SENSEX
NIFTY
GOLD
USD/INR

Weather

24    C

ಡಿಜಿಟಲ್ ಸುದ್ದಿ ಮೂಲಗಳು

...

ಕಿಡುಕನಹಳ್ಳಿಗೆ ಕೆಎಸ್‌ಆರ್‌ಟಿಸಿ ಬಸ್‌ಗಾಗಿ ಆಗ್ರಹ

ಪ್ರಜಾಪ್ರಗತಿ.ಕಾಂ ಹುಳಿಯಾರು: ಚಿಕ್ಕನಾಯಕನಹಳ್ಳಿ ತಾಲೂಕಿನ ಗಡಿ ಭಾಗದ ಗ್ರಾಮವಾದ ಕಿಡುಕನಹಳ್ಳಿಗೆ ದಶಕಗಳು ಕಳೆದರೂ ಸಮರ್ಪಕ ಬಸ್ ಸೌಕರ್ಯ ಇಲ್ಲದಿರುವುದು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ. ಈ ಬಗ್ಗೆ ಸಾಮಾಜಿಕ ಹೋರಾಟಗಾರ ಶ್ರೀನಿವಾಸ್ ಸಬ್ಬೇನಹಳ್ಳಿ ಅವರು ಕೆಎಸ್‌ಆರ್‌ಟಿಸಿ ಘಟಕ ವ್ಯವಸ್ಥಾಪಕರ ಮೂಲಕ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಮನವಿ ಸಲ್ಲಿಸಿ, ಕೂಡಲೇ ಬಸ್ ಸೌಕರ್ಯ ಕಲ್ಪಿಸುವಂತೆ ಆಗ್ರಹಿಸಿದ್ದಾರೆ. ಸುಮಾರು ೫೦೦ಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಕಿಡುಕನಹಳ್ಳಿ ಗ್ರಾಮವು ತುಮಕೂರು ಜಿಲ್ಲೆಯ ಗಡಿಭಾಗದಲ್ಲಿದ್ದು, ಸರಿಯಾದ ಸಾರಿಗೆ ವ್ಯವಸ್ಥೆ ಇಲ್ಲದೆ ಇಲ್ಲಿನ ಪರಿಸ್ಥಿತಿ ಸಾಕಷ್ಟು ದುಸ್ತರವಾಗಿದೆ. […]

ಪ್ರಜಾ ಪ್ರಗತಿ 23 Mar 2026 9:08 pm

ಯಾಂತ್ರೀಕೃತ ಬದುಕಿನಲ್ಲಿ ದೇಹ ದಂಡನೆ ಮುಖ್ಯ : ಮಧುಗಿರಿಯಲ್ಲಿ ಶ್ರೀ ಶಿವಸಿದ್ದೇಶ್ವರ ಸ್ವಾಮೀಜಿ

ಪ್ರಜಾಪ್ರಗತಿ.ಕಾಂ ಮಧುಗಿರಿ: ಬದಲಾಗುತ್ತಿರುವ ಯಾಂತ್ರೀಕೃತ ಬದುಕಿನಲ್ಲಿ ಮನುಷ್ಯ ಸೋಮಾರಿಯಾಗದೆ ದೇಹ ದಂಡಿಸಬೇಕು. ಮನುಷ್ಯನ ನೆಮ್ಮದಿಯ ಬದುಕಿಗೆ ಉತ್ತಮ ಆರೋಗ್ಯ ಮತ್ತು ಗುಣಮಟ್ಟದ ಶಿಕ್ಷಣ ಅತ್ಯಗತ್ಯ ಎಂದು ಸಿದ್ದಗಂಗಾ ಮಠದ ಕಿರಿಯ ಸ್ವಾಮಿಗಳಾದ ಶ್ರೀ ಶಿವಸಿದ್ದೇಶ್ವರ ಸ್ವಾಮೀಜಿ ತಿಳಿಸಿದರು. ಅವರು ಶ್ರೀ ಸಿದ್ದಗಂಗಾ ಹಾಸ್ಪಿಟಲ್ ಡಯಾಲಿಸಿಸ್ ಸೆಂಟರ್ ಮಧುಗಿರಿ ಹಾಗೂ ಶ್ರೀ ಶಾರದಾ ದೇವಿ ಕಣ್ಣಿನ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಪಾವಗಡ ಇವರು ಹಮ್ಮಿಕೊಂಡಿದ್ದ ಮಧುಗಿರಿ ಶಾಖೆಯ ಪ್ರಥಮ ವಾರ್ಷಿಕೋತ್ಸವ ಸಮಾರಂಭದ ದಿವ್ಯಸಾನಿಧ್ಯ ವಹಿಸಿ ಮಾತನಾಡಿದರು. ಮನುಷ್ಯ […]

ಪ್ರಜಾ ಪ್ರಗತಿ 23 Mar 2026 9:03 pm

ತುರುವೇಕೆರೆಯಲ್ಲಿ ಡಿಎಸ್‌ಎಸ್ ಮುಖಂಡರ ಪ್ರತಿಭಟನೆ

ಬಿ.ಸಿ.ಕಾವಲ್ ನಕಲಿ ದಾಖಲೆ: ಕ್ರಮಕ್ಕೆ ಆಗ್ರಹ ಪ್ರಜಾಪ್ರಗತಿ.ಕಾಂ ತುರುವೇಕೆರೆ: ತಾಲೂಕಿನ ಬಿ.ಸಿ.ಕಾವಲ್ ಸರ್ವೆ ನಂ೧ ರಲ್ಲಿ ನಕಲಿ ದಾಖಲಾತಿಗಳನ್ನು ಸೃಷ್ಟಿ ಮಾಡಿರುವ ಅಧಿಕಾರಿಗಳು ಹಾಗೂ ಭೂ ಮಾಫಿಯಾ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ಹಾಗೂ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಬಿ.ಕೃಷ್ಣಪ್ಪ ಸ್ಥಾಪಿತ) ವತಿಯಿಂದ ಪಟ್ಟಣದಲ್ಲಿ ರಸ್ತೆ ತಡೆ ನಡೆಸಿ ಸೋಮವಾರ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನಾಕಾರರು ಪಟ್ಟಣದ ಪ್ರವಾಸಿ ಮಂದಿರದಿAದ ಮೆರವಣಿಗೆ ಮೂಲಕ ಆಗಮಿಸಿ ಬಾಣಸಂದ್ರ ವೃತ್ತದಲ್ಲಿ ಕೆಲ […]

ಪ್ರಜಾ ಪ್ರಗತಿ 23 Mar 2026 8:56 pm

ಶಿರಾ ತಾಲೂಕಿನಲ್ಲಿ ಆಲಿಕಲ್ಲು ಮಳೆಯಿಂದ ರೈತರ ಬೆಳೆ ನಷ್ಟ

ಪ್ರಜಾಪ್ರಗತಿ.ಕಾಂ ಶಿರಾ: ತಾಲೂಕಿನ ತಡಕಲೂರು, ಗೋಣಿಹಳ್ಳಿ, ಬಡಮಾರನಹಳ್ಳಿ ಸೇರಿದಂತೆ ಹುಲಿಕುಂಟೆ ಹೋಬಳಿಯ ಬಹುಭಾಗದ ರೈತರ ದಾಳಿಂಬೆ, ಟಮೋಟೋ, ಪಪ್ಪಾಯಿ, ಮಾವು ಸೇರಿದಂತೆ ಅನೇಕ ಬೆಳೆಗಳು ಆಲಿಕಲ್ಲು ಮಳೆಯಿಂದ ನಷ್ಟವಾಗಿದ್ದು ಈ ಕೂಡಲೇ ಸರ್ಕಾರ ನೊಂದ ರೈತರಿಗೆ ಪರಿಹಾರ ನೀಡುವಂತೆ ಮಾಜಿ ಶಾಸಕ ಡಾ.ಸಿಎಂ ರಾಜೇಶ್‌ಗೌಡ ಒತ್ತಾಯಿಸಿದ್ದಾರೆ. ಆಲಿಕಲ್ಲು ಮಳೆಯಿಂದ ಹಾನಿಗೊಳಗಾದ ಹುಲಿಕುಂಟೆ ಹೋಬಳಿ ರೈತರ ಜಮೀನುಗಳಿಗೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ತಾಲ್ಲೂಕಿನ ಬಹುತೇಕ ರೈತರು ದಾಳಿಂಬೆ, ಟೊಮಾಟೋ, ಮಾವು ಸೇರಿದಂತೆ ಇಂತಹ ವಾಣಿಜ್ಯ […]

ಪ್ರಜಾ ಪ್ರಗತಿ 23 Mar 2026 8:52 pm

ವಾಯು ಮಾಲಿನ್ಯದ ‘ಮೈಕ್ರೋಫೋನ್ ಎಫೆಕ್ಟ್’: ಉತ್ತರ ಭಾರತದ ದಟ್ಟ ಮಂಜಿಗೆ ಅಸಲಿ ಕಾರಣ ಬಿಚ್ಚಿಟ್ಟ ಐಐಟಿ ಮದ್ರಾಸ್ ಸಂಶೋಧನೆ

ಐಐಟಿ ಮದ್ರಾಸ್ ನಡೆಸಿದ ಇತ್ತೀಚಿನ ಅಂತಾರಾಷ್ಟ್ರೀಯ ಸಂಶೋಧನೆಯು ಉತ್ತರ ಭಾರತವನ್ನು ಕಾಡುತ್ತಿರುವ ದಟ್ಟ ಮಂಜಿನ ಸಮಸ್ಯೆಯ ಹಿಂದೆ ಜಾಗತಿಕ ತಾಪಮಾನ ಏರಿಕೆಗಿಂತ ಹೆಚ್ಚಾಗಿ ಸ್ಥಳೀಯ ವಾಯು ಮಾಲಿನ್ಯದ ಕೈವಾಡವಿದೆ ಎಂಬ ಸ್ಫೋಟಕ ಸತ್ಯವನ್ನು ಹೊರಹಾಕಿದೆ. ಸಾಮಾನ್ಯವಾಗಿ ಚಳಿಗಾಲದಲ್ಲಿ ಉತ್ತರ ಭಾರತದ ವಾಯು ಗುಣಮಟ್ಟ ಕುಸಿಯುವುದು ಮತ್ತು ಮಧ್ಯಾಹ್ನದವರೆಗೂ ದಟ್ಟ ಮಂಜು ಕವಿದಿರುವುದು ಸಾಮಾನ್ಯ ಪ್ರಕ್ರಿಯೆಯೆಂದು ಭಾವಿಸಲಾಗಿತ್ತು. ಆದರೆ ಸೈನ್ಸ್ ಅಡ್ವಾನ್ಸಸ್ ಮತ್ತು ಜಿಯೋಫಿಸಿಕಲ್ ರಿಸರ್ಚ್ ಲೆಟರ್ಸ್ ನಿಯತಕಾಲಿಕೆಗಳಲ್ಲಿ ಪ್ರಕಟವಾದ ಈ ವರದಿಯು, ಮಾಲಿನ್ಯಕಾರಕ ಕಣಗಳು ಹೇಗೆ ಮಂಜಿನ […]

ಪ್ರಜಾ ಪ್ರಗತಿ 23 Mar 2026 8:49 pm

ಮಹಾ ಯುದ್ಧದ ಭೀತಿ: ಇರಾನ್ ಇಂಧನ ಕೇಂದ್ರಗಳ ಮೇಲೆ ಅಮೆರಿಕ-ಇಸ್ರೇಲ್ ಕಣ್ಣು

ಇರಾನ್, ಇಸ್ರೇಲ್ ಮತ್ತು ಅಮೆರಿಕ ನಡುವಿನ ಮಿಲಿಟರಿ ಸಂಘರ್ಷವು ಈಗ ನಾಲ್ಕನೇ ವಾರಕ್ಕೆ ಕಾಲಿಟ್ಟಿದ್ದು, ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಭೀತಿ ಹಿಂದೆಂದಿಗಿಂತಲೂ ಹೆಚ್ಚಾಗಿದೆ. ಇರಾನ್‌ನ ಪ್ರಮುಖ ಹಾರ್ಮುಜ್ ಜಲಮಾರ್ಗವನ್ನು ಮುಕ್ತಗೊಳಿಸದಿದ್ದರೆ ಆ ದೇಶದ ಇಂಧನ ಸೌಲಭ್ಯಗಳ ಮೇಲೆ ದಾಳಿ ಮಾಡುವುದಾಗಿ ಅಮೆರಿಕ ನೀಡಿರುವ ಎಚ್ಚರಿಕೆಯು ಪರಿಸ್ಥಿತಿಯನ್ನು ಮತ್ತಷ್ಟು ಉದ್ವಿಗ್ನಗೊಳಿಸಿದೆ. ಇದಕ್ಕೆ ಪ್ರತಿಯಾಗಿ ಇರಾನ್ ಕೂಡ ಕಠಿಣ ನಿಲುವು ತಳೆದಿದ್ದು, ಒಂದು ವೇಳೆ ತನ್ನ ಇಂಧನ ಮೂಲಸೌಕರ್ಯಗಳ ಮೇಲೆ ದಾಳಿ ನಡೆದರೆ ಜಾಗತಿಕ ತೈಲ ಸಂಚಾರದ ನಾಡಿಯಂತಿರುವ ಹಾರ್ಮುಜ್ […]

ಪ್ರಜಾ ಪ್ರಗತಿ 23 Mar 2026 8:45 pm

ಮತಪತ್ರ ಬಳಕೆಗೆ ಅವಕಾಶ ನೀಡುವ ತಿದ್ದುಪಡಿ ಮಸೂದೆ ಅಂಗೀಕಾರ

ಬೆAಗಳೂರು: ಪ್ರತಿಪಕ್ಷಗಳ ವಿರೋಧದ ಮಧ್ಯೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಇವಿಎಂ ಬದಲು ಮತಪತ್ರ ಬಳಕೆಗೆ ಅವಕಾಶ ನೀಡುವ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ) ವಿಧೇಯಕ ವಿಧಾನಸಭೆಯಲ್ಲಿ ಅಂಗೀಕಾರ ನೀಡಲಾಯಿತು. ಸಚಿವ ಪ್ರಿಯಾಂಕ್ ಖರ್ಗೆ ಈ ವಿಧೇಯಕ ಪರ್ಯಾಯಲೋಚಿಸಿದರು. ಪ್ರತಿಪಕ್ಷಗಳ ತೀವ್ರ ವಿರೋಧದ ಮಧ್ಯೆ ಮಸೂದೆ ಅಂಗೀಕಾರವಾಯಿತು. ಪ್ರತಿಪಕ್ಷ ನಾಯಕ ಆರ್. ಅಶೋಕ್ ಮಸೂದೆ ಪ್ರತಿ ಹರಿದು ಹಾಕಿ ಸಭಾತ್ಯಾಗ ಮಾಡಿದರು. ಈ ತಿದ್ದುಪಡಿ ಮಸೂದೆ ಆಡಳಿತ ಪಕ್ಷ ಹಾಗೂ ಪ್ರತಿಪಕ್ಷಗಳ ವಾಕ್ಸಮರಕ್ಕೆ ಕಾರಣವಾಯಿತು. ಮಸೂದೆ […]

ಪ್ರಜಾ ಪ್ರಗತಿ 23 Mar 2026 8:10 pm