SENSEX
NIFTY
GOLD
USD/INR

Weather

22    C

ಡಿಜಿಟಲ್ ಸುದ್ದಿ ಮೂಲಗಳು

... ...View News by News Source

ಭಾರತ-ಚೀನಾ ನಡುವೆ ನೇರ ವಿಮಾನ ಹಾರಾಟ ಆರಂಭ

ಸಾಂದರ್ಭಿಕ ಚಿತ್ರ | Photo Credit : PTI ಹೊಸದಿಲ್ಲಿ, ಅ. 27: ಭಾರತ ಮತ್ತು ಚೀನಾ ನಡುವಿನ ಸಂಬಂಧ ಸುಧಾರಣೆಯಾಗುತ್ತಿರುವಂತೆಯೇ, ಉಭಯ ದೇಶಗಳ ನಡುವಿನ ನೇರ ವಿಮಾನ ಹಾರಾಟ ಪುನರಾರಂಭಗೊಂಡಿದೆ. ಕೋಲ್ಕತಾದಿಂದ ಸುಮಾರು 180 ಪ್ರಯಾಣಿಕರನ್ನು ಹೊತ್ತ ಇಂಡಿಗೋ 6ಇ 1703 ವಿಮಾನವು ಸೋಮವಾರ ಚೀನಾದ ನಗರ ಗುವಾಂಗ್‌ಝೂನಲ್ಲಿ ಇಳಿಯಿತು. ಭಾರತ ಮತ್ತು ಚೀನಾ ದೇಶಗಳ ನಡುವಿನ ನೇರ ವಿಮಾನ ಹಾರಾಟವನ್ನು ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ, 2020ರ ಆದಿಭಾಗದಲ್ಲಿ ನಿಲ್ಲಿಸಲಾಗಿತ್ತು. ಬಳಿಕ ಲಡಾಖ್ ವಲಯದ ಗಲ್ವಾನ್‌ ನಲ್ಲಿ ಉಭಯ ದೇಶಗಳ ಸೈನಿಕರ ನಡುವೆ ನಡೆದ ಭೀಕರ ಸಂಘರ್ಷದ ಹಿನ್ನೆಲೆಯಲ್ಲಿ, ನೇರ ವಿಮಾನ ಹಾರಾಟ ಪುನರಾರಂಭಗೊಳ್ಳಲಿಲ್ಲ. ಆದರೆ, ಬಳಿಕ ಉಭಯ ದೇಶಗಳು ಪರಸ್ಪರ ಬಾಂಧವ್ಯವನ್ನು ನಿರಂತರವಾಗಿ ವೃದ್ಧಿಸಿಕೊಳ್ಳುತ್ತಾ ಬಂದಿವೆ. ಕಳೆದ ವರ್ಷ ಗಡಿಯಲ್ಲಿ ನಡೆಸಲಾಗುವ ಗಸ್ತುಗಳ ಬಗ್ಗೆ ಮಹತ್ವದ ಒಪ್ಪಂದವೊಂದಕ್ಕೆ ಉಭಯ ದೇಶಗಳು ಸಹಿ ಹಾಕಿವೆ. ಉಭಯ ದೇಶಗಳ ನಡುವಿನ ನೇರ ವಿಮಾನ ಹಾರಾಟಗಳು ‘‘ಜನರ ನಡುವೆ ಸಂಪರ್ಕವನ್ನು ಸ್ಥಾಪಿಸುತ್ತವೆ ಮತ್ತು ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಮಾತುಕತೆಗಳಿಗೆ ವೇದಿಕೆ ಸಿದ್ಧಪಡಿಸುತ್ತವೆ’’ ಎಂದು ಈ ತಿಂಗಳ ಆದಿಭಾಗದಲ್ಲಿ ನೇರ ವಿಮಾನ ಹಾರಾಟವನ್ನು ಘೋಷಿಸುತ್ತಾ ಹೇಳಿಕೆಯೊಂದರಲ್ಲಿ ಹೇಳಿತ್ತು. ನೇರ ವಿಮಾನ ಹಾರಾಟವು, ನೆರೆಯ ದೇಶಗಳ ನಡುವಿನ ಸಂಬಂಧ ನಿಧಾನವಾಗಿ ಸಾಮಾನ್ಯ ಸ್ಥಿತಿಗೆ ಮರಳುತ್ತಿದೆ ಎನ್ನುವುದನ್ನು ಸೂಚಿಸುವ ಸರಣಿ ಬೆಳವಣಿಗೆಗಳ ಒಂದು ಭಾಗವಾಗಿದೆ. ಆಗಸ್ಟ್ ತಿಂಗಳಲ್ಲಿ, ಪ್ರಧಾನಿ ನರೇಂದ್ರ ಮೋದಿ ಏಳು ವರ್ಷಗಳಲ್ಲಿ ಮೊದಲ ಬಾರಿಗೆ ಚಿನಾ ಪ್ರವಾಸ ಮಾಡಿದ್ದರು. ಅವರು ಶಾಂಘೈ ಸಹಕಾರ ಸಂಘಟನೆಯ ನೇಪಥ್ಯದಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ರನ್ನು ಭೇಟಿಯಾಗಿದ್ದರು. ಆ ತಿಂಗಳ ಆರಂಭದಲ್ಲಿ, ಚೀನಾದ ವಿದೇಶ ಸಚಿವ ವಾಂಗ್ ಯಿ ಭಾರತಕ್ಕೆ ಭೇಟಿ ನೀಡಿ, ಉದ್ವಿಗ್ನತೆ ಶಮನ ಮತ್ತು ಗಡಿ ವಿವಾದ ಬಗ್ಗೆ ಭಾರತೀಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದರು.

ವಾರ್ತಾ ಭಾರತಿ 27 Oct 2025 9:03 pm

ಇಷ್ಟು ಸುಸಜ್ಜಿತವಾದ ರಂಗ ಮಂದಿರ ಇಡೀ ರಾಜ್ಯದಲ್ಲಿಯೇ ಇಲ್ಲ:

ಗುಬ್ಬಿ: ರಾಜ್ಯದಲ್ಲೇ ಇಷ್ಟೊಂದು ಸುಸಜ್ಜಿತ ವಾದ ರಂಗಮಂದಿರವಿಲ್ಲ ಎಂದು ಖ್ಯಾತ ರಂಗಕರ್ಮಿ ನಟ ನಿರ್ದೇಶಕ ಮಂಡ್ಯ ರಮೇಶ್ ಅಭಿಪ್ರಾಯ ಪಟ್ಟರು, ಗುಬ್ಬಿ ಪಟ್ಟಣದಲ್ಲಿ ಮೂರು ದಿನಗಳ ಕಾಲ ಡಾ ಗುಬ್ಬಿ ವೀರಣ್ಣ ಟ್ರಸ್ಟ್ ಹಾಗೂ ಮಾಲತಮ್ಮ ಆರ್ಟ್ ಫೌಂಡೇಶನ್ ವತಿಯಿಂದ ಜರುಗಿದ ನಾಟಕೋತ್ಸವ ಉದ್ಘಾಟನಾ ಸಮಾರಂಭದಲ್ಲಿ ತಮ್ಮ ನಟನಾ ಕಲಾ ತಂಡದ ಸ್ಥಾವರ ಜಂಗಮ ನಾಟಕ ಪ್ರದರ್ಶನ ಸಂದರ್ಭದಲ್ಲಿ ಮಾತನಾಡಿದರು, ಗುಬ್ಬಿ ವೀರಣ್ಣನವರ ಜನ್ಮ ಭೂಮಿ ಗುಬ್ಬಿಯಲ್ಲಿ ನಾಟಕ […]

ಪ್ರಜಾ ಪ್ರಗತಿ 27 Oct 2025 7:05 pm

ಕೆಲಸಕ್ಕೆ ಹೋಗದೆ ಮಹಿಳೆಗೆ ಬಂತು 37 ಲಕ್ಷ ರೂ. ಸಂಬಳ…..!

ಜೈಪುರ: ನಾನೇನು ಕೆಲಸ ಮಾಡದೆ ಕುಳಿತುಕೊಂಡಲ್ಲೇ ದುಡ್ಡು ಬರಲಿ ಎಂದು ಬಹುತೇಕರು ಹಗಲು ಕನಸು ಕಾಣುತ್ತಾರೆ. ಈ ಕನಸು ಇಲ್ಲೊಬ್ಬ ಮಹಿಳೆಗೆ ನಿಜವಾಗಿದೆ. ಮಹಿಳೆಯೊಬ್ಬರು ಎರಡು ವರ್ಷಗಳ ಕಾಲ ಏನೂ ಕೆಲಸ ಮಾಡದೆಯೇ ಎರಡು ಕಂಪನಿಗಳಿಂದ 37.54 ಲಕ್ಷ ರೂ. ಸಂಬಳ ಗಳಿಸಿದ್ದಾಳೆ. ರಾಜಸ್ಥಾನ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದಾಗ ಈ ವಿಷಯ ಬೆಳಕಿಗೆ ಬಂದಿದೆ . ವರದಿಯ ಪ್ರಕಾರ, ರಾಜ್‌ಕಾಂಪ್ ಇನ್ಫೋ ಸರ್ವೀಸಸ್‌ನ ಐಟಿ ಇಲಾಖೆಯ ಜಂಟಿ ನಿರ್ದೇಶಕ ಪ್ರದ್ಯುಮನ್ ದೀಕ್ಷಿತ್, […]

ಪ್ರಜಾ ಪ್ರಗತಿ 27 Oct 2025 3:53 pm

ಬಾಲಿವುಡ್‌ನ ಕರಾಳತೆ ಬಿಚ್ಚಿಟ್ಟ ಖ್ಯಾತ ನಟಿ…….!

ನವದೆಹಲಿ: ಸಿನಿಮಾ ಇಂಡಸ್ಟ್ರಿಯಲ್ಲಿ ಸಕ್ಸಸ್ ಆಗಿ ಬಹುದೊಡ್ಡ ವೃತ್ತಿ ಜೀವನ ಕಂಡುಕೊಂಡ ವರಿಗಿಂತಲೂ ಸರಿಯಾದ ಅವಕಾಶ ಸಿಗದೆ ತಮ್ಮ ವೃತ್ತಿ ಜೀವನವನ್ನು ಬದಲಾಯಿಸಿಕೊಂಡವರೆ ಅಧಿಕ ಮಂದಿ ಇದ್ದಾರೆ. ಅದರಲ್ಲೂ ಹೆಣ್ಣು ಮಕ್ಕಳಿಗೆ ಕೆಲವೊಮ್ಮೆಅವಕಾಶ ಉತ್ತಮವಾಗಿ ಸಿಕ್ಕರೂ ಲೈಂಗಿಕ ಕಿರುಕುಳ, ಹಣಕಾಸಿನ ಬೇಡಿಕೆ ಇತ್ಯಾದಿ ಸಮಸ್ಯೆ ಎದುರಿಸುತ್ತಾರೆ. ಸಿನಿಮಾ ನಟಿಯಾಗ ಬೇಕು ಎನ್ನುವ ಅನೇಕರು ಈ ಕಿರುಕುಳಕ್ಕೆ ಅಂಜಿಯೇ ಈ ಕ್ಷೇತ್ರ ತೊರೆದಿದ್ದಾರೆ. ಆದರೆ ಇನ್ನು ಕೆಲವು ನಟಿಯರು ತಮಗೆ ಈ ಹಿಂದೆ ಆದ ಕಹಿ […]

ಪ್ರಜಾ ಪ್ರಗತಿ 27 Oct 2025 2:52 pm

ಬೀದಿ ನಾಯಿಗಳ ಪ್ರಕರಣದ ಬಗ್ಗೆ ತರಾಟೆ ತೆಗೆದುಕೊಂಡ ಸುಪ್ರೀಂ…..!

ನವದೆಹಲಿ: ದೇಶಾದ್ಯಂತ ಬೀದಿ ನಾಯಿಗಳನ್ನು ಹಿಡಿಯುವುದು, ಸಂತಾನಹರಣ ಮಾಡುವುದು ಮತ್ತು ಬಿಡುವುದು ಸೇರಿದಂತೆ ಆಗಸ್ಟ್ ತಿಂಗಳ ಆದೇಶದ ಅನುಸರಣೆಯನ್ನು ದೃಢೀಕರಿಸಲು ಅಫಿಡವಿಟ್‌ಗಳನ್ನು ಸಲ್ಲಿಸದ ರಾಜ್ಯ ಸರ್ಕಾರಗಳನ್ನು ಸುಪ್ರೀಂ ಕೋರ್ಟ್ ಸೋಮವಾರ ತರಾಟೆಗೆ ತೆಗೆದುಕೊಂಡಿತು. ಕಳೆದ ತಿಂಗಳು ಮಹಾರಾಷ್ಟ್ರದ ಪುಣೆಯಲ್ಲಿ ಮಗುವಿನ ಮೇಲೆ ದಾಳಿ ನಡೆಸಲಾಯಿತು ಮತ್ತು ಕೆಲವು ದಿನಗಳ ಹಿಂದೆ, ರಾಜ್ಯದ ಭಂಡಾರ ಜಿಲ್ಲೆಯಲ್ಲಿ 20 ನಾಯಿಗಳ ಗುಂಪೊಂದು ಮತ್ತೊಂದು ಯುವತಿಯ ಮೇಲೆ ದಾಳಿ ಮಾಡಿತ್ತು. ಕಳೆದ ವಾರ ಕೇರಳದ ಕಣ್ಣೂರು ಜಿಲ್ಲೆಯಲ್ಲಿ ಬೀದಿ […]

ಪ್ರಜಾ ಪ್ರಗತಿ 27 Oct 2025 2:41 pm

ಅಂಧ ಯುವತಿ ಭವ್ಯಳ ಬಾಳ ಸಂಗಾತಿಯಾದ ಇಂಜನಿಯರ್ ಲೋಕೇಶ್

ಬೆಂಗಳೂರು: ಶ್ರೀರಾಕುಂ ಅಂಧ ಮಕ್ಕಳ ಶಾಲೆಯಲ್ಲಿ ಸಂಸ್ಥಪನಾ ದಿನಾಚರಣೆ ಮತ್ತು ಹಳೆಯ ವಿದ್ಯಾರ್ಥಿನಿಯಾಗಿದ್ದ ಭವ್ಯರವರು ಇದೇ ಶಾಲೆಯಲ್ಲಿ ಸಂಪೂರ್ಣ ವ್ಯಾಸಂಗ ಮುಗಿಸಿ ಹೊಸಕೋಟೆಯಲ್ಲಿ ಸಿಟಿ ಮುನ್ಸಿಪಲ್ ಕೌನ್ಸಿಲ್ ನೌಕರಿ ಮಾಡುತ್ತಿದ್ದಾರೆ ಕುಮಾರಿ ಭವ್ಯಳಿಗೆ ಇಂಜನಿಯರ್ ಪದವೀಧರ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಲೋಕೇಶ್ ರವರು ಬಾಳಸಂಗಾತಿಯಾಗಿ ವಿವಾಹ ಸಂಭ್ರಮ ನೇರವೆರಿತು. ಶ್ರೀ ರಾಕುಂ ಅಂಧ ಮಕ್ಕಳ ಶಾಲೆ ಸಂಸ್ಥಾಪಕ ಸ್ವಾಮಿ ರಾಕುಂಜೀ ಮಹಾರಾಜ್ ರವರು, ಮಾಜಿ ಶಾಸಕಿ ಶ್ರೀಮತಿ ಪ್ರೇಮಿಳಾ ನೇಸರ್ಗಿರವರು, ವಿಧಾನಪರಿಷತ್ ಮಾಜಿ […]

ಪ್ರಜಾ ಪ್ರಗತಿ 27 Oct 2025 2:35 pm

‘ಭಾರತ ಜತೆಗಿನ ಸಂಬಂಧಕ್ಕೆ ಧಕ್ಕೆ ತಂದು ಪಾಕ್‌ ಜೊತೆ ಸ್ನೇಹ ಇಲ್ಲ’: ಅಮೆರಿಕ ಕಾರ್ಯದರ್ಶಿ

ವಾಷಿಂಗ್ಟನ್: ಪಾಕಿಸ್ತಾನದೊಂದಿಗೆ ಸಂಬಂಧ ವಿಸ್ತರಿಸಲು ಅಮೆರಿಕ ಪ್ರಯತ್ನಿಸುತ್ತದೆಯಾದರೂ, ಭಾರತವನ್ನು ದೂರಿವಿಟ್ಟು ಅಲ್ಲ ಎಂದು ಅಮೆರಿಕ ಕಾರ್ಯದರ್ಶಿ ಮಾರ್ಕೋ ರುಬಿಯೋ ಹೇಳಿದ್ದಾರೆ. ಆಸಿಯಾನ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಮಲೇಷ್ಯಾದ ಕ್ವಾಲಾಲಂಪುರಕ್ಕೆ ತೆರಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ, ‘ಪಾಕಿಸ್ತಾನ ಜೊತೆಗಿನ ಪಾಲುದಾರಿಕೆಯನ್ನು ಮತ್ತಷ್ಟು ಹೆಚ್ಚಿಸಲು ಅಮೆರಿಕ ಬಯಸುತ್ತದೆ. ಅದರೆ, ಭಾರತದೊಂದಿಗೆ ಹೊಂದಿರುವ ಐತಿಹಾಸಿಕ ಮತ್ತು ಮಹತ್ವದ ಸಂಬಂಧಕ್ಕೆ ಧಕ್ಕೆ ತಂದುಕೊಂಡು ಇಂತಹ ಬಾಂಧವ್ಯಕ್ಕೆ ನಾವು ಮುಂದಾಗುವುದಿಲ್ಲ’ ಎಂದು ಹೇಳಿದ್ದಾರೆ. […]

ಪ್ರಜಾ ಪ್ರಗತಿ 27 Oct 2025 12:51 pm

ಆಸ್ಟ್ರೇಲಿಯಾದ ಮಹಿಳಾ ಕ್ರಿಕೆಟಿಗರಿಗೆ ಲೈಂಗಿಕ ಕಿರುಕುಳ ಬಗ್ಗೆ ಮಧ್ಯಪ್ರದೇಶದ ಸಚಿವ ಶಾಕಿಂಗ್ ಹೇಳಿಕೆ!

ಇಂದೋರ್: ಐಸಿಸಿ ಮಹಿಳಾ ಕ್ರಿಕೆಟ್ ವಿಶ್ವಕಪ್‌ಗಾಗಿ ಭಾರತಕ್ಕೆ ಆಗಮಿಸಿರುವ ಆಸ್ಟ್ರೇಲಿಯಾದ ಇಬ್ಬರು ಮಹಿಳಾ ಕ್ರಿಕೆಟಿಗರಿಗೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ವ್ಯಕ್ತಿಯೊಬ್ಬ ಬೈಕ್ ನಲ್ಲಿ ಹಿಂಬಾಲಿಸಿ, ಲೈಂಗಿಕ ಕಿರುಕುಳ ನೀಡಿದ ಆಘಾತಕಾರಿ ಘಟನೆ ನಡೆದಿದೆ. ಸಾರ್ವಜನಿಕವಾಗಿ ನಡೆದ ಈ ಘಟನೆಯು ರಾಜ್ಯದ ಭದ್ರತಾ ವ್ಯವಸ್ಥೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದ್ದರೆ, ಮಧ್ಯಪ್ರದೇಶದ ಕ್ಯಾಬಿನೆಟ್ ಸಚಿವ ಕೈಲಾಶ್ ವಿಜಯವರ್ಗಿಯಾ ಅವರ ವಿವಾದಾತ್ಮಕ ಹೇಳಿಕೆಯು ರಾಜಕೀಯ ಬಿರುಗಾಳಿಯನ್ನೂ ಎಬ್ಬಿಸಿದೆ. ಈ ಘಟನೆಯಿಂದ ಆಟಗಾರರು ಪಾಠ ಕಲಿಯಬೇಕು ಎಂದು […]

ಪ್ರಜಾ ಪ್ರಗತಿ 27 Oct 2025 12:45 pm

ಉತ್ತರಾಧಿಕಾರಿ ಹೆಸರು ಕೇಂದ್ರಕ್ಕೆ ಶಿಫಾರಸು ಮಾಡಿದ ನ್ಯಾಯಮೂರ್ತಿ ಬಿ.ಆರ್. ಗವಾಯಿ

ನವದೆಹಲಿ: ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರು ಸುಪ್ರೀಂ ಕೋರ್ಟ್‌ನ ಅತ್ಯಂತ ಹಿರಿಯ ನ್ಯಾಯಾಧೀಶರಾದ ನ್ಯಾಯಮೂರ್ತಿ ಸೂರ್ಯಕಾಂತ್ ಅವರ ಹೆಸರನ್ನು ತಮ್ಮ ಉತ್ತರಾಧಿಕಾರಿಯಾಗಿ ಪ್ರಸ್ತಾಪಿಸಿದ್ದು, ಕೇಂದ್ರ ಕಾನೂನು ಸಚಿವಾಲಯಕ್ಕೆ ಈ ಶಿಫಾರಸು ಮಾಡಿದ್ದಾರೆ.ಸಿಜೆಐ ಬಿ.ಆರ್. ಗವಾಯಿ ಅವರು ನವೆಂಬರ್ 23 ರಂದು ನಿವೃತ್ತರಾಗಲಿದ್ದಾರೆ. ಸರ್ಕಾರದಿಂದ ಅಧಿಸೂಚನೆ ಬಂದ ನಂತರ, ನ್ಯಾಯಮೂರ್ತಿ ಸೂರ್ಯಕಾಂತ್ ಅವರು ಭಾರತದ 53 ನೇ ಮುಖ್ಯ ನ್ಯಾಯಮೂರ್ತಿಯಾಗಲಿದ್ದಾರೆ ಮತ್ತು ಫೆಬ್ರವರಿ 9, 2027 ರಂದು ನಿವೃತ್ತರಾಗುವವರೆಗೆ ಸೇವೆ ಸಲ್ಲಿಸಲಿದ್ದಾರೆ. […]

ಪ್ರಜಾ ಪ್ರಗತಿ 27 Oct 2025 12:39 pm

ಸಾಕ್ಷ್ಯಾಧಾರಗಳ ಕೊರತೆ, ‘ಷಡ್ಯಂತ್ರ ಸೂತ್ರಧಾರರತ್ತ’ಎಸ್ ಐಟಿ ತನಿಖೆ……!

ಬೆಂಗಳೂರು: ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಅತ್ಯಾಚಾರ, ಕೊಲೆ ಮತ್ತು ಸಾಮೂಹಿಕ ಹತ್ಯೆಗಳ ಆರೋಪಗಳಿಗೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಎಸ್ ಐಟಿಗೆ ಇದುವರೆಗೆ ಯಾವುದೇ ಸಾಕ್ಷ್ಯಗಳು ಸಿಕ್ಕಿಲ್ಲ. ತಂಡ ಈಗ ಧರ್ಮಸ್ಥಳ ಹಾಗೂ ಅದರ ಆಡಳಿತ ಮಂಡಳಿಯನ್ನು ಗುರಿಯಾಗಿಟ್ಟುಕೊಂಡು ಸಂಚು ರೂಪಿಸಲಾಗಿದೆಯೇ ಎಂಬುದರತ್ತ ತನಿಖೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ. “ಹದಿಹರೆಯದ ಯುವತಿಯರು, ಮಹಿಳೆಯರು ಸೇರಿದಂತೆ 100 ಕ್ಕೂ ಹೆಚ್ಚು ಶವಗಳನ್ನು ನನ್ನಿಂದ ಹೂತು ಹಾಕಿಸಲಾಗಿತ್ತು ಎಂದು ಸುಳ್ಳು ಹೇಳಿಕೆ ಆರೋಪದ ಮೇಲೆ ಬಂಧನಕ್ಕೊಳಗಾಗಿರುವ […]

ಪ್ರಜಾ ಪ್ರಗತಿ 27 Oct 2025 12:27 pm

ಹೈಕೋರ್ಟ್ ಸ್ಥಳಾಂತರ ಬೇಡಿಕೆ ಬಗ್ಗೆ ಪರಿಶೀಲನೆ ; ಡಿ.ಕೆ ಶಿವಕುಮಾರ್

ಬೆಂಗಳೂರು: ಕಬ್ಬನ್ ಪಾರ್ಕ್ ಮತ್ತು ಲಾಲ್ ಬಾಗ್ ಕರ್ನಾಟಕ ಹಾಗೂ ದೇಶದ ಹೆಗ್ಗುರುತುಗಳು. ಕಬ್ಬನ್ ಪಾರ್ಕ್ ಅಭಿವೃದ್ಧಿಗೆ ಬಿಡಿಎಯಿಂದ 5 ಕೋಟಿ ರೂಪಾಯಿ ಅನುದಾನ ನೀಡಲಾಗುವುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿದರು.ಕಬ್ಬನ್ ಪಾರ್ಕ್ ನಲ್ಲಿ ಬೆಂಗಳೂರು ನಡಿಗೆ ಕಾರ್ಯಕ್ರಮದ ಅಂಗವಾಗಿ ಭಾನುವಾರ ನಡೆದ ನಾಗರಿಕರ ಜತೆ ಸಂವಾದ ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಅಹವಾಲು ಸ್ವೀಕರಿಸಿ ಮಾತನಾಡಿದರು. ಕಬ್ಬನ್ ಉದ್ಯಾನವನದ ಉನ್ನತೀಕರಣಕ್ಕೆ ಹಣ ಬಿಡುಗಡೆ ಮಾಡುವಂತೆ ನಾಗರಿಕರು ಮನವಿ ಮಾಡಿದ್ದಾರೆ. […]

ಪ್ರಜಾ ಪ್ರಗತಿ 27 Oct 2025 12:24 pm

UPSC ಆಕಾಂಕ್ಷಿಯ ಹತ್ಯೆ : ಮೂವರ ಬಂಧನ…..

ದೆಹಲಿ: ರಾಷ್ಟ್ರ ರಾಜಧಾನಿಯ ಗಾಂಧಿ ವಿಹಾರ್ ಪ್ರದೇಶದಲ್ಲಿನ ಫ್ಲಾಟ್‌ನಲ್ಲಿ ಇತ್ತೀಚಿಗೆ 32 ವರ್ಷದ UPSC ಆಕಾಂಕ್ಷಿಯ ಸುಟ್ಟ ದೇಹ ಪತ್ತೆಯಾಗಿತ್ತು. ಈ ಸಂಬಂಧ ಆತನ ಲವರ್, ಆಕೆಯ ಮಾಜಿ ಬಾಯ್ ಫ್ರೆಂಡ್ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿರುವುದಾಗಿ ಮೂಲಗಳು ತಿಳಿಸಿವೆ. ಈ ಪ್ರಕರಣ ಸಂಬಂಧ ಉತ್ತರ ಪ್ರದೇಶದ ಮೊರಾದಾಬಾದ್ ನಿವಾಸಿಗಳಾದ ವಿಧಿವಿಜ್ಞಾನ ವಿಜ್ಞಾನದಲ್ಲಿ ಬಿಎಸ್ಸಿ ವ್ಯಾಸಂಗ ಮಾಡುತ್ತಿದ್ದ ಯುವತಿ, ಆಕೆಯ ಮಾಜಿ ಬಾಯ್ ಫ್ರೆಂಡ್ ಮತ್ತು ಆತನ ಸಹಚರನನ್ನು ಬಂಧಿಸಲಾಗಿದೆ ಎಂದು ಪೊಲೀಸರು […]

ಪ್ರಜಾ ಪ್ರಗತಿ 27 Oct 2025 12:16 pm

ಬೆಂಗಳೂರಿನ ಘನತೆಗೆ ಘಾಸಿ ಮಾಡಬೇಡಿ: ಡಿಕೆ ಶಿವಕುಮಾರ್

ಬೆಂಗಳೂರು: ಉದ್ಯಮಿಗಳು ನಮ್ಮ ಸಹೋದರ, ಸಹೋದರಿಯರು. ಬೆಂಗಳೂರು ನಿಮ್ಮ ನಗರ, ಇದರ ಘನತೆಗೆ ಘಾಸಿ ಮಾಡಬೇಡಿ ಎಂದು ಹೇಳಿದ್ದೇನೆ. ನಮ್ಮನ್ನು ಟೀಕೆ ಮಾಡಿದವರನ್ನು ದೂರ ಮಾಡಲು ಆಗುವುದಿಲ್ಲ. ಅವರ ಸಲಹೆ ಸೂಚನೆಗಳನ್ನು ನಾವು ಕೇಳಬೇಕು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು. ಕಬ್ಬನ್ ಪಾರ್ಕ್ ನಲ್ಲಿ ಭಾನುವಾರ ಬೆಂಗಳೂರು ನಡಿಗೆ ಕಾರ್ಯಕ್ರಮದ ಅಂಗವಾಗಿ ನಡೆದ ನಾಗರಿಕರ ಜತೆ ಸಂವಾದದ ನಂತರ ಶಿವಕುಮಾರ್ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ಉದ್ಯಮಿಗಳ ಜೊತೆ […]

ಪ್ರಜಾ ಪ್ರಗತಿ 27 Oct 2025 12:14 pm

ವರ್ಕ್​ ಫ್ರಂ ಹೋಮ್ ಹೆಸರಿನಲ್ಲಿ 8,000 ಕ್ಕೂ ಹೆಚ್ಚು ಮಹಿಳೆಯರಿಗೆ ಕೋಟ್ಯಾಂತರ ರೂ. ವಂಚನೆ….!

ಬೆಳಗಾವಿ: ಮಹಿಳೆಯರಿಗೆ ವರ್ಕ್​ ಫ್ರಂ ಹೋಮ್ ಕೆಲಸ ನೀಡುವ ಹೆಸರಿನಲ್ಲಿ ಮಹಾರಾಷ್ಟ್ರದ ವ್ಯಕ್ತಿಯೊಬ್ಬರು ಬೆಳಗಾವಿಯಲ್ಲಿ ಸಾವಿರಾರು ಮಹಿಳೆಯರನ್ನು ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. ಸುಮಾರು 8000 ಮಹಿಳೆಯರಿಂದ 12 ಕೋಟಿ ರೂ. ಹಣ ಪಡೆದ ವಂಚಕ ಸದ್ದಿಲ್ಲದೆ ಪರಾರಿಯಾಗಿದ್ದಾನೆ. ಈ ಕುರಿತು ವಂಚಿತ ಮಹಿಳೆಯರು ಪೊಲೀಸರಿಗೆ ದೂರು ನೀಡಿದ್ದು, ಆರೋಪಿಯನ್ನು ಬಂಧಿಸಿ ತಮ್ಮ ಹಣವನ್ನು ಹಿಂತಿರುಗಿಸಲು ಒತ್ತಾಯಿಸಿದ್ದಾರೆ. ಆಘಾತಕಾರಿ ಸಂಗತಿಯೆಂದರೆ, ಕೆಲವು ಪ್ರಭಾವಿ ಮಹಿಳೆಯರು ಸಹ ಈ ವಂಚನೆಯ ಯೋಜನೆಯಲ್ಲಿ ಲಕ್ಷಗಟ್ಟಲೆ […]

ಪ್ರಜಾ ಪ್ರಗತಿ 27 Oct 2025 11:48 am

ಬಿಪಿಎಲ್ ಕಾರ್ಡ್‌‌ ಮಾನದಂಡ ಪರಿಶೀಲನೆ: ಸಚಿವ ಕೆ.ಎಚ್‌.ಮುನಿಯಪ್ಪ

ಶಿವಮೊಗ್ಗ: ಬಿಪಿಎಲ್ ಕಾರ್ಡ್‌ ರದ್ದು ಮಾಡಲ್ಲ. ಅವರು ಅನರ್ಹರಾಗಿದ್ದರೆ ಎಪಿಎಲ್ ಕಾರ್ಡ್‌ ಮಾಡುತ್ತೇವೆ ಅಷ್ಟೆ. ಬಿಪಿಎಲ್ ಕಾರ್ಡ್‌ನ ಮಾನದಂಡಗಳ ವಿಚಾರದಲ್ಲೂ ಪರಿಶೀಲನೆ ನಡೆಯುತ್ತಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಕೆ.ಎಚ್‌.ಮುನಿಯಪ್ಪ ತಿಳಿಸಿದರು. ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರದ ನಿಯಮಾವಳಿ ಪ್ರಕಾರ ರಾಜ್ಯದಲ್ಲಿ ಶೇ 15ರಷ್ಟು ಬಿಪಿಎಲ್ ಕಾರ್ಡ್ ರದ್ದಾಗಲಿವೆ. ಆದರೆ ಅರ್ಹರು ಆತಂಕ ಪಡುವುದು ಬೇಡ’ ಎಂದು ತಿಳಿಸಿದರು. ಬಿಪಿಎಲ್ ಕಾರ್ಡ್‌ಗಳ ವಾರ್ಷಿಕ ಆದಾಯ ಮಿತಿಯನ್ನು […]

ಪ್ರಜಾ ಪ್ರಗತಿ 27 Oct 2025 11:42 am

ಝಾಕಿರ್ ನಾಯ್ಕ್‌ಗೆ ಬಾಂಗ್ಲಾದಲ್ಲಿ ಅದ್ಧೂರಿ ಸ್ವಾಗತ…..!

ಢಾಕಾ: ಭಯೋತ್ಪಾದನೆಗೆ ಪ್ರಚೋದನೆ , ಅಕ್ರಮ ಹಣ ವರ್ಗಾವಣೆ ಆರೋಪ ಹೊತ್ತು 2016ರಿಂದ ಭಾರತ ತೊರೆದು ಮಲೇಷ್ಯಾದಲ್ಲಿ ವಾಸವಾಗಿರುವ ಧರ್ಮ ಪ್ರಚಾರಕ ಝಾಕಿರ್ ನಾಯ್ಕ್‌ಗೆ ನೊಬೆಲ್ ಪ್ರಶಸ್ತಿ ವಿಜೇತ ಮುಹಮ್ಮದ್ ಯೂನಸ್ ನೇತೃತ್ವದ ಬಾಂಗ್ಲಾದೇಶದ ಮಧ್ಯಂತರ ಸರ್ಕಾರವು ರೆಡ್‌ ಕಾರ್ಪೆಟ್‌ ಸ್ವಾಗತ ನೀಡಲು ಸಜ್ಜಾಗಿದೆ. ಯೂನಸ್ ನೇತೃತ್ವದ ಆಡಳಿತವು ನಾಯ್ಕ್‌ಗಾಗಿ ಒಂದು ತಿಂಗಳ ಕಾಲ ರಾಷ್ಟ್ರವ್ಯಾಪಿ ಪ್ರವಾಸಕ್ಕೆ ಅನುಮೋದನೆ ನೀಡಿದೆ. ಕಾರ್ಯಕ್ರಮ ಆಯೋಜಕರ ಪ್ರಕಾರ, ನವೆಂಬರ್ 28 ರಿಂದ ಡಿಸೆಂಬರ್ 20, 2025 […]

ಪ್ರಜಾ ಪ್ರಗತಿ 27 Oct 2025 11:33 am

ಕರೂರು ಕಾಲ್ತುಳಿತ ದುರಂತ : ಇಂದು ಸಂತ್ರಸ್ತರ ಕುಟುಂಬ ಭೇಟಿಯಾಗಲಿರುವ ವಿಜಯ್‌

ಕರೂರ್ ಕಾಲ್ತುಳಿತ ದುರಂತ ನಡೆದು ಒಂದು ತಿಂಗಳ ನಂತರ ಇಂದು (ಅಕ್ಟೋಬರ್ 27) ನಟ-ರಾಜಕಾರಣಿ ವಿಜಯ್ ಭೇಟಿ ಸಂತ್ರಸ್ತರ ಕುಟುಂಬವನ್ನು ಭೇಟಿ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ. ಮಾಮಲ್ಲಪುರಂನ ಖಾಸಗಿ ಹೋಟೆಲ್‌ನಲ್ಲಿ ಭೇಟಿಯಾಗುವ ಸಾಧ್ಯತೆ ಹೆಚ್ಚಿದೆ. ಈ ಸಂಬಂಧ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ(ಟಿವಿಕೆ), ರೆಸಾರ್ಟ್‌ನಲ್ಲಿ ಸಭೆ ಏರ್ಪಡಿಸಿದ್ದು, ಅಲ್ಲಿ ಪಕ್ಷವು 50 ಕೊಠಡಿಗಳನ್ನು ಕಾಯ್ದಿರಿಸಿದೆ. ವಿಜಯ್ ಅವರು ದುಃಖಿತ ಕುಟುಂಬಗಳನ್ನು ವೈಯಕ್ತಿಕವಾಗಿ ಭೇಟಿ ಮಾಡಿ ಸಂತಾಪ ಸೂಚಿಸಲಿದ್ದಾರೆ. ವಿಜಯ್ ಅವರೊಂದಿಗಿನ […]

ಪ್ರಜಾ ಪ್ರಗತಿ 27 Oct 2025 11:30 am

ಸಿಂಗಾಪುರದಲ್ಲಿ ಜೈಲು ಪಾಲಾದ ಭಾರತೀಯ ಮೂಲದ ನರ್ಸ್…..!

ಸಿಂಗಾಪುರ: ಆಸ್ಪತ್ರೆಯಲ್ಲಿ ಸಂದರ್ಶಕ ವ್ಯಕ್ತಿಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಭಾರತೀಯ ನರ್ಸ್ ಗೆ ಜೈಲು ಶಿಕ್ಷೆ ವಿಧಿಸಲಾಗಿದೆ. ಕಳೆದ ಜೂನ್‌ನಲ್ಲಿ ವ್ಯಕ್ತಿಯೊಬ್ಬರ ಮೇಲೆ 34 ವರ್ಷದ ಎಲಿಪೆ ಶಿವಾ ನಾಗು ಲೈಂಗಿಕ ದೌರ್ಜನ್ಯ ಎಸಗಿದ್ದ ಎನ್ನಲಾಗಿದೆ. ಸಿಂಗಾಪುರ ಪ್ರೀಮಿಯಂ ಆಸ್ಪತ್ರೆಯಲ್ಲಿ ಎಲಿಪೆ ಶಿವಾ ನಾಗು ಸ್ಟಾಫ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದ. ಈ ವೇಳೆ ಆತ ಆಸ್ಪತ್ರೆಗೆ ಬಂದಿದ್ದ ಸಂದರ್ಶಕನೊಬ್ಬನಿಗೆ ಲೈಂಗಿಕ ಕಿರುಕುಳದ ನೀಡಿದ್ದ ಎನ್ನಲಾಗಿದೆ. ಸಿಂಗಾಪುರದ ರಫೆಲ್ಸ್ […]

ಪ್ರಜಾ ಪ್ರಗತಿ 25 Oct 2025 3:43 pm

ಬೆಂಗಳೂರಿನಲ್ಲಿ ರಸ್ತೆ ಗುಂಡಿಗೆ ಸಾಫ್ಟ್‌ವೇರ್‌ ಇಂಜಿನಿಯರ್‌ ಬಲಿ…..!

ನೆಲಮಂಗಲ ಬೆಂಗಳೂರು ನಗರದಲ್ಲಿ ರಸ್ತೆ ಗುಂಡಿಗೆ ಮತ್ತೊಂದು ಜೀವ ಬಲಿಯಾಗಿದೆ. ಮಾದನಾಯಕನಹಳ್ಳಿ ಹತ್ತಿರದ ಹುಸ್ಕೂರು ಎಪಿಎಂಸಿ ರಸ್ತೆಯಲ್ಲಿ ಗುಂಡಿಯಿಂದಾಗಿ ಸಂಭವಿಸಿದ ಅಪಘಾತದಲ್ಲಿ 26 ವರ್ಷದ ಯುವತಿ ಪ್ರಿಯಾಂಕಾ ಸಾವನ್ನಪ್ಪಿದ್ದಾರೆ. ಪ್ರಿಯಾಂಕಾ ಸಾಫ್ಟ್‌ವೇರ್‌ ಇಂಜಿನಿಯರ್‌ ಆಗಿದ್ದು, ಅಣ್ಣನೊಂದಿಗೆ ಬೈಕ್‌ನಲ್ಲಿ ಮಾದಾವರ ಕಡೆಗೆ ತೆರಳುತ್ತಿದ್ದರು. ಈ ವೇಳೆ ಗುಂಡಿಯಿಂದಾಗಿ ಬೈಕ್‌ನಿಂದ ಬಿದ್ದು ಲಾರಿಯಡಿಗೆ ಸಿಲುಕಿ ಮೃತಪಟ್ಟಿದ್ದಾರೆ. ಲೈಟ್ಸ್ ಮೆಕ್ಯಾನಿಕ್ ಕಂಪನಿ ಬಳಿ ಬೆಳಿಗ್ಗೆ 10.55 ರ ಸುಮಾರಿಗೆ ಆಕೆಯ ಸಹೋದರ ಮಾದಾವರ ಮೆಟ್ರೋ ನಿಲ್ದಾಣದಲ್ಲಿ […]

ಪ್ರಜಾ ಪ್ರಗತಿ 25 Oct 2025 12:31 pm

ಡೆಡ್ಲಿ ಆಕ್ಸಿಡೆಂಟ್‌- ಸಚಿವೆ ಪಾರಾಗಿದ್ದೇ ಒಂದು ಪವಾಡ…..!

ಲಖನೌ: ಆಗ್ರಾ–ಲಕ್ನೋ ಎಕ್ಸ್‌ಪ್ರೆಸ್‌ವೇನಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದ ಅಪಘಾತದಲ್ಲಿ ಉತ್ತರ ಪ್ರದೇಶದ ಕ್ಯಾಬಿನೆಟ್ ಮಿನಿಸ್ಟರ್ ಬೇಬಿ ರಾಣಿ ಮೌರ್ಯಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಚಾಲಕನ ನಿಯಂತ್ರಣ ತಪ್ಪಿದ ಟ್ರಕ್ ಸಚಿವರ ಕಾರಿಗೆ ಡಿಕ್ಕಿ ಹೊಡದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಹಿಳಾ ಕಲ್ಯಾಣ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾದ ಮೌರ್ಯ ಅವರು ಹತ್ರಾಸ್‌ನಲ್ಲಿ ನಡೆದ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಲಕ್ನೋಗೆ ಹಿಂದಿರುಗುತ್ತಿದ್ದ ವೇಳೆ ಫಿರೋಜಾಬಾದ್‌ ಬಳಿಅಪಘಾತಸಂಭವಿಸಿದೆ. ರಾತ್ರಿ 8.40 ಸುಮಾರಿಗೆ ಸಚಿವರ ಕಾರಿನ ಮುಂದೆ ಚಲಿಸುತ್ತಿದ್ದ […]

ಪ್ರಜಾ ಪ್ರಗತಿ 25 Oct 2025 12:29 pm

ಗುಪ್ತ ಸ್ಥಳವೊಂದರಲ್ಲಿ ಏಷ್ಯಾಕಪ್‌ ಟ್ರೋಫಿ ಅಡಗಿಸಿಟ್ಟ ಮೊಹ್ಸಿನ್ ನಖ್ವಿ….!

ದುಬೈ: ಏಷ್ಯಾಕಪ್‌ ಟ್ರೋಫಿ ವಿವಾದ ಸದ್ಯಕ್ಕೆ ಬಗೆಹರಿಯುವ ಲಕ್ಷಣಗಳೂ ಕಾಣಿಸುತ್ತಿಲ್ಲ. ಏಷ್ಯನ್‌ ಕೌನ್ಸಿಲ್‌ ಅಧ್ಯಕ್ಷ ಮೊಹ್ಸಿನ್ನಖ್ವಿ ತನ್ನ ಉದ್ದಟತನದ ವರ್ತನೆಯನ್ನು ಮುಂದುವರಿಸಿದ್ದು, ದುಬೈನ ಎಸಿಸಿ ಮುಖ್ಯ ಕಚೇರಿಯಲ್ಲಿದ್ದ ಏಷ್ಯಾಕಪ್‌ ಟ್ರೋಫಿಯನ್ನು ಅಬುಧಾಬಿಯ ಗುಪ್ತ ಸ್ಥಳವೊಂದರಲ್ಲಿ ಅಡಗಿಸಿಟ್ಟಿದಾರೆ. ಏಷ್ಯಾಕಪ್‌ ಫೈನಲ್‌ ಗೆದ್ದ ಬಳಿಕ ಭಾರತ ತಂಡ ನಖ್ವಿ ಕೈಯಿಂದ ಟ್ರೋಫಿ ಸ್ವೀಕರಿಸದಿರಲು ನಿರ್ಧರಿಸಿತ್ತು. ಗಂಟೆಗಳ ಕಾಲ ನಡೆದ ನಾಟಕೀಯ ಬೆಳವಣಿಗೆ ಬಳಿಕ ನಖ್ವಿ ಹೋಟೆಲ್‌ಗೆ ತೆರಳಿದ್ದರು. ಜೊತೆಗೆ ಸಿಬ್ಬಂದಿ ಜತೆ ಟ್ರೋಫಿಯನ್ನು ತೆಗೆದುಕೊಂಡು ಹೋಗಿದ್ದರು. […]

ಪ್ರಜಾ ಪ್ರಗತಿ 25 Oct 2025 12:23 pm

ʼಲವ್‌ ಜಿಹಾದ್‌ʼ ಪ್ರಕರಣ : ಆರೋಪಿ ಮೊಹಮ್ಮದ್‌ ಇಶಾಕ್‌ ಬಂಧನ

ಬೆಂಗಳೂರು: ಬೆಂಗಳೂರಿನಲ್ಲಿ ಒಂದು ʼಲವ್ ಜಿಹಾದ್‌ʼ ಎನ್ನಲಾದ ಪ್ರಕರಣ ನಡೆದಿದೆ. ಮದುವೆ ಆಮಿಷ ತೋರಿಸಿ ಯುವತಿಯನ್ನು ಬಲಾತ್ಕರಿಸಿ, ಮತಾಂತರಕ್ಕೆ ವಿಫಲ ಯತ್ನ ನಡೆಸಿ ನಂತರ ಕೈಕೊಟ್ಟ ಆರೋಪಿಯನ್ನು ಪೊಲೀಸರು ಆರೆಸ್ಟ್ ಮಾಡಿದ್ದಾರೆ. ಅಮೃತಹಳ್ಳಿ ಠಾಣೆ ಪೋಲೀಸರು ಆರೋಪಿ ಮೊಹಮ್ಮದ್ ಇಶಾಕ್ ಎಂಬಾತನನ್ನು ಆರೆಸ್ಟ್ ಮಾಡಿದ್ದಾರೆ. ಮತಾಂತರಕ್ಕೆ ಒಪ್ಪದಿದ್ದಕ್ಕೆ ಪ್ರೀತಿಸಿದ ಯುವತಿಗೆ ಮಹಮ್ಮದ್ ಇಶಾಕ್ ಕೈಕೊಟ್ಟಿದ್ದಾನೆ. 2024ರ ಅಕ್ಟೋಬರ್​​ 17ರಂದು ಯುವತಿಗೆ ಮೊಹಮ್ಮದ್ ಇಶಾಕ್‌ನ ಪರಿಚಯವಾಗಿತ್ತು. ಈ ಪರಿಚಯ ಸ್ನೇಹ ಮತ್ತು ಪ್ರೀತಿಯಾಗಿ […]

ಪ್ರಜಾ ಪ್ರಗತಿ 25 Oct 2025 12:17 pm