BIG NEWS: ಧರ್ಮಸ್ಥಳಕ್ಕೆ ಪಾದಯಾತ್ರೆ ಮೂಲಕ ಸಾಗುತ್ತಿದ್ದ ಭಕ್ತ ಹೃದಯಾಘಾತದಿಂದ ಸಾವು
ಹಾಸನ: ಮಹಾಶಿವರಾತ್ರಿ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಧರ್ಮಸ್ಥಳ ಕ್ಷೇತ್ರಕ್ಕೆ ಪಾದಯಾತ್ರೆ ಮೂಲಕ ಸಾಗಿ ಶ್ರೀ ಮಂಜುನಾಥ ಸ್ವಾಮಿ ದರ್ಶನ ಪಡೆಯುವವರ ಸಂಖ್ಯೆ ಹೆಚ್ಚು. ಹೀಗೆ ಪಾದಯತರೆ ಮೂಲಕ ಧರ್ಮಸ್ಥಳಕ್ಕೆ ತೆರಳುತ್ತಿದ್ದ ಭಕ್ತರೊಬ್ಬರು ಹೃದಯಾಘಾತಕ್ಕೆ ಬಲಿಯಾಗಿರುವ ಘಟನೆ ನಡೆದಿದೆ. ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಚೀಕನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. 50 ವರ್ಷದ ಕೃಷ್ಣ ಹೃದಯಾಘಾತಕ್ಕೆ ಬಲಿಯಾದವರು. ಹಾಸನದ ಜಕ್ಕೇನಹಳ್ಳಿ ಗ್ರಾಮದವರು. ಕೃಷ್ಣ ಧರ್ಮಸ್ಥಳಕ್ಕೆ ಪಾದಯಾತ್ರೆ ಹೋಗುತ್ತಿದ್ದರು. ಅವರ ಅಳಿಯ ದಿನೇಶ್ ಎಂಬುವವರು ಹಿಂದೇಯೇ ಸಾಗಿದ್ದರು. ಆದರೆ ಅಳಿಯನಿಂತ […]
BREAKING: ಒತ್ತುವರಿ ತೆರವು ವೇಳೆ ಬಿಡಿಎ ನೌಕರರ ಸಂಘದ ಅಧ್ಯಕ್ಷನಿಂದಲೇ ಅಧಿಕಾರಿಗಳಿಗೆ ಧಮ್ಕಿ; ಶೋಕಾಸ್ ನೋಟಿಸ್ ಜಾರಿ
ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ-ಬಿಡಿಎ ನಡೆಸುತ್ತಿರುವ ಒತ್ತುವರಿ ತೆರವು ಕಾರ್ಯಾಚರಣೆಯ ವೇಳೆ ಬಿಡಿಎ ನೌಕರರ ಸಂಘದ ಅಧ್ಯಕ್ಷನೇ ಅಧಿಕಾರಿಗಳಿಗೆ ಧಮ್ಕಿ ಹಾಕಿ ಬೆದರಿಕೆಯೊಡ್ಡಿರುವ ಘಟನೆ ನಡೆದಿದೆ. ಅಧಿಕಾರಿಗಳು ಒತ್ತುವರಿ ತೆರವು ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಬಿಡಿಎ ನೌಕರರ ಸಂಘದ ಅಧ್ಯಕ್ಷ ಮಂಜುನಾಥ್ ಎಂಬುವವರು ಅಧಿಕಾರಿಯೊಬ್ಬರಿಗೆ ಧಮ್ಕಿ ಹಾಕಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ. ಬಿಡಿಎ ಎಇಇ ಅಶೋಕ್ ಬಾಗಿ ಅವರು ತೆರವು ಕಾರ್ಯಾಚರಣೆ ನಡೆಸುತ್ತಿದ್ದಾಗ, ಆಯುಕ್ತರ ಆದೇಶವನ್ನೇ ಪ್ರಶ್ನಿಸಿ ಮಂಜುನಾಥ್ ಗಲಾಟೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಘಟನೆ […]
‘ರಾಜ್ಯ ಸರ್ಕಾರಿ’ನೌಕರರೇ ಗಮನಿಸಿ : ಕರ್ತವ್ಯದ ವೇಳೆ ಈ ನಿಯಮಗಳ ಪಾಲನೆ ಕಡ್ಡಾಯ |Govt Employee
ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ಕಚೇರಿ ನಡವಳಿಕೆ ಮತ್ತು ಶಿಸ್ತಿನ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯು (DPAR) ಎಲ್ಲಾ ನೌಕರರಿಗೆ ಕಟ್ಟುನಿಟ್ಟಿನ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ. ನಿಯಮ ಉಲ್ಲಂಘಿಸುವ ನೌಕರರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಸರ್ಕಾರ ಎಚ್ಚರಿಸಿದೆ. ಹೊಸ ನಿಯಮಗಳ ಮುಖ್ಯಾಂಶಗಳು ಅಧಿಕಾರಿಗಳಿಗೆ ಸೂಚನೆ: ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವಂತೆ ಮತ್ತು ನೌಕರರು ನಗದು ಘೋಷಣೆ ಹಾಗೂ ಚಲನವಲನ ವಹಿಯನ್ನು ನಿರ್ವಹಿಸುತ್ತಿದ್ದಾರೆಯೇ ಎಂದು ಆಗಿಂದಾಗ್ಗೆ ಪರಿಶೀಲಿಸುವಂತೆ […]
ಉಡುಪಿ ವಿಮಾನ ನಿಲ್ದಾಣ ಯೋಜನೆ: ಅಪ್ಡೇಟ್
ಕರ್ನಾಟಕದಲ್ಲಿ ಹಲವಾರು ವಿಮಾನ ನಿಲ್ದಾಣ ಯೋಜನೆಗಳ ಕುರಿತು ಚರ್ಚೆಗಳು ನಡೆಯುತ್ತಿವೆ. ಬೆಂಗಳೂರು ನಗರದಲ್ಲಿ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸರ್ಕಾರ ಆಸಕ್ತಿ ತೋರಿದೆ. ವಿಜಯಪುರ ವಿಮಾನ ನಿಲ್ದಾಣ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಕೆಲವೇ ದಿನಗಳಲ್ಲಿ ಲೋಕಾರ್ಪಣೆಯಾಗಲಿದೆ. ಹಾಸನ ವಿಮಾನ ನಿಲ್ದಾಣ ಕಾಮಗಾರಿ ನಡೆಯುತ್ತಿದೆ. ಮೈಸೂರು ವಿಮಾನದ ರನ್ ವೇ ವಿಸ್ತರಣೆ ಕುರಿತು ಚರ್ಚೆಗಳು ಸಾಗಿವೆ. ಈಗ ಉಡುಪಿ ಜಿಲ್ಲೆಯ ವಿಮಾನ ನಿಲ್ದಾಣದ ಕುರಿತು ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅಪ್ಡೇಟ್ ನೀಡಿದ್ದಾರೆ. ಸದ್ಯ ಉಡುಪಿಗೆ […]
ಮನೆ ಬಳಿ ಆಟವಾಡುತ್ತಿದ್ದ ಒಂದೂವರೆ ವರ್ಷದ ಮಗುವಿನ ಮೇಲೆ ಹರಿದ ಕಾರು: ಕಂದಮ್ಮ ಸ್ಥಳದಲ್ಲೇ ಸಾವು
ಬೆಳಗಾವಿ: ಪುಟ್ಟ ಮಕ್ಕಳು ಆಟವಾಡುತ್ತಿದ್ದರೆ ಎಂದು ಪೋಷಕರು ಕೊಂಚ ನಿರ್ಲಕ್ಷ ಮಾಡಿದರೆ ಅಷ್ಟರಲ್ಲಿ ಅನಾಹುತಗಳನ್ನೇ ಮಾದಿಕೊಂಡು ಬಿಟ್ಟಿರುತ್ತಾರೆ. ಇಲ್ಲೊಂದು ಘಟನೆಯಲ್ಲಿ ಇಂತದ್ದೇ ಅನಾಹುತ ಸಂಭವಿಸಿ ಮಗು ಕಾರಿನ ಚಕ್ರಕ್ಕೆ ಸಿಲುಕಿ ಬಲಿಯಾಗಿದೆ. ಮನೆ ಮುಂದೆ ಆಟವಾಡುತ್ತಾ ಕುಳಿತಿದ್ದ ಮಗು ಮೇಲೆ ವೇಗವಾಗಿ ಬಂದ ಕಾರು ಹರಿದು ಹೋಗಿದ್ದು, ಕಂದಮ್ಮ ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ವಾಟರೆ ಗ್ರಾಮದಲ್ಲಿ ನಡೆದಿದೆ. ಒಂದೂವರೆ ವರ್ಷದ ಮಗು ತ್ರಿಷಾ ಮೃತ ಕಂದಮ್ಮ. ರಸ್ತೆ ಪಕ್ಕದಲ್ಲಿಯೇ ಇದ್ದ […]
ಬೆಂಗಳೂರಿಗರೇ ಎಚ್ಚರ : ‘ಕಾವೇರಿ’ನೀರು ಪೋಲು ಮಾಡಿದ್ರೆ ಬೀಳುತ್ತೆ 5000 ರೂ. ದಂಡ.!
ಬೆಂಗಳೂರು : ಬೇಸಿಗೆ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ನೀರಿನ ಅಭಾವ ಉಂಟಾಗದಂತೆ ತಡೆಯಲು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಹಲವಾರು ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೆ ತಂದಿದೆ . ಕುಡಿಯುವ ನೀರನ್ನು (ಕಾವೇರಿ ನೀರು) ಅತಿ ಅವಶ್ಯಕವಲ್ಲದ ಉದ್ದೇಶಗಳಿಗೆ ಬಳಸುವುದನ್ನು ನಿಷೇಧಿಸಲಾಗಿದೆ. ಈ ನಿಯಮ ಉಲ್ಲಂಘಿಸಿದರೆ ಮೊದಲ ಬಾರಿಗೆ ₹5,000 ದಂಡ ವಿಧಿಸಲಾಗುತ್ತದೆ. ಉಲ್ಲಂಘನೆ ಮುಂದುವರಿದರೆ ಪ್ರತಿದಿನಕ್ಕೆ ₹500 ಹೆಚ್ಚುವರಿ ದಂಡ ವಿಧಿಸಲಾಗುತ್ತದೆ. ಹೌದು, ಬೇಸಿಗೆ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ನೀರಿನ ಅಭಾವ ಉಂಟಾಗದಂತೆ ತಡೆಯಲು […]
ಫೆ. 13ರಿಂದ ಹಂಪಿ ಉತ್ಸವ 2026, ತಯಾರಿ ಹೇಗಿದೆ?
ವಿಜಯನಗರ ಸಾಮ್ಯಾಜ್ಯದ ಗತವೈಭವ ನೆನಪು ಮಾಡಿಕೊಡುವ ಹಂಪಿ ಉತ್ಸವದ ತಯಾರಿ ನಡೆಯುತ್ತಿದೆ. ಹಂಪಿ ಉತ್ಸವ-2026 ಫೆಬ್ರವರಿ 13,14 ಮತ್ತು 15ರಂದು ನಡೆಯಲಿದೆ. ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ಉತ್ಸವದ ವೇದಿಕೆ ನಿರ್ಮಾಣದ ಕುರಿತು ಪರಿಶೀಲನೆ ನಡೆಸಿದರು. ವಿಜಯನಗರ ಜಿಲ್ಲೆ ಹೊಸಪೇಟೆ ತಾಲ್ಲೂಕಿನ ವಿಶ್ವ ಪ್ರಸಿದ್ಧ ಹಂಪಿಯಲ್ಲಿ ಫೆ.13ರಿಂದ 15ರವರೆಗೆ ಹಂಪಿ ಉತ್ಸವ-2026 ನಡೆಯಲಿದೆ. ಉತ್ಸವಕ್ಕೆ ಭರ್ಜರಿ ತಯಾರಿ ನಡೆಯುತ್ತಿದೆ. ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಈ ಬಾರಿಯ ಉತ್ಸವಕ್ಕೆ ಆಗಮಿಸುತ್ತಿದ್ದಾರೆ. ಫೆಬ್ರವರಿ 13ರ […]
ತಲೆ ದಿಂಬಿನ ಬಳಿ ‘ಮೊಬೈಲ್’ಇಟ್ಟುಕೊಂಡು ಮಲಗಿದ್ರೆ ಕ್ಯಾನ್ಸರ್ ಬರುತ್ತಾ.? : ತಜ್ಞರಿಂದ ಅಸಲಿ ಸತ್ಯ ಬಯಲು
ಭಾರತದಲ್ಲಿ ಹೆಚ್ಚಿನ ಜನರು ಮಲಗುವ ಮುನ್ನ ಮೊಬೈಲ್ ಸ್ಕ್ರೋಲ್ ಮಾಡುತ್ತಾರೆ ಅಥವಾ ಫೋನ್ ಅನ್ನು ತಲೆಯ ಪಕ್ಕದಲ್ಲೇ (ದಿಂಬಿನ ಬಳಿ) ಇಟ್ಟುಕೊಂಡು ಮಲಗುತ್ತಾರೆ. ಈ ಅಭ್ಯಾಸವು ಸಾಮಾನ್ಯವಾಗಿದೆ, ಆದರೆ ಇದು ಆರೋಗ್ಯದ ಮೇಲೆ ಪರಿಣಾಮ ಬೀರಬಹುದೇ? ಕ್ಯಾಲಿಫೋರ್ನಿಯಾದ ಲಾಸ್ ಏಂಜಲೀಸ್ನ ಅರಿವಳಿಕೆ ತಜ್ಞ (Anesthesiologist) ಡಾ. ಮೈರೋ ಫಿಗುರಾ ಅವರು ತಮ್ಮ ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ ಈ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಅವರು ಏನು ಹೇಳಿದ್ದಾರೆ ಮತ್ತು ನಿಜವಾಗಿಯೂ ಇದರಿಂದ ಕ್ಯಾನ್ಸರ್ ಅಪಾಯವಿದೆಯೇ ಎಂಬ ವಿವರ ಇಲ್ಲಿದೆ. ನಿಜವಾಗಿಯೂ […]
ನಂದಿನಿ ಉತ್ಪನ್ನಗಳಿಗೆ ರಾಯಭಾರಿಯಾಗಿ ಸುಧಾರಾಣಿ ನೇಮಕ: ಬಮೂಲ್ ನಡೆಗೆ KMFನಿಂದ ತೀವ್ರ ಆಕ್ಷೇಪ
ಬೆಂಗಳೂರು: ಮೈಸೂರು ಸ್ಯಾಂಡಲ್ ಉತ್ಪನ್ನಗಳಿಗೆ ಖ್ಯಾತ ನಟಿ ತಮನ್ನಾ ಭಾಟಿಯಾರನ್ನು ರಾಯಭಾರಿಯನ್ನಾಗಿ ನೇಮಕ ಮಾಡಿದ್ದಕ್ಕೆ ಕೆಲ ದಿನಗಳ ಹಿಂದೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಕನ್ನಡದ ನಟಿಯರನ್ನು ಬಿಟ್ಟು ಪರಭಾಷಾ ನಟಿಯರಿಗೆ ಸರ್ಕಾರ ಮಣೆ ಹಾಕುತ್ತಿರುವುದಕ್ಕೆ ಆಕ್ಷೇಪ ವ್ಯಕ್ತವಾಗಿತ್ತು. ಇದೀಗ ಬೆಂಅಗ್ಳೂರು ಹಾಲೂ ಒಕ್ಕೂಟ-ಬಮೂಲ್ ನಂದಿನಿ ಉತ್ಪನ್ನಗಳಿಗೆ ಪ್ರಚಾರ ರಾಯಭಾರಿಯನ್ನಾಗಿ ಕನ್ನಡದ ಖ್ಯಾತ ನಟಿ ಸುಧಾರಾಣಿ ಅವರನ್ನು ನೇಮಕ ಮಾಡಿರುವುದಕ್ಕೆ ವಿರೋಧ ವ್ಯಕ್ತವಾಗಿದೆ. ನಂದಿನಿ ಉತ್ಪನ್ನಗಳಿಗೆ ರಾಯಭಾರಿಯನ್ನಾಗಿ ಸುಧಾರಾಣಿ ಅವರನ್ನು ನೇಮಕ ಮಾಡುವ ಮೂಲಕ ಬಮೂಲ್ ಸ್ವತಂತ್ರ ನಿರ್ಧಾರ […]
T20 World Cup 2026: ವೇಗದ ಟಿ20 ಶತಕ ಬಾರಿಸಿದ ಶನಕ; ಟೂರ್ನಿಯಲ್ಲಿ ಅತ್ಯಧಿಕ ರನ್ ಬಾರಿಸಿದ ಲಂಕಾ
ಪಲ್ಲೆಕೆಲೆ ಕ್ರೀಡಾಂಗಣದಲ್ಲಿ ಐಸಿಸಿ ಟಿ ಟ್ವೆಂಟಿ ವಿಶ್ವಕಪ್ 2026ರ ಟೂರ್ನಿಯ ಗ್ರೂಪ್ ಹಂತದ 16ನೇ ಪಂದ್ಯ ನಡೆಯುತ್ತಿದ್ದು, ಶ್ರೀಲಂಕಾ ಹಾಗೂ ಒಮನ್ ತಂಡಗಳು ಮುಖಾಮುಖಿಯಾಗಿವೆ. ಪಂದ್ಯದಲ್ಲಿ ಟಾಸ್ ಗೆದ್ದು ಫೀಲ್ಡಿಂಗ್ ಆರಿಸಿಕೊಂಡ ಒಮನ್ ಶ್ರೀಲಂಕಾ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ಅದರಂತೆ ಶ್ರೀಲಂಕಾ ರನ್ ಮಳೆ ಸುರಿಸಿದ್ದು, 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 225 ರನ್ ಕಲೆಹಾಕಿ ಒಮನ್ಗೆ 226 ರನ್ಗಳ ಗುರಿಯನ್ನು ನೀಡಿದೆ. ಇದು ಈ ಬಾರಿಯ ಟೂರ್ನಿಯಲ್ಲಿ ಇಲ್ಲಿಯವರೆಗೆ ದಾಖಲಾದ ಅತ್ಯಧಿಕ […]
ಆಕಾಶದಲ್ಲಿ ಅದ್ಭುತ ಬೆಂಕಿಯ ಉಂಗುರ: ಫೆ. 17ಕ್ಕೆ ವರ್ಷದ ಮೊದಲ ಸೂರ್ಯಗ್ರಹಣ
ಬೆಂಗಳೂರು: ಖಗೋಳ ಪ್ರಿಯರೇ ಗಮನಿಸಿ, 2026ರ ಮೊದಲ ಸೌರ ಕೌತುಕಕ್ಕೆ ಕ್ಷಣಗಣನೆ ಆರಂಭವಾಗಿದೆ. ಫೆಬ್ರವರಿ 17ರಂದು ಆಕಾಶದಲ್ಲಿ ರಿಂಗ್ ಆಫ್ ಫೈರ್(Ring of Fire) ಖ್ಯಾತಿಯ ಕಂಕಣ ಸೂರ್ಯಗ್ರಹಣ ಸಂಭವಿಸಲಿದೆ. ವಿಜ್ಞಾನಿಗಳು ಈ ವಿದ್ಯಮಾನವನ್ನು ವೀಕ್ಷಿಸಲು ಕಾತರರಾಗಿದ್ದರೆ, ಭಾರತದಲ್ಲಿ ಇದರ ಪರಿಣಾಮವೇನು ಎಂಬ ಚರ್ಚೆಗಳು ಶುರುವಾಗಿವೆ. ಏನಿದು ಕಂಕಣ ವಿಶೇಷ?ಸೂರ್ಯ ಮತ್ತು ಭೂಮಿಯ ನಡುವೆ ಚಂದ್ರ ಬಂದಾಗ ಸೂರ್ಯಗ್ರಹಣ ಸಂಭವಿಸುತ್ತದೆ. ಆದರೆ ಚಂದ್ರನು ಭೂಮಿಯಿಂದ ತುಸು ದೂರವಿದ್ದಾಗ, ಸೂರ್ಯನನ್ನು ಸಂಪೂರ್ಣವಾಗಿ ಮುಚ್ಚಲು ಅವನಿಗೆ ಸಾಧ್ಯವಾಗುವುದಿಲ್ಲ. ಈ ವೇಳೆ […]
ಆಳಂದದ ಲಾಡ್ಲೇ ಮಶಾಕ್ ದರ್ಗಾದಲ್ಲಿ ಶಿವರಾತ್ರಿ ಪೂಜೆಗೆ ಸುಪ್ರೀಂ ಕೋರ್ಟ್ ಅನುಮತಿ
ನವದೆಹಲಿ: ಕಲಬುರಗಿ ಜಿಲ್ಲೆಯ ಆಳಂದದ ವಿವಾದಿತ ಲಾಡ್ಲೇ ಮಶಾಕ್ ದರ್ಗಾದಲ್ಲಿ ಶಿವರಾತ್ರಿ ಪೂಜೆಗೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್ ನೀಡಿದೆ. ಈ ಮೂಲಕ ಕಲಬುರಗಿ ಹೈಕೋರ್ಟ್ ಪೀಠ ನೀಡಿದ್ದ ಆದೇಶವನ್ನು ಎತ್ತಿಹಿಡಿದಿದೆ. ಲಾಡ್ಲೇ ಮಶಾಕ್ ದರ್ಗಾದಲ್ಲಿ ಶಿವರಾತ್ರಿ ಪೂಜೆಗೆ ಅವಕಾಶ ಕೊಡದಂತೆ ದರ್ಗಾ ಸಮಿತಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸುವ ಸುಪ್ರೀಂಕೋರ್ಟ್, ಹೈಕೋರ್ಟ್ ಆದೇಶವನ್ನು ಪುರಸ್ಕರಿಸಿದೆ. ಈ ಹಿನ್ನೆಲೆಯಲ್ಲಿ ದರ್ಗಾದಲ್ಲಿ ಮಹಾಶಿವರಾತ್ರಿ ಪೂಜೆಗೆ ಇದ್ದ ಕಾನೂನು ತಿಡಕುಗಳು ನಿವಾರಣೆಯಾದಂತಾಗಿದೆ. ಫೆಬ್ರವರಿ 11ರಂದು ಕಲಬುರಗಿ ಹೈಕೋರ್ಟ್ ಪೀಠ ಶಿವರಾತ್ರಿ […]
ಹಾವೇರಿ: 4 ರೈಲು ಯೋಜನೆಗಾಗಿ ಕೇಂದ್ರ ಸಚಿವರಿಗೆ ಮನವಿ
ಹಾವೇರಿ ಜಿಲ್ಲೆಯ ವಿವಿಧ ರೈಲು ಯೋಜನೆಗಳ ಕುರಿತು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಮನವಿ ಸಲ್ಲಿಕೆ ಮಾಡಲಾಗಿದೆ. ಈ ಕುರಿತು ಹಾವೇರಿ-ಗದಗ ಸಂಸದ ಬಸವರಾಜ ಬೊಮ್ಮಾಯಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ. ಇಂದು ನವದೆಹಲಿಯಲ್ಲಿ ಕೇಂದ್ರ ರೇಲ್ವೆ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರನ್ನು ಭೇಟಿಯಾಗಿ ಈ ಕೆಳಕಂಡ ಬೇಡಿಕೆಯೊಳಗೊಂಡ ಮನವಿಯನ್ನು ಸಲ್ಲಿಸಿದೆನು ಎಂದು ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಯಾವ-ಯಾವ ಯೋಜನೆಗಳು ಈ ಸಂದರ್ಭದಲ್ಲಿ ನಮ್ಮ ಮನವಿಯನ್ನು ಆಲಿಸಿದ ಸಚಿವರು ಶ್ರೀಘ್ರವಾಗಿ ಪರಿಶೀಲಿಸಿ, ಕ್ರಮಕೈಗೊಳ್ಳುವುದಾಗಿ […]
ರಾಜ್ಯದ ಮಡಿವಾಳ ಮಾಚಿದೇವ ಸಮುದಾಯಕ್ಕೆ ಗುಡ್ ನ್ಯೂಸ್ : ಸಹಾಯಧನ ಸೌಲಭ್ಯಕ್ಕೆ ಅರ್ಜಿ ಆಹ್ವಾನ.!
ಕರ್ನಾಟಕ ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮದಿಂದ 2025-26ನೇ ಸಾಲಿನಲ್ಲಿ ಆಹಾರ ವಾಹಿನಿ(ಆಹಾರ ಕಿಯೋಸ್ಕ್) ಯೋಜನೆಯಡಿ ಅರ್ಜಿ ಆಹ್ವಾನಿಸಲಾಗಿದೆ. ಆಹಾರ ವಾಹಿನಿ(ಆಹಾರ ಕಿಯೋಸ್ಕ್) ಯೋಜನೆಯಡಿ ಸ್ಥಳಾಂತರಿಸಬಹುದಾದ ತಿಂಡಿ ಮಳಿಗೆಗಳನ್ನು ನಾಲ್ಕು ಚಕ್ರಗಳ ಇಗಿ-ಗೂಡ್ಸ್ ವಾಹನಗಳನ್ನು ಅಗತ್ಯಕ್ಕೆ ತಕ್ಕಂತೆ ನವೀಕರಿಸಿ ಫಲಾನುಭವಿಗಳಿಗೆ ವಿತರಿಸುವ ಯೋಜನೆಯಾಗಿದೆ. ನಿಗಮದಿಂದ ವಾಹನ ಖರೀದಿಗೆ ರೂ.3.00 ಲಕ್ಷಗಳ ಸಹಾಯಧನವನ್ನು ಬಿಡುಗಡೆ ಮಾಡಲಾಗುವುದು. ಉಳಿಕೆ ಮೊತ್ತವನ್ನು ಬ್ಯಾಂಕ್ ಗಳು/ಹಣಕಾಸು ಸಂಸ್ಥೆಗಳಿಂದ ಸಾಲ ಪಡೆಯಬಹುದಾಗಿರುತ್ತದೆ. ನಗರ ಪ್ರದೇಶದ ವಿಧಾನಸಭಾ ಕ್ಷೇತ್ರವಾದ ಮಡಿಕೇರಿ ವಿಧಾನಸಭಾ ಕ್ಷೇತ್ರದ ಹಿಂದುಳಿದ ವರ್ಗಗಳಲ್ಲಿ ಬರುವ […]
ನವದೆಹಲಿ: ದೆಹಲಿಯ ಕೆಂಪುಕೋಟೆ ಬಳಿ ನಡೆದಿದ್ದ ಕಾರು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಹೊಸ ವರದಿಯನ್ನು ಬಿಡುಗಡೆ ಮಾಡಿದೆ. ವರದಿಯಲ್ಲಿ ಈ ದಾಳಿಯಲ್ಲಿ ಪಾಕಿಸ್ತಾನಿ ಉಗ್ರ ಸಂಘಟನೆ ಜೈಶ್-ಎ ಮೊಹಮ್ಮದ್ ಕೈವಾಡವಿತ್ತು ಎಂಬುದನ್ನು ಸ್ಪಷ್ಟಪಡಿಸಲಾಗಿದೆ. ವಿಶ್ವಸಂಸ್ಥೆಯ 37 ನೇ ವರದಿಯು ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹಮ್ಮದ್ ನಂಟು ಇರುವುದನ್ನು ಖಚಿತಪಡಿಸಿದೆ. ವರದಿ ಪ್ರಕಾರ, ಜೈಶ್ ಉಗ್ರ ಸಂಘಟನೆ ಈ ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ ಎಂದು ಸದಸ್ಯ ರಾಷ್ಟ್ರವೊಂದು ಹೇಳಿದೆ. ವರದಿಯು ಗಡಿಯಾಚೆಗಿನ ಭಯೋತ್ಪಾದನೆಯ […]
ತಮಿಳುನಾಡಲ್ಲಿ ಈ ಬಾರಿ ಮೈತ್ರಿಕೂಟವಿಲ್ಲ: ಒಂದೇ ಪಕ್ಷಕ್ಕೆ ಬಹುಮತ
ತಮಿಳುನಾಡು ವಿಧಾನಸಭೆ ಚುನಾವಣೆ 2026 ತಯಾರಿ ಆರಂಭವಾಗಿದೆ. ರಾಜ್ಯದ ಆಡಳಿತ ಪಕ್ಷ ಕಾಂಗ್ರೆಸ್-ಡಿಎಂಕೆ ಮೈತ್ರಿಕೂಟ. ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್. ಆದರೆ ಈ ಬಾರಿಯ ಚುನಾವಣೆಯಲ್ಲಿ ಮೈತ್ರಿ ಮುಂದುವರೆಯಲಿದೆಯೇ? ಎಂಬುದು ಸದ್ಯಕ್ಕೆ ಗೊಂದಲದ ಗೂಡಾಗಿದೆ. ಸಿಎಂ ಎಂ.ಕೆ.ಸ್ಟಾಲಿನ್ ಕಾಂಗ್ರೆಸ್ ಜೊತೆಗಿನ ಮೈತ್ರಿಯ ಕುರಿತು ಮಾತನಾಡಿ, ರಾಜ್ಯದಲ್ಲಿ ಒಂದೇ ಪಕ್ಷದ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದರು. ಈಗ ಕಾಂಗ್ರೆಸ್ ನಾಯಕರೊಬ್ಬರು ಈ ಕುರಿತು ಮಾತನಾಡಿದ್ದಾರೆ. ಕಾಂಗ್ರೆಸ್ ಸಂಸದ, ಪಕ್ಷದ ಹಿರಿಯ ನಾಯಕ ಬಿ. ಮಾಣಿಕ್ಯಂ ಟ್ಯಾಗೋರ್, […]
ಇನ್ಮುಂದೆ ಒಂದೇ ಕ್ಲಿಕ್’ನಲ್ಲಿ ವಿಮೆ, ಕ್ರೆಡಿಟ್ ಕಾರ್ಡ್ ಮಾರಾಟ ಮಾಡುವಂತಿಲ್ಲ: ನಿಯಮ ಕಠಿಣಗೊಳಿಸಿದ RBI !
ನೀವು ಬ್ಯಾಂಕಿಗೆ ಸಾಲ ಪಡೆಯಲು ಹೋದಾಗ, ಸಾಲದ ಜೊತೆಗೆ ವಿಮೆ (Insurance) ಅಥವಾ ಕ್ರೆಡಿಟ್ ಕಾರ್ಡ್ಗಳನ್ನು ಬಲವಂತವಾಗಿ ನಿಮ್ಮ ಕೈಗಿಡುತ್ತಿದ್ದಾರೆಯೇ? ಹಾಗಿದ್ದರೆ ಈ ಸುದ್ದಿ ನಿಮಗಾಗಿ. ಇನ್ನು ಮುಂದೆ ನಿಮ್ಮ ಒಪ್ಪಿಗೆಯಿಲ್ಲದೆ ಅಥವಾ ಕೇವಲ ಒಂದು ಕ್ಲಿಕ್ ಮೂಲಕ ಬ್ಯಾಂಕುಗಳು ಯಾವುದೇ ಪಾಲಿಸಿ ಅಥವಾ ಕಾರ್ಡ್ಗಳನ್ನು ಮಾರಾಟ ಮಾಡುವಂತಿಲ್ಲ. ಭಾರತೀಯ ರಿಸರ್ವ್ ಬ್ಯಾಂಕ್ (RBI) ‘ಮಿಸ್-ಸೆಲ್ಲಿಂಗ್’ (ತಪ್ಪು ಮಾಹಿತಿ ನೀಡಿ ಮಾರಾಟ ಮಾಡುವುದು) ಮತ್ತು ‘ಡಾರ್ಕ್ ಪ್ಯಾಟರ್ನ್’ (ಗ್ರಾಹಕರನ್ನು ದಾರಿ ತಪ್ಪಿಸುವ ಡಿಜಿಟಲ್ ತಂತ್ರಗಳು) ತಡೆಗಟ್ಟಲು ಹೊಸ […]
ವೀಕೆಂಡ್ ಸ್ಪೆಷಲ್ ಅಡುಗೆಗೆ ಪ್ಲಾನ್ ಮಾಡ್ತಿದ್ದೀರಾ? ಹಾಗಿದ್ರೆ ಈ ಪನೀರ್ ದಮ್ ಆಲೂ ಟ್ರೈ ಮಾಡಿ ನೋಡಿ
ಉತ್ತರ ಭಾರತದ ಅತ್ಯಂತ ಜನಪ್ರಿಯ ಹಾಗೂ ರಾಜಶಾಹಿ ಊಟದ ಅನುಭವ ನೀಡುವ ಖಾದ್ಯಗಳಲ್ಲಿ ‘ಪನೀರ್ ಸ್ಟಫ್ಡ್ ದಮ್ ಆಲೂ’ ಪ್ರಮುಖವಾದುದು. ಮೃದುವಾದ ಪನೀರ್ ಮಿಶ್ರಣವನ್ನು ಆಲೂಗಡ್ಡೆಯೊಳಗೆ ತುಂಬಿಸಿ, ಘಮಘಮಿಸುವ ಮಸಾಲೆಯುಕ್ತ ಗ್ರೇವಿಯಲ್ಲಿ ಬೇಯಿಸುವ ಈ ರೆಸಿಪಿ ಹಬ್ಬ ಅಥವಾ ವಿಶೇಷ ಸಂದರ್ಭಗಳಿಗೆ ಹೇಳಿಮಾಡಿಸಿದಂತಿದೆ. ಸಾಂಪ್ರದಾಯಿಕ ‘ದಮ್’ ಅಂದರೆ ಸಣ್ಣ ಉರಿಯಲ್ಲಿ ನಿಧಾನವಾಗಿ ಬೇಯಿಸುವ ವಿಧಾನ. ಈ ರೀತಿ ಬೇಯಿಸುವುದರಿಂದ ಮಸಾಲೆಗಳು ಆಲೂಗಡ್ಡೆಯೊಳಗೆ ಸರಿಯಾಗಿ ಇಳಿದು ಅದ್ಭುತ ರುಚಿ ನೀಡುತ್ತವೆ. ಇದನ್ನು ನಾನ್, ರೋಟಿ ಅಥವಾ ಜೀರಾ ರೈಸ್ […]
BREAKING : ಸುಪ್ರೀಂಕೋರ್ಟ್’ನಲ್ಲೂ ಶಾಸಕ ಭೈರತಿ ಬಸವರಾಜ್ ಗೆ ಬಿಗ್ ಶಾಕ್ : ನಿರೀಕ್ಷಣಾ ಜಾಮೀನು ಅರ್ಜಿ ವಜಾ.!
ಬೆಂಗಳೂರು : ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿರುವ ‘ಬಿಕ್ಲು ಶಿವ’ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಹಾಗೂ ಹಾಲಿ ಶಾಸಕ ಭೈರತಿ ಬಸವರಾಜ್ ಅವರಿಗೆ ಸುಪ್ರೀಂಕೋರ್ಟ್ನಲ್ಲಿ ಬಿಗ್ ಶಾಕ್ ಎದುರಾಗಿದೆ. ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಸುಪ್ರೀಂಕೋರ್ಟ್ ಇಂದು ವಜಾಗೊಳಿಸಿದ್ದು, ಶಾಸಕರಿಗೆ ಬಂಧನದ ಭೀತಿ ಎದುರಾಗಿದೆ. ಈಗಾಗಲೇ ಹೈಕೋರ್ಟ್ನಲ್ಲಿ ಜಾಮೀನು ಅರ್ಜಿ ತಿರಸ್ಕೃತಗೊಂಡಿದ್ದರಿಂದ, ಭೈರತಿ ಬಸವರಾಜ್ ಅವರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಆದರೆ, ಪ್ರಕರಣದ ಗಂಭೀರತೆಯನ್ನು ಪರಿಗಣಿಸಿದ ನ್ಯಾಯಪೀಠವು, ತನಿಖೆಯ ಈ ಹಂತದಲ್ಲಿ ನಿರೀಕ್ಷಣಾ ಜಾಮೀನು ನೀಡಲು […]
BREAKING : ಸುಪ್ರೀಂಕೋರ್ಟ್’ನಲ್ಲೂ ಶಾಸಕ ಭೈರತಿ ಬಸವರಾಜ್’ಗೆ ಬಿಗ್ ಶಾಕ್ : ನಿರೀಕ್ಷಣಾ ಜಾಮೀನು ಅರ್ಜಿ ವಜಾ.!
ಬೆಂಗಳೂರು : ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿರುವ ‘ಬಿಕ್ಲು ಶಿವ’ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಹಾಗೂ ಹಾಲಿ ಶಾಸಕ ಭೈರತಿ ಬಸವರಾಜ್ ಅವರಿಗೆ ಸುಪ್ರೀಂಕೋರ್ಟ್ನಲ್ಲಿ ಬಿಗ್ ಶಾಕ್ ಎದುರಾಗಿದೆ. ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಸುಪ್ರೀಂಕೋರ್ಟ್ ಇಂದು ವಜಾಗೊಳಿಸಿದ್ದು, ಶಾಸಕರಿಗೆ ಬಂಧನದ ಭೀತಿ ಎದುರಾಗಿದೆ. ಈಗಾಗಲೇ ಹೈಕೋರ್ಟ್ನಲ್ಲಿ ಜಾಮೀನು ಅರ್ಜಿ ತಿರಸ್ಕೃತಗೊಂಡಿದ್ದರಿಂದ, ಭೈರತಿ ಬಸವರಾಜ್ ಅವರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಆದರೆ, ಪ್ರಕರಣದ ಗಂಭೀರತೆಯನ್ನು ಪರಿಗಣಿಸಿದ ನ್ಯಾಯಪೀಠವು, ತನಿಖೆಯ ಈ ಹಂತದಲ್ಲಿ ನಿರೀಕ್ಷಣಾ ಜಾಮೀನು ನೀಡಲು […]
ನವದೆಹಲಿ: ರಾಜ್ಯ ಕಾಂಗ್ರೆಸ್ ನಲ್ಲಿ ಅಧಿಕಾರ ಹಸ್ತಾಂತರ ಚರ್ಚೆ ನಡುವೆಯೇ ದೆಹಲಿಯಲ್ಲಿ ಬೀಡು ಬಿಟ್ಟಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಹೈಕಮಾಂಡ್ ನಾಯಕರನ್ನು ಭೇತಿಯಾಗಿ ಮಹತ್ವದ ಸಮಾಲೋಚನೆ ನಡೆಸಿದ್ದಾರೆ. ಇಂದು ಬೆಳಿಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿ ಹಲವಾರು ವಿಚಾರಗಳನ್ನು ಚರ್ಚೆ ನಡೆಸಿದರು. ನವದೆಹಲಿಯ 10 ಜನಪಥ ರಸ್ತೆಯಲ್ಲಿರುವ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರ ನಿವಾಸದಲ್ಲಿ ರಾಹುಲ್ ಗಾಂಧಿ ಅವರನ್ನು ಭೇಟಿಯಾದ ಡಿಸಿಎಂ ಡಿ.ಕೆ.ಶಿವಕುಮಾರ್, ನಾಯಕತ್ವ ಬದಲಾವಣೆ ವಿಚಾರ, ಪ್ರಸ್ತುತ ರಾಜ್ಯ ರಾಜಕೀಯ ಬೆಳವಣಿಗೆ, ಮುಂಬರುವ […]
ಉತ್ತರಪ್ರದೇಶದ ಕನೌಜ್ ಜಿಲ್ಲೆಯಲ್ಲಿ ಬುಧವಾರ (ಫೆಬ್ರವರಿ 11) ಒಂದು ವಿಚಿತ್ರ ಹಾಗೂ ದುರದೃಷ್ಟಕರ ಘಟನೆ ನಡೆದಿದೆ. ತಾನು ಪ್ರೀತಿಸಿದ ಹುಡುಗಿಯ ಜೊತೆ ಮದುವೆ ಮಾಡಿಸಬೇಕೆಂದು ಪಟ್ಟು ಹಿಡಿದು 100 ಅಡಿ ಎತ್ತರದ ಮೊಬೈಲ್ ಟವರ್ ಏರಿದ್ದ 18 ವರ್ಷದ ಯುವಕ, ಕೊನೆಗೆ ಅಲ್ಲಿಂದ ಕೆಳಗೆ ಬಿದ್ದು ಪ್ರಾಣ ಕಳೆದುಕೊಂಡಿದ್ದಾನೆ. ಯುವಕ ಟವರ್ ಏರಿ ಸುಮಾರು ಎರಡು ಗಂಟೆಗಳ ಕಾಲ ಅಲ್ಲಿಯೇ ಇದ್ದನು. ಟವರ್ ಮೇಲಿಂದ ಒಬ್ಬ ಹುಡುಗಿಯ ಹೆಸರನ್ನು ಪದೇ ಪದೇ ಕೂಗುತ್ತಾ, “ನನಗೆ ಅವಳ ಜೊತೆ […]
BREAKING : ಕಾನ್ಪುರ ಲ್ಯಾಂಬೋರ್ಗಿನಿ ಕಾರು ಅಪಘಾತ ಕೇಸ್ : ತಂಬಾಕು ಉದ್ಯಮಿ ಪುತ್ರ ‘ಶಿವಂ ಮಿಶ್ರಾ’ಅರೆಸ್ಟ್.!
ಕಾನ್ಪುರದ ಲಂಬೋರ್ಗಿನಿ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಮುಖ ತಂಬಾಕು ಉದ್ಯಮಿ ಕೆ.ಕೆ. ಮಿಶ್ರಾ ಅವರ ಪುತ್ರ ಶಿವಂ ಮಿಶ್ರಾ ಅವರನ್ನು ಗುರುವಾರ ಬಂಧಿಸಲಾಗಿದೆ. ಅವರಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದ್ದು, ಶೀಘ್ರದಲ್ಲೇ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಕಾನ್ಪುರದ ವಿಐಪಿ ರಸ್ತೆಯಲ್ಲಿ ನಡೆದ ಈ ಅಪಘಾತವು, ಘಟನೆಯ ಸಮಯದಲ್ಲಿ ವಾಹನವನ್ನು ಯಾರು ಚಲಾಯಿಸುತ್ತಿದ್ದರು ಎಂಬ ಬಗ್ಗೆ ತೀವ್ರ ಚರ್ಚೆಗೆ ಕಾರಣವಾಗಿತ್ತು. ಇದು ಸ್ಥಳೀಯ ಅಧಿಕಾರಿಗಳಿಂದ ಸುದೀರ್ಘ ತನಿಖೆಗೆ ನಾಂದಿ ಹಾಡಿತ್ತು. ಆರಂಭದಲ್ಲಿ ವಾಹನ ಚಲಾಯಿಸುತ್ತಿದ್ದವರು ಯಾರು ಎಂಬ ಬಗ್ಗೆ ಗೊಂದಲವಿತ್ತು. ಎಫ್ಐಆರ್ನಲ್ಲಿ ಶಿವಂ […]
ಮುತ್ತಿನಂತಹ ನಗುವಿಗೆ ಇಲ್ಲಿದೆ ಮ್ಯಾಜಿಕ್ ಮದ್ದು: ಹಳದಿ ಹಲ್ಲುಗಳ ಸಮಸ್ಯೆಗೆ ಮನೆಯಲ್ಲೇ ಇದೆ ಪರಿಹಾರ
ಬೆಂಗಳೂರು: ಮುಖದ ಸೌಂದರ್ಯಕ್ಕೆ ಒಂದು ಸುಂದರ ನಗು ಬಹಳ ಮುಖ್ಯ. ಆದರೆ, ಹಳದಿ ಬಣ್ಣಕ್ಕೆ ತಿರುಗಿದ ಹಲ್ಲುಗಳು ನಿಮ್ಮ ಆತ್ಮವಿಶ್ವಾಸವನ್ನು ಕುಗ್ಗಿಸುತ್ತಿವೆಯೇ? ಜನರ ಮುಂದೆ ನಗಲು ಸಂಕೋಚವಾಗುತ್ತಿದೆಯೇ? ದುಬಾರಿ ದಂತ ಚಿಕಿತ್ಸೆಗಳ ಅಗತ್ಯವಿಲ್ಲದೆ, ಅಡುಗೆ ಮನೆಯ ಪದಾರ್ಥಗಳನ್ನು ಬಳಸಿಯೇ ಹಲ್ಲುಗಳನ್ನು ಮುತ್ತಿನಂತೆ ಹೊಳೆಯುವಂತೆ ಮಾಡಬಹುದು. ಹಳದಿ ಕಲೆಗಳನ್ನು ಹೋಗಲಾಡಿಸಲು ಇಲ್ಲಿವೆ ಸರಳ ಮತ್ತು ಪರಿಣಾಮಕಾರಿ ಮಾರ್ಗಗಳು. ಹಲ್ಲುಗಳ ಹೊಳಪಿಗೆ 5 ಅದ್ಭುತ ಮನೆಮದ್ದುಗಳುಉಪ್ಪು ಮತ್ತು ಸಾಸಿವೆ ಎಣ್ಣೆ: ಇದು ಹಿರಿಯರ ಕಾಲದ ಅಪ್ರತಿಮ ವಿಧಾನ. ಸ್ವಲ್ಪ ಉಪ್ಪಿಗೆ […]
Big Update: ಬಾಗಲಕೋಟೆ-ಕುಡಚಿ ರೈಲು ಮಾರ್ಗ, ಬಿಗ್ ಅಪ್ಡೇಟ್
ಬಾಗಲಕೋಟೆ-ಕುಡಚಿ ನಡುವಿನ ರೈಲು ಮಾರ್ಗ ಕಾಮಗಾರಿ ವೇಗವಾಗಿ ಸಾಗುತ್ತಿದ್ದು 2026ರ ಹೊತ್ತಿಗೆ ಬಹುತೇಕವಾಗಿ ಆರಂಭವಾಗಲಿವೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದರು. ಈಗ ರೈಲ್ವೆ ಇಲಾಖೆಯೇ ಈ ಕುರಿತು ಬಿಗ್ ಅಪ್ಡೇಟ್ ನೀಡಿದೆ. ಕಾಮಗಾರಿ ಪೂರ್ಣವಾಗಿರುವ ರೈಲು ಮಾರ್ಗದ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದೆ. ಯೋಜನೆ ಅಪ್ಡೇಟ್; ಎಕ್ಸ್ ಖಾತೆಯ ಪೋಸ್ಟ್ನಲ್ಲಿ ರೈಲ್ವೆ ಇಲಾಖೆ, ಬಾಗಲಕೋಟೆ-ಕುಡಚಿ ಹೊಸ ರೈಲು ಮಾರ್ಗ ಯೋಜನೆ (142 ಕಿ.ಮೀ.) 37.3 ಕಿ.ಮೀ ರೈಲು ಮಾರ್ಗ ಕಾರ್ಯಾರಂಭ ಎಂದು ಹೇಳಿದೆ. […]
ಕೆಟ್ಟದಾಗಿ ಕಮೆಂಟ್ ಮಾಡುವ ಕಿಡಿಗೇಡಿಗಳಿಗೆ ಖಡಕ್ ಸಂದೇಶ: ತಿದ್ದಿಗೊಳ್ಳುವಂತೆ ಬುದ್ದಿ ಹೇಳಿದ ನಟ ಜಗ್ಗೇಶ್
ಬೆಂಗಳೂರು: ಕಟ್ಟದಾಗಿ ಕಮೆಂಟ್ ಮಾಡುವವರಿಗೆ, ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲವಾಗಿ ಮೆಸೇಜ್ ಕಳುಹಿಸುವ ಕಿಡಿಗೇಡಿಗಳಿಗೆ ಹಿರಿನ ನಟ ಜಗ್ಗೇಶ್ ತಮ್ಮದೇ ಶೈಲಿಯಲ್ಲಿ ಚಾಟಿ ಬೀಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸುದೀರ್ಘ ಪೋಸ್ಟ್ ಮಾಡಿರುವ ನಟ ಜಗ್ಗೇಶ್ ಅಶ್ಲೀಲ ಕಮೆಂಟ್ ಮಾಡುವವರಿಗೆ ಖಡಕ್ ಸಂದೇಶ ರವಾನಿಸಿದ್ದಾರೆ. ತಮ್ಮ ಜೀವನದ ಅನುಭವಗಳನ್ನು ವಿವರಿಸಿ ಯುವ ಪೀಳಿಗೆಗೆ ಸಕರಾತ್ಮಕ ಜೀವನ ನಡೆಸುವಂತೆ ಸಲಹೆ ನೀಡಿದ್ದಾರೆ. ಕೆಟ್ಟ ಕಮೆಂಟ್ ಹಾಕುವವರನ್ನು ತಮ್ಮದೇ ಶೈಲಿಯಲ್ಲಿ ತಿದ್ದುವ ಪ್ರಯತ್ನವನ್ನು ನಟ ಜಗ್ಗೇಶ್ ಮಾಡಿದ್ದಾರೆ. ತಮ್ಮ ಜೀವನ […]
ಚೆಕ್ ಬೌನ್ಸ್ , EMI ಬಾಕಿ ಉಳಿಸಿಕೊಂಡ್ರೆ ‘ಜೈಲು ಶಿಕ್ಷೆ’ಆಗುತ್ತಾ ? ಕಾನೂನು ಏನು ಹೇಳುತ್ತೆ ತಿಳಿಯಿರಿ
ವಿವಿಧ ಕಾರಣಗಳಿಂದಾಗಿ ಚೆಕ್’ಗಳು ಬೌನ್ಸ್ ಆಗುತ್ತವೆ. ಅನೇಕರು ಇದನ್ನು ಸಣ್ಣ ತಪ್ಪು ಎಂದು ಭಾವಿಸುತ್ತಾರೆ, ಆದರೆ ಇದರ ಪರಿಣಾಮಗಳು ಬಹಳ ಗಂಭೀರವಾಗಿರುತ್ತವೆ. ಕಾನೂನಿನ ಪ್ರಕಾರ ಚೆಕ್ ಬೌನ್ಸ್ ಆದಾಗ ಏನು ಸಂಭವಿಸುತ್ತದೆ ಇಲ್ಲಿದೆ ಮಾಹಿತಿ. ಸಾಲ ಕಟ್ಟದಿದ್ದರೆ ತಕ್ಷಣ ಜೈಲಿಗೆ ಹಾಕುತ್ತಾರೆ ಎಂಬ ಭಯ ಮತ್ತು ತಪ್ಪು ಕಲ್ಪನೆ ಜನರಲ್ಲಿರುತ್ತದೆ. ಈ ಸುದ್ದಿ ನಿಮಗೆ ಉಪಯುಕ್ತವಾಗಬಹುದು. ಚೆಕ್ ಬೌನ್ಸ್ ಕಾನೂನು ಕ್ರಮಗಳ ಪರಿಶೀಲನೆ ಪ್ರಮುಖ ಮುನ್ನೆಚ್ಚರಿಕೆಗಳು ಚೆಕ್ ಬೌನ್ಸ್ , EMI ಕಟ್ಟದೆ ತಪ್ಪಿಸಿಕೊಂಡ್ರೆ ಜೈಲು ಶಿಕ್ಷೆ […]
Big News: ಬೆಂಗಳೂರು ನಗರದಲ್ಲಿ ಪ್ರತಿ 3.5 ಗಂಟೆಗೆ ಒಂದು ಆತ್ಮಹತ್ಯೆ!
ನಗರ ಜೀವನ ಅಂದುಕೊಂಡಷ್ಟು ಸುಲಭವಿಲ್ಲ. ಒತ್ತಡ, ಕೌಟುಂಬಿಕ ಹಿಂಸೆ, ಆರ್ಥಿಕ ಸವಾಲುಗಳು ಮುಂತಾದ ಹಲವು ಕಾರಣಕ್ಕೆ ಜನರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಬೆಂಗಳೂರು ನಗರದಲ್ಲಿ ನಡೆಯುವ ಆತ್ಮಹತ್ಯೆ ಪ್ರಕರಣಗಳ ಅಂಕಿ ಅಂಶ ಬೆಚ್ಚಿ ಬೀಳಿಸುವಂತಿದೆ. ಕರ್ನಾಟಕದ ಗೃಹ ಇಲಾಖೆ ಮಾಹಿತಿ ಪ್ರಕಾರ ಬೆಂಗಳೂರು ನಗರದಲ್ಲಿ 3.5 ಗಂಟೆಗೆ ಒಂದು ಆತ್ಮಹತ್ಯೆ ನಡೆಯುತ್ತಿದೆ. ಬೆಂಗಳೂರು ನಗರದಲ್ಲಿ ಪ್ರತಿನಿತ್ಯ 7 ಜನರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆಯೇ ಹೆಚ್ಚಾಗಿದೆ. ಬೆಂಗಳೂರು ನಗರದಲ್ಲಿ ಕಳೆದ 4 ವರ್ಷಗಳಲ್ಲಿ ದಾಖಲಾದ […]
ಬೆಂಗಳೂರು: ರಾಜ್ಯ ಕಾಂಗ್ರೆಸ್ ನಲ್ಲಿ ಅಧಿಕಾರ ಹಸ್ತಾಂತರ ಚರ್ಚೆ ಮುನ್ನೆಲೆಗೆ ಬಂದಿರುವಾಗಲೇ ಶಾಸಕರ ವಿದೇಶ ಪ್ರವಾವ ಭಾರಿ ಚರ್ಚೆಗೆ ಕಾರಣವಾಗಿದ್ದು, ಪಕ್ಷದಲ್ಲಿನ ಅಸಮಾಧಾನ ಮತ್ತಷ್ಟು ತಾರಕಕ್ಕೇರಿದೆ. ರಾಜ್ಯ ಕಾಂಗ್ರೆಸ್ ಶಾಸಕರ ವಿದೇಶ ಪ್ರವಾಸ ಹೈಕಮಾಂಡ್ ಮಟ್ಟದಲ್ಲಿ ಗಮನ ಸೆಳೆದಿದೆ. ಪಶುಸಂಗೋಪನಾ ಇಲಾಖೆಯ ಅಧ್ಯಯನ ಪ್ರವಾಸದ ಹೆಸರಿನಲ್ಲಿ ಕೆಲವು ಶಾಸಕರು ವಿದೇಶಕ್ಕೆ ತೆರಳಲು ಸಿದ್ಧರಾಗಿದ್ದಾರೆ. ಆರಂಭದಲ್ಲಿ ಇದು ಸರ್ಕಾರಿ ಪ್ರವಾಸ ಎಂದು ಹೇಳಲಾಗಿತ್ತು. ನಂತರ ಖಾಸಗಿ ಪ್ರವಾಸವಾಗಿ ಬದಲಾಗುತ್ತಿದೆ ಎಂದು ಹೇಳಲಗುತ್ತಿದೆ. ಶಾಸಕರ ವಿದೇಶ ಪ್ರವಾಸದ ಬಗ್ಗೆ ಸ್ವಪಕ್ಷದಲ್ಲಿಯೇ […]
ಮೈಸೂರು-ಕುಶಾಲನಗರ ನೂತನ ರೈಲು ಮಾರ್ಗ ಯೋಜನೆಗೆ ಮರುಜೀವ
ರೈಲ್ವೆ ಸಚಿವಾಲಯ ಮೈಸೂರು-ಕುಶಾಲನಗರ ನೂತನ ರೈಲು ಮಾರ್ಗ ಆರ್ಥಿಕವಾಗಿ ಕಾರ್ಯಸಾಧುವಲ್ಲ ಎಂದು ಯೋಜನೆಗೆ ಕೆಂಪು ಬಾವುಟ ತೋರಿಸಿದೆ. ಅಲ್ಲದೇ ಇದು ಕೊಡಗು ಜಿಲ್ಲೆಗೆ ರೈಲು ಸಂಪರ್ಕ ಕಲ್ಪಿಸುವ ಯೋಜನೆಯಾಗಿದೆ. ಈ ಯೋಜನೆಗೆ ಮರು ಜೀವ ನೀಡಲು ಈಗ ಸಂಸದರು ಪ್ರಯತ್ನ ಮಾಡಿದ್ದಾರೆ. ಮೈಸೂರು-ಕೊಡಗು ಸಂಸದ ಯದುವೀರ್ ಒಡೆಯರ್ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಅಶ್ವಿನ್ ವೈಷ್ಣವ್ ಅವರನ್ನು ಭೇಟಿ ಮಾಡಿದ್ದರು. ಆಗ ಮೈಸೂರು-ಕುಶಾಲನಗರ ನೂತನ ರೈಲು ಮಾರ್ಗ ಪುನಾರಂಭಿಸಲು ಮನವಿ ಸಲ್ಲಿಸಿದ್ದಾರೆ. ಸಂಸದರು ಅನಿವಾರ್ಯ ಕಾರಣದಿಂದ […]
90 ಕೆಜಿ ಗೋಧಿ ಕದ್ದಿದ್ದ ಕಳ್ಳ 45 ವರ್ಷಗಳ ಬಳಿಕ ಅರೆಸ್ಟ್
ಭೋಪಾಲ್: 45 ವರ್ಷಗಳ ಹಿಂದೆ 90 ಕೆಜಿ ಗೋಧಿ ಕಳ್ಳತನ ಮಾಡಿದ್ದ ಆರೋಪಿಯನ್ನು ಈಗ ಬಂಧಿಸಿರುವ ಘಟನೆ ಮಧ್ಯಪ್ರದೇಶದ ಧಾರ್ ಜಿಲ್ಲೆಯ ಬಾಗ್ ಪಟ್ಟಣದಲ್ಲಿ ನಡೆದಿದೆ. ಬಂಧಿತ ಆರೋಪಿಯನ್ನು ಆರೋಪಿ ಸಲೀಂ(59)ಎಂದು ಗುರುತಿಸಲಾಗಿದೆ. 1980ರಲ್ಲಿ ಆರೋಪಿ 90 ಕೆಜಿ ಗೋಧಿ ಕಳ್ಳತನ ಮಾಡಿದ್ದ. ಘಟನೆ ಬಳಿಕ ಆತ ತಲೆಮರೆಸಿಕೊಂಡು ರಹಸ್ಯವಾಗಿ ವಾಸವಾಗಿದ್ದ. ತನ್ನ ಮಗನೊಂದಿಗೆ ಸಣ್ಣ ದಿನಸಿ ಅಂಗಡಿ ನಡೆಸುತ್ತಿದ್ದ. ಕಳ್ಳತನ ನಡೆದ ಸಮಯದಲ್ಲಿ ಗೋಧಿಯ ಮೌಲ್ಯ 184 ರೂ. ಆಗಿದ್ದು, ಪ್ರತಿ ಕಿಲೋಗ್ರಾಂಗೆ 2.05 ರೂ. […]
BREAKING: ಬೆಳ್ಳಂಬೆಳಗ್ಗೆ ಭ್ರಷ್ಟರಿಗೆ ಬಿಗ್ ಶಾಕ್: ರಾಜ್ಯದ ವಿವಿಧೆಡೆ ಲೋಕಾಯುಕ್ತ ದಾಳಿ
ಬೆಂಗಳೂರು: ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ರಾಜ್ಯ ವಿವಿಧೆಡೆ ಏಕಕಾಲಕ್ಕೆ ದಾಳಿ ನಡೆಸಿದ್ದು, ಆಸ್ತಿ ದಾಖಲೆ ಪರಿಶೀಲಿಸಿದ್ದಾರೆ. ಬೆಂಗಳೂರು, ಮೈಸೂರು, ದಾವಣಗೆರೆ, ಶಿವಮೊಗ್ಗದಲ್ಲಿ ಏಕಕಾಲಕ್ಕೆ ಲೋಕಾಯುಕ್ತ ದಾಳಿ ನಡೆಸಲಾಗಿದೆ. ಲೋಕೋಪಯೋಗಿ ಇಲಾಖೆ ಮುಖ್ಯ ಇಂಜಿನಿಯರ್ ಪುರುಷೋತ್ತಮ್ ದಾಸ್ ಗೆ ಸೇರಿದ 11 ಸ್ಥಳಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಮೈಸೂರಿನಲ್ಲಿ ಐದು, ಬೆಂಗಳೂರಿನಲ್ಲಿ ಆರು ಕಡೆ ದಾಳಿ ನಡೆದಿದ್ದು, ಆಸ್ತಿ ದಾಖಲೆ ಪತ್ರಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿದ್ದಾರೆ. ದಾವಣಗೆರೆಯಲ್ಲಿ ಬೆಸ್ಕಾಂ ಇಂಜಿನಿಯರ್ […]
ಆಕಾಶದಲ್ಲಿ ಅದ್ಭುತ ‘ಅಗ್ನಿ ಉಂಗುರ’ಸೃಷ್ಟಿ : ವರ್ಷದ ಮೊದಲ ಸೂರ್ಯಗ್ರಹಣದ 7 ಪ್ರಮುಖ ಸಂಗತಿಗಳು ಇಲ್ಲಿವೆ !
ವಾಷಿಂಗ್ಟನ್: ವಿಶ್ವದಾದ್ಯಂತ ಖಗೋಳ ವಿಜ್ಞಾನಿಗಳು ಮತ್ತು ಬಾಹ್ಯಾಕಾಶ ಆಸಕ್ತರು ವರ್ಷದ ಮೊದಲ ಸೂರ್ಯಗ್ರಹಣವನ್ನು ವೀಕ್ಷಿಸಲು ಸಜ್ಜಾಗುತ್ತಿದ್ದಾರೆ. ಈ ಅಪರೂಪದ ಖಗೋಳ ವಿದ್ಯಮಾನವು ಇದೇ ತಿಂಗಳು ನಡೆಯಲಿದ್ದು, ಸೂರ್ಯನು ಸ್ವಲ್ಪ ಸಮಯದವರೆಗೆ ಮಸುಕಾಗಲಿದ್ದಾನೆ. ಈ ಸಂದರ್ಭದಲ್ಲಿ ವಿಶ್ವದ ಕೆಲವು ಭಾಗಗಳಲ್ಲಿ ಸೂರ್ಯನು ಆಕಾಶದಲ್ಲಿ ‘ಬೆಂಕಿಯ ಉಂಗುರದಂತೆ’ ಕಾಣಿಸಿಕೊಳ್ಳಲಿದ್ದಾನೆ. ಇದನ್ನು ‘ರಿಂಗ್ ಆಫ್ ಫೈರ್’ (Ring of Fire) ಎಂದು ಕರೆಯಲಾಗುತ್ತದೆ. ಚಂದ್ರನು ಭೂಮಿಯಿಂದ ಅತಿ ದೂರದ ಬಿಂದುವಿನಲ್ಲಿದ್ದಾಗ ಈ ರೀತಿಯ ಗ್ರಹಣ ಸಂಭವಿಸುತ್ತದೆ. ವರ್ಷದ ಮೊದಲ ಸೂರ್ಯಗ್ರಹಣದ ಬಗ್ಗೆ […]
ಇಂದಿನ ಅನಿಶ್ಚಿತ ಮಾರುಕಟ್ಟೆಯಲ್ಲಿ ಕಷ್ಟಪಟ್ಟು ಸಂಪಾದಿಸಿದ ಹಣ ಸುರಕ್ಷಿತವಾಗಿರಲಿ ಎಂಬುದು ಪ್ರತಿಯೊಬ್ಬರ ಆಶಯ. ಅದರಲ್ಲೂ ವಿಶೇಷವಾಗಿ, ಕೆಲಸದಿಂದ ನಿವೃತ್ತರಾದ ಮೇಲೆ ಮಾಸಿಕ ಆದಾಯಕ್ಕಾಗಿ ಪರದಾಡುವ ಹಿರಿಯ ನಾಗರಿಕರಿಗೆ ಪೋಸ್ಟ್ ಆಫೀಸ್ನ ‘ಸೀನಿಯರ್ ಸಿಟಿಜನ್ ಸೇವಿಂಗ್ಸ್ ಸ್ಕೀಮ್’ (SCSS) ಅಕ್ಷರಶಃ ಆಪದ್ಬಾಂಧವನಂತಿದೆ. ಕೇಂದ್ರ ಸರ್ಕಾರದ ನೇರ ಗ್ಯಾರಂಟಿ ಇರುವುದರಿಂದ ಹೂಡಿಕೆಗೆ ಇಲ್ಲಿ ನೂರಕ್ಕೆ ನೂರರಷ್ಟು ಸುರಕ್ಷತೆ ಇದೆ. ಅಷ್ಟೇ ಅಲ್ಲದೆ, ಪ್ರಸ್ತುತ ಮಾರುಕಟ್ಟೆಯಲ್ಲಿರುವ ಇತರ ಉಳಿತಾಯ ಯೋಜನೆಗಳಿಗಿಂತ ಅಧಿಕ ಬಡ್ಡಿ ನೀಡುವ ಮೂಲಕ, ಈ ಯೋಜನೆ ಹಿರಿಯ ಜೀವಗಳಿಗೆ […]
BREAKING: ಅಕ್ರಮವಾಗಿ ಕೇರಳ ಲಾಟರಿ ಮಾರುತ್ತಿದ್ದ ಇಬ್ಬರು ಅರೆಸ್ಟ್
ಮೈಸೂರು: ಅಕ್ರಮವಾಗಿ ಕೇರಳದ ಲಾಟರಿ ಟಿಕೆಟ್ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸಲಾಗಿದೆ. ಮೈಸೂರು ಜಿಲ್ಲೆ ಪಿರಿಯಾಪಟ್ಟಣದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ವೆಂಕಟೇಶ್ವರ ವೇಬ್ರಿಡ್ಜ್ ಸಮೀಪ ಅರುಣ್ ಕುಮಾರ್ ಎಂಬುವನನ್ನು ವಶಕ್ಕೆ ಪಡೆಯಲಾಗಿದೆ. 33 ಸಾವಿರ ರೂಪಾಯಿ ಮೌಲ್ಯದ ಲಾಟರಿ ಟಿಕೆಟ್ ಮತ್ತು 20 ಸಾವಿರ ರೂಪಾಯಿ ನಗದು ವಶಕ್ಕೆ ಪಡೆಯಲಾಗಿದೆ. ಸಿಂಚನಾ ಹೋಟೆಲ್ ನಲ್ಲಿ ಮತ್ತೊಬ್ಬ ಆರೋಪಿ ಸ್ವಾಮಿಯನ್ನು ಬಂಧಿಸಲಾಗಿದೆ. 33,000 ಮೌಲ್ಯದ ಲಾಟರಿ ಟಿಕೆಟ್ ಹಾಗೂ 2,930 […]
ವಯೋ ನಿವೃತ್ತಿ, ಸ್ವ ಇಚ್ಛಾ ನಿವೃತ್ತಿ ನೌಕರರಿಗೆ ಪಿಂಚಣಿ ಬಗ್ಗೆ ಮುಖ್ಯ ಮಾಹಿತಿ
ಬೆಂಗಳೂರು: ವಯೋ ನಿವೃತ್ತಿ/ಸ್ವ-ಇಚ್ಛಾ ನಿವೃತ್ತಿ ಹೊಂದುವ ನೌಕರರ ಪಿಂಚಣಿ ಪ್ರಸ್ತಾವನೆಯನ್ನು ಖಜಾನೆ-2ರ ತಂತ್ರಾಂಶದ ಮುಖಾಂತರ ಮಹಾಲೇಖಪಾಲರ ಕಛೇರಿಗೆ ಸಲ್ಲಿಸುವ ಪ್ರಕ್ರಿಯೆಯನ್ನು ಅನುಷ್ಠಾನಗೊಳಿಸುವ ಕುರಿತು ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ. ಮೇಲ್ಕಂಡ ವಿಷಯ ಹಾಗೂ ಉಲ್ಲೇಖಕ್ಕೆ ಸಂಬಂಧಿಸಿದಂತೆ, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿ ವಯೋ ನಿವೃತ್ತಿ / ಸ್ವ-ಇಚ್ಛಾ ನಿವೃತ್ತಿ ಹೊಂದುವ ನೌಕರರ ಪಿಂಚಣಿಗೆ ಸಂಬಂಧಿಸಿದ ಪ್ರಸ್ತಾವನೆಗಳನ್ನು ONLINE (K2) ನಲ್ಲಿ ದಾಖಲಿಸಿ ಮಂಜೂರು ಮಾಡುವುದು ಹಾಗೂ ಭೌತಿಕವಾಗಿ ಸಿದ್ಧಪಡಿಸಿರುವ […]
ಮಹಾಶಿವರಾತ್ರಿ ವ್ರತ 2026: ಉಪವಾಸದ ದಿನ ಏನು ತಿನ್ನಬೇಕು? ಏನು ತಿನ್ನಬಾರದು? ಸಂಪೂರ್ಣ ಡಯಟ್ ಗೈಡ್
ಶಿವನ ಆರಾಧನೆಗೆ ಅತ್ಯಂತ ಶ್ರೇಷ್ಠವಾದ ದಿನ ಮಹಾಶಿವರಾತ್ರಿ. ಈ ಬಾರಿ 2026ರ ಫೆಬ್ರವರಿ 15ರಂದು (ಭಾನುವಾರ) ಈ ಪವಿತ್ರ ಹಬ್ಬ ಬಂದಿದೆ. ಶಿವ-ಪಾರ್ವತಿಯರ ಕಲ್ಯಾಣದ ಸ್ಮರಣಾರ್ಥ ಆಚರಿಸಲಾಗುವ ಈ ದಿನದಂದು ಭಕ್ತರು ಉಪವಾಸ ಮತ್ತು ಜಾಗರಣೆ ಮಾಡುವುದು ವಾಡಿಕೆ. ಆದರೆ, ಉಪವಾಸ ಎಂದರೆ ಕೇವಲ ಹಸಿವಿನಿಂದ ಇರುವುದಲ್ಲ, ಅದು ಮನಸ್ಸು ಮತ್ತು ಶರೀರದ ಶುದ್ಧೀಕರಣ. ಹಾಗಿದ್ದರೆ, ವ್ರತದ ಸಮಯದಲ್ಲಿ ನಿಮ್ಮ ಆರೋಗ್ಯ ಕೆಡದಂತೆ ಮತ್ತು ಭಕ್ತಿ ಕುಂದದಂತೆ ಯಾವ ಆಹಾರ ಸೇವಿಸಬೇಕು? ಯಾವ ನಿಯಮ ಪಾಲಿಸಬೇಕು? ಇಲ್ಲಿದೆ […]
ಕಾರಿನ ಬಾನೆಟ್ ಮೇಲೆ ಗೂಡ್ಸ್ ವಾಹನ ಚಾಲಕನ ಒಂದು ಕಿ.ಮೀ. ಎಳೆದೊಯ್ದ ವ್ಯಕ್ತಿ ಅರೆಸ್ಟ್
ಬೆಂಗಳೂರು: ತನ್ನ ವಾಹನಕ್ಕೆ ತಗುಲಿದೆ ಎಂದು ಕಾರಿನ ಮೇಲೆ ಕುಳಿತಿದ್ದ ಗೂಡ್ಸ್ ವಾಹನ ಚಾಲಕನನ್ನು ಒಂದು ಕಿಲೋಮೀಟರ್ ವರೆಗೂ ಕಾರಿನ ಚಾಲಕ ಎಳೆದೊಯ್ದ ಘಟನೆ ಬೆಂಗಳೂರುನ ಹಲಸೂರು ಪೊಲೀಸ್ ಠಾಣಾ ವ್ಯಾಪ್ತಿಯ ಓಲ್ಡ್ ಏರ್ಪೋರ್ಟ್ ರಸ್ತೆಯಲ್ಲಿ ನಡೆದಿದೆ. ಬುಧವಾರ ಮಧ್ಯಾಹ್ನ 12:45 ರ ಸುಮಾರಿಗೆ ಘಟನೆ ನಡೆದಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಾಹನ ತಗುಲಿದ ವಿಚಾರಕ್ಕೆ ಗೂಡ್ಸ್ ಚಾಲಕ ನಂಜುಂಡ ಮತ್ತು ಕಾರ್ ನ ಚಾಲಕರ ಸುರೇಶ್ ನಡುವೆ ವಾಗ್ವಾದ ನಡೆದಿದೆ. ಇದರಿಂದ ಸಿಟ್ಟುಗೊಂಡ […]

27 C