ಚಿನ್ನಸ್ವಾಮಿ ಕ್ರೀಡಾಂಗಣದಲ್ಲೇ ಆಡುವಂತೆ RCB ಗೆ ವೆಂಕಟೇಶ್ ಪ್ರಸಾದ್ ಮನವಿ
ಬೆಂಗಳೂರು: ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿಯೇ ತನ್ನ ಪಾಲಿನ ತವರು ಪಂದ್ಯಗಳನ್ನು ಆಡುವಂತೆ ಆರ್ಸಿಬಿ ತಂಡಕ್ಕೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಮನವಿ ಮಾಡಿದ್ದಾರೆ. ಸರ್ಕಾರದ ನಿರ್ದೇಶನಗಳಿಗೆ ಅನುಗುಣವಾಗಿ ಕ್ರೀಡಾಂಗಣ ಸಜ್ಜಾಗಿದೆ. 2026ರ ಆವೃತ್ತಿಯ ಉದ್ಘಾಟನಾ ಪಂದ್ಯ ಸೇರಿದಂತೆ ತನ್ನ ಪಾಲಿನ ತವರು ಪಂದ್ಯಗಳನ್ನು ಆರ್ಸಿಬಿ ಬೆಂಗಳೂರಿನಲ್ಲಿಯೇ ಆಡಲಿ ಎಂದು ಮನವಿ ಮಾಡುತ್ತೇನೆ. ಫೆಬ್ರವರಿ ಅಂತ್ಯದ ವೇಳೆಗೆ ರಾಜ್ಯ ಸರ್ಕಾರದಿಂದ ಪಂದ್ಯ ನಡೆಸಲು ಅನುಮತಿ ಪತ್ರ ಪಡೆಯುವ ವಿಶ್ವಾಸದಲ್ಲಿದ್ದೇವೆ ಎಂದು ವೆಂಕಟೇಶ್ ಪ್ರಸಾದ್ […]
ವೀರಶೈವ ಲಿಂಗಾಯಿತ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಖಂಡ್ರೆಗೆ ಸಿದ್ದರಾಮಯ್ಯ ಅಭಿನಂದನೆ
ಬೆಂಗಳೂರು: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾದ ಅರಣ್ಯ ಸಚಿವ ಬಿ. ಈಶ್ವರ ಖಂಡ್ರೆ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿನಂದಿಸಿದ್ದಾರೆ. ಮಹಾಸಭಾ 24ನೇ ರಾಷ್ಟ್ರೀಯ ಅಧ್ಯಕ್ಷರಾಗಿರುವ ನಮ್ಮ ಪಕ್ಷದ ನಾಯಕರು, ಸಚಿವರಾದ ಈಶ್ವರ ಖಂಡ್ರೆ ಅವರನ್ನು ಅಭಿನಂದಿಸಿ ಶುಭ ಹಾರೈಸಿದ ಬಗ್ಗೆ ಸಿಎಂ ಮಾಹಿತಿ ಹಂಚಿಕೊಂಡಿದ್ದಾರೆ. ಮಹಾಸಭಾ ರಾಷ್ಟ್ರೀಯ ಅಧ್ಯಕ್ಷರಾಗಿ ಈಶ್ವರ ಖಂಡ್ರೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದ ಹುದ್ದೆ ತೆರವಾಗಿತ್ತು. ಮಹಾಸಭಾ ಕಾರ್ಯಕಾರಿಣಿ ಸಭೆಯಲ್ಲಿ ಮಹಾ ಪ್ರಧಾನ ಕಾರ್ಯದರ್ಶಿ […]
BREAKING: ಅಧಿವೇಶನ ಭಾಷಣದಲ್ಲಿ 11 ಪ್ಯಾರಾ ಕೈಬಿಡಲು ರಾಜ್ಯಪಾಲರ ಒತ್ತಡ
ಬೆಂಗಳೂರು: ನಾಳೆಯಿಂದ ಆರಂಭವಾಗಲಿರುವ ಜಂಟಿ ಸದನ ಉದ್ದೇಶಿಸಿ ಭಾಷಣ ಮಾಡಲು ನಿರಾಕರಿಸಿರುವ ರಾಜ್ಯಪಾಲರು 11 ಪ್ಯಾರಾಗಳನ್ನು ಕೈಬಿಡಲು ಸಲಹೆ ನೀಡಿದ್ದಾರೆ. ನರೇಗಾ ಯೋಜನೆ ಕುರಿತಂತೆ 11 ಪ್ಯಾರಾಗಳಲ್ಲಿ ಉಲ್ಲೇಖವಿದೆ. ಕೇಂದ್ರದ ನೀತಿಯನ್ನು ಅದರಲ್ಲಿ ಉಲ್ಲೇಖಿಸಲಾಗಿದೆ. ಕಾರ್ಮಿಕರ ಕೆಲಸ ಕಸಿದುಕೊಂಡಿದ್ದರ ಬಗ್ಗೆ ಉಲ್ಲೇಖವಿದೆ. ಈ ವಿಚಾರವನ್ನು ಭಾಷಣದಲ್ಲಿ ಉಲ್ಲೇಖಿಸಿದ್ದಕ್ಕೆ ರಾಜ್ಯಪಾಲರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ರಾಜ್ಯಪಾಲರ ಭೇಟಿ ಮಾಡಿ ಮನವರಿಕೆ ಮಾಡಿ ಕೊಟ್ಟಿದ್ದೇವೆ. ಆದರೆ 11 ಪ್ಯಾರಾಗಳನ್ನು ಕೈಬಿಡಬೇಕೆಂದು ಸಲಹೆ ನೀಡಿದ್ದಾರೆ ಎಂದು ಸಚಿವ ಹೆಚ್.ಕೆ. ಪಾಟೀಲ್ ತಿಳಿಸಿದ್ದಾರೆ. ಲೋಕಭವನದಲ್ಲಿ […]
SHOCKING: ನಾಯಿ ಕಚ್ಚಿದ ತಿಂಗಳುಗಳ ನಂತರ ರೇಬೀಸ್ ನಿಂದ ಮಾಜಿ ಐಎಎಸ್ ಅಧಿಕಾರಿ ಪುತ್ರಿ ಸಾವು
ಗಾಂಧಿನಗರ: ನಾಯಿ ಕಚ್ಚಿದ ತಿಂಗಳುಗಳ ನಂತರ ರೇಬೀಸ್ ತಗುಲಿ ಮಾಜಿ ಐಎಎಸ್ ಅಧಿಕಾರಿಯ ಮಗಳು ಸಾವನ್ನಪ್ಪಿದ್ದಾರೆ. ಲಸಿಕೆ ಹಾಕಿದ ಸಾಕು ನಾಯಿಯೊಂದಿಗೆ ಶಾಲೆಯಲ್ಲಿ ಇದ್ದ ವೇಳೆ ವೈರಸ್ ಗೆ ಒಡ್ಡಿಕೊಂಡ ತಿಂಗಳುಗಳ ನಂತರ ಗಾಂಧಿನಗರದಲ್ಲಿ 50 ವರ್ಷದ ಮಹಿಳೆ ರೇಬೀಸ್ ನಿಂದ ಸಾವನ್ನಪ್ಪಿದ್ದಾರೆ. ಸುಮಾರು ನಾಲ್ಕು ತಿಂಗಳ ಹಿಂದೆ ಶಾಲಾ ಸಿಬ್ಬಂದಿಯ ಒಡೆತನದ ಬೀಗಲ್ ನಾಯಿಯ ಸಂಪರ್ಕಕ್ಕೆ ಬಂದಾಗ ಸೋಂಕು ಸಂಭವಿಸಿದೆ. ನಂತರ ಕಳೆದ ವರ್ಷ ಅಕ್ಟೋಬರ್ 17 ರಂದು ನಾಯಿ ಸಾವನ್ನಪ್ಪಿದೆ. ಡಿಸೆಂಬರ್ ಅಂತ್ಯದಲ್ಲಿ ಮಹಿಳೆಗೆ […]
Good News: ಅಟಲ್ ಪಿಂಚಣಿ ಯೋಜನೆ ಮುಂದುವರಿಸಲು ಒಪ್ಪಿಗೆ
ಮಹತ್ವದ ಬೆಳವಣಿಗೆಯೊಂದರಲ್ಲಿ ಕೇಂದ್ರ ಸರ್ಕಾರ ಅಟಲ್ ಪಿಂಚಣಿ ಯೋಜನೆ (ಎಪಿವೈ) ಮುಂದುವರೆಸಲು ಅನುಮೋದನೆ ನೀಡಿದೆ. ಲಕ್ಷಾಂತರ ಕಡಿಮೆ ಆದಾಯದ ಮತ್ತು ಅಸಂಘಟಿತ ವಲಯದ ಕಾರ್ಮಿಕರಿಗೆ ಈ ಯೋಜನೆ ಸಹಾಯಕವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಅಟಲ್ ಪಿಂಚಣಿ ಯೋಜನೆಯನ್ನು 2030-31ರ ಹಣಕಾಸು ವರ್ಷದವರೆಗೆ ಮುಂದುವರಿಸಲು ಅನುಮೋದನೆ ನೀಡಲಾಗಿದೆ. ಈ ಯೋಜನೆಯು ಸರ್ಕಾರದ ಬೆಂಬಲದೊಂದಿಗೆ 2030-31ರವರೆಗೆ ಮುಂದುವರಿಯುತ್ತದೆ. ಅಸಂಘಟಿತ ವಲಯದ ಕಾರ್ಮಿಕರಲ್ಲಿ ಜಾಗೃತಿ ಮೂಡಿಸುವುದು, ಸಾಮರ್ಥ್ಯ ವೃದ್ಧಿ ಸೇರಿದಂತೆ ಯೋಜನೆಯ ವ್ಯಾಪ್ತಿಯನ್ನು […]
BREAKING: ಗುಂಡು ಹಾರಿಸಿಕೊಂಡು ಉದ್ಯಮಿ ಆತ್ಮಹತ್ಯೆ
ಬಾರಾಬಂಕಿ(ಉತ್ತರ ಪ್ರದೇಶ): ಆರ್ಥಿಕ ಸಮಸ್ಯೆಯಿಂದಾಗಿ 50 ವರ್ಷದ ಉದ್ಯಮಿಯೊಬ್ಬರು ಬುಧವಾರ ತಮ್ಮ ನಿವಾಸದಲ್ಲಿ ಪರವಾನಗಿ ಪಡೆದ ರಿವಾಲ್ವರ್ ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕೊಟ್ವಾಲಿ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಬೆಳಿಗ್ಗೆ 7.30 ರ ಸುಮಾರಿಗೆ ಕುಟುಂಬ ಸದಸ್ಯರಿಗೆ ಗುಂಡು ಹಾರಿಸುವ ಸದ್ದು ಕೇಳಿದೆ ಎಂದು ಅವರು ತಿಳಿಸಿದ್ದಾರೆ. ತಲೆಗೆ ಗುಂಡೇಟಿನಿಂದ ನವೀನ್ ಜೈಸ್ವಾಲ್ ಗಂಭೀರ ಸ್ಥಿತಿಯಲ್ಲಿದ್ದರು, ಅವರ ಪರವಾನಗಿ ಪಡೆದ ಬಂದೂಕು ಹತ್ತಿರದಲ್ಲಿ ಬಿದ್ದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಜೈಸ್ವಾಲ್ […]
ರಾಜ್ಯದ ವಸತಿ ಶಾಲೆಗಳಲ್ಲಿ 6 ನೇ ತರಗತಿ ಪ್ರವೇಶಾತಿಗೆ ಅರ್ಜಿ ಆಹ್ವಾನ , ಪೋಷಕರಿಗೆ ಇಲ್ಲಿದೆ ಮಾಹಿತಿ
ಸಮಾಜ ಕಲ್ಯಾಣ ಇಲಾಖೆಯ ಅಂಗಸಂಸ್ಥೆಯಾದ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಡಿ ಕಾರ್ಯನಿರ್ವಹಿಸುವ ವಿವಿಧ ವಸತಿ ಶಾಲೆಗಳ 6ನೇ ತರಗತಿ ಪ್ರವೇಶಾತಿಗೆ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. 2026-27 ಶೈಕ್ಷಣಿಕ ಸಾಲಿಗೆ ಜಿಲ್ಲೆಯ ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಡಾ.ಬಿ.ಆರ್ ಅಂಬೇಡ್ಕರ್, ಗಾಂಧಿತತ್ವ, ಏಕಲವ್ಯ ಸೇರಿದಂತೆ ಒಟ್ಟು 21 ವಸತಿ ಶಾಲೆಗಳಲ್ಲಿ 6ನೇ ತರಗತಿ ಪ್ರವೇಶಾತಿಗೆ ಪ್ರವೇಶ ಪ್ರಕ್ರಿಯೆ ಆರಂಭವಾಗಿದ್ದು, ಪ್ರಸ್ತುತ 5ನೇ ತರಗತಿ ಓದುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಹತ್ತಿರದ ವಸತಿ […]
BREAKING : ವಿಧಾನಮಂಡಲ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲು ರಾಜ್ಯಪಾಲರ ನಿರಾಕರಣೆ.!
ಬೆಂಗಳೂರು : ವಿಧಾನಮಂಡಲ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ನಿರಾಕರಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಹೌದು, ನಿನ್ನೆ ತಮಿಳುನಾಡಿನಲ್ಲಿ ರಾಜ್ಯಪಾಲರು ಭಾಷಣ ಮಾಡಲು ನಿರಾಕರಿಸಿದ್ದು ವಿವಾದಕ್ಕೆ ಕಾರಣವಾಗಿತ್ತು, ಈ ಬೆನ್ನಲ್ಲೇ ವಿಧಾನಮಂಡಲ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲು ಕರ್ನಾಟಕದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ನಿರಾಕರಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಗವರ್ನರ್ ಭಾಷಣ ಮಾಡಲು ನಿರಾಕರಿಸಿದ ಹಿನ್ನೆಲೆ ನಿಯೋಗ ಇಂದು ಸಂಜೆ 5 :45 ಕ್ಕೆ ರಾಜಭವನಕ್ಕೆ ಭೇಟಿ […]
SHOCKING : ಯಾದಗಿರಿಯಲ್ಲಿ ಘೋರ ಘಟನೆ : ಶಾಲೆಯಲ್ಲೇ ನೇಣು ಬಿಗಿದುಕೊಂಡು 9 ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ.!
ಯಾದಗಿರಿ : ಯಾದಗಿರಿಯಲ್ಲಿ ಘೋರ ಘಟನೆಯೊಂದು ನಡೆದಿದ್ದು, ಶಾಲಾ ಆವರಣದಲ್ಲೇ ನೇಣು ಬಿಗಿದುಕೊಂಡು 9 ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಯಾದಗಿರಿಯಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಬಾಲಕನನ್ನು ವಡಗೇರ ನಿವಾಸಿ 9 ನೇ ತರಗತಿ ವಿದ್ಯಾರ್ಥಿ ಪವನ್ (15) ಎಂದು ಗುರುತಿಸಲಾಗಿದೆ. ಶಾಲೆಯ ಸಮಯದಲ್ಲೇ ಶಾಲಾ ಹಿಂಭಾಗದಲ್ಲಿ ಪವನ್ ಸೂಸೈಡ್ ಮಾಡಿಕೊಂಡಿದ್ದಾನೆ. ಪವನ್ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಿಕ್ಕ ವಯಸ್ಸಿನಲ್ಲಿ […]
BIG NEWS : ಸಿಎಂ ಸಿದ್ದರಾಮಯ್ಯ ಆಪ್ತ ಸ್ನೇಹಿತ ಡಿ.ವೈ.ಉಪ್ಪಾರ್ ನಿಧನ.!
ಬೆಂಗಳೂರು : ಸಿಎಂ ಸಿದ್ದರಾಮಯ್ಯ ಆಪ್ತ ಸ್ನೇಹಿತ ಡಿ.ವೈ.ಉಪ್ಪಾರ್ ನಿಧನರಾಗಿದ್ದು, ಈ ಹಿನ್ನೆಲೆ ಸಿದ್ದರಾಮಯ್ಯ ಅವರು ಉಪ್ಪಾರ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು. ಹಿರಿಯ ಗುತ್ತಿಗೆದಾರ ಹಾಗೂ ಸಿಎಂ ಸಿದ್ದರಾಮಯ್ಯ ಆಪ್ತ ಸ್ನೇಹಿತ ಡಿ.ವೈ.ಉಪ್ಪಾರ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಬಳಿಕ ಮೃತರ ಕುಟುಂಬದವರಿಗೆ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಡಾ.ಯತೀಂದ್ರ ಸಿದ್ದರಾಮಯ್ಯ ಅವರು ಈ ವೇಳೆ ಜೊತೆಗಿದ್ದರು. ಜನವರಿ 22 ರಿಂದ […]
ಶಿಡ್ಲಘಟ್ಟದ ರಾಜೀವ್ ಗೌಡಗೆ ಸಂಕಷ್ಟ: ಕಾಂಗ್ರೆಸ್ ಪಕ್ಷದಿಂದ ಅಮಾನತು?
ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟದ ಕಾಂಗ್ರೆಸ್ ಮುಖಂಡ ರಾಜೀವ್ ಗೌಡಗೆ ಸಂಕಷ್ಟ ಎದುರಾಗಿದೆ. ಎರಡು ಎಫ್ಐಆರ್ ದಾಖಲಾದ ಬಳಿಕ ನಾಪತ್ತೆಯಾಗಿರುವ ಅವರು, ಎಫ್ಐಆರ್ ರದ್ದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ನಗರಸಭೆ ಪೌರಾಯುಕ್ತೆ ಅಮೃತಾ ಗೌಡ ಅವರಿಗೆ ಅವ್ಯಾಚ ಶಬ್ದಗಳಿಂದ ನಿಂದಿಸಿ, ಜೀವ ಬೆದರಿಕೆ ಹಾಕಿರುವ ಪ್ರಕರಣದ ಆರೋಪಿ, ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಪಕ್ಷದಿಂದಲೇ ಅಮಾನತು ಆಗುವ ಸಾಧ್ಯತೆ ಇದೆ. ನಗರಸಭೆ ಪೌರಾಯುಕ್ತೆ ಅಮೃತಾ ಗೌಡ ಅವರಿಗೆ ಬೆದರಿಕೆ ಹಾಕಿದ್ದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಕೆಪಿಸಿಸಿ ರಾಜೀವ್ ಗೌಡಗೆ […]
SHOCKING : ಓಯೋ ರೂಮಿನಂತೆ ರೈಲಿನ ಶೌಚಾಲಯವನ್ನು 2 ಗಂಟೆ ಲಾಕ್ ಮಾಡಿಕೊಂಡ ಜೋಡಿಗಳು |WATCH VIDEO
ರೈಲಿನಲ್ಲಿ ನಡೆದ ಆಘಾತಕಾರಿ ಘಟನೆಯೊಂದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದು, ಜೋಡಿಗಳು ಸುಮಾರು ಎರಡು ಗಂಟೆಗಳ ಕಾಲ ರೈಲಿನ ಶೌಚಾಲಯದೊಳಗೆ ಬೀಗ ಹಾಕಿಕೊಂಡು ಸಾರ್ವಜನಿಕ ಸೌಲಭ್ಯವನ್ನು ಖಾಸಗಿ ಕೋಣೆಯಂತೆ ಪರಿಗಣಿಸಿದರು ಹೌದು. ಜೋಡಿಗಳ ವರ್ತನೆಗೆ ಪ್ರಯಾಣಿಕರು ಆಕ್ರೋಶ ಹೊರ ಹಾಕಿದ್ದು, ಇದೇನು ಓಯೋ ರೂಮಾ..?ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ರೈಲಿನ ಶೌಚಾಲಯದೊಳಗೆ ಹೋದ ಜೋಡಿಗಳು ಎಷ್ಟೇ ಹೊತ್ತಾದರೂ ವಾಪಸ್ ಬರಲಿಲ್ಲ. ಪ್ರಯಾಣಿಕರು ಶೌಚಾಲಯದ ಬಳಿ ಬಂದು ಕಾದು ಕಾದು ಸುಸ್ತಾಗಿದ್ದಾರೆ. ಎಷ್ಟೇ ಹೊತ್ತು ಆದರೂ ಬಾಗಿಲು ತೆಗೆಯಲಿಲ್ಲ.ಶೌಚಾಲಯವನ್ನು ಜೋಡಿಗಳು ಸುಮಾರು […]
ಡಿ.ಕೆ.ಶಿವಕುಮಾರ್ ಒಂದು ಸಾಲಿನ ಸಂದೇಶ: ಬೆಂಬಲಿಗರು ಗುಪ್ ಚುಪ್, ಡಿನ್ನರ್ ಮೀಟಿಂಗ್ ಕ್ಯಾನ್ಸಲ್!
ಕರ್ನಾಟಕ ಕಾಂಗ್ರೆಸ್ ನಾಯಕತ್ವ ಬದಲಾವಣೆ ಚರ್ಚೆಗೆ ತೆರೆ ಬಿದ್ದಿದೆಯೇ?. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬೆಂಬಲಿಗರು ತಣ್ಣಗಾಗಿದ್ದಾರೆಯೇ?. ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮೈಸೂರು ಭೇಟಿ ಬಳಿಕ ಚಿತ್ರಣ ಸಂಪೂರ್ಣ ಬದಲಾಗಿದೆಯೇ?. ಕಾಂಗ್ರೆಸ್ ಪಕ್ಷದ ಮೂಲಗಳ ಪ್ರಕಾರ ಹೌದು. ಸದ್ಯಕ್ಕೆ ಎಲ್ಲರೂ ಥಂಡ ಥಂಡ ಕೂಲ್ ಕೂಲ್. ನಾಯಕತ್ವ ಬದಲಾವಣೆ ವಿಚಾರ ಎತ್ತಬೇಡಿ ಎಂದು ಬೆಂಬಲಿಗರಿಗೆ ಉಭಯ ನಾಯಕರು ಸೂಚನೆ ನೀಡಿದ್ದಾರೆ. ಮೈಸೂರಿನಲ್ಲಿ ರಾಹುಲ್ ಗಾಂಧಿ ಭೇಟಿ ಬಳಿಕ ಸಿದ್ದರಾಮಯ್ಯ, “ಪಕ್ಷದಲ್ಲಿ ಅಧಿಕಾರ […]
BREAKING : ಸಂಸದ ಬಿ.ವೈ ರಾಘವೇಂದ್ರ ಪ್ರಯಾಣಿಸುತ್ತಿದ್ದ ಕಾರು ಅಪಘಾತ, ಅಪಾಯದಿಂದ ಪಾರು.!
ಶಿವಮೊಗ್ಗ : ಸಂಸದ ಬಿ.ವೈ ರಾಘವೇಂದ್ರ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾದ ಘಟನೆ ಕುಂಚೇನಹಳ್ಳಿ ಗ್ರಾಮದ ಬಳಿ ನಡೆದಿದೆ. ಶಿಕಾರಿಪುರದಿಂದ ಶಿವಮೊಗ್ಗಕ್ಕೆ ಬರುವ ವೇಳೆ ಈ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ. ಕುಂಚೇನಹಳ್ಳಿ ಗ್ರಾಮದ ಸಮೀಪ ಸಂಸದರ ಕಾರು ಚಲಿಸುತ್ತಿದ್ದ ವೇಳೆ ಹಿಂದಿನಿಂದ ಬಂದ ಬೊಲೆರೊ ಕಾರು ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದಿದೆ. ಪರಿಣಾಮ ಕಾರಿಗೆ ಸಣ್ಣಪುಟ್ಟ ಹಾನಿಯಾಗಿದ್ದು, ಕಾರಿನಲ್ಲಿದ್ದ ಸಂಸದ ರಾಘವೇಂದ್ರ ಹಾಗೂ ಕಚೇರಿ ಸಿಬ್ಬಂದಿ ಅಪಾಯದಿಂದ ಪಾರಾಗಿದ್ದಾರೆ.ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. […]
ಬೆಂಗಳೂರು ನಗರದ 3 ಸರ್ಕಾರಿ ಆಸ್ಪತ್ರೆ ಅಭಿವೃದ್ಧಿ: ಅಪ್ಡೇಟ್ ಕೊಟ್ಟ ಸಚಿವರು
ಬೆಂಗಳೂರು ನಗರದ 3 ಸರ್ಕಾರಿ ಆಸ್ಪತ್ರೆಗಳನ್ನು ಅಭಿವೃದ್ಧಿ ಮಾಡಲಾಗುತ್ತದೆ. 2024-25ನೇ ಸಾಲಿನಲ್ಲಿ ನಗರದ ಮೂರು ಆಸ್ಪತ್ರೆಗಳಿಗೆ 10 ಲಕ್ಷಕ್ಕೂ ಹೆಚ್ಚು ಜನರು ಭೇಟಿ ನೀಡಿ ಆರೋಗ್ಯ ಸೇವೆ ಪಡೆದಿದ್ದಾರೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವ ದಿನೇಶ್ ಗುಂಡೂರಾವ್ ಈ ಕುರಿತು ಮಾಹಿತಿ ನೀಡಿದ್ದಾರೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಡಿಯಲ್ಲಿರುವ ಕೆ.ಸಿ. ಜನರಲ್, ಸಂಜಯ್ ಗಾಂಧಿ ಹಾಗೂ ಸಿ.ವಿ. ರಾಮನ್ ನಗರ ಆಸ್ಪತ್ರೆ ಸೇರಿದಂತೆ ಈ 3 ಪ್ರಮುಖ ಸರ್ಕಾರಿ ಆಸ್ಪತ್ರೆಗಳಲ್ಲಿ ಆರೋಗ್ಯ […]
ALERT : 5 ನಿಮಿಷದಲ್ಲಿ ಸಾಲ ಸಿಗುತ್ತೆ.! ಎಂದು ನಂಬಿಸಿ ಮೋಸ ಮಾಡುವ ಈ ಆ್ಯಪ್ ಗಳ ಬಗ್ಗೆ ಎಚ್ಚರ.!
ಕೇವಲ 5 ನಿಮಿಷಗಳಲ್ಲಿ ಸಾಲ ಪಡೆಯಿರಿ. ಯಾವುದೇ ದಾಖಲೆಗಳಿಲ್ಲದೆಯೂ ನಾವು ಸಾಲ ನೀಡುತ್ತೇವೆ. ನಿಮ್ಮ ಬ್ಯಾಂಕ್ ಖಾತೆಗೆ ಕೆಲವೇ ನಿಮಿಷಗಳಲ್ಲಿ ಹಣವನ್ನು ಜಮಾ ಮಾಡುತ್ತೇವೆ.. ಯಾವುದೇ ಮೇಲಾಧಾರವಿಲ್ಲದೆ ನೀವು 5 ಲಕ್ಷ ರೂ.ಗಳವರೆಗೆ ಸಾಲ ಪಡೆಯಬಹುದು.. ಎಂಬ ಸಂದೇಶಗಳು ಮೊಬೈಲ್ ನಲ್ಲಿ ಬರುತ್ತಿರುತ್ತದೆ ಅಥವಾ ಇಮೇಲ್ಗಳಲ್ಲಿ ಕೂಡ ಬರುತ್ತದೆ. ಇದು ಎಲ್ಲರಿಗೂ ತಿಳಿದಿರುವ ವಿಷಯ. ಕೆಲವು ಸಾಲದ ಅಪ್ಲಿಕೇಶನ್ಗಳು WhatsApp ನಲ್ಲಿ ಮಾರ್ಕೆಟಿಂಗ್ ಜಾಹೀರಾತುಗಳನ್ನು ಕಳುಹಿಸುತ್ತವೆ ಮತ್ತು ನಿಮಗೆ ಸಾಲ ಬೇಕೇ ಎಂದು ಕೇಳುವ ಕರೆಗಳನ್ನು ಮಾಡುತ್ತವೆ. […]
ಭಾರತದ ಬೀದಿಬದಿ ಆಹಾರ (Street Food) ಎಂದ ಕೂಡಲೇ ಮೊದಲು ನೆನಪಾಗುವುದೇ ಕೋಲ್ಕತ್ತಾದ ಫೇಮಸ್ ಎಗ್ ರೋಲ್. ಗರಿಗರಿಯಾದ ಪರೋಟ, ಅದರ ಮೇಲೆ ಬೆಣ್ಣೆಯಂತೆ ಹರಡಿರುವ ಮೊಟ್ಟೆ, ಒಳಗೆ ಮಸಾಲೆಯುಕ್ತ ಈರುಳ್ಳಿಯ ಘಮ ಆಹಾ ಈ ಹೆಸರನ್ನು ಕೇಳಿದರೆ ಸಾಕು, ಎಂತಹವರಿಗಾದರೂ ಬಾಯಲ್ಲಿ ನೀರೂರುತ್ತದೆ.ಸಂಜೆಯ ಕಾಫಿ ಸಮಯಕ್ಕೆ ಅಥವಾ ಮಕ್ಕಳ ಸ್ಕೂಲ್ ಬಾಕ್ಸ್ಗೆ ಇದು ಅತ್ಯುತ್ತಮ ಮತ್ತು ಪೌಷ್ಟಿಕ ಆಯ್ಕೆ. ಒಮ್ಮೆ ಟ್ರೈ ಮಾಡಿ ನೋಡಿ, ಮನೆಯವರು ಮತ್ತೆ ಮತ್ತೆ ಬೇಕೆಂದು ಕೇಳುವುದು ಗ್ಯಾರಂಟಿ ಸಾಮಾನ್ಯವಾಗಿ ಹೋಟೆಲ್ […]
JOB ALERT : ‘ಸುಪ್ರೀಂ ಕೋರ್ಟ್’ನಲ್ಲಿ 90 ‘ಕ್ಲರ್ಕ್’ಹುದ್ದೆಗಳಿಗೆ ಅರ್ಜಿ ಆಹ್ವಾನ, ತಿಂಗಳಿಗೆ 1 ಲಕ್ಷ ರೂ. ಸಂಬಳ.!
ದೇಶದ ಅತ್ಯುನ್ನತ ನ್ಯಾಯಾಲಯವಾದ ಭಾರತದ ಸುಪ್ರೀಂ ಕೋರ್ಟ್, 2026-27ನೇ ಸಾಲಿಗೆ ಗುತ್ತಿಗೆ ಆಧಾರದ ಮೇಲೆ ಕಾನೂನು ಗುಮಾಸ್ತ ಕಮ್ ಸಂಶೋಧನಾ ಸಹವರ್ತಿ ಹುದ್ದೆಗಳ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸುವ ಅಧಿಸೂಚನೆಯನ್ನು ಹೊರಡಿಸಿದೆ. ಈ ಅಧಿಸೂಚನೆಯ ಅಡಿಯಲ್ಲಿ ಒಟ್ಟು 90 ಕಾನೂನು ಗುಮಾಸ್ತ ಕಮ್ ಸಂಶೋಧನಾ ಸಹವರ್ತಿ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಅರ್ಹ ಅಭ್ಯರ್ಥಿಗಳು ಫೆಬ್ರವರಿ 7, 2026 ರವರೆಗೆ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಹತೆ : ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಧಿಸೂಚನೆಯಲ್ಲಿ ಸೂಚಿಸಿರುವಂತೆ […]
ಜಿಬಿಎ ಚುನಾವಣೆ: ಬಿಜೆಪಿ ಉಸ್ತುವಾರಿ, ಸಹ ಉಸ್ತುವಾರಿ ನೇಮಕ
ಬಿಜೆಪಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಚುನಾವಣೆಗೆ ತಯಾರಿ ಆರಂಭಿಸಿದೆ. 5 ನಗರ ಪಾಲಿಕೆಗಳ, 369 ವಾರ್ಡ್ಗಳಿಗೆ ಜೂನ್ 30ರೊಳಗೆ ಚುನಾವಣೆ ನಡೆಸಬೇಕು ಎಂದು ಈಗಾಗಲೇ ರಾಜ್ಯ ಸರ್ಕಾರಕ್ಕೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ. ಕರ್ನಾಟಕದ ಪ್ರತಿಪಕ್ಷವಾದ ಬಿಜೆಪಿ ಬೆಂಗಳೂರು ನಗರದ ಆಡಳಿತವನ್ನು ಹಿಡಿಯುವ ಉತ್ಸಾಹದಲ್ಲಿದೆ. ಆದ್ದರಿಂದ ಜಿಬಿಎ ಚುನಾವಣಾ ಉಸ್ತುವಾರಿಯಾಗಿ ರಾಮ್ ಮಾಧವ್ ಅವರನ್ನು ನೇಮಕ ಮಾಡಲಾಗಿದೆ. ಬಿಜೆಪಿ ಚುನಾವಣಾ ಸಹ ಉಸ್ತುವಾರಿಗಳನ್ನು ಸಹ ನೇಮಿಸಿದೆ. ಸತೀಶ್ ಪೂನಿಯಾ, ಸಂಜಯ್ ಉಪಾಧ್ಯಾಯ ಅವರು ಸಹ ಉಸ್ತುವಾರಿಯಾಗಿದ್ದಾರೆ. ಜಿಬಿಎ […]
ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್-ಧನ್ ಯೋಜನೆಯಡಿ ‘ವಿಶೇಷ ನೋಂದಣಿ ಅಭಿಯಾನ’ಆರಂಭ
ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್-ಧನ್ ಯೋಜನೆ ಹಾಗೂ National Pension Scheme for the Traders and self Employed Persons -NPS-Traders ಯೋಜನೆಗಳಡಿ ಅಸಂಘಟಿತ ವಲಯದ ಕಾರ್ಮಿಕರನ್ನು, ವ್ಯಾಪಾರಿಗಳು ಹಾಗೂ ಸ್ವಯಂ ಉದ್ಯೋಗಿಗಳನ್ನು ನೋಂದಾಯಿಸಲು 15 ಜನವರಿ ರಿಂದ 15 ಮಾರ್ಚ್ 2026 ರವರೆಗೆ “ವಿಶೇಷ ನೋಂದಣಿ ಅಭಿಯಾನ” ವನ್ನು ಹಮ್ಮಿಕೊಳ್ಳಲಾಗಿದೆ. 18 ರಿಂದ 40 ವರ್ಷದೊಳಗಿನ ಅಸಂಘಟಿತ ಕಾರ್ಮಿಕರು ಈ ಯೋಜನೆಯಡಿ ನೋಂದಾಯಿಸಬಹುದಾಗಿದ್ದು, ವಯಸ್ಸಿಗೆ ಅನುಗುಣವಾಗಿ ಮಾಸಿಕವಾಗಿ ರೂ. 55/- ರಿಂದ […]
BREAKING : ಉತ್ತರ ಪ್ರದೇಶದಲ್ಲಿ ಭಾರತೀಯ ವಾಯುಪಡೆಯ ವಿಮಾನ ಪತನ, ಇಬ್ಬರು ಪೈಲಟ್’ಗಳು ಬಚಾವ್ |WATCH VIDEO
ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ಮಂಗಳವಾರ ತರಬೇತಿ ಹಾರಾಟ ನಡೆಸುತ್ತಿದ್ದಾಗ ಭಾರತೀಯ ವಾಯುಪಡೆಯ (ಐಎಎಫ್) ಮೈಕ್ರೋಲೈಟ್ ವಿಮಾನವೊಂದು ಅಪಘಾತಕ್ಕೀಡಾಗಿದೆ. ವಿಮಾನದಲ್ಲಿದ್ದ ಇಬ್ಬರೂ ಪೈಲಟ್ಗಳನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ ಎಂದು ವಾಯುಪಡೆ ತಿಳಿಸಿದೆ. ವರದಿಗಳ ಪ್ರಕಾರ ಈ ಘಟನೆಯು ಹಾರಾಟದ ತರಬೇತಿ ಸಮಯದಲ್ಲಿ ಸಂಭವಿಸಿದ್ದು, ಅಪಘಾತಕ್ಕೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ. ಇಲ್ಲಿಯವರೆಗೆ ಯಾವುದೇ ಸಾವುನೋವುಗಳು ಹಾನಿಯಾದ ವರದಿಗಳಿಲ್ಲ. ಘಟನೆಗೆ ಕಾರಣವಾದ ಸಂದರ್ಭಗಳನ್ನು ನಿರ್ಧರಿಸಲು ವಾಯುಪಡೆ ತನಿಖೆಗೆ ಆದೇಶಿಸಿದೆ.
‘ಗೃಹಲಕ್ಷ್ಮಿ’ಹಣದಿಂದ ಸ್ಕೂಟಿ ಖರೀದಿಸಿ ಉಪ್ಪಿನಕಾಯಿ ಬ್ಯುಸಿನೆಸ್ ಶುರು ಮಾಡಿದ ಮಹಿಳೆ.!
ಮಂಗಳೂರು : ಮಹಿಳೆಯೊಬ್ಬರು ಗೃಹಲಕ್ಷ್ಮಿ ಹಣದಿಂದ ಸ್ಕೂಟಿ ಖರೀದಿಸಿ ಉಪ್ಪಿನಕಾಯಿ ಬ್ಯುಸಿನೆಸ್ ಶುರು ಮಾಡಿದ್ದಾರೆ. ರಾಜ್ಯ ಸರ್ಕಾರ ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದೆ. ಮಂಗಳೂರಿನ ಕಲ್ಲಾಪು ಪಟ್ಲದ ಝೀನತ್ ಎಂಬ ಮಹಿಳೆ ಉಪ್ಪಿನಕಾಯಿ ಮಾರಾಟದ ಮೂಲಕ ತನ್ನ ಜೀವನ ಸಾಗಿಸುತ್ತಿದ್ದಾರೆ. ಆ ಪ್ರಯಾಣದಲ್ಲಿ ಅವರಿಗೆ ನೆರವಾದದ್ದು ಗೃಹಲಕ್ಷ್ಮಿ ಯೋಜನೆ ಮತ್ತು ಅದರಿಂದ ಖರೀದಿಸಿದ ಒಂದು ಸ್ಕೂಟರ್. ಸ್ಕೂಟರ್ ಬಂದ ನಂತರ ಝೀನತ್ ಅವರು ಮನೆ ಮನೆಗೆ ತೆರಳಿ ಉಪ್ಪಿನಕಾಯಿ ಮಾರಾಟ ಮಾಡುತ್ತಿದ್ದಾರೆ. ಗ್ರಾಹಕರ ಸಂಖ್ಯೆ […]
ಚಿನ್ನ ಕೊಟ್ಟರೆ 30 ನಿಮಿಷದಲ್ಲಿ ಹಣ ಫಟಾಫಟ್, ಹೈದರಾಬಾದ್ನಲ್ಲಿ ದೇಶದ ಮೊದಲ AI ಗೋಲ್ಡ್ ಎಟಿಎಂ ಉದ್ಘಾಟನೆ
ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ತಂತ್ರಜ್ಞಾನವೂ ಸ್ಮಾರ್ಟ್ ಆಗುತ್ತಿದೆ. ಇಷ್ಟು ದಿನ ಎಟಿಎಂನಿಂದ ಹಣ ಡ್ರಾ ಮಾಡುತ್ತಿದ್ದ ನಾವು, ಇನ್ಮುಂದೆ ಅದೇ ಎಟಿಎಂಗೆ ಚಿನ್ನ ಹಾಕಿ ಹಣ ಪಡೆಯುವ ಕಾಲ ಬಂದಿದೆ ಹೌದು, ಭಾರತದ ಫಿನ್ಟೆಕ್ ಕಂಪನಿ ಗೋಲ್ಡ್ಸಿಕ್ಕಾ ದೇಶದ ಮೊದಲ AI ಚಾಲಿತ ಚಿನ್ನ ಕರಗಿಸುವ ಎಟಿಎಂ (Gold Melting ATM) ಅನ್ನು ಹೈದರಾಬಾದ್ನಲ್ಲಿ ಪರಿಚಯಿಸುವ ಮೂಲಕ ಹೊಸ ಕ್ರಾಂತಿ ಸೃಷ್ಟಿಸಿದೆ. ಹಳೆಯ ಬಂಗಾರವನ್ನು ಮಾರಾಟ ಮಾಡಿ ಹಣ ಪಡೆಯಲು ಇನ್ನು ಮುಂದೆ ನೀವು ಜ್ಯುವೆಲ್ಲರಿ ಶಾಪ್ಗಳ […]
JOB ALERT : ಗೃಹರಕ್ಷಕ ದಳ ಹುದ್ದೆಗೆ ಅರ್ಜಿ ಆಹ್ವಾನ, ಇಲ್ಲಿದೆ ಸಂಪೂರ್ಣ ಮಾಹಿತಿ
ಶಿವಮೊಗ್ಗ : ಜಿಲ್ಲೆಯ ಸ್ಥಳೀಯ ವಿವಿಧ ಗೃಹರಕ್ಷಕ ದಳದ ಘಟಕಗಳಲ್ಲಿ ಖಾಲಿ ಇರುವ ಪುರುಷ ಮತ್ತು ಮಹಿಳಾ ಗೃಹರಕ್ಷಕರ “ನಿಷ್ಕಾಮ ಸೇವೆ ದ್ಯೇಯದ” ಅಡಿಯಲ್ಲಿ ಸೇವೆ ಸಲ್ಲಿಸಲು ಸಿದ್ದರಿರುವ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಗೃಹರಕ್ಷಕರಾಗಲು ಬೇಕಾದಆರ್ಹತೆ:-ಭಾರತೀಯ ಪ್ರಜೆಯಾಗಿರ ಬೇಕು. 19 ವರ್ಷದ ಮೇಲ್ಪಟ್ಟು 45 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದು, 10ನೇ ತರಗತಿ ಉತ್ತೀರ್ಣರಾಗಿರಬೇಕು. ವೈದ್ಯಕೀಯವಾಗಿ ಸಶಕ್ತರಾಗಿರಬೇಕು. ಪೊಲೀಸ್ ಠಾಣೆಯಲ್ಲಿ ಯಾವುದೇ ಕ್ರಿಮಿನಲ್ ಮೊಕದ್ದಮೆಗಳು / ಆರೋಪ ಅಥವಾ ಅಪರಾಧಿ ಎಂದು ದಾಖಲಾಗಿರದಿದ್ದಲ್ಲಿ ಅಂತಹವರು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಆಸಕ್ತರು […]
Big Twist: ಭದ್ರಾವತಿಯಲ್ಲಿ ಚಿಕಿತ್ಸೆ ನೀಡುತ್ತಿದ್ದ ವೈದ್ಯನಿಂದ ದಂಪತಿ ಕೊಲೆ!
ಶಿವಮೊಗ್ಗ ಜಿಲ್ಲೆ ಭದ್ರಾವತಿಯ ಭೂತನಗುಡಿ ಬಡಾವಣೆಯಲ್ಲಿ ವೃದ್ಧ ದಂಪತಿ ಶವ ಮನೆಯಲ್ಲಿ ಪತ್ತೆಯಾಗಿತ್ತು. ಈ ಕೊಲೆ ಪ್ರಕರಣಕ್ಕೆ ಈಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಕೊಲೆ ಮಾಡಿದ್ದು ಸಂಬಂಧಿಕ ಎಂದು ತಿಳಿದುಬಂದಿದ್ದು, ಆತ ವೈದ್ಯನಾಗಿದ್ದು ದಂಪತಿಗಳಿಗೆ ಚಿಕಿತ್ಸೆ ನೀಡುತ್ತಿದ್ದ. ಮಂಗಳವಾರ ಸಂಜೆ ಚಂದ್ರಪ್ಪ(80), ಜಯಮ್ಮ(75) ಎನ್ನುವರ ಶವ ಮನೆಯಲ್ಲಿ ಬೇರೆ ಬೇರೆ ಕೊಠಡಿಯಲ್ಲಿ ಪತ್ತೆಯಾಗಿತ್ತು. ಹತ್ಯೆ ನಡೆದು ಎರಡು ದಿನಗಳಾಗಿದೆ ಎಂದು ಅಂದಾಜಿಸಲಾಗಿದ್ದು, ನಿನ್ನೆ ಪ್ರಕರಣ ಬೆಳಕಿಗೆ ಬಂದಿತ್ತು. ಸದ್ಯದ ಅಪ್ಡೇಟ್ ಪ್ರಕಾರ ಹತ್ಯೆಯಾಗಿರುವ ಚಂದ್ರಪ್ಪ ಸಂಬಂಧಿಕನಾಗಿರುವ ಯುವಕನಿಂದಲೇ […]
ಧಾರವಾಡ : ರಾಜ್ಯದಲ್ಲಿ ಬೆಚ್ಚಿ ಬೀಳಿಸೋ ಕೃತ್ಯವೊಂದು ನಡೆದಿದ್ದು, ಯುವತಿಯನ್ನು ಕೊಂದು ಮೃತದೇಹವನ್ನು ಪೀಸ್ ಮಾಡಿ ಎಸೆದ ಘಟನೆ ಧಾರವಾಡದ ಜನರನ್ನು ಬೆಚ್ಚಿ ಬೀಳಿಸಿದೆ. ಧಾರವಾಡದ ಹೊರವಲಯದಲ್ಲಿ ಈ ಕೊಲೆ ನಡೆದಿದೆ. ಮೃತಳನ್ನು 19 ವರ್ಷದ ಝಕಿಯಾ ಮುಲ್ಲಾ ಎಂದು ಗುರುತಿಸಲಾಗಿದೆ.ಝಕಿಯಾ ಎಂಬ ಮುಸ್ಲಿಂ ಯುವತಿಯ ಕೊಲೆಯಾಗಿದ್ದು, ಈಕೆ ಧಾರವಾಡದ ಗಾಂಧಿ ಚೌಕ್ ಬಡಾವಣೆಯ ನಿವಾಸಿ ಎಂದು ಗುರುತಿಸಲಾಗಿದೆ. ಹಂತಕರು ಯುವತಿಯನ್ನು ಶವ ಪೀಸ್ ಪೀಸ್ ಮಾಡಿ ಬಿಸಾಡಿದ್ದಾರೆ ಎನ್ನಲಾಗಿದೆ. ಧಾರವಾಡದಲ್ಲಿ ನಡೆದ ಯುವತಿಯ ಕೊಲೆ ಆತಂಕಕ್ಕೆ […]
ಬೆಂಗಳೂರಲ್ಲಿ ಅತಿವೇಗದಲ್ಲಿ ‘ಲ್ಯಾಂಬೋರ್ಘಿನಿ’ಕಾರು ಚಲಾಯಿಸಿ ಚಾಲಕನ ಹುಚ್ಚಾಟ, FIR ದಾಖಲು |WATCH VIDEO
ಬೆಂಗಳೂರು : ಬೆಂಗಳೂರಲ್ಲಿ ಅತಿವೇಗದಲ್ಲಿ ಲ್ಯಾಂಬೋರ್ಘಿನಿ ಕಾರು ಚಲಾಯಿಸಿ ಚಾಲಕನೋರ್ವ ಹುಚ್ಚಾಟ ಮೆರೆದಿದ್ದು, ವಿಡಿಯೋ ವೈರಲ್ ಆದ ಬೆನ್ನಲ್ಲೇ ಪೊಲೀಸರು ಚಾಲಕನ ವಿರುದ್ಧ ಎಫ್ ಐ ಆರ್ (FIR) ದಾಖಲಿಸಿದ್ದಾರೆ. ಮೈಸೂರು ರಸ್ತೆಯ ಕೆಂಗೇರಿ ಮೆಟ್ರೋ ನಿಲ್ದಾಣದ ಬಳಿ ಹಸಿರು ಬಣ್ಣದ ಲ್ಯಾಂಬೋರ್ಘಿನಿ ಕಾರು ಅತಿ ವೇಗದಲ್ಲಿ ಅಪಾಯಕಾರಿಯಾಗಿ ಚಲಿಸುತ್ತಿರುವುದು ಕಂಡುಬಂದಿದ್ದು, ಪಾದಚಾರಿಗಳಲ್ಲಿ ಭಯ ಹುಟ್ಟಿಸಿದೆ. ಆನ್ಲೈನ್ನಲ್ಲಿ ವೀಡಿಯೋ ವೈರಲ್ ಆಗಿದ್ದು, ಬೆಂಗಳೂರು ಪೊಲೀಸರು ಚಾಲಕನ ವಿರುದ್ಧ ಅಜಾಗರೂಕತೆಯ ಚಾಲನೆಗಾಗಿ ಎಫ್ಐಆರ್ ದಾಖಲಿಸಿದ್ದಾರೆ. ಸಾರ್ವಜನಿಕ ಮಾರ್ಗಗಳಲ್ಲಿ ಅತಿವೇಗ […]
ಇಂಜಿನಿಯರ್, ಸೇಲ್ಸ್ ಟೀಮ್ಗಿಂತ ಮೊದಲು ಇವರ ಕೆಲಸಕ್ಕೆ ಕುತ್ತು ತರಲಿದೆ AI
ಕೃತಕ ಬುದ್ಧಿಮತ್ತೆ (ಎಐ) ವಿವಿಧ ಕ್ಷೇತ್ರದಲ್ಲಿನ ಉದ್ಯೋಗವನ್ನು ಕಡಿತ ಮಾಡುತ್ತದೆ ಎಂಬುದು ಕೇವಲ ಹೇಳಿಕೆಯಾಗಿ ಉಳಿದಿಲ್ಲ. ಇದನ್ನು ಈಗ ಎಲ್ಲಾ ವಲಯಗಳಲ್ಲೂ ಕಾಣುತ್ತಿದ್ದೇವೆ. ಹಲವಾರು ಕ್ಷೇತ್ರದಲ್ಲಿ ಈಗಾಗಲೇ ಎಐ ಕಾರಣಕ್ಕೆ ಜನರು ಕೆಲಸ ಕಳೆದುಕೊಂಡಿದ್ದಾರೆ. ಆದರೆ ಈಗ ಸಾಮಾಜಿಕ ಜಾಲತಾಣದಲ್ಲಿ ಹೊಸ ಚರ್ಚೆಯೊಂದು ಆರಂಭವಾಗಿದೆ. ಇಂಜಿನಿಯರ್ಗಳು, ಸೇಲ್ಸ್ ತಂಡಕ್ಕೂ ಮೊದಲು ಎಐ ಸಂಶೋಧಕರ ಉದ್ಯೋಗವನ್ನು ಕಡಿತ ಮಾಡಲಿದೆ. ಸಂಶೋಧಕರು ಉದ್ಯೋಗವನ್ನು ಕಳೆದುಕೊಳ್ಳಲಿದ್ದಾರೆ. ಓಪನ್ ಎಐ ಉದ್ಯೋಗಿಯೊಬ್ಬರು ಈ ಕುರಿತು ನೀಡಿರುವ ಹೇಳಿಕೆ ಈಗ ಸಂಚಲನಕ್ಕೆ ಕಾರಣವಾಗಿದೆ. ಹೈಪರ್ಬೋಲಿಕ್ […]
ಗ್ರಾಮೀಣ ಭಾಗದ ಮಹಿಳೆಯರಿಗೆ ಉಪಯುಕ್ತ ಮಾಹಿತಿ : ಹೊಲಿಗೆ ತರಬೇತಿಗಾಗಿ ಅರ್ಜಿ ಅಹ್ವಾನ
ಬಳ್ಳಾರಿ : ಜಿಲ್ಲಾ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ವತಿಯಿಂದ 2025-26 ನೇ ಸಾಲಿನ ಜಿಲ್ಲಾ ವಲಯದ ವಿಶೇಷ ಘಟಕ ಯೋಜನೆಯಡಿ 37 ಮತ್ತು ಗಿರಿಜನ ಉಪಯೋಜನೆಯಡಿ 12 ಸೇರಿ ಒಟ್ಟು 49 ಗ್ರಾಮೀಣ ಭಾಗದ ಮಹಿಳಾ ಅಭ್ಯರ್ಥಿಗಳಿಗೆ ಹೊಲಿಗೆ ತರಬೇತಿಗಾಗಿ ಆನ್ಲೈನ್ನಲ್ಲಿ ಅರ್ಜಿ ಅಹ್ವಾನಿಸಲಾಗಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆ ವತಿಯಿಂದ ತರಬೇತಿ, ಶಿಷ್ಯವೇತನ ರಹಿತ, ಒಂದು ತಿಂಗಳ ಉಚಿತ ವಸತಿಯೊಂದಿಗೆ ತರಬೇತಿ ನೀಡಲಾಗುವುದು. ಯಶಸ್ವಿಯಾಗಿ ತರಬೇತಿ ಪೂರ್ಣಗೊಳಿಸಿದ ಮಹಿಳಾ […]
ಬೆಂಗಳೂರು: ಇಂದಿನ ದುಬಾರಿ ಕಾಲದಲ್ಲಿ ನಾವು ಎಷ್ಟು ಸಂಪಾದಿಸುತ್ತೇವೆ ಎನ್ನುವುದಕ್ಕಿಂತ, ಮಕ್ಕಳ ಭವಿಷ್ಯಕ್ಕಾಗಿ ಎಷ್ಟು ಉಳಿಸುತ್ತೇವೆ ಎನ್ನುವುದು ಮುಖ್ಯ. ನಿಮ್ಮ ಮಗುವಿನ ಶಿಕ್ಷಣ ಮತ್ತು ಇತರ ಅಗತ್ಯಗಳಿಗಾಗಿ ಆರ್ಥಿಕ ಸ್ಥಿರತೆ ಬಯಸುವ ಪೋಷಕರಿಗಾಗಿ ಅಂಚೆ ಇಲಾಖೆ (Post Office) ಒಂದು ಅದ್ಭುತ ಯೋಜನೆಯನ್ನು ತಂದಿದೆ. ಅದೇ ಬಾಲ್ ಜೀವನ್ ಬಿಮಾ ಯೋಜನೆ (Bal Jeevan Bima Yojana).ಕಡಿಮೆ ಹೂಡಿಕೆಯಲ್ಲಿ ದೊಡ್ಡ ಮೊತ್ತದ ವಿಮಾ ರಕ್ಷಣೆ ನೀಡುವ ಈ ಯೋಜನೆಯು ಗ್ರಾಮೀಣ ಮತ್ತು ನಗರ ಪ್ರದೇಶದ ಪೋಷಕರಿಗೆ ವರದಾನವಾಗಿದೆ. […]
SHOCKING : ಊಟದ ವಿಚಾರಕ್ಕೆ ಜಗಳ : ಪತಿಯ ನಾಲಿಗೆ ಕತ್ತರಿಸಿದ ಪಾಪಿ ಪತ್ನಿ .!
ಉತ್ತರ ಪ್ರದೇಶದ ಗಾಜಿಯಾಬಾದ್ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ವಿವಾಹಿತ ಮಹಿಳೆಯೊಬ್ಬರು ಚಾಕುವಿನಿಂದ ತನ್ನ ಪತಿಯ ನಾಲಿಗೆಯನ್ನು ಕತ್ತರಿಸಿದ್ದಾರೆ.ಘಟನೆ ಬೆಳಕಿಗೆ ಬಂದ ನಂತರ, ಪತಿಯನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು.ಊಟದ ವಿಚಾರವಾಗಿ ಗಂಡ ಹೆಂಡತಿ ನಡುವೆ ಜಗಳ ನಡೆದಿದೆ ಎನ್ನಲಾಗಿದೆ. ಏನಿದು ಘಟನೆ..? ಮೋದಿನಗರದ ಸಂಜಯ್ಪುರಿಯ ನಿವಾಸಿ ವಿಪಿನ್, 2025 ರಲ್ಲಿ ಮೀರತ್ನ ಮಲಿಯಾನ ನಿವಾಸಿ ಇಶಾ ಅವರನ್ನು ವಿವಾಹವಾದರು. ಕುಟುಂಬದಲ್ಲಿ ಯುವಕ ವಿಪಿನ್ ಮತ್ತು ಅವನ ಹೆಂಡತಿ, ತಾಯಿ ಗೀತಾ ದೇವಿ ವಾಸವಾಗಿದ್ದರು. ಆ ಯುವಕ […]
ಬಂಗಾರ ಪ್ರಿಯರಿಗೆ ಬಿಗ್ ಶಾಕ್: ಒಂದೇ ದಿನಕ್ಕೆ ₹5,020 ಏರಿಕೆ: ₹1.54 ಲಕ್ಷದ ಗಡಿ ದಾಟಿದ ಹತ್ತು ಗ್ರಾಂ ಚಿನ್ನದ ಬೆಲೆ
ಬೆಂಗಳೂರು: ಇಂದು ಚಿನ್ನದ ಬೆಲೆ ಇಳಿಕೆಯಾಗಬಹುದು ಎಂದು ಕಾದು ಕುಳಿತಿದ್ದ ಜನರಿಗೆ ಬುಧವಾರ ಬೆಳ್ಳಂಬೆಳಗ್ಗೆ ಭಾರಿ ಆಘಾತ ಎದುರಾಗಿದೆ. ಜಾಗತಿಕ ರಾಜಕೀಯ ವಿದ್ಯಮಾನಗಳು ಭಾರತೀಯ ಮಾರುಕಟ್ಟೆಯ ಮೇಲೆ ತೀವ್ರ ಪರಿಣಾಮ ಬೀರಿದ್ದು, ಚಿನ್ನದ ಬೆಲೆ ಹಿಂದೆಂದೂ ಕಾಣದ ದಾಖಲೆ ಮಟ್ಟಕ್ಕೆ ಏರಿಕೆಯಾಗಿದೆ.ಬೆಳ್ಳಿ ಬೆಲೆ ಇಂದು 5 ರೂಪಾಯಿ ಏರಿಕೆಯಾಗಿದ್ದು, ಗ್ರಾಂ ಬೆಲೆ 325 ರೂ ಆಗಿದ್ದು, ಕೆಜಿ ಬೆಲೆಯಲ್ಲಿ 5 ಸಾವಿರ ಹೆಚ್ಚಳ ಆಗಿ, ಕೆಜಿಗೆ 3,25,000 ರೂಪಾಯಿಗೆ ಏರಿದೆ. ಬೆಲೆ ಏರಿಕೆಗೆ ಕಾರಣವೇನು? ಅಮೆರಿಕ ಅಧ್ಯಕ್ಷ […]
ಮಂಗಳೂರು ನಗರದಲ್ಲಿ ಖಾಲಿ ಗೂಡ್ಸ್ ರೈಲುಗಳಿಂದ ಸಂಚಾರ ದಟ್ಟಣೆ, ಪರಿಹಾರ?
ಮಂಗಳೂರು ನಗರದಲ್ಲಿ ದಿನದಿಂದ ದಿನಕ್ಕ ಸಂಚಾರ ಸಮಸ್ಯೆ ಹೆಚ್ಚಾಗುತ್ತಿದೆ. ಆದರೆ ಖಾಲಿ ಗೂಡ್ಸ್ ರೈಲುಗಳಿಂದ ದಿನನಿತ್ಯ ಸಂಚಾರ ನಡೆಸುವ ಜನರಿಗೆ ಕಿರಿಕಿರಿಯಾಗುತ್ತಿದೆ. ಈ ಸಮಸ್ಯೆ ಪರಿಹಾರಕ್ಕೆ ಶಾಸಕರು, ಸಂಸದರು, ಜಿಲ್ಲಾಧಿಕಾರಿಗಳ ಜೊತೆ ಸಭೆ ನಡೆಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು, ಸಾರ್ವಜನಿಕರ ಸಭೆ ನಡೆಯಿತು. ಸಂಸದ ಕ್ಯಾ.ಬ್ರಿಜೇಶ್ ಚೌಟ, ಶಾಸಕ ವೇದವ್ಯಾಸ ಕಾಮತ್, ಪಾಲಿಕೆ ಆಯುಕ್ತ ರವಿಚಂದ್ರ ನಾಯಕ್, ಮಾಜಿ ಮೇಯರ್ ದಿವಾಕರ್ ಪಾಂಡೇಶ್ವರ, ಪ್ರೇಮಾನಂದ ಶೆಟ್ಟಿ, ಪಾಲಿಕೆ ಹಿರಿಯ ಅಭಿಯಂತರರು ಸಭೆಯಲ್ಲಿ ಉಪಸ್ಥಿತರಿದ್ದರು. […]
ನೆಮ್ಮದಿಯ ಬದುಕಿಗೆ ಹೊಸ ದಾರಿ: ಸರ್ಕಾರದಿಂದ ಗ್ರಾಮ ಹಿರಿಯರ ಕೇಂದ್ರ ಸ್ಥಾಪನೆ: ಇಂದೇ ನಿಮ್ಮ ಹೆಸರು ನೋಂದಾಯಿಸಿ
ಬೆಂಗಳೂರು: ವಯಸ್ಸಾದ ಕಾಲದಲ್ಲಿ ಮನುಷ್ಯ ಬಯಸುವುದು ಹಣ-ಆಸ್ತಿಯನ್ನಲ್ಲ; ಬದಲಾಗಿ ಪ್ರೀತಿಯಿಂದ ಮಾತನಾಡಿಸುವ ನಾಲ್ಕು ಜನ ಮತ್ತು ನೆಮ್ಮದಿಯ ವಾತಾವರಣವನ್ನು. ಆದರೆ ಬದಲಾದ ಕಾಲಘಟ್ಟದಲ್ಲಿ ಹಳ್ಳಿಗಳಲ್ಲಿ ಒಂಟಿಯಾಗಿ ಉಳಿಯುವ ಹಿರಿಯ ಜೀವಗಳ ಸಂಖ್ಯೆ ಹೆಚ್ಚುತ್ತಿದೆ. ಇಂತಹ ಹಿರಿಯರ ಮೊಗದಲ್ಲಿ ಮಂದಹಾಸ ಮೂಡಿಸಲು ಕರ್ನಾಟಕ ಸರ್ಕಾರ ಈಗ ಗ್ರಾಮ ಹಿರಿಯರ ಕೇಂದ್ರ ಎಂಬ ವಿನೂತನ ಯೋಜನೆಯನ್ನು ಜಾರಿಗೆ ತಂದಿದೆ. ಯೋಜನೆಯ ಹಿನ್ನೆಲೆ ಮತ್ತು ಸಹಯೋಗ ಕರ್ನಾಟಕ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ (RDPR) ಹಾಗೂ ಟಾಟಾ ಕಲಿಕಾ […]
ರೈಲ್ವೇ ಪ್ರಯಾಣಿಕರಿಗೆ ಬಂಪರ್ ಆಫರ್ : ‘ಟಿಕೆಟ್ ಬುಕಿಂಗ್’ಮೇಲೆ ಶೇಕಡ 6 ರಷ್ಟು ರಿಯಾಯಿತಿ..!
ಭಾರತೀಯ ರೈಲ್ವೇ ಪ್ರಯಾಣಿಕರಿಗೆ ಹಲವು ಕೊಡುಗೆಗಳು ಮತ್ತು ರಿಯಾಯಿತಿಗಳನ್ನು ಘೋಷಿಸುತ್ತಿದೆ. ವಿವಿಧ ಖಾಸಗಿ ಆನ್ಲೈನ್ ಟಿಕೆಟ್ ಬುಕಿಂಗ್ ಪ್ಲಾಟ್ಫಾರ್ಮ್ಗಳು ರೈಲ್ವೆ ಟಿಕೆಟ್ ಖರೀದಿಯ ಮೇಲೆ ಕೊಡುಗೆಗಳನ್ನು ನೀಡುತ್ತಿರುವುದು ತಿಳಿದಿದೆ. ಖಾಸಗಿ ಅಪ್ಲಿಕೇಶನ್ಗಳ ಸ್ಪರ್ಧೆಯಲ್ಲಿ, ರೈಲ್ವೆಯು ಪ್ರಯಾಣಿಕರಿಗೆ ಟಿಕೆಟ್ ಬುಕಿಂಗ್ನಲ್ಲಿ ಕೊಡುಗೆಗಳನ್ನು ಸಹ ನೀಡುತ್ತಿದೆ. ಇದು ರೈಲ್ವೆ ಒನ್ ಅಪ್ಲಿಕೇಶನ್ ಮೂಲಕ ಕಾಯ್ದಿರಿಸದ ಟಿಕೆಟ್ಗಳ ಮೇಲೆ ಶೇಕಡಾ 3 ರಷ್ಟು ರಿಯಾಯಿತಿಯನ್ನು ನೀಡುತ್ತಿದೆ. ಈ ಕೊಡುಗೆ ಜನವರಿ 14 ರಿಂದ ಪ್ರಾರಂಭವಾಯಿತು. ಪ್ರಯಾಣಿಕರು ಈ ಕೊಡುಗೆಯನ್ನು ಹೇಗೆ ಪಡೆಯಬಹುದು […]
ಡೊನಾಲ್ಡ್ ಟ್ರಂಪ್ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ಭಾರಿ ಅನಾಹುತ ತಪ್ಪಿದೆ.ಹೌದು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಏರ್ ಫೋರ್ಸ್ ಒನ್ ವಿಮಾನವು ಮಂಗಳವಾರ ಸಂಜೆ ಸ್ವಿಟ್ಜರ್ಲೆಂಡ್ನ ದಾವೋಸ್ ಸಭೆಗೆ ತೆರಳುತ್ತಿದ್ದಾಗ ತಾಂತ್ರಿಕ ದೋಷಕ್ಕೆ ಒಳಗಾಯಿತು. ಈ ಘಟನೆ ಭಾರತೀಯ ಕಾಲಮಾನ ಮಂಗಳವಾರ ಸಂಜೆ ಸಂಭವಿಸಿದೆ. ಅವರು ಪ್ರಯಾಣಿಸುತ್ತಿದ್ದ ವಿಮಾನವು ತಾಂತ್ರಿಕ ದೋಷಕ್ಕೆ ಒಳಗಾಯಿತು. ಪರಿಣಾಮವಾಗಿ, 680 ಕಿಲೋಮೀಟರ್ ಪ್ರಯಾಣಿಸಿದ ವಿಮಾನವು ಯು-ಟರ್ನ್ ಮಾಡಿ ಮೇರಿಲ್ಯಾಂಡ್ನ ಬೇಸ್ ಆಂಡ್ರ್ಯೂಸ್ನಲ್ಲಿ ಇಳಿಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. […]
ಐಸಿಸಿ ಟಿ20 ವಿಶ್ವಕಪ್ 2026: ಬಾಂಗ್ಲಾದೇಶ ಬೆಂಬಲಕ್ಕೆ ನಿಂತ ಪಾಕಿಸ್ತಾನ
ವಿವಿಧ ಕಾರಣಕ್ಕೆ ಐಸಿಸಿಪುರುಷರಟಿ20ವಿಶ್ವಕಪ್-2026 ಸುದ್ದಿಯಲ್ಲಿದೆ. ಐಸಿಸಿಯ ಈ ಟೂರ್ನಿಯಲ್ಲಿ ಬಾಂಗ್ಲಾದೇಶ ತಂಡದ ಭಾಗವಹಿಸುವಿಕೆ ಕುರಿತು ಇನ್ನೂ ಅನಿಶ್ಚಿತತೆ ಇದೆ. ಆದರೆ ಈಗ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಬಾಂಗ್ಲಾದೇಶ ತಂಡದ ನಿಲುವು ಬೆಂಬಲಿಸಿ ಐಸಿಸಿಗೆ ಪತ್ರವನ್ನು ಬರೆದಿದೆ. ESPNcricinfoಈ ಕರಿತು ವರದಿಯೊಂದನ್ನು ಪ್ರಕಟಿಸಿದೆ. ಭಾರತದಲ್ಲಿ ಕ್ರಿಕೆಟ್ ಆಡುವುದಿಲ್ಲ ಎಂಬ ಬಾಂಗ್ಲಾದೇಶದ ನಿಲುವನ್ನು ಬೆಂಬಲಿಸಿ ಪಿಸಿಬಿ ಐಸಿಸಿಗೆ ಪತ್ರ ಬರೆದಿದೆ. ಟಿ-20 ವಿಶ್ವಕಪ್ನಲ್ಲಿ ಬಾಂಗ್ಲಾದೇಶದ ಭಾಗವಹಿಸುವಿಕೆ ಕುರಿತು ಇನ್ನೂ ಸಹ ಐಸಿಸಿ ನಿರ್ಧಾರ ಕೈಗೊಂಡಿಲ್ಲ. ಆದರೆ ಪಾಕಿಸ್ತಾನ ಕ್ರಿಕೆಟ್ […]
ALERT : ಬೆಂಗಳೂರಿನ ‘ಕೆಂಪೇಗೌಡ ವಿಮಾನ ನಿಲ್ದಾಣ’ದಿಂದ ಪ್ರಯಾಣಿಕರಿಗೆ ಮಹತ್ವದ ಪ್ರಕಟಣೆ.!
ಬೆಂಗಳೂರು : ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಏರ್ ಪೋರ್ಟ್ ಪ್ರಯಾಣಿಕರಿಗೆ ಮಹತ್ವದ ಪ್ರಕಟಣೆಯೊಂದನ್ನು ಹೊರಡಿಸಿದೆ.ಗಣರಾಜ್ಯೋತ್ಸವದ ಪ್ರಯುಕ್ತ ವಿಮಾನ ನಿಲ್ದಾಣಕ್ಕೆ ಬರುವ ಪ್ರಯಾಣಿಕರ ಮೇಲೆ ಹದ್ದಿನ ಕಣ್ಣಿಡಲಾಗಿದೆ. ಆದ್ದರಿಂದ ಭದ್ರತಾ ಕ್ರಮ ಕೈಗೊಳ್ಳಲು ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದಾರೆ. ಈ ಹಿನ್ನೆಲೆ ಏರ್ ಪೋರ್ಟ್ ಅಡಳಿತ ಮಂಡಳಿ ಪ್ರಯಾಣಿಕರಿಗೆ ಮಹತ್ವದ ಪ್ರಕಟಣೆ ಹೊರಡಿಸಿದೆ. ಪ್ರಯಾಣಿಕರು ಭದ್ರತಾ ತಪಾಸಣೆಗೆ ಸಾಕಷ್ಟು ಸಮಯವನ್ನು ನೀಡಬೇಕಾಗಿದ್ದು, ಆದ್ದರಿಂದ ವಿಮಾನ ನಿಲ್ದಾಣಕ್ಕೆ ಆದಷ್ಟು ಬೇಗ ಬನ್ನಿ. ಹೆಚ್ಚಿನ ಮಾಹಿತಿಗಾಗಿ […]

22 C