SENSEX
NIFTY
GOLD
USD/INR

Weather

19    C

ಡಿಜಿಟಲ್ ಸುದ್ದಿ ಮೂಲಗಳು

... ...View News by News Source

ತಾಯಿಯೊಂದಿಗೆ ಜಗಳವಾಡ್ತಿದ್ದ ಮಲತಂದೆಗೆ ಮಚ್ಚಿನಿಂದ ಮಾರಣಾಂತಿಕವಾಗಿ ಥಳಿಸಿದ ಪುತ್ರ

ಕಾರವಾರ: ತಾಯಿಯ ಜತೆ ಜಗಳವಾಡುತ್ತಿದ್ದ ಮಲತಂದೆಗೆ ಮಗ ಮಚ್ಚಿನಿಂದ ಹಲ್ಲೆ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆ ಮುಂಡಗೋಡ ತಾಲೂಕಿನ ತಟ್ಟಿಹಳ್ಳಿಯಲ್ಲಿ ನಡೆದಿದೆ. ಮಲತಂದೆ ಶಿವಾನಂದ ರಾಮಣ್ಣ(48) ಅವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಲಾಗಿದೆ. ಹಲ್ಲೆ ನಡೆಸಿ ಮಲ ಮಗ ಶಿವರಾಜ್ ಪರಸಪ್ಪ ಗುಡಿಹಾಳ(27) ಪರಾರಿಯಾಗಿದ್ದಾನೆ. ನಾಗಮ್ಮ ಕಲಕಟ್ಟಿಯನ್ನು ಲಾರಿ ಚಾಲಕ ಶಿವಾನಂದ ಮೂರನೇ ವಿವಾಹವಾಗಿದ್ದ. ಒಂದೂವರೆ ವರ್ಷದ ಹಿಂದೆ ಹಾನಗಲ್ ಮೂಲದ ನಾಗಮ್ಮನ ಜೊತೆ ಮದುವೆಯಾಗಿತ್ತು. ಆದರೆ, ಪತ್ನಿಯ ಮೇಲೆ ಸಂಶಯದಿಂದ ಶಿವಾನಂದ ಪ್ರತಿದಿನ ಗಲಾಟೆ […]

ಕನ್ನಡ ದುನಿಯಾ 15 Jan 2026 9:06 pm

BREAKING: ಬೀದರ್ ನಲ್ಲಿ ಮಾಂಜಾ ದಾರದಿಂದ ಮತ್ತೊಂದು ಅವಘಡ

ಬೀದರ್: ಬೀದರ್ ಜಿಲ್ಲೆಯಲ್ಲಿ ಗಾಳಿಪಟದ ಮಾಂಜಾ ದಾರದಿಂದ ಮತ್ತೊಂದು ಅವಘಡ ಸಂಭವಿಸಿದೆ. ಬೀದರ್ ಜಿಲ್ಲೆ ಚಿಟಗುಪ್ಪದ ತಾಳಮಡಗಿ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 65ರ ಲ್ಲಿ ಬುಧವಾರ ಗಾಳಿಪಟದ ಮಾಂಜಾ ದಾರ ಕೊರಳಿಗೆ ಸುದ್ದಿಕೊಂಡು ಸಂಜುಕುಮಾರ ಗುಂಡಪ್ಪ ಹೊಸಮನಿ(48) ಸ್ಥಳದಲ್ಲೇ ಮೃತಪಟ್ಟಿದ್ದರು. ಇದರ ಬೆನ್ನಲ್ಲೇ ಮತ್ತೊಂದು ಘಟನೆ ನಡೆದಿದೆ. ಗಾಳಿಪಟದ ಚೀನಾ ಮಾಂಜಾ ದಾರ ತಗುಲಿ ಯುವಕನ ಕೈಗೆ ಗಂಭೀರವಾದ ಗಾಯವಾಗಿದೆ. ಬೀದರ್ ತಾಲೂಕಿನ ರಂಜೋಳ ಖೇಣಿ ಗ್ರಾಮದ ಸಮೀಪ ಘಟನೆ ನಡೆದಿದೆ. ಹಳ್ಳಿಖೇಡ್ ಗ್ರಾಮದ ಯುವಕ […]

ಕನ್ನಡ ದುನಿಯಾ 15 Jan 2026 8:51 pm

BREAKING: ಭಾರತೀಯ ಜಲಪ್ರದೇಶ ಅಕ್ರಮವಾಗಿ ಪ್ರವೇಶಿಸಿದ ಪಾಕಿಸ್ತಾನ ದೋಣಿ ವಶಕ್ಕೆ: 9 ಮಂದಿ ಅರೆಸ್ಟ್

ನವದೆಹಲಿ: ಭಾರತೀಯ ಜಲಪ್ರದೇಶವನ್ನು ಅಕ್ರಮವಾಗಿ ಪ್ರವೇಶಿಸಲು ಪ್ರಯತ್ನಿಸಿದ ಒಂಬತ್ತು ಸಿಬ್ಬಂದಿಗಳನ್ನು ಹೊಂದಿದ್ದ ಪಾಕಿಸ್ತಾನ ದೋಣಿಯನ್ನು ಭಾರತೀಯ ಕೋಸ್ಟ್ ಗಾರ್ಡ್(ಐಸಿಜಿ) ವಶಪಡಿಸಿಕೊಂಡಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ. ಪೋರಬಂದರ್ ಗೆ ತರಲಾಗುತ್ತಿರುವ ದೋಣಿಯನ್ನು ಬುಧವಾರ ಅಂತರರಾಷ್ಟ್ರೀಯ ಸಮುದ್ರ ಗಡಿ ರೇಖೆಯ ಬಳಿ ಭಾರತೀಯ ಜಲಪ್ರದೇಶದಲ್ಲಿ ಅಧಿಕಾರಿಗಳು ವಶಪಡಿಸಿಕೊಂಡರು. ಪಾಕಿಸ್ತಾನಿ ದೋಣಿಯಲ್ಲಿದ್ದ ಸಿಬ್ಬಂದಿ ಪಲಾಯನ ಮಾಡಲು ಪ್ರಯತ್ನಿಸಿದಾಗ, ಭಾರತೀಯ ಕರಾವಳಿ ಕಾವಲು ಪಡೆ ಅರೇಬಿಯನ್ ಸಮುದ್ರದಲ್ಲಿ ದೋಣಿಯನ್ನು ವಶಪಡಿಸಿಕೊಂಡು ಅವರನ್ನು ಬಂಧಿಸಿದೆ. ಸಂಬಂಧಿತ ಸಂಸ್ಥೆಗಳಿಂದ ಸಂಪೂರ್ಣ ಶೋಧ ಮತ್ತು ಜಂಟಿ […]

ಕನ್ನಡ ದುನಿಯಾ 15 Jan 2026 8:38 pm

BREAKING: ಆಕಸ್ಮಿಕ ಅಗ್ನಿ ಅವಘಡ: ಮನೆಯಲ್ಲಿದ್ದ 5 ಲಕ್ಷ ನಗದು, 50 ಗ್ರಾಂ ಚಿನ್ನ ಸುಟ್ಟು ಭಸ್ಮ

ವಿಜಯಪುರ: ಆಕಸ್ಮಿಕ ಅಗ್ನಿ ಅವಘಡದಿಂದ ಶೀಟ್ ಮನೆ ಹೊತ್ತಿ ಉರಿದ ಘಟನೆ ವಿಜಯಪುರ ತಾಲೂಕಿನ ಅಲಿಯಾಬಾದ್ ಸಮೀಪದ ಪಾಂಗ್ರೂನ್ ದೊಡ್ಡಿ ಗ್ರಾಮದಲ್ಲಿ ನಡೆದಿದೆ. ತುಕಾರಾಮ್ ಚೌಹಾಣ್ ಎಂಬುವವರ ಮನೆ ಬೆಂಕಿಗಾಹುತಿಯಾಗಿದೆ. ಮನೆಯಲ್ಲಿದ್ದ 5 ಲಕ್ಷ ರೂ. ನಗದು, 50 ಗ್ರಾಂ ಚಿನ್ನಾಭರಣ ಸೇರಿ ಇತರೆ ವಸ್ತುಗಳು ಸುಟ್ಟು ಭಸ್ಮವಾಗಿದೆ. ವಿಜಯಪುರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಕನ್ನಡ ದುನಿಯಾ 15 Jan 2026 8:11 pm

ಪೈರಸಿ ತಡೆಗೆ ಕೇಂದ್ರ ಸರ್ಕಾರದಿಂದ ಬಿಗಿ ಕ್ರಮ: ಬಹುಮುಖಿ ವಿಧಾನ ಅಳವಡಿಕೆ: ಜಗ್ಗೇಶ್ ಪ್ರಶ್ನೆಗೆ ಕೇಂದ್ರ ಸಚಿವರ ಮಾಹಿತಿ

ಚಲನಚಿತ್ರೋದ್ಯಮದ ಮೇಲೆ ಪೈರಸಿಯ ದುಷ್ಪರಿಣಾಮದ ಬಗ್ಗೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಬಹಳ ಜಾಗೃತವಾಗಿದೆ ಮತ್ತು ಕಾನೂನು, ಜಾರಿ ಮತ್ತು ಜಾಗೃತಿ ಕ್ರಮಗಳನ್ನು ಒಳಗೊಂಡ ಬಹುಮುಖಿ ವಿಧಾನವನ್ನು ಅಳವಡಿಸಿಕೊಂಡಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವ ಡಾ.ಎಲ್.ಮುರುಗನ್ ತಿಳಿಸಿದ್ದಾರೆ. ನಟ ಹಾಗೂ ರಾಜ್ಯಸಭೆ ಸದಸ್ಯ ಜಗ್ಗೇಶ್ ಅವರು ಡಿಸೆಂಬರ್ 11, 2025 ರಂದು ರಾಜ್ಯಸಭೆಯಲ್ಲಿ ಶೂನ್ಯ ವೇಳೆಯಲ್ಲಿ ಚಲನಚಿತ್ರಗಳ ಪೈರಸಿಯ ಕುರಿತು ನೀವು ಎತ್ತಿದ ಪೈರಸಿ ಕಳವಳದ ಬಗ್ಗೆ ಕೈಗೊಂಡಿರುವ ಕ್ರಮಗಳ ಕುರಿತಾಗಿ […]

ಕನ್ನಡ ದುನಿಯಾ 15 Jan 2026 8:04 pm

ಒನ್‌ ಪ್ಲಸ್ ಸಿಇಒ ಪೀಟ್ ಲಾವ್ ವಿರುದ್ಧ ತೈವಾನ್ ಅರೆಸ್ಟ್ ವಾರಂಟ್

ಒನ್‌ ಪ್ಲಸ್ ಸಿಇಒ ಪೀಟ್ ಲಾವ್ ವಿರುದ್ಧ ತೈವಾನ್ ಬಂಧನ ವಾರಂಟ್ ಹೊರಡಿಸಿದೆ. ಚೀನಾದ ಮುಖ್ಯ ಭೂಭಾಗದ ಸಂಸ್ಥೆಗಳಿಂದ ಸ್ಥಳೀಯ ತಂತ್ರಜ್ಞಾನ ಪ್ರತಿಭೆಗಳ ನೇಮಕಾತಿಯನ್ನು ನಿಯಂತ್ರಿಸುವ ಕಾನೂನುಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಸ್ಮಾರ್ಟ್‌ಫೋನ್ ತಯಾರಕ ಒನ್‌ಪ್ಲಸ್‌ನ ಸಹ-ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪೀಟ್ ಲಾವ್ ವಿರುದ್ಧ ತೈವಾನ್ ಅಧಿಕಾರಿಗಳು ಸಕ್ರಿಯ ಬಂಧನ ವಾರಂಟ್ ಹೊರಡಿಸಿದ್ದಾರೆ. ತೈಪೆಯ ಶಿಲಿನ್ ಜಿಲ್ಲೆಯ ಪ್ರಾಸಿಕ್ಯೂಟರ್‌ ಗಳು ಲಾವ್ ಅವರ ಪರವಾಗಿ ಕಾರ್ಯನಿರ್ವಹಿಸಿದ ಇಬ್ಬರು ತೈವಾನೀಸ್ ನಾಗರಿಕರ ಜೊತೆಗೆ ಆರೋಪ ಹೊರಿಸಿದ್ದಾರೆ, […]

ಕನ್ನಡ ದುನಿಯಾ 15 Jan 2026 7:37 pm

BREAKING: ದೆಹಲಿ ವಿಮಾನ ನಿಲ್ದಾಣದಲ್ಲಿ ಏರ್ ಇಂಡಿಯಾ ವಿಮಾನದ ಎಂಜಿನ್ ಗೆ ಹಾನಿ | VIDEO

ನವದೆಹಲಿ: ಇಂದು ಬೆಳಿಗ್ಗೆ ದೆಹಲಿ ವಿಮಾನ ನಿಲ್ದಾಣದಲ್ಲಿ ದಟ್ಟವಾದ ಮಂಜಿನಲ್ಲಿ ಟ್ಯಾಕ್ಸಿ ಮಾಡುತ್ತಿದ್ದಾಗ ಏರ್ ಇಂಡಿಯಾ ವಿಮಾನವು ಲಗೇಜ್ ಕಂಟೇನರ್ ಅನ್ನು ಗುದ್ದಿದ ನಂತರ ಅದರ ಒಂದು ಎಂಜಿನ್‌ಗೆ ಹಾನಿಯಾಗಿದೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ. ದೆಹಲಿಯಿಂದ ನ್ಯೂಯಾರ್ಕ್(ಜೆಎಫ್‌ಕೆ) ಗೆ ಕಾರ್ಯನಿರ್ವಹಿಸುತ್ತಿದ್ದ ಏರ್‌ಬಸ್ ಎ 350 ವಿಮಾನವು ವಿಮಾನದ AI101 ಅನ್ನು ಒಳಗೊಂಡಿತ್ತು. ಇರಾನಿನ ವಾಯುಪ್ರದೇಶದ ಅನಿರೀಕ್ಷಿತ ಮುಚ್ಚುವಿಕೆಯು ಅದರ ಯೋಜಿತ ಮಾರ್ಗದ ಮೇಲೆ ಪರಿಣಾಮ ಬೀರಿದ ನಂತರ ವಿಮಾನವು ದೆಹಲಿಗೆ ಮರಳಿತ್ತು. ವಿಮಾನ ಇಳಿದ ನಂತರ […]

ಕನ್ನಡ ದುನಿಯಾ 15 Jan 2026 7:03 pm

ಕಾಗಿನೆಲೆ ಪೀಠದ ಸಿದ್ದರಾಮಾನಂದಪುರಿ ಶ್ರೀ ನಿಧನಕ್ಕೆ ಸಿಎಂ ಸಿದ್ದರಾಮಯ್ಯ ಸಂತಾಪ

ಬೆಂಗಳೂರು: ತಿಂಥಿಣಿ ಕಾಗಿನೆಲೆ ಕನಕ ಗುರುಪೀಠ ಶಾಖಾ ಮಠ ಕಲಬುರಗಿ ವಿಭಾಗೀಯ ಪೀಠದ ಶ್ರೀ ಸಿದ್ದರಾಮಾನಂದಪುರಿ ಸ್ವಾಮೀಜಿ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕಗುರುಪೀಠ ಶಾಖಾ ಮಠ ತಿಂಥಿಣಿ ಬ್ರಿಜ್ ಕಲಬುರ್ಗಿ ವಿಭಾಗೀಯ ಪೀಠದ ಪರಮಪೂಜ್ಯ ಶ್ರೀ ಸಿದ್ದರಾಮಾನಂದಪುರಿ ಮಹಾಸ್ವಾಮಿಗಳು ದೈವಾಧೀನರಾದ ಸುದ್ದಿ ನೋವುಂಟುಮಾಡಿದೆ. ಧಾರ್ಮಿಕ ಕಾರ್ಯಗಳ ಜೊತೆಗೆ ಸಮಾಜದ ಏಳಿಗೆಯ ಬಗ್ಗೆ ಅಪಾರ ಕಾಳಜಿ, ಶ್ರದ್ಧೆ ಹೊಂದಿದ್ದ ಶ್ರೀಗಳ‌ ಅಗಲಿಕೆ ನಾಡಿಗೆ ತುಂಬಲಾರದ ನಷ್ಟ ಎಂದು ತಿಳಿಸಿದ್ದಾರೆ. ಶ್ರೀಗಳ ದಿವ್ಯಾತ್ಮಕ್ಕೆ […]

ಕನ್ನಡ ದುನಿಯಾ 15 Jan 2026 6:52 pm

BREAKING: ಪೌರಾಯುಕ್ತೆಗೆ ನಿಂದನೆ, ಜೀವಬೆದರಿಕೆ ಪ್ರಕರಣ: ಕಾಂಗ್ರೆಸ್ ಮುಖಂಡ ರಾಜೀವ್ ಗೌಡಗೆ ಕೆಪಿಸಿಸಿಯಿಂದ ನೋಟಿಸ್ ಜಾರಿ

ಬೆಂಗಳೂರು: ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆಗೆ ನಿಂದನೆ, ಜೀವಬೆದರಿಕೆ ಹಾಕಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ, ಕಾಂಗ್ರೆಸ್ ಮುಖಂಡ ರಾಜೀವ್ ಗೌಡಗೆ ನೋಟಿಸ್ ಜಾರಿ ಮಾಡಿದೆ. ಅಕ್ರಮವಾಗಿ ಅಳವಡಿಸಿದ್ದ ಬ್ಯಾನರ್ ತೆರವು ಮಾಡಿದ್ದಕ್ಕೆ ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಅಮೃತಾ ಗೌಡ ಅವರಿಗೆ, ಕಾಂಗ್ರೆಸ್ ಮುಖಂಡ ರಾಜೀವ್ ಗೌಡ, ಕರೆ ಮಾಡಿ ಅವಾಚ್ಯವಾಗಿ ನಿಂದಿಸಿ, ಜೀವಬೆದರಿಕೆ ಹಾಕಿದ್ದರು. ಜನರನ್ನು ಕಳುಹಿಸಿ ಚಪ್ಪಲಿಯಲ್ಲಿ ಹೊಡೆದು ಬೆಂಕಿ ಹಚ್ಚುವುದಾಗಿ ಬಾಯಿಗೆ ಬಂದಂತೆ ಬೈದಿದ್ದರು. ಈ ಕುರಿತ ಆಡಿಯೋ ಕೂಡ ವೈರಲ್ ಆಗಿತ್ತು. […]

ಕನ್ನಡ ದುನಿಯಾ 15 Jan 2026 6:37 pm

BIG NEWS: ಪ್ರೀತಿಸಿ ಮದುವೆಯಾಗಿದ್ದ ಪತ್ನಿಯನ್ನೇ ಬರ್ಬರವಾಗಿ ಕೊಲೆಗೈದು ಪರಾರಿ: ಆರೋಪಿ ಪತಿ ಅರೆಸ್ಟ್

ಶಿವಮೊಗ್ಗ: ಎರಡನೇ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದಕ್ಕೆ ಪ್ರೀತಿಸಿ ಮದುವೆಯಾಗಿದ್ದ ಪತ್ನಿಯನ್ನೇ ಕತ್ತು ಹಿಸಿಕಿ ಕೊಲೆಗೈದು ಪರಾರಿಯಾಗಿದ್ದ ಪತಿ ಮಹಾಶಯನನ್ನು ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಪೊಲೀಸರು ಬಂಧಿಸಿದ್ದಾರೆ. ಗೋಪಿ ಬಂಧಿತ ಆರೋಪಿ. ಜ.11ರಂದು ಪತ್ನಿ ಚಂದನಬಾಯಿಯನ್ನು ಪತಿ ಗೋಪಿ ಕತ್ತು ಹಿಸುಕಿ ಕೊಲೆಗೈದು ಎಸ್ಕೇಪ್ ಆಗಿದ್ದ. ಹೊಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಚಂದನಬಾಯಿ ಹಾಗೂ ಗೋಪಿ ಪರಸ್ಪರ ಪ್ರೀತಿಸಿ ಓಡಿಹೋಗಿ ಮದುವೆಯಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳು. ಮದುವೆಯಾಗಿ ಇಬ್ಬರು ಮಕ್ಕಳಿದ್ದರೂ ಗೋಪಿ, ಮತ್ತೋರ್ವ ಯುವತಿಯ ಹಿಂದೆ ಬಿದ್ದಿದ್ದಾನೆ. ಸಾಲದ್ದಕ್ಕೆ […]

ಕನ್ನಡ ದುನಿಯಾ 15 Jan 2026 6:09 pm

ಉಡುಪಿ ಡಿಸಿ ಹೆಸರಿನಲ್ಲಿ ನಕಲಿ ಖಾತೆ, ಹಣಕ್ಕಾಗಿ ಸಂದೇಶ

ಉಡುಪಿ ಜಿಲ್ಲಾಧಿಕಾರಿಗಳಾದ ಸ್ವರೂಪ ಟಿ. ಕೆ. ಅವರಿಗೆ ಸೈಬರ್ ಕಳ್ಳರ ಕಾಟ. ಹೌದು ಜಿಲ್ಲಾಧಿಕಾರಿಗಳ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಖಾತೆ ತೆರದು ಹಣಕ್ಕಾಗಿ ಸಂದೇಶಗಳನ್ನು ಕಳಿಸಲಾಗುತ್ತಿದೆ. ಈ ಕುರಿತು ಪೊಲೀಸರಿಗೆ ದೂರು ನೀಡಲಾಗಿದೆ. ಈ ಬಗ್ಗೆ ಉಡುಪಿ ಜಿಲ್ಲಾಧಿಕಾರಿಗಳು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ. ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್‌ ಹಾಗೂ ವಾಟ್ಸಪ್‌ಗಳಲ್ಲಿ ನನ್ನ ಫೋಟೋ ಹಾಗೂ ಹೆಸರನ್ನು ದುರ್ಬಳಕೆ ಮಾಡಿಕೊಂಡು ನಕಲಿ ಖಾತೆಗಳನ್ನು ಸೃಜಿಸಿ, ಬೇರೆ ಬೇರೆ ಕಾರಣಗಳನ್ನು ನೀಡಿ ಹಣ ವರ್ಗಾಯಿಸುವಂತೆ ಸಂದೇಶಗಳನ್ನು ರವಾನಿಸುತ್ತಿರುವುದು […]

ಕನ್ನಡ ದುನಿಯಾ 15 Jan 2026 5:43 pm

ಶಿಡ್ಲಘಟ್ಟದಲ್ಲಿ ಸದ್ದು, ಸುದ್ದಿ ಮಾಡಿ ಪರಾರಿಯಾದ ರಾಜೀವ್‌ ಗೌಡ ಯಾರು?

ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆಗೆ ಬೆದರಿಕೆ ಹಾಕಿದ ಪ್ರಕರಣದಲ್ಲಿ ಕಾಂಗ್ರೆಸ್ ಮುಖಂಡ ಬಿ.ವಿ.ರಾಜೀವ್‌ ಗೌಡ ಎಸ್ಕೇಪ್ ಆಗಿದ್ದಾರೆ. ತಮ್ಮ ವಿರುದ್ಧ 2 ಎಫ್‌ಐಆರ್‌ ದಾಖಲಾಗುತ್ತಿದ್ದಂತೆಯೇ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ತಲೆಮರೆಸಿಕೊಂಡಿರುವ ಕಾಂಗ್ರೆಸ್​​ ಮುಖಂಡನ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ಎರಡು ದಿನದಿಂದ ಸದ್ದು, ಸುದ್ದಿ ಮಾಡುತ್ತಿರುವ ಬಿ.ವಿ.ರಾಜೀವ್‌ ಗೌಡ ಯಾರು? ಎಂದು ಹುಡುಕಿದರೆ ಸಿಗುವುದು ಬಂಡಾಯದ ಕಥೆ. ಪ್ರತಿ ಬಾರಿ ಚುನಾವಣೆ ಬಂದಾಗಲೂ ಶಿಡ್ಲಘಟ್ಟ ಕಾಂಗ್ರೆಸ್ ಬಂಡಾಯದ ಕಾರಣಕ್ಕೆ ಸುದ್ದಿಯಾಗುತ್ತದೆ. 2023ರಲ್ಲಿಯೂ ಶಿಡ್ಲಘಟ್ಟದಲ್ಲಿ ಬಂಡಾಯದ ಬಿಸಿ ಜೋರಾಗಿತ್ತು. ಈಗಾಗಲೇ […]

ಕನ್ನಡ ದುನಿಯಾ 15 Jan 2026 5:24 pm

ಗವಿಗಂಗಾಧರೇಶ್ವರನಿಗೆ ಸೂರ್ಯದೇವನ ನಮಸ್ಕಾರ: ಬೆಂಗಳೂರಿನ ಐತಿಹಾಸಿಕ ದೇಗುಲದಲ್ಲಿ ವಿಸ್ಮಯಕಾರಿ ಕ್ಷಣ ಕಣ್ತುಂಬಿಕೊಂಡ ಭಕ್ತರು

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನ ಐತಿಹಾಸಿಕ ದೇವಸ್ಥಾನ ಗವಿ ಗಂಗಾಧರೇಶ್ವರ ದೇಗುಲದಲ್ಲಿ ಮಕರ ಸಂಕ್ರಮಣದ ಶುಭ ಸಂದರ್ಭದಲ್ಲಿ ವಿಸ್ಮಯವೊಂದು ನಡೆದಿದೆ. ಸೂರ್ಯ ತನ್ನ ಪಥ ಬದಲಿಸುವ ವೇಳೆ ಗವಿಗಂಗಾಧರೇಶ್ವರ ಸ್ವಾಮಿಗೆ ನಮಸ್ಕರಿಸುವ ಮೂಲಕ ಕೌತುಕ ಸಂದರ್ಭಕ್ಕೆ ಸಾಕ್ಷಿಸಿಯಾಗಿದ್ದಾನೆ. ಬೆಂಗಳೂರಿನ ಗವಿಪುರಂನ ಗುಟ್ಟಹಳ್ಳಿಯಲ್ಲಿರುವ ಗವಿ ಗಂಗಾಧರೇಶ್ವರ ದೇವಾಲಯದಲ್ಲಿ ಸೂರ್ಯನು ದಕ್ಷಿಣಾಯಣದಿಂದ ಉತ್ತರಾಯಣಕ್ಕೆ ತನ್ನ ಪಥ ಬದಲಿಸುವ ಸಂಕ್ರಾಂತಿಯ ದಿನದಂದು ಸಂಜೆ ಸೂರ್ಯದೇವ ದೇವಾಲಯದ ಗರ್ಭಗುಡಿಯ ಮೂಲಕ ತನ್ನ ರಶ್ಮಿಯನ್ನು ಗಂಗಾಧರನಿಗೆ ಸ್ಪರ್ಶಿಸುವ ಮೂಲಕ ಸೂರ್ಯರಶ್ಮಿಯ ಅಭಿಷೇಕ ಮಾಡಿದ್ದಾನೆ. ಸೂರ್ಯದೇವನ […]

ಕನ್ನಡ ದುನಿಯಾ 15 Jan 2026 5:18 pm

BREAKING: ಮಾಜಿ ಶಾಸಕರ ತೋಟದ ಮನೆಯಲ್ಲಿದ್ದ ಡಬಲ್ ಬ್ಯಾರಲ್ ಗನ್ ಕಳ್ಳತನ

ಕಾರವಾರ: ಮಾಜಿ ಶಾಸಕ ವಿ.ಎಸ್.ಪಾಟೀ, ಅವರ ತೋಟದ ಮನ್ರೆಯಲ್ಲಿದ್ದ ಡಬಲ್ ಬ್ಯಾರಲ್ ಗನ್ ಕಳ್ಳತನವಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಅಂದಲಗಿಯಲ್ಲಿ ನಡೆದಿದೆ. ಮಾಜಿ ಶಾಸಕ ವಿ.ಎಸ್.ಪಾಟೀಲ್ ಸ್ವರಕ್ಷಣೆಗಾಗಿ ಇಟ್ಟುಕೊಂಡಿದ್ದ ಬಂದೂಕು ಇದ್ದಕ್ಕಿದ್ದಂತೆ ನಾಪತ್ತೆಯಾಗಿದೆ. ಡಿ.31ರಂದು ತೋಟದ ಮನೆಯಲ್ಲಿರುವ ಪಂಪ್ ಹೌಸ್ ನಲ್ಲಿ ಬಂದೂಕು ಇಟ್ಟಿದ್ದರು. ಜನವರಿ 1ರಂದು ಬೆಳಿಗ್ಗೆ ನೋಡಿದಾಗ ಡಬಲ್ ಬ್ಯಾರಲ್ ಬಂದೂಕು ಅಲ್ಲಿರಲಿಲ್ಲ. ಮನೆಯಲ್ಲಿ ಅಥವಾ ತೋಟದಲ್ಲಿ ಇಟ್ಟಿರಬಹುದು ಎಂದು ಕೆಲ ದಿಗಳ ಕಾಲ ಹುಡುಕಾಡಿದ್ದರು. ಆದರೆ ಎಲ್ಲಿಯೂ ಗನ್ […]

ಕನ್ನಡ ದುನಿಯಾ 15 Jan 2026 4:46 pm

BREAKING: ಸಂಕ್ರಾಂತಿ ದಿನದಂದೇ ಮತ್ತೊಂದು ದುರಂತ: ತಂದೆಯ ಕಣ್ಣೆದುರೇ ಕ್ವಾರಿ ನೀರಿನಲ್ಲಿ ಮುಳುಗಿ ಇಬ್ಬರು ಬಾಲಕರು ಸಾವು

ಬಾಗಲಕೋಟೆ: ಸಂಕ್ರಾಂತಿ ಹಬ್ಬದ ದಿನದಂದೇ ಸ್ನಾನಕ್ಕೆ ಹೋಗಿದ್ದ ಇಬ್ಬರು ಬಾಲಕರು ಕಲ್ಲು ಕ್ವಾರಿಯಲ್ಲಿ ಮುಳುಗಿ ಸಾವನ್ನಪಿರುವ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ. ತಂದೆಯ ಕಣ್ಣೆದುರೇ ಕ್ವಾರಿ ನೀರಿನಲ್ಲಿ ಮುಳುಗಿ ಮಕ್ಕಳಿಬ್ಬರೂ ಮೃತಪಟ್ಟಿದ್ದಾರೆ. ಮನೋಜ್ (17) ಹಾಗೂ ಒರಮೋದ್ (17) ಮೃತ ಬಾಲಕರು. ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಜಾಲಿಕಟ್ಟೆ ಬಳಿ ಈ ಘಟನೆ ನಡೆದಿದೆ. ಮನೋಜ್ ಹಾಗೂ ಪ್ರಮೋದ್ ಇಬ್ಬರೂ ಪ್ರಥಮ ಪಿಯುಸಿ ಓದುತ್ತಿದ್ದರು. ಕಾಲೇಜಿಗೆ ರಜೆ ಇದ್ದುದರಿಂದ ತೇರಿನ ಕೆಲಸ ಮಾಡುತ್ತಿದ್ದರು. ಮಧ್ಯಾಹ್ನ ಸ್ನಾನಕ್ಕೆಂದು ಕ್ವಾರಿ ನೀರಿಗೆ […]

ಕನ್ನಡ ದುನಿಯಾ 15 Jan 2026 3:50 pm

‘ಶಾಲಾ ಮಕ್ಕಳ ಅಪಹರಣ’ಪ್ರಕರಣದ ತನಿಖೆಗೆ ಸಮಿತಿ ನೇಮಕ, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ : D.C ದಿವ್ಯ ಪ್ರಭು

ಧಾರವಾಡ : ಜನವರಿ 12 ರಂದು ಜರುಗಿದ ಕಮಲಾಪುರ ಸರಕಾರಿ ಪ್ರಾಥಮಿಕ ಶಾಲೆಯ ಅಪರಣ ಪ್ರಕರಣದ ಆರೋಪಿ ವಿರುದ್ಧ ಎಪ್‍ಐಆರ್ ದಾಖಲಿಸಿ, ಪೊಲೀಸ್ ಕ್ರಮ ಜರುಗಿಸಲಾಗಿದೆ. ಶಾಲಾ ಅವಧಿಯಲ್ಲಿ ಮಕ್ಕಳ ಅಪಹರಣ ಆಗಿರುವದರಿಂದ ಈ ಕುರಿತು ತನಿಖೆ ಮಾಡಿ ವರದಿ ನೀಡಲು, ಜಿಲ್ಲಾ ಪಂಚಾಯತ ಸಿಇಓ ಅವರು ಅಧಿಕಾರಿಗಳ ಸಮಿತಿ ರಚಿಸಿದ್ದಾರೆ. ಸಮಿತಿ ನೀಡುವ ವರದಿ ಪರಿಶೀಲಿಸಿ, ಲೋಪ ಉಂಟಾಗಿದ್ದಲ್ಲಿ ಸಂಬಂಧಿಸಿದವರ ಮೇಲೆ ನಿಯಮಾನುಸಾರ ಕ್ರಮ ಜರುಗಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಹೇಳಿದರು. ಅವರು […]

ಕನ್ನಡ ದುನಿಯಾ 15 Jan 2026 3:43 pm

BREAKING : ಕಲಬುರಗಿಯಲ್ಲಿ ಚಲಿಸುತ್ತಿದ್ದ ‘KKRTC’ಬಸ್ ನಲ್ಲಿ ಬೆಂಕಿ : ತಪ್ಪಿದ ಭಾರಿ ಅನಾಹುತ.!

ಕಲಬುರಗಿ : ಚಲಿಸುತ್ತಿದ್ದ ಕೆಕೆಆರ್ ಟಿಸಿ (KKRTC) ‘ಬಸ್ ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಭಾರಿ ಅನಾಹುತವೊಂದು ತಪ್ಪಿದೆ. ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಮದರಿ ಬಳಿ ಈ ಘಟನೆ ನಡೆದಿದೆ. ಚಲಿಸುತ್ತಿದ್ದ ಕೆಕೆಆರ್ ಟಿಸಿ ಬಸ್ ಇಂಜಿನ್ ನಲ್ಲಿ ಬೆಂಕಿ ಕಾಣಿಸಿಕೊಂಡು ಹೊಗೆ ಬಂದಿದೆ. ಕೂಡಲೇ ಅಲರ್ಟ್ ಆದ ಚಾಲಕ ಬಸ್ ನಿಲ್ಲಿಸಿ ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗೆ ಇಳಿಸಿದ್ದಾರೆ. ಶಾರ್ಟ್ ಸರ್ಕ್ಯೂಟ್ ನಿಂದ ಬಸ್ ಗೆ ಬೆಂಕಿ ತಗುಲಿರುವ ಶಂಕೆಯಾಗಿದೆ. ತಕ್ಷಣ ಸ್ಥಳೀಯರು ಬಸ್ ಗೆ […]

ಕನ್ನಡ ದುನಿಯಾ 15 Jan 2026 3:33 pm

BIG NEWS: ರಾಜ್ಯದ ಜನತೆಗೆ ಮತ್ತೆ ಕರೆಂಟ್ ಶಾಕ್: ಏಪ್ರಿಲ್ ನಿಂದ ವಿದ್ಯುತ್ ದರ ಏರಿಕೆ ಸಾಧ್ಯತೆ

ಬೆಂಗಳೂರು: ಐದು ವಿದ್ಯುತ್ ಸರಬರಾಜು ಕಂಪಿನಿಗಳ ಆದಾಯದಲ್ಲಿ ನಷ್ಟವುಂಟಾಗಿದ್ದು, ಅದನ್ನು ಸರಿದೂಗಿಸಲು ಮತ್ತೆ ವಿದ್ಯುತ್ ದರ ಏರಿಕೆಗೆ ಸಿದ್ಧತೆ ನಡೆದಿದೆ. ಏಪ್ರಿಲ್ ನಿಂದ ವಿದ್ಯುತ್ ದರ ಏರಿಸುವ ಸಾಧ್ಯತೆ ಇದೆ. ಎಸ್ಕಾಂ 2024-25ನೇ ಸಾಲಿನ ವಾರ್ಷಿಕ ಕಾರ್ಯಕ್ಷಮತೆ ವರದಿಯನ್ನು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗಕ್ಕೆ ಸಲ್ಲಿಸಿದೆ. ಎಸ್ಕಾಂ ಗಳ ಆದಾಯದಲ್ಲಿ ಸುಮಾರು 4,900 ಕೋಟಿ ರೂಪಾಯಿ ಖೋತಾ ಆಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಕಳೆದ ವರ್ಷ ಮಾರ್ಚ್ ನಲ್ಲಿ ವಿದ್ಯುತ್ ದರ ಪರೀಷ್ಕರಣೆ ಮಾಡಿದಾಗ ಕೆ ಇಆರ್ […]

ಕನ್ನಡ ದುನಿಯಾ 15 Jan 2026 3:28 pm

ಮಾಘ ಮೇಳದ ಟೆಂಟ್ ಗಳು ಸ್ವರ್ಗಕ್ಕಿಂತ ಕಡಿಮೆಯಿಲ್ಲ.! ಇದರ ಬೆಲೆ ಎಷ್ಟು..ಬುಕ್ ಮಾಡೋದು ಹೇಗೆ..? ತಿಳಿಯಿರಿ

ಸಂಗಮದ ದಡದಲ್ಲಿ ನಡೆಯುವ ಮಾಘ ಮೇಳಕ್ಕೆ ಪ್ರತಿದಿನ ಲಕ್ಷಾಂತರ ಜನರು ಆಗಮಿಸುತ್ತಿದ್ದಾರೆ. ಬುಧವಾರ ಮಾತ್ರ 8.5 ಮಿಲಿಯನ್ ಜನರು ಸಂಗಮದಲ್ಲಿ ಸ್ನಾನ ಮಾಡಿದ್ದಾರೆ.45 ದಿನಗಳ ಈ ಕಾರ್ಯಕ್ರಮ ಫೆಬ್ರವರಿ 15 ರವರೆಗೆ ಮುಂದುವರಿಯಲಿದ್ದು, ಸುಮಾರು 150 ಮಿಲಿಯನ್ ಭಕ್ತರು ಭಾಗವಹಿಸುವ ನಿರೀಕ್ಷೆಯಿದೆ. ಉತ್ತರ ಪ್ರದೇಶ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಯುಪಿಎಸ್‌ಟಿಡಿಸಿ) ಅಭಿವೃದ್ಧಿಪಡಿಸಿದ ಅತ್ಯಾಧುನಿಕ ಟೆಂಟ್ ಎಲ್ಲರ ಗಮನ ಸೆಳೆದಿದೆ. ಸಂಗಮ್ ಟೆಂಟ್ ಕಾಲೋನಿ ಅಡಿಯಲ್ಲಿ ನಿರ್ಮಿಸಲಾದ ಈ ಟೆಂಟ್‌ಗಳು ಭಕ್ತರಿಗೆ ಸುಂದರ ಅನುಭವವನ್ನು ನೀಡುತ್ತವೆ ಮತ್ತು […]

ಕನ್ನಡ ದುನಿಯಾ 15 Jan 2026 3:27 pm

Army Day : ಭಾರತೀಯ ಸೇನೆಯಿಂದ ‘ಆಪರೇಷನ್ ಸಿಂಧೂರ್’ ಕಾರ್ಯಾಚರಣೆಯ ಹೊಸ ವೀಡಿಯೋ ರಿಲೀಸ್ |WATCH VIDEO

ಸೇನಾ ದಿನದ ಅಂಗವಾಗಿ ಗುರುವಾರ ಭಾರತೀಯ ಸೇನೆಯು ಹೊಸ ವೀಡಿಯೊವನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಕಳೆದ ವರ್ಷ ಮೇ ತಿಂಗಳಲ್ಲಿ ನಡೆದ ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ಸಂದರ್ಭದಲ್ಲಿ ಗಡಿಯಾಚೆಗಿನ ಭಯೋತ್ಪಾದಕ ಶಿಬಿರಗಳ ಮೇಲೆ ನಡೆದ ನಿಖರ ದಾಳಿಗಳು ಮತ್ತು ನಂತರದ ಪಾಕಿಸ್ತಾನಿ ವಾಯುನೆಲೆಗಳು ಮತ್ತು ಅವುಗಳ ರಾಡಾರ್ ವ್ಯವಸ್ಥೆಗಳ ಮೇಲಿನ ದಾಳಿಗಳನ್ನು ತೋರಿಸಲಾಗಿದೆ. ಮೂರು ನಿಮಿಷಗಳ ವೀಡಿಯೊವು 2001 ರಲ್ಲಿ ಸಂಸತ್ತಿನ ಮೇಲಿನ ದಾಳಿ, 2002 ರಲ್ಲಿ ಅಕ್ಷರಧಾಮ ದೇವಾಲಯ, 2008 ರಲ್ಲಿ ಮುಂಬೈ, 2016 ರಲ್ಲಿ […]

ಕನ್ನಡ ದುನಿಯಾ 15 Jan 2026 3:03 pm

ಅಕ್ರಮ ಬಾಂಗ್ಲಾದೇಶಿಗಳ ನುಸುಳುವಿಕೆ ರಾಷ್ಟ್ರೀಯ ಭದ್ರತೆಗೆ ಅಪಾಯ

ಕರ್ನಾಟಕದಲ್ಲಿ ರಾಜ್ಯದಲ್ಲಿ ಹೆಚ್ಚುತ್ತಿರುವ ಅಕ್ರಮ ಬಾಂಗ್ಲಾದೇಶಿ ನುಸುಳುವಿಕೆರಾಷ್ಟ್ರೀಯ ಭದ್ರತೆಗೆ ಗಂಭೀರ ಅಪಾಯ. ಅಕ್ರಮ ಬಾಂಗ್ಲಾದೇಶಿಗಳ ಗಡಿಪಾರು ಅಗತ್ಯ ಎಂದು ಹಿಂದೂ ಜನಜಾಗೃತಿ ಸಮಿತಿ ಹೇಳಿದೆ. ಹಿಂದೂ ಜನಜಾಗೃತಿ ಸಮಿತಿಯ ಮೋಹನ್ ಗೌಡ ಈ ಕುರಿತು ಮಾತನಾಡಿ, ಬೆಂಗಳೂರು ಹಾಗೂ ಕರ್ನಾಟಕದಲ್ಲಿ ಅಕ್ರಮವಾಗಿ ನೆಲೆಸಿರುವ ಬಾಂಗ್ಲಾದೇಶಿ ನುಸುಳುಕೋರರ ಸಂಖ್ಯೆ ಅಪಾಯಕಾರಿ ಮಟ್ಟದಲ್ಲಿ ಹೆಚ್ಚುತ್ತಿದೆ. ಇದು ರಾಷ್ಟ್ರದ ಭದ್ರತೆ, ಕಾನೂನು–ಸುವ್ಯವಸ್ಥೆ ಮತ್ತು ಸಾಮಾಜಿಕ ಸಮತೋಲನಕ್ಕೆ ನೇರ ಸವಾಲಾಗಿದೆ ಎಂದು ಗಂಭೀರ ಎಚ್ಚರಿಕೆ ನೀಡಿದರು. ಇತ್ತೀಚಿನ ಗುರುತಿನ ಅಭಿಯಾನದಲ್ಲಿ ಅನೇಕ ಅಕ್ರಮ […]

ಕನ್ನಡ ದುನಿಯಾ 15 Jan 2026 2:56 pm

ಉಪ್ಪು ನಿಜವಾಗಿಯೂ ನಿಮ್ಮ ಆರೋಗ್ಯದ ಶತ್ರುವೇ ? ವೈದ್ಯರು ಏನ್ ಹೇಳಿದ್ದಾರೆ ಗೊತ್ತೇ..?

ನಮ್ಮ ಆಹಾರದಲ್ಲಿ ಉಪ್ಪು ಎಂದ ತಕ್ಷಣ ನಾವೆಲ್ಲರೂ ಅಧಿಕ ರಕ್ತದೊತ್ತಡದ ಬಗ್ಗೆ ಯೋಚಿಸುತ್ತೇವೆ. ಹೃದಯದ ಆರೋಗ್ಯಕ್ಕಾಗಿ ಉಪ್ಪನ್ನು ಸಂಪೂರ್ಣವಾಗಿ ತ್ಯಜಿಸಬೇಕು ಅಥವಾ ಅದನ್ನು ಕಡಿಮೆ ಮಾಡಬೇಕು ಎಂದು ವೈದ್ಯರು ಹೇಳುತ್ತಾರೆ. ಉಪ್ಪಿನ ವಿಷಯಕ್ಕೆ ಬಂದಾಗ ನಾವು ಅನುಸರಿಸುವುದು ಕೇವಲ ಕುರುಡು ನಂಬಿಕೆ ಎಂದು ಪ್ರಸಿದ್ಧ ಹೃದ್ರೋಗ ತಜ್ಞ ಡಾ. ಡಿಮಿಟ್ರಿ ಯಾರನೋವ್ ಹೇಳುತ್ತಾರೆ. “ಉಪ್ಪು ದೇಹದ ಶತ್ರುವಲ್ಲ, ಆದರೆ ಅದು ಯಾರಿಗೆ ಅಪಾಯಕಾರಿ ಎಂದು ತಿಳಿದುಕೊಳ್ಳುವುದು ಮುಖ್ಯ” ಎಂದು ಅವರು ಸ್ಪಷ್ಟಪಡಿಸಿದರು. ಸೋಡಿಯಂ: ದೇಹಕ್ಕೆ ಅತ್ಯಗತ್ಯ ಉಪ್ಪಿನಲ್ಲಿರುವ […]

ಕನ್ನಡ ದುನಿಯಾ 15 Jan 2026 2:53 pm

ಸಂಕ್ರಾಂತಿ ಹಬ್ಬಕ್ಕೆ ಮನೆಗೆ ಬಂದ ಹೊಸ ಅಳಿಯನಿಗೆ 158 ಬಗೆಯ ಅಡುಗೆ ಮಾಡಿ ಬಡಿಸಿದ ಅತ್ತೆ.!

ಸಂಕ್ರಾಂತಿ ಹಬ್ಬ ಹಾಗೂ ಹೊಸ ಅಳಿಯಂದಿರ ನಡುವೆ ಅವಿನಾಭಾವ ಸಂಬಂಧವಿದೆ. ವಿಶೇಷವಾಗಿ ಹಲವು ಜಿಲ್ಲೆಗಳಲ್ಲಿ, ಅಳಿಯನನ್ನು ಲಕ್ಷ್ಮಿ ಮತ್ತು ನಾರಾಯಣರ ನಿಜವಾದ ಸಾಕಾರವೆಂದು ಪರಿಗಣಿಸಿ ಅತ್ತೆ-ಮಾವಂದಿರುವ ನೀಡುವ ಆತಿಥ್ಯವು ಶತಮಾನಗಳಷ್ಟು ಹಳೆಯ ಸಂಪ್ರದಾಯವಾಗಿದೆ. ಪ್ರೀತಿ ಮತ್ತು ಗೌರವದ ಮಿಶ್ರಣವಾಗಿರುವ ಈ ಸಂಪ್ರದಾಯವನ್ನು ಎಲ್ಲಾ ಕಡೆ ಆಚರಿಸಲಾಗುತ್ತದೆ. ಅಳಿಯನಿಗೆ ಅದ್ಧೂರಿ ಸ್ವಾಗತ ಆಂಧ್ರ ಪ್ರದೇಶ ಗುಂಟೂರು ಜಿಲ್ಲೆಯ ತೆನಾಲಿಯ ವಂದನಾಪು ಮುರಳೀಕೃಷ್ಣ-ಲಕ್ಷ್ಮಿ ದಂಪತಿಗಳು ಕಳೆದ ವರ್ಷ ತಮ್ಮ ಮಗಳು ಮೌನಿಕಾಳನ್ನು ರಾಜಮಂಡ್ರಿಯ ಶ್ರೀದತ್ತ ಎಂಬುವವರಿಗೆ ಮದುವೆ ಮಾಡಿಕೊಟ್ಟರು. ಮದುವೆಯ […]

ಕನ್ನಡ ದುನಿಯಾ 15 Jan 2026 2:45 pm

BIG NEWS: ವಿಧಾನಸಭಾ ಚುನಾವಣೆಗೆ ನಾನು ಚಾಮರಾಜ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಎಂದ ಪ್ರತಾಪ್ ಸಿಂಹ

ಮೈಸೂರು: ಮುಂಬರುವ ವಿಧಾನಸಭಾ ಚುನಾವಣೆಗಾಗಿ ರಾಜಕೀಯ ಪಕ್ಷಗಳ ನಾಯಕರು ಈಗಿನಿಂದಲೇ ಟಿಕೆಟ್ ಗಾಗಿ ತಮ್ಮ ತಮ್ಮ ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಳ್ಳುವುದರಲ್ಲಿ ನಿರತರಾಗಿದ್ದಾರೆ. ರಾಜ್ಯ ರಾಜಕಾರಣಕ್ಕೆ ಮರಳುವುದಾಗಿ ಇತ್ತೀಚೆಗೆ ಹೇಳಿದ್ದ ಬಿಜೆಪಿ ಮಾಜಿ ಸಂಸದ ಪ್ರತಾಪ್ ಸಿಂಹ, ಈಗ ತಾನು ಟಿಕೆಟ್ ಆಕಾಂಕ್ಷಿಯಾಗಿರುವ ಕ್ಷೇತ್ರದ ಹೆಸರು ಘೋಷಿಸಿದ್ದಾರೆ. ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರತಾಪ್ ಸಿಂಹ, ವಿಧಾನಸಭಾ ಚುನಾವಣೆಗೆ ನಾನು ಮೈಸೂರಿನ ಚಾಮರಾಜ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಎಂದು ತಿಳಿಸಿದ್ದಾರೆ. ಅಭ್ಯರ್ಥಿಗೂ, ಆಕಾಂಕ್ಷಿಗೂ ವ್ಯತ್ಯಾಸವಿದೆ. ನಾನು ಟಿಕೆಟ್ ಆಕಾಂಕ್ಷಿ. ಅಭ್ಯರ್ಥಿ […]

ಕನ್ನಡ ದುನಿಯಾ 15 Jan 2026 2:28 pm

ಭಾರತದ ಅತಿ ಉದ್ದದ ರಸ್ತೆ NH-44: ಶ್ರೀನಗರದಿಂದ ಕನ್ಯಾಕುಮಾರಿವರೆಗೆ ಮತ್ತು ಅದರ ನಿರ್ಮಾಣ ವೆಚ್ಚ

ಭಾರತವು ಸುಮಾರು 599 ರಾಷ್ಟ್ರೀಯ ಹೆದ್ದಾರಿಗಳನ್ನು ಹೊಂದಿದ್ದು, ಅವುಗಳಲ್ಲಿ ಎನ್-ಎಚ್ 44 ಅತ್ಯಂತ ಉದ್ದವಾದ ಮತ್ತು ಪ್ರಮುಖವಾದ ಹೆದ್ದಾರಿಯಾಗಿದೆ. ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಿಂದ ಆರಂಭವಾಗಿ ತಮಿಳುನಾಡಿನ ಕನ್ಯಾಕುಮಾರಿಯವರೆಗೆ ಒಟ್ಟು 3,745 ಕಿಲೋಮೀಟರ್ ದೂರವನ್ನು ಇದು ಕ್ರಮಿಸುತ್ತದೆ. ಈ ಹೆದ್ದಾರಿಯು ದೇಶದ ಉತ್ತರ ಮತ್ತು ದಕ್ಷಿಣ ತುದಿಗಳನ್ನು ಬೆಸೆಯುವ ಪ್ರಮುಖ ಕೊಂಡಿಯಾಗಿದೆ. ಹಲವು ಹೆದ್ದಾರಿಗಳ ಸಂಗಮ ಎನ್-ಎಚ್ 44 ಎಂಬುದು ಕೇವಲ ಒಂದೇ ರಸ್ತೆಯಲ್ಲ. ಈ ಮೊದಲು ಚಾಲ್ತಿಯಲ್ಲಿದ್ದ ಎನ್-ಎಚ್ 1ಎ, ಎನ್-ಎಚ್ 1, ಎನ್-ಎಚ್ 2, […]

ಕನ್ನಡ ದುನಿಯಾ 15 Jan 2026 2:16 pm

‘ರಾಜೀವ್ ಗೌಡ’ನನ್ನು ಪಕ್ಷದಿಂದ ಉಚ್ಛಾಟಿಸುತ್ತೀರಾ.? ಅಧಿಕಾರಿಯನ್ನೇ ವರ್ಗಾವಣೆ ಮಾಡುತ್ತೀರಾ? : ಬಿಜೆಪಿ ಪ್ರಶ್ನೆ

ಬೆಂಗಳೂರು : ರಾಜೀವ್ ಗೌಡನನ್ನು ಪಕ್ಷದಿಂದ ಉಚ್ಛಾಟಿಸುತ್ತೀರಾ.? ಅಥವಾ ಅಧಿಕಾರಿಯನ್ನೇ ವರ್ಗಾವಣೆ ಮಾಡುತ್ತೀರಾ? ಎಂದು ಸರ್ಕಾರಕ್ಕೆ ಬಿಜೆಪಿ ಪ್ರಶ್ನೆ ಮಾಡಿದೆ. ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿದ ಬಿಜೆಪಿ ‘ಬಳ್ಳಾರಿಯಲ್ಲಿ ಬ್ಯಾನರ್ ನೆಪವಾಗಿಟ್ಟುಕೊಂಡು ಬಿಜೆಪಿ ನಾಯಕರನ್ನು ಹತ್ಯೆಗೈಯಲು ಸಂಚು ರೂಪಿಸಿದ್ದ ಕಾಂಗ್ರೆಸ್ ನಾಯಕರು, ಇದೀಗ ಶಿಡ್ಲಘಟ್ಟದಲ್ಲಿ ಸರ್ಕಾರಿ ಅಧಿಕಾರಿಗೆ ಅವಾಚ್ಯವಾಗಿ ನಿಂದಿಸಿದ್ದಾರೆ’. ‘ಕಾಂಗ್ರೆಸ್ಸಿನ ಬೀದಿ ರೌಡಿಗಳಿಂದಾಗಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಬಳ್ಳಾರಿ ಪ್ರಕರಣದಲ್ಲಿ ಸಂಚು ರೂಪಿಸಿದ ಕಾಂಗ್ರೆಸ್ ಶಾಸಕನನ್ನು ಸಿದ್ದರಾಮಯ್ಯ ಸರ್ಕಾರವೇ ಮುಂದೆ […]

ಕನ್ನಡ ದುನಿಯಾ 15 Jan 2026 2:08 pm

ವಿರಾಟ್ ಕೊಹ್ಲಿಯನ್ನು ಅಪ್ಪಿಕೊಂಡಿದ್ದಕ್ಕೆ ಬಿತ್ತು ಕೆನ್ನೆಗೆ ಪೆಟ್ಟು ಭದ್ರತಾ ವೈಫಲ್ಯದ ಬೆನ್ನಲ್ಲೇ ಅಭಿಮಾನಿಯ ಮೇಲೆ ಅಧಿಕಾರಿಯ ದರ್ಪ

ರಾಜ್‌ಕೋಟ್‌ನಲ್ಲಿ ನಡೆದ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಎರಡನೇ ಏಕದಿನ ಪಂದ್ಯದ ವೇಳೆ ಮೈದಾನದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರನ್ನು ಅಪ್ಪಿಕೊಳ್ಳಲು ಭದ್ರತಾ ಕೋಟೆಯನ್ನು ಭೇದಿಸಿ ಮೈದಾನಕ್ಕೆ ನುಗ್ಗಿದ ಅಭಿಮಾನಿಯೊಬ್ಬನಿಗೆ ಪಂದ್ಯದ ಅಧಿಕಾರಿಗಳು ಕಪಾಳಮೋಕ್ಷ ಮಾಡಿರುವ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕೊಹ್ಲಿ ಮನವಿಗೆ ಬೆಲೆ ನೀಡದ ಅಧಿಕಾರಿಗಳು ನಿರಂಜನ್ ಶಾ ಸ್ಟೇಡಿಯಂನಲ್ಲಿ ಪಂದ್ಯ ನಡೆಯುತ್ತಿದ್ದಾಗ, ಕೊಹ್ಲಿ ಅವರ ಕಟ್ಟಾ ಅಭಿಮಾನಿಯೊಬ್ಬ ಭದ್ರತಾ ಸಿಬ್ಬಂದಿಯ ಕಣ್ಣು ತಪ್ಪಿಸಿ ಮೈದಾನದೊಳಗೆ […]

ಕನ್ನಡ ದುನಿಯಾ 15 Jan 2026 1:59 pm

ಕೆರೆಯಲ್ಲಿ ಈಜಲು ಹೋಗಿದ್ದಾಗ ದುರಂತ: ಇಬ್ಬರು ಕಾಲೇಜು ವಿದ್ಯಾರ್ಥಿಗಳು ದುರ್ಮರಣ

ರಾಮನಗರ: ಕೆರೆಯಲ್ಲಿ ಈಜಲು ತೆರಳಿದ್ದ ಕಾಅಲೇಜು ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರದ ಕನಕಪುರ ತಾಲೂಕಿನಲ್ಲಿ ನಡೆದಿದೆ. ಕನಕಪುರದ ಕಬ್ಬಾಳು ಕೆರೆಯಲ್ಲಿ ಈ ದುರಂತ ಸಂಭವಿಸಿದೆ. ತನುಷ್ (18) ಹಾಗೂ ಸಂತೋಷ್ (19) ಮೃತ ವಿದ್ಯಾರ್ಥಿಗಳು. ಬೆಂಗಳೂರಿನ ಬನಶಂಕರಿ ಕಾಲೇಜಿನ ವಿದ್ಯಾರ್ಥಿಗಳು ಎಂದು ತಿಳಿದುಬಂದಿದೆ. ಬೆಂಗಳೂರಿನಿಂದ ಸುಮಾರು 11 ವಿದ್ಯಾರ್ಥಿಗಳು ಕಬ್ಬಾಳು ದೇವಸ್ಥಾನಕ್ಕೆ ಬಂದಿದ್ದರು. ಬಳಿಕ ಕೆರೆಯಲ್ಲಿ ಈಜಲು ತೆರಳಿದ್ದರು. ಈ ವೇಳೆ ಓರ್ವ ವಿದ್ಯಾರ್ಥಿ ನೀರಿನಲ್ಲಿ ಮುಳುಗಿದ್ದಾನೆ. ಆತನನ್ನು ರಕ್ಷಿಸಲು […]

ಕನ್ನಡ ದುನಿಯಾ 15 Jan 2026 1:55 pm

SHOCKING : ಅಮೆರಿಕದಲ್ಲಿ ತನ್ನ ಇಬ್ಬರು ಗಂಡು ಮಕ್ಕಳನ್ನು ಹತ್ಯೆಗೈದ ಭಾರತೀಯ ಮೂಲದ ಮಹಿಳೆ ಅರೆಸ್ಟ್.!

ತನ್ನ ಇಬ್ಬರು ಗಂಡು ಮಕ್ಕಳನ್ನು ಹತ್ಯೆಗೈದ ಆರೋಪದಲ್ಲಿ ಭಾರತೀಯ ಮೂಲದ ಮಹಿಳೆಯೋರ್ವರನ್ನು ಬಂಧಿಸಲಾಗಿದೆ. ನ್ಯೂಜೆರ್ಸಿಯಲ್ಲಿ 35 ವರ್ಷದ ಭಾರತೀಯ ಮೂಲದ ಮಹಿಳೆ ತನ್ನ ಇಬ್ಬರು ಮಕ್ಕಳನ್ನು ಕೊಲೆ ಮಾಡಿದ್ದಾಳೆ ಎಂದು ಆರೋಪಿಸಲಾಗಿದ್ದು, ಪೊಲೀಸರು ಬಂಧಿದ್ದಾರೆ. ತನಿಖೆಯ ಪ್ರಕಾರ, ನ್ಯೂಜೆರ್ಸಿಯ ಹಿಲ್ಸ್ಬರೋದ ಪ್ರಿಯತರ್ಸಿನಿ ನಟರಾಜನ್ ಎಂದು ಗುರುತಿಸಲಾದ ಆರೋಪಿ ಮಂಗಳವಾರ ತನ್ನ ಇಬ್ಬರು ಮಕ್ಕಳ ಸಾವಿಗೆ ಕಾರಣಳಾಗಿದ್ದಾಳೆ. ಜನವರಿ 13 ರಂದು ಮಕ್ಕಳ ತಂದೆ ಸಂಜೆ ಕಾನೂನು ಜಾರಿ ಸಂಸ್ಥೆಗಳಿಗೆ (911) ಕರೆ ಮಾಡಿದ್ದಾರೆ ಎಂದು ಸೋಮರ್ಸೆಟ್ ಕೌಂಟಿ […]

ಕನ್ನಡ ದುನಿಯಾ 15 Jan 2026 1:53 pm

ಬೆಂಗಳೂರಿನಲ್ಲಿ ಶುಕ್ರವಾರ ಐಷಾರಾಮಿ ಚಿತ್ರಮಂದಿರ ಆರಂಭ

ಬೆಂಗಳೂರು ನಗರದಲ್ಲಿ ಶುಕ್ರವಾರ ಬಹುಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಐಷಾರಾಮಿ ಮಲ್ಟಿಪ್ಲೆಕ್ಸ್ ಚಿತ್ರಮಂದಿರ ಉದ್ಘಾಟನೆಯಾಗಲಿದೆ. ನಗರದ ಖ್ಯಾತ ‘ಕಪಾಲಿ’ ಚಿತ್ರಮಂದಿರವಿದ್ದ ಜಾಗದಲ್ಲಿಯೇ ಈ ಹೊಸ ಮಲ್ಟಿಪ್ಲೆಕ್ಸ್ ನಿರ್ಮಾಣಗೊಂಡಿದೆ. ಈಗಾಗಲೇ ಹೈದರಾಬಾದ್‌ನ ಗಚಿಬೌಲಿ ಪ್ರದೇಶದಲ್ಲಿಎಎಂಬಿಸಿನಿಮಾಸ್ ಮಲ್ಟಿಪ್ಲೆಕ್ಸ್‌‌ ಕಾರ್ಯಾರಂಭ ಮಾಡಿದೆ. ಆಂಧ್ರಪ್ರದೇಶದ ಸಿನಿಮಾ ವಿತರಣಾ ಸಂಸ್ಥೆಗಳ ಪೈಕಿ ಒಂದಾಗಿರುವ ಏಷ್ಯನ್ ಸಿನಿಮಾಸ್ ಜೊತೆಗೂಡಿ ನಟ ಮಹೇಶ್ ಬಾಬು ಬೆಂಗಳೂರಲ್ಲಿಯೂ ಮಲ್ಟಿಪ್ಲೆಕ್ಸ್ ನಿರ್ಮಾಣ ಮಾಡಿದ್ದಾರೆ. ಇದು ದಕ್ಷಿಣ ಭಾರತದ ಮೊದಲ ಡಾಲ್ಬಿ ಅಟ್ಮಾಸ್ (Dolby Atmos) ಸೌಂಡ್, ವಿಷನ್ ಅನುಭವ ನೀಡುವ […]

ಕನ್ನಡ ದುನಿಯಾ 15 Jan 2026 1:37 pm

ರುಚಿಕರ ಉಪ್ಪಿನಕಾಯಿ ವರ್ಷವಿಡೀ ಫ್ರೆಶ್ ಆಗಿರಬೇಕೆ? ಇಲ್ಲಿದೆ ನೋಡಿ ಸಿಂಪಲ್ ಅಂಡ್ ಬೆಸ್ಟ್ ಉಪ್ಪಿನಕಾಯಿ ಫಾರ್ಮುಲಾ

ಊಟಕ್ಕೆ ಹೆಚ್ಚಿನ ರುಚಿ ನೀಡುವ ಉಪ್ಪಿನಕಾಯಿ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ? ಆದರೆ ಮನೆಯಲ್ಲಿ ತಯಾರಿಸಿದ ಉಪ್ಪಿನಕಾಯಿ ಕೆಲವೇ ದಿನಗಳಲ್ಲಿ ಬೂಸ್ಟ್ ಬರುವುದು ಅಥವಾ ಹಾಳಾಗುವುದು ಅನೇಕರ ದೂರು. ಮಾರುಕಟ್ಟೆಯಲ್ಲಿ ಸಿಗುವ ಉಪ್ಪಿನಕಾಯಿಗಳಿಗಿಂತ ಮನೆಯಲ್ಲಿ ಮಾಡಿದ ಉಪ್ಪಿನಕಾಯಿ ಆರೋಗ್ಯಕರವಾದರೂ, ಅದನ್ನು ಸರಿಯಾದ ರೀತಿಯಲ್ಲಿ ಸಂಗ್ರಹಿಸದಿದ್ದರೆ ಬೇಗನೆ ಹಾಳಾಗುತ್ತದೆ. ನಿಮ್ಮ ಕೈರುಚಿಯ ಉಪ್ಪಿನಕಾಯಿ ದೀರ್ಘಕಾಲ ಬಾಳಿಕೆ ಬರಲು ಇಲ್ಲಿವೆ ಐದು ಪ್ರಮುಖ ಸಲಹೆಗಳು. ೧. ಸರಿಯಾದ ಜಾಡಿ ಮತ್ತು ತುಂಬುವ ವಿಧಾನ ಉಪ್ಪಿನಕಾಯಿ ಹಾಕಲು ಯಾವಾಗಲೂ ಅಗಲವಾದ ಬಾಯಿ […]

ಕನ್ನಡ ದುನಿಯಾ 15 Jan 2026 1:26 pm

ಬೆಳಿಗ್ಗೆ ಎದ್ದ ತಕ್ಷಣ ಬಿಸಿ ನೀರು ಕುಡಿದರೆ ಏನಾಗುತ್ತೆ? ನಿಮ್ಮ ದೇಹದಲ್ಲಿ ಆಗುವ ಈ ಬದಲಾವಣೆಗಳನ್ನು ಕೇಳಿದರೆ ಅಚ್ಚರಿ ಪಡ್ತೀರಾ

ಬೆಳಿಗ್ಗೆ ಎದ್ದ ತಕ್ಷಣ ಒಂದು ಲೋಟ ಬಿಸಿ ನೀರು ಕುಡಿಯುವುದು ಕೇವಲ ಹಳೆಯ ಸಂಪ್ರದಾಯವಲ್ಲ, ಇದೊಂದು ಅತ್ಯುತ್ತಮ ಆರೋಗ್ಯಕರ ಅಭ್ಯಾಸ. ತಣ್ಣೀರು ಕುಡಿಯುವುದಕ್ಕಿಂತ ಬಿಸಿ ನೀರು ಕುಡಿಯುವುದು ದೇಹಕ್ಕೆ ಹೆಚ್ಚಿನ ಲಾಭಗಳನ್ನು ನೀಡುತ್ತದೆ ಎಂದು ಆರೋಗ್ಯ ತಜ್ಞರು ಅಭಿಪ್ರಾಯಪಡುತ್ತಾರೆ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬಿಸಿ ನೀರು ಕುಡಿಯುವುದರಿಂದ ನಿಮ್ಮ ದೇಹದಲ್ಲಿ ಆಗುವ ಬದಲಾವಣೆಗಳ ಕುರಿತಾದ ಮಾಹಿತಿ ಇಲ್ಲಿದೆ. ಜೀರ್ಣಕ್ರಿಯೆ ಸುಲಭವಾಗುತ್ತದೆ: ಮಲಬದ್ಧತೆಯಿಂದ ಬಳಲುತ್ತಿರುವವರಿಗೆ ಬಿಸಿ ನೀರು ರಾಮಬಾಣ. ಬೆಳಿಗ್ಗೆ 98.6 ಡಿಗ್ರಿ ಫ್ಯಾರನ್‌ಹೀಟ್ ಉಷ್ಣತೆಯ ನೀರನ್ನು ಕುಡಿಯುವುದರಿಂದ […]

ಕನ್ನಡ ದುನಿಯಾ 15 Jan 2026 1:10 pm

BREAKING : ‘ದಳಪತಿ ವಿಜಯ್’ಅಭಿನಯದ ‘ಜನ ನಾಯಗನ್’ಚಿತ್ರಕ್ಕೆ ಸುಪ್ರೀಂಕೋರ್ಟ್‌ ಬಿಗ್ ಶಾಕ್.!

ಜನ ನಾಯಗನ್ ಚಿತ್ರವನ್ನು ಮುಂದೂಡಿದ್ದಕ್ಕೆ ಸಂಬಂಧಿಸಿದಂತೆ ಸಿಬಿಎಫ್ಸಿ (ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ) ಅನುಮತಿ ಕೋರಿ ಕೆವಿಎನ್ ಪ್ರೊಡಕ್ಷನ್ಸ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಗುರುವಾರ ವಜಾಗೊಳಿಸಿದೆ. ಸೆನ್ಸಾರ್ ಪ್ರಮಾಣಪತ್ರವನ್ನು ಪಡೆಯಲು ನಿರ್ಮಾಪಕರು ವಿಫಲವಾದ ಕಾರಣ ವಿಜಯ್ ಅವರ ಚಿತ್ರವನ್ನು ಜನವರಿ 9 ರಂದು ಬಿಡುಗಡೆ ಮಾಡುವುದನ್ನು ಮುಂದೂಡಲಾಗಿದೆ. ತನ್ನ ಆದೇಶದಲ್ಲಿ, ಸುಪ್ರೀಂ ಕೋರ್ಟ್ ಅರ್ಜಿದಾರರಿಗೆ ಮದ್ರಾಸ್ ಹೈಕೋರ್ಟ್ಗೆ ಹಿಂತಿರುಗಲು ನಿರ್ದೇಶಿಸಿತು, ಹೈಕೋರ್ಟ್ನ ವಿಭಾಗೀಯ ಪೀಠದ ಮುಂದೆ ವಾದಗಳನ್ನು ಎತ್ತಬೇಕು ಎಂದು ಹೇಳಿತು, ಈ ಹಿಂದೆ “ಸುಳ್ಳು […]

ಕನ್ನಡ ದುನಿಯಾ 15 Jan 2026 1:05 pm

ರಾಜ್ಯ ರಾಜಕಾರಣಕ್ಕೆ ಬರುತ್ತೇನೆ: ಸಂಕ್ರಾಂತಿ ಹಬ್ಬದಂದೇ ಅಧಿಕೃತವಾಗಿ ಘೋಷಿಸಿದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ

ಬೆಂಗಳೂರು: ಹೆಚ್.ಡಿ.ಕುಮಾರಸ್ವಾಮಿ ಮತ್ತೆ ರಾಜ್ಯ ರಾಜಕಾರಣಕ್ಕೆ ಬರುತ್ತಾರೆ ಎಂಬ ಸುದ್ದಿ, ರಾಜಕೀಯ ವಲಯದಲ್ಲಿ ಭಾರಿ ಚರ್ಚೆಯಾಗುತ್ತಿರುವ ಬೆನ್ನಲ್ಲೇ ಸಂಕ್ರಾಂತಿ ಹಬ್ಬದ ದಿನವೇ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ರಾಜ್ಯ ರಾಜಕಾರಣಕ್ಕೆ ನಾನು ಮರಳುವುದಾಗಿ ಕೇಂದ್ರ ಸಚಿವ, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಘೋಷಿಸಿದ್ದಾರೆ. ನಾನು ರಾಜ್ಯ ರಾಜಕಾರಣದಿಂದ ದೂರವಾಗಿಲ್ಲ. ರಾಜ್ಯ ರಾಜಕರಣದಲ್ಲಿಯೇ ಇದ್ದೇನೆ. ಎಂದೂ ರಾಜ್ಯ ರಾಜಕಾರಣದಿಂದ ದೂರ ಸರುಯುವುದಿಲ್ಲ. ನಾನು ಎಲ್ಲಿ ಇರಬೇಕು ಎಂಬುದನ್ನು ರಾಜ್ಯದ ಜನತೆ ತೀರ್ಮಾ ಮಾಡುತ್ತಾರೆ ಎಂದು ಹೇಳಿದ್ದಾರೆ. ನಾವು ಮೈತ್ರಿ ಒಪ್ಪಂದ […]

ಕನ್ನಡ ದುನಿಯಾ 15 Jan 2026 1:02 pm

ದಿಢೀರ್ ಇಳಿಕೆಯಾದ ಚಿನ್ನದ ಬೆಲೆ, 10 ಗ್ರಾಂ ಬೆಲೆಯಲ್ಲಿ ₹820 ಇಳಿಕೆ: ಬೆಳ್ಳಿ ದರ ಮತ್ತೆ ಏರಿಕೆ 

ಬೆಂಗಳೂರು: ಕಳೆದ ಆರು ದಿನಗಳಿಂದ ಏರುಗತಿಯಲ್ಲಿದ್ದ ಚಿನ್ನದ ದರಕ್ಕೆ ಇಂದು ಬ್ರೇಕ್ ಬಿದ್ದಿದೆ. ಸಂಕ್ರಾಂತಿ ಹಬ್ಬ ಮುಗಿಯುತ್ತಿದ್ದಂತೆ ಬಂಗಾರದ ಬೆಲೆಯಲ್ಲಿ ದಿಢೀರ್ ಕುಸಿತ ಕಂಡಿದ್ದು, ಆಭರಣ ಖರೀದಿದಾರರಲ್ಲಿ ಕೊಂಚ ನೆಮ್ಮದಿ ತಂದಿದೆ. ಆದರೆ, ಮತ್ತೊಂದೆಡೆ ಬೆಳ್ಳಿ ದರದ ನಾಗಾಲೋಟ ಮಾತ್ರ ಮುಂದುವರಿದಿದೆ.ಅಂತರಾಷ್ಟ್ರೀಯ ಮಾರುಕಟ್ಟೆಯ ಏರಿಳಿತದ ಪರಿಣಾಮ, ಭಾರತದಲ್ಲಿ ಇಂದು ಪ್ರತಿ 10 ಗ್ರಾಂ ಚಿನ್ನದ ಬೆಲೆಯಲ್ಲಿ ಸುಮಾರು 820 ರೂಪಾಯಿ ಇಳಿಕೆಯಾಗಿದೆ.ಮುಂಬರುವ ಮದುವೆ ಸೀಸನ್‌ಗೂ (Wedding Season) ಮುನ್ನ ಚಿನ್ನ ಖರೀದಿಸಲು ಯೋಚಿಸುತ್ತಿರುವವರಿಗೆ ಇಂದಿನ ದರ ವಿವರ […]

ಕನ್ನಡ ದುನಿಯಾ 15 Jan 2026 12:50 pm

Sleep FM : ಕೇವಲ ಒಂದು ರಾತ್ರಿಯ ನಿದ್ರೆಯಿಂದ ಭವಿಷ್ಯದ 130 ಕಾಯಿಲೆಗಳನ್ನು ಗುರುತಿಸಬಹುದು : ಸಂಶೋಧನೆ

ನಮ್ಮ ದೇಹದ ಸ್ಥಿತಿ ಅಸ್ವಸ್ಥವಾದಾಗ ಮಾತ್ರ ನೀವು ಒಂದು ರೋಗದ ಬಗ್ಗೆ ತಿಳಿದುಕೊಳ್ಳುತ್ತಿದ್ದಿರಿ. ಆದರೆ ವಿಜ್ಞಾನದ ಬೆಳವಣಿಗೆಯೊಂದಿಗೆ, ನೀವು ಈಗ ರೋಗದ ತೀವ್ರತೆಯನ್ನು ಮತ್ತು ಭವಿಷ್ಯದಲ್ಲಿ ನೀವು ಯಾವ ಕಾಯಿಲೆಗಳಿಂದ ಬಳಲುತ್ತೀರಿ ಎಂಬುದನ್ನು ನಿರ್ಧರಿಸಬಹುದು. ಅದೇ ರೀತಿ, ಸಂಶೋಧಕರು ಕೃತಕ ಬುದ್ಧಿಮತ್ತೆ ಮಾದರಿಯನ್ನು ಅಭಿವೃದ್ಧಿಪಡಿಸಿದ್ದಾರೆ, ಅದು ನಿದ್ರೆಯ ದತ್ತಾಂಶವನ್ನು ಆಧರಿಸಿ ಭವಿಷ್ಯದಲ್ಲಿ ಒಬ್ಬ ವ್ಯಕ್ತಿಯು 130 ಕಾಯಿಲೆಗಳಿಗೆ ತುತ್ತಾಗುವ ಅಪಾಯವನ್ನು ಊಹಿಸಬಹುದು. ಈ ಮಾದರಿಯನ್ನು ಸ್ಲೀಪ್ FM ಎಂದು ಹೆಸರಿಸಲಾಗಿದೆ. ಈ ಮಾದರಿಯನ್ನು US ನ ಸ್ಟ್ಯಾನ್ಫೋರ್ಡ್ […]

ಕನ್ನಡ ದುನಿಯಾ 15 Jan 2026 12:49 pm

ಬೆಂಗಳೂರು ನಗರದಲ್ಲಿ 10 ಹೊಸ ಫ್ಲೈ ಓವರ್ ನಿರ್ಮಾಣ

ಬೆಂಗಳೂರು ನಗರದ ಸಂಚಾರ ದಟ್ಟಣೆ ಸಮಸ್ಯೆಗೆ ಹೊಸ ಹೊಸ ಪರಿಹಾರವನ್ನು ಹುಡುಕಲಾಗುತ್ತಿದೆ. ಅತಿ ಹೆಚ್ಚು ದಟ್ಟಣೆ ಉಂಟಾಗುವ ಪ್ರದೇಶಗಳನ್ನು ಗುರುತಿಸಲಾಗುತ್ತಿದೆ. ಮೆಟ್ರೋ ಮಾರ್ಗ ಹಾದು ಹೋಗುವಲ್ಲಿ ಡಬಲ್ ಡೆಕ್ಕರ್ ಫ್ಲೈ ಓವರ್ ನಿರ್ಮಾಣ ಮಾಡಿ, ಸಂಚಾರ ಸಮಸ್ಯೆ ಪರಿಹಾರ ಮಾಡಲು ಪ್ರಯತ್ನ ಮಾಡಲಾಗುತ್ದೆ. ಈಗ ಬೆಂಗಳೂರು ಸ್ಮಾರ್ಟ್ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್ (ಬಿ-ಸ್ಮೈಲ್) ಹೊಸ ತಂಡವನ್ನು ರಚನೆ ಮಾಡಲು ಮುಂದಾಗಿದೆ. ಬಿ-ಸ್ಮೈಲ್‌ನ ಈ ಅಧಿಕಾರಿಗಳ ತಂಡ ನಗರದಲ್ಲಿ ಹೊಸ 10 ಫ್ಲೈ ಓವರ್ ನಿರ್ಮಾಣದ ಕುರಿತು ಯೋಜನೆ ರೂಪಿಸಲಿದ್ದಾರೆ. […]

ಕನ್ನಡ ದುನಿಯಾ 15 Jan 2026 12:38 pm

ಪ್ರೀತಿಯ ಹೆಸರಲ್ಲಿ ವಂಚನೆ: ಡೆತ್ ನೋಟ್ ಬರೆದಿಟ್ಟು ಯುವತಿ ಆತ್ಮಹತ್ಯೆಗೆ ಯತ್ನ

ರಾಮನಗರ: ಪ್ರೀತಿ ಹೆಸರಲ್ಲಿ ಯುವತಿಯೊಂದಿಗೆ ದೈಹಿಕ ಸಂಪರ್ಕ ನಡೆಸಿ ಯುವಕನೊಬ್ಬ ಕೈಕೊಟ್ಟಿದ್ದು, ಮನನೊಂದ ಯುವತಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ರಾಮನಗರದಲ್ಲಿ ನಡೆದಿದೆ. 26 ವರ್ಷದ ಯುವತಿ ಆತ್ಮಹತ್ಯೆಗೆ ಯತ್ನಿಸುದವಳು. ರಾಮನಗರದ ತೆರಿಗೆದೊಡ್ಡಿ ಗ್ರಾಮದ ಯುವಕ ಅರುಣ್ ನಾಯ್ಕ್ ಎಂಬಾತ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ಪ್ರೀತಿ-ಪ್ರೇಮ ಎಂದು ಸುತ್ತಾಡಿದ್ದಲ್ಲದೇ ಆಕೆಯೊಂದಿಗೆ ದೈಹಿಕ ಸಂಪರ್ಕವನ್ನು ಬೆಳೆಸಿದ್ದ. ಈಗ ಮದುವೆಯಾಗದೇ ನಾಪತ್ತೆಯಾಗಿದ್ದಾನೆ. ಕಳೆದ ಒಂದೂವರೆ ವರ್ಷಗಳಿಂದಲೂ ಯುವತಿಯ ಕುಟುಂಬದವರೂ ಮದುವೆಗೆ ಒಪ್ಪಿದ್ದರು. ಆದರೆ ಈಗ ಮದುವೆಯಾಗದೇ ಯುವತಿಗೆ […]

ಕನ್ನಡ ದುನಿಯಾ 15 Jan 2026 12:38 pm