SENSEX
NIFTY
GOLD
USD/INR

Weather

19    C

ಡಿಜಿಟಲ್ ಸುದ್ದಿ ಮೂಲಗಳು

... ...View News by News Source

ಡೆಲ್ಲಿ ಕ್ಯಾಪಿಟಲ್ಸ್‌ ನಾಯಕತ್ವವನ್ನು ನಿರಾಕರಿಸಿದ್ದೇಕೆಂದು ತಿಳಿಸಿದ ಕೆಎಲ್‌ ರಾಹುಲ್‌…….!

ನವದೆಹಲಿ ಲಖನೌ ಸೂಪರ್‌ ಜಯಂಟ್ಸ್‌ ತಂಡದಿಂದ ಡೆಲ್ಲಿ ಕ್ಯಾಪಿಟಲ್ಸ್‌ ತಂಡಕ್ಕೆ ಬಂದಿದ್ದ ಕೆಎಲ್‌ ರಾಹುಲ್‌ , 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಕೇವಲ ಬ್ಯಾಟ್ಸ್‌ಮನ್‌ ಆಗಿ ಆಡಿದ್ದರು. ಡೆಲ್ಲಿಗೆ ಬಂದಾಗ ಕೆಎಲ್‌ ರಾಹುಲ್‌ಗೆ ನಾಯಕತ್ವವನ್ನು ನೀಡಲು ಫ್ರಾಂಚೈಸಿ ಆಡಳಿತ ಮಂಡಳಿ ಬಯಸಿತ್ತು. ಆದರೆ, ಸ್ವತಃ ಕೆಎಲ್‌ ರಾಹುಲ್‌ ಅವರೇ ನಾಯಕತ್ವವನ್ನು ನಿರಾಕರಿಸಿದ್ದರು ಹಾಗೂ ಹಿರಿಯ ಬ್ಯಾಟ್ಸ್‌ಮನ್‌ ಆಗಿ ಆಡಲು ಬಯಸಿದ್ದರು. ನಂತರ ಅಕ್ಷರ್‌ ಪಟೇಲ್‌ಗೆ ನಾಯಕತ್ವವನ್ನು ನೀಡಲಾಗಿತ್ತು. ಅದರಂತೆ ನಾಯಕತ್ವದ ಒತ್ತಡವಿಲ್ಲದೆ ಕಳೆದ […]

ಪ್ರಜಾ ಪ್ರಗತಿ 17 Nov 2025 5:30 pm

“ರಾಹುಲ್‌ ಬೇಡ ಅಖಿಲೇಶ್‌ ನಮ್ಮ ನಾಯಕರಾಗಲಿ”: ಇಂಡಿಯಾ ಮೈತ್ರಿಕೂಟದಲ್ಲಿ ಬಿರುಕು……….?

ನವದೆಹಲಿ: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ಹೀನಾಯ ಸೋಲಿನ ಬಳಿಕ ಭಾರತ ಬಣದಲ್ಲಿ ಇದೀಗ ಭಿನ್ನಾಭಿಪ್ರಾಯ ಉಂಟಾಗಿದೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಅದಕ್ಕೆ ಪುಷ್ಠಿ ಎನ್ನುವಂತೆ ಸಮಾಜವಾದಿ ಪಕ್ಷದ ಶಾಸಕರೊಬ್ಬರು ಪಕ್ಷದ ಮುಖ್ಯಸ್ಥ ಮತ್ತು ಕನ್ನೌಜ್ ಸಂಸದ ಅಖಿಲೇಶ್ ಯಾದವ್ ಅವರು ವಿರೋಧ ಪಕ್ಷಗಳ ಮೈತ್ರಿಕೂಟವನ್ನು ಮುನ್ನಡೆಸಬೇಕು ಮತ್ತು ದೇಶದ ರಾಜಕೀಯವಾಗಿ ಅತ್ಯಂತ ಮಹತ್ವದ ರಾಜ್ಯಗಳಲ್ಲಿ ಒಂದಾದ ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷವು ಸ್ವಂತವಾಗಿ ಸರ್ಕಾರ ರಚಿಸಲು ಸಮರ್ಥವಾಗಿದೆ ಎಂದು ಹೇಳಿದ್ದಾರೆ. […]

ಪ್ರಜಾ ಪ್ರಗತಿ 17 Nov 2025 5:21 pm

ಡಿಜಿಟಲ್‌ ಅರೆಸ್ಟ್‌ನಿಂದ ಹಣ ಕಳೆದುಕೊಂಡ ಬೆಂಗಳೂರಿನ ಮಹಿಳೆ

ಬೆಂಗಳೂರು ರಾಜ್ಯದಲ್ಲಿ ಇತ್ತೀಚೆಗೆ ಡಿಜಿಟಲ್‌ ಅರೆಸ್ಟ್‌ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗಿದೆ. ಈ ನಡುವೆ ಮಹಿಳಾ ಟೆಕ್ಕಿಯೊಬ್ಬರು ಬರೋಬ್ಬರಿ 31.83 ಕೋಟಿ ರೂ. ಕಳೆದುಕೊಂಡಿರುವುದು ಬೆಳಕಿಗೆ ಬಂದಿದ್ದು, ಇದು ರಾಜ್ಯದಲ್ಲೇ, ಡಿಜಿಟಲ್ ಅರೆಸ್ಟ್ ಪ್ರಕರಣಗಳಲ್ಲಿ ವ್ಯಕ್ತಿಯೊಬ್ಬರು ಕಳೆದುಕೊಂಡ ಅತಿ ದೊಡ್ಡ ಮೊತ್ತ ಎನ್ನಲಾಗಿದೆ. ಇಂದಿರಾನಗರದ ನಿವಾಸಿ, 57 ವರ್ಷದ ಮಹಿಳಾ ಟೆಕ್ಕಿ ವಂಚನೆಗೆ ಒಳಗಾಗಿದ್ದಾರೆ. ಮಹಿಳೆಯನ್ನು ಸೈಬರ್ ಅಪರಾಧಿಗಳು 6 ತಿಂಗಳಿಗೂ ಹೆಚ್ಚು ಕಾಲ ನಿರಂತರ ಕಣ್ಗಾವಲಿನಲ್ಲಿರಿಸಿ, ಹಣ ದೋಚಿದ್ದಾರೆ. 2024ರ […]

ಪ್ರಜಾ ಪ್ರಗತಿ 17 Nov 2025 5:19 pm

ಮಹಾಯುತಿಯಲ್ಲಿ ಬಿರುಕು: ಶರದ್ ಪವಾರ್ ಎನ್‌ಸಿಪಿ ಜತೆ ಶಿಂಧೆ ಶಿವಸೇನೆ ಮೈತ್ರಿ!

ನಾಸಿಕ್: ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಯೆಯೋಲಾದಲ್ಲಿ ಆಡಳಿತಾರೂಢ ಮಹಾಯುತಿ ಮೈತ್ರಿಕೂಟ ವಿಭಜನೆಯಾಗಿದ್ದು, ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಶಿವಸೇನೆಯು ಪ್ರತಿಪಕ್ಷದ ಭಾಗವಾಗಿರುವ ಎನ್‌ಸಿಪಿ(ಎಸ್‌ಪಿ) ಜೊತೆ ಕೈಜೋಡಿಸಲು ನಿರ್ಧರಿಸಿದೆ.ಈ ಹೊಸ ಮೈತ್ರಿಯು, ಭಾರತೀಯ ಜನತಾ ಪಕ್ಷ(ಬಿಜೆಪಿ) ಮತ್ತು ಅಜಿತ್ ಪವಾರ್ ಅವರ ಎನ್‌ಸಿಪಿಯ ವಿರುದ್ಧ ಸ್ಪರ್ಧಿಸಲಿದೆ. ಯೆಯೋಲಾ, ಸಚಿವ ಮತ್ತು ಎನ್‌ಸಿಪಿ ನಾಯಕ ಛಗನ್ ಭುಜಬಲ್ ಅವರ ತವರು ಕ್ಷೇತ್ರವಾಗಿದೆ. ಮಹಾಯುತಿಯಲ್ಲಿ ಬಿಜೆಪಿ, ಶಿವಸೇನೆ ಮತ್ತು ಎನ್ ಸಿಪಿ ಇದ್ದರೆ, ವಿರೋಧ ಪಕ್ಷವಾದ […]

ಪ್ರಜಾ ಪ್ರಗತಿ 17 Nov 2025 5:01 pm

ಕೊಲಂಬೊ : ಪ್ರವಾಸಿ ಮಹಿಳೆಗೆ ಖಾಸಗಿ ಅಂಗ ತೋರಿಸಿದ ನೀಚ……!

ಕೊಲಂಬೊ: ಇಂದು ಪ್ರವಾಸಿಗರಿಗೆ ಕಿರುಕುಳ ನೀಡುವ ಘಟನೆಗಳು ಹೆಚ್ಚಾಗಿ ನಡೆಯುತ್ತಿವೆ. ಇತ್ತೀಚೆಗೆ, ಜರ್ಮನ್ ಟ್ರಾವೆಲ್ ಇನ್ ಫ್ಲುಯೆನ್ಸರ್‌ಯೊಬ್ಬರು ಗೋವಾದಲ್ಲಿ ಆಟೋ ಚಾಲಕರಿಂದ ಕಿರುಕುಳಕ್ಕೆ ಒಳಗಾಗಿದ್ದರು. ಇದೀಗ ಅಂತಹುದೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದ್ದು ಶ್ರೀಲಂಕಾ ಪ್ರವಾಸದ ವೇಳೆ ನ್ಯೂಜಿಲೆಂಡ್ ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆಘಾತಕಾರಿ ಘಟನೆಯೊಂದು ವರದಿಯಾಗಿದೆ. 23 ವರ್ಷದ ಯುವಕನಿಂದ ಪ್ರವಾಸಿ ಮಹಿಳೆ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದು ಈ ಸಂಬಂಧ 23 ವರ್ಷದ ಯುವಕನನ್ನು ಬಂಧಿಸಲಾಗಿದೆ. ಸದ್ಯ […]

ಪ್ರಜಾ ಪ್ರಗತಿ 17 Nov 2025 4:57 pm

ದೆಹಲಿ ಬಾಂಬ್‌ ಸ್ಫೋಟದ ಮಹತ್ವದ ರಹಸ್ಯ ಬಯಲು…….!

ನೇಪಾಳದಿಂದ ಸೆಕೆಂಡ್‌ ಹ್ಯಾಂಡ್‌ ಮೊಬೈಲ್‌ ಖರೀದಿಸಿದ್ದ ಉಗ್ರರು ದೆಹಲಿ ಕೆಂಪು ಕೋಟೆ ಸಮೀಪ ಕಾರ್‌ ಬಾಂಬ್‌ ಸ್ಫೋಟ ನಡೆದು 1 ವಾರ ಕಳೆದಿದ್ದು, ಇದೀಗ ಒಂದೊಂದೇ ರಹಸ್ಯ ಬೆಳಕಿಗೆ ಬರುತ್ತಿದೆ. ಇದರ ಹಿಂದಿನ ಜೈಶ್‌-ಎ-ಮೊಹಮ್ಮದ್‌ ಉಗ್ರರ ಸಂಚು ಬಯಲಾಗಿದ್ದು, ಗೂಢಾಲೋಚನೆಗೆ ಸಂಬಂಧಿಸಿದ ವಿವರಗಳು ಹೊರ ಬೀಳುತ್ತಿವೆ. ಈಗಾಗಲೇ ರಾಷ್ಟ್ರೀಯ ತನಿಖಾ ಸಂಸ್ಥೆ ತನಿಖೆ ಕೈಗೆತ್ತಿಕೊಂಡಿದ್ದು, ಜಾಲವನ್ನು ಬುಡ ಸಮೇತ ಕಿತ್ತು ಹಾಕುವ ಪಣ ತೊಟ್ಟಿದೆ. ಜಮ್ಮು ಮತ್ತು ಕಾಶ್ಮೀರ ಮೂಲದ ವೈದ್ಯ ಉಮರ್‌ ಮೊಹಮ್ಮದ್‌ […]

ಪ್ರಜಾ ಪ್ರಗತಿ 17 Nov 2025 4:53 pm

ಕಲ್ಲು ಕ್ವಾರಿ ಕುಸಿತ; 6 ಜನರು ಸಾವು…….!

ಲಖನೌ: ಉತ್ತರ ಪ್ರದೇಶದ ಸೋನ್‌ಭದ್ರ ಜಿಲ್ಲೆಯಲ್ಲಿ ಕುಸಿದ ಕಲ್ಲು ಕ್ವಾರಿಯ ಅವಶೇಷಗಳಿಂದ ಇನ್ನೂ ಐದು ಶವಗಳು ಪತ್ತೆಯಾಗಿದ್ದು , ಸಾವಿನ ಸಂಖ್ಯೆ ಆರಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಲಿಯಾದ ವ್ಯಕ್ತಿಯನ್ನು ಓಬ್ರಾದ ಪನಾರಿ ನಿವಾಸಿ ಇಂದ್ರಜಿತ್ (30) ಎಂದು ಗುರುತಿಸಲಾಗಿದೆ. ಇತರ ವ್ಯಕ್ತಿಗಳನ್ನು ಇಂದ್ರಜಿತ್ ಅವರ ಸಹೋದರ ಸಂತೋಷ್ ಯಾದವ್ (30), ರವೀಂದ್ರ ಅಲಿಯಾಸ್ ನಾನಕ್ (18), ರಾಮ್‌ಖೇಲವನ್ (32) ಮತ್ತು ಕೃಪಾಶಂಕರ್ ಎಂದು ಗುರುತಿಸಲಾಗಿದೆ ಎಂದು ಸೋನ್‌ಭದ್ರ ಜಿಲ್ಲಾ ಮ್ಯಾಜಿಸ್ಟ್ರೇಟ್ ಬಿಎನ್ […]

ಪ್ರಜಾ ಪ್ರಗತಿ 17 Nov 2025 4:44 pm

ಶವವಾಗಿ ಪತ್ತೆಯಾದ ರಾಜಸ್ಥಾನ ಬಿಜೆಪಿ ನಾಯಕನ ಪತ್ನಿ…….!!

ಜೈಪುರ: ರಾಜಸ್ಥಾನದ ಭರತ್‌ಪುರದ ಬಿಜೆಪಿ ನಾಯಕನೊಬ್ಬನ ಪತ್ನಿ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾರೆ. ಇದರಿಂದ ಮಹಿಳೆಯ ಕುಟುಂಬ ಸದಸ್ಯರು ವರದಕ್ಷಿಣೆ ಕಿರುಕುಳ, ಕೊಲೆ ಮತ್ತು ರಹಸ್ಯವಾಗಿ ಅಂತ್ಯಕ್ರಿಯೆಗೆ ಯತ್ನಿಸಿದ್ದಾರೆ ಎಂದು ಆರೋಪಿಸಿ ಪ್ರಕರಣ ದಾಖಲಿಸಲಾಗಿದೆ. ಮೃತಪಟ್ಟ ಪ್ರಿಯಾಂಕಾ ಚೌಧರಿ, ಬಿಜೆಪಿ ಯುವ ಮೋರ್ಚಾದ ಮಾಜಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆಕಾಶ್ ಅವರನ್ನು ವಿವಾಹವಾಗಿದ್ದರು. ಆಕಾಶ್ ಮತ್ತು ಅವರ ಸಂಬಂಧಿಕರು ಮನೆ ತಲುಪುವ ಮೊದಲೇ ಆಕೆಯ ಕತ್ತು ಹಿಸುಕಿ ಕೊಂದು, ಮೃತದೇಹವನ್ನು ದಹನ ಮಾಡಲು ಪ್ರಯತ್ನಿಸಿದ್ದಾರೆ ಎಂದು […]

ಪ್ರಜಾ ಪ್ರಗತಿ 17 Nov 2025 3:03 pm

ಹೊತ್ತಿ ಉರಿಯುತ್ತಿದ್ದ ಬಸ್‌ನಿಂದ ಬದುಕಿ ಬಂದ ಏಕೈಕ ವ್ಯಕ್ತಿ ಈತ…….!

ರಿಯಾದ್‌: ಭಾರತೀಯ ಉಮ್ರಾ ಯಾತ್ರಿಕರನ್ನು ಕರೆದೊಯ್ಯುತ್ತಿದ್ದ ಬಸ್ ಮದೀನಾ ಬಳಿ ಡೀಸೆಲ್ ಟ್ಯಾಂಕರ್‌ಗೆ ಡಿಕ್ಕಿ ಹೊಡೆದ ಪರಿಣಾಮ, 40 ಕ್ಕೂ ಅಧಿಕ ಜನರು ಮೃತಪಟ್ಟಿದ್ದಾರೆ. ಅಚ್ಚರಿಯ ರೀತಿಯಲ್ಲಿ 24 ವರ್ಷದ ಮೊಹಮ್ಮದ್ ಅಬ್ದುಲ್ ಶೋಯಾಬ್ ಎನ್ನುವಾತ ಬದುಕುಳಿದಿದ್ದಾನೆ ಎನ್ನುವ ಮಾಹಿತಿ ಲಭ್ಯವಾಗಿದೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ, ಆದರೆ ಅವರ ಸ್ಥಿತಿ ಕುರಿತು ಇನ್ನೂ ಮಾಹಿತಿ ತಿಳಿದು ಬಂದಿಲ್ಲ ಎಂದು ಮೂಲಗಳು ತಿಳಿಸಿವೆ. ಮೃತರಲ್ಲಿ ಹೆಚ್ಚಿನವರು ಹೈದರಾಬಾದ್ ನಿವಾಸಿಗಳು ಎಂದು ವರದಿಯಾಗಿದೆ. ಈ ಪೈಕಿ 16 […]

ಪ್ರಜಾ ಪ್ರಗತಿ 17 Nov 2025 2:55 pm

ದೆಹಲಿ ಭದ್ರತಾ ಲೋಪ ಬಾಂಬರ್‌ ಉಮರ್‌ಗೆ ನೆರವಾಯಿತೇ ………..?

ದೆಹಲಿ ನವೆಂಬರ್‌ 10ರ ಸಂಜೆ 7 ಗಂಟೆಗೆ ರಾಷ್ಟ್ರ ರಾಜಧಾನಿ ದೆಹಲಿ ಎಂದಿನಂತಿರಲಿಲ್ಲ. ಕೆಂಪು ಕೋಟೆ ಮೆಟ್ರೋ ಸ್ಟೇಷನ್‌ ಮುಂಭಾಗ ಕಾರ್‌ ಸ್ಫೋಟಿಸಿ ಉಗ್ರರು 13 ಮಂದಿಯನ್ನು ಬಲಿ ಪಡೆದುಕೊಂಡಿದ್ದರು . ಜೈಶ್‌-ಎ-ಮೊಹಮ್ಮದ್‌ ಉಗ್ರ ಸಂಘಟನೆಗೆ ಸೇರಿದ, ಹರಿಯಾಣದ ಫರಿದಾಬಾದ್‌ ಅಲ್‌ ಫಲಾಹ್‌ ವಿಶ್ವ ವಿದ್ಯಾನಿಲಯದ ವೈದ್ಯ ಡಾ. ಉಮರ್‌ ಮೊಹಮ್ಮದ್‌ ಚಲಾಯಿಸುತ್ತಿದ್ದ ಹ್ಯುಂಡೈ ಐ20 ಕಾರ್‌ ಸ್ಫೋಟಗೊಂಡಿತ್ತು. ಭಾರಿ ಭದ್ರತೆ ಹೊಂದಿರುವ ದೆಹಲಿಯಲ್ಲಿ ಸ್ಫೋಟ ನಡೆದಿದ್ದು ದೇಶವನ್ನೇ ಬೆಚ್ಚಿ ಬೀಳಿಸಿದೆ. ಇದೀಗ ಸ್ಫೋಟಕ […]

ಪ್ರಜಾ ಪ್ರಗತಿ 17 Nov 2025 11:22 am

ದೆಹಲಿ ಬಾಂಬ್‌ ಸ್ಫೋಟ : ಉಮರ್‌ನ ಸಹಾಯಕನ ಬಂಧನ…..!

ಶ್ರೀನಗರ ದೆಹಲಿ ಕೆಂಪು ಕೋಟೆ ಬಳಿ ನವೆಂಬರ್‌ 10ರಂದು ನಡೆದ ಬಾಂಬ್‌ ಸ್ಫೋಟ ಪ್ರಕರಣದ ತನಿಖೆಯಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ರಾಷ್ಟ್ರೀಯ ತನಿಖಾ ಸಂಸ್ಥೆ ಭಾನುವಾರ ಆತ್ಮಹತ್ಯಾ ಬಾಂಬರ್‌ ಡಾ. ಉಮರ್‌ ಉನ್‌ ನಬಿಗೆ ಸಹಾಯ ಮಾಡಿದ ಕಾಶ್ಮೀರದ ವ್ಯಕ್ತಿಯನ್ನು ಬಂಧಿಸಿದೆ. ಬಂಧಿತನನ್ನು ಅಮೀರ್‌ ರಶೀದ್‌ ಅಲಿ ಎಂದು ಗುರುತಿಸಲಾಗಿದೆ. ಭಯೋತ್ಪಾದಕ ಕೃತ್ಯಕ್ಕೆ ಸಂಚು ರೂಪಿಸಿದ ಆರೋಪದಲ್ಲಿ ಪ್ಯಾಂಪೋರ್‌ನ ಸಂಬೂರ ನಿವಾಸಿ ಅಮೀರ್‌ ರಶೀದ್‌ ಅಲಿಯನ್ನು ದೆಹಲಿಯಲ್ಲಿ ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಸ್ಫೋಟಗೊಂಡ ಹ್ಯುಂಡೈ […]

ಪ್ರಜಾ ಪ್ರಗತಿ 17 Nov 2025 11:20 am

ಛತ್ತೀಸ್‌ಗಢದಲ್ಲಿ ಮೂವರು ನಕ್ಸಲರು ಭದ್ರತಾ ಪಡೆಗಳ ಗುಂಡಿಗೆ ಬಲಿ

ಛತ್ತೀಸ್‌ಗಢ: ಇಬ್ಬರು ಮಹಿಳಾ ಮಾವೋವಾದಿಗಳು ಸೇರಿ ಮೂವರನ್ನು ಛತ್ತೀಸ್‌ಗಢದ ಸುಕ್ಮಾದ ತುಮಲ್‌ಪಾಡ್ ಗ್ರಾಮದ ಬಳಿ ಭದ್ರತಾ ಪಡೆಗಳು ಹೊಡೆದು ಉರುಳಿಸಿವೆ. ಈ ಮೂವರಿಗೆ ತಲಾ 5 ಲಕ್ಷ ರೂ. ಬಹುಮಾನ ಘೋಷಿಸಲಾಗಿತ್ತು ಎಂದು ಭಾನುವಾರ ಐಜಿ ಬಸ್ತಾರ್ ಪಿ. ಸುಂದರರಾಜ್ ತಿಳಿಸಿದ್ದಾರೆ. ಸುಕ್ಮಾ ಪೊಲೀಸರು ಕೂಡ ಈ ಮಾಹಿತಿಯನ್ನು ದೃಢಪಡಿಸಿದ್ದಾರೆ.ಮೃತರಲ್ಲಿ ಮಿಲಿಟಿಯಾ ಕಮಾಂಡರ್ ಮತ್ತು ಸ್ನೈಪರ್ ತಜ್ಞ ಮದ್ವಿ ದೇವಾ ಸೇರಿದ್ದಾರೆ ಎಂದು ಅವರು ತಿಳಿಸಿದ್ದಾರೆ. ತುಮಲ್‌ಪಾಡ್ ಗ್ರಾಮದ ಬಳಿ ಭದ್ರತಾ ಪಡೆಗಳು […]

ಪ್ರಜಾ ಪ್ರಗತಿ 17 Nov 2025 11:17 am

5 ನಿಮಿಷ ಅಪ್ಪಿಕೊಳ್ಳಿ… 600 ರೂ. ಪೇ ಮಾಡಿ! : ಚೀನಾದಲ್ಲಿ ಹೊಸ ಟ್ರೆಂಡ್‌…………

ಬೀಜಿಂಗ್: ಚೀನಾದ ಪ್ರಮುಖ ನಗರಗಳಲ್ಲಿವಿಚಿತ್ರ ಟ್ರೆಂಡ್‍ವೊಂದು ವೈರಲ್‌ ಆಗುತ್ತಿದೆ. ಸಂಗಾತಿ ಬಯಸುವ, ಒಡನಾಟ, ಮತ್ತು ಆಧುನಿಕ ಜೀವನದ ಒತ್ತಡಗಳ ಕುರಿತು ಚರ್ಚೆಗಳು ನಡೆಯುತ್ತಿವೆ. ‘ಮ್ಯಾನ್ ಮಮ್’ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಟ್ರೆಂಡ್‍ನಲ್ಲಿ, ಜಿಮ್‌ ತರಬೇತಿ ಪಡೆದ ಪುರುಷರು, ಸಿದ್ಧಾಂತವಾಗಿ ರೊಮ್ಯಾಂಟಿಕ್ ಸಂಬಂಧವಿಲ್ಲದ, ಅಪ್ಪುಗೆ ಸೇವೆಗಳನ್ನು ಮಹಿಳೆಯರಿಗೆ ನೀಡುತ್ತಾರೆ. ಹೆಚ್ಚುತ್ತಿರುವ ಅಕಾಡೆಮಿಕ್ ಮತ್ತು ಕೆಲಸದ ಒತ್ತಡದ ನಡುವೆ ಸ್ವಲ್ಪ ಸಮಯ ಆರಾಮವನ್ನು ಬಯಸಬಹುದು. ಇದೀಗ ಈ ಸುದ್ದಿ ವೈರಲ್ ಆಗಿದೆ. ಚೀನಾದ ಸಾಮಾಜಿಕ […]

ಪ್ರಜಾ ಪ್ರಗತಿ 17 Nov 2025 11:13 am

ಗುವಾಹಟಿ ಟೆಸ್ಟ್‌ಗೆ ಸೂಕ್ತ ಆಟಗಾರನನ್ನು ಆರಿಸಿದ ಅನಿಲ್‌ ಕುಂಬ್ಳೆ………!

ನವದೆಹಲಿ: ಗಾಯಾಳು ಶುಭಮನ್‌ ಗಿಲ್‌ ಅವರು ಗುವಾಹಟಿಯಲ್ಲಿ ನಡೆಯುವ ಎರಡನೇ ಟೆಸ್ಟ್‌ ಪಂದ್ಯಕ್ಕೆ ಅಲಭ್ಯರಾದರೆ, ಅವರ ಸ್ಥಾನಕ್ಕೆ ಯುವ ಬ್ಯಾಟ್ಸ್‌ಮನ್‌ ಸಾಯಿ ಸುದರ್ಶನ್‌ ಅವರನ್ನು ಆಡಿಸಬೇಕೆಂದು ಸ್ಪಿನ್‌ ದಂತಕತೆ ಹಾಗೂ ಟೀಮ್‌ ಇಂಡಿಯಾ ಮಾಜಿ ನಾಯಕ ಅನಿಲ್‌ ಕುಂಬ್ಳೆ ಸಲಹೆ ನೀಡಿದ್ದಾರೆ. ಕೋಲ್ಕತಾ ಟೆಸ್ಟ್‌ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ ಬ್ಯಾಟ್‌ ಮಾಡುವಾಗ ಶುಭಮನ್‌ ಗಿಲ್‌ ಕುತ್ತಿಗೆಯಲ್ಲಿ ನೋವು ಕಾಣಿಸಿಕೊಂಡಿತ್ತು ಹಾಗೂ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಭಾನುವಾರ ಬೆಳಿಗ್ಗೆ ಅವರು ಮೊದಲನೇ ಟೆಸ್ಟ್‌ ಪಂದ್ಯದ […]

ಪ್ರಜಾ ಪ್ರಗತಿ 17 Nov 2025 11:07 am

ನೌಗಮ್ ಪೋಲಿಸ್ ಠಾಣೆ ಸ್ಫೋಟ, ಮೃತರ ಸಂಖ್ಯೆ 9ಕ್ಕೆ ಏರಿಕೆ…..!

ಶ್ರೀನಗರ ನೌಗಮ್ ಪೊಲೀಸ್ ಠಾಣೆಯಲ್ಲಿ ನಿನ್ನೆ ಶುಕ್ರವಾರ ತಡರಾತ್ರಿ ಸಂಭವಿಸಿದ ಆಕಸ್ಮಿಕ ಸ್ಫೋಟದಲ್ಲಿ ಮೃತಪಟ್ಟವರ ಸಂಖ್ಯೆ 9ಕ್ಕೆ ಏರಿಕೆಯಾಗಿದೆ. ದುರ್ಘಟನೆಯಲ್ಲಿು 32 ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ವಾರ ದೆಹಲಿ ಸ್ಫೋಟ ಹಿನ್ನೆಲೆಯಲ್ಲಿ ಫರೀದಾಬಾದ್ ಭಯೋತ್ಪಾದನಾ ಮಾಡ್ಯೂಲ್ ಪ್ರಕರಣದಲ್ಲಿ ವಶಪಡಿಸಿಕೊಂಡ ಸ್ಫೋಟಕಗಳ ಸಂಗ್ರಹದಿಂದ ಅಧಿಕಾರಿಗಳು ಮಾದರಿಗಳನ್ನು ಹೊರತೆಗೆಯುತ್ತಿದ್ದಾಗ ಆಕಸ್ಮಿಕವಾಗಿ ಸ್ಫೋಟ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ವಸ್ತುವು ಫರಿದಾಬಾದ್‌ನ ಬಂಧಿತ ಆರೋಪಿ ಡಾ. […]

ಪ್ರಜಾ ಪ್ರಗತಿ 15 Nov 2025 5:09 pm

ಬಿಹಾರದಲ್ಲಿ ಹೀನಾಯ ಸೋಲು: ಖರ್ಗೆ ನಿವಾಸದಲ್ಲಿ ಮಹತ್ವದ ಸಭೆ; ಫಲಿತಾಂಶದ ಬಗ್ಗೆ ರಾಹುಲ್ ಗಾಂಧಿ ಚರ್ಚೆ

ನವದೆಹಲಿ: ಬಿಹಾರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲು ಕಂಡಿದ್ದು, ಇದರ ಬೆನ್ನಲ್ಲೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ಮಹತ್ವದ ಸಭೆ ನಡೆಸುತ್ತಿದ್ದಾರೆ.ದೆಹಲಿಯ ರಾಜಾಜಿ ಮಾರ್ಗ್‌ನಲ್ಲಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ರಾಹುಲ್ ಗಾಂಧಿಯವರು ಸಭೆ ನಡೆಸುತ್ತಿದ್ದು, ಫಲಿತಾಂಶ ಕುರಿತು ಚರ್ಚೆ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ಪಕ್ಷದ ಖಜಾಂಚಿ ಅಜಯ್ ಮಾಕನ್ ಮತ್ತು ಎಐಸಿಸಿ ಬಿಹಾರ […]

ಪ್ರಜಾ ಪ್ರಗತಿ 15 Nov 2025 4:46 pm

ಬಿಹಾರ ಚುನಾವಣೆಯಲ್ಲಿ NDA ಗೆಲುವು ECI ಪ್ರಾಯೋಜಿತ ‘ಹಗರಣ’ : ಸಾಮ್ನ

ಮುಂಬೈ: ಬಿಹಾರ ವಿಧಾಸಭೆ ಚುನಾವಣೆಯ ಫಲಿತಾಂಶ ಚುನಾವಣಾ ಆಯೋಗವು ಮಾಡಿದ ಮಹಾ ವಂಚನೆ ಎಂದು ಶಿವಸೇನೆ(ಯುಬಿಟಿ) ಶನಿವಾರ ಟೀಕಿಸಿದ್ದು, ಆಡಳಿತಾರೂಢ ಬಿಜೆಪಿ ನೇತೃತ್ವದ ಎನ್‌ಡಿಎ ಮತ ಕಳ್ಳತನದ ಮೂಲಕ ಗೆಲುವು ಸಾಧಿಸಿದೆ ಎಂದು ಆರೋಪಿಸಿದೆ .ಚುನಾವಣೆಯಲ್ಲಿ ಆಡಳಿತಾರೂಢ ಎನ್‌ಡಿಎ ಅದ್ಭುತ ಗೆಲುವು ಸಾಧಿಸಿದ ಒಂದು ದಿನದ ನಂತರ, ಉದ್ಧವ್ ಠಾಕ್ರೆ ನೇತೃತ್ವದ ಪಕ್ಷವು, ಬಿಹಾರ ಮುಖ್ಯಮಂತ್ರಿ ಹುದ್ದೆಗಾಗಿ ಜೆಡಿಯು ಮೇಲೆ ಹಿಡಿತ ಸಾಧಿಸಲು ಬಿಜೆಪಿ ಹಿಂಜರಿಯುವುದಿಲ್ಲ ಎಂದು ಹೇಳಿದೆ. ಮುಖ್ಯಮಂತ್ರಿ ನಿತೀಶ್ ಕುಮಾರ್ […]

ಪ್ರಜಾ ಪ್ರಗತಿ 15 Nov 2025 4:40 pm

ಟೆಸ್ಟ್‌ನಲ್ಲಿ ಅಪರೂಪದ ಸಾಧನೆ ಮಾಡಿದ ರವೀಂದ್ರ ಜಡೇಜಾ…..!

ಕೋಲ್ಕತಾ: ಟೀಮ್‌ ಇಂಡಿಯಾದ ಸ್ಟಾರ್‌ ಆಲ್‌ಲೌಂಡರ್‌ ರವೀಂದ್ರ ಜಡೇಜಾ ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ 4000 ರನ್ ಮತ್ತು 300 ವಿಕೆಟ್‌ಗಳನ್ನು ಪಡೆದ ವಿಶ್ವದ ನಾಲ್ಕನೇ ಹಾಗೂ ಎರಡನೇ ಭಾರತೀಯ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಕಪಿಲ್ ದೇವ್ ಮೊದಲಿಗ. ವಿಶ್ವದ ನಂ. 1 ಟೆಸ್ಟ್ ಆಲ್‌ರೌಂಡರ್ ಆಗಿರುವ ಜಡೇಜಾ ಈಡನ್ ಗಾರ್ಡನ್ಸ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಈ ಮೈಲಿಗಲ್ಲು ತಲುಪಿದರು. ತಮ್ಮ 88ನೇ ಟೆಸ್ಟ್ ಪಂದ್ಯವನ್ನು ಆಡುತ್ತಿರುವ ಜಡೇಜಾ, […]

ಪ್ರಜಾ ಪ್ರಗತಿ 15 Nov 2025 4:35 pm

ರಾಜಸ್ಥಾನ್‌ ಸೇರಿದ ಬಗ್ಗೆ ಜಡೇಜಾ ಮೊದಲ ಪ್ರತಿಕ್ರಿಯೆ…..!

ಕೋಲ್ಕತಾ: 2026 ರ ಇಂಡಿಯನ್ ಪ್ರೀಮಿಯರ್ ಲೀಗ್ ಆವೃತ್ತಿಗೆ ಮುಂಚಿತವಾಗಿ ಚೆನ್ನೈ ಸೂಪರ್ ಕಿಂಗ್ಸ್ ನಿಂದ ರಾಜಸ್ಥಾನ ರಾಯಲ್ಸ್ ಗೆ ಹೈ ಪ್ರೊಫೈಲ್ ವರ್ಗಾವಣೆಯನ್ನು ಪೂರ್ಣಗೊಳಿಸಿದ ನಂತರ ಸ್ಟಾರ್ ಆಲ್‌ರೌಂಡರ್ ರವೀಂದ್ರ ಜಡೇಜಾ ತಮ್ಮ ಮೊದಲ ಪ್ರತಿಕ್ರಿಯೆಯನ್ನು ನೀಡಿದರು. ಶನಿವಾರ ಬೆಳಿಗ್ಗೆ ಐಪಿಎಲ್ ಆಡಳಿತ ಮಂಡಳಿಯು ವಿನಿಮಯ ಒಪ್ಪಂದವನ್ನು ದೃಢಪಡಿಸಿತು, ಇದರ ಪರಿಣಾಮವಾಗಿ ಜಡೇಜಾ 14 ಕೋಟಿ ರೂ.ಗೆ ಉದ್ಘಾಟನಾ ಚಾಂಪಿಯನ್‌ಗಳೊಂದಿಗೆ ಸೇರಿಕೊಂಡರು. ಸಂಜು ಸ್ಯಾಮ್ಸನ್ 18 ಕೋಟಿ ರೂ.ಗೆ ಐದು ಬಾರಿಯ […]

ಪ್ರಜಾ ಪ್ರಗತಿ 15 Nov 2025 4:30 pm

Bihar Election Result 2025: BJP ಗೆಲುವಿನ ಹಿಂದಿರುವ ಸಾರಥಿ ಈ ಮೂವರು….!

ಪಟನಾ: ಬಿಹಾರದಲ್ಲಿ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ ಭರ್ಜರಿ ಜಯ ಗಳಿಸಿದೆ. ಬಿಹಾರದ ಈ ಭರ್ಜರಿ ಗೆಲುವು ಬಿಜೆಪಿಯ ಕಾರ್ಯತಂತ್ರದ ಪರಾಕ್ರಮಕ್ಕೆ ಸಾಕ್ಷಿಯಾಗಿದೆ ಎಂದು ಪರಿಗಣಿಸಲಾಗುತ್ತಿದ್ದು, ಪಕ್ಷದ ಯಶಸ್ಸಿನಲ್ಲಿ ಮೂವರು ಪ್ರಮುಖ ಪಾತ್ರ ವಹಿಸಿದ್ದಾರೆ. ಗೃಹ ಸಚಿವ ಅಮಿತ್ ಶಾ, ಧರ್ಮೇಂದ್ರ ಪ್ರಧಾನ್ ಮತ್ತು ವಿನೋದ್ ತಾವ್ಡೆ ಅವರು ಬಿಜೆಪಿಯ ಗೆಲುವಿನ ಅಭಿಯಾನದ ಹಿಂದಿನ ಪ್ರಮುಖ ರೂವಾರಿಗಳಾಗಿದ್ದರು. ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ರಾಜಕೀಯ ಚಾಣಕ್ಯ ಎಂದೇ ಹೆಸರಾಗಿದ್ದಾರೆ. ಅವರ […]

ಪ್ರಜಾ ಪ್ರಗತಿ 15 Nov 2025 4:11 pm

ನ್ಯಾಯ ಕೊಡಿ ಎಂದ ಅತ್ಯಾಚಾರ ಸಂತ್ರಸ್ತೆ ಗೋಳಾಟ………!

ಲಖನೌ: ಸಾಮೂಹಿಕ ಅತ್ಯಾಚಾರದಿಂದ ನೊಂದ ಯುವತಿಯೊಬ್ಬಳು, ಸ್ಥಳದಲ್ಲಿದ್ದ ಪೊಲೀಸರನ್ನು ಧಿಕ್ಕರಿಸಿ, ಪೊಲೀಸ್ ಉಪ ಮಹಾನಿರ್ದೇಶಕ ಅವರನ್ನು ಭೇಟಿ ಮಾಡಿ, ಅತ್ಯಾಚಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾಳೆ. ಉತ್ತರ ಪ್ರದೇಶದ ಬುಲಂದರ್‌ಶರ್‌ನಲ್ಲಿ ಈ ಘಟನೆ ನಡೆದಿದ್ದು, ಇದರ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ವರದಿಗಳ ಪ್ರಕಾರ, ಸಂತ್ರಸ್ಥೆ ಯುವತಿಯನ್ನು ಆರಂಭದಲ್ಲಿ ಪೊಲೀಸ್ ಠಾಣೆಯಲ್ಲಿ ಪುರುಷ ಮತ್ತು ಮಹಿಳಾ ಅಧಿಕಾರಿಗಳು ಡಿಐಜಿ ಅವರನ್ನು ಭೇಟಿಯಾಗದಂತೆ ತಡೆದರು. ಆದರೆ, ಆಕೆ ಇದರಿಂದ ವಿಚಲಿತಳಾಗದೆ ಅವರನ್ನು […]

ಪ್ರಜಾ ಪ್ರಗತಿ 15 Nov 2025 3:39 pm

ರಶ್ಮಿಕಾ ಮಂದಣ್ಣ ಅಭಿನಯದ ‘ದಿ ಗರ್ಲ್​​​ಫ್ರೆಂಡ್​’ಒಟಿಟಿ ಎಂಟ್ರಿ ಯಾವಾಗ?

ಮುಂಬೈ : ರಾಹುಲ್ ರವೀಂದ್ರನ್ ನಿರ್ದೇಶನದ ರಶ್ಮಿಕಾ ಮಂದಣ್ಣ ಅವರ ಇತ್ತೀಚಿನ ತೆಲುಗು ರೊಮ್ಯಾಂಟಿಕ್‌ ಸಿನಿಮಾ ‘ದಿ ಗರ್ಲ್‌ಫ್ರೆಂಡ್’ ಬಿಡುಗಡೆಯಾದ ಸುಮಾರು ಒಂದು ವಾರದ ನಂತರವೂ ಬಾಕ್ಸ್ ಆಫೀಸ್‌ನಲ್ಲಿ ಪ್ರದರ್ಶನ ಮುಂದುವರಿಸಿದೆ. ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಗಳಿಕೆ ಮಾಡುತ್ತಿದ್ದರೂ, ಡಿಜಿಟಲ್‌ ಸ್ಟ್ರೀಮಿಂಗ್‌ ಯಾವಾಗ ಎಂದು ಈಗಲೇ ಕಮೆಂಟ್‌ ಮಾಡುತ್ತಿದ್ದಾರೆ ವೀಕ್ಷಕರು. ಈ ತೆಲುಗು ಚಿತ್ರಕ್ಕೆ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ವ್ಯಾಪಾರ ವರದಿಗಳ ಪ್ರಕಾರ, ಆರನೇ ದಿನ […]

ಪ್ರಜಾ ಪ್ರಗತಿ 15 Nov 2025 3:29 pm

ಎನ್‌ಡಿಗೆ ಗೆಲುವಿಗೆ ಚಕ್ರವ್ಯೂಹವನ್ನೇ ರಚಿಸಿದ್ದ ಚಾಣಾಕ್ಯ……!

ಪಟನಾ: ಬಿಹಾರದಲ್ಲಿ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ ಭರ್ಜರಿ ಜಯ ಗಳಿಸಿದೆ. ಬಿಹಾರದ ಈ ಭರ್ಜರಿ ಗೆಲುವು ಬಿಜೆಪಿಯ ಕಾರ್ಯತಂತ್ರದ ಪರಾಕ್ರಮಕ್ಕೆ ಸಾಕ್ಷಿಯಾಗಿದೆ ಎಂದು ಪರಿಗಣಿಸಲಾಗುತ್ತಿದ್ದು, ಪಕ್ಷದ ಯಶಸ್ಸಿನಲ್ಲಿ ಮೂವರು ಪ್ರಮುಖ ಪಾತ್ರ ವಹಿಸಿದ್ದಾರೆ. ಗೃಹ ಸಚಿವ ಅಮಿತ್ ಶಾ, ಧರ್ಮೇಂದ್ರ ಪ್ರಧಾನ್ ಮತ್ತು ವಿನೋದ್ ತಾವ್ಡೆ ಅವರು ಬಿಜೆಪಿಯ ಗೆಲುವಿನ ಅಭಿಯಾನದ ಹಿಂದಿನ ಪ್ರಮುಖ ರೂವಾರಿಗಳಾಗಿದ್ದರು. ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ರಾಜಕೀಯ ಚಾಣಕ್ಯ ಎಂದೇ ಹೆಸರಾಗಿದ್ದಾರೆ. ಅವರ […]

ಪ್ರಜಾ ಪ್ರಗತಿ 15 Nov 2025 3:20 pm