SENSEX
NIFTY
GOLD
USD/INR

Weather

26    C

ಡಿಜಿಟಲ್ ಸುದ್ದಿ ಮೂಲಗಳು

... ...View News by News Source

ಆಯುಷ್ಮಾನ್ ಯೋಜನೆಯಡಿ ಪ್ರಸೂತಿ ತೀವ್ರ ನಿಗಾ ಘಟಕ ಪ್ಯಾಕೇಜ್ ಹೆಚ್ಚಿನ ದರ ನಿಗದಿಗೆ ಅನುಮೋದನೆ

ಆಯುಷ್ಮಾನ್ ಭಾರತ್ -ಆರೋಗ್ಯ ಕರ್ನಾಟಕ (AB PMJAY CM’s ArK) ಯೋಜನೆಯಡಿಯಲ್ಲಿ ಸುವರ್ಣ ಆರೋಗ್ಯ ಸುರಕ್ಷ ಟ್ರಸ್ಟ್ (SAST) ಎಂಪನೇಲ್ಡ್ ಆರೋಗ್ಯ ಸೌಲಭ್ಯಗಳಿಗಾಗಿ ಪ್ರಸೂತಿ ತೀವ್ರ ನಿಗಾ ಘಟಕ (ICU) ಪ್ಯಾಕೇಜ್ ದರ ನಿಗದಿ ಮಾಡಿ ಸರ್ಕಾರ ಆದೇಶಿಸಿದೆ. ಸುವರ್ಣ ಸುರಕ್ಷಾ ಆರೋಗ್ಯ ಟ್ರಸ್ಟ್ (SAST) ನ ಎಂಪನೇಲ್ ಮಾಡಲಾದ ಸರ್ಕಾರಿ ಮತ್ತು ಖಾಸಗಿ ಆರೋಗ್ಯ ಸೌಲಭ್ಯಗಳಿಗೆ ಪ್ರಸ್ತಾವಿತ ಪ್ರಸೂತಿ ಸಂಕೇತಗಳು ಮತ್ತು ಪ್ರಸೂತಿ ತೀವ್ರ ನಿಗಾ ಘಟಕ (ICU) ಪ್ಯಾಕೇಜ್‌ಗಳಿಗೆ ಹೆಚ್ಚಿದ ದರಗಳಿಗೆ ಅನುಮೋದನೆ ನೀಡಲಾಗಿದೆ. […]

ಕನ್ನಡ ದುನಿಯಾ 9 Feb 2026 7:26 pm

BREAKING: ಟಿ20 ವಿಶ್ವಕಪ್ ಭಾರತ ಎದುರಿನ ಪಂದ್ಯ ಬಹಿಷ್ಕರಿಸಿ 3 ಬೇಡಿಕೆ ಇಟ್ಟ ಪಾಕಿಸ್ತಾನಕ್ಕೆ ಬಿಗ್ ಶಾಕ್: ದ್ವಿಪಕ್ಷೀಯ ಸರಣಿ ಬೇಡಿಕೆ ತಿರಸ್ಕರಿಸಿದ ಐಸಿಸಿ

ನವದೆಹಲಿ: ಟಿ20 ವಿಶ್ವಕಪ್ ಬಹಿಷ್ಕಾರ ವಿವಾದದ ನಡುವೆ ಭಾರತದೊಂದಿಗೆ ದ್ವಿಪಕ್ಷೀಯ ಸರಣಿಗೆ ಪಾಕಿಸ್ತಾನದ ಬೇಡಿಕೆಯನ್ನು ಐಸಿಸಿ ತಿರಸ್ಕರಿಸಿದೆ. ಹೌದು ಪ್ರಮುಖ ಬೆಳವಣಿಗೆಯೊಂದರಲ್ಲಿ ಭಾರತೀಯ ತಂಡದೊಂದಿಗೆ ದ್ವಿಪಕ್ಷೀಯ ಸರಣಿಯನ್ನು ಪುನರಾರಂಭಿಸಬೇಕೆಂಬ ಪಿಸಿಬಿಯ(ಪಾಕಿಸ್ತಾನ ಕ್ರಿಕೆಟ್ ಮಂಡಳಿ) ಬೇಡಿಕೆಯನ್ನು ಐಸಿಸಿ (ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ) ತಿರಸ್ಕರಿಸಿದೆ. 2026 ರ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ಸರ್ಕಾರ ಭಾರತದ ವಿರುದ್ಧ ಆಡಲು ತಮ್ಮ ತಂಡಕ್ಕೆ ಅವಕಾಶ ನೀಡಲು ನಿರಾಕರಿಸಿದ ಕಾರಣ ಸಭೆ ನಡೆದ ನಂತರ ಪಿಸಿಬಿ ಅಂತಹ ಬೇಡಿಕೆಗಳನ್ನು ಮುಂದಿಟ್ಟಿದೆ. ಟಿ20 ವಿಶ್ವಕಪ್‌ನಲ್ಲಿ ನಡೆಯುತ್ತಿರುವ […]

ಕನ್ನಡ ದುನಿಯಾ 9 Feb 2026 7:05 pm

ALERT : ಹುಲಿ ಎದುರಾದರೆ ಹೆದರಬೇಡಿ, ಈ ಜೀವ ರಕ್ಷಕ ಸೂತ್ರಗಳನ್ನು ಪಾಲಿಸಿ !

ಹುಲಿ-ಮಾನವ ಸಂಘರ್ಷ (Tiger-Human Conflict) ಎಂಬುದು ಇಂದಿನ ದಿನಗಳಲ್ಲಿ ಒಂದು ಗಂಭೀರ ಸವಾಲಾಗಿದೆ. ಅರಣ್ಯ ಪ್ರದೇಶಗಳ ನಾಶ ಮತ್ತು ಜನವಸತಿ ಪ್ರದೇಶಗಳ ವಿಸ್ತರಣೆಯಿಂದಾಗಿ ಈ ಸಮಸ್ಯೆ ಉಲ್ಬಣಿಸುತ್ತಿದೆ. ಹುಲಿಗಳ ಸಂಘರ್ಷ ಹೆಚ್ಚಾಗುತ್ತಿರುವ ಇಂದಿನ ದಿನಗಳಲ್ಲಿ ಈ ಕೆಳಗಿನ ಸುರಕ್ಷತಾ ಕ್ರಮಗಳು ಅತ್ಯಂತ ನಿರ್ಣಾಯಕವಾಗಿವೆ. ಇವುಗಳನ್ನು ‘ಜೀವ ರಕ್ಷಕ ಸೂತ್ರಗಳು’ ಎಂದು ಪರಿಗಣಿಸಬಹುದು. ಅರಣ್ಯಗಳು ಚಿಕ್ಕದಾಗುತ್ತಿರುವುದರಿಂದ ಹುಲಿಗಳಿಗೆ ತಮ್ಮದೇ ಆದ ‘ಟೆರಿಟರಿ’ (ಭೂಪ್ರದೇಶ) ನಿರ್ಮಿಸಿಕೊಳ್ಳಲು ಜಾಗ ಸಾಲುತ್ತಿಲ್ಲ.ಕಾಡಿನಲ್ಲಿ ಜಿಂಕೆ, ಕಾಡುಹಂದಿಗಳ ಸಂಖ್ಯೆ ಕಡಿಮೆಯಾದಾಗ ಹುಲಿಗಳು ಆಹಾರಕ್ಕಾಗಿ ಹಳ್ಳಿಗಳತ್ತ ಮುಖ […]

ಕನ್ನಡ ದುನಿಯಾ 9 Feb 2026 6:57 pm

ಗೃಹಲಕ್ಷ್ಮಿ ಫಲಾನುಭವಿಗಳಿಗೆ ಜೀವಿತ ಪ್ರಮಾಣ ಪತ್ರ ಕಡ್ಡಾಯ: ಗ್ಯಾರಂಟಿ ನಿಲ್ಲಿಸುವ ಹುನ್ನಾರ: ಆರ್. ಅಶೋಕ್ ಆಕ್ರೋಶ

ಬೆಂಗಳೂರು: ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳು ಜೀವಿತ ಪ್ರಮಾಣ ಪತ್ರ(ಲೈಫ್ ಸರ್ಟಿಫಿಕೇಟ್) ಕೊಡಬೇಕು ಎನ್ನುವ ಹೊಸ ನಿಯಮ ಜಾರಿಗೊಳಿಸಲು ಸರ್ಕಾರ ಮುಂದಾಗಿರುವುದಕ್ಕೆ ವಿಧಾನಸಭೆ ವಿಪಕ್ಷ ನಾಯಕ ಾರ್. ಅಶೋಕ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಸರ್ಕಾರ ಬಂದ ಮೇಲೆ ಎರಡು ಲಕ್ಷ ಕೋಟಿ ರೂ. ಸಾಲ ಮಾಡಿದೆ. ಈ ಬಜೆಟ್ ಗೆ ಸಾಲದ ಮೊತ್ತ ಮೂರು ಲಕ್ಷ ಕೋಟಿ ರೂ. ಆಗಲಿದೆ. ಅವರ ಬಳಿ ಹಣವಿಲ್ಲದ ಕಾರಣ ಈಗಾಗಲೇ ಪಡಿತರ ಚೀಟಿಗಳನ್ನು ರದ್ದು ಮಾಡುತ್ತಿದ್ದಾರೆ. ಈಗ ಗ್ಯಾರಂಟಿ ಯೋಜನೆಗಳನ್ನು ಕಡಿತ […]

ಕನ್ನಡ ದುನಿಯಾ 9 Feb 2026 6:48 pm

SHOCKNG : 8 ವರ್ಷದಿಂದ ಸುಖ ನೀಡದ ಪತ್ನಿ : ಬೇಸತ್ತು ಖಾಸಗಿ ಅಂಗವನ್ನೇ ಕತ್ತರಿಸಿಕೊಂಡ ಪತಿ.!

“ದಾಂಪತ್ಯ ಜೀವನದಲ್ಲಿ ದೈಹಿಕ ಸುಖದ ಕೊರತೆ ಎಂತಹ ಘೋರ ಅನಾಹುತಕ್ಕೆ ಕಾರಣವಾಗಬಹುದು ಎಂಬುದಕ್ಕೆ ಈ ಬೆಚ್ಚಿಬೀಳಿಸುವ ಘಟನೆಯೇ ಸಾಕ್ಷಿ. ಕಳೆದ ಎಂಟು ವರ್ಷಗಳಿಂದ ಪತ್ನಿಯು ದೈಹಿಕ ಸಂಬಂಧಕ್ಕೆ ಸಹಕರಿಸುತ್ತಿಲ್ಲ ಎಂಬ ಹತಾಶೆಯಿಂದ ಮನನೊಂದ ಪತಿಯೊಬ್ಬ, ತನ್ನ ಜನನಾಂಗವನ್ನೇ ಕತ್ತರಿಸಿಕೊಂಡಿರುವ ದಾರುಣ ಘಟನೆ ಉತ್ತರ ಪ್ರದೇಶದ ಸೀತಾಪುರದಲ್ಲಿ ನಡೆದಿದೆ. ಸಂಸಾರದಲ್ಲಿನ ಅತೃಪ್ತಿ ಮನುಷ್ಯನನ್ನು ಯಾವ ಮಟ್ಟದ ಹುಚ್ಚು ಸಾಹಸಕ್ಕೆ ತಳ್ಳುತ್ತದೆ ಎಂಬುದನ್ನು ಈ ಘಟನೆ ತೋರಿಸಿಕೊಟ್ಟಿದೆ. ಉತ್ತರ ಪ್ರದೇಶದ ಸೀತಾಪುರ ಜಿಲ್ಲೆಯಲ್ಲಿ ಅತ್ಯಂತ ಆಘಾತಕಾರಿ ಮತ್ತು ವಿಲಕ್ಷಣ ಘಟನೆಯೊಂದು […]

ಕನ್ನಡ ದುನಿಯಾ 9 Feb 2026 6:39 pm

SHOCKING: ತಡೆಗೋಡೆಗೆ ಆಟೋ ಡಿಕ್ಕಿ: ರುಂಡ, ಮುಂಡ ಬೇರ್ಪಟ್ಟು ಮಹಿಳೆ ಸಾವು

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕು ನಾಲೂರು ಸಮೀಪ ವೇಗವಾಗಿದ್ದ ಆಟೋ ತಡೆಗೋಡೆಗೆ ಡಿಕ್ಕಿ ಹೊಡೆದು ಸಂಭವಿಸಿದ ಭೀಕರ ಅಪಘಾತದಲ್ಲಿ ಆಟೋದಲ್ಲಿದ್ದ ಮಹಿಳೆ ರುಂಡ, ಮುಂಡ ಬೇರ್ಪಟ್ಟು ಸಾವನ್ನಪ್ಪಿದ್ದಾರೆ. ನಿಶ್ಮಿತಾ ಶೆಟ್ಟಿ(27) ಮೃತಪಟ್ಟವರು. ಅವರ ಪತಿ ಸುದರ್ಶನ್ ಶೆಟ್ಟಿ(35), ಪುತ್ರ ಸಂಚಿತ್(7) ಗಾಯಗೊಂಡಿದ್ದು ತೀರ್ಥಹಳ್ಳಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಟೋ ಚಾಲಕ ಯಲ್ಲಪ್ಪ ಕೂಡ ಗಾಯಗೊಂಡಿದ್ದಾರೆ. ಆಟೋ ಚಾಲಕನ ನಿರ್ಲಕ್ಷವೇ ಅಪಘಾತಕ್ಕೆ ಕಾರಣವೆನ್ನಲಾಗಿದೆ. ತೀರ್ಥಹಳ್ಳಿ ಪಟ್ಟಣದ ಆಗುಂಬೆ ಬಸ್ ನಿಲ್ದಾಣ ಸಮೀಪದ ಹೋಟೆಲ್ ಮಾಲೀಕರಾದ ಸುದರ್ಶನ್ ಶೆಟ್ಟಿ ಮತ್ತು […]

ಕನ್ನಡ ದುನಿಯಾ 9 Feb 2026 6:34 pm

JOB ALERT : ಮಾಜಿ ಸೈನಿಕರಿಗಾಗಿ ಬೆಂಗಳೂರಿನಲ್ಲಿ ಉದ್ಯೋಗ ಮೇಳ ಆಯೋಜನೆ

ಶಿವಮೊಗ್ಗ : ಡೈರೆಕ್ಟೋರೇಟ್ ಜನರಲ್ ರಿಸೆಟ್ಲ್ ಮೆಂಟ್ ಇವರ ಪ್ರಾಯೋಜಕತ್ವದಲ್ಲಿ ಮಾಜಿ ಸೈನಿಕರಿಗಾಗಿ ಮದ್ರಾಸ್ ಎಂಜಿನಿಯರಿಂಗ್ ಗ್ರೂಪ್ ಅಂಡ್ ಸೆಂಟರ್, ಬೆಂಗಳೂರು ಇಲ್ಲಿ ಫೆ 27 ರಂದು ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗಿದೆ. ಆಸಕ್ತ ಮಾಜಿ ಸೈನಿಕರು, ಮಾಜಿ ಸೈನಿಕ ಗುರುತಿನ ಚೀಟಿ ಮತ್ತು ಬಯೊಡೇಟದ 5 ಪ್ರತಿಗಳೊಂದಿಗೆ ನೇರವಾಗಿ ಭಾಗವಹಿಸುವಂತೆ ಶಿವಮೊಗ್ಗ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ಹೆಚ್ಚಿನ ವಿವರಗಳಿಗೆ ದೂರವಾಣಿ ಸಂಖ್ಯೆ 020-26341217/011-20863432 ಹಾಗೂ ವೆಬ್‌ಸೈಟ್ drzspne@desw.gov.in,/ seopadgr@desw.gov.in […]

ಕನ್ನಡ ದುನಿಯಾ 9 Feb 2026 6:13 pm

ಬೆಂಗಳೂರು ಮಹಿಳೆಯರಿಗೆ ಗುಡ್ ನ್ಯೂಸ್: ಪ್ರೇಮಿಗಳ ದಿನದಂದೇ ಆರಂಭವಾಗಲಿದೆ ಸಖಿ ಆಟೋ

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು ಮಹಿಳೆಯರಿಗೆ ಇಲ್ಲೊಂದು ಖುಷಿ ಸುದ್ದಿಯಿದೆ. ಮಹಿಳಾ ಸಬಲೀಕರಣ ಹಾಗೂ ಮಹಿಳೆಯರ ಸುರಕ್ಷತೆ ದೃಷ್ಟಿಯಿಂದ ಸಖಿ ಆಟೋ ಎಂಬ ವಿಶೇಷ ಆಟೋ ಆರಂಭವಾಗಲಿದೆ. ಇದೇ ಫೆಬ್ರವರಿ 14 ರಂದು ಪ್ರೇಮಿಗಳ ದಿನದಂದೆ ಈ ಆಟೋ ಸೇವೆ ಆರಂಭವಾಗಲಿದೆ. ಮಹಿಳಾ ಚಾಲಕಿಯರೇ ಇರಲಿರುವ ಈ ಆಟೋ ಮಹಿಳೆಯರಿಗಾಗಿಯೇ ಕಾರ್ಯನಿರ್ವಹಿಸಲಿದೆ. ಮಹಿಳೆಯರೇ ಮಹಿಳೆಯರಿಗಾಗಿ ಆರಂಭಿಸಲಿರುವ ವಿಶೇಷ ಸಾರಿಗೆ ವ್ಯವಸ್ಥೆ ಇದಾಗಿದೆ. ಸಖಿ ಆಟೋದಲ್ಲಿ ಮೊದಲ 2 ಕಿ.ಮೀ.ಗೆ 50 ರೂ. ಶುಲ್ಕವಿದ್ದು, ನಂತರದ ಪ್ರತಿ ಕಿಲೋಮೀಟರ್‌ಗೆ […]

ಕನ್ನಡ ದುನಿಯಾ 9 Feb 2026 6:13 pm

ಟಿ20 ವಿಶ್ವಕಪ್ ಸಮರ: ಇಂದು ಅಹಮದಾಬಾದ್‌ನಲ್ಲಿ ದಕ್ಷಿಣ ಆಫ್ರಿಕಾ ಮತ್ತು ಕೆನಡಾ ಮುಖಾಮುಖಿ: ಹರಿಣಗಳಿಗೆ ಕಂಟಕವಾಗಲಿದೆಯೇ ಕೆನಡಾ?

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಗೆದ್ದು ಬೀಗುತ್ತಿರುವ ದಕ್ಷಿಣ ಆಫ್ರಿಕಾ ತಂಡವು ಇಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಕೆನಡಾ ವಿರುದ್ಧ ಸೆಣಸುವ ಮೂಲಕ ತನ್ನ ಟಿ20 ವಿಶ್ವಕಪ್ 2026ರ ಅಭಿಯಾನವನ್ನು ಆರಂಭಿಸಲಿದೆ. ಕಳೆದ ಟಿ20 ವಿಶ್ವಕಪ್‌ನಲ್ಲಿ ರನ್ನರ್ ಅಪ್ ಆಗಿದ್ದ ಏಡನ್ ಮಾರ್ಕ್ರಾಮ್ ನೇತೃತ್ವದ ದಕ್ಷಿಣ ಆಫ್ರಿಕಾ ತಂಡವು ಈ ಬಾರಿ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದೆ. 2024ರ ವಿಶ್ವಕಪ್ ಫೈನಲ್‌ನಲ್ಲಿ ಭಾರತದ ವಿರುದ್ಧ ಅನುಭವಿಸಿದ ಸೋಲಿನ ಕಹಿ ನೆನಪನ್ನು ಮರೆತು ಹೊಸ ಹುರುಪಿನೊಂದಿಗೆ ಕಣಕ್ಕಿಳಿಯಲು ಹರಿಣಗಳ ಪಡೆ […]

ಕನ್ನಡ ದುನಿಯಾ 9 Feb 2026 6:08 pm

ಖಾಸಗಿ ಶಾಲೆಗಳ ಮಾನ್ಯತೆ ನವೀಕರಣ : ಫೆ. 16ರ ವರೆಗೆ ಗಡುವು ವಿಸ್ತರಣೆ

ಚಿತ್ರದುರ್ಗ : ಚಿತ್ರದುರ್ಗ ತಾಲ್ಲೂಕಿನ ವ್ಯಾಪ್ತಿಯಲ್ಲಿರುವ ಎಲ್ಲಾ ಖಾಸಗಿ ಅನುದಾನಿತ ಹಾಗೂ ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಮಾನ್ಯತೆ ನವೀಕರಣಕ್ಕೆ ಇದೇ ಫೆಬ್ರವರಿ 16ರ ವರೆಗೆ ಕಾಲಾವಕಾಶ ವಿಸ್ತರಿಸಲಾಗಿದೆ ಎಂದು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ. ಪ್ರತಿ ಶೈಕ್ಷಣಿಕ ವರ್ಷದಲ್ಲಿ ಶಾಲೆಗಳನ್ನು ನಡೆಸಲು ಸಕ್ಷಮ ಪ್ರಾಧಿಕಾರದಿಂದ ಮಾನ್ಯತೆ ಪಡೆಯುವುದು ಕಡ್ಡಾಯವಾಗಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರು ಮಾನ್ಯತೆ ನವೀಕರಿಸಲು 2026ರ ಫೆಬ್ರವರಿ 16 ರವರೆಗೆ ಅವಧಿ ವಿಸ್ತರಿಸಿ ಆದೇಶಿಸಿದ್ದಾರೆ. ಚಿತ್ರದುರ್ಗ […]

ಕನ್ನಡ ದುನಿಯಾ 9 Feb 2026 6:05 pm

ನಿಮ್ಮ ಮಗು ಸೂಪರ್ ಇಂಟೆಲಿಜೆಂಟ್ ಹಾಗೂ ಸುಂದರವಾಗಿ ಜನಿಸಬೇಕೇ? ಈ ಆಹಾರಗಳನ್ನು ಮರೆಯದೇ ಸೇವಿಸಿ

ಬೆಂಗಳೂರು: ಪ್ರತಿಯೊಬ್ಬ ತಾಯಿಗೂ ತನ್ನ ಮಗು ಸುಂದರವಾಗಿರಬೇಕು, ಎಲ್ಲರಿಗಿಂತ ಬುದ್ಧಿವಂತನಾಗಿರಬೇಕು ಮತ್ತು ಜೀವನದಲ್ಲಿ ದೊಡ್ಡ ಸಾಧನೆ ಮಾಡಬೇಕು ಎಂಬ ಕನಸಿರುತ್ತದೆ. ಆದರೆ, ಮಗುವಿನ ಈ ಜಾಣತನ ಮತ್ತು ಆರೋಗ್ಯ ನಿರ್ಧಾರವಾಗುವುದು ಆ ಮಗು ಗರ್ಭದಲ್ಲಿರುವಾಗಲೇ ಎಂಬುದು ನಿಮಗೆ ಗೊತ್ತೇ? ಹೌದು, ಗರ್ಭಾವಸ್ಥೆಯ ಒಂಬತ್ತು ತಿಂಗಳುಗಳಲ್ಲಿ ತಾಯಿ ಸೇವಿಸುವ ಆಹಾರ ಮತ್ತು ಆಕೆಯ ಜೀವನಶೈಲಿ ಮಗುವಿನ ಐಕ್ಯೂ (IQ) ಮಟ್ಟವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಕೇವಲ ಹಸಿವು ನೀಗಿಸಲು ಆಹಾರ ಸೇವಿಸುವುದಕ್ಕಿಂತ, ಮಗುವಿನ ಮೆದುಳಿನ ಬೆಳವಣಿಗೆಗೆ ಪೂರಕವಾದ […]

ಕನ್ನಡ ದುನಿಯಾ 9 Feb 2026 5:55 pm

ಬೆಂಗಳೂರಿನ ಜಪಾನ್, ಡಚ್ ರಾಯಭಾರ ಕಚೇರಿಗೆ ಬಾಂಬ್ ಬೆದರಿಕೆ: ತಮಿಳುನಾಡು ಸಿಎಂ ಪುತ್ರನ ಹೆಸರು ಉಲ್ಲೇಖ

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿರುವ ಜಪಾನ್ ಹಾಗೂ ಡಚ್ ರಾಯಭಾರ ಕಚೇರಿಗಳಿಗೆ ಬಾಂಬ್ ಬೆದರಿಕೆ ಕರೆ ಬಂದಿದೆ. ಕಳೆದ ಹತ್ತು ದಿನಗಳಲ್ಲಿ ಬಂದಿರುವ ಎರಡನೇ ಬಾಂಬ್ ಬೆದರಿಕೆ ಕರೆ ಇದಾಗಿದೆ. ಬೆಂಗಳೂರು ನಗರದಲ್ಲಿರುವ ಜಪಾನ್ ಹಾಗೂ ಡಚ್ ರಾಯಭಾರ ಕಚೇರಿಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಸಂದೇಶ ಬಂದಿದೆ. ಬಾಂಬ್ ಬೆದರಿಕೆ ಇ-ಮೇಲ್ ನಲ್ಲಿ ಅಪರಿಚಿತರು ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್ ಪುತ್ರ, ಡಿಸಿಎಂ ಉದಯನಿಧಿ ಸ್ಟಾಲಿನ್ ಹೆಸರನ್ನು ಉಲ್ಲೇಖಿಸಿದ್ದಾರೆ. ಕೋರಮಂಡಲ್ ಹೋಟೆಲ್ ನ ಕೊಠಡಿ ಸಂಖ್ಯೆ 536ರಲ್ಲಿ […]

ಕನ್ನಡ ದುನಿಯಾ 9 Feb 2026 5:35 pm

ಮುಡಾ ಹಗರಣ: ಬಿ ರಿಪೋರ್ಟ್ ನೀಡಲು ಲೋಕಾಯುಕ್ತ ಅಧಿಕಾರಿಗಳಿಗೆ 4 ಕೋಟಿ 35 ಲಕ್ಷ ಲಂಚ ನೀಡಲಾಗಿದೆ: ಸ್ನೇಹಮಯಿ ಕೃಷ್ಣ ಆರೋಪ

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಪತ್ನಿ ಪಾರ್ವತಿ ವಿರುದ್ಧ ದೂರು ದಾಖಲಿಸಿದ್ದ ಸ್ನೇಹಮಯಿ ಕೃಷ್ಣಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಹಿನ್ನಡೆಯಾಗಿದ್ದರೂ, ಮತ್ತೆ ಹೋರಾಟ ಮುಂದುವರೆಸಿರುವ ಸ್ನೇಹಮಯಿ ಕೃಷ್ಣ ಇದೀಗ ಮತ್ತೊಂದು ಗಂಭೀರ ಆರೋಪ ಮಡಿದ್ದಾರೆ. ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸ್ನೇಹಮಯಿ ಕೃಷ್ಣ, ಮುಡಾ ಹಗರಣದ ತನಿಖೆ ನಡೆಸಿರುವ ಲೋಕಾಯುಕ್ತ ಅಧಿಕಾರಿಗಳಿಗೆ ಕೋಟಿ ಕೋಟಿ ಲಂಚ ನೀಡಲಾಗಿದೆ. ಹಾಗಾಗಿಯೇ ಮುಡಾ ಹಗರಣದಲ್ಲಿ ಲೋಕಾಯುಕ್ತ ಬಿ ರಿಪೋರ್ಟ್ ನೀಡಿದೆ ಎಂದು ಗಂಭೀರ ಆರೋಪ […]

ಕನ್ನಡ ದುನಿಯಾ 9 Feb 2026 5:09 pm

ಸ್ಟಾರ್ ಗಾಯಕಿ ರಾಣು ಮೊಂಡಲ್ ಬದುಕು ಈಗ ಹೀಗಿದೆ ನೋಡಿ: ನೆರೆಯವರ ದಾನವೇ ಇವರ ಜೀವನಾಧಾರ

ಬಾಲಿವುಡ್ ಎಂಬ ಬಣ್ಣದ ಲೋಕ ಎಷ್ಟು ಅದ್ಭುತವೋ ಅಷ್ಟೇ ನಿಗೂಢ. ಇಲ್ಲಿ ರಾತ್ರೋರಾತ್ರಿ ಸ್ಟಾರ್ ಆದವರು ಅಷ್ಟೇ ವೇಗವಾಗಿ ಮರೆಯಾದ ಉದಾಹರಣೆಗಳು ಸಾಕಷ್ಟಿವೆ. ಇದಕ್ಕೆ ತಾಜಾ ಉದಾಹರಣೆ ಎಂದರೆ ಗಾಯಕಿ ರಾಣು ಮೊಂಡಲ್. 2019ರಲ್ಲಿ ಪಶ್ಚಿಮ ಬಂಗಾಳದ ರಣಘಾಟ್ ರೈಲ್ವೇ ನಿಲ್ದಾಣದಲ್ಲಿ ಲತಾ ಮಂಗೇಶ್ಕರ್ ಅವರ ಹಾಡನ್ನು ಹಾಡುವ ಮೂಲಕ ಇಡೀ ದೇಶದ ಗಮನ ಸೆಳೆದಿದ್ದ ಈ ಪ್ರತಿಭೆ, ಇಂದು ಮತ್ತೆ ಹಳೆಯ ಬಡತನದ ಕೂಪಕ್ಕೆ ತಳ್ಳಲ್ಪಟ್ಟಿದ್ದಾರೆ. ಸಂಗೀತ ನಿರ್ದೇಶಕ ಹಿಮೇಶ್ ರೇಶಮಿಯಾ ಅವರು ರಾಣು ಮೊಂಡಲ್ […]

ಕನ್ನಡ ದುನಿಯಾ 9 Feb 2026 5:00 pm

ಬೆಂಗಳೂರು ಮೆಟ್ರೋಗೆ 20% ಅನುದಾನ ಕೊಡಿಸಿ ತೇಜಸ್ವಿ ಸೂರ್ಯ ಸಾರ್ವಜನಿಕರ ಮೇಲಿನ ಒತ್ತಡ ಕಡಿಮೆ ಮಾಡಲಿ: ಡಿ.ಕೆ.ಸುರೇಶ್ ಸವಾಲು

ಬೆಂಗಳೂರು: ಕಳೆದ 12 ವರ್ಷಗಳಿಂದ ಕೇಂದ್ರ ಬಿಜೆಪಿ ಸರ್ಕಾರ ಕರ್ನಾಟಕಕ್ಕೆ ಕೊಟ್ಟಿರುವ ಖಾಲಿ ಟ್ರಂಕ್ ಅನ್ನು ಸಂಸದ ತೇಜಸ್ವಿ ಸೂರ್ಯ ಅವರು ಹಿಡಿದಿರುವುದು ಎಂದು ಬಮೂಲ್ ಅಧ್ಯಕ್ಷ ಡಿ.ಕೆ. ಸುರೇಶ್ ವ್ಯಂಗ್ಯವಾಡಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿ.ಕೆ.ಸುರೇಶ್, ಮೆಟ್ರೋ ದರ ಏರಿಕೆ ವಿಚಾರವಾಗಿ ತೇಜಸ್ವಿ ಸೂರ್ಯ ಅವರು ಮೆಟ್ರೋ ನಿಲ್ದಾಣ ಬಳಿ ಖಾಲಿ ಟ್ರಂಕ್ ಹಿಡಿದು ಪ್ರತಿಭಟನೆ ಮಾಡುತ್ತಿರುವ ಬಗ್ಗೆ ಮೆಟ್ರೋ ದರ ಏರಿಕೆ ಬಗ್ಗೆ ಅವರು ಮಾತನಾಡುವುದೇನೆ ಇದ್ದರೂ ಅದು ಪ್ರಧಾನಮಂತ್ರಿಗಳ ಮುಂದೆ ಮಾತನಾಡಲಿ. ಮೆಟ್ರೋ […]

ಕನ್ನಡ ದುನಿಯಾ 9 Feb 2026 4:34 pm

ತನ್ನದೇ ನಟನೆಯ ಸಿನಿಮಾ ಪ್ರಚಾರಕ್ಕೆ ಹೋಗದ ಬಗ್ಗೆ ಕಾರಣ ಹೇಳಿದ ಗಿಲ್ಲಿ ನಟ

ಬೆಂಗಳೂರು: ಬಿಗ್ ಬಾಸ್ ಸೀಜನ್- 12ರ ವಿನ್ನರ್ ಗಿಲ್ಲಿ ನಟನ ವಿರುದ್ಧ ಸಿನಿಮಾ ಪ್ರಚಾರಕ್ಕೆ ಬರಲಿಲ್ಲ ಎಂಬ ಕಾರಣಕ್ಕೆ ‘ಸರ್ಕಾರಿ ಶಾಲೆ ಹೆಚ್8’ ಸಿನಿಮಾ ನಿರ್ದೇಶಕರು ಫಿಲ್ಮ್ ಚೇಂಬರ್ ಗೆ ದೂರು ನೀಡಿದ್ದರು. ಇದೇ ವಿಚಾರವಾಗಿ ಗಿಲ್ಲಿ ನಟ ಪ್ರತಿಕ್ರಿಯೆ ನೀಡಿದ್ದಾರೆ. ಸರ್ಕಾರಿ ಶಾಲೆ ಹೆಚ್8 ಸಿನಿಮಾದಲ್ಲಿ ಗಿಲ್ಲಿ ನಟ ಅಭಿನಯಿಸಿದ್ದಾರೆ. ಆದರೆ ಅದರ ಪ್ರಚಾರದಲ್ಲಿ ಅವರು ಭಾಗಿಯಾಗಿಲ್ಲ. ಹಾಗಾಗಿ ಗಿಲ್ಲಿ ವಿರುದ್ಧ ಚಿತ್ರತಂಡದವರು ಫಿಲ್ಮ್ ಚೇಂಬರ್ ಗೆ ದೂರು ನೀಡಿದ್ದರು. ಈ ಬಗ್ಗೆ ಪ್ರತಿಕ್ರ್ಯಿಸಿರುವ ಗಿಲ್ಲಿ, […]

ಕನ್ನಡ ದುನಿಯಾ 9 Feb 2026 4:14 pm

ಸಾಲು-ಸಾಲು ಚುನಾವಣೆಗಳ ಹೊತ್ತಲ್ಲಿ ಮಹತ್ವದ ಬದಲಾವಣೆ ಮಾಡಿದ ಜೆಡಿಎಸ್!

ಸ್ಥಳೀಯ ಸಂಸ್ಥೆಗಳ ಚುನಾವಣೆ, ಎರಡು ಕ್ಷೇತ್ರಗಳ ಉಪ ಚುನಾವಣೆ ಮತ್ತು ಗ್ರೇಟರ್ ಬೆಂಗಳೂರು ಅಥಾರಿಟಿ (ಜಿಬಿಎ) ಚುನಾವಣೆಗಳ ಹಿನ್ನಲೆಯಲ್ಲಿ ಜಾತ್ಯಾತೀತ ಜನತಾದಳ (ಜೆಡಿಎಸ್) ಪಕ್ಷ ಸಂಘಟನೆಯಲ್ಲಿ ಮಹತ್ವದ ಬದಲಾವಣೆ ಮಾಡಿದೆ. ಈ ಕುರಿತು ಜೆಡಿಎಸ್ ಪಕ್ಷದ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಲಾಗಿದೆ. 2025ರ ನವೆಂಬರ್‌ನಲ್ಲಿ ಜೆಡಿಎಸ್ ರಾಷ್ಟ್ರಾಧ್ಯಕ್ಷರಾಗಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹಾಗೂ ರಾಜ್ಯಾಧ್ಯಕ್ಷರಾಗಿ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವಿರೋಧ ಆಯ್ಕೆಯಾಗಿದ್ದರು. ಸೋಮವಾರ ಪಕ್ಷದ ಫೇಸ್‌ಬುಕ್ ಖಾತೆಯಲ್ಲಿ ಈ ಕೆಳಕಂಡ ಜಿಲ್ಲೆಗಳಲ್ಲಿ ನಡೆದ ಪಕ್ಷದ ಸಾಂಸ್ಥಿಕ ಚುನಾವಣೆಯಲ್ಲಿ […]

ಕನ್ನಡ ದುನಿಯಾ 9 Feb 2026 4:13 pm

ಕಾಲುವೆ ಬಳಿ ಬಹಿರ್ದೆಸೆಗೆ ಹೋಗಿದ್ದ ಯುವಕನ ಮೇಲೆ ಹಲ್ಲೆ: ಕೀಯಿಂದ ಕಣ್ಣು ಚುಚ್ಚಿದ ವ್ಯಕ್ತಿ: ದೃಷ್ಟಿ ಕಳೆದುಕೊಂಡ ಯುವಕ

ಭದೋಹಿ: ಕಾಲುವೆ ಬಳಿ ಬಹಿರ್ದೆಸೆಗೆ ಕುಳಿತಿದ್ದ ಯುವಕನನ್ನು ವ್ಯಕ್ತಿಯೋರ್ವ ಹಿಗ್ಗಾಮುಗ್ಗಾ ಥಳಿಸಿದ್ದಲ್ಲದೇ ಬೈಕ್ ಕೀಯಿಂದ ಆತನ ಕಣ್ಣು ಚ್ಚಿರುವ ಘಟನೆ ಉತ್ತರ ಒರದೇಶದ ಔರೈ ಪ್ರದೇಶದಲ್ಲಿ ನಡೆದಿದೆ. 20 ವರ್ಷದ ರಾಹುಲ್ ಹಲ್ಲೆಗೊಳಗಾದ ಯುವಕ. ಗಾಯಾಳುವನ್ನು ವಾರಣಾಸಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕಣ್ಣು ದೃಷ್ಟಿ ಕಳೆದುಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಕಾಲುವೆ ಬಳಿ ಬಯಲಿನಲ್ಲಿ ಬಹಿರ್ದೆಸೆಗೆಂದು ಕುಳಿತಿದ್ದ. ಇದನ್ನು ಕಂಡು ಶಾಂಕರ್ ಎಂಬಾತ ಕಾಅಲುವೆ ಬಳಿ ಬಹಿರ್ದೆಸೆ ಮಾಡದಂತೆ ತಾಕೀತು ಮಾಡಿದ್ದ. ಇದೇ ವಿಚಾರವಾಗಿ ಇಬ್ಬರ ನಡುವೆ ಮಾತಿಗೆ ಮಾತು […]

ಕನ್ನಡ ದುನಿಯಾ 9 Feb 2026 3:51 pm

ಮಹಿಳಾ ಅಧಿಕಾರಿ ಮನೆಯಲ್ಲಿ ರಹಸ್ಯ ಕ್ಯಾಮರಾ ಅಳವಡಿಕೆ ಪ್ರಕರಣ: ಸರ್ಕಾರಿ ಅಧಿಕಾರಿ ಅರೆಸ್ಟ್

ಬೆಳಗಾವಿ: ಬೆಳಗಾವಿಯಲ್ಲಿ ಮಹಿಳಾ ಅಧಿಕಾರಿಯ ಮನೆಯಲ್ಲಿ ಬಲ್ಬ್ ಹೋಲ್ಡರ್‌ನಲ್ಲಿ ರಹಸ್ಯ ಕ್ಯಾಮರಾ ಅಳವಡಿಸಿದ್ದ ಪ್ರಕರಣಕ್ಕೆ ಸಂಭಂದಿಸಿದಂತೆ ಮುಖ್ಯ ಆರೋಪಿಯಾಗಿರುವ ಸರ್ಕಾರಿ ಅಧಿಕಾರಿಯನ್ನು ಬಂಧಿಸಲಾಗಿದೆ. ಬೆಳಗಾವಿ ಮಾಳಮಾರುತಿ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ, ಬಂಧಿತನನ್ನು ವಿನೋದ್ ಟಿ ಎಂದು ಗುರುತಿಸಲಾಗಿದೆ. ಈತ ವೃತ್ತಿಯಲ್ಲಿ ಸರ್ಕಾರಿ ಅಧಿಕಾರಿಯಾಗಿದ್ದುಕೊಂಡು ಮಹಿಳಾ ಅಧಿಕಾರಿಯ ಮನೆಯಲ್ಲಿ ರಹಸ್ಯ ಕ್ಯಾಮರಾ ಅಳವಡಿಕೆಗೆ ಕುಮ್ಮಕ್ಕು ನೀಡಿ ಕೃತ್ಯವೆಸಗಿದ್ದ ಎಂಬುದು ವಿಚಾರಣೆಯಲ್ಲಿ ಬಯಲಾಗಿದೆ. ವೃತ್ತಿ ವೈಷಮ್ಯದಿಂದ ಈ ಕೃತ್ಯ ಎಸಗಿದ್ದಾಗಿ ಆರೋಪಿ ಬಾಯ್ಬಿಟ್ಟಿದ್ದಾನೆ. ಮಹಿಳಾ ಅಧಿಕಾರಿ ಆರೋಪಿ ವಿನೋದ್ […]

ಕನ್ನಡ ದುನಿಯಾ 9 Feb 2026 3:19 pm

ಇಡ್ಲಿ–ದೋಸೆಗೆ ಬ್ರೇಕ್: ಮಕ್ಕಳ ಲಂಚ್ ಬಾಕ್ಸ್‌ಗೆ ಸೂಪರ್ ಸಾಫ್ಟ್ ಆಲೂ ರೋಟಿ

ಬೆಂಗಳೂರು: ಪ್ರತಿದಿನ ಬೆಳಿಗ್ಗೆ ಎದ್ದ ತಕ್ಷಣ ಗೃಹಿಣಿಯರನ್ನು ಕಾಡುವ ದೊಡ್ಡ ಪ್ರಶ್ನೆಯೆಂದರೆ ತಿಂಡಿಗೆ ಏನು ಮಾಡುವುದು? ಇಡ್ಲಿ, ದೋಸೆ, ಉಪ್ಪಿಟ್ಟು ತಿಂದು ಮನೆಯವರಿಗೆ ಬೇಸರವಾಗಿದ್ದರೆ ಅಥವಾ ಮಕ್ಕಳ ಲಂಚ್ ಬಾಕ್ಸ್‌ಗೆ ಹೊಸದೇನನ್ನಾದರೂ ನೀಡಬೇಕೆಂಬ ಹಂಬಲವಿದ್ದರೆ, ನಿಮಗಾಗಿ ಇಲ್ಲಿದೆ ಒಂದು ಸೂಪರ್ ಐಡಿಯಾ ಅದೇ ರುಚಿಕರವಾದ ಆಲೂ ರೋಟಿ (Aloo Roti). ಉತ್ತರ ಭಾರತದ ಫೇಮಸ್ ಆಲೂ ಪರೋಟದ ಸರಳ ಹಾಗೂ ತೆಳುವಾದ ರೂಪವೇ ಈ ಆಲೂ ರೋಟಿ. ಇದು ಮಾಡುವ ವಿಧಾನ ಸುಲಭ ಮಾತ್ರವಲ್ಲ, ಅಷ್ಟೇ ಪೌಷ್ಟಿಕಾಂಶಯುಕ್ತವೂ […]

ಕನ್ನಡ ದುನಿಯಾ 9 Feb 2026 3:12 pm

ಕರ್ನಾಟಕ ಬಜೆಟ್ 2026: ಸಾರಿಗೆ ಇಲಾಖೆ ನಿರೀಕ್ಷೆಗಳು

ಹಣಕಾಸು ಸಚಿವರು ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಕರ್ನಾಟಕ ಬಜೆಟ್ 2026 ಪೂರ್ವ ತಯಾರಿ ಸರಣಿ ಸಭೆಗಳನ್ನು ನಡೆಸುತ್ತಿದ್ದಾರೆ. ಮಾರ್ಚ್ ತಿಂಗಳಿನಲ್ಲಿ ಅವರು 2026-27ನೇ ಸಾಲಿನ ಬಜೆಟ್ ಮಂಡಿಸಲಿದ್ದಾರೆ. ಕರ್ನಾಟಕ ಸರ್ಕಾರ ತನ್ನ ಮಹತ್ವದ ‘ಶಕ್ತಿ’ ಯೋಜನೆಗೆ ಅನುದಾನ ನೀಡುವ ಜೊತೆಗೆ ಸಾರಿಗೆ ಇಲಾಖೆಯ ಇತರ ಅಂಶಗಳತ್ತಲೂ ಗಮನ ಹರಿಸಬೇಕಿದೆ. ನೇಮಕಾತಿ, ಹೊಸ ಬಸ್ ಖರೀದಿ, ಹೊಸ ಬಸ್ ನಿಲ್ದಾಣಗಳ ನಿರ್ಮಾಣದತ್ತಲೂ ಬಜೆಟ್‌ನಲ್ಲಿ ಚಿತ್ತ ಹರಿಸಲಿದೆ. ಹಾಗಾದರೆ ಈ ಬಾರಿಯ ಬಜೆಟ್‌ನಲ್ಲಿ ಸಾರಿಗೆ ಇಲಾಖೆ ನಿರೀಕ್ಷೆಗಳೇನು?. ಕೊಡಗು ಜಿಲ್ಲೆಯ […]

ಕನ್ನಡ ದುನಿಯಾ 9 Feb 2026 2:58 pm

BIG NEWS: ಕೆನಡಾದಲ್ಲಿ ಕನ್ನಡಿಗನ ಗುಂಡಿಟ್ಟು ಹತ್ಯೆಗೈದ ದುಷ್ಕರ್ಮಿಗಳು

ಬೆಂಗಳೂರು: ಕೆನಡಾದಲ್ಲಿ ಕನ್ನಡಿಗನ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ. 37 ವರ್ಷದ ಚಂದನ್ ಕುಮಾರ್ ಹತ್ಯೆಯಾದ ವ್ಯಕ್ತಿ. ಬೆಂಗಳೂರಿನ ನೆಲಮಂಗಲ ಮೂಲದ ತ್ಯಾಮಗೊಂಡ್ಲುವಿನ ನಿವಾಸಿ. ಕಳೆದ 6 ವರ್ಷಗಳಿಂದ ಚಂದನ್ ಕುಮಾರ್ ಕೆನಡಾದಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಭಾನುವಾರ ರಾತ್ರಿ 9 ಗಂಟೆಗೆ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಚಂದನ್ ಕುಮಾರ್ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಹಲವು ಗುಂಡುಗಳು ಚಂದನ್ ದೇಹವನ್ನು ಹೊಕ್ಕಿವೆ. ಘಟನಾ ಸ್ಥಳದಲ್ಲೇ […]

ಕನ್ನಡ ದುನಿಯಾ 9 Feb 2026 2:15 pm

ಕ್ಲಾಸ್ ರೂಮ್ ನಲ್ಲಿಯೇ ವಿದ್ಯಾರ್ಥಿನಿ ಮೇಲೆ ಗುಂಡಿನ ದಾಳಿ: ಬಳಿಕ ತನ್ನ ತಲೆಗೂ ಗುಂಡಿಟ್ಟುಕೊಂಡು ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಮಕ್ಕಳ ಮನಸ್ಥಿತಿ ಕ್ಷುಲ್ಲಕ ಕಾರಣಕ್ಕೂ ಸೇಡು ತೀರಿಸಿಕೊಳ್ಳುವುದು, ಅವಮಾನ ಎಂದು ಸಾವಿಗೆ ಶರಣಗುವಂತಹ ಸ್ಥಿತಿಗೆ ತಲುಪುತ್ತಿರುವುದು ಆತಂಕಕಾರಿ ಬೆಳವಣಿಗೆ. ಇಲ್ಲೋರ್ವ ವಿದ್ಯಾರ್ಥಿ, ವಿದ್ಯಾರ್ಥಿನಿ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆಗೈದಿದ್ದು, ಬಳಿಕ ತಾನೂ ಗುಂಡು ಹಾರಾಸಿಕೊಂಡು ಆತ್ಮಹತ್ಯೆ ಶರಣಾಗಿರುವ ಘಟನೆ ನಡೆದಿದೆ. ಪಂಜಾಬ್ ನ ತರಾನ್ ತರಾನ್ ಜಿಲ್ಲೆಯ ಶಾಲೆಯೊಂದರಲ್ಲಿ ಈ ಘಟನೆ ನಡೆದಿದೆ. ಶಾಲೆಯ ಕ್ಲಾಸ್ ರೂಂ ನಲ್ಲಿ ವಿದ್ಯಾರ್ಥಿಯೊಬ್ಬ ಪಕ್ಕದಲ್ಲಿದ್ದ ವಿದ್ಯಾರ್ಥಿನಿಯನ್ನು ಗುಂಡಿಟ್ಟು ಕೊಂದಿದ್ದಾನೆ. ಕ್ಷಣ ಮಾತ್ರದಲ್ಲಿಯೇ ತನ್ನ ತಲೆಗೂ […]

ಕನ್ನಡ ದುನಿಯಾ 9 Feb 2026 1:55 pm

ಕೇವಲ ೪ ರನ್ ಅಂತರದಲ್ಲಿ ಸೋತರೂ ವಿಶ್ವದ ಮನಗೆದ್ದ ನೇಪಾಳ; ವೆಸ್ಟ್ ಇಂಡೀಸ್‌ಗೆ ಕಾಡುತ್ತಿದೆ ನೇಪಾಳಿ ಪಡೆಯ ಭೀತಿ

ವಿಶ್ವಕಪ್‌ನ ತನ್ನ ಮೊದಲ ಪಂದ್ಯದಲ್ಲಿ ಬಲಿಷ್ಠ ಇಂಗ್ಲೆಂಡ್ ತಂಡಕ್ಕೆ ಬೆವರು ಇಳಿಸಿದ ನೇಪಾಳ, ಇಡೀ ವಿಶ್ವದ ಗಮನ ಸೆಳೆದಿದೆ. ೧೮೫ ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ ನೇಪಾಳ, ಅಂತಿಮ ಎಸೆತದವರೆಗೂ ಹೋರಾಡಿ ೧೮೦ ರನ್ ಗಳಿಸುವ ಮೂಲಕ ಕ್ರಿಕೆಟ್ ಪ್ರೇಮಿಗಳ ಮನ ಗೆದ್ದಿದೆ. ದಕ್ಷಿಣ ಆಫ್ರಿಕಾದ ವೇಗದ ಮಾಂತ್ರಿಕ ಡೇಲ್ ಸ್ಟೇನ್ ಕೂಡ ನೇಪಾಳದ ಪ್ರದರ್ಶನಕ್ಕೆ ಫಿದಾ ಆಗಿದ್ದು, ಆ ತಂಡಕ್ಕೆ ತರಬೇತಿ ನೀಡಲು ಆಸಕ್ತಿ ವ್ಯಕ್ತಪಡಿಸಿದ್ದಾರೆ. ವೇಳಾಪಟ್ಟಿ ಮತ್ತು ಸ್ಥಳ: ನೇಪಾಳ ತಂಡವು ತನ್ನ ಲೀಗ್ […]

ಕನ್ನಡ ದುನಿಯಾ 9 Feb 2026 1:52 pm

ಶ್ರೀಲಂಕಾದ ಡಿಜಿಟಲ್ ವೀಸಾ: ಇನ್ನು ದ್ವೀಪ ರಾಷ್ಟ್ರದ ಪ್ರವಾಸ ಸುಲಭ

ಸಮುದ್ರ ತೀರ, ಬೆಟ್ಟ-ಗುಡ್ಡಗಳು, ಹಸಿರು ಪರಿಸರದ ಮೂಲಕ ಶ್ರೀಲಂಕಾ ವಿದೇಶದ ಪ್ರವಾಸಿಗರನ್ನು ಬೆರಗುಗೊಳಿಸುತ್ತದೆ, ಸೆಳೆಯುತ್ತಿದೆ. ಪ್ರವಾಸೋದ್ಯಮಕ್ಕೆ ಹೆಸರುವಾಸಿಯಾದ ಶ್ರೀಲಂಕಾ ಈಗ ಪ್ರವಾಸ ಮತ್ತು ಅಲ್ಲಿ ಕೆಲಸ ಮಾಡಲು ಇಚ್ಛಿಸುವ ಜನರ ಅನುಕೂಲಕ್ಕಾಗಿ ಹೊಸ ಅವಕಾಶ ನೀಡಿದೆ, ದೇಶವು ಅಧಿಕೃತವಾದ ತನ್ನ ಡಿಜಿಟಲ್ ನೋಮ್ಯಾಡ್ ವೀಸಾ ಘೋಷಣೆ ಮಾಡಿದೆ. ಇದು ವಿದೇಶಿ ವೃತ್ತಿಪರರಿಗೆ ಒಂದು ವರ್ಷದವರೆಗೆ ದ್ವೀಪದಲ್ಲಿ ವಾಸಿಸಲು ಮತ್ತು ಕೆಲಸ ಮಾಡಲು ಅವಕಾಶ ನೀಡುತ್ತದೆ. ಈ ಹೊಸ ವೀಸಾ ಪ್ರಯಾಣ ಮತ್ತು ದೀರ್ಘಾವಧಿಯ ವಾಸ್ತವ್ಯವನ್ನು ಉತ್ತೇಜಿಸುವ ಮೂಲಕ […]

ಕನ್ನಡ ದುನಿಯಾ 9 Feb 2026 1:42 pm

ಕೇಂದ್ರ ಸರ್ಕಾರ ಬೆಂಗಳೂರಿಗೆ, ಕನ್ನಡಿಗರಿಗೆ ನೀಡಿರುವುದು ಖಾಲಿ ಡಬ್ಬಾ: ತೇಜಸ್ವಿ ಸೂರ್ಯ ತಮ್ಮ ಬದ್ಧತೆಯನ್ನು ದೆಹಲಿಯಲ್ಲಿ ಪ್ರದರ್ಶಿಸಲಿ: ಡಿ.ಕೆ.ಸುರೇಶ್ ತಿರುಗೇಟು

ಬೆಂಗಳೂರು: ಸಂಸದ ತೇಜಸ್ವಿ ಸೂರ್ಯ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಖಾಲಿ ಟ್ರಂಕ್ ಹಿಡಿದು ಮೆಟ್ರೋದಲ್ಲಿ ಪ್ರತಿಭಟನೆ ಮಾಡಿದ್ದು, ಈ ಬಗ್ಗೆ ಮಾಜಿ ಸಂಸದ ಡಿ.ಕೆ.ಸುರೇಶ್ ಕಿಡಿಕಾರಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಡಿ.ಕೆ.ಸುರೇಶ್, ತೇಜಸ್ವಿ ಸೂರ್ಯ ಖಾಲಿ ಟ್ರಂಕ್ ನ್ನು ಹಿಡಿದು ರಾಜ್ಯ ಸರ್ಕಾರದ ವಿರುದ್ಧವಲ್ಲ, ಕೇಂದ್ರ ಸರ್ಕಾರದ ವಿರುದ್ಧವೇ ಪ್ರತಿಭಟಿಸಿದರೆ ಒಳಿತು. ಅವರು ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಕೊಟ್ಟಿರುವ ಕೊಡುಗೆ ಖಾಲಿ ಟ್ರಂಕ್ ಎಂಬುದನ್ನು ಪರೋಕ್ಷವಾಗಿ ತೋರಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ. ತೇಜಸ್ವಿ ಸೂರ್ಯ ತಮ್ಮ ಬದ್ಧತೆಯನ್ನು ದೆಹಲಿಯಲ್ಲಿ […]

ಕನ್ನಡ ದುನಿಯಾ 9 Feb 2026 1:32 pm

ಉಳಿದ ಚಪಾತಿಯಿಂದ ಮಾಡಿ ಕುರುಕುರು ಸ್ಪ್ರಿಂಗ್ ರೋಲ್: ಇಲ್ಲಿದೆ ಸಿಂಪಲ್ ರೆಸಿಪಿ!

ಪ್ರತಿದಿನ ಅಡುಗೆ ಮನೆಯಲ್ಲಿ ಎದುರಾಗುವ ಸಾಮಾನ್ಯ ಸಮಸ್ಯೆ ಎಂದರೆ ರಾತ್ರಿ ಉಳಿದ ಚಪಾತಿಗಳು. ಇವುಗಳನ್ನು ಮತ್ತೆ ಬಿಸಿ ಮಾಡಿ ತಿನ್ನಲು ಹಲವರು ಇಷ್ಟಪಡುವುದಿಲ್ಲ, ಹಾಗೆಯೇ ಎಸೆಯಲು ಮನಸ್ಸು ಬರುವುದಿಲ್ಲ. ಆದರೆ ಒಂದು ಪುಟ್ಟ ಉಪಾಯದ ಮೂಲಕ ಈ ಹಳೇ ಚಪಾತಿಗಳನ್ನು ಸಂಜೆಯ ಸ್ನ್ಯಾಕ್ಸ್‌ಗೆ ಹೇಳಿಮಾಡಿಸಿದ ಗರಿಗರಿಯಾದ ಮತ್ತು ರುಚಿಕರವಾದ ಸ್ಪ್ರಿಂಗ್ ರೋಲ್ ಆಗಿ ಪರಿವರ್ತಿಸಬಹುದು. ಮನೆಯಲ್ಲಿರುವ ಸಾಮಾನ್ಯ ತರಕಾರಿಗಳನ್ನು ಬಳಸಿ ಹೋಟೆಲ್ ಶೈಲಿಯ ಈ ತಿಂಡಿಯನ್ನು ಹೇಗೆ ಮಾಡುವುದು ಎಂಬ ಮಾಹಿತಿ ಇಲ್ಲಿದೆ. ಬೇಕಾಗುವ ಸಾಮಗ್ರಿಗಳು: ಉಳಿದ […]

ಕನ್ನಡ ದುನಿಯಾ 9 Feb 2026 1:28 pm

ಶಾಓಲಿನ್ ಸನ್ಯಾಸಿಗಳ ಜೊತೆ ರೋಬೋಟ್‌ಗಳ ಫೈಟಿಂಗ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಯ್ತು ವಿಡಿಯೋ

ಚೀನಾದ ಹೆನಾನ್ ಪ್ರಾಂತ್ಯದ ವಿಶ್ವಪ್ರಸಿದ್ಧ ಶಾಓಲಿನ್ ದೇವಸ್ಥಾನವೊಂದು ಇದೀಗ ವಿಶಿಷ್ಟ ವಿದ್ಯಮಾನಕ್ಕೆ ಸಾಕ್ಷಿಯಾಗಿದೆ. ಶತಶತಮಾನಗಳಿಂದ ಕೇವಲ ಮನುಷ್ಯರಿಗಷ್ಟೇ ಸೀಮಿತವಾಗಿದ್ದ ಕಠಿಣ ‘ಶಾಓಲಿನ್ ಕುಂಗ್ ಫೂ’ ಸಮರ ಕಲೆಯನ್ನು ಇದೀಗ ಹ್ಯೂಮನಾಯ್ಡ್ ರೋಬೋಟ್‌ಗಳು ಕಲಿಯುತ್ತಿವೆ. ಅಲ್ಲಿನ ಬೌದ್ಧ ಸನ್ಯಾಸಿಗಳ ಜೊತೆಗೂಡಿ ಯಂತ್ರಮಾನವರು ಸಮರ ಕಲೆಯ ಪಟ್ಟುಗಳನ್ನು ಪ್ರದರ್ಶಿಸುತ್ತಿರುವ ದೃಶ್ಯಗಳು ಜಗತ್ತಿನಾದ್ಯಂತ ಸಂಚಲನ ಮೂಡಿಸಿವೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋಗಳಲ್ಲಿ ಸನ್ಯಾಸಿಗಳ ಚಲನವಲನಗಳನ್ನು ರೋಬೋಟ್‌ಗಳು ಅತ್ಯಂತ ನಿಖರವಾಗಿ ಅನುಕರಿಸುತ್ತಿವೆ. ಒಬ್ಬ ಗುರು ತನ್ನ ಶಿಷ್ಯನಿಗೆ ಕಲಿಸುವಂತೆಯೇ ಇಲ್ಲಿ ಸನ್ಯಾಸಿಗಳು […]

ಕನ್ನಡ ದುನಿಯಾ 9 Feb 2026 1:23 pm

ಮೈಸೂರು ಮೃಗಾಲಯದ ‘ಪ್ರಾಚಿ’ಜೀಬ್ರಾ ಕರುಳಿನ ಕಾಯಿಲೆಗೆ ಬಲಿ: ಎರಡು ದಿನಗಳ ಹಿಂದಷ್ಟೇ ಮರಿಗೆ ಜನ್ಮ ನೀಡಿದ್ದ ಜೀಬ್ರಾ

ಮೈಸೂರು: ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ಎರಡು ದಿನಗಳ ಹಿಂದಷ್ಟೇ ಹೆಣ್ಣು ಮರಿಗೆ ಜನ್ಮ ನೀಡಿದ್ದ ‘ಪ್ರಾಚಿ’ ಜೀಬ್ರಾ ಕರುಳಿನ ಕಾಯಿಲೆಗೆ ಬಲಿಯಾಗಿರುವ ಘಟನೆ ನಡೆದಿದೆ. 10 ವರ್ಷದ ಜೀಬ್ರಾ ‘ಪ್ರಾಚಿ’ ಕರುಳಿನ ಕಾಯಿಲೆಯಿಂದ ಮೃತಪಟ್ತಿದೆ. ಹೆರಿಗೆಯ ನಂತರ ಉಂಟಾದ ತೀವ್ರ ಆರೋಗ್ಯ ಸಮಸ್ಯೆಗಳಿಂದ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದೆ. ಪ್ರಾಚಿ ಜೀಬ್ರಾವನ್ನು ಇಸ್ರೇಲ್‌ನಿಂದ ತರಲಾಗಿತ್ತು.ಮೈಸೂರು ಮೃಗಾಲಯದ ಪ್ರಮುಖ ಆಕರ್ಷಣೆಯಾಗಿತ್ತು. ಇದೀಗ ಹುಟ್ಟಿದ ಪುಟ್ಟ ಮರಿಗೆ ಮೃಗಾಲಯದ ಸಿಬ್ಬಂದಿ ವಿಶೇಷ ಕಾಳಜಿ ವಹಿಸಿ ಆರೈಕೆ ಮಾಡುತ್ತಿದ್ದಾರೆ. 2018ರ ಸೆಪ್ಟೆಂಬರ್ […]

ಕನ್ನಡ ದುನಿಯಾ 9 Feb 2026 1:14 pm

ಗಗನದಲ್ಲೇ ಹಾರಲಿದೆ ಟ್ಯಾಕ್ಸಿ: ಮೆಟ್ರೋ ನಗರಗಳ ಟ್ರಾಫಿಕ್ ಸಮಸ್ಯೆಗೆ ಬರಲಿದೆ ಹೈಟೆಕ್ ಮುಕ್ತಿ!

ದೇಶದ ಪ್ರಮುಖ ಮೆಟ್ರೋ ನಗರಗಳಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ವಾಹನ ದಟ್ಟಣೆ ಮತ್ತು ಟ್ರಾಫಿಕ್ ಸಮಸ್ಯೆಗೆ ಮುಕ್ತಿ ಹಾಡಲು ಸಿಐಐ (Confederation of India Industries) ಮಹತ್ವದ ಯೋಜನೆಯೊಂದನ್ನು ಮುಂದಿಟ್ಟಿದೆ. ಇನ್ನು ಮುಂದೆ ಗಂಟೆಗಟ್ಟಲೆ ರಸ್ತೆಯಲ್ಲಿ ಕಾಯುವ ಬದಲು, ಕೇವಲ ಕೆಲವೇ ನಿಮಿಷಗಳಲ್ಲಿ ಒಂದು ನಗರದಿಂದ ಮತ್ತೊಂದು ನಗರಕ್ಕೆ ತಲುಪಲು ‘ಏರ್ ಟ್ಯಾಕ್ಸಿ’ (Air Taxi) ವ್ಯವಸ್ಥೆ ಜಾರಿಗೆ ಬರಲಿದೆ. ಇದಕ್ಕಾಗಿ ಪ್ರತ್ಯೇಕ ರಸ್ತೆ ಅಥವಾ ಜಾಗದ ಅವಶ್ಯಕತೆ ಇಲ್ಲದೆ, ಕಟ್ಟಡಗಳ ಮೇಲ್ಛಾವಣಿಯನ್ನೇ ಲ್ಯಾಂಡಿಂಗ್ ಪ್ಯಾಡ್‌ಗಳಾಗಿ ಬಳಸಿಕೊಳ್ಳುವ […]

ಕನ್ನಡ ದುನಿಯಾ 9 Feb 2026 1:03 pm

ಮದ್ಯಪಾನವಿಲ್ಲ, ಆದ್ರೂ ಲಿವರ್ ಡ್ಯಾಮೇಜ್? ಭಾರತೀಯರಲ್ಲಿ ಹೊಸ ರೋಗದ ಆತಂಕ

ಭಾರತದಲ್ಲಿ ಈಗ ಮದ್ಯಪಾನಕ್ಕಿಂತಲೂ ಅಪಾಯಕಾರಿ ರೀತಿಯಲ್ಲಿ ಲಿವರ್ (ಯಕೃತ್ತು) ಸಂಬಂಧಿತ ಕಾಯಿಲೆಗಳು ಹರಡುತ್ತಿವೆ. ಇತ್ತೀಚಿನ ‘ಲ್ಯಾನ್ಸೆಟ್’ ಅಧ್ಯಯನದ ಪ್ರಕಾರ, ಭಾರತದ ಸುಮಾರು ಶೇ. 38.9 ರಷ್ಟು ವಯಸ್ಕರು ‘ಫ್ಯಾಟಿ ಲಿವರ್’ ಸಮಸ್ಯೆಯಿಂದ ಬಳಲುತ್ತಿದ್ದಾರೆ. ವಿಶೇಷವೆಂದರೆ, ಈ ಕಾಯಿಲೆಗೆ ಮದ್ಯಪಾನ ಕಾರಣವಲ್ಲ, ಬದಲಾಗಿ ಬದಲಾದ ಜೀವನಶೈಲಿ, ಬೊಜ್ಜು ಮತ್ತು ಮಧುಮೇಹವೇ ಮುಖ್ಯ ಕಾರಣ ಎಂದು ಸಂಶೋಧನೆ ತಿಳಿಸಿದೆ. ಈ ಸ್ಥಿತಿಯನ್ನು ವೈದ್ಯಕೀಯ ಭಾಷೆಯಲ್ಲಿ ‘ಮೆಟಬಾಲಿಕ್ ಡಿಸ್ಫಂಕ್ಷನ್ ಅಸೋಸಿಯೇಟೆಡ್ ಸ್ಟೀಟೋಟಿಕ್ ಲಿವರ್ ಡಿಸೀಸ್’ (MASLD) ಎಂದು ಕರೆಯಲಾಗುತ್ತದೆ. ಭಾರತದ 27 […]

ಕನ್ನಡ ದುನಿಯಾ 9 Feb 2026 12:47 pm

ಮೂಲಾಂಕ 1 ರವರಿಗೆ 2026 ಹೇಗಿರಲಿದೆ? ಸಂಖ್ಯಾಶಾಸ್ತ್ರಜ್ಞರು ನೀಡಿದ ಈ ಎಚ್ಚರಿಕೆ ಮಾತುಗಳನ್ನು ಮರೆಯಬೇಡಿ

ಸಂಖ್ಯಾಶಾಸ್ತ್ರದ ಪ್ರಕಾರ 2026ರ ವರ್ಷವು ಮೂಲಾಂಕ 1 ರ ಜನರಿಗೆ ಅತ್ಯಂತ ಮಹತ್ವದ ಬದಲಾವಣೆಯ ಕಾಲವಾಗಿದೆ. ಯಾವುದೇ ತಿಂಗಳ 1, 10, 19 ಅಥವಾ 28 ರಂದು ಜನಿಸಿದವರ ಮೂಲಾಂಕ ‘1’ ಆಗಿರುತ್ತದೆ. ಸೂರ್ಯನ ಅಧಿಪತ್ಯವಿರುವ ಈ ಮೂಲಾಂಕದವರಿಗೆ 2026 ನೇ ವರ್ಷವು ನಾಯಕತ್ವದ ಪರೀಕ್ಷೆಯ ಕಾಲವೂ ಹೌದು. ಈ ವರ್ಷದ ಒಟ್ಟು ಮೊತ್ತ 10 (2+0+2+6) ಆಗಿದ್ದು, ಇದು ಮತ್ತೆ 1 ಕ್ಕೆ ಬಂದು ನಿಲ್ಲುತ್ತದೆ. ಹೀಗಾಗಿ ಈ ವರ್ಷದಲ್ಲಿ ಮೂಲಾಂಕ 1 ರವರು ತಮ್ಮ […]

ಕನ್ನಡ ದುನಿಯಾ 9 Feb 2026 12:39 pm

ಹುಬ್ಬಳ್ಳಿಯ ಸಿದ್ದಾರೂಢ ಮಠಕ್ಕೆ ಭೇಟಿ ನೀಡಿದ ಗಾಯಕ ಸೋನು ನಿಗಮ್

ಹುಬ್ಬಳ್ಳಿ: ಖ್ಯಾತ ಗಾಯಕ ಸೋನು ನಿಗಮ್ ಹುಬ್ಬಳ್ಲಿಯ ಸಿದ್ದಾರೂಢ ಮಠಕ್ಕೆ ಭೇಟಿ ನೀಡಿ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಹುಬ್ಬಳ್ಳಿಗೆ ಆಗಮಿಸಿದ್ದ ಗಾಯಗ ಸೋನು ನಿಗಮ್ ಇಂದು ಬೆಳಿಗ್ಗೆ ಸಿದ್ದಾರೂಢ ಮಠಕ್ಕೆ ಭೇಟಿ ನೀಡಿ ಸಿದ್ಧಾರೂಢರ ದರ್ಶನ ಪಡೆದರು. ಗದ್ದುಗೆಗೆ ವಿಶೇಶ ಪೂಜೆ ನೆರವೇರಿಸಿದರು. ಇದೇ ವೇಳೆ ಸಿದ್ದಾರೂಢರ ಗದ್ದುಗೆ ಬಳಿ ಸೋನು ನಿಗಮ್ 10 ನಿಮಿಷ ಧ್ಯಾನ ಮಾಡಿದ್ದು ವಿಶೇಷವಾಗಿತ್ತು. ಬಳಿಕ ಮಠದ ಟ್ರಸ್ಟ್ ವತಿಯಿಂದ ಗಾಯಕ ಸೋನು ನಿಗಮ್ ಅವರಿಗೆ ಶಾಲು ಹೊದಿಸಿ ಸನ್ಮಾನಿಸಿ […]

ಕನ್ನಡ ದುನಿಯಾ 9 Feb 2026 12:37 pm

ಜಿಬಿಎ ಚುನಾವಣೆ: ಶಿಷ್ಯರಿಗೆ ಟಿಕೆಟ್ ಕೊಡಿಸುವ ಉತ್ಸಾಹದಲ್ಲಿದ್ದ ಬಿಜೆಪಿ ಶಾಸಕರಿಗೆ ಹೈಕಮಾಂಡ್ ಶಾಕ್!

ಕರ್ನಾಟಕದ ಪ್ರತಿಪಕ್ಷ ಬಿಜೆಪಿ ಗ್ರೇಟರ್ ಬೆಂಗಳೂರು ಅಥಾರಿಟಿ (ಜಿಬಿಎ) ಚುನಾವಣೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ಅದರಲ್ಲೂ ಮುಂಬೈ ಮಹಾನಗರ ಪಾಲಿಕೆ, ತಿರುವನಂತಪುರಂ ಪಾಲಿಕೆ ಚುನಾವಣೆಯಲ್ಲಿ ಜಯಗಳಿಸಿದ ಬಳಿಕ ಕರ್ನಾಟಕದ ರಾಜಧಾನಿ ಮೇಲೆ ಬಿಜೆಪಿ ಹೈಕಮಾಂಡ್ ಕಣ್ಣು ನೆಟ್ಟಿದೆ. ಹೈಕಮಾಂಡ್ ಜಿಬಿಎ ಚುನಾವಣೆಗೆ ಉಸ್ತುವಾರಿಯಾಗಿ ರಾಮ್ ಮಾಧವ್ ನೇಮಕ ಮಾಡಿದೆ. ಸಹ-ಉಸ್ತುವಾರಿಗಳು ಸತೀಶ್ ಪೂನಿಯಾ ಮತ್ತು ಸಂಜಯ್ ಉಪಾಧ್ಯಾಯ. ಕಳೆದ ವಾರ ಮೂವರು ಸಹ ಬೆಂಗಳೂರು ನಗರಕ್ಕೆ ಆಗಮಿಸಿದ್ದರು ರಾಜ್ಯದ ಪಕ್ಷದ ನಾಯಕರ ಜೊತೆ ಸಭೆ ನಡೆಸಿದರು. ಜಿಬಿಎ […]

ಕನ್ನಡ ದುನಿಯಾ 9 Feb 2026 12:23 pm

ಬೆಂಗಳೂರು ಏರ್ ಪೋರ್ಟ್ ನಲ್ಲಿ ರನ್ ವೇಗೆ ಹಾರಿ ಬಂದ ಬೃಹತ್ ಜಾಹೀರಾತು ಬಲೂನು: ಸ್ವಲ್ಪದರಲ್ಲಿ ತಪ್ಪಿದ ಭಾರಿ ಅನಾಹುತ!

ಬೆಂಗಳೂರು: ಕೆಲ ದಿನಗಳ ಹಿಂದೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರನ್ ವೇಗೆ ನಾಯಿ ನುಗ್ಗಿ ಅವಾಂತರ ಸೃಷ್ಟಿ ಮಾಡಿತ್ತು. ಭದ್ರತಾ ಲೋಪದ ಬಗ್ಗೆ ವರದಿಯಾಗಿತ್ತು. ಇದೀಗ ಜಾಹಿರಾತಿನ ಬೃಹತ್ ಬಲೂನ್ ಒಂದು ರನ್ ವೇಗೆ ಹಾರಿ ಬಂದು ಬಿದ್ದಿರುವ ಘಟನೆ ನಡೆದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತರಾಷ್ಟ್ರಿಯ ವಿಮಾನ ನಿಲ್ದಾಣದಲ್ಲಿ ರನ್ ವೇಕೆ ಏಕಾಏಕಿ ಬೃಹತ್ ಬಲೂನ್ ಒಂದು ಹಾರಿ ಬಂದಿದೆ. ಈ ಸಂದರ್ಭದಲ್ಲಿ ವಿಮಾನ ಹಾರಾಟವಿರಲಿಲ್ಲವಾದ್ದರಿಂದ ಭಾರಿ ಅನಾಹುತವೊಂದು ತಪ್ಪಿದಂತಾಗಿದೆ. […]

ಕನ್ನಡ ದುನಿಯಾ 9 Feb 2026 12:10 pm

Gold Rate Rise:ವಾರದ ಆರಂಭವೇ ಚಿನ್ನ-ಬೆಳ್ಳಿ ಶಾಕ್: ಚಿನ್ನ ₹2,240 ಏರಿಕೆ,ಬೆಳ್ಳಿ ದರ ₹3 ಲಕ್ಷಕ್ಕೆ ಜಿಗಿತ

ಇನ್ನೇನು ಚಿನ್ನದ ಬೆಲೆ ಇಳಿಕೆಯಾಗಲಿದೆ ಸ್ವಲ್ಪ ಕಾದು ಆಮೇಲೆ ಖರೀದಿಸೋಣ ಎಂದು ಕಾದಿದ್ದ ಗ್ರಾಹಕರಿಗೆ ಇಂದು ದೊಡ್ಡ ಬರೆ ಬಿದ್ದಿದೆ. ಬಜೆಟ್ ನಂತರ ಇಳಿಕೆಯ ಹಾದಿಯಲ್ಲಿದ್ದ ಹಳದಿ ಲೋಹದ ಬೆಲೆ ಇಂದು ಬೆಂಗಳೂರಿನಲ್ಲಿ ಊಹೆಗೂ ಮೀರಿದಷ್ಟು ಏರಿಕೆ ಕಂಡು ಹೂಡಿಕೆದಾರರ ಜೇಬಿಗೆ ಕತ್ತರಿ ಹಾಕಿದೆ.ಫೆಬ್ರವರಿ ಎರಡನೇ ವಾರದ ಆರಂಭವೇ ಚಿನ್ನ ಮತ್ತು ಬೆಳ್ಳಿ ಪ್ರಿಯರಿಗೆ ಕಹಿ ಸುದ್ದಿ ಹೊತ್ತು ತಂದಿದೆ. ಇಂದು (ಫೆಬ್ರವರಿ 9, 2026) ಮಾರುಕಟ್ಟೆಯಲ್ಲಿ ಬೆಲೆಗಳು ರಾಕೆಟ್ ವೇಗದಲ್ಲಿ ಏರಿವೆ. ಇಂದಿನ ದರ ಪಟ್ಟಿ […]

ಕನ್ನಡ ದುನಿಯಾ 9 Feb 2026 12:04 pm

ಮಂಡ್ಯದಲ್ಲಿ ಘೋರ ಘಟನೆ: ಮದುವೆ ನಿಶ್ಚಯವಾಗಿದ್ದ ಮಗಳೊಂದಿಗೆ ತಾಯಿ ಆತ್ಮಹತ್ಯೆಗೆ ಶರಣು

ಮಂಡ್ಯ: ಮದುವೆ ನಿಶ್ಚಯವಾಗಿದ್ದ ಮಗಳೊಂದಿಗೆ ತಾಯಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಂಡ್ಯದಲ್ಲಿ ನಡೆದಿದೆ. ಮಂಡ್ಯ ಜಿಲ್ಲೆಯ ದಳವಾಯಿ ಕೋಡಿಹಳ್ಳಿ ಗ್ರಾಮದಲ್ಲಿ ಈ ದುರಂತ ಸಂಭವಿಸಿದೆ. ತಾಯಿ ಹಾಗೂ ಮಗಳು ಇಬ್ಬರೂ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಶಕುಂತಲಾದೇವಿ (46) ಹಾಗೂ ಪ್ರಿಯಾಂಕಾ (19) ಮೃತ ದುರ್ದೈವಿಗಳು. ಮಗಳು ಪ್ರಿಯಾಂಕಾ ಮದುವೆಗೆ ಕುಟುಂಬದವರು ಸಿದ್ಧತೆ ನಡೆಸಿದ್ದರು. ಆದರೆ ಈಗ ತಾಯಿ-ಮಗಳು ಇಬ್ಬರೇ ಆತ್ಮಹತ್ಯೆಗೆ ಶರಣಾಗಿದ್ದು, ಕುಟುಂಬದ ಆಕ್ರಂದನ ಮುಗಿಲುಮುಟ್ಟಿದೆ.

ಕನ್ನಡ ದುನಿಯಾ 9 Feb 2026 12:01 pm

ಟೀಮ್ ಇಂಡಿಯಾಗೆ ಗೌತಮ್ ಗಂಭೀರ್ ಸ್ಪೆಷಲ್ ಡಿನ್ನರ್: ದೆಹಲಿಯ ನಿವಾಸದಲ್ಲಿ ಆತಿಥ್ಯ ಸ್ವೀಕರಿಸಿದ ಸೂರ್ಯಕುಮಾರ್ ಪಡೆ

ಟಿ20 ವಿಶ್ವಕಪ್ 2026ರ ತನ್ನ ಎರಡನೇ ಗುಂಪು ಹಂತದ ಪಂದ್ಯಕ್ಕಾಗಿ ದೆಹಲಿಗೆ ಆಗಮಿಸಿರುವ ಭಾರತ ತಂಡಕ್ಕೆ ಮುಖ್ಯ ಕೋಚ್ ಗೌತಮ್ ಗಂಭೀರ್ ಆತಿಥ್ಯ ನೀಡಿದ್ದಾರೆ. ಫೆಬ್ರವರಿ 12 ರಂದು ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಮೀಬಿಯಾ ವಿರುದ್ಧ ಪಂದ್ಯ ನಡೆಯಲಿದ್ದು, ಇದಕ್ಕೂ ಮುನ್ನ ತಂಡದ ಆಟಗಾರರಲ್ಲಿ ಆತ್ಮವಿಶ್ವಾಸ ಮತ್ತು ಒಗ್ಗಟ್ಟು ಹೆಚ್ಚಿಸಲು ಗಂಭೀರ್ ಈ ಔತಣಕೂಟ ಏರ್ಪಡಿಸಿದ್ದರು. ಗೌತಮ್ ಗಂಭೀರ್ ಅವರ ದೆಹಲಿಯ ಖಾಸಗಿ ನಿವಾಸದಲ್ಲಿ.ನಾಯಕ ಸೂರ್ಯಕುಮಾರ್ ಯಾದವ್ ಸೇರಿದಂತೆ ಇಡೀ ಭಾರತೀಯ ತಂಡ ಮತ್ತು ಪೋಷಕ ಸಿಬ್ಬಂದಿ. […]

ಕನ್ನಡ ದುನಿಯಾ 9 Feb 2026 11:26 am