SENSEX
NIFTY
GOLD
USD/INR

Weather

20    C

ಡಿಜಿಟಲ್ ಸುದ್ದಿ ಮೂಲಗಳು

... ...View News by News Source

CCL 2026 Final: ಬೆಂಗಾಲ್ ಟೈಗರ್ಸ್ ಸೋಲಿಸಿ ಮೂರನೇ ಬಾರಿಗೆ ಚಾಂಪಿಯನ್ ಆದ ಕರ್ನಾಟಕ ಬುಲ್ಡೋಜರ್ಸ್

ಇಂದು ( ಫೆಬ್ರವರಿ 1 ) ನಡೆದ ಸೆಲೆಬ್ರಿಟಿ ಕ್ರಿಕೆಟ್ ಲೀಗ್ 2026 ಫೈನಲ್ ಪಂದ್ಯದಲ್ಲಿ ಬೆಂಗಾಲ್ ಟೈಗರ್ಸ್ ವಿರುದ್ಧ ಕರ್ನಾಟಕ ಬುಲ್ಡೋಜರ್ಸ್ 6 ವಿಕೆಟ್‌ಗಳ ಗೆಲುವನ್ನು ಸಾಧಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಕರ್ನಾಟಕ ಬುಲ್ಡೋಜರ್ಸ್ ಮೂರನೇ ಬಾರಿಗೆ ಟ್ರೋಫಿ ಎತ್ತಿಹಿಡಿಯುತ್ತಿದ್ದು, 12 ವರ್ಷಗಳ ಬಳಿಕ ಮತ್ತೊಮ್ಮೆ ಚಾಂಪಿಯನ್ ಆಗಿದೆ. ಮೊದಲು ಬ್ಯಾಟಿಂಗ್ ಮಾಡಿದ ಬೆಂಗಾಲ್ ಟೈಗರ್ಸ್ 20 ಓವರ್‌ಗಳಲ್ಲಿ 129 ರನ್‌ಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡು ಕರ್ನಾಟಕ ಬುಲ್ಡೋಜರ್ಸ್ ತಂಡಕ್ಕೆ 130 ರನ್‌ಗಳ ಸಾಧಾರಣ ಗುರಿ […]

ಕನ್ನಡ ದುನಿಯಾ 1 Feb 2026 10:49 pm

BREAKING : T-20 ವಿಶ್ವಕಪ್‌’ನಲ್ಲಿ ‘ಟೀಮ್ ಇಂಡಿಯಾ’ ವಿರುದ್ಧದ ಪಂದ್ಯ ಬಹಿಷ್ಕರಿಸಲು ಪಾಕ್ ನಿರ್ಧಾರ.!

2026ರ ಟಿ 20 ವಿಶ್ವಕಪ್ ಗೆ ಸಂಬಂಧಿಸಿದಂತೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಅತ್ಯಂತ ಆಘಾತಕಾರಿ ನಿರ್ಧಾರವನ್ನು ತೆಗೆದುಕೊಳ್ಳಲು ಮುಂದಾಗಿದೆ ಎನ್ನಲಾಗುತ್ತಿದೆ. ಹೌದು, ಟಿ20 ವಿಶ್ವಕಪ್ ನಲ್ಲಿ ‘ಟೀಮ್ ಇಂಡಿಯಾ’ ವಿರುದ್ಧದ ಪಂದ್ಯ ಬಹಿಷ್ಕರಿಸಲು ಪಾಕ್ ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ. ಮುಂಬರುವ ಈ ವಿಶ್ವಕಪ್ನಲ್ಲಿ ಭಾರತದ ವಿರುದ್ಧ ನಡೆಯಲಿರುವ ಪಂದ್ಯವನ್ನು ಬಹಿಷ್ಕರಿಸಲು (Boycott) ಪಾಕಿಸ್ತಾನ ನಿರ್ಧರಿಸಿದೆ ಎಂದು ವರದಿಯಾಗಿದೆ.ಫೆಬ್ರವರಿ 15 ರಂದು ಕೊಲಂಬೊದಲ್ಲಿ ನಡೆಯಲಿರುವ ಭಾರತದ ವಿರುದ್ಧದ ಗ್ರೂಪ್ ಸ್ಟೇಜ್ ಪಂದ್ಯವನ್ನು ತಮ್ಮ ತಂಡ ಆಡುವುದಿಲ್ಲ ಎಂದು ಪಾಕಿಸ್ತಾನ […]

ಕನ್ನಡ ದುನಿಯಾ 1 Feb 2026 9:30 pm

ಏನಿಲ್ಲ…ಏನಿಲ್ಲ.. ಕೇಂದ್ರ  ಬಜೆಟ್’ನಲ್ಲಿ ಏನಿಲ್ಲ.! CM ಸಿದ್ದರಾಮಯ್ಯ ಅಸಮಾಧಾನ.!  

ಬೆಂಗಳೂರು : ಕೇಂದ್ರ ಬಜೆಟ್ 2026-27ರ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಇದನ್ನು “ನಿರಾಶಾದಾಯಕ ಬಜೆಟ್” ಎಂದು ಕರೆದಿದ್ದಾರೆ. ಈ ಬಜೆಟ್ ‘ವಿಕಸಿತ ಭಾರತ’ ಮತ್ತು ‘ಕರ್ತವ್ಯ’ದಂತಹ ಆಕರ್ಷಕ ಘೋಷಣೆಗಳಿಗೆ ಸೀಮಿತವಾಗಿದೆ. ಆದರೆ ಯೋಜನೆಗಳ ಅನುಷ್ಠಾನ, ಕಾಲಮಿತಿ ಅಥವಾ ಹೊಣೆಗಾರಿಕೆಯ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ ಎಂದು ಅವರು ಟೀಕಿಸಿದ್ದಾರೆ. ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿದ ಸಿಎಂ ಸಿದ್ದರಾಮಯ್ಯ ಕೇಂದ್ರ ಸರ್ಕಾರದ ವಿರು‍ದ್ಧ ವಾಗ್ಧಾಳಿ ನಡೆಸಿದ್ದಾರೆ. “ಈ ಬಜೆಟ್ ‘ವಿಕಸಿತ ಭಾರತ’ ಮತ್ತು […]

ಕನ್ನಡ ದುನಿಯಾ 1 Feb 2026 9:12 pm

ಮಣಿಪುರದಲ್ಲಿ NDA ಸರ್ಕಾರ ರಚನೆ: ದೆಹಲಿ ವಿಮಾನ ಏರಿದ ಶಾಸಕರು!

ಮಣಿಪುರದಲ್ಲಿ ಸರ್ಕಾರ ರಚನೆಯ ಚಟುವಟಿಕೆ ಬಿರುಸುಗೊಂಡಿದೆ. ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಯಲ್ಲಿದ್ದು, ಅದು ಫೆಬ್ರವರಿ 13ರಂದು ಅಂತ್ಯಗೊಳ್ಳಲಿದೆ. ಆದ್ದರಿಂದ ಹೊಸ ಸರ್ಕಾರ ರಚನೆಯ ಪ್ರಕ್ರಿಯೆ ಬಿರುಸಾಗಿದ್ದು, ಎನ್‌ಡಿಎ ಮೈತ್ರಿಕೂಟದ ಶಾಸಕರು ದೆಹಲಿ ವಿಮಾನ ಏರಿದ್ದಾರೆ. ರಾಜ್ಯದ ಆಡಳಿತ ಪಕ್ಷವಾಗಿದ್ದ ಎನ್‌ಡಿಎ ಮೈತ್ರಿಕೂಟದ ಶಾಸಕರು ಪಕ್ಷದ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಲು ದೆಹಲಿಗೆ ಹೋಗಿದ್ದಾರೆ. ಬಿಜೆಪಿ ಈಶಾನ್ಯ ರಾಜ್ಯಗಳ ಉಸ್ತುವಾರಿ ಸಮಿತ್ ಪಾತ್ರ ಶಾಸಕರನ್ನು ಸೋಮವಾರ ಭೇಟಿಯಾಗಲಿದ್ದಾರೆ. ಮಣಿಪುರದಲ್ಲಿನ ಗಲಭೆ ಬಳಿಕ ಕೇಂದ್ರ ಸರ್ಕಾರ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ […]

ಕನ್ನಡ ದುನಿಯಾ 1 Feb 2026 9:09 pm

CCL 2026 Final: ಕರ್ನಾಟಕ ಬುಲ್ಡೋಜರ್ಸ್ ದಾಳಿಗೆ ನಲುಗಿದ ಬೆಂಗಾಲ್ ಟೈಗರ್ಸ್; ಗೆಲುವಿನತ್ತ ಕಿಚ್ಚ ಬಾಯ್ಸ್

ಸೆಲೆಬ್ರಿಟಿ ಕ್ರಿಕೆಟ್ ಲೀಗ್ 2026ರ ಆವೃತ್ತಿಗೆ ಇಂದು ( ಫೆಬ್ರವರಿ 1 ) ನಡೆಯುತ್ತಿರುವ ಫೈನಲ್ ಪಂದ್ಯದ ಮೂಲಕ ತೆರೆ ಬೀಳಲಿದೆ. ಪಂದ್ಯದಲ್ಲಿ ಕರ್ನಾಟಕ ಬುಲ್ಡೋಜರ್ಸ್ ಹಾಗೂ ಬೆಂಗಾಲ್ ಟೈಗರ್ಸ್ ತಂಡಗಳು ಟ್ರೋಫಿಗಾಗಿ ಅಂತಿಮ ಕಾದಾಟ ನಡೆಸಿವೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಬೆಂಗಾಲ್ ಟೈಗರ್ಸ್ ತಂಡ ಕರ್ನಾಟಕ ಬುಲ್ಡೋಜರ್ಸ್ ಬೌಲಿಂಗ್ ದಾಳಿಗೆ ತತ್ತರಿಸಿತು. ಆರಂಭಿಕ ಆಟಗಾರ ಜಾಯ್ ಹೊರತುಪಡಿಸಿ ಉಳಿದ ಯಾವೊಬ್ಬ ಆಟಗಾರನೂ ಸಹ ಬುಲ್ಡೋಜರ್ಸ್ ಬೌಲಿಂಗ್ ಅಬ್ಬರದ ಎದುರು ಸಮರ್ಥರಾಗಿ ನಿಲ್ಲಲಿಲ್ಲ. ಜಾಯ್ […]

ಕನ್ನಡ ದುನಿಯಾ 1 Feb 2026 8:57 pm

ಗುಪ್ತಾಂಗದ ಶಸ್ತ್ರಚಿಕಿತ್ಸೆ ವೇಳೆ ಬಿಲಿಯನೇರ್ ‘ಎಹುದ್ ಲಾನಿಯಾಡೊ’ ಸಾವು : ವೈದ್ಯರ ಲೈಸೆನ್ಸ್ ರದ್ದು!

ಪ್ಯಾರಿಸ್’ ನ ಖಾಸಗಿ ಕ್ಲಿನಿಕ್ನಲ್ಲಿ ನಡೆದ ಗುಪ್ತಾಂಗದ ಗಾತ್ರ ಹೆಚ್ಚಿಸುವ ಶಸ್ತ್ರಚಿಕಿತ್ಸೆಯು (Penis Enlargement Surgery) ದುರಂತದಲ್ಲಿ ಅಂತ್ಯಗೊಂಡಿದೆ. ಬೆಲ್ಜಿಯಂ-ಇಸ್ರೇಲ್ ಮೂಲದ ಶತಕೋಟ್ಯಾಧಿಪತಿ ಮತ್ತು ‘ಓಮೆಗಾ ಡೈಮಂಡ್ಸ್’ ಸಂಸ್ಥೆಯ ಸ್ಥಾಪಕ ಎಹುದ್ ಆರ್ಯೆ ಲಾನಿಯಾಡೋ (65) ಅವರು ಚಿಕಿತ್ಸೆ ವೇಳೆ ಸಂಭವಿಸಿದ ಹೃದಯಾಘಾತದಿಂದ ನಿಧನರಾಗಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಇಬ್ಬರು ಸರ್ಜನ್ಗಳ ಮೇಲೆ ಕಠಿಣ ಕ್ರಮ ಜರುಗಿಸಲಾಗಿದೆ. ಮಾರ್ಚ್ನಲ್ಲಿ ಪ್ಯಾರಿಸ್ನ ಕ್ಲಿನಿಕ್ನಲ್ಲಿ ಲಾನಿಯಾಡೋ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಚಿಕಿತ್ಸೆಯ ಭಾಗವಾಗಿ ಚುಚ್ಚುಮದ್ದು (Injection) ನೀಡುತ್ತಿದ್ದಾಗ ಅವರಿಗೆ ತೀವ್ರ […]

ಕನ್ನಡ ದುನಿಯಾ 1 Feb 2026 8:54 pm

Tax Holiday : ‘ತೆರಿಗೆ ರಜೆ’ಎಂದರೇನು  ? ನಿರ್ಮಲಾ ಸೀತಾರಾಮನ್ ಇದನ್ನು ಏಕೆ ಪ್ರಸ್ತಾಪಿಸಿದರು ? ಏನಿದರ ಪ್ರಯೋಜನ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1, 2026 ರಂದು ಮಂಡಿಸಿದ ಬಜೆಟ್ನಲ್ಲಿ ವಿದೇಶಿ ಕ್ಲೌಡ್ ಕಂಪನಿಗಳಿಗೆ 2047ರವರೆಗೆ ‘ಟ್ಯಾಕ್ಸ್ ಹಾಲಿಡೇ’ (ತೆರಿಗೆ ರಜೆ) ಘೋಷಿಸಿರುವುದು ದೊಡ್ಡ ಸುದ್ದಿಯಾಗಿದೆ. ಟ್ಯಾಕ್ಸ್ ಹಾಲಿಡೇ ಎಂದರೆ ಸರ್ಕಾರವು ಒಂದು ನಿರ್ದಿಷ್ಟ ಅವಧಿಯವರೆಗೆ ಉದ್ಯಮಗಳಿಗೆ ಅಥವಾ ವ್ಯಕ್ತಿಗಳಿಗೆ ನೀಡುವ ತಾತ್ಕಾಲಿಕ ತೆರಿಗೆ ವಿನಾಯಿತಿ. ಈ ಅವಧಿಯಲ್ಲಿ ಕಂಪನಿಗಳು ತಮ್ಮ ಲಾಭದ ಮೇಲೆ ಸರ್ಕಾರಕ್ಕೆ ಯಾವುದೇ ಕಾರ್ಪೊರೇಟ್ ತೆರಿಗೆ (Corporate Tax) ಅಥವಾ ಆದಾಯ ತೆರಿಗೆಯನ್ನು ಪಾವತಿಸಬೇಕಿಲ್ಲ. ಏನಿದು ಹೊಸ […]

ಕನ್ನಡ ದುನಿಯಾ 1 Feb 2026 8:28 pm

UNION BUDJET : ಕೇಂದ್ರ ಬಜೆಟ್’ನಲ್ಲಿ ಯಾವ ಇಲಾಖೆಗೆ ಎಷ್ಟು ಅನುದಾನ..? ಇಲ್ಲಿದೆ ಕಂಪ್ಲೀಟ್ ಮಾಹಿತಿ

ನವದೆಹಲಿ : ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಬಜೆಟ್ ಮಂಡಿಸಿದ್ದು, ಈ ಬಾರಿಯ ಬಜೆಟ್ “ಬಡವರು, ಮಹಿಳೆಯರು, ಯುವಕರು ಮತ್ತು ರೈತರ” (Gyan – Garib, Yuva, Annadata, Nari) ಮೇಲೆ ಕೇಂದ್ರೀಕೃತವಾಗಿದೆ. ತೆರಿಗೆಯಲ್ಲಿ ರಿಯಾಯಿತಿ ನೀಡಿರುವುದು ಮಧ್ಯಮ ವರ್ಗಕ್ಕೆ ಖುಷಿ ತಂದಿದ್ದರೆ, ಮದ್ಯ ಮತ್ತು ತಂಬಾಕು ಬೆಲೆ ಏರಿಕೆ ವ್ಯಸನಿಗಳಿಗೆ ಬಿಸಿ ಮುಟ್ಟಿಸಿದೆ. 2026-27ನೇ ಸಾಲಿನ ಬಜೆಟ್‌ನಲ್ಲಿ ಸಾರಿಗೆ ಮತ್ತು ರಕ್ಷಣಾ ಇಲಾಖೆಗಳಿಗೆ ಸಿಂಹಪಾಲು ನೀಡಲಾಗಿದ್ದು, ಒಟ್ಟು 53.47 ಲಕ್ಷ ಕೋಟಿ […]

ಕನ್ನಡ ದುನಿಯಾ 1 Feb 2026 7:59 pm

ಲಕ್ಷಾಂತರ ಬಳಕೆದಾರರಿಗೆ ಏರ್‌ಟೆಲ್ ಶಾಕ್: ಸದ್ದಿಲ್ಲದೆ ಉಚಿತ ಪ್ರಯೋಜನ ಸ್ಥಗಿತ

ನವದೆಹಲಿ: ಭಾರ್ತಿ ಏರ್‌ಟೆಲ್ ಜನಪ್ರಿಯ ಪ್ರಯೋಜನವನ್ನು ಸ್ಥಗಿತಗೊಳಿಸುವ ಮೂಲಕ ಅನೇಕ ಬಳಕೆದಾರರನ್ನು ಅಚ್ಚರಿಗೊಳಿಸಿದೆ. ಏರ್‌ಟೆಲ್ ಬಳಕೆದಾರರು ಇನ್ನು ಮುಂದೆ ಪರ್ಪ್ಲೆಕ್ಸಿಟಿ ಪ್ರೊಗೆ ಉಚಿತ ಚಂದಾದಾರಿಕೆಯನ್ನು ಪಡೆಯುವುದಿಲ್ಲ ಎಂದು ಅಧಿಕೃತವಾಗಿ ದೃಢಪಡಿಸಿದೆ. ಈ ನಿರ್ಧಾರವು ಹಲವಾರು ಗ್ರಾಹಕರನ್ನು ಆಶ್ಚರ್ಯಚಕಿತಗೊಳಿಸಿದ್ದರೂ, ಇದು ಏರ್‌ಟೆಲ್‌ನ ಮೂಲ ನಿಯಮಗಳು ಮತ್ತು ಷರತ್ತುಗಳಿಗೆ ಹೊಂದಿಕೆಯಾಗುತ್ತದೆ. ಈ ಕೊಡುಗೆಯನ್ನು ಪ್ರಾರಂಭಿಸಿದಾಗ, ಇದು ದೀರ್ಘಾವಧಿಯ ಉಚಿತ ಪ್ರಯೋಜನವಲ್ಲ ಮತ್ತು ನಿಗದಿತ ಅವಧಿಗೆ ಮಾತ್ರ ಲಭ್ಯವಿದೆ ಎಂದು ಕಂಪನಿಯು ಸ್ಪಷ್ಟವಾಗಿ ಹೇಳಿತ್ತು. 17,000 ರೂ. ಮೌಲ್ಯದ ಪರ್ಪ್ಲೆಕ್ಸಿಟಿ ಪ್ರೊ […]

ಕನ್ನಡ ದುನಿಯಾ 1 Feb 2026 7:39 pm

‘ಮದ್ಯ’ಪ್ರಿಯರಿಗೆ ಬಿಗ್ ಶಾಕ್ : ಗಗನಕ್ಕೇರಿದ ಎಣ್ಣೆ ಬೆಲೆ , ಯಾವ ಬ್ರ್ಯಾಂಡ್‌ಗೆ ಎಷ್ಟು ಹೆಚ್ಚಳ ?

ನವದೆಹಲಿ : ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು 2026-27ನೇ ಸಾಲಿನ ಕೇಂದ್ರ ಬಜೆಟ್ ಮಂಡಿಸಿದ್ದು, ಮದ್ಯಪ್ರಿಯರಿಗೆ ಶಾಕ್ ನೀಡಿದ್ದಾರೆ. ‘ವಿಕಸಿತ್ ಭಾರತ್ 2047’ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಲಾಗಿರುವ ಈ ಬಜೆಟ್ನಲ್ಲಿ ಮದ್ಯದ ಮೇಲಿನ ತೆರಿಗೆಯಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ. ಬಜೆಟ್ನಲ್ಲಿ ಕೇಂದ್ರ ಸರ್ಕಾರವು ಮದ್ಯ ಮಾರಾಟಗಾರರಿಂದ ವಸೂಲಿ ಮಾಡುವ TCS (Tax Collected at Source) ದರವನ್ನು ಪರಿಷ್ಕರಿಸಿದೆ. ದರ ಏರಿಕೆ: ಮದ್ಯ ಮಾರಾಟಗಾರರು (Alcohol Sellers), ಸ್ಕ್ರ್ಯಾಪ್ ಮತ್ತು […]

ಕನ್ನಡ ದುನಿಯಾ 1 Feb 2026 7:27 pm

ಸ್ಮೋಕಿಂಗ್ ಪ್ರಿಯರಿಗೆ ಶಾಕಿಂಗ್ ನ್ಯೂಸ್: ಅಬಕಾರಿ ಸುಂಕ ಹೆಚ್ಚಳ ನಂತರ ಸಿಗರೇಟ್ ಬೆಲೆ ಪ್ರತಿ ಪ್ಯಾಕ್‌ ಗೆ 55 ರೂ.ವರೆಗೆ ಏರಿಕೆ

ನವದೆಹಲಿ: ಭಾನುವಾರದಿಂದ ಹೆಚ್ಚುವರಿ ಅಬಕಾರಿ ಸುಂಕ ಜಾರಿಗೆ ಬಂದ ನಂತರ ಸಿಗರೇಟ್ ಬೆಲೆ 10ಕ್ಕೆ ಪ್ಯಾಕ್‌ ಗೆ ಕನಿಷ್ಠ 22 ರಿಂದ 25 ರೂ.ಗಳಷ್ಟು ಹೆಚ್ಚಾಗಿದೆ. ವಿತರಕರ ಪ್ರಕಾರ, 76 ಎಂಎಂ ಉದ್ದದ ಪ್ರೀಮಿಯಂ ಸಿಗರೇಟ್‌ಗಳು ಈಗ ಬ್ರ್ಯಾಂಡ್ ಅನ್ನು ಅವಲಂಬಿಸಿ 10 ಸಿಗರೇಟ್ ಗಳ ಪ್ಯಾಕ್‌ಗೆ 50 ರಿಂದ 55 ರೂ.ಗಳವರೆಗೆ ಹೆಚ್ಚಾಗಬಹುದು. ತಯಾರಕರು ಇನ್ನೂ ಪರಿಷ್ಕೃತ ಎಂಆರ್‌ಪಿ ಘೋಷಣೆಗಳನ್ನು ನೀಡದಿದ್ದರೂ, ವಿತರಕರು ಹಳೆಯ ಸ್ಟಾಕ್ ಅನ್ನು ಚಿಲ್ಲರೆ ವ್ಯಾಪಾರಿಗಳಿಗೆ 40 ಪ್ರತಿಶತ ಜಿಎಸ್‌ಟಿಯೊಂದಿಗೆ ಬಿಲ್ […]

ಕನ್ನಡ ದುನಿಯಾ 1 Feb 2026 7:12 pm

BIG NEWS : ‘ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ’ ಅಧ್ಯಕ್ಷೆಯಾಗಿ ನಟಿ ಜಯಮಾಲಾ ಅಧಿಕಾರ ಸ್ವೀಕಾರ.!

ಬೆಂಗಳೂರು: ಸ್ಯಾಂಡಲ್ ವುಡ್ ಪ್ರತಿಷ್ಠಿತ ಸಂಸ್ಥೆಯಾದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ (KFCC) ನೂತನ ಅಧ್ಯಕ್ಷರಾಗಿ ಹಿರಿಯ ನಟಿ ಮತ್ತು ಮಾಜಿ ಸಚಿವೆ ಜಯಮಾಲಾ ಅವರು ಇಂದು ಅಧಿಕೃತವಾಗಿ ಪ್ರಮಾಣವಚನ ಸ್ವೀಕರಿಸಿದರು. ಶನಿವಾರ (ಜನವರಿ 31, 2026) ನಡೆದ ಅತ್ಯಂತ ಕುತೂಹಲಕಾರಿ ಚುನಾವಣೆಯಲ್ಲಿ ಜಯಮಾಲಾ ಅವರು ತಮ್ಮ ಪ್ರತಿಸ್ಪರ್ಧಿ, ನಿರ್ಮಾಪಕ ಭಾ.ಮ. ಹರೀಶ್ ಅವರ ವಿರುದ್ಧ ಭರ್ಜರಿ ಜಯ ದಾಖಲಿಸಿದ್ದರು. ಒಟ್ಟು ಚಲಾವಣೆಯಾದ 813 ಮತಗಳಲ್ಲಿ ಜಯಮಾಲಾ ಅವರು 512 ಮತಗಳನ್ನು ಪಡೆಯುವ ಮೂಲಕ ಎರಡನೇ ಬಾರಿಗೆ […]

ಕನ್ನಡ ದುನಿಯಾ 1 Feb 2026 7:09 pm

ಇನ್ನೊಂದು ತಿಂಗಳಲ್ಲಿ ಜಾತಿ ಗಣತಿ ವರದಿ ಸಲ್ಲಿಕೆ, ಚರ್ಚೆ ಬಳಿಕ ಜಾರಿ: ಸಿಎಂ ಸಿದ್ದರಾಮಯ್ಯ

ರಾಯಚೂರು: ಜಾತಿಗಣತಿ ವರದಿ ಇನ್ನೊಂದು ತಿಂಗಳಲ್ಲಿ ಸಲ್ಲಿಕೆಯಾಗಲಿದ್ದು, ಸೂಕ್ತ ಚರ್ಚೆ ನಡೆಸಿದ ನಂತರ ಅದನ್ನು ಅಂಗೀಕರಿಸಿ ಜಾರಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ತಿಂಥಿಣಿನಿ ಬ್ರಿಡ್ಜ್ ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರು ಪೀಠ ಆಯೋಜಿಸಿದ್ದ ಶ್ರೀ ಸಿದ್ದರಾಮಾನಂದಪುರಿ ಸ್ವಾಮೀಜಿ ನುಡಿನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ರಾಜ್ಯದಲ್ಲಿ ಕನಕಗುರು ಪೀಠ ಜಾತ್ಯತೀತವಾಗಿ ಕೆಲಸ ಮಾಡುತ್ತಿದೆ. ಸಿದ್ದರಾಮಾನಂದಪುರಿ ಸ್ವಾಮೀಜಿ ಶಿಕ್ಷಣ, ಆಧ್ಯಾತ್ಮ, ಜಾತ್ಯತೀತ ಮನೋಭಾವಕ್ಕೆ ಒತ್ತು ನೀಡಿದ್ದರು. ಕುರುಬ ಸಮುದಾಯಕ್ಕೆ ಮೊದಲ ಬಾರಿಗೆ ಕಾಗಿನೆಲೆ ಗುರುಪೀಠ 1992 […]

ಕನ್ನಡ ದುನಿಯಾ 1 Feb 2026 7:00 pm

ಸೋಶಿಯಲ್ ಮೀಡಿಯಾದಲ್ಲಿ ಅನುಪಮಾ ಹವಾ: ವಿಚಿತ್ರ ಡೈಲಾಗ್ ಹೊಡೆದು ಟ್ರೋಲಿಗರ ಕೆಂಗಣ್ಣಿಗೆ ಗುರಿಯಾದ ರೂಪಾಲಿ ಗಂಗೂಲಿ

ಖ್ಯಾತ ಕಿರುತೆರೆ ಧಾರಾವಾಹಿ ‘ಅನುಪಮಾ’ ತನ್ನ ವಿಭಿನ್ನ ಕಥಾಹಂದರದಿಂದ ಸದಾ ಟಿಆರ್‌ಪಿ ರೇಟಿಂಗ್‌ನಲ್ಲಿ ಮುಂಚೂಣಿಯಲ್ಲಿರುತ್ತದೆ. ಆದರೆ ಈ ಬಾರಿ ಈ ಸೀರಿಯಲ್ ಸುದ್ದಿಯಾಗಿರುವುದು ಕಥೆಯ ಕಾರಣಕ್ಕಲ್ಲ, ಬದಲಾಗಿ ನಟಿ ರೂಪಾಲಿ ಗಂಗೂಲಿ ಅವರ ಅತಿರೇಕದ ಎನ್ನಬಹುದಾದ ಸಂಭಾಷಣೆಯ ವಿಡಿಯೋದಿಂದಾಗಿ. ನಾಯಕಿ ಅನುಪಮಾ ಅಬ್ಬರದ ದನಿಯಲ್ಲಿ ಎದುರಾಳಿಗೆ ವಾರ್ನಿಂಗ್ ನೀಡುವ ದೃಶ್ಯವೊಂದು ಈಗ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಟ್ರೋಲ್‌ಗೆ ಗುರಿಯಾಗಿದೆ. ವೈರಲ್ ಆಗಿರುವ ಈ ವಿಡಿಯೋದಲ್ಲಿ ಅನುಪಮಾ ಪಾತ್ರಧಾರಿ ರೂಪಾಲಿ ಗಂಗೂಲಿ ಮತ್ತು ರಜನಿ ಪಾತ್ರಧಾರಿ ರಿಂಕು ಧವನ್ […]

ಕನ್ನಡ ದುನಿಯಾ 1 Feb 2026 7:00 pm

ರಾಜ್ಯದ ವಿದ್ಯಾರ್ಥಿಗಳೇ ಗಮನಿಸಿ : ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ದಿನಾಂಕ ವಿಸ್ತರಣೆ

ಬೆಂಗಳೂರು : ಪ್ರಸಕ್ತ (2025-26) ಸಾಲಿಗೆ ಮೆಟ್ರಿಕ್ ನಂತರದ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಹಾಗೂ ಪ್ರವರ್ಗ-1 ಅಲೆಮಾರಿ/ ಅರೆ ಅಲೆಮಾರಿ ವಿದ್ಯಾರ್ಥಿಗಳಿಂದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೂಲಕ ನೀಡಲಾಗುತ್ತಿರುವ “ವಿದ್ಯಾರ್ಥಿ ವೇತನ, ವಿದ್ಯಾಸಿರಿ, ಊಟ ಮತ್ತು ವಸತಿ ಸಹಾಯ ಹಾಗೂ ಶುಲ್ಕ ವಿನಾಯಿತಿ ಸೌಲಭ್ಯಕ್ಕಾಗಿ” ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಅವಧಿಯನ್ನು ಫೆಬ್ರವರಿ, 15 ರವರೆಗೆ ವಿಸ್ತರಿಸಲಾಗಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ದೀಪಕ್ ಅವರು ತಿಳಿಸಿದ್ದಾರೆ. […]

ಕನ್ನಡ ದುನಿಯಾ 1 Feb 2026 6:41 pm

ಭಾರತೀಯರಿಗೆ ಜರ್ಮನಿಯಲ್ಲಿ ಉದ್ಯೋಗವಕಾಶ, ತಿಂಗಳಿಗೆ 3 ಲಕ್ಷ ರೂ. ಸಂಬಳ

ತೆಲಂಗಾಣ ಸರ್ಕಾರದ ವಿದೇಶಿ ಉದ್ಯೋಗ ಸಂಸ್ಥೆಯಾದ TOMCOM (Telangana Overseas Manpower Company) ಜರ್ಮನಿಯಲ್ಲಿ ‘ಟ್ರಾನ್ಸ್‌ಮಿಷನ್ ಲೈನ್ ಟೆಕ್ನಿಷಿಯನ್’ ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಹೊರಡಿಸಿದೆ. ಇದು ಸರ್ಕಾರಿ ಸಂಸ್ಥೆಯ ಮೂಲಕ ನಡೆಯುವ ಪ್ರಕ್ರಿಯೆಯಾದ್ದರಿಂದ ಸಂಪೂರ್ಣ ಪಾರದರ್ಶಕ ಮತ್ತು ಸುರಕ್ಷಿತವಾಗಿರುತ್ತದೆ. ಪ್ರಮುಖ ವಿವರಗಳು: ವಿಷಯ ವಿವರಗಳು ಹುದ್ದೆಯ ಹೆಸರು ಟ್ರಾನ್ಸ್‌ಮಿಷನ್ ಲೈನ್ ಟೆಕ್ನಿಷಿಯನ್ (Transmission Line Technician) ಮಾಸಿಕ ವೇತನ 2,910 ಯುರೋಗಳು (ಅಂದಾಜು ₹3,00,000) ಉಚಿತ ಸೌಲಭ್ಯ ಕಂಪನಿಯಿಂದ ಉಚಿತ ವಸತಿ (Free Accommodation) ನೀಡಲಾಗುವುದು. […]

ಕನ್ನಡ ದುನಿಯಾ 1 Feb 2026 6:34 pm

‘ಕ್ಯಾನ್ಸರ್’ರೋಗಿಗಳಿಗೆ ಬಿಗ್ ರಿಲೀಫ್ : 17 ಜೀವ ರಕ್ಷಕ ಔಷಧಗಳ ಬೆಲೆ ಭಾರಿ ಇಳಿಕೆ, ಚಿಕಿತ್ಸಾ ವೆಚ್ಚವೂ ಅಗ್ಗ.!

ಕೇಂದ್ರ ಬಜೆಟ್ 2026-27ರಲ್ಲಿ ಕೇಂದ್ರ ಸರ್ಕಾರವು ಕ್ಯಾನ್ಸರ್ ರೋಗಿಗಳಿಗೆ ದೊಡ್ಡ ಮಟ್ಟದ ಸಮಾಧಾನಕರ ಸುದ್ದಿ ನೀಡಿದೆ. ಕ್ಯಾನ್ಸರ್ ಚಿಕಿತ್ಸೆಯಲ್ಲಿ ಬಳಸುವ 17 ಪ್ರಮುಖಔಷಧಗಳ ಮೇಲಿನ ‘ಮೂಲ ಕಸ್ಟಮ್ಸ್ ಸುಂಕವನ್ನು’ (Basic Customs Duty) ಸಂಪೂರ್ಣವಾಗಿ ರದ್ದುಗೊಳಿಸುವುದಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ. ಇದರಿಂದಾಗಿ ಈ ಔಷಧಗಳ ಬೆಲೆ ಕಡಿಮೆಯಾಗಿ, ಚಿಕಿತ್ಸೆಯ ವೆಚ್ಚ ತಗ್ಗಲಿದೆ. ಭಾರತದಲ್ಲಿ ಹೆಚ್ಚಿನ ಕ್ಯಾನ್ಸರ್ ಚಿಕಿತ್ಸೆಗಳು ಆಮದು ಮಾಡಿಕೊಳ್ಳುವ ಔಷಧಗಳ ಮೇಲೆ ಅವಲಂಬಿತವಾಗಿವೆ. ಈ ಔಷಧಗಳ ಮೇಲೆ ಇದುವರೆಗೆ ಕಸ್ಟಮ್ಸ್ ಸುಂಕ ಇದ್ದುದರಿಂದ […]

ಕನ್ನಡ ದುನಿಯಾ 1 Feb 2026 6:11 pm

ಮಳೆಗಾಲದ ಸಾಯಂಕಾಲಕ್ಕೆ ಬೆಸ್ಟ್ ಕಾಂಬಿನೇಷನ್: ಎಣ್ಣೆ ಇಲ್ಲದೆ ತಯಾರಿಸಿ ರುಚಿಕರವಾದ ಸಾಂಪ್ರದಾಯಿಕ ‘ಮಾರ್ವಾಡಿ ಸ್ನಾಕ್ಸ್’

ಮಳೆಗಾಲದ ತಂಪಾದ ಸಂಜೆಗಳಲ್ಲಿ ಬಿಸಿಬಿಸಿಯಾದ ಮತ್ತು ಕುರುಕಲು ತಿಂಡಿ ತಿನ್ನಬೇಕೆಂಬ ಹಂಬಲ ಎಲ್ಲರಿಗೂ ಇರುತ್ತದೆ. ಅದರಲ್ಲೂ ಆರೋಗ್ಯಕ್ಕೆ ಹಾನಿಕರವಲ್ಲದ, ಎಣ್ಣೆ ರಹಿತ ಸಾಂಪ್ರದಾಯಿಕ ತಿಂಡಿ ಸಿಕ್ಕರೆ ಅದರ ಮಜವೇ ಬೇರೆ. ರಾಜಸ್ಥಾನಿ ಅಡುಗೆಮನೆಯ ಸೊಗಡನ್ನು ಹೊಂದಿರುವ, ಅತ್ಯಂತ ಕಡಿಮೆ ಎಣ್ಣೆ ಬಳಸಿ ತಯಾರಿಸುವ ವಿಶೇಷ ಮಾರ್ವಾಡಿ ಸ್ನಾಕ್ಸ್ ರೆಸಿಪಿ ಇಲ್ಲಿದೆ. ಬೇಕಾಗುವ ಪದಾರ್ಥಗಳು: ಈ ತಿಂಡಿ ತಯಾರಿಸಲು ಒಂದು ಕಪ್ ಕಡಲೆಹಿಟ್ಟು, ಕಾಲು ಕಪ್ ಕಡಲೆಹಿಟ್ಟಿನ ಹೊಟ್ಟು (Besan Bran), ಕಾಲು ಕಪ್ ಜೋಳದ ಹಿಟ್ಟು ಹಾಗೂ […]

ಕನ್ನಡ ದುನಿಯಾ 1 Feb 2026 6:00 pm

ದೇಶದ ಬೆಳವಣಿಗೆಗೆ ಅಡಿಪಾಯ ಹಾಕಿದ ಐತಿಹಾಸಿಕ ಬಜೆಟ್: ಮಹಿಳಾ ಸಬಲೀಕರಣಕ್ಕೆ ಆದ್ಯತೆ: ವಿತ್ತ ಸಚಿವೆಯನ್ನು ಶ್ಲಾಘಿಸಿದ ಪ್ರಧಾನಿ ಮೋದಿ

ನವದೆಹಲಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ 2026-27ನೇ ಸಾಲಿನ ಕೇಂದ್ರ ಬಜೆಟ್ ಮಹಿಳಾ ಸಬಲೀಕರಣವನ್ನು ಬಿಂಬಿಸುವ ಐತಿಹಾಸಿಕ ಬಜೆಟ್ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ. ಕೇಂದ್ರ ಬಜೆಟ್ ಮಂಡನೆ ಬಳಿಕ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಇದೊಂದು ಐತಿಹಾಸಿಕ ಬಜೆಟ್. ದೇಶದ ಭವಿಷ್ಯದ ಬೆಳವಣಿಗೆಗೆ ಬಲವಾದ ಅಡಿಪಾಯವನ್ನು ಹಾಕುವ ಉತ್ತಮ ಬಜೆಟ್ ಎಂದು ಹೇಳಿದರು. ಸತತ 9ನೇ ಬಾರಿ ಕೇಂದ್ರ ಬಜೆಟ್ ಮಂಡಿಸಿದ್ದಕ್ಕಾಗಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೊಸ ದಾಖಲೆ ನಿರ್ಮಿಸಿದ್ದಾರೆ. ಈ […]

ಕನ್ನಡ ದುನಿಯಾ 1 Feb 2026 5:54 pm

BREAKING : ಬಾಲಿವುಡ್ ನಿರ್ದೇಶಕ ರೋಹಿತ್ ಶೆಟ್ಟಿ ಮನೆ ಮೇಲೆ ಗುಂಡಿನ ದಾಳಿ ಕೇಸ್ : ನಾಲ್ವರು ಆರೋಪಿಗಳು ಅರೆಸ್ಟ್.!

“ಬಾಲಿವುಡ್ ಆಕ್ಷನ್ ಡೈರೆಕ್ಟರ್ ರೋಹಿತ್ ಶೆಟ್ಟಿ ಅವರ ಮನೆಯ ಮುಂದೆ ರಿಯಲ್ ಆಕ್ಷನ್ ನಡೆದಿದೆ. ಭಾನುವಾರ ನಸುಕಿನ ಜಾವ ಜುಹುವಿನಲ್ಲಿರುವ ಅವರ ಮನೆಯ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದು, ಚಿತ್ರರಂಗದಲ್ಲಿ ಆತಂಕ ಮೂಡಿಸಿದೆ. ಹೌದು.ಬಾಲಿವುಡ್ ನಿರ್ದೇಶಕ ರೋಹಿತ್ ಶೆಟ್ಟಿ ಮನೆ ಮೇಲೆ ನಡೆದ ಗುಂಡಿನ ದಾಳಿಗೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರು ಮಿಂಚಿನ ವೇಗದಲ್ಲಿ ಕಾರ್ಯಪ್ರವೃತ್ತರಾಗಿ ಪುಣೆಯಲ್ಲಿ ನಾಲ್ವರನ್ನು ಹೆಡೆಮುರಿ ಕಟ್ಟಿದ್ದಾರೆ. ರೋಹಿತ್ ಶೆಟ್ಟಿ ಅವರ ಮುಂಬೈನ ಜುಹು ನಿವಾಸದ (‘ಶೆಟ್ಟಿ ಟವರ್’) […]

ಕನ್ನಡ ದುನಿಯಾ 1 Feb 2026 5:45 pm

Union Budget 2026 : ಪಾದರಕ್ಷೆ ಅಗ್ಗ, ಮದ್ಯ ದುಬಾರಿ… ಸಾಮಾನ್ಯ ಜನರಿಗೆ ಎಲ್ಲೆಲ್ಲಿ ರಿಲೀಫ್ ? ಎಲ್ಲೆಲ್ಲಿ ಶಾಕ್?

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭಾನುವಾರ ಸತತ 9ನೇ ಬಾರಿಗೆ ಬಜೆಟ್ ಮಂಡಿಸಿದ್ದು, ಹಲವು ಪ್ರಮುಖ ಘೋಷಣೆಗಳನ್ನು ಮಾಡಿದ್ದಾರೆ. ಸಾಮಾನ್ಯ ಜನರಿಗೆ ಈ ಬಜೆಟ್ನಲ್ಲಿ ಸಿಕ್ಕಿರುವ ಅತಿ ದೊಡ್ಡ ಸಮಾಧಾನಕರ ಸುದ್ದಿಯೆಂದರೆ ಚರ್ಮದ ಪಾದರಕ್ಷೆಗಳು ಮತ್ತು ಬಟ್ಟೆಗಳ ರಫ್ತು ಅಗ್ಗವಾಗಿದೆ. ಇದಲ್ಲದೆ ಮೈಕ್ರೋವೇವ್, ಸೌರಶಕ್ತಿಗೆ ಸಂಬಂಧಿಸಿದ ವಸ್ತುಗಳು ಮತ್ತು ಕ್ಯಾನ್ಸರ್ ಔಷಧಗಳ ಬೆಲೆ ಇಳಿಕೆಯಾಗಿದೆ. ಮತ್ತೊಂದೆಡೆ, ಏಪ್ರಿಲ್ 1, 2026 ರಿಂದ ಹೊಸ ಆದಾಯ ತೆರಿಗೆ ಕಾಯ್ದೆ ಜಾರಿಗೆ ಬರಲಿದ್ದು, ಮದ್ಯದ ಬೆಲೆ ಏರಿಕೆಯಾಗಲಿದೆ.ತೆರಿಗೆಗೆ […]

ಕನ್ನಡ ದುನಿಯಾ 1 Feb 2026 5:33 pm

BREAKING : ಕೇಂದ್ರ ಬಜೆಟ್ ನಿರಾಶಾದಾಯಕವಾಗಿದೆ : CM ಸಿದ್ದರಾಮಯ್ಯ ಪ್ರತಿಕ್ರಿಯೆ.!

ಕಲಬುರಗಿ : ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಮಂಡಿಸಿದ ಕೇಂದ್ರ ಬಜೆಟ್ 2026-27 ರ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಕೇಂದ್ರ ಸರ್ಕಾರದ ಬಜೆಟ್ ನಿರಾಶಾದಾಯಕವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ಕಲಬುರಗಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಕೇಂದ್ರ ಸರ್ಕಾರದ ಬಜೆಟ್ ನಿರಾಶಾದಾಯಕವಾಗಿದೆ , ಯಾವುದೇ ದೂರದೃಷ್ಟಿಯಿಲ್ಲದ ಬಜೆಟ್. ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರವು ಕರ್ನಾಟಕಕ್ಕೆ ಮತ್ತೊಮ್ಮೆ ಅನ್ಯಾಯ ಮಾಡಿದೆ ಎಂದು ಆರೋಪಿಸಿದ್ದಾರೆ. ದಕ್ಷಿಣ […]

ಕನ್ನಡ ದುನಿಯಾ 1 Feb 2026 5:15 pm

UNION BUDJET 2026 : ನಿರ್ಮಲಾ ಸೀತಾರಾಮನ್ ಭಾಷಣದಲ್ಲಿ ಬಿಜೆಪಿ ಆಡಳಿತದ 8 ರಾಜ್ಯಗಳ ಉಲ್ಲೇಖವೇ ಇಲ್ಲ !

ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಬಜೆಟ್ ಮಂಡಿಸಿದ್ದಾರೆ. ಭಾಷಣ ಮಾಡುವಾಗ ಕೇರಳ, ತಮಿಳುನಾಡನ್ನು 2 ಬಾರಿ ಉಲ್ಲೇಖಿಸಿ ಬಿಜೆಪಿ ಆಡಳಿತದ 8 ರಾಜ್ಯಗಳ ಉಲ್ಲೇಖಿಸದೇ ಇರುವುದು ಭಾರಿ ಚರ್ಚೆಗೆ ಕಾರಣವಾಗಿದೆ. ಶೀಘ್ರದಲ್ಲೇ ಚುನಾವಣೆ ಎದುರಿಸಲಿರುವ ಕೇರಳ ಮತ್ತು ತಮಿಳುನಾಡು ರಾಜ್ಯಗಳನ್ನು ಸಚಿವರು ತಮ್ಮ ಭಾಷಣದಲ್ಲಿ ಕೇವಲ ಎರಡು ಬಾರಿ ಮಾತ್ರ ಪ್ರಸ್ತಾಪಿಸಿದ್ದಾರೆ. ‘ರೇರ್ ಅರ್ಥ್ ಕಾರಿಡಾರ್’ (Rare Earth Corridor) ಸ್ಥಾಪನೆಗೆ ಸಂಬಂಧಿಸಿದಂತೆ ಈ ರಾಜ್ಯಗಳ ಹೆಸರು ಉಲ್ಲೇಖವಾಗಿದೆ. ಆಶ್ಚರ್ಯಕರ ಸಂಗತಿಯೆಂದರೆ, ಬಿಜೆಪಿ ಅಧಿಕಾರದಲ್ಲಿರುವ ಗುಜರಾತ್, […]

ಕನ್ನಡ ದುನಿಯಾ 1 Feb 2026 5:07 pm

BREAKING: ಮೂವರು ಮಕ್ಕಳನ್ನು ಹತ್ಯೆಗೈದು ಆತ್ಮಹತ್ಯೆಗೆ ಯತ್ನಿಸಿದ ತಾಯಿ

ಬಾಗಲಕೋಟೆ: ಮೂವರು ಮಕ್ಕಳನ್ನು ಹತ್ಯೆಗೈದು ತಾಯಿ ಆತ್ಮಹತ್ಯೆಗೆ ಯತ್ನಿಸಿರುವ ಹೃದಯವಿದ್ರಾವಕ ಘಟನೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಹಿರೇಮುಚ್ಚಳಗುಡ್ಡ ಗ್ರಾಮದಲ್ಲಿ ನಡೆದಿದೆ. ಕೌಟುಂಬಿಕ ಕಲಹಕ್ಕೆ ಬೇಸತ್ತ ತಾಯಿ ತನ್ನ ಮೂವರು ಮಕ್ಕಳನ್ನು ಕೊಲೆಗೈದು ಬಳಿಕ ತಾನೂ ಡಿಸೆಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಸಮೃದ್ಧಿ, ಪ್ರೀತಮ್ ಹಾಗೂ ಸುಕ್ಷಿತ್ ತಾಯಿಯಿಂದಲೇ ಕೊಲೆಯಾದ ಮಕ್ಕಳು. ಮಕ್ಕಳನ್ನು ಹತ್ಯೆಗೈದ ಬಳಿಕ ತಾಯಿ ರೂಪಾ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಡಿಸೆಲ್ ಸೇವಿಸಿ ತೀವ್ರವಾಗಿ ಅಸ್ವಸ್ಥಗೊಂಡಿದ್ದ ರೂಪಾಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ […]

ಕನ್ನಡ ದುನಿಯಾ 1 Feb 2026 5:00 pm

ಮನೆಯಲ್ಲೇ ತಯಾರಿಸಿ ಹೋಟೆಲ್ ಶೈಲಿಯ ಚಿಕನ್ ಎಗ್ ಬುರ್ಜಿ ಸ್ಯಾಂಡ್‌ವಿಚ್: ಪ್ರೋಟೀನ್ ಯುಕ್ತ ಬ್ರೇಕ್‌ಫಾಸ್ಟ್ ರೆಸಿಪಿ ಇಲ್ಲಿದೆ

ಪ್ರೋಟೀನ್ ಮತ್ತು ತರಕಾರಿಗಳ ಪೋಷಕಾಂಶಗಳನ್ನು ಹೊಂದಿರುವ ಮಸಾಲಾ ಚಿಕನ್ ಎಗ್ ಬುರ್ಜಿ ಸ್ಯಾಂಡ್‌ವಿಚ್, ಬೆಳಗಿನ ಉಪಾಹಾರ ಅಥವಾ ಸಂಜೆಯ ಹಸಿವಿಗೆ ಅತ್ಯುತ್ತಮ ಆಯ್ಕೆ. ಸುಲಭವಾಗಿ ಹಾಗೂ ರುಚಿಕರವಾಗಿ ಇದನ್ನು ತಯಾರಿಸುವ ವಿಧಾನ ಇಲ್ಲಿದೆ. ಬೇಕಾಗುವ ಪದಾರ್ಥಗಳು: ಈ ಸ್ಯಾಂಡ್‌ವಿಚ್ ತಯಾರಿಸಲು 200 ಗ್ರಾಂ ಚಿಕನ್, 4 ಮೊಟ್ಟೆ, 6 ಬ್ರೆಡ್ ಸ್ಲೈಸ್, 1 ದೊಡ್ಡ ಈರುಳ್ಳಿ, 1 ಟೊಮೆಟೊ ಮತ್ತು 2 ಹಸಿಮೆಣಸಿನಕಾಯಿ ಬೇಕಾಗುತ್ತದೆ. ಮಸಾಲೆಗಾಗಿ ತಲಾ 2 ಚಮಚ ಅರಿಶಿನ, ಜೀರಿಗೆ ಪುಡಿ, ಕೊತ್ತಂಬರಿ ಪುಡಿ […]

ಕನ್ನಡ ದುನಿಯಾ 1 Feb 2026 5:00 pm

SHOCKING: ‘ರನ್ ಫಾರ್ ದಿ ಹಾರ್ಟ್’ ಮ್ಯಾರಥಾನ್ ವೇಳೆ ಹೃದಯಾಘಾತದಿಂದ 25 ವರ್ಷದ ಯುವಕ ಸಾವು

ಇಂದೋರ್: ಮಧ್ಯಪ್ರದೇಶದ ಇಂದೋರ್ ನಗರದಲ್ಲಿ ಭಾನುವಾರ ಮ್ಯಾರಥಾನ್‌ ನಲ್ಲಿ ಭಾಗವಹಿಸಿದ್ದ 25 ವರ್ಷದ ಯುವಕನೊಬ್ಬ ಶಂಕಿತ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಹರಿಯಾಣದ ಫರಿದಾಬಾದ್ ಮೂಲದ ಆರ್ಯನ್ ಟೋಡಿ ಇಂದೋರ್ ಮ್ಯಾರಥಾನ್‌ನಲ್ಲಿ 21 ಕಿ.ಮೀ ಓಟದಲ್ಲಿ ಭಾಗವಹಿಸುತ್ತಿದ್ದಾಗ ಅಂತಿಮ ಗೆರೆಯ ಬಳಿ ಕುಸಿದು ಬಿದ್ದರು ಎಂದು ಸನ್ಯೋಗಿತಗಂಜ್ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ ಕೆ.ಪಿ. ಯಾದವ್ ತಿಳಿಸಿದ್ದಾರೆ. ಸ್ಥಳದಲ್ಲಿದ್ದ ಹೃದ್ರೋಗ ತಜ್ಞ ಡಾ. ಭರತ್ ರಾವತ್ ಅವರಿಗೆ ಚಿಕಿತ್ಸೆ ನೀಡಿ ಹೃದಯ ಪುನರುಜ್ಜೀವನಗೊಳಿಸಿದರು ಎಂದು […]

ಕನ್ನಡ ದುನಿಯಾ 1 Feb 2026 4:48 pm

ಕೇಂದ್ರ ಬಜೆಟ್ ನಿಂದ ರಾಜ್ಯಕ್ಕೆ ಯಾವುದೇ ಅನುಕೂಲವಾಗಿಲ್ಲ: ಕೇಂದ್ರದಲ್ಲಿರುವ ರಾಜ್ಯದ ಸಚಿವರು, ಸಂಸದರು ರಾಜೀನಾಮೆ ಕೊಡುವುದು ಸೂಕ್ತ: ಡಿಸಿಎಂ ಡಿ.ಕೆ.ಶಿವಕುಮಾರ್ ಕಿಡಿ

ರಾಮನಗರ: ಕೇಂದ್ರ ಬಜೆಟ್ ಬಗ್ಗೆ ಪ್ರತಿಕ್ರಿಯಿಸಿರುವ ಡಿಸಿಎಂ ಡಿ.ಕೆ.ಶಿವಕುಮಾರ್, ರಾಜ್ಯಕ್ಕೆ ಇಷ್ಟು ಅನ್ಯಾಯ ಮಾಡ್ತಾರೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ರಾಜ್ಯ ಬಿಜೆಪಿ ನಾಯಕರು ಇದಕ್ಕೆ ಏನು ಉತ್ತರ ಕೊಡ್ತಾರೆ? ಎಂದು ಪ್ರಶಿಸಿದ್ದಾರೆ. ಬೆಂಗಳೂರು ದಕ್ಷಿಣ ಜಿಲ್ಲೆಯ ಕನಕಪುರದಲ್ಲಿ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ಕೇಂದ್ರ ಬಜೆಟ್ ನಿಂದ ರಾಜ್ಯಕ್ಕೆ ಯಾವುದೇ ಅನುಕೂಲವಾಗಿಲ್ಲ. ಮನರೇಗಾ ಯೋಜನೆ ಮರು ಜಾರಿ ಮಾಡಲಿ ಎಂಬುದು ನಮ್ಮ ಆಗ್ರಹ ಎಂದರು. ಚುನಾವಣೆ ನಡೆಯುವ ರಾಜ್ಯಗಳಿಗೆ ಅನುಕೂಲವಾಗುವ ಬಜೆಟ್ ಇದು. ಕೇಂದ್ರದ ಬಜೆಟ್ ಚುನಾವಣಾ ಬಜೆಟ್ […]

ಕನ್ನಡ ದುನಿಯಾ 1 Feb 2026 4:44 pm

ನಾಳೆಯೆ ನಟ ವಿಜಯ್ ದೇವರಕೊಂಡ- ರಶ್ಮಿಕಾ ಮಂದಣ್ಣ ಮದುವೆ : ವೀಡಿಯೋ ವೈರಲ್ |WATCH VIDEO

ಟಾಲಿವುಡ್’ನ ಜನಪ್ರಿಯ ಜೋಡಿಗಳಾದ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ಮದುವೆಯ ಕುರಿತಾದ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ. ಹೌದು, ರಾಜಸ್ಥಾನದ ಉದಯಪುರದಲ್ಲಿರುವ ಸಿಟಿ ಪ್ಯಾಲೇಸ್ನಲ್ಲಿ ಭರ್ಜರಿ ಅಲಂಕಾರಗಳು ನಡೆಯುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಅಲ್ಲಿಗೆ ಭೇಟಿ ನೀಡಿದ್ದ ವ್ಲಾಗರ್ಗಳ ಪ್ರಕಾರ, ಈ ಎಲ್ಲಾ ಸಿದ್ಧತೆಗಳು ರಶ್ಮಿಕಾ ಮತ್ತು ವಿಜಯ್ ಅವರ ಮದುವೆಗಾಗಿ ನಡೆಯುತ್ತಿವೆ ಎನ್ನಲಾಗಿದೆ.ಈ ಜೋಡಿ ನಾಳೆ, ಅಂದರೆ ಫೆಬ್ರವರಿ 2, 2026 ರಂದು ವಿವಾಹವಾಗಲಿದ್ದಾರೆ ಎಂದು ಕೆಲವು ಮೂಲಗಳು ಹೇಳುತ್ತಿದ್ದರೆ, […]

ಕನ್ನಡ ದುನಿಯಾ 1 Feb 2026 4:43 pm

BIG NEWS: ಉತ್ಪಾದಕತೆ, ಉದ್ಯೋಗ ಸೃಷ್ಟಿ, ಆರ್ಥಿಕತೆಗೆ ಒತ್ತು: 9ನೇ ಬಜೆಟ್ ಮಂಡಿಸಿದ ನಿರ್ಮಲಾ ಸೀತಾರಾಮನ್

ನವದೆಹಲಿ: ‘ಸಾಮಾನ್ಯ ಜನರಿಗೆ ಅನುಕೂಲವಾಗುವಂತೆ ತಂತ್ರಜ್ಞಾನವನ್ನು ತರಲು ಕ್ರಮ ವಹಿಸಲಾಗಿದೆ ‘ ಎಂದು ಬಜೆಟ್ ಕುರಿತು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಭಾನುವಾರ ಬಜೆಟ್ ನಂತರದ ತಮ್ಮ ವಾಡಿಕೆಯಂತೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬೆಳವಣಿಗೆಯ ಆವೇಗವನ್ನು ಕಾಯ್ದುಕೊಳ್ಳಲು ಸರ್ಕಾರವು ಆರ್ಥಿಕತೆಗೆ ಒತ್ತು ನೀಡುತ್ತಿದೆ. ಪ್ರಾಥಮಿಕವಾಗಿ, ರಚನಾತ್ಮಕ ಸುಧಾರಣೆಗಳೊಂದಿಗೆ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವುದನ್ನು ನಾವು ನೋಡುತ್ತಿದ್ದೇವೆ, ಅದು ಮುಂದುವರಿಯುತ್ತದೆ. ಸುಧಾರಣೆಗಳನ್ನು ಕೈಗೊಳ್ಳಲಾಗಿದೆ. ನಾವು ಸುಧಾರಣಾ ಚಟುವಟಿಕೆಗಳನ್ನು ಮುಂದುವರಿಸುತ್ತಿದ್ದೇವೆ. ಉತ್ಪಾದಕತೆಯನ್ನು ಸುಧಾರಿಸಲು ಮತ್ತು ಉದ್ಯೋಗ ಸೃಷ್ಟಿಯಾಗುವುದನ್ನು ಖಚಿತಪಡಿಸಿಕೊಳ್ಳಲು ನಾವು […]

ಕನ್ನಡ ದುನಿಯಾ 1 Feb 2026 4:42 pm

ಕೇಂದ್ರ ಬಜೆಟ್ 2026; ಪದವಿ, ವೃತ್ತಿ ಜೀವನ ಹೊಸ ಬದಲಾವಣೆ ಸೂಚನೆ

ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ 2026-27ನೇ ಸಾಲಿನ ಬಜೆಟ್‌ ಮಂಡಿಸಿದರು. ಬಜೆಟ್‌ ಭಾಷಣದಲ್ಲಿ ಉದ್ಯೋಗ, ಶಿಕ್ಷಣ, ಕೌಶಲ್ಯ ಅಭಿವೃದ್ಧಿ ಬಗ್ಗೆ ಹಲವು ವಿಚಾರಗಳನ್ನು ಪ್ರಸ್ತಾಪಿಸಲಾಗಿದೆ. ಭಾರತ ಕೇವಲ ಪದವೀಧರರನ್ನು ಉತ್ಪಾದನೆ ಮಾಡುವುದಿಲ್ಲ ವಿವಿಧ ವಲಯಗಳಿಗೆ ಅಗತ್ಯವಿರುವ ಕೌಶಲ್ಯವಗಳನ್ನು ಹೊಂದಿರುವ ಅಭ್ಯರ್ಥಿಗಳನ್ನು ತಯಾರು ಮಾಡಲಾಗುತ್ತದೆ ಎಂಬ ಸಂದೇಶವನ್ನು ಬಜೆಟ್ ಮೂಲಕ ನೀಡಲಾಗಿದೆ. ಭಾರತೀಯ ವಿದ್ಯಾರ್ಥಿಗಳು ಪದವಿಗಳನ್ನು ಗಳಿಸುವತ್ತ ಗಮನ ಹರಿಸಿದ್ದಾರೆ. ಆದರೆ ಅದು ಉದ್ಯೋಗವನ್ನು ಪಡೆಯುವ ಕೌಶಲ್ಯವನ್ನು ಕಲಿಸುತ್ತಿಲ್ಲ. ಆದ್ದರಿಂದ ಬಜೆಟ್ 2026 […]

ಕನ್ನಡ ದುನಿಯಾ 1 Feb 2026 4:33 pm

ಬ್ಲಾಕ್ ಡ್ರೆಸ್‌ನಲ್ಲಿ ರಕುಲ್ ಪ್ರೀತ್ ಸಿಂಗ್ ಮಿಂಚಿಂಗ್: ಬೋಲ್ಡ್ ಫೋಟೋಶೂಟ್ ಮೂಲಕ ಪಡ್ಡೆಹುಡುಗರ ನಿದ್ದೆ ಗೆಡಿಸಿದ ಬಾಲಿವುಡ್ ಬೆಡಗಿ

ದಕ್ಷಿಣ ಭಾರತ ಮತ್ತು ಬಾಲಿವುಡ್ ಚಿತ್ರರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ನಟಿ ರಕುಲ್ ಪ್ರೀತ್ ಸಿಂಗ್, ಸದ್ಯ ತಮ್ಮ ಗ್ಲಾಮರಸ್ ಫೋಟೋಶೂಟ್ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿದ್ದಾರೆ. ತಮಿಳು, ತೆಲುಗು ಮತ್ತು ಹಿಂದಿ ಚಿತ್ರಗಳಲ್ಲಿ ಸಕ್ರಿಯರಾಗಿರುವ ರಕುಲ್, ವೈವಿಧ್ಯಮಯ ಪಾತ್ರಗಳ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದಾರೆ. 2014ರಲ್ಲಿ ‘ಯಾರಿಯಾನ್’ ಚಿತ್ರದ ಮೂಲಕ ಬಾಲಿವುಡ್ ಪ್ರವೇಶಿಸಿದ ರಕುಲ್, ನಂತರ ‘ದೇ ದೇ ಪ್ಯಾರ್ ದೇ’, ‘ರನ್‌ವೇ 34’ ಮತ್ತು ‘ಡಾಕ್ಟರ್ ಜಿ’ ಅಂತಹ ಸಿನಿಮಾಗಳ ಮೂಲಕ […]

ಕನ್ನಡ ದುನಿಯಾ 1 Feb 2026 4:30 pm

LPG ಯಿಂದ FASTag ವರೆಗೆ : ಇಂದಿನಿಂದ ಬದಲಾಗಲಿದೆ ಈ ನಿಯಮಗಳು |New Rules from feb.1

ಪ್ರತಿ ತಿಂಗಳು ಬಂದಂತೆಲ್ಲಾ ಹೊಸ ಹೊಸ ಬದಲಾವಣೆಗಳು ಸಂಭವಿಸುತ್ತವೆ. ವಿವಿಧ ವಿಷಯಗಳಲ್ಲಿ ನೀತಿ ನಿಯಮಗಳು ಬದಲಾಗುತ್ತಿರುತ್ತವೆ. ಅದೇ ರೀತಿ, ಈ ಫೆಬ್ರವರಿ ತಿಂಗಳಿನಲ್ಲಿಯೂ ಕೆಲವು ಬದಲಾವಣೆಗಳು ಉಂಟಾಗಿವೆ. ಎಲ್ಪಿಜಿ (LPG) ಇಂದ ಹಿಡಿದು ಫಾಸ್ಟ್ಯಾಗ್ (FASTag) ವರೆಗೆ ಹಲವು ವಿಷಯಗಳಲ್ಲಿ ದೊಡ್ಡ ಬದಲಾವಣೆಗಳಾಗಿವೆ. ಅವುಗಳೇನು ಎಂಬುದನ್ನು ತಿಳಿದುಕೊಳ್ಳೋಣ..ಪ್ರತಿ ತಿಂಗಳಂತೆ ಈ ತಿಂಗಳೂ ಕೂಡ ಸರ್ಕಾರವು ಹಲವು ಬದಲಾವಣೆಗಳನ್ನು ತಂದಿದೆ. ಫೆಬ್ರವರಿ 1ರ ಮುಂಜಾನೆಯೇ ಬೆಲೆ ಏರಿಕೆ, ಬ್ಯಾಂಕಿಂಗ್ ನಿಯಮಗಳಲ್ಲಿ ಬದಲಾವಣೆ ಮತ್ತು ಫಾಸ್ಟ್ಯಾಗ್ (FASTag) ಪ್ರಕ್ರಿಯೆಯಲ್ಲಿ ಸಡಿಲಿಕೆ […]

ಕನ್ನಡ ದುನಿಯಾ 1 Feb 2026 4:27 pm

BIG NEWS: ಕೇಂದ್ರ ಬಜೆಟ್ ನಲ್ಲಿ ರಕ್ಷಣಾ ವಲಯಕ್ಕೆ 7.8 ಲಕ್ಷ ಕೋಟಿ ರೂ. ಹಂಚಿಕೆ | Union Budget 2026

ನವದೆಹಲಿ: 2026-27ನೇ ಸಾಲಿಗೆ ರಕ್ಷಣಾ ಸಚಿವಾಲಯಕ್ಕೆ ಕೇಂದ್ರವು 7.8 ಲಕ್ಷ ಕೋಟಿ ರೂ.ಗಳ ಬಜೆಟ್ ಅನ್ನು ನಿಗದಿಪಡಿಸಿದೆ. ಬಂಡವಾಳ ವೆಚ್ಚ ಬಜೆಟ್ ಅಡಿಯಲ್ಲಿ ರಕ್ಷಣಾ ಪಡೆಗಳು ಆಧುನೀಕರಣಕ್ಕಾಗಿ 2.19 ಲಕ್ಷ ಕೋಟಿ ರೂ.ಗಳನ್ನು ಪಡೆಯಲಿವೆ. ಒಟ್ಟಾರೆಯಾಗಿ, ರಕ್ಷಣಾ ಸಚಿವಾಲಯವು ತನ್ನ ಬಜೆಟ್ ಹಂಚಿಕೆಯಲ್ಲಿ ಶೇ. 15 ರಷ್ಟು ಹೆಚ್ಚಳವನ್ನು ಕಾಣಲಿದೆ. 2026-27ನೇ ಹಣಕಾಸು ವರ್ಷದಲ್ಲಿ, ಬಂಡವಾಳ ವೆಚ್ಚದಲ್ಲಿ ಶೇ. 21.84 ರಷ್ಟು ಹೆಚ್ಚಳವಾಗಿದ್ದು, 25-25ನೇ ಹಣಕಾಸು ವರ್ಷದಲ್ಲಿ ರೂ. 1.80 ಲಕ್ಷ ಕೋಟಿ ರೂ.ಗಳಿಂದ 2.19 ಲಕ್ಷ […]

ಕನ್ನಡ ದುನಿಯಾ 1 Feb 2026 4:16 pm

ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ಪದೇ ಪದೇ ಅನ್ಯಾಯ: ಬಜೆಟ್ ನಿಲ್ಲಿಯೂ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ನಿರ್ಲಕ್ಷ್ಯ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಆಕ್ರೋಶ

ಕೊಪ್ಪಳ : ಕೇಂದ್ರ ಬಜೆಟ್ ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಕಿಡಿಕಾರಿದ್ದಾರೆ. ಕರ್ನಾಟಕಕ್ಕೆ ಕೇಂದ್ರದಿಂದ ಪದೆ ಪದೇ ಅನ್ಯಾಯವಾಗುತ್ತಿದೆ. ಈ ಬಾರಿಯ ಬಜೆಟ್‌ನಲ್ಲೂ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ರಾಜ್ಯವನ್ನು ಸಂಪೂರ್ಣ ನಿರ್ಲಕ್ಷಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೊಪ್ಪಳದಲ್ಲಿ ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದರೂ ಕರ್ನಾಟಕಕ್ಕೆ ಬರಬೇಕಿದ್ದ ಅನುದಾನವನ್ನು ಬಿಡುಗಡೆ ಮಾಡುತ್ತಿಲ್ಲ. ರಾಜ್ಯದ ಜನತೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಅತಿಹೆಚ್ಚು ಬಿಜೆಪಿ ಸದಸ್ಯರನ್ನು ಆಯ್ಕೆ […]

ಕನ್ನಡ ದುನಿಯಾ 1 Feb 2026 4:14 pm

ಸಚಿವ ಜಮೀರ್ ಪುತ್ರ ಜೈದ್ ಖಾನ್ ಅಭಿನಯದ ‘ಕಲ್ಟ್’ ಸಿನಿಮಾ ವೀಕ್ಷಿಸಿದ CM ಸಿದ್ದರಾಮಯ್ಯ.!

ಬೆಂಗಳೂರು : ಸಚಿವ ಜಮೀರ್ ಅಹ್ಮದ್ ಖಾನ್ ಅವರ ಪುತ್ರ ಜೈದ್ ಖಾನ್ (Zaid Khan) ನಟಿಸಿರುವ ‘ಕಲ್ಟ್’ (Cult) ಚಿತ್ರ ರಾಜ್ಯಾದ್ಯಂತ ತೆರೆಗೆ ಬಂದಿದ್ದು, ಸಿನಿ ಪ್ರಿಯರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದೀಗ ಸಿಎಂ ಸಿದ್ದರಾಮಯ್ಯ ‘ಕಲ್ಟ್’ ಸಿನಿಮಾ ವೀಕ್ಷಿಸಿದ್ದಾರೆ. ಬೆಂಗಳೂರಿನ ಒರಾಯನ್ ಮಾಲ್ನಲ್ಲಿ ಮುಖ್ಯಮಂತ್ರಿಗಳಿಗಾಗಿ ಚಿತ್ರದ ವಿಶೇಷ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಸಚಿವ ಜಮೀರ್ ಅಹ್ಮದ್ ಖಾನ್ ಮತ್ತು ಚಿತ್ರತಂಡದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಈ ಕುರಿತು ಟ್ವೀಟ್ ಮಾಡಿದ ಸಿಎಂ ಸಿದ್ದರಾಮಯ್ಯ ‘ ಸಂಪುಟ […]

ಕನ್ನಡ ದುನಿಯಾ 1 Feb 2026 4:11 pm

BREAKING: ಶಿವಮೊಗ್ಗದಲ್ಲಿ ಮಂಗನ ಕಾಯಿಲೆಗೆ ಮತ್ತೋರ್ವ ಬಲಿ: ಸಚಿವ ದಿನೇಶ್ ಗುಂಡೂರಾವ್ ಮಾಹಿತಿ

ಶಿವಮೊಗ್ಗ: ಮಲೆನಾಡು ಭಾಗದಲ್ಲಿ ಮಂಗನ ಕಾಯಿಲೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಶಿವಮೊಗ್ಗದಲ್ಲಿ ಮಂಗನ ಕಾಯಿಲೆಗೆ ಮತ್ತೋರ್ವ ವ್ಯಕ್ತಿ ಬಲಿಯಾಅಗಿರುವ ಘಟನ್ಎ ನಡೆದಿದೆ. ಈ ಬಗ್ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾಹಿತಿ ನೀಡಿದ್ದಾರೆ. ಶಿವಮೊಗ್ಗದಲ್ಲಿ ಮಂಗನ ಕಾಯಿಲೆಗೆ ಮತ್ತೊಬ್ಬರು ಮೃತಪಟ್ಟಿದ್ದಾರೆ. ಸಾವು-ನೋವು ಸಂಭವಿಸದಂತೆ ಆರೋಗ್ಯ ಇಲಾಖೆಯಿಂದ ಎಲ್ಲಾ ರೀತಿಯ ಮುನ್ನೆಚ್ಚರಿಕಾ ಕ್ರಮ ವಹಿಸಲಾಗಿತ್ತು. ಆದಾಗ್ಯೂ ಒಂದು ಸಾವು ಸಂಭವಿಸಿರುವುದು ನೋವು ತಂದಿದೆ ಎಂದರು. ಶಿವಮೊಗ್ಗ ಜಿಲ್ಲೆಯಲ್ಲಿ ಆರೋಗ್ಯ ಇಲಾಖೆ ಮಂಗನ ಕಾಯಿಲೆ ಬಗ್ಗೆ ಮತ್ತಷ್ಟು ಎಚ್ಚರಿಕೆ ವಹಿಸಲಿದೆ. […]

ಕನ್ನಡ ದುನಿಯಾ 1 Feb 2026 4:00 pm

ಸಂಸಾರದಲ್ಲಿ ಬಿರುಕು ವದಂತಿಗೆ ಆಲಿಯಾ ಭಟ್ ಫುಲ್ ಸ್ಟಾಪ್: ಅಸಲಿ ವಿಷಯ ಬಿಚ್ಚಿಟ್ಟ ರಣಬೀರ್ ಪತ್ನಿ

ಬಾಲಿವುಡ್‌ನ ಸ್ಟಾರ್ ಜೋಡಿ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಅವರ ವೈವಾಹಿಕ ಜೀವನದಲ್ಲಿ ಬಿರುಕು ಮೂಡಿದೆ ಎಂಬ ಸುದ್ದಿ ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು. ಇದೀಗ ಈ ಎಲ್ಲಾ ವದಂತಿಗಳಿಗೆ ಆಲಿಯಾ ಭಟ್ ಖಡಕ್ ಆಗಿಯೇ ಪ್ರತಿಕ್ರಿಯೆ ನೀಡುವ ಮೂಲಕ ಗಾಳಿ ಮಾತುಗಳಿಗೆ ತೆರೆ ಎಳೆದಿದ್ದಾರೆ. ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಈ ಬಗ್ಗೆ ಮನಬಿಚ್ಚಿ ಮಾತನಾಡಿದ ಆಲಿಯಾ, ಅಂತರ್ಜಾಲದಲ್ಲಿ ಹರಿದಾಡುವ ಇಂತಹ ಚರ್ಚೆಗಳನ್ನು ಬರೀ “ಶಬ್ದ” (Noise) ಎಂದು ಕರೆದಿದ್ದಾರೆ. “ಜನರು ಕೇವಲ […]

ಕನ್ನಡ ದುನಿಯಾ 1 Feb 2026 4:00 pm

ಸರಣಿ ಕೈವಶ ಮಾಡಿಕೊಳ್ಳಲು ಇಂಗ್ಲೆಂಡ್ ಪ್ಲಾನ್: ಪಲ್ಲೆಕೆಲೆಯಲ್ಲಿ ಮಳೆರಾಯನ ನಡುವೆ ಇಂದು ಲಂಕಾ-ಇಂಗ್ಲೆಂಡ್ 2ನೇ ಟಿ20 ಕದನ

ಶ್ರೀಲಂಕಾ ಮತ್ತು ಇಂಗ್ಲೆಂಡ್ ತಂಡಗಳ ನಡುವಿನ 2ನೇ ಟಿ20 ಪಂದ್ಯವು ಇಂದು (ಭಾನುವಾರ, ಫೆಬ್ರವರಿ 1, 2026) ಸಂಜೆ 7:00 ಗಂಟೆಗೆ ಪಲ್ಲೆಕೆಲೆ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಆರಂಭವಾಗಲಿದೆ. ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ಜಯಗಳಿಸಿ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿರುವುದರಿಂದ, ಇಂದಿನ ಪಂದ್ಯ ಉಭಯ ತಂಡಗಳಿಗೂ ನಿರ್ಣಾಯಕವಾಗಿದೆ. ಯಾರು ಗೆಲ್ಲಬಹುದು? (ಪಂದ್ಯದ ಮುನ್ಸೂಚನೆ): ಇಂದಿನ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಗೆಲ್ಲುವ ಸಾಧ್ಯತೆ ಹೆಚ್ಚಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಇದಕ್ಕೆ ಪ್ರಮುಖ ಕಾರಣಗಳು ಇಲ್ಲಿವೆ: ಇಂಗ್ಲೆಂಡ್ ತಂಡದ ಬಲ: ಮೊದಲ […]

ಕನ್ನಡ ದುನಿಯಾ 1 Feb 2026 3:45 pm