BREAKING: ಬೆಂಗಳೂರಲ್ಲಿ ಬೆಚ್ಚಿ ಬೀಳಿಸುವ ಘಟನೆ: ಹೆತ್ತ ತಂದೆ –ತಾಯಿಯನ್ನೇ ಬರ್ಬರವಾಗಿ ಹತ್ಯೆಗೈದ ಪುತ್ರ
ಬೆಂಗಳೂರು: ಬೆಂಗಳೂರಿನಲ್ಲಿ ಮಗನಿಂದಲೇ ಹೆತ್ತ ತಂದೆ, ತಾಯಿಯ ಬರ್ಬರ ಹತ್ಯೆ ನಡೆದಿದೆ. ವಿಜ್ಞಾನ ನಗರದ ಆದರ್ಶ ವಿಸ್ತಾ ಅಪಾರ್ಟ್ಮೆಂಟ್ ನಲ್ಲಿ ಘಟನೆ ನಡೆದಿದೆ. ನವೀನ್ ಚಂದ್ರ ಭಟ್(60), ಡಾ. ಶ್ಯಾಮಲಾ ಭಟ್(55) ಕೊಲೆಯಾದವರು ಎಂದು ಹೇಳಲಾಗಿದೆ. ಕೌಟುಂಬಿಕ ವಿಚಾರಕ್ಕೆ ಪುತ್ರ ರೋಹನ್ ಭಟ್(33) ಕೃತ್ಯವೆಸಗಿದ ಆರೋಪ ಕೇಳಿ ಬಂದಿದೆ. ಕೊಲೆಯಾದ ನವೀನ್ ಚಂದ್ರ ಭಟ್ ನೌಕಾಪಡೆಯ ನಿವೃತ್ತ ಕ್ಯಾಪ್ಟನ್ ಆಗಿದ್ದಾರೆ. ಶ್ಯಾಮಲಾ ಭಟ್ ದಂತ ವೈದ್ಯೆಯಾಗಿದ್ದಾರೆ. ಬೆಳಗ್ಗೆ 7.30ರ ಸುಮಾರಿಗೆ ಹೆತ್ತ ತಂದೆ ಮತ್ತು ತಾಯಿಗೆ ಪುತ್ರ […]
ಭವಿಷ್ಯ ನಿಧಿ ವಂತಿಕೆದಾರರಿಗೆ ಮುಖ್ಯ ಮಾಹಿತಿ: ಬಡ್ಡಿ ದರ ಶೇ. 7.1ಕ್ಕೆ ನಿಗದಿ
ಕರ್ನಾಟಕ ಸಾಮಾನ್ಯ ಭವಿಷ್ಯ ನಿಧಿ ವಂತಿಕೆದಾರರ ಸಾಮಾನ್ಯ ಭವಿಷ್ಯ ನಿಧಿ ಖಾತೆಯಲ್ಲಿ ಜಮೆಯಾಗಿರುವ ಶಿಲ್ಕಿನ ಮೇಲಿನ ಬಡ್ಡಿ ದರವನ್ನು ದಿ 01/01/2026 ರಿಂದ 31/03/2026 ರವರೆಗಿನ ಅವಧಿಗೆ ವಾರ್ಷಿಕ ಶೇ.7.1 ಕ್ಕೆ ನಿಗದಿಪಡಿಸಲಾಗಿದೆ ಎಂದು ಆರ್ಥಿಕ ಇಲಾಖೆ ಅಧೀನ ಕಾರ್ಯದರ್ಶಿ ತಿಳಿಸಿದ್ದಾರೆ. ಕರ್ನಾಟಕ ಸಾಮಾನ್ಯ ಭವಿಷ್ಯ ನಿಧಿ (GPF) ಎಂಬುದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ ಮಾತ್ರ ಲಭ್ಯವಿರುವ ಕಡ್ಡಾಯ ಉಳಿತಾಯ ಯೋಜನೆಯಾಗಿದೆ. ಜಿಪಿಎಫ್ ಮೇಲಿನ ಬಡ್ಡಿ ದರವು ವಾರ್ಷಿಕ ಶೇ. 7.1ರಷ್ಟಿದೆ. ನೌಕರರು ತಮ್ಮ ಮೂಲ […]
ಕಾಡಿನಲ್ಲಿರುವ ಆನೆಗಳಿಗೆ ಸರ್ಕಾರದಿಂದ ಆಹಾರ ವ್ಯವಸ್ಥೆ: ಒಡಿಶಾ ಅರಣ್ಯ ಸಚಿವ ಮಾಹಿತಿ
ಭುವನೇಶ್ವರ: ಒಡಿಶಾ ಸರ್ಕಾರವು ಕಾಡಿನಲ್ಲಿರುವ ಆನೆಗಳಿಗೆ ಆಹಾರ ವ್ಯವಸ್ಥೆಯನ್ನು ಮಾಡಲಿದೆ. ಈ ಬಗ್ಗೆ ಮುಖ್ಯಮಂತ್ರಿಗಳ ಸೂಚನೆಗಳನ್ನು ಅನುಸರಿಸಿ ಅರಣ್ಯ ಇಲಾಖೆ ಈ ಕೆಲಸವನ್ನು ಪ್ರಾರಂಭಿಸಿದೆ. ಒಡಿಶಾ ಅರಣ್ಯ ಮತ್ತು ಪರಿಸರ ಸಚಿವ ಗಣೇಶ್ ರಾಮ್ ಸಿಂಗ್ ಖುಂಟಿಯಾ ಈ ಬಗ್ಗೆ ಮಾಹಿತಿ ನೀಡಿ, ಒಡಿಶಾ ರಾಜ್ಯ ಸರ್ಕಾರವು ಕಾಡಿನಲ್ಲಿರುವ ಆನೆಗಳಿಗೆ ಆಹಾರ ವ್ಯವಸ್ಥೆಯನ್ನು ಮಾಡಲಿದೆ. ಆನೆಗಳು ತಿನ್ನಲು ಕಾಡಿನಲ್ಲಿ ಬಿದಿರನ್ನು ನೆಡಲಾಗಿದೆ. ಇದರೊಂದಿಗೆ, ಆನೆಗಳು ತಿನ್ನಲು ಕಾಡಿನಲ್ಲಿ ವಿವಿಧ ಗಿಡ, ಮರಗಳನ್ನು ನೆಡಲಾಗುವುದು. ಮುಖ್ಯಮಂತ್ರಿಗಳು ಇದಕ್ಕಾಗಿ ಸೂಚನೆಗಳನ್ನು […]
BREAKING: ರಾಜ್ಯದಲ್ಲಿ ಮತ್ತೊಂದು ಭೀಕರ ಅಪಘಾತ: ಟಿಪ್ಪರ್ ಹರಿದು ಇಬ್ಬರು ಸ್ಥಳದಲ್ಲೇ ಸಾವು
ಬೆಂಗಳೂರು: ಟಿಪ್ಪರ್ ಡಿಕ್ಕಿಯಾಗಿ ಬೈಕ್ ನಲ್ಲಿ ತೆರಳುತ್ತಿದ್ದ ಮಹಿಳೆ ಮತ್ತು ಪುರುಷ ಸಾವನ್ನಪ್ಪಿದ್ದಾರೆ. ಬನ್ನೇರುಘಟ್ಟ ಮುಖ್ಯ ರಸ್ತೆಯ ಹಾರಗದ್ದೆ ಗ್ರಾಮದ ಬಳಿ ಅಪಘಾತ ಸಂಭವಿಸಿದೆ. ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಹಾರಗದ್ದೆ ಗ್ರಾಮದ ಬಳಿ ಅಪಘಾತ ಸಂಭವಿಸಿದೆ. ಸೀತನಾಯಕನಹಳ್ಳಿಯಿಂದ ಜಿಗಣಿಯತ್ತ ಬೈಕ್ ಸವಾರರು ತೆರಳುತ್ತಿದ್ದರು. ಈ ವೇಳೆ ಹಿಂದಿನಿಂದ ಬರುತ್ತಿದ್ದ ಟಿಪ್ಪರ್ ಬೈಕಿಗೆ ಡಿಕ್ಕಿ ಹೊಡೆದಿದೆ. ಬೈಕ್ ನಿಂದ ಕೆಳಗೆ ಬಿದ್ದವರ ಮೇಲೆ ಟಿಪ್ಪರ್ ಹರಿದು ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬೈಕ್ ನಲ್ಲಿ ತೆರಳುತ್ತಿದ್ದ ಮಹಿಳೆ […]
BIG NEWS: ಜಾಗತಿಕ ಭ್ರಷ್ಟಾಚಾರ ಸೂಚ್ಯಂಕದಲ್ಲಿ 5 ಸ್ಥಾನ ಏರಿಕೆಯಾಗಿ 91 ನೇ ಸ್ಥಾನಕ್ಕೆ ತಲುಪಿದ ಭಾರತ
ನವದೆಹಲಿ: 2025 ರ ಜಾಗತಿಕ ಭ್ರಷ್ಟಾಚಾರ ಸೂಚ್ಯಂಕದಲ್ಲಿ ಭಾರತ ಐದು ಸ್ಥಾನ ಏರಿಕೆಯಾಗಿ 91 ನೇ ಸ್ಥಾನಕ್ಕೆ ತಲುಪಿದೆ. ಜಾಗತಿಕ ಎನ್ಜಿಒ ಟ್ರಾನ್ಸ್ಪರೆನ್ಸಿ ಇಂಟರ್ನ್ಯಾಷನಲ್ನ ಜಾಗತಿಕ ಭ್ರಷ್ಟಾಚಾರ ಗ್ರಹಿಕೆ ಸೂಚ್ಯಂಕ(ಸಿಪಿಐ) 2025 ಮಂಗಳವಾರ ಬಿಡುಗಡೆಯಾಯಿತು. ಪಟ್ಟಿಯಲ್ಲಿರುವ 182 ದೇಶಗಳು ಮತ್ತು ಪ್ರಾಂತ್ಯಗಳಲ್ಲಿ ಭಾರತ ಐದು ಸ್ಥಾನ ಏರಿಕೆಯಾಗಿ 91 ನೇ ಸ್ಥಾನಕ್ಕೆ ತಲುಪಿದೆ ಎಂದು ಸಿಪಿಐ ತೋರಿಸುತ್ತದೆ. ಪಟ್ಟಿಯ ಪ್ರಕಾರ, ಭಾರತದ ಅಂಕಗಳು ಹಿಂದಿನ ವರ್ಷಕ್ಕಿಂತ ಒಂದು ಪಾಯಿಂಟ್ ಹೆಚ್ಚಾಗಿದೆ. ಏತನ್ಮಧ್ಯೆ, ದೇಶದ ಓಟವು 96 ನೇ […]
ಕ್ಷುಲ್ಲಕ ವಿಚಾರಕ್ಕೆ ಜಗಳ: ಇಬ್ಬರು ವಿದ್ಯಾರ್ಥಿಗಳಿಗೆ ಚೂರಿ ಇರಿತ
ಮಂಗಳೂರು: ಕ್ಷುಲ್ಲಕ ವಿಚಾರಕ್ಕೆ ಜಗಳವಾಗಿ ಇಬ್ಬರು ವಿದ್ಯಾರ್ಥಿಗಳಿಗೆ ಚೂರಿ ಇರಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ವಿಟ್ಲ ಪಟ್ಟಣದ ಐಟಿಐನಲ್ಲಿ ನಡೆದಿದೆ. ಪುತ್ತೂರು ಬನ್ನೂರು ನಿವಾಸಿ ಮಹಮ್ಮದ್ ರಯಾನ್(18) ಮತ್ತು ಮಂಜೇಶ್ವರ ದೈಗೋಳಿ ನಿವಾಸಿ ಯಜ್ಞೇಶ್ ಗಾಯಗೊಂಡಿದ್ದು, ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಪ್ರಥಮ ವರ್ಷದ ಎಲೆಕ್ಟ್ರಿಷಿಯನ್ ಕೋರ್ಸ್ ಕಲಿಯುತ್ತಿರುವ ರಯಾನ್ ಮತ್ತು ವಿಟ್ಲ ನಿವಾಸಿ ಹೇಮಂತ್ ನಡುವೆ ಕ್ಷುಲ್ಲಕ ಮಾತಿನ ಚಕಮಕಿ ನಡೆದು ಜಗಳವಾಗಿದೆ. ನಂತರ ಹೇಮಂತ್ ಚೂರಿ ತಂದು ರಯಾನ್ […]
ಗ್ರಾಹಕರಿಗೆ ಬಿಗ್ ಶಾಕ್: ಕೆಜಿಗೆ 500 ರೂ. ದಾಟಿದ ಒಣ ಮೆಣಸಿನಕಾಯಿ ದರ
ಬೆಳಗಾವಿ: ಮಾರುಕಟ್ಟೆಯಲ್ಲಿ ಒಣ ಮೆಣಸಿನಕಾಯಿ ದರ 500 ರೂ. ಗಡಿ ದಾಟಿದ್ದು, ಉತ್ತಮ ತಳಿಯ ಮೆಣಸಿನಕಾಯಿಗೆ 700 ರೂ.ವರೆಗೂ ದರ ಇದೆ. ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ತಟ್ಟಿದೆ. ಮಾರುಕಟ್ಟೆಗೆ ಮಾರಾಟಕ್ಕೆ ನಿರೀಕ್ಷಿತ ಪ್ರಮಾಣದಲ್ಲಿ ಮೆಣಸಿನಕಾಯಿ ಮಾರಾಟಕ್ಕೆ ಬಾರದ ಹಿನ್ನೆಲೆಯಲ್ಲಿ ಮೆಣಸಿನಕಾಯಿ ದರ ಏರಿಕೆಯಾಗಿದೆ. ಕಳೆದ ವರ್ಷ ಕೆಜಿಗೆ 200 ರಿಂದ 300 ರೂಪಾಯಿವರೆಗೆ ಮಾರಾಟವಾಗುತ್ತಿದ್ದ ಒಣ ಮೆಣಸಿನಕಾಯಿ ಈಗ 500 ರೂ. ಗಡಿ ದಾಟಿದ್ದು, ಗ್ರಾಹಕರಿಗೆ ಹೊರೆಯಾಗಿ ಪರಿಣಮಿಸಿದೆ. ನಂಬರ್ ಒನ್ ಕ್ವಾಲಿಟಿಯ ಒಣ ಮೆಣಸಿನಕಾಯಿ […]
ಬಹುತೇಕ ಕರಾವಳಿ ಕಲಾವಿದರ ‘ಮರಳಿ ಮನಸಾಗಿದೆ’ ಫೆ 12 ಬಿಡುಗಡೆ
ಶಿವಮೊಗ್ಗ: ಬಹುತೇಕ ಕರಾವಳಿಯ ಕಲಾವಿದರನ್ನೊಳಗೊಂಡ ಹಾಗೂ ಶಿವಮೊಗ್ಗದ ಇಂಜಿನಿಯರ್ ಗಳು ಸೇರಿ ನಿರ್ಮಿಸಿರುವ ಚಿತ್ರ `ಮರಳಿ ಮನಸಾಗಿದೆ’ ಫೆ.12ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ಚಿತ್ರದ ಸಹ ನಿರ್ಮಾಪಕ ಹರೀಶ್ ಎಸ್.ಎಂ. ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿತ್ರದ ಚಿತ್ರೀಕರಣವನ್ನು ಉಡುಪಿ, ಮಂಗಳೂರು ಹಾಗೂ ಚಿಕ್ಕಮಗಳೂರಿನ ರಮಣೀಯ ಸ್ಥಳಗಳಲ್ಲಿ ಚಿತ್ರೀಕರಿಸಲಾಗಿದೆ. ವಿಶೇಷವಾಗಿ ಕರಾವಳಿಯ ಪ್ರಕೃತಿ ಸೊಬಗಿನ ಸುಂದರ ತಾಣಗಳನ್ನು ಅತ್ಯಂತ ನವೀರಾಗಿ ಸೆರೆ ಹಿಡಿಯಲಾಗಿದೆ ಎಂದರು. ಚಿತ್ರದ ನಾಯಕನಟರಾಗಿ ಪುತ್ತೂರಿನ ಅರ್ಜುನ್, ವೇದಾಂತ್, ನಾಯಕಿಯರಾಗಿ ನಿರೀಕ್ಷಾ ಶೆಟ್ಟಿ ಹಾಗೂ […]
ಮಗುವಿಗೆ ಜನ್ಮ ನೀಡಿದ ಬಾಣಂತಿ ಆಸ್ಪತ್ರೆಯಲ್ಲಿ ಸಾವು
ಉಡುಪಿ: ಮಗುವಿಗೆ ಜನ್ಮ ನೀಡಿದ ಬಾಣಂತಿ ಹೃದಯ ಸಂಬಂಧಿ ಕಾಯಿಲೆಯಿಂದ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಕೊಲ್ಲೂರು ಕೆರಾಡಿಯ 28 ವರ್ಷದ ಬಾಣಂತಿ ಜನವರಿ 27ರಂದು ಕುಂದಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಅವಧಿಪೂರ್ವ ಎಂಟು ತಿಂಗಳಿಗೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಫೆಬ್ರವರಿ 5ರಂದು ಅವರಿಗೆ ಹೃದಯ ಸಂಬಂಧಿ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ವೈದ್ಯರ ಸೂಚನೆಯಂತೆ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಫೆಬ್ರವರಿ 6ರಂದು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಗಂಭೀರ ಸ್ಥಿತಿಯಲ್ಲಿದ್ದ ಬಾಣಂತಿ ಫೆಬ್ರವರಿ 9ರಂದು ಚಿಕಿತ್ಸೆ […]
T20 World Cup 2026: ಐರ್ಲೆಂಡ್ ವಿರುದ್ಧ ಭರ್ಜರಿ ಗೆಲುವು ದಾಖಲಿಸಿ ಶುಭಾರಂಭ ಮಾಡಿದ ಆಸ್ಟ್ರೇಲಿಯಾ
ಕೊಲಂಬೊದ ಆರ್ ಪ್ರೇಮದಾಸ ಕ್ರಿಕೆಟ್ ಕ್ರೀಡಾಂಗಣದಲ್ಲಿ ಇಂದು ( ಫೆಬ್ರವರಿ 11 ) ನಡೆದ ಐಸಿಸಿ ಪುರುಷರ ಟಿ ಟ್ವೆಂಟಿ ವಿಶ್ವಕಪ್ 2026ರ ಗ್ರೂಪ್ ಹಂತದ 14ನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ಐರ್ಲೆಂಡ್ ವಿರುದ್ಧ 67 ರನ್ಗಳ ಗೆಲುವನ್ನು ಕಂಡು ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 182 ರನ್ ಕಲೆಹಾಕಿ ಐರ್ಲೆಂಡ್ಗೆ 183 ರನ್ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲವಾದ […]
ಕಾಂಗ್ರೆಸ್ ಕಾರ್ಯಕರ್ತರಿಂದ ವಿರೋಧ ಹಿನ್ನೆಲೆ ಬಿಜೆಪಿ ಮುಖಂಡನಿಗೆ ನೀಡಿದ್ದ ರಾಜ್ಯ ಸಚಿವ ಸ್ಥಾನಮಾನ ಹಿಂಪಡೆದ ಸರ್ಕಾರ
ಬೆಂಗಳೂರು: ಭಾರೀ ವಿರೋಧ ವ್ಯಕ್ತವಾದ ಹಿನ್ನೆಲೆ ಕರ್ನಾಟಕ ರಾಜ್ಯ ಸಹಕಾರಿ ತೋಟಗಾರಿಕೆ ಮಹಾಮಂಡಳ ಅಧ್ಯಕ್ಷ ಬಿ.ಡಿ. ಭೂಕಾಂತ್ ಗೆ ನೀಡಿದ್ದ ರಾಜ್ಯ ಸಚಿವ ಸ್ಥಾನಮಾನವನ್ನು ಸರ್ಕಾರ ಹಿಂಪಡೆದುಕೊಂಡಿದೆ. ಅವರಿಗೆ ರಾಜ್ಯ ಸಚಿವ ಸ್ಥಾನ ನೀಡಿರುವುದಕ್ಕೆ ಕಾಂಗ್ರೆಸ್ ವಲಯದಲ್ಲಿ ಅಸಮಾಧಾನ ವ್ಯಕ್ತವಾಗಿತ್ತು. ಬಿಜೆಪಿ ಮುಖಂಡ ಬಿ.ಡಿ. ಭೂಕಾಂತ್ ಅವರಿಗೆ ರಾಜ್ಯ ಸಚಿವ ಸ್ಥಾನಮಾನ ನೀಡಿದ್ದಕ್ಕೆ ಕಾಂಗ್ರೆಸ್ ಕಾರ್ಯಕರ್ತರಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸರ್ಕಾರ ಸಚಿವ ಸ್ಥಾನ ಮಾನ ಹಿಂಪಡೆದು ಆದೇಶ ಹೊರಡಿಸಿದೆ. ನಿಗಮ ಮಂಡಳಿ ಮತ್ತು ಪ್ರಾಧಿಕಾರದ ಅಧ್ಯಕ್ಷರಾಗಿರುವ […]
ಬೆಳ್ಳುಳ್ಳಿ ಸುಲಿಯುವುದು ಇನ್ಮುಂದೆ ತಲೆನೋವಲ್ಲ: ಸ್ಮಾರ್ಟ್ ಮಹಿಳೆಯರಿಗಾಗಿ ಇಲ್ಲಿವೆ 5 ಸೂಪರ್ ಕಿಚನ್ ಹ್ಯಾಕ್ಸ್
ಇಂದಿನ ಧಾವಂತದ ಬದುಕಿನಲ್ಲಿ ಅಡುಗೆ ಮನೆ ಕೆಲಸಗಳನ್ನು ಸುಲಭಗೊಳಿಸಲು ಹತ್ತಾರು ಗ್ಯಾಜೆಟ್ಗಳು ಬಂದಿವೆ. ಕಸ ಗುಡಿಸಲು ವ್ಯಾಕ್ಯೂಮ್ ಕ್ಲೀನರ್, ಪಾತ್ರೆ ತೊಳೆಯಲು ಡಿಶ್ ವಾಷರ್ ಹೀಗೆ ಯಂತ್ರಗಳು ಸಮಯ ಉಳಿಸುತ್ತಿವೆ. ಆದರೆ, ಅಡುಗೆ ಮನೆಯಲ್ಲಿ ಎಷ್ಟೇ ಗ್ಯಾಜೆಟ್ ಇದ್ದರೂ ಬೆಳ್ಳುಳ್ಳಿ ಸುಲಿಯುವುದು ಮಾತ್ರ ಬಹುತೇಕರಿಗೆ ಇಂದಿಗೂ ದೊಡ್ಡ ತಲೆನೋವಿನ ಕೆಲಸ ಬೆಳ್ಳುಳ್ಳಿ ಸಿಪ್ಪೆ ತೆಗೆಯುವಾಗ ಉಗುರುಗಳ ಸಂಧಿಯಲ್ಲಿ ನೋವು, ಉರಿ ಕಾಣಿಸಿಕೊಳ್ಳುವುದು ಸಾಮಾನ್ಯ. ಇದೇ ಕಾರಣಕ್ಕೆ ಅನೇಕರು ಬೆಳ್ಳುಳ್ಳಿ ಬಳಸಲು ಹಿಂದೇಟು ಹಾಕುತ್ತಾರೆ. ಆದರೆ ಇನ್ಮುಂದೆ ಚಿಂತೆ […]
ನಮ್ಮ ಮೆಟ್ರೋ ಹಸಿರು, ನೇರಳೆ ಮಾರ್ಗದ ಪ್ರಯಾಣಿಕರಿಗೆ ಸಿಹಿಸುದ್ದಿ
ನಮ್ಮ ಮೆಟ್ರೋ ಪ್ರಯಾಣಿಕರ ಅನುಕೂಲಕ್ಕಾಗಿ ಬಿಎಂಟಿಸಿ ಮತ್ತು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್ಸಿಎಲ್) ಹಸಿರು ಮತ್ತು ನೇರಳೆ ಮಾರ್ಗಗಳಲ್ಲಿ ಹೊಸ ಬಸ್ ನಿಲ್ದಾಣಗಳನ್ನು ಆರಂಭಿಸಿವೆ. ಕೆಲವು ಪ್ರದೇಶಗಳಲ್ಲಿ ಬಿಎಂಟಿಸಿ ಬಸ್ ನಿಲ್ದಾಣಗಳು ಮೆಟ್ರೋ ನಿಲ್ದಾಣಗಳಿಂದ ದೂರದಲ್ಲಿದ್ದು, ಮೆಟ್ರೋ ರೈಲು ಪ್ರಯಾಣಿಕರಿಗೆ ಕಷ್ಟವಾಗುತ್ತಿತ್ತು. ಮೆಟ್ರೋ ಪ್ರಯಾಣಿಕರ ಕೊನೆಯ ಹಂತದ ಸಂಪರ್ಕ (ಲಾಸ್ಟ್ ಮೈಲ್ ಕನೆಕ್ಟಿವಿಟಿ) ಸುಧಾರಿಸುವ ಉದ್ದೇಶದಿಂದ ಬಿಎಂಆರ್ಸಿಎಲ್, ಬಿಎಂಟಿಸಿ ಹಾಗೂ ಬೆಂಗಳೂರು ಸಂಚಾರ ಪೊಲೀಸರೊಂದಿಗೆ ಜಂಟಿಯಾದಿ ಸ್ಥಳ ಪರಿಶೀಲನೆ ನಡೆಸಲಾಗಿತ್ತು. ಈಗ ಕೆಲವು ಮೆಟ್ರೋ […]
ಜಗತ್ತಿನ ಅತಿ ಭ್ರಷ್ಟ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತಕ್ಕೆ 91ನೇ ಸ್ಥಾನ: ಚೀನಾ ಮತ್ತು ಅಮೆರಿಕದ ಪರಿಸ್ಥಿತಿ ಏನು?
ಜಗತ್ತಿನಾದ್ಯಂತ ಯಾವ ದೇಶ ಎಷ್ಟು ಸ್ವಚ್ಛವಾಗಿದೆ ಮತ್ತು ಎಲ್ಲೆಲ್ಲಿ ಭ್ರಷ್ಟಾಚಾರದ ಜಾಲ ಎಷ್ಟಿದೆ ಎಂಬ ಕುತೂಹಲಕ್ಕೆ ಇದೀಗ ಉತ್ತರ ಸಿಕ್ಕಿದೆ. ಬರ್ಲಿನ್ ಮೂಲದ ಟ್ರಾನ್ಸ್ಪರೆನ್ಸಿ ಇಂಟರ್ನ್ಯಾಷನಲ್ ಸಂಸ್ಥೆಯು 2025ನೇ ಸಾಲಿನ ಭ್ರಷ್ಟಾಚಾರ ಪರಿಕಲ್ಪನಾ ಸೂಚ್ಯಂಕ (CPI) ಬಿಡುಗಡೆ ಮಾಡಿದ್ದು ಭಾರತವು ಈ ಬಾರಿ ಭ್ರಷ್ಟಾಚಾರ ನಿಗ್ರಹದಲ್ಲಿ ತುಸು ಯಶಸ್ಸು ಕಂಡಿದೆ. ಭಾರತದ ಪ್ರಗತಿ ಹೇಗಿದೆ? ಕಳೆದ ಕೆಲವು ವರ್ಷಗಳಿಂದ ಭಾರತವು ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ ಸಣ್ಣ ಹೆಜ್ಜೆಗಳನ್ನು ಇಡುತ್ತಾ ಸುಧಾರಣೆ ಕಾಣುತ್ತಿದೆ. ಶ್ರೇಯಾಂಕ (Ranking): 2024ರಲ್ಲಿ 96ನೇ […]
ಮಲಗುವ ಮುನ್ನ ಈ ತಪ್ಪು ಮಾಡಬೇಡಿ: ಹೊಟ್ಟೆಯ ಬೊಜ್ಜು ಇಳಿಸಲು ಇಲ್ಲಿದೆ 20 ವರ್ಷಗಳ ಅನುಭವದ ರಹಸ್ಯ!
ಹೊಟ್ಟೆಯ ಸುತ್ತ ಶೇಖರಣೆಯಾಗುವ ಮತ್ತು ಆಂತರಿಕ ಅಂಗಗಳಿಗೆ ಹಾನಿ ಮಾಡುವ ‘ವಿಸೆರಲ್ ಫ್ಯಾಟ್’ (Visceral Fat) ಕರಗಿಸಲು 20 ವರ್ಷಗಳ ಅನುಭವವಿರುವ ಫಿಟ್ನೆಸ್ ಕೋಚ್ ಡ್ಯಾನ್ ಗೋ ಅವರು ಅತ್ಯಂತ ಸುಲಭವಾದ ಮಾರ್ಗವೊಂದನ್ನು ಹಂಚಿಕೊಂಡಿದ್ದಾರೆ. ಇದು ಕೇವಲ ಕ್ಯಾಲರಿ ಎಣಿಕೆ ಮಾಡುವುದಲ್ಲ, ಬದಲಿಗೆ ನಾವು ತಿನ್ನುವ ಕ್ರಮ ಮತ್ತು ಸಮಯವನ್ನು ಬದಲಿಸುವುದರಲ್ಲಿದೆ ಎಂಬುದು ಅವರ ವಾದ. ಏನಿದು ವಿಸೆರಲ್ ಫ್ಯಾಟ್? ಯಾಕೆ ಇದು ಅಪಾಯಕಾರಿ? ನಮ್ಮ ಚರ್ಮದ ಕೆಳಗಿರುವ ಕೊಬ್ಬಿಗಿಂತ (Subcutaneous fat), ಯಕೃತ್ತು, ಮೇದೋಜ್ಜೀರಕ ಗ್ರಂಥಿ […]
BIG NEWS : ನಾಳೆ ‘ಭಾರತ್ ಬಂದ್’ : ಏನಿರುತ್ತೆ.. ಏನಿರಲ್ಲ.? ಇಲ್ಲಿದೆ ಸಂಪೂರ್ಣ ಮಾಹಿತಿ
ಫೆಬ್ರವರಿ 12, 2026 ರಂದು ನಾಳೆ ವಿವಿಧ ಕಾರ್ಮಿಕ ಸಂಘಟನೆಗಳು ಮತ್ತು ರೈತ ಸಂಘಗಳು ಕೇಂದ್ರ ಸರ್ಕಾರದ ನೀತಿಗಳನ್ನು ವಿರೋಧಿಸಿ ‘ಭಾರತ್ ಬಂದ್’ (ದೇಶವ್ಯಾಪಿ ಮುಷ್ಕರ) ಕರೆ ನೀಡಿವೆ. ಇದು ಕೇವಲ ಕರ್ನಾಟಕಕ್ಕೆ ಸೀಮಿತವಲ್ಲ, ಅಖಿಲ ಭಾರತ ಮಟ್ಟದ ಮುಷ್ಕರ. ಸುಮಾರು 30 ಕೋಟಿ ಕಾರ್ಮಿಕರು ಭಾಗವಹಿಸುವ ನಿರೀಕ್ಷೆಯಿದೆ ಎಂದು ಸಂಘಟನೆಗಳು ತಿಳಿಸಿವೆ. ಹೌದು, ಕೇಂದ್ರ ಸರ್ಕಾರದ ನೀತಿಗಳ ವಿರುದ್ಧ ಹತ್ತಕ್ಕೂ ಹೆಚ್ಚು ಕಾರ್ಮಿಕ ಮತ್ತು ರೈತ ಸಂಘಟನೆಗಳು ಫೆಬ್ರವರಿ 12 ರಂದು ದೇಶಾದ್ಯಂತ ‘ಭಾರತ್ ಬಂದ್’ಗೆ […]
Namma Metro: ಪೀಕ್ ಅವರ್ನಲ್ಲಿ ಮೆಟ್ರೋದಲ್ಲಿ ಸಂಚರಿಸುವ ಜನರೆಷ್ಟು?
Namma Metro ಬೆಂಗಳೂರು ನಗರ ಜೀವನಾಡಿಯಾಗಿ ಬದಲಾಗುತ್ತಿದೆ. ಪ್ರತಿದಿನ ಸುಮಾರು 8 ಲಕ್ಷ ಜನರು ಮೆಟ್ರೋದಲ್ಲಿ ಸಂಚಾರ ಮಾಡುತ್ತಾರೆ. ನೇರಳೆ, ಹಳದಿ ಮತ್ತು ಹಸಿರು ಎಂದು ಮೂರು ಮಾರ್ಗದಲ್ಲಿ ನಮ್ಮ ಮೆಟ್ರೋ ರೈಲುಗಳು ಓಡಾಡುತ್ತಿದ್ದು, ಪ್ರಯಾಣಿಕರ ಪ್ರತಿಕ್ರಿಯೆ ಸಹ ಉತ್ತಮವಾಗಿದೆ. ಹಾಗಾದರೆ ನಮ್ಮ ಮೆಟ್ರೋದಲ್ಲಿ ಪೀಕ್ ಅವರ್ನಲ್ಲಿ ಸಂಚಾರ ನಡೆಸುವ ಜನರು ಎಷ್ಟು?. ಬೆಂಗಳೂರು ನಗರದ ಸಂಚಾರ ದಟ್ಟಣೆಯಲ್ಲಿ ಸಿಲುಕಿ ಹೈರಾಗಿರುವ ಜನರು ಬೆಳಗ್ಗೆ ಮತ್ತು ಸಂಜೆ ಪೀಕ್ ಅವರ್ನಲ್ಲಿ ಮೆಟ್ರೋವನ್ನು ಹೆಚ್ಚಾಗಿ ಬಳಕೆ ಮಾಡುತ್ತಿದ್ದಾರೆ. ಬೆಳಗ್ಗೆ […]
BREAKING : ಪತ್ನಿಯ ಗರ್ಭಕೋಶ ತೆಗೆಸಿದ ಆರೋಪ : ಗಾಯಕ ‘ಉದಿತ್ ನಾರಾಯಣ್’ವಿರುದ್ಧ ‘FIR’ದಾಖಲು.!
ಬಾಲಿವುಡ್ನ ಹಿರಿಯ ಗಾಯಕ ಉದಿತ್ ನಾರಾಯಣ್ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರ ಮೊದಲ ಪತ್ನಿ ರಂಜನಾ ನಾರಾಯಣ್ ಅವರು ಫೆಬ್ರವರಿ 10, ಮಂಗಳವಾರದಂದು ಉದಿತ್ ನಾರಾಯಣ್, ಅವರ ಸಹೋದರರಾದ ಸಂಜಯ್ ಕುಮಾರ್ ಝಾ, ಲಲಿತ್ ನಾರಾಯಣ್ ಝಾ ಮತ್ತು ಉದಿತ್ ಅವರ ಎರಡನೇ ಪತ್ನಿ ದೀಪಾ ನಾರಾಯಣ್ ವಿರುದ್ಧ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತನ್ನ ಅರಿವಿಲ್ಲದಂತೆ ತನ್ನ ಗರ್ಭಾಶಯವನ್ನು (Uterus) ಶಸ್ತ್ರಚಿಕಿತ್ಸೆಯ ಮೂಲಕ ತೆಗೆಸಲಾಗಿದೆ ಎಂದು ರಂಜನಾ ಆರೋಪಿಸಿದ್ದಾರೆ. 1996ರಲ್ಲಿ ದೆಹಲಿಯ ಆಸ್ಪತ್ರೆಯೊಂದರಲ್ಲಿ ಈ ಘಟನೆ […]
ಹೋಂ ಸ್ಟೇ, ರೆಸಾರ್ಟ್ ಲೈಸೆನ್ಸ್ ನವೀಕರಣ: ಮಹತ್ವದ ಅಪ್ಡೇಟ್
“ಜಿಲ್ಲೆಯಲ್ಲಿನ ಹೊಸ ಹೋಂ ಸ್ಟೇಗಳ ನೋಂದಣಿ ಮತ್ತು ಈಗಾಗಲೇ ಇರುವ ಹೋಂ ಸ್ಟೇಗಳಿಗೆ ಪರವಾನಗಿ ನೀಡುವುದು ಹಾಗೂ ಈಗಾಗಲೇ ನೋಂದಾಯಿಸಿರುವ ಹೋಂಸ್ಟೇಗಳಿಗೆ ನವೀಕರಣವನ್ನು ಮಾರ್ಚ್ 31ರೊಳಗೆ ಪೂರ್ಣಗೊಳಿಸಬೇಕು” ಎಂದು ಕೊಡಗು ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಸೂಚಿಸಿದ್ದಾರೆ. ಮಡಿಕೇರಿ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿಯ ಸಭೆ ನಡೆಯಿತು. ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಜಿಲ್ಲಾಧಿಕಾರಿಗಳು, “ಆನ್ಲೈನ್ ಮೂಲಕ ಪರವಾನಗಿ ನೋಂದಣಿ ಹಾಗೂ ನವೀಕರಣ ಕಾರ್ಯವು ಸ್ಥಗಿತವಾಗಿದ್ದು, ತಾತ್ಕಾಲಿಕವಾಗಿ ಆಫ್ಲೈನ್ ಮೂಲಕ ಸ್ಥಳ ಪರಿಶೀಲಿಸಿ ಅನುಮೋದನೆ ಮಾಡಬೇಕಿದ್ದು, […]
T20 World Cup 2026: ದಕ್ಷಿಣ ಆಫ್ರಿಕಾ ಹಾಗೂ ಅಫ್ಘಾನಿಸ್ತಾನ ನಡುವೆ ಸೂಪರ್ ಓವರ್ ಮೇಲೆ ಸೂಪರ್ ಓವರ್; ಗೆದ್ದವರಾರು?
ಅಹ್ಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಐಸಿಸಿ ಪುರುಷರ ಟಿ ಟ್ವೆಂಟಿ ವಿಶ್ವಕಪ್ 2026ರ ಗ್ರೂಪ್ ಹಂತದ 13ನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಹಾಗೂ ಅಪ್ಘಾನಿಸ್ತಾನ ತಂಡಗಳು ಮುಖಾಮುಖಿಯಾಗಿದ್ದು, ಪಂದ್ಯ ಟೈ ಆಗಿ ಸೂಪರ್ ಓವರ್ ನಡೆಯಿತು. ಸೂಪರ್ ಓವರ್ ಸಹ ಟೈ ಆದ ಕಾರಣ ಮತ್ತೊಂದು ಸೂಪರ್ ಓವರ್ ನಡೆದಿದ್ದು, ದಕ್ಷಿಣ ಆಫ್ರಿಕಾ ಕೊನೆಗೆ ಗೆಲುವು ಸಾಧಿಸಿದೆ. ಪಂದ್ಯದಲ್ಲಿ ಟಾಸ್ ಗೆದ್ದ ಅಫ್ಘಾನಿಸ್ತಾನ ಫೀಲ್ಡಿಂಗ್ ಆರಿಸಿಕೊಂಡು ದಕ್ಷಿಣ ಆಫ್ರಿಕಾವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ಅದರಂತೆ […]
ತೆಂಗಿನಕಾಯಿ ಹಿಡಿದರೆ ನೀರು ಸಿಗುತ್ತಾ? ಬೋರವೆಲ್ ಕೊರೆಸುವ ಮುನ್ನ ವಿಜ್ಞಾನ ಹೇಳುವ ಈ ಸತ್ಯ ತಿಳಿಯಿರಿ.!
ಬೆಂಗಳೂರು : ಇಂದು ತಂತ್ರಜ್ಞಾನ ಎಷ್ಟೇ ಮುಂದುವರಿದಿದ್ದರೂ, ಬೋರವೆಲ್ ಕೊರೆಸುವ ಮೊದಲು ಭೂಮಿಯ ಅಡಿಯಲ್ಲಿ ನೀರು ಎಲ್ಲಿದೆ ಎಂದು ತಿಳಿಯಲು ಜನರು ಇಂದಿಗೂ ಅನೇಕ ಸಾಂಪ್ರದಾಯಿಕ ಪದ್ಧತಿಗಳನ್ನು ಅವಲಂಬಿಸುತ್ತಿದ್ದಾರೆ. ಕೈಯಲ್ಲಿ ತೆಂಗಿನಕಾಯಿ ಹಿಡಿಯುವುದು, Y-ಆಕಾರದ ಬೇವಿನ ಅಥವಾ ಕಾಚಿನ ಕಡ್ಡಿ ಬಳಸುವುದು, ಹಾಗೂ ಬಿಂದಿಗೆಯ ನೀರು ಚೆಲ್ಲುವ ಮೂಲಕ ನೀರಿನ ಜಾಲ ಪತ್ತೆ ಹಚ್ಚುವ ದೃಶ್ಯಗಳು ಹಳ್ಳಿಗಳಲ್ಲಿ ಮಾತ್ರವಲ್ಲದೆ ನಗರ ಪ್ರದೇಶಗಳಲ್ಲೂ ಕಂಡುಬರುತ್ತವೆ. ನೀರಿರುವ ಜಾಗದಲ್ಲಿ ತೆಂಗಿನಕಾಯಿ ತಾನಾಗಿಯೇ ಮೇಲೆ ಏಳುತ್ತದೆ, ಕಡ್ಡಿಗಳು ಗಿರಗಿರನೆ ತಿರುಗುತ್ತವೆ ಅಥವಾ […]
ಮಹಿಳೆಯರಿಗಾಗಿ ಎಲ್ಐಸಿಯ ಸೂಪರ್ ಸೇವಿಂಗ್ ಪ್ಲಾನ್: ದಿನಕ್ಕೆ ₹146 ಹೂಡಿಕೆ ಮಾಡಿ, ₹16 ಲಕ್ಷ ಲಾಭ ಪಡೆಯಿರಿ
ಭಾರತೀಯ ಜೀವ ವಿಮಾ ನಿಗಮ (LIC) ಮಹಿಳೆಯರ ಆರ್ಥಿಕ ಸಬಲೀಕರಣವನ್ನು ಉತ್ತೇಜಿಸಲು ಆಕರ್ಷಕವಾದ ‘ಬೀಮಾ ಲಕ್ಷ್ಮಿ’ (Bima Lakshmi) ಯೋಜನೆಯನ್ನು ಪರಿಚಯಿಸಿದೆ. ಸುರಕ್ಷಿತ ಹೂಡಿಕೆ ಜೊತೆಗೆ ಭವಿಷ್ಯದ ಭದ್ರತೆ ಬಯಸುವ ಮಹಿಳೆಯರಿಗೆ ಇದು ಸುವರ್ಣಾವಕಾಶವಾಗಿದೆ. LIC ಬೀಮಾ ಲಕ್ಷ್ಮಿ (ಯೋಜನೆ ಸಂಖ್ಯೆ 881) ಮಹಿಳೆಯರಿಗೆ ಆರ್ಥಿಕ ಭದ್ರತೆ ಮತ್ತು ನಿಯಮಿತ ಉಳಿತಾಯವನ್ನು ಒದಗಿಸುವ ಉದ್ದೇಶದಿಂದ ರೂಪಿಸಲಾಗಿದೆ. ಇದು ಮಾರುಕಟ್ಟೆ ಸಂಬಂಧವಿಲ್ಲದ (Non-Linked) ಪಾಲಿಸಿಯಾಗಿದ್ದು, ಹೂಡಿಕೆದಾರರಿಗೆ ಸ್ಥಿರ ಮತ್ತು ಭದ್ರ ಲಾಭದ ಅನುಭವ ನೀಡುತ್ತದೆ. ಜೊತೆಗೆ, ಈ ಯೋಜನೆ […]
T20 World Cup 2026: ದಕ್ಷಿಣ ಆಫ್ರಿಕಾ ನಡುಗಿಸಿದ ಅಫ್ಘಾನಿಸ್ತಾನ; ಟೂರ್ನಿಯ ಮೊದಲ ಸೂಪರ್ ಓವರ್ ಪಂದ್ಯ!
ಅಹ್ಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಐಸಿಸಿ ಪುರುಷರ ಟಿ ಟ್ವೆಂಟಿ ವಿಶ್ವಕಪ್ 2026ರ ಗ್ರೂಪ್ ಹಂತದ 13ನೇ ಪಂದ್ಯ ನಡೆದಿದ್ದು, ದಕ್ಷಿಣ ಆಫ್ರಿಕಾ ಹಾಗೂ ಅಫ್ಘಾನಿಸ್ತಾನ ಮುಖಾಮುಖಿಯಾಗಿದ್ದು, ಪಂದ್ಯ ಟೈ ಆಗಿ ಟೂರ್ನಿಯ ಮೊದಲ ಸೂಪರ್ ಓವರ್ಗೆ ಎಡೆ ಮಾಡಿಕೊಟ್ಟಿದೆ. ಪಂದ್ಯದಲ್ಲಿ ಟಾಸ್ ಗೆದ್ದ ಅಫ್ಘಾನಿಸ್ತಾನ ಫೀಲ್ಡಿಂಗ್ ಆರಿಸಿಕೊಂಡು ದಕ್ಷಿಣ ಆಫ್ರಿಕಾವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 187 ರನ್ ಕಲೆಹಾಕಿ […]
BREAKING : ಬೆಂಗಳೂರಲ್ಲಿ ಭೀಕರ ಅಪಘಾತ : ಶಾಲಾ ಬಸ್ ಹರಿದು ಇಬ್ಬರು ಪುಟ್ಟ ಮಕ್ಕಳ ದಾರುಣ ಸಾವು !
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಶಾಲಾ ಬಸ್ ಒಂದು ಬೈಕ್’ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮಕ್ಕಳು ಸ್ಥಳದಲ್ಲೇ ಸಾವನ್ನಪ್ಪಿರುವ ಅತ್ಯಂತ ದಾರುಣ ಘಟನೆ ಇಂದು ನಡೆದಿದೆ. ಹೆಣ್ಣೂರು ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯ ಥಣಿಸಂದ್ರದ ಪೊಲೀಸ್ ಕ್ವಾರ್ಟರ್ಸ್ ಬಳಿಯೇ ಈ ಅವಘಡ ಸಂಭವಿಸಿದೆ. ಮೃತ ಮಕ್ಕಳನ್ನು ವರ್ಷಾ (2 ವರ್ಷ) ಮತ್ತು ಭಾನು (4 ವರ್ಷ) ಎಂದು ಗುರುತಿಸಲಾಗಿದೆ. ವರ್ಷಾ ಪೊಲೀಸ್ ಕಾನ್ಸ್ಟೇಬಲ್ ನಾಗನಗೌಡ ಅವರ ಪುತ್ರಿಯಾಗಿದ್ದು, ಭಾನು ಇವರ ಅಣ್ಣನ ಮಗಳಾಗಿದ್ದಾರೆ. ಕಾನ್ಸ್ಟೇಬಲ್ ನಾಗನಗೌಡ ಅವರು […]
Big Update: ಧಾರವಾಡ ಡಿಸಿಯಾಗಿ ಸ್ನೇಹಲ್ ಆರ್. ಅಧಿಕಾರ ಸ್ವೀಕಾರ
ಧಾರವಾಡದ ನೂತನ ಜಿಲ್ಲಾಧಿಕಾರಿಯಾಗಿ ಸ್ನೇಹಲ್ ಆರ್. ಅವರು ಬುಧವಾರ ಅಧಿಕಾರ ಸ್ವೀಕರಿಸಿದರು. ಮಂಗಳವಾರ ಕರ್ನಾಟಕ ಸರ್ಕಾರ ಐಎಎಸ್ ಅಧಿಕಾರಿಗಳ ವರ್ಗಾವಣೆ ಮಾಡಿತ್ತು. ಧಾರವಾಡ ಡಿಸಿಯಾಗಿದ್ದ ದಿವ್ಯಪ್ರಭು ಅವರನ್ನು ವರ್ಗಾವಣೆಗೊಳಿಸಿ ಆದೇಶಿಸಿತ್ತು. ಕರ್ನಾಟಕ ಸರ್ಕಾರದ ರಾಷ್ಟ್ರೀಯ ಜೀವನೊಪಾಯ ಅಭಿಯಾನದ ನಿರ್ದೆಶಕಿಯಾಗಿದ್ದ ಮತ್ತು 2017-18ರಲ್ಲಿ ಧಾರವಾಡ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾಗಿ ಸೇವೆ ಸಲ್ಲಿಸಿದ್ದ ಐಎಎಸ್ ಅಧಿಕಾರಿ ಸ್ನೇಹಲ್.ಆರ್ ಅವರು ಬುಧವಾರ ಧಾರವಾಡ ಜಿಲ್ಲೆಯ ನೂತನ ಜಿಲ್ಲಾಧಿಕಾರಿಗಳಾಗಿ ಅಧಿಕಾರ ವಹಿಸಿಕೊಂಡರು. ಜಿಲ್ಲಾಧಿಕಾರಿಯಾಗಿದ್ದ ದಿವ್ಯ ಪ್ರಭು ಜಿ. ಆರ್. ಜೆ. […]
ಬೌಲಿಂಗ್ ಆ್ಯಕ್ಷನ್ ಕುರಿತು ‘ICC’ನಿಯಮಗಳೇನು ? ಪಾಕಿಸ್ತಾನದ ‘ಉಸ್ಮಾನ್ ತಾರಿಕ್’ಬೌಲಿಂಗ್ ಬಗ್ಗೆ ಭಾರಿ ವಿವಾದ !
ನವದೆಹಲಿ: ಟಿ20 ವಿಶ್ವಕಪ್ ಅಖಾಡದಲ್ಲಿ ಪಾಕಿಸ್ತಾನದ ರಹಸ್ಯ ಸ್ಪಿನ್ನರ್ ಉಸ್ಮಾನ್ ತಾರಿಕ್ ಅವರ ವಿಭಿನ್ನ ಬೌಲಿಂಗ್ ಶೈಲಿ ಈಗ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದೆ. ಅಮೆರಿಕ ವಿರುದ್ಧದ ಪಂದ್ಯದಲ್ಲಿ ಅದ್ಭುತವಾಗಿ ವಿಕೆಟ್ ಉರುಳಿಸಿ ಮಿಂಚಿದರೂ, ಅವರ ‘ಚಕಿಂಗ್’ ಶೈಲಿಯ ಬೌಲಿಂಗ್ ಆ್ಯಕ್ಷನ್ ಅಂಪೈರ್ಗಳ ಕೆಂಗಣ್ಣಿಗೆ ಗುರಿಯಾಗಿದೆ. ಚೆಂಡನ್ನು ಎಸೆಯುವ ಮುನ್ನ ಹಠಾತ್ತಾಗಿ ನಿಲ್ಲುವ (Pause) ಅವರ ವಿಚಿತ್ರ ಶೈಲಿ ನಿಯಮಬದ್ಧವಾಗಿದೆಯೇ ಅಥವಾ ಇಲ್ಲವೇ ಎಂಬ ಪ್ರಶ್ನೆ ಈಗ ಐಸಿಸಿ (ICC) ಅಂಗಳ ತಲುಪಿದ್ದು, ಪಾಕ್ ಬೌಲರ್ನ ಭವಿಷ್ಯ […]
ಸೋನಭದ್ರ ಮಾಲ್ನಲ್ಲಿ ಪತ್ನಿಯ ಅಬ್ಬರ: ಪ್ರೇಯಸಿ ಜೊತೆ ಶಾಪಿಂಗ್ ಮಾಡುತ್ತಿದ್ದ ಪತಿಗೆ ಸರಿಯಾದ ಶಾಸ್ತಿ
ಉತ್ತರ ಪ್ರದೇಶದ ಸೋನಭದ್ರ ಜಿಲ್ಲೆಯ ರಾಬರ್ಟ್ಸ್ಗಂಜ್ ಪ್ರದೇಶದ ಶಾಪಿಂಗ್ ಮಾಲ್ ಒಂದು ಶನಿವಾರ ಸಂಜೆ ಹೈಡ್ರಾಮಾಗೆ ಸಾಕ್ಷಿಯಾಯಿತು. ತನ್ನ ಪತಿಯು ಮತ್ತೊಬ್ಬ ಮಹಿಳೆಯೊಂದಿಗೆ ಶಾಪಿಂಗ್ ಮಾಡುತ್ತಿರುವುದನ್ನು ಕಂಡು ಪತ್ನಿಯು ರೊಚ್ಚಿಗೆದ್ದು ನಡೆಸಿದ ಗಲಾಟೆಯ ವಿಡಿಯೋ ಈಗ ವೈರಲ್ ಆಗಿದೆ. ಘಟನೆಯ ವಿವರ: ಶನಿವಾರ ಸಂಜೆ ಯುವಕನೊಬ್ಬ ತನ್ನ ಪ್ರೇಯಸಿಯೊಂದಿಗೆ ಸಿವಿಲ್ ಲೈನ್ಸ್ ರಸ್ತೆಯಲ್ಲಿರುವ ಮಾಲ್ಗೆ ಶಾಪಿಂಗ್ ಮಾಡಲು ಬಂದಿದ್ದನು. ಅನಿರೀಕ್ಷಿತವಾಗಿ ಅದೇ ಸಮಯದಲ್ಲಿ ಆತನ ಪತ್ನಿಯೂ ಮಾಲ್ಗೆ ಬಂದಿದ್ದಳು. ಪತಿಯು ಇನ್ನೊಬ್ಬ ಮಹಿಳೆಯ ಜೊತೆ ಇರುವುದನ್ನು ಕಂಡ […]
‘ಮನದ ಮಾತು ಕೇಳದ ಯುವಜನತೆ’ : 35 ವರ್ಷದೊಳಗಿನವರಲ್ಲೇ ಹೆಚ್ಚುತ್ತಿದೆ ಮಾನಸಿಕ ಖಿನ್ನತೆ !
ಬೆಂಗಳೂರು: ಶಾರೀರಿಕ ಅನಾರೋಗ್ಯವನ್ನು ಮೌಖಿಕ ಮದ್ದುಗಳಿಂದ ಗುಣಪಡಿಸಬಹುದು, ಆದರೆ ಮಾನಸಿಕ ಅನಾರೋಗ್ಯವು ಅಷ್ಟು ಸುಲಭವಲ್ಲ. ಇತ್ತೀಚಿನ ದಿನಗಳಲ್ಲಿ ಮಾನಸಿಕ ಆರೋಗ್ಯದ ಸಮಸ್ಯೆಗಳು ಎಲ್ಲೆಡೆ ಹೆಚ್ಚಾಗುತ್ತಿದ್ದು, ಸರಿಯಾದ ಜಾಗೃತಿ ಇಲ್ಲದಿದ್ದರೆ ಇದು ಅಪಾಯಕಾರಿ ಹಂತ ತಲುಪಬಹುದು. ಭಾರತೀಯ ಮನೋವೈದ್ಯಕೀಯ ಸಂಘ (Indian Psychiatric Association) ಬಿಡುಗಡೆ ಮಾಡಿರುವ ಅಂಕಿ-ಅಂಶಗಳು ನಿಜಕ್ಕೂ ದಂಗುಬಡಿಸುವಂತಿವೆ. ಹೌದು, ‘ಮಾಲಿಕ್ಯೂಲರ್ ಸೈಕಿಯಾಟ್ರಿ’ (Molecular Psychiatry) ಜರ್ನಲ್’ನಲ್ಲಿ ಪ್ರಕಟವಾದ ಮಾಹಿತಿಯ ಪ್ರಕಾರ, ಭಾರತದಲ್ಲಿ ಕಂಡುಬರುವ ಒಟ್ಟು ಮಾನಸಿಕ ಅಸ್ವಸ್ಥತೆಗಳಲ್ಲಿ ಶೇ. 60 ರಷ್ಟು ಪ್ರಕರಣಗಳು 35 […]
ಮಹಿಳಾ ಉದ್ಯಮಿಗಳೇ ಗಮನಿಸಿ : ‘ಗೃಹಲಕ್ಷ್ಮಿ ಡಿಜಿಟಲ್ ಮಾರ್ಕೆಟಿಂಗ್ ಆಪ್’ನಲ್ಲಿ ನೋಂದಣಿಗೆ ಅವಕಾಶ!
ಬೆಂಗಳೂರು: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ 2025-26ನೇ ಸಾಲಿಗೆ ಮಹಿಳಾ ಉದ್ದಿಮೆದಾರರನ್ನು ನೋಂದಾಯಿಸಲು ‘ಗೃಹಲಕ್ಷ್ಮಿ ಡಿಜಿಟಲ್ ಮಾರ್ಕೆಟಿಂಗ್ ಆಪ್’ ರೂಪಿಸಲಾಗಿದ್ದು, ಅರ್ಹ ಮಹಿಳೆಯರು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಲು ಆಹ್ವಾನಿಸಲಾಗಿದೆ ಎಂದು ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ. ಯೋಜನೆಯ ಉದ್ದೇಶ: ಕರ್ನಾಟಕ ರಾಜ್ಯದ ಮಹಿಳೆಯರನ್ನು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಸಬಲೀಕರಣಗೊಳಿಸುವುದು ಈ ಯೋಜನೆಯ ಮುಖ್ಯ ಉದ್ದೇಶ. ಸ್ವಯಂ ಉದ್ಯೋಗದಲ್ಲಿ ತೊಡಗಿಸಿಕೊಂಡಿರುವ ಮಹಿಳೆಯರನ್ನು ಸಶಕ್ತ ಉದ್ಯಮಿಗಳನ್ನಾಗಿ ಮಾಡಲು ಹಾಗೂ ಅವರು ತಯಾರಿಸುವ ವಿವಿಧ ಉತ್ಪನ್ನಗಳಿಗೆ ಉಚಿತ ಮಾರುಕಟ್ಟೆ ವ್ಯವಸ್ಥೆಯನ್ನು […]
ದೆಹಲಿಯ ಈ ಹೋಟೆಲ್’ಗಳಲ್ಲಿ ಒಂದು ರಾತ್ರಿಗೆ 5 ಲಕ್ಷ ರೂ. ಬಾಡಿಗೆ ! ಕಾರಣ ತಿಳಿಯಿರಿ
ದೆಹಲಿಯ ಪಂಚತಾರಾ ಹೋಟೆಲ್ಗಳಲ್ಲಿ ಒಂದು ದಿನದ ಬಾಡಿಗೆ ಎಷ್ಟಿರಬಹುದು? 10 ಸಾವಿರ, 20 ಸಾವಿರ ಅಥವಾ 50 ಸಾವಿರ ರೂಪಾಯಿ ಎಂದು ನೀವು ಅಂದಾಜಿಸಿದ್ದರೆ ಅದು ತಪ್ಪು! ಒಂದು ವೇಳೆ ನಿಮ್ಮ ಅಂದಾಜು 1 ಲಕ್ಷ ರೂಪಾಯಿಯಾಗಿದ್ದರೂ ಸಹ, ನೀವು ವಾಸ್ತವ ದರಕ್ಕಿಂತ ಬಹಳ ದೂರವಿದ್ದೀರಿ ಎಂದೇ ಅರ್ಥ. ಮುಂದಿನ ಕೆಲವು ದಿನಗಳಲ್ಲಿ ನೀವು ದೆಹಲಿಯ ಐಷಾರಾಮಿ ಹೋಟೆಲ್ಗಳಲ್ಲಿ ರೂಮ್ ಬುಕ್ ಮಾಡಬೇಕೆಂದರೆ ಒಂದು ರಾತ್ರಿಗೆ ಬರೋಬ್ಬರಿ 5 ಲಕ್ಷ ರೂಪಾಯಿ ವ್ಯಯಿಸಬೇಕಾಗಬಹುದು! ಹೌದು. ವಿಶೇಷವಾಗಿ ದ […]
BREAKING : ‘ಟಾಕ್ಸಿಕ್’ಚಿತ್ರಕ್ಕೆ ಮತ್ತೊಂದು ಸಂಕಷ್ಟ : ರಾಷ್ಟ್ರೀಯ ಕ್ರೈಸ್ತರ ಒಕ್ಕೂಟದಿಂದ ದೂರು ಸಲ್ಲಿಕೆ.!
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ (Toxic) ಸಿನಿಮಾ ಬಿಡುಗಡೆಗೂ ಮುನ್ನವೇ ಸಾಲು ಸಾಲು ವಿವಾದಗಳಿಗೆ ಗುರಿಯಾಗುತ್ತಿದೆ. ಇದೀಗ ಚಿತ್ರದ ವಿರುದ್ಧ ಧಾರ್ಮಿಕ ಭಾವನೆಗೆ ಧಕ್ಕೆ ತಂದಿರುವ ಆರೋಪ ಕೇಳಿಬಂದಿದೆ. ಚಿತ್ರದ ಕೆಲವು ದೃಶ್ಯಗಳು ಕ್ರೈಸ್ತ ಧರ್ಮಕ್ಕೆ ಮತ್ತು ದೇವದೂತರಿಗೆ ಅಪಮಾನ ಮಾಡುವಂತಿವೆ ಎಂದು ಆರೋಪಿಸಿ ರಾಷ್ಟ್ರೀಯ ಕ್ರೈಸ್ತರ ಒಕ್ಕೂಟ ಈಗ ಕಾನೂನು ಹೋರಾಟಕ್ಕೆ ಇಳಿದಿದೆ. ಒಕ್ಕೂಟದ ಅಧ್ಯಕ್ಷರಾದ ಪ್ರದೀಪ್ ಕುಮಾರ್ ಅವರು ಈ ಸಂಬಂಧ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು, ಗೃಹ ಸಚಿವರು, ಸೆನ್ಸಾರ್ […]
ಮುಂಬೈನ ಪ್ರಖ್ಯಾತ ವಾಂಖೆಡೆ ಕ್ರೀಡಾಂಗಣದಲ್ಲಿ ಇಂದು (ಫೆಬ್ರವರಿ 11, ಬುಧವಾರ) ಟಿ20 ವಿಶ್ವಕಪ್ 2026ರ ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಗ್ರೂಪ್ ‘ಸಿ’ ಹಂತದ ಈ ಪಂದ್ಯದಲ್ಲಿ ಮಾಜಿ ಚಾಂಪಿಯನ್ಗಳಾದ ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ತಂಡಗಳು ಮುಖಾಮುಖಿಯಾಗುತ್ತಿದ್ದು, ಕ್ರಿಕೆಟ್ ಪ್ರೇಮಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ. 2016ರ ಟಿ20 ವಿಶ್ವಕಪ್ ಫೈನಲ್ನಲ್ಲಿ ವೆಸ್ಟ್ ಇಂಡೀಸ್ನ ಕಾರ್ಲೋಸ್ ಬ್ರಾತ್ವೈಟ್ ಸತತ ನಾಲ್ಕು ಸಿಕ್ಸರ್ ಬಾರಿಸಿ ಇಂಗ್ಲೆಂಡ್ ಕೈಯಿಂದ ಗೆಲುವನ್ನು ಕಸಿದುಕೊಂಡಿದ್ದರು. ಅಂದಿನ ಆ ರೋಚಕ ಹೋರಾಟದ ನೆನಪುಗಳು ಇಂದಿನ ಪಂದ್ಯದ […]
ಕುಮಾರಸ್ವಾಮಿಗೆ ಮಹತ್ವದ ಮನವಿ ಮಾಡಿದ ಚಲುವರಾಯಸ್ವಾಮಿ!
ಮಂಡ್ಯ ಸಂಸದ, ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಮಹತ್ವದ ಮನವಿಯೊಂದನ್ನು ಮಾಡಿದ್ದಾರೆ. ಈ ಮೂಲಕ ಮಂಡ್ಯಕ್ಕೆ ಕೇಂದ್ರ ಸರ್ಕಾರದ ಯೋಜನೆ ತರುವ ವಿಚಾರದಲ್ಲಿ ಉಂಟಾಗಿದ್ದ ಜಟಾಪಟಿ ಅಂತಿಮ ಹಂತಕ್ಕೆ ಬಂದಿದೆ. ಎನ್.ಚಲುವರಾಯಸ್ವಾಮಿ ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ, ‘ಮಂಡ್ಯ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸುಮಾರು 500 ಕೋಟಿ ರೂಪಾಯಿಗಳ ಬೃಹತ್ ವೆಚ್ಚದಲ್ಲಿ ಆಟೋಮೋಟಿವ್ ರಿಸರ್ಚ್ ಅಸೋಸಿಯೇಷನ್ ಆಫ್ ಇಂಡಿಯಾ (ARAI) ಸಂಶೋಧನಾ ಕೇಂದ್ರವನ್ನು ಸ್ಥಾಪಿಸಲು ನಮ್ಮ […]
ಹಬ್ಬ ಮುಗಿದ ಬಳಿಕ ‘ಬಜೆಟ್’ಮಂಡನೆ ದಿನಾಂಕ ಘೋಷಣೆ : ಸಿಎಂ ಸಿದ್ದರಾಮಯ್ಯ
ಬೆಂಗಳೂರು : ಶೀಘ್ರದಲ್ಲೇ ರಾಜ್ಯ ಬಜೆಟ್ ಮಂಡನೆಯ ದಿನಾಂಕವನ್ನು ಘೋಷಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಇಂದು ಸುದ್ದಿಗಾರರ ಜೊತೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಶೀಘ್ರದಲ್ಲೇ ರಾಜ್ಯ ಬಜೆಟ್ ಮಂಡನೆಯ ದಿನಾಂಕವನ್ನು ಘೋಷಣೆ ಮಾಡುತ್ತೇನೆ.ಹಬ್ಬ ಮುಗಿಯಲಿ, ಹಬ್ಬದ ನಂತರ ದಿನಾಂಕ ಪ್ರಕಟಿಸುತ್ತೇನೆ” ಎಂದು ಅವರು ಹೇಳಿದ್ದಾರೆ. ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಕುರಿತಾದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, “ನಾನಾಗಲಿ ಅಥವಾ ಡಿ.ಕೆ. ಶಿವಕುಮಾರ್ ಆಗಲಿ, ಹೈಕಮಾಂಡ್ ಸೂಚನೆಯಂತೆ ನಡೆದುಕೊಳ್ಳುತ್ತೇವೆ” ಎಂದು ಸ್ಪಷ್ಟಪಡಿಸಿದರು.ಪದೇ ಪದೇ ನಾಯಕತ್ವ ಬದಲಾವಣೆ ಬಗ್ಗೆ ಪ್ರಶ್ನೆ ಕೇಳಿದ […]
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಸಂಸ್ಕಾರ ನೀಡಬೇಕಾದ ವ್ಯಕ್ತಿಯೊಬ್ಬ ತನ್ನ ಮನೆಯ ಸೊಸೆಯ ಮೇಲೆಯೇ ಲೈಂಗಿಕ ದೌರ್ಜನ್ಯ ಎಸಗಿರುವ ಹೀನಾಯ ಘಟನೆ ಬೆಳಕಿಗೆ ಬಂದಿದೆ. ಥಣಿಸಂದ್ರದ ಪ್ರತಿಷ್ಠಿತ ಶಾಲೆಯ ಪ್ರಿನ್ಸಿಪಾಲ್ ಆಗಿರುವ ಮಹಿಳೆಗೆ, ಆಕೆಯ ಮಾವನೇ ಲೈಂಗಿಕ ಕಿರುಕುಳ ನೀಡಿದ್ದು, ಈ ಸಂಬಂಧ ಆರ್.ಟಿ. ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಘಟನೆಯ ಹಿನ್ನೆಲೆ ಬೆಂಗಳೂರಿನ ಕಾವ್ಲ ಭೈರಸಂದ್ರದಲ್ಲಿ ಶಾಲೆಯೊಂದನ್ನು ನಡೆಸುತ್ತಿರುವ ವ್ಯಕ್ತಿಯೇ ಈ ಪ್ರಕರಣದ ಆರೋಪಿ. ಸಂತ್ರಸ್ತ ಮಹಿಳೆಯು ಥಣಿಸಂದ್ರದ ಶಾಲೆಯೊಂದರಲ್ಲಿ ಪ್ರಿನ್ಸಿಪಾಲ್ ಆಗಿ ಕೆಲಸ ಮಾಡುತ್ತಿದ್ದಾರೆ. […]
ಪ್ರಸ್ತುತ ನಡೆಯುತ್ತಿರುವ ಐಸಿಸಿ ಪುರುಷರ ಟಿ ಟ್ವೆಂಟಿ ವಿಶ್ವಕಪ್ 2026 ಟೂರ್ನಿಯಲ್ಲಿ ಪಾಕಿಸ್ತಾನ ವಿವಾದದ ಜತೆಗೆ ಕಣಕ್ಕಿಳಿದು ಎರಡು ಪಂದ್ಯಗಳನ್ನಾಡಿ ಮುಗಿಸಿದೆ. ನೆದರ್ಲೆಂಡ್ಸ್ ವಿರುದ್ಧದ ಉದ್ಘಾಟನಾ ಪಂದ್ಯದಲ್ಲಿ ಗೆದ್ದ ಪಾಕ್ ಬಳಿಕ ನಿನ್ನೆ ( ಫೆಬ್ರವರಿ 10 ) ನಡೆದ ಯುಎಸ್ಎ ವಿರುದ್ಧದ ಪಂದ್ಯದಲ್ಲಿ ಗೆದ್ದು ನಾಲ್ಕು ಅಂಕಗಳೊಂದಿಗೆ ಸದ್ಯ ಎ ಗುಂಪಿನ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ ವಿರುದ್ಧದ ಪಂದ್ಯದಲ್ಲಿ 32 ರನ್ಗಳ ಭರ್ಜರಿ ಗೆಲುವು ಕಂಡ ಪಾಕಿಸ್ತಾನ ತಂಡದ ವಿರುದ್ಧ ಪಂದ್ಯ […]
ಸೀಟು ಹಂಚಿಕೆಗೆ ನಾವು ರೆಡಿ, ನೀವು?; ಕಾಂಗ್ರೆಸ್- ಡಿಎಂಕೆ ಮಹತ್ವದ ಹೆಜ್ಜೆ!
ತಮಿಳುನಾಡು ವಿಧಾನಸಭೆ ಚುನಾವಣೆ 2026ರಲ್ಲಿ ಕಾಂಗ್ರೆಸ್-ಡಿಎಂಕೆ ಮೈತ್ರಿ ಬಗ್ಗೆ ಹಲವಾರು ಉಹಾಪೋಹ ಹರಿದಾಡುತ್ತಿದೆ. 234 ಸದಸ್ಯ ಬಲದ ವಿಧಾನಸಭೆಗೆ ಏಪ್ರಿಲ್, ಮೇ ತಿಂಗಳಿನಲ್ಲಿ ಚುನಾವಣೆ ನಡೆಯಲಿದೆ. ರಾಜ್ಯದ ಆಡಳಿತ ಪಕ್ಷ ಡಿಎಂಕೆಗೆ ಹಲವಾರು ವರ್ಷಗಳಿಂದ ಕಾಂಗ್ರೆಸ್ ಬೆಂಬಲ ನೀಡುತ್ತಿದೆ. ಆದರೆ ಈ ಬಾರಿ ಅಧಿಕಾರ ಹಂಚಿಕೆ ಸೂತ್ರವನ್ನು ಕಾಂಗ್ರೆಸ್ ಮುಂದಿಟ್ಟ ಕಾರಣ ಮೈತ್ರಿಯ ಕುರಿತು ಅಪಸ್ವರಗಳು ಕೇಳಿ ಬಂದಿತ್ತು. ಈಗ ಡಿಎಂಕೆ ಕಡೆಯಿಂದಲೇ ಕಾಂಗ್ರೆಸ್ಗೆ ಮಹತ್ವದ ಸಂದೇಶ ರವಾನೆಯಾಗಿದೆ. ಸೀಟು ಹಂಚಿಕೆ ಮಾತುಕತೆಗೆ ನಾವು ರೆಡಿ ಎಂದು […]
ಹಸಿರು ಬಣ್ಣಕ್ಕೆ ‘ವಾಟ್ಸಾಪ್’ ಗುಡ್ಬೈ : ಬರಲಿದೆ ಮಲ್ಟಿ-ಕಲರ್ ಚಾಟಿಂಗ್ ವೈಶಿಷ್ಟ್ಯ !
ವರ್ಷಗಳಿಂದ ವಾಟ್ಸಾಪ್ನ ಅದೇ ಹಳೆಯ ಹಸಿರು ಇಂಟರ್ಫೇಸ್ ನೋಡಿ ನಿಮಗೆ ಬೋರ್ ಆಗಿದೆಯೇ? ಹಾಗಿದ್ದರೆ ನಿಮಗೊಂದು ಗುಡ್ ನ್ಯೂಸ್! ಮೆಟಾ ಸಂಸ್ಥೆಯು ನಿಮ್ಮ ಚಾಟಿಂಗ್ ಅನುಭವವನ್ನು ಸಂಪೂರ್ಣವಾಗಿ ಬದಲಾಯಿಸಲು ಸಜ್ಜಾಗಿದೆ. ಶೀಘ್ರದಲ್ಲೇ ನಿಮ್ಮ ಸ್ಮಾರ್ಟ್ಫೋನ್ನಲ್ಲಿ ಕಾಣುವ ವಾಟ್ಸಾಪ್ನ ಹಸಿರು ಲುಕ್ ಬದಲಾಗಲಿದೆ. ಹೌದು. ವಾಟ್ಸಾಪ್ ಕಳೆದ ಹಲವು ವರ್ಷಗಳಿಂದ ತನ್ನ ಸಿಗ್ನೇಚರ್ ‘ಹಸಿರು’ (Green) ಬಣ್ಣಕ್ಕೇ ಅಂಟಿಕೊಂಡಿತ್ತು. ಆದರೆ ಈಗ ಬಳಕೆದಾರರಿಗೆ ತಮ್ಮ ಇಚ್ಛೆಯ ಬಣ್ಣವನ್ನು ಆರಿಸಿಕೊಳ್ಳುವ ಸ್ವಾತಂತ್ರ್ಯ ನೀಡಲು ಮುಂದಾಗಿದೆ.ಹಾಗಾದರೆ ಹೊಸ ಬಣ್ಣ ಯಾವುದು ಎಂಬ […]

17 C