SENSEX
NIFTY
GOLD
USD/INR

Weather

33    C

ಡಿಜಿಟಲ್ ಸುದ್ದಿ ಮೂಲಗಳು

...

ಬೆಂಗಳೂರು ಏರ್‌ಪೋರ್ಟ್‌ನಲ್ಲಿFace recognition !

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ದೇಶೀಯ ಪ್ರಯಾಣಿಕರಿಗೆ ನೀಡುತ್ತಿದ್ದ ‘ಡಿಜಿ ಯಾತ್ರಾ’ ಸ್ಪರ್ಶರಹಿತ ತಂತ್ರಜ್ಞಾನವನ್ನು ಈಗ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ವಿಸ್ತರಿಸಿದೆ. ಟಿಕೆಟ್ ಬುಕ್ಕಿಂಗ್‌ದಿಂದ ಬೋರ್ಡಿಂಗ್ ವರೆಗೆ ಸಂಪೂರ್ಣ ಸಂಪರ್ಕರಹಿತ ಪ್ರಯಾಣದ ತಂತ್ರಜ್ಞಾನ ಯಶಸ್ವಿಯಾಗಿ ಅನುಷ್ಠಾನಗೊಂಡಿದೆ ಭಾರತದಲ್ಲಿ ಇದೇ ಮೊದಲು! ಭಾರತದಲ್ಲಿ ಇದೇ ಮೊದಲ ಬಾರಿಗೆ ಇಂತಹದೊಂದು ವಿನೂತನ ಪ್ರಯೋಗ ನಡೆದಿದ್ದು, ಜಾಗತಿಕ ಮಟ್ಟದಲ್ಲಿ ತಡೆರಹಿತ ವಿಮಾನ ಪ್ರಯಾಣ ವ್ಯವಸ್ಥೆಯ ಅನುಷ್ಠಾನದತ್ತ ಇದು ಮಹತ್ವದ ಹೆಜ್ಜೆ ಎಂದೇ ಪರಿಗಣಿಸಲಾಗಿದೆ. ಈ ವರ್ಷದ ಆರಂಭದಲ್ಲಿ ಇಂಡಿಗೋ ಹಾಗೂ ಡಿಜಿ […]

ಪ್ರಜಾ ಪ್ರಗತಿ 10 Apr 2026 1:04 pm

ವರ್ಷ ಮುಂಗಾರು ಮತ್ತು ಮುಂಗಾರು ಮಳೆಗಾಲ ಪೂರ್ವಸಿದ್ಧತೆಯೊಂದಿಗೆ ಪ್ರವಾಹ ತಡೆಗೆ ಸಮಗ್ರ ಕಾರ್ಯಯೋಜನೆ ರೂಪಿಸಿ

ಬೆಂಗಳೂರು ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಪೂರ್ವ ಮುಂಗಾರು ಮತ್ತು ಮುಂಗಾರು ಮಳೆಗಾಲದ ಸಂದರ್ಭದಲ್ಲಿ ಸಂಭವಿಸಬಹುದಾದ ಪ್ರವಾಹ, ನೀರು ನಿಲ್ಲುವ ಸಮಸ್ಯೆಗಳು ಹಾಗೂ ಮೂಲಸೌಕರ್ಯ ತೊಂದರೆಗಳನ್ನು ಸಮರ್ಥವಾಗಿ ನಿಭಾಯಿಸು ಉದ್ದೇಶದಿಂದ ಪೂರ್ವ ನಗರ ಪಾಲಿಕೆ *ಆಯುಕ್ತರಾದ ಡಿ.ಎಸ್.ರಮೇಶ್* ರವರ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಲಾಯಿತು. ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿ, ಮಳೆಗಾಲದ ಪೂರ್ವಸಿದ್ಧತೆ, ವಿಪತ್ತು ನಿರ್ವಹಣೆ, ಇಲಾಖೆಗಳ ಸಮನ್ವಯ ಹಾಗೂ ತುರ್ತು ಪರಿಹಾರ ಕ್ರಮಗಳನ್ನು ಕಾರ್ಯಗತಗೊಳಿಸುವ ಬಗ್ಗೆ ಸಮಗ್ರವಾಗಿ ಚರ್ಚಿಸಲಾಯಿತು. *ಸಭೆಯಲ್ಲಿ […]

ಪ್ರಜಾ ಪ್ರಗತಿ 10 Apr 2026 12:50 pm

ಮನೆಯ ಅಂಗಳದಲ್ಲಿದ್ದ ನಾಯಿ ಹೊತ್ತೊಯ್ದ ಚಿರತೆ

ದಕ್ಷಿಣ ಕನ್ನಡ :ಸುಬ್ರಹ್ಮಣ್ಯ ಸಮೀಪದ ಏನೆಕಲ್ಲು ಗ್ರಾಮದ ಪರಂಪಾಡಿ–ಅರಂಪಾಡಿ ಪ್ರದೇಶದಲ್ಲಿ ಚಿರತೆ ಕಾಟ ಮತ್ತೆ ಹೆಚ್ಚಳ ಕಂಡಿದ್ದು, ತಡರಾತ್ರಿ ನಡೆದ ಘಟನೆ ಸ್ಥಳೀಯರಲ್ಲಿ ಭೀತಿಯ ವಾತಾವರಣ ಸೃಷ್ಟಿಸಿದೆ. ಅರಂಪಾಡಿ ನಿವಾಸಿ ಈಶ್ವರಗೌಡ ಅವರ ಮನೆಯ ಅಂಗಳದಲ್ಲಿ ಮಲಗಿದ್ದ ನಾಯಿಯನ್ನು ಚಿರತೆ ದಾಳಿ ಮಾಡಿ ಹೊತ್ತೊಯ್ದಿದೆ. ಈ ಘಟನೆ ಮನೆಯಲ್ಲಿದ್ದ ಸಿಸಿಟಿವಿ ಕ್ಯಾಮರಾದಲ್ಲಿ ಸ್ಪಷ್ಟವಾಗಿ ಸೆರೆಯಾಗಿದ್ದು, ದೃಶ್ಯಗಳು ಗ್ರಾಮಸ್ಥರಲ್ಲಿ ಆತಂಕ ಹೆಚ್ಚಿಸುವಂತೆ ಮಾಡಿವೆ. ಕೆಲವೇ ದಿನಗಳ ಹಿಂದೆ ಕಿಶೋರ್ ಪರಂಪಾಡಿ ಅವರ ಮನೆಯ ನಾಯಿಯನ್ನೂ ಚಿರತೆ ಬಲಿ ತೆಗೆದುಕೊಂಡಿತ್ತು. […]

ಪ್ರಜಾ ಪ್ರಗತಿ 9 Apr 2026 9:57 pm

ಪಂಚ ರಾಜ್ಯಗಳ ಚುನಾವಣೆ : ಮತದಾನ ಶಾಂತಿಯುತ

ನವದೆಹಲಿ : ದೇಶದ ಭವಿಷ್ಯದ ರಾಜಕಾರಣದ ದಿಕ್ಸೂಚಿ ಎಂದೇ ಹೇಳಲಾಗುತ್ತಿರುವ ಪಂಚ ರಾಜ್ಯಗಳ ವಿಧಾನಸಭಾ ಚುನಾವಣಾ ಪೈಕಿ ಇಂದು ಅಸ್ಸಾಂ, ಕೇರಳ ಮತ್ತು ಕೇಂದ್ರಾಡಳಿತ ಪ್ರದೇಶ ಪುದುಚೇರಿ ವಿಧಾನಸಭೆ ಚುನಾವಣೆಗೆ ಮತದಾನ ಬಿರುಸಿನಿಂದ ಸಾಗಿದ್ದು ಎಲ್ಲೆಡೆ ಮತದಾನ ಬಹುತೇಕ ಶಾಂತಿಯುತವಾಗಿ ನಡೆದಿದೆ. ಅಸ್ಸಾಂ ಪುದುಚೇರಿ ಮತ್ತು ಕೇರಳಂನಲ್ಲಿ ಯಾರಿಗೆ ಅಧಿಕಾರ ಚುಕ್ಕಾಣಿ ಸಿಗಲಿದೆ ಹಾಗೂ ಘಟಾನುಘಟಿ ನಾಯಕರುಗಳ ರಾಜಕೀಯ ಭವಿಷ್ಯಕ್ಕೆ ಮತದಾರರು ಇಂದು ಮುದ್ರೆ ಒತ್ತಿದ್ದಾರೆ ಮತದಾರರ ತೀರ್ಪು ವಿದ್ಯುನ್ಮಾನ ಮತಯಂತ್ರಗಳಲ್ಲಿ ಭದ್ರವಾಗಿದ್ದುಮೇ ನಾಲ್ಕರಂದು ಮತದಾರರ ತೀರ್ಪು […]

ಪ್ರಜಾ ಪ್ರಗತಿ 9 Apr 2026 9:38 pm

ದ್ವಿತೀಯ ಪಿಯು ಫಲಿತಾಂಶ: 18ಸ್ಥಾನಕ್ಕೇರಿದ ತುಮಕೂರು

ಶೇ.72.08 ಫಲಿತಾಂಶ: ಜಿಲ್ಲೆಯ ವಾಣಿಜ್ಯ ಟಾಪರ್ ಶ್ರೀ ಲಕ್ಷ್ಮಿ ರಾಜ್ಯಕ್ಕೆ 4ನೇಸ್ಥಾನ ತುಮಕೂರು : ದ್ವಿತೀಯ ಪಿಯುಸಿ ಫಲಿತಾಂಶ ಬುಧವಾರ ಪ್ರಕಟವಾಗಿದ್ದು, ಕಳೆದ ವರ್ಷದ ಫಲಿತಾಂಶಕ್ಕೆ ಹೋಲಿಸಿದರೆ 20 ನೇ ಸ್ಥಾನದಲ್ಲಿದ್ದ ಜಿಲ್ಲೆ ಈ ಬಾರಿ 18 ಸ್ಥಾನಕ್ಕೆ ಜಿಗಿದಿದ್ದು ಶೇ.72.08ರಷ್ಟು. ಫಲಿತಾಂಶ ದಾಖಲಾಗಿದೆ. ಹೊಸದಾಗಿ ಪರೀಕ್ಷೆ ಬರೆದ 22956 ವಿದ್ಯಾರ್ಥಿಗಳ ಪೈಕಿ 16534 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಫಲಿತಾಂಶದಲ್ಲಿ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಪರೀಕ್ಷೆ ಬರೆದ 14226 ಬಾಲಕಿಯರ ಪೈಕಿ 12054 ಬಾಲಕಿಯರು ಉತ್ತೀರ್ಣರಾಗಿದ್ದು ಶೇ.72.39 ಫಲಿತಾಂಶ […]

ಪ್ರಜಾ ಪ್ರಗತಿ 9 Apr 2026 9:31 pm

ದ್ವಿತೀಯ ಪಿಯುಸಿ: ದಾಖಲೆಯ ಶೇ.86.48 ಫಲಿತಾಂಶ

ಹೊಸಬರು ಪುನರಾವರ್ತಿತ, ಖಾಸಗಿ ಅಭ್ಯರ್ಥಿಗಳು ಸೇರಿ ಒಟ್ಟು ಶೇ.81.58 ಫಲಿತಾಂಶ ದಾಖಲು ರಾಜ್ಯದ ಶೈಕ್ಷಣಿಕ ಪ್ರಗತಿಗೆ ಫಲಿತಾಂಶ ಮುನ್ನುಡಿ: ಸಚಿವ ಮಧುಬಂಗಾರಪ್ಪ ಶ್ಲಾಘನೆ ಬೆಂಗಳೂರು 2025-26ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಗುರುವಾರ ಬಿಡುಗಡೆ ಆಗಿದ್ದು, ಈ ವರ್ಷ ಹೊಸದಾಗಿ ದ್ವಿತೀಯ ಪಿಯುಸಿ ಪರೀಕ್ಷೆ ಎದುರಿಸಿದ 6,32,200 ವಿದ್ಯಾರ್ಥಿಗಳ ಪೈಕಿ 5,46,698 ವಿದ್ಯಾರ್ಥಿಗಳು ಉತ್ತೀರ್ಣರಾಗಿರುವುದರೊಂದಿಗೆ ದಾಖಲೆಯ ಶೇ.86.48ರಷ್ಟು ಫಲಿತಾಂಶ ದಾಖಲಾಗಿದೆ. ಇದು ಕಳೆದ ಬಾರಿಯ ಶೇ.73.45ರಷ್ಟು ಫಲಿತಾಂಶಕ್ಕಿ0ತ ಶೇ.13.03ರಷ್ಟು ಅಧಿಕವಾಗಿದ್ದು, ರಾಜ್ಯದ ಶೈಕ್ಷಣಿಕ ಪ್ರಗತಿಗೆ ಫಲಿತಾಂಶ ಮುನ್ನುಡಿಯೆಂದು […]

ಪ್ರಜಾ ಪ್ರಗತಿ 9 Apr 2026 9:00 pm

‘ದ್ವಿತೀಯ PUC’ಪಾಸಾದ ವಿದ್ಯಾರ್ಥಿಗಳು ಯಾವ ಕೋರ್ಸ್ ಮಾಡಬಹುದು..? ಇಲ್ಲಿದೆ ಸಂಪೂರ್ಣ ಮಾಹಿತಿ

ಬೆಂಗಳೂರು : ಪಿಯುಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗುತ್ತಿದ್ದಂತೆಯೇ ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ‘ಮುಂದಿನ ಹಾದಿ ಯಾವುದು?’ ಎಂಬ ಗೊಂದಲ ಸಹಜ. ಕೇವಲ ಸಾಂಪ್ರದಾಯಿಕ ಪದವಿಗಳಿಗೆ ಸೀಮಿತವಾಗದೆ, ಇಂದಿನ ಬದಲಾಗುತ್ತಿರುವ ತಂತ್ರಜ್ಞಾನಕ್ಕೆ ತಕ್ಕಂತೆ ನೂರಾರು ವೃತ್ತಿಪರ ಮತ್ತು ತಾಂತ್ರಿಕ ಕೋರ್ಸ್‌ಗಳು ಇಂದು ಲಭ್ಯವಿವೆ. ವಿದ್ಯಾರ್ಥಿಗಳ ಆಸಕ್ತಿ ಮತ್ತು ಭವಿಷ್ಯದ ಉದ್ಯೋಗಾವಕಾಶಗಳನ್ನು ಗಮನದಲ್ಲಿಟ್ಟುಕೊಂಡು ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ನಂತರದ ವೈದ್ಯಕೀಯ, ಇಂಜಿನಿಯರಿಂಗ್ ಸೇರಿದಂತೆ ಹೊಸ ತಲೆಮಾರಿನ ವೃತ್ತಿಪರ ಕೋರ್ಸ್‌ಗಳ ಬಗ್ಗೆ ಸಂಪೂರ್ಣ ಮಾರ್ಗದರ್ಶಿ ಮಾಹಿತಿ ಇಲ್ಲಿದೆ. ದ್ವಿತೀಯ ಪಿಯುಸಿ ನಂತರ […]

ಕನ್ನಡ ದುನಿಯಾ 9 Apr 2026 3:32 pm

BREAKING : ಕರ್ನಾಟಕ ‘ದ್ವಿತೀಯ PUC’ಫಲಿತಾಂಶ ಪ್ರಕಟ, ಈ ಬಾರಿ ಶೇ. 86 % ವಿದ್ಯಾರ್ಥಿಗಳು ಪಾಸ್, ಬಾಲಕಿಯರದ್ದೇ ಮೇಲುಗೈ

ಬೆಂಗಳೂರು : ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು 2026ನೇ ಸಾಲಿನ ದ್ವಿತೀಯ ಪಿಯುಸಿ (ಪರೀಕ್ಷೆ-1) ಫಲಿತಾಂಶವನ್ನು ಇಂದು ಅಧಿಕೃತವಾಗಿ ಪ್ರಕಟಿಸಿದೆ. ಈ ಮೂಲಕ ಲಕ್ಷಾಂತರ ವಿದ್ಯಾರ್ಥಿಗಳ ತಿಂಗಳುಗಳ ಕಾಯುವಿಕೆಗೆ ತೆರೆ ಬಿದ್ದಿದ್ದು, ಇಂದಿನಿಂದಲೇ ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ಆನ್‌ಲೈನ್‌ನಲ್ಲಿ ವೀಕ್ಷಿಸಬಹುದಾಗಿದೆ. ಈ ಬಾರಿ ಶೇ. 86 % ವಿದ್ಯಾರ್ಥಿಗಳು ಪಾಸ್ ಆಗಿದ್ದು, ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಸಂಜೆ 6ಕ್ಕೆ ಶಿಕ್ಷಣ ಸಚಿವರಿಂದ ಸುದ್ದಿಗೋಷ್ಠಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು […]

ಕನ್ನಡ ದುನಿಯಾ 9 Apr 2026 3:19 pm

BREAKING : ಕರ್ನಾಟಕ ‘ದ್ವಿತೀಯ PUC ‘ಫಲಿತಾಂಶ ಪ್ರಕಟ ; ‘SMS’ಮೂಲಕ ಫಲಿತಾಂಶ ರವಾನೆ.!

ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು 2026ನೇ ಸಾಲಿನ ದ್ವಿತೀಯ ಪಿಯುಸಿ(ಪರೀಕ್ಷೆ-1) ಫಲಿತಾಂಶವನ್ನು ಇಂದು ಅಧಿಕೃತವಾಗಿ ಪ್ರಕಟಿಸಿದೆ. ಲಕ್ಷಾಂತರ ವಿದ್ಯಾರ್ಥಿಗಳ ಕಾಯುವಿಕೆ ಅಂತ್ಯವಾಗಿದ್ದು, ಇಂದಿನಿಂದಲೇ ತಮ್ಮ ಸಾಧನೆಯನ್ನು ವೀಕ್ಷಿಸಬಹುದಾಗಿದೆ. ಶಿಕ್ಷಣ ಸಚಿವ ಮಧುಬಂಗಾರಪ್ಪ ಅವರು ಇಂದು (ಸಂಜೆ 6ಕ್ಕೆ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಫಲಿತಾಂಶವನ್ನು ಅಧಿಕೃತವಾಗಿ ಪ್ರಕಟಿಸಲಿದ್ದಾರೆ. ವಿದ್ಯಾರ್ಥಿಗಳ ಮೊಬೈಲ್ ಗೆ ಸದ್ಯ ಫಲಿತಾಂಶವನ್ನು ಎಸ್ ಎಂ ಎಸ್ (SMS) […]

ಕನ್ನಡ ದುನಿಯಾ 9 Apr 2026 3:10 pm

BIG NEWS : ಅಸ್ಸಾಂನಲ್ಲಿ ಶೇ. 60ಕ್ಕೆ ಹತ್ತಿರವಾದ ಮತದಾನ ; ಕೇರಳ, ಪುದುಚೇರಿಯಲ್ಲಿ ಹೇಗಿದೆ ಟ್ರೆಂಡ್ ?

ಅಸ್ಸಾಂ, ಕೇರಳ ಮತ್ತು ಪುದುಚೇರಿಯಲ್ಲಿ ಬಿರುಸಿನ ಮತದಾನ ನಡೆಯುತ್ತಿದ್ದು, ಮಧ್ಯಾಹ್ನ 1 ಗಂಟೆಯ ಹೊತ್ತಿಗೆ ಮತದಾರರು ಭರ್ಜರಿ ಉತ್ಸಾಹ ತೋರಿದ್ದಾರೆ. ಅಸ್ಸಾಂನಲ್ಲಿ ಶೇ 59.63 ರಷ್ಟು ಮತದಾನವಾಗುವ ಮೂಲಕ ಮುನ್ನಡೆ ಸಾಧಿಸಿದ್ದರೆ, ಪುದುಚೇರಿ ಮತ್ತು ಕೇರಳದಲ್ಲೂ ಮತದಾನದ ಪ್ರಮಾಣ ಏರುಗತಿಯಲ್ಲಿದೆ. ಮಳೆಯ ನಡುವೆಯೂ ಅಸ್ಸಾಂನ ಮತದಾರರು ಸರತಿ ಸಾಲಿನಲ್ಲಿ ನಿಂತಿರುವುದು ವಿಶೇಷವಾದರೆ, ಪುದುಚೇರಿಯಲ್ಲಿ ರೋಬೋಟ್ ಮೂಲಕ ಮತದಾರರನ್ನು ಸ್ವಾಗತಿಸಲಾಗುತ್ತಿದೆ. ದೇಶದ ಮೂರು ಪ್ರಮುಖ ರಾಜ್ಯಗಳಲ್ಲಿ ಇಂದು ವಿಧಾನಸಭಾ ಚುನಾವಣೆಯ ಮತದಾನ ನಡೆಯುತ್ತಿದ್ದು, ಮಧ್ಯಾಹ್ನದ ವೇಳೆಗೆ ಮತದಾರರು ಹೆಚ್ಚಿನ […]

ಕನ್ನಡ ದುನಿಯಾ 9 Apr 2026 2:59 pm

BREAKING : ಕರ್ನಾಟಕ ‘ದ್ವಿತೀಯ PUC’ಫಲಿತಾಂಶ ಪ್ರಕಟ, ಈ ರೀತಿ ರಿಸಲ್ಟ್ ಚೆಕ್ ಮಾಡಿ |2nd PUC Result

ಬೆಂಗಳೂರು : ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ಇಂದು ದ್ವಿತೀಯ ಪಿಯುಸಿ (Exam-1) ಫಲಿತಾಂಶ ಪ್ರಕಟಿಸಿದೆ. ವಿದ್ಯಾರ್ಥಿಗಳು ಅಧಿಕೃತ ವೆಬ್‌ಸೈಟ್ karresults.nic.in ಅಥವಾ ಕರ್ನಾಟಕ ಒನ್ ಮೊಬೈಲ್ ಆಪ್‌ನಲ್ಲಿ ವೀಕ್ಷಿಸಬಹುದು.ವಿದ್ಯಾರ್ಥಿಗಳ ರಿಜಿಸ್ಟರ್ಡ್ ಮೊಬೈಲ್ ಸಂಖ್ಯೆಗೆ SMS ಅಥವಾ WhatsApp ಮೂಲಕ ಫಲಿತಾಂಶ ಬರಲಿದೆ. ಶಿಕ್ಷಣ ಸಚಿವ ಮಧುಬಂಗಾರಪ್ಪ ಅವರು ಇಂದು ಸಂಜೆ 6ಕ್ಕೆ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಫಲಿತಾಂಶವನ್ನು ಅಧಿಕೃತವಾಗಿ […]

ಕನ್ನಡ ದುನಿಯಾ 9 Apr 2026 2:56 pm

ಬೆಂಗಳೂರು ಅಲ್ಲ, ಮಂಗಳೂರು ಭಾರತದ ಐಸ್ ಕ್ರೀಮ್ ರಾಜಧಾನಿ ಯಾಕೆ ಗೊತ್ತಾ? ಈ ಕರಾವಳಿ ನಗರದ ತಣ್ಣನೆಯ ಕಥೆ ಇಲ್ಲಿದೆ

ಮಂಗಳೂರು: ಐಸ್ ಕ್ರೀಮ್ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ? ವಿಶ್ವದಾದ್ಯಂತ ಜನಪ್ರಿಯವಾಗಿರುವ ಈ ಸಿಹಿತಿಂಡಿಗೆ ನಮ್ಮ ಕರ್ನಾಟಕದ ಕರಾವಳಿ ನಗರಿ ಮಂಗಳೂರು ಕೇರ್ ಆಫ್ ಅಡ್ರೆಸ್ ಆಗಿ ಮಾರ್ಪಟ್ಟಿದೆ. ಹೌದು, ಮಂಗಳೂರನ್ನು ಅಧಿಕೃತವಾಗಿ ಭಾರದ ಐಸ್ ಕ್ರೀಮ್ ರಾಜಧಾನಿ (Ice Cream Capital of India) ಎಂದು ಕರೆಯಲಾಗುತ್ತದೆ. ಒಂದು ಸಣ್ಣ ನಗರಕ್ಕೆ ಈ ದೊಡ್ಡ ಹೆಸರು ಬರಲು ಕಾರಣಗಳೇನು? ಇಲ್ಲಿನ ಐಸ್ ಕ್ರೀಮ್ ವಿಶೇಷತೆ ಏನು? ಎಂಬ ಕುತೂಹಲಕಾರಿ ಮಾಹಿತಿ ಇಲ್ಲಿದೆ. ನೂರು ವರ್ಷಗಳ ಸುದೀರ್ಘ […]

ಕನ್ನಡ ದುನಿಯಾ 9 Apr 2026 2:52 pm

SHOCKING : ಕಾಲೇಜು ಫೀಸ್  ಕಟ್ಟದಿದ್ದಕ್ಕೆ ನರ್ಸಿಂಗ್ ವಿದ್ಯಾರ್ಥಿನಿಯಿಂದ 3 ದಿನ ಶೌಚಾಲಯ ತೊಳೆಸಿದ ಸಿಬ್ಬಂದಿ.!

ಆಂಧ್ರಪ್ರದೇಶದ ತಿರುಪತಿಯಲ್ಲಿರುವ ಶ್ರೀ ವಿಕಾಸ್ ನರ್ಸಿಂಗ್ ಕಾಲೇಜಿನಲ್ಲಿ ಕಲಿಯುತ್ತಿರುವ ನರ್ಸಿಂಗ್ ವಿದ್ಯಾರ್ಥಿನಿ ಮೇಲೆ ಕಾಲೇಜು ಆಡಳಿತ ಮಂಡಳಿ ದೌರ್ಜನ್ಯ ಎಸಗಿದೆ. ಕೇವಲ ಫೀಸ್ ಪಾವತಿಸಲು ವಿಳಂಬವಾಯಿತು ಎಂಬ ಕಾರಣಕ್ಕೆ ವಿದ್ಯಾರ್ಥಿನಿಯನ್ನು ಅತ್ಯಂತ ಕೀಳಾಗಿ ನಡೆಸಿಕೊಳ್ಳಲಾಗಿದೆ. ಏನಿದು ಘಟನೆ ? ವಿದ್ಯಾರ್ಥಿನಿ ಮೊದಲ ವರ್ಷದ 2 ಲಕ್ಷ ರೂ. ಫೀಸನ್ನು ಸರಿಯಾದ ಸಮಯಕ್ಕೆ ಪಾವತಿಸಿದ್ದರು. ಆದರೆ ಎರಡನೇ ವರ್ಷದ ಫೀಸ್ ಕಟ್ಟಲು ಸ್ವಲ್ಪ ತಡವಾಗಿತ್ತು.ಫೀಸ್ ಕಟ್ಟಿಲ್ಲ ಎಂಬ ಕಾರಣಕ್ಕೆ ಕಾಲೇಜು ಮ್ಯಾನೇಜ್‌ಮೆಂಟ್ ಆಕೆಗೆ ಸತತ 3 ದಿನಗಳ ಕಾಲ […]

ಕನ್ನಡ ದುನಿಯಾ 9 Apr 2026 2:45 pm

GOOD NEWS : ಮೊಬೈಲ್ ಗ್ರಾಹಕರಿಗೆ ಗುಡ್ ನ್ಯೂಸ್ : ಶೀಘ್ರವೇ ರೀಚಾರ್ಜ್ ದರ ಇಳಿಕೆ |Recharge Price

ಮೊಬೈಲ್ ಫೋನ್ ಬಳಕೆದಾರರಿಗೆ ಇದು ಅತ್ಯಂತ ಸಂತೋಷದ ಸುದ್ದಿ. ಏಕೆಂದರೆ ಇನ್ಮುಂದೆ ರೀಚಾರ್ಜ್ ಪ್ಲಾನ್‌ಗಳ ಬೆಲೆ ಇಳಿಕೆಯಾಗಲಿದೆ. ಟೆಲಿಕಾಂ ಕಂಪನಿಗಳ ಏಕಸ್ವಾಮ್ಯಕ್ಕೆ ಬ್ರೇಕ್ ಹಾಕಲು ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (TRAI) ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಕೇವಲ ಕಾಲ್ಸ್ ಮತ್ತು ಎಸ್ಎಂಎಸ್ (SMS) ಮಾತ್ರ ಬಯಸುವವರಿಗಾಗಿ ವಿಶೇಷ ಪ್ಲಾನ್‌ಗಳನ್ನು ಪರಿಚಯಿಸುವಂತೆ ಆದೇಶಿಸಿದೆ. ಇದು ಸಾಮಾನ್ಯ ಗ್ರಾಹಕರಿಗೆ ದೊಡ್ಡ ಮಟ್ಟದ ಪ್ರಯೋಜನವನ್ನು ನೀಡಲಿದೆ. ಡೇಟಾ ಬೇಡದವರಿಗೆ ಕಡಿಮೆ ಬೆಲೆ ಪ್ಲಾನ್ ರೀಚಾರ್ಜ್ ದರಗಳ ಏರಿಕೆಯಿಂದ ಕಂಗೆಟ್ಟಿರುವ […]

ಕನ್ನಡ ದುನಿಯಾ 9 Apr 2026 2:10 pm

ಇಸ್ರೇಲ್-ಲೆಬನಾನ್ ಯುದ್ಧದ ಎಫೆಕ್ಟ್ :ಒಂದೇ ದಿನದಲ್ಲಿ ₹2,340 ಕುಸಿತ ಕಂಡ ಚಿನ್ನ

ಬೆಂಗಳೂರು: ಜಾಗತಿಕ ರಾಜಕೀಯ ಬಿಕ್ಕಟ್ಟಿನ ನಡುವೆಯೂ ಹಳದಿ ಲೋಹದ ಬೆಲೆಯಲ್ಲಿ ಭಾರೀ ಏರಿಳಿತ ಕಂಡುಬಂದಿದೆ. ಬುಧವಾರ ಬರೋಬ್ಬರಿ 3,980 ರೂಪಾಯಿ ಏರಿಕೆಯಾಗಿ ಆತಂಕ ಸೃಷ್ಟಿಸಿದ್ದ ಚಿನ್ನದ ದರ, ಇಂದು ಗುರುವಾರ (ಏಪ್ರಿಲ್ 9) 2,340 ರೂಪಾಯಿಗಳಷ್ಟು ಇಳಿಕೆ ಕಂಡು ಗ್ರಾಹಕರಿಗೆ ತುಸು ನಿಮ್ಮದಿ ನೀಡಿದೆ. ಇಂದಿನ ಲೇಟೆಸ್ಟ್ ದರಪಟ್ಟಿ ಹೀಗಿದೆ: 24 ಕ್ಯಾರೆಟ್ ಚಿನ್ನ (ಅಪರಂಜಿ): 10 ಗ್ರಾಂಗೆ 1,51,480 ರೂ. (ಇಂದು 2,340 ರೂ. ಇಳಿಕೆ). 22 ಕ್ಯಾರೆಟ್ ಚಿನ್ನ (ಆಭರಣ): 10 ಗ್ರಾಂಗೆ 1,38,850 […]

ಕನ್ನಡ ದುನಿಯಾ 9 Apr 2026 1:05 pm

BREAKING : ‘IPL’ನಡುವೆಯೇ ಟೆಸ್ಟ್ ಕ್ರಿಕೆಟ್’ಗೆ ‘ರಶೀದ್ ಖಾನ್’ನಿವೃತ್ತಿ ಘೋಷಣೆ.!

ಅಫ್ಘಾನಿಸ್ತಾನದ ಸ್ಟಾರ್ ಸ್ಪಿನ್ನರ್ ರಶೀದ್ ಖಾನ್ ತಮ್ಮ ಬೆನ್ನು ನೋವಿನ ಸಮಸ್ಯೆಯಿಂದಾಗಿ ಟೆಸ್ಟ್ ಕ್ರಿಕೆಟ್ ‘ಗೆ ನಿವೃತ್ತಿ ಘೋಷಿಸಲು ನಿರ್ಧರಿಸಿದ್ದಾರೆ. ಐಪಿಎಲ್ 2026ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದ ನಂತರ ಅವರು ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. : ರಶೀದ್ ಖಾನ್ ದೀರ್ಘಕಾಲದ ಬೆನ್ನು ನೋವಿನಿಂದ ಬಳಲುತ್ತಿದ್ದಾರೆ ಮತ್ತು 2023ರ ವಿಶ್ವಕಪ್ ನಂತರ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಕೆಂಪು ಚೆಂಡಿನ ಕ್ರಿಕೆಟ್ ಆಡುವುದನ್ನು ನಿಲ್ಲಿಸುವಂತೆ ವೈದ್ಯರು ಅವರಿಗೆ ಮೊದಲೇ ಸಲಹೆ ನೀಡಿದ್ದರು.ಶಸ್ತ್ರಚಿಕಿತ್ಸೆಯ ನಂತರ ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ರಶೀದ್ ಒಂದೇ […]

ಕನ್ನಡ ದುನಿಯಾ 9 Apr 2026 12:55 pm

ವರ್ಸೆ ಇನ್ನೋವೇಶನ್‌ನಲ್ಲಿ AI ಪರ್ವ: CPTO ಆಗಿ ಟೆಕ್ ದಿಗ್ಗಜ ಪ್ರಸನ್ನ ಪ್ರಸಾದ್ ನೇಮಕ

ಬೆಂಗಳೂರು: ಕನ್ನಡದ ಜನಪ್ರಿಯ ಸುದ್ದಿ ವೇದಿಕೆ ಒನ್ಇಂಡಿಯಾ, ಡೈಲಿಹಂಟ್ ಮತ್ತು ಜೋಷ್ ಆ್ಯಪ್‌ಗಳ ಮಾತೃ ಸಂಸ್ಥೆಯಾದ ವರ್ಸೆ ಇನ್ನೋವೇಶನ್ (VerSe Innovation), ತನ್ನ ತಾಂತ್ರಿಕ ವಿಭಾಗವನ್ನು ಬಲಪಡಿಸಲು ಮುಂದಾಗಿದೆ. ಸಂಸ್ಥೆಯ ನೂತನ ಚೀಫ್ ಪ್ರಾಡಕ್ಟ್ ಅಂಡ್ ಟೆಕ್ನಾಲಜಿ ಆಫೀಸರ್ (CPTO) ಆಗಿ ಅನುಭವಿ ತಂತ್ರಜ್ಞ ಪ್ರಸನ್ನ ಪ್ರಸಾದ್ ಅವರನ್ನು ನೇಮಕ ಮಾಡಿರುವುದಾಗಿ ಇಂದು ಅಧಿಕೃತವಾಗಿ ಪ್ರಕಟಿಸಿದೆ. ಏನಿದು ಹೊಸ ಜವಾಬ್ದಾರಿ?ಈ ಮಹತ್ವದ ಹುದ್ದೆಯಲ್ಲಿ ಪ್ರಸನ್ನ ಪ್ರಸಾದ್ ಅವರು ವರ್ಸೆ ಸಂಸ್ಥೆಯ ಎಂಜಿನಿಯರಿಂಗ್, ಪ್ರಾಡಕ್ಟ್ ಮತ್ತು ಡೇಟಾ ಸೈನ್ಸ್ […]

ಕನ್ನಡ ದುನಿಯಾ 9 Apr 2026 12:33 pm

SHOCKING : ಬೆಂಗಳೂರಲ್ಲಿ ಆಟವಾಡುತ್ತಾ 3 ನೇ ಮಹಡಿಯಿಂದ ಬಿದ್ದ ಮಗು ; ಭಯಾನಕ ವೀಡಿಯೋ ವೈರಲ್ |WATCH VIDEO

ಬೆಂಗಳೂರಿನ ನಾಯಂಡಹಳ್ಳಿಯಲ್ಲಿ 1.5 ವರ್ಷದ ಮಗುವೊಂದು ಆಟವಾಡುತ್ತಾ ಮೂರನೇ ಮಹಡಿಯಿಂದ ಕೆಳಕ್ಕೆ ಬಿದ್ದಿದೆ. ಈ ಆಘಾತಕಾರಿ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮಗು ಸದ್ಯ ಆಸ್ಪತ್ರೆಯ ಐಸಿಯು (ICU) ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪೋಷಕರು ಈ ಆಘಾತದಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಸಿಲಿಕಾನ್ ಸಿಟಿಯ ಕುಟುಂಬವೊಂದರಲ್ಲಿ ಈ ದುರಂತ ಸಂಭವಿಸಿದೆ. ನವೀನ್ ಮತ್ತು ಜಯಶ್ರೀ ದಂಪತಿಯ ಒಂದೂವರೆ ವರ್ಷದ ಪುತ್ರಿ ಸಹಾನಾ, ಆಟವಾಡುತ್ತಾ ಮನೆಯ ಮುಖ್ಯ ಬಾಗಿಲಿನಿಂದ ಹೊರಬಂದು ಮೊದಲ ಮಹಡಿಯಿಂದ ಆಕಸ್ಮಿಕವಾಗಿ ಕೆಳಕ್ಕೆ ಬಿದ್ದಿದ್ದಾಳೆ. ಏಪ್ರಿಲ್ 6 ರಂದು […]

ಕನ್ನಡ ದುನಿಯಾ 9 Apr 2026 12:04 pm

IPL 2026: ಅಬ್ಬರದ ಬ್ಯಾಟಿಂಗ್ ಮಾಡಿದ್ರೂ ತಂಡವನ್ನು ಗೆಲ್ಲಿಸಲಾಗಲಿಲ್ಲ; ಮಾಡಿದ ಆ ಒಂದು ತಪ್ಪಿಗೆ ಕಣ್ಣೀರಿಟ್ಟ ಮಿಲ್ಲರ್ |ವಿಡಿಯೊ

ನಿನ್ನೆ ( ಏಪ್ರಿಲ್ 8 ) ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಗುಜರಾತ್ ಟೈಟನ್ಸ್ ತಂಡಗಳ ನಡುವಿನ ರೋಚಕ ಹಣಾಹಣಿಗೆ ಸಾಕ್ಷಿಯಾಯಿತು. ಉಭಯ ತಂಡಗಳ ರೋಚಕ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗುಜರಾತ್ ಟೈಟನ್ಸ್ 1 ರನ್ ಅಂತರದಿಂದ ಗೆದ್ದು ಬೀಗಿತು. ಅತ್ತ ಕೊನೆಯ ಹಂತದಲ್ಲಿ ತನ್ನ ಕೈಗೆ ಬಂದಿದ್ದ ಪಂದ್ಯವನ್ನು ಕೈಚೆಲ್ಲಿ ಡೆಲ್ಲಿ ಬೇಸರಕ್ಕೊಳಗಾಯಿತು. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟನ್ಸ್ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 210 […]

ಕನ್ನಡ ದುನಿಯಾ 9 Apr 2026 12:04 pm

IPL 2026: ಇದ್ಯಾವ ನಿಯಮ ಗುರು? ಮಿಲ್ಲರ್‌ನಿಂದಲ್ಲ ಬಿಸಿಸಿಐನ ಈ ಕೆಟ್ಟ ನಿಯಮದಿಂದ ಸೋತ ಡೆಲ್ಲಿ; ಓಡಿದ್ರೂ ಸಿಗಲಿಲ್ಲ ರನ್, ಡಾಟ್‌ ಬಾಲ್ ಲೆಕ್ಕ!

ನಿನ್ನೆ ( ಏಪ್ರಿಲ್ 8 ) ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್‌ನ 14ನೇ ಲೀಗ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್‌ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕೇವಲ 1 ರನ್ ಅಂತರದ ರೋಚಕ ಗೆಲುವನ್ನು ಸಾಧಿಸಿತು. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟನ್ಸ್ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 210 ರನ್ ಕಲೆಹಾಕಿ ಡೆಲ್ಲಿ ಕ್ಯಾಪಿಟಲ್ಸ್‌ಗೆ 211 ರನ್‌ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನಟ್ಟಲು ಯತ್ನಿಸಿದ ಡೆಲ್ಲಿ ಕ್ಯಾಪಿಟಲ್ಸ್ 20 ಓವರ್‌ಗಳಲ್ಲಿ 8 […]

ಕನ್ನಡ ದುನಿಯಾ 9 Apr 2026 11:43 am

‘ಗೋಲ್ಡ್ ಲೋನ್’ ಪಡೆಯುವ ಮುನ್ನ ಎಚ್ಚರ ! ಬ್ಯಾಂಕುಗಳು ಮರೆಮಾಚುವ ಈ 5 ಪ್ರಮುಖ ವಿಷಯಗಳನ್ನು ತಿಳಿದುಕೊಳ್ಳಿ

ತುರ್ತು ಅಗತ್ಯಗಳಿಗಾಗಿ ಚಿನ್ನದ ಸಾಲ ಸುಲಭವಾಗಿ ಕಂಡರೂ, ಅದರ ಹಿಂದೆ ಅಡಗಿರುವ ಅಸಲಿ ವೆಚ್ಚಗಳು ಮತ್ತು ಷರತ್ತುಗಳನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ಪ್ರೊಸೆಸಿಂಗ್ ಫೀಸ್, ಚಿನ್ನದ ಮೌಲ್ಯ ನಿರ್ಣಯ, ಆರ್‌ಬಿಐ (RBI) ಸಾಲದ ಮಿತಿ (75 ಶೇಕಡಾ), ಬಡ್ಡಿ ಲೆಕ್ಕಾಚಾರದ ವಿಧಾನ ಮತ್ತು ಮರುಪಾವತಿ ಮಾಡದಿದ್ದರೆ ಹರಾಜು ಹಾಕುವ ಪ್ರಕ್ರಿಯೆಯ ಬಗ್ಗೆ ಅರಿವಿಲ್ಲದಿದ್ದರೆ ಆರ್ಥಿಕವಾಗಿ ನಷ್ಟ ಅನುಭವಿಸುವ ಅಪಾಯವಿರುತ್ತದೆ. ಚಿನ್ನವನ್ನು ಅಡವಿಟ್ಟು ಸಾಲ ಪಡೆಯುವವರ ಸಂಖ್ಯೆ ಹೆಚ್ಚುತ್ತಿದೆ. ತಕ್ಷಣದ ಹಣದ ಅವಶ್ಯಕತೆಗೆ ಸುಲಭ ಮಾರ್ಗವಾಗಿ ಕಾಣುವ ಈ […]

ಕನ್ನಡ ದುನಿಯಾ 9 Apr 2026 11:38 am

ಡಯಟ್ ಮಾಡಿದ್ರೂ ತೂಕ ಇಳಿಯುತ್ತಿಲ್ಲವೇ? ಹಾಗಿದ್ರೆ ಈ 7 ಸೀಕ್ರೆಟ್ ಕಾರಣಗಳನ್ನು ತಿಳಿಯಿರಿ

ಬೆಂಗಳೂರು: ಎಷ್ಟೇ ವ್ಯಾಯಾಮ ಮಾಡಿದರೂ, ಊಟ ಕಡಿಮೆ ಮಾಡಿದರೂ ತೂಕ ಇಳಿಯುತ್ತಿಲ್ಲ ಎಂದು ಬೇಸರಗೊಂಡಿದ್ದೀರಾ? ವೇಯಿಂಗ್ ಸ್ಕೇಲ್ನಲ್ಲಿ ಮುಳ್ಳು ಒಂದೇ ಕಡೆ ನಿಂತುಬಿಟ್ಟಿದೆಯೇ? ಹಾಗಿದ್ದರೆ ನೀವು ಕೇವಲ ಕ್ಯಾಲೊರಿಗಳ ಬಗ್ಗೆ ಮಾತ್ರ ಯೋಚಿಸುತ್ತಿದ್ದೀರಿ ಎಂದರ್ಥ. ತೂಕ ಇಳಿಕೆ ಸ್ಥಗಿತಗೊಳ್ಳಲು (Weight Loss Plateau) ನಮ್ಮ ದೇಹದ ಒಳಗಿನ ಕೆಲವು ಗುಪ್ತ ಕಾರಣಗಳೇ ಹೊಣೆ ಎನ್ನುತ್ತಾರೆ ತಜ್ಞರು. ಡಾ. ಥಾಮಸ್ ಪಾಲೋಸ್ಕಿ ಅವರ ಪ್ರಕಾರ ತೂಕ ಇಳಿಕೆಗೆ ಕೇವಲ ಜಿಮ್ ಅಷ್ಟೇ ಸಾಕಾಗಲ್ಲ. ಈ ಕೆಳಗಿನ ಅಂಶಗಳ ಮೇಲೆ […]

ಕನ್ನಡ ದುನಿಯಾ 9 Apr 2026 11:08 am

BREAKING : ಬಳ್ಳಾರಿಯಿಂದ ಬೆಂಗಳೂರಿಗೆ ಹೋಗುತ್ತಿದ್ದ ಹಂಪಿ ಎಕ್ಸ್ ಪ್ರೆಸ್ ರೈಲಿನಲ್ಲಿ ಬೆಂಕಿ ; ತಪ್ಪಿದ ಭಾರಿ ದುರಂತ.!

ಬಳ್ಳಾರಿಯಿಂದ ಬೆಂಗಳೂರಿಗೆ ಸಂಚರಿಸುತ್ತಿದ್ದ ಹಂಪಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡ ಸುದ್ದಿ ಆತಂಕ ಸೃಷ್ಟಿಸಿದೆಯಾದರೂ, ಸಮಯಪ್ರಜ್ಞೆಯಿಂದಾಗಿ ದೊಡ್ಡ ಮಟ್ಟದ ಅನಾಹುತವೊಂದು ತಪ್ಪಿದಂತಾಗಿದೆ. ಬಳ್ಳಾರಿಯಿಂದ ಬೆಂಗಳೂರಿಗೆ ಹೊರಟಿದ್ದ ಹಂಪಿ ಎಕ್ಸ್‌ಪ್ರೆಸ್ (Hampi Express) ರೈಲಿನಲ್ಲಿ ಬೆಂಕಿ ಅವಘಡ ಸಂಭವಿಸಿದೆ. ರೈಲು ಚಲಿಸುತ್ತಿದ್ದ ವೇಳೆಯೇ ಬೋಗಿಯೊಂದರಲ್ಲಿ ದಟ್ಟವಾದ ಹೊಗೆ ಕಾಣಿಸಿಕೊಂಡಿದೆ. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆಯೇ ರೈಲು ಸಿಬ್ಬಂದಿ ಮತ್ತು ಪ್ರಯಾಣಿಕರು ಎಚ್ಚೆತ್ತುಕೊಂಡಿದ್ದು, ತಕ್ಷಣವೇ ರೈಲನ್ನು ನಿಲ್ಲಿಸಿ ಪರಿಶೀಲನೆ ನಡೆಸಿದ್ದಾರೆ. ಇದರಿಂದಾಗಿ ಯಾವುದೇ ಪ್ರಾಣಾಪಾಯ ಅಥವಾ ದೊಡ್ಡ ಮಟ್ಟದ ಆಸ್ತಿ ಹಾನಿ ಸಂಭವಿಸಿಲ್ಲ. […]

ಕನ್ನಡ ದುನಿಯಾ 9 Apr 2026 10:54 am

IPL 2026: ಗುಜರಾತ್ ವಿರುದ್ಧ ಗೆಲ್ಲುವ ಪಂದ್ಯ ಸೋತ ಡೆಲ್ಲಿ; ಆ 3 ನಿರ್ಧಾರ ನೋಡಿದ್ರೆ ಪಕ್ಕಾ ಫಿಕ್ಸಿಂಗ್ ಎಂದ ನೆಟ್ಟಿಗರು!

ನಿನ್ನೆ ( ಏಪ್ರಿಲ್ 8 ) ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್‌ 2026ರ ಲೀಗ್ ಹಂತದ 14ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗುಜರಾತ್ ಟೈಟನ್ಸ್ 1 ರನ್‌ಗಳ ರೋಚಕ ಗೆಲುವನ್ನು ಕಂಡಿತು. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟನ್ಸ್ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 210 ರನ್ ಕಲೆಹಾಕಿ ಡೆಲ್ಲಿ ಕ್ಯಾಪಿಟಲ್ಸ್‌ಗೆ 211 ರನ್‌ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನಟ್ಟಲು ಯತ್ನಿಸಿದ ಡೆಲ್ಲಿ ಕ್ಯಾಪಿಟಲ್ಸ್ 20 ಓವರ್‌ಗಳಲ್ಲಿ 8 […]

ಕನ್ನಡ ದುನಿಯಾ 9 Apr 2026 10:31 am

ಶೀಘ್ರದಲ್ಲೇ ಸ್ಮೃತಿ ಮಂಧಾನ ಮತ್ತು ಪಲಾಶ್ ಮುಚ್ಚಲ್ ವಿವಾಹ ? ವೈರಲ್ ವಿಡಿಯೋದಿಂದ ಹಬ್ಬಿದ ಕುತೂಹಲ |WATCH VIDEO

ಭಾರತೀಯ ಮಹಿಳಾ ಕ್ರಿಕೆಟ್‌ನ ಸ್ಟಾರ್ ಆಟಗಾರ್ತಿ ಸ್ಮೃತಿ ಮಂಧಾನ ಮತ್ತು ಸಂಗೀತ ಸಂಯೋಜಕ ಪಲಾಶ್ ಮುಚ್ಚಲ್ ಮತ್ತೆ ಒಂದಾಗಿದ್ದಾರೆಯೇ? ಎಂಬ ಪ್ರಶ್ನೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಕಾಡಲಾರಂಭಿಸಿದೆ. ಇತ್ತೀಚೆಗೆ ಮುಂಬೈನ ರೆಸ್ಟೋರೆಂಟ್‌ ಒಂದರಲ್ಲಿ ಸ್ಮೃತಿ ಮಂಧಾನ ಅವರ ತಂದೆ ಶ್ರೀನಿವಾಸ್ ಅವರು ಪಲಾಶ್ ಮುಚ್ಚಲ್ ಅವರ ಸಹೋದರಿ, ಗಾಯಕಿ ಪಲಕ್ ಮುಚ್ಚಲ್ ಮತ್ತು ಅವರ ಪತಿ ಮಿಥೂನ್ ಅವರನ್ನು ಭೇಟಿಯಾಗಿರುವ ವಿಡಿಯೋ ವೈರಲ್ ಆಗಿದೆ. ಈ ಭೇಟಿಯ ವೇಳೆ ಪಲಕ್ ಅವರು ಸ್ಮೃತಿ ತಂದೆಯ ಪಾದ ಮುಟ್ಟಿ […]

ಕನ್ನಡ ದುನಿಯಾ 9 Apr 2026 10:02 am

BREAKING : ವಿಜಯಪುರ ಜಿಲ್ಲೆಯ ಹಲವೆಡೆ ಭೂಕಂಪನ : ಹೆದರಿ ಮನೆಯಿಂದ ಹೊರಗೆ ಓಡಿ ಬಂದ ಜನ.!

ವಿಜಯಪುರ : ಜಿಲ್ಲೆಯ ತಿಕೋಟಾ ತಾಲ್ಲೂಕಿನಾದ್ಯಂತ ಇಂದು ಬೆಳಿಗ್ಗೆ ಭೂಮಿ ಕಂಪಿಸಿದ ಅನುಭವವಾಗಿದ್ದು, ಗ್ರಾಮಸ್ಥರು ಭೀತಿಯಿಂದ ಮನೆಯಿಂದ ಹೊರಗೆ ಓಡಿಬಂದಿದ್ದಾರೆ. ಇಂದು ಬೆಳಗ್ಗೆ ಸುಮಾರು 8:21 ರ ವೇಳೆಗೆ ತಿಕೋಟಾ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭೂಮಿ ಕಂಪಿಸಿದೆ. ಈ ವೇಳೆ ದೊಡ್ಡ ಮಟ್ಟದ ಶಬ್ದ ಕೇಳಿಬಂದಿದ್ದು, ಮನೆಯಲ್ಲಿದ್ದ ಪಾತ್ರೆ ಪಗಡೆಗಳು ಉರುಳಿಬಿದ್ದಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಭೂಕಂಪನದ ವ್ಯಾಪ್ತಿ: ಬೆಚ್ಚಿಬಿದ್ದ ಗ್ರಾಮಸ್ಥರು: ವಿಜಯಪುರ ಜಿಲ್ಲೆಯ ತಿಕೋಟಾ ಸೇರಿದಂತೆ ನೆರೆಯ ಮಹಾರಾಷ್ಟ್ರದ ಗಡಿ ಭಾಗದ ಗ್ರಾಮಗಳಾದ ಮೊಬರಗಿ ಮತ್ತು ತಿಕ್ಕುಂಡಿಯಲ್ಲೂ […]

ಕನ್ನಡ ದುನಿಯಾ 9 Apr 2026 9:35 am

Govt Jobs : ಇಂಜಿನಿಯರಿಂಗ್  ಪದವೀಧರರಿಗೆ ಗುಡ್ ನ್ಯೂಸ್ ; ಮಾಸಿಕ 60,000 ರೂ. ಸಂಬಳದ ಸರ್ಕಾರಿ ಉದ್ಯೋಗಕ್ಕೆ ಅರ್ಜಿ ಆಹ್ವಾನ

ನೀವು ಇಂಜಿನಿಯರಿಂಗ್ ಪದವೀಧರರಾಗಿದ್ದು, ಉತ್ತಮ ಸರ್ಕಾರಿ ಉದ್ಯೋಗಕ್ಕಾಗಿ ಹುಡುಕುತ್ತಿದ್ದರೆ ನಿಮಗೊಂದು ಸುವರ್ಣಾವಕಾಶವಿದೆ. ನವರತ್ನ ಸಾರ್ವಜನಿಕ ವಲಯದ ಕಂಪನಿಯಾದ ಇಂಜಿನಿಯರ್ಸ್ ಇಂಡಿಯಾ ಲಿಮಿಟೆಡ್ (EIL) 2026ನೇ ಸಾಲಿನ ಮ್ಯಾನೇಜ್‌ಮೆಂಟ್ ಟ್ರೈನಿ (Management Trainee) ಹುದ್ದೆಗಳ ಭರ್ತಿಗೆ ಅಧಿಕೃತ ನೋಟಿಫಿಕೇಶನ್ ಬಿಡುಗಡೆ ಮಾಡಿದೆ. ಹುದ್ದೆಗಳ ವಿವರ ಮತ್ತು ಬ್ರಾಂಚ್‌ವಾರು ಹಂಚಿಕೆ: ಒಟ್ಟು 58 ಮ್ಯಾನೇಜ್‌ಮೆಂಟ್ ಟ್ರೈನಿ ಹುದ್ದೆಗಳು ಲಭ್ಯವಿವೆ: ಅರ್ಹತೆಗಳು: ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳ ಆಯ್ಕೆಯು ಸಂಪೂರ್ಣವಾಗಿ ಗೇಟ್ 2026 (GATE 2026) ಸ್ಕೋರ್ ಆಧರಿಸಿರುತ್ತದೆ. ಮೊದಲು ಗೇಟ್ ಸ್ಕೋರ್ […]

ಕನ್ನಡ ದುನಿಯಾ 9 Apr 2026 9:13 am

40 ವರ್ಷಗಳ ಬಾಡಿಗೆ ಮನೆಯ ವಾಸಕ್ಕೆ ಅಂತ್ಯ : ಮಗ ನೀಡಿದ ‘ಸ್ವಂತ ಮನೆ’ಕಂಡು ಕಣ್ಣೀರು ಹಾಕಿದ ಪೋಷಕರು |WATCH VIDEO

ನಮ್ಮ ಜೀವನದಲ್ಲಿ ನಾವು ಎಷ್ಟೇ ಸಂಪಾದಿಸಿದರೂ, ಎಷ್ಟೇ ಎತ್ತರಕ್ಕೆ ಬೆಳೆದರೂ, ನಮ್ಮ ಪೋಷಕರ ಕಣ್ಣಲ್ಲಿ ಕಾಣುವ ಆ ಆನಂದದ ಕಣ್ಣೀರಿಗೆ ಕೋಟಿ ರೂಪಾಯಿಗಳೂ ಸಾಟಿಯಾಗಲಾರವು. ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದೆ. ಮಗನೊಬ್ಬ ತನ್ನ ತಂದೆ-ತಾಯಿಗೆ ನೀಡಿದ ಒಂದು ಅನಿರೀಕ್ಷಿತ ಉಡುಗೊರೆ ಅದು. ಇದು ಸಾಮಾನ್ಯ ಉಡುಗೊರೆಯಲ್ಲ, 40 ವರ್ಷಗಳ ಸುದೀರ್ಘ ಕಾಯುವಿಕೆಗೆ ಸಿಕ್ಕ ಪ್ರತಿಫಲ. 40 ವರ್ಷಗಳ ಬಾಡಿಗೆ ಮನೆಯ ಜೀವನ: ಕನಸಿನ ಮೂಟೆ ನಮ್ಮ ಮಧ್ಯಮ ವರ್ಗದ ಕುಟುಂಬಗಳಲ್ಲಿ “ಸ್ವಂತ ಮನೆ” ಎಂಬುದು […]

ಕನ್ನಡ ದುನಿಯಾ 9 Apr 2026 8:57 am

SHOCKING: ಶೇಂಗಾ ಒಕ್ಕಲು ಮಾಡುವಾಗ ಯಂತ್ರಕ್ಕೆ ಸಿಲುಕಿ ಮಹಿಳೆ ಸಾವು

ಹಾವೇರಿ: ಶೇಂಗಾ ಒಕ್ಕಲು ಮಾಡುವಾಗ ಯಂತ್ರಕ್ಕೆ ಸಿಲುಕಿ ಮಹಿಳೆ ಮೃತಪಟ್ಟ ಘಟನೆ ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಹೆಸರೂರು ಗ್ರಾಮದಲ್ಲಿ ನಡೆದಿದೆ. ಕೃಷಿ ಕಾರ್ಮಿಕರಾದ ಶಾರದಾ ಹನುಮಂತಗೌಡ(36) ಮೃತಪಟ್ಟವರು. ಹೆಸರೂರು ಗ್ರಾಮದಲ್ಲಿ ಶೇಂಗಾ ಒಕ್ಕಲು ಮಾಡುವಾಗ ವೇಗವಾಗಿದ್ದ ಯಂತ್ರದಲ್ಲಿ ಶಾರದಾ ಅವರ ಸೀರೆ ಸಿಲುಕಿದೆ. ಕ್ರಮೇಣ ಶಾರದಾ ಅವರು ಕೂಡ ಯಂತ್ರಕ್ಕೆ ಸಿಲುಕಿದ್ದು, ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಸವಣೂರು ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸವಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕನ್ನಡ ದುನಿಯಾ 9 Apr 2026 8:44 am

ಆನ್‌ಲೈನ್ ಹೂಡಿಕೆ ಹೆಸರಲ್ಲಿ ವಂಚನೆ: ಬರೋಬ್ಬರಿ 12 ಕೋಟಿ ರೂ. ಕಳೆದುಕೊಂಡ ವೈದ್ಯ

ಪುಣೆ: ಪುಣೆಯ 75 ವರ್ಷದ ವೈದ್ಯರೊಬ್ಬರು ಆನ್‌ಲೈನ್ ಷೇರು ವ್ಯಾಪಾರ ವಂಚನೆಗೊಳಗಾಗಿ 12.31 ಕೋಟಿ ರೂ. ಕಳೆದುಕೊಂಡಿದ್ದಾರೆ. ವಂಚಕರು ಅವರನ್ನು ಬಹು ಹೂಡಿಕೆ ಮಾಡುವಂತೆ ಒತ್ತಾಯಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದು, ಹಿರಿಯ ನಾಗರಿಕನಿಗೆ ಜನವರಿ ಕೊನೆಯ ವಾರದಲ್ಲಿ “ಶಿಫಾರಸು ಮಾಡಲಾದ” ಷೇರುಗಳ ಪಟ್ಟಿ ಮತ್ತು ಲಿಂಕ್ ಇರುವ ಸಂದೇಶ ಬಂದಿತ್ತು. ಲಿಂಕ್ ಅನ್ನು ಕ್ಲಿಕ್ ಮಾಡಿದ ನಂತರ, ಅವರನ್ನು ವಾಟ್ಸಾಪ್ ಗುಂಪಿಗೆ ಸೇರಿಸಲಾಯಿತು, ಅಲ್ಲಿ ನಿರ್ವಾಹಕರು ಜಾಗತಿಕ ಹಣಕಾಸು ನಿರ್ವಹಣಾ ಸಂಸ್ಥೆಯ ಹಿರಿಯ ಕಾರ್ಯನಿರ್ವಾಹಕರು ಎಂದು ಹೇಳಿಕೊಂಡರು. […]

ಕನ್ನಡ ದುನಿಯಾ 9 Apr 2026 8:38 am

ಗೋವು ಸಾಗಣೆ ತಡೆದ ಹಿಂದೂ ಸಂಘಟನೆ ಯುವಕನ ಮೇಲೆ ಅನ್ಯಕೋಮಿನವರಿಂದ ಹಲ್ಲೆ

ಮೈಸೂರು: ಗೂಡ್ಸ್ ವಾಹನದಲ್ಲಿ ಅಕ್ರಮವಾಗಿ ಗೋವುಗಳನ್ನು ಸಾಗಿಸುತ್ತಿದ್ದುದನ್ನು ತಡೆದಿದ್ದಕ್ಕೆ ಯುವಕನ ಮೇಲೆ ಹಲ್ಲೆ ನಡೆಸಲಾಗಿದೆ. ಕಾರ್ ನಲ್ಲಿ ಬಂದ ನಾಲ್ವರು ಯುವಕನ ಮೇಲೆ ಹಲ್ಲೆ ನಡೆಸಿದ್ದಾರೆ. ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಕಟ್ಟೆಮಳಲವಾಡಿ ಬಳಿ ಘಟನೆ ನಡೆದಿದೆ. ಹಿಂದೂ ಸಂಘಟನೆಯ ಯುವಕ ಚಂದ್ರಮೌಳಿ ಮೇಲೆ ಹಲ್ಲೆ ನಡೆಸಲಾಗಿದೆ. ಅನ್ಯಕೋಮಿನ ಯುವಕರು ಚಂದ್ರಮೌಳಿ ಮೇಲೆ ಹಲ್ಲೆ ಮಾಡಿದ್ದಾರೆ. ಗಾಯಗೊಂಡ ಚಂದ್ರಮೌಳಿಯನ್ನು ಹುಣಸೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹುಣಸೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕನ್ನಡ ದುನಿಯಾ 9 Apr 2026 8:10 am

ದತ್ತಪೀಠದಲ್ಲಿ ನಿಗೂಢವಾಗಿ ಕಣ್ಮರೆಯಾದ ಕೇರಳದ ಬಾಲಕಿ ; 24 ಗಂಟೆ ಕಳೆದರೂ ಸಿಗದ ಸುಳಿವು !

ಚಿಕ್ಕಮಗಳೂರು : ಕಾಫಿನಾಡಿನ ಪ್ರಸಿದ್ಧ ಪ್ರವಾಸಿ ತಾಣವಾದ ದತ್ತಪೀಠದ ತಪ್ಪಲಿನ ಮಾಣಿಕ್ಯಾಧಾರ ಜಲಪಾತದ ಬಳಿ ಪ್ರವಾಸಕ್ಕೆ ಬಂದಿದ್ದ 15 ವರ್ಷದ ಬಾಲಕಿಯೊಬ್ಬಳು ನಾಪತ್ತೆಯಾಗಿದ್ದು, ಒಂದು ದಿನ ಕಳೆದರೂ ಆಕೆಯ ಸುಳಿವು ಪತ್ತೆಯಾಗಿಲ್ಲ. ಘಟನೆಯ ವಿವರ: ಕೇರಳದ ಪಾಲಕ್ಕಾಡ್ ಜಿಲ್ಲೆಯ ಶ್ರೀನಂದ (15) ನಾಪತ್ತೆಯಾದ ಬಾಲಕಿ. ಶಾಲಾ ರಜೆ ಹಿನ್ನೆಲೆಯಲ್ಲಿ ಕುಟುಂಬದೊಂದಿಗೆ ಕರ್ನಾಟಕ ಪ್ರವಾಸಕ್ಕೆ ಬಂದಿದ್ದ ಈಕೆ, ಉತ್ತರ ಕರ್ನಾಟಕವನ್ನು ಸುತ್ತಿ ಚಿಕ್ಕಮಗಳೂರಿಗೆ ಬಂದಿದ್ದಳು. ಏಪ್ರಿಲ್ 7 ರಂದು ಮಾಣಿಕ್ಯಾಧಾರ ಜಲಪಾತದ ಬಳಿ ಮೆಟ್ಟಿಲುಗಳನ್ನು ಇಳಿಯುತ್ತಿದ್ದಾಗ ಕುಟುಂಬದವರು ಮುಂದೆ […]

ಕನ್ನಡ ದುನಿಯಾ 9 Apr 2026 8:05 am

ಶಿವಮೊಗ್ಗ ಬೊಮ್ಮನಕಟ್ಟೆಗೆ ‘ಬಂಗಾರಪ್ಪ ಬಡಾವಣೆ’ಎಂದು ನಾಮಕರಣ: ಸರ್ಕಾರ ಆದೇಶ

ಶಿವಮೊಗ್ಗ: ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯ ಬೊಮ್ಮನಕಟ್ಟೆ ಆಶ್ರಯ ಬಡಾವಣೆಯನ್ನು ಎಸ್. ಬಂಗಾರಪ್ಪ ಬಡಾವಣೆ ಎಂದು ನಾಮಕರಣ ಮಾಡಲಾಗಿದೆ. ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರ ಹೆಸರನ್ನು ಬಡಾವಣೆಗೆ ನಾಮಕರಣ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಬೊಮ್ಮನಕಟ್ಟೆ ಆಶ್ರಯ ಬಡಾವಣೆಯ ನಿವಾಸಿಗಳು, ಸಾರ್ವಜನಿಕರ ಒತ್ತಾಯದ ಮೇರೆಗೆ ಬಂಗಾರಪ್ಪ ಅವರ ಹೆಸರನ್ನು ಇಡುವಂತೆ ಕೋರಿ 2025ರ ಮೇನಲ್ಲಿ ಮಹಾನಗರ ಪಾಲಿಕೆ ಮತ್ತು ಜಿಲ್ಲಾಡಳಿತದಿಂದ ಸರ್ಕಾರಕ್ಕೆ ಪತ್ರ ಬರೆಯಲಾಗಿತ್ತು. ಇದಕ್ಕೆ ನಗರಾಭಿವೃದ್ಧಿ ಇಲಾಖೆ ಅನುಮೋದನೆ ನೀಡಿದ್ದು, ಬೊಮ್ಮನಕಟ್ಟೆ ಆಶ್ರಯ […]

ಕನ್ನಡ ದುನಿಯಾ 9 Apr 2026 8:03 am

SHOCKING : ಬೆಂಗಳೂರಲ್ಲಿ ಆಟವಾಡುತ್ತಿದ್ದಾಗ 3ನೇ ಮಹಡಿಯಿಂದ ಬಿದ್ದ ಒಂದೂವರೆ ವರ್ಷದ ಮಗು ; ಗಂಭೀರ ಗಾಯ

ಬೆಂಗಳೂರು : ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ಮೂರನೇ ಮಹಡಿಯಿಂದ ಬಿದ್ದು ಒಂದೂವರೆ ವರ್ಷದ ಹೆಣ್ಣು ಮಗು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಗರದ ನಾಯಂಡಹಳ್ಳಿಯಲ್ಲಿ ನಡೆದಿದೆ. ಏಪ್ರಿಲ್ 6 ರಂದು ಈ ಘಟನೆ ನಡೆದಿದ್ದು, ಇದರ ಎದೆ ಝಲ್ ಎನ್ನುವ ಸಿಸಿಟಿವಿ ದೃಶ್ಯಾವಳಿಗಳು ಲಭ್ಯವಾಗಿವೆ. ಮನೆಯ ಮೂರನೇ ಮಹಡಿಯಲ್ಲಿ ಆಟವಾಡುತ್ತಿದ್ದ ಮಗು ಆಯತಪ್ಪಿ ಕೆಳಗೆ ಬಿದ್ದಿದೆ. ಮಗು ಬೀಳುತ್ತಿದ್ದಂತೆಯೇ ಅದರ ತಲೆಗೆ ತೀವ್ರವಾದ ಪೆಟ್ಟಾಗಿದ್ದು, ಸ್ಥಳದಲ್ಲೇ ರಕ್ತಸ್ರಾವವಾಗಿದೆ. ಮಗು ಕೆಳಗೆ ಬಿದ್ದ ವಿಷಯ ತಿಳಿಯುತ್ತಿದ್ದಂತೆಯೇ ಗಾಬರಿಯಿಂದ ಓಡಿಬಂದ ತಾಯಿ, ಮಗುವಿನ […]

ಕನ್ನಡ ದುನಿಯಾ 9 Apr 2026 7:56 am

SHOCKING: ಪತಿ ಶವದ ಜೊತೆ 10 ದಿನ ಕಳೆದ ಪತ್ನಿ

ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯ ಬಣಕಲ್ ನಲ್ಲಿ ವೃದ್ಧರೊಬ್ಬರು ಮೃತಪಟ್ಟಿದ್ದು, ಪತಿ ಶವದ ಜೊತೆಗೆ ಮಾನಸಿಕ ಅಸ್ವಸ್ಥ ಪತ್ನಿ ಹತ್ತು ದಿನ ಕಳೆದಿದ್ದಾರೆ. ಬಣಕಲ್ ಸುಭಾಷ್ ನಗರದ ಸಿರಿಲ್ ಮೋನಿಸ್(77) ಮೃತಪಟ್ಟವರು. ಅವರ ಮಗ ಮೆಲ್ವಿನ್ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಪುತ್ರಿ ದುಬೈನಲ್ಲಿ ಶಿಕ್ಷಕಿಯಾಗಿದ್ದಾರೆ. ಇತ್ತೀಚೆಗೆ ಆರೋಗ್ಯ ಸಮಸ್ಯೆಯಿಂದ ಹಾಸಿಗೆ ಹಿಡಿದಿದ್ದ ಸಿರಿಲ್ ಮೋನಿಸ್ ಅವರಿಗೆ ಚಿಕಿತ್ಸೆ ಕೊಡಿಸಿದ ಪುತ್ರ ಬೆಂಗಳೂರಿಗೆ ತೆರಳಿದ್ದರು. ತಾಯಿ ಸಿಸಿಲ್ ಮಾನಸಿಕ ಅಸ್ವಸ್ಥರಾಗಿದ್ದು, ಅವರಿಗೆ ಆಗಾಗ ಕರೆ ಮಾಡಿ ಪುತ್ರ […]

ಕನ್ನಡ ದುನಿಯಾ 9 Apr 2026 7:52 am

BIG NEWS : ‘ಮಹಿಳಾ ಮೀಸಲಾತಿ’ಮಸೂದೆಗೆ ಕೇಂದ್ರ ಅಸ್ತು ; ಸಂಸತ್ತು, ಅಸೆಂಬ್ಲಿಯಲ್ಲಿ ಶೇ. 33ರಷ್ಟು ಸ್ಥಾನ ಸ್ತ್ರೀಯರಿಗೆ ಮೀಸಲು !

ನವದೆಹಲಿ : ಕೇಂದ್ರ ಸರ್ಕಾರವು ಮಹಿಳಾ ಸಬಲೀಕರಣದ ನಿಟ್ಟಿನಲ್ಲಿ ಐತಿಹಾಸಿಕ ತೀರ್ಮಾನವೊಂದನ್ನು ಕೈಗೊಂಡಿದೆ. 2011ರ ಜನಗಣತಿಯನ್ನು ಆಧಾರವಾಗಿಟ್ಟುಕೊಂಡು ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ. 33ರಷ್ಟು ಮೀಸಲಾತಿ ಕಲ್ಪಿಸುವ ಮಸೂದೆಗೆ ಕೇಂದ್ರ ಸಚಿವ ಸಂಪುಟ ಬುಧವಾರ ಹಸಿರು ನಿಶಾನೆ ತೋರಿದೆ. ಏಪ್ರಿಲ್ 1 ರಿಂದ ವಿಶೇಷ ಅಧಿವೇಶನ : ಈ ಮಹತ್ವದ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ಏಪ್ರಿಲ್ 16ರಿಂದ ಆರಂಭವಾಗಲಿರುವ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಮಂಡಿಸಲು ಸರ್ಕಾರ ನಿರ್ಧರಿಸಿದೆ. ಪ್ರಸ್ತುತ ನಡೆಯುತ್ತಿರುವ ಡಿಜಿಟಲ್ ಜನಗಣತಿ ಪ್ರಕ್ರಿಯೆ […]

ಕನ್ನಡ ದುನಿಯಾ 9 Apr 2026 7:40 am

ಸರ್ಕಾರಿ ಶಾಲೆ ವಿಲೀನ ವಿರೋಧಿಸಿ ನಾಳೆ ಬೃಹತ್ ಸಮಾವೇಶ

ಬೆಂಗಳೂರು: ಕೆಪಿಎಸ್ ಮ್ಯಾಗ್ನೆಟ್ ಶಾಲೆ ಮೂಲಕ ಸರ್ಕಾರಿ ಶಾಲೆ ವಿಲೀನ ವಿರೋಧಿಸಿ ಏಪ್ರಿಲ್ 10 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಬೃಹತ್ ಜನ ಸಮಾವೇಶ ಹಮ್ಮಿಕೊಳ್ಳಲಾಗಿದೆ. ದೊಡ್ಡಬಳ್ಳಾಪುರದ ಕನ್ನಡ ಜಾಗೃತ ಭವನದಲ್ಲಿ ಬುಧವಾರ ನಡೆದ ನಮ್ಮೂರ ಶಾಲೆ ಉಳಿಸಿ ರಾಜ್ಯಮಟ್ಟದ ಜನ ಸಮಾವೇಶ ಪೂರ್ವಭಾವಿ ಸಭೆಯಲ್ಲಿ ಎಐಡಿಎಸ್ಒ ಜಿಲ್ಲಾ ಕಾರ್ಯದರ್ಶಿ ಕಲ್ಯಾಣಕುಮಾರ್ ಪ್ರತಿಭಟನೆ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ರಾಜ್ಯದ ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸುವ ನೆಪದಲ್ಲಿ ರಾಜ್ಯ ಸರ್ಕಾರ ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಜಾರಿಗೊಳಿಸಿದೆ. […]

ಕನ್ನಡ ದುನಿಯಾ 9 Apr 2026 7:40 am

ದಾವಣಗೆರೆ ದಕ್ಷಿಣ, ಬಾಗಲಕೋಟೆ ಉಪಚುನಾವಣೆ: ಮತದಾನ ಆರಂಭ, ಯಾರಿಗೆ ಒಲಿಯಲಿದೆ ವಿಜಯಲಕ್ಷ್ಮಿ?

ಕರ್ನಾಟಕದ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಇಂದು (ಏಪ್ರಿಲ್ 9) ಮತದಾನ ಪ್ರಕ್ರಿಯೆ ಆರಂಭಗೊಂಡಿದೆ. ಹಿರಿಯ ನಾಯಕರಾದ ಶಾಮನೂರು ಶಿವಶಂಕರಪ್ಪ ಹಾಗೂ ಎಚ್.ವೈ. ಮೇಟಿ ಅವರ ನಿಧನದಿಂದ ತೆರವಾಗಿದ್ದ ಈ ಸ್ಥಾನಗಳಿಗಾಗಿ ಇಂದು ಬಿಗ್ ಫೈಟ್ ನಡೆಯುತ್ತಿದೆ. ಪ್ರತಿಷ್ಠೆಯ ಕಣ: ಆಡಳಿತಾರೂಢ ಕಾಂಗ್ರೆಸ್‌ಗೆ ಈ ಎರಡೂ ಕ್ಷೇತ್ರಗಳನ್ನು ಉಳಿಸಿಕೊಳ್ಳುವುದು ಪ್ರತಿಷ್ಠೆಯ ಪ್ರಶ್ನೆಯಾದರೆ, ಬಿಜೆಪಿ ಈ ಬಾರಿ ಕೈ ಕೋಟೆಗೆ ಲಗ್ಗೆ ಇಡಲು ಭರ್ಜರಿ ತಂತ್ರ ರೂಪಿಸಿದೆ. […]

ಕನ್ನಡ ದುನಿಯಾ 9 Apr 2026 7:35 am