SENSEX
NIFTY
GOLD
USD/INR

Weather

19    C

ಡಿಜಿಟಲ್ ಸುದ್ದಿ ಮೂಲಗಳು

... ...View News by News Source

BIG NEWS: ಜೆಇಇ ಮುಖ್ಯ ಪರೀಕ್ಷೆ ದಿನಾಂಕ ಪರಿಷ್ಕರಣೆ: ಇಲ್ಲಿದೆ ಮಾಹಿತಿ

ನವದೆಹಲಿ: ಜಂಟಿ ಪ್ರವೇಶ ಪರೀಕ್ಷೆ (ಜೆಇಇ) ಮುಖ್ಯ ಪರೀಕ್ಷೆ ಜನವರಿ ಸೆಷನ್ 1 ಪರೀಕ್ಷೆಯ ದಿನಾಂಕಗಳನ್ನು ಪರಿಷ್ಕರಿಸಲಾಗಿದೆ. ಜೆಇಇ ಮುಖ್ಯ ಪರೀಕ್ಷೆ ಜನವರಿ 21 ರಿಂದ 29 ರವರೆಗೆ ನಡೆಯಲಿದೆ, ಇದನ್ನು ಮೊದಲು ಜನವರಿ 30 ರವರೆಗೆ ಮುಂದುವರಿಸಲು ನಿರ್ಧರಿಸಲಾಗಿತ್ತು. ಜೆಇಇ ಮುಖ್ಯ ಪತ್ರಿಕೆ ಒಂದು ಎರಡು ಪಾಳಿಗಳಲ್ಲಿ ನಡೆಯಲಿದೆ; ಮೊದಲ ಶಿಫ್ಟ್ ಬೆಳಿಗ್ಗೆ 9 ರಿಂದ ಮಧ್ಯಾಹ್ನ 12 ರವರೆಗೆ, ಎರಡನೇ ಶಿಫ್ಟ್ ಮಧ್ಯಾಹ್ನ 3 ರಿಂದ ಸಂಜೆ 6 ರವರೆಗೆ. ಜೆಇಇ ಮುಖ್ಯ ಪತ್ರಿಕೆ […]

ಕನ್ನಡ ದುನಿಯಾ 8 Jan 2026 9:42 pm

BREAKING: ಶಾರ್ಟ್ ಸರ್ಕ್ಯೂಟ್ ನಿಂದ ಖಾಸಗಿ ಕ್ಲಿನಿಕ್ ಗೆ ಬೆಂಕಿ: ಭಾರೀ ಹಾನಿ

ಕಲಬುರಗಿ: ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ತಗುಲಿ ಖಾಸಗಿ ಕ್ಲಿನಿಕ್ ಹೊತ್ತಿ ಉರಿದ ಘಟನೆ ಕಲಬುರಗಿ ಜಿಲ್ಲೆ ಅಫಜಲಪುರ ತಾಲೂಕಿನ ಕರಜಗಿ ಗ್ರಾಮದಲ್ಲಿ ನಡೆದಿದೆ. ಡಾ. ಶ್ರೀದೇವಿ ಬಿರಾದಾರ ಅವರ ಕ್ಲಿನಿಕ್ ಬೆಂಕಿ ತಗುಲಿದೆ. ಪ್ರತಿ ಶನಿವಾರ ಮಾತ್ರ ಕ್ಲಿನಿಕ್ ಓಪನ್ ಆಗುತ್ತಿತ್ತು. ಅಗ್ನಿ ಅವಘಡದಿಂದ 7-8 ಲಕ್ಷ ರೂ.ನಷ್ಟು ನಷ್ಟವಾಗಿದೆ. ಅಫಜಲಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಈ ಕುರಿತಾಗಿ ಹೆಚ್ಚಿನ ವಿವರ ನಿರೀಕ್ಷಿಸಲಾಗಿದೆ.

ಕನ್ನಡ ದುನಿಯಾ 8 Jan 2026 9:09 pm

BIG NEWS: ಕನ್ನಡ ಮಾಧ್ಯಮ ಶಾಲೆಗಳಲ್ಲಿ ಮಲಯಾಳಂ ಕಡ್ಡಾಯಗೊಳಿಸುವ ಕೇರಳ ಸರ್ಕಾರದ ಮಸೂದೆಗೆ ಸಿಎಂ ಸಿದ್ಧರಾಮಯ್ಯ ತೀವ್ರ ವಿರೋಧ

ಕೇರಳದ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂ ಕಲಿಕೆಯನ್ನು ಕಡ್ಡಾಯಗೊಳಿಸುವ ಕೇರಳ ಸರ್ಕಾರದ ಪ್ರಸ್ತಾಪಿತ ಮಲೆಯಾಳಿ ಭಾಷಾ ಮಸೂದೆ-2025 ಸಂವಿಧಾನ ಖಾತರಿ ಮಾಡಿರುವ ಭಾಷಾ ಸ್ವಾತಂತ್ರ್ಯದ ಮೇಲಿನ ಪ್ರಹಾರವಾಗಿದೆ ಎಂದು ಸಿಎಂ ಸಿದ್ಧರಾಮಯ್ಯ ಹೇಳಿದ್ದಾರೆ. ಇಂತಹದ್ದೊಂದು ಕಾನೂನು ಜಾರಿಗೆ ಬಂದರೆ ಕೇರಳದ ಗಡಿಜಿಲ್ಲೆಗಳಲ್ಲಿ ಮುಖ್ಯವಾಗಿ ಕಾಸರಗೋಡಿನಲ್ಲಿ ವಾಸಿಸುತ್ತಿರುವ ಕನ್ನಡಿಗರು ಮಾತೃಭಾಷೆಯನ್ನು ಕಲಿಯುವ ಅವಕಾಶದಿಂದ ವಂಚಿತರಾಗಲಿದ್ದಾರೆ. ಭಾಷಾ ಅಲ್ಪಸಂಖ್ಯಾತರ ಮೂಲಭೂತ ಹಕ್ಕನ್ನು ದಮನ ಮಾಡುವ ಇಂತಹ ನಡೆಯನ್ನು ಕೇರಳದ ಕಮ್ಯುನಿಸ್ಟ್ ಸರ್ಕಾರದಿಂದ ನಾವು ನಿರೀಕ್ಷಿಸಿರಲಿಲ್ಲ ಎಂದು ತಿಳಿಸಿದ್ದಾರೆ. […]

ಕನ್ನಡ ದುನಿಯಾ 8 Jan 2026 9:03 pm

BREAKING: ಬೆಂಗಳೂರು –ಮೈಸೂರು ಎಕ್ಸ್ ಪ್ರೆಸ್ ಹೈವೇಯಲ್ಲಿ ಚಲಿಸುತ್ತಿದ್ದ ಕಾರ್ ಗೆ ಬೆಂಕಿ: ಅದೃಷ್ಟವಶಾತ್ ದಂಪತಿ ಪಾರು

ಮಂಡ್ಯ: ಬೆಂಗಳೂರು- ಮೈಸೂರು ಎಕ್ಸ್ ಪ್ರೆಸ್ ಹೈವೇಯಲ್ಲಿ ಚಲಿಸುತ್ತಿದ್ದ ಕಾರ್ ಗೆ ಬೆಂಕಿ ತಗುಲಿದ್ದು, ಅದೃಷ್ಟವಶಾತ್ ಕಾರ್ ನಲ್ಲಿದ್ದ ದಂಪತಿ ಅಪಾಯದಿಂದ ಪಾರಾಗಿದ್ದಾರೆ. ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ನಿಡಘಟ್ಟ ಗ್ರಾಮದ ಸಮೀಪ ಘಟನೆ ನಡೆದಿದೆ. ನಿಡಘಟ್ಟ ಗ್ರಾಮದ ಸಮೀಪ ಬೆಂಗಳೂರು -ಮೈಸೂರು ಎಕ್ಸ್ ಪ್ರೆಸ್ ಹೈವೇನಲ್ಲಿ ಕಾರ್ ಹೊತ್ತಿ ಉರಿದಿದ್ದು, ಕಾರ್ ನಲ್ಲಿದ್ದ ಕಿರಣ್, ರಂಜಿತಾ ದಂಪತಿ ಅಪಾಯದಿಂದ ಪಾರಾಗಿದ್ದಾರೆ. ಅವರು ಬೆಂಗಳೂರಿನಿಂದ ಮಂಡ್ಯಕ್ಕೆ ಕಾರ್ ನಲ್ಲಿ ತೆರಳುತ್ತಿದ್ದರು. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಪಿ. […]

ಕನ್ನಡ ದುನಿಯಾ 8 Jan 2026 8:48 pm

BREAKING: ನಟಿ ಜಯಮಾಲಾ, ಸಾ.ರಾ. ಗೋವಿಂದುಗೆ ‘ಡಾ. ರಾಜಕುಮಾರ್ ಪ್ರಶಸ್ತಿ’ಘೋಷಣೆ

ಬೆಂಗಳೂರು: 2020- 21ನೇ ಸಾಲಿನ ಡಾ. ರಾಜಕುಮಾರ್ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ಅದೇ ರೀತಿ ಪುಟ್ಟಣ್ಣ ಕಣಗಾಲ್, ವಿಷ್ಣುವರ್ಧನ್ ಪ್ರಶಸ್ತಿಯನ್ನು ಕೂಡ ಘೋಷಣೆ ಮಾಡಲಾಗಿದೆ. ನಟಿ ಜಯಮಾಲಾ ಅವರಿಗೆ 2020ನೇ ಸಾಲಿನ ಡಾ. ರಾಜಕುಮಾರ್ ಪ್ರಶಸ್ತಿ ನೀಡಲಾಗಿದೆ. ಎಂಎಸ್ ಸತ್ಯು ಅವರಿಗೆ 2020ನೇ ಸಾಲಿನ ಪುಟ್ಟಣ್ಣ ಕಣಗಾಲ್ ಪ್ರಶಸ್ತಿಯನ್ನು ನೀಡಲಾಗಿದೆ. ಪ್ರಗತಿ ಅಶ್ವತ್ಥ್ ನಾರಾಯಣ ಅವರಿಗೆ ಡಾ. ವಿಷ್ಣುವರ್ಧನ್ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ಜೀವಮಾನ ಸಾಧನೆಗಾಗಿ ರಾಜ್ಯ ಸರ್ಕಾರ ಪ್ರಶಸ್ತಿ ಘೋಷಣೆ ಮಾಡಿದೆ. ಸಾ.ರಾ. ಗೋವಿಂದು ಅವರಿಗೆ […]

ಕನ್ನಡ ದುನಿಯಾ 8 Jan 2026 8:36 pm

ಕಲಬುರಗಿಯಲ್ಲಿ ಗಾಂಧಿ, ನೆಹರು, ಇಂದಿರಾ, ರಾಜೀವ್ ಗಾಂಧಿ ಪುತ್ಥಳಿ ಸ್ಥಾಪಿಸಲು ಸಂಪುಟ ನಿರ್ಧಾರ

ಬೆಂಗಳೂರು: ಕಲಬುರಗಿ ಮಹಾನಗರ ಪಾಲಿಕೆ ವ್ಯಾಪ್ತಿಯ ವಿವಿಧ ಸ್ಥಳಗಳಲ್ಲಿ ಮಹಾತ್ಮ ಗಾಂಧಿ, ಜವಾಹರಲಾಲ್ ನೆಹರು, ಇಂದಿರಾ ಗಾಂಧಿ ಹಾಗೂ ರಾಜೀವ್‌ಗಾಂಧಿ ಅವರ ಪುತ್ಥಳಿಯನ್ನು ಸ್ಥಾಪಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಸಂಪುಟ ಸಭೆಯ ಪ್ರಮುಖ ನಿರ್ಣಯಗಳು: ಕೆಕೆಆರ್‌ಡಿಬಿ ಅನುದಾನದಡಿ ಕಲಬುರಗಿ ವಿಶ್ವವಿದ್ಯಾಲಯದ ಆವರಣದಲ್ಲಿ ಜಿಟಿಟಿಸಿ ಬಹುಕೌಶಲ್ಯಾಭಿವೃದ್ಧಿ ಕೇಂದ್ರವನ್ನು ₹66.75 ಕೋಟಿ ವೆಚ್ಚದಲ್ಲಿ ಸ್ಥಾಪಿಸಲು ಆಡಳಿತಾತ್ಮಕ ಅನುಮೋದನೆ ಕಲಬುರಗಿ ಮಹಾನಗರ ಪಾಲಿಕೆ ವ್ಯಾಪ್ತಿಯ ವಿವಿಧ ಸ್ಥಳಗಳಲ್ಲಿ ಮಹಾತ್ಮ ಗಾಂಧಿ, ಜವಾಹರಲಾಲ್ […]

ಕನ್ನಡ ದುನಿಯಾ 8 Jan 2026 8:23 pm

BREAKING: ಸಕ್ಕರೆ ಕಾರ್ಖಾನೆ ಬಾಯ್ಲರ್ ಸ್ಪೋಟ ಪ್ರಕರಣ: ಮತ್ತೊಬ್ಬ ಕಾರ್ಮಿಕ ಸಾವು, ಸಾವಿನ ಸಂಖ್ಯೆ 8ಕ್ಕೆ ಏರಿಕೆ

ಬೆಳಗಾವಿ: ಇನಾಮ್ ದಾರ್ ಸಕ್ಕರೆ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕಿತ್ಸೆ ಪಡೆಯುತ್ತಿದ್ದ ಮತ್ತೊಬ್ಬ ಕಾರ್ಮಿಕ ಕೂಡ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಇದರೊಂದಿಗೆ ಬಾಯ್ಲರ್ ಸ್ಪೋಟದಲ್ಲಿ ಗಾಯಗೊಂಡಿದ್ದ ಎಲ್ಲ ಎಂಟು ಕಾರ್ಮಿಕರು ಸಾವನ್ನಪ್ಪಿದ್ದಾರೆ. ಚಿಕಿತ್ಸೆ ಪಡೆಯುತ್ತಿದ್ದ ಕಾರ್ಮಿಕ ಸಾವನ್ನಪ್ಪಿದ್ದಾರೆ. ಕೆಎಲ್ಇ ಆಸ್ಪತ್ರೆಯಲ್ಲಿ ಬೆಳಗಾವಿ ಜಿಲ್ಲೆಯ ಗೋಕಾಕ್ ನ ರಾಘವೇಂದ್ರ ಗಿರಿಯಾಲ(35) ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ನಿನ್ನೆ ಮೂವರು, ಇಂದು ಐದು ಜನ ಕಾರ್ಮಿಕರು ಸಾವನ್ನಪ್ಪಿದ್ದಾರೆ.

ಕನ್ನಡ ದುನಿಯಾ 8 Jan 2026 8:05 pm

BIG NEWS: ಆಧಾರ್ ಮಾಹಿತಿ ಜನಸ್ನೇಹಿಯಾಗಿಸಲು ‘ಆಧಾರ್ ಮ್ಯಾಸ್ಕಾಟ್ ಉದಯ್’ ಪ್ರಾರಂಭಿಸಿದ ಯುಐಡಿಎಐ

ನವದೆಹಲಿ: ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ(ಯುಐಡಿಎಐ) ಇಂದು ಆಧಾರ್ ಮ್ಯಾಸ್ಕಾಟ್ ಉದಯ್ ಬಿಡುಗಡೆ ಮಾಡಿದೆ. ಆಧಾರ್ ಸಂಬಂಧಿತ ಮಾಹಿತಿಯನ್ನು ಹೆಚ್ಚು ಸುಲಭವಾಗಿ ಮತ್ತು ಜನಸ್ನೇಹಿಯಾಗಿ ಮಾಡುವಲ್ಲಿ ಈ ಮ್ಯಾಸ್ಕಾಟ್ ಸಹಾಯಕವಾಗಲಿದೆ ಎಂದು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ತಿಳಿಸಿದೆ. ನವೀಕರಣಗಳು, ದೃಢೀಕರಣ ಮತ್ತು ಆಫ್‌ಲೈನ್ ಪರಿಶೀಲನೆ ಸೇರಿದಂತೆ ಆಧಾರ್ ಸೇವೆಗಳ ಸಂವಹನವನ್ನು ಮ್ಯಾಸ್ಕಾಟ್ ಸರಳಗೊಳಿಸುತ್ತದೆ ಎಂದು ಹೇಳಿದೆ. ಕಳೆದ ವರ್ಷ ಯುಐಡಿಎಐ ಮೈಗವ್ ಪ್ಲಾಟ್‌ಫಾರ್ಮ್‌ನಲ್ಲಿ ರಾಷ್ಟ್ರವ್ಯಾಪಿ ಮ್ಯಾಸ್ಕಾಟ್ ವಿನ್ಯಾಸ ಸ್ಪರ್ಧೆಯನ್ನು ಆಯೋಜಿಸಿತ್ತು, ಆಧಾರ್‌ಗಾಗಿ ಅಧಿಕೃತ ಮ್ಯಾಸ್ಕಾಟ್ […]

ಕನ್ನಡ ದುನಿಯಾ 8 Jan 2026 7:57 pm

ಲೇಡಿ ಡೈರೆಕ್ಟರ್‌ನಿಂದ ಅಂಥ ದೃಶ್ಯ, ಆಕೆ ಮುಂದೆ ಯಾವ ಗಂಡಸೂ ಇಲ್ಲ: ಟಾಕ್ಸಿಕ್ ಟೀಸರ್‌ ಬಗ್ಗೆ ರಾಮ್‌ಗೋಪಾಲ್ ವರ್ಮಾ ಪ್ರತಿಕ್ರಿಯೆ

ಇಂದು ( ಜನವರಿ ೮ ) ರಾಕಿಂಗ್ ಸ್ಟಾರ್ ಯಶ್ ನಟನೆಯ ಬಹು ನಿರೀಕ್ಷಿತ ಚಿತ್ರ ಟಾಕ್ಸಿಕ್‌ನ ಟೀಸರ್ ಬಿಡುಗಡೆಯಾಗಿದೆ. ಯಶ್ ಹುಟ್ಟುಹಬ್ಬದ ಪ್ರಯುಕ್ತ ಈ ಟೀಸರ್ ಬಿಡುಗಡೆಯಾಗಿದ್ದು, ಎಲ್ಲೆಡೆ ಭಾರೀ ಸದ್ದು ಮಾಡುತ್ತಿದೆ. ಚಿತ್ರದಲ್ಲಿ ನಟಿಸಿರುವ ನಟಿಯರ ಪಾತ್ರಗಳನ್ನು ಪರಿಚಯಿಸಿದ್ದ ಚಿತ್ರತಂಡ ನಾಯಕನ ಪಾತ್ರವನ್ನು ಈ ಟೀಸರ್ ಮೂಲಕ ಪರಿಚಯಿಸಿದೆ. ಚಿತ್ರದಲ್ಲಿ ಯಶ್ ರಾಯ ಎಂಬ ಪಾತ್ರದಲ್ಲಿ ನಟಿಸಿದ್ದು, ಈ ಒಂದು ಪಾತ್ರವನ್ನು ನಿರ್ದೇಶಕಿ ಸಿಕ್ಕಾಪಟ್ಟೆ ಖಡಕ್ ಆಗಿ ಪರಿಚಯಿಸಿದ್ದಾರೆ. ಚಿತ್ರದಲ್ಲಿ ಯಶ್ ಪ್ಲೇ ಬಾಯ್ […]

ಕನ್ನಡ ದುನಿಯಾ 8 Jan 2026 7:47 pm

ಸಂಕ್ರಾಂತಿ ವಿಶೇಷ: ಬೆಂಗಳೂರು-ತಾಳಗುಪ್ಪ ವಿಶೇಷ ರೈಲು, ವೇಳಾಪಟ್ಟಿ

ಸಂಕ್ರಾಂತಿ ಹಬ್ಬ 2026ರ ತಯಾರಿ ನಡೆಯುತ್ತಿದೆ. ಈ ಸಂದರ್ಭದಲ್ಲಿ ಪ್ರಯಾಣಿಕರ ದಟ್ಟಣೆಯನ್ನು ನಿಯಂತ್ರಿಸಲು ಮತ್ತು ಸುಗಮ ಪ್ರಯಾಣಕ್ಕೆ ಅನುಕೂಲ ಮಾಡಿಕೊಡಲು, ನೈಋತ್ಯ ರೈಲ್ವೆಯು ಬೆಂಗಳೂರಿನ ಯಶವಂತಪುರ ಮತ್ತು ತಾಳಗುಪ್ಪ ನಡುವೆ 2 ವಿಶೇಷ ಎಕ್ಸ್‌ಪ್ರೆಸ್ ರೈಲುಗಳನ್ನು ಓಡಿಸುತ್ತಿದೆ. ಯಶವಂತಪುರ-ತಾಳಗುಪ್ಪ (06585) ವಿಶೇಷ ಎಕ್ಸ್‌ಪ್ರೆಸ್ ರೈಲು ದಿನಾಂಕ 13ರ ಮಂಗಳವಾರ ರಾತ್ರಿ 10:45ಕ್ಕೆ ಯಶವಂತಪುರದಿಂದ ಹೊರಟು, ಮರುದಿನ ಬೆಳಗಿನ ಜಾವ 4:45ಕ್ಕೆ ತಾಳಗುಪ್ಪ ತಲುಪಲಿದೆ. ರೈಲು ಸಂಖ್ಯೆ 06586 ತಾಳಗುಪ್ಪ-ಯಶವಂತಪುರ ವಿಶೇಷ ಎಕ್ಸ್‌ಪ್ರೆಸ್ ರೈಲು ದಿನಾಂಕ 14ರ ಬುಧವಾರ […]

ಕನ್ನಡ ದುನಿಯಾ 8 Jan 2026 6:22 pm

ಆ ಒಂದು ಸೀನ್: ಮನೆಯಲ್ಲಿ ಟಾಕ್ಸಿಕ್ ಟೀಸರ್ ಹಾಕಿದರೆ ಗತಿಯೇನು? ಚಿತ್ರಮಂದಿರದಲ್ಲಿ ನೋಡಲಾರೆವು ಎಂದ ಫ್ಯಾಮಿಲಿ ಆಡಿಯನ್ಸ್!

ಕೆಜಿಎಫ್ ಚಿತ್ರ ಸರಣಿಯ ಮೂಲಕ ವಿಶ್ವವ್ಯಾಪಿ ಹೆಸರು ಮಾಡಿದ ಕನ್ನಡದ ನಟ ರಾಕಿಂಗ್ ಸ್ಟಾರ್ ಯಶ್‌ಗೆ ಇಂದು ( ಜನವರಿ ೮ ) ಹುಟ್ಟುಹಬ್ಬದ ಸಂಭ್ರಮ. ಈ ಸಲುವಾಗಿ ಇಂದು ಯಶ್ ನಟನೆಯ ಮುಂದಿನ ಚಿತ್ರ ಟಾಕ್ಸಿಕ್ ಚಿತ್ರತಂಡ ವಿಶೇಷ ಟೀಸರ್ ಒಂದನ್ನು ಬಿಡುಗಡೆ ಮಾಡಿದೆ. ಚಿತ್ರದಲ್ಲಿ ನಟಿಸುತ್ತಿರುವ ಎಲ್ಲ ನಟಿಯರ ಪಾತ್ರ ಪರಿಚಯವನ್ನು ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಘೋಷಿಸಿದ್ದ ಟಾಕ್ಸಿಕ್ ಚಿತ್ರತಂಡ ಯಶ್ ಪಾತ್ರವನ್ನು ಹುಟ್ಟುಹಬ್ಬದ ದಿನದಂದು ಬಿಡುಗಡೆಯಾದ ಈ ಟೀಸರ್ ಮೂಲಕ ಹೊರಹಾಕಿದೆ. […]

ಕನ್ನಡ ದುನಿಯಾ 8 Jan 2026 6:05 pm

Shocking News: ಬಳ್ಳಾರಿಯಲ್ಲಿ ಹಲವು ನಕಲಿ ವೈದ್ಯರ ಕ್ಲಿನಿಕ್‌ಗಳು

ಬಳ್ಳಾರಿ ಜಿಲ್ಲೆಯ ವಿವಿಧ ಕಡೆ ವೈದ್ಯಕೀಯ ಪದವಿ ಪಡೆಯದೇ ತಾವು ವೈದ್ಯರೆಂದು ಬಿಂಬಿಸಿ ವೈದ್ಯ ವೃತ್ತಿ ಮಾಡುತ್ತಿದ್ದ ನಕಲಿ ವೈದ್ಯರ ಕ್ಲಿನಿಕ್‌ಗಳ ಮೇಲೆ ದಾಳಿ ನಡೆಸಲಾಗಿದೆ. ಈ ಸಮಯದಲ್ಲಿ ಕ್ಲಿನಿಕ್‌ಗಳನ್ನು ಸೀಜ್ ಮಾಡಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲಾ ರಮೇಶ್ ಬಾಬು ತಿಳಿಸಿದ್ದಾರೆ. ನಗರದ ಮುಲ್ಲಂಗಿ ಸಂಜೀವಪ್ಪ ಬೀದಿ, ಕೊಲ್ಮಿಚೌಕ್ ಹತ್ತಿರದಲ್ಲಿ ಬಿಸ್ವಾಸ್ ಎಂಬುವವ ಯಾವುದೇ ವೈದ್ಯಕೀಯ ಪದವಿ ಮಾನ್ಯತೆ ಪಡೆಯದೇ ನಕಲಿ ವೈದ್ಯನಾಗಿದ್ದು, ತಾನು ಫೈಲ್ಸ್ ವೈದ್ಯನೆಂದು ಸಾರ್ವಜನಿಕರಲ್ಲಿ ಸುಳ್ಳು ಹೇಳಿ […]

ಕನ್ನಡ ದುನಿಯಾ 8 Jan 2026 6:01 pm

Good News: ಎಲ್ಲಾ ‘ಬಿ’ ಖಾತಾಗಳಿಗೆ ‘ಎ’ ಖಾತಾ ಮಾನ್ಯತೆ ನೀಡಲು ಒಪ್ಪಿಗೆ

ಕರ್ನಾಟಕ ಸರ್ಕಾರ ಆಸ್ತಿ ಮಾಲೀಕರಿಗೆ ಗುಡ್ ನ್ಯುಸ್ ನೀಡಿದೆ. ಗ್ರೇಟರ್ ಬೆಂಗಳೂರು ಅಥಾರಿಟಿ (ಜಿಬಿಎ) ಮಾದರಿಯಲ್ಲಿ ರಾಜ್ಯದ ಎಲ್ಲಾ ಆಸ್ತಿಗಳಿಗೆ ‘ಎ’ ಖಾತಾ ಮಾನ್ಯತೆ ನೀಡಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ವಿಧಾನಸೌಧದಲ್ಲಿ ಸಚಿವ ಸಂಪುಟ ಸಭೆ ನಡೆಯಿತು. ಸಭೆಯಲ್ಲಿ ಎಲ್ಲಾ ‘ಬಿ’ ಖಾತಾ ಆಸ್ತಿಗಳಿಗೆ ಜಿಬಿಎ ಮಾದರಿಯಲ್ಲಿ ‘ಎ’ ಖಾತಾ ಮಾನ್ಯತೆ ನೀಡಲು ಅನುಮೋದನೆ ಕೊಡಲಾಗಿದೆ. ಸರ್ಕಾರದ ಈ ತೀರ್ಮಾನದಿಂದ ರಾಜ್ಯದ ಸುಮಾರು 10 ಲಕ್ಷ ‘ಬಿ’ ಖಾತಾ ಆಸ್ತಿಗಳಿಗೆ […]

ಕನ್ನಡ ದುನಿಯಾ 8 Jan 2026 5:41 pm

ಶೀತ-ಕೆಮ್ಮಿಗೆ ತಕ್ಷಣ ರಿಲೀಫ್, 10 ನಿಮಿಷದಲ್ಲಿ ಸಿದ್ಧವಾಗುವ ಸ್ಪ್ರಿಂಗ್ ಆನಿಯನ್ ಸೂಪ್ ಟ್ರೈ ಮಾಡಿ

ಬೆಂಗಳೂರು: ಕೆಲಸ ಮುಗಿಸಿ ಮನೆಗೆ ಬಂದಾಗ ಅಥವಾ ಸಂಜೆ ಮಳೆ ಹನಿಗಳು ಬೀಳುತ್ತಿರುವಾಗ ಹೊಟ್ಟೆಗೆ ಏನಾದರೂ ಬಿಸಿ ಬಿಸಿಯಾಗಿ ಬೀಳಬೇಕು ಅನ್ನಿಸುವುದು ಸಹಜ. ಅದರಲ್ಲೂ ಗಂಟಲು ಕೆರೆತ, ನೆಗಡಿ ಅಥವಾ ಸಣ್ಣಗೆ ಜ್ವರ ಕಾಣಿಸಿಕೊಂಡಾಗ ಕಾಫಿ-ಟೀಗಿಂತ ‘ಸ್ಪ್ರಿಂಗ್ ಆನಿಯನ್ ಸೂಪ್’ (Spring Onion Soup) ಕುಡಿಯುವುದು ಮೈಗೆ ಹಿತ ನೀಡುತ್ತದೆ. ಚಳಿಗಾಲದಲ್ಲಿ ಸೂಪ್ ಯಾಕೆ ಕುಡಿಯಬೇಕು? ದೇಹಕ್ಕೆ ತಕ್ಷಣದ ಉಷ್ಣತೆ: ಬಿಸಿ ಬಿಸಿ ಸೂಪ್ ಸೇವನೆಯು ಶೀತದಿಂದ ಕಂಗೆಟ್ಟ ದೇಹಕ್ಕೆ ತಕ್ಷಣದ ಹಿತ ಮತ್ತು ಆರಾಮ ನೀಡುತ್ತದೆ. […]

ಕನ್ನಡ ದುನಿಯಾ 8 Jan 2026 4:57 pm

ಅಕ್ಕ ಪಡೆ ರಚನೆ: ಪೊಲೀಸ್ ಆಯುಕ್ತರ ಖಡಕ್ ಸುತ್ತೋಲೆ

ಅಕ್ಕ ಪಡೆ ರಚನೆ ಕುರಿತು ರಾಜ್ಯ ಪೊಲೀಸ್‌ ಮಹಾ ನಿರ್ದೇಶಕ (ಡಿಜಿ-ಐಜಿಪಿ) ಡಾ.ಎಂ.ಎ.ಸಲೀಂ ಸುತ್ತೋಲೆಯನ್ನು ಹೊರಡಿಸಿದ್ದಾರೆ. ಈ ಸುತ್ತೋಲೆಯು ಅಕ್ಕ ಪಡೆ ರಚನೆ ಮತ್ತು ಕಾರ್ಯ ವಿಧಾನಗಳ ಬಗ್ಗೆ ಎಂಬ ವಿಷಯವನ್ನು ಒಳಗೊಂಡಿದೆ. ಸರ್ಕಾರದ ಅಧೀನ ಕಾರ್ಯದರ್ಶಿ-1 ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ದಿನಾಂಕ 11.11.2025 ರಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನ ಮತ್ತು ಹಿರಿಯ ನಾಗರಿಕರ ಸಬಲೀಕರಣ ಅವರ ಪತ್ರವನ್ನು ಉಲ್ಲೇಖಿಸಿದ್ದಾರೆ. ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಕರ್ನಾಟಕ […]

ಕನ್ನಡ ದುನಿಯಾ 8 Jan 2026 3:51 pm

JOB ALERT : ‘RRB’ಯಿಂದ ವಿವಿಧ ಹುದ್ದೆಗಳ ಲಿಖಿತ ಪರೀಕ್ಷೆಗೆ ವೇಳಾಪಟ್ಟಿ ಬಿಡುಗಡೆ, ಇಲ್ಲಿದೆ ಸಂಪೂರ್ಣ ಮಾಹಿತಿ

ಕೇಂದ್ರ ಸರ್ಕಾರದ ಅಧೀನದಲ್ಲಿರುವ ರೈಲ್ವೆ ಸಚಿವಾಲಯವಾದ ರೈಲ್ವೆ ನೇಮಕಾತಿ ಮಂಡಳಿ (RRB) 2025 ರಲ್ಲಿ ಹಲವಾರು ರೈಲ್ವೆ ಉದ್ಯೋಗ ಅಧಿಸೂಚನೆಗಳನ್ನು ಬಿಡುಗಡೆ ಮಾಡಿದೆ ಎಂದು ತಿಳಿದುಬಂದಿದೆ.ಹಲವಾರು RRB ಅಧಿಸೂಚನೆಗಳ ಪರೀಕ್ಷಾ ದಿನಾಂಕಗಳನ್ನು ಬಿಡುಗಡೆ ಮಾಡಲಾಗಿದೆ. ಈ ಮಟ್ಟಿಗೆ, ಆನ್ಲೈನ್ನಲ್ಲಿ ನಡೆಯಲಿರುವ ಹಲವಾರು ಲಿಖಿತ ಪರೀಕ್ಷೆಗಳ ವೇಳಾಪಟ್ಟಿಯನ್ನು RRB ಅಧಿಕೃತ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಲಾಗಿದೆ. RRB ರೈಲ್ವೆ ಪರೀಕ್ಷೆಗಳು ಯಾವಾಗ ಮತ್ತು ಯಾವ ದಿನಾಂಕಗಳಲ್ಲಿ ನಡೆಯಲಿವೆ? 434 ಪ್ಯಾರಾ ಮೆಡಿಕಲ್ ಹುದ್ದೆಗಳಿಗೆ ಲಿಖಿತ ಪರೀಕ್ಷೆಗಳು ಮಾರ್ಚ್ 10 ರಿಂದ […]

ಕನ್ನಡ ದುನಿಯಾ 8 Jan 2026 3:40 pm

ಮಧುಮೇಹಿಗಳೇ ಎಚ್ಚರ, ಕಿಡ್ನಿ ಜೋಪಾನ ಮಾಡದೇ ಹೋದ್ರೆ ಜೀವಕ್ಕೆ ಅಪಾಯ

ವಿಶ್ವಾದ್ಯಂತ ಮೂತ್ರಪಿಂಡ ವೈಫಲ್ಯಕ್ಕೆ (Kidney Failure) ಪ್ರಮುಖ ಕಾರಣಗಳಲ್ಲಿ ಮಧುಮೇಹವೂ ಒಂದು. ದೀರ್ಘಕಾಲದವರೆಗೆ ರಕ್ತದಲ್ಲಿನ ಸಕ್ಕರೆ ಮಟ್ಟವು ಹೆಚ್ಚಾಗಿರುವುದು ಮೂತ್ರಪಿಂಡದ ಸೋಸುವ ಘಟಕಗಳನ್ನು ಹಾನಿಗೊಳಿಸುತ್ತದೆ,ಒಂದು ಕಾಲದಲ್ಲಿ ಕೇವಲ ವೃದ್ಧರನ್ನಷ್ಟೇ ಬಾಧಿಸುತ್ತಿದ್ದ ಮಧುಮೇಹ (Diabetes), ಬದಲಾಗುತ್ತಿರುವ ಜೀವನಶೈಲಿಯ ಪರಿಣಾಮವಾಗಿ ಯುವಜನತೆಯೂ ಈ ಸಮಸ್ಯೆಗೆ ಒಳಗಾಗುತ್ತಿದೆ. ಆದರೆ, ಮಧುಮೇಹ ಕೇವಲ ರಕ್ತದ ಸಕ್ಕರೆ ಮಟ್ಟವನ್ನು ಹೆಚ್ಚಿಸುವುದಷ್ಟೇ ಅಲ್ಲ, ಸದ್ದಿಲ್ಲದೆ ನಿಮ್ಮ ದೇಹದ ಜೀವರಕ್ತದಂತಿರುವ ಮೂತ್ರಪಿಂಡಗಳನ್ನು (Kidneys) ಹಾಳು ಮಾಡುತ್ತಿದೆ ಮಧುಮೇಹ ಮೂತ್ರಪಿಂಡದ ಮೇಲೆ ಹೇಗೆ ಪರಿಣಾಮ ಬೀರುತ್ತದೆ? ರಕ್ತದಲ್ಲಿ ಸಕ್ಕರೆಯ […]

ಕನ್ನಡ ದುನಿಯಾ 8 Jan 2026 3:23 pm

BREAKING : ಬೆಳಗಾವಿ ಸಕ್ಕರೆ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಪೋಟ ಕೇಸ್ : ನಾಲ್ವರು ಸಾವು, ಸಾವಿನ ಸಂಖ್ಯೆ 7 ಕ್ಕೇರಿಕೆ.!

ಬೆಳಗಾವಿ : ಬೆಳಗಾವಿ ಸಕ್ಕರೆ ಕಾರ್ಖಾನೆಯಲ್ಲಿ ಸಂಭವಿಸಿದ ಬಾಯ್ಲರ್ ಸ್ಪೋಟದಲ್ಲಿ ಗಾಯಗೊಂಡಿದ್ದ ನಾಲ್ವರು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ 7 ಕ್ಕೇರಿಕೆಯಾಗಿದೆ. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಮರಕುಂಬಿಯಲ್ಲಿರುವ ಸಕ್ಕರೆ ಕಾರ್ಖಾನೆಯಲ್ಲಿ ನಿನ್ನೆ ಬಾಯ್ಲರ್ ಸ್ಪೋಟಗೊಂಡಿತ್ತು. ಸಕ್ಕರೆ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟಗೊಂಡು ನಿನ್ನೆ ಮೂವರು ಕಾರ್ಮಿಕರು ಮೃತಪಟ್ಟಿದ್ದರು. ಇಂದು ನಾಲ್ವರು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ 7 ಕ್ಕೇರಿಕೆಯಾಗಿದೆ.ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಮರಕುಂಬಿ ಮರಕುಂಬಿ ಗ್ರಾಮದ ಬಳಿ ಇರುವ ಇನಾಮ್ ದಾರ್ ಸಕ್ಕರೆ […]

ಕನ್ನಡ ದುನಿಯಾ 8 Jan 2026 3:17 pm

ನವೋದಯ ವಿದ್ಯಾಲಯದ 9, 11 ನೇ ತರಗತಿ ಪ್ರವೇಶ ಪರೀಕ್ಷೆಗೆ ‘ಪ್ರವೇಶ ಪತ್ರ’ಬಿಡುಗಡೆ : ಈ ರೀತಿ ಡೌನ್ ಲೋಡ್ ಮಾಡಿ

ದೇಶಾದ್ಯಂತದ ಜವಾಹರ್ ನವೋದಯ ವಿದ್ಯಾಲಯಗಳಲ್ಲಿ (NVS) 2026-27ನೇ ಶೈಕ್ಷಣಿಕ ವರ್ಷಕ್ಕೆ 9 ಮತ್ತು 11 ನೇ ತರಗತಿಗಳ ಪ್ರವೇಶಕ್ಕಾಗಿ ನಡೆಸಲಾದ ಪ್ರವೇಶ ಪರೀಕ್ಷೆಯ ಪ್ರವೇಶ ಪತ್ರಗಳನ್ನು ಇತ್ತೀಚೆಗೆ ಬಿಡುಗಡೆ ಮಾಡಲಾಗಿದೆ. ನವೋದಯ ವಿದ್ಯಾಲಯ ಸಮಿತಿ (NVS) ತನ್ನ ವೆಬ್‌ಸೈಟ್‌ನಲ್ಲಿ ಪರೀಕ್ಷೆಗಳ ಹಾಲ್ ಟಿಕೆಟ್‌ಗಳನ್ನು ಬಿಡುಗಡೆ ಮಾಡಿದೆ. ಪರೀಕ್ಷೆಗಳಿಗೆ ಹಾಜರಾಗುವ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ನಲ್ಲಿ ತಮ್ಮ ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕದ ವಿವರಗಳನ್ನು ನಮೂದಿಸುವ ಮೂಲಕ ಹಾಲ್ ಟಿಕೆಟ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಪ್ರವೇಶ ಪರೀಕ್ಷೆಯು ಫೆಬ್ರವರಿ 7 […]

ಕನ್ನಡ ದುನಿಯಾ 8 Jan 2026 3:07 pm

ಅನಾರೋಗ್ಯವಾಗಿರುವ ಕೋಳಿ ಮರಿ ವಿತರಿಸಿದ್ದಕ್ಕೆ ಬಿತ್ತು ಭಾರಿ ದಂಡ

ಶಿವಮೊಗ್ಗ : ಅನಾರೋಗ್ಯವಾಗಿರುವ ಕೋಳಿಮರಿಗಳನ್ನು ವಿತರಿಸಿ ನಷ್ಟ ಉಂಟು ಮಾಡಿದ ಎದುರುದಾರ ಕೋರ್ಮಲ ಹ್ಯಾಚರೀಸ್, ಕೆ.ಆರ್ ರಸ್ತೆ ಬೆಂಗಳೂರು ಇವರು ದೂರುದಾರರಿಗೆ ಸೂಕ್ತ ಪರಿಹಾರ ನೀಡುವಂತೆ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ. ತಬಸುಮ್ ಸುಲ್ತಾನ ಶಿವಮೊಗ್ಗ ಇವರು ಕೋರ್ಮಲ ಹ್ಯಾಚರೀಸ್, ಕೆ.ಆರ್ ರಸ್ತೆ ಬೆಂಗಳೂರು ಇವರ ವಿರುದ್ದ ದೂರನ್ನು ಸಲ್ಲಿಸಿ ದಿ: 24-12-2024 ರಂದು ರೂ.1,63,200 ಗಳನ್ನು ಪಾವತಿಸಿ 4896 ಬ್ರಾಯಲರ್ ಕೋಳಿ ಮರಿಗಳನ್ನು ಖರೀದಿಸಿದ್ದರು. ದಿ: 25-12-2024 ರಂದು ಎದುರುದಾರರು ದೂರುದಾರರಿಗೆ ಕೋಳಿಮರಿಗಳನ್ನು […]

ಕನ್ನಡ ದುನಿಯಾ 8 Jan 2026 2:53 pm

ದುಡಿಯೋ ಮಹಿಳೆಯರಿಗೆ, ವಾಸಕ್ಕೆ ಬೆಂಗಳೂರೇ ಬೆಸ್ಟ್ : ಸಿಲಿಕಾನ್ ಸಿಟಿಗೆ ದೇಶದಲ್ಲಿ ನಂಬರ್ 1 ಸ್ಥಾನ.!

ಸಿಲಿಕಾನ್ ಸಿಟಿ ‘ಬೆಂಗಳೂರು’ ಹಲವರ ಬದುಕನ್ನು ಬದಲಿಸಿದ ಊರು . ಸ್ವಂತ ಉದ್ಯಮ ಮಾಡಲು ಬೆಂಗಳೂರು ಜಾಗ ಕೊಟ್ಟಿದೆ. ದುಡಿಯುವ ವರ್ಗಕ್ಕೆ ಉದ್ಯೋಗ ಸೃಷ್ಟಿಸಿದ ಬೆಂಗಳೂರು ಇಂದು ಟಾಪ್ 1 ಸ್ಥಾನದಲ್ಲಿದೆ. ದೇಶದಾದ್ಯಂತದ ಪ್ರತಿಭಾವಂತ ಯುವಕರಿಗೆ ಉದ್ಯೋಗಗಳನ್ನು ಒದಗಿಸುವಲ್ಲಿ ಬೆಂಗಳೂರು ಮುಂಚೂಣಿಯಲ್ಲಿದೆ. ಬುಧವಾರ ಬಿಡುಗಡೆಯಾದ ಹೊಸ ಅಧ್ಯಯನದ ಪ್ರಕಾರ, ಬೆಂಗಳೂರು ಮಹಿಳೆಯರು ತಮ್ಮ ವೃತ್ತಿಜೀವನ ಮತ್ತು ಜೀವನವನ್ನು ನಿರ್ಮಿಸಲು ಅತ್ಯಂತ ಸ್ವಾಗತಾರ್ಹ ಭಾರತೀಯ ನಗರವಾಗಿ ಹೊರಹೊಮ್ಮಿದೆ. ಸಮೀಕ್ಷೆಗಳು ಹೇಳಿದ್ದೇನು..? ಬೆಂಗಳೂರು ಭಾರತದ ಐಟಿ ರಾಜಧಾನಿಯಾಗಿ ಪ್ರಸಿದ್ಧವಾಗಿದೆ, ಏಕೆಂದರೆ […]

ಕನ್ನಡ ದುನಿಯಾ 8 Jan 2026 2:47 pm

ಬಳ್ಳಾರಿ ನೂತನ ಎಸ್‌ಪಿಯಾಗಿ ಅಧಿಕಾರ ಸ್ವೀಕರಿಸಿದ ಡಾ.ಸುಮನ್ ಡಿ.ಪೆನ್ನೇಕರ್

ಬಳ್ಳಾರಿ ಗಲಭೆ, ಗುಂಡಿನ ದಾಳಿ, ಐಪಿಎಸ್ ಅಧಿಕಾರಿಗಳ ವರ್ಗಾವಣೆ ಬಳಿಕ ಗುರುವಾರ ಬಳ್ಳಾರಿಯ ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಐಪಿಎಸ್ ಅಧಿಕಾರಿ ಡಾ.ಸುಮನ್ ಡಿ.ಪೆನ್ನೇಕರ್ ಅಧಿಕಾರ ಸ್ವೀಕಾರ ಮಾಡಿದರು. ಬಳ್ಳಾರಿ ಜಿಲ್ಲೆಯ ನೂತನ ಎಸ್‌ಪಿಯಾಗಿ ಕರ್ನಾಟಕ ಸರ್ಕಾರ ಬುಧವಾರ ಡಾ.ಸುಮನ್ ಡಿ.ಪೆನ್ನೇಕರ್ ಅವರನ್ನು ನೇಮಿಸಿ ಆದೇಶಿಸಿತ್ತು. ಗುರುವಾರ ಅವರು ಅಧಿಕೃತವಾಗಿ ಅಧಿಕಾರ ಸ್ವೀಕರಿಸಿದರು. ಗುಪ್ತವಾರ್ತೆ ವಿಭಾಗದ ಉಪ ಪೊಲೀಸ್ ಆಯುಕ್ತರಾಗಿದ್ದ ಡಾ.ಸುಮನ್ ಡಿ.ಪೆನ್ನೇಕರ್ ಅವರು 2013ನೇ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿದ್ದಾರೆ. ಈ ಹಿಂದೆ ನಿಯೋಜನೆಗೊಂಡಿದ್ದ ಎಸ್‌ಪಿ ರಂಜಿತ್ […]

ಕನ್ನಡ ದುನಿಯಾ 8 Jan 2026 2:44 pm

ಭಾರತೀಯ ಸೇನೆಯಲ್ಲ, ವಿದೇಶಿ ಆರ್ಮಿ ಸೇರಿದ ಲಾಲು ಮೊಮ್ಮಗ ಆದಿತ್ಯ ಯಾದವ್ ತಾಯಿ ರೋಹಿಣಿ ಆಚಾರ್ಯ ಹಂಚಿಕೊಂಡ ಭಾವುಕ ಪೋಸ್ಟ್ ವೈರಲ್!

ಬಿಹಾರದ ಮಾಜಿ ಮುಖ್ಯಮಂತ್ರಿ ಹಾಗೂ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರ ಮೊಮ್ಮಗ ಆದಿತ್ಯ ಈಗ ಸುದ್ದಿಯ ಕೇಂದ್ರಬಿಂದುವಾಗಿದ್ದಾರೆ. ರಾಜಕೀಯ ಪ್ರವೇಶದಿಂದಲ್ಲ, ಆದರೆ ಸೇನಾ ತರಬೇತಿಗೆ ಕಾಲಿಟ್ಟಿರುವುದರಿಂದ ಅವರು ಗಮನ ಸೆಳೆದಿದ್ದಾರೆ. 18 ವರ್ಷದ ಆದಿತ್ಯ ಸಿಂಗಾಪುರದಲ್ಲಿ ಮೂಲ ಮಿಲಿಟರಿ ತರಬೇತಿ (BMT) ಆರಂಭಿಸಿದ್ದು, ಇದು ದೇಶಾದ್ಯಂತ ಚರ್ಚೆಗೆ ಕಾರಣವಾಗಿದೆ. ವಿಶೇಷವೆಂದರೆ, ಆದಿತ್ಯ ಭಾರತೀಯ ಸೇನೆಯಲ್ಲ, ಬದಲಾಗಿ ವಿದೇಶಿ ಸೇನೆಯನ್ನು ಸೇರುತ್ತಿದ್ದಾರೆ. ಈ ಅಚ್ಚರಿಯ ನಿರ್ಧಾರವೇ ಜನರ ಕುತೂಹಲಕ್ಕೆ ಕಾರಣವಾಗಿದೆ. ತಾಯಿ ರೋಹಿಣಿ ಆಚಾರ್ಯ ಅವರ […]

ಕನ್ನಡ ದುನಿಯಾ 8 Jan 2026 2:16 pm

BIG NEWS : ಪ್ರತಿಯೊಬ್ಬ ನಾಗರಿಕನೂ ತಿಳಿದಿರಬೇಕಾದ ರಾಜ್ಯ ಸರ್ಕಾರದ 6 ಪ್ರಮುಖ ಯೋಜನೆಗಳು.!

ಬೆಂಗಳೂರು : ಸರ್ಕಾರಿ ಸೇವೆ ಜನರಿಗೆ ತಲುಪಿಸುವಲ್ಲಿ ರಾಜ್ಯ ಸರ್ಕಾರ 5 ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ. ಸೇವಾ ಸಿಂಧು ಯೋಜನೆ. ಗ್ರಾಮಒನ್ ಯೋಜನೆ. ಜನಸೇವಕ ಯೋಜನೆ , ಮೊಬೈಲ್ ಆಡಳಿತ ಯೋಜನೆಗಳನ್ನು ಸರ್ಕಾರ ಜಾರಿಗೆ ತಂದಿದೆ. 1) ಸೇವಾ ಸಿಂಧು ಯೋಜನೆ: ಸರ್ಕಾರಿ ಸೇವೆಗಳನ್ನು ನಗದು ರಹಿತ, ಮತ್ತು ಕಾಗದ ರಹಿತ ರೀತಿಯಲ್ಲಿ ಒದಗಿಸುವುದು ಮತ್ತು ನಾಗರಿಕರ ಸಮಯ ಮತ್ತು ಕಚೇರಿ ಭೇಟಿಗಳನ್ನು ಕಡಿಮೆ ಮಾಡುವುದು. ಸೇವಾ ಸಿಂಧು ಯೋಜನೆಯ […]

ಕನ್ನಡ ದುನಿಯಾ 8 Jan 2026 2:14 pm

ಗುರುವಾರ ರಾತ್ರಿ ಈ ಕನಸುಗಳು ಬಿದ್ದರೆ ಅಪಾಯಕಾರಿ.. ಹುಷಾರಾಗಿರಿ!

ರಾತ್ರಿ ನಿದ್ರೆಯ ಸಮಯದಲ್ಲಿ ಕನಸುಗಳು ಬೀಳುವುದು ಸಹಜ., ಕೆಲವೊಮ್ಮೆ ಒಳ್ಳೆಯ ಕನಸುಗಳು ಬರುತ್ತವೆ. ಇತರ ಸಮಯಗಳಲ್ಲಿ, ತುಂಬಾ ಭಯಾನಕ ಕನಸುಗಳು ಸಹ ಬರುತ್ತವೆ. ಕನಸುಗಳನ್ನು ಕಾಣುವುದು ಕೆಲವು ಬೆಳವಣಿಗೆಗಳ ಸಂಕೇತವಾಗಬಹುದು ಎಂದು ಸ್ವಪ್ನ ವಿಜ್ಞಾನ ಹೇಳುತ್ತದೆ. ರಾತ್ರಿ ಮಲಗಿರುವ ವ್ಯಕ್ತಿಯು ನೋಡುವ ಕನಸುಗಳು ಶುಭ ಅಥವಾ ಅಶುಭ ಭವಿಷ್ಯವನ್ನು ಸೂಚಿಸುತ್ತವೆ ಎಂದು ಹೇಳಲಾಗುತ್ತದೆ. ಸ್ವಪ್ನ ವಿಜ್ಞಾನದ ಬಗ್ಗೆ ತಿಳಿದಿರುವವರಿಗೆ ಮಾತ್ರ ಇವು ತಿಳಿದಿವೆ. ಗುರುವಾರ ರಾತ್ರಿ ಬರುವ ಕನಸುಗಳ ಬಗ್ಗೆ ಈಗ ತಿಳಿದುಕೊಳ್ಳೋಣ. ಗುರುವಾರ ರಾತ್ರಿ ಬರುವ […]

ಕನ್ನಡ ದುನಿಯಾ 8 Jan 2026 1:44 pm

ಚಾಮರಾಜ ಟಿಕೆಟ್ ಕೇಳಿದ ಪ್ರತಾಪ್ ಸಿಂಹ: ಬಿಜೆಪಿಯಲ್ಲೇ ಭಾರೀ ವಿರೋಧ!

“ಎಲ್ಲಾ ದೃಷ್ಟಿಯಿಂದಲೂ ಚಾಮರಾಜ ವಿಧಾನಸಭಾ ಕ್ಷೇತ್ರ ನನಗೆ ಅನುಕೂಲಕರವಾಗಿದೆ. ಹಾಗಾಗಿ ಅದೇ ನನ್ನ ಆಯ್ಕೆಯಾಗಿರುತ್ತದೆ” ಎಂದು ಮೈಸೂರು-ಕೊಡಗು ಕ್ಷೇತ್ರದ ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿದ್ದರು. ಈ ಮೂಲಕ 2028ರ ಚುನಾವಣೆಯಲ್ಲಿ ರಾಜ್ಯ ರಾಜಕೀಯಕ್ಕೆ ಬರುವ ಸೂಚನೆ ನೀಡಿದ್ದರು. ಆದರೆ ಪ್ರತಾಪ್ ಸಿಂಹ ಹೇಳಿಕೆಗೆ ಬಿಜೆಪಿಯಲ್ಲಿಯೇ ವಿರೋಧ ವ್ಯಕ್ತವಾಗಿದೆ. ಚಾಮರಾಜ ಟಿಕೆಟ್ ವಿಚಾರವಾಗಿಪ್ರತಾಪ್ ಸಿಂಹಹೇಳಿಕೆಗೆ ತಿರುಗೇಟು ನೀಡಿರುವ ಮಾಜಿ ಶಾಸಕ, ಮೈಸೂರು ನಗರ ಬಿಜೆಪಿ ಅಧ್ಯಕ್ಷ ಎಲ್. ನಾಗೇಂದ್ರ, “ನಿರ್ಧಾರ ತೆಗೆದುಕೊಳ್ಳುವುದು ಪಕ್ಷದ ಹೈಕಮಾಂಡ್” ಎಂದು ಹೇಳಿದ್ದಾರೆ. […]

ಕನ್ನಡ ದುನಿಯಾ 8 Jan 2026 1:25 pm

BIG NEWS : ರಾಜ್ಯದ ಆಸ್ತಿ ಮಾಲೀಕರೇ ಗಮನಿಸಿ : ಇ-ಖಾತೆ ಪಡೆದುಕೊಳ್ಳಲು ಜಸ್ಟ್ ಹೀಗೆ ಮಾಡಿ.!

ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಪ್ರತಿ ಆಸ್ತಿಯ ಇ-ಖಾತಾ, ಬಿ-ಖಾತಾ ಸೃಜಿಸುವುದು ಸರ್ಕಾರ ಕಡ್ಡಾಯಗೊಳಿಸಿದಂತೆ ಮಡಿಕೇರಿ ನಗರಸಭೆ ವ್ಯಾಪ್ತಿಯಲ್ಲಿ ಬರುವ ಪ್ರತಿ ಆಸ್ತಿಯ ಮಾಲೀಕರುಗಳು ಆಸ್ತಿಯ ಮಾಲೀಕತ್ವದ ದಾಖಲೆಗಳನ್ನು ನಗರಸಭೆಗೆ ಸಲ್ಲಿಸಿ ಇ-ಖಾತಾ ಪಡೆದುಕೊಳ್ಳಲು ಪತ್ರಿಕಾ ಪ್ರಕಟಣೆ, ಆಟೋ ಪ್ರಚಾರ, ನಗರದ ಪ್ರಮುಖ ಸ್ಥಳಗಳಲ್ಲಿ ಇ-ಖಾತಾ, ಬಿ-ಖಾತಾ ಪಡೆಯುವ ಬಗ್ಗೆ ಮತ್ತು ಇ-ಖಾತಾ, ಬಿ-ಖಾತಾ ಪಡೆಯಲು ಸಲ್ಲಿಸಬೇಕಾದ ದಾಖಲೆಗಳ ವಿವರ ಇರುವ ಪ್ಲೇಕ್ಸ್ಗಳ ಅಳವಡಿಕೆ ಮತ್ತು ಸ್ಥಳೀಯ ಚಾನೆಲ್ಗಳಲ್ಲಿ ಸುದ್ದಿಯಾಗಿ ಪ್ರಚಾರ ಹಾಗೂ ನಗರಸಭೆ […]

ಕನ್ನಡ ದುನಿಯಾ 8 Jan 2026 1:25 pm

ಮಾಜಿ ಸೈನಿಕರ ಅವಲಂಬಿತರಿಗೆ, ಮಕ್ಕಳಿಗೆ ಕ್ರೀಡಾ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಆಹ್ವಾನ

ಕೇಂದ್ರೀಯ ಸೈನಿಕ ಬೋರ್ಡನಿಂದ ಅಂತರರಾಷ್ಟ್ರೀಯ, ರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸಿದ ಸೇವೆಯಲ್ಲಿರುವ ಮತ್ತು ಮಾಜಿ ಸೈನಿಕರ ಮಕ್ಕಳಿಗೆ, ಅವಲಂಬಿತರಿಗೆ ಕ್ರೀಡಾ ವಿದ್ಯಾರ್ಥಿವೇತನ ನೀಡಲು ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ. ವಿದ್ಯಾರ್ಥಿವೇತನ ನೀಡುವ ಪ್ರಕ್ರಿಯೆಯು ಪ್ರತಿ ವರ್ಷ ಎಪ್ರಿಲ್ ತಿಂಗಳಲ್ಲಿ ಪ್ರಾರಂಭವಾಗುವುದು. ಅರ್ಹ ಮಾಜಿ ಸೈನಿಕರು ತಮ್ಮ ಮಕ್ಕಳು, ಅವಲಂಬಿತರು ಅಂತರರಾಷ್ಟ್ರೀಯ, ರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸಿದ್ದರೆ, ಸೂಕ್ತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿ, ವಿದ್ಯಾರ್ಥಿವೇತನದ ಸದುಪಯೋಗ ಪಡೆದುಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಧಾರವಾಡ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಕಾರ್ಯಾಲಯವನ್ನು […]

ಕನ್ನಡ ದುನಿಯಾ 8 Jan 2026 1:18 pm

ಶ್ರೀಲೀಲಾ: ಕೇವಲ ನಟಿಯಲ್ಲ, ಮೂವರು ಮಕ್ಕಳ ಪಾಲಿನ ದೇವತೆ, 24ನೇ ವಯಸ್ಸಿನಲ್ಲೇ ಅಚ್ಚರಿಯ ನಿರ್ಧಾರ ಕೈಗೊಂಡ ‘ಕಿಸ್’ಬೆಡಗಿ

ಬೆಂಗಳೂರು: ಸ್ಯಾಂಡಲ್‌ವುಡ್‌ನಿಂದ ಕೆರಿಯರ್ ಆರಂಭಿಸಿ, ಇಂದು ಇಡೀ ದಕ್ಷಿಣ ಭಾರತದ ‘ಮೋಸ್ಟ್ ವಾಂಟೆಡ್’ ನಟಿಯಾಗಿ ಬೆಳೆದಿರುವ ಶ್ರೀಲೀಲಾ, ಬೆಳ್ಳಿತೆರೆಯ ಮೇಲೆ ಮಾತ್ರವಲ್ಲದೆ ನಿಜ ಜೀವನದಲ್ಲೂ ಹೀರೊಯಿನ್ ಎನಿಸಿಕೊಂಡಿದ್ದಾರೆ. ತಮ್ಮ ನಟನೆ ಮತ್ತು ಎಲೆಕ್ಟ್ರಿಫೈಯಿಂಗ್ ಡ್ಯಾನ್ಸ್‌ನಿಂದ ಅಭಿಮಾನಿಗಳ ಗುಂಗು ಹಿಡಿಸಿರುವ ಈ ಚೆಲುವೆ, ಈಗ ತಮ್ಮ ಉದಾರ ಗುಣದ ಮೂಲಕ ಎಲ್ಲರ ಮನಗೆದ್ದಿದ್ದಾರೆ. ಕೇವಲ 24ನೇ ವಯಸ್ಸಿನಲ್ಲಿ, ಕೆರಿಯರ್‌ನ ಅತ್ಯಂತ ಯಶಸ್ವಿ ಹಂತದಲ್ಲಿರುವಾಗಲೇ ಮೂವರು ಮಕ್ಕಳನ್ನು ದತ್ತು ಪಡೆಯುವ ಮೂಲಕ ಸುದ್ದಿಯಾಗಿದ್ದಾರೆ. ಸಾಮಾನ್ಯವಾಗಿ ನಟಿಯರು ತಮ್ಮ ವೃತ್ತಿಜೀವನದ ಉತ್ತುಂಗದಲ್ಲಿದ್ದಾಗ […]

ಕನ್ನಡ ದುನಿಯಾ 8 Jan 2026 1:14 pm

BIG NEWS : ಪ್ರಧಾನಿ ಮೋದಿ, ರಾಹುಲ್ ಗಾಂಧಿ ಆಸ್ತಿ ಎಷ್ಟಿದೆ ಗೊತ್ತಾ? ಇಂಟರೆಸ್ಟಿಂಗ್ ಸಂಗತಿ ರಿವೀಲ್

ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ADR) ಎಂಬ ಸಂಘಟನೆಯು ರಾಜಕೀಯ ನಾಯಕರ ವಿರುದ್ಧದ ಪ್ರಕರಣಗಳು, ಆಸ್ತಿಗಳು ಮತ್ತು ಇತರ ವಿಷಯಗಳ ಬಗ್ಗೆ ಯಾವಾಗಲೂ ಕೆಲವು ಆಸಕ್ತಿದಾಯಕ ಸಂಗತಿಗಳನ್ನು ಬಹಿರಂಗಪಡಿಸುತ್ತದೆ. ಚುನಾವಣಾ ನಾಮಪತ್ರಗಳ ಸಮಯದಲ್ಲಿ ಚುನಾವಣಾ ಆಯೋಗಕ್ಕೆ ಸಾರ್ವಜನಿಕ ಪ್ರತಿನಿಧಿಗಳು ಸಲ್ಲಿಸಿದ ಅಫಿಡವಿಟ್ಗಳ ವಿವರಗಳನ್ನು ಇದು ವಿಶ್ಲೇಷಿಸುತ್ತದೆ ಮತ್ತು ಆಸಕ್ತಿದಾಯಕ ಸಂಗತಿಗಳನ್ನು ಬಿಡುಗಡೆ ಮಾಡುತ್ತದೆ. ಹಿಂದೆ, ADR ಮುಖ್ಯಮಂತ್ರಿಗಳು, ಸಂಸದರು ಮತ್ತು ಶಾಸಕರ ವಿರುದ್ಧದ ಪ್ರಕರಣಗಳ ವಿವರಗಳನ್ನು ಹಾಗೂ ದೇಶದ ಮುಖ್ಯಮಂತ್ರಿಗಳ ಆಸ್ತಿಗಳ ಮೌಲ್ಯವನ್ನು ಬಹಿರಂಗಪಡಿಸಿದೆ. ಅದರ ಭಾಗವಾಗಿ, […]

ಕನ್ನಡ ದುನಿಯಾ 8 Jan 2026 1:04 pm

ಬೆಳಗ್ಗೆ ಈ ಲಕ್ಷಣಗಳು ಕಾಣಿಸಿಕೊಂಡರೆ ಸ್ಟ್ರೋಕ್ ಬರುತ್ತಿದೆ ಎಂದರ್ಥ; ಎಚ್ಷರ, ನಿರ್ಲಕ್ಷಿಸಬೇಡಿ

ಸ್ಟ್ರೋಕ್ (ಬ್ರೈನ್ ಅಟ್ಯಾಕ್) ಒಂದು ಗಂಭೀರ ಸ್ಥಿತಿ. ಅನೇಕ ಅಧ್ಯಯನಗಳ ಪ್ರಕಾರ, ಸ್ಟ್ರೋಕ್ ಪ್ರಕರಣಗಳು ಬೆಳಿಗ್ಗೆ ಹೆಚ್ಚು ಸಂಭವಿಸುತ್ತವೆ. ಬೆಳಿಗ್ಗೆ ಎದ್ದಾಗ ಅಥವಾ ಬೆಳಗಿನ ಸಮಯದಲ್ಲಿ ಈ ಕೆಳಗಿನ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯಕೀಯ ಸಹಾಯ ಪಡೆಯಿರಿ. ಇದು “ವೇಕ್-ಅಪ್ ಸ್ಟ್ರೋಕ್” ಆಗಿರಬಹುದು, ಅಂದರೆ ರಾತ್ರಿ ಸಂಭವಿಸಿ ಬೆಳಿಗ್ಗೆ ಲಕ್ಷಣಗಳು ಕಾಣಿಸಿಕೊಳ್ಳುವುದು.ಪ್ರಮುಖ ಲಕ್ಷಣಗಳು (F.A.S.T. ನೆನಪಿನಲ್ಲಿ ಇಟ್ಟುಕೊಳ್ಳಿ): ಇತರೆ ಲಕ್ಷಣಗಳು: ಬೆಳಿಗ್ಗೆ ಸ್ಟ್ರೋಕ್ ಹೆಚ್ಚು ಏಕೆ? ರಕ್ತದೊತ್ತಡ ಹೆಚ್ಚಾಗುವುದು, ರಕ್ತ ಗಡಿಕೆಯಾಗುವುದು ಮತ್ತು ದೇಹದ ನೈಸರ್ಗಿಕ ಬದಲಾವಣೆಗಳಿಂದ […]

ಕನ್ನಡ ದುನಿಯಾ 8 Jan 2026 12:53 pm

ಮಾರ್ಚ್ ಅಂತ್ಯಕ್ಕೆ 6 ಪಥದ ಈ ರಸ್ತೆ ಓಪನ್: ಬೆಂಗಳೂರು ಜನರಿಗೆ ಬಿಗ್ ರಿಲೀಫ್

ಸುಮಾರು 575 ಕೋಟಿ ರೂ.ವೆಚ್ಚದಲ್ಲಿ ಕೈಗೊಂಡಿದ್ದ ಬೆಂಗಳೂರು ನಗರದ ಪ್ರಮುಖ ರಸ್ತೆ ಯೋಜನೆಯೊಂದು ಉದ್ಘಾಟನೆಗೆ ಸಿದ್ಧವಾಗಿದೆ. 6 ಪಥದ ಈ ರಸ್ತೆ ಯೋಜನೆ ಲೋಕಾರ್ಪಣೆಗೊಂಡರೆ ಬೆಂಗಳೂರು-ಮೈಸೂರು ರಸ್ತೆ ವಾಹನ ಸವಾರರು ನಿಟ್ಟುಸಿರು ಬಿಡಲಿದ್ದಾರೆ. ಬೆಂಗಳೂರು-ಮೈಸೂರು ಹೆದ್ದಾರಿಯೊಂದಿಗೆ ಮಾಗಡಿ ರಸ್ತೆ ಸಂಪರ್ಕಿಸುವ ಪ್ರಮುಖವಾದ ಮೇಜರ್‌ ಆರ್ಟೀರಿಯಲ್‌ ರಸ್ತೆ (ಎಂಎಆರ್‌) ಮಾರ್ಚ್ ಅಂತ್ಯದಲ್ಲಿ ಲೋಕಾರ್ಪಣೆಯಾಗಲಿದೆ. ಸಂಚಾರ ದಟ್ಟಣೆ ನಿಯಂತ್ರಿಸುವ ಸಲುವಾಗಿ ಬಿಡಿಎ 2018ರಲ್ಲಿ ಈ ಯೋಜನೆ ಆರಂಭಿಸಿತ್ತು. ಇದು 330 ಅಡಿ ಅಗಲದ ರಸ್ತೆಯಾಗಿದೆ. 6 ಪಥ, ಎರಡೂ ಬದಿಗಳಲ್ಲಿ […]

ಕನ್ನಡ ದುನಿಯಾ 8 Jan 2026 12:47 pm

BIG NEWS : ‘ಡಬಲ್ ಡೆಕ್ಕರ್’ಯೋಜನೆಗೆ 6868 ಮರ ಕಡಿಯಲು ‘ನಮ್ಮ ಮೆಟ್ರೋ’ ಸಜ್ಜು : ಪರಿಸರ ಪ್ರೇಮಿಗಳ ಆಕ್ರೋಶ.!

ಬೆಂಗಳೂರು : ‘ಡಬಲ್ ಡೆಕ್ಕರ್’ ಮೆಟ್ರೋ ಯೋಜನೆ 3 ನೇ ಹಂತದ ಕಾಮಗಾರಿಗೆ 6868 ಮರ ಕಡಿಯಲು ‘ನಮ್ಮ ಮೆಟ್ರೋ’ ಸಜ್ಜಾಗಿದ್ದು, ಪರಿಸರ ಪ್ರೇಮಿಗಳು ಆಕ್ರೋಶ ಹೊರ ಹಾಕಿದ್ದಾರೆ. ಹೌದು, 37.12 ಕಿಮೀ ಉದ್ದದ ಡಬಲ್ ಡೆಕ್ಕರ್ ಮೆಟ್ರೋ ಯೋಜನೆಗೆ ಸಿದ್ದತೆ ಆರಂಭಿಸಿರುವ ನಮ್ಮ ಮೆಟ್ರೋ ಜೂನ್ ನಿಂದ ಕಾಮಗಾರಿ ಆರಂಭಿಸಲಿದೆ. ಇದಕ್ಕಾಗಿ ನಮ್ಮ ಮೆಟ್ರೋ 6868 ಮರ ಕಡಿಯಲು ನಿರ್ಧರಿಸಿದೆ ಎಂದು ಹೇಳಲಾಗಿದೆ. ಇಷ್ಟೊಂದು ಮರಗಳನ್ನು ಕಡಿದರೆ ಬೆಂಗಳೂರಿನ ಪರಿಸರಕ್ಕೆ ದೊಡ್ಡ ಗಂಡಾಂತರ ಕಾದಿದೆ ಎಂದು […]

ಕನ್ನಡ ದುನಿಯಾ 8 Jan 2026 12:46 pm

800 ಮಂದಿ ಪುರುಷರಿಗೆ ಒಬ್ಬ ಹುಡುಗಿಯಿಂದ ಎಚ್‌ಐವಿ ಸೋಂಕು? ವೈರಲ್ ಸುದ್ದಿ ಹಿಂದಿನ ಅಸಲಿಯತ್ತು

ಪಾಟ್ನಾ: ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಡುತ್ತಿರುವ ಒಂದು ಸುದ್ದಿಯು ಅನೇಕರನ್ನು ಆತಂಕಕ್ಕೀಡುಮಾಡಿದೆ. ಪಟ್ನಾದಲ್ಲಿ ಒಬ್ಬ ಹುಡುಗಿಯನ್ನು ಬಂಧಿಸಲಾಗಿದೆ, ಆಕೆ ಉದ್ದೇಶಪೂರ್ವಕವಾಗಿ ಸುಮಾರು 800 ಪುರುಷರಿಗೆ HIV ಸೋಂಕು ತಗುಲಿಸಿದ್ದಾಳೆ ಎಂಬ ಆರೋಪದಡಿ ಈ ಸುದ್ದಿ ವೈರಲ್ ಆಗಿದೆ. ಈ ಸುದ್ದಿಯೊಂದಿಗೆ ಒಂದು ವೀಡಿಯೊ ಕೂಡ ಹಂಚಿಕೊಳ್ಳಲಾಗುತ್ತಿದೆ.ಆದರೆ, ಈ ಆರೋಪ ಸಂಪೂರ್ಣವಾಗಿ ಅಡಿಪಾಯರಹಿತ ಮತ್ತು ಸತ್ಯವಲ್ಲ ಎಂದು ಫ್ಯಾಕ್ಟ್-ಚೆಕ್ ಮಾಡಲಾಗಿದೆ. ವಿಶ್ವಾಸಾರ್ಹ ಸುದ್ದಿ ಮಾಧ್ಯಮಗಳು ಅಥವಾ ಅಧಿಕಾರಿಗಳಿಂದ ಯಾವುದೇ ದೃಢೀಕರಣವಿಲ್ಲ. ವೈರಲ್ ವೀಡಿಯೊದಲ್ಲಿ ಕೆಲವು ಅಸಂಗತತೆಗಳೂ ಕಂಡುಬಂದಿವೆ – […]

ಕನ್ನಡ ದುನಿಯಾ 8 Jan 2026 12:44 pm

BREAKING : ಭಾರತದ ಮೇಲೆ ಶೇ.500 ರಷ್ಟು ಸುಂಕ..! ಪ್ರಮುಖ ಮಸೂದೆಗೆ ‘ಟ್ರಂಪ್’ಗ್ರೀನ್ ಸಿಗ್ನಲ್

ಉಕ್ರೇನ್ನಲ್ಲಿ ಯುದ್ಧವನ್ನು ಕೊನೆಗೊಳಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಮುಖ ನಿರ್ಧಾರ ತೆಗೆದುಕೊಂಡಿದ್ದಾರೆ. ರಷ್ಯಾದ ಮೇಲೆ ಒತ್ತಡ ಹೆಚ್ಚಿಸಲು ಅವರು ದ್ವಿಪಕ್ಷೀಯ ನಿರ್ಬಂಧ ಮಸೂದೆಯನ್ನು ಅನುಮೋದಿಸಿದ್ದಾರೆ. ಈ ಸಂದರ್ಭದಲ್ಲಿ, ರಷ್ಯಾದಿಂದ ತೈಲವನ್ನು ಖರೀದಿಸುವ ಭಾರತ ಮತ್ತು ಚೀನಾದ ಮೇಲಿನ ಸುಂಕವನ್ನು ಶೇಕಡಾ 500 ರಷ್ಟು ಹೆಚ್ಚಿಸಲು ಅವರು ಇಚ್ಛೆ ವ್ಯಕ್ತಪಡಿಸಿದ್ದಾರೆ. ರಿಪಬ್ಲಿಕನ್ ಸೆನೆಟರ್ ಲಿಂಡ್ಸೆ ಗ್ರಹಾಂ ಅವರು X.com ನಲ್ಲಿ ಮಾಡಿದ ಪೋಸ್ಟ್ ಈ ಬೆಳವಣಿಗೆಗಳ ಬಗ್ಗೆ ಕಳವಳ ವ್ಯಕ್ತಪಡಿಸುತ್ತಿದೆ. ಈ ಕ್ರಮಗಳ ಮೂಲಕ ರಷ್ಯಾದ ಆರ್ಥಿಕತೆಯನ್ನು […]

ಕನ್ನಡ ದುನಿಯಾ 8 Jan 2026 12:20 pm

ಭಾನುವಾರ ಬಜೆಟ್ ಮಂಡಿಸಲಿದ್ದಾರೆ ನಿರ್ಮಲಾ ಸೀತಾರಾಮನ್, ವಿಶೇಷತೆಗಳು

ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ಬಾರಿ ಭಾನುವಾರ ಬಜೆಟ್ ಮಂಡನೆ ಮಾಡಲಿದ್ದಾರೆಯೇ?. ಸದ್ಯದ ಮಾಹಿತಿ ಪ್ರಕಾರ ಹೌದು. ಸಂಸತ್ತಿನ ಬಜೆಟ್ ಅಧಿವೇಶನವು ಜನವರಿ 28ರಿಂದ ಪ್ರಾರಂಭವಾಗಲಿದೆ ಮತ್ತು ಫೆಬ್ರವರಿ 1ರಂದು ಕೇಂದ್ರ ಬಜೆಟ್ ಮಂಡನೆಯಾಗುವ ನಿರೀಕ್ಷೆ ಇದೆ. ರಾಜಕೀಯ ವ್ಯವಹಾರಗಳ ಸಂಪುಟ ಸಮಿತಿ ಫೆಬ್ರವರಿ 1ರ ಭಾನುವಾರ ಬಜೆಟ್ ಮಂಡನೆ ಮಾಡುವ ಪ್ರಸ್ತಾಪಕ್ಕೆ ಬುಧವಾರ ಒಪ್ಪಿಗೆ ನೀಡಿದೆ ಎಂದು ಮೂಲಗಳು ತಿಳಿಸಿವೆ. ಆದರೆ ದಿನಾಂಕಗಳ ಬಗ್ಗೆ ಅಂತಿಮ ನಿರ್ಧಾರವನ್ನು […]

ಕನ್ನಡ ದುನಿಯಾ 8 Jan 2026 12:06 pm

BIG NEWS : ಅಪ್ರಾಪ್ತ ಬಾಲಕಿಯರ ಜೊತೆ ಅಶ್ಲೀಲ ಸಂದರ್ಶನ : ಯೂಟ್ಯೂಬರ್ ಅರೆಸ್ಟ್.!

ಹೈದರಾಬಾದ್ ಸೈಬರ್ ಕ್ರೈಮ್ ಪೊಲೀಸರು ಯೂಟ್ಯೂಬ್ನಲ್ಲಿ ಲೈಕ್ಸ್, ವೀವ್ಸ್ ಗಾಗಿ ಮಿತಿ ಮೀರುತ್ತಿರುವ ಕಂಟೆಂಟ್ ಕ್ರಿಯೇಟರ್ಸ್, ಯೂಟ್ಯೂಬರ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿದ್ದಾರೆ. ಅಪ್ರಾಪ್ತ ವಯಸ್ಕರನ್ನು ಗುರಿಯಾಗಿಸಿಕೊಂಡು ಅಶ್ಲೀಲ ಸಂದರ್ಶನಗಳನ್ನು ನಡೆಸುತ್ತಿದ್ದ ಮತ್ತು ಅವುಗಳನ್ನು ವೈರಲ್ ಮಾಡಿ ಪ್ರಚಾರ ಮಾಡುತ್ತಿದ್ದ ಮತ್ತೊಬ್ಬ ಯೂಟ್ಯೂಬರ್ ಅನ್ನು ಪೊಲೀಸರು ಬಂಧಿಸಿದ್ದಾರೆ. ‘ವೈರಲ್ ಹಬ್’ ಯೂಟ್ಯೂಬ್ ಚಾನೆಲ್ ವೈರಲ್ ಹಬ್’ ಎಂಬ ಯೂಟ್ಯೂಬ್ ವ ನಡೆಸುತ್ತಿರುವ ಕಾಂಬೇಟಿ ಸತ್ಯಮೂರ್ತಿ ಅವರನ್ನು ಬುಧವಾರ ಹೈದರಾಬಾದ್ ಸೈಬರ್ ಕ್ರೈಮ್ ಪೊಲೀಸರು ವಶಕ್ಕೆ ಪಡೆದಿದ್ದಾರೆ. 15 […]

ಕನ್ನಡ ದುನಿಯಾ 8 Jan 2026 12:02 pm

‘ಅಪ್ಪ ಮನೆಗ್ ಬಂದ್ರು’ದಾರಿ ಬಿಡಿ; ಟಾಕ್ಸಿಕ್ ಟೀಸರ್‌ನಲ್ಲಿ ಅಬ್ಬರಿಸಿದ ಯಶ್; ಹಿಂದೆಂದೂ ಮಾಡಿರದ ವಿಭಿನ್ನ ಪ್ರಯತ್ನ

ಕೆಜಿಎಫ್ ಚಿತ್ರ ಸರಣಿಯ ಮೂಲಕ ಕನ್ನಡ ಚಿತ್ರರಂಗದ ಪಥ ಬದಲಿಸಿದ ಕೀರ್ತಿಯಲ್ಲಿ ದೊಡ್ಡ ಪಾಲುದಾರಿಕೆ ಹೊಂದಿರುವ ರಾಕಿಂಗ್ ಸ್ಟಾರ್ ಯಶ್ ಬರೋಬ್ಬರಿ ನಾಲ್ಕು ವರ್ಷಗಳ ಬಳಿಕ ಮತ್ತೊಮ್ಮೆ ಬೆಳ್ಳಿ ತೆರೆಯನ್ನಾಳಲು ಸಜ್ಜಾಗಿದ್ದಾರೆ. ಕನ್ನಡ ಚಿತ್ರವಾಗಿ ತಯಾರಾಗಲು ಮುಂದಾಗಿದ್ದ ಕೆಜಿಎಫ್ ಚಿತ್ರವನ್ನು ತನ್ನ ಮುಂದಾಲೋಚನೆಯಿಂದ ಪ್ಯಾನ್ ಇಂಡಿಯಾವನ್ನಾಗಿ ಪರಿವರ್ತಿಸಬೇಕೆಂದು ಪಟ್ಟುಹಿಡಿದು ಗೆದ್ದ ಯಶ್ ಇದೀಗ ಟಾಕ್ಸಿಕ್ ಚಿತ್ರದಲ್ಲಿ ನಟಿಸಿದ್ದಾರೆ. ನಟನೆ ಜತೆಗೆ ಸಹ ನಿರ್ಮಾಪಕ ಹಾಗೂ ಕಥೆಗೂ ಸಹ ಕೊಡುಗೆ ನೀಡಿರುವ ಯಶ್ ಮೇಲೆ ಸಿನಿ ರಸಿಕರಿಗೆ ನಿರೀಕ್ಷೆ […]

ಕನ್ನಡ ದುನಿಯಾ 8 Jan 2026 11:53 am