SENSEX
NIFTY
GOLD
USD/INR

Weather

19    C

ಡಿಜಿಟಲ್ ಸುದ್ದಿ ಮೂಲಗಳು

... ...View News by News Source

WPL 2026: ಮುಂಬೈ ವಿರುದ್ಧ ಸೋತ ಆರ್‌ಸಿಬಿ; ಟೂರ್ನಿಯಲ್ಲಿದು ಎರಡನೇ ಸೋಲು

ವಡೋದರಾದ ಕೊಟಂಬಿಯ ಬಿಸಿಎ ಸ್ಟೇಡಿಯಂನಲ್ಲಿ ನಡೆದ ವನಿತೆಯರ ಪ್ರೀಮಿಯರ್ ಲೀಗ್ 2026ರ ಲೀಗ್ ಹಂತದ 16ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಮುಂಬೈ ಇಂಡಿಯನ್ಸ್ ತಂಡ 15 ರನ್‌ಗಳ ಗೆಲುವನ್ನು ದಾಖಲಿಸಿದೆ. ಪಂದ್ಯದಲ್ಲಿ ಟಾಸ್ ಗೆದ್ದ ಆರ್‌ಸಿಬಿ ಬೌಲಿಂಗ್ ಆರಿಸಿಕೊಂಡು ಮುಂಬೈ ಇಂಡಿಯನ್ಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ನ್ಯಾಟ್ ಸೀವರ್ ಬ್ರಂಟ್ ಶತಕದ ನೆರವಿನಿಂದ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 199 ರನ್ […]

ಕನ್ನಡ ದುನಿಯಾ 26 Jan 2026 11:19 pm

ಬೇಡ್ತಿ ವರದಾ ನದಿ ಜೋಡಣೆಗೆ ಮನೆ ಮನೆಗೂ ಜಾಗೃತಿ: ಕೇಂದ್ರಕ್ಕೆ ನಿಯೋಗ: ಸಂಸದ ಬೊಮ್ಮಾಯಿ ಮಾಹಿತಿ

ಹಾವೇರಿ: ಬೇಡ್ತಿ ವರದಾ ನದಿ ಜೋಡಣೆಯ ಅಗತ್ಯತೆ ಕುರಿತು ಹಾವೇರಿಯ ಹುಕ್ಕೇರಿ ಮಠದ ಸದಾಶಿವ ಸ್ವಾಮೀಜಿಗಳ ನೇತೃತ್ವದಲ್ಲಿ ನಿಯೋಗ ಕರೆದೊಯ್ದು ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಭೇಟಿ ಮಾಡುವುದು ಹಾಗೂ ಕೇಂದ್ರ ಜಲಶಕ್ತಿ ಸಚಿವರು ಹಾಗೂ ರಾಜ್ಯವನ್ನು ಪ್ರತಿನಿಧಿಸುವ ಸಚಿವರನ್ನು ಭೇಟಿ ಮಾಡಿ ಮನವರಿಕೆ ಮಾಡಿಕೊಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಹಾವೇರಿಯಲ್ಲಿ ಮಾತನಾಡಿದ ಸಂಸದ ಬೊಮ್ಮಾಯಿ, ಕೇಂದ್ರ ಸರ್ಕಾರಕ್ಕೆ ಮತ್ತು ರಾಜ್ಯಕ್ಕೂ ನಿಯೋಗ ತೆಗೆದುಕೊಂಡು ಹೋಗಿ ಬೇಡ್ತಿ-ವರದಾ ನದಿ ಜೋಡಣೆ […]

ಕನ್ನಡ ದುನಿಯಾ 26 Jan 2026 9:55 pm

ಯುವ ಜನರು ಮತ್ತು ಭಕ್ತಿ: ಮೋದಿ ಮೆಚ್ಚಿದ ಭಜನ್ ಕ್ಲಬ್ಬಿಂಗ್!

ಯುವಕರ ಭಕ್ತಿ ಹಾದಿಗೆ ಪ್ರಧಾನಿ ನರೇಂದ್ರ ಮೋದಿ ಸಂತಸ ವ್ಯಕ್ತಪಡಿಸಿದ್ದಾರೆ. ಜೆನ್‌ ಜಿ ಭಜನ್‌ ಕ್ಲಬ್‌ ಕುರಿತು ಮೋದಿ ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ ‘ಮನ್ ಕಿ ಬಾತ್’ನ 130ನೇ ಸಂಚಿಕೆಯಲ್ಲಿ ಮಾತನಾಡಿದ್ದಾರೆ. ನರೇಂದ್ರ ಮೋದಿ, “ಆಧ್ಯಾತ್ಮಿಕತೆ ಮತ್ತು ಸಂಪ್ರದಾಯವನ್ನು ಆಧುನಿಕ ಸಂಸ್ಕೃತಿಯೊಂದಿಗೆ ಸುಂದರವಾಗಿ ಸಮ್ಮಿಳಿತಗೊಳಿಸಲಾಗಿದೆ” ಎಂದು ಶ್ಲಾಘಿಸಿದರು. ಮನ್ ಕಿ ಬಾತ್‌ನಲ್ಲಿ ಮೋದಿ, “ಯುವ ಭಾರತ ಭಜನ್ ಕ್ಲಬ್ಬಿಂಗ್ ಎಂಬುದನ್ನು ಇಷ್ಟಪಟ್ಟಿರುವುದು, ಅಪ್ಪಿಕೊಳ್ಳುತ್ತಿರುವುದು ಭಕ್ತಿ, ಸಂಸ್ಕೃತಿ, ಆಧ್ಯಾತ್ಮಿಕತೆ ಮತ್ತು ಆಧುನಿಕ ಸಂವೇದನೆಗಳ ಅರ್ಥಪೂರ್ಣ ಸಮ್ಮಿಲನವಾಗಿದೆ” ಎಂದು […]

ಕನ್ನಡ ದುನಿಯಾ 26 Jan 2026 9:48 pm

Big Update: ಶಾಲಾ ಪಠ್ಯ ಸೇರಲಿದೆ ಬಿಟ್ಕಾಯಿನ್, ಡಿಜಿಟಲ್ ಶಿಕ್ಷಣ ಅಗತ್ಯ, ಅನಿವಾರ್ಯ

ಬಿಟ್ಕಾಯಿನ್, ಕ್ರಿಪ್ಟೋ ಕರೆನ್ಸಿ ಸೇರಿದಂತೆ ವಿವಿಧ ವಿಚಾರಗಳು ಶಾಲಾ ಪಠ್ಯದಲ್ಲಿ ಸೇರಲಿವೆ. ಹೌದು ಡಿಜಿಟಲ್ ಶಿಕ್ಷಣ ಇಂದಿನ ಅಗತ್ಯ ಮತ್ತು ಅನಿವಾರ್ಯವಾಗಿದೆ. ಆದ್ದರಿಂದ ಶಾಲಾ ಹಂತದಲ್ಲಿಯೇ ಅವುಗಳ ಕುರಿತು ಮಾಹಿತಿ ನೀಡಲು ಸರ್ಕಾರ ತೀರ್ಮಾನ ಮಾಡಿದೆ. ಬಿಟ್ಕಾಯಿನ್ ಕುರಿತ ಶಿಕ್ಷಣವನ್ನು 2027ರ ವೇಳೆಗೆ ನ್ಯೂಜಿಲೆಂಡ್‌ನ ಶಾಲೆಗಳಲ್ಲಿ ಬೋಧಿಸಲಾಗುತ್ತದೆ. ಬಿಟ್ಕಾಯಿನ್, ಕ್ರಿಪ್ಟೊ ಕರೆನ್ಸಿ ಮತ್ತು ಬ್ಲಾಕ್ಚೈನ್ ಪಾಠಗಳನ್ನು ಡಿಜಿಟಲ್ ಕರೆನ್ಸಿ ಪಾಠಗಳು ಎಂಬ ಯೋಜನೆಯಡಿ ಶಾಲಾ ಪಠ್ಯಕ್ಕೆ ಸೇರಿಸಲಾಗುತ್ತದೆ. ಪ್ರಾಯೋಗಿಕವಾಗಿ 2026ರಲ್ಲಿ ಇದನ್ನು ಶಾಲೆಗಳಲ್ಲಿ ಪ್ರಾರಂಭಿಸಲಾಗುತ್ತದೆ. 2027ರ ವೇಳೆಗೆ […]

ಕನ್ನಡ ದುನಿಯಾ 26 Jan 2026 8:23 pm

ಟೂರಿಸ್ಟ್ ಬೋಟ್ ಮುಳುಗಿ ಇಬ್ಬರು ಸಾವು ಪ್ರಕರಣ: ತನಿಖೆಗೆ ಸೂಚಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ಉಡುಪಿ: ಅರಬ್ಬಿ ಸಮುದ್ರದಲ್ಲಿ ಟೂರಿಸ್ಟ್ ಬೋಟ್ ಮುಳುಗಿ ಇಬ್ಬರು ಪ್ರವಾಸಿಗರು ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತನಿಖೆಗೆ ಸೂಚಿಸಿದ್ದಾರೆ. ಉಡುಪಿ ಜಿಲ್ಲೆಯ ಮಲ್ಪೆ ಕೋಡಿಬೆಂಗ್ರೆಯಲ್ಲಿ ಪ್ರವಾಸಿಗರ ಬೋಟ್ ಮುಳುಗಿ ಇಬ್ಬರು ಮೃತಪಟ್ಟಿದ್ದಾರೆ. ಇಬ್ಬರ ಸ್ಥಿತಿ ಗಂಭೀರವಾಗಿದೆ. ಘಟನೆಯ ಬಗ್ಗೆ ತೀವ್ರ ಸಂತಾಪ ಸೂಚಿಸಿರುವ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ಪ್ರವಾಸಿಗರ ಬೋಟ್ ಮುಳುಗಿ ಸಾವನ್ನಪ್ಪಿರುವ ಘಟನೆ ಆಘಾತ ತಂದಿದೆ ಎಂದಿದ್ದಾರೆ. ಘಟನೆಯಲ್ಲಿ ಗಾಯಗೊಂಡವರು […]

ಕನ್ನಡ ದುನಿಯಾ 26 Jan 2026 7:47 pm

ಮ್ಯೂಚುವಲ್ ಫಂಡ್‌ಗಳ ಮೇಲೆ ಸಾಲ: ತಪ್ಪದೇ ಓದಿ

ಡಿಜಿಟಲ್ ಯುಗದಲ್ಲಿ ವಿವಿಧ ರೀತಿಯ ಸಾಲಗಳು ಸುಲಭವಾಗಿ ಸಿಗುತ್ತದೆ. ವೈಯಕ್ತಿಕ ಸಾಲವಾಗಲಿ, ಗೃಹ ಸಾಲವಾಗಲಿ, ವಾಹನ ಆಗಲಿ, ಆಸ್ತಿಯ ಮೇಲಿನ ಸಾಲವಾಗಲಿ ಅಥವಾ ಭದ್ರತಾ ಪತ್ರಗಳ ಮೇಲಿನ ಸಾಲವಾಗಲಿ ಬೇಗ ಸಿಗುತ್ತದೆ. ಭದ್ರತಾ ಪತ್ರಗಳ ಮೇಲಿನ ಸಾಲಗಳಲ್ಲಿ ಮುಖ್ಯವಾಗಿ ಸುರಕ್ಷಿತ ಸಾಲಗಳಲ್ಲಿ ಕಳೆದ ಎರಡು ವರ್ಷಗಳಲ್ಲಿ ಗಮನಾರ್ಹ ಏರಿಕೆ ಕಂಡ ಒಂದು ವಿಭಾಗವೆಂದರೆ, ಅದರಲ್ಲೂ ವಿಶೇಷವಾಗಿ ಕೋವಿಡ್-19 ಸಾಂಕ್ರಾಮಿಕದ ನಂತರ ಮ್ಯೂಚುವಲ್ ಫಂಡ್‌ಗಳ ಮೇಲಿನ ಸಾಲ (ಎಲ್ಎಎಂಎಫ್). ಚಿಲ್ಲರೆ ಹೂಡಿಕೆದಾರರ ಭಾಗವಹಿಸುವಿಕೆಯು ಮ್ಯೂಚುವಲ್ ಫಂಡ್‌ಗಳಲ್ಲಿ ಹೆಚ್ಚುತ್ತಿರುವುದರಿಂದ, ಎಲ್ಎಎಂಎಫ್‌ […]

ಕನ್ನಡ ದುನಿಯಾ 26 Jan 2026 6:40 pm

BREAKING: ಪೌರಾಯುಕ್ತೆಗೆ ಬೆದರಿಕೆ ಪ್ರಕರಣ: ಕೊನೆಗೂ ರಾಜೀವ್ ಗೌಡ ಅರೆಸ್ಟ್

ಚಿಕ್ಕಬಳ್ಳಾಪುರ: ನಗರಸಭೆ ಪೌರಾಯುಕ್ತಗೆ ನಿಂದನೆ, ಜೀವ ಬೆದರಿಕೆ ಹಾಕಿದ್ದ ಪ್ರಕರಣದಲ್ಲಿ ಕಾಂಗ್ರೆಸ್ ಮುಖಂಡ ರಾಜೀವ್ ಗೌಡನನ್ನು ಕೊನೆಗೂ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಕಳೆದ 12 ದಿನಗಳಿಂದ ತಲೆಮರೆಸಿಕೊಂಡಿದ್ದ ಕಾಂಗ್ರೆಸ್ ಮುಖಂಡ ರಾಜೀವ್ ಗೌಡನನ್ನು ಕೇರಳದಲ್ಲಿ ಪೊಲೀಸರು ಬಂಧಿಸಿದ್ದಾರೆ. ಶಿಡ್ಲಘಟ್ಟ ಪೊಲೀಸರು ಕೇರಳದಲ್ಲಿ ರಾಜೀವ್ ಗೌಡನನ್ನು ಬಂಧಿಸಿ ಚಿಕ್ಕಬಳ್ಳಾಪುರಕ್ಕೆ ಕರೆತರುತ್ತಿದ್ದಾರೆ ಎಂದು ತಿಳಿದುಬಂದಿದೆ. ಕಳೆದ 12 ದಿನಗಳಿಂದ ತಲೆಮರೆಸಿಕೊಂಡಿದ್ದ ಕಾಂಗ್ರೆಸ್ ಮುಖಂಡ ರಾಜೀವ್ ಗೌಡನನ್ನು ಕೇರಳದಲ್ಲಿ ಪೊಲೀಸರು ಬಂಧಿಸಿದ್ದಾರೆ. ಶಿಡ್ಲಘಟ್ಟ ಪೊಲೀಸರು ಕೇರಳದ ಗಡಿಯಲ್ಲಿ ರಾಜೀವ್ ಗೌಡನನ್ನು ಬಂಧಿಸಿ […]

ಕನ್ನಡ ದುನಿಯಾ 26 Jan 2026 6:12 pm

BIG NEWS: ಭಾಷಣ ಮಾಡದೇ ತೆರಳುತ್ತಿದ್ದ ರಾಜ್ಯಪಾಲರಿಗೆ ಅಡ್ಡಿಪಡಿಸಿದ ವಿಚಾರ: ರಾಷ್ಟ್ರಪತಿಗೆ ವರದಿ ರವಾನಿಸಿದ ಲೋಕಭವನ

ಬೆಂಗಳೂರು: ವಿಧಾನಮಂಡಲ ವಿಶೇಷ ಜಂಟಿ ಅಧಿವೇಶನದಲ್ಲಿ ಭಾಷಣ ಮಾಡದೇ ತೆರಳುತ್ತಿದ್ದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಕಾಂಗ್ರೆಸ್ ಸದಸ್ಯರು ಅಡ್ಡಿಪಡಿಸಿದ್ದ ವಿಚಾರವಾಗಿ ಲೋಕಭವನ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರುಗೆ ವರದಿ ರವಾನಿಸಿದೆ. ರಾಜ್ಯ ಕಾಂಗ್ರೆಸ್ ಸರ್ಕಾಅರ ಕರೆದಿರುವ ವಿಧಾನಮಂದಲ ಜಂಟಿ ಅಧಿವೇಶನದ ಮೊದಲ ದಿನ ಉಭಯ ಸದನಗಳನ್ನು ಉದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡಬೇಕಿತ್ತು. ಆದರೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ರಾಜ್ಯ ಕಾಂಗ್ರೆಸ್ ಸರ್ಕಾರ ಬರೆದುಕೊಟ್ಟಿದ್ದ ಭಾಷಣ ಮಾಡಲು ನಿರಾಕರಿಸಿ, ಮೂರೇ ಸಾಲುಗಳಲ್ಲಿ ಭಾಷಣ ಮುಗಿಸಿ […]

ಕನ್ನಡ ದುನಿಯಾ 26 Jan 2026 5:57 pm

AI ಮೊರೆ ಹೋದ ಚಿಕ್ಕಮಗಳೂರು ಜಿಲ್ಲಾ ಪೊಲೀಸರು: ವಿಶೇಷತೆಗಳು

ಕೃತಕ ಬುದ್ಧಿಮತ್ತೆ (ಎಐ) ಕುರಿತು ಎಲ್ಲಾ ಕಡೆ ಮಾತುಗಳು. ಈಗ ಪೊಲೀಸರು ಎಐ ಬಳಕೆ ಮಾಡಲು ಆರಂಭಿಸಿದ್ದಾರೆ. ಅದರಲ್ಲೂ ಕರ್ನಾಟಕದಲ್ಲಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುವ ಚಿಕ್ಕಮಗಳೂರು ಪೊಲೀಸರು ಎಐ ಬಳಕೆ ಮಾಡುತ್ತಿದ್ದಾರೆ. ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ಘಟಕವು AI-ಚಾಲಿತ ಕಮಾಂಡ್ ಕಂಟ್ರೋಲ್ ರೂಂ (ITMS) ಮೂಲಕ ಸಾರ್ವಜನಿಕ ಸುರಕ್ಷತೆಯನ್ನು ಹೆಚ್ಚಿಸಿದೆ. ಈ ಕಂಟ್ರೋಲ್ ರೂಂ ಹೇಗೆ ಕಾರ್ಯ ನಿರ್ವಹಣೆ ಮಾಡಲಿದೆ? ಎಂದು ಸಹ ವಿವರಣೆ ನೀಡಲಾಗಿದೆ. ಚಿಕ್ಕಮಗಳೂರು ನಗರದಲ್ಲಿ ಕಾನೂನು ಸುವ್ಯವಸ್ಥೆ ಮತ್ತು ಸಂಚಾರ […]

ಕನ್ನಡ ದುನಿಯಾ 26 Jan 2026 5:42 pm

ಗಣರಾಜ್ಯೋತ್ಸವದಂದೇ ಡಸ್ಟರ್ ಪರ್ವ ಆರಂಭ: ರೆನಾಲ್ಟ್‌ನಿಂದ ಹೊಸ ಅವತಾರದ ಎಸ್‌ಯುವಿ ಇಂದು ಅನಾವರಣ

ನವದೆಹಲಿ: ಭಾರತೀಯ ಎಸ್‌ಯುವಿ ಮಾರುಕಟ್ಟೆಯಲ್ಲಿ ಕ್ರಾಂತಿ ಮಾಡಿದ್ದ ‘ರೆನಾಲ್ಟ್ ಡಸ್ಟರ್’ (Renault Duster) ಈಗ ಹೊಸ ಅವತಾರದಲ್ಲಿ ಮರಳಿ ಬರುತ್ತಿದೆ. ಇಂದು ಅಂದರೆ ಜನವರಿ 26, 2026 ರಂದು ರೆನಾಲ್ಟ್ ಸಂಸ್ಥೆಯು ತನ್ನ ಮೂರನೇ ತಲೆಮಾರಿನ ಡಸ್ಟರ್ ಎಸ್‌ಯುವಿಯನ್ನು ಭಾರತದಲ್ಲಿ ಅಧಿಕೃತವಾಗಿ ಅನಾವರಣಗೊಳಿಸುತ್ತಿದೆ. ಆಧುನಿಕ ವಿನ್ಯಾಸ ಮತ್ತು ಸುಧಾರಿತ ತಂತ್ರಜ್ಞಾನದೊಂದಿಗೆ ಬರುತ್ತಿರುವ ಈ ಕಾರು ಮಧ್ಯಮ ಗಾತ್ರದ ಎಸ್‌ಯುವಿ ವಿಭಾಗದಲ್ಲಿ ಮತ್ತೆ ಸಂಚಲನ ಮೂಡಿಸುವ ನಿರೀಕ್ಷೆಯಿದೆ. ಹೊಸ ವೇದಿಕೆ, ಆಧುನಿಕ ವಿನ್ಯಾಸ ಹೊಸ ಡಸ್ಟರ್ ಅನ್ನು ಜಾಗತಿಕ […]

ಕನ್ನಡ ದುನಿಯಾ 26 Jan 2026 5:29 pm

ಬಿಗ್ ಬಾಸ್ ವಿನ್ನರ್ ಗಿಲ್ಲಿ ನೋಡಲು ವೇದಿಕೆಗೆ ನುಗ್ಗಿದ ಅಭಿಮಾನಿಗಳು: ಫ್ಯಾನ್ಸ್ ನಿಯಂತ್ರಿಸಲು ಪೊಲೀಸರ ಹರಸಾಹಸ

ರಾಮನಗರ: ಬಿಗ್ ಬಾಸ್ ಸೀಜನ್ -12ರ ವಿನ್ನರ್ ಗಿಲ್ಲಿ ನಟನ ಕ್ರೇಜ್ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಗಿಲ್ಲಿ ಹೋದಲೆಲ್ಲೆಲ್ಲ ಅಭಿಮಾನಿಗಳು ಸ್ಟಾರ್ ನಟನನ್ನು ನೋಡಲು ಮುಗಿ ಬೀಳುವಂತೆ ಮುಗಿ ಬೀಳುತ್ತಿದ್ದಾರೆ. ಗೊಂಬೆನಾಡು ಚೆನ್ನಪಟ್ಟಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗಿಲ್ಲಿ ಫ್ಯಾನ್ಸ್ ಕ್ರೇಜ್ ಗೆ ಪೊಲೀಸರೇ ಸುಸ್ತಾಗಿ ಹೋಗಿದ್ದಾರೆ. ಚೆನ್ನಪಟ್ಟಣದಲ್ಲಿ ನಡೆದ ಬೊಂಬೆನಾಡು ಉತ್ಸವದಲ್ಲಿ ಬಿಗ್ ಬಾಸ್ ವಿನ್ನರ್ ಗಿಲ್ಲಿ ನಟ ವೇದಿಕೆಗೆ ಬರುತ್ತಿದ್ದಂತೆ ಅಭಿಮಾನಿಗಳು ಜೈಕಾರಗಳನ್ನು ಹಾಕಿ ಹರ್ಷೋದ್ಘಾರ ವ್ಯಕ್ತಪಡಿಸಿದ್ದಾರೆ. ಗಲ್ಲಿಗೆ ಶೇಕ್ ಹ್ಯಾಂಡ್ ಮಾಡಿ ಮಾತನಾಡಿಸಬೇಕು ಎಂಬ […]

ಕನ್ನಡ ದುನಿಯಾ 26 Jan 2026 5:27 pm

ಅಂದು ಐಶ್ವರ್ಯ ರೈ ಪ್ರಾಣ ಉಳಿಸಲು ‘ಬಿಗ್ ಬಿ’ಮಾಡಿದ್ದ ಸಾಹಸವೇನು? ಖಾಸಗಿ ವಿಮಾನದ ಹಿಂದಿದೆ ರೋಚಕ ಕಥೆ

ಮುಂಬೈ: ಬಾಲಿವುಡ್‌ನ ‘ಬಿಗ್ ಬಿ’ ಅಮಿತಾಭ್ ಬಚ್ಚನ್ ಮತ್ತು ಐಶ್ವರ್ಯ ರೈ ಬಚ್ಚನ್ ಅವರ ನಡುವಿನ ಸಂಬಂಧ ಇಂದು ಮಾವ-ಸೊಸೆಯದ್ದು. ಆದರೆ, ಐಶ್ವರ್ಯ ಅವರು ಬಚ್ಚನ್ ಕುಟುಂಬದ ಸೊಸೆಯಾಗುವ ಐದು ವರ್ಷಗಳ ಮೊದಲೇ ಅಮಿತಾಭ್ ಅವರು ಐಶ್ವರ್ಯ ರೈ ಅವರಿಗಾಗಿ ವಿಶೇಷ ವಿಮಾನದ ವ್ಯವಸ್ಥೆ ಮಾಡುವ ಮೂಲಕ ತಮ್ಮ ಮನುಷ್ಯತ್ವ ಮೆರೆದಿದ್ದರು. ಶೂಟಿಂಗ್ ಸೆಟ್‌ನಲ್ಲಿ ನಡೆದ ಭೀಕರ ಅಪಘಾತ: 2003ರಲ್ಲಿ ನಾಸಿಕ್ ಸಮೀಪ ‘ಖಾಕಿ’ (Khakee) ಸಿನಿಮಾದ ಶೂಟಿಂಗ್ ನಡೆಯುತ್ತಿದ್ದಾಗ ಈ ಘಟನೆ ಸಂಭವಿಸಿತ್ತು. ಒಂದು ದೃಶ್ಯದ […]

ಕನ್ನಡ ದುನಿಯಾ 26 Jan 2026 5:25 pm

1 ವರ್ಷದ ಮಗು ಸಾವು ಪ್ರಕರಣ: ಸ್ಫೋಟಕ ರಹಸ್ಯ ಬಯಲು: ಕೇಸ್ ಗೆ ಟ್ವಿಸ್ಟ್ ಕೊಟ್ಟ ತಾಯಿ ಹೇಳಿಕೆ

ತಿರುವನಂತಪುರಂ: ಇತ್ತೀಚಿನ ದಿನಗಳಲ್ಲಿ ಮನುಷ್ಯನ ಸ್ವಾರ್ಥ, ದುರಾಸೆಗೆ ಮಿತಿ ಇಲ್ಲದಂತಾಗಿದೆ. ಕೇರಳದ ತಿರುವನಂತಪುರಂ ನಲ್ಲಿ ನಡೆದ ಘಟನೆಯೊಂದು ಬೆಚ್ಚಿಬೀಳಿಸುವಂತಿದೆ. ಕೆಲ ದಿನಗಳ ಹಿಂದೆ ಒಂದು ವರ್ಷದ ಮಗು ಸಾವನ್ನಪ್ಪಿದ ಘಟನೆ ಕೇರಳದ ತಿರುವನಂತಪುರಂ ನಲ್ಲಿ ನಡೆದಿತ್ತು. ಹೆತ್ತ ತಂದೆಯೇ ಮಗುವನ್ನು ಕೊಲೆಗೈದಿರುವುದು ಬೆಳಕಿಗೆ ಬಂದಿತ್ತು. ಪ್ರಕರಣ ತನಿಖೆ ನಡೆಸಿದ ಪೊಲೀಸರಿಗೆ ಮತ್ತಷ್ಟು ಆಘಾತಕಾರಿ ವಿಚಾರಗಳು ಬೆಳಕಿಗೆ ಬಂದಿವೆ. ಒಂದು ವರ್ಷದ ಕಂದಮ್ಮನನ್ನು ಮಗುವನ ತಂದೆ ಶಿಜಿಲ್ ನೆ ಕೊಲೆ ಮಾಡಿರುವುದು ತಿಳಿದುಬಂದಿದೆ. ಆರೋಪಿಯನ್ನು ಬಂಧಿಸಿರುವ ಪೊಲೀಸರು ಹಲವು […]

ಕನ್ನಡ ದುನಿಯಾ 26 Jan 2026 5:04 pm

Breaking News: ಬೆಂಗಳೂರು ನಗರದಲ್ಲಿ ಮಳೆ ಆರಂಭ

ಬೆಂಗಳೂರು ನಗರದಲ್ಲಿ ಮಳೆ ಆರಂಭವಾಗಿದೆ. ಹೌದು ಸೋಮವಾರ ಸಂಜೆಯ ವೇಳೆಗೆ ಮೋಡ ಕವಿದ ವಾತಾವರಣ ಹಲವು ಪ್ರದೇಶದಲ್ಲಿದ್ದು, ನಗರದ ಕೆಲವು ಬಡಾವಣೆಗಳಲ್ಲಿ ತುಂತುರು ಮಳೆಯಾಗುತ್ತಿದೆ. ಸೋಮವಾರ ಬೆಳಗ್ಗೆಯಿಂದಲೇ ಜೋರಾದ ಗಾಳಿ, ಮೋಡ ಕವಿದ ವಾತಾವರಣ ನಗರದಲ್ಲಿತ್ತು. ಮಧ್ಯಾಹ್ನ 3.45ರ ಸುಮಾರಿಗೆ ನಗರದ ಹಲವು ಬಡಾವಣೆಗಳಲ್ಲಿ ತುಂತುರು ಮಳೆಯಾಗಿದೆ. ನಗರದಲ್ಲಿ ಭಾರೀ ಮೋಡ ಕವಿದಿದ್ದು, ಸಂಜೆ ಇನ್ನೂ ಹೆಚ್ಚಿನ ಮಳೆ ನಿರೀಕ್ಷೆ ಮಾಡಲಾಗಿದೆ. ಭಾನುವಾರದಿಂದ ನಗರ ಹವಾಮಾನ ಬದಲಾವಣೆಯಾಗಿದ್ದು, ರಾತ್ರಿ ಮತ್ತು ಮುಂಜಾನೆ ಚಳಿ ಇದೆ. ಸೋಮವಾರ ಮಧ್ಯಾಹ್ನ […]

ಕನ್ನಡ ದುನಿಯಾ 26 Jan 2026 3:53 pm

ಅಗ್ನಿವೀರ್ ನೋಂದಣಿ 2027: ಯಾರು ಅರ್ಜಿ ಸಲ್ಲಿಸಬಹುದು, ವೇತನ ಎಷ್ಟು?

ಭಾರತೀಯ ವಾಯುಪಡೆ (ಐಎಎಫ್) ಅಗ್ನಿಪಥ್ ಯೋಜನೆಯಡಿ 2027ರ ನೇಮಕಾತಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಜಿ ಸಲ್ಲಿಕೆ ಫೆಬ್ರವರಿ 1, 2026ರ ರಾತ್ರಿ 11 ಗಂಟೆ ತನಕ ಅವಕಾಶವಿದೆ. ಅರ್ಹ ಅವಿವಾಹಿತ ಭಾರತೀಯ ಪುರುಷರು ಮತ್ತು ಮಹಿಳೆಯರು 4 ವರ್ಷಗಳ ಸೇವೆಗಾಗಿ ಅರ್ಜಿ ಸಲ್ಲಿಸಬಹುದು. ನೇಮಕಾತಿ ಅಭಿಯಾನವು ಯುವ ಆಕಾಂಕ್ಷಿಗಳಿಗೆ ಮಿಲಿಟರಿ ತರಬೇತಿ, ಕೌಶಲ್ಯ ಮತ್ತು ಆರ್ಥಿಕ ಪ್ರಯೋಜನಗಳನ್ನು ಪಡೆಯುವ ಮೂಲಕ ವಾಯುಪಡೆಯಲ್ಲಿ ಸೇವೆ ಸಲ್ಲಿಸಲು ಅವಕಾಶವನ್ನು ನೀಡುತ್ತದೆ. ಆನ್‌ಲೈನ್ ನೋಂದಣಿ ಫೆಬ್ರವರಿ 1, 2026ರ ತನಕ ಇದೆ. ಅಭ್ಯರ್ಥಿಗಳು […]

ಕನ್ನಡ ದುನಿಯಾ 26 Jan 2026 3:32 pm

ಪ್ರತಿದಿನ ‘ಟೊಮೆಟೊ’ತಿನ್ನುವುದರಿಂದ ಸಿಗುವ ಅದ್ಭುತ 10 ಆರೋಗ್ಯ ಪ್ರಯೋಜನಗಳು.!

ಟೊಮೆಟೊ ಪ್ರತಿಯೊಂದು ಮನೆಯಲ್ಲೂ ಇರುವ ಸಾಮಾನ್ಯ ತರಕಾರಿಗಳಲ್ಲಿ ಒಂದಾಗಿದೆ. ಹೆಚ್ಚಿನವರು ಇದನ್ನು ದಿನನಿತ್ಯ ಅಡುಗೆಯಲ್ಲಿ ಬಳಸುತ್ತಾರೆ. ಇವು ಅಡುಗೆಗೆ ಉತ್ತಮ ರುಚಿಯನ್ನು ನೀಡುತ್ತವೆ. ಆದರೆ ಇವುಗಳನ್ನು ಹಸಿಯಾಗಿ ಸೇವಿಸುವುದರಿಂದ ಆರೋಗ್ಯಕ್ಕೆ ಅಸಂಖ್ಯಾತ ಪ್ರಯೋಜನಗಳಿವೆ ಎನ್ನಲಾಗಿದೆ. ಏಕೆಂದರೆ ಇವುಗಳಲ್ಲಿ ಪೌಷ್ಟಿಕಾಂಶಗಳು ಹೇರಳವಾಗಿವೆ. ಹಸಿಯಾಗಿ ತಿಂದಾಗ ಮಾತ್ರ ಅವು ದೇಹಕ್ಕೆ ಪೂರ್ಣ ಪ್ರಮಾಣದಲ್ಲಿ ಲಭ್ಯವಾಗುತ್ತವೆ. ಹಾಗಾದರೆ ಇವುಗಳನ್ನು ತಿನ್ನುವುದರಿಂದ ಆಗುವ ಲಾಭಗಳೇನು ಮತ್ತು ತೂಕ ಇಳಿಸಿಕೊಳ್ಳುವವರು ಇದನ್ನು ಸೇವಿಸಬಹುದೇ ಎಂದು ನೋಡೋಣ. ರೋಗನಿರೋಧಕ ಶಕ್ತಿ ಹಸಿ ಟೊಮೆಟೊಗಳಲ್ಲಿ ವಿಟಮಿನ್ ಸಿ […]

ಕನ್ನಡ ದುನಿಯಾ 26 Jan 2026 3:31 pm

ಕನ್ನಡಕಕ್ಕೆ ಗುಡ್‌ಬೈ ಹೇಳಬೇಕೆ? ಕಣ್ಣಿನ ಆರೋಗ್ಯಕ್ಕೆ ಈ 10 ಸುಲಭ ಹಾದಿ ಇಂದೇ ರೂಢಿಸಿಕೊಳ್ಳಿ

ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್, ಲ್ಯಾಪ್‌ಟಾಪ್ ಮತ್ತು ಟಿವಿಯ ಅತಿಯಾದ ಬಳಕೆ ನಮ್ಮ ಕಣ್ಣುಗಳ ಮೇಲೆ ಭಾರಿ ಒತ್ತಡವನ್ನು ಹೇರುತ್ತಿದೆ. ಇದರಿಂದಾಗಿ ಚಿಕ್ಕ ವಯಸ್ಸಿನಲ್ಲೇ ದೃಷ್ಟಿ ದೋಷ ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದೆ. ಆದರೆ, ದೈನಂದಿನ ಜೀವನದಲ್ಲಿ ಕೆಲವು ಸಣ್ಣ ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ನಿಮ್ಮ ಕಣ್ಣಿನ ಆರೋಗ್ಯವನ್ನು ದಶಕಗಳ ಕಾಲ ಕಾಪಾಡಿಕೊಳ್ಳಬಹುದು. ಕಣ್ಣಿನ ದೃಷ್ಟಿ ಚುರುಕಾಗಲು ತಜ್ಞರು ಸೂಚಿಸುವ 10 ಪ್ರಮುಖ ಸೂತ್ರಗಳು ಇಲ್ಲಿವೆ. 1. ಪೌಷ್ಟಿಕ ಆಹಾರ ಸೇವನೆ: ಕಣ್ಣಿನ ದೃಷ್ಟಿ ಸುಧಾರಿಸಲು ವಿಟಮಿನ್ ಎ, ಸಿ, […]

ಕನ್ನಡ ದುನಿಯಾ 26 Jan 2026 3:30 pm

ನೀವು ಪ್ರತಿ ತಿಂಗಳು ರೂ.1400 ಉಳಿಸಿದ್ರೆ 25 ಲಕ್ಷ ರೂ. ಸಿಗುತ್ತೆ : ಉಚಿತ ಜೀವಮಾನ ವಿಮೆ.. ಅದ್ಭುತ ಪಾಲಿಸಿ !

ಪ್ರತಿಯೊಬ್ಬರೂ ತಮ್ಮ ಭವಿಷ್ಯವನ್ನು ಸುರಕ್ಷಿತವಾಗಿರಿಸಿಕೊಳ್ಳಲು ಬಯಸುತ್ತಾರೆ. ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಸರಿಯಾದ ಸ್ಥಳದಲ್ಲಿ ಹೂಡಿಕೆ ಮಾಡುವ ವಿಷಯಕ್ಕೆ ಬಂದರೆ, ಲೈಫ್ ಇನ್ಶೂರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (LIC) ದೇಶದ ಅತ್ಯಂತ ವಿಶ್ವಾಸಾರ್ಹ ಹೆಸರಾಗಿದೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ಹಲವಾರು ಆಯ್ಕೆಗಳಲ್ಲಿ, LIC ಜೀವನ್ ಆನಂದ್ (ಪ್ಲಾನ್ ನಂ. 915) ಪಾಲಿಸಿಯು ಕಡಿಮೆ ಪ್ರೀಮಿಯಂನಲ್ಲಿ ಉಳಿತಾಯ ಮತ್ತು ರಕ್ಷಣೆ ಎಂಬ ಎರಡು ಪಟ್ಟು ಪ್ರಯೋಜನವನ್ನು ಬಯಸುವವರಿಗೆ ಅತ್ಯುತ್ತಮ ಯೋಜನೆಯಾಗಿದೆ. ಪ್ರೀಮಿಯಂಗಳು ತುಂಬಾ ದುಬಾರಿಯಾಗುತ್ತವೆ ಎಂಬ ಭಯದಿಂದ ನಾವು ಅನೇಕ ಬಾರಿ […]

ಕನ್ನಡ ದುನಿಯಾ 26 Jan 2026 3:19 pm

BREAKING: ವರದಕ್ಷಿಣೆ ಕಿರುಕುಳ: ಮನನೊಂದ ಮಹಿಳೆ ಆತ್ಮಹತ್ಯೆ

ಬೆಂಗಳೂರು: ಆಧುನಿಕವಾಗಿ ಪ್ರಪಂಚ ಎಷ್ಟೇ ಮುಂದುವರೆದಿದೆ ಎಂದರೂ, ಮಹಿಳೆ ಸ್ವಾವಲಂಭಿಯಾಗಿ ದುಡಿಯುತ್ತಿದ್ದರೂ, ವರದಕ್ಷಿಣೆ ಪಿಡುಗು ಮಾತ್ರ ಸಮಾಜದಿಂದ ಮಾಯವಾಗಿಲ್ಲ. ಒಂದಿಲ್ಲ ಒಂದುಕಾರಣಕ್ಕೆ ಪತಿ ಮನೆಯವರ ಚುಚ್ಚು ಮಾತು, ಧನದಾಹ, ದೌರ್ಜನ್ಯ-ದಬ್ಬಾಳಿಕೆ ಮಹಿಳೆಯರ ಮೇಲೆ ಮುಂದುವರೆದಿದೆ. ಇಂತದ್ದೇ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಪತಿ ಹಾಗೂ ಮನೆಯವರ ವರದಕ್ಷಿಣೆ ಕಿರುಕುಳ, ಹಿಂಸೆಗೆ ಮನನೊಂದು ಮಹಿಳೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳುರಿನ ಯಡಿಯೂರಿನಲ್ಲಿ ನಡೆದಿದೆ. ಕೀರ್ತಿ ಮೃತ ಮಹಿಳೆ. ಬೆಂಗಳೂರಿನ ಬನಶಂಕರಿ ಪೊಲೀಸ್ ಠಾಣೆ ವ್ಯಾಪ್ತಿಯ ಮನೆಯಲ್ಲಿ ಕೀರ್ತಿ ನೇಣು ಬಿಗಿದ […]

ಕನ್ನಡ ದುನಿಯಾ 26 Jan 2026 3:03 pm

GOOD NEWS : ಮುಂದಿನ ಶೈಕ್ಷಣಿಕ ವರ್ಷದೊಳಗೆ  10,800 ಹೊಸ ಶಿಕ್ಷಕರ ನೇಮಕಾತಿ : ಸಚಿವ ಮಧು ಬಂಗಾರಪ್ಪ

ಶಿವಮೊಗ್ಗ : ಮುಂದಿನ ಶೈಕ್ಷಣಿಕ ವರ್ಷದಿಂದ ಎಲ್.ಕೆ.ಜಿಯಿಂದ 12ನೇ ತರಗತಿವರೆಗೆ ಉಚಿತ ಪಠ್ಯಪುಸ್ತಕ ಗಳನ್ನು ನೀಡಲಾಗುವುದು ಹಾಗೂ ಉಚಿತ ಪುಸ್ತಕ (ನೋಟ್ ಬುಕ್) ನೀಡುವ ಪ್ರಸ್ತಾವನೆಯು ಸರ್ಕಾರದ ಹಂತದಲ್ಲಿದೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು. ನಗರದ ನೆಹರೂ ಕ್ರೀಡಾಂಗಣದಲ್ಲಿ ಸೋಮವಾರ ಏರ್ಪಡಿಸಲಾಗಿದ್ದ ಗಣರಾಜ್ಯೋತ್ಸವ ದಿನಾಚರಣೆಯ ಧ್ವಜಾರೋಹಣ ನೆರವೇರಿಸಿ ನಂತರ ಮಾತನಾಡಿದರು. ಗುಣಮಟ್ಟದ ಶಿಕ್ಷಣಕ್ಕೆ ಶಿಕ್ಷಕರೇ ಆಧಾರ. ನಾವು ಈಗಾಗಲೇ 14,499 ಶಿಕ್ಷಕರನ್ನು ನೇಮಕ ಮಾಡಿಕೊಂಡಿದ್ದೇವೆ. ಶಿಕ್ಷಕರ ಕೊರತೆ ನೀಗಿಸಲು ಪ್ರಥಮ ಬಾರಿಗೆ ನಮ್ಮ ಸರ್ಕಾರ 51000 […]

ಕನ್ನಡ ದುನಿಯಾ 26 Jan 2026 3:02 pm

ಶರಾವತಿ ಮುಳುಗಡೆ ಸಂತ್ರಸ್ತರು ಹಾಗೂ ಬಗರ್ ಹುಕುಂ ಸಾಗುವಳಿದಾರರ ಸಮಸ್ಯೆ ಇತ್ಯರ್ಥ : ಸಚಿವ ಮಧು ಬಂಗಾರಪ್ಪ

ಶಿವಮೊಗ್ಗ : ಈ ದಿನ ಪ್ರತಿಯೊಬ್ಬ ಭಾರತೀಯನು ಹೆಮ್ಮೆ ಪಡಬೇಕಾದ ದಿನ. ಇಂದು ವಿಶ್ವದ ಶ್ರೇಷ್ಠ ಸಂವಿಧಾನವು ಜಾರಿಗೆ ಬಂದ ಪವಿತ್ರ ದಿನವಾಗಿದ್ದು “ನಮ್ಮ ದೇಶ, ನಮ್ಮ ಸಂವಿಧಾನ ನಮ್ಮದೇ ಆಡಳಿತ” ಎಂದು ನಾವು ಸ್ವಾಭಿಮಾನದಿಂದ ಬದುಕಲು ಕಾರಣರಾದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ಕೃತಜ್ಞತಾ ಪೂರ್ವಕ ನಮನಗಳು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ತಿಳಿಸಿದರು. ನಗರದ ನೆಹರೂ ಕ್ರೀಡಾಂಗಣದಲ್ಲಿ ಸೋಮವಾರ […]

ಕನ್ನಡ ದುನಿಯಾ 26 Jan 2026 2:54 pm

ದೋಸೆ ಹಿಟ್ಟಿನಂತೆ ಕಲಸಿ ಮಾಡಿ ಮೃದುವಾದ ಚಪಾತಿ: ಸಂಗೀತಾ ತ್ಯಾಗಿ ಅವರ ನೋ-ರೋಲ್ ತಂತ್ರ ಈಗ ವೈರಲ್

ಇಂದಿನ ವೇಗದ ಬದುಕಿನಲ್ಲಿ ಚಪಾತಿ ಮಾಡುವುದು ಅಂದರೆ ಅದೆಷ್ಟೋ ಜನರಿಗೆ ದೊಡ್ಡ ಸಾಹಸದ ಕೆಲಸ. ಹಿಟ್ಟು ಕಲಿಸುವುದು, ನಂತರ ಅದನ್ನು ಗುಂಡಗೆ ಲಟ್ಟಿಸುವುದು ಎಲ್ಲರಿಗೂ ಅಷ್ಟು ಸುಲಭವಾಗಿ ಬರುವ ಕಲೆಯಲ್ಲ. ಅದರಲ್ಲೂ ಒಂಟಿಯಾಗಿ ವಾಸಿಸುವವರು ಅಥವಾ ಅಡುಗೆ ಕಲಿಯುತ್ತಿರುವವರಿಗೆ ಇದೊಂದು ದೊಡ್ಡ ಸವಾಲು. ಆದರೆ ಈಗ ಹಿಟ್ಟು ಕಲಿಸದೆ ಮತ್ತು ಲಟ್ಟಿಸದೆ ಮೃದುವಾದ ಚಪಾತಿ ಮಾಡುವ ಅದ್ಭುತ ತಂತ್ರವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಏನಿದು ‘ನೋ-ನೀಡ್, ನೋ-ರೋಲ್’ ತಂತ್ರ? ಯೂಟ್ಯೂಬರ್ ಸಂಗೀತಾ ತ್ಯಾಗಿ ಅವರು ಪರಿಚಯಿಸಿರುವ […]

ಕನ್ನಡ ದುನಿಯಾ 26 Jan 2026 2:52 pm

ಮರೆತೂ ಈ 8 ವಸ್ತುಗಳನ್ನು ಯಾರಿಗೂ ಗಿಫ್ಟ್ ನೀಡಬೇಡಿ;ಪ್ರೀತಿಯಿಂದ ನೀವು ನೀಡುವ ಈ ಉಡುಗೊರೆಗಳೇ ನೆಗೆಟಿವಿಟಿಯ ಮೂಲ

ಬೆಂಗಳೂರು: ಮದುವೆ ಗೃಹಪ್ರವೇಶ ಅಥವಾ ನಾಮಕರಣ ಯಾವುದೇ ಸಮಾರಂಭವಿರಲಿ, ನೆಂಟರಿಷ್ಟರಿಗೆ ಅಥವಾ ಸ್ನೇಹಿತರಿಗೆ ಒಂದು ಸುಂದರವಾದ ಉಡುಗೊರೆ ನೀಡುವುದು ನಮ್ಮ ಸಂಪ್ರದಾಯ. ಆದರೆ ನೀವು ನೀಡುವ ಆ ಒಂದು ಗಿಫ್ಟ್ ಅವರ ಜೀವನದ ಮೇಲೆ ಎಂತಹ ಪ್ರಭಾವ ಬೀರುತ್ತದೆ ಎಂದು ಎಂದಾದರೂ ಯೋಚಿಸಿದ್ದೀರಾ? ವಾಸ್ತು ಶಾಸ್ತ್ರದ ಪ್ರಕಾರ ನಾವು ನೀಡುವ ಪ್ರತಿಯೊಂದು ಉಡುಗೊರೆಯೂ ಆ ಮನೆಯ ಎನರ್ಜಿ (Energy Flow) ಮೇಲೆ ನೇರ ಪರಿಣಾಮ ಬೀರುತ್ತದೆ. ಕೆಲವೊಮ್ಮೆ ಬಳಕೆಗೆ ಬರುವ ವಸ್ತುಗಳನ್ನು ನೀಡಬೇಕು ಎಂಬ ಆತುರದಲ್ಲಿ ನಾವು […]

ಕನ್ನಡ ದುನಿಯಾ 26 Jan 2026 2:39 pm

BREAKING: ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಗೆ ಡಿಕ್ಕಿ ಹೊಡೆದ ರೈಲು: ತಪ್ಪಿದ ಭಾರಿ ಅನಾಹುತ

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ಭೀಕರ ಅಪಘಾತ ಸಂಭವಿಸಿದೆ. ಬಿಎಂಟಿಸಿ ಬಸ್ ಗೆ ರೈಲು ಡಿಕ್ಕಿ ಹೊಡೆದಿರುವ ಘಟನೆ ನಡೆದಿದೆ. ಬೆಂಗಳೂರಿನ ಸಾದರಮಂಗಲದ ಬಳಿ ಈ ಅಪಘಾತ ಸಂಭವಿಸಿದೆ. ಬಿಎಂಟಿಸಿ ಬಸ್ ಚಾಲಕ ರೈಲ್ವೆ ಹಳಿ ಕ್ರಾಸ್ ಮಾಡುತ್ತಿದ್ದಾಗ ವೇಗವಾಗಿ ರೈಲು ಬಂದಿದೆ. ಹಿಂದಿನಿಂದ ಬಂದ ರೈಲು ಬಸ್ ಗೆ ಡಿಕ್ಕಿ ಹೊಡೆದಿದೆ. ಸ್ವಲ್ಪದರಲ್ಲಿ ಅನಾಹುತ ತಪ್ಪಿದೆ. ಅಪಘಾತದ ರಭಸಕ್ಕೆ ಬಸ್ ನ ಹಿಂಭಾಗ ಸಂಪೂರ್ಣ ನುಜ್ಜುಗುಜ್ಜಾಗಿದೆ. ಅದೃಷ್ಟವಶಾತ್ ಬಸ್ ನಲ್ಲಿ ಪ್ರಯಾಣಿಕರು ಇರಲಿಲ್ಲ. ಹಾಗಾಗಿ […]

ಕನ್ನಡ ದುನಿಯಾ 26 Jan 2026 2:30 pm

BREAKING: ಪ್ರವಾಸಿ ವಾಹನ ಡಿಕ್ಕಿ: ಸಹಕಾರಿ ಸಂಘದ ಮಹಿಳಾ ಸಿಬ್ಬಂದಿ ಸ್ಥಳದಲ್ಲೇ ಸಾವು

ಚಿಕ್ಕಮಗಳೂರು: ಪ್ರವಾಸಿ ವಾಹನ ಡಿಕ್ಕಿಯಾಗಿ ಸಂಭವಿಸಿದ ಭೀಕರ ಅಪಘಾತದಲ್ಲಿ ಕೃಷಿ ಪತ್ತಿನ ಸಹಕಾರ ಸಂಘದ ಮಹಿಳಾ ಸಿಬ್ಬಂದಿ ಮೃತಪಟ್ಟಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ. ನವಮಿ (26) ಮೃತ ಮಹಿಳೆ. ಅಪಘಾತದ ಬಳಿಕ ವಾಹನ್ ನಿಲ್ಲಿಸದೇ ಚಾಲಕ ಪರಾರಿಯಾಗಿದ್ದಾನೆ. ಮೃತ ಮಹಿಳೆ ಆಲ್ದೂರು ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಚಿಕ್ಕಮಗಳೂರಿಗೆ ಪ್ರವಾಸಕ್ಕೆಂದು ಬಂದಿದ್ದ ತುಮಕೂರು ಜಿಲ್ಲೆಯ ತಿಪಟೂರು ಮೂಲದ ವಾಹನ, ಮಹಿಳೆಗೆ ಡಿಕ್ಕಿ ಹೊಡೆದು ಹೋಗಿದ್ದು, ಸ್ಥಳದಲ್ಲೇ ಮಹಿಳೆ ಸಾವನ್ನಪ್ಪಿದ್ದಾರೆ. ಆಲ್ದೂರು […]

ಕನ್ನಡ ದುನಿಯಾ 26 Jan 2026 2:20 pm

ಸದ್ದಿಲ್ಲದೇ ‘ನಿಶ್ಚಿತಾರ್ಥ’ಮಾಡಿಕೊಂಡ ‘ಪುಟ್ಟಕ್ಕನ ಮಕ್ಕಳು’ಸೀರಿಯಲ್ ಖ್ಯಾತಿಯ ನಟಿ ಸಂಜನಾ ಬುರ್ಲಿ .!

ಬೆಂಗಳೂರು : ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯ ಖ್ಯಾತಿಯ ನಟಿ ಸಂಜನಾ ಬುರ್ಲಿ ಅವರ ನಿಶ್ಚಿತಾರ್ಥ ಇತ್ತೀಚೆಗಷ್ಟೇ ನೆರವೇರಿದೆ.ನಮ್ಮ ಜೀವನದ ಈ ಹೊಸ ಹೆಜ್ಜೆಗೆ ನನ್ನ ಎಲ್ಲಾ ಅಭಿಮಾನಿಗಳು ಮತ್ತು followers ಆಶೀರ್ವಾದ ಮತ್ತು ಶುಭಾಶಯಗಳನ್ನು ಕೋರುತ್ತಿದ್ದೇನೆ ಎಂದು ನಟಿ ಸಂಜನಾ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಹೌದು. ಸಂಜನಾ ಅವರು ಸಿದ್ದಾರ್ಥ್ ಎಂಬುವವರ ಜೊತೆ ಉಂಗುರ ಬದಲಾಯಿಸಿಕೊಂಡಿದ್ದಾರೆ. ಸಿದ್ದಾರ್ಥ್ ಅವರು ವೃತ್ತಿಯಲ್ಲಿ ವೈದ್ಯರು ಎಂದು ತಿಳಿದುಬಂದಿದೆ. ಬೆಂಗಳೂರಿನಲ್ಲಿ ನಡೆದ ಈ ನಿಶ್ಚಿತಾರ್ಥ ಸಮಾರಂಭವು ಕೇವಲ ಆಪ್ತರು ಮತ್ತು […]

ಕನ್ನಡ ದುನಿಯಾ 26 Jan 2026 2:15 pm

ಟೆಕ್ಕಿ ಶರ್ಮಿಳಾ ಹತ್ಯೆ ಪ್ರಕರಣಕ್ಕೆ ಹೊಸ ಟ್ವಿಸ್ಟ್: ತನಿಖೆ ವೇಳೆ ಆಘಾತಕಾರಿ ಮಾಹಿತಿ ಬಾಯ್ಬಿಟ್ಟ ಆರೋಪಿ

ಬೆಂಗಳೂರು: ಬೆಂಗಳೂರಿನಲ್ಲಿ ಟೆಕ್ಕಿ ಶರ್ಮಿಳಾ ಹತ್ಯೆ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಪೊಲೀಸ್ ತನಿಖೆ ವೇಳೆ ಬಂಧಿತ ಆರೋಪಿ ಆಘಾತಕಾರಿ ಮಾಹಿತಿ ಬಾಯ್ಬಿಟ್ಟಿದ್ದು, ತಾನೇ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಬೆಂಗಳೂರಿನ ರಾಮಮೂರ್ತಿ ನಗರದಲ್ಲಿ ಟೆಕಿ ಶರ್ಮಿಳಾ (34) ಕೊಲೆಯಾಗಿತ್ತು. ಟೆಕ್ಕಿ ಶರ್ಮಿಳಾ ವಾಸವಿದ್ದ ಮನೆಯ ಪಕ್ಕದ ಮನೆಯವನೇ ಆದ ಆರೋಪಿ ಕರ್ನಲ್ (18) ಶರ್ಮಿಳಾ ಮೇಲೆ ಅತ್ಯಾಚಾರವೆಸಗಲು ಯತ್ನಿಸಿದ್ದಾಗಿ ಬಾಯ್ಬಿಟ್ಟಿದ್ದಾನೆ. ಆರೋಪಿ ಕರ್ನಲ್ ಈ ಹಿಂದೆ ತನಿಖೆ ವೇಳೆ ಶರ್ಮಿಳಾ ಮೇಲೆ ದೌರ್ಜನ್ಯವೆಸಗಿಲ್ಲ ಎಂದು ಹೇಳಿದ್ದ. ಈಗ […]

ಕನ್ನಡ ದುನಿಯಾ 26 Jan 2026 2:12 pm

BREAKING : ಉಡುಪಿಯ ಬೀಚ್ ನಲ್ಲಿ ‘ಟೂರಿಸ್ಟ್ ಬೋಟ್’ ಮಗುಚಿ ಬಿದ್ದು ನಾಲ್ವರ ಸ್ಥಿತಿ ಗಂಭೀರ, ಹಲವರು ಅಸ್ವಸ್ಥ

ಉಡುಪಿ : ಸಮುದ್ರದಲ್ಲಿ ‘ಟೂರಿಸ್ಟ್ ಬೋಟ್’ ಮಗುಚಿ ಬಿದ್ದು ನಾಲ್ವರ ಸ್ಥಿತಿ ಗಂಭೀರವಾಗಿ ಹಲವರು ಅಸ್ವಸ್ಥಗೊಂಡ ಘಟನೆ ಇಂದು ಉಡುಪಿಯಲ್ಲಿ ನಡೆದಿದೆ. ಉಡುಪಿ ತಾಲೂಕಿನ ಕೋಡಿಬೆಂಗ್ರೆ ಸಮೀಪ ಈ ಘಟನೆ ನಡೆದಿದೆ. ಅರಬ್ಬಿ ಸಮುದ್ರದಲ್ಲಿ ಬೋಟ್ ಪಲ್ಟಿಯಾಗಿದೆ. ಟೂರಿಸ್ಟ್ ಬೋಟ್ ನಲ್ಲಿ 15 ಮಂದಿ ಪ್ರವಾಸಿಗರು ಇದ್ದರು ಎನ್ನಲಾಗಿದೆ. ಸಮುದ್ರದಲ್ಲಿ ಅಲೆಯ ಹೊಡೆತಕ್ಕೆ ಏಕಾಏಕಿ ಬೋಟ್ ಮಗುಚಿದೆ. ಪರಿಣಾಮ ಹಲವು ಸಮುದ್ರಕ್ಕೆ ಬಿದ್ದಿದ್ದಾರೆ. ಲೈಫ್ ಜಾಕೆಟ್ ಧರಿಸದೇ ಇದ್ದಿದ್ದರಿಂದ ಹಲವರು ನೀರಿನಲ್ಲಿ ಮುಳುಗಿದ್ದಾರೆ. ಅವಘಡದಲ್ಲಿ ನಾಲ್ವರ ಸ್ಥಿತಿ […]

ಕನ್ನಡ ದುನಿಯಾ 26 Jan 2026 2:05 pm

ಮತ್ತೊಂದು ರಾಷ್ಟ್ರದಿಂದ 15 ವರ್ಷದೊಳಗಿನ ಮಕ್ಕಳಿಗೆ ಸೋಶಿಯಲ್ ಮೀಡಿಯಾ ಬ್ಯಾನ್

ಮಕ್ಕಳ ಮೊಬೈಲ್ ಗೀಳು ಬಿಡಿಸುವುದು ಈಗ ವಿವಿಧ ರಾಷ್ಟ್ರಗಳಲ್ಲಿ ಈಗ ಸವಾಲಿನ ಕೆಲಸವಾಗಿದೆ. ಆದ್ದರಿಂದ 15 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣದ ಬಳಕೆ ನಿಷೇಧಿಸುವ ಪ್ರಸ್ತಾವನೆ ಇದೆ. ಹಲವು ರಾಷ್ಟ್ರಗಳಲ್ಲಿ ಇದನ್ನು ಈಗಾಗಲೇ ಜಾರಿಗೆ ತರಲಾಗಿದೆ. ಈಗ ಮತ್ತೊಂದು ರಾಷ್ಟ್ರ ಇಂತಹ ಪ್ರಯತ್ನದತ್ತ ಹೆಜ್ಜೆ ಹಾಕಿದೆ. “ಮುಂದಿನ ಶಾಲಾ ವರ್ಷದ ಆರಂಭದಲ್ಲಿ ಸೆಪ್ಟೆಂಬರ್‌ನಲ್ಲಿಯೇ 15 ವರ್ಷದೊಳಗಿನ ಮಕ್ಕಳ ಸಾಮಾಜಿಕ ಮಾಧ್ಯಮದ ಮೇಲಿನ ನಿಷೇಧವು ಜಾರಿಗೆ ಬರಬಹುದು” ಎಂದು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಹೇಳಿದ್ದಾರೆ. “ಸರ್ಕಾರವು ಈ […]

ಕನ್ನಡ ದುನಿಯಾ 26 Jan 2026 2:05 pm

SHOCKING : ಬೆಚ್ಚಿ ಬೀಳಿಸೋ ‘ಹನಿಟ್ರ್ಯಾಪ್’ದಂಧೆ : ಹಣದ ಆಸೆಗಾಗಿ ಪತ್ನಿಯನ್ನೇ 50 ಮಂದಿ ಜೊತೆ ಬಿಟ್ಟ ಪತಿ.!

ತೆಲಂಗಾಣದ ಕರೀಂನಗರದಲ್ಲಿ ನಡೆದ ಹನಿಟ್ರ್ಯಾಪ್ ದಂಧೆ ಸಮಾಜವನ್ನೇ ಬೆಚ್ಚಿ ಬೀಳಿಸಿದೆ. ಆರ್ಥಿಕ ಸಂಕಷ್ಟದಿಂದ ಪಾರಾಗಲು ದಾರಿ ತಪ್ಪಿದ ಈ ದಂಪತಿಗಳು, ‘ಹನಿ ಟ್ರ್ಯಾಪ್’ ಮೂಲಕ ಹಲವರಿಗೆ ಮೋಸ ಮಾಡಿದ್ದಾರೆ. ವ್ಯವಹಾರದಲ್ಲಿ ನಷ್ಟ ಅನುಭವಿಸಿದ್ದೇವೆ ಎಂಬ ನೆಪವನ್ನಿಟ್ಟುಕೊಂಡು ಅಮಾಯಕರನ್ನು ಬಲೆಗೆ ಬೀಳಿಸಿ ಲಕ್ಷಾಂತರ ರೂಪಾಯಿ ವಸೂಲಿ ಮಾಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕರೀಂನಗರ ಗ್ರಾಮಾಂತರ ಪೊಲೀಸರು ಶನಿವಾರ ದಂಪತಿಗಳನ್ನು ಮತ್ತೆ ಜೈಲಿಗೆ ಕಳುಹಿಸಿದ್ದಾರೆ. ಎರಡು ದಿನಗಳ ಪೊಲೀಸ್ ಕಸ್ಟಡಿಯ ವಿಚಾರಣೆಯಲ್ಲಿ ಆರೋಪಿಗಳು ಬಾಯ್ಬಿಟ್ಟ ಸತ್ಯಗಳು ಬೆಚ್ಚಿಬೀಳಿಸುವಂತಿವೆ. ಯೂಟ್ಯೂಬ್ ನೋಡಿ […]

ಕನ್ನಡ ದುನಿಯಾ 26 Jan 2026 1:48 pm

ಪೋಡಿ ಅಂದ್ರೆ ಏನು? ಏಕೆ ಮಾಡಿಸಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ

ಹಳ್ಳಿಗಳಲ್ಲಿ ರೈತರು ಹೆಚ್ಚಾಗಿ ಬಳಸುವ ಪದ ಪೋಡಿ. ಆದರೆ ಈ ಪೋಡಿ ಅಂದರೇನು? ಇದರ ಉಪಯೋಗಗಳೇನು? ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.ಪೋಡಿ ಎಂದರೆ ಜಮೀನಿನ ದುರಸ್ತಿ ಅಥವಾ ಭಾಗ ಮಾಡುವುದು. ಒಂದೇ ಸರ್ವೆ ನಂಬರ್‌ನಲ್ಲಿ ಇಬ್ಬರಿಗಿಂತ ಹೆಚ್ಚು ಮಾಲೀಕರ ಹೆಸರಿದ್ದರೆ (ಬಹು ಮಾಲೀಕತ್ವ), ಅದನ್ನು ಪ್ರತ್ಯೇಕಿಸಿ ಅವರವರ ಹಿಸ್ಸಾ (ಭಾಗ) ದ ಪ್ರಕಾರ ಪ್ರತ್ಯೇಕ ಸರ್ವೆ ನಂಬರ್ ಮತ್ತು ಪಹಣಿ ನೀಡುವುದಕ್ಕೆ ಪೋಡಿ ಎನ್ನಲಾಗುತ್ತದೆ. ಇದರಲ್ಲಿ ಕೇವಲ ಗಡಿ ಗುರುತು (Boundary) ಮಾಡಲಾಗುತ್ತದೆಯೇ ಹೊರತು ಹೆಸರು ಬದಲಾವಣೆ […]

ಕನ್ನಡ ದುನಿಯಾ 26 Jan 2026 1:34 pm

ಜೆಇಇ ಪರೀಕ್ಷೆಯಲ್ಲಿ ಪೂರ್ಣ ಅಂಕ ಪಡೆದ ಏಕೈಕ ವಿದ್ಯಾರ್ಥಿ ಇಂದು ಎಲ್ಲಿದ್ದಾರೆ? ಕಲ್ಪಿತ ವೀರ್ವಾಲ್ ಜೀವನದ ಅಚ್ಚರಿಯ ತಿರುವು

ನವದೆಹಲಿ: ಭಾರತದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದಾದ ಐಐಟಿ-ಜೆಇಇ (IIT-JEE) ಪರೀಕ್ಷೆಯಲ್ಲಿ ಪೂರ್ಣ ಅಂಕಗಳನ್ನು ಪಡೆಯುವುದು ಅಸಾಧ್ಯದ ಮಾತು. ಆದರೆ ಉದಯಪುರದ ಸಾಮಾನ್ಯ ಕುಟುಂಬದ ಹುಡುಗ ಕಲ್ಪಿತ ವೀರ್ವಾಲ್ 2017ರಲ್ಲಿ 360ಕ್ಕೆ 360 ಅಂಕಗಳನ್ನು ಪಡೆಯುವ ಮೂಲಕ ಇತಿಹಾಸ ಸೃಷ್ಟಿಸಿದ್ದರು. ಅಖಿಲ ಭಾರತ ಮೊದಲ ರ‍್ಯಾಂಕ್ (AIR 1) ಪಡೆದ ಇವರು, ಐಐಟಿ ಬಾಂಬೆಯಲ್ಲಿ ಕಂಪ್ಯೂಟರ್ ಸೈನ್ಸ್ ಸೇರಿದ್ದರೂ ಸಹ ನಂತರದ ದಿನಗಳಲ್ಲಿ ಅಚ್ಚರಿಯ ನಿರ್ಧಾರ ಕೈಗೊಂಡಿದ್ದರು. ಯಶಸ್ಸಿಗೆ ಬೇಕಿಲ್ಲ ದಿನದ 15 ಗಂಟೆಗಳ ಓದು ಕಲ್ಪಿತ […]

ಕನ್ನಡ ದುನಿಯಾ 26 Jan 2026 1:30 pm

BIG NEWS: ಗಣರಾಜ್ಯೋತ್ಸವ ಭಾಷಣ ಮಾಡುತ್ತಿದ್ದಾಗಲೇ ಕುಸಿದು ಬಿದ್ದ ಕೇರಳ ಸಚಿವ ರಾಮಚಂದ್ರನ್ ಕಡನಪಲ್ಲಿ

ಕಣ್ಣೂರು: ದೇಶಾದ್ಯಂತ 77ನೇ ಗಣರಾಜ್ಯೋತ್ಸವದ ಸಂಭ್ರಮ ಮನೆಮಾಡಿದೆ. ಗಣರಾಜ್ಯೋತ್ಸದ ಹಿನ್ನೆಲೆಯಲ್ಲಿ ಧ್ವಜಾರೋಹಣ ನೆರವೇರಿಸಿ ವೇದಿಕೆಯಲ್ಲಿ ಭಾಷಣ ಮಾಡುತ್ತಿದ್ದ ಸಚಿವರೊಬ್ಬರು ಕುಸಿದು ಬಿದ್ದ ಘಟನೆ ಕೇರಳದಲ್ಲಿ ನಡೆದಿದೆ. ಕೇರಳದ ಕಣ್ಣೂರಿನಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಚಿವ ರಾಮಚಂದ್ರನ್ ಕಡನಪಲ್ಲಿ ವೇದಿಕೆಯಲ್ಲಿ ಭಾಷಣ ಮಾಡುತ್ತಿದ್ದರು. ಈ ವೇಳೆ ಏಕಾಏಕಿ ಕುಸಿದು ಬಿದ್ದಿದ್ದಾರೆ. ಭಾಷಣ ಮಾಡುತ್ತಿದ್ದಾಗಲೇ ವೇದಿಕೆಯಲ್ಲಿ ಹಿಮ್ಮುಖರಾಗಿ ಬಿದ್ದಿದ್ದಾರೆ. ತಕ್ಷಣ ಅವರನ್ನು ಭದ್ರತಾ ಸಿಬ್ಬಂದಿಗಳು ಹಿಡಿದುಕೊಂಡಿದ್ದಾರೆ. ಕೂಡಲೇ ಸಚಿವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸಚಿವ ರಾಮಚಂದ್ರನ್ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. […]

ಕನ್ನಡ ದುನಿಯಾ 26 Jan 2026 1:25 pm

India Covert Operations : ಮ್ಯಾನ್ಮಾರ್’ನಲ್ಲಿ ‘ಶೌರ್ಯ’ ಘರ್ಜನೆ, 9 ಮಂದಿ ಉಗ್ರರ ಸಂಹಾರ!

ಮ್ಯಾನ್ಮಾರ್ ಗಡಿಯಲ್ಲಿ ಭಾರತೀಯ ಸೇನೆ ನಡೆಸಿದ ಅತ್ಯಂತ ಸಾಹಸಮಯ ‘ಕೋವರ್ಟ್ ಆಪರೇಷನ್’ (ರಹಸ್ಯ ಕಾರ್ಯಾಚರಣೆ) ವಿವರಗಳು ಈಗ ಬೆಳಕಿಗೆ ಬಂದಿವೆ. ಕಳೆದ ವರ್ಷ ನಡೆದ ಈ ಮಿಂಚಿನ ದಾಳಿಗೆ ಕೇಂದ್ರ ಸರ್ಕಾರವು ಇತ್ತೀಚೆಗೆ ಅಧಿಕೃತ ಮುದ್ರೆ ಒತ್ತಿದೆ. ಯೆಸ್, ಭಾರತೀಯ ಸೇನೆಯು ವಿದೇಶಿ ನೆಲದಲ್ಲಿ ನಡೆಸುವ ರಹಸ್ಯ ಕಾರ್ಯಾಚರಣೆಗಳನ್ನು ಕೇಂದ್ರ ಸರ್ಕಾರ ಬಹಿರಂಗಪಡಿಸುವುದು ಬಹಳ ಅಪರೂಪ. ಆದರೆ, ಈ ಬಾರಿ 21ನೇ ಪ್ಯಾರಾ ಸ್ಪೆಷಲ್ ಫೋರ್ಸ್ಗೆ ಸೇರಿದ ಲೆಫ್ಟಿನೆಂಟ್ ಕರ್ನಲ್ ಘಟಾಗೆ ಆದಿತ್ಯ ಶ್ರೀಕುಮಾರ್ ಅವರಿಗೆ ‘ಶೌರ್ಯ […]

ಕನ್ನಡ ದುನಿಯಾ 26 Jan 2026 1:13 pm

ಶಿಡ್ಲಘಟ್ಟ, ಮಂಗಳೂರು, ಗೋವಾ: ಕಾಲಿಗೆ ಚಕ್ರ ಕಟ್ಟಿಕೊಂಡಂತೆ ರಾಜೀವ್‌ ಗೌಡ ಓಡಾಟ, ಸಿದ್ದರಾಮಯ್ಯ ಗರಂ

ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆಗೆ ಬೆದರಿಕೆ ಹಾಕಿರುವ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಬಂಧನ ಭೀತಿಯಿಂದ ಊರೂರು ಅಲೆಯುತ್ತಿದ್ದಾರೆ. ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಂಡಿದ್ದು, ಯಾವುದೇ ಕ್ಷಣದಲ್ಲಿ ಪೊಲೀಸರು ಬಂಧಿಸುವ ಭೀತಿಯಲ್ಲಿ ರಾಜೀವ್ ಗೌಡ ರಾಜ್ಯ ಬಿಟ್ಟು ಪರಾರಿಯಾಗಿದ್ದಾನೆ. 12 ದಿನಗಳಿಂದ ಶಿಡ್ಲಘಟ್ಟದ ಕಾಂಗ್ರೆಸ್ ನಾಯಕ ರಾಜೀವ್ ಗೌಡ ಕಾಲಿಗೆ ಚಕ್ರ ಕಟ್ಟಿಕೊಡಂತೆಂ ಓಡಾಡುತ್ತಿದ್ದಾನೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಪ್ರಕರಣದಲ್ಲಿ ಪೊಲೀಸರ ವಿರುದ್ಧ ಗರಂ ಆಗಿದ್ದು, ಹಿರಿಯ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ. ಎರಡು ಎಫ್ಐಆರ್ ದಾಖಲಾಗುತ್ತಿದ್ದಂತೆಯೇ ಕಾಂಗ್ರೆಸ್ […]

ಕನ್ನಡ ದುನಿಯಾ 26 Jan 2026 1:04 pm

ಭದ್ರಾ ಮೇಲ್ದಂಡೆ ಯೋಜನೆ ಶೀಘ್ರ ಪೂರ್ಣ : ಸಚಿವ ಡಿ. ಸುಧಾಕರ್

ಚಿತ್ರದುರ್ಗ ಜಿಲ್ಲೆಯ ಜೀವನಾಡಿಯಾಗಿರುವ ಭದ್ರಾ ಮೇಲ್ದಂಡೆ ಯೋಜನೆಯಡಿ ಈ ವರ್ಷದ ಫೆಬ್ರವರಿ ಅಥವಾ ಮಾರ್ಚ್ ಅಂತ್ಯದೊಳಗೆ ಗೋನೂರು ವರೆಗೆ ಪ್ರಾಯೋಗಿಕವಾಗಿ ನೀರು ಹರಿಸುವ ಗುರಿ ಹೊಂದಲಾಗಿದೆ ಎಂದು ಯೋಜನೆ ಮತ್ತು ಸಾಂಖ್ಯಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಅವರು ತಿಳಿಸಿದರು. ನಗರದ ಸರ್ಕಾರಿ ವಿಜ್ಞಾನ ಕಾಲೇಜು ಮೈದಾನದಲ್ಲಿ ಸೋಮವಾರ ಆಯೋಜಿಸಲಾಗಿದ್ದ 77ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ, ಗೌರವ ವಂದನೆ ಸ್ವೀಕರಿಸಿದ ಅವರು ನಂತರ ಗಣರಾಜ್ಯೋತ್ಸವ ಸಂದೇಶ ನೀಡಿದರು. ಯೋಜನೆಯ ಬಾಕಿ ಕಾಮಗಾರಿಗಳಿಗಾಗಿ 200 […]

ಕನ್ನಡ ದುನಿಯಾ 26 Jan 2026 12:56 pm

BIG NEWS: ಮನೆ ಕೆಲಸದವಳಿಗೆ ಮದುವೆಯಾಗುವುದಾಗಿ ನಂಬಿಸಿ, ಲೈಂಗಿಕ ದೌರ್ಜನ್ಯ: ಧುರಂಧರ್ ನಟ ಅರೆಸ್ಟ್

ಮುಂಬೈ: ಮನೆ ಕೆಲಸದವಳಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪದಲಿ ಧುರಂಧರ್ ಸಿನಿಮಾ ನಟ ನದೀಮ್ ಖಾನ್ ನನ್ನು ಪೊಲೀಸರು ಬಂಧಿಸಿದ್ದಾರೆ. ನದೀಮ್ ಖಾನ್ ಮನೆ ಕೆಲಸದವಳಿಗೆ ಮದುವೆಯಾಗುವುದಾಗಿ ಭರವಸೆ ನೀಡಿ ಕಳೆದ 10 ವರ್ಷಗಳಿಂದ ಲೈಂಗಿಕವಾಗಿ ಬಳಸಿಕೊಂಡಿದ್ದಾರೆ. ಈಗ ಮದುವೆಗೆ ಒಪ್ಪದೇ ಮೋಸ ಮಾಡಿದ್ದಾರೆ ಎಂದು ಸಂತ್ರಸ್ತೆ ದೂರು ನೀಡಿದ್ದಾರೆ. ಪ್ರಕರ್ಣ ದಾಖಲಿಸಿಕೊಂಡಿರುವ ಪೊಲೀಸರು ನದೀಮ್ ಖನನ್ನು ಬಂಧಿಸಿದ್ದಾರೆ. ನದೀಮ್ ಖಾನ್ ಧುರಂಧರ್ ಸಿನಿಮಾದಲ್ಲಿ ಡಕಾಯತ್ ರೆಹಮಾನ್ ಮನೆಯ ಬಾಣಸಿಗ ಅಖ್ಲಾಕ್ ಆಗಿ ನಟಿಸಿದ್ದರು. ಲೈಂಗಿಕ ಕಿರುಕುಳ […]

ಕನ್ನಡ ದುನಿಯಾ 26 Jan 2026 12:51 pm

ಚಹಾ ಪ್ರಿಯರೇ ಗಮನಿಸಿ: ಈಗ ಕುಕ್ಕರ್‌ನಲ್ಲೂ ಚಾಯ್ ರೆಡಿ ಮಹಿಳೆಯೊಬ್ಬರ ಈ ವಿಚಿತ್ರ ಟೀ ಹ್ಯಾಕ್ ಈಗ ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್

ಭಾರತೀಯರ ಪಾಲಿಗೆ ಚಹಾ ಎಂದರೆ ಬರಿ ಪಾನೀಯವಲ್ಲ, ಅದೊಂದು ಎಮೋಷನ್. ಸಾಮಾನ್ಯವಾಗಿ ಚಹಾವನ್ನು ನಿಧಾನವಾಗಿ ಕುದಿಸಿ (Slow Cooking) ಅದರ ಅಸಲಿ ರುಚಿ ಸವಿಯುವುದು ರೂಢಿ. ಆದರೆ ಇಲ್ಲೊಬ್ಬ ಮಹಿಳೆ ಪ್ರೆಶರ್ ಕುಕ್ಕರ್ ಬಳಸಿ ಕೇವಲ 4 ನಿಮಿಷಗಳಲ್ಲಿ ಚಹಾ ತಯಾರಿಸಿ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸಂಚಲನ ಮೂಡಿಸಿದ್ದಾರೆ ಏನಿದು ಕುಕ್ಕರ್ ಚಾಯ್ ಕಥೆ ಇನ್‌ಸ್ಟಾಗ್ರಾಮ್ ಇನ್ಫ್ಲುಯೆನ್ಸರ್ ಪಾಯಲ್ ಗುರ್ದಾಸನಿ ಅವರು ಹಂಚಿಕೊಂಡಿರುವ ಈ ವಿಡಿಯೋ ಈಗಾಗಲೇ 5.5 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದೆ. ಬೆಳಗಿನ ಗಡಿಬಿಡಿಯಲ್ಲಿ […]

ಕನ್ನಡ ದುನಿಯಾ 26 Jan 2026 12:48 pm