ಅಂಬಾನಿ ಫಿಟ್ನೆಸ್ ಟ್ರೈನರ್ ಹೇಳಿದ ಪ್ರೋಟೀನ್ ಸೀಕ್ರೆಟ್: ದಿನಕ್ಕೆ 3 ಚಮಚ ಈ ಬೀಜಗಳು ಸಾಕು
ಅನಂತ್ ಅಂಬಾನಿ ಮತ್ತು ನೀತಾ ಅಂಬಾನಿ ಅವರಂತಹ ದಿಗ್ಗಜರಿಗೆ ತೂಕ ಇಳಿಸಲು ಸಹಾಯ ಮಾಡಿರುವ ಖ್ಯಾತ ಫಿಟ್ನೆಸ್ ತರಬೇತುದಾರ ವಿನೋದ್ ಚನ್ನಾ, ಪ್ರೋಟೀನ್ ಕೊರತೆಯನ್ನು ನೀಗಿಸಲು ಬಹುತೇಕರು ನಿರ್ಲಕ್ಷಿಸುವ ಒಂದು ಅದ್ಭುತ ಆಹಾರದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಕೇವಲ 3 ಚಮಚದಷ್ಟು ಇದನ್ನು ಸೇವಿಸಿದರೆ ದೇಹಕ್ಕೆ ಸಿಗುವ ಶಕ್ತಿ ಅಪಾರ ಎಂದು ಅವರು ವಿವರಿಸಿದ್ದಾರೆ. ಯಾವುದು ಆ ಪ್ರೋಟೀನ್ ಮೂಲ? ಜನರು ಸಾಮಾನ್ಯವಾಗಿ ಪ್ರೋಟೀನ್ ಬೇಕೆಂದರೆ ಕೇವಲ ಸಪ್ಲಿಮೆಂಟ್ಗಳು ಅಥವಾ ದುಬಾರಿ ಆಹಾರಗಳ ಮೊರೆ ಹೋಗುತ್ತಾರೆ. ಆದರೆ […]
BREAKING : ಪ್ರೀತಿ ನಿರಾಕರಿಸಿದ್ದಕ್ಕೆ ಮಹಿಳೆಗೆ ಚಾಕು ಇರಿದು ಬರ್ಬರವಾಗಿ ಹತ್ಯೆಗೈದ ಪಾಗಲ್ ಪ್ರೇಮಿ.!
ಕೋಲಾರ : ಪಾಗಲ್ ಪ್ರೇಮಿಯೋರ್ವ ಮಹಿಳೆಯನ್ನು ಚಾಕು ಇರಿದು ಬರ್ಬರವಾಗಿ ಕೊಲೆಗೈದ ಘಟನೆ ಕೋಲಾರದ ಬಂಗಾರಪೇಟೆ ರಸ್ತೆಯಲ್ಲಿ ನಡೆದಿದೆ. ಚಾಕು ಇರಿದು ಸುಜಾತಾ (27) ಎಂಬ ಮಹಿಳೆಯನ್ನು ಪ್ರಿಯತಮ ಚಿರಂಜೀವಿ ಕೊಲೆ ಮಾಡಿದ್ದಾನೆ.ಕೊಲೆಯಾದ ಮಹಿಳೆ ಸುಜಾತಾ ಬಂಗಾರಪೇಟೆ ತಾಲೂಕಿನ ದಾಸರ ಹೊಸಹಳ್ಳಿ ಗ್ರಾಮದ ನಿವಾಸಿ ಎಂದು ತಿಳಿದು ಬಂದಿದೆ. ಯುವತಿ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದಳು. ರಸ್ತೆಯಲ್ಲಿ ಹೋಗುವಾಗ ಸುಜಾತಾಳನ್ನು ಮಾತನಾಡಿಸಲು ಚಿರಂಜೀವಿ ಮುಂದಾಗುತ್ತಾನೆ. ಸಿಟ್ಟಾದ ಸುಜಾತಾ ಆತನಿಗೆ ಬೈಯುತ್ತಾಳೆ. ಇದರಿಂದ ರೊಚ್ಚಿಗೆದ್ದ ಚಿರಂಜೀವಿ ಕೀ […]
ಕನ್ನಡದಲ್ಲಿ ಸಂಕ್ರಾಂತಿ 2026ರ ಶುಭಾಶಯ ಕೋರಿದ ಪ್ರಧಾನಿ ಮೋದಿ
ಸಂಕ್ರಾಂತಿ ಹಬ್ಬದ ಸಂಭ್ರಮ ದೇಶದಲ್ಲಿ ಜೋರಾಗಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ವಿವಿಧ ರಾಜಕೀಯ ನಾಯಕರು ಜನರಿಗೆ ಈ ವರ್ಷದ ಮೊದಲ ಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸಾಮಾಜಿಕ ಜಾಲತಾಣದ ಪೋಸ್ಟ್ ಮೂಲಕ ಕನ್ನಡದಲ್ಲಿಯೇ ಹಬ್ಬದ ಶುಭಾಶಯಗಳನ್ನು ಸಲ್ಲಿಸಿದ್ದಾರೆ. ‘ಸಂಕ್ರಾಂತಿ ಹಬ್ಬದ ಈ ಸಂದರ್ಭದಲ್ಲಿ ಎಲ್ಲರಿಗೂ ಹಾರ್ದಿಕ ಶುಭಾಶಯಗಳು’ ಎಂದು ಹೇಳಿದ್ದಾರೆ. ಮೋದಿ ತಮ್ಮ ಪೋಸ್ಟ್ನಲ್ಲಿ, ‘ಈ ಹಬ್ಬವನ್ನು ಭಾರತದಾದ್ಯಂತ ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತದೆ. ಇದು ತನ್ನೊಂದಿಗೆ ಸಂತೋಷ ಮತ್ತು ಕೃತಜ್ಞತೆಯ ಭಾವವನ್ನು […]
36 ಗಂಟೆಗಳ ಕಾಲ ಹನುಮ ವಿಗ್ರಹದ ಸುತ್ತ ನಾಯಿ ಸುತ್ತಾಟ: ಚಮತ್ಕಾರವೇ ಅಥವಾ ಗಂಭೀರ ಕಾಯಿಲೆಯ ಸಂಕೇತವೇ?
ಬಿಜ್ನೋರ್ನ ದೇವಸ್ಥಾನವೊಂದರಲ್ಲಿ ನಾಯಿಯೊಂದು ಹನುಮಂತನ ವಿಗ್ರಹದ ಸುತ್ತ ಸತತ 36 ಗಂಟೆಗಳ ಕಾಲ ಪ್ರದಕ್ಷಿಣೆ ಹಾಕಿರುವ ಘಟನೆ ಈಗ ಭಾರೀ ಚರ್ಚೆಗೆ ಕಾರಣವಾಗಿದೆ. ಭಕ್ತರು ಇದನ್ನು ‘ಚಮತ್ಕಾರ’ ಎಂದು ನಂಬಿ ಮುಗಿಬೀಳುತ್ತಿದ್ದರೆ, ಇತ್ತ ತಜ್ಞರು ಮತ್ತು ಎಐ ತಂತ್ರಜ್ಞಾನವು ಇದರ ಹಿಂದೆ ಗಂಭೀರ ಆರೋಗ್ಯ ಸಮಸ್ಯೆಯಿದೆ ಎಂಬ ಎಚ್ಚರಿಕೆಯನ್ನು ನೀಡಿದೆ. ನಡೆದಿದ್ದೇನು? ಚಮತ್ಕಾರವೋ ಅಥವಾ ಅನಾರೋಗ್ಯವೋ? ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯ ನಗೀನಾ ಎಂಬಲ್ಲಿ ಈ ವಿಚಿತ್ರ ಘಟನೆ ನಡೆದಿದೆ. ಹನುಮಂತನ ವಿಗ್ರಹದ ಮುಂದೆ ನಾಯಿಯೊಂದು ನಿರಂತರವಾಗಿ […]
BREAKING: ಹಬ್ಬದ ದಿನವೇ ಬೆಂಗಳೂರಿನಲ್ಲಿ ಭೀಕರ ಅಪಘಾತ: ಬೈಕ್ ಸವಾರ ಸ್ಥಳದಲ್ಲೇ ದುರ್ಮರಣ
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಭೀಕರ ಅಪಘಾತ ಸಂಭವಿಸಿದೆ. ಖಾಸಗಿ ಬಸ್ ಹಾಗೂ ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬೆಂಗಳೂರಿನ ನೃಪತುಂಗ ರಸ್ತೆಯಲ್ಲಿ ಈ ದುರಂತ ಸಂಭವಿಸ್ದೆ. ಬೈಕ್ ಸವಾರ ಫಾಸರ್ (75) ಮೃತ ದುರ್ದೈವಿ. ಬಸ್ ಡಿಕ್ಕಿಯಾಗಿ ಕೆಳಗೆ ಬಿದ್ದ ಬೈಕ್ ಸವಾರನ ಮೇಲೆಯೇ ಬಸ್ ನ ಚಕ್ರ ಹರಿದು ಹೋಗಿದೆ. ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೆಂಗಳುರಿನಿಂದ ಕೃಷ್ಣಗಿರಿಗೆ ತೆರಳುತ್ತಿದ್ದ ಖಾಸಗಿ ಬಸ್ ಡಿಕ್ಕಿಯಾಗಿ ಈ ಘಟನೆ ನಡೆದಿದೆ. […]
ಭಾರತೀಯ ಆಹಾರಕ್ಕೆ ಅವಮಾನ ಮಾಡಿದ ಅಮೆರಿಕಕ್ಕೆ ಪಾಠ: ಕಾನೂನು ಹೋರಾಟದಲ್ಲಿ ಕೋಟಿ ಕೋಟಿ ಗೆದ್ದ ಪಿಎಚ್ಡಿ ವಿದ್ಯಾರ್ಥಿಗಳು
ಅಮೆರಿಕದ ಪ್ರತಿಷ್ಠಿತ ವಿಶ್ವವಿದ್ಯಾಲಯವೊಂದರಲ್ಲಿ ಮಧ್ಯಾಹ್ನದ ಊಟಕ್ಕೆಂದು ಕೇವಲ ‘ಪಾಲಕ್ ಪನೀರ್’ ಬಿಸಿ ಮಾಡಿದ ಘಟನೆ, ಇಬ್ಬರು ಭಾರತೀಯ ಸಂಶೋಧನಾ ವಿದ್ಯಾರ್ಥಿಗಳ ಬದುಕನ್ನೇ ಬದಲಿಸಿದೆ. ಜನಾಂಗೀಯ ತಾರತಮ್ಯದ ವಿವಾದವಾಗಿ ರೂಪಾಂತರಗೊಂಡ ಈ ಘಟನೆಯು ಅಂತಿಮವಾಗಿ ವಿದ್ಯಾರ್ಥಿಗಳಿಗೆ ಸುಮಾರು 1.80 ಕೋಟಿ ರೂಪಾಯಿ (2 ಲಕ್ಷ ಡಾಲರ್) ಪರಿಹಾರ ನೀಡುವಲ್ಲಿ ಅಂತ್ಯಗೊಂಡಿದೆ. ಘಟನೆಯ ಹಿನ್ನೆಲೆ: ಪಾಲಕ್ ಪನೀರ್ ಮತ್ತು ವಾಸನೆಯ ತಕರಾರು ಸೆಪ್ಟೆಂಬರ್ 5, 2023 ರಂದು ಕೊಲೊರಾಡೋ ಬೌಲ್ಡರ್ ವಿಶ್ವವಿದ್ಯಾಲಯದಲ್ಲಿ ಮಾನವಶಾಸ್ತ್ರ ವಿಷಯದಲ್ಲಿ ಪಿಎಚ್ಡಿ ಮಾಡುತ್ತಿದ್ದ ಆದಿತ್ಯ ಪ್ರಕಾಶ್ […]
ವಾಹನ ಸವಾರರೇ ಎಚ್ಚರ: ಬೆಂಗಳೂರಿನಲ್ಲಿ ಒಂದೇ ವರ್ಷದಲ್ಲಿ ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣ ಶೇ82ರಷ್ಟು ಹೆಚ್ಚಳ
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣ ದಿನದಿಂದ ದಿನಕ್ಕೆ, ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ವರದಿ ಪ್ರಕಾರ ಒಂದೇ ವರ್ಷದಲ್ಲಿ ಶೇ.82 ಪ್ರಕರಣಗಳು ಹೆಚ್ಚಳವಾಗಿವೆ. 2025ರಲ್ಲಿ ಶೇ. 82ರಷ್ಟು ಸಂಚಾರಿ ನಿಯಮ ಉಲ್ಲಂಘನೆ ಪ್ರಾರಣ ಹೆಚ್ಚಾಗಿವೆ. ಅತಿಯಾದ ವೇಗ, ನಿರ್ಲಕ್ಷ್ಯ, ಫುಟ್ಪಾತ್ ಪಾರ್ಕಿಂಗ್ ಸೇರಿದಂತೆ ಭಾರತೀಯ ನ್ಯಾಯ ಸಂಹಿತೆ ಅಡಿ ಪೊಲೀಸರು ದಾಖಲಿಸಿರುವ ಪ್ರಕರಣಗಳು 6,872ಕ್ಕೆ ಏರಿಕೆಯಾಗಿದೆ. ಸಂಚಾರಿ ನಿಯಮ ಉಲ್ಲಂಘನೆಯಡಿಯಲ್ಲಿ ಅತಿವೇಗ ಮತ್ತು ನಿರ್ಲಕ್ಷ್ಯದ ಚಾಲನೆ ಮತ್ತು ತಪ್ಪು ದಿಕ್ಕಿನಲ್ಲಿ ಚಾಲನೆ […]
ಸಂಚಲನ ಸೃಷ್ಟಿಸಿದ ‘Are You Dead ?’ಆ್ಯಪ್ : ಹಣ ಕೊಟ್ಟು ಡೌನ್ಲೋಡ್ ಮಾಡ್ತಿದ್ದಾರೆ ಜನ.!
ಬೀಜಿಂಗ್: ಚೀನಾದಲ್ಲಿ ಹೊಸ ಆ್ಯಪ್ ಒಂದು ಸಂಚಲನ ಸೃಷ್ಟಿಸುತ್ತಿದೆ. ‘ಆರ್ ಯು ಡೆಡ್ ಆ್ಯಪ್’ ಈಗ ಚೀನಾದಲ್ಲಿ ವೈರಲ್ ಆಗುತ್ತಿದೆ. ಆ್ಯಪ್ ಡೌನ್ಲೋಡ್ ಮಾಡಿಕೊಳ್ಳುವವರ ಸಂಖ್ಯೆ ತೀವ್ರವಾಗಿ ಹೆಚ್ಚುತ್ತಿದೆ. ಇದರೊಂದಿಗೆ, ಆ್ಯಪ್ ರಚಿಸಿದ ಕಂಪನಿಯು ಈಗ ಅದಕ್ಕೆ ಚಂದಾದಾರಿಕೆ ಶುಲ್ಕವನ್ನು ಸಹ ಪರಿಚಯಿಸಿದೆ. ಈ ಆ್ಯಪ್ ಅನ್ನು ಚೈನೀಸ್ ಭಾಷೆಯಲ್ಲಿ ಸಿಲಿಮಿ ಎಂದು ಕರೆಯಲಾಗುತ್ತದೆ. ಇಂಗ್ಲಿಷ್ನಲ್ಲಿ ಇದನ್ನು ‘Are You Dead?’ ಎಂದು ಕರೆಯಲಾಗುತ್ತದೆ. ಆರ್ ಯು ಡೆಡ್ ಎಂದರೆ ನೀವು ಸತ್ತಿದ್ದೀರಾ..? ಎಂದರ್ಥ…ಈ ಆ್ಯಪ್ ನ […]
ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ನಿರಾಸೆ
ಕರ್ನಾಟಕದಲ್ಲಿ ಸರ್ಕಾರಿ ಉದ್ಯೋಗ ಪಡೆಯಬೇಕು ಎಂಬ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳು ಕಾಯುವುದು ಅನಿವಾರ್ಯವಾಗಿದೆ. ಪರಿಶಿಷ್ಟ ಜಾತಿಗೆ ಒಳ ಮೀಸಲಾತಿ ಕಲ್ಪಿಸುವ ಮಸೂದೆಗೆ ರಾಜ್ಯಪಾಲರು ಅಂಕಿತ ಹಾಕಿಲ್ಲ. ಆದ್ದರಿಂದ ಸರ್ಕಾರದ ವಿವಿಧ ಇಲಾಖೆಗಳ ನೇಮಕಾತಿ ಇನ್ನೂ ವಿಳಂಬವಾಗಲಿದೆ. ಚಳಿಗಾಲದ ಅಧಿವೇಶನದಲ್ಲಿ ಉಭಯ ಸದನಗಳಲ್ಲಿ ಪರಿಶಿಷ್ಟ ಜಾತಿಗೆ ಒಳ ಮೀಸಲಾತಿ ಕಲ್ಪಿಸುವ ಮಸೂದೆಗೆ ಒಪ್ಪಿಗೆ ಸಿಕ್ಕಿದೆ. ಸರ್ಕಾರ ಇದನ್ನು ಅಂತಿಮ ಅನುಮೋದನೆಗಾಗಿ ರಾಜ್ಯಪಾಲರಿಗೆ ಕಳಿಸಿತ್ತು. ರಾಜ್ಯಪಾಲರು ಸರ್ಕಾರ ಕಳಿಸಿದ್ದ 22 ಮಸೂದೆಗಳಲ್ಲಿ 19ಕ್ಕೆ ಅಂತಿಕ ಹಾಕಿದ್ದಾರೆ. ವಾಪಸ್ ಕಳಿಸಿ, ಕೆಲ ಸ್ಪಷ್ಟನೆಗಳನ್ನು […]
BIG NEWS: ಬೆಂಗಳೂರಿನಲ್ಲಿ ಸಿಲಿಂಡರ್ ಸ್ಫೋಟ: ಅಕ್ರಮ ಬಾಂಗ್ಲಾ ವಲಸಿಗರು ನೆಲೆಸಿದ್ದ ಶೆಡ್ ಗಳು ಬೆಂಕಿಗಾಹುತಿ
ಬೆಂಗಳೂರು: ಬೆಂಗಳೂರಿನಲ್ಲಿ ಅಕ್ರಮವಾಗಿ ಬಾಂಗ್ಲಾ ವಲಸಿಗರು ನೆಲೆಸಿರುವ ಶೆಡ್ ಬಳಿ ಬೆಂಕಿ ಅವಘಡ ಸಂಭವಿಸಿದೆ. ಬೆಂಗಳೂರು ಹೊರವಲಯದ ಬೇಗೂರು ಬಳಿ ಈ ಘಟನೆ ನಡೆದಿದೆ. ಸಿಲಿಂಡರ್ ಸ್ಫೋಟಗೊಂಡು ಬೆಂಕಿ ಅವಘಡ ಸಂಭವಿಸಿದೆ ಎನ್ನಲಾಗಿದೆ. ಬೇಗೂರು ಬಳಿಯ ಯಲೇನಹಳ್ಳಿ ಬಳಿಯ ಡಂಪಿಂಗ್ ಯಾರ್ಡ್ ಬಳಿ ಈ ಘಟನೆ ನಡೆದಿದೆ. ಇಲ್ಲಿ ೫ ಎಕರೆ ಜಾಗದಲ್ಲಿ ಬಾಂಗ್ಲ ಅವಲಸಿಗರು ಅಕ್ರಮವಾಗಿ ನೆಲೆಸಿದ್ದರು. ಕೆಲ ದಿನಗಳ ಹಿಂದಷ್ಟೇ ಅವರನ್ನು ಖಾಲಿ ಮಾಡಿಸಿ ಶೆಡ್ ಗಳನ್ನು ತೆರವು ಮಾಡಲಾಗಿತ್ತು. ಆದರೆ ಮತ್ತೆ ಇದೇ […]
ನವದೆಹಲಿ: ವಿಮೆ ಎಂದರೆ ಕೇವಲ ಖಾಸಗಿ ಕಂಪನಿಗಳ ಮೊರೆ ಹೋಗುವ ಕಾಲ ಈಗ ಬದಲಾಗಿದೆ. ಖಾಸಗಿ ಸಂಸ್ಥೆಗಳು ಹೆಚ್ಚಿನ ಪ್ರೀಮಿಯಂ ವಿಧಿಸುತ್ತಿರುವ ಈ ಕಾಲದಲ್ಲಿ, 100 ವರ್ಷಗಳ ಇತಿಹಾಸವಿರುವ ಪೋಸ್ಟಲ್ ಲೈಫ್ ಇನ್ಶುರೆನ್ಸ್ (PLI) ಸಾಮಾನ್ಯ ಜನರಿಗೆ ವರದಾನವಾಗಿ ಪರಿಣಮಿಸಿದೆ. ಅತ್ಯಲ್ಪ ಹೂಡಿಕೆಯಲ್ಲಿ ಗರಿಷ್ಠ ಭದ್ರತೆ ನೀಡುವ ಈ ಯೋಜನೆ ಈಗ ರೈತರು ಮತ್ತು ಕಾರ್ಮಿಕರಿಗೂ ಲಭ್ಯವಿದೆ. ಫೆಬ್ರವರಿ 1, 1884 ರಂದು ಅಂಚೆ ನೌಕರರಿಗಾಗಿ ಆರಂಭವಾದ ಈ ಸೇವೆ, ಇಂದು ದೇಶದ ಅತ್ಯಂತ ವಿಶ್ವಾಸಾರ್ಹ ವಿಮಾ […]
ರಾಜ್ಯದ ಜನತೆಗೆ ‘ಮಕರ ಸಂಕ್ರಾಂತಿ’ ಹಬ್ಬದ ಶುಭಾಶಯ ಕೋರಿದ CM ಸಿದ್ದರಾಮಯ್ಯ
ಬೆಂಗಳೂರು : ಇಂದು ರಾಜ್ಯಾದ್ಯಂತ ಮಕರ ಸಂಕ್ರಾಂತಿ ಹಬ್ಬದ ಸಂಭ್ರಮ. ಈ ಹಿನ್ನೆಲೆ ರಾಜ್ಯದ ಜನತೆಗೆ ಸಿಎಂ ಸಿದ್ದರಾಮಯ್ಯ ಮಕರ ಸಂಕ್ರಾಂತಿ ಹಬ್ಬದ ಶುಭಾಶಯ ಕೋರಿದ್ದಾರೆ. ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿದ ಸಿಎಂ ಸಿದ್ದರಾಮಯ್ಯ ‘ಋತು ಮನ್ವಂತರದ ಹಬ್ಬವಾದ ಮಕರ ಸಂಕ್ರಾಂತಿಯು ಸಮಾಜದ ದ್ವೇಷ – ಅಸೂಯೆ – ಅಪನಂಬಿಕೆಗಳನ್ನು ಕಳೆದು ಶಾಂತಿ, ಸೌಹಾರ್ದತೆ, ಪ್ರೀತಿಯ ಹೊಸ ಹಾದಿಯಲ್ಲಿ ಮುನ್ನಡೆಸಲಿ. ಅನ್ನದಾತನ ವರ್ಷದ ಶ್ರಮವೆಲ್ಲ ಬೆಳೆಯ ರೂಪದಲ್ಲಿ ಕೈಸೇರುವ ಕಾಲವಿದು. ಈ ಸಂಭ್ರಮದ ಹಬ್ಬವು ರೈತಾಪಿ ಜನರ […]
ನಟಿ ‘ಐಶ್ವರ್ಯ ರೈ’ಮಗಳಿಗೆ ಇನ್ನೂ ಯಾಕೆ ‘ಮೊಬೈಲ್’ಕೊಡಿಸಿಲ್ಲ : ಅಭಿಷೇಕ್ ಬಚ್ಚನ್ ಶಾಕಿಂಗ್ ಹೇಳಿಕೆ.!
ಇಂದಿನ ಯುಗದಲ್ಲಿ ಚಿಕ್ಕಮಕ್ಕಳು ಕೂಡ ಮೊಬೈಲ್ ಇಲ್ಲದೇ ಇರೋದಿಲ್ಲ. ಮೊಬೈಲ್ ಇಲ್ಲದೇ ಮಕ್ಕಳು ಊಟ ಕೂಡ ಮಾಡಲ್ಲ. ಶಾಲಾ ಮಕ್ಕಳಿಗಂತೂ ಮೊಬೈಲ್ ಫೋನ್ ಬೇಕೇ ಬೇಕು. ಅದೆಷ್ಟೇ ಕಷ್ಟ ಆದರೂ ಪೋಷಕರು ಮಕ್ಕಳಿಗೆ ದುಬಾರಿ ಬೆಲೆಯ ಮೊಬೈಲ್ ಫೋನ್ ಕೊಡಿಸುತ್ತಾರೆ. ಸಾಮಾನ್ಯ ಜನರ ಮನೆಗಳಲ್ಲಿ ಪರಿಸ್ಥಿತಿ ಹೀಗಿದ್ದರೆ ನಾವು ಸೆಲೆಬ್ರಿಟಿಗಳ ಬಗ್ಗೆ ಮಾತನಾಡಬೇಕಾಗಿಲ್ಲ. ಅವರು ಐಫೋನ್ಗಳು ಮತ್ತು ಟ್ಯಾಬ್ಗಳಂತಹ ಐಷಾರಾಮಿ ಗ್ಯಾಜೆಟ್ಗಳೊಂದಿಗೆ ತಮ್ಮ ಸಮಯವನ್ನು ಕಳೆಯುತ್ತಾರೆ. ಆದರೆ, ಬಾಲಿವುಡ್ ಸ್ಟಾರ್ ದಂಪತಿಗಳಾದ ಐಶ್ವರ್ಯಾ ರೈ ಮತ್ತು ಅಭಿಷೇಕ್ […]
ಅಭಿಮಾನಿಗಳಿಗೆ ಶಾಕ್ ನೀಡಿದ ಆರ್ಸಿಬಿ ಆಡಳಿತ ಮಂಡಳಿ?
ಅಭಿಮಾನಿಗಳಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಡಳಿತ ಮಂಡಳಿ ಶಾಕ್ ನೀಡಲು ಹೊರಟಿದೆ. ತವರು ನೆಲದಲ್ಲಿ ನೆಚ್ಚಿನ ತಂಡದ ಪಂದ್ಯಗಳನ್ನು ವೀಕ್ಷಣೆ ಮಾಡುವ ಅಭಿಮಾನಿಗಳ ಕನಸಿಗೆ ತಣ್ಣೀರು ಸುರಿದಿದೆ. ಹೌದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಡಳಿತ ಮಂಡಳಿ ಬೆಂಗಳೂರು ನಗರದಲ್ಲಿ ಐಪಿಎಲ್ನ ಪಂದ್ಯಗಳನ್ನು ನಡೆಸಲು ಆಸಕ್ತಿ ತೋರುತ್ತಿಲ್ಲ. ಕೆಎಸ್ಸಿಎ, ಸರ್ಕಾರ ಒಪ್ಪಿಗೆ ನೀಡಿದರೂ ಸಹ ಆಡಳಿತ ಮಂಡಳಿ ಈ ವಿಚಾರದಲ್ಲಿ ಹಿಂದೇಟು ಹಾಕಿತ್ತಿದೆ. 2025ರ ಜೂನ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ ಗೆದ್ದ ಬಳಿಕ […]
SHOCKING : ಮಕ್ಕಳಾಗಲಿಲ್ಲ ಎಂಬ ಹೊಟ್ಟೆಕಿಚ್ಚು : 6 ವರ್ಷದ ಬಾಲಕಿಯನ್ನ ಕ್ರೂರವಾಗಿ ಹತ್ಯೆಗೈದ ಮಲತಾಯಿ.!
ಗಾಜಿಯಾಬಾದ್ : ವೇವ್ ಸಿಟಿ ಪೊಲೀಸ್ ಠಾಣೆ ಪ್ರದೇಶದ ದಾಸ್ನಾದಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ತನಗೆ ಮಕ್ಕಳಿಲ್ಲ ಎಂದು ಅಸೂಯೆಟ್ಟ ಮಲತಾಯಿ ಆರು ವರ್ಷದ ಬಾಲಕಿಯನ್ನು ಹತ್ಯೆ ಮಾಡಿದ್ದಾಳೆ. ಆಕೆಯ ಬಟ್ಟೆಗಳು ಕೊಳಕಾಗಿದ್ದವು ಎಂಬ ನೆಪವೊಡ್ಡಿ ಹಲ್ಲೆ ನಡೆಸಿ ಕೊಂದಿದ್ದಕ್ಕಾಗಿ ಪೊಲೀಸರು ಬುಧವಾರ ಮಲತಾಯಿ ಮತ್ತು ಆಕೆಯ ತಂದೆಯನ್ನು ಬಂಧಿಸಿದ್ದಾರೆ. ಅಸೂಯೆ ಕೊಲೆಗೆ ಕಾರಣವಿಚಾರಣೆಯ ಸಮಯದಲ್ಲಿ, ಆರೋಪಿಯು ತನ್ನ ಮೊದಲ ಹೆಂಡತಿಯಿಂದ ತನಗೆ ಮೂವರು ಮಕ್ಕಳಿದ್ದಾರೆ ಎಂದು ಹೇಳಿದ್ದಾನೆ. ತನ್ನ ಎರಡನೇ ಹೆಂಡತಿಯಿಂದ ತನಗೆ ಮಕ್ಕಳಿಲ್ಲ. […]
ಟಾಪ್ 9 ದುಬಾರಿ ಯುದ್ಧ ವಿಮಾನಗಳ ಪಟ್ಟಿ ಭಾರತದ ಬಳಿ ಇರುವ ಆ ವಿಮಾನದ ಬೆಲೆ ಗೊತ್ತಾ?
ಆಧುನಿಕ ಯುದ್ಧತಂತ್ರದಲ್ಲಿ ವಾಯುಸೇನೆಯ ಬಲವೇ ನಿರ್ಣಾಯಕ. ಇದೇ ಕಾರಣಕ್ಕೆ ವಿಶ್ವದ ಬಲಿಷ್ಠ ರಾಷ್ಟ್ರಗಳು ಅತ್ಯಾಧುನಿಕ ಮತ್ತು ದುಬಾರಿ ಯುದ್ಧ ವಿಮಾನಗಳನ್ನು ತಮ್ಮ ಬತ್ತಳಿಕೆಗೆ ಸೇರಿಸಿಕೊಳ್ಳುತ್ತಿವೆ. ಅಮೆರಿಕ, ರಷ್ಯಾ, ಚೀನಾ ಮತ್ತು ಫ್ರಾನ್ಸ್ ದೇಶಗಳು ಅಭಿವೃದ್ಧಿಪಡಿಸಿರುವ ಕೆಲವು ವಿಮಾನಗಳ ಬೆಲೆ ಕೇಳಿದರೆ ನೀವು ದಂಗಾಗುತ್ತೀರಿ. ಅಷ್ಟಕ್ಕೂ ವಿಶ್ವದ ಟಾಪ್ 9 ಅತ್ಯಂತ ಕಾಸ್ಟ್ಲಿ ಫೈಟರ್ ಜೆಟ್ಗಳು ಯಾವುವು ಮತ್ತು ಭಾರತ ಯಾವುದನ್ನು ಹೊಂದಿದೆ ಎಂಬ ಕುತೂಹಲಕ್ಕೆ ಇಲ್ಲಿದೆ ಉತ್ತರ. ವಿಶ್ವದ 9 ಅತ್ಯಂತ ದುಬಾರಿ ಯುದ್ಧ ವಿಮಾನಗಳು: ೧. […]
Weather Report: ದಕ್ಷಿಣ ಒಳನಾಡಿನಲ್ಲಿ ತಗ್ಗಿದ ಚಳಿ ಅಬ್ಬರ: ಉತ್ತರ ಕರ್ನಾಟಕದಲ್ಲಿ ಶೀತಗಾಳಿ ಎಚ್ಚರಿಕೆ
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಚಳಿಯ ಅಬ್ಬರ ತಗ್ಗಿದೆಯಾದರೂ ಮೋಡಕವಿದ ವಾತಾವರಣವಿದೆ. ರಾಜ್ಯದಲ್ಲಿ ಒಂದು ರೀತಿಯ ಮಿಶ್ರ ಹವಾಮಾನವಿದೆ. ದಕ್ಷಿನ ಒಳನಾಡಿನ ಜಿಲ್ಲೆಗಳಲ್ಲಿ ಚಳಿಯ ಅಬ್ಬರ ಕಡಿಮೆಯಾಗಿದೆ. ಆದರೆ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಶೀತಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಉತ್ತರ ಕರ್ನಾಟಕದ ಬೀದರ್ ಕಲಬುರಗಿ, ವಿಜಯಪುರ, ಬಾಗಲಕೋಟೆ, ಧಾರವಾಡ ಜಿಲ್ಲೆಗಳಲ್ಲಿ ಶೀತಗಾಳಿ ಬೀಸಲಿದೆ. ಈ ಜಿಲ್ಲೆಗಳಲ್ಲಿ ತಾಪಮಾನ ವಾಡಿಕೆಗಿಂತ ಕಡಿಮೆಯಾಗಲಿದೆ. ಮಂಡ್ಯ, ಮೈಸೂರು, ಚಾಮರಾಜನಗರ ಜಿಲ್ಲೆಗಳಲ್ಲಿ ಒಣಹವೆ ಮುಂದುವರೆಯಲಿದೆ. […]
Good News: ಬೆಳಗಾವಿಯಿಂದ ವಿವಿಧ ನಗರಕ್ಕೆ ವಿಮಾನ ಸೇವೆ
ಕರ್ನಾಟಕದ ಗಡಿ ಜಿಲ್ಲೆ ಬೆಳಗಾವಿ ವಿಮಾನಯಾನದ ವಿಚಾರದಲ್ಲಿ ಸದಾ ಸುದ್ದಿಯಲ್ಲಿರುತ್ತದೆ. ಇಲ್ಲಿಂದ ಹಲವು ವಿಮಾನಗಳು ಹಾರಾಟವನ್ನು ಸ್ಥಗಿತಗೊಳಿಸಿವೆ. ಮಹಾರಾಷ್ಟ್ರ, ಕರ್ನಾಟಕ ಮತ್ತು ಗೋವಾ ರಾಜ್ಯಕ್ಕೆ ಅನುಕೂಲವಾಗುವಂತೆ ಇದ್ದರೂ ಸಹ ಬೆಳಗಾವಿ ವಿಮಾನ ನಿಲ್ದಾಣ ವಿಮಾನಯಾನ ಸಂಸ್ಥೆಗಳನ್ನು ಆಕರ್ಷಿಸಲು ಸಾಧ್ಯವಾಗುತ್ತಿಲ್ಲ. ಈಗ ಬೆಳಗಾವಿ ಸಂಸದ ಜಗದೀಶ್ ಶೆಟ್ಟರ್ ಬೆಳಗಾವಿಯಿಂದ ವಿವಿಧ ನಗರಕ್ಕೆ ವಿಮಾನ ಸಂಪರ್ಕ ಕಲ್ಪಿಸಲು ಪ್ರಯತ್ನ ನಡೆಸಿದ್ದಾರೆ. ಈ ಕುರಿತು ಅವರು ಇಂಡಿಗೋ ಸಂಸ್ಥೆ ಜೊತೆ ಮಾತುಕತೆ ನಡೆಸಿದ್ದು, ಪತ್ರವನ್ನು ಬರೆದಿದ್ದಾರೆ. ಈ ಬಗ್ಗೆ ಜಗದೀಶ್ ಶೆಟ್ಟರ್ […]
ಸಿನಿಮಾ ಲೋಕದಲ್ಲಿ ಸೋಲು-ಗೆಲುವು ಸಹಜ. ಆದರೆ ಕೆಲವು ಸಿನಿಮಾಗಳು ದೊಡ್ಡ ತಾರಾಗಣ ಹೊಂದಿದ್ದರೂ ಬಾಕ್ಸ್ ಆಫೀಸ್ನಲ್ಲಿ ದಯನೀಯವಾಗಿ ಸೋಲುತ್ತವೆ. ಅಂತಹದ್ದೇ ಸಾಲಿಗೆ ಸೇರಿದೆ 2025ರ ಬಹುನಿರೀಕ್ಷಿತ ಚಿತ್ರವೊಂದು. ಸುಮಾರು 25 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾದ ಈ ಸಿನಿಮಾ ಚಿತ್ರಮಂದಿರದಲ್ಲಿ ಗಳಿಸಿದ್ದು ಕೇವಲ 1.28 ಕೋಟಿ ರೂಪಾಯಿ ಮಾತ್ರ! ಈಗ ಈ ಸಿನಿಮಾ ಯಾವುದೇ ಸದ್ದಿಲ್ಲದೆ ಒಟಿಟಿಯಲ್ಲಿ ಬಿಡುಗಡೆಯಾಗಿದೆ. ಸಿನಿಮಾ ಯಾವುದು? ತಾರಾಗಣ ಯಾರಿದ್ದಾರೆ? ನಾವು ಹೇಳುತ್ತಿರುವುದು ಸೋನಾಕ್ಷಿ ಸಿನ್ಹಾ ಪ್ರಧಾನ ಪಾತ್ರದಲ್ಲಿ ನಟಿಸಿರುವ ‘ನಿಕಿತಾ ರಾಯ್’ […]
ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಅಮೃತಾ ಅವರಿಗೆ ಅವಾಚ್ಯವಾಗಿ ನಿಂದಿಸಿ, ಜೀವಬೆದರಿಕೆ ಹಾಕಿರುವ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ವಿರುದ್ಧ ಎರಡು ಎಫ್ ಐ ಆರ್ ದಾಖಲಾಗಿದೆ. ಸಾಲು ಸಾಲು ಪ್ರಕರಣ ದಾಖಲಾಗುತ್ತಿದ್ದಂತೆ ಬಂಧನ ಭೀತಿಯಲ್ಲಿರುವ ರಾಜೀವ್ ಗೌಡ ತಲೆಮರೆಸಿಕೊಂಡಿದ್ದಾರೆ. ಅಕ್ರಮವಾಗಿ ಅಳವಡಿಸಿದ್ದ ಬ್ಯಾನರ್ ತೆರವು ಮಾಡಿದ ವಿಚಾರವಾಗಿ ಪೌರಾಯುಕ್ತೆ ಅಮೃತಾ ಅವರಿಗೆ ಕರೆ ಮಾಡಿದ್ದ ರಾಜೀವ್ ಗೌಡ ಬಾಯಿಗೆ ಬಂದಂತೆ ಮಾತನಾಡಿದ್ದರು. ಅವಾಚ್ಯವಾಗಿ ನಿಂದಿಸಿ, ಜನರನ್ನು ಕಳುಹಿಸಿ ಚಪ್ಪಲಿಯಿಂದ ಹೊಡೆದು ಬೆಂಕಿ ಹಚ್ಚುವುದಾಗಿ […]
ಬೆಂಗಳೂರು : ಸಂಕ್ರಾಂತಿ ಹಬ್ಬದ ದಿನವೇ ಬೆಂಗಳೂರಲ್ಲಿ ಘೋರ ದುರಂತ ಸಂಭವಿಸಿದ್ದು, ಕೆರೆಯಲ್ಲಿ ಮುಳುಗಿ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರು ದಕ್ಷಿಣ ಜಿಲ್ಲೆಯ ಕನಕಪುರ ತಾಲೂಕಿನ ಕಬ್ಬಾಳು ಗ್ರಾಮದ ಬಳಿ ಈ ಘಟನೆ ನಡೆದಿದೆ. ಕೆರೆಯಲ್ಲಿ ಮುಳುಗಿ ಧನುಷ್ (18) ಸಂತೋಷ್ (18) ಮೃತಪಟ್ಟಿದ್ದಾರೆ. ಮೃತ ವಿದ್ಯಾರ್ಥಿಗಳು ಬೆಂಗಳೂರಿನ ಕೋಣನಕುಂಟೆ ನಿವಾಸಿಗಳು ಎಂದು ಗುರುತಿಸಲಾಗಿದೆ. ಬನಶಂಕರಿ ಬಳಿ ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಗಳು ನಿನ್ನೆ ಸ್ನೇಹಿತರ ಜೊತೆ ಕಬ್ಬಾಳು ದೇವಸ್ಥಾನಕ್ಕೆ ಬಂದಿದ್ದರು. […]
ಐಎಂಡಿಬಿಯಲ್ಲಿ 9.4 ರೇಟಿಂಗ್! ಪಂಚಾಯತ್ಗಿಂತಲೂ ಫೇಮಸ್ ಆಗಿದ್ದ ಶಂಕರ್ ನಾಗ್ ಅವರ ಈ ಸರಣಿ ಯಾವುದು ಗೊತ್ತೇ?
ಇಂದಿನ ಒಟಿಟಿ ಜಗತ್ತಿನಲ್ಲಿ ಕ್ರೈಮ್, ಆಕ್ಷನ್ ಮತ್ತು ಸಸ್ಪೆನ್ಸ್ ಸರಣಿಗಳದ್ದೇ ಅಬ್ಬರ. ಇದರ ನಡುವೆ ಪಂಚಾಯತ್, ಗುಲ್ಲಕ್ ಅಥವಾ ಫ್ಯಾಮಿಲಿ ಮ್ಯಾನ್ನಂತಹ ಕೆಲವು ಸರಣಿಗಳು ಜನರಿಗೆ ಇಷ್ಟವಾಗುತ್ತವೆ. ಆದರೆ ಇವೆಲ್ಲದಕ್ಕೂ ಸುಮಾರು ನಾಲ್ಕು ದಶಕಗಳ ಮೊದಲೇ ಭಾರತೀಯ ಕಿರುತೆರೆಯಲ್ಲಿ ಒಂದು ಮೌನ ಕ್ರಾಂತಿ ನಡೆದಿತ್ತು. ಯಾವುದೇ ಭರ್ಜರಿ ಆಕ್ಷನ್ ಅಥವಾ ಹಿಂಸೆ ಇಲ್ಲದಿದ್ದರೂ ಆ ಕಾಲದ ಮನೆಮತಾಗಿದ್ದ ಆ ಸರಣಿ ಬೇರೆ ಯಾವುದೂ ಅಲ್ಲ, ಅದುವೇ ‘ಮಾಲ್ಗುಡಿ ಡೇಸ್’ (Malgudi Days). ಸರಳತೆಯೇ ಈ ಸರಣಿಯ ಶಕ್ತಿ […]
ದೇಶದ ರಕ್ಷಣೆಗಾಗಿ 600 ಕೆಜಿ ಬಂಗಾರ ನೀಡಿದ್ದ ಮಹಾತಾಯಿ ಇನ್ನಿಲ್ಲ: ದರ್ಭಾಂಗ ಮಹಾರಾಣಿ ಕಾಮಸುಂದರಿ ದೇವಿ ನಿಧನ
ದರ್ಭಾಂಗ ರಾಜಮನೆತನ ಎಂದರೆ ಅದು ಕೇವಲ ಶ್ರೀಮಂತಿಕೆಯ ಹೆಸರಲ್ಲ, ಅದೊಂದು ದಾನ ಮತ್ತು ದೇಶಪ್ರೇಮದ ಪರಂಪರೆ. ಭಾರತದ ಅತ್ಯಂತ ಶ್ರೀಮಂತ ಸಂಸ್ಥಾನಗಳಲ್ಲಿ ಒಂದಾಗಿದ್ದ ಬಿಹಾರದ ದರ್ಭಾಂಗ ರಾಜ್ಯದ ಕೊನೆಯ ಮಹಾರಾಣಿ ಕಾಮಸುಂದರಿ ದೇವಿ ಅವರು ಜನೆವರಿ 12 ರಂದು ದರ್ಭಾಂಗದ ಕಲ್ಯಾಣಿ ನಿವಾಸದಲ್ಲಿ ನಿಧನರಾಗಿದ್ದಾರೆ. ಅವರ ನಿಧನದೊಂದಿಗೆ ಭಾರತದ ರಾಜವೈಭವದ ಒಂದು ವಿಶಿಷ್ಟ ಅಧ್ಯಾಯ ಕೊನೆಗೊಂಡಂತಾಗಿದೆ. ದೇಶಕ್ಕೆ ಸಂಕಷ್ಟ ಬಂದಾಗ 600 ಕೆಜಿ ಚಿನ್ನ ನೀಡಿದ್ದ ಮನೆತನ ಈ ರಾಜಮನೆತನದ ಉದಾರತೆಯನ್ನು ನೆನೆದರೆ ಇಂದಿಗೂ ಮೈ ಜುಂ […]
ಅವಳಿ ಮಕ್ಕಳು ಹುಟ್ಟುವುದು ಹೇಗೆ? ವಿಜ್ಞಾನ ಹೇಳುವ ಟಾಪ್ ಸೀಕ್ರೇಟ್ ಇಲ್ಲಿದೆ
ಈ ಪ್ರಪಂಚದಲ್ಲಿ ಒಬ್ಬರನ್ನೇ ಹೋಲುವ ಏಳು ಜನ ಇರುತ್ತಾರೆ ಎಂಬ ಹಳೆಯ ಮಾತಿದೆ. ಆದರೆ, ಒಂದೇ ಗರ್ಭದಲ್ಲಿ ಒಟ್ಟಿಗೆ ಬೆಳೆದು, ಕೈಕೈ ಹಿಡಿದು ಭೂಮಿಗೆ ಬರುವ ಆ ಮುದ್ದಾದ ಅವಳಿ ಮಕ್ಕಳ ಸೌಂದರ್ಯವೇ ಬೇರೆ ಇತ್ತೀಚಿನ ವರ್ಷಗಳಲ್ಲಿ ಅವಳಿ ಮಕ್ಕಳ ಜನನ ಪ್ರಮಾಣ ಗಣನೀಯವಾಗಿ ಏರುತ್ತಿದ್ದು ಗರ್ಭಿಣಿಯರಿಗೆ ತಾವು ಟ್ವಿನ್ಸ್ ಗೆ ತಾಯಿಯಾಗಲಿದ್ದೇವೆ ಎಂಬ ಸುದ್ದಿ ಕೇಳಿದಾಗ ಆಗುವ ಸಂಭ್ರಮಕ್ಕೆ ಪಾರವೇ ಇಲ್ಲ. ಆದರೆ ಈ ಸಂತೋಷದ ಜೊತೆಗೆ ಇಬ್ಬರು ಮಕ್ಕಳನ್ನು ಒಟ್ಟಿಗೆ ಪಾಲನೆ ಮಾಡುವುದು ಹೇಗೆ […]
ಆರೋಪಿಗಳಿಗೇ ತಲಾ 50 ಸಾವಿರ ರೂ. ಪಾವತಿಸಲು ಪೊಲೀಸ್ ಠಾಣಾಧಿಕಾರಿಗೆ ಕೋರ್ಟ್ ಆದೇಶ…!
ಕಲಬುರಗಿ: ಜಾಮೀನು ಪಡೆದು ಆರೋಪಿಗಳು ಠಾಣೆಗೆ ಹಾಜರಾಗಿದ್ದರೂ ವಿಚಾರಣೆಗೆ ಹಾಜರಾಗುತ್ತಿಲ್ಲವೆಂದು ಕೋರ್ಟ್ ಗೆ ತಪ್ಪು ಮಾಹಿತಿ ನೀಡಿದ ಬ್ರಹ್ಮಪುರ ಪೊಲೀಸ್ ಠಾಣೆಯ ಠಾಣಾಧಿಕಾರಿಯೇ ಆರೋಪಿಗಳಿಗೆ ತಲಾ 50 ಸಾವಿರ ರೂ. ಪಾವತಿಸುವಂತೆ ಕಲಬುರಗಿಯ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶಿಸಿದೆ. ಠಾಣಾಧಿಕಾರಿ ಸಲ್ಲಿಸಿದ ತಪ್ಪು ಮಾಹಿತಿ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ. ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ 2024 ಡಿಸೆಂಬರ್ 19ರಂದು ಸ್ಟೋನ್ ಕ್ರಞರ್ ಮಷಿನ್ ಹೆಸರಲ್ಲಿ ಒಂದು ಲಕ್ಷ ರೂ. ಸಾಲ ಪಡೆದು ವಂಚಿಸಿದ ಪ್ರಕರಣಕ್ಕೆ […]
BIG NEWS : ಗ್ರಾಹಕರಿಗೆ ಬಿಗ್ ಅಲರ್ಟ್ : ದೇಶಾದ್ಯಂತ ಸತತ ಮೂರು ದಿನ ‘ಬ್ಯಾಂಕ್’ಬಂದ್
ಈ ತಿಂಗಳ 25, 26 ಮತ್ತು 27 ರಂದು ಸತತ ಮೂರು ದಿನಗಳ ಕಾಲ ಬ್ಯಾಂಕುಗಳು ಮುಚ್ಚಲ್ಪಡುತ್ತವೆ. ಏಕೆಂದರೆ ವಾರದಲ್ಲಿ ಕೇವಲ ಐದು ದಿನಗಳ ಕೆಲಸದ ದಿನಗಳನ್ನು ಜಾರಿಗೆ ತರುವಂತೆ ಒತ್ತಾಯಿಸಿ ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್ಸ್ (UFBU) ಜನವರಿ 27 ರಂದು ಮುಷ್ಕರ ನಡೆಸಲಿದೆ. ಈ ಸಂದರ್ಭದಲ್ಲಿ ಬ್ಯಾಂಕ್ ನೌಕರರು ಕರ್ತವ್ಯಕ್ಕೆ ಗೈರಾಗಲಿದ್ದಾರೆ. ಪ್ರಸ್ತುತ, ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರಗಳು ಮಾತ್ರ ದೇಶದಲ್ಲಿ ಬ್ಯಾಂಕುಗಳಿಗೆ ರಜಾದಿನಗಳಾಗಿವೆ. ಇದರೊಂದಿಗೆ, ತಿಂಗಳ ಉಳಿದ ಶನಿವಾರಗಳನ್ನು ಸಹ […]
ಹೊಸ ವರ್ಷದ ಮೊದಲ ಸಂಭ್ರಮವಾಗಿ ಬರುವ ಸುಗ್ಗಿ ಹಬ್ಬ ಅಥವಾ ಮಕರ ಸಂಕ್ರಾಂತಿಯೆಂದರೆ ದಕ್ಷಿಣ ಭಾರತದಾದ್ಯಂತ ಎಲ್ಲಿಲ್ಲದ ಸಂಭ್ರಮ. ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಹಾಗೂ ಕೇರಳದ ಮನೆಮನಗಳಲ್ಲಿ ಈ ಹಬ್ಬವನ್ನು ಅತ್ಯಂತ ಸಡಗರದಿಂದ ಆಚರಿಸಲಾಗುತ್ತದೆ. ಈ ಸುದಿನದ ವಿಶೇಷ ಆಕರ್ಷಣೆಯೇ ಪೊಂಗಲ್. ಮಕರ ಸಂಕ್ರಾಂತಿಯ ಶುಭ ಮುಹೂರ್ತದಲ್ಲಿ ಸೂರ್ಯ ದೇವರಿಗೆ ನೈವೇದ್ಯ ಅರ್ಪಿಸಲು ಸಿಹಿ ಪೊಂಗಲ್ (Sweet Pongal) ಅನ್ನು ಭಕ್ತಿಯಿಂದ ಸಿದ್ಧಪಡಿಸಲಾಗುತ್ತದೆ. ನೈವೇದ್ಯಕ್ಕೆ ಪರ್ಫೆಕ್ಟ್: ದೇವಸ್ಥಾನದ ಶೈಲಿಯ ವೆನ್ ಪೊಂಗಲ್ ದಕ್ಷಿಣ ಭಾರತದ ಪಾಕಪದ್ಧತಿಯಲ್ಲಿ ಖಾರ […]
BREAKING: ವಾಲ್ಮೀಕಿ ಭವನ ನಿರ್ಮಾಣ ವಿಚಾರಕ್ಕೆ ಗಲಾಟೆ: ಮನೆಗೆ ನುಗ್ಗಿ ಹಲ್ಲೆ, ಮಾಳಿಗೆ ಧ್ವಂಸ
ಬೆಳಗಾವಿ: ವಾಲ್ಮೀಕಿ ಭವನ ನಿರ್ಮಾಣ ವಿಚಾರಕ್ಕೆ ಎರಡು ಸಮುದಾಯಗಳ ನಡುವೆ ಗಲಾಟೆ ನಡೆದಿದೆ. ದಲಿತ ಸಮುದಾಯದ ಸದಾಶಿವ ಭಜಂತ್ರಿ ಮನೆಗೆ ನುಗ್ಗಿ ಹಲ್ಲೆ ಮಾಡಲಾಗಿದೆ. ಬೈಲಹೊಂಗಲ ತಾಲೂಕಿನ ದೇಶನೂರಿನಲ್ಲಿ ಘಟನೆ ನಡೆದಿದೆ. ಸದಾಶಿವ ಭಜಂತ್ರಿ ಮನೆಯ ಮೇಲೆ ಕಿಡಿಗೇಡಿಗಳು ಕಲ್ಲುತೂರಾಟ ನಡೆಸಿದ್ದಾರೆ. ಕಲ್ಲೆಸೆದು ಶೌಚಾಲಯ, ಮನೆಯ ಮಾಳಿಗೆ ಧ್ವಂಸಗೊಳಿಸಿದ್ದಾರೆ. ವಾಲ್ಮೀಕಿ ಭವನ ನಿರ್ಮಾಣದ ಜಾಗ ಸರ್ವೆಗೆ ಎಸ್.ಟಿ. ಸಮುದಾಯದ ಯುವಕರು ಬಂದಿದ್ದರು. ವಾಲ್ಮೀಕಿ ಸಮುದಾಯ ಭವನಕ್ಕೆ ಸದಾಶಿವ ಭಜಂತ್ರಿ ಕುಟುಂಬ ವಿರೋಧ ವ್ಯಕ್ತಪಡಿಸಿದ್ದು, ಸಮುದಾಯ ಭವನ ನಿರ್ಮಾಣ […]
320 ಎಕರೆ ಬಗರ್ ಹುಕುಂ ಜಮೀನು ಹಂಚಿಕೆಯಲ್ಲಿ ಅಕ್ರಮ, ಸರ್ಕಾರಿ ದಾಖಲೆ ತಿದ್ದುಪಡಿ: 5 ಅಧಿಕಾರಿಗಳು ಅರೆಸ್ಟ್
ಮಂಡ್ಯ: 320 ಎಕರೆ ಬಗರ್ ಹುಕುಂ ಜಮೀನು ಹಂಚಿಕೆಯಲ್ಲಿ ಅಕ್ರಮ ನಡೆದಿದ್ದು, ಐವರು ಅಧಿಕಾರಿಗಳನ್ನು ಬಂಧಿಸಲಾಗಿದೆ. ಮಂಡ್ಯ ಜಿಲ್ಲೆ ನಾಗಮಂಗಲದಲ್ಲಿ ಜಮೀನು ಹಂಚಿಕೆಯಲ್ಲಿ ಅಕ್ರಮ ನಡೆದಿದ್ದು, 11 ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಿಸಿ ಐದು ಜನರನ್ನು ಬಂಧಿಸಲಾಗಿದೆ. ನಾಗಮಂಗಲ ತಾಲೂಕು ಕಚೇರಿಯ ಎಲ್ ಅಂಡ್ ಡಿ ಶಾಖೆಯ ಎಸ್ಡಿಎ ಸತೀಶ್, ಶಿರಸ್ತೇದಾರ್ ಗಳಾದ ರವಿಶಂಕರ್, ಉಮೇಶ್, ಯೋಗೇಶ್ ಮತ್ತು ರೆಕಾರ್ಡ್ ರೂಂನ ದ್ವಿತೀಯ ದರ್ಜೆ ಸಹಾಯಕ ಗುರುಮೂರ್ತಿ ಅವರನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಗಳಿಗೆ ನ್ಯಾಯಾಲಯ ನ್ಯಾಯಾಂಗ ಬಂಧನ […]
Makar Sankranti 2026: ಸೂರ್ಯ ದೋಷ ಇರುವವರ ಜಾತಕಕ್ಕೆ ಸಂಕ್ರಾಂತಿ ವಿಶೇಷ ಪರಿಹಾರ ಇಲ್ಲಿದೆ
ಬೆಂಗಳೂರು: ಭಾರತೀಯ ಸಂಸ್ಕೃತಿಯಲ್ಲಿ ಮಕರ ಸಂಕ್ರಾಂತಿಗೆ ಕೇವಲ ಸುಗ್ಗಿ ಹಬ್ಬದ ಮಹತ್ವ ಮಾತ್ರವಲ್ಲ, ಆಧ್ಯಾತ್ಮಿಕವಾಗಿಯೂ ಅಪಾರ ಶಕ್ತಿಯಿದೆ. ಸೂರ್ಯನು ಧನು ರಾಶಿಯಿಂದ ಮಕರ ರಾಶಿಗೆ ಪ್ರವೇಶಿಸುವ ಈ ಕಾಲವನ್ನು ಉತ್ತರಾಯಣ ಪುಣ್ಯಕಾಲವೆಂದು ಕರೆಯಲಾಗುತ್ತದೆ. ಜಾತಕದಲ್ಲಿ ಸೂರ್ಯ ದೋಷವಿದ್ದು, ಜೀವನದಲ್ಲಿ ಸತತ ಅಡೆತಡೆ ಎದುರಿಸುತ್ತಿರುವವರಿಗೆ ಈ ದಿನವು ಅತ್ಯಂತ ಶ್ರೇಷ್ಠವಾಗಿದೆ. ಸೂರ್ಯನು ಈ ಜಗತ್ತಿನ ಅಸ್ತಿತ್ವಕ್ಕೆ ಮೂಲಾಧಾರ ಆತನ ಶಕ್ತಿಯಿಲ್ಲದೆ ಜೀವಸಂಕುಲದ ಕಲ್ಪನೆಯೇ ಅಸಾಧ್ಯ. ಇದೇ ಕಾರಣಕ್ಕೆ ಸೂರ್ಯನನ್ನು ಪವಿತ್ರ ಭಾವದಿಂದ ಆರಾಧಿಸಲಾಗುತ್ತದೆ. ವೈದಿಕ ಶಾಸ್ತ್ರಗಳ ಪ್ರಕಾರ, ಸೂರ್ಯನನ್ನು […]
BREAKING : ಹೃದಯಾಘಾತದಿಂದ ಕಾಗಿನೆಲೆ ಕನಕ ಗುರುಪೀಠದ ‘ಸಿದ್ದರಾಮನಂದ ಶ್ರೀ’ವಿಧಿವಶ.!
ರಾಯಚೂರು : ದೇವದುರ್ಗ ತಾಲೂಕಿನ ತಿಂಥಣಿ ಬ್ರಿಡ್ಜ್ ಕಾಗಿನೆಲೆ ಕನಕ ಗುರುಪೀಠದ ಸಿದ್ದರಾಮನಂದ ಶ್ರೀ (49) ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಇಂದು ಮುಂಜಾನೆ 3:40 ರ ಸುಮಾರಿಗೆ ಸ್ವಾಮೀಜಿ ವಿಧಿವಶರಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಎದೆನೋವು ಕಾಣಿಸಿಕೊಂಡ ಹಿನ್ನೆಲೆ ಕೂಡಲೇ ಅವರನ್ನು ಲಿಂಗಸೂಗೂರು ಆಸ್ಪತ್ರೆಗೆ ಸಾಗಿಸಲಾಯಿತು, ಆದರೆ ಮಾರ್ಗಮಧ್ಯೆ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ತಿಂಥಣಿಯ ಕನಕ ಗುರು ಪೀಠದಲ್ಲಿಯೇ ಸ್ವಾಮೀಜಿ ಅಂತ್ಯಕ್ರಿಯೆ ನಡೆಸಲಾಗುವುದು. ಹಾಲುಮತದ ಪದ್ದತಿಯಂತೇ ಅಂತ್ಯಕ್ರಿತೆಗೆ ಸಿದ್ದತೆ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿದೆ. ಸಿದ್ದರಾಮಾನಂದ […]
BREAKING : ಸ್ಯಾಂಡಲ್’ವುಡ್ ನಟಿ ಕಾರುಣ್ಯ ರಾಮ್’ಗೆ ಸಾಲಗಾರರ ಕಾಟ : ತಂಗಿ ವಿರುದ್ಧವೇ ದೂರು ಸಲ್ಲಿಕೆ.!
ಬೆಂಗಳೂರು : ಸ್ಯಾಂಡಲ್’ವುಡ್ ನಲ್ಲಿ ಹೊಸ ಪ್ರಕರಣವೊಂದು ಬೆಳಕಿಗೆ ಬಂದಿದೆ. ನಟಿ ಕಾರುಣ್ಯ ರಾಮ್ ಗೆ ಸಾಲಗಾರರ ಕಾಟ ಎದುರಾಗಿದ್ದು, ತಂಗಿ ವಿರುದ್ಧವೇ ಅವರು ದೂರು ನೀಡಿದ್ದಾರೆ. ಏನಿದು ಘಟನೆನಟಿ ಕಾರುಣ್ಯ ರಾಮ್ ತಂಗಿ ಸಮೃದ್ದಿ ರಾಮ್ ಅವರು ಬ್ಯುಸಿನೆಸ್ ಮಾಡುವುದಾಗಿ ಮನೆಯಲ್ಲಿ ಹೇಳಿಕೊಂಡು ಖಾಸಗಿ ವ್ಯಕ್ತಿಯಿಂದ 25 ಲಕ್ಷ ಸಾಲ ಪಡೆದಿದ್ದರು. ಈ ಹಣವನ್ನು ಆನ್ ಲೈನ್ ಬೆಟ್ಟಿಂಗ್ ಹಾಕಿ 25 ಲಕ್ಷ ಕಳೆದುಕೊಂಡಿದ್ದಾರೆ ಎನ್ನಲಾಗಿದೆ. ಅಲ್ಲದೇ ಮನೆಯಲ್ಲಿದ್ದ ಅಕ್ಕ ಕಾರುಣ್ಯ ರಾಮ್ ಅವರ ಚಿನ್ನದ […]
ರಾಜ್ಯದ ಜನತೆಗೆ ಬಿಗ್ ಶಾಕ್: ವಿದ್ಯುತ್ ದರ ಹೆಚ್ಚಳಕ್ಕೆ KERC ಮೊರೆ ಹೋದ ಹೋದ ಎಸ್ಕಾಂಗಳು
ಬೆಂಗಳೂರು: ವಿದ್ಯುತ್ ಸರಬರಾಜು ಕಂಪನಿಗಳ(ಎಸ್ಕಾಂ) ಆದಾಯದಲ್ಲಿ 4,900 ಕೋಟಿ ರೂಪಾಯಿಯಷ್ಟು ಖೋತಾ ಆಗಿದ್ದು, ಇದನ್ನು ಸರಿದೂಗಿಸಲು ವಿದ್ಯುತ್ ದರ ಏರಿಕೆಗೆ ತಯಾರಿ ನಡೆದಿದೆ. ಎಸ್ಕಾಂಗಳು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ(KERC)ಕ್ಕೆ ವಾರ್ಷಿಕ ಕಾರ್ಯಕ್ಷಮತೆ ವರದಿ ಸಲ್ಲಿಸಿವೆ. 2024- 25 ನೇ ಸಾಲಿನ ವಾರ್ಷಿಕ ಕಾರ್ಯಕ್ಷಮತೆ ವರದಿಯನ್ನು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗಕ್ಕೆ ವಿದ್ಯುತ್ ಸರಬರಾಜು ಕಂಪನಿಗಳು ಸಲ್ಲಿಸಿದ್ದು, ಆದಾಯದಲ್ಲಿ 4900 ಕೋಟಿ ರೂ. ಖೋತಾ ಆಗಿದೆ. ಸಮತೋಲನ ಕಾಯ್ದುಕೊಳ್ಳಲು ವಿದ್ಯುತ್ ದರ ಪರಿಷ್ಕರಣೆ ಅಗತ್ಯವಿದೆ ಎಂದು ಎಸ್ಕಾಂ […]
BIG NEWS: 18 ಸಾವಿರಕ್ಕೂ ಹೆಚ್ಚು ಪಿಜಿ ವೈದ್ಯಕೀಯ ಸೀಟು ಖಾಲಿ: ನೀಟ್ ಅರ್ಹತಾ ಮಾನದಂಡ ಬದಲಾವಣೆ
ನವದೆಹಲಿ: ದೇಶದಲ್ಲಿ 18 ಸಾವಿರಕ್ಕೂ ಅಧಿಕ ಸ್ನಾತಕೋತ್ತರ ವೈದ್ಯಕೀಯ ಸೀಟುಗಳು ಖಾಲಿ ಉಳಿದಿದೆ. ಹೀಗಾಗಿ ರಾಷ್ಟ್ರೀಯ ವೈದ್ಯಕೀಯ ವಿಜ್ಞಾನ ಪರೀಕ್ಷಾ ಮಂಡಳಿ(NBEMS) ನೀಟ್ ಪಿಜಿ 2025ರ ಪ್ರವೇಶಕ್ಕೆ ಅರ್ಹತಾ ಮಾನದಂಡ ಪರ್ಸೆಂಟೈಲ್ ಪರಿಷ್ಕರಣೆ ಮಾಡಿದೆ. ಮೀಸಲು ವರ್ಗದ ಅಭ್ಯರ್ಥಿಗಳಿಗೆ ನಿಗದಿಪಡಿಸಿದ್ದ ಪರ್ಸೆಂಟೈಲ್ 40 ರಿಂದ ಶೂನ್ಯಕ್ಕೆ ಇಳಿಸಲಾಗಿದೆ. ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಪರ್ಸೆಂಟೈಲ್ 50 ರಿಂದ 7ಕ್ಕೆ ಇಳಿಸಲಾಗಿದೆ. ಎರಡನೇ ಸುತ್ತಿನ ಕೌನ್ಸಿಲಿಂಗ್ ಪೂರ್ಣಗೊಂಡ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ. ವೈದ್ಯಕೀಯ ಸೀಟುಗಳನ್ನು ಖಾಲಿ ಬಿಟ್ಟರೆ ಆರೋಗ್ಯ […]
GOOD NEWS : ರಾಜ್ಯದ ‘ಪದವಿ’ವಿದ್ಯಾರ್ಥಿನಿಯರಿಗೆ ಗುಡ್ ನ್ಯೂಸ್ : 32,000 ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ
ಅಜೀಂ ಪ್ರೇಂ ಜೀ ಫೌಂಡೇಶನ್ನವರು ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಸಂಬಂಧಿಸಿದಂತೆ ಒಂದು ವಿನೂತನ ಕಾರ್ಯಕ್ರಮ ಆರಂಭಿಸಿದ್ದು ಪದವಿ ಮೊದಲನೇ ವರ್ಷದಲ್ಲಿ ಓದುತ್ತಿರುವ ವಿದ್ಯಾರ್ಥಿನಿಯರಿಗೆ ರೂ.32,000 ವಿದ್ಯಾರ್ಥಿವೇತನವನ್ನು ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಎಸ್ಎಸ್ಎಲ್ಸಿ ಮತ್ತು ಪಿಯುಸಿ ಯನ್ನು ಸರ್ಕಾರಿ ಶಾಲೆಯಲ್ಲಿ ಓದಿ ಪ್ರಸ್ತುತ ಪದವಿಯನ್ನು ಖಾಸಗಿ ಅಥವಾ ಸರ್ಕಾರಿ ಯಾವುದಾದರೂ ಕಾಲೇಜಿನಲ್ಲಿ ಓದುತ್ತಿರುವಂತಹ ಪದವಿ ಮೊದಲನೇ ವರ್ಷದ ವಿದ್ಯಾರ್ಥಿನಿಯರಿಗೆ ರೂ.32,000 ವಿದ್ಯಾರ್ಥಿ ವೇತನವನ್ನು ನೀಡುವ ಯೋಜನೆ ಇದಾಗಿದೆ. ಈ ಯೋಜನೆಯಡಿ ಅರ್ಜಿ ಸಲ್ಲಿಸಲು ಜ.31 ಕಡೆಯ ದಿನವಾಗಿದ್ದು, ಅರ್ಜಿ […]
ಬೆಂಗಳೂರಿನಲ್ಲಿ ಮತ್ತೊಂದು ಅಗ್ನಿ ಅವಘಡ: ಸ್ಕ್ರಾಪ್ ಗೋಡೌನ್ ಗೆ ಭಾರೀ ಬೆಂಕಿ ತಗುಲಿ ಅಪಾರ ಹಾನಿ
ಬೆಂಗಳೂರು: ಬೆಂಗಳೂರಿನ ಬೇಗೂರು ಪ್ರದೇಶದ ಅಕ್ಷಯ ನಗರದಲ್ಲಿರುವ ಸ್ಕ್ರಾಪ್ ಗೋಡೌನ್ ನಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದೆ. ಗೋದಾಮಿನಲ್ಲಿ ಸಂಗ್ರಹಿಸಲಾಗಿದ್ದ ಹಳೆಯ ಪ್ಲಾಸ್ಟಿಕ್ ವಸ್ತುಗಳಿಗೆ ಬೆಂಕಿ ತಗುಲಿ ಹೊತ್ತಿ ಉರಿದಿದ್ದು, ಪ್ರದೇಶದಲ್ಲಿ ಆತಂಕದ ವಾತಾವರಣ ಉಂಟಾಗಿತ್ತು. ಮಾಹಿತಿ ತಿಳಿದ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿಯನ್ನು ನಂದಿಸಲು ಹರಸಾಹಸ ನಡೆಸಿದ್ದಾರೆ. 4 ಅಗ್ನಿಶಾಮಕ ವಾಹನಗಳ 20ಕ್ಕೂ ಅಧಿಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬಂದು ಬೆಂಕಿ ನಂದಿಸಲು ಕಾರ್ಯಾಚರಣೆ ನಡೆಸಿದ್ದಾರೆ. ಅಗ್ನಿ ಅವಘಡಕ್ಕೆ ನಿಖರ ಕಾರಣ ಗೊತ್ತಾಗಿಲ್ಲ. ಯಾವುದೇ ಪ್ರಾಣ […]
ಬೆಂಗಳೂರು : 2025-26 ನೇ ಸಾಲಿನ ಪ್ರಥಮ ಮಾನ್ಯತೆ ಹಾಗೂ ಮಾನ್ಯತೆ ನವೀಕರಣಕ್ಕೆ ಅರ್ಜಿ ಸಲ್ಲಿಸಲು ಅವಧಿಯನ್ನು ವಿಸ್ತರಿಸಿ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಶಾಲಾ ಶಿಕ್ಷಣ ಇಲಾಖೆಯು 2025-26ನೇ ಸಾಲಿಗೆ ಶಾಲೆಗಳಿಗೆ ಪ್ರಥಮ ಮಾನ್ಯತೆ ಮತ್ತು ಮಾನ್ಯತೆ ನವೀಕರಣಕ್ಕೆ ಅರ್ಜಿ ಸಲ್ಲಿಸಲು ಅವಧಿ ವಿಸ್ತರಣೆ ಕುರಿತು ಸುತ್ತೋಲೆ ಹೊರಡಿಸಿದೆ. • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಫೆಬ್ರವರಿ 16, 2026.• ಈ ಸುತ್ತೋಲೆಯು 2025-26ನೇ ಸಾಲಿಗೆ ಮಾತ್ರ ಅನ್ವಯಿಸುತ್ತದೆ.• ಉಪನಿರ್ದೇಶಕರು (ಆಡಳಿತ) ಈ ವಿಷಯದ ಬಗ್ಗೆ […]
ಬೆಂಗಳೂರು: ನಾಡಿನಾದ್ಯಂತ ಸಂಕ್ರಾಂತಿ ಹಬ್ಬದ ಸಡಗರ ಮನೆಮಾಡಿದೆ. ಸೂರ್ಯನು ಮಕರ ರಾಶಿಗೆ ಪ್ರವೇಶಿಸುವ ಈ ಪುಣ್ಯಕಾಲ ಕೇವಲ ಋತುಮಾನದ ಬದಲಾವಣೆಯಲ್ಲ ಇದು ಸ್ನೇಹ ಸೌಹಾರ್ದತೆ ಮತ್ತು ಸಮೃದ್ಧಿಯ ಮಹಾಪರ್ವ. ದಕ್ಷಿಣ ಭಾರತದ ಪ್ರಮುಖ ಹಬ್ಬಗಳಲ್ಲಿ ಒಂದಾದ ಮಕರ ಸಂಕ್ರಾಂತಿಯು ರೈತಾಪಿ ವರ್ಗದ ಪಾಲಿಗೆ ‘ಸುಗ್ಗಿ ಹಬ್ಬ’ವಾಗಿಯೂ ಅನ್ವರ್ಥವಾಗಿದೆ. “ಎಳ್ಳು-ಬೆಲ್ಲ ತಿಂದು ಒಳ್ಳೆ ಮಾತಾಡು” ಇದು ಸಂಕ್ರಾಂತಿಯ ಮೂಲ ಮಂತ್ರ. ಚಳಿಗಾಲದ ಶೀತ ಮತ್ತು ವಾತದಿಂದ ಉಂಟಾಗುವ ಆಲಸ್ಯವನ್ನು ದೂರ ಓಡಿಸಲು ಎಳ್ಳು ಮತ್ತು ಬೆಲ್ಲದಂತಹ ಸ್ನೇಹ ದ್ರವ್ಯಗಳ […]

26 C