SENSEX
NIFTY
GOLD
USD/INR

Weather

23    C

ಡಿಜಿಟಲ್ ಸುದ್ದಿ ಮೂಲಗಳು

... ...View News by News Source

ಗುಟ್ಕಾ-ಪಾನ್ ಮಸಾಲಾ ಪ್ರಿಯರಿಗೆ ಶಾಕ್: ಏಪ್ರಿಲ್ 2026 ರಿಂದ ದೇಶಾದ್ಯಂತ ತಂಬಾಕು ಉತ್ಪನ್ನಗಳ ನಿಷೇಧಕ್ಕೆ ಸಿದ್ಧತೆ?

ನವದೆಹಲಿ: ಭಾರತದಲ್ಲಿ ತಂಬಾಕು ಮತ್ತು ನಿಕೋಟಿನ್ ಮುಕ್ತ ಸಮಾಜ ನಿರ್ಮಾಣದ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ದೊಡ್ಡ ಹೆಜ್ಜೆಯನ್ನಿಡಲು ಮುಂದಾಗಿದೆ ಎಂಬ ಚರ್ಚೆಗಳು ರಾಜಕೀಯ ಮತ್ತು ಸಾಮಾಜಿಕ ವಲಯದಲ್ಲಿ ಜೋರಾಗಿ ಕೇಳಿಬರುತ್ತಿವೆ. ಒಡಿಶಾ ಸರ್ಕಾರವು ಇತ್ತೀಚೆಗೆ ರಾಜ್ಯಾದ್ಯಂತ ಗುಟ್ಕಾ ಮತ್ತು ಪಾನ್ ಮಸಾಲಾ ಉತ್ಪನ್ನಗಳನ್ನು ಸಂಪೂರ್ಣವಾಗಿ ನಿಷೇಧಿಸಿ ಆದೇಶ ಹೊರಡಿಸಿದ ಬೆನ್ನಲ್ಲೇ, ಈ ನಿಯಮ ಏಪ್ರಿಲ್ 2026 ರಿಂದ ದೇಶಾದ್ಯಂತ ಜಾರಿಯಾಗುವ ಸಾಧ್ಯತೆ ಇದೆ ಎಂಬ ವರದಿಗಳು ಹರಿದಾಡುತ್ತಿವೆ. ಒಡಿಶಾ ಸರ್ಕಾರದ ಕ್ರಾಂತಿಕಾರಿ ನಿರ್ಧಾರ ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ […]

ಕನ್ನಡ ದುನಿಯಾ 25 Jan 2026 1:27 pm

ಈಜುಕೊಳದಲ್ಲಿ ಶವವಾಗಿ ಪತ್ತೆಯಾದ ಮಹಿಳೆ: ಪತಿಯಿಂದಲೇ ಕೊಲೆ ಶಂಕೆ

ರಾಮನಗರ: ಈಜುಕೊಳದಲ್ಲಿ ಮಹಿಳೆಯೊಬ್ಬರು ಶವವಾಗಿ ಪತ್ತೆಯಾಗಿದ್ದು, ಪತಿಯೇ ಪತ್ನಿಯನ್ನು ಕೊಲೆಗೈದಿರುವ ಶಂಕೆ ವ್ಯಕ್ತವಾಗಿದೆ. ರಾಮನಗರದ ಕನಕಪುರ ತಾಲೂಕಿನ ಬೆಟ್ಟೆಗೌಡನಪಾಳ್ಯದಲ್ಲಿ ಈ ಘಟನೆ ನಡೆದಿದೆ. 29 ವರ್ಷದ ಪ್ರತಿಭಾ ಮೃತ ಮಹಿಳೆ. ಪ್ರತಿಭಾ ಹಾಗೂ ಪತಿ ಬಾಬು ಗ್ರಾಮದ ಹೊರವಲಯದಲ್ಲಿರುವ ತೋಟದ ಮನೆಯಲ್ಲಿ ವಾಸವಾಗಿದ್ದರು. ಪತ್ರಿಭಾ ಬಾಬುಗೆ ಎರಡನೇ ಹೆಂಡತಿ. ದಂಪತಿಗೆ ಇಬ್ಬರು ಮಕ್ಕಳಿದ್ದರು. ಪತಿ-ಪತ್ನಿ ನಡುವೆ ಆಗಾಗ ಗಲಾಟೆಯಾಗುತ್ತಿತ್ತು. ಕೌಟುಂಬಿಕ ಕಲಹಕ್ಕೆ ಪತ್ನಿಯನ್ನೇ ಪತಿ ಬಾಬು ಹತ್ಯೆ ಮಡಿದ್ದಾನೆ ಎಂದು ಪ್ರತಿಭಾ ಪೋಷೋಷಕರು ಆರೋಪಿಸಿದ್ದಾರೆ. ಘಟನಾ ಸ್ಥಳಕ್ಕೆ […]

ಕನ್ನಡ ದುನಿಯಾ 25 Jan 2026 12:59 pm

BREAKING: ಬೆಳಗಾವಿಯಲ್ಲಿ ಕೋಟಿ ಕೋಟಿ ದರೋಡೆ ಪ್ರಕರಣ: ಮತ್ತೋರ್ವ ಆರೋಪಿ ಅರೆಸ್ಟ್

ನಾಸಿಕ್: ಕರ್ನಾಟಕದ ಗಡಿ ಜಿಲ್ಲೆ ಬೆಳಗಾವಿಯ ಚೋರ್ಲಾ ಘಾಟ್ ನಲ್ಲಿ ನಡೆದಿರುವ ಕೋಟಿ ಕೋಟಿ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ನಾಸಿಕ್ ಪೊಲೀಸರು ಮತ್ತೋರ್ವ ಆರೋಪಿಯನ್ನು ಬಂಧಿಸಿದ್ದಾರೆ. ಈ ಮೂಲಕ ದರೋಡೆ ಕೇಸ್ ನಲ್ಲಿ ಬಂಧಿತರ ಸಂಖ್ಯೆ 6ಕ್ಕೆ ಏರಿಕೆಯಾಗಿದೆ. ಗೋವಾದಿಂದ ಮಹಾರಾಷ್ಟ್ರಕ್ಕೆ ಹಣ ಸಾಗಿಸುತ್ತಿದ್ದಾಗ ಅಕ್ಟೋಬರ್ 2025ರ ಅಕ್ಟೋಬರ್ 16ರಂದು ಬೆಳಗಾವಿಯ ಚೋರ್ಲಾ ಘಾಟ್ ಬಳಿ 2 ಕಂಟೇನರ್​​ಗಳನ್ನು ಹೈಜಾಕ್​​ ಮಾಡಿ 400 ಕೋಟಿ ರೂ ಹಣವನ್ನು ದರೋಡೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಚೋರ್ಲಾ ಘಾಟ್ […]

ಕನ್ನಡ ದುನಿಯಾ 25 Jan 2026 12:39 pm

BIG NEWS: ಕರ್ನಾಟಕ ಎಂಜಿನಿಯರಿಂಗ್ ಸೀಟ್ ಬ್ಲಾಕಿಂಗ್, ಪಿಎಸ್ಐ ನೇಮಕಾತಿ ಹಗರಣ: ಇಡಿಯಿಂದ 21 ಕೋಟಿ ರೂ.ಆಸ್ತಿ ಜಪ್ತಿ

ಬೆಂಗಳೂರು: ಮಹತ್ವದ ತನಿಖೆಯಲ್ಲಿ ಕರ್ನಾಟಕದ ಎಂಜಿನಿಯರಿಂಗ್ ಸೀಟ್ ಬ್ಲಾಕಿಂಗ್ ಮತ್ತು ಪಿಎಸ್ಐ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ED) ಒಟ್ಟು 21 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿದೆ. ಬೆಂಗಳೂರಿನ ಬಿಎಂಎಸ್ ಎಜುಕೇಶನ್ ಟ್ರಸ್ಟ್‌ಗೆ ಸಂಬಂಧಿಸಿದ ಎಂಜಿನಿಯರಿಂಗ್ ಸೀಟ್ ಬ್ಲಾಕಿಂಗ್ ಹಗರಣಕ್ಕೆ ಸಂಬಂಧಿಸಿದಂತೆ ಇಡಿ ಮಹತ್ವದ ಕ್ರಮ ಕೈಗೊಂಡಿದ್ದು, 19.46 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದೆ. ಅದಲ್ಲದೆ ರಾಜ್ಯದಲ್ಲಿ 2021–22ರಲ್ಲಿ ನಡೆದ 545 ಪಿಎಸ್‌ಐಗಳ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ 1.53 […]

ಕನ್ನಡ ದುನಿಯಾ 25 Jan 2026 12:04 pm

‘ಧುರಂಧರ್’ಖ್ಯಾತಿಯ ಸಾರಾ ಅರ್ಜುನ್ ಈಗ ಟಾಲಿವುಡ್ ನಾಯಕಿ: ಬಹುನಿರೀಕ್ಷಿತ ಚಿತ್ರ ಯಾವುದು?

ಹೈದರಾಬಾದ್: ಖ್ಯಾತ ನಿರ್ದೇಶಕ ಗುಣಶೇಖರ್ ಸಾರಥ್ಯದಲ್ಲಿ ಮೂಡಿಬರುತ್ತಿರುವ ‘ಯುಫೋರಿಯಾ’ (Euphoria) ಚಿತ್ರದ ಮೂಲಕ ಬಾಲನಟಿ ಸಾರಾ ಅರ್ಜುನ್ ಈಗ ಪೂರ್ಣಪ್ರಮಾಣದ ನಾಯಕಿಯಾಗಿ ಟಾಲಿವುಡ್‌ಗೆ ಪದಾರ್ಪಣೆ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ಬಾಲಿವುಡ್‌ನ ‘ಧುರಂಧರ್’ ಚಿತ್ರದಲ್ಲಿ ಮಿಂಚಿದ್ದ ಈ ಪ್ರತಿಭಾವಂತ ನಟಿ, ಈಗ ತೆಲುಗು ಪ್ರೇಕ್ಷಕರನ್ನು ಸೆಳೆಯಲು ಸಜ್ಜಾಗಿದ್ದಾರೆ. ನೀಲಿ ಸೀರೆಯಲ್ಲಿ ಕಂಗೊಳಿಸಿದ ನಟಿ ಚಿತ್ರದ ಪ್ರಚಾರದ ಅಂಗವಾಗಿ ಹೈದರಾಬಾದ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸಾರಾ ಅರ್ಜುನ್ ಉಟ್ಟಿದ್ದ ನೀಲಿ ಬಣ್ಣದ ಆರ್ಗನ್ಜಾ ಸಿಲ್ಕ್ ಸೀರೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. […]

ಕನ್ನಡ ದುನಿಯಾ 25 Jan 2026 12:03 pm

BIG NEWS: ಬೆಳಗಾವಿಯ ಚೋರ್ಲಾ ಘಾಟ್ ನಲ್ಲಿ ದರೋಡೆಯಾಗಿದ್ದು 400 ಕೋಟಿಲ್ಲ 1000 ಕೋಟಿ: ದೂರುದಾರ ಸಂದೀಪ್ ಪಾಟೀಲ್ ಹೇಳಿಕೆ

ಬೆಳಗಾವಿ: ದೇಶದ ಅತಿ ದೊಡ್ಡ ರಾಬರಿ ಪ್ರಕರಣ ಎಂದೇ ಹೇಳಲಾಗುತ್ತಿರುವ ಕರ್ನಾಟಕದ ಗಡಿ ಜಿಲ್ಲೆ ಬೆಳಗಾವಿಯ ಚೋರ್ಲಾ ಘಾಟ್ ನಲ್ಲಿ ನಡೆದ 400 ಕೋಟಿ ರೂ ಹಣವಿದ್ದ 2 ಕಂಟೇನರ್​ಗಳು ನಾಪತ್ತೆ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಬೆಳಗಾವಿಯಲ್ಲಿ ಚೋರ್ಲಾ ಘಾಟ್ ನಲ್ಲಿ ನಡೆದಿದ್ದು 400 ಕೋಟಿಯಲ್ಲ ಬರೋಬ್ಬರಿ 1000 ಕೋಟಿ ದರೋಡೆ ಎಂದು ಹೇಳಲಾಗುತ್ತಿದೆ. ಚೋರ್ಲಾ ಘಾಟ್ ನಲ್ಲಿ ದರೋಡೆಯಾಗಿದ್ದು 1000 ಕೋಟಿ ರೂಪಾಯಿ. ಅದರಲ್ಲಿ ಬ್ಯಾನ್ ಆಗಿದ್ದ 2000 ರೂ ಮುಖ ಬೆಲೆಯ ನೋಟುಗಳು […]

ಕನ್ನಡ ದುನಿಯಾ 25 Jan 2026 11:53 am

ಇಂದು ಭಾರತ –ನ್ಯೂಜಿಲೆಂಡ್ 3ನೇ ಟಿ20 ಸಮರ: ಸರಣಿ ವಶಪಡಿಸಿಕೊಳ್ಳುತ್ತಾ ಭಾರತ?

ಗುವಾಹಟಿ: ಪ್ರವಾಸಿ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಸತತ ಎರಡು ಗೆಲುವುಗಳೊಂದಿಗೆ ಅಬ್ಬರಿಸುತ್ತಿರುವ ಟೀಮ್ ಇಂಡಿಯಾ ಈಗ ಸರಣಿ ಕೈವಶ ಮಾಡಿಕೊಳ್ಳುವ ಗುರಿಯೊಂದಿಗೆ ಅಖಾಡಕ್ಕಿಳಿಯುತ್ತಿದೆ. ರಾಯ್‌ಪುರದಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಭರ್ಜರಿ ಜಯ ದಾಖಲಿಸಿರುವ ಸೂರ್ಯಕುಮಾರ್ ಯಾದವ್ ನೇತೃತ್ವದ ಭಾರತ ತಂಡ ಇಂದು ಗುವಾಹಟಿಯ ಬರ್ಸಾಪಾರ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿರುವ ಮೂರನೇ ಪಂದ್ಯದಲ್ಲಿ ಕಿವೀಸ್ ಪಡೆಯನ್ನು ಎದುರಿಸಲಿದೆ. ಸರಣಿ ಗೆಲುವಿನ ಮೇಲೆ ಕಣ್ಣು ಐದು ಪಂದ್ಯಗಳ ಈ ಸರಣಿಯಲ್ಲಿ ಭಾರತ ಈಗಾಗಲೇ 2-0 ಅಂತರದ ಮುನ್ನಡೆ ಸಾಧಿಸಿದೆ. […]

ಕನ್ನಡ ದುನಿಯಾ 25 Jan 2026 11:06 am

ಮೈದಾನದಲ್ಲಿ ಸ್ಪಿನ್ ಮೋಡಿ, ವೈಯಕ್ತಿಕ ಬದುಕಿನಲ್ಲಿ ಸಂಚಲನ: ಧನಶ್ರೀ ಬಳಿಕ ಆರ್‌ಜೆ ಮಹ್ವಶ್ ಜೊತೆಗೂ ಚಹಲ್ ಬ್ರೇಕಪ್?

ಮುಂಬೈ: ಭಾರತೀಯ ಕ್ರಿಕೆಟ್ ತಂಡದ ಸ್ಟಾರ್ ಸ್ಪಿನ್ನರ್ ಯುಜ್ವೇಂದ್ರ ಚಹಲ್ ಸದ್ಯ ಮೈದಾನದ ಹೊರಗಿನ ವೈಯಕ್ತಿಕ ವಿಚಾರಗಳಿಂದಾಗಿ ಸುದ್ದಿಯಲ್ಲಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಟೀಮ್ ಇಂಡಿಯಾದಿಂದ ಹೊರಗಿರುವ ಚಹಲ್, ಈಗ ಗ್ಲಾಮರ್ ಮತ್ತು ಮನರಂಜನಾ ಲೋಕದ (Showbiz) ಪ್ರಮುಖ ಚರ್ಚಾ ವಿಷಯವಾಗಿದ್ದಾರೆ. ಧನಶ್ರೀ ವರ್ಮಾ ಜೊತೆಗಿನ ವಿವಾಹ ಬಂಧನ ಅಂತ್ಯ ಚಹಲ್ ಮತ್ತು ಖ್ಯಾತ ಕೊರಿಯೋಗ್ರಾಫರ್ ಧನಶ್ರೀ ವರ್ಮಾ 2020ರ ಡಿಸೆಂಬರ್‌ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಈ ಜೋಡಿ ಸಾಕಷ್ಟು ಫೇಮಸ್ ಆಗಿತ್ತು. ಆದರೆ […]

ಕನ್ನಡ ದುನಿಯಾ 25 Jan 2026 11:00 am

ಕೇಂದ್ರದ ಸಲಹೆಯಂತೆ ನ್ಯಾಯಮೂರ್ತಿ ವರ್ಗಾವಣೆ: ಕೊಲಿಜಿಯಂ ವಿರುದ್ಧ ಸಿಡಿದೆದ್ದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ

ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಉಜ್ಜಲ್ ಭೂಯಾನ್ PC: x.com/thewire_in ಹೊಸದಿಲ್ಲಿ: ನ್ಯಾಯಾಂಗ ಸ್ವಾತಂತ್ರ್ಯಕ್ಕೆ ಅಪಾಯ ಹೊರಗಿನಿಂದಲ್ಲ, “ಆಂತರಿಕ ವ್ಯವಸ್ಥೆ”ಯಿಂದಲೇ ಇದೆ ಎಂದು ಹೇಳಿರುವ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಉಜ್ಜಲ್ ಭೂಯಾನ್, ಕೇಂದ್ರ ಸರ್ಕಾರದ ಸಲಹೆಯಂತೆ ಮಧ್ಯಪ್ರದೇಶ ಹೈಕೋರ್ಟ್ ನ್ಯಾಯಮೂರ್ತಿ ಅತುಲ್ ಶ್ರೀಧರನ್ ಅವರನ್ನು ಅಲಹಾಬಾದ್ ಹೈಕೋರ್ಟ್‌ಗೆ ವರ್ಗಾಯಿಸಿರುವ ಕ್ರಮವನ್ನು ಬಹಿರಂಗವಾಗಿ ಟೀಕಿಸಿದ್ದಾರೆ. ಕೊಲಿಜಿಯಂ ವ್ಯವಸ್ಥೆಯ ಮೇಲೆ ಇದು “ಕಾರ್ಯಾಂಗದ ಒತ್ತಡಕ್ಕೆ ಬಹಿರಂಗ ನಿದರ್ಶನ”ವಾಗಿದ್ದು, “ದುರದೃಷ್ಟಕರ ಬೆಳವಣಿಗೆ” ಎಂದು ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನ್ಯಾಯಮೂರ್ತಿ ಶ್ರೀಧರನ್ ಅವರ ಹೆಸರನ್ನು ನೇರವಾಗಿ ಉಲ್ಲೇಖಿಸದೆ, ಸರ್ಕಾರಕ್ಕೆ ಅನಾನುಕೂಲವೆನಿಸುವ ಆದೇಶ ನೀಡಿದ ಕಾರಣಕ್ಕೆ ಒಬ್ಬ ನ್ಯಾಯಮೂರ್ತಿಯನ್ನು ಒಂದು ಹೈಕೋರ್ಟ್‌ನಿಂದ ಮತ್ತೊಂದು ಹೈಕೋರ್ಟ್‌ಗೆ ವರ್ಗಾಯಿಸುವ ಅಗತ್ಯವೇನಿದೆ ಎಂದು ನ್ಯಾಯಮೂರ್ತಿ ಭೂಯಾನ್ ಪ್ರಶ್ನಿಸಿದ್ದಾರೆ. ನ್ಯಾಯಮೂರ್ತಿ ಶ್ರೀಧರನ್ ಅವರನ್ನು ಮಧ್ಯಪ್ರದೇಶ ಹೈಕೋರ್ಟ್‌ನಿಂದ ಛತ್ತೀಸ್‌ಗಢ ಹೈಕೋರ್ಟ್‌ಗೆ ವರ್ಗಾಯಿಸಲು ಸುಪ್ರೀಂ ಕೋರ್ಟ್ ಕೊಲಿಜಿಯಂ ಕಳೆದ ಆಗಸ್ಟ್‌ನಲ್ಲಿ ಶಿಫಾರಸು ಮಾಡಿತ್ತು. ಆದರೆ ಕೇಂದ್ರ ಸರ್ಕಾರದ ಮನವಿಯ ಮೇರೆಗೆ ಕೊಲಿಜಿಯಂ ತನ್ನ ನಿರ್ಧಾರವನ್ನು ಬದಲಿಸಿ, ಅವರನ್ನು ಅಕ್ಟೋಬರ್‌ನಲ್ಲಿ ಅಲಹಾಬಾದ್ ಹೈಕೋರ್ಟ್‌ಗೆ ವರ್ಗಾಯಿಸಿತು. ನ್ಯಾಯಮೂರ್ತಿ ಶ್ರೀಧರನ್ ನೇತೃತ್ವದ ಮಧ್ಯಪ್ರದೇಶ ಹೈಕೋರ್ಟ್ ಪೀಠವು ಅಲ್ಲಿನ ಸರ್ಕಾರಕ್ಕೆ ಅನಾನುಕೂಲವಾಗುವ ಆದೇಶ ನೀಡಿದ್ದ ಹಿನ್ನೆಲೆಯಲ್ಲಿ, ದಂಡನಾತ್ಮಕ ಕ್ರಮವಾಗಿ ಅವರನ್ನು ವರ್ಗಾಯಿಸಲಾಗಿದೆ ಎಂದು ಹಲವಾರು ಕಾನೂನು ತಜ್ಞರು ಅಭಿಪ್ರಾಯಪಟ್ಟಿದ್ದರು. ಕರ್ನಲ್ ಸೋಫಿಯಾ ಖುರೇಷಿ ವಿರುದ್ಧ ಕೀಳುಹಾಸ್ಯದ ಭಾಷೆ ಬಳಸಿದ ಆರೋಪದ ಸಂಬಂಧ ಬಿಜೆಪಿ ಸಚಿವ ವಿಜಯ್ ಶಾ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡ ಕಾರಣಕ್ಕೆ ಈ ಕ್ರಮ ಕೈಗೊಳ್ಳಲಾಗಿದೆ ಎಂಬ ಆರೋಪವೂ ಕೇಳಿಬಂದಿತ್ತು. “ನಿರ್ದಿಷ್ಟ ಹೈಕೋರ್ಟ್ ನ್ಯಾಯಮೂರ್ತಿಗಳನ್ನು ಮತ್ತೊಂದು ಹೈಕೋರ್ಟ್‌ಗೆ ವರ್ಗಾಯಿಸುವ ಸಂಬಂಧ ತಾನೇ ನೀಡಿದ್ದ ಶಿಫಾರಸ್ಸನ್ನು, ಕೇಂದ್ರ ಸರ್ಕಾರದ ಕೋರಿಕೆಯ ಮೇರೆಗೆ ಸುಪ್ರೀಂ ಕೋರ್ಟ್ ಕೊಲಿಜಿಯಂ ಬದಲಾಯಿಸಿರುವುದು, ಕೊಲಿಜಿಯಂ ವ್ಯವಸ್ಥೆಯ ಸಮಗ್ರತೆಯ ವಿಷಯದಲ್ಲಿ ಮಾಡಿಕೊಂಡ ರಾಜಿಯಲ್ಲವೇ?” ಎಂದು ನ್ಯಾಯಮೂರ್ತಿ ಭೂಯಾನ್ ಕಟುವಾಗಿ ಪ್ರಶ್ನಿಸಿದ್ದಾರೆ.

ವಾರ್ತಾ ಭಾರತಿ 25 Jan 2026 11:00 am

BIG NEWS: ಎಷ್ಟು ದಿನ ತಪ್ಪಿಸಿಕೊಳ್ಳಲು ಸಾಧ್ಯ? ರಾಜೀವ್ ಗೌಡನನ್ನು ಮುಲಾಜಿಲ್ಲದೇ ಬಂಧಿಸುತ್ತೇವೆ: ಗೃಹ ಸಚಿವ ಪರಮೇಶ್ವರ್

ಬೆಂಗಳೂರು: ನಗರಸಭೆ ಪೌರಾಯುಕ್ತೆಗೆ ನಿಂದನೆ ಹಾಗೂ ಜೀವ ಬೆದರಿಕೆ ಹಾಕಿದ್ದ ರಾಜೀವ್ ಗೌಡ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ. ಮೊದಲ ದಿನವೇ ಅವರನ್ನು ಬಂಧಿಸಲು ಆದೇಶ ನೀಡಿದ್ದೆ. ಬಂಧಿಸುವಷ್ಟರಲ್ಲಿ ತಪ್ಪಿಸಿಕೊಂಡು ಹೋಗಿದ್ದಾರೆ ಎಂದು ತಿಳಿಸಿದರು. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾಅತನಾಡಿದ ಗೃಹ ಸಚಿವ ಪರಮೇಶ್ವರ್, ರಾಜೀವ್ ಗೌಡ ಎಷ್ಟು ದಿನ ಅಂತಾ ತಪ್ಪಿಸಿಕೊಳ್ಳಲು ಸಾಧ್ಯ? ಅವರನ್ನು ಮುಲಾಜಿಲ್ಲದೇ ಬಂಧಿಸುತ್ತೇವೆ ಎಂದು ಹೇಳಿದರು. ರಾಜೀವ್ ಗೌಡರನ್ನು ಖಂಡಿತವಗಿ ಬಂಧಿಸುತ್ತೇವೆ. ಯಾರ ಒತ್ತಡಕ್ಕೂ ಮಣಿಯುವ ಪ್ರಶ್ನೆ ಇಲ್ಲ […]

ಕನ್ನಡ ದುನಿಯಾ 25 Jan 2026 10:58 am

ಟಿ-20 ವಿಶ್ವಕಪ್: ಭಾರತ-ಪಾಕ್ ಪಂದ್ಯದ ನಿರೀಕ್ಷೆಯಲ್ಲಿದ್ದವರಿಗೆ ನಿರಾಸೆ!

ಭಾರತದಲ್ಲಿ ಆಡುವುದಿಲ್ಲ ಎಂದು ಹಠ ಹಿಡಿದು ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆಯೋಜಿಸಿರುವ ಐಸಿಸಿ ಟಿ-20 ವಿಶ್ವಕಪ್ 2026ರಿಂದ ಬಾಂಗ್ಲಾದೇಶ ಹೊರ ಹೋಗಿದೆ. ಟೂರ್ನಿಯಲ್ಲಿ ಒಟ್ಟು 20 ತಂಡಗಳು ಕಣಕ್ಕಿಳಿಯಲಿವೆ. ಈಗ ಪಾಕಿಸ್ತಾನದ ನಿಲುವು ಏನು? ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಐಸಿಸಿ ಈಗಾಗಲೇ ಬಾಂಗ್ಲಾದೇಶ ತಂಡವನ್ನು ಟೂರ್ನಿಯಿಂದ ಹೊರ ಹಾಕಿದ್ದು, ಅವರ ಬದಲಿಗೆ ಸ್ಕಾಟ್ಲೆಂಡ್ ತಂಡಕ್ಕೆ ಅವಕಾಶ ನೀಡಲಾಗಿದೆ. ವರದಿಗಳ ಪ್ರಕಾರ ಈಗ ಪಾಕಿಸ್ತಾನ ತಂಡ ಕೂಡ ಟೂರ್ನಿಯಿಂದ ಹೊರ ನಡೆಯುವ ಬೆದರಿಕೆಯೊಡ್ಡಿದೆ. ಐಸಿಸಿ ಟಿ-20 ವಿಶ್ವಕಪ್ […]

ಕನ್ನಡ ದುನಿಯಾ 25 Jan 2026 10:54 am

BREAKING: ಬಾಂಗ್ಲಾದಲ್ಲಿ ಮತ್ತೊಬ್ಬ ಹಿಂದೂ ವ್ಯಕ್ತಿಯ ಸಜೀವ ದಹನ: ಪೂರ್ವಯೋಜಿತ ಕೊಲೆ ಎಂದು ಕುಟುಂಬ ಆರೋಪ

ಬಾಂಗ್ಲಾದೇಶದಲ್ಲಿ ಮತ್ತೊಬ್ಬ ಹಿಂದೂ ವ್ಯಕ್ತಿಯನ್ನು ಜೀವಂತವಾಗಿ ಸುಟ್ಟು ಹಾಕಲಾಗಿದೆ. ಕುಟುಂಬವು ಇದನ್ನು ಯೋಜಿತ ಕೊಲೆ ಎಂದು ಆರೋಪಿಸಿದೆ. ಬಾಂಗ್ಲಾದೇಶದ ನರಸಿಂಗ್ಡಿ ಜಿಲ್ಲೆಯಲ್ಲಿ 23 ವರ್ಷದ ಹಿಂದೂ ವ್ಯಕ್ತಿಯನ್ನು ಗ್ಯಾರೇಜ್‌ನೊಳಗೆ ಸುಟ್ಟುಹಾಕಲಾಗಿದೆ. ಇದು ಪೂರ್ವನಿಯೋಜಿತ ಹತ್ಯೆಯ ಆರೋಪಗಳನ್ನು ಮತ್ತು ದೇಶದಲ್ಲಿ ಅಲ್ಪಸಂಖ್ಯಾತರ ಸುರಕ್ಷತೆಯ ಬಗ್ಗೆ ಹೊಸ ಆತಂಕ ಕಳವಳಗಳನ್ನು ಹುಟ್ಟುಹಾಕಿದೆ. ಚಂಚಲ್ ಚಂದ್ರ ಭೌಮಿಕ್ ಎಂದು ಗುರುತಿಸಲ್ಪಟ್ಟ ವ್ಯಕ್ತಿ ಹಲವಾರು ವರ್ಷಗಳಿಂದ ಗ್ಯಾರೇಜ್‌ನಲ್ಲಿ ಕೆಲಸ ಮಾಡುತ್ತಿದ್ದರು. ಅವರು ಮೂಲತಃ ಕುಮಿಲ್ಲಾ ಜಿಲ್ಲೆಯ ಲಕ್ಷ್ಮಿಪುರ ಗ್ರಾಮದವರು ಮತ್ತು ಕೆಲಸಕ್ಕಾಗಿ ನರಸಿಂಗ್ಡಿಯಲ್ಲಿ […]

ಕನ್ನಡ ದುನಿಯಾ 25 Jan 2026 10:53 am

Weather Report: ರಾಜ್ಯದಲ್ಲಿ ಮತ್ತೆ ಶುರುವಾಯ್ತು ಮೈಕೊರೆವ ಚಳಿ: ಬೆಂಗಳೂರಿನಲ್ಲಿ ತುಂತುರು ಮಳೆ

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು ಸೇರಿದ ವಿವಿಧ ಜಿಲ್ಲೆಗಳಲ್ಲಿ ಮತ್ತೆ ಮೈ ಕೊರೆವ ಚಳಿ ಆರಂಭವಾಗಿದೆ. ಕಳೆದ ಎರಡು ದಿನಗಳಿಂದ ಬಿರುಗಾಳಿ, ಜೊತೆಗೆ ಚಳಿ ಪ್ರಮಾಣ ಹೆಚ್ಚಾಗುತ್ತಿದೆ. ರಾಜ್ಯದಲ್ಲಿ ಕೆಲ ದಿನಗಳಿಂದ ಒಣ ಹವೆ ವಾತಾವರಣವಿತ್ತು. ಇದೀಗ ಮತ್ತೆ ಕೆಲ ಜಿಲ್ಲೆಗಳಲ್ಲಿ ಮೋಡಕವಿದ ವಾತಾವರಣ ಆರಂಭವಾಗಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಎರಡು ದಿನಗಳಿಂದ ಮೈಕೊರೆವ ಚಳಿ ಪ್ರಮಾಣ ಹೆಚ್ಚಿದ್ದು, ದಟ್ಟವದ ಮೋಡ ಕವಿದ ವಾತಾವರಣ, ಅಲ್ಲಲ್ಲಿ ಮಳೆಯಾಗುತ್ತಿದೆ. ಬೆಂಗಳೂರಿನ ಹಲವೆಡೆ ನಿನ್ನೆ ರಾತ್ರಿ, ಇಂದು ಬೆಳಿಗ್ಗೆ ತುಂತುರು […]

ಕನ್ನಡ ದುನಿಯಾ 25 Jan 2026 10:45 am

2026ರಲ್ಲಿ ಜಗತ್ತಿಗೆ ಆರ್ಥಿಕ ಗಂಡಾಂತರ? ಚಿನ್ನದ ಮೇಲೆ ಹಣ ಹೂಡುವವರಿಗೆ ಬಾಬಾ ವಂಗಾ ಶಾಕಿಂಗ್ ಎಚ್ಚರಿಕೆ

ಭಾರತದಲ್ಲಿ ಚಿನ್ನದ ಬೆಲೆ ಈಗಾಗಲೇ ಪ್ರತಿ 10 ಗ್ರಾಂಗೆ ಸರಿಸುಮಾರು 1.59 ಲಕ್ಷ ರೂಪಾಯಿ ಆಸುಪಾಸಿನಲ್ಲಿದೆ. ಬೆಲೆ ಏರಿಕೆಯ ಈ ಅನಿಶ್ಚಿತತೆಯ ನಡುವೆಯೇ, ಬಲ್ಗೇರಿಯಾದ ಅತೀಂದ್ರಿಯ ಶಕ್ತಿ ಹೊಂದಿದ್ದ ಬಾಬಾ ವಂಗಾ ಅವರ 2026ರ ಭವಿಷ್ಯವಾಣಿಯೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಈ ಭವಿಷ್ಯವಾಣಿಯ ಪ್ರಕಾರ, 2026ರಲ್ಲಿ ಜಗತ್ತು ಭೀಕರ ಆರ್ಥಿಕ ಬಿಕ್ಕಟ್ಟನ್ನು ಎದುರಿಸಲಿದ್ದು, ಇದು ಚಿನ್ನದ ಬೆಲೆಯನ್ನು ಆಕಾಶಕ್ಕೆ ಏರಿಸಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಬಾಬಾ ವಂಗಾ ಹೇಳಿದ್ದೇನು? ವೈರಲ್ ಆಗಿರುವ ಪೋಸ್ಟ್‌ಗಳ […]

ಕನ್ನಡ ದುನಿಯಾ 25 Jan 2026 10:32 am

ಗಂಡು ಮಗುವಿಗೆ ಜನ್ಮ ನೀಡಿದ ಪ್ರೌಢಶಾಲೆ ವಿದ್ಯಾರ್ಥಿನಿ: ಶಿಕ್ಷಕರ ವಿರುದ್ಧ ಶಿಸ್ತುಕ್ರಮಕ್ಕೆ ಶಿಫಾರಸು

ಬೆಂಗಳೂರು: ಸರ್ಕಾರಿ ಪ್ರೌಢಶಾಲೆಯೊಂದರ 16 ವರ್ಷದ ಬಾಲಕಿ ಗಂಡು ಮಗುವಿಗೆ ಜನ್ಮ ನೀಡಿದ್ದು, ಪ್ರಕರಣದ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ ಮುಖ್ಯ ಶಿಕ್ಷಕ ಮತ್ತು ಶಿಕ್ಷಕರ ವಿರುದ್ಧ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಲಾಗಿದೆ. ಹೊಟ್ಟೆ ನೋವು ಕಾಣಿಸಿಕೊಂಡ ನಂತರ ಬಾಲಕಿಯನ್ನು ವೈದ್ಯರು ಪರೀಕ್ಷಿಸಿದ್ದಾರೆ. ಈ ವೇಳೆ ಆಕೆ ಗರ್ಭಿಣಿಯಾಗಿರುವುದು ದೃಢಪಟ್ಟಿದೆ. ನಂತರ ಬಾಲಕಿಯ ತಾಯಿ ಪೊಲೀಸರಿಗೆ ದೂರು ನೀಡಿದ್ದು, ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಬಾಲಕಿ ಮನೆ ಸಮೀಪವಿರುವ 19 ವರ್ಷದ ಖಾಸಗಿ ಕಂಪನಿ ಉದ್ಯೋಗಿಯನ್ನು […]

ಕನ್ನಡ ದುನಿಯಾ 25 Jan 2026 10:11 am

BIG NEWS: ಭೀಕರ ಅಪಘಾತ: ದಂಪತಿ ಸ್ಥಳದಲ್ಲೇ ದುರ್ಮರಣ; 1 ವರ್ಷದ ಮಗು ಬಚಾವ್

ಬೆಳಗಾವಿ: ನಿಂತಿದ್ದ ಕಂಟೆನರ್ ಲಾರಿಗೆ ಕಾರು ಡಿಕ್ಕಿ ಹೊಡೆದು ಸಂಭವಿಸಿದ ಭೀಕರ ಅಪಘಾತದಲ್ಲಿ ದಂಪತಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಒಂದು ವರ್ಷದ ಮಗು ಬಚಾಅವ್ ಆಗಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಕೊಗನೊಳ್ಳಿ ಗ್ರಾಮದಲ್ಲಿ ಈ ದುರಂತ ಸಂಭವಿಸಿದೆ. ಅಪಘಾತದಲ್ಲಿ ಮಹಾರಾಷ್ಟ್ರದ ಕೊಲ್ಲಾಪುರದ ಸಂಭಾಜಿ ನಗರದ ಜಿಗರ ಕಿಶೋರ ನಾಕ್ರಾನಿ ಹಾಗೂ ಪತ್ನಿ ಹೇತಿಕಾ (24) ಮೃತಪಟ್ಟಿದ್ದಾರೆ. ಒಂದು ವರ್ಷದ ಮಗಳು ವೃಷ್ಟಿ ಬದುಕುಳಿದಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಹುಬ್ಬಳ್ಳಿಯಿಂದ ಕೊಲ್ಹಾಪುರಕ್ಕೆ ಹೋಗುತ್ತಿದ್ದಾಗ ಈ ಅಪಘಾತ […]

ಕನ್ನಡ ದುನಿಯಾ 25 Jan 2026 9:50 am

ಹೆತ್ತ ಮಗುವನ್ನೇ ಮಾರಾಟ ಮಾಡಿದ ತಂದೆ, ತಾಯಿ ಸೇರಿ ಐವರು ಅರೆಸ್ಟ್

ಚಾಮರಾಜನಗರ: ಹೆತ್ತ ಮಗುವನ್ನೇ ಮಧ್ಯವರ್ತಿಗಳ ಮೂಲಕ ಮಾರಾಟ ಮಾಡಿದ್ದ ತಂದೆ, ತಾಯಿ ಸೇರಿ ಐವರು ಆರೋಪಿಗಳನ್ನು ಬಂಧಿಸಲಾಗಿದೆ. ಹೆಣ್ಣು ಮಗು ಎಂಬ ಕಾರಣಕ್ಕೆ ತಂದೆ, ತಾಯಿ ಮಧ್ಯವರ್ತಿಗಳ ಮೂಲಕ ಮಗು ಮಾರಾಟ ಮಾಡಿದ್ದ ಪ್ರಕರಣ ತಡವಾಗಿ ಬಳಕೆಗೆ ಬಂದಿದ್ದು, ಚಾಮರಾಜನಗರ ಠಾಣೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಕಳೆದ ಜುಲೈನಲ್ಲಿ ಮಾರಾಟವಾಗಿದ್ದ ಹೆಣ್ಣು ಮಗುವನ್ನು ಪತ್ತೆ ಮಾಡಿ ಆರೈಕೆ ಕೇಂದ್ರಕ್ಕೆ ಒಪ್ಪಿಸಲಾಗಿದೆ. ಚಾಮರಾಜನಗರದ ರಾಮಸಮುದ್ರ ಬಡಾವಣೆಯ ಮಂಜುನಾಯಕ್, ಸಿಂಧೂ, ಮೈಸೂರಿನ ಚೆಲುವಾಂಬ ಆಸ್ಪತ್ರೆಯ […]

ಕನ್ನಡ ದುನಿಯಾ 25 Jan 2026 9:46 am

BREAKING: ದ್ವೇಷ ಭಾಷಣ ಕಾಯ್ದೆ ಜಾರಿಗೂ ಮುನ್ನವೇ ಪೊಲೀಸರಿಂದ ಬಿಜೆಪಿ ಮುಖಂಡನಿಗೆ ನೋಟಿಸ್: ವಿವಾದ ಸೃಷ್ಟಿಸಿದ ತರಿಕೆರೆ ಪೊಲೀಸರ ಕ್ರಮ

ಚಿಕ್ಕಮಗಳೂರು: ರಾಜ್ಯದಲ್ಲಿ ದ್ವೇಷ ಬಹಷಣ ಕಾಯ್ದೆ ಇನ್ನೂ ಜಾರಿಗೆ ಬಂದಿಲ್ಲ. ಆದರೂ ಚಿಕ್ಕಮಗಳೂರು ಪೊಲೀಸರು ಬಿಜೆಪಿ ಮುಖಂಡರೊಬ್ಬರೊಗೆ ನೋಟಿಸ್ ಜಾರಿ ಮಾಡಿರುವುದು ತೀವ್ರ ವಿವಾದಕ್ಕೆ ಕಾರಣವಾಗಿದೆ. ಬಿಜೆಪಿ ಮುಖಂಡ ವಿಕಾಸ್ ಪುತ್ತೂರು ಅವರಿಗೆ ಚಿಕ್ಕಮಗಳೂರು ಜಿಲ್ಲೆಯ ತರಿಕೆರೆ ಪೊಲೀಸರು ದ್ವೇಷ ಭಾಷಣ ಕಾಯ್ದೆ ಉಲ್ಲಂಘಿಸದಂತೆ ಭಾಷಣ ಮಾಡಿ ಎಂದು ನೋಟಿಸ್ ನೀಡಿದ್ದಾರೆ. ಈ ನೋಟಿಸ್ ರಾಜ್ಯ ಬಿಜೆಪಿ ನಾಯಕರ ಕೆಂಗಣ್ಣಿಗೆ ಗುರಿಯಾಗಿದೆ. ದ್ವೇಷ ಭಾಷಣ ಕಾಯ್ದೆ ಜಾರಿಗೂ ಮುನ್ನವೇ ಪೊಲೀಸರು ಇಂತಹ ನೋಟಿಸ್ ನೀಡಿರುವುದನ್ನು ಬಿಜೆಪಿ ಪ್ರಶ್ನಿಸಿದೆ? […]

ಕನ್ನಡ ದುನಿಯಾ 25 Jan 2026 9:34 am

BIG NEWS: ಎಲ್ಲಾ ಸಿಬಿಎಸ್‌ಇ ಶಾಲೆಗಳಲ್ಲಿ ಮಾನಸಿಕ ಆರೋಗ್ಯ ಸಮಾಲೋಚಕರು, ವೃತ್ತಿ ಮಾರ್ಗದರ್ಶಕರ ನೇಮಕಾತಿ ಕಡ್ಡಾಯ

ನವದೆಹಲಿ: ಸಿಬಿಎಸ್ಇ ಮಾನ್ಯತೆ ಹೊಂದಿರುವ ಎಲ್ಲಾ ಶಾಲೆಗಳಲ್ಲಿ ಮಾನಸಿಕ ಆರೋಗ್ಯ ಸಮಾಲೋಚಕರು, ವೃತ್ತಿ ಮಾರ್ಗದರ್ಶಕರ ನೇಮಕಾತಿ ಕಡ್ಡಾಯಗೊಳಿಸಿ ಸುತ್ತೋಲೆ ಹೊರಡಿಸಲಾಗಿದೆ. ವಿದ್ಯಾರ್ಥಿಗಳ ಮಾನಸಿಕ ಆರೋಗ್ಯ ಬಲಪಡಿಸಲು, ಅವರಿಗೆ ವೃತ್ತಿ ಮಾರ್ಗದರ್ಶನ ಒದಗಿಸಲು ಸಿಬಿಎಸ್ಇ ನೀತಿ ಸುಧಾರಣೆಯಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ. ಕಳೆದ ವರ್ಷದ ಜುಲೈನಲ್ಲಿ ರಾಜಸ್ಥಾನದ ಕೋಟಾ ಮೂಲದ ವಕೀಲ ಸುಜಿತ್ ಸ್ವಾಮಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮಾರ್ಗದರ್ಶಕರ ನೇಮಕ ಕೋರಿ ರಾಜಸ್ಥಾನ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಸಿಬಿಎಸ್ಇ ಕೆಲವು ನಿಯಮಗಳಿಗೆ […]

ಕನ್ನಡ ದುನಿಯಾ 25 Jan 2026 8:47 am

ನಾಯಿ ಹುಡುಕಲು ಹೋದ ಬಾಲಕ ರೈಲಿಗೆ ಸಿಲುಕಿ ಸಾವು

ಬೆಂಗಳೂರು: ನಾಯಿ ಹುಡುಕಲು ಹೋದ ಬಾಲಕ ರೈಲಿಗೆ ಸಿಲುಕಿ ಮೃತಪಟ್ಟ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ತ್ಯಾಮಗೊಂಡ್ಲು ಹೋಬಳಿಯ ಮುದ್ದಲಿಂಗನಹಳ್ಳಿ ರೈಲ್ವೆ ಗೇಟ್ ಬಳಿ ನಡೆದಿದೆ. ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ದಾಸೇಹಳ್ಳಿಯ ಶ್ರೀನಿವಾಸ್, ಚೆನ್ನಮ್ಮ ದಂಪತಿಯ ಪುತ್ರ ಯೋಗೇಂದ್ರ(14) ಮೃತಪಟ್ಟ ಬಾಲಕ. ಮುದ್ದಲಿಂಗನಹಳ್ಳಿ ಗ್ರಾಮದಲ್ಲಿ ಕುಟುಂಬದವರು ವಾಸವಾಗಿದ್ದು, ಬಾಲಕ ಎಂಟನೇ ತರಗತಿ ಓದುತ್ತಿದ್ದ. ನಾಲ್ಕು ದಿನಗಳ ಹಿಂದೆ ಯೋಗೇಂದ್ರ ಸಾಕಿದ ನಾಯಿ ನಾಪತ್ತೆಯಾಗಿತ್ತು. ಎಷ್ಟೇ ಹುಡುಕಾಡಿದರೂ ಸಿಕ್ಕಿರಲಿಲ್ಲ. ಇದೇ ಚಿಂತೆಯಲ್ಲಿದ್ದ ಯೋಗೇಂದ್ರ ನಾಯಿ ಹುಡುಕಲು ಹೋಗಿದ್ದಾನೆ. […]

ಕನ್ನಡ ದುನಿಯಾ 25 Jan 2026 8:17 am

ಬೆಳಗಾವಿಯಲ್ಲಿ 400 ಕೋಟಿ ರೂ. ಇದ್ದ 2 ಲಾರಿ ನಾಪತ್ತೆ: ಬೆಚ್ಚಿಬೀಳಿಸುವ ದೇಶದ ಅತಿ ದೊಡ್ಡ ದರೋಡೆ ಪ್ರಕರಣ ತಡವಾಗಿ ಬೆಳಕಿಗೆ

ಬೆಳಗಾವಿ: ಗೋವಾದಿಂದ ಮಹಾರಾಷ್ಟ್ರಕ್ಕೆ 400 ಕೋಟಿ ರೂಪಾಯಿ ನಗದು ಸಾಗಿಸುತ್ತಿದ್ದ ಎರಡು ಕಂಟೇನರ್ ಗಳನ್ನು ಹೈಜಾಕ್ ಮಾಡಿರುವ ದೇಶದ ಅತಿ ದೊಡ್ಡ ದರೋಡೆ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ದೇಶದ ಇತಿಹಾಸದಲ್ಲಿ ಬೆಚ್ಚಿಬೀಳಿಸುವ ಅತಿ ದೊಡ್ಡ ದರೋಡೆ ಪ್ರಕರಣ ಇದಾಗಿದೆ ಎಂದು ಹೇಳಲಾಗಿದೆ. ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳ ಪೊಲೀಸ್ ಸಿಬ್ಬಂದಿ ತನಿಖೆ ಕೈಗೊಂಡಿದ್ದಾರೆ. ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಚೋರ್ಲಾ ಘಾಟ್ ಪ್ರದೇಶದಲ್ಲಿ 400 ಕೋಟಿ ರೂ. ನಗದು ತುಂಬಿದ್ದ ಎರಡು ಕಂಟೇನರ್ ನಾಪತ್ತೆಯಾಗಿದ್ದು, […]

ಕನ್ನಡ ದುನಿಯಾ 25 Jan 2026 8:05 am

ಪಿಎಸ್ಐ ನೇಮಕಾತಿ ಹಗರಣದಲ್ಲಿ ಎಡಿಜಿಪಿ ಅಮೃತ್ ಪಾಲ್ ಆಸ್ತಿ ಜಪ್ತಿ

ಬೆಂಗಳೂರು: ಪಿಎಸ್ಐ ನೇಮಕಾತಿ ಹಗರಣ ಸಂಬಂಧ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಆರೋಪಿಗಳಾದ ಎಡಿಜೆಪಿ ಅಮೃತ್ ಪಾಲ್ ಮತ್ತು ಹೆಡ್ ಕಾನ್ಸ್ಟೇಬಲ್ ಎಚ್. ಶ್ರೀಧರ್ ಗೆ ಸೇರಿದ 1.53 ಕೋಟಿ ರೂಪಾಯಿ ಮೌಲ್ಯದ ಸ್ಥಿರಾಸ್ತಿಗಳನ್ನು ಜಾರಿ ನಿರ್ದೇಶನಾಲಯ(ಇ.ಡಿ.) ಮುಟ್ಟುಗೋಲು ಹಾಕಿಕೊಂಡಿದೆ. ರಾಜ್ಯ ಪೊಲೀಸ್ ಇಲಾಖೆಯಲ್ಲಿ 545 ಪಿಎಸ್ಐಗಳ ನೇಮಕಾತಿ ಸಂಬಂಧ 2020-21 ಸಾಲಿನಲ್ಲಿ ಪೊಲೀಸ್ ನೇಮಕಾತಿ ವಿಭಾಗದಿಂದ ಪರೀಕ್ಷೆ ನಡೆಸಿ ಅರ್ಹ ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಲಾಗಿತ್ತು. ಫಲಿತಾಂಶದ ನಂತರ ಪರೀಕ್ಷೆಯಲ್ಲಿ ವಂಚನೆ, ಭ್ರಷ್ಟಾಚಾರ […]

ಕನ್ನಡ ದುನಿಯಾ 25 Jan 2026 7:42 am

BREAKING: ಇಂದು ಬೆಳಗ್ಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಸುದ್ದಿಗೋಷ್ಠಿ: ಹೆಚ್ಚಿದ ಕುತೂಹಲ

ಬೆಂಗಳೂರು: ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇಂದು ಬೆಳಗ್ಗೆ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಶಿವಾನಂದ ಸರ್ಕಲ್ ಬಳಿಯ ಸರ್ಕಾರಿ ನಿವಾಸದಲ್ಲಿ ಅವರು ಇಂದು ಬೆಳಗ್ಗೆ 10:30ಕ್ಕೆ ಸುದ್ದಿಗೋಷ್ಠಿ ನಡೆಸಲಿದ್ದಾರೆ. ದಾವೋಸ್ ಭೇಟಿ, ಮನರೇಗಾ ಹೋರಾಟ, ಸದನದಲ್ಲಿ ಆದ ಘಟನೆ, ರಾಜ್ಯಪಾಲರ ನಡೆ, ಸ್ಥಳೀಯ ಸಂಸ್ಥೆಗಳ ಚುನಾವಣೆ, ಸದ್ಯದ ರಾಜಕೀಯ ವಿಷಯ ಬಗ್ಗೆ ಸುದ್ದಿಗೋಷ್ಠಿ ನಡೆಸುವ ಸಾಧ್ಯತೆ ಇದೆ. ನಾಯಕತ್ವದ ಬದಲಾವಣೆ ವಿಚಾರವಾಗಿ ಹೇಳಿಕೆಗಳು, ಗೊಂದಲಕ್ಕೆ ತೆರೆ ಎಳೆಯುವ ಸಾಧ್ಯತೆ ಇದೆ.

ಕನ್ನಡ ದುನಿಯಾ 25 Jan 2026 7:08 am

ವಸತಿ ಶಾಲೆ ಮಕ್ಕಳಿಗೆ ಶಾಕ್: ಐದೇ ದಿನದಲ್ಲಿ ಜಾತಿ ಪ್ರಮಾಣ ಪತ್ರ ಸಲ್ಲಿಕೆಗೆ ಸೂಚನೆ

ಬೆಂಗಳೂರು: ಕಿತ್ತೂರು ರಾಣಿ ಚೆನ್ನಮ್ಮ, ಮೊರಾರ್ಜಿ ದೇಸಾಯಿ ಸೇರಿದಂತೆ ವಸತಿ ಶಿಕ್ಷಣ ಸಂಸ್ಥೆಗಳ ಆರನೇ ತರಗತಿ ಪ್ರವೇಶಾತಿಗೆ ಅರ್ಜಿ ಸಲ್ಲಿಸುತ್ತಿರುವ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳು ಹೊಸ ಜಾತಿ ಪ್ರಮಾಣ ಪತ್ರ ಪಡೆಯುವ ಸಂಕಷ್ಟಕ್ಕೆ ಸಿಲುಕಿದ್ದಾರೆ. ಒಳ ಮೀಸಲಾತಿ ವರ್ಗೀಕರಣದ ಆದೇಶದ ಬೆನ್ನಲ್ಲೇ ಹೊಸ ವರ್ಗೀಕರಣದ ಅನ್ವಯ ಹೊಸ ಜಾತಿ ಪ್ರಮಾಣ ಪತ್ರ ಪಡೆಯಬೇಕೆಂದು ಸೂಚಿಸಲಾಗಿದೆ. ಜನವರಿ 20ರಂದು ಈ ಸೂಚನೆ ಪ್ರಕಟವಾಗಿದ್ದು, ಕೇವಲ ಐದು ದಿನ ಕಾಲಾವಕಾಶ ನೀಡಲಾಗಿದೆ. ಐದು ದಿನದಲ್ಲಿ ಜನವರಿ 24, 25 ರಂದು […]

ಕನ್ನಡ ದುನಿಯಾ 25 Jan 2026 7:01 am

ಎರಡೂವರೆ ತಿಂಗಳಲ್ಲಿ ವಿಐಎಸ್ಎಲ್ ಕಾರ್ಖಾನೆ ಪುನಶ್ಚೇತನಕ್ಕೆ 5000 ಕೋಟಿ ರೂ.: ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ HDK ಘೋಷಣೆ

ಭದ್ರಾವತಿ: ಭದ್ರಾವತಿಯ ವಿಐಎಸ್ಎಲ್ ಕಾರ್ಖಾನೆ ಪುನಶ್ಚೇತನಕ್ಕೆ 5000 ಕೋಟಿ ರೂಪಾಯಿ ಅನುದಾನ ನೀಡಲಾಗುವುದು ಎಂದು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವ ಎಚ್.ಡಿ. ಕುಮಾರಸ್ವಾಮಿ ಘೋಷಿಸಿದ್ದಾರೆ. ಭದ್ರಾವತಿಯ ಮಿಲ್ಟ್ರಿ ಕ್ಯಾಂಪ್ ವಿಐಎಸ್ಎಲ್ ಹೆಲಿಪ್ಯಾಡ್ ಮೈದಾನದಲ್ಲಿ ಶನಿವಾರ ಆರಂಭವಾದ ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ಅವರು ಮಾತನಾಡಿ, ಎರಡೂವರೆ ತಿಂಗಳಲ್ಲಿ ಕಾರ್ಖಾನೆಗೆ ಕಾಯಕಲ್ಪ ನೀಡಲಾಗುವುದು. ಭಾರತೀಯ ಉಕ್ಕು ಪ್ರಾಧಿಕಾರ ವಿಐಎಸ್ಎಲ್ ಪುನಶ್ಚೇತನಕ್ಕೆ 5000 ಕೋಟಿ ರೂಪಾಯಿ ಅನುದಾನ ನೀಡಲು ನಿರ್ಧರಿಸಿದೆ. ಕೇಂದ್ರ ಹಣಕಾಸು ಸಚಿವರ ಸಹಿ ಮಾತ್ರ ಬಾಕಿ […]

ಕನ್ನಡ ದುನಿಯಾ 25 Jan 2026 6:33 am

ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ: ಎಸ್ಎಸ್ಎಲ್ಸಿ ಪೂರ್ವ ಸಿದ್ಧತಾ ಪರೀಕ್ಷೆ ಸಮಯ ಪರಿಷ್ಕರಣೆ

ಬೆಂಗಳೂರು: ಪ್ರಶ್ನೆ ಪತ್ರಿಕೆ ಸೋರಿಕೆಯಂತಹ ಲೋಪ ತಡೆಯುವ ಉದ್ದೇಶದಿಂದ ರೂಪಿಸಲಾಗಿದ್ದ ಹೊಸ ನಿಯಮಾವಳಿಯಲ್ಲಿ ಎಸ್ಎಸ್ಎಲ್ಸಿ ಪೂರ್ವ ಸಿದ್ಧತಾ ಪರೀಕ್ಷೆ 2 ಮತ್ತು 3ರ ಸಮಯವನ್ನು ಬೆಳಿಗ್ಗೆ 11 ಗಂಟೆಗೆ ಆರಂಭಿಸುವುದಾಗಿ ಹೇಳಿದ್ದ ಶಾಲಾ ಶಿಕ್ಷಣ ಇಲಾಖೆ ಸಮಯವನ್ನು ಪರಿಷ್ಕರಿಸಿದ್ದು, ಬೆಳಗ್ಗೆ 10.30 ರಿಂದ ಪೂರ್ವ ಸಿದ್ಧತಾ ಪರೀಕ್ಷೆ ಆರಂಭಿಸುವಂತೆ ತಿಳಿಸಿದೆ. ಬೆಳಗ್ಗೆ 11 ಗಂಟೆಗೆ ಪರೀಕ್ಷೆ ಆರಂಭಿಸುವುದರಿಂದ ಭೋಜನ ಸಮಯಕ್ಕೆ ತೊಡಕಾಗುತ್ತದೆ ಎನ್ನುವ ಕಾರಣಕ್ಕೆ ಸಮಯ ಪರಿಷ್ಕರಣೆ ಮಾಡಲಾಗಿದೆ. ಪರೀಕ್ಷೆಯ ದಿನದಂದು ವಿದ್ಯಾರ್ಥಿಗಳು 9 ಗಂಟೆಗೆ ತರಗತಿಗೆ […]

ಕನ್ನಡ ದುನಿಯಾ 25 Jan 2026 6:06 am

ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: LKG, UKG, ಪಿಯುಸಿ ಮಕ್ಕಳಿಗೂ ಉಚಿತ ಪಠ್ಯಪುಸ್ತಕ, ನೋಟ್ ಬುಕ್ ವಿತರಣೆ

ಬೆಂಗಳೂರು: ಎಲ್.ಕೆ.ಜಿ., ಯುಕೆಜಿ, ಪಿಯುಸಿ ಮಕ್ಕಳಿಗೆ ಉಚಿತವಾಗಿ ಪಠ್ಯಪುಸ್ತಕ ವಿತರಿಸಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ಶೈಕ್ಷಣಿಕ ವರ್ಷದಿಂದ ಸರ್ಕಾರಿ ಪಿಯು ಕಾಲೇಜು ವಿದ್ಯಾರ್ಥಿಗಳು, ಎಲ್.ಕೆ.ಜಿ., ಯುಕೆಜಿ ಮಕ್ಕಳಿಗೆ ಸರ್ಕಾರದಿಂದ ಉಚಿತವಾಗಿ ಪಠ್ಯಪುಸ್ತಕ ವಿತರಿಸಲಾಗುವುದು. ಈಗಾಗಲೇ ಒಂದರಿಂದ 10ನೇ ತರಗತಿ ಮಕ್ಕಳಿಗೆ ಉಚಿತ ಪಠ್ಯ ಪುಸ್ತಕ ನೀಡಲಾಗುತ್ತಿದೆ. ಮುಂದಿನ ಶೈಕ್ಷಣಿಕ ಸಾಲಿನಿಂದ ಉಚಿತ ನೋಟ್ ಪುಸ್ತಕಗಳನ್ನು ನೀಡಲು ತೀರ್ಮಾನಿಸಲಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿ […]

ಕನ್ನಡ ದುನಿಯಾ 25 Jan 2026 5:57 am

ಫೆ. 1 ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸತತ 9ನೇ ಬಜೆಟ್ ಮಂಡನೆ

ನವದೆಹಲಿ: ಜನವರಿ 28 ರಂದು ಬಜೆಟ್ ಅಧಿವೇಶನ ಆರಂಭವಾಗಲಿದ್ದು, ಸಂಸತ್ ಬಜೆಟ್ ಅಧಿವೇಶನಕ್ಕೂ ಮುನ್ನ ಜನವರಿ 27 ರಂದು ಕೇಂದ್ರ ಸರ್ಕಾರ ಸರ್ವಪಕ್ಷ ಸಭೆ ಕರೆದಿದೆ. ಅಧಿವೇಶನದ ಮೊದಲ ಹಂತ ಫೆಬ್ರವರಿ 13 ರಂದು ಮುಕ್ತಾಯಗೊಳ್ಳಲಿದೆ. ಎರಡನೇ ಹಂತ ಮಾರ್ಚ್ 9 ರಂದು ಆರಂಭವಾಗಲಿದ್ದು, ಅಧಿವೇಶನವು ಅಂತಿಮವಾಗಿ ಏಪ್ರಿಲ್ 2 ರಂದು ಮುಕ್ತಾಯಗೊಳ್ಳಲಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1 ರಂದು(ಭಾನುವಾರ) 2026-27 ರ ಕೇಂದ್ರ ಬಜೆಟ್ ಅನ್ನು ಮಂಡಿಸಲಿದ್ದಾರೆ. ನಿರ್ಮಲಾ ಸೀತಾರಾಮನ್ ಅವರು […]

ಕನ್ನಡ ದುನಿಯಾ 25 Jan 2026 5:45 am

ನಾಳೆ ಗಣರಾಜ್ಯೋತ್ಸವಕ್ಕೆ ರಾಜ್ಯ ಸರ್ಕಾರವೇ ಸಿದ್ದಪಡಿಸಿದ ಭಾಷಣ ಓದ್ತಾರಾ ರಾಜ್ಯಪಾಲರು..? ಹೆಚ್ಚಿದ ಕುತೂಹಲ

ಬೆಂಗಳೂರು: ವಿಧಾನಮಂಡಲ ಜಂಟಿ ಅಧಿವೇಶನದ ರಾಜ್ಯಪಾಲರ ಭಾಷಣ ವಿವಾದ ಉಂಟಾದ ಬೆನ್ನಲ್ಲೇ ಗಣರಾಜ್ಯೋತ್ಸವ ಭಾಷಣದಲ್ಲಿಯೂ ಇಂತಹುದೇ ಪರಿಸ್ಥಿತಿ ಎದುರಾಗಬಹುದು ಎನ್ನುವ ಕುತೂಹಲ ಮೂಡಿದೆ. ನಿಯಮಾನುಸಾರ ಗಣರಾಜ್ಯೋತ್ಸವ ಭಾಷಣವನ್ನು ರಾಜ್ಯಪಾಲರಿಗೆ ರಾಜ್ಯ ಸರ್ಕಾರವೇ ಸಿದ್ದಪಡಿಸಿ ಕೊಡುತ್ತದೆ. ಕೇಂದ್ರ ಸರ್ಕಾರದಿಂದ ಆಗುತ್ತಿರುವ ಅನುದಾನ ಹಂಚಿಕೆ ತಾರತಮ್ಯ, ವಿವಿಧ ಯೋಜನೆಗಳಿಗೆ ಅನುದಾನ ಕಡಿತ, ತೆರಿಗೆ ಕಡಿತ ಸೇರಿದಂತೆ ಇತರೆ ನೀತಿಗಳನ್ನು ಟೀಕಿಸುವ ಅಂಶಗಳಿವೆ. ಈ ಹಿನ್ನೆಲೆಯಲ್ಲಿ ರಾಜ್ಯಪಾಲರು ಮತ್ತೊಮ್ಮೆ ರಾಜ್ಯ ಸರ್ಕಾರ ಸಿದ್ದ ಮಾಡಿಕೊಟ್ಟ ಭಾಷಣ ಓದುವ ವಿಚಾರವಾಗಿ ನಿರಾಕರಿಸಿ ತಿದ್ದುಪಡಿಗೆ […]

ಕನ್ನಡ ದುನಿಯಾ 25 Jan 2026 5:36 am

ಶಿಕ್ಷಕರು, ಉಪನ್ಯಾಸಕರಿಗೆ ಸಿಹಿ ಸುದ್ದಿ: 4 ಸಾವಿರ ಬೋಧಕರಿಗೆ ಬಡ್ತಿ

ಬೆಂಗಳೂರು: ಸರ್ಕಾರಿ ಪ್ರಾಥಮಿಕ ಶಾಲೆ ಶಿಕ್ಷಕರು, ಪದವೀಧರ ಶಿಕ್ಷಕರು, ಪಿಯು ಉಪನ್ಯಾಸಕರಿಗೆ ಬಡ್ತಿ ನೀಡಲು ತೀರ್ಮಾನಿಸಲಾಗಿದ್ದು, ಇದರಿಂದ 4 ಸಾವಿರ ಬೋಧಕರಿಗೆ ಬಡ್ತಿ ಸಿಗಲಿದೆ ಎಂದು ಶಾಲಾ ಶಿಕ್ಷಣ ಸಚಿವ ಎಸ್. ಮಧು ಬಂಗಾರಪ್ಪ ತಿಳಿಸಿದ್ದಾರೆ. 2017ರಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರು ಒಂದರಿಂದ ಐದನೇ ತರಗತಿಗೆ ಮಾತ್ರ ಪಾಠ ಮಾಡಬೇಕು. ಪದವೀಧರ ಶಿಕ್ಷಕರು 7ನೇ ತರಗತಿವರೆಗೆ ಪಾಠ ಮಾಡಬೇಕು ಎಂಬ ನಿಯಮ ತಂದಿದ್ದರಿಂದ ಸಮಸ್ಯೆಯಾಗಿ ಬಡ್ತಿ ವಿಚಾರಗಳಿಗೆ ತಡೆಯಾಗಿತ್ತು. ಶಿಕ್ಷಕರು ನ್ಯಾಯಾಲಯಕ್ಕೆ ಹೋಗಿದ್ದರು. 2017ರ ಹಿಂದೆ ನೇಮಕವಾದ […]

ಕನ್ನಡ ದುನಿಯಾ 25 Jan 2026 5:23 am

ಸಂಸತ್ತಿನಲ್ಲಿ ಇನ್ನುಮುಂದೆ ಹೊಸ ಡಿಜಿಟಲ್ ಹಾಜರಾತಿ ವ್ಯವಸ್ಥೆ; ಇದಕ್ಕೂ ಮುನ್ನ ಸಂಸದರ ಹಾಜರಾತಿ ಹೇಗಿತ್ತು?

PC : PTI ಮುಂಬರುವ ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ಲೋಕಸಭೆಯ ಸದಸ್ಯರು ಕೆಳಮನೆಯಲ್ಲಿ ತಮ್ಮ ಗೊತ್ತುಪಡಿಸಿದ ಸ್ಥಾನಗಳಲ್ಲಿ ಸ್ಥಾಪಿಸಲಾದ ಡಿಜಿಟಲ್ ಕನ್ಸೋಲ್‌ಗಳಲ್ಲಿ ತಮ್ಮ ಹಾಜರಾತಿಯನ್ನು ಗುರುತಿಸಬೇಕಾಗುತ್ತದೆ. ಬಜೆಟ್ ಅಧಿವೇಶನವು ಜನವರಿ 28ರಿಂದ ಏಪ್ರಿಲ್ 2ರವರೆಗೆ ನಡೆಯಲಿದ್ದು, ಫೆಬ್ರವರಿ 13ರಿಂದ ಮಾರ್ಚ್ 9ರವರೆಗೆ ಸಂಸತ್ತಿಗೆ ವಿರಾಮವಿರುತ್ತದೆ. ಕಳೆದ ಮಂಗಳವಾರ ಲಕ್ನೋದಲ್ಲಿ ನಡೆದ ಅಖಿಲ ಭಾರತ ಸಭಾಧ್ಯಕ್ಷರ ಸಮ್ಮೇಳನದ ಸಂದರ್ಭದಲ್ಲಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಹೊಸ ಹಾಜರಾತಿ ವ್ಯವಸ್ಥೆಯ ಬಗ್ಗೆ ಘೋಷಣೆ ಮಾಡಿದ್ದಾರೆ. ಇದು ಸಂಸತ್ತಿನ ಸದಸ್ಯರು ಸದನದೊಳಗೆ ತಮ್ಮ ಗೊತ್ತುಪಡಿಸಿದ ಆಸನಗಳಿಂದ ಎಲೆಕ್ಟ್ರಾನಿಕ್ ಮೂಲಕ ಹಾಜರಾತಿಯನ್ನು ಗುರುತಿಸುವ ಆಸನ-ಆಧಾರಿತ ಬಯೋಮೆಟ್ರಿಕ್ ಹಾಜರಾತಿ ಕಾರ್ಯವಿಧಾನವಾಗಿದ್ದು, ಹಿಂದಿನ ಭೌತಿಕ ಹಾಜರಾತಿ ವ್ಯವಸ್ಥೆಯನ್ನು ಬದಲಾಯಿಸುತ್ತದೆ. ►ಇದು ಹೇಗೆ ಕೆಲಸ ಮಾಡುತ್ತದೆ? ಲೋಕಸಭಾ ಸಭಾಂಗಣದಲ್ಲಿ ಇರುವ ಪ್ರತಿಯೊಂದು ಗೊತ್ತುಪಡಿಸಿದ ಆಸನಕ್ಕೂ ಡಿಜಿಟಲ್ ಕನ್ಸೋಲ್ ಅಳವಡಿಸಲಾಗಿದ್ದು, ಹಾಜರಾತಿಯನ್ನು ಸದನದೊಳಗಿನಿಂದ ಮಾತ್ರ ಗುರುತಿಸಬಹುದು. ಸಂಸತ್ತಿನ ಸಂಕೀರ್ಣದ ಬೇರೆಡೆಗಳಿಂದ ಹಾಜರಾತಿ ಗುರುತಿಸಲು ಸಾಧ್ಯವಿಲ್ಲ. ಇಲ್ಲಿ ಸಂಸದರು ತಮ್ಮ ಹೆಬ್ಬೆರಳನ್ನು ಸ್ಕ್ಯಾನ್ ಮಾಡಿ ತಮ್ಮ ಉಪಸ್ಥಿತಿಯನ್ನು ದೃಢೀಕರಿಸಬೇಕು. ಪ್ರಾಕ್ಸಿ ಹಾಜರಾತಿಗೆ ಅವಕಾಶವಿಲ್ಲ. ಡಿಜಿಟಲ್ ಹಾಜರಾತಿಯು ಸದಸ್ಯರ ನಿಜವಾದ ಭೌತಿಕ ಉಪಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ. ಪ್ರತಿಭಟನೆಗಳ ಕಾರಣದಿಂದಾಗಿ ಅಥವಾ ಕಲಾಪ ಪೂರ್ಣಗೊಂಡ ನಂತರ ಸದನವನ್ನು ಮುಂದೂಡಿದಾಗ ವ್ಯವಸ್ಥೆಯನ್ನು ಲಾಕ್ ಮಾಡಲಾಗುತ್ತದೆ. ಇದರಿಂದ ಸದಸ್ಯರು ಪೂರ್ವಾನ್ವಯವಾಗಿ ಹಾಜರಾತಿ ಗುರುತಿಸುವುದನ್ನು ತಡೆಯಲಾಗುತ್ತದೆ. ಸದನದ ಸಮಯದಲ್ಲಿ ಸಂಸದರು ಹಾಜರಾತಿಯನ್ನು ದಾಖಲಿಸಲು ವಿಫಲರಾದರೆ, ಅವರಿಗೆ ದೈನಂದಿನ ಭತ್ಯೆ ಹಾಗೂ ಸಂಬಂಧಿತ ಹಕ್ಕುಗಳು ಲಭಿಸುವುದಿಲ್ಲ. ಈ ವ್ಯವಸ್ಥೆಯು ನೇರ ಆರ್ಥಿಕ ಹೊಣೆಗಾರಿಕೆಯನ್ನು ಉಂಟುಮಾಡುತ್ತದೆ. ►ಹೊಸ ಹಾಜರಾತಿ ವ್ಯವಸ್ಥೆಯ ಪ್ರಮುಖ ಲಕ್ಷಣಗಳು ಸದನದ ಹೊರಗೆ ರಿಜಿಸ್ಟರ್‌ಗೆ ಸಹಿ ಮಾಡುವ ಹಿಂದಿನ ವ್ಯವಸ್ಥೆ ಇನ್ನು ಇರುವುದಿಲ್ಲ. ಇದು ಸಂಸದರು ಕೇವಲ ಔಪಚಾರಿಕತೆಗೆ ಅಲ್ಲ, ಕಲಾಪಗಳ ಸಮಯದಲ್ಲಿಯೂ ಹಾಜರಿರುತ್ತಾರೆ ಎಂಬುದನ್ನು ಖಚಿತಪಡಿಸುತ್ತದೆ. ಬಯೋಮೆಟ್ರಿಕ್ ಪರಿಶೀಲನೆ ನಿಖರತೆ, ತಿದ್ದುಪಡಿ-ನಿರೋಧಕತೆ ಮತ್ತು ಪಾರದರ್ಶಕತೆಯನ್ನು ಹೆಚ್ಚಿಸುತ್ತದೆ. ಇದು ಸಂಸತ್ತಿನ ಕಾರ್ಯನಿರ್ವಹಣೆಯನ್ನು ಆಧುನಿಕ ಇ-ಆಡಳಿತ ಮಾನದಂಡಗಳಿಗೆ ಹೊಂದಿಸುತ್ತದೆ. ಕಟ್ಟುನಿಟ್ಟಾದ ಸಮಯ-ಬದ್ಧ ವ್ಯವಸ್ಥೆಯಿಂದ ಕಾರ್ಯಗಳಲ್ಲಿ ವಿಳಂಬವಾಗುವುದಿಲ್ಲ. ಹಾಜರಾತಿಯು ಕೇವಲ ಬಂದು ಹೋಗುವುದಲ್ಲ, ಭಾಗವಹಿಸುವಿಕೆಗೆ ಸಮನಾಗಿದೆ ಎಂಬ ತತ್ವವನ್ನು ಬಲಪಡಿಸುತ್ತದೆ. ಸಂಸದರು ಹಾಜರು ಹಾಕಿ ತಕ್ಷಣ ಹೊರಡುವ ಅವಕಾಶವಿಲ್ಲ. ಇದು ಗಂಭೀರ ಶಾಸಕಾಂಗ ಭಾಗವಹಿಸುವಿಕೆ ಮತ್ತು ಚರ್ಚೆಗಳ ನಿರಂತರತೆಯನ್ನು ಉತ್ತೇಜಿಸುತ್ತದೆ. ಈ ವ್ಯವಸ್ಥೆಯು ನೈಜ-ಸಮಯದ ಬಹುಭಾಷಾ ಅನುವಾದ, ಕಾಗದರಹಿತ ಪ್ರಕ್ರಿಯೆಗಳು ಮತ್ತು AI-ಆಧಾರಿತ ಕೆಲಸದ ಹರಿವುಗಳಂತಹ ಉಪಕ್ರಮಗಳಿಗೆ ಪೂರಕವಾಗಿದೆ. ►ಸಂಸದರ ಹಾಜರಾತಿ ಹೇಗಿದೆ? ಸಂಸದರು ಹೊಸ ಹಾಜರಾತಿ ವ್ಯವಸ್ಥೆಯನ್ನು ಸ್ವಾಗತಿಸಿದ್ದರೂ, PRS Legislative Research ಸಂಗ್ರಹಿಸಿದ ದತ್ತಾಂಶವು ಕೆಳಮನೆಯಲ್ಲಿ ಸದಸ್ಯರ ಹಾಜರಾತಿ ಕಳೆದ ನಾಲ್ಕು ಅವಧಿಗಳಲ್ಲಿ ಕ್ರಮೇಣ ಹೆಚ್ಚುತ್ತಿರುವುದನ್ನು ತೋರಿಸುತ್ತದೆ. 2009–2014ರ ಅವಧಿಯ 15ನೇ ಲೋಕಸಭೆಯಲ್ಲಿ ಸಂಸದರ ಸರಾಸರಿ ಹಾಜರಾತಿ 76.2% ಇತ್ತು. ಜೂನ್ 2024ರಲ್ಲಿ ರಚನೆಯಾದ ಪ್ರಸ್ತುತ 18ನೇ ಲೋಕಸಭೆಯಲ್ಲಿ, 2025ರ ಚಳಿಗಾಲದ ಅಧಿವೇಶನದವರೆಗೆ ಸರಾಸರಿ ಹಾಜರಾತಿ 86.9%ಕ್ಕೆ ಏರಿಕೆಯಾಗಿದೆ. 16ನೇ ಲೋಕಸಭೆ (2014–2019)ಯಲ್ಲಿ ಹಾಜರಾತಿ ಸರಾಸರಿ 80% ಇದ್ದರೆ, 17ನೇ ಲೋಕಸಭೆ (2019–2024)ಯಲ್ಲಿ ಅದು 78.9%ಕ್ಕೆ ಇಳಿಕೆಯಾಗಿದೆ. ಅಧಿವೇಶನಗಳಲ್ಲಿ ಭಾಗವಹಿಸದ ಕೆಲವೇ ಕೆಲವು ಸಂಸದರ ಕಾರಣದಿಂದ ಒಟ್ಟಾರೆ ಸರಾಸರಿ ಮೇಲೆ ಪರಿಣಾಮ ಬಿದ್ದಿದ್ದರೂ, ಸರಾಸರಿ ಹಾಜರಾತಿ 15ನೇ ಲೋಕಸಭೆಯಲ್ಲಿ 81%, 16ನೇಯಲ್ಲಿ 80%, 17ನೇಯಲ್ಲಿ 83.2% ಮತ್ತು ಪ್ರಸ್ತುತ 18ನೇ ಲೋಕಸಭೆಯಲ್ಲಿ 91.4% ಆಗಿದೆ. ►100% ಹಾಜರಾತಿ ದಾಖಲಿಸಿದ ಸಂಸದರು 100% ಹಾಜರಾತಿ ದಾಖಲಿಸಿದ ಸಂಸದರ ಸಂಖ್ಯೆಯೂ ಹೆಚ್ಚಾಗಿದೆ. 15ನೇ ಲೋಕಸಭೆಯಲ್ಲಿ ಪ್ರತಿ ಅಧಿವೇಶನಕ್ಕೆ ಕೇವಲ ನಾಲ್ವರು ಕಾಂಗ್ರೆಸ್ ಸಂಸದರು ಮಾತ್ರ 100% ಹಾಜರಾತಿ ದಾಖಲಿಸಿದ್ದರು; ಅವರಲ್ಲಿ ಮೂವರು ಮೊದಲ ಬಾರಿಗೆ ಆಯ್ಕೆಯಾದವರು. 16ನೇ ಲೋಕಸಭೆಯಲ್ಲಿ ಆರು ಸಂಸದರು 100% ಹಾಜರಾತಿ ದಾಖಲಿಸಿದ್ದರು — ಬಿಜೆಪಿಯಿಂದ ನಾಲ್ವರು ಹಾಗೂ ಬಿಜು ಜನತಾದಳ (BJD) ಮತ್ತು ತೆಲುಗು ದೇಶಂ ಪಕ್ಷ (TDP)ಗಳಿಂದ ತಲಾ ಒಬ್ಬರು. ಇವರೆಲ್ಲರೂ ಮೊದಲ ಬಾರಿಗೆ ಆಯ್ಕೆಯಾದವರು. 17ನೇ ಲೋಕಸಭೆಯಲ್ಲಿ ಕೇವಲ ಮೂವರು ಸಂಸದರು 100% ಹಾಜರಾತಿ ದಾಖಲಿಸಿದ್ದು, ಅವರೂ ಬಿಜೆಪಿ ಪಕ್ಷದವರು ಹಾಗೂ ಮೊದಲ ಬಾರಿಗೆ ಆಯ್ಕೆಯಾದವರು. ಪ್ರಸ್ತುತ ಲೋಕಸಭೆಯಲ್ಲಿ 29 ಸಂಸದರು 100% ಹಾಜರಾತಿ ದಾಖಲಿಸಿದ್ದಾರೆ. ಇವರಲ್ಲಿ ಬಿಜೆಪಿಯಿಂದ 13, ಕಾಂಗ್ರೆಸ್‌ನಿಂದ 8, ಸಮಾಜವಾದಿ ಪಕ್ಷದಿಂದ (SP) 6 ಹಾಗೂ ರಾಷ್ಟ್ರೀಯ ಲೋಕದಳ (RLD) ಮತ್ತು ಸಿಪಿಐ(ಎಂ-ಎಲ್)ಗಳಿಂದ ತಲಾ ಒಬ್ಬರಿದ್ದಾರೆ. ಇವರಲ್ಲಿ 19 ಮಂದಿ ಮೊದಲ ಬಾರಿಗೆ ಆಯ್ಕೆಯಾದ ಸದಸ್ಯರು. ►ಹಾಜರಾತಿ ವ್ಯವಸ್ಥೆಗಳ ಇತಿಹಾಸ ಸಂಸದರು ದೈನಂದಿನ ಭತ್ಯೆ ಪಡೆಯಲು ಹಾಜರಾತಿ ಗುರುತಿಸಬೇಕಾಗುತ್ತದೆ. ಪ್ರಸ್ತುತ ನಿಯಮಗಳ ಪ್ರಕಾರ ಸ್ಪೀಕರ್, ಪ್ರಧಾನಿ, ಸಚಿವರು ಮತ್ತು ವಿರೋಧ ಪಕ್ಷದ ನಾಯಕರು (LoP) ಹಾಜರಾತಿ ನೋಂದಣಿಗೆ ಸಹಿ ಮಾಡುವ ಅಗತ್ಯವಿಲ್ಲ. ಇತರ ಎಲ್ಲಾ ಸಂಸದರು ಲೋಕಸಭಾ ಕೊಠಡಿಯ ಪ್ರವೇಶದ್ವಾರದಲ್ಲಿರುವ ಹಾಜರಿ ಪುಸ್ತಕದಲ್ಲಿ ಸಹಿ ಮಾಡಬೇಕು. ಸದಸ್ಯರು ಸದನದಲ್ಲಿ ಮಾತನಾಡಿದರೆ ಅಥವಾ ಮತ ಚಲಾಯಿಸಿದರೆ, ಅವರ ಹಾಜರಾತಿಯನ್ನೂ ಗುರುತಿಸಲಾಗುತ್ತದೆ. 2020ರಲ್ಲಿ ಕೋವಿಡ್-19 ಸಾಂಕ್ರಾಮಿಕ ಅವಧಿಯಲ್ಲಿ, ಸಂಸತ್ತಿನ ಅಧಿವೇಶನಗಳು ನಡೆದಾಗ, ಲೋಕಸಭಾ ಸಚಿವಾಲಯವು ರಾಷ್ಟ್ರೀಯ ಮಾಹಿತಿ ಕೇಂದ್ರ (NIC) ವಿನ್ಯಾಸಗೊಳಿಸಿದ ಅಪ್ಲಿಕೇಶನ್ ಅನ್ನು ಪರಿಚಯಿಸಿತು. ಇದರಿಂದ ಸಂಸದರು ತಮ್ಮ ಮೊಬೈಲ್‌ಗಳ ಮೂಲಕ ಭೌತಿಕ ರಿಜಿಸ್ಟರ್‌ಗೆ ಸ್ಪರ್ಶಿಸದೇ ಹಾಜರಾತಿ ಗುರುತಿಸಬಹುದಾಗಿತ್ತು. 2024ರ ಕೊನೆಯಲ್ಲಿ, ಪ್ರಸ್ತುತ ಲೋಕಸಭೆಯ ಮೊದಲ ಚಳಿಗಾಲದ ಅಧಿವೇಶನಕ್ಕೂ ಮುನ್ನ, ಕಾಗದರಹಿತ ಸಂಸತ್ತಿನ ಭಾಗವಾಗಿ ಸಂಸದರಿಗೆ ಡಿಜಿಟಲ್ ಪೆನ್ ಬಳಸಿ ಎಲೆಕ್ಟ್ರಾನಿಕ್ ಟ್ಯಾಬ್ಲೆಟ್‌ನಲ್ಲಿ ಹಾಜರಾತಿ ಗುರುತಿಸುವ ಆಯ್ಕೆಯನ್ನು ನೀಡಲಾಯಿತು. ಕಳೆದ ವರ್ಷ ಮಳೆಗಾಲದ ಅಧಿವೇಶನಕ್ಕೂ ಮುನ್ನ, ಲೋಕಸಭೆಯ ಪ್ರತಿಯೊಬ್ಬ ಸಂಸದನ ಆಸನದಲ್ಲಿ ‘ಮಲ್ಟಿ ಮಾಡೆಲ್ ಡಿವೈಸ್’ (MMD) ಅಳವಡಿಸಲಾಯಿತು. ಇದರ ಮೂಲಕ ಸದಸ್ಯರು ಮಲ್ಟಿಮೀಡಿಯಾ ಕಾರ್ಡ್, ಕೋಡ್ ನಮೂದಿಸುವುದು ಅಥವಾ ಬೆರಳಚ್ಚು ಸ್ಕ್ಯಾನ್ ಮಾಡುವ ಮೂಲಕ ಹಾಜರಾತಿ ದಾಖಲಿಸಬಹುದು. ಆ ಸಮಯದಲ್ಲಿ MMDಗಳ ಪರಿಚಯ ವಿವಾದಕ್ಕೂ ಕಾರಣವಾಗಿತ್ತು. ಕಾಂಗ್ರೆಸ್ ಸಂಸದ ಮಾಣಿಕಂ ಟ್ಯಾಗೋರ್ ಅವರು ಪ್ರಧಾನಿ ಮತ್ತು ಕೇಂದ್ರ ಸಚಿವರಿಗೆ ನೀಡಲಾಗಿರುವ ಹಾಜರಾತಿ ವಿನಾಯಿತಿಯನ್ನು ಪ್ರಶ್ನಿಸಿದ್ದರು. “ಹಾಜರಾತಿ ಗುರುತು ಪಾರದರ್ಶಕತೆ ಮತ್ತು ಹೊಣೆಗಾರಿಕೆಗೆ ಸಂಬಂಧಪಟ್ಟಿದ್ದರೆ, ಪ್ರಧಾನಿ ಮತ್ತು ಸಚಿವರಿಗೆ ಏಕೆ ವಿನಾಯಿತಿ? ಪ್ರಧಾನಿ ಸ್ವತಃ ಇದನ್ನು ಅನುಸರಿಸಿ ಮಾದರಿಯಾಗಬೇಕಿತ್ತಲ್ಲವೇ?” ಎಂದು ಅವರು ಪ್ರಶ್ನಿಸಿದ್ದರು.

ವಾರ್ತಾ ಭಾರತಿ 24 Jan 2026 9:32 pm

ಜೈಲಿನಲ್ಲಿ ನಟ ದರ್ಶನ್ ಗಿಲ್ಲ ಹೆಚ್ಚುವರಿ ಬ್ಲಾಂಕೆಟ್, ಬೆಡ್ ವ್ಯವಸ್ಥೆ: ಡಿಜಿಪಿ ಹೊಸ ಆದೇಶ

ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಗೆ ಹೆಚ್ಚುವರಿ ಬ್ಲಾಂಕೆಟ್ ಹಾಗೂ ಬೆಡ್ ವ್ಯವಸ್ಥೆಗೆ ಡಿಜಿಪಿ ಅಲೋಕ್ ಕುಮಾರ್ ಕಡಿವಾಣ ಹಾಕಿದ್ದಾರೆ. ಜೈಲಿನಲ್ಲಿ ವಿಚಾರಣಾಧೀನ ಆರೋಪಿಗಳಿಗೆ ಒದಗಿಸುವ ಸೌಕರ್ಯಗಳ ಬಗ್ಗೆ ಹೊಸದಾಗಿ ಸುತ್ತೋಲೆ ಹೊರಡಿಸಿರುವ ಡಿಜಿಪಿ ಅಲೋಕ್ ಕುಮಾರ್, ಹೊಸ ಆದೇಶ ಹೊರಡಿಸಿದ್ದಾರೆ. ಜೈಲಿನಲ್ಲಿ ಊಟದ ವ್ಯವಸ್ಥೆ ಹಾಗೂ ಬೆಡ್ ವ್ಯವಸ್ಥೆ ಬಗ್ಗೆ ಈ ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ. ವಿಚಾರಣಾಧೀನ ಕೈದಿ ಜೈಲಿನಲ್ಲಿ ಕೊಡುವ ಬ್ಲಾಂಕೆಟ್ ಬಳಸಬೇಕು. ಹೆಚ್ಚುವರಿಯಾಗಿ ಒಂದು ಬ್ಲಾಂಕೆಟ್ ಮಾತ್ರ ಕೊಡಲಾಗುತ್ತದೆ. […]

ಕನ್ನಡ ದುನಿಯಾ 24 Jan 2026 9:28 pm

ಅಧಿವೇಶನಕ್ಕೆ ಗೈರಾಗಬಾರದು, ಖುದ್ದಾಗಿ ಹಾಜರಿರಬೇಕು: ಸಚಿವರಿಗೆ ಸಿಎಂ ಸಿದ್ಧರಾಮಯ್ಯ ಖಡಕ್ ಸೂಚನೆ

ಬೆಂಗಳೂರು ವಿಧಾನಮಂಡಲದ ಜಂಟಿ ಅಧಿವೇಶನಕ್ಕೆ ಕೆಲವು ಸಚಿವರು ಗೈರು ಹಾಜರಾಗುತ್ತಿರುವುದಕ್ಕೆ ವಿಪಕ್ಷ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಪಕ್ಷಗಳ ಅಸಮಾಧಾನದ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವರಿಗೆ ಖಡಕ್ ಸೂಚನೆ ನೀಡಿದ್ದಾರೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ಸಚಿವರು ಸದನದಲ್ಲಿ ಇಲ್ಲದಿರುವುದು ಸಾರ್ವಜನಿಕ ವಲಯದಲ್ಲಿ ತಪ್ಪು ಸಂದೇಶ ರವಾನೆಗೆ ಕಾರಣವಾಗುತ್ತದೆ. ಅಧಿವೇಶನದ ವೇಳೆ ಸಚಿವರು ತಮ್ಮ ಇಲಾಖೆಯ ಅಥವಾ ಇತರೆ ಯಾವುದೇ ಸಭೆ ಸಮಾರಂಭಗಳನ್ನು ಆಯೋಜಿಸಬಾರದು. ಖುದ್ದಾಗಿ ಸದನದಲ್ಲಿ ಹಾಜರಿರಬೇಕಾಗುತ್ತದೆ ಎಂದು ಸಿಎಂ ಸೂಚನೆ ನೀಡಿದ್ದಾರೆ. ಪ್ರತಿದಿನವೂ ಅಧಿವೇಶನಕ್ಕೆ ಹಾಜರಾಗಿ ಸದನದ ಘನತೆಯನ್ನು […]

ಕನ್ನಡ ದುನಿಯಾ 24 Jan 2026 7:53 pm

BREAKING: ಹಸು ಹೊಲಕ್ಕೆ ನುಗ್ಗಿ ಮೇಯ್ದಿದ್ದಕ್ಕೆ ಕಂಬಕ್ಕೆ ಕಟ್ಟಿ ವೃದ್ಧೆಗೆ ಥಳಿತ: ನಾಲ್ವರು ಅರೆಸ್ಟ್

ಚಾಮರಾಜನಗರ: ವೃದ್ಧೆಯನ್ನು ಕಂಬಕ್ಕೆ ಕಟ್ಟಿ ಹಾಕಿ ಎರಡು ಗಂಟೆ ಥಳಿಸಲಾಗಿದೆ. ಜಮೀನಿಗೆ ಹಸು ನುಗ್ಗಿ ಬೆಳೆ ಮೇಯ್ದಿದ್ದರಿಂದ ವೃದ್ಧೆಯನ್ನು ಥಳಿಸಿದ ಘಟನೆ ದೊಮ್ಮನಗದ್ದೆ ಗ್ರಾಮದಲ್ಲಿ ನಡೆದಿದೆ. ಕಂಬಕ್ಕೆ ಕಟ್ಟಿ ಕಣ್ಣಮ್ಮ ಅವರನ್ನು ಥಳಿಸಲಾಗಿದೆ. ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ದೊಮ್ಮನಗದ್ದೆ ಗ್ರಾಮದಲ್ಲಿ ಅಂಗಮುತ್ತು ಅವರ ಜಮೀನಿಗೆ ಕಣ್ಣಮ್ಮ ಅವರ ಹಸು ನುಗ್ಗಿತ್ತು. ಹೀಗಾಗಿ ವೃದ್ಧೆ ಕಣ್ಣಮ್ಮರನ್ನು ಕಂಬಕ್ಕೆ ಕಟ್ಟಿ ಹಾಕಿ ಥಳಿಸಲಾಗಿದೆ. ಅಂಗಮುತ್ತು ಮತ್ತು ಕುಟುಂಬ ಸದಸ್ಯರು ಥಳಿಸಿದ್ದಾರೆ. ಕಣ್ಣಮ್ಮ ಅವರ ಮೇಲೆ ಹಲ್ಲೆ ನಡೆಸಿದ ಅಂಗಮುತ್ತು […]

ಕನ್ನಡ ದುನಿಯಾ 24 Jan 2026 7:45 pm

ನಾಳೆ ‘ಮನ್ ಕಿ ಬಾತ್’ 130ನೇ ಸಂಚಿಕೆಯಲ್ಲಿ ಪ್ರಧಾನಿ ಮೋದಿ ಭಾಷಣ

ನವದೆಹಲಿ: ನಾಳೆ ಬೆಳಿಗ್ಗೆ 11 ಗಂಟೆಗೆ ಆಕಾಶವಾಣಿಯಲ್ಲಿ ಪ್ರಸಾರವಾಗುವ ‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶ ಮತ್ತು ವಿದೇಶಗಳ ಜನರೊಂದಿಗೆ ತಮ್ಮ ಆಲೋಚನೆಗಳನ್ನು ಹಂಚಿಕೊಳ್ಳಲಿದ್ದಾರೆ. ಇದು ಮಾಸಿಕ ರೇಡಿಯೋ ಕಾರ್ಯಕ್ರಮದ 130 ನೇ ಸಂಚಿಕೆಯಾಗಲಿದೆ. ಈ ಕಾರ್ಯಕ್ರಮವು ಸಂಪೂರ್ಣ ಆಕಾಶವಾಣಿ ಮತ್ತು ದೂರದರ್ಶನ ನೆಟ್‌ವರ್ಕ್, ಆಕಾಶವಾಣಿ ಸುದ್ದಿ ವೆಬ್‌ಸೈಟ್ ಮತ್ತು ನ್ಯೂಸೋನೈರ್ ಮೊಬೈಲ್ ಅಪ್ಲಿಕೇಶನ್‌ನಲ್ಲಿ ಪ್ರಸಾರವಾಗಲಿದೆ. ಇದನ್ನು ಆಕಾಶವಾಣಿ ಸುದ್ದಿ, ಡಿಡಿ ಸುದ್ದಿ, ಪ್ರಧಾನಿ ಕಚೇರಿ ಮತ್ತು ಮಾಹಿತಿ ಮತ್ತು ಪ್ರಸಾರ ಸಚಿವಾಲಯದ […]

ಕನ್ನಡ ದುನಿಯಾ 24 Jan 2026 7:34 pm

BIG NEWS: ಭಾರತವು ಪ್ರತಿ 100 ರೂ. ಗಳಿಸಿದರೆ 19.6 ರೂ. ತೆರಿಗೆ ಸಂಗ್ರಹಿಸುತ್ತದೆ: ಬ್ಯಾಂಕ್ ಆಫ್ ಬರೋಡಾ ವರದಿ

ನವದೆಹಲಿ: ಬ್ಯಾಂಕ್ ಆಫ್ ಬರೋಡಾದ ಹೊಸ ವರದಿಯ ಪ್ರಕಾರ, ಭಾರತವು ಪ್ರಸ್ತುತ ಆರ್ಥಿಕತೆಯು ಗಳಿಸುವ ಪ್ರತಿ ₹100 ಗೆ ಸುಮಾರು ₹19.6 ತೆರಿಗೆ ಸಂಗ್ರಹಿಸುತ್ತದೆ. ತೆರಿಗೆ-ಜಿಡಿಪಿ ಅನುಪಾತ ಎಂದು ಕರೆಯಲ್ಪಡುವ ಈ ಅಳತೆಯು ದೇಶದ ಒಟ್ಟು ಆರ್ಥಿಕ ಉತ್ಪಾದನೆಗೆ ಹೋಲಿಸಿದರೆ ಸರ್ಕಾರವು ಎಷ್ಟು ಆದಾಯವನ್ನು ಸಂಗ್ರಹಿಸುತ್ತದೆ ಎಂಬುದನ್ನು ಪ್ರತಿಬಿಂಬಿಸುತ್ತದೆ. ಕೇಂದ್ರ ಮತ್ತು ರಾಜ್ಯ ತೆರಿಗೆಗಳನ್ನು ಒಳಗೊಂಡಂತೆ ಭಾರತದ ಸಂಯೋಜಿತ ತೆರಿಗೆ-ಜಿಡಿಪಿ ಅನುಪಾತವನ್ನು ವರದಿಯು 19.6% ಎಂದು ಇರಿಸುತ್ತದೆ. ಕೇಂದ್ರ ಸರ್ಕಾರಿ ಮಟ್ಟದಲ್ಲಿ ಮಾತ್ರ, ತೆರಿಗೆ ಸಂಗ್ರಹವು ಜಿಡಿಪಿಯ […]

ಕನ್ನಡ ದುನಿಯಾ 24 Jan 2026 7:23 pm

ಆಸ್ಪತ್ರೆಯಿಂದ ಪರಾರಿಯಾಗಿದ್ದ ಆರೋಪಿ ಅರೆಸ್ಟ್

ಉಡುಪಿ: ಉಡುಪಿ ಜಿಲ್ಲೆ ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ಜಿಲ್ಲಾಸ್ಪತ್ರೆಯಿಂದ ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ತೆಂಕನಿಡಿಯೂರು ನಿವಾಸಿ ಕಿರಣ್ ಪಿಂಟೋ(49) ಬಂಧಿತ ಆರೋಪಿ. ಜನವರಿ 18ರಂದು ಬ್ರಹ್ಮಾವರದ ಬಾರ್ ಎದುರು ನಡೆದ ಹಲ್ಲೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಕಿರಣ್ ಗಾಯಗೊಂಡು ಉಡುಪಿಯ ಜಿಲ್ಲಾಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದ. ಜನವರಿ 21ರಂದು ಬೆಳಗಿನ ಜಾವ ಆಸ್ಪತ್ರೆಯಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದ. ತೀವ್ರ ಹುಡುಕಾಟ ನಡೆಸಿದ ಪೊಲೀಸರು ಶನಿವಾರ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಕನ್ನಡ ದುನಿಯಾ 24 Jan 2026 6:51 pm

BREAKING: ಹುಬ್ಬಳ್ಳಿಯಲ್ಲಿ ಕಟೌಟ್ ಬಿದ್ದು ಗಾಯಗೊಂಡವರ ಆರೋಗ್ಯ ವಿಚಾರಿಸಿದ ಸಿಎಂ ಸಿದ್ದರಾಮಯ್ಯ

ಹುಬ್ಬಳ್ಳಿ: ಹುಬ್ಬಳ್ಳಿಯ ಮಂಟೂರು ರಸ್ತೆಯಲ್ಲಿ ಫಲಾನುಭವಿಗಳಿಗೆ ಮನೆ ಹಂಚಿಕೆ ಕಾರ್ಯಕ್ರಮದ ವೇದಿಕೆ ಬಳಿ ಬೃಹತ್ ಕಟೌಟ್ ಬಿದ್ದು ಗಾಯಗೊಂಡವರ ಆರೋಗ್ಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಚಾರಿಸಿದ್ದಾರೆ. ಕಟೌಟ್ ಬಿದ್ದು ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಸ್ಪತ್ರೆಗೆ ಭೇಟಿ ನೀಡಿದ ಸಿಎಂ ಆರೋಗ್ಯ ವಿಚಾರಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಇಂದಿನ ಸಮಾರಂಭದ ಕಟೌಟ್ ಆಕಸ್ಮಿಕವಾಗಿ ಬಿದ್ದು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದು, ಶೀಘ್ರ ಗುಣಮುಖರಾಗುವಂತೆ ಹಾರೈಸಿದ್ದಾಗಿ ಸಿಎಂ ಮಾಹಿತಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಸಚಿವರಾದ ಜಮೀರ್ ಅಹ್ಮದ್, ಸಂತೋಷ್ ಲಾಡ್ […]

ಕನ್ನಡ ದುನಿಯಾ 24 Jan 2026 6:43 pm