BREAKING: ಲೋಕಭವನಕ್ಕೆ ಬಾಂಬ್ ಬೆದರಿಕೆ ಸಂದೇಶ
ಬೆಂಗಳೂರು: ಲೋಕಭವನಕ್ಕೆ ಬಾಂಬ್ ಬೆದರಿಕೆ ಹಾಕಿರುವ ಘಟನೆ ಬೆಳಕಿಗೆ ಬಂದಿದೆ. ಐಇಡಿ ಬಾಂಬ್ ಮೂಲಕ ಲೋಕಭವನವನ್ನು ಸ್ಫೋಟಿಸುವುದಾಗಿ ದುಷ್ಕರ್ಮಿಗಳು ಬಾಂಬ್ ಬೆದರಿಕೆ ಸಂದೇಶ ರವಾನಿಸಿದ್ದಾರೆ. ರಾಜ್ಯಪಾಲರ ಅಧಿಕೃತ ಇ-ಮೇಲ್ ಐಡಿಗೆ ಬಾಂಬ್ ಬೆದರಿಕೆ ಸಂದೇಶ ಬಂದಿದೆ. ಜನವರಿ 14ರಂದು ಈ ಸಂದೇಶ ಬಂದಿದ್ದು, ಮಧ್ಯಾಹ್ನದೊಳಗೆ ಲೋಕಭವನವನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಲಾಗಿದೆ. ಐಇಡಿ ಆರ್ ಡಿಎಕ್ಸ್ ಬಾಂಬ್ ಸ್ಫೋಟಿಸುವುದಾಗಿ ಬೆದರಿಕೆ ಹಾಕಲಾಗಿದೆ. gaina_ramesh@outlook.com ಇ-ಮೇಲ್ ಐಡಿಯಿಂದ ಈ ಸಂದೇಶ ಬಂದಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪೊಲೀಸರು, ಬಾಂಬ್ ಪತ್ತೆ […]
AI Photo ಗೂಗಲ್ ಬಳಕೆದಾರರಿಗೆ ಇಲ್ಲಿದೆ ಗುಡ್ನ್ಯೂಸ್
AI Photo ವಿಚಾರದಲ್ಲಿ ಗೂಗಲ್ ತನ್ನ ಬಳಕೆದಾರರಿಗೆ ಗುಡ್ನ್ಯೂಸ್ ನೀಡಿದೆ. ಜನರ ಆಸಕ್ತಿ, ಅಭ್ಯಾಸಗಳು, ಪ್ರಯಾಣದ ಮಾರ್ಗಸೂಚಿಗಳು ಮತ್ತು ಫೋಟೋ ಲೈಬ್ರರಿಗಳನ್ನು ಅವಲಂಬಿಸಿ ಉತ್ತರಗಳನ್ನು ಹುಡುಕಲು ಗೂಗಲ್ ತನ್ನ ಪ್ರಬಲ ಸರ್ಚ್ ಎಂಜಿನ್ನಲ್ಲಿ ಹೊಸ ಪೀಫೋಲ್ ಅನ್ನು ತೆರೆಯುತ್ತಿದೆ. ತನ್ನ ಎಐ ತಂತ್ರಜ್ಞಾನವನ್ನು ಬಳಸಿಕೊಂಡು ಈ ಫೀಚರ್ ಬಿಡುಗಡೆ ಮಾಡಲಾಗಿದೆ. ಹೊಸ ಆಯ್ಕೆಯು ಲಕ್ಷಾಂತರ ಜನರಿಗೆ ಕಳೆದ ವರ್ಷದಿಂದ ಗೂಗಲ್ ಸರ್ಚ್ ಎಂಜಿನ್ನಲ್ಲಿ ಲಭ್ಯವಿರುವ ಎಐ ಮೋಡ್ನಲ್ಲಿ ಇತ್ತೀಚೆಗೆ ಪರಿಚಯಿಸಲಾದ ಪರ್ಸನಲ್ ಇಂಟೆಲಿಜೆನ್ಸ್ ಎಂಬ ಸಾಧನವನ್ನು ಆನ್ […]
ಬೆಂಗಳೂರು: ಅಬಕಾರಿ ಸಚಿವರಿಂದ ಲಂಚಕ್ಕೆ ಬೇಡಿಕೆ ಆರೋಪ ಪ್ರಕರಣ ವಿಧಾನಸಭೆಯಲ್ಲಿ ಪ್ರತಿಧ್ವನಿಸಿದ್ದು, ಆಡಳಿತ ಹಾಗೂ ವಿಪಕ್ಷಗಳ ನಡುವೆ ಗದ್ದಲ-ಕೋಲಾಹಲಕ್ಕೆ ಕಾರಣವಾಯಿತು. ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ರಾಜೀನಾಮೆ ನೀಡುವಂತೆ ಬಿಜೆಪಿ ಸದಸ್ಯರು ಪಟ್ಟು ಹಿಡಿದ ಘಟನೆ ನಡೆಯಿತು. ಅಬಕಾರಿ ಇಲಾಖೆ ಲಂಚಾವತಾರ ಪ್ರಕರಣದ ಬಗ್ಗೆ ವಿಪಕ್ಷ ನಾಯಕ ಆರ್.ಅಶೋಕ್ ವಿಧಾನಸಭೆಯಲ್ಲಿ ಪ್ರಸ್ತಾಪಿಸಿದ್ದು. ಮೊದಲು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ರಾಅಜೀನಾಮೆ ನೀಡಲಿ ಎಂದು ಆಗ್ರಹಿಸಿದರು. ಇದಕ್ಕೆ ಕಾಂಗ್ರೆಸ್ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದು, ತನಿಖೆಗೆ ಸೂಚಿಸಲಾಗಿದೆ. ಆರೋಪ ಸಾಬೀತಾದರೆ ಮುಂದಿನ ಕ್ರಮ […]
1 ಎಕರೆ ಅಂದ್ರೆ ಎಷ್ಟು? ಜಮೀನು ಅಳೆಯುವ ಮುನ್ನ ಈ ಪಕ್ಕಾ ಲೆಕ್ಕಾಚಾರ ತಿಳಿಯಿರಿ
ಮನೆ ಅಥವಾ ಪ್ಲಾಟ್ ಖರೀದಿಸುವುದು ಕೇವಲ ಒಂದು ಆಸ್ತಿಯನ್ನು ಪಡೆಯುವುದಲ್ಲ, ಅದು ಭವಿಷ್ಯದ ಬಗೆಗಿನ ಒಂದು ಹೂಡಿಕೆ. ಸರಿಯಾದ ತಿಳುವಳಿಕೆ ಇಲ್ಲದಿದ್ದರೆ, ಈ ಪ್ರಕ್ರಿಯೆ ಗೊಂದಲಮಯವಾಗಬಹುದು. ಹಾಗಿದ್ದರೆ, ಒಂದು ಎಕರೆ ಎಂದರೆ ಎಷ್ಟು ದೊಡ್ಡದು? ಅದರ ನಿರ್ವಹಣೆ ಸುಲಭವೇ? ಒಂದು ಎಕರೆಯ ಬೆಲೆ ಎಷ್ಟು? ನಿಮ್ಮ ಭೂಮಿಯ ಗಾತ್ರವನ್ನು ಹೇಗೆ ಅಂದಾಜು ಮಾಡುವುದು? ಈ ಎಲ್ಲ ಪ್ರಶ್ನೆಗಳಿಗೆ ಉತ್ತರಗಳನ್ನು ಇಲ್ಲಿ ನೀಡಲಾಗಿದೆ. ಎಕರೆ ಎಂದರೇನು? ಎಕರೆಯು ಜಾಗತಿಕವಾಗಿ ಬಳಕೆಯಲ್ಲಿರುವ ಒಂದು ಪ್ರಮಾಣಿತ ಭೂಮಿ ಮಾಪನ ಘಟಕ. ಭಾರತದ […]
BREAKING: ಪೌರಾಯುಕ್ತಗೆ ನಿಂದನೆ, ಬೆದರಿಕೆ: ರಾಜೀವ್ ಗೌಡಗೆ ಮತ್ತೊಂದು ಬಿಗ್ ಶಾಕ್: ಕಾಂಗ್ರೆಸ್ ಪಕ್ಷದಿಂದ ಅಮಾನತು
ಬೆಂಗಳೂರು: ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಅಮೃತಾಗೌಡ ಅವರಿಗೆ ನಿಂದನೆ ಹಾಗೂ ಜೀವಬೆದರಿಕೆ ಹಾಕಿದ್ದ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಅವರನ್ನು ಕಾಂಗ್ರೆಸ್ ನಿಂದ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ. ಬ್ಯಾನರ್ ವಿಚಾರವಾಗಿ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ನಗರಸಭೆ ಪೌರಾಯುಕ್ತೆ ಅಮೃತಾ ಗೌಡ ಅವರಿಗೆ ಕರೆ ಮಾಡಿ ನಿಂದಿಸಿದ್ದಲ್ಲದೇ, ಜೀವ ಬೆದರಿಕೆ ಹಾಕಿದ್ದರು. ರಾಜೀವ್ ಗೌಡ, ಪೌರಾಯುಕ್ತಗೆ ಬೆದರಿಕೆ ಹಾಕಿದ್ದ ಆಡೀಯೋ ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ಪೌರಾಯುಕ್ತೆ ರಾಜೀವ್ ಗೌಡ ವಿರುದ್ಧ ದೂರು ನೀಡಿದ್ದು, ರಾಜೀವ್ […]
ವಿಧಾನಸಭೆ ಚುನಾವಣೆ ನಡೆಯುವ ಕೇರಳಕ್ಕೆ ಬಂಪರ್ ಕೊಡುಗೆ ಕೊಟ್ಟ ಕೇಂದ್ರ ಸರ್ಕಾರ
ಕೇರಳ ವಿಧಾನಸಭೆ ಚುನಾವಣೆ-2026ರ ಹಿನ್ನಲೆಯಲ್ಲಿ ಕೇರಳ ರಾಜ್ಯಕ್ಕೆ ಕೇಂದ್ರ ಸರ್ಕಾರ ಬಂಪರ್ ಕೊಡುಗೆ ನೀಡಿದೆ. ಕೇರಳದಲ್ಲಿ ಹೊಸ ಹೈಸ್ಪೀಡ್ ರೈಲು ಕಾರಿಡಾರ್ಗೆ ಕೇಂದ್ರವು ಅನುಮೋದನೆ ನೀಡಿದೆ, ಇದು ರಾಜ್ಯದ ರೈಲು ಮೂಲಸೌಕರ್ಯವನ್ನು ಗಮನಾರ್ಹವಾಗಿ ಸುಧಾರಿಸುವ ನಿರೀಕ್ಷೆಯಿದೆ. ‘ಮೆಟ್ರೋ ಮ್ಯಾನ್’ ಖ್ಯಾತಿಯ ಇ.ಶ್ರೀಧರನ್ ಅವರು ಆರಂಭಿಕ ಯೋಜನಾ ಕಾರ್ಯವನ್ನು ಮುನ್ನಡೆಸುತ್ತಾರೆ. ಆದರೆ ದೆಹಲಿ ಮೆಟ್ರೋ ರೈಲು ನಿಗಮವನ್ನು ವಿವರವಾದ ಯೋಜನಾ ವರದಿ (ಡಿಪಿಆರ್) ತಯಾರಿಸಲು ನಿಯೋಜಿಸಲಾಗಿದೆ. ಇ.ಶ್ರೀಧರನ್ ಮಾತನಾಡಿ, “ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರ ಜೊತೆ […]
BREAKING: ಬಸ್-ಕ್ರೂಸರ್ ವಾಹನ ಮುಖಾಮುಖಿ ಡಿಕ್ಕಿ: ಭೀಕರ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ದುರ್ಮರಣ
ಉಡುಪಿ: ಬಸ್ ಹಾಗೂ ಕ್ರೂಸರ್ ವಾಹನಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಉಡುಪಿ ಜಿಲ್ಲೆಯಲ್ಲಿ ನಡೆದಿದೆ. ಉಡುಪಿಯ ಕಾರ್ಕಳ ತಾಲೂಕಿನ ಮಿಯಾರು ಗ್ರಾಮದಲ್ಲಿ ಈ ದುರಂತ ಸಂಭವಿಸಿದೆ. ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. 8 ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ 169ರಲ್ಲಿ ಈ ಅಪಘಾತ ಸಂಭವಿಸಿದೆ. ಘಟನಾ ಸ್ಥಳಕ್ಕೆ ಕಾರ್ಕಳ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬೆಂಗಳೂರು: ಕಾಂಗ್ರೆಸ್ ಸದಸ್ಯರು ರಾಜ್ಯಪಾಲರನ್ನು ಅಡ್ಡಗಟ್ಟಿದ ಪ್ರಕರಣ ವಿಧಾನ ಪರಿಷತ್ ನಲ್ಲಿ ಪ್ರತಿಧ್ವನಿಸಿದ್ದು, ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಅವರನ್ನು ಅಮಾನತುಗೊಸುವಂತೆ ಬಿಜೆಪಿ ಸದಸ್ಯರು ಪಟ್ಟು ಹಿಡಿದ್ದಾರೆ. ವಿಧಾನಮಂಡಲ ವಿಶೇಷ ಅಧಿವೇಶನದ ಆರಂಭದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಭಾಷಣ ಓದದದೇ ಸದನಿಂದ ನಿರ್ಗಮಿಸುತ್ತಿದ್ದ ವೇಳೆ ಕಾಂಗ್ರೆಸ್ ಸದಸ್ಯ ಬಿ.ಕೆ.ಹರಿಪ್ರಸಾದ್ ಸೇರಿದಂತೆ ಇತರ ಸದಸ್ಯರು ರಾಜ್ಯಪಾಲರನ್ನು ಅಡ್ಡಗಟ್ಟಿ ತಡೆಯಲು ಯತ್ನಿಸಿದ್ದರು. ಈ ವೇಳೆ ನಡೆದ ನೂಕಾಟ ತಳ್ಳಾಟದ ವೇಳೆ ಬಿ.ಕೆ.ಹರಿಒರಸಾದ್ ಅವರ ಬಟ್ಟೆ ಹರಿದು ಹೋಗಿತ್ತು. ಇದೇ ವಿಚಾರ […]
BREAKING: ಲಕ್ಕುಂಡಿಯಲ್ಲಿ ಉತ್ಖನನದ ವೇಳೆ ಮತ್ತೊಂದು ಪುರಾತನ ವಸ್ತು ಪತ್ತೆ: ಲೋಹದ ಗುಂಡು ಪತ್ತೆ
ಗದಗ: ಗದಗ ಜಿಲ್ಲೆಯ ಐತಿಹಾಸಿಕ ಲಕ್ಕುಂಡಿಯಲ್ಲಿ ಜಿಲ್ಲಾಡಳಿತದಿಂದ ಉತ್ಖನನ ಕಾರ್ಯ ಮುಂದುವರೆದಿದ್ದು, ಪ್ರತಿದಿನ ಒಂದಿಲ್ಲೊಂದು ಅಮೂಲ್ಯ ವಸ್ತುಗಳು ಪತ್ತೆಯಾಗುತ್ತಿವೆ. ಇಂದು ಕೂಡ ಮತ್ತೊಂದು ಪುರಾತನ ವಸ್ತು ಪತ್ತೆಯಾಗಿದ್ದು, ಮತ್ತಷ್ಟು ಕುತೂಹಾ ಮೂಡಿಸಿದೆ. ಲಕ್ಕುಡಿಂಯ ಕೋಟೆ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನದ ಬಳಿ ಜಿಲ್ಲಾಡಳಿತ ಉತ್ಖನನ ಕಾರ್ಯ ನಡೆಸುತ್ತಿದ್ದು, ಇಂದು 8ನೇ ದಿನಕ್ಕೆ ಕಾಲಿಟ್ಟಿದೆ. ಈಗಾಗಲೆ ಉತ್ಖನನದ ವೇಳೆ ನಾಲ್ಕು ಬ್ಲಾಕ್ ರೀತಿಯಲ್ಲಿ ಮಣ್ಣು ತೆಗೆಯಲಾಗಿದ್ದು, ಹಲವಾರು ಪುರಾತನ ವಸ್ತುಗಳು, ಶಿವಲಿಂಗ, ನಾಗರಕಲ್ಲು, ಶಿವಲಿಂಗದ ಪೀಠ, ವಿಗ್ರಹ, ದೇವಸ್ಥಾನದಂತ ಕುರುಹು, […]
ಮನಸ್ಸಿನ ಗೊಂದಲಕ್ಕೆ ಗುಡ್ಬೈ ಹೇಳಿ: ಅತಿಯಾದ ಆಲೋಚನೆ ನಿಯಂತ್ರಿಸಲು ಇಲ್ಲಿವೆ ಬೆಸ್ಟ್ ಐಡಿಯಾಸ್
ಚಿಂತಿಸುವುದು ಮನುಷ್ಯನ ಸಹಜ ಗುಣವಾದರೂ, ಅದು ಮಿತಿ ಮೀರಿ ‘ಅತಿಯಾದ ಯೋಚನೆ’ಯಾಗಿ ಬದಲಾದಾಗ ನಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಅನಗತ್ಯ ಅಥವಾ ಅಗತ್ಯವಿಲ್ಲದ ವಿಷಯಗಳ ಬಗ್ಗೆ ಪದೇ ಪದೇ ನಿರಂತರವಾಗಿ ಆಲೋಚಿಸುವುದು ನಮ್ಮನ್ನು ಮಾನಸಿಕವಾಗಿ ಬಳಲಿಸುತ್ತದೆ. ಹಿಂದೆ ನಡೆದ ಕಹಿ ಘಟನೆಗಳು, ಭವಿಷ್ಯದ ಬಗ್ಗೆ ಇರುವ ಅಸ್ಪಷ್ಟ ಆತಂಕ, ಕೆಲಸದ ಒತ್ತಡ ಮತ್ತು ಒಂಟಿತನ ಅತಿಯಾದ ಚಿಂತೆಗೆ ಪ್ರಮುಖ ಕಾರಣಗಳಾಗಿವೆ. ಇಂತಹ ನಕಾರಾತ್ಮಕ ಯೋಚನೆಗಳು ನಮ್ಮನ್ನು ದಾರಿ ತಪ್ಪಿಸುವುದಲ್ಲದೆ, ಸರಿಯಾದ […]
ಶಬರಿಮಲೆ ಪ್ರವಾಸಕ್ಕೆ ಹೋಗಿದ್ದ ಕೋಲಾರದ ವ್ಯಕ್ತಿ ನಾಪತ್ತೆ; ನಾಲ್ಕು ದಿನಗಳಾದರೂ ಸಿಗದ ಸುಳಿವು
ಕೋಲಾರ: ಶಬರಿಮಲೆ ಪ್ರವಾಸಕ್ಕೆಂದು ಹೋಗಿದ್ದ ಕೋಲಾರ ಮೂಲದ ವ್ಯಕ್ತಿಯೊಬ್ಬರು ನಾಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಕಾಣೆಯಾಯಿ ನಾಲ್ಕು ದಿನಗಳು ಕಳೆದರೂ ಸುಳಿವು ಸಿಗದಿರುವುದು ಕುಟುಂಬದವರಲ್ಲಿ ಆತಂಕ ಮೂಡಿಸಿದೆ. ಕೋಲಾರದ ಬಂಗಾರಪೇಟೆ ತಾಲೂಕಿನ ದೇವಗಾನಹಳ್ಳಿಯ ರವಿ (40) ನಾಪತ್ತೆಯಾಗಿರುವವರು. ಶಬರಿಮಲೆ ಪ್ರವಾಸಕ್ಕೆಂದು ಹೋಗಿದ್ದ ರವಿ, ಅಲ್ಲಿಂದ ತಮಿಳುನಾಡಿನ ತಿರುಚಂದೂರ್ ಗೆ ತೆರಳಿದ್ದರು. ತಿರುಚಂದೂರ್ ಗೆ ಹೋಗಿದ್ದವರು ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ. ಕಳೆದ ನಾಲ್ಕು ದಿನಗಳಿಂದ ರವಿ ಅವರ ಸುಳಿವು ಸಿಗುತ್ತಿಲ್ಲ. ಇದರಿಂದ ಆತಂಕಗೊಂಡಿರುವ ಕುಟುಂಬ ತಿರುಚಂದೂರ್ ಪೊಲೀಸ್ […]
ಒಂದೇ ದಿನ OTTಗೆ ಬಂದ ಶಿವಣ್ಣ, ಸುದೀಪ್ ಸಿನಿಮಾ: ಈ ವಾರದ ಒಟಿಟಿ ಸಿನಿಮಾ ಪಟ್ಟಿ
ಜನವರಿ 24ರಿಂದ ಸಾಲು ಸಾಲು ರಜೆ. ಸೋಮವಾರದ ತನಕ ಇರುವ ರಜೆಯನ್ನು ಮನೆಯಲ್ಲಿಯೇ ಕುಳಿತು ಸಿನಿಮಾ ನೋಡಿ ಕಳೆಯುವ ಜನರಿಗೆ ಮಹತ್ವದ ಅಪ್ಡೇಟ್. ಶಿವಣ್ಣ ಮತ್ತು ಸುದೀಪ್ ಅಭಿನಯನದ ಚಿತ್ರಗಳು ಒಂದೇ ದಿನ ಒಟಿಟಿಗೆ ಬಂದಿವೆ. ಹೌದು 2025ರ ಡಿಸೆಂಬರ್ನಲ್ಲಿ ಬಿಡುಗಡೆಯಾಗಿದ್ದ ‘ಮಾರ್ಕ್’ ಮತ್ತು ‘45’ ಸಿನಿಮಾಗಳು ಒಟಿಟಿಗೆ ಬಂದಿವೆ. ಈ ಮೂಲಕ ಇಬ್ಬರು ನಟರ ಅಭಿಮಾನಿಗಳಿಗೆ ಸಖತ್ ಕಿಕ್ ಕೊಡುವ ಸುದ್ದಿ ಸಿಕ್ಕಿದೆ. ಜನವರಿ 24 ರಿಂದ 26ರ ತನಕ ಇರುವ ಸರಣಿ ರಜೆಯನ್ನು ಗಮನದಲ್ಲಿಟ್ಟುಕೊಂಡು […]
ವಿಶ್ವದ ಮೋಸ್ಟ್ ಹ್ಯಾಂಡ್ಸಮ್ ಪುರುಷರ ಪಟ್ಟಿ ರಿಲೀಸ್: ಸ್ಪೇನ್ ನಂ.1 ಭಾರತಕ್ಕೆ ಎಷ್ಟನೇ ಸ್ಥಾನ ಗೊತ್ತಾ?
ಸಾಮಾನ್ಯವಾಗಿ ಸೌಂದರ್ಯ ಎಂದ ತಕ್ಷಣ ನಮ್ಮ ಕಣ್ಣಮುಂದೆ ಬರುವುದು ವೆನೆಜುವೆಲಾ ದೇಶದ ಮಹಿಳೆಯರು. ಅವರ ಹೊಳೆಯುವ ಚರ್ಮ, ದಟ್ಟವಾದ ಕಪ್ಪು ಕೂದಲು ಮತ್ತು ಆಕರ್ಷಕ ಮೈಬಣ್ಣಕ್ಕೆ ಇಡೀ ಜಗತ್ತೇ ಫಿದಾ ಆಗಿದೆ. ಆದರೆ, ಯಾವ ದೇಶದ ಪುರುಷರು ಅತ್ಯಂತ ಸುಂದರರು? ಎಂಬ ಪ್ರಶ್ನೆ ಬಂದಾಗ ಮಾತ್ರ ಹಲವರಲ್ಲಿ ಕುತೂಹಲದ ಜೊತೆಗೆ ಒಂದು ಸಣ್ಣ ಗೊಂದಲವೂ ಇತ್ತು. ಈಗ ಆ ಕುತೂಹಲಕ್ಕೆ ಜಾಗತಿಕ ವೇದಿಕೆಗಳಾದ ಇನ್ಫೋಡೆಕ್ಸ್ (Infodex) ಮತ್ತು ಇನ್ಸೈಡರ್ ಮಂಕಿ (InsiderMonkey) ತೆರೆ ಎಳೆದಿವೆ ವಿಶ್ವದಾದ್ಯಂತ ಸಮೀಕ್ಷೆ […]
ಮಹಿಳೆ ಮೇಲೆ ಅತ್ಯಾಚಾರ, ಕೊಲೆ ಒಂದು ಸಣ್ಣ ಘಟನೆ: ವಿವಾದಾತ್ಮಕ ಹೇಳಿಕೆ ನೀಡಿದ ಸಂಸದ ರಾಜಶೇಖರ್ ಹಿಟ್ನಾಳ್
ಕೊಪ್ಪಳ: ಅತ್ಯಾಚಾರ, ಕೊಲೆಯಂತಹ ಘಟನೆಗಳು ಸಣ್ಣ ಘಟನೆ ಎಂದು ಹೇಳುವ ಮೂಲಕ ಸಂಸದ ರಾಜಶೇಖರ್ ಹಿಟ್ನಾಳ್ ಹೊಸ ವಿವಾದ ಸೃಷ್ಟಿಸಿದ್ದಾರೆ. ಸಂಸದರ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಪ್ರವಾಸೋದ್ಯಮ ಇಲಾಖೆ ಏರ್ಪಡಿಸಿದ್ದ ಕೊಪ್ಪಳ ಅನ್ವೇಷಿಸಿ ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸದ ರಾಜಶೇಖರ್ ಹಿಟ್ನಾಳ್, ಒಂದು ವರ್ಷದ ಹಿಂದೆ ಕೊಪ್ಪಳದ ಸಾಣಾಪುರದಲ್ಲಿ ವಿದೇಶಿ ಮಹಿಳೆ ಮೇಲೆ ನಡೆದ ಅತ್ಯಾಚಾರ ಹಾಗೂ ವ್ಯಕ್ತಿಯ ಕೊಲೆ ಪ್ರಕರಣ ಸಣ್ಣದಾಗಿದ್ದರೂ ಅದನ್ನು ಮಾಧ್ಯಮಗಳು ವೈಭವೀಕರಿಸಿದ್ದರಿಂದ ಪ್ರವಾಸೋಯಮಕ್ಕೆ ವ್ಯಾಪಕ ಪೆಟ್ಟುಬಿದ್ದಿದೆ ಎಂದು ಹೇಳಿದ್ದಾರೆ. ವಿದೇಶಿ ಮಹಿಳೆ […]
BIG NEWS: ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಅಪರಾಧ ಸಾಬೀತು: ತನಿಖಾ ತಂಡಕ್ಕೆ 25 ಲಕ್ಷ ನಗದು ಬಹುಮಾನ ಘೋಷಣೆ
ಬೆಂಗಳೂರು: ಜೆಡಿಎಸ್ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಅಪರಾಧ ಸಾಬೀತು ಪಡಿಸಿದ ತನಿಖಾ ತಂಡದ 30 ಅಧಿಕಾರಿಗಳು, ಸಿಬ್ಬಂದಿಗಳಿಗೆ 25 ಲಕ್ಷ ನಗದು ಬಹುಮಾನ ಘೋಷಿಸಲಾಗಿದೆ. ಎಸ್ ಐಟಿ ಮುಖ್ಯಸ್ಥ ಬಿ.ಕೆ.ಸಿಂಗ್, ಡಿಐಜಿ ಸೀಮಾ ಲಾಟ್ಕರ್, ಎಸ್ ಪಿ ಸುಮನ್ ಡಿ ಪನ್ನೇಕರ್, ಎಸ್ ಪಿ, ಸಿಎ ಸೈಮನ್, ಎಸಿಪಿ ಸತ್ಯನಾರಾಯಣ ಸಿಂಗ್, ಇನ್ಸ್ ಪೆಕ್ಟರ್ ಗಳಾದ ರಾವ್ ಗಣೇಶ್ ಜನಾರ್ಧನ್, ಶೋಭಾ ಜಿ, ಸುಮಾರಾಣಿ, ಹೇಮಂತ್ ಕುಮಾರ್ ಸೇರಿದಂತೆ 30 ಪೊಲೀಸ್ ಅಧಿಕಾರಿಗಳು ಹಾಗೂ […]
Business Tips : ಹಳೆಯ ತಂತಿಗಳಿಂದ ಲಕ್ಷ ಲಕ್ಷ ಸಂಪಾದಿಸಿ , ನಿಮ್ಮ ಜೀವನವನ್ನೇ ಬದಲಾಯಿಸುವ ವ್ಯವಹಾರ !
ನೀವು ಬುದ್ಧಿವಂತರಾಗಿದ್ದರೆ ಉತ್ತಮ ಲಾಭವನ್ನು ತರುವ ಅನೇಕ ವ್ಯಾಪಾರ ಅವಕಾಶಗಳಿವೆ. ಅಂತಹ ಒಂದು ವ್ಯವಹಾರವೆಂದರೆ ತಾಮ್ರದ ತಂತಿ ಮರುಬಳಕೆ ವ್ಯವಹಾರ. ಅದರ ಬಗ್ಗೆ ಸಂಪೂರ್ಣ ವಿವರಗಳನ್ನು ತಿಳಿದುಕೊಳ್ಳೋಣ. ಈ ವ್ಯವಹಾರದ ಮುಖ್ಯ ಕಾರ್ಯವೆಂದರೆ ಹಳೆಯ ತಂತಿಗಳಿಂದ ತಾಮ್ರವನ್ನು ಹೊರತೆಗೆಯುವ ಪ್ರಕ್ರಿಯೆ. ಸಾಮಾನ್ಯವಾಗಿ, ವಿದ್ಯುತ್ ತಂತಿಗಳು ಪ್ಲಾಸ್ಟಿಕ್ ಲೇಪನವನ್ನು ಹೊಂದಿರುತ್ತವೆ. ಲೇಪನವನ್ನು ತೆಗೆದು ಒಳಗಿನ ಶುದ್ಧ ತಾಮ್ರವನ್ನು ಬೇರ್ಪಡಿಸಬೇಕು. ಇದಕ್ಕಾಗಿ, ವಿಶೇಷವಾಗಿ ಲಭ್ಯವಿರುವ ತಂತಿ ತೆಗೆಯುವ ಯಂತ್ರಗಳನ್ನು ಬಳಸಲಾಗುತ್ತದೆ. ಈ ಯಂತ್ರಗಳು ಮಾರುಕಟ್ಟೆಯಲ್ಲಿ ಹಸ್ತಚಾಲಿತ, ಅರೆ-ಸ್ವಯಂಚಾಲಿತ ಮತ್ತು ಸಂಪೂರ್ಣ […]
ಮುಖ್ಯ ಕಾರ್ಯದರ್ಶಿ ಭೇಟಿಯಾಗಿ ಸರ್ಕಾರಿ ನೌಕರರ ನಿಯೋಗ: ಬೇಡಿಕೆಗಳೇನು?
ಕರ್ನಾಟಕದಲ್ಲಿ ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿಪಡಿಸುವ ಹಲವಾರು ಘಟನೆಗಳು ನಡೆದಿವೆ. ಈ ಕುರಿತು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಆತಂಕವನ್ನು ವ್ಯಕ್ತಪಡಿಸಿದೆ. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ನೇತೃತ್ವದ ನಿಯೋಗ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಭೇಟಿಯಾಗಿ ಮನವಿಯೊಂದನ್ನು ಸಲ್ಲಿಕೆ ಮಾಡಿದೆ. ಈ ಮನವಿಯು ಸರ್ಕಾರಿ ನೌಕರರ ಕರ್ತವ್ಯದ ವೇಳೆಯಲ್ಲಿ ಕೆಲವು ಗಣ್ಯ ವ್ಯಕ್ತಿಗಳು ಹಾಗೂ ಸಾರ್ವಜನಿಕರಿಂದ ನಡೆಯುವ ಹಲ್ಲೆ, ದೌರ್ಜನ್ಯ, ಅವಾಚ್ಯ ಶಬ್ದಗಳಿಂದ ನಿಂದನೆ ಮತ್ತು ಕಿರುಕುಳ ನೀಡುತ್ತಿರುವ […]
ನವದೆಹಲಿ: ಗಣರಾಜ್ಯೋತ್ಸವಕ್ಕೆ ಎರಡು ದಿನಗಳು ಮಾತ್ರ ಬಾಕಿ ಇದೆ. ಎಲ್ಲೆಡೆ ಗಣರಾಜ್ಯೋತ್ಸವಕ್ಕೆ ಸಕಲ ಸಿದ್ಧತೆಗಳು ನಡೆಯುತ್ತಿವೆ. ಈ ನಡುವೆ ದೇಶದ ಗಡಿ ಭಾಗಗಳಲ್ಲಿ ಕಟ್ಟೆಚ್ಚವಹಿಸುವಂತೆ ಗುಪ್ತಚರ ಇಲಾಖೆ ಸೂಚನೆ ನೀಡಿದೆ. ಜಮ್ಮು-ಕಾಶ್ಮೀರ, ರಾಜಸ್ಥಾನ ಗಡಿ ಭಾಗಗಳಲ್ಲಿ ಕೆಲ ದಿನಗಳ ಹಿಂದೆ ಪಾಕಿಸ್ತಾನ ಡ್ರೋನ್ ಗಳು ಹಾರಾಟ ನಡೆಸಿದ್ದ ಹಿನ್ನೆಲೆಯಲ್ಲಿ ಅಲರ್ಟ್ ಆಗಿದ್ದ ಸೇನೆಗೆ ಇದೀಗ ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ಮತ್ತಷ್ಟು ಕಟ್ಟೆಚ್ಚರ ವಹಿಸಲು ಸೂಚನೆ ನೀಡಲಾಗಿದೆ. ಪಂಜಾಬ್, ರಾಜಸ್ಥಾನ, ಜಮ್ಮು-ಕಾಶ್ಮೀರದ ಗಡಿ ಪ್ರದೇಶಗಳಲ್ಲಿ ಡ್ರೋನ್, ಪ್ಯಾರಾಗ್ಲೈಡರ್ ಹಾಗೂ ಹ್ಯಾಂಗ್ […]
ಈ ರಾಜ್ಯದ ಪೊಲೀಸರ ಸಮವಸ್ತ್ರ ಖಾಕಿ ಅಲ್ಲ ಬಿಳಿ : ಇದರ ಹಿಂದಿದೆ ಈ ಕಾರಣ.!
ಭಾರತದ ಬಹುತೇಕ ರಾಜ್ಯಗಳಲ್ಲಿ (ಕರ್ನಾಟಕ ಸೇರಿದಂತೆ) ಪೊಲೀಸರು ಖಾಕಿ ಧರಿಸುತ್ತಾರೆ, ಇದು ಶಿಸ್ತು ಮತ್ತು ಧೈರ್ಯದ ಸಂಕೇತ. . ಒಂದು ಘಟನೆ ಸಂಭವಿಸಿದಾಗ ಮೊದಲು ಮಾಹಿತಿ ಪಡೆಯುವುದು ಪೊಲೀಸರೇ.ಪೊಲೀಸ್ ಪಡೆಗಳನ್ನು ನೋಡಿದಾಗ, ನೀವು ಅವರ ಸಮವಸ್ತ್ರವನ್ನು ಒಮ್ಮೆ ಗಮನಿಸಿರಬೇಕು. ಭಾರತದ ಬಹುತೇಕ ಎಲ್ಲಾ ನಗರಗಳಲ್ಲಿ ಖಾಕಿ ಪೊಲೀಸ್ ಸಮವಸ್ತ್ರದ ಬಣ್ಣವಾಗಿದೆ, ಆದರೆ ಭಾರತದಲ್ಲಿ ಪೊಲೀಸ್ ಸಮವಸ್ತ್ರವು ಬಿಳಿಯಾಗಿರುತ್ತದೆ ಎಂದು ನಿಮಗೆ ತಿಳಿದಿದೆಯೇ? ಇಂದು, ನಾವು ಆ ನಗರದ ಹೆಸರನ್ನು ನಿಮಗೆ ಹೇಳುತ್ತೇವೆ ಮತ್ತು ಆ ನಗರದ ಪೊಲೀಸರು […]
ಧನುಷ್ 55ನೇ ಚಿತ್ರಕ್ಕೆ ಮುಹೂರ್ತ ಫಿಕ್ಸ್: ಅಮರನ್ ನಿರ್ದೇಶಕನ ಜೊತೆ ಧನುಷ್ ಮಿಂಚಿನ ಸಂಚಾರ
ದಕ್ಷಿಣ ಭಾರತದ ಖ್ಯಾತ ನಟ ಧನುಷ್ ತಮ್ಮ ಮುಂದಿನ ಸಿನಿಮಾಗಳ ಮೂಲಕ ಚಿತ್ರರಂಗದಲ್ಲಿ ಸಂಚಲನ ಮೂಡಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಅವರ 54ನೇ ಚಿತ್ರ ‘ಕಾರಾ’ (Kara) ದ ಫಸ್ಟ್ ಲುಕ್ ಬಿಡುಗಡೆಯಾಗಿ ಅಭಿಮಾನಿಗಳಲ್ಲಿ ಸಂಭ್ರಮ ಮೂಡಿಸಿತ್ತು. ಇದರ ಬೆನ್ನಲ್ಲೇ ಈಗ ಅವರ 55ನೇ ಚಿತ್ರದ (D55) ಅಧಿಕೃತ ಘೋಷಣೆಯಾಗಿದ್ದು, ಸಿನಿಮಾ ಪ್ರೇಮಿಗಳಲ್ಲಿ ಕುತೂಹಲ ದುಪ್ಪಟ್ಟಾಗಿದೆ. ‘ಅಮರನ್’ ನಿರ್ದೇಶಕನ ಜೊತೆ ಧನುಷ್ ಕೈಜೋಡಿ ಇತ್ತೀಚೆಗಷ್ಟೇ ಶಿವಕಾರ್ತಿಕೇಯನ್ ನಟನೆಯ ‘ಅಮರನ್’ ಚಿತ್ರದ ಮೂಲಕ ದೊಡ್ಡ ಯಶಸ್ಸು ಕಂಡ ನಿರ್ದೇಶಕ ರಾಜಕುಮಾರ್ ಪೆರಿಯಸಾಮಿ […]
Business Tips : ಹಳ್ಳಿಯಲ್ಲೇ ತಿಂಗಳಿಗೆ 50,000 ಗಳಿಸಬಹುದು ! ಈ ‘ಬ್ಯುಸಿನೆಸ್’ಮಾಡಿದ್ರೆ ಒಳ್ಳೆ ಲಾಭ.!
ಹಳ್ಳಿಯಲ್ಲೇ ಒಂದು ಒಳ್ಳೆಯ ವ್ಯವಹಾರ… ಬೆರಳೆಣಿಕೆಯಷ್ಟು ಸಂಪಾದನೆ, ಮತ್ತು ನಾಲ್ಕು ಜನರಿಗೆ ಒಳ್ಳೆಯದನ್ನು ಮಾಡಿದ ತೃಪ್ತಿ. ಇನ್ನೇನು ಬೇಕು? ಹೌದು ತಿಂಗಳಿಗೆ ರೂ. 50,000 ಕ್ಕಿಂತ ಹೆಚ್ಚು ಸಂಪಾದಿಸಿ ನಿಮ್ಮ ಸ್ವಂತ ಮನೆಯಲ್ಲಿ ಆರಾಮಾಗಿ ಬದುಕಲು ಒಂದು ವ್ಯವಹಾರ ಬಗ್ಗೆ ತಿಳಿಸಿಕೊಡುತ್ತಿದ್ದೇವೆ. ಹೆಚ್ಚಿನ ಜನರು ಸಾಮಾನ್ಯವಾಗಿ ತಮ್ಮ ಜೀವನೋಪಾಯಕ್ಕಾಗಿ ಕೃಷಿಯನ್ನು ಅವಲಂಬಿಸಿರುತ್ತಾರೆ. ಕೃಷಿಯೇತರ ಆದಾಯದ ಮೂಲಗಳು ಬಹಳ ಕಡಿಮೆ. ಅಂತಹ ಹಳ್ಳಿಗಳಲ್ಲಿ ವ್ಯಾಪಾರ ಮಾಡಲು, ಒಂದು ಒಳ್ಳೆಯ ಕಲ್ಪನೆಯ ಅಗತ್ಯವಿದೆ. ಅಂತಹ ಒಂದು ಕಲ್ಪನೆ ಎಂದರೆ ನೀರಿನ […]
ನಿಮ್ಮ ಮುಖದ ಕಾಂತಿ ಹೆಚ್ಚಿಸಲು ಈ 10 ನಿಮಿಷದ ಮ್ಯಾಜಿಕ್ ಸಾಕು: ಇಲ್ಲಿದೆ ಕೊರಿಯನ್ 4-2-4 ಟ್ರಿಕ್
ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ಕಲೆರಹಿತ, ಮೃದುವಾದ ಮತ್ತು ಹೊಳೆಯುವ ಚರ್ಮ (Glass Skin) ಬೇಕೆಂಬ ಆಸೆ ಇರುತ್ತದೆ. ಅದರಲ್ಲೂ ಕೊರಿಯನ್ ಮಹಿಳೆಯರ ಚರ್ಮದ ಕಾಂತಿ ವಿಶ್ವಪ್ರಸಿದ್ಧ. ಅವರು ಯಾವುದೇ ದುಬಾರಿ ಚಿಕಿತ್ಸೆ ಅಥವಾ ಕ್ರೀಮ್ಗಳಿಗಿಂತ ಹೆಚ್ಚಾಗಿ ತಮ್ಮ ದಿನನಿತ್ಯದ ಚರ್ಮದ ಆರೈಕೆಯಲ್ಲಿ ‘4-2-4’ ಎಂಬ ಸರಳ ನಿಯಮವನ್ನು ಪಾಲಿಸುತ್ತಾರೆ. ಕೇವಲ 10 ನಿಮಿಷಗಳ ಕಾಲ ಮನೆಯಲ್ಲೇ ಇದನ್ನು ಅನುಸರಿಸುವ ಮೂಲಕ ನೀವು ಅದ್ಭುತ ಫಲಿತಾಂಶ ಪಡೆಯಬಹುದು. ಏನಿದು 4-2-4 ಸ್ಕಿನ್ ಕೇರ್ ಸೂತ್ರ? ಈ ವಿಧಾನವು ಮೂರು […]
NCC ಯಲ್ಲಿ ಮಾಜಿ ಸೈನಿಕರಿಗೆ ಒಪ್ಪಂದದ ಮೇರೆಗೆ ಬೋಧಕರ ಹುದ್ದೆಗೆ ನೇಮಕಾತಿ
ಚಿತ್ರದುರ್ಗ : ಕರ್ನಾಟಕ ಮತ್ತು ಗೋವಾ ಎನ್.ಸಿ.ಸಿ ನಿರ್ದೇಶನಾಲಯವು 2026-27 ನೇ ಸಾಲಿಗಾಗಿ ಮಾಜಿ ಸೈನಿಕರನ್ನು ಒಪ್ಪಂದದ ಮೇರೆಗೆ 30 ಎನ್.ಸಿ.ಸಿ ಬೋಧಕರ ಹುದ್ದೆಗೆ ಕೆಲವು ಷರತ್ತುಗಳೊಂದಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸಲು ಜ.25 ಕೊನೆಯ ದಿನಾಂಕವಾಗಿದೆ. ಆಸಕ್ತರು ಅರ್ಜಿಯನ್ನು ಇಮೇಲ್ jtdirpc.kardte@nccindia.nic.in ಮೂಲಕ ಮತ್ತು ಅಂಚೆ ವಿಳಾಸ NCC Dte (Karnataka and Goa) KSCMF, Building, 4th Floor, No-8, Cunningham Road, Bengaluru-560001 ಮೂಲಕ ಸಲ್ಲಿಸಬೇಕಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ https://nccindia.gov.in ಜಾಲತಾಣವನ್ನು ಅಥವಾ […]
ಐಟಿ ಹಬ್ನಲ್ಲಿ ಬಾಡಿಗೆಯದ್ದೇ ಅಬ್ಬರ: ಬೆಂಗಳೂರಿನ ಈ ಏರಿಯಾದಲ್ಲಿ 2BHK ಫ್ಲ್ಯಾಟ್ ಬೆಲೆ ಬರೋಬ್ಬರಿ 70,000 ರೂ
ಬೆಂಗಳೂರು: ಕನಸುಗಳ ನಗರಿ, ಉದ್ಯಾನ ನಗರಿ ಬೆಂಗಳೂರಿಗೆ ಕೆಲಸ ಅರಸಿ ಬರುವ ಹೊರರಾಜ್ಯದ ಯುವಕ-ಯುವತಿಯರು ಮೊದಲು ಎದುರಿಸುವ ಸವಾಲೇ ಬಾಡಿಗೆ ಮನೆ. ಆದರೆ, ಸಿಲಿಕಾನ್ ಸಿಟಿಯ ಬಾಡಿಗೆ ದರಗಳು ಈಗ ಜನಸಾಮಾನ್ಯರ ಕೈಗೆಟುಕದ ಮಟ್ಟಕ್ಕೆ ಏರುತ್ತಿವೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ.ರಾಜಧಾನಿಯ ಐಟಿ ಕಾರಿಡಾರ್ಗಳಲ್ಲಿ ಮನೆ ಬಾಡಿಗೆ ದರ ಗಗನಕ್ಕೇರುತ್ತಿರುವುದು ಹೊಸ ಸುದ್ದಿಯಲ್ಲದಿದ್ದರೂ ಇತ್ತೀಚಿನ ಒಂದು ಸಾಮಾಜಿಕ ಜಾಲತಾಣದ ಪೋಸ್ಟ್ ಬೆಂಗಳೂರಿನ ಜೀವನದ ಕಹಿ ವಾಸ್ತವವನ್ನು ಮತ್ತೆ ಮುನ್ನೆಲೆಗೆ ತಂದಿದೆ. ತಕ್ಷಣವೇ ಈ ಬಗ್ಗೆ ಎಕ್ಸ್ (X) […]
SHOCKING : ತರಗತಿಯಲ್ಲೇ ನೇಣು ಬಿಗಿದುಕೊಂಡು ಪದವಿ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ.!
ತರಗತಿಯಲ್ಲೇ ಪದವಿ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಗುಜರಾತ್ ನ ಗಾಂಧಿನಗರ ಜಿಲ್ಲೆಯ ಕಾಲೇಜಿನಲ್ಲಿ ನಡೆದಿದೆ. 19 ವರ್ಷದ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಯನ್ನು ಶಿವಾನಿ ಅಹಿರ್ ಎಂದು ಗುರುತಿಸಲಾಗಿದೆ, ಪಠಾಣ್ ಜಿಲ್ಲೆಯ ನಿವಾಸಿ ಶಿವಾನಿ ಬಿಎ ಕೋರ್ಸ್ನ ಮೊದಲ ವರ್ಷದಲ್ಲಿ ಓದುತ್ತಿದ್ದರು ಮತ್ತು ಗಾಂಧಿನಗರದ ಸೆಕ್ಟರ್ -7 ರಲ್ಲಿರುವ ಜೆಎಂ ಚೌಧರಿ ಬಾಲಕಿಯರ ಹಾಸ್ಟೆಲ್ನಲ್ಲಿ ವಾಸಿಸುತ್ತಿದ್ದರು. ಮೊದಲು ವಿದ್ಯಾರ್ಥಿನಿ ಹಾಸ್ಟೆಲ್ನಿಂದ ಕಾಣೆಯಾಗಿದ್ದಾಳೆ ಎಂದು ದೂರು ನೀಡಲಾಗಿತ್ತು. ಪೊಲೀಸರ ಪ್ರಕಾರ, ಬುಧವಾರ […]
ಏಷ್ಯಾದ ಅತಿದೊಡ್ಡ ನೈಸರ್ಗಿಕ ಐಸ್ ಸ್ಕೇಟಿಂಗ್ ರಿಂಕ್ ಬಗ್ಗೆ ಗೊತ್ತಾ?
ಐಸ್ ಸ್ಕೇಟಿಂಗ್ ಮಾಡಬೇಕು ಎಂಬ ಆಸೆ ಇದೆಯೇ?. ನೈಸರ್ಗಿಕ ಐಸ್ ಸ್ಕೇಟಿಂಗ್ ರಿಂಕ್ ಬಗ್ಗೆ ನಿಮಗೆ ಗೊತ್ತಾ?. ಮುಂದಿನ ಬಾರಿ ಪ್ರವಾಸ ಯೋಜನೆ ಮಾಡುವ ಸಂದರ್ಭದಲ್ಲಿ ಇದನ್ನು ತಿಳಿದು ನಿಮ್ಮ ಯೋಜನೆ ರೂಪಿಸಿ. ಪಶ್ಚಿಮ ಹಿಮಾಲಯದಲ್ಲಿ ಏಷ್ಯಾದ ಅತಿದೊಡ್ಡ ನೈಸರ್ಗಿಕ ಐಸ್ ಸ್ಕೇಟಿಂಗ್ ರಿಂಕ್ ಇದೆ. ಇದು ಒಂದು ವಿಶಿಷ್ಟವಾದ ನೈಸರ್ಗಿಕ ವಿದ್ಯಮಾನವಾಗಿದೆ. ಅಲ್ಲಿ ಋತುಮಾನದ ಆಧಾರದ ಮೇಲೆ ನೀರು ಘನೀಕರಣಗೊಂಡು ಚಳಿಗಾಲದ ಕ್ರೀಡೆಯ ಐತಿಹಾಸಿಕ ಕ್ರೀಡಾಂಗಣವಾಗಿ ಬದಲಾಗುತ್ತದೆ. ಇದು ಬಹಳ ಹೆಸರುವಾಸಿಯಾದ ಸ್ಥಳವಾಗಿದೆ. ಇದು ವಿಶ್ವದ […]
BREAKING : ಕೇರಳದಲ್ಲಿ 3 ‘ಅಮೃತ್ ಭಾರತ್ ಎಕ್ಸ್’ಪ್ರೆಸ್’ರೈಲುಗಳಿಗೆ ಪ್ರಧಾನಿ ಮೋದಿ ಚಾಲನೆ |WATCH VIDEO
ಕೇರಳ : ಚುನಾವಣೆ ನಡೆಯಲಿರುವ ಕೇರಳಕ್ಕೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ಸರಣಿ ಅಭಿವೃದ್ಧಿ ಯೋಜನೆಗಳಿಗೆ ಉದ್ಘಾಟನೆ ಮತ್ತು ಶಿಲಾನ್ಯಾಸ ನೆರವೇರಿಸಿದರು ಮತ್ತು ಮೂರು ಅಮೃತ ಭಾರತ್ ಎಕ್ಸ್ಪ್ರೆಸ್ ರೈಲುಗಳು ಸೇರಿದಂತೆ ನಾಲ್ಕು ಹೊಸ ರೈಲು ಸೇವೆಗಳಿಗೆ ಹಸಿರು ನಿಶಾನೆ ತೋರಿದರು. ಪ್ರಧಾನಿ ಮೋದಿ ಬೆಳಿಗ್ಗೆ 10.25 ರ ಸುಮಾರಿಗೆ ತಿರುವನಂತಪುರಂ ವಿಮಾನ ನಿಲ್ದಾಣಕ್ಕೆ ಬಂದಿಳಿದರು ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ. ಅವರನ್ನು ಕೇರಳ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್, ಮುಖ್ಯಮಂತ್ರಿ ಪಿಣರಾಯಿ ವಿಜಯನ್ […]
ಸಾಲ-ಸಾಲು ರಜೆಗೆ ಕೊಡಗು ಜಿಲ್ಲೆಗೆ ಹೊರಟ್ರಾ, ಈ ಮಾಹಿತಿ ತಿಳಿಯಿರಿ
ಜನವರಿ 24ರಿಂದ ಸಾಲು-ಸಾಲು ರಜೆ. ಈ ಸಮಯದಲ್ಲಿ ನೀವು ಕೊಡಗು ಜಿಲ್ಲಾ ಪ್ರವಾಸ ಹೊರಟಿದ್ದರೆ ಪ್ರಮುಖವಾದ ಮಾಹಿತಿ ಒಂದಿದೆ. ತೋಟಗಾರಿಕೆ ಇಲಾಖೆಯು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಇತರೆ ಅಭಿವೃದ್ದಿ ಇಲಾಖೆಗಳ ಸಹಯೋಗದೊಂದಿಗೆ ಗಣರಾಜ್ಯೋತ್ಸವದ ಪ್ರಯುಕ್ತ ಫಲಪುಷ್ಪ ಪ್ರದರ್ಶನ ಆಯೋಜನೆ ಮಾಡಲಾಗಿದೆ. ಜನವರಿ, 24 ರಿಂದ 26ರ ತನಕ ಮಡಿಕೇರಿಯ ರಾಜಾಸೀಟು ಉದ್ಯಾನವನದಲ್ಲಿ ಫಲಪುಷ್ಪ ಪ್ರದರ್ಶನ ನಡೆಯಲಿದೆ. ಈ ಕುರಿತು ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಮಾಹಿತಿ ನೀಡಿದ್ದಾರೆ. ಫಲಪುಷ್ಪ ಪ್ರದರ್ಶನದವನ್ನು ಜನವರಿ 24ರಂದು ಮಧ್ಯಾಹ್ನ 3 ಗಂಟೆಗೆ ಕೊಡಗು […]
ಬೆಂಗಳೂರು: ಇನ್ಮುಂದೆ ಮೈಲಾರಿ ದೋಸೆ ಸವಿಯಲು ಮೈಸೂರಿನವರೆಗೂ ಹೋಗಬೇಕಾಗಿಲ್ಲ. ರಾಜ್ಯ ರಾಜಧಾನಿ, ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿಯೇ ಮೈಲಾರಿ ದೋಸೆ ಸವಿಯಬಹುದು. ಮೈಸೂರಿನ ಪ್ರಸಿದ್ಧ ‘ಒರಿಜಿನಲ್ ವಿನಾಯಕ ಮೈಲಾರಿ-1938’ ಹೋಟೆಲ್ನ ಬೆಂಗಳೂರು ಶಾಖೆಗೆ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದ್ದಾರೆ. ಬೆಂಗಳೂರಿನ ಇಂದಿರಾನಗರದ 80 ಅಡಿ ರಸ್ತೆಯಲ್ಲಿ ನಡೆದ ಸಮಾರಂಭದಲ್ಲಿ ಹೋಟೆಲ್ ಉದ್ಘಾಟಿಸಿದ ಬಳಿಕ, ಮುಖ್ಯಮಂತ್ರಿ ಸಿದ್ದರಾಮಯ್ಯ ಖುದ್ದು ಹೋಟೆಲ್ ನಲ್ಲಿ ಕುಳಿತು ಬೆಣ್ಣೆ ಖಾಲಿ ದೋಸೆ ಮತ್ತು ಕಾಶಿ ಹಲ್ವಾವನ್ನು ಸವಿದರು. ದೋಸೆಯ ರುಚಿಗೆ ತಲೆದೂಗಿದ ಸಿಎಂ […]
CBI Recruitment 2026:ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 350 ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ಬ್ಯಾಂಕಿಂಗ್ ಕ್ಷೇತ್ರದಲ್ಲಿ ವೃತ್ತಿಜೀವನ ರೂಪಿಸಿಕೊಳ್ಳಲು ಬಯಸುವ ಅಭ್ಯರ್ಥಿಗಳಿಗೆ ಇಲ್ಲಿದೆ ಒಂದು ಸುವರ್ಣಾವಕಾಶ. ದೇಶದ ಪ್ರತಿಷ್ಠಿತ ಸಾರ್ವಜನಿಕ ವಲಯದ ಬ್ಯಾಂಕ್ಗಳಲ್ಲಿ ಒಂದಾದ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ (CBI) ಬೃಹತ್ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಿದೆ. ಯಾವೆಲ್ಲಾ ಹುದ್ದೆಗಳಿವೆ? ಈ ನೇಮಕಾತಿ ಅಧಿಸೂಚನೆಯ ಮೂಲಕ ಒಟ್ಟು 350 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಮುಖ್ಯವಾಗಿ ಕೆಳಗಿನ ಎರಡು ವಿಭಾಗಗಳಲ್ಲಿ ಅಧಿಕಾರಿಗಳ ನೇಮಕ ನಡೆಯಲಿದೆ: ಫಾರಿನ್ ಎಕ್ಸ್ಚೇಂಜ್ ಆಫೀಸರ್ (Foreign Exchange Officer) ಮಾರ್ಕೆಟಿಂಗ್ ಆಫೀಸರ್ (Marketing Officer) ಕರ್ತವ್ಯ ಸ್ಥಳ :ಹುದ್ದೆಗಳಿಗೆ […]
ರಾಜೇಶ್ ಖನ್ನಾ ಅವರಿಗೂ ಬಂಗಲೆ ಮಾರಿದ್ದ ಅಂದಿನ ಶ್ರೀಮಂತ ನಟ: ಭಾರತ ಭೂಷಣ್ ಬದುಕಿನ ಕರಾಳ ಸತ್ಯ
ಬಾಲಿವುಡ್ನಲ್ಲಿ ಸೂಪರ್ಸ್ಟಾರ್ಗಳ ಬಗ್ಗೆ ಮಾತನಾಡುವಾಗ ದಿಲೀಪ್ ಕುಮಾರ್, ರಾಜೇಶ್ ಖನ್ನಾ ಅಥವಾ ಅಮಿತಾಭ್ ಬಚ್ಚನ್ ಅವರ ಹೆಸರುಗಳು ನೆನಪಾಗುತ್ತವೆ. ಆದರೆ ಒಂದು ಕಾಲದಲ್ಲಿ ಇವರೆಲ್ಲರಿಗಿಂತಲೂ ಹೆಚ್ಚು ಸಂಭಾವನೆ ಪಡೆಯುತ್ತಿದ್ದ, ಭಾರತದ ಅತ್ಯಂತ ಶ್ರೀಮಂತ ನಟ ಎನಿಸಿಕೊಂಡಿದ್ದ ವ್ಯಕ್ತಿ ಭಾರತ ಭೂಷಣ್. 1952ರಲ್ಲಿ ಸ್ಟಾರ್ ಆಗಿ ಮಿಂಚಿದ ಇವರು ದಶಕಗಳ ಕಾಲ ಹಿಂದಿ ಚಿತ್ರರಂಗವನ್ನು ಆಳಿದ್ದರು. ದುರಂತವೆಂದರೆ, ಉತ್ತುಂಗದಲ್ಲಿದ್ದಾಗ ಕೋಟ್ಯಂತರ ಹಣ ಹೊಂದಿದ್ದ ಈ ನಟ, ಕೊನೆಯ ದಿನಗಳಲ್ಲಿ ಅತ್ಯಂತ ಬಡತನದಲ್ಲಿ ಜೀವನ ನಡೆಸಬೇಕಾಯಿತು. ಭಾರತ ಭೂಷಣ್ ಅವರ […]
ಬರೋಬ್ಬರಿ 38 ಕೆಜಿಗೆ ಇಳಿದಿತ್ತು ತೂಕ ಕಠಿಣ ಡಯಟ್ನಿಂದ ನರಕಯಾತನೆ ಅನುಭವಿಸಿದ್ದ ಉರ್ಫಿ ಜಾವೇದ್
ಸೋಷಿಯಲ್ ಮೀಡಿಯಾದಲ್ಲಿ ಸದಾ ವಿಭಿನ್ನ ಫ್ಯಾಷನ್ ಪ್ರಯೋಗಗಳ ಮೂಲಕ ಸುದ್ದಿಯಲ್ಲಿರುವ ನಟಿ ಉರ್ಫಿ ಜಾವೇದ್ ತಮ್ಮ ಬದುಕಿನ ಅತ್ಯಂತ ಕಷ್ಟದ ಹಂತವೊಂದರ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಹೊರಜಗತ್ತಿಗೆ ಗ್ಲಾಮರಸ್ ಆಗಿ ಕಾಣುವ ಸೆಲೆಬ್ರಿಟಿಗಳ ಜೀವನದ ಹಿಂದೆ ಎಂತಹ ನೋವುಗಳಿರಬಹುದು ಎಂಬುದಕ್ಕೆ ಉರ್ಫಿ ಹಂಚಿಕೊಂಡಿರುವ ವಿಷಯಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿವೆ. ಇತ್ತೀಚೆಗೆ ತಮ್ಮ ಇನ್ ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಳೆಯ ಫೋಟೋವೊಂದನ್ನು ಹಂಚಿಕೊಂಡಿರುವ ಉರ್ಫಿ ತಾವು ಅನುಭವಿಸಿದ ದೈಹಿಕ ಮತ್ತು ಮಾನಸಿಕ ಕಿರುಕುಳದ ಬಗ್ಗೆ ವಿವರಿಸಿದ್ದಾರೆ. ಒಂದು […]
ಸೌಂದರ್ಯದಲ್ಲಿ ಸಿನಿಮಾ ನಟಿಯರಿಗಿಂತ ಕಡಿಮೆಯಿಲ್ಲ ಸ್ಮೃತಿ ಪಡೆ: ವೈರಲ್ ಆದ ಆರ್ಸಿಬಿ ತಾರೆಯರ ಲೇಟೆಸ್ಟ್ ವೀಡಿಯೋ
ಮಹಿಳಾ ಪ್ರೀಮಿಯರ್ ಲೀಗ್ (WPL) 2026ರ ಕಳೆಗಟ್ಟುತ್ತಿರುವ ಬೆನ್ನಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಆಟಗಾರ್ತಿಯರು ಮೈದಾನದ ಹೊರಗೂ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ನಡೆದ ತಂಡದ ವಿಶೇಷ ಕಾರ್ಯಕ್ರಮವೊಂದರಲ್ಲಿ ನಾಯಕಿ ಸ್ಮೃತಿ ಮಂಧಾನ, ಇಂಗ್ಲೆಂಡ್ನ ವೇಗಿ ಲಾರೆನ್ ಬೆಲ್ ಸೇರಿದಂತೆ ಹಲವು ಆಟಗಾರ್ತಿಯರು ಗ್ಲಾಮರಸ್ ಲುಕ್ನಲ್ಲಿ ಕಾಣಿಸಿಕೊಂಡು ಎಲ್ಲರ ಗಮನ ಸೆಳೆದಿದ್ದಾರೆ. ವಿಶೇಷವಾಗಿ ಸ್ಮೃತಿ ಮಂಧಾನ ಅವರ ಸ್ಟೈಲಿಶ್ ಉಡುಗೆ ಮತ್ತು ಎಲಿಗಂಟ್ ಲುಕ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಅವರ ಸೌಂದರ್ಯಕ್ಕೆ ಮನಸೋತಿದ್ದಾರೆ. ತಂಡದ […]
ರಾಜ್ಯದಲ್ಲಿ ಬೈಕ್ ಟ್ಯಾಕ್ಸಿಗಳಿಗೆ ಹೈಕೋರ್ಟ್ ಗ್ರೀನ್ ಸಿಗ್ನಲ್ : ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದೇನು.?
ಬೆಂಗಳೂರು : ರಾಜ್ಯದಲ್ಲಿ ಬೈಕ್ ಟ್ಯಾಕ್ಸಿಗಳಿಗೆ ಹೈಕೋರ್ಟ್ ಗ್ರೀನ್ ಸಿಗ್ನಲ್ ನೀಡಿದ್ದು, ಈ ಕುರಿತು ಸಚಿವ ರಾಮಲಿಂಗಾ ರೆಡ್ಡಿ ಪ್ರತಿಕ್ರಿಯೆ ನೀಡಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ಹೈಕೋರ್ಟ್ ಏಕಸದಸ್ಯ ಪೀಠ ಬೈಕ್ ಟ್ಯಾಕ್ಸಿಗೆ ನಿಷೇಧ ಹೇರಿತ್ತು, ಆದರೆ ವಿಭಾಗೀಯ ಪೀಠ ನಿಷೇಧ ತೆರವುಗೊಳಿಸಿದೆ. ಆದೇಶ ನೋಡಿಕೊಂಡು ಮುಂದಿನ ನಿರ್ಧಾರದ ಬಗ್ಗೆ ಚರ್ಚೆ ಮಾಡುತ್ತೇವೆ ಎಂದರು.ಈ ಕುರಿತು ರಿಟ್ ಅರ್ಜಿ ಸಲ್ಲಿಕೆಗೂ ಅವಕಾಶ ಇದೆ, ಕಾನೂನು ಸಲಹೆ ಪಡೆದುಕೊಂಡು ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಸಚಿವ […]
ಕಲಬುರಗಿ: ಅತ್ತೆ ಮಗನನ್ನು ಪ್ರೀತಿಸಿ ಮದುವೆಯಾಗಿದ್ದ ಯುವತಿ ಮದುವೆಯಾದ ಎರಡೇ ತಿಂಗಳಿಗೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ. ಕಲಬುರಗಿ ನಗರದ ಸಿದ್ದೇಸ್ವರ ಕಾಲೋನಿಯಲ್ಲಿ ನವವಿವಾಹಿತೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಅನಸೂಯ ಆತ್ಮಹತ್ಯೆಗೆ ಶರಣಾಗಿರುವ ನವವಿವಾಹಿತೆ. ಅನಸೂಯ ಅತ್ತೆ ಮಗನನ್ನು ಪ್ರೀತಿಸಿ ವಿವಾಹವಾಗಿದ್ದರು. ಎರಡು ತಿಂಗಳ ಹಿಂದಷ್ಟೇ ಸಂಬಂಧಿಕರ ಸಮ್ಮುದಲ್ಲಿ ಮದುವೆಯಾಗಿತ್ತು. ಮದುವೆಯಾದ ಕೆಲ ದಿನಗಳಲ್ಲೇ ನವವಿವಾಹಿತೆಯ ಕನಸು ಕಮರಿಹೋಗಿದೆ. ಹಳ್ಳಿಯಲ್ಲಿ ವಾಸವಾಗುತ್ತಿರುವುದಕ್ಕೆ ಅನಸೂಯ ಬೇಸರಗೊಂಡಿದ್ದಳು. ಅನುಸೂಯ ಸಹೋದರಿಯರು ಬೆಂಗಳೂರು ಹಾಗೂ ಮುಂಬೈನಲ್ಲಿ ವಾಸವಾಗಿದ್ದರು. ತಾನು ಮದುವೆ […]
ಬೆಂಗಳೂರು: ದೇಶದ ಚಿನ್ನದ ಮಾರುಕಟ್ಟೆಯಲ್ಲಿ ಗುರುವಾರವಷ್ಟೇ ಕಂಡುಬಂದಿದ್ದ ಅಲ್ಪ ಇಳಿಕೆಯ ಸಂಭ್ರಮ ಗ್ರಾಹಕರಲ್ಲಿ ಹೆಚ್ಚು ದಿನ ಉಳಿಯಲಿಲ್ಲ. ಶುಕ್ರವಾರ (ಜನವರಿ 23) ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಭಾರೀ ಜಿಗಿತ ಕಂಡುಬಂದಿದ್ದು, ಹೂಡಿಕೆದಾರರನ್ನು ಅಚ್ಚರಿಗೊಳಿಸಿದೆ. ಕಳೆದ ಕೆಲವು ದಿನಗಳಿಂದ ದಾಖಲೆ ಮಟ್ಟದಲ್ಲಿ ಏರುತ್ತಿದ್ದ ಹಳದಿ ಲೋಹದ ಬೆಲೆಗೆ ಗುರುವಾರ ತಾತ್ಕಾಲಿಕ ಬ್ರೇಕ್ ಬಿದ್ದಿತ್ತು. ಆದರೆ ಇಂದು ಮತ್ತೆ ಯು-ಟರ್ನ್ ಹೊಡೆದಿರುವ ಬೆಲೆಗಳು, ಕೇವಲ ಒಂದೇ ದಿನದಲ್ಲಿ 10 ಗ್ರಾಂ ಚಿನ್ನಕ್ಕೆ 5,400 ರೂಪಾಯಿ ಹಾಗೂ ಬೆಳ್ಳಿ ಕೆಜಿಗೆ […]
ALERT : ಸೋಶಿಯಲ್ ಮೀಡಿಯಾದಲ್ಲಿ ಮಹಿಳೆಯ ಸ್ನೇಹ ಬೆಳೆಸಿ 2.14 ಕೋಟಿ ರೂ. ಕಳೆದುಕೊಂಡ ಟೆಕ್ಕಿ.!
ಇತ್ತೀಚೆಗೆ ಸೈಬರ್ ಅಪರಾಧಗಳು ದಿನೇ ದಿನೇ ಹೆಚ್ಚುತ್ತಿವೆ. ಉನ್ನತ ಶಿಕ್ಷಣ ಪಡೆದವರು ಮತ್ತು ಕೆಲಸ ಮಾಡುತ್ತಿರುವವರು ಸಹ ಸೈಬರ್ ವಂಚನೆಗಳಿಗೆ ಬಲಿಯಾಗುತ್ತಿದ್ದಾರೆ. ಸೈಬರ್ ಅಪರಾಧಿಗಳು ತಮ್ಮ ಮೋಸದ ಮಾತುಗಳಿಂದ ಕೋಟ್ಯಂತರ ರೂಪಾಯಿಗಳನ್ನು ಸಂಪಾದಿಸುತ್ತಿದ್ದಾರೆ. ಜನರನ್ನು ಲೂಟಿ ಮಾಡುತ್ತಿದ್ದಾರೆ. OTP ವಂಚನೆಗಳು, ಡಿಜಿಟಲ್ ಬಂಧನಗಳು, ವ್ಯಾಪಾರ, ಹೂಡಿಕೆ ವಂಚನೆಗಳಂತಹ ವಿವಿಧ ರೀತಿಯಲ್ಲಿ ಜನರ ಹಣವನ್ನು ಗಳಿಸುತ್ತಿದ್ದಾರೆ.ಇತ್ತೀಚೆಗೆ, ಹೈದರಾಬಾದ್ನಲ್ಲಿ ಮತ್ತೊಂದು ಸೈಬರ್ ಅಪರಾಧ ಬೆಳಕಿಗೆ ಬಂದಿದೆ. ಸೈಬರ್ ಅಪರಾಧಿಗಳು ಮಹಿಳೆಯ ಪ್ರೊಫೈಲ್ ಚಿತ್ರವನ್ನು ಬಳಸಿಕೊಂಡು ಸಾಫ್ಟ್ವೇರ್ ಎಂಜಿನಿಯರ್ ಒಬ್ಬರಿಂದ 2.14 […]
ದುಬೈನಲ್ಲಿ ಚೋಲೆ ಭಟೂರೆ ಸವಿದ ವಿರಾಟ್ ಕೊಹ್ಲಿ: ಪತ್ನಿ ಅನುಷ್ಕಾ ನೀಡಿದ ಸರ್ಪ್ರೈಸ್ಗೆ ಕಿಂಗ್ ಫಿದಾ
ಟೀಂ ಇಂಡಿಯಾದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಸದಾ ತಮ್ಮ ಕೆಮಿಸ್ಟ್ರಿ ಮೂಲಕ ಅಭಿಮಾನಿಗಳ ಮನಗೆಲ್ಲುತ್ತಾರೆ. ಇದೀಗ ಈ ಜೋಡಿ ಮತ್ತೊಮ್ಮೆ ಸುದ್ದಿಯಲ್ಲಿದ್ದು, ದುಬೈ ಪ್ರವಾಸೋದ್ಯಮದ ಹೊಸ ಜಾಹೀರಾತಿನಲ್ಲಿ ಒಂದಾಗಿ ಕಾಣಿಸಿಕೊಂಡಿದ್ದಾರೆ. ಈ ವೀಡಿಯೋದಲ್ಲಿ ವಿರಾಟ್ ಮತ್ತು ಅನುಷ್ಕಾ ನಡುವಿನ ಪ್ರೀತಿ ಮತ್ತು ತುಂಟಾಟದ ಸ್ಪರ್ಧೆ ನೋಡುಗರ ಗಮನ ಸೆಳೆಯುತ್ತಿದೆ. ಜಾಹೀರಾತಿನ ಆರಂಭದಲ್ಲಿ ದುಬೈನ ಸುಂದರ ದೃಶ್ಯಗಳನ್ನು ಸವಿಯುವ ಈ ಜೋಡಿ, ಒಬ್ಬರಿಗೊಬ್ಬರು ಅಚ್ಚರಿ ಮೂಡಿಸುವ ಸವಾಲು ಹಾಕಿಕೊಳ್ಳುತ್ತಾರೆ. ಅನುಷ್ಕಾ […]

26 C