BREAKING : ‘ಬಳ್ಳಾರಿ ಫೈರಿಂಗ್ ‘ಕೇಸ್ : ‘CID’ಯಿಂದ ಇಬ್ಬರು ಗನ್ ಮ್ಯಾನ್’ಗಳು ಅರೆಸ್ಟ್.!
ಬಳ್ಳಾರಿ : ಬಳ್ಳಾರಿ ಫೈರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಪೊಲೀಸರು ಇಬ್ಬರು ಗನ್ ಮ್ಯಾನ್ ಗಳನ್ನು ಬಂಧಿಸಿದ್ದಾರೆ. ಶಾಸಕ ಜನಾರ್ಧನ ರೆಡ್ಡಿ ಮನೆ ಬ್ಯಾನರ್ ಕಟ್ಟುವ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ಓರ್ವ ಕಾಂಗ್ರೆಸ್ ಕಾರ್ಯಕರ್ತ ಗುಂಡೇಟಿಗೆ ಬಲಿಯಾಗಿದ್ದರು. ಈ ಪ್ರಕರಣವನ್ನು ಸರ್ಕಾರ ಸಿಐಡಿ ತನಿಖೆಗೆ ವಹಿಸಿತ್ತು. ಖಾಸಗಿ ಗನ್ ಮ್ಯಾನ್ ಗಳಾದ ಬಲ್ಜೀತ್ ಸಿಂಗ್ ಹಾಗೂ ಬಲ್ಜಿನಂದರ್ ಸಿಂಗ್ ಎಂಬುವವರನ್ನು ಬ್ರೂಸ್ ಪೇಟೆ ಪೊಲೀಸ್ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಲಾಗುತ್ತಿದೆ. ಬಳ್ಳಾರಿಯಲ್ಲಿ ಬ್ಯಾನರ್ ಕಟ್ಟುವ ವಿಚಾರವಾಗಿ ನಡೆದ […]
BIG NEWS: ನಾಯಕರನ್ನು ಭೇಟಿ ಮಾಡಲೆಂದೇ ದೆಹಲಿಗೆ ಬಂದಿದ್ದೇನೆ ಎಂದ ಡಿಸಿಎಂ ಡಿ.ಕೆ.ಶಿವಕುಮಾರ್
ನವದೆಹಲಿ: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರ ಮತ್ತೆ ಮುನ್ನೆಲೆಗೆ ಬಂದಿರುವ ನಡುವೆಯೇ ಡಿಸಿಎಂ ಡಿ.ಕೆ.ಶಿವಕುಮಾರ್ ದೆಹಲಿಗೆ ಭೇಟಿ ನೀಡಿದ್ದು, ಕಾಂಗ್ರೆಸ್ ನಾಯಕರಲ್ಲಿ ಚಟುವಟಿಕೆ ಗರಿಗೆದರಿದೆ. ದೆಹಲಿಯಲ್ಲಿ ಮಾತನಾಡಿರುವ ಡಿಸಿಎಂ ಡಿ.ಕೆ.ಶಿವಕುಮಾರ್, ಸಿಎಂ ಸ್ಥಾನದ ವಿಚಾರ ನನ್ನ, ಸಿಎಂ ಹಾಗೂ ಹೈಕಮಾಂಡ್ ನಡುವಿನ ವಿಚಾರ. ಇದು ಸಾರ್ವಜನಿಕವಾಗಿ ಚರ್ಚೆ ಮಾಡುವ ವಿಷಯವಲ್ಲ ಎಂದು ತಿಳಿಸಿದ್ದಾರೆ. ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ಸಿಎಂ ಸ್ಥಾನ ಎಂಬುದು ಬಹಿರಂಗವಾಗಿ ಚರ್ಚಿಸುವ ವಿಷಯವಲ್ಲ ಎಂದರು. ಇಂದು ಅಸ್ಸಾಂ ಚುನಾವಣೆ ಸಂಬಂಧ ಹೈಕಮಾಂಡ್ […]
ಕಳೆದ ಐದು ದಿನಗಳಿಂದ ಯಾರೂ ತಡೆಯಲಾಗದ ವೇಗದಲ್ಲಿ ಓಡುತ್ತಿದ್ದ ಬೆಳ್ಳಿಯ ಓಟಕ್ಕೆ ಶುಕ್ರವಾರ ಕೊನೆಗೂ ಬ್ರೇಕ್ ಬಿದ್ದಿದೆ. ಸತತವಾಗಿ ದಾಖಲೆ ಬರೆಯುತ್ತಿದ್ದ ಬೆಳ್ಳಿ ಬೆಲೆಯಲ್ಲಿ ಇಂದು ಬರೋಬ್ಬರಿ ₹4,027 ರಷ್ಟು ಭಾರಿ ಕುಸಿತ ಕಂಡುಬಂದಿದ್ದು ಹೂಡಿಕೆದಾರರಲ್ಲಿ ಸಂಚಲನ ಮೂಡಿಸಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಉಂಟಾದ ಮಂದಗತಿ ಮತ್ತು ಅಮೆರಿಕನ್ ಡಾಲರ್ ಮತ್ತಷ್ಟು ಬಲಗೊಂಡಿರುವುದು ಈ ದಿಢೀರ್ ಬದಲಾವಣೆಗೆ ಪ್ರಮುಖ ಕಾರಣ ಎನ್ನಲಾಗಿದೆ ಮಾರುಕಟ್ಟೆಯ ಪ್ರಮುಖ ಅಂಕಿ-ಅಂಶಗಳು: *ಬೆಳ್ಳಿ ಬೆಲೆ (Silver): ಮಲ್ಟಿ ಕಮೋಡಿಟಿ ಎಕ್ಸ್ಚೇಂಜ್ (MCX) ನಲ್ಲಿ ಮಾರ್ಚ್ […]
SHOCKING : ಡ್ರಮ್ ಒಳಗೆ ರುಂಡ, ಹಾಸಿಗೆಯ ಮೇಲೆ ಮುಂಡ : ಪತ್ನಿಯನ್ನು ಎರಡು ತುಂಡುಗಳಾಗಿ ಕತ್ತರಿಸಿದ ಪಾಪಿ ಪತಿ.!
ಉತ್ತರ ಪ್ರದೇಶದ ಫಿರೋಜಾಬಾದ್ನಲ್ಲಿ ಬೆಚ್ಚಿ ಬೀಳಿಸುವ ಘಟನೆಯೊಂದು ನಡೆದಿದೆ. ವ್ಯಕ್ತಿಯೊಬ್ಬ ತನ್ನ ಮೂವರು ಸಹೋದರರ ಸಹಾಯದಿಂದ ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಪತ್ನಿಯನ್ನು ಕೊಂದು, ಆಕೆಯ ದೇಹವನ್ನು ಎರಡು ತುಂಡುಗಳಾಗಿ ಕತ್ತರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳು ಹರಿತವಾದ ಆಯುಧವನ್ನು ಬಳಸಿ ಮಹಿಳೆಯನ್ನು ಕೊಂದು, ಆಕೆಯ ದೇಹವನ್ನು ತುಂಡುಗಳಾಗಿ ಕತ್ತರಿಸಿದ್ದಾರೆ. ಕುತ್ತಿಗೆಯ ಮೇಲಿನ ಭಾಗವನ್ನು ಡ್ರಮ್ನೊಳಗೆ ಬಚ್ಚಿಟ್ಟು, ಮುಂಡವನ್ನು ಮನೆಯೊಳಗಿನ ಹಾಸಿಗೆಯ ಮೇಲೆ ಬಿಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಕತ್ತರಿಸಿದ ತಲೆಯನ್ನು ಡ್ರಮ್ನಿಂದ ಮತ್ತು ಮುಂಡವನ್ನು ಮನೆಯೊಳಗಿನ […]
BREAKING: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಚುನಾವಣಾ ದಿನಾಂಕ ಘೋಷಣೆ: ಅಧಿಸೂಚನೆ ಪ್ರಕಟ
ನವದೆಹಲಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಚುನಾವಣಾ ಧಿನಾಂಕವನ್ನು ಭಾರತೀಯ ಜನತಾ ಪಕ್ಷ ಘೋಷಿಸಿದೆ. ಈ ನಿಟ್ಟಿನಲ್ಲಿ ಅಧಿಸೂಚನೆ ಹೊರಡಿಸಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನದ ಚುನಾವಣೆಗೆ ಜನವರಿ 19ರಂದು ನಾಮಪತ್ರ ಸಲ್ಲಿಕೆ ನಡೆಯಲಿದೆ. ಜನವರಿ 20ರಂದು ನೂತನ ಅಧ್ಯಕ್ಷರ ಹೆಸರನ್ನು ಅನೌಪಚಾರಿಕವಾಗಿ ಘೋಷಿಸಲಾಗುವುದು. ಬಿಜೆಪಿಯ ನಿತಿನ್ ನಬಿನ್ ಅವರನ್ನು ಹಂಗಾಮಿ ಅಧ್ಯಕ್ಷರನ್ನಾಗಿ ಬಿಜೆಪಿ ಆಯ್ಕೆ ಮಾಡಿದ್ದು, ನಿತಿನ್ ನಬಿನ್ ಅವರೇ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾಗುವುದು ಖಚಿತ ಎಂದು ಹೇಳಲಾಗುತ್ತಿದೆ. ಜೆಪಿ ನಡ್ಡಾ ಅವರಿಂದ ತೆರವಾದ ಸ್ಥಾನಕ್ಕೆ […]
ದಿನಕ್ಕೆ ಎಷ್ಟು ಮೊಟ್ಟೆಗಳನ್ನು ತಿನ್ನಬಹುದು? ಆರೋಗ್ಯಕರ ಜೀವನಶೈಲಿಯಲ್ಲಿ ಮೊಟ್ಟೆಗಳ ಪಾತ್ರವೇನು? ಎಂಬ ವಿಷಯದ ಬಗ್ಗೆ ಪೌಷ್ಟಿಕತಜ್ಞರು ನೀಡಿರುವ ಮಹತ್ವದ ಮಾಹಿತಿಯನ್ನು ಆಧರಿಸಿದ ವರದಿ ಇಲ್ಲಿದೆ. ಸಮತೋಲಿತ ಆಹಾರದ ಭಾಗವಾಗಿ ದಿನಕ್ಕೆ ಒಂದು ಅಥವಾ ಎರಡು ಮೊಟ್ಟೆಗಳನ್ನು ತಿನ್ನುವುದು ಸುರಕ್ಷಿತ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಮೊಟ್ಟೆಗಳು ಪ್ರೋಟೀನ್ನಿಂದ ಸಮೃದ್ಧವಾಗಿವೆ ಮತ್ತು ಹಲವಾರು ಅಗತ್ಯ ಪೋಷಕಾಂಶಗಳನ್ನು ಒಳಗೊಂಡಿವೆ. ದಿನಕ್ಕೆ ಎಷ್ಟು ಮೊಟ್ಟೆಗಳು ಸೂಕ್ತ? ಆರೋಗ್ಯವಂತ ವಯಸ್ಕರು: ಸಾಮಾನ್ಯ ಕೊಲೆಸ್ಟ್ರಾಲ್ ಮಟ್ಟ ಹೊಂದಿರುವ ಮತ್ತು ಯಾವುದೇ ಹೃದ್ರೋಗದ ಅಪಾಯವಿಲ್ಲದ ಆರೋಗ್ಯವಂತ […]
ಸತತ ಎರಡನೇ ದಿನವೂ ಚಿನ್ನದ ಬೆಲೆ ಇಳಿಕೆ:ಬೆಳ್ಳಿ ಬೆಲೆ ₹3,000 ಇಳಿಕೆ ಇಂದಿನ ಲೇಟೆಸ್ಟ್ ದರ ಇಲ್ಲಿದೆ.
ಬೆಂಗಳೂರು: ಸತತ ಏರಿಕೆಯಿಂದ ಕಂಗೆಟ್ಟಿದ್ದ ಚಿನ್ನದ ಪ್ರಿಯರಿಗೆ ವಾರದ ಕೊನೆಯಲ್ಲಿ ಸಮಾಧಾನದ ಸುದ್ದಿ ಸಿಕ್ಕಿದೆ. ಕಳೆದ ಕೆಲವು ದಿನಗಳಿಂದ ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿ ಅಬ್ಬರಿಸುತ್ತಿದ್ದ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಇಂದು (ಜನವರಿ 16) ಕೊಂಚ ಇಳಿಕೆಯ ಹಾದಿ ಹಿಡಿದಿವೆ. ಜಾಗತಿಕ ಮಾರುಕಟ್ಟೆಯಲ್ಲಿ ಹೂಡಿಕೆದಾರರು ಭಾರಿ ಪ್ರಮಾಣದಲ್ಲಿ ಪ್ರಾಫಿಟ್ ಬುಕಿಂಗ್ಗೆ ಮುಂದಾಗಿರುವುದು ಮತ್ತು ಡಾಲರ್ ಮೌಲ್ಯ ಚೇತರಿಸಿಕೊಂಡಿರುವುದು ಈ ದರ ಇಳಿಕೆಗೆ ಮುಖ್ಯ ಕಾರಣ ಎನ್ನಲಾಗಿದೆ. ಬೆಂಗಳೂರಿನಲ್ಲಿ ಇಂದಿನ ಚಿನ್ನದ ದರ (24 ಕ್ಯಾರೆಟ್): 1 ಗ್ರಾಂ: […]
ತೆಲಂಗಾಣದ ಕರಿಂನಗರದಲ್ಲಿ ಸುಮಾರು 100ಕ್ಕೂ ಹೆಚ್ಚು ಜನರನ್ನು ಹನಿಟ್ರ್ಯಾಪ್ (Honey-trap) ಜಾಲಕ್ಕೆ ಸಿಲುಕಿಸಿ ಹಣ ಸುಲಿಗೆ ಮಾಡುತ್ತಿದ್ದ ದಂಪತಿಯನ್ನು ಜನವರಿ 14ರ ಬುಧವಾರದಂದು ಪೊಲೀಸರು ಬಂಧಿಸಿದ್ದಾರೆ. ಬಂಧಿತ ದಂಪತಿ ಮೂಲತಃ ಮಂಚೇರಿಯಲ್ ಮೂಲದವರಾಗಿದ್ದು, ಕಳೆದ ಕೆಲವು ಸಮಯದಿಂದ ಕರಿಂನಗರದಲ್ಲಿ ವಾಸವಾಗಿದ್ದರು. ಘಟನೆಯ ವಿವರ: ಸಾಲ ತೀರಿಸಲು ಹನಿಟ್ರ್ಯಾಪ್ ಹಾದಿ ಪೊಲೀಸರ ತನಿಖೆಯ ಪ್ರಕಾರ, ಪತಿಯ ಮಾರ್ಬಲ್ ಮತ್ತು ಇಂಟೀರಿಯರ್ ಡೆಕೋರೇಷನ್ ವ್ಯವಹಾರದಲ್ಲಿ ಭಾರಿ ನಷ್ಟ ಉಂಟಾಗಿತ್ತು. ತಮ್ಮ ಫ್ಲಾಟ್ನ ಇಎಂಐ (EMI) ಪಾವತಿಸಲು ಹಣವಿಲ್ಲದೆ ಕಷ್ಟಪಡುತ್ತಿದ್ದ ದಂಪತಿ, […]
BREAKING : ಮುಂಬೈ ಮಹಾನಗರ ಪಾಲಿಕೆ ಚುನಾವಣೆ : 109 ಸ್ಥಾನಗಳಲ್ಲಿ ‘ಬಿಜೆಪಿ ಮೈತ್ರಿಕೂಟ’ಭರ್ಜರಿ ಮುನ್ನಡೆ
ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (BMC) ಚುನಾವಣೆಯ ಫಲಿತಾಂಶಗಳನ್ನು ಇಂದು ಶುಕ್ರವಾರ ಪ್ರಕಟಿಸಲಾಗುತ್ತಿದೆ. ಮತ ಎಣಿಕೆ ಬೆಳಿಗ್ಗೆ 10 ಗಂಟೆಗೆ ಪ್ರಾರಂಭವಾಗಿದ್ದು, ಭಾರಿ ಕುತೂಹಲ ಮೂಡಿಸಿದೆ. ಮಹತ್ವದ ಬೆಳವಣಿಗೆಯಲ್ಲಿ ಬಿಜೆಪಿ ಮೈತ್ರಿಕೂಟ ಬರೋಬ್ಬರಿ 109 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಬಿಜೆಪಿ ಹಾಗೂ ಶಿವಸೇನೆ 2 ಸೇರಿ 106 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಈ ಮೂಲಕ ಬಿಜೆಪಿ ಮೈತ್ರಿಕೂಟ ಭರ್ಜರಿ ಬಹುಮತದ ನಿರೀಕ್ಷೆಯಲ್ಲಿದೆ. ಕಾಂಗ್ರೆಸ್ 11. ಯುಬಿಟಿ 67, ಎನ್ ಸಿ ಪಿ 1 ಸ್ಥಾನ ಪಡೆದಿದೆ. ಮಹಾರಾಷ್ಟ್ರದ […]
ಮಹಿಳಾ ಪ್ರೀಮಿಯರ್ ಲೀಗ್ (WPL) 2026ರ ಕ್ರೀಡಾಂಗಣದಲ್ಲಿ ಕೇವಲ ಬೌಂಡರಿ, ಸಿಕ್ಸರ್ಗಳ ಅಬ್ಬರವಷ್ಟೇ ಇಲ್ಲ. ಮೈದಾನದ ಹೊರಗೆ ತಮ್ಮ ಸ್ಟೈಲ್, ಗ್ಲಾಮರ್ ಮತ್ತು ವ್ಯಕ್ತಿತ್ವದ ಮೂಲಕ ಗಮನ ಸೆಳೆಯುತ್ತಿರುವ ಕ್ರಿಕೆಟ್ ತಾರೆಯರು ಈ ಬಾರಿ ಸುದ್ದಿಯಲ್ಲಿದ್ದಾರೆ. ಕ್ರಿಕೆಟ್ ಮತ್ತು ಗ್ಲಾಮರ್ ಸಮ್ಮಿಲನದಂತಿರುವ ಈ ಸೀಸನ್ನಲ್ಲಿ ಮಿಂಚುತ್ತಿರುವ ಕೆಲವು ಪ್ರಮುಖ ಆಟಗಾರ್ತಿಯರ ವಿವರ ಇಲ್ಲಿದೆ. ಹರ್ಲೀನ್ ಡಿಯೋಲ್ (ಯುಪಿ ವಾರಿಯರ್ಸ್) ಯುಪಿ ವಾರಿಯರ್ಸ್ ತಂಡದ ಹರ್ಲೀನ್ ಡಿಯೋಲ್ ಈ ಬಾರಿಯ ಡಬ್ಲ್ಯೂಪಿಎಲ್ನಲ್ಲಿ ಸಖತ್ ಸೌಂಡ್ ಮಾಡುತ್ತಿದ್ದಾರೆ. ದೆಹಲಿ ಕ್ಯಾಪಿಟಲ್ಸ್ […]
SHOCKING: ಮಗುವಿಗೆ ಎದೆಹಾಲುಣಿಸುತ್ತಿದ್ದ ಪತ್ನಿಯನ್ನೇ ಹೊಡೆದು ಕೊಂದ ಪತಿ: ಉಸಿರುಗಟ್ಟಿ 6 ತಿಂಗಳ ಕಂದಮ್ಮನೂ ಸಾವು
ಭೋಪಾಲ್: ವ್ಯಕ್ತಿಯೋರ್ವ, ಮಗುವಿಗೆ ಎದೆಹಾಲುಣಿಸುತ್ತಿದ್ದ ಪತ್ನಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಬರ್ಬರವಾಗಿ ಹತ್ಯೆಗೈದಿದ್ದು, ಇದೇ ವೇಳೆ ಉಸಿರುಗಟ್ಟಿ ಮಗು ಕೂಡ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಇಲ್ಲಿನ ಖಾರ್ಗೋನ್ ಎಂಬಲ್ಲಿನ ಬಕಾವಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಚಂಪಾಬಾಯಿ ಹಾಗೂ 6 ತಿಂಗಳ ಮಗು ಮೃತರು. ಚಂಪಾಬಾಯಿ ಪತಿ ಸುನಿಲ್ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆತನೇ ಪತ್ನಿಯನ್ನು ಕೊಲೆಗೈದಿರುವುದು ಬೆಳಕಿಗೆ ಬಂದಿದೆ. ಪತಿ-ಪತ್ನಿ ನಡುವೆ ಜಗಳವಾಗಿತ್ತು. ಚಂಪಾಬಾಯಿ ಮಗುವಿಗೆ ಹಾಲುಣಿಸುತ್ತಿದ್ದಳು. ಈ […]
‘ಸಂತಾನಶಕ್ತಿಗೆ ಸೂಪರ್ ಪವರ್’ : ಮಕ್ಕಳನ್ನು ಬಯಸುವವರಿಗೆ ಈ ಹಣ್ಣು ವರದಾನ.!
ನಮ್ಮ ಒತ್ತಡದ ಜೀವನದಲ್ಲಿ ಅನೇಕ ಆರೋಗ್ಯ ಸಮಸ್ಯೆಗಳು ನಮ್ಮನ್ನು ಕಾಡುತ್ತಿವೆ. ವಿಶೇಷವಾಗಿ.. ನಾವು ತಿನ್ನುವ ಆಹಾರ.. ನಾವು ಅಳವಡಿಸಿಕೊಳ್ಳುವ ಜೀವನಶೈಲಿ ನಮ್ಮ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ.. ಕ್ರಮೇಣ.. ಇದು ಅನೇಕ ವೈದ್ಯಕೀಯ ಸ್ಥಿತಿಗಳಿಗೆ ಕಾರಣವಾಗುತ್ತದೆ.. ವಿಶೇಷವಾಗಿ.. ಮದುವೆಯ ನಂತರ, ಜನರು ಮಗುವನ್ನು ಹೊಂದಲು ಬಯಸುತ್ತಾರೆ.. ಅವರು ಇದಕ್ಕಾಗಿ ಬಹಳಷ್ಟು ಕನಸು ಕಾಣುತ್ತಾರೆ.. ಆದರೆ.. ಪ್ರಸ್ತುತ ಯುಗದಲ್ಲಿ, ಫಲವತ್ತತೆ ಒಂದು ದೊಡ್ಡ ಸಮಸ್ಯೆಯಾಗುತ್ತಿದೆ.. ಇದು ಇಬ್ಬರಲ್ಲೂ ಇರುವ ದೋಷದಿಂದಲೂ ಆಗಿರಬಹುದು. ವಾಸ್ತವವಾಗಿ, ಚಳಿಗಾಲದಲ್ಲಿ, ಸಾಮಾನ್ಯವಾಗಿ ಎಲ್ಲರ […]
ಪತ್ನಿ ಬೇರೆಯವರ ಜೊತೆ ಮಾತನಾಡಿದ್ದಕ್ಕೆ ಪತಿಯ ರೌದ್ರಾವತಾರ : ವಿಮಾನದ ಒಳಗೆ ಫ್ರೆಂಚ್ ಫ್ರೈಸ್ ಎಸೆದು ರಂಪಾಟ
ವಿಮಾನದ ಒಳಗೆ ಪತಿಯೊಬ್ಬ ತನ್ನ ಪತ್ನಿಯ ವಿಷಯವಾಗಿ ಪರಪುರುಷರೊಂದಿಗೆ ಜಗಳವಾಡಿ, ಅಂತಿಮವಾಗಿ ವಿಮಾನದಿಂದಲೇ ಹೊರಹಾಕಲ್ಪಟ್ಟ ವಿಚಿತ್ರ ಘಟನೆಯ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸೌಂಡ್ ಮಾಡುತ್ತಿದೆ. ಪತ್ನಿ ಬೇರೊಬ್ಬ ಪ್ರಯಾಣಿಕನೊಂದಿಗೆ ಮಾತನಾಡಿದ್ದನ್ನು ಸಹಿಸದ ಪತಿ ವಿಮಾನದ ಒಳಗೇ ರಂಪಾಟ ಮಾಡಿದ್ದಾನೆ. ನಡೆದಿದ್ದೇನು? ವೈರಲ್ ಆಗಿರುವ ವಿಡಿಯೋ ಪ್ರಕಾರ, ವಿಮಾನದಲ್ಲಿ ಪತಿ ಮತ್ತು ಪತ್ನಿ ಬೇರೆ ಬೇರೆ ಸೀಟುಗಳಲ್ಲಿ ಕುಳಿತಿದ್ದರು. ಈ ವೇಳೆ ಪತ್ನಿ ತನ್ನ ಪಕ್ಕದ ಸೀಟಿನಲ್ಲಿದ್ದ ವ್ಯಕ್ತಿಯೊಂದಿಗೆ ಮಾತನಾಡುತ್ತಿರುವುದನ್ನು ಗಮನಿಸಿದ ಪತಿ ಸಿಟ್ಟಿನಿಂದ ಕೆಂಡಾಮಂಡಲವಾಗಿದ್ದಾನೆ. […]
ಚಾಲುಕ್ಯ ಉತ್ಸವ 2026 : ನಾಳೆಯಿಂದ ಹೆಲಿಟೂರಿಜಂ ಸೇವೆ , ಹೆಲಿಕ್ಯಾಪ್ಟರ್ ಮೂಲಕ ಚಾಲುಕ್ಯರ ವೈಭವ ವೀಕ್ಷಣೆ
ಬಾಗಲಕೋಟೆ: ಚಾಲುಕ್ಯ ಉತ್ಸವ ಅಂಗವಾಗಿ ಬಾದಾಮಿ ಚಾಲುಕ್ಯರ ಪ್ರಮುಖ ಸ್ಥಳಗಳನ್ನು ಹೆಲಿಕ್ಯಾಪ್ಟರ್ ಮೂಲಕ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿದೆ. ಹೆಲಿ ಟೂರಿಜಂ ಹೆಸರುನಲ್ಲಿ ಸೌಲಭ್ಯ ಕಲ್ಪಿಸಲಾಗಿದ್ದು, ಚಾಲುಕ್ಯ ಉತ್ಸವದಲ್ಲಿ ಈ ಬಾರಿ ಕಲ್ಪಿಸಲಾಗಿರುವ ಪ್ರಮುಖ ಆಕರ್ಷಣೆಗಳಲ್ಲಿ ಹೆಲಿಟೂರಿಜಂ ಸಹ ಒಂದಾಗಿದೆ. ಜನವರಿ 17 ರಿಂದ 20ರ ವರೆಗೆ ಬೆಳಿಗ್ಗೆ 9 ರಿಂದ ಸಂಜೆ 4 ಗಂಟೆವರೆಗೆ ಬಾದಾಮಿ ಪಟ್ಟಣದ ವೀರಪುಲಕೇಶಿ ಮಹಾವಿದ್ಯಾಲಯದ ಕ್ರೀಡಾ ಮೈದಾನದಲ್ಲಿ “Badami by Sky” ಹೆಲಿ ಪ್ರವಾಸೋದ್ಯಮ (ಜಾಯ್ ರೈಡ್) ಸೇವೆಯನ್ನು M/s Thumby […]
ಬೆಳ್ಳಿ ಹೂಡಿಕೆದಾರರೇ ಹುಷಾರ್ ದೊಡ್ಡ ಮಟ್ಟದ ಕುಸಿತದ ಮುನ್ಸೂಚನೆ ನೀಡಿದ ರಾಬರ್ಟ್ ಕಿಯೋಸಾಕಿ.
ಬೆಳ್ಳಿ ಬೆಲೆಯು ಆಕಾಶಕ್ಕೆ ಏಣಿಯಿಡುತ್ತಿರುವ ಹೊತ್ತಲ್ಲೇ ಹೂಡಿಕೆದಾರರ ಎದೆಯಲ್ಲಿ ನಡುಕ ಶುರುವಾಗಿದೆ ರಿಚ್ ಡ್ಯಾಡ್ ಪೂರ್ ಡ್ಯಾಡ್ ಖ್ಯಾತಿಯ ವಿಶ್ವಪ್ರಸಿದ್ಧ ಲೇಖಕ ರಾಬರ್ಟ್ ಕಿಯೋಸಾಕಿ ನೀಡಿರುವ ಒಂದು ಎಚ್ಚರಿಕೆ ಈಗ ಜಾಗತಿಕ ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಸಿದೆ. ಬೆಳ್ಳಿ ಸದ್ಯಕ್ಕೆ ತನ್ನ ಗರಿಷ್ಠ ಮಟ್ಟವನ್ನು ತಲುಪಿದ್ದು, ಶೀಘ್ರದಲ್ಲೇ ಭಾರಿ ಕುಸಿತ (Pullback) ಕಾಣಲಿದೆ ಎಂದು ಕಿಯೋಸಾಕಿ ಭವಿಷ್ಯ ನುಡಿದಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್ (X) ಮೂಲಕ ಹೂಡಿಕೆದಾರರಿಗೆ ಜಾಗರೂಕರಾಗಿರಿ ಎಂದು ಕಿವಿಮಾತು ಹೇಳಿರುವ ಅವರು ಈ ಲಾಭದ ಅಲೆಯ […]
ಇಮ್ಯುನಿಟಿ ಹೆಚ್ಚಿಸಲು ಕೇವಲ ಆಹಾರ ಸಾಲದು: ದೇಹದಲ್ಲಿ ಈ ಮ್ಯಾಜಿಕ್ ವಿಟಮಿನ್ ಕಡಿಮೆಯಾದರೆ ಡೇಂಜರ್
ನಮ್ಮ ದೇಹದ ಆರೋಗ್ಯದಲ್ಲಿ ‘ವಿಟಮಿನ್ ಡಿ’ (Vitamin D) ಪ್ರಮುಖ ಪಾತ್ರ ವಹಿಸುತ್ತದೆ. ಆದರೆ, ಈ ವಿಟಮಿನ್ ಕೊರತೆಯು ಯಾವುದೇ ದೊಡ್ಡ ಲಕ್ಷಣಗಳಿಲ್ಲದೆ ನಿಧಾನವಾಗಿ ನಿಮ್ಮ ಆರೋಗ್ಯವನ್ನು ಹದಗೆಡಿಸಬಹುದು. ಗಂಭೀರ ಸಮಸ್ಯೆಗಳು ಎದುರಾಗುವ ಮೊದಲೇ ನಿಮ್ಮ ದೇಹ ನೀಡುವ ಈ 8 ಮುನ್ನೆಚ್ಚರಿಕೆ ಸಂಕೇತಗಳನ್ನು ಗುರುತಿಸುವುದು ಬಹಳ ಮುಖ್ಯ. ವಿಟಮಿನ್ ಡಿ ಕೊರತೆಯ ಆರಂಭಿಕ ಲಕ್ಷಣಗಳು ಇಲ್ಲಿವೆ: ೧. ಮೂಳೆ ಮತ್ತು ಸ್ನಾಯುಗಳ ನೋವು: ಮೂಳೆಗಳಲ್ಲಿ ನೋವು ಕಾಣಿಸಿಕೊಳ್ಳುವುದು, ಸ್ನಾಯುಗಳ ದೌರ್ಬಲ್ಯ, ಕೈಕಾಲು ನೋವು ಹಾಗೂ ಬೆನ್ನು […]
ನ್ಯೂಜಿಲೆಂಡ್ನ ಕ್ರೈಸ್ಟ್ಚರ್ಚ್ನಲ್ಲಿರುವ ಬರೋಬ್ಬರಿ 45 ಕೋಟಿ ರೂಪಾಯಿ ಬೆಲೆಯ ಐಷಾರಾಮಿ ವಿಲ್ಲಾವೊಂದನ್ನು ಗುರುಗ್ರಾಮದ ಫ್ಲಾಟ್ಗಳಿಗೆ ಹೋಲಿಸಿ ಭಾರತೀಯ ವ್ಯಕ್ತಿಯೊಬ್ಬರು ಮಾಡಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆ ಹುಟ್ಟುಹಾಕಿದೆ. ಭಾರತದ ನಗರಗಳಲ್ಲಿ ಹೆಚ್ಚುತ್ತಿರುವ ರಿಯಲ್ ಎಸ್ಟೇಟ್ ಬೆಲೆ ಮತ್ತು ಜೀವನಮಟ್ಟದ ನಡುವಿನ ವ್ಯತ್ಯಾಸವನ್ನು ಈ ವಿಡಿಯೋ ಎತ್ತಿ ತೋರಿಸುತ್ತಿದೆ. ಏನಿದೆ ಆ ವಿಡಿಯೋದಲ್ಲಿ? ಗೌತಮ್ ಮಲಿಕ್ ಎಂಬುವವರು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿರುವ ಈ ವಿಡಿಯೋದಲ್ಲಿ, ನ್ಯೂಜಿಲೆಂಡ್ನ ವಿಶಾಲವಾದ ವಿಲ್ಲಾದ ಮುಂದೆ ನಿಂತು ಮಾತನಾಡಿದ್ದಾರೆ. “ಈ ಆಸ್ತಿಯ ಬೆಲೆ […]
ತನ್ನ ಪತಿ ಮಾರಾಟ ಮಾಡಿದ ಆಸ್ತಿಯ ಮೇಲೆ ಪತ್ನಿ ಹಕ್ಕು ಸಾಧಿಸಬಹುದೇ ? ಹೈಕೋರ್ಟ್ ಮಹತ್ವದ ತೀರ್ಪು.!
ಹಿಂದೂ ಪತ್ನಿಯರಿಗೆ ಜೀವನಾಂಶ ನೀಡುವ ಬಗ್ಗೆ ಕೇರಳ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ನ್ಯಾಯಾಲಯದ ಪ್ರಕಾರ, ಪತ್ನಿಯು ತನ್ನ ಗಂಡನ ಸ್ಥಿರ ಆಸ್ತಿಯನ್ನು ವರ್ಗಾವಣೆ ಮಾಡಿದ ನಂತರವೂ ಅದರ ಮೇಲೆ ಜೀವನಾಂಶವನ್ನು ಪಡೆಯಬಹುದು. ಹಾಗೆ ಮಾಡಲು, ಆಸ್ತಿಯನ್ನು ವರ್ಗಾಯಿಸುವ ಮೊದಲು ಹಿಂದೂ ಪತ್ನಿ ಜೀವನಾಂಶಕ್ಕಾಗಿ ಕಾನೂನು ಕ್ರಮಗಳನ್ನು ಪ್ರಾರಂಭಿಸಿರಬೇಕು ಅಥವಾ ಆಸ್ತಿಯನ್ನು ಖರೀದಿಸಿದವರು ಪತ್ನಿಯ ಹಕ್ಕಿನ ಬಗ್ಗೆ ತಿಳಿದಿರಬೇಕು ಎಂದು ನ್ಯಾಯಾಲಯ ಹೇಳಿದೆ. ಸುಲೋಚನಾ ವರ್ಸಸ್ ಅನಿತಾ ಮತ್ತು ಇತರರ ಪ್ರಕರಣದಲ್ಲಿ ನ್ಯಾಯಾಲಯವು ಈ ತೀರ್ಪನ್ನು ನೀಡಿದೆ. […]
ನಿಮ್ಮ ಬುದ್ಧಿಶಕ್ತಿಗೆ ಇಲ್ಲಿದೆ ಸವಾಲು: 358 ಸಂಖ್ಯೆಯಲ್ಲಿ 2 ಕಡ್ಡಿ ಬದಲಿಸಿ ಅತಿ ದೊಡ್ಡ ಸಂಖ್ಯೆ ಮಾಡಿ
ನಿಮ್ಮ ಬುದ್ಧಿಶಕ್ತಿಗೆ ಇಲ್ಲಿದೆ ಒಂದು ಸವಾಲು! ಕಡ್ಡಿಪುಡಿಗಳ (Matchsticks) ಮೂಲಕ ತಯಾರಿಸಿದ ಸಂಖ್ಯೆಗಳನ್ನು ಬದಲಾಯಿಸಿ ಅತಿ ದೊಡ್ಡ ಸಂಖ್ಯೆಯನ್ನು ರೂಪಿಸುವುದು ಈ ಆಟದ ವೈಶಿಷ್ಟ್ಯ. ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಈ ಪಜಲ್ ಅನ್ನು ಕೇವಲ 5 ಸೆಕೆಂಡುಗಳಲ್ಲಿ ಬಿಡಿಸಲು ಸಾಧ್ಯವೇ? ಪ್ರಯತ್ನಿಸಿ ನೋಡಿ. ಸವಾಲು ಇಲ್ಲಿದೆ: ಚಿತ್ರದಲ್ಲಿ ಕಡ್ಡಿಪುಡಿಗಳಿಂದ ತಯಾರಿಸಿದ ‘358’ ಎಂಬ ಸಂಖ್ಯೆಯಿದೆ. ನೀವು ಮಾಡಬೇಕಾದ್ದು ಇಷ್ಟೇ: ಕೇವಲ 2 ಕಡ್ಡಿಗಳನ್ನು ಮಾತ್ರ ಸ್ಥಳಾಂತರಿಸಿ (Move), ಇದರಿಂದ ನೀವು ಪಡೆಯಬಹುದಾದ ಅತ್ಯಂತ ದೊಡ್ಡ […]
ಮುಂಬೈ: ದೇಶದ ಅತ್ಯಂತ ಶ್ರೀಮಂತ ಮಹಾನಗರ ಪಾಲಿಕೆ ಮುಂಬೈ ಮಹಾನಗರ ಪಾಲಿಕೆ ಚುನಾವಣಾ ಫಲಿತಾಂಶ ಪ್ರಕಟವಾಗುತ್ತಿದ್ದು, ಬಿಜೆಪಿ ಮಿತ್ರಕೂಟ ಹಾಗೂ ಠಾಕ್ರೆ ಬ್ರದರ್ಸ್ ನಡುವೆ ಭಾರಿ ಜಿದ್ದಾಜಿದ್ದಿ ಏರ್ಪಟ್ಟಿದೆ. ಬಿಎಂಸಿ ಮಹಾಯುದ್ಧದಲ್ಲಿ ಬಿಜೆಪಿ ಹಾಗೂ ಉದ್ಧವ್ ಠಾಕ್ರೆಯ ಯುಬಿಟಿ ನಡುವೆ ತೀವ್ರ ಪೈಪೋಟಿ ನಡೆದಿದೆ. ಬಿಜೆಪಿ 50 ಹೆಚ್ಚು ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ. ಠಾಕ್ರೆಯ ಶಿವಸೇನೆ ಯುಬಿಟಿ ಕೂಡ 50 ನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. 20ಸ್ಥಾನಗಳಲ್ಲಿ ಶಿವಸೇನೆ (ಶಿಂಧೆ) ಪಡೆ ಮುನ್ನಡೆಯಲ್ಲಿದ್ದರೆ ಕೇವಲ 7 ವಾರ್ಡ್ ಗಳಲ್ಲಿ ಎಂಎನ್ […]
BREAKING : ಮುಂಬೈ ಮಹಾನಗರ ಪಾಲಿಕೆ ಚುನಾವಣೆ : ಭರ್ಜರಿ ಮುನ್ನಡೆ ಸಾಧಿಸಿದ ಬಿಜೆಪಿ ಮೈತ್ರಿಕೂಟ.!
ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (BMC) ಚುನಾವಣೆಯ ಫಲಿತಾಂಶಗಳನ್ನು ಇಂದು ಶುಕ್ರವಾರ ಪ್ರಕಟಿಸಲಾಗುತ್ತಿದೆ. ಮತ ಎಣಿಕೆ ಬೆಳಿಗ್ಗೆ 10 ಗಂಟೆಗೆ ಪ್ರಾರಂಭವಾಗಿದ್ದು, ಭಾರಿ ಕುತೂಹಲ ಮೂಡಿಸಿದೆ. 227 ವಾರ್ಡ್ಗಳಿಗೆ ನಿನ್ನೆ ಗುರುವಾರ ಮತದಾನ ನಡೆಯಿತು. 2017 ರಲ್ಲಿ ಶೇ. 55.53 ಕ್ಕೆ ಹೋಲಿಸಿದರೆ ಮತದಾನದ ಪ್ರಮಾಣ ಶೇ. 52.94 ರಷ್ಟಿತ್ತು. ಆರಂಭಿಕ ಪ್ರವೃತ್ತಿಗಳು ಮುಂಬೈ, ಪುಣೆ ಮತ್ತು ಸೋಲಾಪುರದಲ್ಲಿ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು ಆರಂಭಿಕ ಮುನ್ನಡೆ ಸಾಧಿಸಿವೆ ಎಂದು ತೋರಿಸುತ್ತವೆ. ಬಿಜೆಪಿ ಮೈತ್ರಿಕೂಟ ಗಮನಾರ್ಹವಾಗಿ ಮುಂದಿದೆ. […]
ಪಶ್ಚಿಮ ಬಂಗಾಳ-ಬೆಂಗಳೂರು ಅಮೃತ್ ಭಾರತ್ ರೈಲಿಗೆ ಕನ್ನಡಿಗರ ವಿರೋಧ
ಕರ್ನಾಟಕದ ಬೆಂಗಳೂರು ಮತ್ತು ಪಶ್ಚಿಮ ಬಂಗಾಳ ನಡುವೆ 3 ಅಮೃತ್ ಭಾರತ್ ರೈಲು ಸಂಚಾರ ಆರಂಭಿಸಲಾಗುತ್ತದೆ ಎಂದು ಭಾರತೀಯ ರೈಲ್ವೆ ಘೋಷಣೆ ಮಾಡಿದೆ. ಆದರೆ ಕನ್ನಡಿಗರು ಈ ರೈಲು ಸೇವೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇದರಿಂದ ಕನ್ನಡ ನಾಡಿಗೆ ಪ್ರಯೋಜನ ಏನು? ಎಂದು ಪ್ರಶ್ನೆ ಮಾಡಿದ್ದಾರೆ. ಬಿಜೆಪಿ ನಾಯಕ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ ಈ ಕುರಿತು ತುಮಕೂರು ಸಂಸದ, ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣಗೆ ಪತ್ರವನ್ನು ಬರೆದಿದ್ದಾರೆ. ಈ […]
ರಣಹದ್ದುವಿನ ಮೇಲೆ ಟ್ರ್ಯಾಕರ್, ಜಿಪಿಎಸ್, ಕ್ಯಾಮರಾ ಪತ್ತೆ ಪ್ರಕರಣ: ರಹಸ್ಯ ಬಯಲು!
ವಿಜಯಪುರ: ಕೆಲ ದಿನಗಳ ಹಿಂದೆ ವಿಜಯಪುರದಲ್ಲಿ ಟ್ರ್ಯಾಕರ್, ಜಿಪಿಎಸ್, ಕ್ಯಾಮರಾ ಅಳವಡಿಸಿದ್ದ ರಣಹದ್ದುವೊಂದು ಪತ್ತೆಯಾಗಿದ್ದು, ಜಿಲ್ಲೆಯಲ್ಲಿ ಭಾರಿ ಆತಂಕ ಮೂಡಿಸಿತ್ತು. ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಗೋಟ್ಯಾಳ ಗ್ರಾಮದ ತೋಟದಲ್ಲಿ ಈ ರಣಹದ್ದು ಪತ್ತೆಯಾಗಿತ್ತು. ತೋಟದಲ್ಲಿ ಅಸಹಜ ಸ್ಥಿತಿಯಲ್ಲಿ ದೊಡ್ದ ಪಕ್ಷಿಯೊಂದು ಕುಳಿತಿತ್ತು. ಇದನ್ನು ಕಂಡು ಸ್ಥಳೀಯರು ಗಾಬರಿಯಾಗಿದ್ದರು. ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲಿಸಿದಾಗ ರಣಹದ್ದುವಿನ ಕಾಲಿನಲ್ಲಿ ಗುರುತಿನ ಸಂಖ್ಯೆ ಅಳವಡಿಸಿರುವುದು ಪತ್ತೆಯಾಗಿದೆ. ಅಲ್ಲದೇ ಅದರಲ್ಲಿ ಜಿಪಿಎಸ್, ಟ್ರ್ಯಾಕರ್, ಕ್ಯಾಮರಾಗಳು ಅಳವಡಿಸಿರುವುದು […]
BREAKING : ಕೋಲಾರದಲ್ಲಿ ಕಲ್ಲು ಗಣಿಗಾರಿಕೆ ವೇಳೆ ಬಂಡೆ ಬಿದ್ದು ಹಿಟಾಚಿ ಚಾಲಕ ದುರ್ಮರಣ.!
ಕೋಲಾರ : ಕೋಲಾರದಲ್ಲಿ ಘೋರ ಘಟನೆಯೊಂದು ಸಂಭವಿಸಿದ್ದು, ಕಲ್ಲು ಗಣಿಗಾರಿಕೆ ವೇಳೆ ಬಂಡೆ ಬಿದ್ದು ಹಿಟಾಚಿ ಚಾಲಕ ದುರ್ಮರಣಕ್ಕೀಡಾದ ಘಟನೆ ನಡೆದಿದೆ. ಕೋಲಾರ ತಾಲೂಕಿನ ಬುಸನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮೃತನನ್ನು ಆಂಧ್ರ ಮೂಲದ ಹಿಟಾಚಿ ಚಾಲಕ ಶಣ್ಮುಗಂ (45) ಎಂದು ಗುರುತಿಸಲಾಗಿದೆ. ಚೌಡಪ್ಪ ಎಂಬುವವರು ನಡೆಸುತ್ತಿದ್ದ ಕಲ್ಲಿ ಗಣಿಗಾರಿಕೆ ವೇಳೆ ಈ ದುರ್ಘಟನೆ ನಡೆದಿದೆ. ಮೊದಲು ಲಾರಿಗೆ ಡಿಕ್ಕಿಯಾಗಿ ಸಾವು ಎಂದು ಬಿಂಬಿಸಲು ಯತ್ನ ನಡೆದಿದೆ ಎಂದು ಆರೋಪಿಸಲಾಗಿತ್ತು. ವೇಮಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ […]
ಸೋಶಿಯಲ್ ಮೀಡಿಯಾದಲ್ಲಿ ಇತ್ತೀಚೆಗೆ ವಿಡಿಯೋವೊಂದು ಭಾರಿ ಸಂಚಲನ ಮೂಡಿಸಿತ್ತು. ಅಂಗಡಿಗೆ ಬಂದ ಗ್ರಾಹಕಿಯೊಬ್ಬರು ಎರಡು ಗಂಟೆಗಳ ಕಾಲ ಸಮಯ ವ್ಯರ್ಥ ಮಾಡಿ, ಯಾವುದೂ ಇಷ್ಟವಾಗಲಿಲ್ಲ ಎಂದು ಏನನ್ನೂ ಖರೀದಿಸದೆ ಹೋದಾಗ ಮಹಿಳಾ ವ್ಯಾಪಾರಿಯೊಬ್ಬರು ಕಣ್ಣೀರು ಹಾಕುತ್ತಾ ಬೇಡಿಕೊಳ್ಳುವ ದೃಶ್ಯ ಆ ವಿಡಿಯೋದಲ್ಲಿತ್ತು. ವ್ಯಾಪಾರಿಗಳ ಕಷ್ಟದ ಬಗ್ಗೆ ದೊಡ್ಡ ಮಟ್ಟದ ಚರ್ಚೆ ಹುಟ್ಟುಹಾಕಿದ್ದ ಈ ವಿಡಿಯೋದ ಅಸಲಿಯತ್ತೇನು ಎಂಬುದು ಈಗ ಬಯಲಾಗಿದೆ. ಏನಿದು ಘಟನೆ? ‘ಕ್ಯಾರಿ ವೇರ್’ (Carry Wear) ಎಂಬ ಇನ್ಸ್ಟಾಗ್ರಾಮ್ ಪೇಜ್ನಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿತ್ತು. […]
ಫ್ರಾನ್ಸ್ಗಿಂತಲೂ ಭಾರತವೇ ಬೆಸ್ಟ್ ಫ್ರೆಂಚ್ ಯುವತಿ ಮನಸೋತ ಭಾರತದ ಆ 5 ವಿಷಯಗಳು ಯಾವುವು ಗೊತ್ತೇ?
ಭಾರತದಲ್ಲಿ ನೆಲೆಸಿರುವ ಫ್ರೆಂಚ್ ಮೂಲದ ಯುವತಿಯೊಬ್ಬಳು ಹಂಚಿಕೊಂಡಿರುವ ಇನ್ಸ್ಟಾಗ್ರಾಮ್ ಪೋಸ್ಟ್ ಈಗ ಭಾರತೀಯರ ಮನ ಗೆಲ್ಲುತ್ತಿದೆ. “ಭಾರತವು ಫ್ರಾನ್ಸ್ಗಿಂತ ಉತ್ತಮವಾಗಿ ಮಾಡುವ 5 ದೈನಂದಿನ ಕೆಲಸಗಳು” ಎಂಬ ಶೀರ್ಷಿಕೆಯಡಿ ಆಕೆ ಹಂಚಿಕೊಂಡಿರುವ ಈ ಪಟ್ಟಿಯು ಭಾರತದ ಸಂಸ್ಕೃತಿ ಮತ್ತು ಸೌಂದರ್ಯಕ್ಕೆ ಹಿಡಿದ ಕನ್ನಡಿಯಂತಿದೆ. ಫ್ರೆಂಚ್ ಯುವತಿ ಮೆಚ್ಚಿದ ಆ 5 ವಿಷಯಗಳು ಇಲ್ಲಿವೆ: ೧. ಬೀದಿ ಆಹಾರ (Street Food): ಭಾರತದ ಸ್ಟ್ರೀಟ್ ಫುಡ್ ವೈವಿಧ್ಯತೆ ಮತ್ತು ಅದು ಎಲ್ಲಿ ಬೇಕಾದರೂ ಅತಿ ಕಡಿಮೆ ಬೆಲೆಯಲ್ಲಿ ಸಿಗುವ […]
ತನ್ನ ‘ನೊಬೆಲ್ ಶಾಂತಿ’ಪ್ರಶಸ್ತಿಯನ್ನು ಟ್ರಂಪ್’ಗೆ ಉಡುಗೊರೆಯಾಗಿ ನೀಡಿದ ‘ಮಾರಿಯಾ ಮಚಾದೊ’
ವೆನೆಜುವೆಲಾದ ವಿರೋಧ ಪಕ್ಷದ ನಾಯಕಿ ಮಾರಿಯಾ ಕೊರಿನಾ ಮಚಾದೊ ಅವರು ಗುರುವಾರ ತಮ್ಮ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಪ್ರದಾನ ಮಾಡಿದರು. ಹೌದು. ಅವರು ಅಮೆರಿಕ ಅಧ್ಯಕ್ಷ ಟ್ರಂಪ್ ಅವರನ್ನು ಶ್ವೇತಭವನದಲ್ಲಿ ಭೇಟಿಯಾದರು, ಅಲ್ಲಿ ಅವರು ಪ್ರಶಸ್ತಿಯನ್ನು ಪ್ರದಾನ ಮಾಡಿದರು. “ಇನ್ನೂರು ವರ್ಷಗಳಲ್ಲಿ ವೆನೆಜುವೆಲಾದ ಜನರು ವಾಷಿಂಗ್ಟನ್ನ ಉತ್ತರಾಧಿಕಾರಿಗೆ ಪದಕವನ್ನು ನೀಡುತ್ತಿರುವುದು ಇದೇ ಮೊದಲು. ಇದು ನಮ್ಮ ಸ್ವಾತಂತ್ರ್ಯಕ್ಕೆ ಅವರ ವಿಶೇಷ ಕೊಡುಗೆಯನ್ನು ಗುರುತಿಸಿ ನೀಡಲಾಗುವ ನೊಬೆಲ್ ಶಾಂತಿ ಪ್ರಶಸ್ತಿ ಪದಕವಾಗಿದೆ” […]
ಬೆಂಗಳೂರಲ್ಲಿ ಕೇರಳ ವಿದ್ಯಾರ್ಥಿ ಕಾರಿಗೆ 1,11,500 ರೂ. ದಂಡ!
ಬೆಂಗಳೂರು ನಗರ ಸಂಚಾರಿ ಪೊಲೀಸರು ಕೇರಳ ರಾಜ್ಯದ ವಿದ್ಯಾರ್ಥಿ ಕಾರನ್ನು ಸೀಜ್ ಮಾಡಿದ್ದಾರೆ. ಕಾರಿಗೆ 1,11,500 ರೂ. ದಂಡವನ್ನು ಹಾಕಿದ್ದಾರೆ ಮತ್ತು ಮುಂದಿನ ಕ್ರಮಕ್ಕಾಗಿ ಪ್ರಾದೇಶಿಕ ಸಾರಿಗೆ ಕಚೇರಿಗೆ ಮಾಹಿತಿ ನೀಡಿದ್ದಾರೆ. ಕಾರಿಗೆ ಆಲ್ಟರ್ ಮಾಡಿದ್ದ ಸೈಲೆನ್ಸರ್ ಅಳವಡಿಸಿದ್ದ ವಿದ್ಯಾರ್ಥಿಯ ಕಾರು ಜಪ್ತಿ ಮಾಡಲಾಗಿದೆ. ಅಕ್ರಮವಾಗಿ ವಾಹನದ ಮಾರ್ಪಾಡು ಮತ್ತು ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದ ವಿರುದ್ಧ ಕಠಿಣ ಎಚ್ಚರಿಕೆ ನೀಡಿ ದಂಡ ಹಾಕಿ, ಕಾರು ಜಪ್ತಿ ಮಾಡಲಾಗಿದೆ. ಕಾರ್ಯಾಚರಣೆ ನಡೆಸಿದ ಬೆಂಗಳೂರು ಸಂಚಾರ ವಿಭಾಗದ ಪೊಲೀಸರು ಕರ್ಕಶವಾಗಿ […]
BREAKING: ಬೆಂಕಿ ಹಚ್ಚಿಕೊಂಡು ತಾಯಿ-ಮಗಳು ಆತ್ಮಹತ್ಯೆಗೆ ಯತ್ನ: ತಾಯಿ ಸಾವು, ಮಗಳ ಸ್ಥಿತಿ ಗಂಭೀರ
ಬೆಂಗಳೂರು: ಕೌಟುಂಬಿಕ ಕಲಹಕ್ಕೆ ಬೇಸತ್ತ ತಾಯಿ ತನ್ನ ಮಗಳೊಂದಿಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ಕೃಷ್ಣಪ್ಪ ಲೇಔಟ್ ನಲ್ಲಿ ಈ ಘಟನೆ ನಡೆದಿದೆ. ತಾಯಿ ಸೀತಾ (29) ನಾಲ್ಕು ವರ್ಷದ ಮಗಳು ಸೃಷ್ಟಿಯೊಂದಿಗೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಘಟನೆಯಲ್ಲಿ ತಾಯಿ ಸೀತಾ ಸಾವನ್ನಪ್ಪಿದ್ದಾರೆ. ಮಗಳು ಸೃಷ್ಟಿ ಗಂಭಿರವಾಗಿ ಗಾಯಗೊಂಡಿದ್ದಾಳೆ. ಗಾಯಾಳು ಮಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳು ಸೃಷ್ಟಿ ಸ್ಥಿತಿಯೂ ಗಂಭಿರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಸಂಜಯನಗರ […]
BIG NEWS : ‘ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿ’ನೀಡಲು ಈ ಮಾರ್ಗಸೂಚಿ ಪಾಲನೆ ಕಡ್ಡಾಯ : ಸರ್ಕಾರ ಆದೇಶ
ಬೆಂಗಳೂರು : ಜಾನಪದ ಕ್ರೀಡೆಗಳಾದ ಕಂಬಳ,ಕುಸ್ತಿ , ಆಟ್ಯಾ ಪಾಟ್ಯ ಇತ್ಯಾದಿ ಕ್ರೀಡೆಗಳಲ್ಲಿ ಕೀರ್ತಿ ಗಳಿಸಿದವರನ್ನು ಗುರುತಿಸಿ ಪ್ರೋತ್ಸಾಹಿಸುವ ದೃಷ್ಟಿಯಿಂದ ಹಾಗೂ ರಾಜ್ಯದಲ್ಲಿ ಗ್ರಾಮೀಣ ಕ್ರೀಡೆಯ ಅಭಿವೃದ್ಧಿಗಾಗಿ ಸ್ಥಳೀಯ ಮತ್ತು ಪಾರಂಪರಿಕೆ ಕ್ರೀಡೆಗಳಲ್ಲಿ ಸಾಧಿಸಿದ ಅತ್ಯುತ್ತಮ ಸಾಧನೆಗಳನ್ನು ಗುರುತಿಸಲು ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿಯನ್ನು ನೀಡಲು ಮೇಲೆ ಓದಲಾದ ಕ್ರಮ ಸಂಖ್ಯೆ:(1)ರ ಆದೇಶದಲ್ಲಿ ಮಾರ್ಗಸೂಚಿಗಳನ್ನು ಹೊರಡಿಸಲಾಗಿತ್ತು. ಬದಲಾದ ಕಾಲಮಾನಕ್ಕೆ ತಕ್ಕಂತೆ ಸದರಿ ಮಾರ್ಗಸೂಚಿಗಳನ್ನು ಪರಿಷ್ಕರಿಸುವ ಅಗತ್ಯವಿದ್ದು ಪ್ರಸ್ತುತ ಆರ್ಥಿಕ ಸ್ಥಿತಿಗತಿ ರಾಜ್ಯದ ಕ್ರೀಡಾ ಸಾಧನೆಯ ಬೆಳವಣಿಗೆ ಇತ್ಯಾದಿ […]
BREAKING: ಆಸ್ತಿ ವಿಚಾರವಾಗಿ ಜಗಳ: ಅಣ್ಣನಿಂದಲೇ ತಮ್ಮನ ಬರ್ಬರವಾಗಿ ಹತ್ಯೆ
ಮಂಡ್ಯ: ಆಸ್ತಿ ವಿಚಾರವಾಗಿ ಅಣ್ಣ-ತಮ್ಮಂದಿರ ನಡುವೆ ಗಲಾಟೆ ನಡೆದು, ಅಣ್ಣನಿಂದಲೇ ತಮ್ಮ ಹತ್ಯೆಯಾಗಿರುವ ಘೋರ ಘಟನೆ ಮಂಡ್ಯ ಜಿಲ್ಲೆಯ ಮಾಯಪ್ಪನಹಳ್ಳಿ ಗ್ರಾಮದಲ್ಲಿ ನಡೆದಿದೆ. ಚಾಕುವಿನಿಂದ ಇರಿದು ಅಣ್ಣನೇ ತಮ್ಮನನ್ನು ಕೊಲೆಗೈದು ಪರಾರಿಯಾಗಿದ್ದಾರೆ. ಯೋಗೇಶ್ (35) ಕೊಲೆಯಾದ ವ್ಯಕ್ತಿ. ಲಿಂಗರಾಜು ತಮ್ಮನನ್ನೇ ಕೊಲೆಗೈದ ಆರೋಪಿ. ಲಿಂಗರಾಜುಗೆ ಆತನ ಮಕ್ಕಳಾದ ಭರತ್, ದರ್ಶನ್ ಎಂಬುವವರು ಸಾಥ್ ನೀಡಿದ್ದಾರೆ. ಕೊಲೆ ಬಳಿಕ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಮಂಡ್ಯದ ಕೆರಗೋಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ […]
ಯಾರು ಬದುಕಬೇಕು..ಯಾರು ಸಾಯಬೇಕು ಎಂದು ನಿರ್ಧರಿಸಲು ನಾವು ಯಾರು ? : ದಯಾಮರಣದ ಬಗ್ಗೆ ಸುಪ್ರೀಂಕೋರ್ಟ್ ಕಳವಳ.!
ದಯಾಮರಣಕ್ಕೆ ಅನುಮತಿ ಕೋರಿ ಸಲ್ಲಿಸಲಾದ ಅರ್ಜಿಯ ಕುರಿತು ಸುಪ್ರೀಂ ಕೋರ್ಟ್ ಕಳವಳ ವ್ಯಕ್ತಪಡಿಸಿದೆ. ಯಾರು ಬದುಕಬೇಕು ಮತ್ತು ಯಾರು ಸಾಯಬೇಕು ಎಂದು ನಿರ್ಧರಿಸಲು ನಾವು ಯಾರು? ದಯಾಮರಣಕ್ಕೆ ಅನುಮತಿ ಕೋರಿ ಸಲ್ಲಿಸಲಾದ ಅರ್ಜಿಯ ಕುರಿತು ಸುಪ್ರೀಂ ಕೋರ್ಟ್ ಕಳವಳ ವ್ಯಕ್ತಪಡಿಸಿದೆ. ಈ ಸಂದರ್ಭದಲ್ಲಿ, ದೆಹಲಿಯ 32 ವರ್ಷದ ಹರೀಶ್ ರಾಣಾ ಪ್ರಕರಣದ ತೀರ್ಪನ್ನು ಕಾಯ್ದಿರಿಸಿದೆ. ಏನಿದು ಪ್ರಕರಣ, ಪಂಜಾಬ್ ವಿಶ್ವವಿದ್ಯಾಲಯದ ಮಾಜಿ ವಿದ್ಯಾರ್ಥಿ (ಪ್ರಸ್ತುತ 32 ವರ್ಷ) ಹರೀಶ್ ರಾಣಾ 2013 ರಲ್ಲಿ ತಮ್ಮ ಪೇಯಿಂಗ್ ಗೆಸ್ಟ್ […]
BIG NEWS: ಜಮ್ಮು-ಕಾಶ್ಮೀರ ಪೂಂಚ್ ನಲ್ಲಿ ಮತ್ತೆ ಪಾಕಿಸ್ತಾನಿ ಡ್ರೋನ್ ಗಳು ಪತ್ತೆ: ವಾರದಲ್ಲಿ ಮೂರನೇ ಘಟನೆ
ಶ್ರೀನಗರ: ಜಮ್ಮು-ಕಾಶ್ಮೀರದ ಪೂಂಚ್ ಸೆಕ್ಟರ್ ನಲ್ಲಿ ಮತ್ತೆ ಪಾಕಿಸ್ತಾನಿ ಡ್ರೋನ್ ಗಳು ಪತ್ತೆಯಾಗಿವೆ. ಇದು ವಾರದಲ್ಲಿ ಮೂರನೇ ಘಟನೆಯಾಗಿದೆ. ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಪಾಕಿಸ್ತಾನಕ್ಕೆ ಕಠಿಣ ಎಚ್ಚರ್ಕೆ ನೀಡಿದ ನಂತರವೂ ಪಾಕಿಸ್ತಾನ, ಭಾರತದ ಗಡಿಯಲ್ಲಿ ಡ್ರೋನ್ ಹಾರಾಟ ನಡೆಸುತ್ತಿದೆ. ಈ ಹಿಂದೆ ಎರಡು ಬಾರಿ ಪಾಕ್ ಡ್ರೋನ್ ಪತ್ತೆಯಾದ ಸ್ಥಳಗಳಲ್ಲಿ ಸೇನಾ ಕಟ್ಟೆಚ್ಚರ ವಹಿಸಲಾಗಿದೆ. ಸೇನಾ ಮಹಾನಿರ್ದೇಶಕರು ಉನ್ನತ ಮಟ್ಟದ ಮಾತುಕತೆ ನಡೆಸಿದ್ದಾರೆ. ಈ ನಡುವೆ ಮತ್ತೆ ಪೂಂಚ್ ವಲಯದಲ್ಲಿ ಪಾಕಿಸ್ಯ್ತಾನದ ಡ್ರೋನ್ ಪತ್ತೆಯಾಗಿದೆ. […]
Big Alert: ಬೆಂಗಳೂರಲ್ಲಿ ರೈಲ್ವೆ ಟರ್ಮಿನಲ್ ಬದಲು, ಪ್ರಯಾಣಕ್ಕೂ ಮುನ್ನ ಓದಿ
ಬೆಂಗಳೂರು ನಗರದಲ್ಲಿ ಕೆಲವು ಟರ್ಮಿನಲ್ ಬದಲಾವಣೆ ಮಾಡಿ ನೈಋತ್ಯ ರೈಲ್ವೆ ಬೆಂಗಳೂರು ವಿಭಾಗ ಆದೇಶಿಸಿದೆ. ರೈಲುಗಳ ಟರ್ಮಿನಲ್ಗಳ ಬದಲಾವಣೆ, ಭಾಗಶಃ ರದ್ದತಿ ಕುರಿತು ಪ್ರಕಟಣೆಯನ್ನು ಹೊರಡಿಸಲಾಗಿದೆ. ಕೆಎಸ್ಆರ್ ಬೆಂಗಳೂರು ನಿಲ್ದಾಣ (ಮೆಜೆಸ್ಟಿಕ್)ನಲ್ಲಿ ಪಿಟ್ ಲೈನ್ ಪುನರ್ ನಿರ್ಮಾಣ ಕಾಮಗಾರಿಯ ಹಿನ್ನೆಲೆಯಲ್ಲಿ ರೈಲುಗಳ ಟರ್ಮಿನಲ್ ನಿಲ್ದಾಣಗಳಲ್ಲಿ ಬದಲಾವಣೆಯನ್ನು ಮಾಡಲಾಗಿದೆ. ಈ ಕುರಿತು ಮಾಹಿತಿ ತಿಳಿದು ಸಂಚಾರವನ್ನು ನಡೆಸುವಂತೆ ಮನವಿ ಮಾಡಲಾಗಿದೆ. ಬದಲಾವಣೆ ವಿವರಗಳು ಹೀಗಿವೆ * ದಿನಾಂಕ ಜನವರಿ 16 ರಿಂದ 10/03/2026 ರವರೆಗೆ ಹೊರಡುವ ರೈಲು ಸಂಖ್ಯೆ […]
ವಿಶ್ವಕ್ಕೆ ಮೊಬೈಲ್ ಪೂರೈಸುವ ಹಬ್ ಆದ ಭಾರತ 2025ರಲ್ಲಿ 2.5 ಲಕ್ಷ ಕೋಟಿ ರೂ. ಮೊಬೈಲ್ ರಫ್ತು: ಐಫೋನ್ ಪಾಲು ಶೇ. 75.
ಭಾರತದ ಉತ್ಪಾದನಾ ವಲಯಕ್ಕೆ 2025ನೇ ವರ್ಷವು ನಿಜಕ್ಕೂ ಸುವರ್ಣ ಯುಗವಾಗಿ ಮಾರ್ಪಟ್ಟಿದೆ. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಮೇಕ್ ಇನ್ ಇಂಡಿಯಾ ಅಭಿಯಾನ ಮತ್ತು ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟಿವ್ (PLI) ಯೋಜನೆಯ ಭರ್ಜರಿ ಯಶಸ್ಸಿನಿಂದಾಗಿ, ದೇಶದ ಸ್ಮಾರ್ಟ್ಫೋನ್ ರಫ್ತು ದಾಖಲೆಯ 30 ಬಿಲಿಯನ್ ಡಾಲರ್ (ಸುಮಾರು 2.5 ಲಕ್ಷ ಕೋಟಿ ರೂ.) ಗಡಿಯನ್ನು ದಾಟಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ರಫ್ತು ಪ್ರಮಾಣದಲ್ಲಿ ಬರೋಬ್ಬರಿ ಶೇ. 47ರಷ್ಟು ಭಾರಿ ಏರಿಕೆ ಕಂಡಿರುವುದು ಭಾರತೀಯ ಎಲೆಕ್ಟ್ರಾನಿಕ್ಸ್ ವಲಯದ ಶಕ್ತಿಯನ್ನು ಜಗತ್ತಿಗೆ ಸಾರಿದೆ. […]
ಭಾರತ-ಬಾಂಗ್ಲಾ ಗಡಿಯಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ಸೇನೆಯ ಆಕ್ಷೇಪ, ಸುಪ್ರೀಂಕೋರ್ಟ್ ಮೆಟ್ಟಿಲೇರಿದ ಪ್ರಕರಣ.!
ಅಸ್ಸಾಂನ ಜೋರ್ಹತ್ನಲ್ಲಿರುವ ಸೂಕ್ಷ್ಮ ಭಾರತ-ಬಾಂಗ್ಲಾದೇಶ ಗಡಿಯ ಬಳಿಯ ಸೇನಾ ಶಿಬಿರದ ಎದುರಿನ ಪ್ರಸ್ತಾವಿತ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯ ಪ್ರಕರಣವು ಸುಪ್ರೀಂಕೋರ್ಟ್ ತಲುಪಿದೆ. ಭಾರತ-ಬಾಂಗ್ಲಾದೇಶ ಗಡಿಯಲ್ಲಿ ಆಸ್ಪತ್ರೆ ನಿರ್ಮಾಣದ ಪ್ರಸ್ತಾವವು ಅಸ್ಸಾಂನಲ್ಲಿ ವಿವಾದಕ್ಕೊಳಗಾಗಿದೆ, ಸೇನೆಯು ಭದ್ರತಾ ಕಾರಣಗಳಿಂದ (ಡ್ರೋನ್, ಸ್ನೈಪರ್ ಬೆದರಿಕೆ) ಆಕ್ಷೇಪಿಸಿದೆ, ಇದನ್ನು ಸುಪ್ರೀಂ ಕೋರ್ಟ್ ಕೈಗೆತ್ತಿಕೊಂಡಿದೆ; ಸೇನೆಯು 15 ಅಡಿ ಕಾಂಕ್ರೀಟ್ ಗೋಡೆ, ಕಿಟಕಿಗಳಿಲ್ಲದ ವಿನ್ಯಾಸ ಕೇಳಿದೆ; ನ್ಯಾಯಾಲಯವು ಸಾರ್ವಜನಿಕ ಆರೋಗ್ಯ ಮತ್ತು ರಾಷ್ಟ್ರೀಯ ಭದ್ರತೆ ನಡುವೆ ಸಮತೋಲನ ಕಾಯ್ದುಕೊಳ್ಳಲು ಪರಿಹಾರ ಕಂಡುಕೊಳ್ಳುವಂತೆ ಎರಡೂ ಕಡೆಯವರಿಗೆ ಸೂಚಿಸಿದೆ. […]
Big News: ಪಕ್ಷ ಬಿಡಲು ಶಾಸಕರ ತಯಾರಿ: ಈ ರಾಜ್ಯದಲ್ಲಿ ಕಾಂಗ್ರೆಸ್ ಶಾಸಕರೇ ಇಲ್ಲ!
ಪ್ರಮುಖವಾದ ರಾಷ್ಟ್ರೀಯ ಪಕ್ಷದ ಎಲ್ಲಾ ಶಾಸಕರು ಪಕ್ಷ ತೊರೆಯಲು ತಯಾರಿ ನಡೆಸಿದ್ದಾರೆ. ಆದ್ದರಿಂದ 243 ಸದಸ್ಯ ಬಲದ ವಿಧಾನಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಶಾಸಕರೇ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಲಿದೆ. ಪಕ್ಷಕ್ಕೆ ಇದೆಂಥ ಸ್ಥಿತಿ ಎಂದು ನೆಟ್ಟಿಗರು ಹೇಳುತ್ತಿದ್ದಾರೆ. ಹೌದು ಇದು ಬಿಹಾರ ರಾಜ್ಯದ ಸ್ಥಿತಿ. 2025ರ ಅಂತ್ಯದಲ್ಲಿ ನಡೆದ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 243 ಸದಸ್ಯ ಬಲದ ವಿಧಾನಸಭೆಯಲ್ಲಿ 6 ಸೀಟುಗಳನ್ನು ಗೆದ್ದಿತ್ತು. ಚುನಾವಣೆಯಲ್ಲಿ ಹೀನಾಯವಾಗಿ ಸೋತಿದ್ದ ಪಕ್ಷಕ್ಕೆ ಈಗ ಮತ್ತೊಂದು ಶಾಕ್. ಕಾಂಗ್ರೆಸ್ನ 6 […]
ಎಸ್ಐಆರ್ ಅವಾಂತರ: ಒಂದು ಮನೆಯಲ್ಲಿ 233 ಮಂದಿ ವಾಸ!
PC: ndtv ಗೋರಖ್ಪುರ: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಕರಡಿನ ಮಾಹಿತಿ ಪ್ರಕಾರ ಉತ್ತರ ಪ್ರದೇಶದ ಗೋರಖ್ಪುರ ಜಿಲ್ಲೆಯ ಒಂದು ಮನೆಯಲ್ಲಿ 233 ಮಂದಿ ವಾಸವಿದ್ದಾರೆ. ಹಿಂದೂ, ಮುಸ್ಲಿಂ ಹಾಗೂ ಸಿಕ್ಖರು ಸೇರಿದಂತೆ ವಿವಿಧ ಧರ್ಮಗಳಿಗೆ ಸೇರಿದವರು ಕುಟುಂಬದಲ್ಲಿದ್ದಾರೆ! ಸ್ಥಳೀಯ ಬಿಜೆಪಿ ಜನಪ್ರತಿನಿಧಿ ಈ ಪ್ರಮಾದವನ್ನು ಸರಿಪಡಿಸಬೇಕು ಎಂದು ಆಗ್ರಹಿಸಿದ್ದಾರೆ. ಜತೆಗೆ ಇದರಿಂದ ಹಲವು ಅನಾನುಕೂಲತೆಗಳು ಆಗುತ್ತಿವೆ ಎಂದು ಹೇಳಿದ್ದಾರೆ. ನಿಖರ ಮಾಹಿತಿಯನ್ನು ಪಡೆದುಕೊಳ್ಳುವುದು ಚುನಾವಣಾ ಆಯೋಗದ ಹೊಣೆಗಾರಿಕೆ ಎಂದು ಸ್ಥಳೀಯರು ಹೇಳಿದ್ದಾರೆ. ನೇಪಾಳದ ಗಡಿಗೆ ಹೊಂದಿಕೊಂಡಿರುವ ಈ ಜಿಲ್ಲೆಯ ಪರಿಷ್ಕøತ ಮತದಾರರ ಪಟ್ಟಿಯ ಕರಡನ್ನು ಜನವರಿ 6ರಂದು ಬಿಡುಗಡೆ ಮಾಡಲಾಗಿತ್ತು. ಮಾಹಿತಿ ಸಂಗ್ರಹಕಾರರ ನಿರ್ಲಕ್ಷ್ಯದಿಂದಾಗಿ 6.45 ಲಕ್ಷ ಮತದಾರರ ಹೆಸರು ಪಟ್ಟಿಯಿಂದ ಮಾಯವಾಗಿದೆ ಎನ್ನುವುದು ಸ್ಥಳೀಯರ ಆರೋಪ. ಆಕ್ಷೇಪಣೆಗಳನ್ನು ಮತ್ತು ಕ್ಲೇಮ್ಗಳನ್ನು ಸಲ್ಲಿಸಲು ಫೆಬ್ರುವರಿ 6ರವರೆಗೆ ಅವಕಾಶವಿದೆ. ಗೋರಖ್ಪುರದ 16ನೇ ವಾರ್ಡ್ನ ಕರಡು ಮತಪಟ್ಟಿಯಲ್ಲಿ ಒಂದೇ ಮನೆಯಲ್ಲಿ 233 ಜನ ಇದ್ದಾರೆ ಎಂಬ ಮಾಹಿತಿ ಇದೆ. ಇತರ ವಾರ್ಡ್ಗಳಲ್ಲೂ ಇಂಥದ್ದೇ ನಿದರ್ಶನಗಳು ಸಾಕಷ್ಟಿವೆ. ತಕ್ಷಣವೇ ಆಯೋಗ ಈ ಪ್ರಮಾದಗಳನ್ನು ಸರಿಪಡಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

26 C