BREAKING: ಜೆಡಿಎಸ್ ನಾಯಕಿ ಪುತ್ರನ ಕಿರುಕುಳ, ಯುವತಿ ಆತ್ಮಹತ್ಯೆ
ಕಾರವಾರ: ಜೆಡಿಎಸ್ ನಾಯಕಿ ಪುತ್ರನ ಕಿರುಕುಳದಿಂದ ನೊಂದು ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಕದ್ರಾ ಗ್ರಾಮದಲ್ಲಿ ಘಟನೆ ನಡೆದಿದೆ. ಕೆಪಿಸಿಎಲ್ ಕಾಲೋನಿಯ ನಿವಾಸದಲ್ಲಿ 20 ವರ್ಷದ ರಿಶಾಲ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರೀತಿಸುವಂತೆ riಶಾಲ್ ಡಿಸೋಜಾಗೆ ಜೆಡಿಎಸ್ ನಾಯಕಿ ಚೈತ್ರಾ ಕೋಠಾರಕರ್ ಪುತ್ರ ಚಿರಾಗ್ ಚಂದ್ರಹಾಸ್ ಕೋಠಾರಕರ್ ಪೀಡಿಸುತ್ತಿದ್ದ ಆರೋಪ ಕೇಳಿ ಬಂದಿದೆ. ರಿಶಾಲ್ ತಂದೆ ಕ್ರಿಸ್ತೋದ್ ಫ್ರಾನ್ಸಿಸ್ ಈ ಕುರಿತಾಗಿ ನೀಡಿದ್ದ ದೂರಿನ ಮೇರೆಗೆ ಚಿರಾಗ್ ಚಂದ್ರಹಾಸ್ ವಿರುದ್ಧ ಪ್ರಕರಣ ದಾಖಲಾಗಿದೆ. […]
ದ್ವಿತೀಯ ಪಿಯುಸಿ ಇಂಗ್ಲಿಷ್ ಪತ್ರಿಕೆ ಸೋರಿಕೆ ಮಾಡಿದವರ ವಿರುದ್ಧ ಎಫ್ಐಆರ್ ದಾಖಲು
ಕಲಬುರಗಿ: ದ್ವಿತೀಯ ಪಿಯುಸಿ ಇಂಗ್ಲೀಷ್ ಪತ್ರಿಕೆ ಸೋರಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಕಲಬುರಗಿಯ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಡಿಡಿಪಿಐ ಸುರೇಶ್ ಅಕ್ಕಣ್ಣನವರ್ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಲಾಗಿದೆ. ಜನವರಿ 8ರಂದು ಪಿಯುಸಿ ಪೂರ್ವ ಸಿದ್ಧತಾ ಪರೀಕ್ಷೆ ನಡೆದಿತ್ತು. ಪರೀಕ್ಷೆಯ ಹಿಂದಿನ ದಿನ ಇಂಗ್ಲಿಷ್ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಇಂಗ್ಲಿಷ್ ಪತ್ರಿಕೆ ಹರಿದಾಡಿತ್ತು. ಪ್ರಶ್ನೆ ಪತ್ರಿಕೆ ಹರಿಬಿಟ್ಟಿರುವವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ದೂರು ನೀಡಲಾಗಿದೆ. ಕಲಬುರಗಿ ಸ್ಟೇಷನ್ ಬಜಾರ್ ಠಾಣೆಯಲ್ಲಿ ಎಫ್ಐಆರ್ […]
ಮಿಸ್ಸಿಸ್ಸಿಪ್ಪಿ(ಯುಎಸ್): ಪೂರ್ವ ಮಿಸ್ಸಿಸ್ಸಿಪ್ಪಿಯಲ್ಲಿ ನಡೆದ ಸಂಬಂಧಿತ ಗುಂಡಿನ ದಾಳಿಯಲ್ಲಿ 6 ಜನರು ಸಾವನ್ನಪ್ಪಿದ್ದು, ನಂತರ ಶಂಕಿತನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲಬಾಮಾ ಗಡಿಯ ಸಮೀಪದಲ್ಲಿರುವ ವೆಸ್ಟ್ ಪಾಯಿಂಟ್ ಪಟ್ಟಣದಲ್ಲಿ ಹಿಂಸಾಚಾರದಿಂದಾಗಿ ಹಲವಾರು ಅಮಾಯಕ ಜೀವಗಳು ಬಲಿಯಾಗಿವೆ ಎಂದು ಕ್ಲೇ ಕೌಂಟಿ ಶೆರಿಫ್ ಎಡ್ಡಿ ಸ್ಕಾಟ್ ತಿಳಿಸಿದ್ದಾರೆ. 3 ವಿಭಿನ್ನ ಸ್ಥಳಗಳಲ್ಲಿ 6 ಸಾವುಗಳು ಸಂಭವಿಸಿವೆ. ಶಂಕಿತನೊಬ್ಬ ಬಂಧನದಲ್ಲಿದ್ದಾನೆ ಮತ್ತು ಸಮುದಾಯಕ್ಕೆ ಯಾವುದೇ ಬೆದರಿಕೆ ಇಲ್ಲ ಎಂದು ಶೆರಿಫ್ ದೃಢಪಡಿಸಿದ್ದಾರೆ. ದುರದೃಷ್ಟವಶಾತ್ ನಾವು ನಮ್ಮ ಸಮುದಾಯದಲ್ಲಿ […]
ಕೇರಳ ಮಸೂದೆ ಬಗ್ಗೆ ರಾಷ್ಟ್ರಪತಿ ಭೇಟಿಗೆ ನಿಯೋಗ: ಸಿಎಂಗೆ ಗಡಿ ಅಭಿವೃದ್ಧಿ ಪ್ರಾಧಿಕಾರ ಮನವಿ
ಮಂಗಳೂರು: ಕೇರಳದ ಮಲಯಾಳಿ ಭಾಷಾ ಮಸೂದೆಯಿಂದ ಕಾಸರಗೋಡನ್ನು ಹೊರಗಿಡುವಂತೆ ಆ ರಾಜ್ಯದ ಮುಖ್ಯಮಂತ್ರಿಗಳನ್ನು ಒತ್ತಾಯಿಸುವುದರ ಜೊತೆಗೆ ರಾಷ್ಟ್ರಪತಿಯವರನ್ನು ಭೇಟಿ ಮಾಡಲು ನಿಯೋಗ ಕೊಂಡೊಯ್ಯುವಂತೆ ಕೋರಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು, ಸದಸ್ಯರು ಹಾಗೂ ಕಾಸರಗೋಡು ಕನ್ನಡಿಗರು ಇಂದು ಮಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಮನವಿ ಸಲ್ಲಿಸಿದ್ದಾರೆ. ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನ ಮರದ, ಸದಸ್ಯ ಸುಬ್ಬಯ್ಯ ಕಟ್ಟೆ ಹಾಜರಿದ್ದರು. ಕೇರಳ ವಿಧಾನಸಭೆಯಲ್ಲಿ ಮಂಡನೆಯಾಗಿರುವ ಮಲೆಯಾಳಿ ಭಾಷಾ ಮಸೂದೆಯಿಂದ ಗಡಿಭಾಗದ ಜಿಲ್ಲೆಗಳಲ್ಲಿ, ವಿಶೇಷವಾಗಿ ಕಾಸರಗೋಡಿನಲ್ಲಿ ನೆಲೆಸಿರುವ […]
BIG NEWS: ನೇಮಕಾತಿ ಪರೀಕ್ಷೆ ಬರೆಯುವ ಎಲ್ಲಾ ಅಭ್ಯರ್ಥಿಗಳು ಮುಖ ದೃಢೀಕರಣಕ್ಕೆ ಒಳಗಾಗಬೇಕು: UPSC
ನವದೆಹಲಿ: ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್(UPSC) ನಡೆಸುವ ನೇಮಕಾತಿ ಪರೀಕ್ಷೆಗಳಲ್ಲಿ ಭಾಗವಹಿಸುವ ಎಲ್ಲಾ ಅಭ್ಯರ್ಥಿಗಳು ಸ್ಥಳಗಳಲ್ಲಿ ಮುಖ ದೃಢೀಕರಣಕ್ಕೆ(Face authentication) ಒಳಗಾಗಬೇಕು ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. ಇದು ಪರೀಕ್ಷಾ ಪ್ರಕ್ರಿಯೆಯ ಸಮಗ್ರತೆಯನ್ನು ಮತ್ತಷ್ಟು ಬಲಪಡಿಸುತ್ತದೆ. UPSC ಪರೀಕ್ಷೆಯಲ್ಲಿ ಭಾಗವಹಿಸುವ ಎಲ್ಲಾ ಅಭ್ಯರ್ಥಿಗಳು ಸ್ಥಳದಲ್ಲಿ ಮುಖ ದೃಢೀಕರಣಕ್ಕೆ ಒಳಗಾಗಬೇಕು ಎಂದು ಆಯೋಗ ತಿಳಿಸಿದೆ. ಭಾರತೀಯ ಆಡಳಿತ ಸೇವೆ(IAS), ಭಾರತೀಯ ವಿದೇಶಾಂಗ ಸೇವೆ(IFS) ಮತ್ತು ಭಾರತೀಯ ಪೊಲೀಸ್ ಸೇವೆ(IPS) ಸೇರಿದಂತೆ ಇತರ ಅಧಿಕಾರಿಗಳನ್ನು ಆಯ್ಕೆ ಮಾಡಲು ನಾಗರಿಕ ಸೇವಾ […]
ಅಯೋಧ್ಯೆ ರಾಮ ಮಂದಿರ ಆವರಣದಲ್ಲಿ ನಮಾಜ್ ಮಾಡಲು ಯತ್ನಿಸಿದ ವ್ಯಕ್ತಿ ಅರೆಸ್ಟ್
ಅಯೋಧ್ಯೆ: ಅಯೋಧ್ಯೆಯ ರಾಮ ಮಂದಿರದಲ್ಲಿ ಭದ್ರತಾ ಉಲ್ಲಂಘನೆಯ ಪ್ರಕರಣ ಬೆಳಕಿಗೆ ಬಂದಿದೆ. ಶುಕ್ರವಾರ ರಾಮ ಮಂದಿರ ಆವರಣದಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬ ನಮಾಜ್ ಮಾಡಲು ಪ್ರಯತ್ನಿಸಿದ್ದು, ಭದ್ರತಾ ಸಿಬ್ಬಂದಿ ಅವನನ್ನು ಬಂಧಿಸಿದ್ದಾರೆ. ಆರೋಪಿಯು ನಿರ್ದಿಷ್ಟ ಪಂಥಕ್ಕೆ ಸಂಬಂಧಿಸಿದ ಘೋಷಣೆಗಳನ್ನು ಕೂಗಿದ್ದಾನೆ ಎಂದು ಆರೋಪಿಸಲಾಗಿದೆ. ಸ್ಥಳದಲ್ಲಿದ್ದ ಭದ್ರತಾ ಪಡೆಗಳು ತಕ್ಷಣ ಆತನನ್ನು ವಶಕ್ಕೆ ಪಡೆದಿವೆ. ದೇವಾಲಯ ಸಂಕೀರ್ಣದ ದಕ್ಷಿಣದ ಗೋಡೆಯ ಮೇಲೆ ನಮಾಜ್ ಮಾಡಲು ಪ್ರಯತ್ನಿಸುತ್ತಿದ್ದ ವ್ಯಕ್ತಿಯನ್ನು ಹಿಡಿಯಲಾಗಿದೆ. ಆರೋಪಿಯನ್ನು ಜಮ್ಮು ಮತ್ತು ಕಾಶ್ಮೀರದ ನಿವಾಸಿ ಎಂದು ಗುರುತಿಸಲಾಗಿದೆ. ಭದ್ರತಾ […]
ಕೊಳಚೆ ಪ್ರದೇಶಗಳಲ್ಲಿನ ಅರ್ಹ ಬಡ ನಿವಾಸಿಗಳಿಗೆ ಹಕ್ಕುಪತ್ರ ವಿತರಣೆ: ಸಚಿವ ಮಧು ಬಂಗಾರಪ್ಪ
ಶಿವಮೊಗ್ಗ: ಹಸಿವುಮುಕ್ತ ಕರ್ನಾಟಕ ನಿರ್ಮಾಣ, ಬಡವರು ಮತ್ತು ಮಧ್ಯಮ ವರ್ಗದವರಿಗೆ ಕೈಗೆಟುಕುವ ದರದಲ್ಲಿ ಆಹಾರ ನೀಡುವುದು. ನಗರ ಪ್ರದೇಶದ ಬಡವರಿಗೆ ಸಮತೋಲಿತ ಆಹಾರವನ್ನು ಒದಗಿಸುವ ಸದುದ್ದೇಶದಿಂದ ಆಡಳಿತಾರೂಢ ಸರ್ಕಾರವು ಮಹತ್ವಾಕಾಂಕ್ಷಿ ಯೋಜನೆಗಳಲ್ಲೊಂದಾದ ಇಂದಿರಾ ಕ್ಯಾಂಟೀನ್ ವ್ಯವಸ್ಥೆಯನ್ನು ರೂಪಿಸಿ ಅನುಷ್ಟಾನಗೊಳಿಸಿದ್ದು, ದಿನನಿತ್ಯ ಸಹಸ್ರಾರು ಸಂಖ್ಯೆಯ ಜನಸಾಮಾನ್ಯರಿಗೆ ಅತಿ ಕಡಿಮೆ ದರದಲ್ಲಿ ಉತ್ತಮ ಊಟೋಪಹಾರ ಒದಗಿಸಲಾಗುತ್ತಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಎಸ್.ಮಧು ಬಂಗಾರಪ್ಪ ಅವರು ಹೇಳಿದರು. ಅವರು ಇಂದು ವಿದ್ಯಾನಗರ ಮತ್ತು ಗುತ್ಯಪ್ಪ ಕಾಲೋನಿಗಳಲ್ಲಿ […]
ಬಾಂಗ್ಲಾದೇಶದಲ್ಲಿ ಮತ್ತೊಬ್ಬ ಹಿಂದೂ ಥಳಿಸಿ, ವಿಷಪ್ರಾಶನ ಮಾಡಿ ಕೊಲೆ
ಢಾಕಾ: ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಮೇಲಿನ ಹಿಂಸಾಚಾರ ಮುಂದುವರೆದಿದ್ದು, ಮತ್ತೊಬ್ಬ ಹಿಂದೂ ಯುವಕನನ್ನು ಕೊಲ್ಲಲಾಗಿದೆ. ಮೃತನನ್ನು ಜಾಯ್ ಮಹಾಪಾತ್ರೋ ಎಂದು ಗುರುತಿಸಲಾಗಿದೆ. ಅವರು ಸುನಮ್ಗಂಜ್ ಜಿಲ್ಲೆಯ ಭಂಗದೋಹೋರ್ ಗ್ರಾಮದ ನಿವಾಸಿಯಾಗಿದ್ದಾರೆ. ಈ ಘಟನೆ ಗುರುವಾರ ನಡೆದಿದ್ದು, ಜಾಯ್ ಅವರನ್ನು ಸ್ಥಳೀಯ ಅಂಗಡಿಯೊಂದಕ್ಕೆ ಕರೆಸಲಾಯಿತು, ಅಲ್ಲಿ ಸ್ಥಳೀಯರು ಅವರ ಮೇಲೆ ಹಲ್ಲೆ ನಡೆಸಿದರು ಎಂದು ಅವರ ಕುಟುಂಬ ತಿಳಿಸಿದೆ. ಅವರನ್ನು ಸಿಲ್ಹೆಟ್ ಎಂಎಜಿ ಉಸ್ಮಾನಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಅವರು ಸಾವನ್ನಪ್ಪಿದ್ದಾರೆ. ಅಮಿರುಲ್ ಇಸ್ಲಾಂ ಎಂಬ ವ್ಯಕ್ತಿ […]
BREAKING: ಲಕ್ಕುಂಡಿಯಲ್ಲಿ ಮನೆಯ ಅಡಿಪಾಯ ತೆಗೆಯುವಾಗ ತಂಬಿಗೆಯಲ್ಲಿ 1 ಕೆ.ಜಿ ನಿಧಿ ಪತ್ತೆ!
ಗದಗ: ಮನೆಯ ಅಡಿಪಾಯ ತೆಗೆಯುವಾಗ ತಂಬಿಗೆಯೊಂದರಲ್ಲಿ ಒಂದು ಕೆ.ಜಿಯಷ್ಟು ನಿಧಿ ಪತ್ತೆಯಾಗಿರುವ ಘಟನೆ ಗದಗ ಜಿಲ್ಲೆಯ ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ನಡೆದಿದೆ. ಲಕ್ಕುಂಡಿ ಗ್ರಾಮದ ಗಂಗವ್ವ ಬಸವರಾಜ್ ರಿತ್ತಿ ಎಂಬುವವರ ಮನೆಯ ಜಾಗದಲ್ಲಿ ನಿಧಿ ಪತ್ತೆಯಾಗಿದೆ. ಮನೆ ಕಟ್ಟಲೆಂದು ಅಡಿಪಾಯ ತೆಗೆಯುತ್ತಿದ್ದ ವೇಳೆ ತಂಬಿಗೆಯಲ್ಲಿ ನಿಧಿ ಪತ್ತೆಯಾಗಿದೆ. ಸುಮಾರು ಒಂದು ಕೆ.ಜಿಯಷ್ಟು ಬಂಗಾರದ ಒಡವೆ, ಗಟ್ಟಿ ಸೇರಿದಂತೆ ಚಿನ್ನಾಭರಣಗಳು ಸಿಕ್ಕಿವೆ. ತಂಬಿಗೆಯಲ್ಲಿ ಸಿಕ್ಕ ನಿಧಿಯನ್ನು ಮನೆಯವರು ಗ್ರಾಮದ ಗಣೇಶ ದೇಗುಲದಲ್ಲಿ ಇಟ್ಟಿದ್ದಾರೆ. ಬಳಿಕ ಪೊಲೀಸರು ಹಾಗೂ ಪುರಾತತ್ವ […]
ಬಂಡವಾಳ ಆಕರ್ಷಣೆ, ಉದ್ಯೋಗ ಸೃಷ್ಟಿ: ಕರಾವಳಿ ಅಭಿವೃದ್ಧಿಗೆ ಪ್ರತ್ಯೇಕ ಪ್ರವಾಸೋದ್ಯಮ ನೀತಿ; ಡಿಸಿಎಂ ಡಿ.ಕೆ.ಶಿವಕುಮಾರ್
ಮಂಗಳೂರು: ಕರಾವಳಿ ಎಂದರೆ ಸೌಂದರ್ಯ, ಜ್ಞಾನ, ಸಂಪತ್ತಿನ ಪರ್ವತ. ದೈವ, ದೇವಾಲಯ, ಶಕ್ತಿದೇವತೆಗಳ ಪ್ರವಾಸಿ ಕ್ಷೇತ್ರ. ವ್ಯಾಪಾರಿಗಳ ನಿಧಿ, ಪ್ರವಾಸಿಗರ ಸ್ವರ್ಗ. ಇಷ್ಟೆಲ್ಲಾ ವಿಶೇಷತೆ ಇರುವಾಗ ಈ ಭಾಗದ ಪ್ರವಾಸೋದ್ಯಮದಲ್ಲಿ ನಾವು ಯಾಕೆ ಹಿಂದುಳಿದಿದ್ದೇವೆ ಎಂಬುದು ಅರ್ಥವಾಗುತ್ತಿಲ್ಲ. ಈ ಭಾಗದ ಪ್ರವಾಸೋದ್ಯಮ ನೀತಿಗೆ ಜನಪ್ರತಿನಿಧಿಗಳು, ಉದ್ಯಮಿಗಳು, ಅಧಿಕಾರಿಗಳು ಸೇರಿದಂತೆ ಎಲ್ಲರ ಸಲಹೆಗಳನ್ನು ಸ್ವೀಕರಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ಈ ಭಾಗದ ಅಭಿವೃದ್ಧಿಯೇ ನಮ್ಮ ಸಂಕಲ್ಪ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಮಂಗಳೂರಿನಲ್ಲಿ ನಡೆದ ‘ಕರಾವಳಿ ಕರ್ನಾಟಕ […]
ಬೆಂಗಳೂರು: ಕೇರಳದ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಮಲಯಾಳಂ ಕಡ್ಡಾಯ ಮಸೂದೆ ಮಂಡಿಸಿರುವ ಕೇರಳ ಸರ್ಕಾರದ ಕ್ರಮಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿದ್ದು, ಮಸೂದೆ ಹಿಂಪಡೆಯುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇರಳ ಸಿಎಂ ಪಿಣರಾಯಿ ವಿಜಯನ್ ಅವರಿಗೆ ಪತ್ರ ಬರೆದಿದ್ದರು. ಸಿಎಂ ಸಿದ್ದರಾಮಯ್ಯ ಅವರ ಪತ್ರಕ್ಕೆ ಇದೀಗ ಕೇರಳ ಸಿಎಂ ಪಿಣರಾಯಿ ವಿಜಯನ್ ಪತ್ರ ಬರೆದು ಸ್ಪಷ್ಟನೆ ನೀಡಿದ್ದಾರೆ. ಮಲಯಾಳಂ ಕಡ್ಡಾಯ ಮಸೂದೆಯಲ್ಲಿ ಭಾಷಾ ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸಲಾಗಿದೆ. ಕನ್ನಡ, ತಮಿಳು ಮಾತನಾಡುವ ಭಾಷಾ ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸಲಾಗಿದೆ ಎಂದು ಸಾಮಾಜಿಕ […]
BREAKING: ಕಬ್ಬು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಹುಕ್ ಕಟ್ಟಾಗಿ ದುರಂತ: ಇಬ್ಬರು ಮಕ್ಕಳು ಸಾವು
ಬಾಗಲಕೋಟೆ: ಕಬ್ಬು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಹುಕ್ ಕಟ್ಟಾಗಿ ಕಾರ್ಮಿಕರ ಇಬ್ಬರು ಮಕ್ಕಳು ಸಾವನ್ನಪ್ಪಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಕಮತಗಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಕಮತಗಿ ಬಳಿ ಹೆದ್ದಾರಿಯಲ್ಲಿ ದುರಂತ ಸಂಭವಿಸಿದೆ. ಟ್ರಾಕ್ಟರ್ ನಲ್ಲಿ ಕಬ್ಬು ಸಾಗಿಸುತ್ತಿದ್ದ ವೇಳೆ ಏಕಾಏಕಿ ಟ್ರ್ಯಾಕ್ಟರ್ ಹುಕ್ ಕಟ್ ಆಗಿ ಟ್ರ್ಯಾಕ್ಟರ್ ಪಲ್ಟಿಯಾಗಿದೆ. ಅಪಘಾತದಲ್ಲಿ ಕಬ್ಬು ಕಟಾವು ಮಾಡುವ ಮಹಾರಾಷ್ಟ್ರ ಮೂಲದ ಕಾರ್ಮಿಕರ ಇಬ್ಬರು ಮಕ್ಕಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. 8 ವರ್ಷದ ಹಾಗೂ 10 ವರ್ಷದ […]
BREAKING: ಎರಡು ತಿಂಗಳ ಗರ್ಭಿಣಿ ಪತಿ ಮನೆಯಲ್ಲಿಯೇ ಶವವಾಗಿ ಪತ್ತೆ
ಹಾವೇರಿ: ಎರಡು ತಿಂಗಳ ಗರ್ಭಿಣಿ ಪತಿ ಮನೆಯಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಹಾವೇರಿ ಜಿಲ್ಲೆಯ ಶಿಗ್ಗಾಂವಿಯಲ್ಲಿ ನಡೆದಿದೆ. ಸವಿತಾ ದೊಡ್ಡಮನಿ (35) ಮೃತ ಗರ್ಭಿಣಿ. ಪತಿ ಹಾಗೂ ಕುಟುಂಬದವರೇ ವರದಕ್ಷಿಣೆ ಕಿರುಕುಳ ನೀಡಿ ಕೊಲೆಗೈದಿದದರೆ ಎಂದು ಸವಿತಾ ಪೋಷಕರು ಆರೋಪಿಸಿದ್ದಾರೆ. ಸವಿತಾ ಹಾಗೂ ಗಿರೀಶ್ ಮದುವೆಯಾಗಿ 9 ತಿಂಗಳಾಗಿತ್ತು. ಸವಿತಾ 2 ತಿಂಗಳ ಗರ್ಭಿಣಿಯಾಗಿದ್ದಳು. ವರದಕ್ಷಿಣೆಗಾಗಿ ಸವಿತಾಳನ್ನು ಪತಿ ಹಾಗೂ ಮನೆಯವರು ಹಿಂಸಿಸುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ. ಇದೀಗ ಇದ್ದಕ್ಕಿದ್ದಂತೆ ಸವಿತಾ ಪತಿ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. […]
BREAKING: ಎಸ್.ಎಸ್.ಎಲ್.ಸಿ ಪೂರ್ವ ಸಿದ್ಧತಾ ಪ್ರಶ್ನೆ ಪತ್ರಿಕೆ ಲೀಕ್: ಸೋರಿಕೆಯಾಗಿದ್ದ ಪರೀಕ್ಷಾ ಕೇಂದ್ರ ಪತ್ತೆ
ಬೆಳಗಾವಿ: ಎಸ್.ಎಸ್.ಎಲ್.ಸಿ ಪೂರ್ವ ಸಿದ್ಧತಾ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದ್ದ ಪರೀಕ್ಷಾ ಕೇಂದ್ರ ಪತ್ತೆಯಾಗಿದೆ. ಬೆಳಗಾವಿಯಲ್ಲಿ ಎಸ್.ಎಸ್.ಎಲ್.ಸಿ ಪೂರ್ವ ಸಿದ್ಧತಾ ಪರೀಕ್ಷೆಯ ಸಮಾಜ ವಿಜ್ಞಾನ ವಿಷಯದ ಪ್ರಶ್ನೆ ಪತ್ರಿಕೆ ಪರೀಕ್ಷೆಗೂ ಮುನ್ನವೇ ಇಂದು ಸೋರಿಕೆಯಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನೆ ಪತ್ರಿಕೆ ವೈರಲ್ ಆಗಿತ್ತು. ಈ ಬಗ್ಗೆ ವಿದ್ಯಾರ್ಥಿಗಳ ಪೋಷಕರು, ಶಿಕ್ಷಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಪ್ರಶ್ನೆ ಪತ್ರಿಕೆ ಮೇಲಿರುವ ಕೋಡ್ ಮೂಲಕವಾಗಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಪರೀಕ್ಷಾ ಕೇಂದ್ರವನ್ನು […]
BIG NEWS: ಮನ್ ರೇಗಾ ಯೋಜನೆ ಬಗ್ಗೆ ಚರ್ಚೆಗೆ ನಾವು ಸಿದ್ಧ: HDKಗೆ ಸಿಎಂ ಸಿದ್ದರಾಮಯ್ಯ ಟಾಂಗ್
ಬೆಂಗಳೂರು: ಕಾಂಗ್ರೆಸ್ ನಾಯಕರು ಪ್ರಚಾರಕ್ಕಾಗಿ ವಿಬಿ-ಜಿ ರಾಮ್ ಜಿ ಯೋಜನೆಯನ್ನು ವಿರೋಧಿಸುತ್ತಿದ್ದಾರೆ. ಮನ್ ರೇಗಾ ಯೋಜನೆ ಬಗ್ಗೆ ಓಪನ್ ಡಿಬೇಟ್ ಮಾಡೋಣ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಸವಾಲಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಮನ್ ರೇಗಾ ಯೋಜನೆ ಬಗ್ಗೆ ನಾವು ಯಾವಾಗಲೂ ಚರ್ಚೆಗೆ ಸಿದ್ಧ ಎಂದು ಕುಮಾರಸ್ವಾಮಿ ಅವರಿಗೆ ಟಾಂಗ್ ನೀಡಿದ್ದಾರೆ. ಯೋಜನೆ ಬಗ್ಗೆ ಚರ್ಚಿಸಲು ನಾವು ಯಾವಾಗಲೂ ಸಿದ್ಧ. ನಾವು ದೊಡ್ಡ ಆಂದೋಲನವನ್ನೇ ಮಾಡುತ್ತಿದ್ದೇವೆ. ಚರ್ಚೆಗೆ ಬರಲಿ […]
ಬೆಂಗಳೂರು: ಮನರೇಗಾ ಯೋಜನೆಯನ್ನು ವಿಬಿ-ಜಿ ರಾಮ್ ಜಿ ಎಂದು ಹೆಸರು ಬದಲಿಸಿರುವ ವಿಚಾರವಾಗಿ ಕಾಂಗ್ರೆಸ್ ನಾಯಕರು ಪ್ರಚಾರಕ್ಕಾಗಿ ಯೋಜನೆ ವಿರೋಧಿಸುತ್ತಿದ್ದಾರಷ್ಟೇ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕುಮಾರಸ್ವಾಮಿ, ಕಾಂಗ್ರೆಸ್ ನವರದ್ದು ಪ್ರಚಾರಕ್ಕಾಗಿ ವಿಬಿ-ಜಿ ರಾಮ್ ಜಿ ಯೋಜನೆಯ ವಿರೋಧ. ಓಪನ್ ಡಿಬೆಟ್ ಮಾಡೋಣ. ನಾವೇನೂ ಖುದ್ದು ಹೋಗಲ್ಲ ಪಾಸಿಟಿವ್ ನೆಗೆಟಿವ್ ಎಲ್ಲಾ ಮಾಹಿತಿಯನ್ನು ಸಂಗ್ರಹಿಸಿ ಕೊಡುತ್ತೇನೆ. ಚರ್ಚೆಯಾಗಲಿ ಎಂದು ತಿಳಿಸಿದ್ದಾರೆ. ಇದೇ ವೇಳೆ ಮುಖ್ಯಮಂತ್ರಿ ಸ್ದ್ದರಾಮಯ್ಯ ವಿರುದ್ಧವೂ ವಾಗ್ದಾಳಿ ನಡೆಸಿದ […]
ALERT : ತುರ್ತು ಸಂದರ್ಭದಲ್ಲಿ ನಿಮ್ಮನ್ನು ರಕ್ಷಿಸುವ 4 ಔಷಧಗಳಿವು , ಪ್ರತಿ ಮನೆಯಲ್ಲೂ ಇರಬೇಕು
ಡಿಜಿಟಲ್ ಡೆಸ್ಕ್ : ತುರ್ತು ಸಮಯದಲ್ಲಿ ಔಷಧಿ ತೆಗೆದುಕೊಳ್ಳುವುದು ಬಹಳ ಮುಖ್ಯ. ಇಲ್ಲದಿದ್ದರೆ, ನಿಮ್ಮ ಆರೋಗ್ಯವು ಮತ್ತಷ್ಟು ಹಾನಿಗೊಳಗಾಗುವ ಸಾಧ್ಯತೆಯಿದೆ ಅಥವಾ ಅದು ನಿಮ್ಮ ಜೀವಕ್ಕೆ ಅಪಾಯವಾಗಬಹುದು. ಮನೆಯಲ್ಲಿ, ಮಕ್ಕಳು, ಅವರು ವಯಸ್ಸಾದವರು ಅಥವಾ ದೊಡ್ಡವರು ಎಂಬುದನ್ನು ಲೆಕ್ಕಿಸದೆ, ಆಗಾಗ್ಗೆ ಕೆಲವು ರೀತಿಯ ಆರೋಗ್ಯ ಸಮಸ್ಯೆಗಳನ್ನು ಹೊಂದಿರುತ್ತಾರೆ. ಯಾವಾಗ ಮತ್ತು ಯಾವ ತುರ್ತು ಪರಿಸ್ಥಿತಿ ಬರುತ್ತದೆ ಎಂದು ಯಾರೂ ಹೇಳಲು ಸಾಧ್ಯವಿಲ್ಲ.ನಿಮ್ಮ ಕುಟುಂಬದ ಯಾವುದೇ ಸದಸ್ಯರು ಇದ್ದಕ್ಕಿದ್ದಂತೆ ತುರ್ತು ಪರಿಸ್ಥಿತಿಯನ್ನು ಹೊಂದಿರಬಹುದು. ಅಂತಹ ಸಂದರ್ಭಗಳಲ್ಲಿ ವೈದ್ಯರನ್ನು ಸಂಪರ್ಕಿಸಲು […]
BREAKING : ಒಡಿಶಾದಲ್ಲಿ ವಿಮಾನ ಪತನ : ಪೈಲಟ್ ಸ್ಥಿತಿ ಗಂಭೀರ, 7 ಪ್ರಯಾಣಿಕರಿಗೆ ಗಾಯ.!
ಒಡಿಶಾ : ಶನಿವಾರ ಒಡಿಶಾದ ರೂರ್ಕೆಲಾ ವಾಯುನೆಲೆಯ ಬಳಿಯ ಜಗದಾ ಬ್ಲಾಕ್ ಬಳಿ ಒಂಬತ್ತು ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಸಣ್ಣ ವಿಮಾನವೊಂದು ಅಪಘಾತಕ್ಕೀಡಾಗಿದೆ. ಪ್ರಾಥಮಿಕ ವರದಿಗಳ ಪ್ರಕಾರ, ಭುವನೇಶ್ವರಕ್ಕೆ ಟೇಕ್ ಆಫ್ ಆಗಲು ಪ್ರಯತ್ನಿಸುತ್ತಿದ್ದಾಗ ವಿಮಾನ ಅಪಘಾತಕ್ಕೀಡಾಗಿದೆ. ವಿಮಾನವು ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ತೊಂದರೆಗೆ ಸಿಲುಕಿ ಏರ್ಸ್ಟ್ರಿಪ್ ಪ್ರದೇಶದ ಬಳಿ ಪತನಗೊಂಡಿದೆ ಎಂದು ವರದಿಯಾಗಿದೆ. ಇಲ್ಲಿಯವರೆಗೆ ಯಾವುದೇ ಸಾವುನೋವುಗಳು ವರದಿಯಾಗಿಲ್ಲ, ಆದರೂ ಕೆಲವು ಪ್ರಯಾಣಿಕರು ಗಾಯಗೊಂಡಿದ್ದಾರೆ. ತುರ್ತು ತಂಡಗಳು ಸ್ಥಳಕ್ಕೆ ಧಾವಿಸಿವೆ. ಪೈಲಟ್ ಸ್ಥಿತಿ ಗಂಭೀರವಾಗಿದ್ದು, […]
BIG NEWS: ಸುಮ್ಮನೇ ಆಕಾಶಕ್ಕೆ ಉಗುಳಿ ಮುಖಕ್ಕೆ ಸಿಂಪಡಿಸಿಕೊಳ್ಳಬೇಡಿ: ಜೆಡಿಎಸ್ ನಾಯಕರಿಗೆ ಕಾಂಗ್ರೆಸ್ ತಿರುಗೇಟು
ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಇದೀಗ ಟ್ವೀಟ್ ವಾರ್ ಜೋರಾಗಿದೆ. ಜೆಡಿಎಸ್ ಹಾಗೂ ಕಾಂಗ್ರೆಸ್ ನಾಯಕರು ಸಾಮಾಜಿಕ ಜಾಲತಾಣಗಳಲ್ಲಿ ಪರಸ್ಪರ ವಾಕ್ಸಮರ ನಡೆಸಿದ್ದಾರೆ. ಸಿಡಿ ಫ್ಯಾಕ್ಟರಿ ಮಾಲೀಕನ ಮನೆಹಾಳು ಆತ್ಮರತಿ ಬಗ್ಗೆ ರಾಜ್ಯ ಕಾಂಗ್ರೆಸ್ ಮರೆತಿದೆ ಎಂಬ ಜೆಡಿಎಸ್ ಟೀಕೆಗೆ ನಿಮ್ಮದು ಬ್ಲೂ ಬಾಯ್ಸ್ ಪಾರ್ಟಿ ಅನ್ನೋದು ಮರೆತು ಹೋಯ್ತೆ? ಎಂದು ಕಾಂಗ್ರೆಸ್ ತಿರುಗೇಟು ನೀಡಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಿಗ್ಗಾ ಮುಗ್ಗಾ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಅಕಟಕಟಾ… ನಿಮ್ಮದು ಸೆಕ್ಯೂರ್ಡ್ “ಬ್ಲೂ ಬಾಯ್ಸ್” ಪಾರ್ಟಿ ಅನ್ನೋದು […]
2020 ಹಾಗೂ 2021 ರ ‘ರಾಜ್ಯ ಚಲನಚಿತ್ರ’ಪ್ರಶಸ್ತಿಗಳು ಪ್ರಕಟ, ಇಲ್ಲಿದೆ ಸಂಪೂರ್ಣ ಮಾಹಿತಿ
ಬೆಂಗಳೂರು : ಕರ್ನಾಟಕ ಸರ್ಕಾರವು ಚಲನಚಿತ್ರ ರಂಗದಲ್ಲಿನ ಜೀವಮಾನ ಸಾಧನೆಗಾಗಿ ನೀಡುವ ಡಾ.ರಾಜಕುಮಾರ್, ಪುಟ್ಟಣ್ಣ ಕಣಗಾಲ್ ಹಾಗೂ ಡಾ.ವಿಷ್ಣುವರ್ಧನ್ ಪ್ರಶಸ್ತಿಗಳನ್ನು ಪ್ರಕಟಿಸಿದೆ. 2020 ಹಾಗೂ 2021 ನೇ ಕ್ಯಾಲೆಂಡರ್ ವರ್ಷಗಳ ಪ್ರಶಸ್ತಿಗಳು ಇವುಗಳಾಗಿವೆ. ಹಿರಿಯ ನಟಿ ಡಾ.ಜಯಮಾಲಾ, ಸಾ.ರಾ.ಗೋವಿಂದು ಅವರಿಗೆ ಡಾ.ರಾಜ್ ಪ್ರಶಸ್ತಿ, ಎಂ.ಎಸ್.ಸತ್ಯು, ಕೆ.ಶಿವರುದ್ರಯ್ಯ ಅವರಿಗೆ ಪುಟ್ಟಣ್ಣ ಕಣಗಾಲ್ ಪ್ರಶಸ್ತಿ, ಹಿರಿಯ ಸಿನಿಮಾ ಛಾಯಾಗ್ರಾಹಕ ಪ್ರಗತಿ ಅಶ್ವತ್ಥನಾರಾಯಣ, ಎಂ.ಕೆ.ಸುಂದರರಾಜ್ ಅವರು ಡಾ.ವಿಷ್ಣುವರ್ಧನ್ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರಾದ ಹೇಮಂತ್ […]
ಬೆಂಗಳೂರಲ್ಲಿ : ಬೆಂಗಳೂರಲ್ಲಿ ಕಾಮುಕರಿಗೆ ಪೊಲೀಸರ ಭಯವೇ ಇಲ್ಲವೇ..? ಪ್ರತಿನಿತ್ಯ ಬೆಂಗಳೂರಲ್ಲಿ ಒಂದಲ್ಲ ಒಂದು ಇಂತಹ ಪ್ರಕರಣಗಳು ವರದಿ ಆಗುತ್ತಲೇ ಇರುತ್ತದೆ. ರ್ಯಾಪಿಡೋ ಬೈಕ್ ಟ್ಯಾಕ್ಸಿ ಚಾಲಕನೋರ್ವ ಯುವತಿಯ ಖಾಸಗಿ ಅಂಗ ಸ್ಪರ್ಶಿಸಿ ಲೈಂಗಿಕ ಕಿರುಕುಳ ನೀಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಟೆಕ್ಕಿಯೊಬ್ಬರು ತಾವು ಕೆಲಸ ಮಾಡುವ ಕಂಪನಿಯಿಂದ ಮಾನ್ಯತಾ ಟೆಕ್ ಪಾರ್ಕ್ ಗೆ ತೆರಳಲು ಬೈಕ್ ಟ್ಯಾಕ್ಸಿ ಬುಕ್ ಮಾಡಿದ್ದರು. ಪ್ರಯಾಣದ ವೇಳೆ ಆತ ಆಕೆ ಜೊತೆ ಅಸಭ್ಯವಾಗಿ ವರ್ತಿಸಿದ್ದಾನೆ. ಆಕೆ ಜೋರಾಗಿ ಗಲಾಟೆ ಮಾಡಿದ್ದಕ್ಕೆ […]
BIG NEWS: ಸಿಡಿ ಫ್ಯಾಕ್ಟರಿ ಇದ್ದಿದ್ದೇ ಹೊಳೆನರಸಿಪುರ, ಪದ್ಮನಾಭನಗರದಲ್ಲಿ: HDK ವಿರುದ್ಧ ಡಿ.ಕೆ.ಸುರೇಶ್ ವಾಗ್ದಾಳಿ
ಬೆಂಗಳೂರು: ಸಿಡಿ ಫ್ಯಾಕ್ಟರಿ ಮಾಲೀಕನ ಮನೆಹಾಳು ಆತ್ಮರತಿ ಬಗ್ಗೆ ರಾಜ್ಯ ಕಾಂಗ್ರೆಸ್ ಮರೆತಿದೆ ಎಂಬ ಜೆಡಿಎಸ್ ಟೀಕೆಗೆ ಕಿಡಿಕಾರಿರುವ ಮಾಜಿ ಸಂಸದ ಡಿ.ಕೆ.ಸುರೇಶ್, ಸಿಡಿ ಫ್ಯಾಕ್ಟರಿ ಇದ್ದದ್ದೇ ಹೊಳೆನರಸಿಪುರದಲ್ಲಿ ಎಂದು ತಿರುಗೇಟು ನೀಡಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಸುರೇಶ್, ಸಿಡಿ ಫ್ಯಾಕ್ಟರಿ ಇದ್ದದ್ದೇ ಹೊಳೆನರಸಿಪುರ, ಪದ್ಮನಾಭನಗರದಲ್ಲಿ. ಸಿಡಿ ಯಾರು ಮ್ಯಾನಿಫ್ಯಾಕ್ಟರ್ ಮಾಡುತ್ತಿದ್ದಾರೆ ಎಂಬುದು ಎಲ್ಲರಿಗೂ ಗೊತ್ತು. ಹಾಸನದಲ್ಲಿ ನಡೆದ ಘಟನೆ ಇಡೀ ದೇಶದಲ್ಲಿ ಎಲ್ಲೂ ನಡೆಯದಂತಹ ಕೆಟ್ಟ ಘಟನೆ. ನಿಮ್ಮ ಹುಡುಗನೇ ಮಾಡಿರುವ ಕೃತ್ಯ. ಜೈಲು ಸೇರಿರುವುದು […]
ಪಾರ್ಕಿನ್ಸನ್ ಕಾಯಿಲೆ: ವಯಸ್ಸಿನ ಸಹಜ ಲಕ್ಷಣವೋ ಅಥವಾ ಗಂಭೀರ ಆರೋಗ್ಯ ಎಚ್ಚರಿಕೆಯೋ?
ಸಾಮಾನ್ಯವಾಗಿ ವಯಸ್ಸಾದಂತೆ ಮೈಕೈ ಬಿಗಿಯಾಗುವುದು (stiffness), ನಡಿಗೆ ನಿಧಾನಗೊಳ್ಳುವುದು ಅಥವಾ ಸಮತೋಲನ ತಪ್ಪುವುದು ಸಹಜವೆಂದು ನಾವು ನಿರ್ಲಕ್ಷಿಸುತ್ತೇವೆ. ಆದರೆ ನರರೋಗ ತಜ್ಞರ (Neurologists) ಎಚ್ಚರಿಕೆಯ ಪ್ರಕಾರ, ಇಡೀ ದೇಹದಲ್ಲಿ ಕಾಣಿಸುವ ಬಿಗಿತ ಹಾಗೂ ಚಲನೆಯಲ್ಲಿ ನಿಧಾನತೆ ಕೇವಲ ವಯಸ್ಸಿನ ಪರಿಣಾಮವಲ್ಲ. ಇವು ನರಮಂಡಲದ ಮೇಲೆ ಪರಿಣಾಮ ಬೀರುವ ಪ್ರಗತಿಶೀಲ ಅಸ್ವಸ್ಥತೆಯಾದ ಪಾರ್ಕಿನ್ಸನ್ ಕಾಯಿಲೆಯ (Parkinson’s disease) ಆರಂಭಿಕ ಸೂಚನೆಗಳಾಗಿರಬಹುದು. ಈ ಕಾಯಿಲೆಯನ್ನು ಮೊದಲ ಹಂತದಲ್ಲೇ ಗುರುತಿಸಿ ಚಿಕಿತ್ಸೆ ಆರಂಭಿಸಿದರೆ ಉತ್ತಮ ಆರೋಗ್ಯ ಫಲಿತಾಂಶಗಳನ್ನು ಪಡೆಯಲು ಸಾಧ್ಯ. ಏನಿದು […]
ಬೆಂಗಳೂರು: ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಡಿ.ಕೆ.ಸಹೋದರರ ನಡುವಿನ ಮಾತಿನ ಸಮರ, ಟ್ವೀಟ್ ವಾರ್ ಗಳು ಮುಂದುವರೆದಿವೆ. ಮೀಡಿಯಾ ಹುಲಿಕುಮಾರಸ್ವಾಅಮಿಯವರ ಅನುಭದ ಕಾಲುವೆಯಲ್ಲಿ ಹರಿಯುತ್ತಿರುವುದು ಬರಿ ಸುಳ್ಳು, ಹಿಟ್ ಆಂಡ್ ರನ್, ಅವಕಾಶವಾದ ಆತ್ಮರತಿ ಎಂಬ ಕೊಚ್ಚೆ ಎಂದು ಟೀಕಿಸಿದ್ದ ಕಾಂಗ್ರೆಸ್ ಗೆ ಜೆಡಿಎಸ್ ಸಾಮಾಜಿಕ ಜಾಲತಾಣಗಳ ಮೂಲಕವೇ ಕುಟುಕಿದೆ. ಸಿಡಿ ಫ್ಯಾಕ್ಟರಿ ಮಾಲೀಕನ “ಮನೆಹಾಳು ಆತ್ಮರತಿ” ಬಗ್ಗೆ ರಾಜ್ಯ ಕಾಂಗ್ರೆಸ್ ಮರೆತಿದೆ. ಟೆಂಟ್’ನಲ್ಲಿ ನೀಲಿ ಸಿನಿಮಾ ತೋರಿಸಿದ “ದಂಧೆಕೋರನ ಆತ್ಮರತಿ” ಎಂತಹದ್ದು? ಕಲೆಕ್ಷನ್ ಗಿರಾಕಿಯ ಆತ್ಮರತಿ” […]
ಬೆಂಗಳೂರು : ರಾಕಿಂಗ್ ಸ್ಟಾರ್ ಯಶ್ ಅಭಿನಯದ ಟಾಕ್ಸಿಕ್ ಚಿತ್ರದ ಟೀಸರ್ ಎಲ್ಲಾ ಕಡೆ ಸದ್ದು ಮಾಡುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಎಲ್ಲೇ ನೋಡಿದರೂ ಟಾಕ್ಸಿಕ್ ನದ್ದೇ ಹವಾ. ಅದರಲ್ಲೂ ಟೀಸರ್ ನಲ್ಲಿನ ಇಂಟಿಮೇಟ್ ಸೀನ್ ಸದ್ಯ ಟ್ರೋಲಿಗರಿಗೆ ಆಹಾರವಾಗಿದೆ. ಯೆಸ್, ಟಾಕ್ಸಿಕ್ ಚಿತ್ರದ ಟೀಸರ್ ನಲ್ಲಿ ಅಶ್ಲೀಲತೆ ಇದೆ ಎಂಬುದು ಕೆಲವರ ವಾದವಾಗಿದೆ. ಈ ಬಗ್ಗೆ ಪರ ವಿರೋಧ ಚರ್ಚೆಗಳು ಸೋಶಿಯಲ್ ಮೀಡಿಯಾದಲ್ಲಿ ನಡೆಯುತ್ತಿದೆ. ಚಿತ್ರದಲ್ಲಿ ಅಶ್ಲೀಲತೆ ಇದೆ ಎಂದು ಸೆನ್ಸಾರ್ ಬೋರ್ಡ್ ಗೆ ದೂರು ನೀಡಲಾಗಿದೆ. […]
BIG NEWS: ನಾಡಬಾಂಬ್ ಸ್ಫೋಟಗೊಂಡು ಹಸು ಸಾವು: ಮೂವರು ಆರೋಪಿಗಳು ಅರೆಸ್ಟ್
ರಾಮನಗರ: ಕಾಡುಹಂದಿ ಬೇಟೆಗಾಗಿ ಇಟ್ಟಿದ್ದ ನಾಡಬಾಂಬ್ ಸ್ಫೋತಗೊಂಡು ಹಸುವಿನ ಬಾಯಿ ಛಿದ್ರಗೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಿರುವ ಘಟನೆ ರಾಮನಗರದಲ್ಲಿ ನಡೆದಿದೆ. ಕೃಷ್ಣಮೂರ್ತಿ, ಶಿವಕುಮಾರ್, ಶಿವನಪ್ಪ ಬಂಧಿತ ಆರೋಪಿಗಳು.ಈ ಮೂವರು ಕಾಡುಹಂದಿ ಬೇಟೆಗಾಗಿ ನಾಡಬಾಂಬ್ ಇಟ್ಟಿದ್ದರು. ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಆಲನಾಥ ಗ್ರಾಮದ ಬಳಿ ಜನವರಿ ೩ರಂದು ರೈತ ಶಿವನಗೌಡ ಎಂಬುವವರು ತಮ್ಮ ಹಸುವನ್ನು ಮೇಯಿಸಲು ಬಿಟ್ಟಿದ್ದಾಗ ನಾಡಬಾಂಬ್ ಸ್ಫೊಟಗೊಂಡು ಹಸುವಿನ ಬಾಯಿ ಛಿದ್ರಗೊಂಡಿತ್ತು. ಕಿಡಿಗೇಡಿಗಳ ಕೃತ್ಯಕ್ಕೆ ಹಸು ಎರಡು ದಿನಗಳ ಕಾಲ ಜೀವನ್ಮರಣದ […]
ಪುದುಚೇರಿ ಮುಖ್ಯಮಂತ್ರಿಗಳಿಂದ ಗೌರವ ಪಡೆದ ಕರ್ನಾಟಕದ ‘ಬಂಗಾರದ ಜಿಂಕೆ’ ಅಕ್ಷರ A.N.
ಪುದುಚೇರಿ: ಪುದುಚೇರಿ ಸರ್ಕಾರದ ಪ್ರವಾಸೋದ್ಯಮ ಇಲಾಖೆಯ ವತಿಯಿಂದ ಆಯೋಜಿಸಲಾಗಿದ್ದ ‘ಅಂತರಾಷ್ಟ್ರೀಯ ಯೋಗ ಉತ್ಸವ-2026’ ರಲ್ಲಿ ಕರ್ನಾಟಕದ ಪ್ರತಿಭೆ ಕುಮಾರಿ ಅಕ್ಷತಾ ಎ.ಎನ್. ಅವರು ಚಿನ್ನದ ಪದಕ ಗೆಲ್ಲುವ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ. ಜನವರಿ 4 ರಿಂದ 7 ರವರೆಗೆ ನಡೆದ ಈ ಪ್ರತಿಷ್ಠಿತ ಸ್ಪರ್ಧೆಯಲ್ಲಿ, 14 ವರ್ಷದ ಬಾಲಕಿಯರ ಕಿರಿಯ ವಿಭಾಗದಲ್ಲಿ ಅಕ್ಷತಾ ಪಾಲ್ಗೊಂಡಿದ್ದರು. ಜಗತ್ತಿನ ವಿವಿಧೆಡೆಯಿಂದ ಬಂದಿದ್ದ ಸ್ಪರ್ಧಿಗಳ ನಡುವೆ ಅಪ್ರತಿಮ ಯೋಗ ಕೌಶಲ್ಯ ಪ್ರದರ್ಶಿಸಿದ ಇವರು ಪ್ರಥಮ ಸ್ಥಾನ […]
‘SSLC’ಪಾಸಾದ ಮಹಿಳೆಯರಿಗೆ ಕೇಂದ್ರದಿಂದ ಹೊಸ ಯೋಜನೆ : ಈ ಕೆಲಸ ಮಾಡಿದ್ರೆ ಖಾತೆಗೆ ಪ್ರತಿ ತಿಂಗಳು 7000 ಜಮಾ.!
ಕೇಂದ್ರ ಸರ್ಕಾರಿ ವಲಯದ ಕಂಪನಿಯಾದ ಭಾರತೀಯ ಜೀವ ವಿಮಾ ನಿಗಮ (LIC) ಮಹಿಳೆಯರಿಗೆ ಗುಡ್ ನ್ಯೂಸ್ ನೀಡಿದೆ.ಮಹಿಳೆಯರಿಗೆ ಆರ್ಥಿಕ ನೆರವು ನೀಡಲು ಇದು ಉದ್ಯೋಗಾವಕಾಶಗಳನ್ನು ಒದಗಿಸುತ್ತಿದೆ. ಮಹಿಳೆಯರಿಗೆ ನಿರ್ದಿಷ್ಟವಾಗಿ ಉದ್ಯೋಗಗಳನ್ನು ಒದಗಿಸಲು LIC ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ಬಿಮಾ ಸಖಿ ಯೋಜನೆ ಎಂಬ ಯೋಜನೆಯನ್ನು ಪ್ರಾರಂಭಿಸಿದೆ. ಈ ಯೋಜನೆಯ ಮೂಲಕ, ಮಹಿಳೆಯರಿಗೆ ಮಾತ್ರ LIC ಏಜೆಂಟ್ಗಳಾಗಲು ಅವಕಾಶ ನೀಡಲಾಗುವುದು. ಈ ಯೋಜನೆಯ ಭಾಗವಾಗಿ, LIC ಏಜೆಂಟ್ಗಳಾಗಿ ಸೇರುವ ಮಹಿಳೆಯರಿಗೆ ಸ್ಟೈಫಂಡ್ನೊಂದಿಗೆ ಮೂರು ವರ್ಷಗಳ ತರಬೇತಿ ಅವಕಾಶವನ್ನು ಒದಗಿಸಲಾಗುತ್ತದೆ. […]
ಈ ದೇಶದಲ್ಲಿ ಸುಂದರವಾಗಿರುವ ಮಹಿಳೆಯರನ್ನು ಮಾತ್ರ ಸೈನ್ಯಕ್ಕೆ ಸೇರಿಸಿಕೊಳ್ಳುತ್ತಾರೆ ಯಾಕೆ ಗೊತ್ತಾ? ತಿಳಿಯಿರಿ
ಇಸ್ರೇಲ್ ಸೈನ್ಯದ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಚರ್ಚೆ ನಡೆಯುತ್ತಿದೆ. ವಿಶೇಷವಾಗಿ ಅಲ್ಲಿನ ಮಹಿಳಾ ಸೈನಿಕರ ಫೋಟೋಗಳು ವೈರಲ್ ಆಗುತ್ತವೆ. ಅವರು ಧೈರ್ಯಶಾಲಿ ಮತ್ತು ಆತ್ಮವಿಶ್ವಾಸದಿಂದ ಕಾಣುವುದರಿಂದ, ಇಸ್ರೇಲ್ ಸೈನ್ಯದಲ್ಲಿ ಇಷ್ಟೊಂದು ಸುಂದರ ಮಹಿಳೆಯರು ಹೇಗೆ ಇದ್ದಾರೆ ಎಂದು ಅನೇಕ ಜನರು ಆಶ್ಚರ್ಯ ಪಡುತ್ತಾರೆ. ಇದು ಕೆಲವು ವಿಶೇಷ ಆಯ್ಕೆ ಪ್ರಕ್ರಿಯೆಯಿಂದಾಗಿಯೇ? ಮಾಡೆಲಿಂಗ್ ಅಥವಾ ಚಲನಚಿತ್ರಗಳಿಗೆ ಮೊದಲು ಅವರನ್ನು ಸೈನ್ಯಕ್ಕೆ ಸೇರಿಸಿಕೊಳ್ಳಲಾಗುತ್ತದೆಯೇ? ಎಂಬ ಅನುಮಾನಗಳನ್ನು ಸಹ ವ್ಯಕ್ತಪಡಿಸಲಾಗುತ್ತದೆ. ಆದರೆ ವಾಸ್ತವವು ಸಂಪೂರ್ಣವಾಗಿ ವಿಭಿನ್ನವಾಗಿದೆ. ಗ್ಲಾಮರ್ಗೆ ಇದಕ್ಕೂ ಯಾವುದೇ […]
ಎಲ್ಲೆಂದರಲ್ಲಿ ವಾಹನ ಪಾರ್ಕ್ ಮಾಡುವವರೇ ಎಚ್ಚರ: ಪೇ-ಆಂಡ್-ಪಾರ್ಕ್ ಯೋಜನೆ ವಿಸ್ತರಿಸಿದ ಗ್ರೇಟರ್ ಬೆಂಗಳೂರು ಪ್ರಾಧಿಕಾರ
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು ನಗರದಲ್ಲಿ ಎಲ್ಲೆಂದರಲ್ಲಿ ವಾಹನ ಪಾರ್ಕ್ ಮಾಡುವವರ ಸಂಖ್ಯೆ ಹೆಚ್ಚುತ್ತಲೇ ಇರುತ್ತದೆ. ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ರಸ್ತೆಬದಿ ಪಾರ್ಕಿಂಗ್ ವ್ಯವಸ್ಥೆ ಸುಗಮಗೊಳಿಸಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಪೇ-ಆಂಡ್-ಪಾರ್ಕ್ ಯೋಜನೆಯನ್ನು ವಿಸ್ತರಿಸಲು ಮುಂದಾಗಿದೆ. ಈಗಾಗಲೆ ಬೆಂಗಲುರು ಕೇಂದ್ರ ಭಾಗದಲ್ಲಿ 23 ರಸ್ತೆಗಳನ್ನು ಈ ಯೋಜನೆಯಡಿ ಕೇಂದ್ರ ನಗರ ನಿಗಮ ತಂದಿದೆ. ಈ ರಸ್ತೆಗಳಲ್ಲಿ ಮುಂದಿನ ಮೂರು ವರ್ಷಗಳ ಕಾಲ ಪಾರ್ಕಿಂಗ್ ಶುಲ್ಕ ಸಂಗ್ರಹಿಸಲು ಖಾಸಗಿ ನಿರ್ವಾಹಕರನ್ನು ನೇಮಿಸಲು ಟೆಂಡರ್ ಕರೆಯಲಾಗಿದೆ. ಪೇ-ಆಂಡ್-ಪೇ ಯೋಜನೆಯಡಿ […]
ಮರುಭೂಮಿಯಲ್ಲಿ ಚಿನ್ನದ ನಗರಿ, 25 ಸಾವಿರ ವೈನ್ ಬಾಟಲಿ! ಇತಿಹಾಸದ ಈ ದುಬಾರಿ ಪಾರ್ಟಿ ಬಗ್ಗೆ ಕೇಳಿದ್ರೆ ಶಾಕ್ ಆಗ್ತೀರಾ!
ಇಂದು ನಾವು ಅಂಬಾನಿ ಕುಟುಂಬದ ಸಾವಿರಾರು ಕೋಟಿ ರೂಪಾಯಿಗಳ ವಿವಾಹ ಮಹೋತ್ಸವದ ಬಗ್ಗೆ ಮಾತನಾಡುತ್ತೇವೆ. ಆದರೆ, ಸುಮಾರು 50 ವರ್ಷಗಳ ಹಿಂದೆಯೇ ಇರಾನ್ನ ದೊರೆಯೊಬ್ಬರು ನೀಡಿದ್ದ ಪಾರ್ಟಿ ಇಂದಿಗೂ ಇತಿಹಾಸದಲ್ಲಿ ‘ವಿಶ್ವದ ಅತ್ಯಂತ ದುಬಾರಿ ಪಾರ್ಟಿ’ ಎಂದು ದಾಖಲಾಗಿದೆ. ಇದು ಕೇವಲ ಒಂದು ಸಂಭ್ರಮವಾಗಿರಲಿಲ್ಲ, ಬದಲಾಗಿ ಒಂದು ಸಾಮ್ರಾಜ್ಯದ ಪತನಕ್ಕೆ ನಾಂದಿ ಹಾಡಿದ ಅತಿರಂಜಿತ ಪ್ರದರ್ಶನವಾಗಿತ್ತು. ಪಾರ್ಟಿಯ ಆಯೋಜಕ ಯಾರು? 1971 ರಲ್ಲಿ ಇರಾನ್ ದೇಶವನ್ನು ಆಳುತ್ತಿದ್ದ ಮೊಹಮ್ಮದ್ ರೇಜಾ ಶಾ (Mohammad Reza Shah) ಈ […]
ಕ್ರೀಡಾಂಗಣದಲ್ಲೇ ಕೊನೆಯುಸಿರೆಳೆದ ಭಾರತೀಯ ಕ್ರಿಕೆಟಿಗ: ಬ್ಯಾಟಿಂಗ್ ಮುಗಿಸಿ ಬರುವಾಗ ಅಪ್ಪಳಿಸಿತು ಮೃತ್ಯು!
ಭಾರತೀಯ ಕ್ರಿಕೆಟ್ ರಂಗದಲ್ಲಿ ಶೋಕದ ಅಲೆ ಎದ್ದಿದೆ. ಮಿಜೋರಾಂನ ಖ್ಯಾತ ಮಾಜಿ ರಣಜಿ ಕ್ರಿಕೆಟಿಗ ಕೆ. ಲಾಲ್ರೆಮ್ರುವಾಟಾ (K. Lalremruata) ಅವರು ಗುರುವಾರ ಸ್ಥಳೀಯ ಪಂದ್ಯವೊಂದರ ವೇಳೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಬ್ಯಾಟಿಂಗ್ ಮುಗಿಸಿ ಪೆವಿಲಿಯನ್ಗೆ ಮರಳುತ್ತಿದ್ದಾಗಲೇ ಈ ದುರಂತ ಸಂಭವಿಸಿದೆ. ಘಟನೆಯ ವಿವರ: 38 ವರ್ಷದ ಲಾಲ್ರೆಮ್ರುವಾಟಾ ಅವರು ಸ್ಥಳೀಯ ಸೆಕೆಂಡ್ ಡಿವಿಷನ್ ಟೂರ್ನಮೆಂಟ್ನಲ್ಲಿ ‘ವಂಗನುಯಿ ರೈಡರ್ಸ್ ಕ್ರಿಕೆಟ್ ಕ್ಲಬ್’ ಪರ ಆಡುತ್ತಿದ್ದರು. ಬ್ಯಾಟಿಂಗ್ ಮುಗಿಸಿ ಕ್ರೀಸ್ನಿಂದ ಹೊರಬರುತ್ತಿದ್ದಾಗ ಅವರಿಗೆ ಹಠಾತ್ ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ. ಮೈದಾನದಲ್ಲೇ […]
ಶ್ರೀಮಂತಿಕೆ ಎಂಬುದು ಕೇವಲ ಅದೃಷ್ಟದಿಂದ ಬರುವುದಿಲ್ಲ, ಬದಲಾಗಿ ಅದು ವ್ಯಕ್ತಿಯ ಶಿಸ್ತು ಮತ್ತು ಬದಲಾದ ಆಲೋಚನಾ ಲಹರಿಯ ಫಲವಾಗಿರುತ್ತದೆ ಎಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ. ಚಾಣಕ್ಯ ನೀತಿಯ ಪ್ರಕಾರ, ಒಬ್ಬ ವ್ಯಕ್ತಿ ಆರ್ಥಿಕವಾಗಿ ಸದೃಢನಾಗುವ ಮೊದಲು ಆತನಲ್ಲಿ ಐದು ಪ್ರಮುಖ ಬದಲಾವಣೆಗಳು ಕಾಣಿಸಿಕೊಳ್ಳುತ್ತವೆ. ಆ ಲಕ್ಷಣಗಳು ಇಲ್ಲಿವೆ: 1. ಆಲೋಚನಾ ಶೈಲಿಯಲ್ಲಿ ಬದಲಾವಣೆ: ಶ್ರೀಮಂತರಾಗುವ ಹಾದಿಯಲ್ಲಿರುವ ವ್ಯಕ್ತಿ ಸಣ್ಣಪುಟ್ಟ ವಿಷಯಗಳಿಗೆ ತಲೆಕೆಡಿಸಿಕೊಳ್ಳುವುದನ್ನು ಬಿಡುತ್ತಾನೆ. ಸಂಕಷ್ಟಗಳು ಎದುರಾದಾಗ ಕುಗ್ಗುವ ಬದಲು, ಅವುಗಳನ್ನು ಕಲಿಕೆಯ ಅವಕಾಶವೆಂದು ಪರಿಗಣಿಸುತ್ತಾನೆ. ನಕಾರಾತ್ಮಕ ಆಲೋಚನೆಗಳು […]
ರಾಯಚೂರು ಪೊಲೀಸರಿಂದ 2 ತಿಂಗಳ ಕಾಲ ನಿರಂತರ ಕಾರ್ಯಾಚರಾಣೆ: ರಾಜಸ್ಥಾನದಲ್ಲಿ 19 ವರ್ಷದ ಕುಖ್ಯಾತ ಸೈಬರ್ ವಂಚಕ ಅರೆಸ್ಟ್
ರಾಯಚೂರು: ರಾಯಚೂರು ಸೈಬರ್ ಪೊಲೀಸರು ಬೃಹತ್ ಕಾರ್ಯಾಚರಣೆ ನಡೆಸುವ ಮೂಲಕ ಕುಖ್ಯಾತ ಸೈಬರ್ ವಂಚಕ 19 ವರ್ಷದ ಆರೋಪಿಯೋರ್ವನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ರಾಯಚೂರು ಸೈಬರ್ ಕ್ರೈಂ ಪೊಲೀಸರು ನಿರಂತರ ಎರಡು ತಿಂಗಳ ಕಾರ್ಯಾಚಾರಣೆ ನಡೆಸಿ, ರಾಜಸ್ಥಾನದಲ್ಲಿ ಸೈಬರ್ ವಂಚಕನೊಬ್ಬನನ್ನು ಬಂಧಿಸಿದ್ದಾರೆ. ಬಂಧಿತನನ್ನು 19 ವರ್ಷದ ಶಕೀಲ್ ಎಂದು ಗುರುತಿಸಲಾಗಿದೆ. ಈತ ಪೊಲೀಸರು, ಐಎ ಎಸ್ ಅಧಿಕಾರಿಗಳು, ಐಪಿಎಸ್ ಅಧಿಕಾರಿಗಳ ಹೆಸರಲ್ಲಿ ನಕಲಿ ಫೇಸ್ ಬುಕ್ ಖಾತೆ ತೆರೆದು ವಂಚಿಸುತ್ತಿದ್ದ. ಬಂಧಿತ ಶಕೀಲ್ ರಾಜಸ್ಥಾನದ ಆಳ್ವಾರ್ ಜಿಲ್ಲೆಯ ಚಂದ್ […]
ಖಾಸಗಿ ಮಾತುಕತೆಗೆ ಅಡ್ಡಿಪಡಿಸಿದ ಮೈಕ್; ವರದಿಗಾರ್ತಿಗೆ ಕ್ಲಾಸ್ ತಗೊಂಡ ಆದಿತ್ಯ ಠಾಕ್ರೆ!
ಮುಂಬೈ ಬಿಎಂಸಿ ಚುನಾವಣೆ ಹತ್ತಿರ ಬರುತ್ತಿದ್ದಂತೆ ರಾಜಕೀಯ ವಲಯದಲ್ಲಿ ಸಂಚಲನ ಮೂಡಿದೆ. ಇದರ ನಡುವೆ ಶಿವಸೇನೆ (UBT) ಶಾಸಕ ಆದಿತ್ಯ ಠಾಕ್ರೆ ಅವರು ಖಾಸಗಿ ಸಂಭಾಷಣೆಯಲ್ಲಿದ್ದಾಗ ಮಹಿಳಾ ವರದಿಗಾರ್ತಿಯೊಬ್ಬರು ಅಡ್ಡಿಪಡಿಸಿದ ಘಟನೆ ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ನಲ್ಲಿ (BKC) ನಡೆದಿದೆ. ನಡೆದಿದ್ದೇನು? ಆದಿತ್ಯ ಠಾಕ್ರೆ ಅವರು ಹಿರಿಯ ಸಂಪಾದಕರೊಬ್ಬರ ಜೊತೆ ಖಾಸಗಿಯಾಗಿ ಮಾತನಾಡುತ್ತಿದ್ದಾಗ, ಟೆಲಿವಿಷನ್ ಚಾನೆಲ್ನ ವರದಿಗಾರ್ತಿಯೊಬ್ಬರು ಮಧ್ಯಪ್ರವೇಶಿಸಿ, “ಮರಾಠಾ ಅಸ್ಮಿತೆಯ ಹೆಸರಿನಲ್ಲಿ ಜನರ ಮೇಲೆ ಹಲ್ಲೆ ಮಾಡುವುದು ನ್ಯಾಯವೇ?” ಎಂದು ಪ್ರಶ್ನಿಸಿದ್ದಾರೆ. ಮೊದಲು ಶಾಂತವಾಗಿಯೇ ಪ್ರತಿಕ್ರಿಯಿಸಿದ […]
Winter Diet : ಚಳಿಗಾಲದಲ್ಲಿ ಈ ಪ್ರೋಟೀನ್ ಆಹಾರಗಳನ್ನು ಸೇವಿಸಿದರೆ ಶೀತದಿಂದ ರಕ್ಷಣೆ ಸಿಗುತ್ತದೆ.!
ಚಳಿಗಾಲದಲ್ಲಿ ದೇಹವು ಶೀತವನ್ನು ತಡೆದುಕೊಳ್ಳಲು ಹೆಚ್ಚಿನ ಶಕ್ತಿಯನ್ನು ಬಳಸಬೇಕಾಗುತ್ತದೆ. ಈ ಸಮಯದಲ್ಲಿ ಸರಿಯಾದ ಪೋಷಣೆಯನ್ನು ತೆಗೆದುಕೊಳ್ಳದಿದ್ದರೆ, ಆಯಾಸ, ದೌರ್ಬಲ್ಯ ಮತ್ತು ರೋಗನಿರೋಧಕ ಶಕ್ತಿ ಕಡಿಮೆಯಾಗುವಂತಹ ಸಮಸ್ಯೆಗಳು ಉಂಟಾಗಬಹುದು. ದೇಹಕ್ಕೆ ಅಗತ್ಯವಾದ ಪ್ರೋಟೀನ್ ಸೇವಿಸುವುದರಿಂದ ತ್ವರಿತ ಶಕ್ತಿ ದೊರೆಯುವುದಲ್ಲದೆ, ಸ್ನಾಯುಗಳು ಬಲವಾಗಿರುತ್ತವೆ. ಆದ್ದರಿಂದ, ಚಳಿಗಾಲದಲ್ಲಿ ಪ್ರೋಟೀನ್ ಸಮೃದ್ಧವಾಗಿರುವ ಆಹಾರವನ್ನು ಸೇವಿಸುವುದು ಅತ್ಯಗತ್ಯ. ಚಳಿಗಾಲದ ಆಹಾರ: ಚಳಿಗಾಲದಲ್ಲಿ ಸೇವಿಸಬೇಕಾದ ಆಹಾರಗಳೆಂದರೆ ವಾಲ್ನಟ್ಸ್, ಬಾದಾಮಿ, ಪಿಸ್ತಾ, ಹಸಿರು ತರಕಾರಿಗಳು ಮತ್ತು ಬೀಜಗಳು, ಇವು ದೇಹವನ್ನು ಬೆಚ್ಚಗಿಡಲು ಸಹಾಯ ಮಾಡುತ್ತವೆ. ಅಲ್ಲದೆ, ಮೊಟ್ಟೆಗಳು […]
ಪಾಕ್ ಮಹಿಳೆ ಈಗ ಯುಪಿ ಶಾಲಾ ಶಿಕ್ಷಕಿ! ನಕಲಿ ದಾಖಲೆ ಸೃಷ್ಟಿಸಿ 30 ವರ್ಷ ಸರ್ಕಾರಕ್ಕೆ ಮೋಸ ಮಾಡಿದ್ದು ಹೇಗೆ?
ಉತ್ತರ ಪ್ರದೇಶದ ರಾಂಪುರ ಜಿಲ್ಲೆಯಲ್ಲಿ ಅಚ್ಚರಿಯ ಪ್ರಕರಣವೊಂದು ಬೆಳಕಿಗೆ ಬಂದಿದೆ. ಪಾಕಿಸ್ತಾನದ ಪೌರತ್ವ ಹೊಂದಿದ್ದ ಮಹಿಳೆಯೊಬ್ಬರು ನಕಲಿ ದಾಖಲೆಗಳನ್ನು ಸೃಷ್ಟಿಸಿ, ಸುಮಾರು ಮೂರು ದಶಕಗಳ ಕಾಲ ಭಾರತದ ಸರ್ಕಾರಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸಿರುವುದು ಈಗ ಬಹಿರಂಗವಾಗಿದೆ. ಯಾರು ಈ ಮಹಿಳೆ? ಇತಿಹಾಸವೇನು? ಪೋಲಿಸ್ ತನಿಖೆಯ ಪ್ರಕಾರ, ಮಹಿಳೆಯ ಹೆಸರು ಮಾಹಿರಾ ಅಖ್ತರ್ ಅಲಿಯಾಸ್ ಫರ್ಜಾನಾ. ಈಕೆ 1979ರಲ್ಲಿ ಪಾಕಿಸ್ತಾನಿ ಪ್ರಜೆಯನ್ನು ವಿವಾಹವಾಗಿ ಆ ದೇಶದ ಪೌರತ್ವ ಪಡೆದಿದ್ದರು. ನಂತರ ಪತಿಯಿಂದ ವಿಚ್ಛೇದನ ಪಡೆದ ಮಹಿಳೆ, ಪಾಕಿಸ್ತಾನಿ ಪಾಸ್ಪೋರ್ಟ್ ಬಳಸಿಕೊಂಡೇ […]
ತಾಯಿಯ ಪ್ರೀತಿಗೆ ಸಾವು-ನೋವುಗಳ ಹಂಗಿಲ್ಲ ಎಂಬುದನ್ನು ಜಮ್ಮುವಿನ ಈ ಘಟನೆ ಮತ್ತೊಮ್ಮೆ ಜಗತ್ತಿಗೆ ಸಾರಿದೆ. ಜಮ್ಮುವಿನ ಆರ್.ಎಸ್. ಪುರ (Ranbir Singh Pura) ಪ್ರದೇಶದ ನಿವಾಸಿ ಜಸ್ವಂತ್ ಕೌರ್ ಎಂಬುವವರು, ತಮ್ಮ ಹುತಾತ್ಮ ಮಗನ ಪ್ರತಿಮೆಗೆ ಚಳಿಯಿಂದ ರಕ್ಷಣೆ ನೀಡಲು ಕಂಬಳಿ ಹೊದಿಸುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕೋಟ್ಯಂತರ ಕಣ್ಣುಗಳನ್ನು ತೇವಗೊಳಿಸಿದೆ. ಘಟನೆಯ ವಿವರ: ಬಿಎಸ್ಎಫ್ (BSF) ಕಾನ್ಸ್ಟೆಬಲ್ ಆಗಿದ್ದ ಗುರ್ನಾಮ್ ಸಿಂಗ್, 2016ರಲ್ಲಿ ಜಮ್ಮುವಿನ ಅಂತರಾಷ್ಟ್ರೀಯ ಗಡಿಯಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ […]

18 C