ಭಕ್ತರಿಗೆ ಗುಡ್ ನ್ಯೂಸ್: ಮಹಾ ಶಿವರಾತ್ರಿ ಹಬ್ಬದ ಪ್ರಯುಕ್ತ ಶ್ರೀಶೈಲಂಗೆ ವಿಶೇಷ ಸಾರಿಗೆ ಸೌಲಭ್ಯ
ಬಳ್ಳಾರಿ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಬಳ್ಳಾರಿ ವಿಭಾಗದಿಂದ ಮಹಾ ಶಿವರಾತ್ರಿ ಹಬ್ಬದ ಪ್ರಯುಕ್ತ ಶ್ರೀಶೈಲಂಗೆ ಹೋಗಲು ವಿಶೇಷ ಸಾರಿಗೆ ಸೌಲಭ್ಯ ಮಾಡಲಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಇನಾಯತ್ ಬಾಗ್ಬಾನ್ ಅವರು ತಿಳಿಸಿದ್ದಾರೆ. ಬಳ್ಳಾರಿ ವಿಭಾಗದ ಬಳ್ಳಾರಿ, ಮೋಕಾ, ಕುರುಗೋಡು, ಸಿರುಗುಪ್ಪ, ತೆಕ್ಕಲಕೋಟೆ, ಹಳೇಕೋಟೆ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಮಹಾ ಶಿವರಾತ್ರಿ ಹಬ್ಬದ ಪ್ರಯುಕ್ತ ಶ್ರೀಶೈಲಂಗೆ ಹೋಗುತ್ತಿದ್ದು, ಭಕ್ತಾಧಿಗಳ ಅನುಕೂಲಕ್ಕಾಗಿ ಫೆ.11 ರಿಂದ 16 ರ ವರೆಗೆ ರವರೆಗೆ ವಿಶೇಷ ಸಾರಿಗೆ […]
ಭೋಪಾಲ್: ಅವಿವಾಹಿತೆ, ವಿಧವೆ ಮತ್ತು ವಿಚ್ಛೇದಿತ ಮಹಿಳೆಯರು ಈಗ ಪೋಷಕರ ಕುಟುಂಬ ಪಿಂಚಣಿಗೆ ಅರ್ಹರು ಎಂದು ಮಧ್ಯಪ್ರದೇಶ ಸಚಿವ ಸಂಪುಟವು ಐತಿಹಾಸಿಕ ಸುಧಾರಣೆಗೆ ಅನುಮೋದನೆ ನೀಡಿದೆ. ಮಹಿಳೆಯರ ಆರ್ಥಿಕ ಭದ್ರತೆಯನ್ನು ಬಲಪಡಿಸುವ ಗುರಿಯನ್ನು ಹೊಂದಿರುವ ಒಂದು ಮಹತ್ವದ ನಿರ್ಧಾರದಲ್ಲಿ, ಮಧ್ಯಪ್ರದೇಶ ಸರ್ಕಾರವು ತನ್ನ ಪಿಂಚಣಿ ನಿಯಮಗಳಿಗೆ ಪ್ರಮುಖ ತಿದ್ದುಪಡಿಯನ್ನು ಅನುಮೋದಿಸಿದೆ. ಮುಖ್ಯಮಂತ್ರಿ ಮೋಹನ್ ಯಾದವ್ ನೇತೃತ್ವದ ರಾಜ್ಯ ಸಚಿವ ಸಂಪುಟವು ರಾಜ್ಯದಲ್ಲಿ ವಿಚ್ಛೇದಿತ ಮಹಿಳೆಯರು ಈಗ ತಮ್ಮ ಪೋಷಕರ ಕುಟುಂಬ ಪಿಂಚಣಿ ಪಡೆಯಲು ಅರ್ಹರಾಗಿರುತ್ತಾರೆ ಎಂದು ನಿರ್ಧರಿಸಿದೆ. […]
ಬೆಂಗಳೂರು: ಪರಿಹಾರ ಕೊಡದೇ ಇದ್ದದ್ದಕ್ಕೆ ಸರ್ಕಾರದ ವಿರುದ್ಧ ಅಸಮಾಧಾನಗೊಂಡಿದ್ದ ರೈತರೊಬ್ಬರು ವಿಧನಸೌಧದ ಬಳಿ ಬಂದು ಅಲ್ಲಿದ್ದ ಶ್ರೀಗಂಧದ ಮರಗಳನ್ನು ಕಡಿದು ಆಕ್ರೋಶ ವ್ಯಕ್ತಪಡಿಸಿರುವ ಘಟನೆ ನಡೆದಿದೆ. ಚಿಕ್ಕಮಗಳೂರಿನ ವಿಶುಕುಮಾರ್ ಎಂಬ ರೈತ ಇಂದು ವಿಧಾನಸೌಧದ ಬಳಿ ಇರುವ ಶ್ರೀಗಂಧದ ಮರಗಳನ್ನು ಕಡಿದು ಪ್ರತಿಭಟನೆ ವ್ಯಕ್ತಪಡಿಸಿದರು. ಅಭಿವೃದ್ಧಿ ಹೆಸರಲ್ಲಿ ವಿಶುಕುಮಾರ್ ಅವರ ಜಮೀನಲ್ಲಿದ್ದ 30 ಮರಗಳನ್ನು ಅಧಿಕಾರಿಗಳು ಕಡಿದಿದ್ದರಂತೆ. ಅದಕ್ಕೆ ಪರಿಹಾರವನ್ನು ನೀಡದೇ ಸತಾಯಿಸಿದ್ದರಂತೆ. ಇದರಿಂದ ಬೇಸತ್ತಿದ್ದ ರೈತ ವಿಶುಕುಮಾರ್ ಸರ್ಕಾರದ ವಿರುದ್ಧ ಆಕ್ರೋಶಗೊಂಡಿದ್ದರು. ನೇರವಾಗಿ ವಿಧಾನಸೌಧದ ಬಳಿ […]
ಬಿಜೆಪಿ ಮುಖಂಡನಿಗೆ ರಾಜ್ಯ ಸಚಿವ ಸ್ಥಾನಮಾನ ನೀಡಿದ ಸರ್ಕಾರ: ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶ
ಬೆಂಗಳೂರು: ಶಿಕಾರಿಪುರದ ಬಿಜೆಪಿ ಮುಖಂಡನಿಗೆ ರಾಜ್ಯ ಕಾಂಗ್ರೆಸ್ ಸರ್ಕಾರ ರಾಜ್ಯ ಸಚಿವ ಸ್ಥಾನಮಾನ ನೀಡಿರುವುದಕ್ಕೆ ಕಾಂಗ್ರೆಸ್ ಕಾರ್ಯಕರ್ತರಿಂದ ಆಕ್ರೋಶ ವ್ಯಕ್ತವಾಗಿದೆ. ನಿಗಮ ಮಂಡಳಿ ಮತ್ತು ಪ್ರಾಧಿಕಾರದ ಅಧ್ಯಕ್ಷರಾಗಿರುವ 54 ಮಂದಿಗೆ ರಾಜ್ಯ ಸಚಿವ ಸ್ಥಾನಮಾನ ನೀಡಿ ಸರ್ಕಾರ ಇತ್ತೀಚೆಗಷ್ಟೇ ಆದೇಶಿಸಿದೆ. ಆದರೆ ಇವರಲ್ಲಿ ಶಿಕಾರಿಪುರದ ಬಿಜೆಪಿ ಮುಖಂಡ ಬಿ.ಡಿ. ಭೂಕಾಂತ್ ಅವರಿಗೂ ರಾಜ್ಯ ಸಚಿವ ಸ್ಥಾನಮಾನ ನೀಡಿರುವುದು ಕಾಂಗ್ರೆಸ್ ವಲಯದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. 54 ಮಂದಿ ನಿಗಮ ಮಂಡಳಿ ಅಧ್ಯಕ್ಷರ ಪಟ್ಟಿಯಲ್ಲಿ ಕರ್ನಾಟಕ ರಾಜ್ಯ ಸಹಕಾರಿ ತೋಟಗಾರಿಕೆ […]
BREAKING: ಪ್ರಧಾನಿ ಮೋದಿ ಭೇಟಿಯಾದ ಸಚಿನ್ ತೆಂಡೂಲ್ಕರ್: ಅರ್ಜುನ್-ಸಾನಿಯಾ ವಿವಾಹಕ್ಕೆ ಆಹ್ವಾನ
ನವದೆಹಲಿ: ದೆಹಲಿಯಲ್ಲಿ ಇಂದು ಪ್ರಧಾನಿ ಮೋದಿ ಅವರನ್ನು ಭೇಟಿಯಾದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರು ತಮ್ಮ ಪುತ್ರ ಅರ್ಜುನ್ ತೆಂಡೂಲ್ಕರ್ ಮತ್ತು ಸಾನಿಯಾ ಅವರ ಮದುವೆಗೆ ಆಹ್ವಾನಿಸಿದ್ದಾರೆ. ಅರ್ಜುನ್-ಸಾನಿಯಾ ವಿವಾಹಕ್ಕೂ ಮುನ್ನ ಪ್ರಧಾನಿ ಮೋದಿ ಅವರನ್ನು ಸಚಿನ್ ತೆಂಡೂಲ್ಕರ್ ಮತ್ತು ಕುಟುಂಬ ಭೇಟಿ ಮಾಡಿದೆ. ಭಾರತೀಯ ಕ್ರೀಡೆ ಮತ್ತು ರಾಷ್ಟ್ರೀಯ ನಾಯಕತ್ವದ ಜಗತ್ತನ್ನು ಬೆಸೆಯುವ ಈ ಕ್ಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸಕ್ಕೆ ಭೇಟಿ ನೀಡಿದ ಸಚಿನ್, ಅರ್ಜುನ್ ತೆಂಡೂಲ್ಕರ್ ಮತ್ತು ಅವರ ಸಾನಿಯಾ […]
ದೆಹಲಿಯಲ್ಲಿ ಉದ್ಯಮಿಯ ಗುಂಡಿಟ್ಟು ಹತ್ಯೆ: ಕೃತ್ಯದ ಹಿಂದೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಕೈವಾಡ
ನವದೆಹಲಿ: ದೆಹಲಿ ಹೊರವಲಯದಲ್ಲಿ ಅಪರಿಚಿತರ ಗುಂಡಿನ ದಾಳಿಗೆ ಬಲಿಯಾಗಿದ್ದ ಉದ್ಯಮಿ ಹತ್ಯೆ ಹಿಂದೆ ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಕೈವಾಡವಿದೆ ಎಂದು ತಿಳಿದುಬಂದಿದೆ. ದೆಹಲಿಯ ಹೊರವಲಯದ ಬವಾನಾ ಕೈಗಾರಿಕಾ ಪ್ರದೇಶದ ಬಳಿ ಸೋಮವಾರ 35 ವರ್ಷದ ಉದ್ಯಮಿಯನ್ನು ದುಷ್ಕರ್ಮಿಗಳು ಗುಂಡಿಟ್ಟು ಹತ್ಯೆ ಮಾಡಿದ್ದರು. ಪ್ಲಾಸ್ಟಿಕ್ ವ್ಯಾಪಾರಿಯಾಗಿದ್ದ ಉದ್ಯಮಿಯನ್ನು ಗುರಿಯಾಗಿಸಿಕೊಂಡು ಬೈಕ್ಗಳಲ್ಲಿ ಬಂದ ನಾಲ್ವರು ಹಲವು ಸುತ್ತು ಗುಂಡು ಹಾರಿಸಿದ್ದಾರೆ. ಈ ದಾಳಿಯ ಹೊಣೆಯನ್ನು ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಹೊತ್ತುಕೊಂಡಿದೆ. ಉದ್ಯಮಿ ಗುಂಡಿನ ದಾಳಿಯಿಂದ ಬಚಾವಾಗಲು […]
Big Update: ದಾವಣಗೆರೆ ಎಸ್ಪಿ ಉಮಾ ಪ್ರಶಾಂತ್ ವರ್ಗಾವಣೆ
ಕರ್ನಾಟಕ ಸರ್ಕಾರ ಮಂಗಳವಾರ ಕೆಲವು ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ. ದಾವಣಗೆರೆ ಎಸ್ಪಿಯಾಗಿದ್ದ ಉಮಾ ಪ್ರಶಾಂತ್ ಅವರನ್ನು ವರ್ಗಾವಣೆ ಮಾಡಲಾಗಿದ್ದು, ಸ್ಥಳ ನಿಯೋಜನೆ ಮಾಡಿಲ್ಲ. ಈ ಕುರಿತು ಸಂಜಯ್ ಬಿ.ಎಸ್. ಸರ್ಕಾರದ ಅಧೀನ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಸೇವೆಗಳು-4) ಆದೇಶವನ್ನು ಹೊರಡಿಸಿದ್ದಾರೆ. ದಾವಣಗೆರೆಯ ನೂತನ ಎಸ್ಪಿಯಾಗಿ ಶೇಖರ್ ಹೆಚ್.ತೆಕ್ಕಣ್ಣವರ್ (ಕೆಎನ್;2014) ನೇಮಕ ಮಾಡಲಾಗಿದೆ. ಗುಪ್ತಚರ ವಿಭಾಗ, ಬೆಂಗಳೂರು ಎಸ್ಪಿಯಾಗಿ ಅವರು ಕಾರ್ಯ ನಿರ್ವಹಣೆ ಮಾಡುತ್ತಿದ್ದರು. ತಕ್ಷಣದಿಂದ ಮತ್ತು ಮುಂದಿನ ಆದೇಶದ […]
ಅಂಚೆ ಗ್ರಾಹಕರಿಗೆ ಗುಡ್ ನ್ಯೂಸ್: ಸಾರ್ವಜನಿಕರ ಅನುಕೂಲಕ್ಕಾಗಿ ಬುಕ್ಕಿಂಗ್ ಅವಧಿ ವಿಸ್ತರಣೆ
ಭಾರತೀಯ ಅಂಚೆ ಇಲಾಖೆ ವತಿಯಿಂದ ಸಾರ್ವಜನಿಕರ ಸೌಲಭ್ಯಕ್ಕಾಗಿ ಅಂಚೆ ಕಚೇರಿ ಮುಚ್ಚುವ ಸಮಯದ 30 ನಿಮಿಷಗಳ ಮುಂಚಿತವರೆಗೆ ಪತ್ರಗಳು, ಪಾರ್ಸೆಲ್ಗಳು ಹಾಗೂ ಅಂತರರಾಷ್ಟ್ರೀಯ ಪತ್ರಗಳು ಮತ್ತು ಪಾರ್ಸೆಲ್ಗಳ ಬುಕ್ಕಿಂಗ್ ಸೌಲಭ್ಯವನ್ನು ವಿಸ್ತರಿಸಲಾಗಿದ್ದು, ಮೂರು ಉಪಕ್ರಮಗಳಾಗಿ ಜಾರಿಗೆ ತಂದಿದೆ. ಮೊದಲನೆಯದಾಗಿ, ಸ್ಪೀಡ್ ಪೋಸ್ಟ್ ಮತ್ತು ಇತರ ಪತ್ರ ಹಾಗೂ ಪಾರ್ಸೆಲ್ಗಳ ಬುಕ್ಕಿಂಗ್ ಅವಧಿ ವಿಸ್ತರಣೆ ಮಾಡಿದ್ದು, ಎಲ್ಲಾ ಇಲಾಖಾ ಅಂಚೆ ಕಚೇರಿಗಳಲ್ಲಿ ಕಚೇರಿ ಕಾರ್ಯ ಸಮಯ ಮುಕ್ತಾಯವಾಗುವ ಮೊದಲು ಕೊನೆಯ 30 ನಿಮಿಷಗಳವರೆಗೆ ಅಂಚೆ ವಸ್ತುಗಳನ್ನು ಬುಕ್ ಮಾಡುವ […]
BREAKING: ಬಾಲಿವುಡ್ ಖ್ಯಾತ ನಟ ರಣವೀರ್ ಸಿಂಗ್ ಗೆ ಬೆದರಿಕೆ
ಮುಂಬೈ: ಬಾಲಿವುಡ್ ನಟ ರಣವೀರ್ ಸಿಂಗ್ ಗೆ ಬೆದರಿಕೆ ಸಂದೇಶ ಬಂದಿದೆ. ವಾಟ್ಸಾಪ್ ನಲ್ಲಿ ವಾಯ್ಸ್ ಮೆಸೇಜ್ ಮೂಲಕ ಬೆದರಿಕೆ ಹಾಕಲಾಗಿದೆ. ಒಂದು ಕೋಟಿ ರೂಪಾಯಿ ಹಣ ನೀಡುವಂತೆ ದುಷ್ಕರ್ಮಿ ಧಮ್ಕಿ ಹಾಕಿದ್ದಾನೆ. ಮುಂಬೈ ಪೊಲೀಸರಿಗೆ ರಣವೀರ್ ಸಿಂಗ್ ದೂರು ನೀಡಿದ್ದಾರೆ. ಬೆದರಿಕೆ ಸಂದೇಶ ಹಿನ್ನೆಲೆಯಲ್ಲಿ ರಣವೀರ್ ಸಿಂಗ್ ಮನೆಗೆ ಭದ್ರತೆ ಒದಗಿಸಲಾಗಿದೆ. ನಿರ್ದೇಶಕ ರೋಹಿತ್ ಶೆಟ್ಟಿ ಮನೆಯಲ್ಲಿ ನಡೆದ ಗುಂಡಿನ ದಾಳಿ ಘಟನೆಯ ನಂತರ ‘ಧುರಂಧರ್’ ನಟ ರಣವೀರ್ ಸಿಂಗ್ ಅವರಿಗೆ ಮಂಗಳವಾರ ವಾಟ್ಸಾಪ್ ವಾಯ್ಸ್ […]
ಫೆ. 17ರಂದು ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಭಾರತಕ್ಕೆ ಭೇಟಿ
ನವದೆಹಲಿ: ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಫೆಬ್ರವರಿ 17 ರಿಂದ 19 ರವರೆಗೆ ಭಾರತಕ್ಕೆ ಅಧಿಕೃತ ಭೇಟಿ ನೀಡಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಮಂಗಳವಾರ ಪ್ರಕಟಿಸಿದೆ. 2024 ರ ಜನವರಿಯಲ್ಲಿ ವಾರ್ಷಿಕ ಗಣರಾಜ್ಯೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ನಂತರ ಮ್ಯಾಕ್ರನ್ ಅವರ ಮೊದಲ ಭಾರತ ಭೇಟಿ ಇದಾಗಿದೆ. ಪ್ರಧಾನಿ ನರೇಂದ್ರ ಮೋದಿ ಕಳೆದ ವರ್ಷ ಫೆಬ್ರವರಿಯಲ್ಲಿ ಫ್ರಾನ್ಸ್ಗೆ ಭೇಟಿ ನೀಡಿದ್ದರು. 2047 ರ ಮಾರ್ಗಸೂಚಿಯಲ್ಲಿ ಪ್ರತಿಪಾದಿಸಿರುವಂತೆ ವ್ಯಾಪಕ ಶ್ರೇಣಿಯ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಹಕಾರವನ್ನು ಬಲಪಡಿಸುವ […]
SHOCKING: ಕುರ್ಚಿಯಲ್ಲಿ ಕುಳಿತಲ್ಲಿಯೇ ಸಾವನ್ನಪ್ಪಿದ ಯಾತ್ರಿಕ
ಉಡುಪಿ: ಸಾವು ಎಷ್ಟೊತ್ತಿಗೆ ಹೇಗೆ ಬರುತ್ತದೆ ಎಂಬುದರ ಸಣ್ಣ ಸುಳಿವೂ ಇರುವುದಿಲ್ಲ. ಯಾತ್ರಾರ್ಥಿಯೊಬ್ಬರು ವಸತಿ ಗೃಹದಲ್ಲಿ ಕುರ್ಚಿಯಲ್ಲಿ ಕುಳಿತಿದ್ದಲ್ಲಿಯೇ ಸಾವನ್ನಪ್ಪಿರುವ ಘಟನೆ ಉಡುಪಿಯಲ್ಲಿ ನಡೆದಿದೆ. ಉಡುಪಿಯ ಹಳೆ ಬಸ್ ನಿಲ್ದಾಣದ ಬಳಿ ಇರುವ ವಸತಿ ಗೃಹದಲ್ಲಿ ಈ ಘಟನೆ ನಡೆದಿದೆ. ಎಷ್ಟು ಹೊತ್ತಾದರೂ ವ್ಯಕ್ತಿ ಹೊರ ಬಾರದಿರುವುದನ್ನು ಗಮನಿಸಿದ ವಸತಿಗೃಹದ ಸಿಬ್ಬಂದಿ, ರೂಮಿಗೆ ಹೋಗಿ ಬಾಗಿಲು ತೆರೆದು ನೋಡಿದಾಗ ಶಾಕ್ ಆಗಿದ್ದಾರೆ. ವ್ಯಕ್ತಿ ಕುರ್ಚಿಯಲ್ಲಿ ಕುಳಿತ ಸ್ಥಿತಿಯಲ್ಲಿಯೇ ಮೃತಪಟ್ಟಿದ್ದರು. ಮೃತರನ್ನು ದಾವಣಗೆರೆ ನಿವಾಸಿ ಮಹಾಂತೇಶ್ ಎಂ.ಜಿ ಎಂದು […]
BIG NEWS: ಎಐ ಕಂಟೆಂಟ್ ಗೆ ಸರ್ಕಾರದ ಹೊಸ ನಿಯಮ ಜಾರಿ: ಆಕ್ಷೇಪಾರ್ಹ ಪೋಸ್ಟ್ 3 ಗಂಟೆಗಳಲ್ಲಿ ತೆಗೆದುಹಾಕಲು ಆದೇಶ
ನವದೆಹಲಿ: AI ವಿಷಯಕ್ಕಾಗಿ ಸರ್ಕಾರದ ಹೊಸ ನಿಯಮ ಜಾರಿಗೊಳಿಸಿದ್ದು, ಸಾಮಾಜಿಕ ಮಾಧ್ಯಮವು ಡೀಪ್ಫೇಕ್ಗಳನ್ನು ಲೇಬಲ್ ಮಾಡಬೇಕು, ಆಕ್ಷೇಪಾರ್ಹ ಪೋಸ್ಟ್ಗಳನ್ನು 3 ಗಂಟೆಗಳಲ್ಲಿ ತೆಗೆದುಹಾಕಬೇಕು ಎಂದು ಸೂಚಿಸಿದೆ. ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ AI-ರಚಿತ ವಿಷಯದ ವಿರುದ್ಧ ಭಾರತ ಸರ್ಕಾರವು ಕ್ರಮ ಕೈಗೊಂಡಿದೆ. ಸರ್ಕಾರವು ಹೊಸ ನಿಯಮವನ್ನು ಜಾರಿಗೆ ತಂದಿದೆ, ಸಾಮಾಜಿಕ ಮಾಧ್ಯಮ ವೇದಿಕೆಗಳು AI ಮಾಡಿದ ಅಥವಾ ಬದಲಾಯಿಸಿದ ಯಾವುದೇ ವಿಷಯವನ್ನು ಸ್ಪಷ್ಟವಾಗಿ ಗುರುತಿಸಬೇಕಾಗುತ್ತದೆ. ಇದು AI ಲೇಬಲ್ನಲ್ಲಿ ಟ್ಯಾಗ್ ಮಾಡುವುದರ ಬಗ್ಗೆ ಮಾತ್ರವಲ್ಲ, ಪ್ರತಿ ಸಾಮಾಜಿಕ ಮಾಧ್ಯಮ […]
ಕಾಫಿ ಪ್ರಿಯರಿಗೆ ಸಿಹಿ ಸುದ್ದಿ: ದಿನಕ್ಕೆ 2 ಕಪ್ ಕಾಫಿ ಕುಡಿದರೆ ಮರೆಗುಳಿತನ (Dementia) ದೂರ
ಕಾಫಿ ಕೇವಲ ನಿದ್ರೆ ಓಡಿಸುವ ಪಾನೀಯವಲ್ಲ ಅದು ಮೆದುಳಿನ ಆರೋಗ್ಯವನ್ನು ಕಾಪಾಡುವ ಸಂಜೀವಿನಿಯೂ ಹೌದು.ಕಾಫಿ ಕುಡಿಯುವುದು ಆರೋಗ್ಯಕ್ಕೆ ಕೆಟ್ಟದು ಎಂದು ಯಾರಾದರೂ ಹೇಳಿದರೆ ಈಗ ನೀವು ಅವರಿಗೆ ಈ ಸಂಶೋಧನೆಯ ವರದಿಯನ್ನು ತೋರಿಸಬಹುದು. JAMA ಇತ್ತೀಚೆಗೆ ಪ್ರಕಟಿಸಿದ ವರದಿಯ ಪ್ರಕಾರ, ಕೆಫೀನ್ ಯುಕ್ತ ಕಾಫಿ ಸೇವನೆಯು ಮೆದುಳಿನ ಆರೋಗ್ಯವನ್ನು ಸುಧಾರಿಸುವುದಲ್ಲದೆ, ವಯಸ್ಸಾದಂತೆ ಕಾಡುವ ಮರೆಗುಳಿತನದ ಅಪಾಯವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ. 43 ವರ್ಷಗಳ ಸುದೀರ್ಘ ಸಂಶೋಧನೆವಿಜ್ಞಾನಿ ಎರಿಕ್ ಟೋಪೋಲ್ ಅವರು ಹಂಚಿಕೊಂಡಿರುವ ಈ ಅಧ್ಯಯನವು ಸಾಮಾನ್ಯವಾದುದಲ್ಲ ವಿಜ್ಞಾನಿಗಳು […]
T20 World Cup 2026: ನಮೀಬಿಯ ವಿರುದ್ಧ ನೆದರ್ಲೆಂಡ್ಸ್ಗೆ ಗೆಲುವು; ನಷ್ಟವಾಗಿದ್ದು ಪಾಕಿಸ್ತಾನಕ್ಕೆ
ದೆಹಲಿಯ ಅರುಣ್ ಜೇಟ್ಲಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಇಂದು ( ಫೆಬ್ರವರಿ 10 ) ನಡೆದ ಐಸಿಸಿ ಪುರುಷರ ಟಿ ಟ್ವೆಂಟಿ ವಿಶ್ವಕಪ್ 2026ರ ಗ್ರೂಪ್ ಹಂತದ 10ನೇ ಪಂದ್ಯದಲ್ಲಿ ನೆದರ್ಲೆಂಡ್ಸ್ ನಮೀಬಿಯ ವಿರುದ್ಧ 7 ವಿಕೆಟ್ಗಳ ಗೆಲುವನ್ನು ಸಾಧಿಸಿದೆ. ಪಂದ್ಯದಲ್ಲಿ ಟಾಸ್ ಗೆದ್ದು ಬೌಲಿಂಗ್ ಆರಿಸಿಕೊಂಡ ನೆದರ್ಲೆಂಡ್ಸ್ ನಮೀಬಿಯ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ನಮೀಬಿಯ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 156 ರನ್ ಕಲೆಹಾಕಿ ನೆದರ್ಲೆಂಡ್ಸ್ಗೆ 157 […]
Big News; ಧಾರವಾಡ ಜಿಲ್ಲಾಧಿಕಾರಿ ದಿವ್ಯ ಪ್ರಭು ವರ್ಗಾವಣೆ
ಕರ್ನಾಟಕ ಸರ್ಕಾರ ಐಎಎಸ್ ಅಧಿಕಾರಿಗಳ ವರ್ಗಾವಣೆ ಮಾಡಿದೆ. ಧಾರವಾಡ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರನ್ನು ವರ್ಗಾವಣೆ ಮಾಡಲಾಗಿದ್ದು, ಯಾವುದೇ ಹುದ್ದೆಯನ್ನು ಇನ್ನೂ ಸಹ ನೀಡಲಾಗಿಲ್ಲ. ಮಂಗಳವಾರ ಈ ಕುರಿತು ಪ್ರಸನ್ನ ಕುಮಾರ್ ವಿ., ಸರ್ಕಾರದ ಅಧೀನ ಕಾರ್ಯದರ್ಶಿ ಸಿಬ್ಬಂದಿ ಮತ್ತು ಸುಧಾರಣಾ ಇಲಾಖೆ (ಸೇವೆಗಳು-1) ಆದೇಶವನ್ನು ಹೊರಡಿಸಿದ್ದಾರೆ. ಧಾರವಾಡದ ನೂತನ ಜಿಲ್ಲಾಧಿಕಾರಿಯಾಗಿ ಸ್ನೇಹಲ್ ಆರ್. (ಕೆಎನ್: 2013) ನೇಮಕ ಮಾಡಲಾಗಿದೆ. ಆದರೆ ದಿವ್ಯ ಪ್ರಭು ಅವರಿಗೆ ಸದ್ಯಕ್ಕೆ ಯಾವುದೇ ಹುದ್ದೆಯನ್ನು ನೀಡಲಾಗಿಲ್ಲ. ಐಎಎಸ್ ಅಧಿಕಾರಿ ಸ್ನೇಹಲ್ ಆರ್. […]
ವಿದೇಶಿ ಮಹಿಳೆ ಜೊತೆ ಸ್ಪಾ ಸಿಬ್ಬಂದಿ ಅನುಚಿತ ವರ್ತನೆ: ಪ್ರಕರಣ ದಾಖಲು
ಬೆಂಗಳೂರು: ಕೆನಡಾ ಮಹಿಳೆಯೊಬ್ಬರಿಗೆ ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್ ನ ಸ್ಪಾ ಸಿಬ್ಬಂದಿ ಅಸಭ್ಯವಾಗಿ ವರ್ತಿಸಿರುವ ಘಟನೆ ಬೆಳಕಿಗೆ ಬಂದಿದೆ. ಈ ಬಗ್ಗೆ ದೂರು ನೀಡಿದರೂ ಹೋಟೆಲ್ ಆಡಳಿತ ಮಂಡಳಿ ಘಟನೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಮಹಿಳೆ ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರಿಗೆ ದೂರು ನೀಡಿದ್ದಾರೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದು, ಹೋಟೆಲ್ನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿದ್ದಾರೆ. ಕೆನಡಾದ ಮಹಿಳೆಯ ಜೊತೆ ಹೋಟೆಲ್ ಸ್ಪಾ ಸಿಬ್ಬಂದಿ ಮಸಾಜ್ ಸಮಯದಲ್ಲಿ ಅನುಚಿತವಾಗಿ ವರ್ತಿಸಿದ್ದಾರೆ. ಥೆರಪಿಸ್ಟ್ ಅಸಮಂಜಸವಾಗಿ […]
ಸಾಲದ ಶೂಲ, ನಮ್ಮ ಮೆಟ್ರೋ ದೇಶದಲ್ಲಿಯೇ ದುಬಾರಿ!
ಬಿಎಂಆರ್ಸಿಎಲ್ ನಮ್ಮ ಮೆಟ್ರೋ ಪ್ರಯಾಣ ದರ ಏರಿಕೆ ಮಾಡಲು ಹೊರಟಿದ್ದು ವಿವಾದಕ್ಕೆ ಕಾರಣವಾಗಿದೆ. ದೇಶದಲ್ಲಿಯೇ ‘ನಮ್ಮ ಮೆಟ್ರೋ’ ದುಬಾರಿ ಎಂಬ ಪಟ್ಟವನ್ನು ಕಟ್ಟಿಕೊಂಡಿದೆ. ಸದ್ಯಕ್ಕೆ ದರ ಏರಿಕೆಗೆ ತಾತ್ಕಾಲಿಕ ತಡೆಯೂ ಬಿದ್ದಿದೆ. ಬಿಎಂಆರ್ಸಿಎಲ್ 13,106 ಕೋಟಿ ರೂಪಾಯಿ ಬಾಹ್ಯ ಸಾಲ ಮತ್ತು 21,521 ಕೋಟಿ ರೂಪಾಯಿ ಅಧೀನ ಸಾಲವನ್ನು ಭರಿಸುತ್ತಿದೆ. ವಾರ್ಷಿಕ ಸಾಲದ ಸೇವೆ 2,700 ಕೋಟಿ ರೂಪಾಯಿಗಳನ್ನು ದಾಟುವ ನಿರೀಕ್ಷೆಯಿದೆ. ಬೆಂಗಳೂರು ಮೆಟ್ರೋ ಭಾರತದ ಅತ್ಯಂತ ದುಬಾರಿ ಪ್ರಯಾಣವಾಗಿದ್ದು, ಹೆಚ್ಚುತ್ತಿರುವ ವೆಚ್ಚ ಮತ್ತು ಸಾಲದಿಂದ ಹೊರೆಯೂ […]
T20 World Cup 2026: ನ್ಯೂಜಿಲೆಂಡ್ಗೆ ಸವಾಲಿನ ಗುರಿ ನೀಡಿದ ಕ್ರಿಕೆಟ್ ಶಿಶು ಯುಎಇ
ಐಸಿಸಿ ಪುರುಷರ ಟಿ ಟ್ವೆಂಟಿ ವಿಶ್ವಕಪ್ 2026ರ ಗ್ರೂಪ್ ಹಂತದ 11ನೇ ಪಂದ್ಯದಲ್ಲಿ ನ್ಯೂಜಿಲೆಂಡ್ ಹಾಗೂ ಯುನೈಟೆಡ್ ಅರಬ್ ಎಮಿರೇಟ್ಸ್ ತಂಡಗಳು ಮುಖಾಮುಖಿಯಾಗಿದ್ದು, ಮೊದಲು ಬ್ಯಾಟಿಂಗ್ ಮಾಡಿದ ಯುಎಇ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 6 ವಿಕೆಟ್ ನಷ್ಟಕ್ಕೆ 173 ರನ್ ಕಲೆಹಾಕಿ ನ್ಯೂಜಿಲೆಂಡ್ಗೆ 174 ರನ್ಗಳ ಸವಾಲಿನ ಗುರಿ ನೀಡಿದೆ. ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡುವ ಆಯ್ಕೆ ಮಾಡಿಕೊಂಡ ಯುಎಇ ಪರ ಆರಂಭಿಕರಾಗಿ […]
ಬೀದಿನಾಯಿಗಳಿಗೆ ಎಲ್ಲೆಂದರಲ್ಲಿ ಆಹಾರ ಹಾಕಿದರೆ ಹುಷಾರ್: ಭಾರಿ ದಂಡ ಪಾವತಿಸಬೇಕಾಗುತ್ತೆ ಎಚ್ಚರ
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬೀದಿನಾಯಿಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅದಕ್ಕೆ ಎಲ್ಲೆಂದರಲ್ಲಿ ಆಹಾರ ಹಾಕುವುದರಿಂದ ಬೀದಿನಾಯಿಗಳು ಇನ್ನಷ್ಟು ಆಟಾಟೋಪ ಮೆರೆಯುತ್ತಿವೆ. ಈ ಬಗ್ಗೆ ಸಾರ್ವಜನಿಕರು ಪ್ರಶ್ನಿಸಿದರೆ ಶ್ವಾನಪ್ರೊಯರು ಭಾರಿ ಆಕ್ಷೇಪ ವ್ಯಕ್ತಪಡಿಸುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಮಕ್ಕಳು, ಮಹಿಳೆಯರು ಹಿರಿಯರ ಮೇಲೆ ನಾಯಿ ದಾಳಿಯೂ ಹೆಚ್ಚಾಗುತ್ತಿವೆ. ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ-ಜಿಬಿಎ ಕೊನೆಗೂ ಎಚ್ಚೆತ್ತುಕೊಂಡಿದೆ. ಇನ್ಮುಂದೆ ಬೀದಿ ನಾಯಿಗಳಿಗೆ ಎಲ್ಲೆಂದರಲ್ಲಿ ಆಹಾರ ಹಾಕುವಂತಿಲ್ಲ. ಜಿಬಿಎ ಸೂಚಿಸಿದ ಜಾಗಗಳಲ್ಲಿ ಮಾತ್ರ ಆಹಾರವನ್ನು ಹಾಕಬೇಕು […]
ಸದ್ದಿಲ್ಲದೆ ಮಾರಾಟವಾಯ್ತು ಎಪ್ಸ್ಟೀನ್ ದ್ವೀಪ: ಬಾಲಕಿಯರ ಶೋಷಣೆಯ ಕೇಂದ್ರವಾಗಿದ್ದ ಜಾಗದ ಈಗಿನ ಬೆಲೆ ಎಷ್ಟು?
ಹಲವು ದಶಕಗಳ ಕಾಲ ಜಗತ್ತನ್ನೇ ನಡುಗಿಸಿದ ಅತಿದೊಡ್ಡ ಲೈಂಗಿಕ ದೌರ್ಜನ್ಯ ಮತ್ತು ಅಪ್ರಾಪ್ತ ಬಾಲಕಿಯರ ಸಾಗಣೆ ಹಗರಣದ ಕೇಂದ್ರಬಿಂದುವಾಗಿದ್ದ ಜೆಫ್ರಿ ಎಪ್ಸ್ಟೀನ್ನ ಖಾಸಗಿ ದ್ವೀಪವು ಈಗ ಹೊಸ ಮಾಲೀಕರ ಕೈ ಸೇರಿದೆ. ಅಮೆರಿಕದ ವರ್ಜಿನ್ ಐಲೆಂಡ್ಸ್ನಲ್ಲಿರುವ ‘ಲಿಟಲ್ ಸೇಂಟ್ ಜೇಮ್ಸ್’ ಎಂಬ ಈ ದ್ವೀಪವು ಒಂದು ಕಾಲದಲ್ಲಿ ಅಧಿಕಾರ ಮತ್ತು ಹಣದ ಬಲದಿಂದ ನಡೆದ ಕರಾಳ ಕೃತ್ಯಗಳ ಸಂಕೇತವಾಗಿತ್ತು. ಕರಾಳ ಇತಿಹಾಸದ ದ್ವೀಪ: 1998ರಲ್ಲಿ ಈ ದ್ವೀಪವನ್ನು ಖರೀದಿಸಿದ್ದ ಪ್ರಭಾವಿ ಹಣಕಾಸು ಉದ್ಯಮಿ ಜೆಫ್ರಿ ಎಪ್ಸ್ಟೀನ್, ಇಲ್ಲಿ […]
ಇಂಜಿನಿಯರ್ಗಳಿಗೂ ಶಾಕ್ ನೀಡಿದ ಡ್ರೈ ಕ್ಲೀನರ್ ಆದಾಯ: ಒಂದು ಪುಟ್ಟ ಅಂಗಡಿಯ ತಿಂಗಳ ಸಂಪಾದನೆ ಎಷ್ಟು ಗೊತ್ತೇ?
ಭಾರತದಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿ ಹತ್ತು ವರ್ಷಗಳ ಅನುಭವ ಪಡೆದವರು ಗಳಿಸುವ ವೇತನವನ್ನು ಗಲ್ಲಿಯ ಒಂದು ಪುಟ್ಟ ಡ್ರೈ ಕ್ಲೀನಿಂಗ್ ಅಂಗಡಿಯವರು ಸಂಪಾದಿಸುತ್ತಿದ್ದಾರೆ ಎಂಬ ಸುದ್ದಿ ಈಗ ಇಂಟರ್ನೆಟ್ನಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ವಿಷಯ ಹಂಚಿಕೊಂಡ ಕಂಟೆಂಟ್ ಕ್ರಿಯೇಟರ್ ನಳಿನಿ ಉನಾಗರ್ ಅವರ ಪೋಸ್ಟ್, ಸಣ್ಣ ಉದ್ಯಮಗಳ ಆದಾಯದ ಬಗ್ಗೆ ಹೊಸ ಆಯಾಮವನ್ನು ತೆರೆದಿಟ್ಟಿದೆ. ತಮ್ಮ ಮನೆಯ ಹತ್ತಿರದ ಡ್ರೈ ಕ್ಲೀನಿಂಗ್ ಅಂಗಡಿ ಮಾಲೀಕರೊಂದಿಗೆ ನಡೆಸಿದ ಮಾತುಕತೆಯನ್ನು ನಳಿನಿ ಎಕ್ಸ್ (X) ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಅಂಗಡಿಯನ್ನು […]
‘ಶಕ್ತಿ’ ಇಂದ ಸೊರಗಿದ ಸಾರಿಗೆ ನಿಗಮಗಳು: ಅಂಕಿ ಸಂಖ್ಯೆಗಳ ಲೆಕ್ಕ
‘ಶಕ್ತಿ’ ಕರ್ನಾಟಕದ ಕಾಂಗ್ರೆಸ್ ಸರ್ಕಾರದ ಮಹತ್ವದ ಗ್ಯಾರಂಟಿ ಯೋಜನೆ. ಸಾಮಾನ್ಯ ಸರ್ಕಾರಿ ಬಸ್ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡುವ ಯೋಜನೆ ಇದಾಗಿದೆ. ಆದರೆ ಇದರಿಂದಾಗಿ ಸಾರಿಗೆ ನಿಗಮಗಳ ‘ಶಕ್ತಿ’ ಕುಂದಿಸಿದ ಕಾಂಗ್ರೆಸ್ ಸರ್ಕಾರದ ಫ್ರೀ ಟಿಕೆಟ್ ಎಂದು ಬಿಜೆಪಿ ಆರೋಪಿಸಿದೆ. ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಪೋಸ್ಟ್ ಒಂದನ್ನು ಹಾಕಿದ್ದಾರೆ. ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ‘ಶಕ್ತಿ’ ಯೋಜನೆಯ ಕಾರಣ ಸಾರಿಗೆ ನಿಗಮಗಳು ಹೇಗೆ ನಷ್ಟಕ್ಕೆ ಸಿಲುಕಿವೆ? ಎಂದು ಅಂಕಿ ಸಂಖ್ಯೆಗಳ ಲೆಕ್ಕ ನೀಡಿದ್ದಾರೆ. […]
Maha Shivaratri 2026 : ಸಂಪೂರ್ಣ ಫಲ ಸಿಗಬೇಕೆಂದರೆ ಶಿವರಾತ್ರಿಯ ದಿನ ಹೀಗೆ ಉಪವಾಸ ಮಾಡಿ..!
ಮಹಾಶಿವರಾತ್ರಿಯು ಶಿವಭಕ್ತರಿಗೆ ಅತ್ಯಂತ ಪವಿತ್ರವಾದ ರಾತ್ರಿ. ಇದನ್ನು “ಶಿವನ ಅತ್ಯಂತ ಮಹತ್ತರವಾದ ಸ್ಮರಣೆಯ ರಾತ್ರಿ” ಎಂದು ಪರಿಗಣಿಸಲಾಗುತ್ತದೆ. ಶಿವನು ಬ್ರಹ್ಮಾಂಡದ ಅಸ್ತಿತ್ವ, ಧರ್ಮ, ಸಂಸ್ಕಾರ ಮತ್ತು ಸಮತೋಲನದ ಸಂಕೇತ. ಈ ದಿನ ಶಿವನ ರೂಪದಲ್ಲಿ ಅನಂತ ಶಕ್ತಿ, ನಿಷ್ಕಲ್ಮಶತೆ, ಸಮಾಧಿ ಮತ್ತು ಆತ್ಮಾನುಭೂತಿ ಎಲ್ಲವೂ ಒಟ್ಟಾಗಿ ಗೋಚರಿಸುತ್ತವೆ. ಈ ದಿನ ಉಪವಾಸ ಮತ್ತು ಜಾಗರಣೆ ಮಾಡುವುದು ಬಹಳ ಮುಖ್ಯ. ಶಿವಭಕ್ತರು ಅತ್ಯಂತ ಭಕ್ತಿ ಶ್ರದ್ಧೆಗಳಿಂದ ಉಪವಾಸವಿದ್ದು, ಮಹಾದೇವನನ್ನು ಸ್ಮರಿಸುತ್ತಾ ವಿಶೇಷ ಪೂಜೆಗಳನ್ನು ಸಲ್ಲಿಸುತ್ತಾರೆ. ಮಹಾಶಿವರಾತ್ರಿಯ ದಿನ ಉಪವಾಸ […]
ಆಗ್ರಾದಲ್ಲಿ ಎಐ ಚಮತ್ಕಾರ: ಎಕ್ಸ್ಪ್ರೆಸ್ವೇನಲ್ಲಿ ಪತ್ತೆಯಾದ ಶವದ ಹಿಂದಿನ ಭೀಕರ ರಹಸ್ಯ ಬಯಲು
ಆಗ್ರಾದ ಯಮುನಾ ಎಕ್ಸ್ಪ್ರೆಸ್ವೇನಲ್ಲಿ ಪತ್ತೆಯಾದ ಅಪರಿಚಿತ ಮಹಿಳೆಯ ಶವದ ರಹಸ್ಯವನ್ನು ಭೇದಿಸುವಲ್ಲಿ ಉತ್ತರ ಪ್ರದೇಶ ಪೊಲೀಸರು ಯಶಸ್ವಿಯಾಗಿದ್ದಾರೆ. ಈ ಸಂಕೀರ್ಣ ಕೊಲೆ ಪ್ರಕರಣವನ್ನು ಕೇವಲ 24 ಗಂಟೆಗಳಲ್ಲಿ ಭೇದಿಸಲು ಪೊಲೀಸರಿಗೆ ಸಾಂಪ್ರದಾಯಿಕ ತನಿಖೆಯ ಜೊತೆಗೆ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ದೊಡ್ಡ ಮಟ್ಟದಲ್ಲಿ ನೆರವಾಗಿದೆ. ರಸ್ತೆಯ ಬದಿಯಲ್ಲಿ ಪತ್ತೆಯಾದ ಶವ ಫೆಬ್ರವರಿ 6 ರಂದು ಆಗ್ರಾದ ಖಂಡೌಲಿ ಪ್ರದೇಶದ ಯಮುನಾ ಎಕ್ಸ್ಪ್ರೆಸ್ವೇ ಬದಿಯಲ್ಲಿ ಕಂಬಳಿಯಲ್ಲಿ ಸುತ್ತಿದ ಸ್ಥಿತಿಯಲ್ಲಿ ಮಹಿಳೆಯ ಶವವೊಂದು ಪತ್ತೆಯಾಗಿತ್ತು. ಸ್ಥಳಕ್ಕೆ ಧಾವಿಸಿದ ಪೊಲೀಸರಿಗೆ ಮಹಿಳೆಯ […]
ಕಾಂಗ್ರೆಸ್ ನಾಯಕರ ವಿರುದ್ಧ 500 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಿದ ಅಸ್ಸಾಂ ಸಿಎಂ.!
ಗುವಾಹಟಿ : ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಕಾಂಗ್ರೆಸ್ನ ಹಿರಿಯ ನಾಯಕರಾದ ಜಿತೇಂದ್ರ ಸಿಂಗ್, ಭೂಪೇಶ್ ಬಘೇಲ್ ಮತ್ತು ಗೌರವ್ ಗೊಗೊಯ್ ವಿರುದ್ಧ ಮಂಗಳವಾರ 500 ಕೋಟಿ ರೂಪಾಯಿಗಳ ಮಾನನಷ್ಟ ಮೊಕದ್ದಮೆಯನ್ನು ದಾಖಲಿಸಿದ್ದಾರೆ. ಅಸ್ಸಾಂ ಕಾಂಗ್ರೆಸ್ ಅಧ್ಯಕ್ಷರೂ ಆಗಿರುವ ಗೌರವ್ ಗೊಗೊಯ್ ಅವರು ಕಳೆದ ವಾರ ಗಂಭೀರ ಆರೋಪವೊಂದನ್ನು ಮಾಡಿದ್ದರು. ಕಾಂಗ್ರೆಸ್ ಪಕ್ಷ ನಡೆಸಿದ ತನಿಖೆಯ ಪ್ರಕಾರ, ಅಸ್ಸಾಂ ರಾಜ್ಯಾದ್ಯಂತ ಸುಮಾರು 12,000 ಬಿಘಾ ಭೂಮಿಯನ್ನು ಸಿಎಂ ಹಿಮಂತ ಬಿಸ್ವಾ ಶರ್ಮಾ ಮತ್ತು ಅವರ […]
ಪುಸ್ತಕವನ್ನು ಸುಟ್ಟು ಹಾಕಿ ಶಾಲೆಗೆ ಹೋಗಬೇಡ ಎಂದ ತಂದೆ: ಅಪ್ಪನ ವಿರುದ್ಧ ಪೊಲಿಸರಿಗೆ ದೂರು ಕೊಟ್ಟ ಮಗಳು
ದಾವಣಗೆರೆ: ಮಗಳ ಪುಸ್ತಕವನ್ನು ಸುಟ್ಟು ಹಾಕಿ, ಶಾಲೆಗೆ ಹೋಗಬೇಡ ಎಂದು ತಂದೆ ತಾಕೀತು ಮಾಡಿದ್ದಕ್ಕೆ ಸಿಡಿದೆದ್ದ ಮಗಳು ಅಪ್ಪನ ವಿರುದ್ಧ ಪೊಲೀಸರಿಗೆ ದೂರು ನೀಡಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ. 10ನೇ ತರಗತಿ ಓದುತ್ತಿದ್ದ ಮಗಳಿಗೆ ತಂದೆ, ಶಾಲೆಗೆ ಹೋಗಬೇಡ ಎಂದು ಆಕೆಯ ಪುಸ್ತಕಗಳನ್ನು ಸುಟ್ಟು ಹಾಕಿದ್ದಾನೆ. ಅಲ್ಲದೇ ಗಲಾಟೆ ಮಾಡಿ ಹೆದರಿಸಿದ್ದಾನೆ. ಇದರಿಂದ ಬೇಸರಗೊಂಡ ಮಗಳು 112 ಸಂಖ್ಯೆಗೆ ಕರೆ ಮಾಡಿದ್ದಾಳೆ. ತನ್ನ ತಂದೆ ಕುಡಿದು ಬಂದು ಮನೆಯಲ್ಲಿ ಗಲಾಟೆ ಮಾಡುತ್ತಿದ್ದಾರೆ. ನನ್ನನ್ನು ಶಾಲೆಗೆ ಕಳುಹಿಸುತ್ತಿಲ್ಲ. ಪುಸ್ತಕಗಳನ್ನು […]
ಮಣಿಪುರದಲ್ಲಿ ಭುಗಿಲೆದ್ದ ಹಿಂಸಾಚಾರ : 30ಕ್ಕೂ ಹೆಚ್ಚು ಮನೆಗಳಿಗೆ ಬೆಂಕಿ, ಇಂಟರ್ನೆಟ್ ಸ್ಥಗಿತ
ಇಂಫಾಲ್: ಮಣಿಪುರದ ಉಖ್ರುಲ್ ಜಿಲ್ಲೆಯ ಲಿಟನ್ ಗ್ರಾಮದಲ್ಲಿ ಮಂಗಳವಾರ ಮುಂಜಾನೆ ಮತ್ತೆ ಗುಂಡಿನ ಚಕಮಕಿ ನಡೆದಿದೆ. ಸತತವಾಗಿ ಕೇಳಿಬಂದ ಗುಂಡಿನ ಶಬ್ದದಿಂದಾಗಿ ಸ್ಥಳೀಯ ನಿವಾಸಿಗಳಲ್ಲಿ ತೀವ್ರ ಆತಂಕ ಮತ್ತು ಭಯದ ವಾತಾವರಣ ನಿರ್ಮಾಣವಾಗಿದೆ. ಹಿಂಸಾಚಾರ ಪೀಡಿತ ಉಖ್ರುಲ್ನಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ ಐದು ದಿನಗಳ ಕಾಲ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಸೋಮವಾರ ರಾತ್ರಿ ಮತ್ತು ಮಂಗಳವಾರ ಮುಂಜಾನೆ ಸಂಭವಿಸಿದ ಹಿಂಸಾಚಾರದಲ್ಲಿ ಹಲವಾರು ಹೊಸ ಮನೆಗಳಿಗೆ ಬೆಂಕಿ ಹಚ್ಚಲಾಗಿದೆ. ಪ್ರಾಥಮಿಕ ವರದಿಗಳ ಪ್ರಕಾರ, ಸೋಮವಾರ ಸಂಜೆಯವರೆಗೆ 21 ಮನೆಗಳು […]
ಭಾರತದ ಆಟಗಾರರ ಬ್ಯಾಟ್ನಲ್ಲಿ ರಬ್ಬರ್ ಇದೆ, ಬೇರೆ ಆಟಗಾರರಿಗೆ ಅವರು ತೋರಿಸುವುದಿಲ್ಲ; ಲಂಕಾ ಕ್ರಿಕೆಟಿಗನ ಗಂಭೀರ ಆರೋಪ!
ಸದ್ಯ ಭಾರತ ಹಾಗೂ ಶ್ರೀಲಂಕಾದಲ್ಲಿ ಐಸಿಸಿ ಪುರುಷರ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ನಡೆಯುತ್ತಿದ್ದು, ಗ್ರೂಪ್ ಹಂತದ ಪಂದ್ಯಗಳು ಜರುಗುತ್ತಿವೆ. ಈ ಬಾರಿ ಹೆಚ್ಚು ಕ್ರಿಕೆಟ್ ಶಿಶುಗಳು ಟೂರ್ನಿಯಲ್ಲಿ ಪಾಲ್ಗೊಂಡಿದ್ದು, ಅವುಗಳೂ ಸಹ ಅನುಭವಿ ತಂಡಗಳಿಗೆ ತಕ್ಕ ಪೈಪೋಟಿ ನೀಡುವ ಮೂಲಕ ಟೂರ್ನಿ ಕುತೂಹಲವನ್ನು ಹುಟ್ಟುಹಾಕಿದೆ. ಹೀಗೆ ಯಶಸ್ಸಿನತ್ತ ಸಾಗುತ್ತಿರುವ ಈ ಬಾರಿಯ ಟೂರ್ನಿಯಲ್ಲಿ ಕಪ್ ಗೆಲ್ಲುವ ತಂಡಗಳಲ್ಲಿ ಒಂದು ಎನಿಸಿಕೊಂಡಿರುವ ಭಾರತ ತನ್ನ ಮೊದಲ ಪಂದ್ಯದಲ್ಲಿ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ ವಿರುದ್ಧ ಗೆಲುವು ದಾಖಲಿಸಿ […]
ಲೋನ್ ಕೊಡಿಸುವ ನೆಪದಲ್ಲಿ ಕೋಟಿ ಕೋಟಿ ವಂಚನೆ: ಸಿಐಡಿ ಪೊಲೀಸರ ದಾಳಿ
ಸಾಲ ಕೊಡಿಸುತ್ತೇನೆ ಎಂದು ಹಲವು ಉದ್ಯಮಿಗಳಿಗೆ ವಂಚಿಸಿರುವ ಆರೋಪದ ಮೇಲೆ ಸಿಐಡಿ ಪೊಲೀಸರು ವ್ಯಕ್ತಿಯೊಬ್ಬರ ಮನೆ ಮೇಲೆ ದಾಳಿ ಮಾಡಿದ್ದಾರೆ. ಪೀಟರ್ ಕ್ಯಾಡಿ ಎಂಬಾತ ಮಾಡುತ್ತಿದ್ದ ವಂಚನೆಗಳು ದಿಗಲು ಹುಟ್ಟಿಸುವಂತಿದ್ದು, ಸಿಐಡಿ ಪೊಲೀಸರು ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ. ಮಂಗಳವಾರ ಬೆಳಗ್ಗೆ ಸಿಐಡಿ ಪೊಲೀಸರು ಪುಲಿಕೇಶಿನಗರದ ಕೋಲ್ಸ್ ಪಾರ್ಕ್ ಸಮೀಪ ಇರುವ ಪೀಟರ್ ಕ್ಯಾಡಿ ಮನೆ ಮೇಲೆ ದಾಳಿ ಮಾಡಿದ್ದಾರೆ. ಸುಮಾರು 15 ವರ್ಷಗಳಿಂದ ಉದ್ಯಮಿಗಳಿಗೆ ವಂಚಿಸಿ ತಪ್ಪಿಸಿಕೊಳ್ಳುತ್ತಿದ್ದ ಪೀಟರ್ ಕ್ಯಾಡಿ, ವಂಚನೆಗೆ ಓಳಗಾದವರ ವಿರುದ್ಧವೇ ಸುಳ್ಳು […]
BREAKING : ಬಾಂಗ್ಲಾದಲ್ಲಿ ಮುಂದುವರೆದ ಹಿಂದೂಗಳ ನರಮೇಧ : ಅಂಗಡಿಯಲ್ಲೇ ವ್ಯಾಪಾರಿಯ ಬರ್ಬರ ಹತ್ಯೆ.!
ಬಾಂಗ್ಲಾದೇಶ : ಬಾಂಗ್ಲಾದೇಶದಲ್ಲಿ ಸಾರ್ವತ್ರಿಕ ಚುನಾವಣೆಗೆ ಕೇವಲ 48 ಗಂಟೆಗಳಿರುವಾಗ ಭೀಕರ ಘಟನೆಯೊಂದು ಸಂಭವಿಸಿದೆ. ಮೈಮನ್ ಸಿಂಗ್ ಜಿಲ್ಲೆಯ ತ್ರಿಶಾಲ ಎಂಬಲ್ಲಿ 62 ವರ್ಷದ ಹಿಂದೂ ಅಕ್ಕಿ ವ್ಯಾಪಾರಿ ಸುಷೇನ್ ಚಂದ್ರ ಸರ್ಕಾರ್ ಅವರನ್ನು ಅಪರಿಚಿತ ದುಷ್ಕರ್ಮಿಗಳು ಅವರ ಅಂಗಡಿಯಲ್ಲೇ ಇರಿದು ಕೊಲೆ ಮಾಡಿದ್ದಾರೆ. ಹೌದು. ಬಾಂಗ್ಲಾದೇಶದ ಸಾರ್ವತ್ರಿಕ ಚುನಾವಣೆಗೂ ಕೆಲವೇ ದಿನಗಳು ಬಾಕಿ ಇರುವಾಗ, ಮೈಮನ್ ಸಿಂಗ್ ಜಿಲ್ಲೆಯಲ್ಲಿ ಸೋಮವಾರ ತಡರಾತ್ರಿ ಹಿಂದೂ ಉದ್ಯಮಿಯೊಬ್ಬರನ್ನು ಅವರ ಅಂಗಡಿಯಲ್ಲೇ ಇರಿದು ಕೊಲೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. […]
ಬೆಂಗಳೂರು : ಬಿಗ್ ಬಾಸ್ ವಿಜೇತ ಗಿಲ್ಲಿ ನಟ ನಾಯಕನಾಗಿ ನಟಿಸಿರುವ ಬಹುನಿರೀಕ್ಷಿತ ‘ಸೂಪರ್ ಹಿಟ್’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಇತ್ತೀಚೆಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡ ಟೀಸರ್ ಬಿಡುಗಡೆ ಮಾಡುವ ಮೂಲಕ ಫೆಬ್ರವರಿ 27 ರಂದು ಸಿನಿಮಾ ತೆರೆಗೆ ಬರಲಿದೆ ಎಂದು ಅಧಿಕೃತವಾಗಿ ಘೋಷಿಸಿದೆ. ವಿ. ನಾಗೇಂದ್ರ ಪ್ರಸಾದ್ ಅವರ ಸಹೋದರ ವಿಜಯಾನಂದ್ ಅವರು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.ನಟ ಹಾಗೂ ಗೌರವ್ ಶೆಟ್ಟಿ ನಾಯಕರಾಗಿ ನಟಿಸಿದ್ದು, ಶ್ವೇತಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಸಾಧು ಕೋಕಿಲ, ಪ್ರಮೋದ್ ಶೆಟ್ಟಿ ಸೇರಿದಂತೆ […]
ಬೆಂಗಳೂರಿನಲ್ಲಿ ಮತ್ತೊಂದು ಲವ್ ಜಿಹಾದ್: ಹಿಂದೂ ಯುವತಿಯನ್ನು ಮತಾಂತರ ಮಾಡಿ ಮಗು ಕರುಣಿಸಿ ಎಸ್ಕೇಪ್ ಆದ ಮುಸ್ಲಿಂ ಯುವಕ
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ಲವ್ ಜಿಹಾದ್ ಪ್ರಕರಣ ಬೆಳಕಿಗೆ ಬಂದಿದೆ. ಹಿಂದೂ ಯುತಿಯನ್ನು ಪ್ರೀತಿಸಿ ಮದುವೆ ನಾಟಕವಾಡಿ ಇಸ್ಲಾಂಗೆ ಮತಾಂತರ ಮಾಡಿದ ಮುಸ್ಲಿಂ ಯುವಕ, ಮಗುವನ್ನೂ ಕೈಗೆ ಕೊಟ್ಟು ಎಸ್ಕೇಪ್ ಆಗಿರುವ ಘಟನೆ ನಡೆದಿದೆ. ಬೆಂಗಳೂರಿನ ಬಿಟಿಎಂ ಲೇಔಟ್ ನಿವಾಸಿಯಾಗಿರುವ ಸೈಯದ್ ಇಮ್ತಿಯಾಜ್ ಯುವತಿಗೆ ಮೋಸ ಮಾಡಿ ನಾಪತ್ತೆಯಾಗಿರುವ ಯುವಕ. ಸಾಮಾಜಿಕ ಜಾಲತಾಣಗಳಲ್ಲಿ ಕೋಲ್ಕತ್ತಾ ಮೂಲದ ಹಿಂದೂ ಯುವತಿ ಸೈಯದ್ ಗೆ ಪರಿಚಯವಾಗಿದೆ. ಹೀಗೆ ಆರಂಭವಾದ ಇಬ್ಬರ ಪರಿಚಯ, ಸ್ನೇಹ ಪ್ರೀತಿಗೆ ತಿರುಗಿದೆ. ಯುವತಿಯನ್ನು […]
ಟಿ20 ವಿಶ್ವಕಪ್ 2026: ಇಂದು ಪಾಕಿಸ್ತಾನ vs ಅಮೆರಿಕ ಹೈವೋಲ್ಟೇಜ್ ಫೈಟ್ ಸೇಡಿನ ಸಮರಕ್ಕೆ ಸಜ್ಜಾದ ಪಾಕಿಸ್ತಾನ
ಐಸಿಸಿ ಟಿ20 ವಿಶ್ವಕಪ್ 2026ರ ಹನ್ನೆರಡನೇ ಪಂದ್ಯದಲ್ಲಿ ಇಂದು ಪಾಕಿಸ್ತಾನ ಮತ್ತು ಅಮೆರಿಕ ತಂಡಗಳು ಮುಖಾಮುಖಿಯಾಗುತ್ತಿವೆ. ಕೊಲಂಬೊದ ಐತಿಹಾಸಿಕ ಸಿಂಹಳೀಸ್ ಸ್ಪೋರ್ಟ್ಸ್ ಕ್ಲಬ್ (SSC) ಮೈದಾನದಲ್ಲಿ ಈ ಹಣಾಹಣಿ ನಡೆಯಲಿದ್ದು, ಕ್ರಿಕೆಟ್ ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ. 2024ರ ವಿಶ್ವಕಪ್ನಲ್ಲಿ ಅಮೆರಿಕ ವಿರುದ್ಧ ಅನುಭವಿಸಿದ್ದ ಹೀನಾಯ ಸೋಲಿಗೆ ಈ ಬಾರಿ ಸೇಡು ತೀರಿಸಿಕೊಳ್ಳುವ ತವಕದಲ್ಲಿ ಪಾಕಿಸ್ತಾನ ತಂಡವಿದೆ. ಗೆಲುವಿನ ಲಯದಲ್ಲಿ ಪಾಕಿಸ್ತಾನ ಪಾಕಿಸ್ತಾನ ತಂಡವು ತನ್ನ ಮೊದಲ ಪಂದ್ಯದಲ್ಲಿ ನೆದರ್ಲೆಂಡ್ಸ್ ವಿರುದ್ಧ 3 ವಿಕೆಟ್ಗಳ ರೋಚಕ ಜಯ […]
Video: ಪ್ರಧಾನಿ ಮೋದಿಗೆ ಮಹಿಳಾ ಸಂಸದರಿಂದ ಘೇರಾವ್, ಸಂಚು ಬಯಲು ಮಾಡಿದ ವಿಡಿಯೋ
ಪ್ರಧಾನಿ ನರೇಂದ್ರ ಮೋದಿ ಲೋಕಸಭೆಯನ್ನು ಉದ್ದೇಶಿಸಿ ಭಾಷಣ ಮಾಡಲು ನಿಗದಿಯಾಗಿದ್ದ ಕೆಲವೇ ನಿಮಿಷಗಳ ಮೊದಲು ಸದನದಲ್ಲಿ ಗದ್ದಲ ತೀವ್ರಗೊಂಡಿತ್ತು. ಈ ಸಮಯದಲ್ಲಿ ಪ್ರಧಾನಿ ಮೋದಿಗೆ ಮಹಿಳಾ ಸಂಸದರಿಂದ ಘೇರಾವ್ ಹಾಕುವ ಪ್ರಯತ್ನ ನಡೆದಿತ್ತು. ಈ ಸಂಚು ಈಗ ವಿಡಿಯೋ ಮೂಲಕ ಬಹಿರಂಗವಾಗಿದೆ. ಫೆಬ್ರವರಿ 4ರಂದು ಲೋಕಸಭೆಯಲ್ಲಿ ಆಗಿರುವ ಘಟನೆ ಕುರಿತು ಕೇಂದ್ರ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಕಿರಣ್ ರಿಜಿಜು ವಿಡಿಯೋ ಒಂದನ್ನು ಮಂಗಳವಾರ ಹಂಚಿಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಆಗಮನಕ್ಕೂ ಕೆಲ ಹೊತ್ತು ಮೊದಲು ವಿರೋಧ […]
BREAKING : ಲೋಕಸಭಾ ಸ್ಪೀಕರ್ ‘ಓಂ ಬಿರ್ಲಾ’ಪದಚ್ಯುತಿಗೆ ವಿಪಕ್ಷಗಳ ಪಟ್ಟು : ಅವಿಶ್ವಾಸ ನಿರ್ಣಯ ಸಲ್ಲಿಕೆ.!
ನವದೆಹಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರ ವಿರುದ್ಧ ಕಾಂಗ್ರೆಸ್ ಪಕ್ಷವು ಸದನದ ಪ್ರಧಾನ ಕಾರ್ಯದರ್ಶಿಗಳಿಗೆ ಅವಿಶ್ವಾಸ ನಿರ್ಣಯದ (No-confidence motion) ನೋಟಿಸ್ ಸಲ್ಲಿಸಿದೆ. ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್ ಅವರು ನೀಡಿರುವ ಮಾಹಿತಿ ಪ್ರಕಾರ, ‘ಕಾರ್ಯವಿಧಾನ ಮತ್ತು ವ್ಯವಹಾರ ನಡವಳಿಕೆಯ ನಿಯಮಾವಳಿ’ಯ ನಿಯಮ 94C ಅಡಿಯಲ್ಲಿ ಇಂದು ಮಧ್ಯಾಹ್ನ 1:14 ಗಂಟೆಗೆ ಈ ನೋಟಿಸ್ ಸಲ್ಲಿಸಲಾಗಿದೆ. ಈ ಪ್ರಸ್ತಾವನೆಗೆ ಸುಮಾರು 119 ಸಂಸದರು ಸಹಿ ಹಾಕಿದ್ದಾರೆ. ವಿರೋಧ ಪಕ್ಷಗಳ ಆರೋಪಗಳೇನು? ಸ್ಪೀಕರ್ ಅವರು ಪಕ್ಷಪಾತ ಮಾಡುತ್ತಿದ್ದಾರೆ.ವಿರೋಧ […]
ಈಡೇರದ ನಲಿ-ಕಲಿ ಯೋಜನೆ ಉದ್ದೇಶ: ಶಿಕ್ಷಣ ಸಚಿವ ಮಧು ಬಂಗಾರಪ್ಪಗೆ ವರದಿ ಸಲ್ಲಿಸಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರ
ಬೆಂಗಳೂರು: 1990ರ ಬಳಿಕ ಕಾಣಿಸಿಕೊಂಡ ಜಾಗತೀಕರಣವು ಇದೀಗ ಕರ್ನಾಟಕದ ಶಿಕ್ಷಣ ಪದ್ಧತಿಯ ಮೇಲೆ ನಿರ್ಣಾಯಕ ಪರಿಣಾಮ ಬೀರುತ್ತಿದೆ. ಮಾರುಕಟ್ಟೆ ಕೇಂದ್ರಿತವಾದ ಜಾಗತೀಕರಣವು ರಾಷ್ಟ್ರಗಳು, ವ್ಯವಹಾರಗಳು ಮತ್ತು ವ್ಯಕ್ತಿಗಳು ಸಂಪರ್ಕ ಸಾಧಿಸುವ ವಿಧಾನವನ್ನು ಸಂಪೂರ್ಣವಾಗಿ ಬದಲಾಯಿಸುವುದರ ಜೊತೆಗೆ ಜಾಗತಿಕ ಮಟ್ಟದಲ್ಲಿ ಆರ್ಥಿಕ, ಸಾಂಸ್ಕೃತಿಕ ಮತ್ತು ತಾಂತ್ರಿಕ ಏಕೀಕರಣವನ್ನು ಬೆಳೆಸಿದೆ. ಈ ಬಗೆಯ ಬೆಳವಣಿಗೆಗಳು ಭಾಷೆಗಳ ನಾಶ, ಸಣ್ಣ ಸಮುದಾಯಗಳ ಪತನ, ಪರಿಸರ ನಾಶ, ಮತ್ತು ಆರ್ಥಿಕ ಅಸಮಾನತೆಗಳಂತಹ ಭೀಕರ ಸವಾಲುಗಳನ್ನು ನಮ್ಮ ಮುಂದಿಟ್ಟಿದೆ. ಇಂಥಹ ಸಂದರ್ಭದಲ್ಲಿ ಕನ್ನಡದಂಥ ಭಾಷೆಯೊಂದನ್ನು […]
BREAKING : ಬಿಕ್ಲು ಶಿವ ಕೊಲೆ ಕೇಸ್ : ಶಾಸಕ ‘ಭೈರತಿ ಬಸವರಾಜ್’ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಳಿಸಿದ ಹೈಕೋರ್ಟ್.!
ಬೆಂಗಳೂರು: ಕೆ.ಆರ್. ಪುರಂನ ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ಭೈರತಿ ಬಸವರಾಜ್ ಅವರಿಗೆ ಕಾನೂನು ಸಂಕಷ್ಟ ಮತ್ತಷ್ಟು ಬಿಗಿಯಾಗಿದೆ. ‘ಬಿಕ್ಲು ಶಿವ’ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿ ಆದೇಶಿಸಿದೆ. ನ್ಯಾಯಮೂರ್ತಿ ಸುನಿಲ್ ದತ್ ಯಾದವ್ ಅವರಿದ್ದ ಏಕಸದಸ್ಯ ಪೀಠವು ಈ ಮಹತ್ವದ ತೀರ್ಪನ್ನು ನೀಡಿದೆ. ಪ್ರಕರಣದ ಗಂಭೀರತೆ ಮತ್ತು ತನಿಖೆಯ ಅಗತ್ಯವನ್ನು ಪರಿಗಣಿಸಿದ ನ್ಯಾಯಾಲಯವು, ಆರೋಪಿತ ಶಾಸಕರಿಗೆ ಜಾಮೀನು ನೀಡಲು ನಿರಾಕರಿಸಿದೆ. ಇದರಿಂದಾಗಿ ಭೈರತಿ ಬಸವರಾಜ್ ಅವರಿಗೆ […]
Big Update: ಭಾರತೀಯ ಅಂಚೆ ಇಲಾಖೆಯ ಮಹತ್ವದ ಮೂರು ಅಪ್ಡೇಟ್ಗಳು
ಅಂಚೆ ಇಲಾಖೆಯ ಪಾರ್ಸೆಲ್ ಬುಕ್ಕಿಂಗ್ ಸೇವೆ ಬಳಕೆ ಮಾಡುವ ಜನರಿಗೆ ಮಹತ್ವದ ಅಪ್ಡೇಟ್ ಇದೆ. ಭಾರತೀಯ ಅಂಚೆ ಇಲಾಖೆ ಸಾರ್ವಜನಿಕರ ಸೇವೆಯನ್ನು ಮತ್ತಷ್ಟು ಸ್ನೇಹಿಯಾಗಿಸಲು ಪಾರ್ಸೆಲ್ ಬುಕ್ಕಿಂಗ್ ಸೌಲಭ್ಯದ ಸಮಯವನ್ನು ವಿಸ್ತರಣೆ ಮಾಡಿದೆ. ಅಂಚೆ ಕಚೇರಿ ಮುಚ್ಚುವ ಸಮಯದ 30 ನಿಮಿಷಗಳ ಮುಂಚೆ ಸಹ ಪತ್ರಗಳು, ಪಾರ್ಸೆಲ್ಗಳು ಹಾಗೂ ಅಂತರರಾಷ್ಟ್ರೀಯ ಪತ್ರಗಳು ಮತ್ತು ಪಾರ್ಸೆಲ್ಗಳ ಬುಕ್ಕಿಂಗ್ ಸೌಲಭ್ಯವನ್ನು ವಿಸ್ತರಿಸಲಾಗಿದ್ದು, ಜನರು ಈ ಸೇವೆಗಳನ್ನು ಪಡೆದುಕೊಳ್ಳಬೇಕು ಎಂದು ಕರೆ ನೀಡಿದೆ. ಸ್ಪೀಡ್ ಪೋಸ್ಟ್ ಮತ್ತು ಇತರ ಪತ್ರ ಹಾಗೂ […]

22 C