SENSEX
NIFTY
GOLD
USD/INR

Weather

17    C

ಡಿಜಿಟಲ್ ಸುದ್ದಿ ಮೂಲಗಳು

... ...View News by News Source

BBK 12 Finale: ಟ್ರೋಫಿ ಎತ್ತಿಹಿಡಿದ ಗಿಲ್ಲಿ ನಟ; ರಕ್ಷಿತಾ ರನ್ನರ್ ಅಪ್, ಅಶ್ವಿನಿಗೆ ಮೂರನೇ ಸ್ಥಾನ

ಕಳೆದ 112 ದಿನಗಳ ಕಾಲ ಕಿರುತೆರೆ ವೀಕ್ಷಕರಿಗೆ ನಿರಂತರ ಮನರಂಜನೆ ನೀಡುತ್ತಾ ಚರ್ಚೆಯ ಒಂದು ವಿಷಯವಾಗಿ ಮಾರ್ಪಟ್ಟಿದ್ದ ಬಿಗ್‌ಬಾಸ್ ಕನ್ನಡ ಸೀಸನ್ 12ಕ್ಕೆ ಇಂದು ( ಜನವರಿ 18 ) ತೆರೆ ಬಿದ್ದಿದೆ. ಫಿನಾಲೆಗೆ ಪ್ರವೇಶಿಸಿದ್ದ ಆರು ಸ್ಪರ್ಧಿಗಳ ಪೈಕಿ ಮೊದಲಿಗೆ ಧನುಷ್ ಎಲಿಮಿನೇಟ್ ಆಗಿ ಆರನೇ ಸ್ಥಾನ ಪಡೆದುಕೊಂಡರೆ, ಮ್ಯೂಟೆಂಟ್ ರಘು ಐದನೇ ಸ್ಥಾನ, ಕಾವ್ಯ ನಾಲ್ಕನೇ ಸ್ಥಾನ ಪಡೆದುಕೊಂಡರು. ಅಂತಿಮವಾಗಿ ಉಳಿದ ಮೂವರು ಸ್ಪರ್ಧಿಗಳನ್ನು ವೇದಿಕೆಗೆ ಕರೆತಂದು ಗಿಲ್ಲಿ ಹಾಗೂ ರಕ್ಷಿತಾ ಟಾಪ್ 2 […]

ಕನ್ನಡ ದುನಿಯಾ 18 Jan 2026 11:48 pm

ಶಬರಿಮಲೆ ಯಾತ್ರೆ ಬಸ್‌ನಲ್ಲೂ ಗಿಲ್ಲಿ ಹವಾ: ಗಿಲ್ಲಿ ಗೆಲ್ಲಲೇಬೇಕು ಎಂದ ಮಾಲಾಧಾರಿಗಳು; ವಿಡಿಯೊ

ಇಂದು ( ಜನವರಿ 18 ) ಬಿಗ್‌ಬಾಸ್ ಕನ್ನಡ ಸೀಸನ್ 12ರ ಗ್ರ್ಯಾಂಡ್ ಫಿನಾಲೆ ನಡೆಯುತ್ತಿದೆ. 112 ದಿನಗಳ ಸುದೀರ್ಘ ದಿನಗಳನ್ನು ಕಳೆದು ಫಿನಾಲೆಗೆ ಅಶ್ವಿನಿ ಗೌಡ, ಗಿಲ್ಲಿ ನಟ, ರಕ್ಷಿತಾ ಶೆಟ್ಟಿ, ಮ್ಯೂಟೆಂಟ್ ರಘು, ಕಾವ್ಯ ಶೈವ ಹಾಗೂ ಧನುಷ್ ಪ್ರವೇಶ ಪಡೆದುಕೊಂಡರು. ಈ ಪೈಕಿ ಧನುಷ್ ಆರನೇ ಸ್ಥಾನ ಪಡೆದುಕೊಂಡರೆ, ಮ್ಯೂಟೆಂಟ್ ರಘು ಐದನೇ ಸ್ಥಾನ ಪಡೆದರು. ಕಾವ್ಯ ಶೈವ ನಾಲ್ಕನೇ ಸ್ಥಾನ ಪಡೆದು ಮೂರನೇ ರನ್ನರ್ ಅಪ್ ಆದರು. ಟಾಪ್ 3ಗೆ ರಕ್ಷಿತಾ […]

ಕನ್ನಡ ದುನಿಯಾ 18 Jan 2026 11:07 pm

ಕೊಹ್ಲಿ ಶತಕ ವ್ಯರ್ಥ, ತವರಿನಲ್ಲೇ ಭಾರತಕ್ಕೆ ಮುಖಭಂಗ: ಚೊಚ್ಚಲ ಏಕದಿನ ಸರಣಿ ಗೆದ್ದು ಬೀಗಿದ ನ್ಯೂಜಿಲೆಂಡ್

ಇಂಧೋರ್‌ನ ಹೊಲ್ಕರ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವೆ ಮೂರನೇ ಏಕದಿನ ಪಂದ್ಯಗಳ ಸರಣಿಯ ಅಂತಿಮ ಪಂದ್ಯದಲ್ಲಿ ನ್ಯೂಜಿಲೆಂಡ್ 41 ರನ್‌ಗಳ ಗೆಲುವನ್ನು ಸಾಧಿಸುವ ಮೂಲಕ ಸರಣಿಯನ್ನು 2 – 1 ಅಂತರದಿಂದ ವಶಪಡಿಸಿಕೊಂಡಿದೆ. ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 337 ರನ್ ಕಲೆಹಾಕಿ ಭಾರತಕ್ಕೆ 338 ರನ್‌ಗಳ ಸವಾಲಿನ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲವಾದ ಭಾರತ ಗೆಲ್ಲುವ […]

ಕನ್ನಡ ದುನಿಯಾ 18 Jan 2026 9:56 pm

ನರೇಗಾ ಯೋಜನೆ ಪುನಃ ಸ್ಥಾಪನೆಯಾಗುವವರೆಗೆ ಹೋರಾಟ: ಎಲ್ಲರೂ ಬೆಂಬಲಿಸಲು ಸಿಎಂ ಸಿದ್ಧರಾಮಯ್ಯ ಮನವಿ

ಮೈಸೂರು: ವಿಬಿ ಜಿ ರಾಮ್ ಜಿ ಕಾಯ್ದೆ ರದ್ದಾಗಿ ಮನರೇಗಾ ಪುನಃ ಸ್ಥಾಪನೆಯಾಗುವವರೆಗೆ ನಮ್ಮ ಹೋರಾಟಕ್ಕೆ ಎಲ್ಲರೂ ಬೆಂಬಲಿಸಬೇಕು ಎಂದು ಸಿಎಂ ಸಿದ್ಧರಾಮಯ್ಯ ಹೇಳಿದ್ದಾರೆ. ಮೈಸೂರು ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ವತಿಯಿಂದ ಟಿ.ನರಸೀಪುರ ತಾಲ್ಲೂಕಿನ ಕುಪ್ಯಾ ಗ್ರಾಮದಲ್ಲಿ ಆಯೋಜಿಸಿದ್ದ, “ವರುಣಾ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ವಿವಿಧ ಇಲಾಖೆಗಳ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆಯನ್ನು ಅವರು ಮಾತನಾಡಿದರು. 2005 ರಲ್ಲಿ ಮನಮೋಹನ್ ಸಿಂಗ್ ಅವರು ಪ್ರಧಾನಿಗಳಾಗಿದ್ದಾಗ ಮನರೇಗಾ ಕಾನೂನು ಜಾರಿ ಮಾಡಿದರು. ಆ ಮೂಲಕ ಕೆಲಸದ […]

ಕನ್ನಡ ದುನಿಯಾ 18 Jan 2026 8:16 pm

ಭರ್ಜರಿ ಶತಕ ಸಿಡಿಸಿ ಔಟಾದ ಡ್ಯಾರಿಲ್ ಮಿಚಲ್ ರನ್ನು ಮೈದಾನದಿಂದ ಹೊರತಳ್ಳಿದ ವಿರಾಟ್ ಕೊಹ್ಲಿ…! ವಿಡಿಯೋ ವೈರಲ್

ಇಂದೋರ್‌ ನ ಹೋಲ್ಕರ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯದ ಸಂದರ್ಭದಲ್ಲಿ ಶತಕ ಸಿಡಿಸಿದ ಡ್ಯಾರಿಲ್ ಮಿಚೆಲ್ ಅವರನ್ನು ವಿರಾಟ್ ಕೊಹ್ಲಿ ಮೈದಾನದಿಂದ ಹೊರಗೆ ತಳ್ಳಿದರು. ಅವರ ತಮಾಷೆಯ ಕ್ಷಣದ ವಿಡಿಯೋ ವೈರಲ್ ಆಗಿದೆ. ಭಾರತದ ಹಿರಿಯ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ನ್ಯೂಜಿಲೆಂಡ್‌ ನ ಡ್ಯಾರಿಲ್ ಮಿಚೆಲ್ ಅವರೊಂದಿಗೆ ತಮಾಷೆಯ ವಾಗ್ವಾದದಲ್ಲಿ ತೊಡಗಿದ್ದರು. ಭಾರತದ ವಿರುದ್ಧದ ಏಕದಿನ ಮಾದರಿಯಲ್ಲಿ ಮಿಚೆಲ್ ತಮ್ಮ ಅದ್ಭುತ ಫಾರ್ಮ್ ಅನ್ನು ಮುಂದುವರೆಸಿದರು ಮತ್ತು ಸ್ಮರಣೀಯ ಶತಕವನ್ನು […]

ಕನ್ನಡ ದುನಿಯಾ 18 Jan 2026 7:52 pm

BBK 12 Finale: ಫಿನಾಲೆಯಲ್ಲಿ ಮೊದಲ ಎಲಿಮಿನೇ‍ಷನ್; ಇಷ್ಟು ಬೇಗ ಹೋಗ್ತಾರೆ ಎಂದುಕೊಂಡಿರಲಿಲ್ಲ ಎಂದ ಮನೆ ಮಂದಿ

ಕನ್ನಡ ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ಒಂದಾದ ಬಿಗ್‌ಬಾಸ್ ಕನ್ನಡ ಸೀಸನ್ 12ರ ಫಿನಾಲೆ ಇಂದು ( ಜನವರಿ 18 ) ನಡೆಯುತ್ತಿದೆ. 112 ದಿನಗಳ ಪಯಣ ಇಂದಿಗೆ ಮುಗಿದಿದ್ದು, ಫಿನಾಲೆಗೆ ಆರು ಸ್ಪರ್ಧಿಗಳು ಪ್ರವೇಶ ಪಡೆದುಕೊಂಡಿದ್ದಾರೆ. ಅಶ್ವಿನಿ ಗೌಡ, ಗಿಲ್ಲಿ ನಟ, ಮ್ಯೂಟಂರ್ ರಘು, ರಕ್ಷಿತಾ ಶೆಟ್ಟಿ, ಕಾವ್ಯ ಶೈವ ಹಾಗೂ ಧನುಷ್ ಫಿನಾಲೆಯಲ್ಲಿದ್ದಾರೆ. ಇನ್ನು ಈ ಪೈಕಿ ಕಡಿಮೆ ಮತಗಳನ್ನು ಪಡೆದುಕೊಂಡ ಧನುಷ್ ಫಿನಾಲೆಯಿಂದ ಮೊದಲ ಎಲಿಮಿನೇಷನ್‌ನಲ್ಲಿ ಹೊರಬಿದ್ದಿದ್ದಾರೆ. ಹೀಗೆ ಮೊದಲ ಎಲಿಮಿನೇ‍ಷನ್ ಮುಕ್ತಾಯವಾಗುತ್ತಿದ್ದಂತೆ ಉಳಿದ […]

ಕನ್ನಡ ದುನಿಯಾ 18 Jan 2026 7:42 pm

ಮ್ಯಾಟ್ರಿಮೋನಿಯಲ್ಲಿ ಪರಿಚಯ: ಮದುವೆಯಾಗಿ ಪತ್ನಿಯಿದ್ದರೂ ಮತ್ತೊಂದು ಯುವತಿಗೆ ಗಾಳ: ವಿವಾಹಕ್ಕೆ ಮಾತುಕತೆ ನಡೆಸಿ 1.75 ಕೋಟಿ ವಂಚಿಸಿ ಪರಾರಿ

ಬೆಂಗಳೂರು: ಮ್ಯಾಟ್ರಿಮೋನಿ ವೆಬ್ ಸೈಟ್ ಮೂಲಕ ಪರಿಚಿಯನಾದ ವ್ಯಕ್ತಿಯೋರ್ವ ಮದುವೆಯಾಗುವುದಾಗಿ ನಂಬಿಸಿ ಯುವತಿ ಹಾಗೂ ಆಕೆಯ ಕುಟುಂಬಕ್ಕೆ ಬರೋಬ್ಬರಿ 1.75 ಕೋಟಿ ರೂಪಾಯಿ ವಂಚಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ವಿಜಯ್ ರಾಜ್ ಗೌಡ ಎಂಬಾತ 2024ರಲ್ಲಿ ಸಾಫ್ಟ್ ವೇರ್ ಉದ್ಯೋಗಿಯಾಗಿದ್ದ ಯುವತಿಗೆ ಮ್ಯಾಟ್ರಿಮೋನಿಯಲ್ಲಿ ಪರಿಚಯವಾಗಿದ್ದಾನೆ. ತಾನು ದೊಡ್ಡ ಉದ್ಯಮಿ 715 ಕೋಟಿ ಆಸ್ತಿಯಿದೆ ಎಂದು ಹೇಳಿಕೊಂಡು ಬಿಲ್ಡಪ್ ಕೊಟ್ಟಿದ್ದ. ಅಲ್ಲದೇ ತನ್ನ ತಂದೆ ನಿವೃತ್ತ ತಹಶಿಲ್ದಾರ್ ಪರಿಚಯಿಸಿದ್ದ. ಯುವತಿಯನ್ನು ಮದುವೆಯಾಗುವುದಾಗಿ ಹೇಳಿ ಕೆಂಗೇರಿ ಬಳಿ ಯುವತಿ ಹಾಗೂ […]

ಕನ್ನಡ ದುನಿಯಾ 18 Jan 2026 6:36 pm

ಡ್ಯಾರಿಲ್ ಮಿಚೆಲ್ ಐತಿಹಾಸಿಕ ದಾಖಲೆ: ಅತಿ ಹೆಚ್ಚು ರನ್‌ಗಳ ವಿಶ್ವ ದಾಖಲೆ

ನ್ಯೂಜಿಲೆಂಡ್ ತಂಡದ ಭರವಸೆಯ ಬ್ಯಾಟ್ಸ್‌ಮನ್ ಡ್ಯಾರಿಲ್ ಮಿಚೆಲ್ ಮತ್ತೆ ಕ್ರಿಕೆಟ್ ಲೋಕದ ಗಮನಸೆಳೆದಿದ್ದಾರೆ. ತನ್ನ ಶಾಂತ ಮನೋಭಾವ, ಕಷ್ಟಪಟ್ಟು ಮಾಡಿದ ಅಭ್ಯಾಸ ಮತ್ತು ದೃಢ ನಿಲುವಿನ ಬ್ಯಾಟಿಂಗ್ ಮೂಲಕ ಅವರು ಮಹತ್ವದ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿ ಹೊಸ ವಿಶ್ವದಾಖಲೆ ಬರೆದಿದ್ದಾರೆ. ಈ ಸಾಧನೆ ಕೇವಲ ಅಂಕಿಗಳ ಹೊಳಪಲ್ಲ; ಅದು ಮಿಚೆಲ್‌ನ ಮನೋಬಲದ ನಿಜವಾದ ಪ್ರತಿಬಿಂಬ. ತಂಡ ಕಷ್ಟದ ಸ್ಥಿತಿಯಲ್ಲಿ ಇದ್ದಾಗ ಕ್ರೀಸ್‌ಗೆ ಬಂದು ಇನ್ನಿಂಗ್ಸ್‌ ಅನ್ನು ಹಿಡಿದುಕೊಳ್ಳುವ ಅವರ ಶಕ್ತಿ ಎಲ್ಲರನ್ನೂ ಮೆಚ್ಚಿಸಿದೆ. […]

ಕನ್ನಡ ದುನಿಯಾ 18 Jan 2026 6:34 pm

BREAKING: ಜಾರ್ಖಂಡ್ ನಲ್ಲಿ ಮದುವೆ ದಿಬ್ಬಣದ ಬಸ್ ಪಲ್ಟಿ: 5 ಜನ ಸಾವು, 25 ಮಂದಿಗೆ ಗಾಯ

ರಾಂಚಿ: ಜಾರ್ಖಂಡ್‌ನ ಲತೇಹಾರ್ ಜಿಲ್ಲೆಯಲ್ಲಿ ಮದುವೆ ದಿಬ್ಬಣ ಬಸ್ ಉರುಳಿಬಿದ್ದ ಪರಿಣಾಮ ಕನಿಷ್ಠ ಐದು ಜನರು ಸಾವನ್ನಪ್ಪಿದ್ದು, 25 ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ. ಛತ್ತೀಸ್‌ಗಢದ ಬಲರಾಂಪುರ ಜಿಲ್ಲೆಯಿಂದ ಮಹುವಾದರ್‌ಗೆ ಹೋಗುತ್ತಿದ್ದ ಬಸ್ ಮಹುವಾದರ್‌ ಪೊಲೀಸ್ ಠಾಣೆ ವ್ಯಾಪ್ತಿಯ ಓರ್ಸಾ ಕಣಿವೆಯಲ್ಲಿ ಅಪಘಾತಕ್ಕೀಡಾಗಿದೆ. ಅಪಘಾತದಲ್ಲಿ ಐದು ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಜಾರ್ಖಂಡ್ ಪೊಲೀಸರು ತಿಳಿಸಿದ್ದಾರೆ, ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ ಮತ್ತು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತಕ್ಕೆ ಕಾರಣವೇನು ಎಂಬುದು ಸ್ಪಷ್ಟವಾಗಿಲ್ಲ ಮತ್ತು ತನಿಖೆಯನ್ನು […]

ಕನ್ನಡ ದುನಿಯಾ 18 Jan 2026 6:17 pm

BREAKING: ಭದ್ರಾ ನಾಲೆಯಲ್ಲಿ ಬಟ್ಟೆ ತೊಳೆಯಲು ಹೋಗಿ ದುರಂತ: ಒಂದೇ ಕುಟುಂಬದ ನಾಲ್ವರು ನೀರುಪಾಲು

ಶಿವಮೊಗ್ಗ: ಭದ್ರಾ ನಾಲೆಯಲ್ಲಿ ಬಟ್ಟೆ ತೊಳೆಯಲು ಹೋಗಿ ಒಂದೇ ಕುಟುಂಬದ ನಾಲ್ವರು ನೀರುಪಾಲಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಅರಬಿಳಚಿ ಕ್ಯಾಂಪ್ ಬಳಿ ನಡೆದಿದೆ. ಬಟ್ಟೆ ತೊಳೆಯಲೆಂದು ಭದ್ರಾ ನಾಲೆಗೆ ಇಳಿದಿದ್ದಾಗ, ಒಬ್ಬರು ಕಾಲು ಜಾರಿ ನಾಲೆ ನೀರಿಗೆ ಬಿದ್ದಿದ್ದಾರೆ. ಅವರನ್ನು ರಕ್ಷಿಸಲು ಇನ್ನೊಬ್ಬರು ಹೋಗಿದ್ದಾರೆ. ಹೀಗೆ ಒಬ್ಬರ ಹಿಂದೆ ಒಬ್ಬರಂತೆ ನಾಲ್ವರೂ ನಾಲೆಯ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ನೀಲಾಬಾಯಿ, ಮಗ ರವಿ ಕುಮಾರ್, ಮಗಳು ಶ್ವೇತಾ ಹಾಗೂ ಅಳಿಯ ಪರಶುರಾಮ ಮೃತ ದುರ್ದೈವಿಗಳು. ಘಟನಾ ಸ್ಥಳಕ್ಕೆ ಪೊಲೀಸರು, […]

ಕನ್ನಡ ದುನಿಯಾ 18 Jan 2026 6:07 pm

ಇಂದೋರ್‌ನಲ್ಲಿ ಕಣ್ಣೀರಿಡುವ ಘಟನೆ: ಹಬ್ಬದಂತಿದ್ದ ಮನೆಯಲ್ಲಿ ಸೂತಕದ ಛಾಯೆ; ಹುಟ್ಟುಹಬ್ಬದಂದೇ ಪ್ರಾಣ ಕಳೆದುಕೊಂಡ ಮಗ

ಮಧ್ಯಪ್ರದೇಶದ ಇಂದೋರ್‌ನಲ್ಲಿ ಅತ್ಯಂತ ವಿಷಾದನೀಯ ಘಟನೆಯೊಂದು ನಡೆದಿದೆ. 20 ವರ್ಷದ ಯುವಕನೊಬ್ಬ ತನ್ನ ಹುಟ್ಟಿದ ಹಬ್ಬದ ಸಂಭ್ರಮದ ಬೆನ್ನಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದು, ಕುಟುಂಬದ ಸಂತೋಷ ಕ್ಷಣಾರ್ಧದಲ್ಲಿ ಶೋಕವಾಗಿ ಬದಲಾಗಿದೆ. ಘಟನೆಯ ವಿವರ: ಇಂದೋರ್‌ನ ಮಹಾವರ್ ನಗರದ ನಿವಾಸಿ ವಂಶ್ ಪರೋಚೆ (20) ಎಂಬ ಯುವಕನೇ ಮೃತಪಟ್ಟ ದುರ್ದೈವಿ. ಶುಕ್ರವಾರ ವಂಶ್‌ನ ಜನ್ಮದಿನವಿದ್ದ ಕಾರಣ, ಕುಟುಂಬ ಸದಸ್ಯರೆಲ್ಲರೂ ಸೇರಿ ಕೇಕ್ ಕತ್ತರಿಸಿ ಅತ್ಯಂತ ಸಡಗರದಿಂದ ಸಂಭ್ರಮಿಸಿದ್ದರು. ಮನೆಯಲ್ಲಿ ಹಬ್ಬದ ವಾತಾವರಣವಿತ್ತು. ಆದರೆ, ಸಂಭ್ರಮಾಚರಣೆ ಮುಗಿದ ಕೆಲವೇ ಹೊತ್ತಿನಲ್ಲಿ ವಂಶ್ […]

ಕನ್ನಡ ದುನಿಯಾ 18 Jan 2026 5:56 pm

ಚರ್ಮದ ಮೇಲಿನ ಈ ಬದಲಾವಣೆಗಳು ಥೈರಾಯ್ಡ್ ಸಮಸ್ಯೆಯ ಎಚ್ಚರಿಕೆ ಸಂಕೇತಗಳು: ಮರೆತೂ ನಿರ್ಲಕ್ಷಿಸಬೇಡಿ

ಹೈಪೋಥೈರಾಯ್ಡಿಸಮ್ (Hypothyroidism) ಎನ್ನುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗುತ್ತಿರುವ ಹಾರ್ಮೋನ್ ಸಮಸ್ಯೆ. ದೇಹದಲ್ಲಿ ಥೈರಾಯ್ಡ್ ಹಾರ್ಮೋನ್ ಉತ್ಪಾದನೆ ಕಡಿಮೆಯಾದಾಗ ಈ ಸಮಸ್ಯೆ ಉಂಟಾಗುತ್ತದೆ. ಸಾಮಾನ್ಯವಾಗಿ ತೂಕ ಹೆಚ್ಚಾಗುವುದು ಅಥವಾ ಸುಸ್ತು ಈ ಕಾಯಿಲೆಯ ಲಕ್ಷಣಗಳೆಂದು ನಮಗೆ ತಿಳಿದಿದೆ. ಆದರೆ, ನಮ್ಮ ಚರ್ಮದ ಮೇಲೆ ಕಂಡುಬರುವ ಕೆಲವು ಬದಲಾವಣೆಗಳು ಈ ಕಾಯಿಲೆಯ ಮೊದಲ ಮುನ್ಸೂಚನೆಗಳಾಗಿರಬಹುದು. ಚರ್ಮದ ಮೇಲೆ ಕಂಡುಬರುವ ಈ ಕೆಳಗಿನ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ: ಹೈಪೋಥೈರಾಯ್ಡಿಸಮ್‌ನ ೭ ಪ್ರಮುಖ ಚರ್ಮದ ಲಕ್ಷಣಗಳು: ೧. ಅತಿಯಾದ ಒಣ ಚರ್ಮ ಮತ್ತು ಪಾಚುವಿಕೆ […]

ಕನ್ನಡ ದುನಿಯಾ 18 Jan 2026 5:47 pm

ಭಾರತ vs ನ್ಯೂಜಿಲೆಂಡ್ ಅಂತಿಮ ಏಕದಿನ ಪಂದ್ಯ: ಇಬ್ಬರ ಶತಕ, ಟೀಮ್ ಇಂಡಿಯಾಗೆ ಸವಾಲಿನ ಗುರಿ ನೀಡಿದ ಕಿವೀಸ್

ಇಂಧೋರ್‌ನ ಹೊಲ್ಕರ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವೆ ಮೂರನೇ ಏಕದಿನ ಪಂದ್ಯಗಳ ಸರಣಿಯ ಅಂತಿಮ ಪಂದ್ಯ ನಡೆಯುತ್ತಿದೆ. ಮೊದಲ ಪಂದ್ಯದಲ್ಲಿ ಭಾರತ ಹಾಗೂ ಎರಡನೇ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡಗಳು ಗೆಲುವು ಸಾಧಿಸಿರುವ ಕಾರಣ ಈ ಪಂದ್ಯ ಫೈನಲ್ ಪಂದ್ಯವಾಗಿ ಮಾರ್ಪಟ್ಟಿದ್ದು, ಗೆದ್ದವರು ಚಾಂಪಿಯನ್ ಆಗಿ ಹೊರಹೊಮ್ಮಲಿದ್ದಾರೆ. ಈ ಮಹತ್ವದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಫೀಲ್ಡಿಂಗ್ ಆರಿಸಿಕೊಂಡು ನ್ಯೂಜಿಲೆಂಡ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ […]

ಕನ್ನಡ ದುನಿಯಾ 18 Jan 2026 5:44 pm

ಪಾಡ್‌ಕಾಸ್ಟ್‌ನಲ್ಲಿ ಸಚಿನ್‌ಗೆ ಪಲ್ಟಿ ಹೊಡೆಸಿದ ಮಾರ್ಕ್ ವಾ ಲೈವ್ ಶೋನಲ್ಲೇ ದಿಗ್ಗಜನಿಗೆ ಫೋನ್ ಮಾಡಿದ ಡೇವಿಡ್ ಲಾಯ್ಡ್‌

ಕ್ರಿಕೆಟ್ ಲೋಕದ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಹೆಸರಿಲ್ಲದೆ ಸಾರ್ವಕಾಲಿಕ ಶ್ರೇಷ್ಠ ಇಲೆವೆನ್ (All-time XI) ಪಟ್ಟಿ ಪೂರ್ಣಗೊಳ್ಳುವುದು ಅಸಾಧ್ಯ. ಆದರೆ, ಇತ್ತೀಚೆಗೆ ನಡೆದ ಪಾಡ್‌ಕಾಸ್ಟ್ ಒಂದರಲ್ಲಿ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಮಾರ್ಕ್ ವಾ ಸಚಿನ್ ಅವರನ್ನು ತಮ್ಮ ಪಟ್ಟಿಯಿಂದ ಕೈಬಿಟ್ಟಾಗ ನಡೆದ ಘಟನೆ ಈಗ ಭಾರಿ ವೈರಲ್ ಆಗಿದ್ದು, ನಗುವಿನ ಅಲೆ ಎಬ್ಬಿಸಿದೆ. ನಡೆದಿದ್ದೇನು? ‘ಸ್ಟಿಕ್ ಟು ಕ್ರಿಕೆಟ್’ (Stick to Cricket) ಪಾಡ್‌ಕಾಸ್ಟ್‌ನ ಸಂಚಿಕೆಯೊಂದರಲ್ಲಿ ಮಾರ್ಕ್ ವಾ ತಮ್ಮ ಸಾರ್ವಕಾಲಿಕ ಶ್ರೇಷ್ಠ ತಂಡವನ್ನು ಆಯ್ಕೆ […]

ಕನ್ನಡ ದುನಿಯಾ 18 Jan 2026 5:37 pm

ಚೀನಾದ ಹಳ್ಳಿಯಲ್ಲಿ ಭಾರತೀಯ ಯುವಕನಿಗೆ ಸ್ಟಾರ್ ಪಟ್ಟಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ ಯುವಕನ ಜೊತೆ ಫೋಟೋಗೆ ಮುಗಿಬಿದ್ದ ಜನ

ಚೀನಾದ ಕುಗ್ರಾಮವೊಂದಕ್ಕೆ ಭೇಟಿ ನೀಡಿದ್ದ ಭಾರತೀಯ ಯುವಕನೊಬ್ಬ ಅಲ್ಲಿನ ಸ್ಥಳೀಯರ ಪಾಲಿಗೆ ಅನಿರೀಕ್ಷಿತವಾಗಿ ‘ಸೆಲೆಬ್ರಿಟಿ’ಯಾದ ಅಪರೂಪದ ಘಟನೆ ನಡೆದಿದೆ. ಸಾಂಪ್ರದಾಯಿಕ ಹಬ್ಬವೊಂದರಲ್ಲಿ ಭಾಗವಹಿಸಿದ್ದ ಈ ಯುವಕನ ಜೊತೆ ಫೋಟೋ ಕ್ಲಿಕ್ಕಿಸಿಕೊಳ್ಳಲು ಸ್ಥಳೀಯರು ಮುಗಿಬಿದ್ದಿದ್ದು, ಕೇವಲ ಒಂದು ದಿನದಲ್ಲಿ ಆತನೊಂದಿಗೆ ಬರೋಬ್ಬರಿ 1,000ಕ್ಕೂ ಹೆಚ್ಚು ಫೋಟೋಗಳನ್ನು ತೆಗೆಸಿಕೊಂಡಿದ್ದಾರೆ! ಘಟನೆಯ ವಿವರ: ಅದ್ವಿಕ್ ಎಂಬ ಭಾರತೀಯ ಯುವಕ ಚೀನಾದ ಯುನ್ನಾನ್ (Yunnan) ಪ್ರಾಂತ್ಯದ ದೂರದ ಹಳ್ಳಿಯೊಂದಕ್ಕೆ ಭೇಟಿ ನೀಡಿದ್ದನು. ಅಲ್ಲಿ ಬುಡಕಟ್ಟು ಸಮುದಾಯವೊಂದು ಆಯೋಜಿಸಿದ್ದ ಸಾಂಪ್ರದಾಯಿಕ ಹಬ್ಬದಲ್ಲಿ ಭಾಗವಹಿಸಲು ಅವನು […]

ಕನ್ನಡ ದುನಿಯಾ 18 Jan 2026 5:32 pm

ಶಾಲಾ, ಕಾಲೇಜುಗಳಲ್ಲಿ ಕನ್ನಡ ಸಾಹಿತ್ಯ ಅಧ್ಯಯನ ಶಿಬಿರ: ಶಾಸಕ ಕೆ.ಎಸ್. ಬಸವಂತಪ್ಪ

ದಾವಣಗೆರೆ: ನಗರ ಪ್ರದೇಶಗಳಲ್ಲಿ ವಿಭಿನ್ನ ಭಾಷೆಗಳನ್ನಾಡುತ್ತಾರೆ, ಕನ್ನಡ ಭಾಷೆಯನ್ನು ಮಾತ್ರ ಮಾತನಾಡುವ ಗ್ರಾಮಾಂತರ ಪ್ರದೇಶಗಳಲ್ಲಿ ಕನ್ನಡ ಭಾಷೆಯ ಉಳಿವು ಸಾಧ್ಯ, ಶಾಲಾ, ಕಾಲೇಜುಗಳಲ್ಲಿ ಕನ್ನಡ ಸಾಹಿತ್ಯದ ನಿರಂತರ ಶಿಬಿರಗಳನ್ನು ಏರ್ಪಡಿಸಿ ಮಕ್ಕಳಲ್ಲಿ ಸಾಹಿತ್ಯದ ಅಭಿರುಚಿ ಮೂಡಿಸುವುದು ಅವಶ್ಯಕವಾಗಿದೆ ಎಂದು ಮಾಯಾಕೊಂಡ ವಿಧಾನಸಭಾ ಸದಸ್ಯರಾದ ಕೆ.ಎಸ್. ಬಸವಂತಪ್ಪ ತಿಳಿಸಿದರು. ಅವರು ಭಾನುವಾರ ದಾವಣಗೆರೆ ತಾಲ್ಲೂಕು ಸಾಹಿತ್ಯ ಪರಿಷತ್ತು ಕುರ್ಕಿ-ಹಿರೇತೊಗಲೇರಿ ಗ್ರಾಮದ ಕಮಲಮ್ಮ ಗುರುಶಾಂತಪ್ಪ ಸಮುದಾಯ ಭವನದ ಬಳಿ ಎರ್ಪಡಿಸಿದ್ದ ದಾವಣಗೆರೆ ತಾಲ್ಲೂಕು 12 ನೇ ಕನ್ನಡ ಸಾಹಿತ್ಯ ಸಮ್ಮೇಳನ-2026 […]

ಕನ್ನಡ ದುನಿಯಾ 18 Jan 2026 5:30 pm

SHOCKING: ಸಿಡ್ನಿ ಹಾರ್ಬರ್ ಬೀಚ್‌ ನಲ್ಲಿ ದೊಡ್ಡ ಶಾರ್ಕ್ ದಾಳಿ: ಗಾಯಗೊಂಡ ಬಾಲಕನ ಸ್ಥಿತಿ ಗಂಭೀರ

ಭಾನುವಾರ ಮಧ್ಯಾಹ್ನ ಸಿಡ್ನಿ ಹಾರ್ಬರ್ ಬೀಚ್‌ನಲ್ಲಿ ಶಾರ್ಕ್ ದಾಳಿಯಿಂದ ಬಾಲಕ ಗಂಭೀರ ಗಾಯಗೊಂಡಿದ್ದಾನೆ. ಸಿಡ್ನಿ ಹಾರ್ಬರ್‌ ನಲ್ಲಿ ಶಾರ್ಕ್‌ ದಾಳಿಯಿಂದ ತೀವ್ರವಾಗಿ ಗಾಯಗೊಂಡು ಬಾಲಕ ಪ್ರಾಣಕ್ಕಾಗಿ ಹೋರಾಡುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಪೂರ್ವ ಸಿಡ್ನಿಯ ಉಪನಗರವಾದ ವಾಕ್ಲೂಸ್‌ನಲ್ಲಿರುವ ಶಾರ್ಕ್ ಬೀಚ್‌ನಲ್ಲಿ ಈ ದಾಳಿ ನಡೆದಿದ್ದು, ಸುಮಾರು 13 ವರ್ಷ ವಯಸ್ಸಿನವನೆಂದು ಹೇಳಲಾದ ಬಾಲಕ ನೀರಿನಲ್ಲಿದ್ದಾಗ ದೊಡ್ಡ ಶಾರ್ಕ್ ದಾಳಿ ಮಾಡಿ ಕಚ್ಚಿದ್ದು, ತೀವ್ರ ಗಾಯಗಳಾಗಿವೆ ಎಂದು ನ್ಯೂ ಸೌತ್ ವೇಲ್ಸ್ ಪೊಲೀಸರು ತಿಳಿಸಿದ್ದಾರೆ. ಘಟನೆ ನಡೆದ ಸ್ವಲ್ಪ […]

ಕನ್ನಡ ದುನಿಯಾ 18 Jan 2026 5:10 pm

ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್: ಹಳದಿ ಮಾರ್ಗದ 8ನೇ ರೈಲು ನಾಳೆ ಆಗಮನ

ಬೆಂಗಳೂರು: ಮೆಟ್ರೋ ಪ್ರಯಾಣಿಕರಿಗೆ ಸಿಹಿ ಸುದ್ದಿ ಸಿಕ್ಕಿದೆ. ಹಳದಿ ಮಾರ್ಗದ ಮೆಟ್ರೋ ಎಂಟನೇ ರೈಲು ನಾಳೆ ಬೆಂಗಳೂರಿಗೆ ತಲುಪಲಿದೆ. ಜನವರಿ 19ರಂದು ಬೆಂಗಳೂರಿಗೆ ಹಳದಿ ಮಾರ್ಗದ ಎಂಟನೇ ರೈಲು ತಲುಪಲಿದ್ದು, ಮುಂದಿನ ದಿನಗಳಲ್ಲಿ ರೈಲಿಗಾಗಿ ಮೆಟ್ರೋ ಪ್ರಯಾಣಿಕರು ಕಾಯುವ ಸಮಯ ಮತ್ತಷ್ಟು ಕಡಿಮೆಯಾಗಲಿದೆ. ಎಂಟನೇ ರೈಲು ಆಗಮನ ಬಳಿಕ ರೈಲಿನ ಟೆಸ್ಟಿಂಗ್, ತಾಂತ್ರಿಕ ಪರೀಕ್ಷೆ ನಡೆಸಿ ವಾಣಿಜ್ಯ ಕಾರ್ಯಾಚರಣೆಗೆ ಇಳಿಸಲಾಗುವುದು. ಅದರು ಸಂಚಾರ ಆರಂಭ ಮಾಡಿದ ನಂತರ ರೈಲುಗಳ ಓಡಾಟದ ಸಮಯ ಮತ್ತಷ್ಟು ಕಡಿಮೆಯಾಗಿದೆ. ಸದ್ಯ 10 […]

ಕನ್ನಡ ದುನಿಯಾ 18 Jan 2026 4:49 pm

ಉದ್ಯೋಗಾಕಾಂಕ್ಷಿಗಳಿಗೆ ಇಲ್ಲಿದೆ ಅವಕಾಶ: ನಬಾರ್ಡ್ ನಲ್ಲಿ ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟ

ಬೆಂಗಳೂರು: ಉದ್ಯೋಗಾಕಾಂಕ್ಷಿಗಳಿಗೆ ಇಲ್ಲಿದೆ ಸುವರ್ಣಾವಕಾಶ. ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ (NABARD) ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಿದೆ. ನಬಾರ್ಡ್ ನಲ್ಲಿ 162 ಅಭಿವೃದ್ಧಿ ಸಹಾಯಕ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಪದವೀಧರರು ಆನ್ ಲೈನ್ ಮೂಲಕ nabard.org ನಲ್ಲಿ ಅರ್ಜಿ ಸಲ್ಲಿಸಬಹುದು. ನೇಮಕಾತಿಯನ್ನು ಗ್ರೂಪ್ ಬಿ ಕೇಡರ್ ಅಡಿಯಲ್ಲಿ ನಡೆಸಲಾಗುತ್ತಿದೆ ಎಂದು ತಿಳಿಸಲಾಗಿದೆ. ಈ ನೇಮಕಾತಿಯನ್ನು ರಾಷ್ಟ್ರೀಯ ಮಟ್ಟದಲ್ಲಿ ನಡೆಸಲಾಗುವುದು ಮತ್ತು ಆಯ್ಕೆಯಾದ ಅಭ್ಯರ್ಥಿಗಳನ್ನು ವಿವಿಧ ನಬಾರ್ಡ್ ಕಚೇರಿಗಳಿಗೆ ನೇಮಕಮಾಡಿಕೊಳ್ಳಲಾಗುತ್ತದೆ. ನಬಾರ್ಡ್ ನಲ್ಲಿ […]

ಕನ್ನಡ ದುನಿಯಾ 18 Jan 2026 4:48 pm

ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿದ ಸಿಎಂ ಸಿದ್ದರಾಮಯ್ಯ: ರೋಡ್ ಕ್ಲೀಯರ್ ಮಾಡಲು ಹೋಗಿ ಬೈಕ್ ಸವಾರನಿಗೆ ಒದೆಯಲು ಮುಂದಾದ ಎಸ್ ಪಿ!

ಮೈಸೂರು: ಸುತ್ತೂರು ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಸುತ್ತೂರು ಕ್ಷೇತ್ರಕ್ಕೆ ಜನಸಾಗರವೇ ಹರಿದು ಬರುತ್ತಿದ್ದು, ಮೂರು ಕಿ.ಮೀ ವರೆಗೂ ಟ್ರಾಫಿಕ್ ಜಾಮ್ ಸಂಭವಿಸಿದೆ. ಸುತ್ತೂರು ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸುತ್ತೂರು ಕ್ಷೇತ್ರದಲ್ಲಿ ನಡೆದ ವಿವಿಧ ಕಾರ್ಯಕ್ರಮಗಳ ಉದ್ಘಾಟನೆಗೆಂದು ತೆರಳುತ್ತಿದ್ದ ವೇಳೆ ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿ ಪರದಾಡಿದ್ದಾರೆ. ಸುತ್ತೂರು ಕ್ಷೇತ್ರಕ್ಕೆ ತೆರಳುವ ಮಾರ್ಗದಲ್ಲಿ ಮೂರು ಕಿ.ಮಿ ವರೆಗೆ ರಸ್ತೆಯ ಇಕ್ಕೆಲಗಳಲ್ಲಿ ಟ್ರಾಫಿಕ್ ಜಾಮ್ ನಿಂದಾಗಿ ಜನರು, ರಾಜಕಾರಣಿಗಳು ಒದ್ದಾಡಿದ್ದಾರೆ. ಇದೇ […]

ಕನ್ನಡ ದುನಿಯಾ 18 Jan 2026 4:37 pm

BIG NEWS: ಜಾತಿಯನ್ನು ಬೇರುಸಹಿತ ಕಿತ್ತುಹಾಕಿ, ತಾರತಮ್ಯ ಅಳಿಸಿ ಹಾಕಿ: ಆರ್‌.ಎಸ್‌.ಎಸ್. ಮುಖ್ಯಸ್ಥ ಮೋಹನ್ ಭಾಗವತ್ ಕರೆ

ಮುಂಬೈ: ಒಂದು ದಶಕದಲ್ಲಿ ಮನಸ್ಸಿನಿಂದ ಜಾತಿಯನ್ನು ಅಳಿಸಿಹಾಕಿ ತಾರತಮ್ಯವನ್ನು ಕೊನೆಗೊಳಿಸಿ ಎಂದು ಆರ್.ಎಸ್‌.ಎಸ್. ಮುಖ್ಯಸ್ಥ ಮೋಹನ್ ಭಾಗವತ್ ಕರೆ ನೀಡಿದ್ದಾರೆ. ಭಾರತೀಯರು ತಮ್ಮ ಮನಸ್ಸಿನಿಂದ ಜಾತಿಯನ್ನು ಶುದ್ಧೀಕರಿಸಿ ಆಳವಾಗಿ ಬೇರೂರಿರುವ ತಾರತಮ್ಯವನ್ನು ಬೇರುಸಹಿತ ಕಿತ್ತುಹಾಕಬೇಕೆಂದು ಒತ್ತಾಯಿಸಿದ್ದಾರೆ. ಶ್ರದ್ಧೆಯಿಂದ ಅನುಸರಿಸಿದರೆ 10-12 ವರ್ಷಗಳಲ್ಲಿ ಅದರ ಅಂತ್ಯವಾಗಲಿದೆ ಎಂದು ಹೇಳಿದ್ದಾರೆ. ಪ್ರಾಂತ್ ಸಂಘಚಾಲಕ್ ಅನಿಲ್ ಭಲೇರಾವ್ ಅವರೊಂದಿಗೆ ಆರ್‌ಎಸ್‌ಎಸ್ ಶತಮಾನೋತ್ಸವದ ಜನಸಂಘದ ಸಂದರ್ಭದಲ್ಲಿ ಸಾರ್ವಜನಿಕ ಸಂವಾದದಲ್ಲಿ ಮಾತನಾಡಿದ ಅವರು, ಜಾತಿ ವ್ಯವಸ್ಥೆಯ ವಿಕಸನ ಮತ್ತು ಸಂಘದ ಸಾಮಾಜಿಕ ದೃಷ್ಟಿಕೋನವನ್ನು ವಿಶ್ಲೇಷಿಸಿದರು. […]

ಕನ್ನಡ ದುನಿಯಾ 18 Jan 2026 4:31 pm

BIG NEWS: ಅಬಕಾರಿ ಲಂಚ ಪ್ರಕರಣ: ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?

ಮೈಸೂರು: 25 ಲಕ್ಷ ಲಂಚ ಪಡೆಯುತ್ತಿದ್ದಾಗ ಅಬಕಾರಿ ಡಿಸಿ ಲೋಕಾಯುಕ್ತ ಬಲೆಗೆ ಬಿದ್ದಿರುವ ಪ್ರಕರಣ ಹಾಗೂ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಹಾಗೂ ಪುತ್ರನ ವಿರುದ್ಧ ಅಕ್ರಮ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯಯ, ಕಾನೂನಿನ ಮುಂದೆ ಯಾರೂ ದೊಡ್ದವರಲ್ಲ. ತಪ್ಪಿತಸ್ಥರ ವಿರುದ್ಧ ಕ್ರಮವಾಗಲಿದೆ ಎಂದು ತಿಳಿಸಿದ್ದಾರೆ. ಅಬಕಾರಿ ಡಿಸಿ ಮೇಲೆ ಲೋಕಾಯುಕ್ತ ದಾಳಿ ಹಾಗೂ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಆಡಿಯೋದಲ್ಲಿ ಪ್ರಸ್ತಾಪವಾಗಿರುವ ಬಗ್ಗೆ ಕಾನೂನಿನ ಕ್ರಮಕ್ಕೆ ನಾವು […]

ಕನ್ನಡ ದುನಿಯಾ 18 Jan 2026 4:09 pm

SHOCKING: ಗಾಳಿಪಟ ಹಾರಿಸುವಾಗ ದುರಂತ: ಕಾಲೇಜು ಕಟ್ಟಡದ ಮೇಲಿಂದ ಬಿದ್ದು ಯುವಕ ದುರ್ಮರಣ

ಬೀದರ್: ಗಾಳಿಪಟ ಹಿಡಿಯಲು ಹೋಗಿ ಯುವಕನೊಬ್ಬ ಕಟ್ಟಡದ ಮೇಲಿಂದ ಬಿದ್ದು ಮೃತಪಟ್ಟಿರುವ ಘಟನೆ ಬೀದರ್ ಜಿಲ್ಲೆಯ ಹುಮ್ನಾಬಾದ್ ಪಟ್ಟಣದಲ್ಲಿ ನಡೆದಿದೆ. ವಾಂಜರಿ ಬಡಾವಣೆಯಲ್ಲಿ ಈ ದುರಂತ ಸಂಭವಿಸಿದೆ. ಶಶಿಕುಮಾರ್ ಶಿವಾನಂದ್ (19) ಮೃತ ದುರ್ದೈವಿ. ಖಾಸಗಿ ಕಾಲೇಜಿನ ಕಟ್ಟಡದ ಮೇಲೆ ಗಾಳಿಪಟ ಹಾರಿಸಲು ಹೋಗಿದ್ದ ವೇಳೆ ಈ ದುರಂತ ಸಂಭವಿಸಿದೆ. ಗಾಳಿಪಟ ಹಾರಿಸುತ್ತಿದ್ದಾಗ ಏಕಾಏಕಿ ದಾರ ತುಂಡಾಗಿದೆ. ಈ ವೇಳೆ ಹಾರಿ ಹೋಗುತ್ತಿದ್ದ ಗಾಳಿಪಟ ಹಿಡಿಯಲು ಹೋಗಿ ಆಯತಪ್ಪಿ ಯುವಕ ಕಟ್ಟಡದಿಂದ ಕೆಳಗೆ ಬಿದ್ದಿದ್ದಾನೆ. ಗಂಭೀರವಾಗಿ ಗಾಯಗೊಂಡ […]

ಕನ್ನಡ ದುನಿಯಾ 18 Jan 2026 2:37 pm

BREAKING: ದಾವಣಗೆರೆ ಡ್ರಗ್ಸ್ ಪ್ರಕರಣ: ಮತ್ತೋರ್ವ ಉದ್ಯಮಿ ಅರೆಸ್ಟ್

ದಾವಣಗೆರೆ: ದಾವಣಗೆರೆಯಲ್ಲಿ ಮಾದಕ ವಸ್ತು, ಸಿಂಥೆಟಿಕ್ಸ್ ಡ್ರಗ್ಸ್ ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಯಾಚರಣೆ ಮುಂದುವರೆಸಿರುವ ಪೊಲೀಸರು ಮತ್ತೋರ್ವ ಉದ್ಯಮಿಯನ್ನು ಬಂಧಿಸಿದ್ದಾರೆ. ಶಿವರಾಜ್ ಬಂಧಿತ ಉದ್ಯಮಿ. ದಾವಣಗೆರೆಅ ವಿದ್ಯಾನಗರ ಠಾಣೆ ಪೊಲೀಸರು ಉದ್ಯಮಿ ಶಿವರಾಜ್ ನನ್ನು ಬಂಧಿಸಿದ್ದಾರೆ. ಉದ್ಯಮಿ ಶಿವರಾಜ್ ದಾವಣಗೆರೆಯ ಎಸ್.ಎಸ್.ಲೇಔಟ್ ನಿವಾಸಿ. ಈ ಹಿಂದೆ ಆರ್ ಟಿ ಒ ಕಚೇರಿಯಲ್ಲಿ ಏಜೆಂಟ್ ಆಗಿದ್ದರು. ಸಂಘಟನೆಯೊಂದರಲ್ಲಿ ಗುರುತಿಸಿಕೊಂಡಿದ್ದರು. ಈಗಾಗಲೇ ದಾವಣಗೆರೆ ಡ್ರಗ್ಸ್ ಪ್ರಕರಣದಲ್ಲಿ ಕಾಂಗ್ರೆಸ್ ಮುಖಂಡ, ವೀರಶೈವ ಮಹಾಸಭಾ ಸದಸ್ಯ ಶಾಮನೂರು ವೇದಮೂರ್ತಿ ಎಂಬಾತನ್ನನು ಪೊಲೀಸರು ಬಂಧಿಸಿದ್ದಾರೆ. […]

ಕನ್ನಡ ದುನಿಯಾ 18 Jan 2026 2:16 pm

ವಿದ್ಯುತ್ ಕಂಬಕ್ಕೆ ಕಾರ್ ಡಿಕ್ಕಿ: ಇಬ್ಬರು ಸಾವು

ಕಾರವಾರ: ವಿದ್ಯುತ್ ಕಂಬಕ್ಕೆ ಕಾರ್ ಡಿಕ್ಕಿಯಾಗಿ ಇಬ್ಬರು ಸಾವನ್ನಪ್ಪಿದ ಘಟನೆ ಉತ್ತರ ಕನ್ನಡ ಜಿಲ್ಲೆ ಭಟ್ಕಳದ ವೆಂಕಟಾಪುರ ಸಮೀಪ ನಡೆದಿದೆ. ಭಟ್ಕಳದ ಆಜಾದ್ ನಗರ ನಿವಾಸಿ ಬಿಲಾಲ್(15), ಅಯಾನ್(20) ಮೃತಪಟ್ಟವರು. ಅಪಘಾತದಲ್ಲಿ ಬಿಲಾಲ್ ಸ್ಥಳದಲ್ಲೇ ಮೃತಪಟ್ಟಿದ್ದು, ಕಾರ್ ಚಾಲನೆ ಮಾಡುತ್ತಿದ್ದ ಅಯಾನ್ ಗಂಭೀರವಾಗಿ ಗಾಯಗೊಂಡು ಉಡುಪಿ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಶಿರಾಲಿಯಿಂದ ಭಟ್ಕಳಕ್ಕೆ ಕಾರ್ ನಲ್ಲಿ ಬರುತ್ತಿದ್ದಾಗ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ. ಭಟ್ಕಳ ಶಹರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕನ್ನಡ ದುನಿಯಾ 18 Jan 2026 2:14 pm

BREAKING: ಇಂಡಿಗೋ ವಿಮಾನಕ್ಕೆ ಬಾಂಬ್ ಬೆದರಿಕೆ: ಲಕ್ನೋದಲ್ಲಿ ತುರ್ತು ಭೂಸ್ಪರ್ಶ

ದೆಹಲಿಯಿಂದ ಬಾಗ್ಡೋಗ್ರಾಗೆ ಪ್ರಯಾಣಿಸುತ್ತಿದ್ದ ಇಂಡಿಗೋ ಏರ್ಲೈನ್ಸ್ ವಿಮಾನದಲ್ಲಿ ಬಾಂಬ್ ಬೆದರಿಕೆ ನಂತರ ಲಕ್ನೋ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಲಾಗಿದೆ. ವಿಮಾನದೊಳಗೆ ಕೈಬರಹದ ಟಿಪ್ಪಣಿಯ ಮೂಲಕ ಬೆದರಿಕೆ ನೀಡಲಾಗಿದೆ ಎಂದು ಸಹಾಯಕ ಪೊಲೀಸ್ ಆಯುಕ್ತ(ಎಸಿಪಿ) ರಜನೀಶ್ ವರ್ಮಾ ತಿಳಿಸಿದ್ದಾರೆ. ವಿಮಾನದ ಶೌಚಾಲಯದಲ್ಲಿ ಟಿಶ್ಯೂ ಪೇಪರ್‌ನಲ್ಲಿ ಬಾಂಬ್ ಇದೆ ಎಂದು ಬರೆಯಲಾದ ಸಂದೇಶ ಕಂಡುಬಂದಿದೆ. ವಿಮಾನದಲ್ಲಿ ಪೈಲಟ್‌ಗಳು ಮತ್ತು ಸಿಬ್ಬಂದಿ ಸೇರಿದಂತೆ 238 ಪ್ರಯಾಣಿಕರಿದ್ದರು. ವಿಮಾನವು ದೆಹಲಿಯಿಂದ ಬಾಗ್ಡೋಗ್ರಾಗೆ ತೆರಳುತ್ತಿತ್ತು. “ಲಕ್ನೋದಲ್ಲಿ ತುರ್ತು ಲ್ಯಾಂಡಿಂಗ್ ಮಾಡಿದೆ ಮತ್ತು ಪ್ರಸ್ತುತ […]

ಕನ್ನಡ ದುನಿಯಾ 18 Jan 2026 2:03 pm

ಸ್ವರ್ಣಮಂದಿರದ ಆವರಣದ ಕೊಳದಲ್ಲಿ ಮುಖ ತೊಳೆದು ಉಗುಳಿದ ಯುವಕ: ಸಿಖ್ ನೀತಿ ಸಂಹಿತೆ ಉಲ್ಲಂಘನೆ ಎಂದು ಶಿರೋಮಣಿ ಗುರುದ್ವಾರ ಸಮಿತಿ ಖಂಡನೆ

ಅಮೃತಸರ: ಸಿಖ್ ರ ಪವಿತ್ರ ಸ್ಥಳ ಅಮೃತಸರದ ಸ್ವರ್ಣಮಂದಿರದ ಆವರಣದಲ್ಲಿರುವ ಕೊಳದಲ್ಲಿ ಯುವಕನೊಮ್ಮ ಕೈ-ಕಾಲು, ಮುಖ ತೊಳೆದಿದಲ್ಲದೇ ಕೊಳದ ನೀರಿನಲ್ಲಿ ಬಾಯಿ ತೊಳೆದು ಉಗುಳಿರುವ ಘಟನೆ ಬೆಳಕಿಗೆ ಬಂದಿದೆ. ಸಾಮಾಜಿಕ ಜಾಲತಾಣಗಳಲ್ಲಿಯೂ ಯುವಕನ ವಿಡಿಯೋ ವೈರಲ್ ಆಗಿದ್ದು, ಇದನ್ನು ತೀವ್ರವಾಗಿ ಖಂಡಿಸಿರುವ ಶಿರೋಮಣಿ ಗುರುದ್ವಾರ ಪ್ರಬಂಧಕ ಸಮಿತಿ (ಎಸ್ ಜಿ ಪಿ ಸಿ) , ಇದು ಸಿಖ್ ನೀತಿ ಸಂಹಿತೆಯ ಉಲ್ಲಂಘನೆ ಎಂದು ಆಕ್ರೋಶ ವ್ಯಕ್ತಪಡಿಸಿದೆ. ಸ್ವರಣಮಂದಿರದ ಆವರಣದಲ್ಲಿರುವ ಕೊಳದ ನೀರಿನಲ್ಲಿ ಯುವಕ ಮುಖ ತೊಳೆದು ಉಗುಳಿದ್ದಾನೆ. […]

ಕನ್ನಡ ದುನಿಯಾ 18 Jan 2026 1:48 pm

BREAKING: ಶಾಸಕ ಜನಾರ್ದನ ರೆಡ್ಡಿಯದು ಗೂಂಡಾ ಸಂಸ್ಕೃತಿ: CM ಸಿದ್ದರಾಮಯ್ಯ ವಾಗ್ದಾಳಿ

ಮೈಸೂರು: ಶಾಸಕ ಜನಾರ್ದನ ರೆಡ್ಡಿಯದು ಗೂಂಡಾ ಸಂಸ್ಕೃತಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಸಿಎಂ, ಶಾಸಕ ಜನಾರ್ದನ ರೆಡ್ಡಿಗೆ ಯಾವುದೇ ಸಂಸ್ಕಾರ ಇಲ್ಲ. ಅವರದು ಗೂಂಡಾ ಸಂಸ್ಕೃತಿ ಎಂದು ವಾಗ್ದಾಳಿ ನಡೆಸಿದ್ದಾರೆ. ರಿಪಬ್ಲಿಕ್ ಆಫ್ ಬಳ್ಳಾರಿ ಮಾಡಿದ್ದು ಜನಾರ್ದನ ರೆಡ್ಡಿ. ಜನಾರ್ದನ ರೆಡ್ಡಿಗೆ ಬಳ್ಳಾರಿಗೆ ಬರದಂತೆ ತಡೆ ಹಿಡಿದಿದ್ದು ಯಾಕೆ? ಸಂತೋಷ್ ಹೆಗಡೆ ಲೋಕಾಯುಕ್ತರಾಗಿದ್ದಾಗ ರಿಪಬ್ಲಿಕ್ ಆಫ್ ಬಳ್ಳಾರಿ ಎಂದು ವರದಿ ನೀಡಿದ್ದರು. ಜನಾರ್ದನ ರೆಡ್ಡಿಗೆ ಯಾವುದೇ ಸಂಸ್ಕಾರ ಇಲ್ಲ, ಅವರದು ಗೂಂಡಾ ಸಂಸ್ಕೃತಿ […]

ಕನ್ನಡ ದುನಿಯಾ 18 Jan 2026 1:34 pm

ಭಾರತೀಯ ರೈಲ್ವೆ ಟಿಕೆಟ್ ಬುಕ್ಕಿಂಗ್ ನಿಯಮ ಬದಲು: ಹೊಸ ನಿಯಮ ತಿಳಿಯಿರಿ

ಭಾರತೀಯ ರೈಲ್ವೆಯ ದೇಶದ ಜನರ ಜೀವನಾಡಿ. ಪ್ರತಿನಿತ್ಯ ಕೋಟ್ಯಾಂತರ ಜನರು ರೈಲಿನಲ್ಲಿ ಪ್ರಯಾಣ ಮಾಡುತ್ತಾರೆ. ಜನವರಿಯಲ್ಲಿ ಹೊಸ ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲುಗಳ ಘೋಷಣೆ ಮಾಡಿ ಪ್ರಯಾಣಿಕರಿಗೆ ಬಂಪರ್ ಕೊಡುಗೆ ನೀಡಲಾಗಿದೆ. ರೈಲ್ವೆ ಮಂಡಳಿಯು ಇತ್ತೀಚೆಗೆ ಹೊರಡಿಸಿದ ಅಧಿಸೂಚನೆ ಪ್ರಕಾರ ಈ ಹೊಸ ರೈಲುಗಳ ದರ ರಚನೆ ಮತ್ತು ಬುಕ್ಕಿಂಗ್ ನಿಯಮಗಳು ಹಿಂದಿನ ಅಮೃತ್ ಭಾರತ್ ರೈಲುಗಳಿಗಿಂತ ಸ್ವಲ್ಪ ಭಿನ್ನವಾಗಿರಲಿವೆ. ಪ್ರಮುಖ ಬದಲಾವಣೆಗಳು: ಈ ಹೊಸ ನಿಯಮಗಳ ಅಡಿಯಲ್ಲಿ ಮೂಲ ದರದಲ್ಲಿ ಯಾವುದೇ ಬದಲಾವಣೆ ಇಲ್ಲದಿದ್ದರೂ, ಕನಿಷ್ಠ […]

ಕನ್ನಡ ದುನಿಯಾ 18 Jan 2026 1:24 pm

ಎರಡು ಅತ್ಯಾಧುನಿಕ ಆಸ್ಪತ್ರೆಗಳ ನಿರ್ಮಾಣಕ್ಕೆ ಆರೋಗ್ಯ ಇಲಾಖೆ ಅನುಮೋದನೆ

ಬೆಂಗಳೂರು: ಯಲಹಂಕ ತಾಲೂಕು ಬೆಳ್ಳಹಳ್ಳಿ, ಹೆಬ್ಬಾಳ ಕ್ಷೇತ್ರದ ಸಂಜಯ್ ನಗರ ಸಮೀಪ ತಲಾ 75 ಕೋಟಿ ರೂ. ವೆಚ್ಚದಲ್ಲಿ ತಲಾ 125 ಹಾಸಿಗೆ ಸಾಮರ್ಥ್ಯದ ಅತ್ಯಾಧುನಿಕ ಆಸ್ಪತ್ರೆ ನಿರ್ಮಾಣ ಮಾಡಲು ಆರೋಗ್ಯ ಇಲಾಖೆ ಅನುಮೋದನೆ ನೀಡಿದೆ. ಬೆಂಗಳೂರು ತಾಲೂಕಿನ ಜಾಲ ಹೋಬಳಿ ಉತ್ತನಹಳ್ಳಿ ಗ್ರಾಮದ ಸರ್ವೆ ನಂಬರ್ 72 ರಲ್ಲಿ 7 ಎಕರೆ ಸರ್ಕಾರಿ ಜಮೀನನ್ನು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಕಾಯ್ದಿರಿಸಿ 150 ಕೋಟಿ ರೂಪಾಯಿ ವೆಚ್ಚದಲ್ಲಿ ಸಾಮರ್ಥ್ಯದ ಆಸ್ಪತ್ರೆ ನಿರ್ಮಾಣಕ್ಕೆ ತೀರ್ಮಾನಿಸಲಾಗಿತ್ತು. ಆದರೆ, ಆ ಜಾಗಕ್ಕೆ […]

ಕನ್ನಡ ದುನಿಯಾ 18 Jan 2026 1:20 pm

BREAKING: ಶಾಸಕ ಜನಾರ್ಧನ ರೆಡ್ಡಿ ನಿವಾಸಕ್ಕೆ ಕಾಂಗ್ರೆಸ್ ಕಾರ್ಯಕರ್ತರ ಮುತ್ತಿಗೆ: ಹಲವರು ಪೊಲೀಸ್ ವಶಕ್ಕೆ

ಬೆಂಗಳೂರು: ಶಾಸಕ ಜನಾರ್ಧನ ರೆಡ್ಡಿ ನಿವಾಸದ ಮುಂದೆ ಕಾಂಗ್ರೆಸ್ ಕಾರ್ಯಕರ್ತರು ದಿಢೀರ್ ಪ್ರತಿಭಟನೆ ನಡೆಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.ಶಾಸಕ ಜನಾರ್ಧನ ರೆಡ್ಡಿ ಅವರ ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯಲ್ಲಿರುವ ನಿವಾಸದ ಮುಂದೆ ಏಕಾಏಕಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಬಳ್ಳಾರಿ ಗಲಾಟೆ-ಫೈರಿಂಗ್ ಪ್ರಕರಣ ಖಂಡಿಸಿ ನಿನ್ನೆ ಬಳ್ಳಾರಿಯಲ್ಲಿ ಬಿಜೆಪಿ ನಾಯಕರು ಬೃಹತ್ ಸಮಾವೇಶ ನಡೆಸಿದ್ದರು. ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ್ದ ಶಾಸಕ ಜನಾರ್ಧನ ರೆಡ್ಡಿ ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದರು. ಬಳ್ಳಾರಿ ಕಾಂಗ್ರೆಸ್ […]

ಕನ್ನಡ ದುನಿಯಾ 18 Jan 2026 12:56 pm

ಈ ಬಾರಿ ಅಲ್ಲ, ಮುಂದಿನ ಅವಧಿಗೆ ನಾನು ಸಿಎಂ ಆಕಾಂಕ್ಷಿ: ಸತೀಶ್ ಜಾರಕಿಹೊಳಿ

ದಾವಣಗೆರೆ: ಈ ಅವಧಿಗೆ ಅಲ್ಲ, ಮುಂದಿನ 2028ಕ್ಕೆ ನಾನು ಸಿಎಂ ಸ್ಥಾನದ ಆಕಾಂಕ್ಷಿ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಪಾಂಡೋಮಟ್ಟಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ವೇಳೆ ಅಭಿಮಾನಿಗಳು, ಬೆಂಬಲಿಗರು ಮುಂದಿನ ಮುಖ್ಯಮಂತ್ರಿ ಸತೀಶ್ ಜಾರಕಿಹೊಳಿಗೆ ಜೈ ಎಂದು ಘೋಷಣೆ ಕೂಗಿದ್ದಾರೆ. ಈ ಕುರಿತಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಸತೀಶ್ ಜಾರಕಿಗೊಳಿ ಅವರು, ಜನ ಅಭಿಮಾನಕ್ಕಾಗಿ ಮುಂದಿನ ಮುಖ್ಯಮಂತ್ರಿ ಸತೀಶ್ ಜಾರಕಿಹೊಳಿ ಎಂದು ಘೋಷಣೆ ಕೂಗುತ್ತಾರೆ. ಆದರೆ ಅದು ಈ […]

ಕನ್ನಡ ದುನಿಯಾ 18 Jan 2026 12:49 pm

ಗೌತಮ್ ಗಂಭೀರ್ ಪಡೆಗೆ ಮತ್ತೊಂದು ಅಗ್ನಿಪರೀಕ್ಷೆ: ನ್ಯೂಜಿಲೆಂಡ್ ವಿರುದ್ಧ ಸರಣಿ ಕೈವಶ ಮಾಡಿಕೊಳ್ಳಲು ಭಾರತ ಸಜ್ಜು

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಏಕದಿನ ಸರಣಿಯು ಈಗ ಕುತೂಹಲಕಾರಿ ಘಟ್ಟಕ್ಕೆ ಬಂದು ತಲುಪಿದೆ. ಇಂದೋರ್‌ನ ಹೋಲ್ಕರ್ ಸ್ಟೇಡಿಯಂನಲ್ಲಿ ಇಂದು ನಡೆಯಲಿರುವ ಅಂತಿಮ ಪಂದ್ಯವು ಸರಣಿಯ ವಿಜೇತರನ್ನು ನಿರ್ಧರಿಸಲಿದೆ. 2024ರ ಟೆಸ್ಟ್ ಸರಣಿಯಲ್ಲಿ ಭಾರತಕ್ಕೆ ಶಾಕ್ ನೀಡಿದ್ದ ಕಿವಿ ಪಡೆ, ಈಗ ಮತ್ತೊಮ್ಮೆ ಭಾರತದ ಮಣ್ಣಿನಲ್ಲಿ ಇತಿಹಾಸ ಬರೆಯುವ ತವಕದಲ್ಲಿದೆ. ಸರಣಿಯ ಹಿನ್ನಲೆ: ಕೇನ್ ವಿಲಿಯಮ್ಸನ್ ಮತ್ತು ಮಿಚೆಲ್ ಸ್ಯಾಂಟ್ನರ್ ಅವರಂತಹ ಸ್ಟಾರ್ ಆಟಗಾರರ ಅನುಪಸ್ಥಿತಿಯಲ್ಲೂ ನ್ಯೂಜಿಲೆಂಡ್ ಅದ್ಭುತ ಪ್ರದರ್ಶನ ನೀಡಿದೆ. ರಾಜ್‌ಕೋಟ್‌ನಲ್ಲಿ ನಡೆದ ಕಳೆದ ಪಂದ್ಯದಲ್ಲಿ […]

ಕನ್ನಡ ದುನಿಯಾ 18 Jan 2026 12:47 pm

ಡಿಗ್ರಿ ಮುಗಿಸಿ ಪೇಂಟಿಂಗ್ ಕೆಲಸ ಮಾಡುತ್ತಿರುವ ಯುವಕ: ಈತನ ಫ್ಯಾಮಿಲಿ ಬ್ಯಾಕ್‌ಗ್ರೌಂಡ್ ಕೇಳಿದ್ರೆ ನೀವು ದಂಗಾಗ್ತೀರಾ!

ಸೋಶಿಯಲ್ ಮೀಡಿಯಾದಲ್ಲಿ ಸದ್ಯ ವೈರಲ್ ಆಗಿರುವ ವಿಡಿಯೋವೊಂದು ಶಿಕ್ಷಣ, ಉದ್ಯೋಗ ಮತ್ತು ಆದಾಯದ ಬಗ್ಗೆ ನಾವು ಹೊಂದಿರುವ ಸಾಂಪ್ರದಾಯಿಕ ದೃಷ್ಟಿಕೋನವನ್ನೇ ಬದಲಿಸುವಂತಿದೆ. ಎತ್ತರದ ಕಟ್ಟಡವೊಂದಕ್ಕೆ ಪೇಂಟ್ ಮಾಡುತ್ತಿದ್ದ ಕಾರ್ಮಿಕ ಮತ್ತು ಯುವತಿಯೊಬ್ಬರ ನಡುವಿನ ಸಂಭಾಷಣೆ ಈಗ ನೆಟ್ಟಿಗರ ನಡುವೆ ಭಾರಿ ಚರ್ಚೆ ಹುಟ್ಟುಹಾಕಿದೆ. ನಡೆದಿದ್ದೇನು? ಇನ್‌ಸ್ಟಾಗ್ರಾಮ್ ಕ್ರಿಯೇಟರ್ ಸಾನಿಯಾ ಮಿರ್ಜಾ ಹಂಚಿಕೊಂಡಿರುವ ವಿಡಿಯೋದಲ್ಲಿ, ಆಕಾಶದ ಎತ್ತರದಲ್ಲಿ ಸುರಕ್ಷತಾ ಹಗ್ಗವನ್ನು ಕಟ್ಟಿಕೊಂಡು ಕೆಲಸ ಮಾಡುತ್ತಿದ್ದ ಪೇಂಟರ್ ಬಳಿ ಸಾನಿಯಾ ಮಾತನಾಡುತ್ತಾರೆ. ಇಷ್ಟು ಎತ್ತರದಲ್ಲಿ ಕೆಲಸ ಮಾಡಲು ಬೆನ್ನು ನೋವು […]

ಕನ್ನಡ ದುನಿಯಾ 18 Jan 2026 12:43 pm

ಬರೀ 7 ರೂಪಾಯಿಗೆ ಬ್ಲಡ್ ಟೆಸ್ಟ್! ಪಾಟ್ನಾದಲ್ಲಿ ಬಡವರ ಪಾಲಿನ ಸಂಜೀವಿನಿಯಾದ ಖಾನ್ ಸರ್ ಆಸ್ಪತ್ರೆ

ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದ್ದ ಜನಪ್ರಿಯ ಶಿಕ್ಷಕ ಮತ್ತು ಯೂಟ್ಯೂಬರ್ ಖಾನ್ ಸರ್ (Khan Sir), ಈಗ ವೈದ್ಯಕೀಯ ಕ್ಷೇತ್ರದಲ್ಲೂ ಮಾನವೀಯತೆಯ ಹೊಸ ಅಧ್ಯಾಯ ಆರಂಭಿಸಿದ್ದಾರೆ. ಬಿಹಾರದ ಪಾಟ್ನಾದಲ್ಲಿ ಅವರು ಅತ್ಯಂತ ಕಡಿಮೆ ದರದಲ್ಲಿ ಚಿಕಿತ್ಸೆ ನೀಡುವ ಆಸ್ಪತ್ರೆಯನ್ನು ಪ್ರಾರಂಭಿಸಿದ್ದು, ಇದರ ದರ ಪಟ್ಟಿ ಕೇಳಿದರೆ ಯಾರಾದರೂ ಆಶ್ಚರ್ಯ ಪಡಲೇಬೇಕು. ಈ ಆಸ್ಪತ್ರೆಯು ಬಡ ಮತ್ತು ಮಧ್ಯಮ ವರ್ಗದ ಜನರಿಗೆ ವರದಾನವಾಗಲಿದ್ದು, ಇಲ್ಲಿನ ದರಗಳು ಸರ್ಕಾರಿ ಆಸ್ಪತ್ರೆಗಳಿಗಿಂತಲೂ ಕಡಿಮೆಯಾಗಿರುವುದು ವಿಶೇಷ. ಪಾಟ್ನಾ ಆಸ್ಪತ್ರೆಯ ಅಚ್ಚರಿಯ ದರಗಳು: ಖಾನ್ […]

ಕನ್ನಡ ದುನಿಯಾ 18 Jan 2026 12:39 pm

ಬೈಕ್, ಕಾರ್, ಟ್ರ್ಯಾಕ್ಟರ್ ಸೇರಿ ಎಲ್ಲಾ ವಾಹನ ಮಾಲೀಕರಿಗೆ ಮುಖ್ಯ ಮಾಹಿತಿ: FC, ವಿಮೆ, ವಾಯುಮಾಲಿನ್ಯ ಪ್ರಮಾಣಪತ್ರ ನವೀಕರಣಕ್ಕೆ ಸೂಚನೆ

ಮೋಟಾರು ಸೈಕಲ್, ಆಟೋ, ಕಾರು, ಸರಕು ವಾಹನಗಳು, ಟ್ರ‍್ಯಾಕ್ಟರ್ ಅಥವಾ ಟ್ರೈಲರ್ ಲಾರಿ, ಬಸ್ಸು, ಅಂಬುಲೇನ್ಸ್, ಶಾಲಾ ವಾಹನ ಮುಂತಾದ ವರ್ಗದ ವಾಹನಗಳ ಮಾಲೀಕರು ನೋಂದಣಿ ಅರ್ಹತಾ ಪತ್ರದ ಅವಧಿ ಮುಗಿದಿರುವ ತಮ್ಮ ವಾಹನಗಳ ನೋಂದಣಿ ಪತ್ರ, ಅರ್ಹತಾ ಪತ್ರ, ವಿಮಾ ಪತ್ರ, ವಾಯು ಮಾಲಿನ್ಯ ನಿಯಂತ್ರಣ ಪ್ರಮಾಣ ಪತ್ರಗಳನ್ನು ನವೀಕರಿಸಿಕೊಳ್ಳಲು ಮತ್ತು ಬಾಕಿ ಇರುವ ಮೋಟಾರು ವಾಹನ ರಸ್ತೆ ತೆರಿಗೆಯನ್ನು ಕೂಡಲೇ ಪಾವತಿಸಬೇಕೆಂದು ಕೊಪ್ಪಳ ಪ್ರಾದೇಶಿಕ ಸಾರಿಗೆ ಅಧಿಕಾರಿ ಪ್ರಭುಸ್ವಾಮಿ ಹಿರೇಮಠ ಅವರು ತಿಳಿಸಿದ್ದಾರೆ. ಕೊಪ್ಪಳ […]

ಕನ್ನಡ ದುನಿಯಾ 18 Jan 2026 12:36 pm

ಕ್ರಿಕೆಟ್ ಲೋಕದಲ್ಲಿ ಅದ್ಭುತ ಪವಾಡ: ಕೇವಲ 40 ರನ್ ಗುರಿ ಸಮರ್ಥಿಸಿಕೊಂಡು 232 ವರ್ಷಗಳ ಹಳೆಯ ದಾಖಲೆ ಮುರಿದ ಪಾಕ್ ತಂಡ!

ಪಾಕಿಸ್ತಾನದ ದೇಶೀಯ ಕ್ರಿಕೆಟ್‌ನಲ್ಲಿ ಶನಿವಾರ (ಜನೆವರಿ 17, 2026) ನಂಬಲಾಗದ ಪವಾಡವೊಂದು ನಡೆದಿದೆ.1 ಪ್ರೆಸಿಡೆಂಟ್ ಟ್ರೋಫಿ (President’s Trophy) ಪಂದ್ಯದಲ್ಲಿ ಪಿಟಿವಿ (PTV) ತಂಡವು ಕೇವಲ 40 ರನ್‌ಗಳ ಗುರಿಯನ್ನು ಯಶಸ್ವಿಯಾಗಿ ಸಮರ್ಥಿಸಿಕೊಳ್ಳುವ ಮೂಲಕ ಪ್ರಥಮ ದರ್ಜೆ ಕ್ರಿಕೆಟ್ ಇತಿಹಾಸದಲ್ಲಿ 232 ವರ್ಷಗಳ ಹಳೆಯ ವಿಶ್ವ ದಾಖಲೆಯನ್ನು ಅಳಿಸಿಹಾಕಿದೆ.2 ಇದುವರೆಗೆ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಸಮರ್ಥಿಸಿಕೊಳ್ಳಲಾದ ಅತ್ಯಂತ ಕಡಿಮೆ ಮೊತ್ತ ಎಂಬ ಹೆಗ್ಗಳಿಕೆಗೆ ಈ ಪಂದ್ಯ ಸಾಕ್ಷಿಯಾಗಿದೆ. ಏನಿದು ದಾಖಲೆ? ಈ ಹಿಂದೆ 1794ರಲ್ಲಿ ಲಾರ್ಡ್ಸ್ ಮೈದಾನದಲ್ಲಿ […]

ಕನ್ನಡ ದುನಿಯಾ 18 Jan 2026 12:34 pm

“ನಿಮ್ಮ BMW ಕಾರು ನಂದೇ ಅಲ್ವಾ?”: ಅಡುಗೆಯವ ದಿಲೀಪ್ ಮಾತು ಕೇಳಿ ಫರಾ ಖಾನ್ ಫುಲ್ ಶಾಕ್!

ಫರಾ ಖಾನ್ ಅವರ ಯೂಟ್ಯೂಬ್ ವ್ಲಾಗ್‌ಗಳಲ್ಲಿ ಈಗ ಫರಾ ಅವರಿಗಿಂತ ಅವರ ಅಡುಗೆಯವ ದಿಲೀಪ್ (Dilip Mukhiya) ಅವರೇ ಹೆಚ್ಚು ಜನಪ್ರಿಯರಾಗಿದ್ದಾರೆ. ಇತ್ತೀಚಿನ ವ್ಲಾಗ್‌ವೊಂದರಲ್ಲಿ ದಿಲೀಪ್ ಅವರು ಫರಾ ಖಾನ್ ಅವರ ಐಷಾರಾಮಿ BMW ಕಾರನ್ನು ತಮ್ಮ ಪ್ರಯಾಣಕ್ಕೆ ಬಳಸುತ್ತಿರುವುದಾಗಿ ಹೇಳಿರುವುದು ಫರಾ ಅವರನ್ನು ದಂಗಾಗಿಸಿದೆ. ನಡೆದಿದ್ದೇನು? ‘ಬಿಗ್ ಬಾಸ್ 19’ ಖ್ಯಾತಿಯ ಪ್ರಣೀತ್ ಮೋರೆ ಅವರ ಮನೆಗೆ ಫರಾ ಖಾನ್ ಮತ್ತು ದಿಲೀಪ್ ಭೇಟಿ ನೀಡಿದ್ದಾಗ ಈ ಪ್ರಸಂಗ ನಡೆದಿದೆ. ಪ್ರಣೀತ್ ಅವರ ತಂದೆ, “ಹಿಂದಿನ […]

ಕನ್ನಡ ದುನಿಯಾ 18 Jan 2026 12:29 pm