ಬೆಂಗಳೂರು: ಅಂಡರ್- 19 ಐಸಿಸಿ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ತಂಡ 100 ರನ್ ಗಳಿಂದ ಭರ್ಜರಿ ಜಯಗಳಿಸುವ ಮೂಲಕ ಆರನೇ ಬಾರಿಗೆ ಪ್ರಶಸ್ತಿ ಗಳಿಸಿದೆ. ಭಾರತ ತಂಡದ ಆಟಗಾರ ವೈಭವ್ ಸೂರ್ಯವಂಶಿ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. 80 ಎಸೆತಗಳಲ್ಲಿ 15 ಬೌಂಡರಿ, 15 ಸಿಕ್ಸರ್ ಸಹಿತ 175 ರನ್ ಬಾರಿಸಿದ್ದಾರೆ. ವಿಜೇತ ಭಾರತ ತಂಡಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿನಂದಿಸಿದ್ದಾರೆ. ದಾಖಲೆಯ 6ನೇ ಐಸಿಸಿ ಅಂಡರ್-19 ವಿಶ್ವಕಪ್ ಗೆದ್ದ ಭಾರತೀಯ ಅಂಡರ್-19 ಕ್ರಿಕೆಟ್ […]
ನವದೆಹಲಿ: ಒಡಿಶಾದ ಚಾಂಡಿಪುರದಲ್ಲಿರುವ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್ನಿಂದ ಭಾರತ ಶುಕ್ರವಾರ ಮಧ್ಯಂತರ ಶ್ರೇಣಿಯ ಬ್ಯಾಲಿಸ್ಟಿಕ್ ಕ್ಷಿಪಣಿ ಅಗ್ನಿ-3 ಅನ್ನು ಯಶಸ್ವಿಯಾಗಿ ಪರೀಕ್ಷಿಸಿದೆ. ಈ ಉಡಾವಣೆಯು ಕ್ಷಿಪಣಿಯ ಎಲ್ಲಾ ಕಾರ್ಯಾಚರಣೆ ಮತ್ತು ತಾಂತ್ರಿಕ ನಿಯತಾಂಕಗಳನ್ನು ಮೌಲ್ಯೀಕರಿಸಿದೆ ಮತ್ತು ಇದನ್ನು ಕಾರ್ಯತಂತ್ರದ ಪಡೆಗಳ ಕಮಾಂಡ್ನ ಆಶ್ರಯದಲ್ಲಿ ನಡೆಸಲಾgide. ಅಗ್ನಿ 3 ಕ್ಷಿಪಣಿ ಅಂದಾಜು 3,000 ರಿಂದ 3,500 ಕಿಲೋಮೀಟರ್ ವ್ಯಾಪ್ತಿಯನ್ನು ಹೊಂದಿದೆ ಮತ್ತು ಇದು ಭಾರತದ ಕಾರ್ಯತಂತ್ರದ ತಡೆಗಟ್ಟುವಿಕೆ ಸಾಮರ್ಥ್ಯದ ಪ್ರಮುಖ ಅಂಶವಾಗಿದೆ. ಅಗ್ನಿ-3 ಬ್ಯಾಲಿಸ್ಟಿಕ್ ಕ್ಷಿಪಣಿಯ ಬಗ್ಗೆ ಭಾರತದ […]
ಪೋಷಕರು ತಮ್ಮ ಮಕ್ಕಳಿಗೆ ತಪ್ಪದೇ ದಡಾರ-ರುಬೆಲ್ಲಾ ಲಸಿಕೆ ಹಾಕಿಸಬೇಕು. ಬೇಸಿಗೆ ಪ್ರಾರಂಭವಾಗುತ್ತಿದ್ದು, ಮಕ್ಕಳಲ್ಲಿ ದಡಾರ ಪ್ರಕರಣಗಳು ಕಂಡುಬರುವ ಸಾಧ್ಯತೆ ಹೆಚ್ಚು. 12 ಮಾರಕ ಕಾಯಿಲೆಗಳ ವಿರುದ್ಧ ನಿಯಮಿತವಾಗಿ ಲಸಿಕೆ ಪಡೆಯಲು ಪೋಷಕರು ಮಕ್ಕಳಿಗೆ ತಪ್ಪದೇ ದಡಾರ ರುಬೆಲ್ಲಾ ಲಸಿಕೆ ಹಾಕಿಸಬೇಕು ಎಂದು ತಿಳಿಸಲಾಗಿದೆ. ಲಕ್ಷಣಗಳು: ದಡಾರದಲ್ಲಿ ತೀವ್ರ ಜ್ವರ, ಮೂಗು ಸೋರುವಿಕೆ, ಕೆಮ್ಮು, ಕಣ್ಣು ಕೆಂಪಾಗುವುದು ಮತ್ತು ಮುಖದಿಂದ ಆರಂಭವಾಗಿ ದೇಹದಾದ್ಯಂತ ಹರಡುವ ಕೆಂಪು ದದ್ದುಗಳು ಕಂಡುಬರುತ್ತವೆ. ರುಬೆಲ್ಲಾದಲ್ಲಿ ಸೌಮ್ಯ ಜ್ವರ, ದದ್ದುಗಳು, ತಲೆನೋವು, ಕಣ್ಣಿನ ಉರಿ […]
ನವದೆಹಲಿ: ಗರ್ಭ ಧರಿಸುವುದು ಅಥವಾ ಗರ್ಭಪಾತ ಮಾಡಿಸಿಕೊಳ್ಳುವುದು ಮಹಿಳೆಯ ವೈಯಕ್ತಿಕ ಹಕ್ಕು. ಮಗುವನ್ನು ಹೆರಲು ಇಚ್ಚಿಸದ ಮಹಿಳೆಯನ್ನು ಅದರಲ್ಲೂ ಅಪ್ರಾಪ್ತ ಬಾಲಕಿಯನ್ನು ಗರ್ಭ ಮುಂದುವರಿಸುವಂತೆ ಬಲವಂತ ಮಾಡುವ ಅಧಿಕಾರ ನ್ಯಾಯಾಲಯಗಳಿಗಿಲ್ಲ ಎಂದು ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ. ಈ ಮೂಲಕ 30 ವಾರಗಳ ಗರ್ಭಿಣಿಯಾಗಿದ್ದ 17 ವರ್ಷದ ಬಾಲಕಿಗೆ ಗರ್ಭಾಪಾತ ಮಾಡಿಸಿಕೊಳ್ಳಲು ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ. ಗರ್ಭಧಾರಣೆಯನ್ನು ಮುಂದುವರಿಸಲು ಅವಳನ್ನು ಒತ್ತಾಯಿಸಲು ಸಾಧ್ಯವಿಲ್ಲ ಎಂದು 30 ವಾರಗಳ ಗರ್ಭಿಣಿಯ ಗರ್ಭಪಾತಕ್ಕೆ ಸುಪ್ರೀಂ ಅನುಮತಿ ನೀಡಿದೆ. ನ್ಯಾಯಾಲಯಗಳು […]
Under 19 WC Final: ವೈಭವ್ ಸೂರ್ಯವಂಶಿ ಅಬ್ಬರದ 175 ರನ್; ಇಂಗ್ಲೆಂಡ್ ಮಣಿಸಿ ಟ್ರೋಫಿ ಗೆದ್ದ ಭಾರತ
ಹರಾರೆ ಕ್ರೀಡಾಂಗಣದಲ್ಲಿ ನಡೆದ ಅಂಡರ್ 19 ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಭಾರತ ಇಂಗ್ಲೆಂಡ್ ವಿರುದ್ಧ 100 ರನ್ಗಳ ಭರ್ಜರಿ ಜಯ ಸಾಧಿಸುವ ಮೂಲಕ ಆರನೇ ಬಾರಿಗೆ ಟ್ರೋಫಿಯನ್ನು ಎತ್ತಿಹಿಡಿದಿದೆ. ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆರಿಸಿಕೊಂಡು ವೈಭವ್ ಸೂರ್ಯವಂಶಿ ದಾಖಲೆಯ ಶತಕದ ನೆರವಿನಿಂದ 50 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ ಬರೋಬ್ಬರಿ 411 ರನ್ ಕಲೆಹಾಕಿ ಇಂಗ್ಲೆಂಡ್ಗೆ 412 ರನ್ಗಳ ಕಠಿಣ ಗುರಿಯನ್ನು ನೀಡಿತು. ಈ ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲವಾದ ಇಂಗ್ಲೆಂಡ್ 40.2 ಓವರ್ಗಳಲ್ಲಿ […]
BREAKING: ಬಿಹಾರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಇಬ್ಬರು ಮಹಿಳೆಯರು ಸೇರಿ ಬೆಂಗಳೂರಿನ ನಾಲ್ವರು ಪ್ರವಾಸಿಗರು ಪತ್ತೆ
ಪಾಟ್ನಾ: ಬಿಹಾರದ ನಳಂದ ಜಿಲ್ಲೆಯ ಧರ್ಮಶಾಲಾದಲ್ಲಿ ಶುಕ್ರವಾರ ಇಬ್ಬರು ಮಹಿಳೆಯರು ಸೇರಿದಂತೆ ಬೆಂಗಳೂರಿನ ನಾಲ್ವರು ಪ್ರವಾಸಿಗರು ಕೋಣೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬೌದ್ಧರು ಮತ್ತು ಜೈನರ ಪ್ರಮುಖ ಯಾತ್ರಾ ಸ್ಥಳವಾದ ರಾಜಗೀರ್ ಪಟ್ಟಣದಲ್ಲಿ ಈ ಘಟನೆ ನಡೆದಿದೆ. ಪೊಲೀಸರು ಕೊಠಡಿಯನ್ನು ಒಡೆದು ನೋಡಿದಾಗ ನಾಲ್ವರು ಪ್ರವಾಸಿಗರು ಒಳಗೆ ಸಾವನ್ನಪ್ಪಿರುವುದು ಕಂಡುಬಂದಿದೆ. ಬೆಳಿಗ್ಗೆ 9:40 ರ ಸುಮಾರಿಗೆ, ಧರ್ಮಶಾಲಾದ ವ್ಯವಸ್ಥಾಪಕರು ರಾಜಗೀರ್ ಪೊಲೀಸ್ ಠಾಣೆಗೆ ಕೆಲವು ಜನರು ಬೆಂಗಳೂರಿನಿಂದ ಬಂದು ಒಂದು ಕೋಣೆಯಲ್ಲಿ […]
ಬೆಂಗಳೂರಿನಲ್ಲಿ ಭೂಗಳ್ಳರ ವಿರುದ್ಧ ಬಿಡಿಎ ಗದಾಪ್ರಹಾರ: ಅನಧಿಕೃತವಾಗಿ ನಿರ್ಮಿಸಿದ ಮನೆಗಳ ತೆರವು
ಬೆಂಗಳೂರು: ಬೆಂಗಳೂರಿನಲ್ಲಿ ಭೂಗಳ್ಳರ ವಿರುದ್ಧ ಬಿಡಿಎ ಗದಾಪ್ರಹಾರ ನಡೆಸಿದೆ. ಅನಧಿಕೃತವಾಗಿ ನಿರ್ಮಿಸಿದ ಮನೆಗಳನ್ನು ಬಿಡಿಎ ತೆರವುಗೊಳಿಸಿದೆ. ಜೆಸಿ ನಗರದ ಒಂಬತ್ತನೇ ಹಂತದ ಬಡಾವಣೆಯಲ್ಲಿನ ಆಸ್ತಿ ವಶಕ್ಕೆ ಪಡೆಯಲಾಗಿದೆ. 130 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಬಿಡಿಎ ವಶಕ್ಕೆ ಪಡೆದುಕೊಂಡಿದೆ. ಬೆಂಗಳೂರು ದಕ್ಷಿಣ ತಾಲೂಕಿನ ಉತ್ತರಹಳ್ಳಿ ಹೋಬಳಿ ಹಾಗೂ ಆಲಹಳ್ಳಿಯ ಸರ್ವೆ ನಂಬರ್ 20ರಲ್ಲಿ ಅನಧಿಕೃತವಾಗಿ ಮನೆಗಳ ನಿರ್ಮಾಣ ಮಾಡಲಾಗಿತ್ತು. ಮೂರು ಎಕರೆ ಪ್ರದೇಶದಲ್ಲಿ ಅನಧಿಕೃತವಾಗಿ ಮನೆಗಳನ್ನು ನಿರ್ಮಿಸಿದ್ದರು. ಇವನ್ನು ತೆರವುಗೊಳಿಸಿ ಬಿಡಿಎ ಆಸ್ತಿ ವಶಕ್ಕೆ ಪಡೆದುಕೊಂಡಿದೆ.
ಫೆ. 14 ಪ್ರೇಮಿಗಳ ಪಾಲಿನ ಸ್ವರ್ಗ ನಂದಿ ಗಿರಿಧಾಮ ಬಂದ್
ಚಿಕ್ಕಬಳ್ಳಾಪುರ: ಫೆಬ್ರವರಿ 14ರ ಪ್ರೇಮಿಗಳ ದಿನದಂದು ವಿಶ್ವವಿಖ್ಯಾತ ನಂದಿ ಗಿರಿಧಾಮಕ್ಕೆ ಪ್ರವೇಶ ಬಂದ್ ಮಾಡಲಾಗವುದು. ಪ್ರೇಮಿಗಳ ಪಾಲಿನ ಸ್ವರ್ಗ ಎಂದೇ ಹೇಳಲಾಗುವ ನಂದಿಗಿರಿ ಧಾಮವನ್ನು ಫೆಬ್ರವರಿ 14ರ ಬೆಳಗ್ಗೆ 6ರಿಂದ ಸಂಜೆ 6 ಗಂಟೆಯವರೆಗೆ ಬಂದ್ ಮಾಡಲಿದ್ದು, ಪ್ರವಾಸಿಗರಿಗೆ ಪ್ರವೇಶ ನಿರ್ಬಂಧಿಸಿ ಆದೇಶ ಹೊರಡಿಸಲಾಗಿದೆ. ಪ್ರೇಮಿಗಳ ದಿನ ನಂದಿ ಗಿರಿಧಾಮಕ್ಕೆ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಭೇಟಿ ನೀಡುತ್ತಾರೆ. ಇದೇ ಫೆಬ್ರವರಿ 14ರಂದು ಪ್ರವಾಸಿಗರಿಗೆ ಪ್ರವೇಶ ನಿರ್ಬಂಧಿಸಿ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಜಿ. ಪ್ರಭು ಆದೇಶಿಸಿದ್ದಾರೆ.
T20 World Cup 2026: ಟೂರ್ನಿ ಆರಂಭದ ಸಮಯದಲ್ಲಿ ಆಸ್ಟ್ರೇಲಿಯಾಗೆ ಆಘಾತ; ಸ್ಟಾರ್ ಆಟಗಾರ ಔಟ್!
ನಾಳೆ ( ಫೆಬ್ರವರಿ 7 ) ಶ್ರೀಲಂಕಾದ ಕೊಲಂಬೊದಲ್ಲಿ ನಡೆಯಲಿರುವ ಪಾಕಿಸ್ತಾನ ಹಾಗೂ ನೆದರ್ಲೆಂಡ್ಸ್ ತಂಡಗಳ ನಡುವಿನ ಪಂದ್ಯದ ಮೂಲಕ 2026ರ ಐಸಿಸಿ ಪುರುಷರ ಟಿ ಟ್ವೆಂಟಿ ವಿಶ್ವಕಪ್ ಆರಂಭವಾಗಲಿದೆ. ಒಟ್ಟು 20 ದೇಶಗಳು ಈ ಬಾರಿ ಕಣಕ್ಕಿಳಿಯಲಿದ್ದು, ತಲಾ ಐದು ತಂಡಗಳಂತೆ ಒಟ್ಟು ನಾಲ್ಕು ಗುಂಪುಗಳನ್ನಾಗಿ ವಿಂಗಡಿಸಲಾಗಿದೆ. ಇನ್ನು ಎಲ್ಲ ತಂಡಗಳು ಟೂರ್ನಿಗಾಗಿ ಅಭ್ಯಾಸ ಪಂದ್ಯಗಳನ್ನಾಡಿ ಕೊನೆಯ ಹಂತದ ತಾಲೀಮು ನಡೆಸಿದ್ದು, ಟ್ರೋಫಿಗಾಗಿ ಸಿದ್ಧತೆ ನಡೆಸಿಕೊಳ್ಳುತ್ತಿವೆ. ಟೂರ್ನಿ ಆರಂಭದ ದಿನ ಹತ್ತಿರ ಬರುತ್ತಿದ್ದಂತೆ ಹಲವು ತಂಡಗಳಲ್ಲಿ […]
SHOCKING : ರೈಲ್ವೆ ಹಳಿ ಮೇಲೆ ಮರದ ದಿಮ್ಮಿಗೆ ಡಿಕ್ಕಿ ಹೊಡೆದ ರೈಲು : ಗಾಳಿಯಲ್ಲಿ ಹಾರಿ ಬಿದ್ದ ಮಹಿಳೆ | WATCH VIDEO
ಬಿಹಾರ ಬಿಹಾರದ ಪಹಾರ್ಪುರ ರೈಲ್ವೆ ನಿಲ್ದಾಣದಲ್ಲಿ ನಡೆದ ಭೀಕರ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ವೇಗವಾಗಿ ಬಂದ ರೈಲು ಹಳಿಯ ಪಕ್ಕದಲ್ಲಿದ್ದ ಮರದ ದಿಮ್ಮಿಗಳಿಗೆ ಡಿಕ್ಕಿ ಹೊಡೆದಾಗ, ಅವು ಗಾಳಿಯಲ್ಲಿ ಹಾರಿಬಂದು ಹಳಿ ದಾಟುತ್ತಿದ್ದ ಮಹಿಳೆಗೆ ಬಲವಾಗಿ ಬಡಿದಿವೆ. ವರದಿಗಳ ಪ್ರಕಾರ, ಪ್ಯಾಸೆಂಜರ್ ರೈಲೊಂದರಿಂದ ಅಕ್ರಮವಾಗಿ ಮರದ ದಿಮ್ಮಿಗಳನ್ನು ಸಾಗಿಸಿ ಹಳಿಗಳ ಮಧ್ಯೆ ಇಳಿಸಲಾಗಿತ್ತು. ಅದೇ ಸಮಯದಲ್ಲಿ ಮಹಿಳೆಯೊಬ್ಬರು ಹಳಿಗಳನ್ನು ದಾಟುತ್ತಿದ್ದರು. ದುರದೃಷ್ಟವಶಾತ್, ಎದುರು ದಿಕ್ಕಿನಿಂದ ವೇಗವಾಗಿ ಬಂದ ರೈಲು ಹಳಿಗಳ ನಡುವೆ […]
ವಿದೇಶಿ ಮಹಿಳೆ ಸೇರಿ ಇಬ್ಬರ ಮೇಲೆ ಅತ್ಯಾಚಾರ, ಪ್ರವಾಸಿಗನ ಕೊಲೆ ಕೇಸ್: ಮೂವರು ದೋಷಿಗಳು ಎಂದು ಘೋಷಿಸಿದ ನ್ಯಾಯಾಲಯ
ಕೊಪ್ಪಳ: ವಿದೇಶಿ ಮಹಿಳೆ ಸೇರಿ ಇಬ್ಬರ ಮೇಲೆ ಅತ್ಯಾಚಾರ, ಪ್ರವಾಸಿಗನ ಕೊಲೆ ಪ್ರಕರಣದಲ್ಲಿ ಮೂವರು ಆರೋಪಿಗಳು ದೋಷಿಗಳು ಎಂದು ಕೊಪ್ಪಳ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ. ಕಳೆದ ವರ್ಷ ಸಣಾಪುರ ಕಾಲುವೆ ದಂಡೆಯ ಸಮೀಪ ನಡೆದಿದ್ದ ವಿದೇಶಿ ಮಹಿಳೆ ಸೇರಿ ಇಬ್ಬರ ಮೇಲಿನ ಅತ್ಯಾಚಾರ ಮತ್ತು ಪ್ರವಾಸಿಗನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾದ ಒಂಬತ್ತು ತಿಂಗಳ ಒಳಗೆ ನ್ಯಾಯಾಲಯ ತೀರ್ಪು ನೀಡಿದೆ. ಶಿಕ್ಷೆಯ ಪ್ರಮಾಣವನ್ನು ಫೆಬ್ರವರಿ 16ರಂದು ಪ್ರಕಟಿಸಲಿದೆ. ಸಾಯಿ ನಗರದ […]
‘ನಮ್ಮ ಮೆಟ್ರೋ’ಟಿಕೆಟ್ ದರ ಏರಿಕೆಗೆ CM ಸಿದ್ದರಾಮಯ್ಯ ಸ್ಪಷ್ಟನೆ.! ಹೇಳಿದ್ದೇನು..?
ಬೆಂಗಳೂರು : ಬೆಂಗಳೂರಿನ ‘ನಮ್ಮ ಮೆಟ್ರೋ’ (BMRCL) ಪ್ರಯಾಣಿಕರಿಗೆ ದರ ಏರಿಕೆಯ ಶಾಕ್ ಎದುರಾಗಿದೆ. ಫೆಬ್ರವರಿ 9, 2026 ರಿಂದ ಜಾರಿಗೆ ಬರುವಂತೆ ಮೆಟ್ರೋ ಟಿಕೆಟ್ ದರವನ್ನು ಸರಾಸರಿ ಶೇಕಡಾ 5ರಷ್ಟು ಹೆಚ್ಚಿಸಲಾಗಿದೆ. ನಮ್ಮ ಮೆಟ್ರೋ ಟಿಕೆಟ್ ದರ ಏರಿಕೆಗೆ ಟೀಕೆ, ಆಕ್ರೋಶ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ. ಬೆಂಗಳೂರು ಮೆಟ್ರೋ ಕೇವಲ ಒಂದು ಸಾರಿಗೆ ವ್ಯವಸ್ಥೆಯಲ್ಲ, ಅದು ನಮ್ಮ ನಗರದ ಲಕ್ಷಾಂತರ ಉದ್ಯೋಗಿಗಳು, ವಿದ್ಯಾರ್ಥಿಗಳು ಹಾಗೂ ಸಾಮಾನ್ಯ ಕುಟುಂಬಗಳ ಕನಸುಗಳನ್ನು ಹೊತ್ತೊಯ್ಯುವ, ಪ್ರಗತಿಯತ್ತ […]
SHOCKING : ಆಭರಣಕ್ಕಾಗಿ ವೃದ್ಧೆಯನ್ನು ಮಂಚದ ಸಮೇತ ಹೊತ್ತೊಯ್ದ ಕಳ್ಳರು ; ಕೈಕಾಲು ಕಟ್ಟಿ ಹೊಲದಲ್ಲಿ ಬಿಟ್ಟು ಪರಾರಿ !
ಭಿಲ್ವಾರಾ: ರಾಜಸ್ಥಾನದ ಭಿಲ್ವಾರಾ ಜಿಲ್ಲೆಯ ಅರ್ವಾಡ್ ಪ್ರದೇಶದ ಕೊಠಿಯಾ ಗ್ರಾಮದಲ್ಲಿ ಬುಧವಾರ ರಾತ್ರಿ ಇಡೀ ಪ್ರದೇಶವನ್ನೇ ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿದೆ. ಬೆಳ್ಳಿಯ ಆಭರಣಗಳನ್ನು ದೋಚುವ ಉದ್ದೇಶದಿಂದ ಕಳ್ಳರು 90 ವರ್ಷದ ವೃದ್ಧೆಯನ್ನು ಮಂಚದ ಸಮೇತ ಹೊತ್ತುಕೊಂಡು ಹೊಲಕ್ಕೆ ಕೊಂಡೊಯ್ದಿದ್ದಾರೆ. ಅದೃಷ್ಟವಶಾತ್ ಕುಟುಂಬಸ್ಥರು ಮತ್ತು ಗ್ರಾಮಸ್ಥರ ಜಾಗರೂಕತೆಯಿಂದ ವೃದ್ಧೆಯ ಜೀವ ಉಳಿದಿದೆ. ಮಾಜಿ ಸರ್ಪಂಚ್ ನಥಿ ದೇವಿ ಮಾಲಿ ಅವರ ಮನೆಯಲ್ಲಿ ಕುಟುಂಬದ ಸದಸ್ಯರೆಲ್ಲರೂ ಮಲಗಿದ್ದಾಗ ಈ ಕೃತ್ಯ ನಡೆದಿದೆ. ಕಳ್ಳರು ಮೊದಲು ಇಡೀ ಮನೆಯನ್ನು ಪರಿಶೀಲಿಸಿ ನಂತರ […]
ಸಾಲ ವಸೂಲಾತಿ ದೌರ್ಜನ್ಯಕ್ಕೆ ‘RBI ‘ಬ್ರೇಕ್ : ವಂಚನೆಗೊಳಗಾದವರಿಗೆ 25,000 ವರೆಗೆ ಪರಿಹಾರ !
ನವದೆಹಲಿ : ದೇಶದಲ್ಲಿ ವೇಗವಾಗಿ ಬೆಳೆಯುತ್ತಿರುವ ಆನ್’ಲೈನ್ ಬ್ಯಾಂಕಿಂಗ್ ಮತ್ತು ಡಿಜಿಟಲ್ ವಹಿವಾಟಿನ ಯುಗದಲ್ಲಿ ಗ್ರಾಹಕರ ಹಿತಾಸಕ್ತಿ ಕಾಪಾಡುವುದು ಬಹಳ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (RBI) ಮಹತ್ವದ ಹೆಜ್ಜೆಗಳನ್ನು ಇಡಲು ಸಜ್ಜಾಗಿದೆ. ಹಣಕಾಸು ನೀತಿ (Monetary Policy) ಪ್ರಕಟಿಸುವ ಸಂದರ್ಭದಲ್ಲಿ ಆರ್ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಮೂರು ದೊಡ್ಡ ಘೋಷಣೆಗಳನ್ನು ಮಾಡಿದ್ದಾರೆ. ಹಣಕಾಸು ಉತ್ಪನ್ನಗಳ ತಪ್ಪು ಮಾರಾಟ (Mis-selling), ಸಾಲ ವಸೂಲಾತಿಗೆ ಸಂಬಂಧಿಸಿದ ದೂರುಗಳು ಮತ್ತು ಅನಧಿಕೃತ ಡಿಜಿಟಲ್ ವಹಿವಾಟುಗಳ ವಿರುದ್ಧ ಕಟ್ಟುನಿಟ್ಟಿನ […]
ಇಸ್ಲಾಮಾಬಾದ್ ಮಸೀದಿಯಲ್ಲಿ ಆತ್ಮಾಹುತಿ ಬಾಂಬ್ ದಾಳಿ: 69 ಸಾವು, 169 ಜನರಿಗೆ ಗಾಯ
ಪಾಕಿಸ್ತಾನದ ಇಸ್ಲಾಮಾಬಾದ್ನ ಮಸೀದಿಯಲ್ಲಿ ಆತ್ಮಾಹುತಿ ಬಾಂಬ್ ದಾಳಿ ನಡೆದಿದೆ. ಈ ಘಟನೆಯಲ್ಲಿ 69 ಜನರ ಸಾವನ್ನಪ್ಪಿದ್ದು, 169 ಜನರಿಗೆ ಗಾಯವಾಗಿದೆ. ಪಾಕಿಸ್ತಾನಿ ಮಾಧ್ಯಮಗಳ ವರದಿಗಳ ಪ್ರಕಾರ ಮಧ್ಯಾಹ್ನದ ಸಮಯದಲ್ಲಿ ಶಿಯಾ ಆರಾಧನಾ ಮಂದಿರದ ಮುಖ್ಯ ದ್ವಾರದ ಬಳಿ ಆತ್ಮಾಹುತಿ ಬಾಂಬರ್ ತನ್ನನ್ನು ಸ್ಪೋಟಿಸಿಕೊಂಡಿದ್ದಾನೆ. ಈ ಸ್ಪೋಟದ ಬಳಿಕ ಇಸ್ಲಾಮಾಬಾದ್ ಪೊಲೀಸ್ ಇನ್ಸ್ಪೆಕ್ಟರ್ ಜನರಲ್ ನಗರದಾದ್ಯಂತ ತುರ್ತು ಪರಿಸ್ಥಿತಿ ಘೋಷಣೆ ಮಾಡಿದರು. ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್ನ ಮಸೀದಿ ಒಳಗೆ ಆತ್ಮಾಹುತಿ ಬಾಂಬ್ ದಾಳಿ ನಡೆದಿದ್ದು ಆತಂಕಕ್ಕೆ ಕಾರಣವಾಗಿದೆ. ಸದ್ಯದ […]
ಹಿಮಾಚಲದ ಈ ತಾಣವೇ ಅಪ್ಪಟ ಸ್ವರ್ಗ: ಸ್ಪಿತಿ ಕಣಿವೆಯ ಸೌಂದರ್ಯ ಕಂಡು ಬೆರಗಾದ ಉದ್ಯಮಿ ಆನಂದ್ ಮಹೀಂದ್ರಾ
ಭಾರತದ ಪ್ರಮುಖ ಉದ್ಯಮಿ ಆನಂದ್ ಮಹೀಂದ್ರಾ ಅವರು ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ಅಚ್ಚರಿಯ ದೃಶ್ಯಗಳು ಮತ್ತು ಭಾರತದ ಶ್ರೀಮಂತ ಪರಂಪರೆಯನ್ನು ಜಗತ್ತಿಗೆ ಪರಿಚಯಿಸುವ ಅವರು, ಇತ್ತೀಚೆಗೆ ಹಿಮಾಚಲ ಪ್ರದೇಶದ ಸ್ಪಿತಿ ಕಣಿವೆಯ ಸೌಂದರ್ಯಕ್ಕೆ ಮನಸೋತಿದ್ದಾರೆ. ಅಲ್ಲಿನ ಪ್ರಸಿದ್ಧ ಕೀ ಮಠದ ಚಿತ್ರವನ್ನು ಹಂಚಿಕೊಂಡಿರುವ ಅವರು, ಸ್ವರ್ಗವು ಭೂಮಿಗೆ ಇಳಿದು ಬರಲು ಇದಕ್ಕಿಂತ ಬೇರೆ ಸಾಕ್ಷಿ ಬೇಕಿಲ್ಲ ಎಂದು ಬಣ್ಣಿಸಿದ್ದಾರೆ. ರಹಸ್ಯವಾಗಿ ಉಳಿದಿರುವ ಸ್ಪಿತಿಯ ಸೌಂದರ್ಯ ಹಿಮಾಚಲ ಪ್ರದೇಶದ ಸ್ಪಿತಿ ಕಣಿವೆಯು ತನ್ನ ವಿಶಾಲವಾದ ನೋಟಗಳು, ಪ್ರಶಾಂತ […]
ಬೆಳಗಾವಿ ವಿಭಜನೆ ವಿಚಾರ: ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದೇನು?
ಬೆಳಗಾವಿ: ಬೆಳಗಾವಿ ಜಿಲ್ಲೆಯ ವಿಭಜನೆ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿರ್ಧಾರ ಕೈಗೊಳ್ಳಬೇಕೆಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ. ಬೆಳಗಾವಿಯ ಶ್ರೀನಗರದಲ್ಲಿ 40 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ಜಿಲ್ಲಾ ಬಾಲಭವನದ ಒಳಾಂಗಣ ಬಾಕ್ಸ್ ಕ್ರಿಕೆಟ್ ಮೈದಾನವನ್ನು ಉದ್ಘಾಟಿಸಿ,ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಬೆಳಗಾವಿ ಜಿಲ್ಲೆಯನ್ನು ವಿಭಜಿಸಬೇಕೆಂದು ಈಗಾಗಲೇ ಹಲವು ಬಾರಿ ಜಿಲ್ಲೆಯ ಮುಖಂಡರೆಲ್ಲರೂ ಸೇರಿ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದೇವೆ. ಆದರೆ ಈ ಕುರಿತು ಸರ್ಕಾರ, ಸಿಎಂ ಸಿದ್ದರಾಮಯ್ಯನವರೇ ಅಂತಿಮ ನಿರ್ಧಾರ ಕೈಗೊಳ್ಳಬೇಕೆಂದು […]
T20 World Cup 2026: ಟೂರ್ನಿಯಿಂದ ಹರ್ಷಿತ್ ರಾಣಾ ಔಟ್; ಬೇರೆ ಆಟಗಾರನನ್ನು ಹುಡುಕುತ್ತಿದ್ದೇವೆ ಎಂದ ಸೂರ್ಯ!
ನಿನ್ನೆಯಷ್ಟೇ ವುಮೆನ್ಸ್ ಪ್ರೀಮಿಯರ್ ಲೀಗ್ ಟೂರ್ನಿ ಮುಗಿದಿದ್ದು, ಇಂದು ಐಸಿಸಿ ಕಿರಿಯರ ವಿಶ್ವಕಪ್ ಟೂರ್ನಿ ಸಹ ಮುಕ್ತಾಯಗೊಳ್ಳುತ್ತಿದೆ. ಹೀಗೆ ಎರಡು ಮೆಗಾ ಟೂರ್ನಿಗಳು ಮುಕ್ತಾಯವಾಗುತ್ತಿದ್ದಂತೆ ಕ್ರಿಕೆಟ್ ಅಭಿಮಾನಿಗಳಲ್ಲಿ ನಾಳೆಯಿಂದ ( ಫೆಬ್ರವರಿ 7 ) ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಶುರುವಾಗಲಿದೆ ಎನ್ನುವ ಸಂತಸ ಮನೆಮಾಡಿದ್ದು, ಮನರಂಜನೆ ಮುಂದುವರಿಯಲಿದೆ. ಉದ್ಘಾಟನಾ ಪಂದ್ಯ ಶ್ರೀಲಂಕಾದ ಕೊಲಂಬೊದಲ್ಲಿ ನಡೆಯಲಿದ್ದು, ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಾಳೆಯೇ ನಡೆಯಲಿರುವ ಮೂರನೇ ಪಂದ್ಯದಲ್ಲಿ ಭಾರತ ನಮೀಬಿಯಾ ವಿರುದ್ಧ ಕಣಕ್ಕಿಳಿಯಲಿದೆ. ಇನ್ನು ಇದಕ್ಕೂ ಮುನ್ನ ನಡೆದ […]
ನಲ್ಲಿ ಆಫ್ ಮಾಡಲು ಮರೆತಿದ್ದೇ ತಪ್ಪಾಯ್ತು: ಬೆಳ್ಳಂಬೆಳಿಗ್ಗೆ ಇಡೀ ಏರಿಯಾವನ್ನೇ ಐಸ್ ಸ್ಕೇಟಿಂಗ್ ರಿಂಕ್ ಮಾಡಿದ ಮಹಿಳೆ
ಚೀನಾದ ಲ್ಯಾಂಜೌ ನಗರದಲ್ಲಿ ಮಹಿಳೆಯೊಬ್ಬರ ಸಣ್ಣ ಮರೆವು ಇಡೀ ವಸತಿ ಸಂಕೀರ್ಣವನ್ನೇ ಹಿಮದ ಕ್ರೀಡಾಂಗಣವನ್ನಾಗಿ ಬದಲಿಸಿದ ವಿಚಿತ್ರ ಘಟನೆ ನಡೆದಿದೆ. ಮೈನಸ್ 8 ಡಿಗ್ರಿ ಸೆಲ್ಸಿಯಸ್ ಚಳಿಯಿರುವಾಗ ಸೋಲಾರ್ ವಾಟರ್ ಹೀಟರ್ ನಲ್ಲಿ ಆಫ್ ಮಾಡಲು ಮರೆತಿದ್ದೇ ಈ ಎಲ್ಲಾ ಅವಾಂತರಕ್ಕೆ ಕಾರಣವಾಗಿದೆ. ಈ ಘಟನೆಯ ವಿಡಿಯೋ ಈಗ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಒಂಬತ್ತು ಗಂಟೆಗಳ ಕಾಲ ಹರಿದ ನೀರು ವಾಂಗ್ ಎಂಬ ಮಹಿಳೆ ರಾತ್ರಿ ಸ್ನಾನ ಮಾಡಿದ ನಂತರ ಸೋಲಾರ್ ವಾಟರ್ ಹೀಟರ್ನ ನಲ್ಲಿಯನ್ನು […]
ಬೆಂಗಳೂರು: ಮನರೇಗಾ ರದ್ದುಪಡಿಸಿ ವಿಬಿ ಜಿ ರಾಮ್ ಜಿ ಕಾಯ್ದೆ ಜಾರಿಗೊಳಿಸಿದ ಕೇಂದ್ರಸರ್ಕಾರದ ಕುತಂತ್ರವನ್ನ ರಾಜ್ಯದ ರೈತರು ಒಕ್ಕೊರಲಿನಿಂದ ವಿರೋಧಿಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅಂತರರಾಷ್ಟ್ರೀಯ ವಾಣಿಜ್ಯ ಮೇಳ -2026 ಉತ್ಪದಾನೋತ್ತರ ಕೃಷಿ – ರೈತರ ಸಬಲೀಕರಣ ಹಾಗೂ ರಾಜ್ಯಮಟ್ಟದ ಕೃಷಿ ಪಂಡಿತ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಮಹಿಳಾ ಕೃಷಿಕರ ಸಾಧನೆ ಸ್ಪೂರ್ತಿದಾಯಕ ಎಂದರು. ನಮ್ಮ ಸರ್ಕಾರ ಕೃಷಿ ಕ್ಷೇತ್ರಕ್ಕೆ ಎಂದಿಗೂ ಬೆಂಬಲವಾಗಿ ನಿಂತಿದೆ. ಕೃಷಿ ಲಾಭದಾಯಕವಾಗಿಸಲು ಹಾಗೂ ಕೃಷಿಕರ ಸಬಲೀಕರಣವನ್ನು […]
ಬಂಗಾರ ಕೊಳ್ಳೋದಾ ಅಥವಾ ಸೈಟ್ ತಗೊಳ್ಳೋದಾ? ನಿಮ್ಮ ಭವಿಷ್ಯ ಬದಲಿಸಬಲ್ಲ ಹೂಡಿಕೆಯ ಮಾಸ್ಟರ್ ಪ್ಲಾನ್ ಇಲ್ಲಿದೆ
ಬೆಂಗಳೂರು: ಭಾರತೀಯರ ಪಾಲಿಗೆ ಹೂಡಿಕೆ ಎಂದರೆ ಅದು ಕೇವಲ ಲಾಭವಲ್ಲ, ಅದೊಂದು ಭಾವನೆ. ಅದರಲ್ಲೂ ‘ಚಿನ್ನ’ ಮತ್ತು ಆಸ್ತಿ (Real Estate) ಎಂದಿಗೂ ಎವರ್ಗ್ರೀನ್ ಆಯ್ಕೆಗಳು. ಆದರೆ, 2026ರ ಈ ಕಾಲಘಟ್ಟದಲ್ಲಿ ನಿಮ್ಮ ಭವಿಷ್ಯದ ದೃಷ್ಟಿಯಿಂದ ಯಾವುದು ಬೆಸ್ಟ್? ಈ ಬಗ್ಗೆ ಇಲ್ಲಿದೆ ಕಂಪ್ಲೀಟ್ ರಿಪೋರ್ಟ್. 1. ಚಿನ್ನ: ಸಂಕಷ್ಟದ ಸಮಯದ ಸಖ ಕಳೆದ 15 ವರ್ಷಗಳ ಇತಿಹಾಸ ನೋಡಿದರೆ, ಚಿನ್ನವು ಹೂಡಿಕೆದಾರರಿಗೆ ಭರ್ಜರಿ ಲಾಭ ತಂದುಕೊಟ್ಟಿದೆ. ವಾರ್ಷಿಕ ಲಾಭ: ಸರಾಸರಿ ಶೇ. 12ರಿಂದ 15ರಷ್ಟು ಹೆಚ್ಚಳ. […]
Under 19 WC Final: ವೈಭವ್ ಸೂರ್ಯವಂಶಿ ಪರಾಕ್ರಮ; ಇಂಗ್ಲೆಂಡ್ಗೆ 400+ ರನ್ ಗುರಿ ನೀಡಿದ ಭಾರತ
ಹರಾರೆ ಕ್ರೀಡಾಂಗಣದಲ್ಲಿ ಅಂಡರ್ 19 ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯ ಇಂದು ( ಫೆಬ್ರವರಿ 6 ) ನಡೆಯುತ್ತಿದ್ದು, ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗಿವೆ. ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆರಿಸಿಕೊಂಡು ವೈಭವ್ ಸೂರ್ಯವಂಶಿ ದಾಖಲೆಯ ಶತಕದ ನೆರವಿನಿಂದ 50 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ ಬರೋಬ್ಬರಿ 411 ರನ್ ಕಲೆಹಾಕಿ ಇಂಗ್ಲೆಂಡ್ಗೆ 412 ರನ್ಗಳ ಕಠಿಣ ಗುರಿಯನ್ನು ನೀಡಿದೆ. ಭಾರತದ ಇನ್ನಿಂಗ್ಸ್: ಸೆಮಿಫೈನಲ್ ಪಂದ್ಯದಲ್ಲಿ ಶತಕ ಬಾರಿಸಿದ್ದ ಆರನ್ ಜಾರ್ಜ್ ಕೇವಲ 9 […]
ನದಿ ದಡದಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತಗುಲಿ ವ್ಯಕ್ತಿ ದುರ್ಮರಣ
ಚಿಕ್ಕಮಗಳೂರು: ನದಿ ದಡದಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತಗುಲಿ ವ್ಯಕ್ತಿ ಸಾವನ್ನಪ್ಪಿರುವ ದಾರುಣ ಘಟನೆ ಚಿಕ್ಕಮಗಳೂರು ಜಿಲ್ಲೆಯ ದೋಣಿಗಂಡಿ ಬಳಿಯ ಹೇಮಾವತಿ ನದಿಯಲ್ಲಿ ನಡೆದಿದೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ದೋಣಿಗಂಡಿ ಬಳಿ ಈ ದುರಂತ ಸಂಭವಿಸಿದೆ. ವಿದ್ಯುತ್ ತಂತಿ ಸ್ಪರ್ಶಿಸಿ ಸಂತೋಷ್ (38) ಮೃತಪಟ್ಟಿದ್ದಾರೆ. ಪತಿ ಹಾಗೂ ಸಂಬಂಧಿಕರ ಜೊತೆ ನದಿಗೆ ಬಟ್ಟೆ ಒಗೆಯಲು ಬಂದಿದ್ದ ವೇಳೆ ಈ ಘಟನೆ ನಡೆದಿದೆ. ಮೃತ ಸಂತೋಷ್ ಬೇಲೂರು ತಾಲೂಕಿನ ಚೀಕನಹಳ್ಳಿ ನಿವಾಸಿ. ಈ ಹಿಂದೆ ಗುತ್ತಿಗೆ […]
ಯತೀಂದ್ರ ಸಿದ್ದರಾಮಯ್ಯ ನಮ್ಮ ಹೈಕಮಾಂಡ್: ಡಿಕೆಶಿ ಖಡಕ್ ಪ್ರತಿಕ್ರಿಯೆ
ಮುಖ್ಯಮಮಂತ್ರಿ ಸಿದ್ದರಾಮಯ್ಯ ಪುತ್ರ, ಎಂಎಲ್ಸಿ ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ಶುಕ್ರವಾರ ರಾಜ್ಯ ರಾಜಕೀಯದಲ್ಲಿ ಮತ್ತೆ ನಾಯಕತ್ವ ಬದಲಾವಣೆ ಚರ್ಚೆಯನ್ನು ಹುಟ್ಟು ಹಾಕಿದೆ. ಮೈಸೂರಿನಲ್ಲಿ ಶುಕ್ರವಾರ ಮಾತನಾಡಿದ ಯತೀಂದ್ರ ಸಿದ್ದರಾಮಯ್ಯ, “ಐದು ವರ್ಷವೂ ನಮ್ಮ ತಂದೆಯವರೇ ಸಿಎಂ. ಹೈಕಮಾಂಡ್ ಈ ಬಗ್ಗೆ ನಮ್ಮ ತಂದೆಗೆ ಗ್ರೀನ್ ಸಿಗ್ನಲ್ ಕೊಟ್ಟಿದೆ. ಯಾರೋ ಕೆಲವರು ನಾಯಕತ್ವ ಬದಲಾವಣೆ ಬಗ್ಗೆ ಪ್ರಯತ್ನ ಮಾಡಿದ್ದರು. ಆ ಪ್ರಯತ್ನಕ್ಕೆ ಹೈಕಮಾಂಡ್ ಸೊಪ್ಪು ಹಾಕಿಲ್ಲ” ಎಂದು ಹೇಳಿದರು. ಈ ಹೇಳಿಕೆ ಮೂಲಕ ಅವರು ನಾಯಕತ್ವ ಬದಲಾವಣೆ ಚರ್ಚೆಯನ್ನು […]
ಬ್ರೆಟ್ ಲೀ ಮನಗೆದ್ದ ದುಬೈ ಜೀವನಶೈಲಿ: ಕುಟುಂಬದೊಂದಿಗೆ ಯುಎಇನಲ್ಲಿ ನೆಲೆಸಲು ಅಸಲಿ ಕಾರಣವೇನು?
ಆಸ್ಟ್ರೇಲಿಯಾದ ಮಾಜಿ ವೇಗದ ಬೌಲರ್ ಬ್ರೆಟ್ ಲೀ ಈಗ ತಮ್ಮ ಬದುಕಿನ ಹೊಸ ಅಧ್ಯಾಯವನ್ನು ಆರಂಭಿಸಿದ್ದಾರೆ. ದಶಕಗಳ ಕಾಲ ಆಸ್ಟ್ರೇಲಿಯಾದ ಪರವಾಗಿ ಕ್ರಿಕೆಟ್ ಮೈದಾನದಲ್ಲಿ ಮಿಂಚಿದ್ದ ಲೀ, ಈಗ ತಮ್ಮ ಕುಟುಂಬದೊಂದಿಗೆ ದುಬೈಗೆ ವಾಸ್ತವ್ಯ ಬದಲಿಸಿದ್ದಾರೆ. ಇನ್ನು ಮುಂದೆ ತಮಗೆ ‘ದುಬೈ’ ಹೊಸ ಮನೆ ಎಂದು ಅವರು ಸಾಮಾಜಿಕ ಜಾಲತಾಣಗಳಲ್ಲಿ ಭಾವನಾತ್ಮಕವಾಗಿ ಹಂಚಿಕೊಂಡಿದ್ದಾರೆ. ಕೆಲಸದ ನಿಮಿತ್ತ ಬಂದವರು ಇಲ್ಲೇ ಉಳಿದರು ಆರಂಭದಲ್ಲಿ ಕೇವಲ ಕೆಲಸದ ನಿಮಿತ್ತ ಅಲ್ಪಾವಧಿಗೆ ದುಬೈಗೆ ಭೇಟಿ ನೀಡುತ್ತಿದ್ದ ಬ್ರೆಟ್ ಲೀ ಅವರಿಗೆ, ಅಲ್ಲಿನ […]
ಸರ್ಕಾರ ಕೃಷಿ ಕ್ಷೇತ್ರಕ್ಕೆ ಸದಾಕಾಲ ಬೆಂಬಲವಾಗಿ ನಿಂತಿದೆ: ಸಿದ್ದರಾಮಯ್ಯ
“ನಮ್ಮ ಸರ್ಕಾರ ಕೃಷಿ ಕ್ಷೇತ್ರಕ್ಕೆ ಸದಾಕಾಲವೂ ಬೆಂಬಲವಾಗಿ ನಿಂತಿದೆ. ಕೃಷಿ ಲಾಭದಾಯಕವಾಗಿಸಲು ಹಾಗೂ ಕೃಷಿಕರ ಸಬಲೀಕರಣವನ್ನು ಸಾಧಿಸಲು ಸರ್ಕಾರ ಹೆಚ್ಚಿನ ಒತ್ತು ನೀಡುತ್ತಿದೆ” ಎಂದು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಶುಕ್ರವಾರ ಅರಮನೆ ಮೈದಾನದಲ್ಲಿ ನಡೆದ ಅಂತರರಾಷ್ಟ್ರೀಯ ವಾಣಿಜ್ಯ ಮೇಳ -2026 ಮತ್ತು ಉತ್ಪದಾನೋತ್ತರ ಕೃಷಿ – ರೈತರ ಸಬಲೀಕರಣ ಸಮಾರಂಭದಲ್ಲಿ ಸಿದ್ದರಾಮಯ್ಯ ಮಾತನಾಡಿದರು. “ಕೃಷಿ ಹಾಗೂ ಉತ್ಪಾದನೋತ್ತರ ಚಟುವಟಿಕೆಗಳಲ್ಲಿ ರೈತರು ತೊಡಗಿಕೊಳ್ಳುವ ಮೂಲಕ ಕೃಷಿಯನ್ನು ಲಾಭದಾಯಕಗೊಳಿಸಬಹುದಾಗಿದೆ. ರೈತರು ಉದ್ಯಮಿಗಳಾಗಬೇಕು. ಉತ್ಪನ್ನಗಳನ್ನು ಬೆಳೆಯುವ ಜೊತೆಗೆ, ಸಂಗ್ರಹಣೆ, ಸಂಸ್ಕರಣೆ, […]
ಕೋಡಿಂಗ್ ಯುಗ ಅಂತ್ಯವಾಗುತ್ತಿದೆಯೇ: ಝೋಹೋ ಸಿಇಒ ಶ್ರೀಧರ್ ವೆಂಬು ನೀಡಿದ ಎಚ್ಚರಿಕೆಯ ಹಿಂದಿನ ಅಸಲಿ ಕಾರಣ ಇಲ್ಲಿದೆ
ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವು ಸಾಫ್ಟ್ವೇರ್ ಲೋಕದಲ್ಲಿ ಎಂತಹ ಕ್ರಾಂತಿ ಮಾಡುತ್ತಿದೆ ಎಂದರೆ, ಇನ್ನು ಮುಂದೆ ಪ್ರೋಗ್ರಾಮಿಂಗ್ ಬರೆಯುವವರ ಅವಶ್ಯಕತೆ ಇರುವುದಿಲ್ಲವೇ ಎಂಬ ಪ್ರಶ್ನೆ ಮೂಡಿದೆ. ಭಾರತದ ಪ್ರಸಿದ್ಧ ಸಾಫ್ಟ್ವೇರ್ ಸಂಸ್ಥೆ ‘ಝೋಹೋ’ (Zoho) ಸ್ಥಾಪಕ ಶ್ರೀಧರ್ ವೆಂಬು ಅವರು ಈ ಬಗ್ಗೆ ಗಂಭೀರ ಎಚ್ಚರಿಕೆ ನೀಡಿದ್ದು, ಕೋಡಿಂಗ್ ನಂಬಿ ಬದುಕುವವರು ಪರ್ಯಾಯ ಜೀವನೋಪಾಯದ ಬಗ್ಗೆ ಯೋಚಿಸುವುದು ಉತ್ತಮ ಎಂದು ಹೇಳಿದ್ದಾರೆ. ಶೂನ್ಯ ಜ್ಞಾನವಿದ್ದರೂ ಆಪ್ ಸಿದ್ಧ ಅನಿಶ್ ಮೂಂಕಾ ಎಂಬುವವರು ಹಂಚಿಕೊಂಡ ಪೋಸ್ಟ್ ಒಂದಕ್ಕೆ ಪ್ರತಿಕ್ರಿಯಿಸಿದ […]
BREAKING: ಉದ್ಯಮಿ ಅರವಿಂದ್ ರೆಡ್ಡಿಗೆ ಬೆದರಿಕೆ ಪತ್ರ: 7 ಕೋಟಿ ಹಣಕ್ಕೆ ಬೇಡಿಕೆ: ನಟಿಯ ಸ್ನೇಹಿತ ಅರೆಸ್ಟ್
ಬೆಂಗಳೂರು: ಉದ್ಯಮಿ ಅರವಿಂದ್ ರೆಡ್ಡಿ ಹಾಗೂ ಸ್ಯಾಂಡಲ್ ವುಡ್ ನಟಿಯೊಬ್ಬರ ನಡುವಿನ ಕಿರಿಕ್ ವಿಚಾರಕ್ಕೆ ಸಂಬಂಧಿಸಿದಂತೆ ಅರವಿಂದ್ ರೆಡ್ಡಿಗೆ ಬೆದರಿಕೆ ಪತ್ರ ರವಾನಿಸಿದ್ದ ವ್ಯಕ್ತಿಯನ್ನು ಬೆಂಗಳೂರಿನ ಹೆಚ್ ಎ ಎಲ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ವೈಶಾಕ್ ಬಂಧಿತ ಆರೋಪಿ. ತನಿಖೆ ವೇಳೆ ವೈಶಾಕ್, ನಟಿಯ ಸ್ನೇಹಿತ ಎಂಬುದು ಗೊತ್ತಾಗಿದೆ. ನಟಿಯ ಮನೆಯಲ್ಲಿಯೇ ಅಡಗಿ ಕುಳಿತಿದ್ದ ವೈಶಾಕ್ ನನ್ನು ಪೊಲೀಸರು ಬಂಧಿಸಿ ಠಾಣೆಗೆ ಕರೆದೊಯ್ದಿದ್ದಾರೆ. ಸ್ಯಾಂದಲ್ ವುಡ್ ನಟಿಯೊಂದಿಗೆ ಈ ಹಿಂದೆ ನಡೆದಿದ್ದ ಕಿರಿಕ್ ವಿಚಾರವಾಗಿ ಉದ್ಯಮಿ ಅರವಿಂದ್ […]
ಎಂಬಿಬಿಎಸ್ ವೈದ್ಯಾಧಿಕಾರಿಗಳಿಗೆ 6 ತಿಂಗಳ ಅಲ್ಟ್ರಾಸೋನೊಗ್ರಫಿ ತರಬೇತಿ, ಸರ್ಕಾರದ ಮಹತ್ವದ ಹೆಜ್ಜೆ
ಎಂಬಿಬಿಎಸ್ ವೈದ್ಯಾಧಿಕಾರಿಗಳಿಗೆ ಆರು ತಿಂಗಳ ಅಲ್ಟ್ರಾಸೋನೊಗ್ರಫಿ (Ultrasonography) ತರಬೇತಿ ನೀಡಲು ಕರ್ನಾಟಕ ಸರ್ಕಾರ ಮುಂದಾಗಿದೆ. ಈ ಮೂಲಕ ರಾಜ್ಯದ ತಾಯಿ ಮತ್ತು ಶಿಶು ಆರೋಗ್ಯ ಸೇವೆಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರವು ಒಂದು ಪ್ರಮುಖ ಆದೇಶವನ್ನು ಹೊರಡಿಸಿದೆ. ಈ ಕುರಿತು ಸಾಮಾಜಿಕ ಜಾಲತಾಣದ ಪೋಸ್ಟ್ನಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವ ದಿನೇಶ್ ಗುಂಡೂರಾವ್ ಮಾಹಿತಿ ನೀಡಿದ್ದಾರೆ. ಹಲವಾರು ಜಿಲ್ಲಾ ಆಸ್ಪತ್ರೆಗಳಲ್ಲಿ ರೇಡಿಯಾಲಜಿಸ್ಟ್ಗಳ ಕೊರತೆ ಇರುವುದನ್ನು ಗಮನಿಸಿ, ಸಾರ್ವಜನಿಕರಿಗೆ ಗುಣಮಟ್ಟದ ಪ್ರಸವಪೂರ್ವ ಮತ್ತು ಪ್ರಸವೋತ್ತರ ಸೇವೆಗಳನ್ನು […]
Under 19 WC Final: 15 ಸಿಕ್ಸ್, 15 ಫೋರ್; ಬರೋಬ್ಬರಿ 175 ರನ್ ಚಚ್ಚಿದ ವೈಭವ್ ಸೂರ್ಯವಂಶಿ
ಹರಾರೆ ಕ್ರೀಡಾಂಗಣದಲ್ಲಿ ಅಂಡರ್ 19 ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯ ಇಂದು ( ಫೆಬ್ರವರಿ 6 ) ನಡೆಯುತ್ತಿದ್ದು, ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗಿವೆ. ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆರಿಸಿಕೊಂಡಿತು. ಅದರಂತೆ ಬ್ಯಾಟಿಂಗ್ ಆರಂಭಿಸಿದ ಭಾರತಕ್ಕೆ ಸೆಮಿಫೈನಲ್ ಪಂದ್ಯದಲ್ಲಿ ಶತಕ ಬಾರಿಸಿದ್ದ ಆರನ್ ಜಾರ್ಜ್ ಕೇವಲ 9 ರನ್ಗೆ ಔಟ್ ಆಗಿ ವಿಕೆಟ್ ಒಪ್ಪಿಸಿದರು. ಹೀಗೆ ಆರಂಭಿಕ ಆಘಾತ ಕಂಡ ಭಾರತಕ್ಕೆ ಮತ್ತೋರ್ವ ಆರಂಭಿಕ ಆಟಗಾರ ವೈಭವ್ ಸೂರ್ಯವಂಶಿ ಅಬ್ಬರಿಸಿ ಬೊಬ್ಬಿರಿದು ಆಸರೆಯಾದರು. […]
ದಳಪತಿ ವಿಜಯ್ ಗೆ ಮತ್ತೊಂದು ಶಾಕ್ ನೀಡಿದ ಮದ್ರಾಸ್ ಹೈಕೋರ್ಟ್
ಚೆನ್ನೈ: ದಳಪತಿ ವಿಜಯ್ ನಟನೆಯ ‘ಜನ ನಾಯಗನ್’ ಸಿನಿಮಾಗೆ ಇನ್ನೂ ಬಿಡುಗಡೆ ಭಾಗ್ಯ ಸಿಕ್ಕಿಲ್ಲ. ಸೆನ್ಸಾರ್ ಪ್ರಮಾಣಪತ್ರ ಸಿಗದ ಕಾರಣಕ್ಕೆ ಚಿತ್ರ ಬಿಡುಗಡೆ ವಿಳಂಬವಾಗುತ್ತಲೇ ಇದೆ. ಈ ನಡುವೆ ವಿಜಯ್ ಗೆ ಮದ್ರಾಸ್ ಹೈಕೋರ್ಟ್ ಮತ್ತೊಂದು ಶಾಕ್ ನೀಡಿದೆ. ವಿಜಯ್ ತೆರಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮದ್ರಾಸ್ ಹೈಕೋರ್ಟ್ ರಿಲೀಫ್ ನೀಡಲು ನಿರಾಕರಿಸಿದೆ. 2015-16ರ ಐಟಿ ದಾಳಿ ವೇಳೆ 15 ಕೋಟಿ ರೂ. ಆದಾಯ ಬಹಿರಂಗಪಡಿಸದ ಕಾರಣ ತೆರಿಗೆ ಇಲಾಖೆ ವಿಧಿಸಿದ್ದ 1.5 ಕೋಟಿ ರೂ. ದಂಡವನ್ನು […]
EPFO : ಫೆ.13 ರಂದು ಪಿಂಚಣಿ ಅದಾಲತ್.!
ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆಯ ಬಳ್ಳಾರಿ ಪ್ರಾದೇಶಿಕ ಕಚೇರಿ ವತಿಯಿಂದ ಪಿಂಚಣಿದಾರರ ಕುಂದು ಕೊರತೆ ಆಲಿಸಿ, ಪರಿಹರಿಸಲು ಫೆಬ್ರವರಿ 13 ರಂದು ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 01 ಗಂಟೆಯವರೆಗೆ ನಗರದ ಪ್ರಾದೇಶಿಕ ಕಚೇರಿಯಲ್ಲಿ ಪಿಂಚಣಿ ಅದಾಲತ್ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಜಿಲ್ಲಾ ಪ್ರಾದೇಶಿಕ ಕಚೇರಿಯ ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತ ಕೆ.ವಿ ಪ್ರವೀಣ್ ಅವರು ತಿಳಿಸಿದ್ದಾರೆ. ಬಳ್ಳಾರಿ, ವಿಜಯನಗರ, ಕೊಪ್ಪಳ, ಚಿತ್ರದುರ್ಗ ಜಿಲ್ಲೆಗಳ ಪಿಂಚಣಿದಾರರು ತಮ್ಮ ಕುಂದುಕೊರತೆಗಳಿದ್ದಲ್ಲಿ ಬಳ್ಳಾರಿ ಪ್ರಾದೇಶಿಕ ಕಚೇರಿಯ ಸಾರ್ವಜನಿಕ ಸಂಪರ್ಕ ಅಧಿಕಾರಿಗೆ […]
BIG UPDATE : ಪಾಕಿಸ್ತಾನದ ಮಸೀದಿ ಬಳಿ ಭೀಕರ ಆತ್ಮಹತ್ಯಾ ಬಾಂಬ್ ದಾಳಿ : 24 ಮಂದಿ ಸಾವು.!
ಇಸ್ಲಾಮಾಬಾದ್: ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್’ನ ಮಸೀದಿಯಲ್ಲಿ ನಡೆದ ಶಂಕಿತ ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ ಕನಿಷ್ಠ 24 ಜನರು ಸಾವನ್ನಪ್ಪಿದ್ದಾರೆ ಮತ್ತು ಹತ್ತಾರು ಜನರು ಗಾಯಗೊಂಡಿದ್ದಾರೆ. ಇಸ್ಲಾಮಾಬಾದ್ ಶೆಹಜಾದ್ ಟೌನ್ ಪ್ರದೇಶದಲ್ಲಿರುವ ತೆರ್ಲೈ ಇಮಾಂಬರ್ಗಾ (Tarlai Imambargah) ಮಸೀದಿಯಲ್ಲಿ ಈ ಸ್ಫೋಟ ಸಂಭವಿಸಿದೆ.ಉಜ್ಬೇಕಿಸ್ತಾನ್ ಅಧ್ಯಕ್ಷ ಶಾವ್ಕತ್ ಮಿರ್ಜಿಯೊಯೆವ್ ಅವರು ಎರಡು ದಿನಗಳ ಅಧಿಕೃತ ಭೇಟಿಗಾಗಿ ಪಾಕಿಸ್ತಾನಕ್ಕೆ ಆಗಮಿಸಿರುವ ಸಮಯದಲ್ಲಿಯೇ ಈ ದಾಳಿ ನಡೆದಿರುವುದು ಆತಂಕ ಮೂಡಿಸಿದೆ.ಪಾಕಿಸ್ತಾನದ ಪ್ರಮುಖ ಪತ್ರಿಕೆ ‘ಡಾನ್’ (Dawn) ವರದಿ ಮಾಡಿರುವಂತೆ, ಕನಿಷ್ಠ 80 ಜನರು […]
SHOCKING : ಮೊಬೈಲ್ ಬ್ಯಾಟರಿ ಹಲ್ಲಿನಿಂದ ಕಚ್ಚಿದ ತಕ್ಷಣ ಬಾಯಲ್ಲೇ ಸ್ಫೋಟ : ಭಯಾನಕ ವೀಡಿಯೋ ವೈರಲ್ |WATCH VIDEO
ಮೊಬೈಲ್ ಬ್ಯಾಟರಿಯನ್ನು ನಾಲಿಗೆಯಿಂದ ನೆಕ್ಕಿ ಅಥವಾ ಹಲ್ಲಿನಿಂದ ಕಚ್ಚಿ ಪರೀಕ್ಷಿಸುವುದು ಅತ್ಯಂತ ಅಪಾಯಕಾರಿ. ವೈರಲ್ ಆಗಿರುವ ವಿಡಿಯೋವೊಂದರಲ್ಲಿ, ವ್ಯಕ್ತಿಯೊಬ್ಬ ಮೊಬೈಲ್ ಅಂಗಡಿಯಲ್ಲಿ ನಿಂತು ಬ್ಯಾಟರಿಯನ್ನು ಹಲ್ಲಿನಿಂದ ಒತ್ತಿದಾಗ ಅದು ಕ್ಷಣಾರ್ಧದಲ್ಲಿ ಸ್ಫೋಟಗೊಳ್ಳುವ ಭೀಕರ ದೃಶ್ಯ ಸೆರೆಯಾಗಿದೆ. ಏನಿದು ಘಟನೆ?ವಿಡಿಯೋದಲ್ಲಿ ಕಾಣುವಂತೆ, ವ್ಯಕ್ತಿ ಬ್ಯಾಟರಿಯನ್ನು ಬಾಯಿಯಲ್ಲಿಟ್ಟು ಕಚ್ಚಿದ ಕೇವಲ 3 ಸೆಕೆಂಡುಗಳಲ್ಲಿ ಜೋರಾದ ಶಬ್ದದೊಂದಿಗೆ ಸ್ಫೋಟ ಸಂಭವಿಸುತ್ತದೆ. ಸ್ಫೋಟದ ತೀವ್ರತೆಗೆ ಬೆಂಕಿಯ ಜ್ವಾಲೆಗಳು ಆತನ ಮುಖಕ್ಕೆ ತಗುಲಿ, ಆತ ಹಿಂದೆ ಬಿದ್ದಿದ್ದಾನೆ. ಅಂಗಡಿಯಲ್ಲಿದ್ದ ಇತರ ಜನರಲ್ಲಿ ಅಫರಾತಫರಿ ಉಂಟಾಗಿದೆ. […]
ಬೆಂಗಳೂರು: ಕಾಂಗ್ರೆಸ್ ಪಕ್ಷದಲ್ಲಿ ಮತ್ತೆ ಕದನ ಶುರುವಾಗಿದೆ. ನಮ್ಮ ತಂದೆಯೇ 5 ವರ್ಷ ಸಿಎಂ ಎಂದು ಸಿಎಂ ಪುತ್ರ ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ. ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದೆ ಎಂದೂ ಹೇಳಿದ್ದಾರೆ. ಹಾಗಾಗಿ ಇನ್ಮುಂದೆ ರಾಜ್ಯದಲ್ಲಿ ಪ್ರತಿದಿನ ಕಾಂಗ್ರೆಸ್ ನಲ್ಲಿ ಕುರ್ಚಿ ಕದನ ನೋಡಬಹುದು ಎಂದು ವಿಪಕ್ಷ ನಾಯಕ ಆರ್.ಅಶೋಕ್ ಟೀಕಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಆರ್.ಅಶೋಕ್, ಯತೀಂದ್ರ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ್ದಾರೆ. ಎಂಎಲ್ ಸಿ ಯತೀಂದ್ರ ಸಿದ್ದರಾಮಯ್ಯ ಈ ಹಿಂದೆಯೂ ನಮ್ಮ ತಂದೆ ಸಿದ್ದರಾಮಯ್ಯ ಅವರೇ […]
ಸೋಲೆ ಗೆಲುವಿನ ಮೆಟ್ಟಿಲು: 4 ಬಾರಿ ಎನ್ ಎಸ್ ಡಿ ತಿರಸ್ಕರಿಸಿದ ನಟ ಇಂದು ಬಾಲಿವುಡ್ನ ದಿಗ್ಗಜ
ಮುಂಬೈ ಕನಸಿನ ನಗರಿ. ಇಲ್ಲಿಗೆ ಪ್ರತಿ ವರ್ಷ ಸಾವಿರಾರು ಯುವಕರು ನಟರಾಗಬೇಕೆಂದು ಬರುತ್ತಾರೆ, ಆದರೆ ಗೆಲ್ಲುವವರು ಕೆಲವರು ಮಾತ್ರ. ಅಂತಹ ಗೆದ್ದವರ ಸಾಲಿನಲ್ಲಿ ನಿಲ್ಲುವ ಅತ್ಯಂತ ಪ್ರಭಾವಶಾಲಿ ಹೆಸರು ಮನೋಜ್ ಬಾಜಪೇಯಿ. ಇಂದು ಬಾಲಿವುಡ್ನ ಅತ್ಯಂತ ಬಹುಮುಖ ಪ್ರತಿಭೆಯ ನಟ ಎಂದು ಕರೆಸಿಕೊಳ್ಳುವ ಮನೋಜ್ ಅವರ ಹಾದಿ ಹೂವಿನ ಹಾಸಿಗೆಯಾಗಿರಲಿಲ್ಲ. ಅತಿ ಹೆಚ್ಚು ತಿರಸ್ಕಾರ ಮತ್ತು ಸಂಕಷ್ಟಗಳನ್ನು ಮೆಟ್ಟಿ ನಿಂತು ಅವರು ಇಂದು ಈ ಸ್ಥಾನಕ್ಕೆ ಬಂದು ನಿಂತಿದ್ದಾರೆ. ವೈದ್ಯರಾಗುವ ಕನಸು ಭಗ್ನ ಮತ್ತು ಎನ್ ಎಸ್ […]
ಅಪ್ರಾಪ್ತ ಬಾಲಕಿಯೊಂದಿಗೆ ವಿವಾಹ: ವರ, ಪೋಷಕರು ಸೇರಿ 6 ಜನರ ವಿರುದ್ಧ ಎಫ್ ಐಆರ್ ದಾಖಲು
ಬೀದರ್: ಅಪ್ರಾಪ್ತ ಬಾಲಕಿಯೊಂದಿಗೆ ಮದುವೆ ಪ್ರಕರಣಕ್ಕೆ ಸಂಬಂಧಿಸಿದಂತೆ ವರ ಹಾಗೂ ಆತನ ಪೋಷಕರು ಸೇರಿದಂತೆ 6 ಜನರ ವಿರುದ್ಧ ಎಫ್ ಐ ಆರ್ ದಾಖಲಾಗಿರುವ ಘಟನೆ ಬೀದರ್ ನ ಜನವಾಡದಲ್ಲಿ ನಡೆದಿದೆ. ಜನವಾಡದ ತಾಲೂಕಿನ ಗ್ರಾಮವೊಂದರ ಚರ್ಚ್ ನಲ್ಲಿ 17 ವರ್ಷದ 8 ತಿಂಗಳ ಬಾಲಕಿಯೊಂದಿಗೆ 24 ವರ್ಷದ ಯುವಕ ಮದುವೆಯಾಗಿದ್ದ. ಖಚಿತ ಮಾಹಿತಿ ಮೇರೆಗೆ ಗ್ರಾಮ ಪಂಚಾಯತ್ ಪಿಡಿ, ಬಾಲಕಿ ಶಾಲಾ ದಾಖಲೆ, ಆಧಾರ್ ಕಾರ್ಡ್ ಪರಿಶೀಲಿಸಿದಾಗ ಅಪ್ರಾಪ್ತೆ ಎಂಬುದು ಗೊತ್ತಾಗಿದೆ. ವಿವಾಹವಾದ ಯುವಕ, ಆತನ […]
BREAKING : ಪಾಕಿಸ್ತಾನದ ಮಸೀದಿ ಬಳಿ ಭೀಕರ ಸ್ಪೋಟ : ಹಲವರು ಮೃತಪಟ್ಟಿರುವ ಶಂಕೆ.!
ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ರಕ್ತಪಾತ ಮುಂದುವರಿದಿದ್ದು, ಶುಕ್ರವಾರ ಮಸೀದಿಯೊಂದರ ಸಮೀಪ ಸಂಭವಿಸಿದ ಭೀಕರ ಸ್ಫೋಟದಲ್ಲಿ ಕನಿಷ್ಠ ಹಲವಾರು ಜನರು ಸಾವನ್ನಪ್ಪಿದ್ದಾರೆ ಮತ್ತು ಅನೇಕರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್ನ ಧಾರ್ಮಿಕ ಕೇಂದ್ರವೊಂದರಲ್ಲಿ ನಡೆದ ಸ್ಫೋಟದಲ್ಲಿ ಹಲವಾರು ಜನರು ಮೃತಪಟ್ಟು, ಹಲವಾರು ಜನ ಗಾಯಗೊಂಡಿದ್ದಾರೆ. ಸ್ಥಳೀಯ ವರದಿಗಳ ಪ್ರಕಾರ, ಫೆಡರಲ್ ರಾಜಧಾನಿಯ ಶೆಹಜಾದ್ ಟೌನ್ ಪ್ರದೇಶದ ತೆರ್ಲೈ ಇಮಾಂಬರ್ಗಾದಲ್ಲಿ (Tarlai Imambargah) ಈ ಸ್ಫೋಟ ಸಂಭವಿಸಿದೆ.. ಸ್ಫೋಟದ ತೀವ್ರತೆ ಎಷ್ಟಿತ್ತೆಂದರೆ ಸಮೀಪದ ಕಟ್ಟಡಗಳ ಕಿಟಕಿ ಗಾಜುಗಳು […]

17 C