಿ ರೈತರ ಹೆಸರನ್ನು ಹಾಕಲಿ ಇಲ್ಲದಿದ್ದರೆ ವಿಧಾನಸೌಧದ ಮುಂದೆ ಧರಣಿ ಕೂರುತ್ತೇನೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.ಪಹಣಿಯಲ್ಲಿ ಭೂಮಾಲೀಕರ ಹೆಸರಿನ ಬದಲಾಗಿ ʼಸರ್ಕಾರʼ ಎಂದು ನಮೂದಿಸಿರುವುದು ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿ ರೈತರ, ಭೂಮಾಲೀಕರ ಭೂಮಿಯನ್ನು ಅಕ್ರಮವಾಗಿ ವಕ್ಫ್ ಆಸ್ತಿ ಎಂದು ಪ್ರತಿಭಟಿಸಿದ ನಂತರ ಸರ್ಕಾರ ರೈತರ, ದೇವಸ್ಥಾನಗಳ, ಮಠಗಳ, ಸರ್ಕಾರಿ ಭೂಮಿಯ ಆಸ್ತಿಯನ್ನು ರಕ್ಷಿಸಲು ನಾವು ಬದ್ಧರಾಗಿದ್ದೇವೆ ಎಂದು ಘಂಟಾಘೋಷವಾಗಿ ಹೇಳಿತು. ಆದರೆ, ಈಗ […]

ಪ್ರಜಾ ಪ್ರಗತಿ 19 May 2025 1:08 pm

ಕಾರು ಅಪಘಾತ ಬಿಜೆಪಿ ಮುಖಂಡರಿಬ್ಬರ ದುರ್ಮರಣ

ಹುಳಿಯಾರು : ಚಿಕ್ಕನಾಯಕನಹಳ್ಳಿ ತಾಲ್ಲೂಕು ಹುಳಿಯಾರು ಹೋಬಳಿಯ ಕೆಂಕೆರೆ ಗ್ರಾಮದ ಆರು ಮಂದಿ ಪ್ರವಾಸ ತೆರಳಿದ್ದರು ಶ್ರೀಶೈಕ್ಕೆ ಬೇಟಿ ನೀಡಿ ಹಿಂದಿರುಗುವಾಗ ಭಾನುವಾರ ೮ ಗಂಟೆ ಸುಮಾರಿಗೆ ಆಂದ್ರ ಪ್ರದೇಶದ ಕರ್ನೂಲ್ ಬಳಿ ಇನೋವಾ ಕಾರು ಪಲ್ಟಿಯಾಗಿ ಅಪಘಾತಗೊಂಡು ಬಿಜೆಪಿಯ ಯುವ ಮುಖಂಡರು ಹಾಗೂ ಅದೇ ಗ್ರಾಮದ ಇನ್ನೊಬ್ಬ ಯುವಕ ಮೃತಪಟ್ಟಿದ್ದಾರೆ. ಮೃತರಲ್ಲಿ ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ನವೀನ್ ಕುಮಾರ್ (48) ಜಿಲ್ಲಾ ಬಿಜೆಪಿ ಯುವಮೋರ್ಚ ಉಪಾಧ್ಯಕ್ಷ ಹಾಗೂ ಜಿಲ್ಲಾ […]

ಪ್ರಜಾ ಪ್ರಗತಿ 19 May 2025 1:06 pm

Dream big. Work hard. Choose @parishramagroupofinstitutions

Every dream deserves a chance—regardless of where you come from or who you are. Dreams don’t follow boundaries. They break them. And the journey from a dream to an MBBS seat begins with just one step—Parishrama. It takes courage, consistency, and hard work to turn ambition into achievement. At Parishrama, we stand beside every dreamer—guiding, […]

ಪ್ರಜಾ ಪ್ರಗತಿ 19 May 2025 12:55 pm

ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ “LAQSA “ ವತಿಯಿಂದ “ಇಂಡಿಯನ್ ಇನ್ಸ್ಟಿಟ್ಯೂಷನಲ್ ಕ್ವಾಂಟ್ ಕಾನ್ಫರೆನ್ಸ್” ಕಾರ್ಯಕ್ರಮ ..

ಬೆಂಗಳೂರು: LAQSA “ ವತಿಯಿಂದ “ಇಂಡಿಯನ್ ಇನ್ಸ್ಟಿಟ್ಯೂಷನಲ್ ಕ್ವಾಂಟ್ ಕಾನ್ಫರೆನ್ಸ್” ವತಿಯಿಂದ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ರಿಷಿ ಕೊಹ್ಲಿ, ಪಂಕಜ್ ಮಣಿ ಈ ಇವೆಂಟ್ ನ ಆಯೋಜಿಸಿದ್ದು, ಲೀಡಿಂಗ್ ಫಂಡ್ ಮ್ಯಾನೇಜರರ್ಸ್ ಆದ ಹರಿಕೃಷ್ಣನ್, ದೀಪಕ್ ಶೆಣ್ಣೈ, ಲಕ್ಷ್ಮಿ ಅಯ್ಯರ್ ಭಾಗವಹಿಸಿದ್ದರು. “LAQSA”ಇವೆಂಟ್ ಒಂದು ಕಮ್ಯೂನಿಟಿ ಆಗಿದ್ದು, ಇದು ನಾನ್ ಪ್ರೊಫಿಟರ್ಬಲ್ ಅಸೋಸಿಯೇಷನ್ ಆಗಿದೆ. ಈ ಇವೆಂಟ್ ನಲ್ಲಿ ಕ್ವಾಂಟ್ ಸ್ಟ್ರಾಟೆಜಿಸ್ ಬಗ್ಗೆ ಮಾಹಿತಿ ನೀಡಲಾಯಿತು.“LAQSA” ಇವೆಂಟ್ ನಲ್ಲಿ ಕ್ವಾಂಟ್ ಐಡಿಯಾಸ್ […]

ಪ್ರಜಾ ಪ್ರಗತಿ 19 May 2025 12:51 pm

ಆಪರೇಷನ್ ಸಿಂಧೂರ: ಸೇನೆಗೆ ತುರ್ತು ಖರೀದಿ ಅಧಿಕಾರ

ಸಾಂದರ್ಭಿಕ ಚಿತ್ರ | PC : PTI ಹೊಸದಿಲ್ಲಿ: ಪಾಕಿಸ್ತಾನವು ಗಡಿಯಾಚೆಗಿನ ಭಯೋತ್ಪಾದನೆಗೆ ಕುಮ್ಮಕ್ಕು ನೀಡುವ ತನ್ನ ಕಾರ್ಯಶೈಲಿಯನ್ನು ಕೊನೆಗೊಳಿಸದಿದ್ದರೆ, ಶತ್ರುರಾಷ್ಟ್ರದ ಜತೆಗೆ ಮಾಡಿಕೊಂಡಿರುವ ಆಪರೇಷನ್ ಸಿಂಧೂರ ಯುದ್ಧವಿರಾಮ ಕೇವಲ 'ಕಾರ್ಯತಂತ್ರದ ವಿರಾಮ' ಎಂದು ಭಾರತ ಸ್ಪಷ್ಟಪಡಿಸಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಒಟ್ಟಾರೆ 40 ಸಾವಿರ ಕೋಟಿ ರೂಪಾಯಿ ಮಿತಿಯಲ್ಲಿ ತುರ್ತು ಖರೀದಿಗೆ ಸಶಸ್ತ್ರ ಪಡೆಗಳಿಗೆ ಅಧಿಕಾರ ನೀಡಿದೆ. ಭಾರತೀಯ ಭೂಸೇನೆ, ವಾಯುಪಡೆ ಮತ್ತು ನೌಕಾಪಡೆಗಳಿಗೆ ಇಪಿ-6 ಅಧಿಕಾರ ನೀಡಲಾಗಿದ್ದು, ಇದರಿಂದಾಗಿ ಮೂರೂ ಪಡೆಗಳು ಇನ್ನಷ್ಟು ಶಸ್ತ್ರಾಸ್ತ್ರಗಳನ್ನು ಸಂಗ್ರಹದಲ್ಲಿ ಇಟ್ಟುಕೊಳ್ಳಲು ಅನುಕೂಲವಾಗಲಿದೆ. ರಾಜನಾಥ್ ಸಿಂಗ್ ನೇತೃತ್ವದ ರಕ್ಷಣಾ ಖರೀದಿ ಮಂಡಳಿ ಕೆಲ ದಿನಗಳ ಹಿಂದೆ ಈ ಅಧಿಕಾರವನ್ನು ಸಶಸ್ತ್ರ ಪಡೆಗಳಿಗೆ ನೀಡಿದೆ ಎಂದು ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ. ಮೊದಲ ನಾಲ್ಕು ಇಪಿಗಳನ್ನು ಪೂರ್ವ ಲಡಾಖ್ ನಲ್ಲಿ ಚೀನಾ ಜತೆಗಿನ ಸೇನಾ ಸಂಘರ್ಷದ ವೇಳೆ ಮಂಜೂರು ಮಾಡಲಾಗಿದ್ದು, ಉಗ್ರಗಾಮಿ ನಿಗ್ರಹ ಕಾರ್ಯಾಚರಣೆಗೆ ಐದನೇ ಇಪಿ ಮಂಜೂರು ಮಾಡಲಾಗಿತ್ತು. ಇದೀಗ ಇಪಿ-7 ಅಡಿಯಲ್ಲಿ ಸಶಸ್ತ್ರ ಪಡೆಗಳು ತಲಾ 300 ಕೋಟಿ ರೂಪಾಯಿ ಮೌಲ್ಯದ ತ್ವರಿತ ಗತಿಯ ಬಹು ಗುತ್ತಿಗೆಗಳನ್ನು ಹೂಡಿಕೆ ಮತ್ತು ಆದಾಯ ಶೀರ್ಷಿಕೆಯಡಿ ಮಾಡಿಕೊಳ್ಳಲು ಅವಕಾಶವಿದೆ. ಇದಕ್ಕೆ ಸುಧೀರ್ಘ ಕಾಲ ವಿಸ್ತರಿಸುವ ಖರೀದಿ ಪ್ರಕ್ರಿಯೆಯನ್ನು ಅನುಸರಿಸುವ ಅಗತ್ಯವಿಲ್ಲ. ಈ ಗುತ್ತಿಗೆಗಳನ್ನು 40 ದಿನಗಳಲ್ಲಿ ಪೂರ್ಣಗೊಳಿಸಬೇಕಿದ್ದು, ಒಂದು ವರ್ಷದ ಒಳಗಾಗಿ ವಿತರಣೆ ಪೂರೈಸಬೇಕು. ಮೂರೂ ಪಡೆಗಳ ಉಪ ಮುಖ್ಯಸ್ಥರು ಈ ಅಧಿಕಾರಗಳನ್ನು ಚಲಾಯಿಸಬಹುದಾಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ. ಇದು ಸಶಸ್ತ್ರ ಪಡೆಗಳಿಗೆ ತ್ವರಿತವಾಗಿ ಶಸ್ತ್ರಾಸ್ತ್ರಗಳು, ಕ್ಷಿಪಣಿಗಳು ಮತ್ತು ಧೀರ್ಘ ಸಾಮರ್ಥ್ಯದ ಶಸ್ತ್ರಾಸ್ತ್ರಗಳು, ಲೋಯಿಟರ್ ಮತ್ತು ನಿಖರ-ನಿರ್ದೇಶಿತ ಶಸ್ತ್ರಾಸ್ತ್ರಗಳು, ಕಮಿಕಾಝ್ ಡ್ರೋನ್ ಗಳು ಮತ್ತು ಡ್ರೋನ್ ಪ್ರತಿರೋಧ ವ್ಯವಸ್ಥೆ ಮತ್ತಿತರ ಶಸ್ತ್ರಾಸ್ತ್ರಗಳನ್ನು ಖರೀದಿಸಲು ಅನುವು ಮಾಡಿಕೊಡಲಿದೆ. ಪ್ರಸಕ್ತ ಹಣಕಾಸು ವರ್ಷಕ್ಕೆ ನಿಗದಿಪಡಿಸಿದ ಒಟ್ಟು ಮೊತ್ತದಲ್ಲಿ ಶೇಕಡ 15ರಷ್ಟು ಮೌಲ್ಯದ ಶಸ್ತ್ರಾಸ್ತ್ರಗಳನ್ನು ಈ ಅಧಿಕಾರದಡಿ ಖರೀದಿಸಬಹುದಾಗಿದೆ.

ವಾರ್ತಾ ಭಾರತಿ 18 May 2025 9:15 am