SENSEX
NIFTY
GOLD
USD/INR

Weather

21    C

ಡಿಜಿಟಲ್ ಸುದ್ದಿ ಮೂಲಗಳು

... ...View News by News Source

ಸೇತುವೆಗೆ ಬೈಕ್ ಡಿಕ್ಕಿ: ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಸಾವು

ಬೀದರ್: ಸೇತುವೆಗೆ ಬೈಕ್ ಡಿಕ್ಕಿಯಾಗಿ ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬೈಕ್ ನಲ್ಲಿ ತೆರಳುತ್ತಿದ್ದ ದಂಪತಿ ಮತ್ತು ಮಗಳು ಸಾವನ್ನಪ್ಪಿದ್ದಾರೆ. ಹಳ್ಳಿಖೇಡ-ಬಿ ಸಮೀಪ ನಾಗಣ್ಣ ಕ್ರಾಸ್ ಹತ್ತಿರ ಅಪಘಾತ ಸಂಭವಿಸಿದೆ. ಬೀದರ್ ಜಿಲ್ಲೆ ಹುಮನಾಬಾದ್ ತಾಲೂಕು ಹಳ್ಳಿಖೇಡ-ಬಿ ಗ್ರಾಮದ ಸಮೀಪ ಅಪಘಾತ ಸಂಭವಿಸಿದೆ. ಬಸವಕಲ್ಯಾಣ ತಾಲೂಕಿನ ರಾಜೇಶ್ವರ ಗ್ರಾಮದ ನಿವಾಸಿಗಳಾದ ವೆಂಕಟ ಕರಟಮಲ(40), ಪತ್ನಿ ಶಿಲ್ಪಾ(35), ಪುತ್ರಿ ರಕ್ಷಿತಾ(12) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮಗ ದಿಗಂಬರ್(15) ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಬೀದರ್ ನಿಂದ ರಾಜೇಶ್ವರ ಗ್ರಾಮಕ್ಕೆ […]

ಕನ್ನಡ ದುನಿಯಾ 8 Feb 2026 8:59 pm

BREAKING: ಅಮೆರಿಕ ವ್ಯಾಪಾರ ಒಪ್ಪಂದ 72 ಕೋಟಿ ರೈತರ ಪಾಲಿಗೆ ಮರಣಶಾಸನ: ಸಿಎಂ ಸಿದ್ಧರಾಮಯ್ಯ

ಭಾರತ & ಅಮೆರಿಕ ನಡುವಿನ ಮಧ್ಯಂತರ ವ್ಯಾಪಾರ ಒಪ್ಪಂದವನ್ನು ಒಪ್ಪಿಕೊಂಡು ಸ್ವಾಗತಿಸುವ ಮೂಲಕ ಪ್ರಧಾನಿ ಮೋದಿ ಅವರು ಅಮೆರಿಕಕ್ಕೆ ಸಂಪೂರ್ಣ ಶರಣಾಗಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಟೀಕಿಸಿದ್ದಾರೆ. ಮುಂದಿನ ದಿನಗಳಲ್ಲಿ ಈ ಒಪ್ಪಂದ 140 ಕೋಟಿ ಭಾರತೀಯರಿಗೆ, ಅದರಲ್ಲಿಯೂ ಮುಖ್ಯವಾಗಿ ದೇಶದ 72 ಕೋಟಿ ರೈತರ ಪಾಲಿಗೆ ಮರಣಶಾಸನ ಆಗಲಿರುವುದು ಖಂಡಿತ. ಎರಡು ದೇಶಗಳ ನಡುವಿನ ಸಂಬಂಧಗಳು ಸಮಾನತೆ ಮತ್ತು ಪರಸ್ಪರ ಗೌರವದ ಬುನಾದಿಯ ಮೇಲೆ ಸ್ಥಾಪನೆಯಾಗಬೇಕಾಗುತ್ತದೆ. ಅದು ಒತ್ತಡ, ಬೆದರಿಕೆ ಮತ್ತು ಏಕಪಕ್ಷೀಯ ನೀತಿ-ನಿರ್ಧಾರಗಳ ಹೇರಿಕೆಯಿಂದ […]

ಕನ್ನಡ ದುನಿಯಾ 8 Feb 2026 8:49 pm

ಬ್ಯಾಂಕ್ ಖಾತೆದಾರನಿಗೆ ಕಮಿಷನ್ ಕೊಟ್ಟು ಲಕ್ಷಾಂತರ ಹಣ ವರ್ಗಾವಣೆ: 19 ಖಾತೆಗಳ ಮೂಲಕ 55 ಕೋಟಿ ರೂ. ವಂಚಿಸಿದ್ದವ ಅರೆಸ್ಟ್: 25 ಎಟಿಎಂ ಕಾರ್ಡ್ ಸೇರಿ ಹಲವು ವಸ್ತು ವಶಕ್ಕೆ

ಶಿವಮೊಗ್ಗ: ಬೇರೆಯವರ ಖಾತೆಯ ಮೂಲಕ ಲಕ್ಷಾಂತರ ವಹಿವಾಟು ನಡೆಸಿದ್ದ ಆರೋಪಿಯನ್ನು ಶಿವಮೊಗ್ಗ ಪೊಲೀಸರು ಬಂಧಿಸಿದ್ದಾರೆ. ಶಿವಮೊಗ್ಗ ವಿನೋಬನಗರದ ಇಂಡಿಯನ್ ಓವರ್ಸಿಸ್ ಬ್ಯಾಂಕ್ ಬ್ರಾಂಚ್ ನಲ್ಲಿ ಗಣೇಶ್ ಟಿ-ಶಾಪ್ ಹೆಸರಿನಲ್ಲಿ ಖಾತೆಯನ್ನು ಓಪನ್ ಮಾಡಿಕೊಂಡು ಬಳಸುತ್ತಿದ್ದ ಖಾತೆಯನ್ನು ಪಿರ್ಯಾದಿ ಸ್ನೇಹಿತ ಶರತ್ @ ಗುಂಡ ಈತನು ಪಿರ್ಯಾಯರಿಂದ ಪಾಸ್ ಬುಕ್, ಎ.ಟಿಎಂ ಕಾರ್ಡ್ ಮತ್ತು ಬ್ಯಾಂಕ್ ಖಾತೆಗೆ ಲಿಂಕ್ ಮಾಡಿಸಿರುವ ಮೊಬೈಲ್ ನಂಬರ್ 9902039655 ನ್ನು ನನಗೆ ಕೊಡು ನಿನಗೆ 15 ದಿನಗಳಿಗೊಮ್ಮೆ ಕಮಿಷನ್ ಕೊಡುತ್ತೇನೆ ಎಂದು ನಂಬಿಸಿದ್ದಾನೆ. […]

ಕನ್ನಡ ದುನಿಯಾ 8 Feb 2026 8:23 pm

ಮೀನು ಹಿಡಿಯಲು ಹೋಗಿದ್ದ ವೇಳೆ ಕೃಷಿ ಹೊಂಡಕ್ಕೆ ಬಿದ್ದು ಇಬ್ಬರು ಸಾವು

ರಾಮನಗರ: ಮೀನು ಹಿಡಿಯಲು ಹೋಗಿದ್ದ ಇಬ್ಬರು ಯುವಕರು ಕೃಷಿ ಹೊಂಡದಲ್ಲಿ ಬಿದ್ದು ಮೃತಪಟ್ಟ ಘಟನೆ ಬೆಂಗಳೂರು ದಕ್ಷಿಣ ಜಿಲ್ಲೆ ಮಾಗಡಿ ತಾಲೂಕಿನ ಚೆಂದೂರಾಯನ ಹಳ್ಳಿಯ ಸಮೀಪ ನಡೆದಿದೆ. ಶಂಕರ್(23), ಮೋಹಿತ್(17) ಮೃತಪಟ್ಟವರು. ರಾಮನಗರದ ಸಿದ್ದಗಂಗಯ್ಯನ ಪಾಳ್ಯದ ನಿವಾಸಿಗಳಾಗಿರುವ ಇಬ್ಬರು ಕೃಷಿ ಹೊಂಡದಲ್ಲಿ ಮೀನು ಹಿಡಿಯಲು ಹೋಗಿದ್ದಾರೆ. ಈ ವೇಳೆ ಓರ್ವ ನೀರಲ್ಲಿ ಮುಳುಗಿದ್ದು, ಆತನ ರಕ್ಷಿಸಲು ಹೋದ ಮತ್ತೊಬ್ಬ ಕೂಡ ನೀರಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಮಾಗಡಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು […]

ಕನ್ನಡ ದುನಿಯಾ 8 Feb 2026 8:09 pm

BREAKING: ನಾಳೆಯಿಂದ ಟೆಕೆಟ್ ದರ ಏರಿಕೆ ಆತಂಕದಲ್ಲಿದ್ದ ಪ್ರಯಾಣಿಕರಿಗೆ ಗುಡ್ ನ್ಯೂಸ್: ಕೇಂದ್ರ ಸರ್ಕಾರದ ಸೂಚನೆ ಬೆನ್ನಲ್ಲೇ ಮೆಟ್ರೋ ಟಿಕೆಟ್ ದರ ಏರಿಕೆ ಕೈಬಿಟ್ಟ ಬಿಎಂಆರ್‌ಸಿಎಲ್

ಬೆಂಗಳೂರು: ನಾಳೆಯಿಂದ ಟೆಕೆಟ್ ದರ ಏರಿಕೆ ಆತಂಕದಲ್ಲಿದ್ದ ಮೆಟ್ರೋ ಪ್ರಯಾಣಿಕರಿಗೆ ಸಿಹಿ ಸುದ್ದಿ ಸಿಕ್ಕಿದೆ. ಮೆಟ್ರೋ ಟಿಕೆಟ್ ದರ ಏರಿಕೆಯನ್ನು ಬಿಎಂಆರ್‌ಸಿಎಲ್ ಕೈಬಿಟ್ಟಿದೆ. ಕೇಂದ್ರ ಸರ್ಕಾರದ ಸೂಚನೆಯ ಬೆನ್ನಲ್ಲೇ ದರ ಏರಿಕೆ ಪ್ರಕ್ರಿಯೆ ಸ್ಥಗಿತಗೊಳಿಸಲಾಗಿದೆ. ನಾಳೆಯಿಂದ ಮೆಟ್ರೋ ಟಿಕೆಟ್ ದರ ಏರಿಕೆಯಾಗುವುದಿಲ್ಲ. ಟಿಕೆಟ್ ದರ ಏರಿಕೆ ಮಾಡದಂತೆ ಬಿಎಂಆರ್‌ಸಿಎಲ್ ಎಂಡಿಗೆ ಕೇಂದ್ರ ಸರ್ಕಾರದಿಂದ ಇ-ಮೇಲ್ ಬಂದಿದೆ. ಇದರ ಬೆನ್ನಲ್ಲೇ ಟಿಕೆಟ್ ದರ ಏರಿಕೆ ಮಾಡದಿರಲು ನಿರ್ಧರಿಸಲಾಗಿದೆ ಎಂದು ಹೇಳಲಾಗಿದೆ. ನಾಳೆಯಿಂದ ಶೇಕಡ 5ರಷ್ಟು ಟಿಕೆಟ್ ದರ ಹೆಚ್ಚಳಕ್ಕೆ […]

ಕನ್ನಡ ದುನಿಯಾ 8 Feb 2026 7:22 pm

‘ಆದಾಯ ತೆರಿಗೆ ಕಾಯ್ದೆ’ ಏಪ್ರಿಲ್ 1ರಿಂದ ಜಾರಿ: ಪ್ರಸ್ತಾವಿತ ನಿಯಮಗಳ ಬಗ್ಗೆ ಇಲ್ಲಿದೆ ಮುಖ್ಯ ಮಾಹಿತಿ

ನವದೆಹಲಿ: ಆದಾಯ ತೆರಿಗೆ ಕಾಯ್ದೆ 2025 ಏಪ್ರಿಲ್ 1, 2026 ರಿಂದ ಜಾರಿಗೆ ಬರಲಿದ್ದು, ಕರಡು ಆದಾಯ ತೆರಿಗೆ ನಿಯಮಗಳು ಮತ್ತು ನಮೂನೆಗಳು, 2026 ಅನ್ನು ರೂಪಿಸಲಾಗಿದೆ ಮತ್ತು ಸಾರ್ವಜನಿಕರು ಮತ್ತು ಪಾಲುದಾರರಿಂದ ಪ್ರತಿಕ್ರಿಯೆ/ಕಾಮೆಂಟ್‌ಗಳಿಗಾಗಿ ಸಾರ್ವಜನಿಕ ವಲಯದಲ್ಲಿ ಇರಿಸಲಾಗಿದೆ. ನಿಯಮ ರಚನೆ ಪ್ರಕ್ರಿಯೆಯನ್ನು ಹೆಚ್ಚು ಭಾಗವಹಿಸುವ ಮತ್ತು ಪರಿಣಾಮಕಾರಿಯಾಗಿಸಲು ಪಾಲುದಾರರು ಮತ್ತು ಸಾರ್ವಜನಿಕರಿಂದ ಕಾಮೆಂಟ್‌ಗಳನ್ನು ಆಹ್ವಾನಿಸಲಾಗಿದೆ. ಉಲ್ಲೇಖದ ಸುಲಭತೆಗಾಗಿ, ಕರಡು ಆವೃತ್ತಿಗಳೊಂದಿಗೆ ಅಸ್ತಿತ್ವದಲ್ಲಿರುವ ನಿಯಮಗಳು/ಫಾರ್ಮ್‌ಗಳನ್ನು ಮ್ಯಾಪಿಂಗ್ ಮಾಡುವ ನ್ಯಾವಿಗೇಟರ್‌ಗಳನ್ನು ಹಂಚಿಕೊಳ್ಳಲಾಗಿದೆ. ಆದಾಯ ತೆರಿಗೆ ಕಾಯ್ದೆ, 2025 ಕ್ಕೆ […]

ಕನ್ನಡ ದುನಿಯಾ 8 Feb 2026 7:12 pm

BREAKING: ಕಾರ್ ಡಿಕ್ಕಿ: ಬೈಕ್ ನಲ್ಲಿದ್ದ ಇಬ್ಬರು ಸವಾರರು ಸ್ಥಳದಲ್ಲೇ ಸಾವು

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ಹೊರವಲಯದಲ್ಲಿ ಕಾರ್ ಡಿಕ್ಕಿಯಾಗಿ ಬೈಕ್ ನಲ್ಲಿ ತೆರಳುತ್ತಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬೈಕ್ ಸವಾರರಾದ ನಾಗರಾಜ್(68), ವೆಂಕಟರೆಡ್ಡಿ(50) ಮೃತಪಟ್ಟವರು ಎಂದು ಗುರುತಿಸಲಾಗಿದೆ. ಬೈಕ್ ಗೆ ಡಿಕ್ಕಿ ಹೊಡೆದು 200 ಮೀಟರ್ ದೂರದವರೆಗೂ ಕಾರ್ ಎಳೆದುಕೊಂಡು ಹೋಗಿದೆ. ಅಪಘಾತದ ನಂತರ ಕಾರ್ ನಿಲ್ಲಿಸಿ ಚಾಲಕ ಮತ್ತು ಇತರರು ಪರಾರಿಯಾಗಿದ್ದಾರೆ. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಹೆಚ್ಚಿನ ವಿವರ ನಿರೀಕ್ಷಿಸಲಾಗಿದೆ.

ಕನ್ನಡ ದುನಿಯಾ 8 Feb 2026 6:44 pm

ಕಾರ್ ಖರೀದಿ ಬಳಿಕ ವಿಮೆ ವರ್ಗಾಯಿಸದ ವಿಮಾ ಕಂಪನಿಗೆ ದಂಡ

ಧಾರವಾಡ: ವಕೀಲರ ಕಾರ್ ಗೆ ವಿಮೆ ವರ್ಗಾಯಿಸದ ವಿಮಾ ಕಂಪನಿಗೆ ದಂಡ ವಿಧಿಸಿದ್ದು, ಪರಿಹಾರ ನೀಡಲು ಆದೇಶಿಸಲಾಗಿದೆ. ಧಾರವಾಡದ ಹಿರಿಯ ವಕೀಲ ಪ್ರೀತಮ್ ರೇಗೆ ಅವರು ಹಳೆ ಕಾರ್ ಅನ್ನು ಜೂನ್-2025 ರಲ್ಲಿ ಖರೀದಿಸಿದ್ದರು. ಆ ವಾಹನದ ಆರ್.ಸಿ. ಮತ್ತು ವಿಮಾ ಪಾಲಿಸಿ ಹಳೆಯ ಮಾಲೀಕರ ಹೆಸರಿನಲ್ಲಿದ್ದವು. ಅದು ರಿಲೈಯನ್ಸ್ ಜನರಲ್ ವಿಮೆಯಾಗಿತ್ತು. ಆ ವಿಮೆ ಮಾರ್ಚ್- 2026ರವರೆಗೆ ಚಾಲ್ತಿಯಿತ್ತು. ವಾಹನ ಖರೀದಿಸಿದ ನಂತರ ಅದರ ಆರ್.ಸಿ. ಯನ್ನು ರೇಗೆಯವರು ತಮ್ಮ ಹೆಸರಿಗೆ ವರ್ಗಾವಣೆ ಮಾಡಿಕೊಂಡಿದ್ದರು. ಅದರ […]

ಕನ್ನಡ ದುನಿಯಾ 8 Feb 2026 6:37 pm

ಭಯೋತ್ಪಾದನೆಯ ಬಗ್ಗೆ ಯಾವುದೇ ದ್ವಿಮುಖ ನೀತಿ ಮತ್ತು ರಾಜಿ ಇಲ್ಲ: ಭಾರತದ ದೃಢ ನಿಲುವನ್ನು ಪುನರುಚ್ಚರಿಸಿದ ಪ್ರಧಾನಿ ಮೋದಿ

ಕೌಲಾಲಂಪುರ: ಪ್ರಧಾನಿ ನರೇಂದ್ರ ಮೋದಿ ಇಂದು ಕೌಲಾಲಂಪುರದಲ್ಲಿ ತಮ್ಮ ಮಲೇಷ್ಯಾದ ಪ್ರಧಾನಿ ಅನ್ವರ್ ಇಬ್ರಾಹಿಂ ಅವರೊಂದಿಗೆ ಮಹತ್ವದ ಮಾತುಕತೆ ನಡೆಸಿದರು. ರಕ್ಷಣೆ ಮತ್ತು ಭದ್ರತಾ ಸಂಬಂಧಗಳನ್ನು ಹೆಚ್ಚಿಸುವುದು ಮತ್ತು ಆರ್ಥಿಕ ಮತ್ತು ನಾವೀನ್ಯತೆ ಪಾಲುದಾರಿಕೆಯನ್ನು ಹೆಚ್ಚಿಸುವತ್ತ ಗಮನಹರಿಸಿದರು. ವಿಪತ್ತು ನಿರ್ವಹಣೆ, ಆಡಿಯೋವಿಶುವಲ್ ಸಹ-ಉತ್ಪಾದನೆ, ಭ್ರಷ್ಟಾಚಾರವನ್ನು ಎದುರಿಸುವುದು ಮತ್ತು ತಡೆಗಟ್ಟುವುದು, ಸೆಮಿಕಂಡಕ್ಟರ್ ಅಭಿವೃದ್ಧಿ, ಆರೋಗ್ಯ ಮತ್ತು ಔಷಧ, ವಿದ್ಯಾರ್ಥಿವೇತನ ಸಂಸ್ಥೆ ಮತ್ತು NPCI ಇಂಟರ್ನ್ಯಾಷನಲ್ ಪೇಮೆಂಟ್ಸ್ ಲಿಮಿಟೆಡ್ ಮತ್ತು ಮಲೇಷ್ಯಾದ PAYNET ನಡುವಿನ ಒಪ್ಪಂದ ಸೇರಿದಂತೆ ಹಲವಾರು ಒಪ್ಪಂದಗಳು […]

ಕನ್ನಡ ದುನಿಯಾ 8 Feb 2026 6:16 pm

BIG NEWS: ಆಕ್ಷೇಪಾರ್ಹ ಪದ ಬಳಕೆ: ಚಕ್ರವರ್ತಿ ಚಂದ್ರಚೂಡ್ ವಿರುದ್ಧ FIR ದಾಖಲು

ಬೆಂಗಳೂರು: ಆಕ್ಷೇಪಾರ್ಹ ಪದ ಬಳಕೆ ಆರೋಪದಲ್ಲಿ ಬರಹಗಾರ, ನಟ ಕಿಚ್ಚ ಸುದೀಪ್ ಮ್ಯಾನೇಜರ್ ಚಕ್ರವರ್ತಿ ಚಂದ್ರಚೂಡ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ನಿರ್ಮಾಪಕ ಕೆ.ಮಂಜು ನೀಡಿರುವ ದೂರಿನ ಹಿನ್ನೆಲೆಯಲ್ಲಿ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಬಿಎನ್ ಎಸ್ ಸೆಕ್ಷನ್ 351, 352 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಮಾನಹಾನಿ, ಬೆದರಿಕೆ, ಶಾಂತಿಭಂಗ ಉಂಟುಮಾಡುವ ಆರೋಪದಡಿ ಪ್ರಕರಣ ದಾಖಲಾಗಿದೆ. ಚಕ್ರವರ್ತಿ ಚಂದ್ರಚೂಡ್ ನಿರ್ಮಾಪಕರ ಬಗ್ಗೆ ಅಸಂವಿಧಾನಿಕ ಪದ ಬಳಕೆ ಮಾಡಿ ಮಾತನಾಡಿದ್ದರು. ಕನ್ನಡ ಚಿತ್ರ ನಿರ್ಮಾಪಕರ ಪರವಗಿ ನಿರ್ಮಾಪಕ ಕೆ.ಮಂಜು […]

ಕನ್ನಡ ದುನಿಯಾ 8 Feb 2026 6:04 pm

10 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಿಂತಿರುಗಿಸಿದ ಬಿಎಂಟಿಸಿ ಸಿಬ್ಬಂದಿ ಪ್ರಾಮಾಣಿಕತೆಗೆ ಭಾರಿ ಮೆಚ್ಚುಗೆ

ಬೆಂಗಳೂರು: ಬಸ್ ನಲ್ಲಿದ್ದ 10 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣವನ್ನು ಮಾಲೀಕರಿಗೆ ಹಿಂತಿರುಗಿಸಿ ಬಿಎಂಟಿಸಿ ಸಿಬ್ಬಂದಿ ಪ್ರಾಮಾಣಿಕತೆಗೆ ಮೆಚ್ಚುಗೆ ವ್ಯಕ್ತವಾಗಿದೆ. ಸುಮಾರು 10 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳಿದ್ದ ಬ್ಯಾಗ್ ಅನ್ನು ಬಸ್ ನಲ್ಲಿ ಮಹಿಳೆಯೊಬ್ಬರು ಬಿಟ್ಟು ಇಳಿದಿದ್ದರು. ಅದನ್ನು ಸುರಕ್ಷಿತವಾಗಿ ಮಾಲೀಕರಿಗೆ ತಲುಪಿಸಲಾಗಿದೆ. ಜನವರಿ 31ರಂದು ಕೆಆರ್ ಮಾರುಕಟ್ಟೆಯಿಂದ ಪದ್ಮನಾಭನಗರಕ್ಕೆ ಹೋಗುವ ಬಸ್ ನಲ್ಲಿ ಘಟನೆ ನಡೆದಿತ್ತು. ಕೆಆರ್ ಮಾರ್ಕೆಟ್ ನಲ್ಲಿ ಬಸ್ ಹತ್ತಿದ ಮಹಿಳೆ ಬ್ಯಾಗ್ ಬಿಟ್ಟು ಬಸವನಗುಡಿಯಲ್ಲಿ ಇಳಿದಿದ್ದರು. ಆದರೆ, ಬಸ್ ನಲ್ಲಿ […]

ಕನ್ನಡ ದುನಿಯಾ 8 Feb 2026 6:02 pm

ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ 5,138 ಅಪ್ರೆಂಟಿಸ್ ಹುದ್ದೆಗಳ ನೇಮಕಾತಿ

ಪಂಜಾಬ್ ನ್ಯಾಷನಲ್ ಬ್ಯಾಂಕ್(PNB) 1961 ರ ಅಪ್ರೆಂಟಿಸ್ ಕಾಯ್ದೆಯಡಿಯಲ್ಲಿ ಒಟ್ಟು 5,138 ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗೆ ಅರ್ಜಿ ಪ್ರಕ್ರಿಯೆಯನ್ನು ಅಧಿಕೃತವಾಗಿ ಪ್ರಾರಂಭಿಸಿದೆ. ಅಧಿಕೃತ ಅಧಿಸೂಚನೆಯ ಪ್ರಕಾರ, ಅರ್ಹ ಅಭ್ಯರ್ಥಿಗಳು PNB -pnb.bank.in ನ ಅಧಿಕೃತ ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು. ಆನ್‌ಲೈನ್ ನೋಂದಣಿ ಇಂದಿನಿಂದ ಅಂದರೆ ಫೆಬ್ರವರಿ 8, 2026 ರಿಂದ ಪ್ರಾರಂಭವಾಗಿ ಫೆಬ್ರವರಿ 24, 2026 ರಂದು ಕೊನೆಗೊಳ್ಳುತ್ತದೆ. ಅಪ್ರೆಂಟಿಸ್ ನೇಮಕಾತಿ : ಆಯ್ಕೆಯಾದ ಅಭ್ಯರ್ಥಿಗಳು ರಾಷ್ಟ್ರವ್ಯಾಪಿ ವಿವಿಧ ಪಂಜಾಬ್ ನ್ಯಾಷನಲ್ ಬ್ಯಾಂಕ್ ಶಾಖೆಗಳಲ್ಲಿ ಒಂದು […]

ಕನ್ನಡ ದುನಿಯಾ 8 Feb 2026 5:49 pm

BREAKING: ಸಿಎಂ ಸಿದ್ದರಾಮಯ್ಯ ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ಗೊಂದಲ: ಭದ್ರತಾ ವೈಫಲ್ಯ ಶಂಕೆ

ರಾಯಚೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ಗೊಂದಲವುಂಟಾಗಿದ್ದು, ಸಿಎಂ ಇಳಿಯಬೇಕಿದ್ದ ಹೆಲಿಪ್ಯಾಡ್ ಬದಲಾಗಿ ಸಚಿವ ಸತೀಶ್ ಜಾರಕಿಹೊಳಿ ಇಳಿಯಬೇಲಿದ್ದ ಹೆಲಿಪ್ಯಾಡ್ ನಲ್ಲಿ ಸಿಎಂ ಹೆಲಿಪಾಕ್ಟರ್ ಲ್ಯಾಂಡಿಗ್ ಆಗಿರುವ ಘಟನೆ ನಡೆದಿದೆ. ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ಕಲಬುರಗಿ ರಸ್ತೆಯಲ್ಲಿ ಈ ಘಟನೆ ನಡೆದಿದೆ. ರಾಯಚೂರು ರಸ್ತೆಯಲ್ಲಿ ಲ್ಯಾಂಡ್ ಆಗಬೇಕಿದ್ದ ಸಿಎಂ ಸಿದ್ದರಾಮಯ್ಯ ಹೆಲಿಕಾಪ್ಟರ್, ಕಲಬುರಗಿ ರಸ್ತೆಯಲ್ಲಿ ಲ್ಯಾಂಡ್ ಆಗಿದೆ. ಸಚಿವ ಸತೀಶ್ ಜಾರಕಿಹೊಳಿ ಅವರ ಹೆಲಿಕಾಪ್ಟರ್ ಲ್ಯಾಂಡ್ ಆಗಬೇಕಿದ್ದ ಸ್ಥಳದಲ್ಲಿ ಸಿಎಂ ಸಿದ್ದರಾಮಯ್ಯ ಹೆಲಿಕಾಪ್ಟರ್ […]

ಕನ್ನಡ ದುನಿಯಾ 8 Feb 2026 5:16 pm

ನಟ ಯಶ್ ತಾಯಿ ಪುಷ್ಪಾ ನಿವೇಶನ ವಿವಾದಕ್ಕೆ ಹೊಸ ಟ್ವಿಸ್ಟ್: ಸೈಟ್​​ನ ಮೂಲ ಮಾಲಕಿ ಪ್ರತ್ಯಕ್ಷ

ಹಾಸನ: ರಾಕಿಂಗ್ ಸ್ಟಾರ್ ಯಶ್ ತಾಯಿ ಪುಷ್ಪಾ ಅಅವರ ಹಾಸನದಲ್ಲಿನ ನಿವೇಶನ ವಿವಾದಕ್ಕೆ ಸಂಬಂಧಿಸಿದಂತೆ ಸೈಟ್ ನ ಮೂಲ ಮಾಲಕಿ ಪ್ರತ್ಯಕ್ಷವಾಗಿದ್ದಾರೆ. ಈ ಮೂಲಕ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಯಶ್ ತಾಯಿ ಪುಷ್ಪಾ ಅರುಣ್ ಕುಮಾರ್ ಅವರ ಹಾಸನದ ನಿವೇಶನ ವಿವಾದ ಹಲವು ದಿನಗಳಿಂದ ನಡೆಯುತ್ತಿದ್ದರೂ ಈವರೆಗೆ ಸುಮ್ಮನಿದ್ದ ಮೂಲ ಸೈಟ್ ಮಾಲಕಿ ಲಕ್ಷ್ಮಮ್ಮ ಈಗ ಪ್ರತ್ಯಕ್ಷವಾಗಿದ್ದು, ಕೆಲ ಹೇಳಿಕೆಗಳನ್ನು ನೀಡಿದ್ದಾರೆ. ಪುಷ್ಪ ಅರುಣ್ ಕುಮಾರ್ ಅವರ ಜಾಗ ಬೇರೆ ಕಡೆ ಇದೆ. ನಮ್ಮ ಜಾಗದಲ್ಲಿ […]

ಕನ್ನಡ ದುನಿಯಾ 8 Feb 2026 4:33 pm

ಪ್ರೇಮಿಗಳ ದಿನದಂದು ನಂದಿಗಿರಿಧಾಮ ಬಂದ್: ಚಿಕ್ಕಬಳ್ಳಾಪುರ ಜಿಲ್ಲಾಡಳಿತದ ವಿರುದ್ಧ ಪ್ರೇಮಿಗಳ ಆಕ್ರೋಶ

ಚಿಕ್ಕಬಳ್ಳಾಪುರ: ಫೆಬ್ರವರಿ 14, ಪ್ರೇಮಿಗಳ ದಿನದಂದು ವಿಶ್ವ ಪ್ರಸಿದ್ಧ ಪ್ರವಾಸಿ ತಾಣ ನಂದಿಗಿರಿಧಾಮಕ್ಕೆ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ನಿರ್ಬಂಧ ವಿಧಿಸಿದ್ದು, ಜಿಲ್ಲಾಡಳಿತದ ವಿರುದ್ಧ ಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೇ ಮೊದಲ ಬಾರಿಗೆ ಪ್ರೇಮಿಗಳ ದಿನದಂದು ನಂದಿಗಿರಿಧಾಮಕ್ಕೆ ಪ್ರವೇಶ ನಿಷೇಧಿಸಲಾಗಿದೆ. ಕೆಲ ಭಗ್ನ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಕಾರಣ ನೀಡಿ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಮುಂಜಾಗೃತಾ ಕ್ರಮವಾಗಿ ನಂದಿ ಗಿರಿಧಾಮ ಪ್ರವೇಶಕ್ಕೆ ನಿರ್ಬಂಧ ವಿಧಿಸಿದೆ. ಜಿಲ್ಲಾಡಳಿತದ ಕ್ರಮಕ್ಕೆ ಪ್ರೇಮಿಗಳು ಕಿಡಿಕಾರಿದ್ದಾರೆ. ಸಾಯೋರು ಎಲ್ಲಿದ್ರೂ ಸಾಯ್ತಾರೆ, ನಮಗ್ಯಾಕೆ ನಿರ್ಬಂಧ ಎಂದು ಆಕ್ರೋಶ […]

ಕನ್ನಡ ದುನಿಯಾ 8 Feb 2026 4:05 pm

ಶಾಸಕ ಜಿ.ಟಿ.ದೇವೇಗೌಡ ನಮ್ಮೊಂದಿಗಿಲ್ಲ: ಪಕ್ಷದ ಬಗ್ಗೆ ನಿಷ್ಠೆ ಇಲ್ಲದವರನ್ನು ಜೊತೆಯಲ್ಲಿಟ್ಟುಕೊಳ್ಳಬೇಕೆ? ಕುಮಾರಸ್ವಾಮಿ ಆಕ್ರೋಶ

ಮೈಸೂರು: ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಹಿರಿಯ​​ ಶಾಸಕ ಜಿ.ಟಿ. ದೇವೇಗೌಡ ವಿರುದ್ಧ ಕಿಡಿಕಾರಿರುವ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ನಮ್ಮೊಂದಿಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೆಚ್.ಡಿ.ಕುಮಾರಸ್ವಾಮಿ, ಅವರು ನಮ್ಮೊಂದಿಗಿಲ್ಲ. ಜಿ.ಟಿ.ದೇವೇಗೌಡ ಬೇರೆ ಮಹಾನ್ ನಾಯಕರ ಜೊತೆಯಲ್ಲಿದ್ದಾರೆ. ಪಕ್ಷದ ಬಗ್ಗೆ ನಿಯತ್ತು, ನಿಷ್ಠೆ ಇಲ್ಲದವರನ್ನು ಜೊತೆಯಲ್ಲಿಟ್ಟುಕೊಳ್ಳಬೇಕಾ? ಎಂದು ಪ್ರಶ್ನಿಸಿದ್ದಾರೆ. ನನ್ನ ಮುಂದೆ ಜಿ.ಟಿ. ದೇವೇಗೌಡ ಹೆಸರನ್ನು ಪ್ರಸ್ತಾಪ ಮಾಡಬೇಡಿ. ನನ್ನ ಮನಸ್ಸಿಗೆ ಬಹಳ ನೋವಾಗುವ ಘಟನೆ ನಡೆದಿದೆ. ನಾನು ರಾಜೀನಾಮೆ ಕೊಡುವ ತಪ್ಪನ್ನು ಏನು […]

ಕನ್ನಡ ದುನಿಯಾ 8 Feb 2026 3:42 pm

ಬಿಗ್ ಬಿ ಕೋಪಕ್ಕೆ ಬಲಿಯಾದರೇ ನಟಿ ಮೌಶುಮಿ? ನಾಯಕಿಯನ್ನೇ ಸಿನಿಮಾದಿಂದ ಕಿತ್ತೆಸೆದಿದ್ದ ಆ ಘಟನೆ ಹೀಗಿತ್ತು!

ಬಾಲಿವುಡ್‌ನ ‘ಬಿಗ್ ಬಿ’ ಅಮಿತಾಬ್ ಬಚ್ಚನ್ ಅವರ ‘ಆಂಗ್ರಿ ಯಂಗ್ ಮ್ಯಾನ್’ ಇಮೇಜ್ ತೆರೆಯ ಮೇಲೆ ಎಷ್ಟು ಫೇಮಸ್ಸೋ, ಅಷ್ಟೇ ಗಂಭೀರ ವ್ಯಕ್ತಿತ್ವ ಅವರದ್ದು. ಆದರೆ, ಒಮ್ಮೆ ಅಮಿತಾಬ್ ಬಚ್ಚನ್ ಅವರು ತಮ್ಮ ಸಹನಟಿ ಮೇಲಿನ ಕೋಪಕ್ಕಾಗಿ ಆಕೆಯನ್ನು ಸಿನಿಮಾದಿಂದಲೇ ಹೊರಹಾಕಿಸಿದ್ದರು ಎಂಬ ವಿಚಾರ ಈಗ ಹರಿದಾಡುತ್ತಿದೆ. ಆ ನಟಿ ಬೇರೆ ಯಾರೂ ಅಲ್ಲ, ಹಿರಿಯ ನಟಿ ಮೌಶುಮಿ ಚಟರ್ಜಿ. ಘಟನೆಯ ಹಿನ್ನೆಲೆ ಹೀಗಿದೆ: 80 ಮತ್ತು 90ರ ದಶಕದಲ್ಲಿ ಅಮಿತಾಬ್ ಬಚ್ಚನ್ ಚಿತ್ರರಂಗದ ಅಘೋಷಿತ ರಾಜನಂತಿದ್ದರು. […]

ಕನ್ನಡ ದುನಿಯಾ 8 Feb 2026 3:30 pm

BREAKING: ವಿಜಯಪುರದಲ್ಲಿ ಖಾಸಗಿ ಜೆಟ್ ರೆಡ್ ಬರ್ಡ್ ಪತನ

ವಿಜಯಪುರ: ಖಾಸಗಿ ಜೆಟ್ ರೆಡ್ ಬರ್ಡ್ ವಿಮಾನ ಪತನಗೊಂಡಿರುವ ಘಟನೆ ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಮಂಗಳೂರು ಎಂಬ ಗ್ರಾಮದಲ್ಲಿ ನಡೆದಿದೆ. ಖಾಸಗಿ ಮಿನಿ ವಿಮಾನ ದುರಂತಕ್ಕೀಡಾಗಿದ್ದು, ಹೊಲದ ಬಳಿ ಪತನಗೊಂಡಿದೆ. ವಿಮಾನದಲ್ಲಿದ್ದ ಇಬ್ಬರಿಗೆ ಗಂಭೀರ ಗಾಯಗಳಾಗಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಮಾನ ಪತನಕ್ಕೆ ಕಾರಣ ತಿಳಿದುಬಂದಿಲ್ಲ. ಘಟನಾ ಸ್ಥಳಕ್ಕೆ ಪೊಲೀಸರು ಹಾಗೂ ಅಧಿಕಾರಿಗಳು ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.

ಕನ್ನಡ ದುನಿಯಾ 8 Feb 2026 3:22 pm

ಸಿಮೆಂಟ್ ಮಿಕ್ಸರ್ ಲಾರಿ ಡಿಕ್ಕಿ: ಗರ್ಭಿಣಿ ಸ್ಥಳದಲ್ಲೇ ಸಾವು

ಬೆಂಗಳೂರು: ಸಿಮೆಂಟ್ ಮಿಕ್ಸರ್ ಲಾರಿ ಡಿಕ್ಕಿಯಾಗಿ ಸ್ಕೂಟಿಯಲ್ಲಿದ್ದ ಗರ್ಭಿಣಿ ಸಾವನ್ನಪ್ಪಿದ ಘಟನೆ ಬಾಗಲೂರಿನ ಗುಂಡಪ್ಪ ಕ್ರಾಸ್ ಬಳಿ ನಡೆದಿದೆ. ಬೆಂಗಳೂರು ನಗರ ಜಿಲ್ಲೆಯ ಉತ್ತರ ತಾಲೂಕಿನ ಬಾಗಲೂರು ಗ್ರಾಮದ ಬಳಿ ಸಂಭವಿಸಿದ ಅಪಘಾತದಲ್ಲಿ ಬೂದಿಗೆರೆ ವಿರಗನಗರ ನಿವಾಸಿ ಮಾನಸ ಮೃತಪಟ್ಟಿದ್ದಾರೆ. ಪರೀಕ್ಷೆ ಬರೆಯಲು ಸ್ಕೂಟಿಯಲ್ಲಿ ಹೋಗುತ್ತಿದ್ದಾಗ ಲಾರಿ ಹರಿದು ಸಾವನ್ನಪ್ಪಿದ್ದಾರೆ. ಹಿಂಬದಿಯಿಂದ ಲಾರಿ ಡಿಕ್ಕಿ ಹೊಡೆದು ಕೆಳಗೆ ಬಿದ್ದ ಮಾನಸ ಮೇಲೆ ಹರಿದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸಿಮೆಂಟ್ ಮಿಕ್ಸರ್ ಲಾರಿ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. […]

ಕನ್ನಡ ದುನಿಯಾ 8 Feb 2026 3:18 pm

ಗ್ರಾಹಕನ ಮೇಲೆ ಡಿಮಾರ್ಟ್ ಸಿಬ್ಬಂದಿ ಗೂಂಡಾವರ್ತನೆ ಆರೋಪ: ಅಧಿಕಾರಿಗಳ ಭೇಟಿ

ಚಿಕ್ಕಬಳ್ಳಾಪುರ: ಕ್ಷುಲ್ಲಕ ಕಾರಣಕ್ಕೆ ಗ್ರಾಹಕನ ಮೇಲೆ ಚಿಕ್ಕಬಳ್ಳಾಪುರದ ಡಿಮಾರ್ಟ್ ಸಿಬ್ಬಂದಿ ಗೂಂಡಾವರ್ತನೆ ತೋರಿಸಿದ ಆರೋಪ ಕೇಳಿ ಬಂದಿದೆ. 23,000 ರೂ. ಮೌಲ್ಯದ ಸಾಮಗ್ರಿ ಖರೀದಿಸಿದ ಗ್ರಾಹಕ ಚಂದ್ರಶೇಖರ್ ಸಾಮಗ್ರಿ ಜೊತೆಗೆ ಖಾಲಿ ಕವರ್ ತೆಗೆದುಕೊಂಡಿದ್ದಕ್ಕೆ ಗೂಂಡಾಗಿರಿ ನಡೆಸಲಾಗಿದೆ. ಗ್ರಾಹಕ ಚಂದ್ರಶೇಖರ್ ಗೆ ಆವಾಜ್ ಹಾಕಿ ಬೆದರಿಕೆ ಹಾಕಿದ ಆರೋಪ ಕೇಳಿ ಬಂದಿದೆ. ಡಿಮಾರ್ಟ್ ಗೆ ಫುಡ್ ಸೇಫ್ಟಿ ಅಧಿಕಾರಿಗಳು, ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಫುಡ್ ಸೇಫ್ಟಿ ಅಧಿಕಾರಿ ಅಂಬಿಕಾ, ಡಿಮಾರ್ಟ್ ನಲ್ಲಿ ನಿಯಮ ಪಾಲಿಸುತ್ತಿಲ್ಲ. […]

ಕನ್ನಡ ದುನಿಯಾ 8 Feb 2026 2:57 pm

ಸರ್ಕಾರಿ ನೌಕರರಿಗೆ ಸಬ್ಸಿಡಿ ದರದಲ್ಲಿ ಎಲ್ಲ ವಸ್ತು: ಮಿಲಿಟರಿ ಕ್ಯಾಂಟೀನ್ ಮಾದರಿ ಎಂಎಸ್ಐಎಲ್ ಸ್ಟೋರ್

ಬೆಂಗಳೂರು: ಸರ್ಕಾರಿ ನೌಕರರಿಗೆ ಎಲ್ಲಾ ವಸ್ತುಗಳನ್ನು ಸಬ್ಸಿಡಿ ದರದಲ್ಲಿ ಸಿಗುವಂತೆ ಮಾಡಲು ಮಿಲಿಟರಿ ಕ್ಯಾಂಟೀನ್ ಮಾದರಿಯಲ್ಲಿ ಎಂಎಸ್ಐಎಲ್ ಸ್ಟೋರ್ ತೆರೆಯುವ ಚಿಂತನೆ ಇದೆ ಎಂದು ಬೃಹತ್ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ್ ಹೇಳಿದ್ದಾರೆ. ಎಂಎಸ್ಐಎಲ್ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎಂಎಸ್ಐಎಲ್ ಚಿಟ್ಸ್ ಹೊಸ ತಂತ್ರಾಂಶ ಮತ್ತು ಮೊಬೈಲ್ ಆ್ಯಪ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ಎಂಎಸ್ಐಎಲ್ ಸ್ಟೋರ್ ತೆರೆಯುವ ಬಗ್ಗೆ ಸಾಧಕ ಬಾಧಕಗಳ ಅಧ್ಯಯನ ನಡೆಸಲಾಗುತ್ತಿದೆ. ಇದರಿಂದ 20 ಲಕ್ಷ ಕುಟುಂಬಗಳಿಗೆ ಅನುಕೂಲವಾಗುತ್ತದೆ ಎಂದು ಹೇಳಿದ್ದಾರೆ. ಎಂಎಸ್ಐಎಲ್ […]

ಕನ್ನಡ ದುನಿಯಾ 8 Feb 2026 2:47 pm

ಮಹಿಳಾ ಉದ್ದಿಮೆದಾರರಿಗೆ ಗುಡ್ ನ್ಯೂಸ್: ಗೃಹಲಕ್ಷ್ಮೀ ಡಿಜಿಟಲ್ ವೇದಿಕೆ ಸೌಲಭ್ಯ

ಕರ್ನಾಟಕ ರಾಜ್ಯದ ಮಹಿಳೆಯರನ್ನು ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಅಭಿವೃದ್ದಿಗೊಳಿಸಲು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ದಿ ನಿಗಮದಿಂದ ಸ್ವಯಂ ಉದ್ಯೋಗದಲ್ಲಿ ತೊಡಗಿಸಿಕೊಂಡಿರುವ ಮಹಿಳಾ ಉದ್ದಿಮೆದಾರರಿಗಾಗಿ ಗೃಹಲಕ್ಷ್ಮೀ ಡಿಜಿಟಲ್ ವೇದಿಕೆಯ ಸೌಲಭ್ಯ ಕಲ್ಪಿಸಲಾಗಿರುತ್ತದೆ. ಜನವರಿ 9, 2026 ರಂದು ಗೃಹಲಕ್ಷ್ಮೀ ಡಿಜಿಟಲ್ ಮಾರ್ಕೇಟಿಂಗ್ ಆ್ಯಪ್ ಅನ್ನು ಲಾಂಚ್ ಮಾಡಲಾಗಿರುತ್ತದೆ. ಆ್ಯಪ್‍ನಲ್ಲಿ ಮಹಿಳಾ ಉದ್ಯಮಿಗಳ ನೋಂದಣಿ ಕಾರ್ಯಕೈಗೊಳ್ಳಲು ಮಹಿಳಾ ಉದ್ದಿಮೆದಾರರು ತಾವು ತಯಾರಿಸುವ ಉತ್ಪನ್ನಗಳ ಮಾಹಿತಿಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಗೆ ಸಲ್ಲಿಸಬೇಕೆಂದು ಧಾರವಾಡ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ […]

ಕನ್ನಡ ದುನಿಯಾ 8 Feb 2026 2:35 pm

ವರ್ಗಾವಣೆಯಾದರೂ ಫೈಲ್ ಹೊಸ ಅಧಿಕಾರಿಗಳಿಗೆ ಕೊಡದಂತೆ IPS ಅಧಿಕಾರಿ ವರ್ತಿಕಾ ಕಟಿಯಾರ್ ಬೆದರಿಕೆ ಆರೋಪ

ಬಳ್ಳಾರಿ: ಬಳ್ಳಾರಿಯಲ್ಲಿ ಬ್ಯಾನರ್ ಗಲಾಟೆ ಪ್ರಕರಣದಲ್ಲಿ ಐಪಿಎಸ್ ಅಧಿಕಾರಿ ವರ್ತಿಕಾ ಕಟಿಯಾರ್ ವರ್ಗಾವಣೆಯಾಗಿದ್ದು, ಅವರ ಜಾಗಕ್ಕೆ ಐಪಿಎಸ್ ಅಧಿಕಾರಿ ಹರ್ಷ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಮಧ್ಯೆ ವರ್ತಿಕಾ ಕಟಿಯಾರ್ ವರ್ಗಾವಣೆಯಾಗಿದ್ದರೂ ಕೂಡ ಅವರು ಫೈಲ್ ಗಳನ್ನು ಹೊಸ ಅಧಿಕಾರಿಗಳಿಗೆ ಕೊಡದಂತೆ ಕರೆ ಮಾಡಿ ಬೆದರಿಕೆ ಹಾಕುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ವರ್ಗಾವಣೆ ಬಳಿಕ ಕೇಂದ್ರೀಯ ಆಡಳಿತಾತ್ಮಕ ನ್ಯಾಯಮಂಡಳಿ (CAT) ಮೊರೆ ಹೋಗಿರುವ ವರ್ತಿಕಾ ಕಟಿಯಾರ್ ಮತ್ತೆ ಬಳ್ಳಾರಿಗೆ ಬರಲು ಯತ್ನಿಸಿದ್ದಾರೆ. […]

ಕನ್ನಡ ದುನಿಯಾ 8 Feb 2026 2:21 pm

ಹಕ್ಕಿ ಜ್ವರಕ್ಕೆ ನೆರೆ ರಾಜ್ಯದಲ್ಲಿ 1,500 ಕಾಗೆಗಳು ಸಾವು: ಕರ್ನಾಟಕದಲ್ಲಿಯೂ ಹೆಚ್ಚುತ್ತಿದೆ H5N1 ವೈರಸ್ ಆತಂಕ

ಬೆಂಗಳೂರು: ಕರ್ನಾಟಕದಲ್ಲಿಯೂ ಹಕ್ಕಿ ಜ್ವರದ ಆತಂಕ ಶುರುವಾಗಿದೆ. ನೆರೆ ರಾಜ್ಯಗಳಾದ ಮಹಾರಾಷ್ಟ್ರ ಮತ್ತು ತಮಿಳುನಾಡುಗಳಲ್ಲಿ ಹಕ್ಕಿ ಜ್ವರದಿಂದಾಗಿ ಕಾಗೆಗಳು ಸಾವನ್ನಪ್ಪುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿಯೂ ಆತಂಕ ಎದುರಾಗಿದೆ. ಹಕ್ಕಿ ಜ್ವರಕ್ಕೆ ತಮಿಳನಾಡಿನಲ್ಲಿ 1,500ಕ್ಕೂ ಹೆಚ್ಚು ಕಾಗೆಗಳು ಮೃತಪಟ್ಟಿವೆ. ಮಹಾರಷ್ಟ್ರದಲ್ಲೂ ಹಕ್ಕಿ ಜ್ವರದ ವೈರಸ್​ ಹೆಚ್ಚಳವಾಗಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿಯೂ H5N1 ಭೀತಿ ಶುರುವಾಗಿದೆ. ಗಡಿ ಭಾಗದ ಜಿಲ್ಲೆಗಳಲ್ಲಿ ಎಚ್ಚರಿಕೆ ವಹಿಸುವಂತೆ ಪಶುಸಂಗೋಪಾನ ಇಲಾಖೆ ಸೂಚಿಸಿದೆ. ಹಕ್ಕಿ ಜ್ವರದ ತಡೆಗೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. H5N1 ವೈರಸ್‌ ಪಕ್ಷಿಗಳಲ್ಲಿ […]

ಕನ್ನಡ ದುನಿಯಾ 8 Feb 2026 2:02 pm

ಎರಡನೇ ಮದುವೆಗೆ ಮುಂದಾದ ಪತಿ: ತಾಳಿ ಕಟ್ಟುವ ವೇಳೆ ಪೊಲೀಸರೊಂದಿಗೆ ಕಲ್ಯಾಣ ಮಂಟಪಕ್ಕೆ ಎಂಟ್ರಿಕೊಟ್ಟು ಮದುವೆ ನಿಲ್ಲಿಸಿದ ಮೊದಲ ಪತ್ನಿ

ತುಮಕೂರು: ಪತಿ ಮಹಾಶಯನೊಬ್ಬ ಪ್ರೀತಿಸಿ ಮದುವೆಯಾಗಿದ್ದ ಪತ್ನಿಗೆ ಕೈಕೊಟ್ಟು ಮತ್ತೊಂದು ಮದುವೆಯಾಗುತ್ತಿದ್ದ ವೇಳೆ ನೇರವಾಗಿ ಕಲ್ಯಾಣ ಮಂಟಪಕ್ಕೆ ಬಂದ ಮೊದಲ ಪತ್ನಿ ಎರಡನೇ ಮದುವನ್ನು ನಿಲ್ಲಿಸಿರುವ ಘಟನೆ ತುವಮೂರಿನ ಎಸ್ ಎಲ್ ಎನ್ ಕಲ್ಯಾಣ ಮಂಟದಲ್ಲಿ ನಡೆದಿದೆ. ಹರಿಪ್ರಸಾದ್ ಎಂಬಾತ ತನ್ನ ಮೊದಲ ಪತ್ನಿ ಲೇಪಾಕ್ಷಿ ಎಂಬುವವರಿಗೆ ಮೋಸ ಮಾಡಿ ಆಕೆಗೆ ಗೊತ್ತಾಗದಂತೆ ಇಂದು ತುಮಕೂರಿನಲ್ಲಿ ಎರಡನೇ ಮದುವೆಯಾಗುತ್ತಿದ್ದ. ಕಲ್ಯಾಣ ಮಂಟಪದಲ್ಲಿ ಮದುವೆಯ ವೇಳೆ ಇನ್ನೇನು ತಾಳಿ ಕಟ್ಟುವ ಸಮಯ. ಈ ವೇಳೆ ಪೊಲೀಸರೊಂದಿಗೆ ಕಲ್ಯಾಣ ಮಂಟಪಕ್ಕೆ […]

ಕನ್ನಡ ದುನಿಯಾ 8 Feb 2026 1:23 pm

ನ್ಯಾಯ ಸಿಕ್ಕಿತು ಆದರೆ ಜೀವ ಉಳಿಯಲಿಲ್ಲ; ಗುಜರಾತ್ ಹೈಕೋರ್ಟ್ ತೀರ್ಪಿನ ಬೆನ್ನಲ್ಲೇ ಹೃದಯಾಘಾತದಿಂದ ನಿರಪರಾಧಿ ಸಾವು

ಭಾರತೀಯ ನ್ಯಾಯಾಂಗ ವ್ಯವಸ್ಥೆಯಲ್ಲಿನ ವಿಳಂಬ ಎಂತಹ ಕರಾಳ ದುರಂತಕ್ಕೆ ಕಾರಣವಾಗಬಹುದು ಎಂಬುದಕ್ಕೆ ಗುಜರಾತ್‌ನ ಈ ಘಟನೆ ಕಣ್ಣೀರಿಸುವಂತಿದೆ. ಕೇವಲ 20 ರೂಪಾಯಿ ಲಂಚ ಪಡೆದ ಆರೋಪ ಹೊತ್ತು, ಸಮಾಜದಲ್ಲಿನ ಅಪಮಾನದ ನಡುವೆಯೇ ಮೂರು ದಶಕಗಳ ಕಾಲ ಹೋರಾಡಿದ ವ್ಯಕ್ತಿಯೊಬ್ಬರು, ನ್ಯಾಯಾಲಯದಿಂದ ‘ನಿರಪರಾಧಿ’ ಎಂಬ ಪಟ್ಟ ಸಿಕ್ಕ ಮರುದಿನವೇ ಸಾವನ್ನಪ್ಪಿದ್ದಾರೆ. ಅಹಮದಾಬಾದ್‌ನಲ್ಲಿ ಪೊಲೀಸ್ ಕಾನ್ಸ್ಟೇಬಲ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಬಾಬುಭಾಯಿ ಪ್ರಜಾಪತಿ ಎಂಬುವವರ ಮೇಲೆ 1990ರ ದಶಕದಲ್ಲಿ 20 ರೂಪಾಯಿ ಲಂಚ ಪಡೆದ ಆರೋಪ ಕೇಳಿಬಂದಿತ್ತು. ಈ ಸಣ್ಣ ಮೊತ್ತದ […]

ಕನ್ನಡ ದುನಿಯಾ 8 Feb 2026 1:21 pm

SHOCKING: ವಿದ್ಯುತ್ ಗೀಸರ್ ಸ್ಫೋಟಗೊಂಡು ಮನೆಗೆ ಬೆಂಕಿ: ವ್ಯಕ್ತಿ ಸಾವು, ಪತ್ನಿಗೆ ಗಾಯ

ನವದೆಹಲಿ: ಆಗ್ನೇಯ ದೆಹಲಿಯಲ್ಲಿ ವಿದ್ಯುತ್ ಗೀಸರ್ ಸ್ಫೋಟದಿಂದ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡು 50 ವರ್ಷದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದು, ಅವರ ಪತ್ನಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ. ಹಜರತ್ ನಿಜಾಮುದ್ದೀನ್ ಪ್ರದೇಶದಲ್ಲಿ ಶನಿವಾರ ಸಂಜೆ 5 ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದೆ. ಮನೆಯಲ್ಲಿ ದೊಡ್ಡ ಬೆಂಕಿ ಕಾಣಿಸಿಕೊಂಡಿದೆ ಎಂದು ವರದಿ ಮಾಡಿದ ಪಿಸಿಆರ್ ಕರೆ ಪೊಲೀಸರಿಗೆ ಬಂದಿದ್ದು, ಸ್ಥಳಕ್ಕೆ ತಂಡವೊಂದು ಧಾವಿಸಿದೆ ಎಂದು ಅವರು ಹೇಳಿದರು. ಮನೆ ಒಳಗಿನಿಂದ ಲಾಕ್ ಆಗಿರುವುದನ್ನು ಪೊಲೀಸರು ಗಮನಿಸಿದ್ದಾರೆ. ಬಾಗಿಲು […]

ಕನ್ನಡ ದುನಿಯಾ 8 Feb 2026 1:03 pm

ಫೆ. 24 ರಂದು ಕೊಪ್ಪಳ ಬಂದ್ ಗೆ ಕರೆ

ಕೊಪ್ಪಳ: ಜಿಲ್ಲಾ ಕೇಂದ್ರದ ಸಮೀಪ ಪರಿಸರ ಮಾಲಿನ್ಯಕ್ಕೆ ಕಾರಣವಾಗಿರುವ ಕಾರ್ಖಾನೆಗಳ ನಿಯಂತ್ರಣಕ್ಕೆ ಒತ್ತಾಯಿಸಿ, ಕಾರ್ಖಾನೆಗಳ ವಿಸ್ತರಣೆಗೆ ಅವಕಾಶ ಕೊಡದಂತೆ ಆಗ್ರಹಿಸಿ ಫೆಬ್ರವರಿ 24 ರಂದು ಕೊಪ್ಪಳ ಬಂದ್ ಗೆ ನಿರ್ಧಾರ ಕೈಗೊಳ್ಳಲಾಗಿದೆ. ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ, ಪರಿಸರ ಹಿತರಕ್ಷಣಾ ಜಂಟಿ ಕ್ರಿಯಾ ವೇದಿಕೆಯ ಪ್ರಮುಖರು 100 ದಿನಗಳಿಂದ ನಡೆದಿರುವ ಧರಣಿ ಕಾರ್ಯಕ್ರಮದಲ್ಲಿ ಕೊಪ್ಪಳ ಬಂದ್ ಮಾಡುವ ವಿಷಯ ಪ್ರಕಟಿಸಿದ್ದಾರೆ. ಜಂಟಿ ಕ್ರಿಯಾ ವೇದಿಕೆಯ ಪ್ರಧಾನ ಸಂಚಾಲಕ ಅಲ್ಲಮ ಪ್ರಭು ಬೆಟ್ಟದೂರು ಮಾತನಾಡಿ, 2025ರಲ್ಲಿ ಕೊಪ್ಪಳದ […]

ಕನ್ನಡ ದುನಿಯಾ 8 Feb 2026 12:35 pm

ಬಾಂಗ್ಲಾದೇಶ ಚುನಾವಣೆಗೆ ಮುನ್ನ ಜೈಲಿನಲ್ಲೇ ನಿಧನರಾದ ಅವಾಮಿ ಲೀಗ್ ನಾಯಕ ರಮೇಶ್ ಚಂದ್ರ ಸೇನ್

ಢಾಕಾ: ಬಾಂಗ್ಲಾದೇಶದ ಹಿರಿಯ ರಾಜಕಾರಣಿ ರಮೇಶ್ ಚಂದ್ರ ಸೇನ್ ದಿನಾಜ್‌ಪುರದ ಜಿಲ್ಲಾ ಜೈಲಿನಲ್ಲಿ ಬಂಧನದ ಸಮಯದಲ್ಲಿ ಅನಾರೋಗ್ಯಕ್ಕೆ ಒಳಗಾದ ನಂತರ ಶನಿವಾರ ನಿಧನರಾಗಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಅವರಿಗೆ 86 ವರ್ಷ ವಯಸ್ಸಾಗಿತ್ತು. ಫೆಬ್ರವರಿ 12 ರಂದು ನಡೆಯಲಿರುವ ಸಂಸತ್ ಚುನಾವಣೆಗೆ ಕೆಲವೇ ದಿನಗಳ ಮೊದಲು ಅವರು ನಿಧನರಾಗಿದ್ದಾರೆ. ಶೇಖ್ ಹಸೀನಾ ನೇತೃತ್ವದ ಅವಾಮಿ ಲೀಗ್‌ನ ಹಿರಿಯ ನಾಯಕರಾಗಿದ್ದ ಸೇನ್ ಮತ್ತು ದೇಶದ ಜಲಸಂಪನ್ಮೂಲ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು. ಮಾಜಿ ಸಂಸತ್ ಸದಸ್ಯ ಸೇನ್ […]

ಕನ್ನಡ ದುನಿಯಾ 8 Feb 2026 12:24 pm

ಕೆಮ್ಮು-ಜ್ವರ ಎಂದು ಆಸ್ಪತ್ರೆಗೆ ಹೋದರೆ ಮಗುವಿನ ಶ್ವಾಸನಾಳದಲ್ಲಿತ್ತು ಬಲ್ಬ್: ವಡೋದರ ವೈದ್ಯರ ಕೈಚಳಕಕ್ಕೆ ಮಗು ಪುನರ್ಜನ್ಮ!

ಒಂದು ವರ್ಷದ ಮಗು ಸತತ ಒಂದೂವರೆ ತಿಂಗಳಿನಿಂದ ಜ್ವರ ಮತ್ತು ಕೆಮ್ಮಿನಿಂದ ಬಳಲುತ್ತಿದ್ದರೆ ಪೋಷಕರು ಅದನ್ನು ಸಾಮಾನ್ಯ ಕಾಯಿಲೆ ಎಂದು ಭಾವಿಸುವುದು ಸಹಜ. ಗುಜರಾತ್‌ನ ವಡೋದರ ಜಿಲ್ಲೆಯ ಮಾಲ್ಸರ್ ಗ್ರಾಮದ ಮಗುವಿನ ವಿಷಯದಲ್ಲೂ ಹೀಗೆಯೇ ಆಗಿತ್ತು. ಮಗುವಿಗೆ ತೀವ್ರ ಜ್ವರ ಮತ್ತು ನಿರಂತರ ಕೆಮ್ಮು ಕಾಣಿಸಿಕೊಂಡಾಗ, ಪೋಷಕರು ಹಲವಾರು ಖಾಸಗಿ ಆಸ್ಪತ್ರೆಗಳಿಗೆ ಅಲೆದಾಡಿದ್ದರು. ಎಲ್ಲಾ ಕಡೆ ವೈದ್ಯರು ಇದು ‘ನ್ಯುಮೋನಿಯಾ’ ಇರಬಹುದೆಂದು ಚಿಕಿತ್ಸೆ ನೀಡಿದ್ದರು. ಆದರೆ ಎಷ್ಟು ಔಷಧೋಪಚಾರ ಮಾಡಿದರೂ ಮಗುವಿನ ಆರೋಗ್ಯದಲ್ಲಿ ಚೇತರಿಕೆ ಕಂಡುಬರಲಿಲ್ಲ. ಕೊನೆಗೆ […]

ಕನ್ನಡ ದುನಿಯಾ 8 Feb 2026 12:15 pm

ಎಲ್ಲ ವಸತಿ ನಿಲಯಗಳಲ್ಲಿ ಮೂರು ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ ಕಡ್ಡಾಯ

ಮಹಿಳೆಯರಿಗೆ ಸಂಬಂಧಿಸಿದ ಯಾವುದೇ ಸಮಸ್ಯೆಗಳನ್ನು ಪರಿಹರಿಸಲು ರಾಜ್ಯ ಮಹಿಳಾ ಆಯೋಗವು ಸದಾ ಸಿದ್ದವಾಗಿದ್ದು, ಮಹಿಳೆಯರ ರಕ್ಷಣೆಗೆ ಹಾಗೂ ಮಹಿಳೆಯರಿಗೆ ಕಾನೂನಾತ್ಮಕ ನೆರವು ನೀಡಲು ಬದ್ಧವಾಗಿರುತ್ತದೆ ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ಡಾ. ನಾಗಲಕ್ಷ್ಮೀ ಚೌಧರಿ ಅವರು ಹೇಳಿದರು. ಕೊಪ್ಪಳ ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಹಮ್ಮಿಕೊಂಡಿದ್ದ ಪ್ರವಾಸ ಕಾರ್ಯಕ್ರಮದಲ್ಲಿ ಗಮನಿಸಿದ ಅಂಶಗಳು, ಸಮಸ್ಯೆಗಳ ಕುರಿತು ಕೈಗೊಂಡ ಕ್ರಮಗಳ ಕುರಿತು ಮಾಹಿತಿ ನೀಡಲು ಕೊಪ್ಪಳ ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರದಂದು ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. […]

ಕನ್ನಡ ದುನಿಯಾ 8 Feb 2026 11:59 am

ಕೋಟಿ ಕೋಟಿ ಸುರಿದರೂ 27ನೇ ಫ್ಲೋರ್‌ನಲ್ಲೇ ವಾಸವಿರುವ ಮುಕೇಶ್ ಅಂಬಾನಿ; ಅದಕ್ಕಿದೆ ಒಂದು ಸಿಂಪಲ್ ಕಾರಣ

ಮುಂಬೈನ ಅಲ್ಟಾಮೌಂಟ್ ರೋಡ್‌ನಲ್ಲಿ ತಲೆ ಎತ್ತಿ ನಿಂತಿರುವ ‘ಆಂಟಿಲಿಯಾ’ ವಿಶ್ವದ ಅತ್ಯಂತ ದುಬಾರಿ ಖಾಸಗಿ ನಿವಾಸಗಳಲ್ಲಿ ಒಂದು. ಆದರೆ ಈ ಭವ್ಯ ಬಂಗಲೆಯನ್ನು ಹೊರಗಿನಿಂದ ನೋಡಿದಾಗ ನಮಗೆ ಸಾಮಾನ್ಯವಾಗಿ ಕಾಣಿಸುವ ಎಸಿ ಫ್ಯಾನ್‌ಗಳು ಅಥವಾ ಕಂಪ್ರೆಸರ್‌ಗಳು (Outdoor AC Units) ಎಲ್ಲೂ ಗೋಚರಿಸುವುದಿಲ್ಲ. ಇದಕ್ಕೆ ಕಾರಣ ಅಂಬಾನಿ ಕುಟುಂಬದ ಸೌಂದರ್ಯ ಪ್ರಜ್ಞೆ ಮತ್ತು ಆಧುನಿಕ ತಂತ್ರಜ್ಞಾನ. ಎಸಿ ಯುನಿಟ್‌ಗಳು ಇಲ್ಲದಿರಲು ಕಾರಣವೇನು? ಆಂಟಿಲಿಯಾ ತನ್ನ ವಿನ್ಯಾಸದಲ್ಲಿ ಸಾಂಪ್ರದಾಯಿಕ ಎಸಿ ವ್ಯವಸ್ಥೆಯನ್ನು ಬಳಸುವುದಿಲ್ಲ. ಬದಲಾಗಿ, ಇಡೀ ಕಟ್ಟಡಕ್ಕೆ ಅತ್ಯಾಧುನಿಕ […]

ಕನ್ನಡ ದುನಿಯಾ 8 Feb 2026 11:45 am

BREAKING: ಬಿಜೆಪಿ ಶಾಸಕ ವೇದವ್ಯಾಸ್ ಕಾಮತ್ ಪತ್ನಿ ಬಗ್ಗೆ ಅವಹೇಳನಕಾರಿ ಪೋಸ್ಟ್: ಆರೋಪಿ ಅರೆಸ್ಟ್

ಮಂಗಳೂರು: ಬಿಜೆಪಿ ಶಾಸಕ ವೇದವ್ಯಾಸ್ ಕಾಮತ್ ಪತ್ನಿ ಬಗ್ಗೆ ಅವಹೇಳನಕಾರಿ ಪೋಸ್ಟ್ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ. ಬಂಟ್ವಾಳ ತಾಲೂಕಿನ ಶರಣ್ ರೈ (29) ಬಂಧಿತ ಆರೋಪಿ. ಶಾಸಕ ವೇದವ್ಯಾಸ್ ಕಾಮತ್ ಪತ್ನಿ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿಯಾಗಿ ಪೋಸ್ಟ್ ಹಾಕಿದ್ದ. ಈ ಬಗ್ಗೆ ಮಹಿಳೆಯೊಬ್ಬರು ನೀಡಿದ ದೂರಿನ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಆರೋಪಿ ಶರಣ್ ರೈನನ್ನು ಬಂಧಿಸಲಾಗಿದೆ. ಅಧಿವೇಶನದಲ್ಲಿ ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡ ಹಾಗೂ ಬಿಇಜೆಪಿ […]

ಕನ್ನಡ ದುನಿಯಾ 8 Feb 2026 11:42 am

ಮದುವೆ ಆಮಂತ್ರಣ ಪತ್ರಿಕೆ ಕೊಡಲು ಹೋಗುತ್ತಿದ್ದಾಗಲೇ ಘೋರ ದುರಂತ: ಕಾರ್ ಡಿಕ್ಕಿಯಾಗಿ ವರ ಸೇರಿ ಮೂವರು ಸಾವು

ರೇವಾ: ಮಧ್ಯಪ್ರದೇಶದ ರೇವಾದಲ್ಲಿ ವೇಗವಾಗಿ ಬಂದ ಆಡಿ ಕಾರ್ ಬೈಕ್‌ ಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಸಾವನ್ನಪ್ಪಿದ್ದಾರೆ. ರಾಯ್‌ಪುರ್ ಕರ್ಚುಲಿಯನ್ ಪೊಲೀಸ್ ವ್ಯಾಪ್ತಿಯ ರೇವಾ-ಪ್ರಯಾಗರಾಜ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಭೀಕರ ಅಪಘಾತ ಸಂಭವಿಸಿದೆ. ಮೃತರು, ತಂದೆ, ಅವರ ಮಗ ಮತ್ತು ಮಹಿಳಾ ಸಂಬಂಧಿ, ಮದುವೆ ಆಮಂತ್ರಣ ಪತ್ರಿಕೆಗಳನ್ನು ತಲುಪಿಸುತ್ತಿದ್ದ ಮೋಟಾರ್ ಸೈಕಲ್‌ನಲ್ಲಿ ಹೋಗುತ್ತಿದ್ದಾಗ ಅವರ ವಾಹನಕ್ಕೆ ಕಾರ್ ಮುಖಾಮುಖಿ ಡಿಕ್ಕಿ ಹೊಡೆದಿದೆ. ರೇವಾದಿಂದ ಸುಮಾರು 20 ಕಿಲೋಮೀಟರ್ ದೂರದಲ್ಲಿರುವ ಕೋಸ್ಟಾ ಜಿಯುಲಾ ತಿರುವಿನ ಬಳಿ ಅಪಘಾತ […]

ಕನ್ನಡ ದುನಿಯಾ 8 Feb 2026 11:29 am

ಖಾಸಗಿ ಶಾಲೆಗಳಲ್ಲಿ ಉಚಿತ ಸೀಟು: ಆರ್.ಟಿ.ಇ. ಅಡಿ ಮಕ್ಕಳನ್ನು ಶಾಲೆಗೆ ಸೇರಿಸುವ ಪೋಷಕರಿಗೆ ಗುಡ್ ನ್ಯೂಸ್

ಬೆಂಗಳೂರು: ಶಿಕ್ಷಣ ಹಕ್ಕು ಕಾಯ್ದೆ(ಆರ್‌ಟಿಇ) ಅಡಿ ಖಾಸಗಿ ಶಾಲೆಗಳಲ್ಲಿ ಶೇಕಡ 25 ರಷ್ಟು ಉಚಿತ ಸೀಟು ಪಡೆಯಲು ಶಾಲಾ ಶಿಕ್ಷಣ ಇಲಾಖೆ 2026- 27 ನೇ ಸಾಲಿನ ಅರ್ಜಿ ಸಲ್ಲಿಕೆ ಮತ್ತು ಆಯ್ಕೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಮಾರ್ಗಸೂಚಿ ಬಿಡುಗಡೆ ಮಾಡಿದೆ. ನೆರೆಹೊರೆಯ ಎಲ್ಲಾ ಶಾಲೆಗಳ ಪಟ್ಟಿಯನ್ನು ಫೆಬ್ರವರಿ 12ರಂದು ಬಿಡುಗಡೆ ಮಾಡಲಿದ್ದು, ಇದಕ್ಕೆ ಆಕ್ಷೇಪಣೆಗಳಿದ್ದಲ್ಲಿ ಫೆಬ್ರವರಿ 16ರೊಳಗೆ ಸಲ್ಲಿಸಬಹುದು. ಫೆಬ್ರವರಿ 18ರಂದು ನೆರೆಹೊರೆ ಶಾಲೆಗಳ ಅಂತಿಮ ಪಟ್ಟಿ ನೀಡಲಾಗುವುದು. ಎಲ್ಕೆಜಿ ಮತ್ತು ಒಂದನೇ ತರಗತಿ ಪ್ರವೇಶಕ್ಕೆ ಖಾಸಗಿ […]

ಕನ್ನಡ ದುನಿಯಾ 8 Feb 2026 11:18 am

BIG NEWS: ಬಳ್ಳಾರಿಯಲ್ಲಿ ಉತ್ಖನನದ ವೇಳೆ 5000 ವರ್ಷಗಳ ಹಿಂದಿನ ಮಾನವನ ಅಸ್ಥಿಪಂಜರ ಪತ್ತೆ

ಬಳ್ಳಾರಿ: ಗದಗ ಜಿಲ್ಲೆಯ ಐತಿಹಾಸಿಕ ಸ್ಥಳ ಲಕ್ಕುಂಡಿಯ ವೀರಭದ್ರಸ್ವಾಮಿ ದೇವಾಲಯದ ಬಳಿ ನಡೆಯುತ್ತಿರುವ ಉತ್ಖನನದ ವೇಳೆ ಮುತ್ತು, ಹವಳ, ಅಮೂಲ್ಯ ವಸ್ತುಗಳು, ಪುರಾತನ ವಸ್ತುಗಳು, ದೇವರ ವಿಗ್ರಹ ಪತ್ತೆಯಾಗುತ್ತಿರುವುದು ಸಾಕಷ್ಟು ಕುತೂಹಲ ಮೂಡಿಸಿತ್ತು. ಇದರ ನಡುವೆಯೇ ಬಳ್ಳಾರಿಯಲ್ಲಿ ನಡೆಯುತ್ತಿರುವ ಉತ್ಖನನದ ವೇಳೆ 5000 ವರ್ಷಗಳ ಹಿಂದಿನ ಮಾನವನ ಅಸ್ಥಿಪಂಜರ ಪತ್ತೆಯಾಗಿದೆ. ಬಳ್ಳಾರಿ ಜಿಲ್ಲೆಯ ತೆಕ್ಕಲಕೋಟೆ ಪಟ್ಟಣದ ಗೌಡ್ರ ಮೂಲೆ ಬೆಟ್ಟದಲ್ಲಿ ಉತ್ಖನನ ನಡೆಸುತ್ತಿದ್ದ ವೇಳೆ ಸುಮಾರು 3-5 ಸಾವಿರ ವರ್ಷಗಳ ಹಿಂದಿನ ಮಾನವ ಅಸ್ಥಿಪಂಜರಗಳು ಪತ್ತೆಯಾಗಿದೆ. ಕಳೆದ […]

ಕನ್ನಡ ದುನಿಯಾ 8 Feb 2026 11:17 am

ನಟಿ ಅಸಿನ್ ಸಿನಿಮಾ ಬಿಟ್ಟಿದ್ದೇಕೆ? 1300 ಕೋಟಿ ಒಡೆಯ ರಾಹುಲ್ ಶರ್ಮಾ ಅವರ ಸೈಲೆಂಟ್ ಸಾಮ್ರಾಜ್ಯದ ಕಥೆ ಇಲ್ಲಿದೆ

ಒಂದು ಕಾಲದಲ್ಲಿ ಭಾರತದ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಮೈಕ್ರೋಮ್ಯಾಕ್ಸ್ ಎನ್ನುವುದು ಕೇವಲ ಹೆಸರಲ್ಲ, ಅದೊಂದು ಸಂಚಲನವಾಗಿತ್ತು. ಚೀನಿ ಕಂಪನಿಗಳ ಅಬ್ಬರ ಶುರುವಾಗುವ ಮೊದಲೇ ಭಾರತೀಯ ಕಂಪನಿಯೊಂದು ಜಾಗತಿಕ ಮಟ್ಟದಲ್ಲಿ ಸದ್ದು ಮಾಡಬಹುದು ಎಂದು ತೋರಿಸಿಕೊಟ್ಟವರು ರಾಹುಲ್ ಶರ್ಮಾ. 2014ರಲ್ಲಿ ಸ್ಯಾಮ್‌ಸಂಗ್ ಕಂಪನಿಯನ್ನು ಹಿಂದಿಕ್ಕಿ ಭಾರತದ ನಂಬರ್ 1 ಮೊಬೈಲ್ ಬ್ರ್ಯಾಂಡ್ ಆಗಿ ಹೊರಹೊಮ್ಮಿದ್ದ ಮೈಕ್ರೋಮ್ಯಾಕ್ಸ್, ವರ್ಷಕ್ಕೆ 12,000 ರಿಂದ 15,000 ಕೋಟಿ ರೂಪಾಯಿ ವಹಿವಾಟು ನಡೆಸುತ್ತಿತ್ತು. ಆದರೆ ಚೀನಿ ಕಂಪನಿಗಳ ಆಕ್ರಮಣಕಾರಿ ಮಾರುಕಟ್ಟೆ ತಂತ್ರಗಳಿಂದ ಮೈಕ್ರೋಮ್ಯಾಕ್ಸ್ ಭಾರಿ ಕುಸಿತ […]

ಕನ್ನಡ ದುನಿಯಾ 8 Feb 2026 11:11 am

ನೀವು ನೀಡಿದ ಒಂದು ಯುನಿಟ್ ರಕ್ತ ದೇಹದಲ್ಲಿ ಮರುಪೂರಣವಾಗಲು ಎಷ್ಟು ಸಮಯ ಬೇಕು? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್

ರಕ್ತದಾನ ಮಾಡುವುದು ಒಂದು ಪುಣ್ಯದ ಕೆಲಸ. ಇದು ಕೇವಲ ರೋಗಿಯ ಜೀವ ಉಳಿಸುವುದು ಮಾತ್ರವಲ್ಲದೆ, ದಾನಿಯ ಆರೋಗ್ಯದ ಮೇಲೂ ಧನಾತ್ಮಕ ಪರಿಣಾಮ ಬೀರುತ್ತದೆ. ಆದರೆ ಮೊದಲ ಬಾರಿಗೆ ರಕ್ತದಾನ ಮಾಡುವವರಲ್ಲಿ “ನನ್ನ ದೇಹದಲ್ಲಿ ರಕ್ತದ ಕೊರತೆಯಾಗಬಹುದೇ?” ಅಥವಾ “ನಾನು ಸುಸ್ತಾಗಿ ಬಿದ್ದುಬಿಡುತ್ತೇನೆಯೇ?” ಎಂಬ ಆತಂಕವಿರುವುದು ಸಹಜ. ಆದರೆ ವಾಸ್ತವದಲ್ಲಿ, ರಕ್ತದಾನ ಮಾಡಿದ ಕ್ಷಣದಿಂದಲೇ ನಮ್ಮ ದೇಹವು ಅತ್ಯಂತ ವೇಗವಾಗಿ ಚೇತರಿಸಿಕೊಳ್ಳಲು ಆರಂಭಿಸುತ್ತದೆ. ನಮ್ಮ ದೇಹವು ರಕ್ತದಾನದ ನಂತರದ ಮೊದಲ 24 ಗಂಟೆಗಳಲ್ಲಿ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದು ನಿಜಕ್ಕೂ […]

ಕನ್ನಡ ದುನಿಯಾ 8 Feb 2026 11:00 am