SENSEX
NIFTY
GOLD
USD/INR

Weather

22    C

ಡಿಜಿಟಲ್ ಸುದ್ದಿ ಮೂಲಗಳು

... ...View News by News Source

SHOCKING: ಗರ್ಭಿಣಿ ಸೊಸೆ ಕತ್ತು ಸೀಳಿ ಹತ್ಯೆಗೈದ ಮಾವ

ರಾಯಚೂರು: ಕೌಟುಂಬಿಕ ಕಲಹ ಕಾರಣದಿಂದ ಗರ್ಭಿಣಿ ಸೊಸೆಯ ಕತ್ತು ಸೀಳಿ ಮಾವ ಹತ್ಯೆ ಮಾಡಿದ ಘಟನೆ ರಾಯಚೂರು ಜಿಲ್ಲೆ ಸಿರವಾರ ತಾಲೂಕಿನ ಅಣಗಿ ಗ್ರಾಮದಲ್ಲಿ ನಡೆದಿದೆ. ರೇಖಾ(25) ಕೊಲೆಯಾದ ಮಹಿಳೆ. 4 ತಿಂಗಳ ಗರ್ಭಿಣಿ ರೇಖಾ ಕುತ್ತಿಗೆಗೆ ಮಾವ ಸಿದ್ದಪ್ಪ ಚಾಕುವಿನಿಂದ ಇರಿದಿದ್ದಾನೆ. ಈ ವೇಳೆ ಪ್ರಾಣ ಉಳಿಸಿಕೊಳ್ಳಲು ಮನೆಯಿಂದ ಹೊರಬಂದ ರೇಖಾ ನರಳಾಡಿ ಪ್ರಾಣ ಬಿಟ್ಟಿದ್ದಾರೆ. ಕೃತ್ಯವೆಸಗಿ ಪರಾರಿಯಾಗಿದ್ದ ಆರೋಪಿ ಸಿದ್ದಪ್ಪನನ್ನು ಕವಿತಾಳ ಠಾಣೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಕನ್ನಡ ದುನಿಯಾ 28 Jan 2026 8:57 pm

BREAKING: ಸಾರಿಗೆ ನೌಕರರ ಮುಖಂಡ ಅನಂತ್ ಸುಬ್ಬರಾವ್ ವಿಧಿವಶ: ನಾಳಿನ ಬೆಂಗಳೂರು ಚಲೋ ಮುಂದೂಡಿಕೆ

ಬೆಂಗಳೂರು: ಸಾರಿಗೆ ನೌಕರರ ಮುಖಂಡ ಅನಂತ್ ಸುಬ್ಬರಾವ್(84) ವಿಧಿವಶರಾಗಿದ್ದಾರೆ. ಸಂಜೆ 5:30ರ ಸುಮಾರಿಗೆ ಅವರಿಗೆ ಹೃದಯಘಾತ ಸಂಭವಿಸಿದ್ದು, ಕೂಡಲೇ ಅವರನ್ನು ವಿಜಯನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ. ವಿಜಯನಗರದ ನಿವಾಸದಲ್ಲಿ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಅನಂತ ಸುಬ್ಬರಾವ್ ಅವರು ಕರ್ನಾಟಕದ ಹಿರಿಯ ಕಾರ್ಮಿಕ ಮುಖಂಡರಾಗಿದ್ದು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಸಿಬ್ಬಂದಿ ಮತ್ತು ಕಾರ್ಮಿಕರ ಒಕ್ಕಟದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಅವರು ಕಾರ್ಮಿಕರ ಹಕ್ಕುಗಳ ಪರವಾಗಿ ನಿರಂತರವಾಗಿ […]

ಕನ್ನಡ ದುನಿಯಾ 28 Jan 2026 8:02 pm

BREAKING: ರಾಜ್ಯದ ಎಲ್ಲಾ ಸರ್ಕಾರಿ ನೌಕರರು ಪ್ರತಿ ತಿಂಗಳ ಮೊದಲ ಶುಕ್ರವಾರ ಖಾದಿ ಉಡುಪು ಧರಿಸಲು ಮಹತ್ವದ ಸಭೆ  

ಬೆಂಗಳೂರು: ರಾಜ್ಯದ ಎಲ್ಲಾ ಸರ್ಕಾರಿ ಅಧಿಕಾರಿ/ನೌಕರರು ಪ್ರತಿ ತಿಂಗಳ ಮೊದಲ ಶುಕ್ರವಾರದಂದು ಖಾದಿ ಉಡುಪನ್ನು ಧರಿಸುವುದರ ಬಗ್ಗೆ ಮಹತ್ವದ ಸಭೆ ನಿಗದಿಯಾಗಿದೆ. ಎಲ್ಲಾ ಸರ್ಕಾರಿ ಅಧಿಕಾರಿ/ನೌಕರರು ಪ್ರತಿ ತಿಂಗಳ ಮೊದಲ ಶುಕ್ರವಾರದಂದು ಖಾದಿ ಉಡುಪನ್ನು ಧರಿಸುವುದು, ಸ್ವಾತಂತ್ರ್ಯ ದಿನಾಚರಣೆ ಹಾಗೂ ಗಣರಾಜ್ಯೋತ್ಸವ ಸೇರಿದಂತೆ ಅಧಿಕೃತ ಸರ್ಕಾರಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಅಧಿಕಾರಿಗಳು/ಸಿಬ್ಬಂದಿಗಳೆಲ್ಲರೂ ಖಾದಿ ಉಡುಪನ್ನು ಧರಿಸುವ ಕುರಿತಂತೆ ಚರ್ಚಿಸಲು ಸರ್ಕಾರದ ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ಜ. 29 ರ ಮಧ್ಯಾಹ್ನ 12 ಘಂಟೆಗೆ ಕೊಠಡಿ ಸಂಖ್ಯೆ:320 ವಿಧಾನಸೌಧ ಇಲ್ಲಿ […]

ಕನ್ನಡ ದುನಿಯಾ 28 Jan 2026 7:30 pm

ಜಿಬಿಎ ಮಾದರಿಯಲ್ಲೇ ಎಲ್ಲಾ ಮಹಾನಗರ ಪಾಲಿಕೆಗಳಲ್ಲಿ ಆಸ್ತಿ ತೆರಿಗೆ ಸಂಗ್ರಹ ವ್ಯವಸ್ಥೆ ಜಾರಿ

ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಮಾದರಿಯಲ್ಲೇ ಎಲ್ಲ ಮಹಾನಗರ ಪಾಲಿಕೆಗಳಲ್ಲಿ ಆಸ್ತಿ ತೆರಿಗೆ ಸಂಗ್ರಹ ವ್ಯವಸ್ಥೆ ಜಾರಿಗೆ ತರಲು ಕ್ರಮ ವಹಿಸಲಾಗಿದೆ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್‌ ತಿಳಿಸಿದ್ದಾರೆ. ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿಯ ವೈ.ಎಂ. ಸತೀಶ್, ಬಳ್ಳಾರಿ ಮಹಾನಗರ ಪಾಲಿಕೆ ಸಿಬ್ಬಂದಿ ಆಸ್ತಿ ಮಾಲೀಕರಿಂದ ಸಂಗ್ರಹಿಸಿದ ತೆರಿಗೆಯನ್ನು ಪಾಲಿಕೆಗೆ ಪಾವತಿಸದೆ ದುರ್ಬಳಕೆ ಮಾಡಿಕೊಂಡಿದ್ದಾರೆ. ಇಂತಹ ಅಕ್ರಮಗಳಿಗೆ ಕಡಿವಾಣ ಹಾಕಲು ಜಿಬಿಎ ಮಾದರಿಯಲ್ಲಿ ತೆರಿಗೆ ಸಂಗ್ರಹ, ಭ್ರಷ್ಟ ಅಧಿಕಾರಿಗಳ ವಿಚಾರಣೆಗೆ ತ್ವರಿತ ನ್ಯಾಯಾಲಯ ಸ್ಥಾಪಿಸಬೇಕು […]

ಕನ್ನಡ ದುನಿಯಾ 28 Jan 2026 7:18 pm

BREAKING: ನಿಗಮ, ಮಂಡಳಿ ಅಧ್ಯಕ್ಷರಿಗೆ ಗುಡ್ ನ್ಯೂಸ್: ಮುಂದಿನ ಆದೇಶದವರೆಗೆ ಅಧಿಕಾರ ಅವಧಿ ವಿಸ್ತರಣೆ

ಬೆಂಗಳೂರು: ಅವಧಿ ಮುಕ್ತಾಯವಾಗಿದ್ದ ನಿಗಮ, ಮಂಡಳಿ ಅಧ್ಯಕ್ಷರ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ. ಎರಡು ವರ್ಷಗಳ ಅವಧಿ ಮುಗಿದಿದ್ದ ನಿಗಮ, ಮಂಡಳಿಗಳ ಅಧ್ಯಕ್ಷರನ್ನು ಮುಂದುವರೆಸಲಾಗಿದೆ. ಒಟ್ಟು 34 ನಿಗಮ, ಮಂಡಳಿಗಳ ಅಧ್ಯಕ್ಷ ಸ್ಥಾನದ ಅವಧಿ ಮುಗಿದಿತ್ತು. ಜನವರಿ 26 ಕ್ಕೆ 2 ವರ್ಷ ಅಧಿಕಾರದ ಅವಧಿ ಮುಕ್ತಾಯವಾಗಿತ್ತು. ಈ ಹಿನ್ನೆಲೆಯಲ್ಲಿ ಮುಂದಿನ ಆದೇಶದ ವರೆಗೆ ವಿಸ್ತರಣೆ ಮಾಡಿ ಆದೇಶಿಸಲಾಗಿದೆ. ನಿಗಮ ಮಂಡಳಿ ಅಧ್ಯಕ್ಷರಾಗಿದ್ದ 25 ಶಾಸಕರ ಅವಧಿಯನ್ನು ಮುಂದಿನ ಆದೇಶದವರೆಗೆ ಅಧಿಕಾರ ಅವಧಿ ವಿಸ್ತರಣೆ ಮಾಡಿ ಆದೇಶಿಸಲಾಗಿದೆ.

ಕನ್ನಡ ದುನಿಯಾ 28 Jan 2026 6:59 pm

ಪತ್ನಿ ಮೊಬೈಲ್ ನಲ್ಲಿ ರಹಸ್ಯ ಸಾಫ್ಟ್ವೇರ್ ಇನ್ಸ್ಟಾಲ್ ಮಾಡಿ ಪ್ರತಿ ಚಲನವಲನ ತಿಳಿಯುತ್ತಿದ್ದ ಪತಿ ವಿರುದ್ಧ ಎಫ್ಐಆರ್

ಬೆಂಗಳೂರು: ಪತ್ನಿಯ ಮೊಬೈಲ್ ನಲ್ಲಿ ರಹಸ್ಯವಾಗಿ ಸಾಫ್ಟ್ವೇರ್ ಇನ್ಸ್ಟಾಲ್ ಮಾಡಿ ಆಕೆಯ ಪ್ರತಿ ಚಲನವಲನ ತಿಳಿದುಕೊಳ್ಳುತ್ತಿದ್ದ ಪತಿಯ ವಿರುದ್ಧ ಬೆಂಗಳೂರಿನ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಪುಟ್ಟೇನಹಳ್ಳಿ ಬಿಜಿ ರಸ್ತೆಯ 28 ವರ್ಷದ ವೈದ್ಯೆ ನೀಡಿದ ದೂರಿನ ಆಧಾರದ ಮೇಲೆ ಅವರ ಪತಿ ಅಮಲ್ ವಿ. ನಾಯರ್ ಎಂಬುವರ ವಿರುದ್ಧ ಕೇಸ್ ದಾಖಲಾಗಿದೆ. 2025 ಆಗಸ್ಟ್ 1ರಿಂದ ದಂಪತಿ ಬೇರೆಯಾಗಿ ವಾಸವಾಗಿದ್ದಾರೆ. ಅವರಿಗೆ ಒಂದು ಮಗು ಇದ್ದು, ಕೌಟುಂಬಿಕ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ವಾರಕ್ಕೊಮ್ಮೆ ಮಗು […]

ಕನ್ನಡ ದುನಿಯಾ 28 Jan 2026 6:42 pm

ಅಜಿತ್ ಪವಾರ್ ಸಾವಿಗೀಡಾದ ಬಾರಾಮತಿ ವಿಮಾನ ದುರಂತ ಬಗ್ಗೆ ಇಂಚಿಂಚೂ ಮಾಹಿತಿ ಹಂಚಿಕೊಂಡ ನಾಗರಿಕ ವಿಮಾನಯಾನ ಸಚಿವಾಲಯ

ಬಾರಾಮತಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ ಕೆಲವೇ ಗಂಟೆಗಳ ನಂತರ, ನಾಗರಿಕ ವಿಮಾನಯಾನ ಸಚಿವಾಲಯ ಅಪಘಾತದ ಸಮಯದಲ್ಲಿ ಸಂಭವಿಸಿದ ಘಟನೆಗಳ ಅನುಕ್ರಮ ವರದಿ ಬಿಡುಗಡೆ ಮಾಡಿದೆ. VT-SSK ನೋಂದಣಿ ಹೊಂದಿರುವ ಲಿಯರ್‌ಜೆಟ್ 45 ವಿಮಾನವು ಬಾರಾಮತಿ ವಾಯುನೆಲೆಯಲ್ಲಿ ಇಳಿಯಲು ಪ್ರಯತ್ನಿಸುವಾಗ ಅಪಘಾತಕ್ಕೀಡಾಗಿದೆ. ಕ್ಯಾಪ್ಟನ್ ಸುಮಿತ್ ಕಪೂರ್ ಮತ್ತು ಕ್ಯಾಪ್ಟನ್ ಶಾಂಭವಿ ಪಾಠಕ್ ಇಬ್ಬರೂ ಪೈಲಟ್‌ ಗಳು ತಲಾ 15,000 ಗಂಟೆಗಳಿಗೂ ಹೆಚ್ಚು ಹಾರಾಟದ ಅನುಭವವನ್ನು ಹೊಂದಿದ್ದರು. ಬಾರಾಮತಿ ಒಂದು ಅನಿಯಂತ್ರಿತ ವಾಯುನೆಲೆಯಾಗಿದ್ದು, ಸಂಚಾರ […]

ಕನ್ನಡ ದುನಿಯಾ 28 Jan 2026 6:08 pm

BREAKING: ಪೌರಾಯುಕ್ತೆಗೆ ಧಮ್ಕಿ ಪ್ರಕರಣ: ರಾಜೀವ್ ಗೌಡ 2 ದಿನ ಪೊಲೀಸ್ ಕಸ್ಟಡಿಗೆ

ಚಿಕ್ಕಬಳ್ಳಾಪುರ: ಶಿಡ್ಲಘಟ್ಟ ನಗರಸಭೆ ಪೌರಾಯುಕ್ತಗೆ ಬೆದರಿಕೆ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ರಾಜೀವ್ ಗೌಡಗೆ ನ್ಯಾಯಾಲಯ ಪೊಲೀಸ್ ಕಸ್ಟಡಿಗೆ ನೀಡಿದೆ. ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಅಮೃತಾ ಗೌಡ ಅವರಿಗೆ ನಿಂದನೆ, ಜೀವ ಬೆದರಿಕೆ ಹಾಕಿದ್ದ ಪ್ರಕರಣದಲ್ಲಿ ಕಳೆದ ಹಲವು ದಿನಗಳಿಂದ ತಲೆಮರೆಸಿಕೊಂಡಿದ್ದ ರಾಜೀವ್ ಗೌಡ ಅವರನ್ನು ಕೇರಳದ ಗಡಿ ಭಾಗದಲ್ಲಿ ಪೊಲೀಸರು ಬಂಧಿಸಿದ್ದರು. ಬಂಧಿತ ಆರೋಪಿಯನ್ನು ಮಂಗಳವಾರ ಶಿಡ್ಲಘಟ್ಟ ಕೋರ್ಟ್ ಗೆ ಹಾಜರುಪಡಿಸಲಾಗಿತ್ತು. ಕೋರ್ಟ್ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ಹೊರಡಿಸಿತ್ತು. ಪೊಲೀಸರು […]

ಕನ್ನಡ ದುನಿಯಾ 28 Jan 2026 5:51 pm

ಮಹಾಶಿವರಾತ್ರಿ 2026: ಬೆಂಗಳೂರು-ವಿಜಯಪುರ ವಿಶೇಷ ರೈಲು, ವೇಳಾಪಟ್ಟಿ

ಮಹಾಶಿವರಾತ್ರಿ-2026ರ ಸಂದರ್ಭದಲ್ಲಿ ಉಂಟಾಗುವ ಪ್ರಯಾಣಿಕರ ದಟ್ಟಣೆ ಕಡಿಮೆ ಮಾಡಲು ನೈಋತ್ಯ ರೈಲ್ವೆ ವಿಶೇಷ ರೈಲುಗಳ ಘೋಷಣೆ ಮಾಡಿದೆ. ಕ್ಯಾಲೆಂಡರ್ ಪ್ರಕಾರ ಫೆಬ್ರವರಿ 15ರ ಭಾನುವಾರ ಶಿವರಾತ್ರಿ ಹಬ್ಬವಿದೆ. ವಾರಾಂತ್ಯದ ರಜೆಯೂ ಸೇರುವ ಕಾರಣ ಹೆಚ್ಚಿನ ಜನರು ಸಂಚಾರ ನಡೆಸಬಹುದು ಎಂದು ಅಂದಾಜಿಸಲಾಗಿದೆ. ನೈಋತ್ಯ ರೈಲ್ವೆ ಹಬ್ಬದ ಪ್ರಯುಕ್ತ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸಲು ಎಸ್ಎಂವಿಟಿ ಬೆಂಗಳೂರು-ವಿಜಯಪುರ-ಎಸ್ಎಂವಿಟಿ ಬೆಂಗಳೂರು ನಡುವೆ ವಿಶೇಷ ರೈಲು ಓಡಿಸಲಿದೆ. ಮಹಾಶಿವರಾತ್ರಿ ಅಂಗವಾಗಿ ಮಾತ್ರ ಈ ವಿಶೇಷ ರೈಲುಗಳು ಸಂಚಾರವನ್ನು ನಡೆಸಲಿವೆ. ಈ ರೈಲುಗಳು […]

ಕನ್ನಡ ದುನಿಯಾ 28 Jan 2026 5:50 pm

60 ವರ್ಷ ಮೇಲ್ಪಟ್ಟವರಿಗೆ ತಿಂಗಳಿಗೆ 3 ಸಾವಿರ ರೂ.: ‘ಪ್ರಧಾನಮಂತ್ರಿ ಶ್ರಮಯೋಗಿ ಮಾನ್ ಧನ್ ಯೋಜನೆ’ಗೆ ಅರ್ಜಿ   

ಕೇಂದ್ರ ಪುರಸ್ಕೃತ ಯೋಜನೆ ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್-ಧನ್(ಪಿಎಂ-ಎಸ್‌ವೈಎಂ) ಯೋಜನೆಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಕೇಂದ್ರ ಸರ್ಕಾರವು ಚಂದಾದಾರರು ಪಾವತಿಸುವ ವಂತಿಕೆಗೆ ಸಮಾನಾಂತರ ವಂತಿಕೆಯನ್ನು ಪಿಂಚಣಿ ಖಾತೆಗೆ ಪಾವತಿಸುತ್ತದೆ. ಫಲಾನುವಿಯ ವಯಸ್ಸು 60 ವರ್ಷ ಪೂರ್ಣಗೊಂಡ ನಂತರ ತಿಂಗಳಿಗೆ 3,000 ರೂ. ಖಚಿತ ಕನಿಷ್ಠ ಮಾಸಿಕ ಪಿಂಚಣಿಯನ್ನು ಪಡೆಯಲು ಅರ್ಹರಾಗುತ್ತಾರೆ. ಮಹಾನಗರಪಾಲಿಕೆ ವ್ಯಾಪ್ತಿಯ ನೋಂದಾಯಿತ ಡೇ-ನಲ್ಮ್ ಯೋಜನೆಯ ಉಪಘಟಕಗಳಾದ ಅರ್ಹ ಸ್ವ-ಸಹಾಯ ಸಂಘದ ಸದಸ್ಯರು ಹಾಗೂ ಪಿಎಂ ಸ್ವ-ನಿಧಿ ಯೋಜನೆಯ ಬೀದಿ ಬದಿ ವ್ಯಾಪಾರಿಗಳು ಹಾಗೂ […]

ಕನ್ನಡ ದುನಿಯಾ 28 Jan 2026 5:49 pm

ಸಾವಿನಲ್ಲೂ ಒಂದಾದ ಸಹೋದರರು: ಅಣ್ಣನ ಅಂತ್ಯಕ್ರಿಯೆ ಮುಗಿದ ಮರುದಿನವೇ ತಮ್ಮನೂ ಕೊನೆಯುಸಿರು

ಕಲಬುರಗಿ: ಕಲಬುರಗಿ ಜಿಲ್ಲೆ ಅಫಜಲಪುರ ತಾಲೂಕಿನ ಬಡದಾಳ ಗ್ರಾಮದಲ್ಲಿ ಸಹೋದರರು ಸಾವಿನಲ್ಲಿಯೂ ಒಂದಾಗಿದ್ದಾರೆ. ಅಣ್ಣನ ಅಂತ್ಯಕ್ರಿಯೆ ಮುಗಿದ ಮರುದಿನವೇ ತಮ್ಮನೂ ಕೊನೆಯುಸಿರೆಳೆದಿದ್ದಾರೆ. ಜನವರಿ 20ರಂದು ಬಸವಂತರಾಯ್ ಸಣ್ಣಕ್(81) ಮೃತಪಟ್ಟಿದ್ದರು. ಅವರ ಅಂತ್ಯಕ್ರಿಯೆ ಮುಗಿದ ಮರುದಿನ ತಮ್ಮ ಶಿವರಾಯ್ ಸಣ್ಣಕ್(79) ಅವರೂ ಮೃತಪಟ್ಟಿದ್ದಾರೆ. ಅಣ್ಣನ ಅಂತ್ಯ ಸಂಸ್ಕಾರ ಮುಗಿಸಿ ಮನೆಗೆ ಬಂದ ಶಿವರಾಯ್ ಹಾಸಿಗೆ ಹಿಡಿದಿದ್ದರು. ಅಣ್ಣನ ಸಾವಿನ ನೋವಿನಿಂದ ಆಘಾತಕ್ಕೆ ಒಳಗಾಗಿ ಇಹಲೋಕ ತ್ಯಜಿಸಿದ್ದಾರೆ. ಹಿರಿಯ ಸಹೋದರರಿಬ್ಬರ ಬಾಂಧವ್ಯ ನೆನೆದು ಗ್ರಾಮಸ್ಥರು ಕಂಬನಿ ಮಿಡಿದಿದ್ದಾರೆ.

ಕನ್ನಡ ದುನಿಯಾ 28 Jan 2026 5:41 pm

BREAKING: ಮುಡಾ ಹಗರಣ: ಸಿಎಂ ಸಿದ್ದರಾಮಯ್ಯಗೆ ಬಿಗ್ ರಿಲೀಫ್

ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ-ಮುಡಾ ನಿವೇಶನ ಹಂಚಿಕೆಯಲ್ಲಿ ಅಕ್ರಮ ಆರೋಪ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಬಿಗ್ ರಿಲೀಫ್ ಸಿಕ್ಕಿದೆ. ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಪತ್ನಿ ಪಾರ್ವತಿ ಸೇರಿದಂತೆ ನಾಲ್ವರ ವಿರುದ್ಧ ಲೋಕಾಯುಕ್ತ ಸಲ್ಲಿಸಿದ್ದ ಬಿ ರಿಪೋರ್ಟ್ ನ್ನು ಬೆಂಗಳೂರು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಪುರಸ್ಕರಿಸಿದೆ. ಈ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಪತ್ನಿ ಪಾರ್ವತಿಗೆ ಮುಡಾ ಕೇಸ್ ನಲ್ಲಿ ಬಿಗ್ ರಿಲೀಫ್ ಸಿಕ್ಕಿದಂತಾಗಿದೆ. ಸಿಎಂ ಸಿದ್ದರಾಮಯ್ಯ, ಪತ್ನಿ ಪಾರ್ವತಿ, ಭಾಮೈದ ಮಲ್ಲಿಕಾರ್ರ್ಜುನಸ್ವಾಮಿ ಹಾಗೂ […]

ಕನ್ನಡ ದುನಿಯಾ 28 Jan 2026 5:38 pm

ಅಜಿತ್ ಪವಾರ್ ಆಸ್ತಿ ಸಾಮ್ರಾಜ್ಯ: ₹124 ಕೋಟಿಗೂ ಅಧಿಕ ಸಂಪತ್ತು; ಮನೆ, ಐಷಾರಾಮಿ ಕಾರು, ಬಾಂಡ್‌ಗಳ ಸಂಪೂರ್ಣ ವಿವರ ಇಲ್ಲಿದೆ

ಮಹಾರಾಷ್ಟ್ರ ರಾಜಕಾರಣದ ಅತ್ಯಂತ ಪ್ರಭಾವಿ ನಾಯಕ, ಉಪಮುಖ್ಯಮಂತ್ರಿ ಹಾಗೂ ಎನ್‌ಸಿಪಿ (NCP) ಮುಖ್ಯಸ್ಥ ಅಜಿತ್ ಪವಾರ್ (66) ಅವರು ಬುಧವಾರ ಬೆಳಿಗ್ಗೆ ಸಂಭವಿಸಿದ ಭೀಕರ ವಿಮಾನ ಅಪಘಾತದಲ್ಲಿ ದುರ್ಮರಣಕ್ಕೀಡಾಗಿದ್ದಾರೆ.ಮೂರು ದಶಕಗಳ ರಾಜಕೀಯ ಪಯಣ ಹೊಂದಿದ್ದ ಅಜಿತ್ ಪವಾರ್ ಅವರ ಅಕಾಲಿಕ ನಿಧನದಿಂದ ಲಕ್ಷಾಂತರ ಅಭಿಮಾನಿಗಳು ಮತ್ತು ಕಾರ್ಯಕರ್ತರು ಶೋಕ ಸಾಗರದಲ್ಲಿ ಮುಳುಗಿದ್ದಾರೆ. ಅಜಿತ್ ಪವಾರ್ ಅವರು ಮುಂಬೈನಿಂದ ಹೊರಟು ತಮ್ಮ ಕ್ಷೇತ್ರವಾದ ಬಾರಾಮತಿಗೆ ಸಾರ್ವಜನಿಕ ಸಭೆಯೊಂದರಲ್ಲಿ ಪಾಲ್ಗೊಳ್ಳಲು ಪ್ರಯಾಣಿಸುತ್ತಿದ್ದರು. ಅವರು ಪ್ರಯಾಣಿಸುತ್ತಿದ್ದ VT-SSK ಲಿಯರ್‌ಜೆಟ್ 45 ವಿಮಾನವು […]

ಕನ್ನಡ ದುನಿಯಾ 28 Jan 2026 5:18 pm

ಜ.29ಕ್ಕೆ ಬಿಎಂಟಿಸಿ ಬಸ್ ಸಂಚಾರ ನಡೆಸಲ್ವಾ?,  ಬೆಂಗಳೂರು ಚಲೋ ಬಗ್ಗೆ ಬಿಎಂಟಿಸಿ ಖಡಕ್ ಎಚ್ಚರಿಕೆ

ಸಾರಿಗೆ ನೌಕರರು ಜನವರಿ 29ರಂದು ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ‘ಬೆಂಗಳೂರು ಚಲೋ’ ಪ್ರತಿಭಟನೆ ನಡೆಸಲಿದ್ದಾರೆ. ಆದ್ದರಿಂದ ಅಂದು ಸರ್ಕಾರಿ ಬಸ್ ಸೇವೆಯಲ್ಲಿ ವ್ಯತ್ಯಯ ಉಂಟಾಗುವ ನಿರೀಕ್ಷೆ ಇದೆ. ಬೆಂಗಳೂರು ನಗರದಲ್ಲಿ ಗುರುವಾರ ಬಿಎಂಟಿಸಿ ಬಸ್ ಸಂಚಾರ ನಡೆಸುವುದಿಲ್ಲವೇ?. ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರು ಎಲ್ಲಾ ಹಿರಿಯ/ ವಿಭಾಗೀಯ ನಿಯಂತ್ರಣಾಧಿಕಾರಿಗಳು, ಕಾರ್ಯ ವ್ಯವಸ್ಥಾಪಕರು, ಎಲ್ಲಾ ಹಿರಿಯ/ಘಟಕ ವ್ಯವಸ್ಥಾಪಕರು, ವಿಭಾಗೀಯ/ ಸಹಾಯಕ ಯಾಂತ್ರಿಕ ಅಭಿಯಂತರರು ಅವರುಗಳಿಗೆ ಪತ್ರವೊಂದನ್ನು ಬರೆದಿದ್ದಾರೆ. ಈ ಪತ್ರವು ಕ.ರಾ.ರ.ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ […]

ಕನ್ನಡ ದುನಿಯಾ 28 Jan 2026 5:07 pm

ಪೋಷಕರಿಗೆ ಕಿವಿಮಾತು : ಬಾಲ್ಯದಿಂದಲೇ ಗಂಡು ಮಕ್ಕಳಿಗೆ ಕಲಿಸಬೇಕಾದ ಅಭ್ಯಾಸಗಳಿವು.!

ಇಂದಿನ ಸಮಾಜದಲ್ಲಿ ಹೆಣ್ಣುಮಕ್ಕಳಿಗೆ ನೀಡುವಷ್ಟೇ ಪ್ರಾಮುಖ್ಯತೆಯನ್ನು ಗಂಡು ಮಕ್ಕಳ ಪಾಲನೆಗೂ ನೀಡಬೇಕಿದೆ. ಗಂಡು ಮಕ್ಕಳು ಉತ್ತಮ ಪ್ರಜೆಗಳಾಗಿ ಮತ್ತು ಜವಾಬ್ದಾರಿಯುತ ವ್ಯಕ್ತಿಗಳಾಗಿ ಬೆಳೆಯಲು ತಂದೆ-ತಾಯಿಯ ಪಾತ್ರ ಬಹಳ ದೊಡ್ಡದು. ಗಂಡು ಮಕ್ಕಳ ಪಾಲನೆಯಲ್ಲಿ ಕೇವಲ ಶಿಸ್ತು ಮಾತ್ರವಲ್ಲದೆ, ಮಾನಸಿಕ ಮತ್ತು ಸಾಮಾಜಿಕ ಬೆಳವಣಿಗೆಗೆ ಪೂರಕವಾದ ಈ ಕೆಳಗಿನ ಅಂಶಗಳನ್ನು ಅಳವಡಿಸಿಕೊಳ್ಳುವುದು ಅವರ ಭವಿಷ್ಯಕ್ಕೆ ಭದ್ರ ಬುನಾದಿ ಹಾಕುತ್ತದೆ.ಸಾಮಾನ್ಯವಾಗಿ ಗಂಡು ಮಕ್ಕಳು ಕೋಪ ಅಥವಾ ಅಸಮಾಧಾನವನ್ನು ದೈಹಿಕವಾಗಿ (ವಸ್ತುಗಳನ್ನು ಎಸೆಯುವುದು ಅಥವಾ ಹೊಡೆಯುವುದು) ವ್ಯಕ್ತಪಡಿಸುತ್ತಾರೆ. ಮಗನಿಗೆ ಬಾಲ್ಯದಿಂದಲೇ ಕಲಿಸಬೇಕಾದ […]

ಕನ್ನಡ ದುನಿಯಾ 28 Jan 2026 3:28 pm

100 ಕೋಟಿ ರೂ. ಬಾರ್ಡರ್ ದಾಟಿದ ‘ಬಾರ್ಡರ್-2′ಕಲೆಕ್ಷನ್!

ಬಾರ್ಡರ್-2 ಸಿನಿಮಾ ಬಾಲಿವುಡ್‌ಗೆ ಮತ್ತಷ್ಟು ಬಲವನ್ನು ತಂದುಕೊಟ್ಟಿದೆ. ಈಗಾಗಲೇ ಚಿತ್ರ ಭಾರೀ ಸುದ್ದಿ, ಸದ್ದು ಮಾಡುತ್ತಿದೆ. ಚಿತ್ರದ ಗಳಿಕೆ ಭಾರತದಲ್ಲಿ 100 ಕೋಟಿ ರೂ. ಬಾರ್ಡರ್ ದಾಟಿದ್ದು, 200 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ವರದಿಗಳು ಹೇಳುತ್ತಿವೆ. ಈ ಚಿತ್ರವು 4 ದಿನಗಳ ಯಶಸ್ವಿಯಾಗಿ ಓಡಿದ್ದು, ವಾರಾಂತ್ಯದ ಸರಣಿ ರಜೆಯ ಕಾರಣದಿಂದ ಯಶಸ್ವಿಯಾಗಿ ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡಿದೆ. ಚಿತ್ರದ ದೇಶಭಕ್ತಿಯ ವಿಷಯ ಮತ್ತು ಗಣರಾಜ್ಯೋತ್ಸವ 2026ರ ಸಂದರ್ಭದಲ್ಲಿ ಬಿಡುಗಡೆಯಾದ ಕಾರಣ ಚಿತ್ರಕ್ಕೆ ಉತ್ತಮ ಸ್ಪಂದನೆ […]

ಕನ್ನಡ ದುನಿಯಾ 28 Jan 2026 3:27 pm

ಸಾಲಗಾರರಿಗೆ ‘RBI’ಶುಭ ಸುದ್ದಿ : ಆ ಸಮಯದಲ್ಲಿ ಲೋನ್ ಕಟ್ಟುವಂತಿಲ್ಲ , ಹೊಸ ಮಾರ್ಗಸೂಚಿ ಪ್ರಕಟ..!

ಬ್ಯಾಂಕ್ಗಳಲ್ಲಿ ಸಾಲ ಪಡೆದಿರುವ ಗ್ರಾಹಕರಿಗೆ ಭಾರತೀಯ ರಿಸರ್ವ್ ಬ್ಯಾಂಕ್ (RBI) ಒಂದು ಶುಭ ಸುದ್ದಿ ನೀಡಿದೆ. ಪ್ರವಾಹ, ಭೂಕುಸಿತದಂತಹ ನೈಸರ್ಗಿಕ ವಿಕೋಪಗಳು ಸಂಭವಿಸಿದಾಗ ಸಾಲ ಮರುಪಾವತಿ ಮಾಡಲು ಕಷ್ಟಪಡುವ ಗ್ರಾಹಕರಿಗೆ ನೆರವಾಗಲು RBI ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಇಂತಹ ತುರ್ತು ಸಂದರ್ಭಗಳಲ್ಲಿ ಸಾಲಗಾರರಿಗೆ ತಕ್ಷಣದ ಉಪಶಮನ ನೀಡಲು ಬ್ಯಾಂಕ್ಗಳಿಗೆ ಸೂಚನೆ ನೀಡಲಾಗಿದೆ. RBI ನ ಹೊಸ ಮಾರ್ಗಸೂಚಿಗಳ ಪ್ರಮುಖ ಅಂಶಗಳು : 1) ಸಾಲದ ಪುನರ್ರಚನೆ (Loan Restructuring): ನೈಸರ್ಗಿಕ ವಿಕೋಪಗಳಿಂದಾಗಿ ಆದಾಯ ಕಳೆದುಕೊಂಡ ಗ್ರಾಹಕರು […]

ಕನ್ನಡ ದುನಿಯಾ 28 Jan 2026 3:10 pm

Good News: Al ಬಳಸಿ ಸ್ವಿಗ್ಗಿ ಮೂಲಕ ಆಹಾರ ಬುಕ್ ಮಾಡಿ!

ಎಲ್ಲಾ ಕಡೆ ಆವರಿಸುತ್ತಿರುವ AI (ಕೃತಕ ಬುದ್ಧಿಮತ್ತೆ) ಈಗ ಫುಡ್ ಆರ್ಡರ್ ಮಾಡಲು ಸಹ ಸಹಕಾರಿಯಾಗಲಿದೆ. ಭಾರತದ ಜನಪ್ರಿಯ ಆನ್‌ಲೈನ್ ಪುಲ್ ಡೆಲವರಿ ಅಪ್ಲಿಕೇಶನ್ ಆದ ಸ್ವಿಗ್ಗಿ ಬಹುದೊಡ್ಡ ಘೋಷಣೆಯೊಂದನ್ನು ಮಾಡಿದೆ. ಭಾರತದಲ್ಲಿನ ಗ್ರಾಹಕರು ಈಗ ಆಹಾರ, ದಿನಸಿ ಪದಾರ್ಥಗಳನ್ನು ಆರ್ಡರ್ ಮಾಡಲು ಎಐ ಬಳಕೆ ಮಾಡಬಹುದು. ಹೌದು ಚಾರ್ಟ್ ಜಿಪಿಡಿ, ಜೆಮಿನಿ, ಕ್ಲೌಡ್ ಇತರ ಎಐ ಚಾಟ್‌ ಬಾಟ್‌ಗಳನ್ನು ಬಳಸಿಕೊಂಡು ಆಹಾರ ಆರ್ಡರ್ ಮಾಡಬಹುದು, ಹೋಟೆಲ್‌ಗಳ ಟೇಬಲ್ ಕಾಯ್ದಿರಿಸಬಹುದು. ಸ್ವಿಗ್ಗಿ ಕಂಪನಿಯು ಮಾದರಿ ಕಾಂಟೆಕ್ಸ್ಟ್ ಪ್ರೊಟೊಕಾಲ್ […]

ಕನ್ನಡ ದುನಿಯಾ 28 Jan 2026 2:58 pm

SHOCKING : DCM ‘ಅಜಿತ್ ಪವಾರ್’ಪ್ರಯಾಣಿಸುತ್ತಿದ್ದ ವಿಮಾನ ಪತನ : ಕೊನೆ ಕ್ಷಣದ ಭಯಾನಕ ವೀಡಿಯೋ ವೈರಲ್ |WATCH VIDEO

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರಿದ್ದ ವಿಮಾನ ಇಂದು ಪತನಗೊಂಡಿದ್ದು, ಅಜಿತ್ ಪವಾರ್ ಸೇರಿದಂತೆ ಐವರು ದುರ್ಮರಣಕ್ಕೀಡಾಗಿದ್ದಾರೆ. ಭೀಕರ ಘಟನೆಗೆ ಇಡೀ ದೇಶವೇ ಮರುಕ ವ್ಯಕ್ತಪಡಿಸಿದೆ. ಈ ದುರಂತಕ್ಕೆ ಸಂಬಂಧಿಸಿದ ಸಿಸಿಟಿವಿ ದೃಶ್ಯಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಬೆಳಿಗ್ಗೆ ಸುಮಾರು 8:45 ರ ಸಮಯದಲ್ಲಿ ಲಿಯರ್ಜೆಟ್ 45 (Learjet 45) ವಿಮಾನವು ಲ್ಯಾಂಡಿಂಗ್ ಮಾಡಲು ಪ್ರಯತ್ನಿಸುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ವಿಮಾನ ನೆಲಕ್ಕೆ ಅಪ್ಪಳಿಸುತ್ತಿದ್ದಂತೆ ಸ್ಪೋಟಗೊಂಡು ಇಡೀ ವಿಮಾನ ಹೊತ್ತಿ ಉರಿದಿದೆ. ಸಿಸಿಟಿವಿಯಲ್ಲಿ ಭಯಾನಕ ದೃಶ್ಯಗಳು […]

ಕನ್ನಡ ದುನಿಯಾ 28 Jan 2026 2:41 pm

ದಿಶಾಂಕ್ ಆ್ಯಪ್ ಬಳಸಿ ಮನೆಯಲ್ಲೇ ಕುಳಿತು ಜಮೀನಿನ ಅಸಲಿ ಮಾಹಿತಿ ಹೀಗೆ ಚೆಕ್ ಮಾಡಿ

ನೀವು ಕಷ್ಟಪಟ್ಟು ದುಡಿದ ಹಣದಲ್ಲಿ ಒಂದು ಸೈಟ್ ಅಥವಾ ಜಮೀನು ಖರೀದಿಸುವ ಕನಸು ಕಾಣುತ್ತಿದ್ದೀರಾ? ಭೂಮಿಯ ನಕ್ಷೆ ಮತ್ತು ದಾಖಲೆಗಳ ವಿಚಾರದಲ್ಲಿ ನಿಮಗೆ ಮೋಸ ಮಾಡಲು ಭೂಗಳ್ಳರು ಹೋದಲ್ಲೆಲ್ಲಾ ಹೊಂಚು ಹಾಕುತ್ತಿದ್ದಾರೆ. ಸಾಲ ಸೋಲ ಮಾಡಿ ಆಸ್ತಿ ಖರೀದಿಸುವಾಗ ಎಷ್ಟೋ ಮಂದಿ ಸರಿಯಾದ ಮಾಹಿತಿ ಇಲ್ಲದೆ, ನಕಲಿ ದಾಖಲೆಗಳಿಗೆ ಮರುಳಾಗಿ ತಮ್ಮ ಜೀವನದ ಉಳಿತಾಯವನ್ನೆಲ್ಲಾ ಕಳೆದುಕೊಂಡು ಬೀದಿಗೆ ಬಿದ್ದ ಉದಾಹರಣೆಗಳು ಸಾಕಷ್ಟಿವೆ. ಭೂಗಳ್ಳರ ಜಾಲಕ್ಕೆ ಬ್ರೇಕ್ ಹಾಕಲು ರಾಜ್ಯ ಸರ್ಕಾರ ಈಗ ಬಲಿಷ್ಠವಾದ ಅಸ್ತ್ರವೊಂದನ್ನು ಸಾರ್ವಜನಿಕರ ಕೈಗಿಟ್ಟಿದೆ. […]

ಕನ್ನಡ ದುನಿಯಾ 28 Jan 2026 2:41 pm

ಕಾಳು ಮೆಣಸು ಬೆಳೆಗಾರರಿಗೆ ಇಲ್ಲಿದೆ ಉಪಯುಕ್ತ ಮಾಹಿತಿ

ಶಿವಮೊಗ್ಗ : ಕಾಳು ಮೆಣಸು ಸೇರಿದಂತೆ ಯಾವುದೇ ಸಂಬಾರು ಉತ್ಪನ್ನಗಳ ಸಂಸ್ಕರಣೆ ಮತ್ತು ಮೌಲ್ಯವರ್ಧನೆ ಮಾಡಿದಾಗ ಆರ್ಥಿಕತೆ ಬೆಳೆಯಲು ಸಾಧ್ಯವಾಗುತ್ತದೆ. ಆದ್ದರಿಂದ ರೈತರು ಮೌಲ್ಯವರ್ಧನೆಗೆ ಹೆಚ್ಚಿನ ಒತ್ತು ನೀಡಬೇಕೆಂದು ಕರ್ನಾಟಕ ರಾಜ್ಯ ಕೃಷಿ ಉತ್ಪನ್ನ ಸಂಸ್ಕರಣೆ ಮತ್ತು ರಫ್ತು ನಿಗಮ ಲಿಮಿಟೆಡ್ ನ ವ್ಯವಸ್ಥಾಪಕ ನಿರ್ದೇಶಕರಾದ ಸಿ.ಎನ್ ಶಿವಪ್ರಕಾಶ್ ಮನವಿ ಮಾಡಿದರು. ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ, ಅಡಿಕೆ ಸಂಶೋಧನಾ ಕೇಂದ್ರ, ನವಿಲೆ, ಶಿವಮೊಗ್ಗ, ಅಡಿಕೆ ಮತ್ತು ಸಾಂಬಾರ ಪದಾರ್ಥಗಳ ಅಭಿವೃದ್ಧಿ […]

ಕನ್ನಡ ದುನಿಯಾ 28 Jan 2026 2:18 pm

JOB ALERT : ಇಸ್ರೋದಲ್ಲಿ ಭಾರಿ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ.. ! ತಿಂಗಳಿಗೆ 2 ಲಕ್ಷದವರೆಗೆ ಸಂಬಳ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಲ್ಲಿ (ISRO) ಉದ್ಯೋಗ ಪಡೆಯುವುದು ಅನೇಕರ ಕನಸು . ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ISRO) ಅಹಮದಾಬಾದ್ನಲ್ಲಿರುವ ಬಾಹ್ಯಾಕಾಶ ಅನ್ವಯಿಕ ಕೇಂದ್ರವು (Space Applications Centre – SAC) ವಿವಿಧ ವಿಭಾಗಗಳಲ್ಲಿ ಖಾಲಿ ಇರುವ ವಿಜ್ಞಾನಿ (Scientist) ಮತ್ತು ಇಂಜಿನಿಯರ್ (Engineer) ಹುದ್ದೆಗಳ ಭರ್ತಿಗಾಗಿ ಅಧಿಸೂಚನೆ ಹೊರಡಿಸಿದೆ. ಉದ್ಯೋಗದ ಪ್ರಮುಖ ವಿವರಗಳು:• ಒಟ್ಟು ಹುದ್ದೆಗಳು: 49 (ಸೈಂಟಿಸ್ಟ್/ಇಂಜಿನಿಯರ್ ‘SC’ ಮತ್ತು ‘SD’ ಹಂತದ ಹುದ್ದೆಗಳು).• ವೇತನ ಶ್ರೇಣಿ: * Scientist/Engineer ‘SD’: ₹67,100 […]

ಕನ್ನಡ ದುನಿಯಾ 28 Jan 2026 2:09 pm

IAS ಅಧಿಕಾರಿ ದಿ. ಮಹಾಂತೇಶ್ ಬೀಳಗಿ ಪುತ್ರಿಗೆ  ಸರ್ಕಾರಿ ಉದ್ಯೋಗ : ನೇಮಕಾತಿ ಪತ್ರ ವಿತರಿಸಿದ CM ಸಿದ್ದರಾಮಯ್ಯ.!

ಬೆಂಗಳೂರು : ಇತ್ತೀಚೆಗೆ ಕಾರು ಅಪಘಾತದಲ್ಲಿ ಮೃತಪಟ್ಟ ಐಎಎಸ್ ಅಧಿಕಾರಿ ದಿ. ಮಹಾಂತೇಶ್ ಬೀಳಗಿ ಅವರ ಪುತ್ರಿಗೆ ಸರ್ಕಾರಿ ಉದ್ಯೋಗ ಲಭಿಸಿದೆ. ಹೌದು. ಮಹಾಂತೇಶ್ ಬೀಳಗಿ ಅವರ ಪುತ್ರಿಗೆ ರಾಜ್ಯ ಸರ್ಕಾರಿ ಸೇವೆಯಲ್ಲಿ ಉದ್ಯೋಗ ನೀಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಖುದ್ದಾಗಿ ಅಭ್ಯರ್ಥಿಗೆ ನೇಮಕಾತಿ ಆದೇಶದ ಪ್ರತಿಯನ್ನು ನೀಡಿ ಶುಭ ಹಾರೈಸಿದರು. ಮಹಾಂತೇಶ್ ಬೀಳಗಿ ಅವರ ಪುತ್ರಿ ಚೈತನ್ಯಾ ಎಮ್.ಬೀಳಗಿ ಅವರಿಗೆ ಅನುಕಂಪದ ಆಧಾರದ ಮೇಲೆ ಸರ್ಕಾರಿ ಉದ್ಯೋಗದ ನೇಮಕಾತಿ ಪತ್ರವನ್ನು ಇಂದು ಮುಖ್ಯಮಂತ್ರಿ ಅವರು ಹಸ್ತಾಂತರಿಸಿ, […]

ಕನ್ನಡ ದುನಿಯಾ 28 Jan 2026 1:47 pm

ಮಹಿಳೆಯರಿಗಾಗಿ ಶಿಕ್ಷಕರ ತರಬೇತಿ ಕೌಶಲ್ಯ ಕೋರ್ಸ್‌ಗಳು, ಅರ್ಜಿ ಹಾಕಿ

ಮಹಿಳೆಯರಿಗಾಗಿ ಶಿಕ್ಷಕರ ತರಬೇತಿ ಕೌಶಲ್ಯ ಕೋರ್ಸ್‌ಗಳನ್ನು ಆಯೋಜಿಸಲಾಗಿದೆ. ಆನ್‌ಲೈನ್ ತರಬೇತಿ ನಡೆಯಲಿದ್ದು, ಕರ್ನಾಟಕ ರಾಜ್ಯಾದ್ಯಂತ ಮಹಿಳೆಯರು ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ರಾಷ್ಟ್ರೀಯ ಕೌಶಲ್ಯ ಅಕಾಡೆಮಿಯು ಕರ್ನಾಟಕ ರಾಜ್ಯಾದ್ಯಂತದ ಮಹಿಳೆಯರಿಂದ ಕೌಶಲ್ಯಾಭಿವೃದ್ಧಿ ಮತ್ತು ಉದ್ಯೋಗ ಆಧಾರಿತ ಆನ್‌ಲೈನ್ ಶಿಕ್ಷಕರ ತರಬೇತಿ ಕೌಶಲ್ಯ ಕೋರ್ಸ್‌ಗಳಿಗೆ ಆನ್‌ಲೈನ್ ಅರ್ಜಿ ಆಹ್ವಾನಿಸಿದೆ. ಕೋರ್ಸ್‌ಗಳು ಪೂರ್ವ-ಪ್ರಾಥಮಿಕ ಶಿಕ್ಷಕರ ತರಬೇತಿ, ಮಾಂಟೆಸ್ಸರಿ ಶಿಕ್ಷಕರ ತರಬೇತಿ ಮತ್ತು ನರ್ಸರಿ ಶಿಕ್ಷಕರ ತರಬೇತಿ. ಈ ತರಬೇತಿಗಾಗಿ ಇಂಟರ್/ 10+2, ಪದವಿ ಅಥವಾ ಪಿಜಿ ಪಾಸಾದ ಮಹಿಳೆಯರು ಆನ್‌ಲೈನ್‌ನಲ್ಲಿ […]

ಕನ್ನಡ ದುನಿಯಾ 28 Jan 2026 1:38 pm

ಜಪಾನ್‌ನ ಮಚ್ಚಾಗೆ ಲಕ್ನೋದಲ್ಲಿ ಬಿತ್ತು ದೇಸಿ ತಡ್ಕಾ: ಕುಲ್ಹಡ್‌ನಲ್ಲಿ ಕುದಿಯುತ್ತಿದೆ ಅಪ್ಪಟ ಗರಮಚ್ಚಾ

ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿದಿನವೂ ಹತ್ತಾರು ಫುಡ್ ಫ್ಯೂಷನ್ ವಿಡಿಯೋಗಳು ಹರಿದಾಡುತ್ತವೆ, ಆದರೆ ಲಕ್ನೋದ ಈ ಘಟನೆ ಮಾತ್ರ ಜಪಾನ್‌ನ ಆತ್ಮವನ್ನೇ ಅಲುಗಾಡಿಸುವಂತಿದೆ ಜಪಾನ್‌ನ ಅತ್ಯಂತ ಸಾಂಪ್ರದಾಯಿಕ ಮತ್ತು ಶಿಸ್ತಿನ ಪಾನೀಯ ಮಚ್ಚಾಗೆ (Matcha) ಈಗ ಲಕ್ನೋದ ಗಲ್ಲಿಯಲ್ಲಿ ಅಪ್ಪಟ ಭಾರತೀಯ ಪಾಸ್‌ಪೋರ್ಟ್ ಸಿಕ್ಕಂತಿದೆ. ಜಪಾನ್‌ನ ಅತ್ಯಂತ ಸಾಂಪ್ರದಾಯಿಕ ಮತ್ತು ಶಿಸ್ತಿನ ಪಾನೀಯ ಮಚ್ಚಾಗೆ (Matcha) ಈಗ ಭಾರತೀಯ ಪಾಸ್‌ಪೋರ್ಟ್ ಸಿಕ್ಕಂತಿದೆ. ಲಕ್ನೋದ ಬೀದಿಬದಿಯ ವ್ಯಾಪಾರಿಯೊಬ್ಬರು ಈ ಜಪಾನಿ ಟೀಗೆ ಅಪ್ಪಟ ದೇಸಿ ತಡ್ಕಾ ನೀಡಿದ್ದು, ಆ ವಿಡಿಯೋ […]

ಕನ್ನಡ ದುನಿಯಾ 28 Jan 2026 1:32 pm

ವಾಟ್ಸಾಪ್‌ನಲ್ಲಿ ಬಂತು ಸ್ಟ್ರಿಕ್ಟ್ ಅಕೌಂಟ್ ಸೆಟ್ಟಿಂಗ್ಸ್: ಹ್ಯಾಕರ್‌ಗಳಿಂದ ನಿಮ್ಮ ಅಕೌಂಟ್ ರಕ್ಷಿಸಲು ಇಲ್ಲಿದೆ ಹೊಸ ಕವಚ

ವಾಟ್ಸಾಪ್ (WhatsApp) ತನ್ನ ಬಳಕೆದಾರರ ಸುರಕ್ಷತೆಗಾಗಿ ಜೂನ್ 27ರಂದು ಅತ್ಯಂತ ಶಕ್ತಿಶಾಲಿ ಪ್ರೈವೆಸಿ ಫೀಚರ್ ಆದ ‘ಸ್ಟ್ರಿಕ್ಟ್ ಅಕೌಂಟ್ ಸೆಟ್ಟಿಂಗ್ಸ್’ (Strict Account Settings) ಅನ್ನು ಬಿಡುಗಡೆ ಮಾಡಿದೆ. ಇದರ ಸಂಪೂರ್ಣ ವಿವರ ಇಲ್ಲಿದೆ: ಏನಿದು ವಾಟ್ಸಾಪ್ ಸ್ಟ್ರಿಕ್ಟ್ ಅಕೌಂಟ್ ಸೆಟ್ಟಿಂಗ್ಸ್? ಇದು ಕೇವಲ ಒಂದು ಕ್ಲಿಕ್‌ನಲ್ಲಿ ಸಕ್ರಿಯಗೊಳಿಸಬಹುದಾದ ಭದ್ರತಾ ವ್ಯವಸ್ಥೆಯಾಗಿದೆ. ವಿಶೇಷವಾಗಿ ಪತ್ರಕರ್ತರು, ಸಾಮಾಜಿಕ ಕಾರ್ಯಕರ್ತರು ಮತ್ತು ಸಾರ್ವಜನಿಕ ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡು ನಡೆಯುವ ಸೈಬರ್ ದಾಳಿ ಹಾಗೂ ಪೆಗಾಸಸ್‌ನಂತಹ ಸ್ಪೈವೇರ್‌ಗಳಿಂದ ರಕ್ಷಣೆ ನೀಡಲು ಇದನ್ನು ವಿನ್ಯಾಸಗೊಳಿಸಲಾಗಿದೆ. […]

ಕನ್ನಡ ದುನಿಯಾ 28 Jan 2026 1:30 pm

BREAKING : ಅಜಿತ್ ಪವಾರ್ ಸಾವು : ಸುಪ್ರೀಂಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆಗೆ ‘ಮಮತಾ ಬ್ಯಾನರ್ಜಿ’ಆಗ್ರಹ.!

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ಸಾವಿಗೆ ಕಾರಣವಾದ ಬಾರಾಮತಿಯ ಭೀಕರ ವಿಮಾನ ಅಪಘಾತದ ಕುರಿತು ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಬೇಕೆಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬುಧವಾರ ಒತ್ತಾಯಿಸಿದ್ದಾರೆ, ಅಲ್ಲದೆ ಈ ಘಟನೆಯಲ್ಲಿ ಸಂಚು ನಡೆದಿರುವ ಸಾಧ್ಯತೆಯಿದೆ ಎಂದು ಅವರು ಸುಳಿವು ನೀಡಿದ್ದಾರೆ. ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರು ಬಾರಾಮತಿ ಬಳಿ ಸಂಭವಿಸಿದ ವಿಮಾನ ಅಪಘಾತದಲ್ಲಿ ನಿಧನರಾದರು ಎಂಬ ಸುದ್ದಿ ದೇಶಾದ್ಯಂತ ಸಂಚಲನ ಮೂಡಿಸಿದೆ. ಅವರು ತಮ್ಮ ತವರು ಕ್ಷೇತ್ರವಾದ ಬಾರಾಮತಿಯಲ್ಲಿ […]

ಕನ್ನಡ ದುನಿಯಾ 28 Jan 2026 1:21 pm

ಹೈಟೆಕ್ ವರ್ಕ್‌ಶಾಪ್ ಇಲ್ಲ, ಆದರೂ ನಿಮಿಷಗಳಲ್ಲಿ ಬೈಕ್ ರೆಡಿ: ಶಿಮ್ಲಾ ಮೆಕ್ಯಾನಿಕ್ ಪ್ರತಿಭೆಗೆ ವಿದೇಶಿಗರು ಶರಣು

ಶಿಮ್ಲಾ: ಹಿಮಾಚಲ ಪ್ರದೇಶದ ಶಿಮ್ಲಾದ ರಸ್ತೆಬದಿಯಲ್ಲಿ ನಡೆದ ಒಂದು ಘಟನೆ ಈಗ ಇಂಟರ್ನೆಟ್‌ನಲ್ಲಿ ಭಾರಿ ಸದ್ದು ಮಾಡುತ್ತಿದೆ. ಭಾರತೀಯರ ಅನುಭವ ಮತ್ತು ಕೌಶಲ್ಯಕ್ಕೆ ಯಾವುದೇ ಆಧುನಿಕ ವರ್ಕ್‌ಶಾಪ್‌ಗಳು ಸಾಟಿಯಿಲ್ಲ ಎಂಬುದನ್ನು ಇಲ್ಲಿನ ಒಬ್ಬ ಸಾಮಾನ್ಯ ಮೆಕ್ಯಾನಿಕ್ ಸಾಬೀತುಪಡಿಸಿದ್ದಾರೆ. ಘಟನೆಯ ವಿವರ: ಯುರೋಪ್‌ನಿಂದ ಭಾರತಕ್ಕೆ ಪ್ರವಾಸ ಬಂದಿದ್ದ ದಂಪತಿಗಳು ತಮ್ಮ ಬೈಕ್‌ನಲ್ಲಿ ಶಿಮ್ಲಾ ಮಾರ್ಗವಾಗಿ ಸಾಗುತ್ತಿದ್ದರು. ಈ ವೇಳೆ ಬೈಕ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ಅವರು ರಸ್ತೆಯಲ್ಲೇ ಸಿಲುಕಿಕೊಂಡಿದ್ದರು. ಆಗ ಅವರಿಗೆ ಸಹಾಯಕ್ಕೆ ಬಂದವರು ರಸ್ತೆಬದಿಯ ಒಬ್ಬ ಸಾಮಾನ್ಯ […]

ಕನ್ನಡ ದುನಿಯಾ 28 Jan 2026 1:12 pm

ಬಜೆಟ್ 2026-27: ಹಲ್ವಾ ಸಮಾರಂಭದ ಆಸಕ್ತಿಕರ ಮಾಹಿತಿ

ಕೇಂದ್ರ ಬಜೆಟ್‌ 2026ರ ತಯಾರಿ ಆರಂಭವಾಗಿದೆ. ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1ರ ಭಾನುವಾರ ಸಂಸತ್ತಿನಲ್ಲಿ 2026-27ನೇ ಸಾಲಿನ ಕೇಂದ್ರ ಬಜೆಟ್ ಅನ್ನು ಮಂಡಿಸಲಿದ್ದಾರೆ. ಕೇಂದ್ರ ಬಜೆಟ್‌ ಪ್ರತಿ ಮುದ್ರಣ ಪ್ರಾರಂಭವಾಗುವುದು ಹಲ್ವಾ ಕಾರ್ಯಕ್ರಮದ ಮೂಲಕ. ಹಲ್ವಾ ಕಾರ್ಯಕ್ರಮ ಮಂಗಳವಾರ ನಡೆದಿದೆ. ಬಜೆಟ್ ತಯಾರಿಯಲ್ಲಿ ತೊಡಗಿರುವ ಸಿಬ್ಬಂದಿ ಹಲ್ವಾ ಕಾರ್ಯಕ್ರಮದ ಬಳಿಕ ಬಜೆಟ್ ಪ್ರತಿ ಮುದ್ರಣವಾಗುವ ತನಕ ಸಮಯ ನೋಡದೇ ಕೆಲಸ ಮಾಡುತ್ತಾರೆ. ಹಲ್ವಾ ಸಮಾರಂಭ: ನವದೆಹಲಿಯಲ್ಲಿ 2026-27ನೇ ಸಾಲಿನ […]

ಕನ್ನಡ ದುನಿಯಾ 28 Jan 2026 1:06 pm

ಶಿವಮೊಗ್ಗ : ಜ. 30  ರಿಂದ ಫೆ .1 ರವರೆಗೆ ಈ ಪ್ರದೇಶದಲ್ಲಿ ‘ವಿದ್ಯುತ್ ವ್ಯತ್ಯಯ’

ಶಿವಮೊಗ್ಗ : ಶಿವಮೊಗ್ಗ ನಗರ ಉಪವಿಭಾಗ 2, ಘಟಕ -5ರ ವ್ಯಾಪ್ತಿಯಲ್ಲಿ ತುರ್ತು ಕಾಮಗಾರಿ ಹಮ್ಮಿಕೊಂಡಿದ್ದು, ಜ. 30, 31 ಮತ್ತು ಫೆ. 01 ರಂದು 3 ದಿನಗಳು ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ. ಜ. 30 ರಂದು ಬೆಳಗ್ಗೆ 10.00 ರಿಂದ ಮ. 3.00 ರವರೆಗೆ ಮಿಳಗಟ್ಟ, ಬುದ್ದನಗರ, ಕಿಣಿ ಲೇಔಟ್, ಖಾಸಗಿ ಮತ್ತು ಸರ್ಕಾರಿ ಬಸ್ ನಿಲ್ದಾಣ ಹಾಗೂ ಸುತ್ತಮುತ್ತಲಿನ ಪ್ರದೇಶಗಳು. ಜ. 31 ರಂದು ಬೆಳಗ್ಗೆ […]

ಕನ್ನಡ ದುನಿಯಾ 28 Jan 2026 1:05 pm

SHOCKING : HR ‘ಮ್ಯಾನೇಜರ್’ ನನ್ನು ತುಂಡು ತುಂಡಾಗಿ ಕತ್ತರಿಸಿ ಗೋಣಿ ಚೀಲದಲ್ಲಿ ಹಾಕಿ ಎಸೆದ ಸಹೋದ್ಯೋಗಿ.!

ಆಗ್ರಾ: ಉತ್ತರ ಪ್ರದೇಶದ ಆಗ್ರಾದಲ್ಲಿ ಮನಕಲಕುವ ಘಟನೆಯೊಂದು ಬೆಳಕಿಗೆ ಬಂದಿದೆ. ಖಾಸಗಿ ಸಂಸ್ಥೆಯೊಂದರಲ್ಲಿ ಎಚ್ಆರ್ (HR) ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ 32 ವರ್ಷದ ಮಿಂಕಿ ಶರ್ಮಾ ಎಂಬಾಕೆಯನ್ನು ಆಕೆಯ ಪ್ರೇಮಿ ವಿನಯ್ ಸಿಂಗ್ (30) ಎಂಬಾತ ಅತ್ಯಂತ ಕ್ರೂರವಾಗಿ ಹತ್ಯೆ ಮಾಡಿದ್ದಾನೆ. ಘಟನೆಯ ವಿವರ: ಮಿಂಕಿ ಶರ್ಮಾ ಮತ್ತು ವಿನಯ್ ಸಿಂಗ್ ಕಳೆದ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದರು. ವಿನಯ್ ಅದೇ ಸಂಸ್ಥೆಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದನು. ಮಿಂಕಿ ಬೇರೊಬ್ಬ ವ್ಯಕ್ತಿಯೊಂದಿಗೆ ಸಂಬಂಧ ಹೊಂದಿದ್ದಾಳೆ […]

ಕನ್ನಡ ದುನಿಯಾ 28 Jan 2026 12:28 pm

ಊಹೆಗೂ ಮೀರಿ ಏರಿಕೆ ಕಂಡ ಚಿನ್ನದ ದರ: ಕೊನೆಗೂ ₹1.50 ಲಕ್ಷದ ಗಡಿ ದಾಟಿದ 22K ಚಿನ್ನ

ಬೆಂಗಳೂರು: ನೀವು ಬಂಗಾರ ಕೊಳ್ಳುವ ಪ್ಲಾನ್ ಮಾಡಿದ್ದೀರಾ? ಹಾಗಾದರೆ ಈ ಸುದ್ದಿ ಓದಿದ ಮೇಲೆ ನಿಮ್ಮ ನಿದ್ದೆ ಹಾರುವುದು ಗ್ಯಾರಂಟಿ ನಿನ್ನೆಯಷ್ಟೇ ಸ್ವಲ್ಪ ಸಮಾಧಾನವಾಗಿದ್ದ ಚಿನ್ನದ ಬೆಲೆ ಇಂದು (ಜ.28, ಬುಧವಾರ) ಅಕ್ಷರಶಃ ಬೆಂಕಿಯಂತೆ ಏರಿದೆ. ಹಳದಿ ಲೋಹದ ಬೆಲೆ ಏರಿಕೆಯ ವೇಗ ನೋಡಿದರೆ, ಸಾಮಾನ್ಯ ಜನರಿಗಂತೂ ಚಿನ್ನ ಈಗ ಕೇವಲ ಕನಸಿನ ಲೋಹವಾಗಿ ಉಳಿಯುವ ಆತಂಕ ಎದುರಾಗಿದೆ. ಚಿನ್ನವನ್ನು ಸಂಪ್ರದಾಯಬದ್ಧವಾಗಿ ಸುರಕ್ಷಿತ ಹೂಡಿಕೆ ಎಂದು ಪರಿಗಣಿಸಲಾಗುತ್ತದೆ. ಆದರೆ ಇಂದಿನ ಈ ರಾಕೆಟ್ ವೇಗದ ಏರಿಕೆಯಿಂದಾಗಿ ಮದುವೆ-ಮುಂಜಿಗಳಿಗೆ […]

ಕನ್ನಡ ದುನಿಯಾ 28 Jan 2026 12:24 pm

ಮೆಟ್ರೋದಲ್ಲಿ ‘ಸ್ಟಂಟ್’ ಮಾಡಿದ ನಟ ವರುಣ್ ಧವನ್’ಗೆ 500 ರೂ. ದಂಡ ವಿಧಿಸಿದ  ಅಧಿಕಾರಿಗಳು |WATCH VIDEO

ಬಾಲಿವುಡ್ ನಟ ವರುಣ್ ಧವನ್ ಅವರು ಮುಂಬೈ ಮೆಟ್ರೋ ರೈಲಿನಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಇರುವ ಹ್ಯಾಂಡಲ್ ಹಿಡಿದು ‘ಪುಲ್-ಅಪ್ಸ್’ (Pull-ups) ವ್ಯಾಯಾಮ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ತಮ್ಮ ಹೊಸ ಚಿತ್ರ ‘ಬಾರ್ಡರ್ 2’ ಪ್ರಚಾರಕ್ಕಾಗಿ ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದಾಗ ಅವರು ಈ ಸಾಹಸ ಮಾಡಿದ್ದರು. ಆದರೆ, ಈ ವಿಡಿಯೋ ಮುಂಬೈ ಮೆಟ್ರೋ ಅಧಿಕಾರಿಗಳ (MMMOCL) ಗಮನಕ್ಕೆ ಬಂದಿದ್ದು, ಅವರು ನಟನ ನಡೆಯನ್ನು ತೀವ್ರವಾಗಿ ಖಂಡಿಸಿ ದಂಡ ವಿಧಿಸಿದ್ದಾರೆ. ಮೆಟ್ರೋ ಅಧಿಕಾರಿಗಳು ಹೇಳಿದ್ದೇನು? “ವರುಣ್ […]

ಕನ್ನಡ ದುನಿಯಾ 28 Jan 2026 12:06 pm

ಬೋಟ್ ದುರಂತ: ಮಾರ್ಗಸೂಚಿ ಪ್ರಕಟಿಸಿದ ಉಡುಪಿ ಜಿಲ್ಲಾಡಳಿತ

ಉಡುಪಿಯ ಡೆಲ್ಟಾ ಬೀಚ್ ಬಳಿ ಸಂಭವಿಸಿದ ಪ್ರವಾಸಿಬೋಟ್ದುರಂತದಲ್ಲಿ ಮೈಸೂರಿನ ಮತ್ತೋರ್ವ ಯುವತಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ ಮೂಲಕ ಮೃತರ ಸಂಖ್ಯೆ 3ಕ್ಕೆ ಏರಿಕೆಯಾಗಿದೆ. ಬೋಟ್ ದುರಂತದ ಹಿನ್ನಲೆಯಲ್ಲಿ ಉಡುಪಿ ಜಿಲ್ಲಾಡಳಿತ ಬೋಟ್‌ಗಳಿಗೆ ಮಾರ್ಗಸೂಚಿಯನ್ನು ಪ್ರಕಟಿಸಿದೆ. ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಮತ್ತು ಎಸ್ಪಿ ಹರಿರಾಮ್ ಶಂಕರ್ ಸಭೆ ನಡೆಸಿದ ಬಳಿಕ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಾಗಿದೆ. ಜಿಲ್ಲೆಯ ಕಡಲ ತೀರಗಳು ಸೇರಿದಂತೆ ಮತ್ತಿತರ ಪ್ರವಾಸಿ ತಾಣಗಳ ಸೌಂದರ್ಯ ಸವಿಯಲು ಆಗಮಿಸುವ ಪ್ರವಾಸಿಗರ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡುವುದರೊಂದಿಗೆ […]

ಕನ್ನಡ ದುನಿಯಾ 28 Jan 2026 12:03 pm

ಭೂಮಿಯ ಆಳದಲ್ಲಿ ಮೆಟ್ರೋ ಲೋಕ ದೆಹಲಿಯಲ್ಲಿ 13 ಅಂತಸ್ತಿನ ಕಟ್ಟಡದಷ್ಟು ಆಳದ ಸುರಂಗ ಮಾರ್ಗ ನಿರ್ಮಾಣ

ಇಲ್ಲಿಯವರೆಗೆ ದೆಹಲಿ ಮೆಟ್ರೋದ ಹೌಜ್ ಖಾಸ್ (Hauz Khas) ನಿಲ್ದಾಣವು ಸುಮಾರು 30 ಮೀಟರ್ ಆಳದಲ್ಲಿದ್ದು, ಅತ್ಯಂತ ಆಳವಾದ ನಿಲ್ದಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಆದರೆ ಈಗ ದೆಹಲಿ ಮೆಟ್ರೋದ 4ನೇ ಹಂತದ (Phase 4) ವಿಸ್ತರಣೆಯ ಭಾಗವಾಗಿ ನಿರ್ಮಾಣವಾಗುತ್ತಿರುವ ಗೋಲ್ಡನ್ ಲೈನ್ (Golden Line) ಈ ದಾಖಲೆಯನ್ನು ಮುರಿದಿದೆ. ದಾಖಲೆಯ ಆಳ: ಗೋಲ್ಡನ್ ಲೈನ್‌ನಲ್ಲಿ ಛತ್ತರ್‌ಪುರ ಮತ್ತು ಇಗ್ನೌ (IGNOU) ನಿಲ್ದಾಣಗಳ ನಡುವಿನ ಸುರಂಗವು ಭೂಮಿಯ ಮೇಲ್ಮೈಯಿಂದ ಸುಮಾರು 39 ಮೀಟರ್ (ಅಂದರೆ ಸುಮಾರು 13 […]

ಕನ್ನಡ ದುನಿಯಾ 28 Jan 2026 12:00 pm

ಆ್ಯಪ್‌ಗಳ ಜಗತ್ತಿನಲ್ಲಿ ಮನುಷ್ಯತ್ವದ ಸ್ಪರ್ಶ: ಮುಂಬೈ ಹೋಟೆಲ್‌ನ ಒಂದು ಸಣ್ಣ ಚೀಟಿ ಈಗ ಸೋಷಿಯಲ್ ಮೀಡಿಯಾ ಟ್ರೆಂಡ್

ಮುಂಬೈ: ನಾವು ಇಂದು ಮೊಬೈಲ್ ಪರದೆಯ ಮೂಲಕ ಆಹಾರ ಆರ್ಡರ್ ಮಾಡುತ್ತೇವೆ, ಡಿಜಿಟಲ್ ಪಾವತಿ ಮಾಡುತ್ತೇವೆ ಮತ್ತು ಡೆಲಿವರಿ ಬಾಯ್ ಎಲ್ಲಿದ್ದಾನೆ ಎಂದು ಮ್ಯಾಪ್‌ನಲ್ಲಿ ನೋಡುತ್ತೇವೆ. ಈ ಇಡೀ ಪ್ರಕ್ರಿಯೆಯಲ್ಲಿ ಆಹಾರ ತಯಾರಿಸುವ ಮನುಷ್ಯರಿದ್ದಾರೆ ಎಂಬ ವಿಷಯವನ್ನೇ ಮರೆತುಬಿಡುತ್ತೇವೆ. ಆದರೆ ಮುಂಬೈನ ವ್ಯಕ್ತಿಯೊಬ್ಬರು ಆರ್ಡರ್ ಮಾಡಿದ ಆಹಾರದ ಪಾರ್ಸೆಲ್ ಒಳಗಿದ್ದ ಒಂದು ಸಣ್ಣ ‘Sticky Note’ ಆ ಯಾಂತ್ರಿಕತೆಗೆ ಮನುಷ್ಯತ್ವದ ಸ್ಪರ್ಶ ನೀಡಿದೆ. ಟಿನೊಪ್ಪಣಿಯಲ್ಲೇನಿತ್ತು? ಆ ಹಸ್ತಪ್ರತಿ ಟಿಪ್ಪಣಿಯಲ್ಲಿ ಹೋಟೆಲ್ ಹೀಗೆ ಬರೆದಿತ್ತು: “ನಮ್ಮಲ್ಲಿ ಆರ್ಡರ್ ಮಾಡಿದ್ದಕ್ಕಾಗಿ […]

ಕನ್ನಡ ದುನಿಯಾ 28 Jan 2026 11:59 am

ವಿಮಾನ ಪತನಕ್ಕೂ 23 ನಿಮಿಷ ಮುನ್ನ DCM ‘ಅಜಿತ್ ಪವಾರ್’ಯಾರನ್ನು ಸ್ಮರಿಸಿದ್ದರು.! ಕೊನೆಯ ಪೋಸ್ಟ್ ವೈರಲ್.!

ಬಾರಾಮತಿ: ಮಹಾರಾಷ್ಟ್ರ ರಾಜಕಾರಣದ ದಿಗ್ಗಜ, ಉಪಮುಖ್ಯಮಂತ್ರಿ ಮತ್ತು ಎನ್ಸಿಪಿ (NCP) ಮುಖ್ಯಸ್ಥ ಅಜಿತ್ ಪವಾರ್ ಅವರು ಇಂದು ಬೆಳಿಗ್ಗೆ ನಡೆದ ಭೀಕರ ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಪುಣೆ ಜಿಲ್ಲೆಯ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಈ ದುರ್ಘಟನೆ ಸಂಭವಿಸಿದೆ. ಮುಂಬೈನಿಂದ ಬಾರಾಮತಿಗೆ ಪ್ರಯಾಣಿಸುತ್ತಿದ್ದ ಅಜಿತ್ ಪವಾರ್ ಅವರಿದ್ದ ಚಾರ್ಟರ್ಡ್ ವಿಮಾನವು (Learjet 45) ಇಂದು ಬೆಳಿಗ್ಗೆ ಸುಮಾರು 8:45ಕ್ಕೆ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಆಗುವ ಸಮಯದಲ್ಲಿ ನಿಯಂತ್ರಣ ತಪ್ಪಿ ಪತನಗೊಂಡಿದೆ. : ಬಾರಾಮತಿ ವಿಮಾನ ನಿಲ್ದಾಣದ ರನ್ವೇಯಲ್ಲಿ […]

ಕನ್ನಡ ದುನಿಯಾ 28 Jan 2026 11:49 am

ಒಂದು ಪ್ಲೇಟ್ ಬ್ರೇಕ್‌ಫಾಸ್ಟ್‌ಗಾಗಿ 5 ಗಂಟೆ ವೇಟಿಂಗ್ ನಟಿ ಶಿಲ್ಪಾ ಶೆಟ್ಟಿ ಹೋಟೆಲ್ ಆಫರ್ ತಂದಿಟ್ಟ ವಿಚಿತ್ರ ಸಂಕಷ್ಟ

ಮುಂಬೈ: ಗಣರಾಜ್ಯೋತ್ಸವದ ಸಂಭ್ರಮದ ಅಂಗವಾಗಿ ನಟಿ ಶಿಲ್ಪಾ ಶೆಟ್ಟಿ ಮಾಲೀಕತ್ವದ ‘ಅಮ್ಮಕೈ’ ರೆಸ್ಟೋರೆಂಟ್, ಬೆಳಿಗ್ಗೆ 9:30 ರಿಂದ 11:30 ರವರೆಗೆ ಸಾರ್ವಜನಿಕರಿಗೆ ಉಚಿತ ಉಪಹಾರ ನೀಡುವುದಾಗಿ ಘೋಷಿಸಿತ್ತು. ಆದರೆ, ಈ ಘೋಷಣೆಯು ಮುಂಬೈನಲ್ಲಿ ಅಕ್ಷರಶಃ ಜನಜಂಗುಳಿಗೆ ಕಾರಣವಾಯಿತು. ಹಸಿದವರಿಗಿಂತ ‘ಉಚಿತ’ದ ಆಸೆ ಹೆಚ್ಚಾಯಿತೇ? ಬೆಳಿಗ್ಗೆ 9:30ಕ್ಕೆ ಹೋಟೆಲ್ ತೆರೆಯಬೇಕಿದ್ದರೂ, ಜನರು ಬೆಳಿಗ್ಗೆ 7 ಗಂಟೆಯಿಂದಲೇ ಸಾಲುಗಟ್ಟಿ ನಿಂತಿದ್ದರು. ಕೇವಲ ಎರಡು ಗಂಟೆಗಳಲ್ಲಿ ನೂರಾರು ಜನ ನೆರೆದಿದ್ದರಿಂದ, ರೆಸ್ಟೋರೆಂಟ್ ಮಧ್ಯಾಹ್ನ 1 ಗಂಟೆಯವರೆಗೆ ಆಫರ್ ವಿಸ್ತರಿಸಬೇಕಾಯಿತು. ಕಿಲೋಮೀಟರ್‌ಗಟ್ಟಲೆ ಉದ್ದದ […]

ಕನ್ನಡ ದುನಿಯಾ 28 Jan 2026 11:42 am