SENSEX
NIFTY
GOLD
USD/INR

Weather

19    C

ಡಿಜಿಟಲ್ ಸುದ್ದಿ ಮೂಲಗಳು

... ...View News by News Source

ʼಬ್ಯಾಂಕ್ʼ ಗ್ರಾಹಕರಿಗೆ ಬಿಗ್ ಅಲರ್ಟ್   : ನಾಳೆ, ನಾಡಿದ್ದು ಈ ಎಲ್ಲಾ ಸೇವೆಗಳು ಸ್ಥಗಿತ

ಪ್ರಸ್ತುತ ಬ್ಯಾಂಕಿಂಗ್ ಸೇವೆಗಳು ತುಂಬಾ ಸುಲಭವಾಗಿವೆ. ಬ್ಯಾಂಕ್‌ಗೆ ಹೋಗುವ ಅಗತ್ಯವಿಲ್ಲದೇ ಅನೇಕ ಸೇವೆಗಳು ನಮ್ಮ ಫೋನ್‌ನಲ್ಲೇ ಪೂರ್ಣಗೊಳ್ಳುತ್ತಿವೆ. ಡಿಜಿಟಲ್ ಕ್ರಾಂತಿಯ ಭಾಗವಾಗಿ ಎಲ್ಲಾ ಬ್ಯಾಂಕ್‌ಗಳು ಸಹ ತಮ್ಮ ಗ್ರಾಹಕರಿಗೆ ಡಿಜಿಟಲ್ ಸೇವೆಗಳನ್ನು ಒದಗಿಸುತ್ತಿವೆ. ಸರಿಸುಮಾರು ಪ್ರತಿಯೊಬ್ಬ ಬ್ಯಾಂಕ್ ಗ್ರಾಹಕರು ಡಿಜಿಟಲ್ ಸೇವೆಗಳಿಗೆ ಒಗ್ಗಿಕೊಂಡಿದ್ದಾರೆ. ಕೇವಲ ಒಂದು ಗಂಟೆ ಕಾಲ ಆ ಸೇವೆಗಳು ಸ್ಥಗಿತಗೊಂಡರೂ ಜನರು ಆತಂಕಕ್ಕೊಳಗಾಗುತ್ತಾರೆ. ಅದಕ್ಕಾಗಿಯೇ ಬ್ಯಾಂಕ್‌ಗಳು ತಮ್ಮ ಸೇವೆಗಳಲ್ಲಿ ಯಾವುದೇ ಅಡೆತಡೆ ಉಂಟಾಗದಂತೆ ಎಚ್ಚರಿಕೆ ವಹಿಸುತ್ತವೆ. ಒಂದು ವೇಳೆ ಸಿಸ್ಟಮ್ ಅಪ್‌ಡೇಟ್ಸ್‌ಗಳಿದ್ದರೆ (System updates) […]

ಕನ್ನಡ ದುನಿಯಾ 23 Jan 2026 10:11 pm

ನಿಮ್ಮ ́ಮೊಬೈಲ್‌ ʼ ನಲ್ಲಿ ಡೌನ್‌ಲೋಡ್ ಮಾಡುವ ಆ್ಯಪ್‌ ಗಳು ಸುರಕ್ಷಿತವಾಗಿದೆಯೇ..? ಜಸ್ಟ್‌ ಹೀಗೆ ಚೆಕ್‌ ಮಾಡಿ

ಇತ್ತೀಚೆಗೀಗ ಸ್ಮಾರ್ಟ್‌ಫೋನ್ ಇಲ್ಲದವರೇ ಇಲ್ಲ.. ಸ್ಮಾರ್ಟ್‌ಫೋನ್‌ಗಳು ದೈನಂದಿನ ಕೆಲಸಗಳನ್ನು ಸುಲಭಗೊಳಿಸುತ್ತವೆ. ಪ್ರತಿ ಸೇವೆ, ಆ್ಯಪ್‌ಗಾಗಿ ಪೂರ್ಣಗೊಳಿಸಲು ಗಂಟೆಗಳಾಗುವ ಕಾರ್ಯಗಳನ್ನು ಈಗ ಕೆಲವು ನಿಮಿಷಗಳಲ್ಲಿ ನೆರವೇರಿಸಬಹುದು. ಆ್ಯಪ್‌ಗಳು ಅಂತಹ ವಿಶೇಷ ಸೇವೆಗಳನ್ನು ನೀಡುತ್ತವೆಯಾದರೂ, ಅವುಗಳಿಗೆ ಕೆಲವು ಸಮಸ್ಯೆಗಳಿವೆ. ಹಾಗಾಗಿ ನಾವು ಬಳಸುವ ಆ್ಯಪ್‌ಗಳ ಮೂಲಕ ನಮ್ಮ ಡೇಟಾ, ಮುಖ್ಯ ಮಾಹಿತಿಯನ್ನು ಕಳ್ಳತನ ಮಾಡುವ ಸಾಧ್ಯತೆ ಇದೆ. ಆದ್ದರಿಂದ ನಿಮ್ಮ ಫೋನ್‌ನಲ್ಲಿ ಇರುವ ಆ್ಯಪ್‌ಗಳು ಸುರಕ್ಷಿತವಾಗಿವೆ ಎಂದು ಖಚಿತಪಡಿಸಿಕೊಳ್ಳುವುದು ಸೂಕ್ತ. ಅಸುರಕ್ಷಿತ ಆ್ಯಪ್‌ಗಳನ್ನು ಒದಗಿಸುವ ಸ್ಟೋರ್‌ಗಳು ಗೂಗಲ್ ಪ್ಲೇ ಸ್ಟೋರ್, […]

ಕನ್ನಡ ದುನಿಯಾ 23 Jan 2026 9:51 pm

ಕರ್ತವ್ಯಕ್ಕೆ ಅಡ್ಡಿ ಆರೋಪ ರಾಜ್ಯಾದ್ಯಂತ ಕೆಆರ್‌ಎಸ್‌ ಪಕ್ಷದ ಮುಖಂಡರ ವಿರುದ್ಧ ಎಫ್ಐಆರ್ ಗೆ ಸೂಚನೆ

ಬೆಂಗಳೂರು: ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಗಳು, ನೌಕರರು, ಸಿಬ್ಬಂದಿ ಕೆಲಸಕ್ಕೆ ಅಡ್ಡಿಪಡಿಸುವ ಕೆಆರ್‌ಎಸ್‌ ಪಕ್ಷದ ಕಾರ್ಯಕರ್ತರು, ಮುಖಂಡರ ವಿರುದ್ಧ ರಾಜ್ಯಾದ್ಯಂತ ಎಫ್ಐಆರ್ ದಾಖಲಿಸುವಂತೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ಸೂಚನೆ ನೀಡಿದ್ದಾರೆ. ಸಾರ್ವಜನಿಕವಾಗಿ ಕರ್ತವ್ಯಕ್ಕೆ ಅಡ್ಡಿ ಸನ್ಮಾನದ ನೆಪದಲ್ಲಿ ಮಾನಹಾನಿ ಮಾಡುತ್ತಿರುವ ಘಟನೆಗಳು ನಡೆದಿವೆ. ಚನ್ನಪಟ್ಟಣದ ಇನ್ಸ್ಪೆಕ್ಟರ್ ಜೊತೆಗೆ ಕೆಆರ್‌ಎಸ್ ಪಕ್ಷದ ಕಾರ್ಯಕರ್ತರು ಇತ್ತೀಚೆಗೆ ಗಲಾಟೆ ಮಾಡಿದ್ದರು. ಏಕಮುಖ ಸಂಚಾರ ಮಾರ್ಗದಲ್ಲಿ ಬಸ್ ತಂದು ನಿಯಮ ಉಲ್ಲಂಘಿಸಿದ್ದರು. ಅಲ್ಲದೆ, ಅದನ್ನು ಪ್ರಶ್ನಿಸಿದ ಪೊಲೀಸರೊಂದಿಗೆ ಗಲಾಟೆ ಮಾಡಿದ್ದರು ಎಂಬ ಆರೋಪವಿದೆ. […]

ಕನ್ನಡ ದುನಿಯಾ 23 Jan 2026 9:09 pm

ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್: ನಾಳೆ 61 ಸಾವಿರಕ್ಕೂ ಹೆಚ್ಚು ಮಂದಿಗೆ ಪ್ರಧಾನಿ ಮೋದಿ ನೇಮಕಾತಿ ಪತ್ರ ವಿತರಣೆ

ನವದೆಹಲಿ: 18ನೇ ರೋಜ್‌ಗಾರ್ ಮೇಳದಲ್ಲಿ ಹೊಸದಾಗಿ ನೇಮಕಗೊಂಡ ಯುವಕರಿಗೆ 61 ಸಾವಿರಕ್ಕೂ ಹೆಚ್ಚು ನೇಮಕಾತಿ ಪತ್ರಗಳನ್ನು ಪ್ರಧಾನಿ ಮೋದಿ ವಿತರಿಸಲಿದ್ದಾರೆ. 18ನೇ ರೋಜ್‌ಗಾರ್ ಮೇಳದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ ವಿಡಿಯೋ ಕಾನ್ಫರೆನ್ಸ್ ಮೂಲಕ ವಿವಿಧ ಸರ್ಕಾರಿ ಇಲಾಖೆಗಳು ಮತ್ತು ಸಂಸ್ಥೆಗಳಲ್ಲಿ ಹೊಸದಾಗಿ ನೇಮಕಗೊಂಡ ಯುವಕರಿಗೆ 61 ಸಾವಿರಕ್ಕೂ ಹೆಚ್ಚು ನೇಮಕಾತಿ ಪತ್ರಗಳನ್ನು ವಿತರಿಸಲಿದ್ದಾರೆ. ಈ ಸಂದರ್ಭದಲ್ಲಿ ಅವರು ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ. 18ನೇ ರೋಜ್‌ಗಾರ್ ಮೇಳವನ್ನು ದೇಶಾದ್ಯಂತ 45 ಸ್ಥಳಗಳಲ್ಲಿ ಆಯೋಜಿಸಲಾಗುವುದು. ಹೊಸದಾಗಿ ನೇಮಕಗೊಂಡ ಅಭ್ಯರ್ಥಿಗಳು […]

ಕನ್ನಡ ದುನಿಯಾ 23 Jan 2026 8:47 pm

BREAKING: ಶಿರಹಟ್ಟಿ ಪಶು ಆಸ್ಪತ್ರೆಯಲ್ಲಿ ಭಾರೀ ಅಗ್ನಿ ಅವಘಡ, ಅಪಾರ ಹಾನಿ

ಗದಗ: ಗದಗ ಜಿಲ್ಲೆ ಶಿರಹಟ್ಟಿಯ ಪಶು ಆಸ್ಪತ್ರೆಯಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿ ಅಪಾರ ಹಾನಿ ಸಂಭವಿಸಿದೆ. ಸಂಜೆ 7 ಗಂಟೆಯ ಸುಮಾರಿಗೆ ಬೆಂಕಿ ತಗುಲಿದೆ. ಆಸ್ಪತ್ರೆಯಲ್ಲಿನ ಕಂಪ್ಯೂಟರ್, ಕಚೇರಿ ಪೀಠೋಪಕರಣ, ದಾಖಲೆಗಳು ಸುಟ್ಟು ಭಸ್ಮವಾಗಿವೆ. ಕಚೇರಿಯ ಅವಧಿ ಮುಗಿದಿದ್ದರಿಂದ ಭಾರಿ ಅನಾಹುತ ತಪ್ಪಿದೆ. ಶಾರ್ಟ್ ಸರ್ಕ್ಯೂಟ್ ನಿಂದ ಅಗ್ನಿ ಅವಘಡ ಸಂಭವಿಸಿರುವ ಶಂಕೆ ವ್ಯಕ್ತವಾಗಿದೆ. ಮಾಹಿತಿ ತಿಳಿದ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸಿದ್ದಾರೆ. ಶಿರಹಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಕನ್ನಡ ದುನಿಯಾ 23 Jan 2026 8:37 pm

ಅವಶ್ಯಕ ಪೂರಕ ದಾಖಲೆಗಳೊಂದಿಗೆ ಕಾರ್ಯಾಚರಣೆಗೆ ಆಟೋ ರಿಕ್ಷಾ ಕ್ಯಾಬ್ ಮಾಲೀಕರಿಗೆ ಸೂಚನೆ

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲಾ ವ್ಯಾಪ್ತಿಯಲ್ಲಿ ಮತ್ತು ಚಿತ್ರದುರ್ಗ ನಗರ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ಮಾಡುತ್ತಿರುವ ಆಟೋ ರಿಕ್ಷಾ ಕ್ಯಾಬ್ ಗಳು ಪ್ರಾದೇಶಿಕ ಸಾರಿಗೆ ವ್ಯಾಪ್ತಿಯಲ್ಲಿ ಸಂಚರಿಸಲು ಅವಶ್ಯವಿರುವ ದಾಖಲಾತಿಗಳನ್ನು ಸಿಂಧುಗೊಳಿಸಿಕೊಂಡು ಕಾರ್ಯಾಚರಣೆ ಮಾಡುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿ ಭರತ್ ಎಂ. ಕಾಳಿಸಿಂಗೆ ಸೂಚನೆ ನೀಡಿದ್ದಾರೆ. ಜಿಲ್ಲಾ ವ್ಯಾಪ್ತಿಯಲ್ಲಿ ಮತ್ತು ಚಿತ್ರದುರ್ಗ ನಗರ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ಮಾಡುತ್ತಿರುವ ಆಟೋರಿಕ್ಷಾ ಕ್ಯಾಬ್ ಗಳು ಚಿತ್ರದುರ್ಗ ಪ್ರಾದೇಶಿಕ ಸಾರಿಗೆ ವ್ಯಾಪ್ತಿಯಲ್ಲಿ ಸಂಚರಿಸಲು ಅವಶ್ಯವಿರುವ ದಾಖಲಾತಿಗಳಾದ ರಹದಾರಿ, ವಾಹನದ ವಿಮೆ ಪತ್ರ, ಅರ್ಹತಾ ಪತ್ರ, […]

ಕನ್ನಡ ದುನಿಯಾ 23 Jan 2026 8:29 pm

BREAKING: ಬಳ್ಳಾರಿ ಬ್ಯಾನರ್ ಗಲಾಟೆ ಮಾಸುವ ಮೊದಲೇ ಮತ್ತೊಂದು ಕೃತ್ಯ: ರೆಡ್ಡಿ, ರಾಮುಲು ಮಾಡೆಲ್ ಹೌಸ್ ಗೆ ಬೆಂಕಿ

ಬಳ್ಳಾರಿ: ಬಳ್ಳಾರಿಯಲ್ಲಿ ಬ್ಯಾನರ್ ಗಲಾಟೆ ಮಾಸುವ ಮೊದಲೇ ಮತ್ತೊಂದು ಕೃತ್ಯ ನಡೆದಿದೆ. ಜನಾರ್ದನ ರೆಡ್ಡಿ, ಶ್ರೀರಾಮುಲು ಅವರಿಗೆ ಸೇರಿದ ಮಾಡೆಲ್ ಹೌಸ್ ಗೆ ಬೆಂಕಿ ಹಚ್ಚಲಾಗಿದೆ. ಪೀಠೋಪಕರಣ, ಕಿಟಕಿ, ಗ್ಲಾಸ್ ಗಳು ಸುಟ್ಟಿವೆ. ಮಾಹಿತಿ ತಿಳಿದ ಅಗ್ನಿಶಾಮಕದಳ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಜಿ ಸ್ಕ್ವೇರ್ ನಲ್ಲಿರುವ ಮಾಡೆಲ್ ಹೌಸ್ ಗೆ ಬೆಂಕಿ ಹಚ್ಚಲಾಗಿದೆ. ಇದು ಕಾಂಗ್ರೆಸ್ ನವರ ಕೃತ್ಯ. ಬ್ಯಾನರ್ ಗಲಾಟೆ ವೇಳೆ ಬೆಂಕಿ ಹಚ್ಚುತ್ತೇವೆ ಎಂದು ಹೇಳಿದ್ದರು. ಈಗ ಹಚ್ಚಿದ್ದಾರೆ ಎಂದು ಮಾಜಿ ಶಾಸಕ ಸೋಮಶೇಖರ […]

ಕನ್ನಡ ದುನಿಯಾ 23 Jan 2026 8:09 pm

ಭೂಮಿ ಕಳೆದುಕೊಂಡವರಿಗೆ ಪರಿಹಾರ ನೀಡದ ಹಿನ್ನೆಲೆ: ಕುಣಿಗಲ್ ರೈಲ್ವೆ ನಿಲ್ದಾಣದ ಕಚೇರಿ ಜಪ್ತಿ

ತುಮಕೂರು: ನೈರುತ್ಯ ರೈಲ್ವೆ ಇಲಾಖೆ ರೈಲ್ವೆ ಹಳಿ ನಿರ್ಮಾಣ ಕಾಮಗಾರಿಗಾಗಿ ಭೂಮಿ ವಶಪಡಿಸಿಕೊಂಡಿದ್ದು, ಜಮೀನು ಕಳೆದುಕೊಂಡವರಿಗೆ ಪರಿಹಾರ ನೀಡದ ಹಿನ್ನೆಲೆಯಲ್ಲಿ ರೈಲ್ವೆ ನಿಲ್ದಾಣದ ಕಚೇರಿಯನ್ನೇ ಜಪ್ತಿ ಮಾಡಿರುವ ಘಟನೆ ತುಮಕೂರಿನ ಕುಣಿಗಲ್ ನಲ್ಲಿ ನಡೆದಿದೆ. ಕುಣಿಗಲ್ ರೈಲು ನಿಲ್ದಾಣದ ಸ್ಟೇಷನ್ ಮಾಸ್ಟರ್ ಕಚೇರಿಯನ್ನು ಜಪ್ತಿ ಮಾಡಲಾಗಿದ್ದು, ಕಚೇರಿಯ ಪೀಠೋಪಕರಣ, ವಸ್ತುಗಳನ್ನು ಸಂತ್ರಸ್ತರು ಕೊಂಡೊಯ್ದಿದ್ದಾರೆ. ರೈಲ್ವೆ ಹಳಿ ನಿರ್ಮಾಣ ಕಾಮಗಾರಿಯಿಂದಾಗಿ ಮಲ್ಲಾಘಟ್ಟದ ಮೂಡಲಗಿರಿ ಹಾಗೂ ಲಕ್ಕಯ್ಯ ಎಂಬುವವರು ಮನೆ ಹಾಗೂ ನಿವೇಶನ ಕಳೆದುಕೊಂಡಿದ್ದರು. 2020ರಲ್ಲಿ ಇಬ್ಬರು ಸಂತ್ರಸ್ತರಿಗೂ 20 […]

ಕನ್ನಡ ದುನಿಯಾ 23 Jan 2026 7:12 pm

ಜನ ಎಲ್ಲಿ ಅಪೇಕ್ಷೆ ಪಡುತ್ತಾರೋ ಅಲ್ಲೇ ಸ್ಪರ್ಧೆ: ಕೇಂದ್ರ ಸಚಿವ HDK ಘೋಷಣೆ

ಮಂಡ್ಯ: ಜನರು ಎಲ್ಲಿ ಅಪೇಕ್ಷೆ ಪಡುತ್ತಾರೆಯೋ ಅಲ್ಲಿಂದಲೇ ನಾನು ಸ್ಪರ್ಧೆ ಮಾಡುತ್ತೇನೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಶಿವಳ್ಳಿ ಗ್ರಾಮದಲ್ಲಿ ಮಾರಮ್ಮ ದೇವಾಲಯ ಉದ್ಘಾಟನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ರಾಜಕಾರಣಕ್ಕೆ ಮರಳುವ ಸ್ಪಷ್ಟ ಸೂಚನೆ ನೀಡಿದ್ದಾರೆ. ಕರ್ನಾಟಕ ರಾಜ್ಯವೇ ನನ್ನ ಪರಿಮಿತಿಯಾಗಿದೆ. ಜನ ಅಪೇಕ್ಷೆ ಪಡುವ ಕ್ಷೇತ್ರದಲ್ಲೇ ಸ್ಪರ್ಧೆ ಮಾಡುತ್ತೇನೆ. ಮಂಡ್ಯ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುವ ಉದ್ದೇಶವಿರಲಿಲ್ಲ. ಸಿ.ಎಸ್.ಪುಟ್ಟರಾಜು ಅವರನ್ನು ಅಭ್ಯರ್ಥಿಯಾಗಿಸಲು ಚಿಂತನೆ ನಡೆಸಿದ್ದೆವು. ಆದರೆ […]

ಕನ್ನಡ ದುನಿಯಾ 23 Jan 2026 7:06 pm

ಬೈಕ್ ಕಳವಿಗೆ ಯತ್ನಿಸಿದ ಇಬ್ಬರನ್ನು ಥಳಿಸಿ ಪೊಲೀಸರಿಗೊಪ್ಪಿಸಿದ ಜನ

ಬೆಳ್ತಂಗಡಿ: ಬೈಕ್ ಕಳವು ಮಾಡಿ ಪರಾರಿಯಾಗಲು ಯತ್ನಿಸಿದ ಆರೋಪದ ಮೇಲೆ ಇಬ್ಬರು ಆರೋಪಿಗಳನ್ನು ಹಿಡಿದು ಸಾರ್ವಜನಿಕರು ಥಳಿಸಿದ್ದಾರೆ. ನಂತರ ವೇಣೂರು ಪೊಲೀಸರಿಗೆ ಅವರನ್ನು ಒಪ್ಪಿಸಿದ್ದಾರೆ. ಬೈಕ್ ಕಳ್ಳತನಕ್ಕೆ ಯತ್ನಿಸಿದ ಬಗ್ಗೆ ಪ್ರಕರಣ ದಾಖಲಿಸಲಾಗಿದೆ. ಹಲ್ಲೆಗೆ ಒಳಗಾದವರು ಪ್ರತಿ ದೂರು ನೀಡಿದ್ದು, ಎಂಟು ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ಎರಡೂ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. ಬೆಳ್ತಂಗಡಿಯ ಮರೋಡಿ ಗ್ರಾಮದ ಪಳಾರಗೋಳಿ ಬಳಿ ಜನವರಿ 20ರಂದು ತಡರಾತ್ರಿ ಕೂಳೂರು ನಿವಾಸಿಗಳಾದ ಮೈದುನ್ ನಾಸಿರ್ ಮತ್ತು ಅಬ್ದುಲ್ ಸಮದ್ […]

ಕನ್ನಡ ದುನಿಯಾ 23 Jan 2026 6:57 pm

BREAKING: ಶಬರಿಮಲೆ ಚಿನ್ನ ಕಳ್ಳತನ ಕೇಸ್: ಮತ್ತೊಬ್ಬ ಆರೋಪಿ ಮುರಾರಿ ಬಾಬುಗೆ ಜಾಮೀನು

ತಿರುವನಂತಪುರಂ: ಶಬರಿಮಲೆ ದೇವಸ್ಥಾನದಲ್ಲಿ ನಡೆದಿದೆ ಎನ್ನಲಾದ ಚಿನ್ನ ಕಳ್ಳತನಕ್ಕೆ ಸಂಬಂಧಿಸಿದ ಎರಡು ಪ್ರಕರಣಗಳಿಗೆ ಸಂಬಂಧಿಸಿದಂತೆ ತಿರುವಾಂಕೂರು ದೇವಸ್ವಂ ಮಂಡಳಿಯ(ಟಿಡಿಬಿ) ಮಾಜಿ ಆಡಳಿತ ಅಧಿಕಾರಿ ಮುರಾರಿ ಬಾಬು ಅವರಿಗೆ ಕೊಲ್ಲಂ ನ್ಯಾಯಾಲಯ ಜಾಮೀನು ನೀಡಿದೆ. ತನಿಖೆ ಪ್ರಾರಂಭವಾಗಿ 90 ದಿನಗಳು ಕಳೆದರೂ, ವಿಶೇಷ ತನಿಖಾ ತಂಡ(ಎಸ್‌ಐಟಿ) ಇನ್ನೂ ಆರೋಪಪಟ್ಟಿ ಸಲ್ಲಿಸದ ಕಾರಣ ಜಾಮೀನು ನೀಡಲಾಗಿದೆ. ಇದಕ್ಕೂ ಮೊದಲು, ಎರಡು ಪ್ರಕರಣಗಳಲ್ಲಿ ಒಂದರಲ್ಲಿ ಪ್ರಮುಖ ಆರೋಪಿ ಉನ್ನಿಕೃಷ್ಣನ್ ಪೊಟ್ಟಿಗೆ ನ್ಯಾಯಾಲಯ ಜಾಮೀನು ನೀಡಿತ್ತು. ಮುರಾರಿ ಬಾಬು ಬಂಧನವಾಗಿ 90 ದಿನಗಳು […]

ಕನ್ನಡ ದುನಿಯಾ 23 Jan 2026 6:44 pm

BREAKING: ಜಮ್ಮು-ಕಾಶ್ಮೀರದಲ್ಲಿ ಭದ್ರತಾ ಪಡೆಗಳ ಕಾರ್ಯಾಚರಣೆ: ಜೈಶ್ ಸಂಘಟನೆ ಓರ್ವ ಉಗ್ರ ಎನ್ ಕೌಂಟರ್ ಗೆ ಬಲಿ

ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಜೈಶ್ ಉಗ್ರ ಸಂಘಟನೆಯ ಓರ್ವ ಭಯೋತ್ಪಾದಕ ಭದ್ರತಾ ಪಡೆಗಳು ನಡೆಸಿದ ಎನ್ ಕೌಂಟರ್ ಗೆ ಬಲಿಯಾಗಿದ್ದಾನೆ. ಜಮ್ಮು-ಕಾಶ್ಮೀರದ ಕಥುವಾ ಜಿಲ್ಲೆಯ ಬಿಲ್ಲಾವರ್ ಪ್ರದೇಶದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಜೈಶ್ ಉಗ್ರನನ್ನು ಸದೆಬಡಿಯಲಾಗಿದೆ. ಸೇನೆ ಹಾಗೂ ಸಿಆರ್ ಪಿಎಫ್ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಓರ್ವ ಉಗ್ರ ಹತನಾಗಿದ್ದಾನೆ. ಉಸ್ಮಾನ್ ಹತ್ಯೆಯಾಗಿರುವ ಜೈಶ್ ಸಂಘಟನೆಯ ಉಗ್ರ ಎಂದು ತಿಳಿದುಬಂದಿದೆ. ಸೇನೆ ಹಾಗೂ ಸಿಆರ್ ಪಿಎಫ್ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಪಾಕಿಸ್ತಾನಿ ಜೈಶ್ ಸಂಘಟನೆಯ ಓರ್ವ ಉಗ್ರನನ್ನು ಹತ್ಯೆ ಮಾಡಲಾಗಿದೆ […]

ಕನ್ನಡ ದುನಿಯಾ 23 Jan 2026 6:42 pm

ಸಾಫ್ಟ್‌ವೇರ್ ಇಂಜಿನಿಯರ್‌ಗಳ ಕೆಲಸಕ್ಕೆ ಶೀಘ್ರವೇ ಕುತ್ತು! 

ಕೃತಕ ಬುದ್ಧಿಮತ್ತೆ (ಎಐ) ಮುಂದೆ ಜನರಿಗೆ ವೇಗವಾಗಿ ಕೆಲಸ ಮಾಡಲು ಸಹಾಯ ಮಾಡುವ ಸಾಧನವಲ್ಲ ಎಂದು ಆಂಥ್ರೋಪಿಕ್ ಸಿಇಒ ಡಾರಿಯೋ ಅಮೋಡಿಯ ಹೇಳಿದ್ದಾರೆ. ಇದು ಕೆಲಸವನ್ನು ಸ್ವತಃ ಮಾಡುವತ್ತ ಸ್ಥಿರವಾಗಿ ಸಾಗುತ್ತಿದೆ ಮತ್ತು ಸಾಫ್ಟ್‌ವೇರ್ ಇಂಜಿನಿಯರ್‌ ಇದರ ಸಂಪೂರ್ಣ ಪರಿಣಾಮವನ್ನು ಅನುಭವಿಸುವ ಮೊದಲ ವೃತ್ತಿಗಳಲ್ಲಿ ಒಂದಾಗಬಹುದು ಎಂದು ವಿಶ್ಲೇಷಿಸಿದ್ದಾರೆ. ದಾವೋಸ್‌ನಲ್ಲಿ ವಿಶ್ವ ಆರ್ಥಿಕ ವೇದಿಕೆಯಲ್ಲಿ ಮಾತನಾಡಿದ ಅಮೋಡಿಯ, “ಎಐ ಏನು ಮಾಡಬಹುದು ಎಂಬುದರ ಬಗ್ಗೆ ಜಗತ್ತು ಇನ್ನೂ ಚರ್ಚೆಯಲ್ಲಿ ನಿರತವಾಗಿದ್ದರೂ, ಉದ್ಯೋಗಗಳು, ಉತ್ಪಾದಕತೆ ಮತ್ತು ಆರ್ಥಿಕತೆಯ ರಚನೆಯ […]

ಕನ್ನಡ ದುನಿಯಾ 23 Jan 2026 6:25 pm

SHOCKING: ಅಂಗವಿಕಲ ಕೋಟಾದಡಿ ಮೆಡಿಕಲ್ ಸೀಟ್ ಪಡೆಯಲು ಕಾಲನ್ನೇ ಕತ್ತರಿಸಿಕೊಂಡ ಯುವಕ

ಲಖನೌ: ಅಂಗವಿಕಲ ಕೊಟಾದಡಿ ಮೆಡಿಕಲ್ ಸೀಟ್ ಪಡೆಯಲು ಯುವಕನೊಬ್ಬ ತನ್ನ ಕಾಲನ್ನೇ ಕತ್ತರಿಸಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಡಾಕ್ಟರ್ ಆಗಬೇಕೆಂಬ ಕನಸು ಕಂಡಿದ್ದ ಯುವಕ ಪದೇ ಪದೇ ನೀಟ್ ಪರೀಕ್ಷೆಯಲ್ಲಿ ವಿಫಲನಾಗುತ್ತಿದ್ದ. ಬೇರೆ ದಾರಿ ಕಾಣದೇ ಅಂಗವಿಕಲ ಕೋಟಾದಡಿ ಸೀಟು ಪಡೆಯಲು ಪ್ಲಾನ್ ಮಾಡಿ ಇಂತಹ ಎಡವಟ್ಟು ಮಾಡಿಕೊಂಡಿದ್ದಾನೆ. ಉತ್ತರ ಪ್ರದೇಶದ ಲಖನೌ ಬಳಿಯ ಜೌವಣಪುರ ನಗರದ ಸೂರಜ್ ಭಾಸ್ಕರ್ ಎಂಬ 21 ವರ್ಷದ ಯುವಕ ಅಂಗವಿಕಲ ಕೋಟಾಡಡಿ ಮೆಡಿಕಲ್ ಸೀಟ್ ಪಡೆಯಲು ತನ್ನ ಕಾಲನ್ನೇ ಕತ್ತರಿಸಿಕೊಂಡಿರುವ […]

ಕನ್ನಡ ದುನಿಯಾ 23 Jan 2026 6:21 pm

AI Photo ಗೂಗಲ್ ಬಳಕೆದಾರರಿಗೆ ಇಲ್ಲಿದೆ ಗುಡ್‌ನ್ಯೂಸ್ 

AI Photo ವಿಚಾರದಲ್ಲಿ ಗೂಗಲ್ ತನ್ನ ಬಳಕೆದಾರರಿಗೆ ಗುಡ್‌ನ್ಯೂಸ್ ನೀಡಿದೆ. ಜನರ ಆಸಕ್ತಿ, ಅಭ್ಯಾಸಗಳು, ಪ್ರಯಾಣದ ಮಾರ್ಗಸೂಚಿಗಳು ಮತ್ತು ಫೋಟೋ ಲೈಬ್ರರಿಗಳನ್ನು ಅವಲಂಬಿಸಿ ಉತ್ತರಗಳನ್ನು ಹುಡುಕಲು ಗೂಗಲ್ ತನ್ನ ಪ್ರಬಲ ಸರ್ಚ್ ಎಂಜಿನ್‌ನಲ್ಲಿ ಹೊಸ ಪೀಫೋಲ್ ಅನ್ನು ತೆರೆಯುತ್ತಿದೆ. ತನ್ನ ಎಐ ತಂತ್ರಜ್ಞಾನವನ್ನು ಬಳಸಿಕೊಂಡು ಈ ಫೀಚರ್ ಬಿಡುಗಡೆ ಮಾಡಲಾಗಿದೆ. ಹೊಸ ಆಯ್ಕೆಯು ಲಕ್ಷಾಂತರ ಜನರಿಗೆ ಕಳೆದ ವರ್ಷದಿಂದ ಗೂಗಲ್ ಸರ್ಚ್ ಎಂಜಿನ್‌ನಲ್ಲಿ ಲಭ್ಯವಿರುವ ಎಐ ಮೋಡ್‌ನಲ್ಲಿ ಇತ್ತೀಚೆಗೆ ಪರಿಚಯಿಸಲಾದ ಪರ್ಸನಲ್ ಇಂಟೆಲಿಜೆನ್ಸ್ ಎಂಬ ಸಾಧನವನ್ನು ಆನ್ […]

ಕನ್ನಡ ದುನಿಯಾ 23 Jan 2026 4:51 pm

ವಿಧಾನಸಭೆಯಲ್ಲಿ ಪ್ರತಿಧ್ವನಿಸಿದ ಅಬಕಾರಿ ಲಂಚಾವತಾರ ಕೇಸ್: ಸಚಿವ ಆರ್.ಬಿ.ತಿಮ್ಮಾಪುರ ರಾಜೀನಾಮೆಗೆ ಬಿಜೆಪಿ ಸದಸ್ಯರ ಆಗ್ರಹ: ಆಡಳಿತ-ವಿಪಕ್ಷಗಳ ನಡುವೆ ಜಟಾಪಟಿ

ಬೆಂಗಳೂರು: ಅಬಕಾರಿ ಸಚಿವರಿಂದ ಲಂಚಕ್ಕೆ ಬೇಡಿಕೆ ಆರೋಪ ಪ್ರಕರಣ ವಿಧಾನಸಭೆಯಲ್ಲಿ ಪ್ರತಿಧ್ವನಿಸಿದ್ದು, ಆಡಳಿತ ಹಾಗೂ ವಿಪಕ್ಷಗಳ ನಡುವೆ ಗದ್ದಲ-ಕೋಲಾಹಲಕ್ಕೆ ಕಾರಣವಾಯಿತು. ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ರಾಜೀನಾಮೆ ನೀಡುವಂತೆ ಬಿಜೆಪಿ ಸದಸ್ಯರು ಪಟ್ಟು ಹಿಡಿದ ಘಟನೆ ನಡೆಯಿತು. ಅಬಕಾರಿ ಇಲಾಖೆ ಲಂಚಾವತಾರ ಪ್ರಕರಣದ ಬಗ್ಗೆ ವಿಪಕ್ಷ ನಾಯಕ ಆರ್.ಅಶೋಕ್ ವಿಧಾನಸಭೆಯಲ್ಲಿ ಪ್ರಸ್ತಾಪಿಸಿದ್ದು. ಮೊದಲು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ರಾಅಜೀನಾಮೆ ನೀಡಲಿ ಎಂದು ಆಗ್ರಹಿಸಿದರು. ಇದಕ್ಕೆ ಕಾಂಗ್ರೆಸ್ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದು, ತನಿಖೆಗೆ ಸೂಚಿಸಲಾಗಿದೆ. ಆರೋಪ ಸಾಬೀತಾದರೆ ಮುಂದಿನ ಕ್ರಮ […]

ಕನ್ನಡ ದುನಿಯಾ 23 Jan 2026 4:44 pm

1 ಎಕರೆ ಅಂದ್ರೆ ಎಷ್ಟು? ಜಮೀನು ಅಳೆಯುವ ಮುನ್ನ ಈ ಪಕ್ಕಾ ಲೆಕ್ಕಾಚಾರ ತಿಳಿಯಿರಿ

ಮನೆ ಅಥವಾ ಪ್ಲಾಟ್‌ ಖರೀದಿಸುವುದು ಕೇವಲ ಒಂದು ಆಸ್ತಿಯನ್ನು ಪಡೆಯುವುದಲ್ಲ, ಅದು ಭವಿಷ್ಯದ ಬಗೆಗಿನ ಒಂದು ಹೂಡಿಕೆ. ಸರಿಯಾದ ತಿಳುವಳಿಕೆ ಇಲ್ಲದಿದ್ದರೆ, ಈ ಪ್ರಕ್ರಿಯೆ ಗೊಂದಲಮಯವಾಗಬಹುದು. ಹಾಗಿದ್ದರೆ, ಒಂದು ಎಕರೆ ಎಂದರೆ ಎಷ್ಟು ದೊಡ್ಡದು? ಅದರ ನಿರ್ವಹಣೆ ಸುಲಭವೇ? ಒಂದು ಎಕರೆಯ ಬೆಲೆ ಎಷ್ಟು? ನಿಮ್ಮ ಭೂಮಿಯ ಗಾತ್ರವನ್ನು ಹೇಗೆ ಅಂದಾಜು ಮಾಡುವುದು? ಈ ಎಲ್ಲ ಪ್ರಶ್ನೆಗಳಿಗೆ ಉತ್ತರಗಳನ್ನು ಇಲ್ಲಿ ನೀಡಲಾಗಿದೆ. ಎಕರೆ ಎಂದರೇನು? ಎಕರೆಯು ಜಾಗತಿಕವಾಗಿ ಬಳಕೆಯಲ್ಲಿರುವ ಒಂದು ಪ್ರಮಾಣಿತ ಭೂಮಿ ಮಾಪನ ಘಟಕ. ಭಾರತದ […]

ಕನ್ನಡ ದುನಿಯಾ 23 Jan 2026 4:38 pm

BREAKING: ಪೌರಾಯುಕ್ತಗೆ ನಿಂದನೆ, ಬೆದರಿಕೆ: ರಾಜೀವ್ ಗೌಡಗೆ ಮತ್ತೊಂದು ಬಿಗ್ ಶಾಕ್: ಕಾಂಗ್ರೆಸ್ ಪಕ್ಷದಿಂದ ಅಮಾನತು

ಬೆಂಗಳೂರು: ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಅಮೃತಾಗೌಡ ಅವರಿಗೆ ನಿಂದನೆ ಹಾಗೂ ಜೀವಬೆದರಿಕೆ ಹಾಕಿದ್ದ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಅವರನ್ನು ಕಾಂಗ್ರೆಸ್ ನಿಂದ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ. ಬ್ಯಾನರ್ ವಿಚಾರವಾಗಿ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ನಗರಸಭೆ ಪೌರಾಯುಕ್ತೆ ಅಮೃತಾ ಗೌಡ ಅವರಿಗೆ ಕರೆ ಮಾಡಿ ನಿಂದಿಸಿದ್ದಲ್ಲದೇ, ಜೀವ ಬೆದರಿಕೆ ಹಾಕಿದ್ದರು. ರಾಜೀವ್ ಗೌಡ, ಪೌರಾಯುಕ್ತಗೆ ಬೆದರಿಕೆ ಹಾಕಿದ್ದ ಆಡೀಯೋ ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ಪೌರಾಯುಕ್ತೆ ರಾಜೀವ್ ಗೌಡ ವಿರುದ್ಧ ದೂರು ನೀಡಿದ್ದು, ರಾಜೀವ್ […]

ಕನ್ನಡ ದುನಿಯಾ 23 Jan 2026 4:37 pm

ವಿಧಾನಸಭೆ ಚುನಾವಣೆ ನಡೆಯುವ ಕೇರಳಕ್ಕೆ ಬಂಪರ್ ಕೊಡುಗೆ ಕೊಟ್ಟ ಕೇಂದ್ರ ಸರ್ಕಾರ

ಕೇರಳ ವಿಧಾನಸಭೆ ಚುನಾವಣೆ-2026ರ ಹಿನ್ನಲೆಯಲ್ಲಿ ಕೇರಳ ರಾಜ್ಯಕ್ಕೆ ಕೇಂದ್ರ ಸರ್ಕಾರ ಬಂಪರ್ ಕೊಡುಗೆ ನೀಡಿದೆ. ಕೇರಳದಲ್ಲಿ ಹೊಸ ಹೈಸ್ಪೀಡ್ ರೈಲು ಕಾರಿಡಾರ್‌ಗೆ ಕೇಂದ್ರವು ಅನುಮೋದನೆ ನೀಡಿದೆ, ಇದು ರಾಜ್ಯದ ರೈಲು ಮೂಲಸೌಕರ್ಯವನ್ನು ಗಮನಾರ್ಹವಾಗಿ ಸುಧಾರಿಸುವ ನಿರೀಕ್ಷೆಯಿದೆ. ‘ಮೆಟ್ರೋ ಮ್ಯಾನ್’ ಖ್ಯಾತಿಯ ಇ.ಶ್ರೀಧರನ್ ಅವರು ಆರಂಭಿಕ ಯೋಜನಾ ಕಾರ್ಯವನ್ನು ಮುನ್ನಡೆಸುತ್ತಾರೆ. ಆದರೆ ದೆಹಲಿ ಮೆಟ್ರೋ ರೈಲು ನಿಗಮವನ್ನು ವಿವರವಾದ ಯೋಜನಾ ವರದಿ (ಡಿಪಿಆರ್) ತಯಾರಿಸಲು ನಿಯೋಜಿಸಲಾಗಿದೆ. ಇ.ಶ್ರೀಧರನ್ ಮಾತನಾಡಿ, “ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರ ಜೊತೆ […]

ಕನ್ನಡ ದುನಿಯಾ 23 Jan 2026 4:28 pm

ನಟಿ ಕೀರ್ತಿ ಸುರೇಶ್ ಅವರ ಕೊಚ್ಚಿ ಮನೆ ವೈರಲ್: ಮುದ್ದಿನ ನಾಯಿಗೂ ಇದೆ ಸ್ಪೆಷಲ್ ರೂಮ್

ದಕ್ಷಿಣ ಭಾರತದ ಖ್ಯಾತ ನಟಿ, ‘ಮಹಾನಟಿ’ ಖ್ಯಾತಿಯ ಕೀರ್ತಿ ಸುರೇಶ್ ತಮ್ಮ ಸುಂದರವಾದ ಮನೆಯನ್ನು ಮೊದಲ ಬಾರಿಗೆ ಅಭಿಮಾನಿಗಳಿಗೆ ಪರಿಚಯಿಸಿದ್ದಾರೆ. ಏಷ್ಯನ್ ಪೇಂಟ್ಸ್‌ನ ಜನಪ್ರಿಯ ಸರಣಿ ‘ವೇರ್ ದಿ ಹಾರ್ಟ್ ಈಸ್ – ಸೀಸನ್ 9’ ರ ಭಾಗವಾಗಿ ಕೊಚ್ಚಿಯಲ್ಲಿರುವ ತಮ್ಮ ಮನೆಯ ಒಳಾಂಗಣವನ್ನು ಅವರು ಜಗತ್ತಿಗೆ ತೋರಿಸಿದ್ದಾರೆ. ಸಂಪ್ರದಾಯ ಮತ್ತು ಆಧುನಿಕತೆಯ ಸಮ್ಮಿಲನದಂತಿರುವ ಈ ಮನೆಗೆ ಕೀರ್ತಿ ಸುರೇಶ್ ಅತ್ಯಂತ ಪ್ರೀತಿಯಿಂದ ‘ಹೌಸ್ ಆಫ್ ಫನ್’ ಎಂದು ಹೆಸರಿಟ್ಟಿರುವುದು ವಿಶೇಷ. ಈ ಮನೆಯ ಪ್ರತಿ ಮೂಲೆಯೂ […]

ಕನ್ನಡ ದುನಿಯಾ 23 Jan 2026 4:21 pm

BREAKING: ಬಸ್-ಕ್ರೂಸರ್ ವಾಹನ ಮುಖಾಮುಖಿ ಡಿಕ್ಕಿ: ಭೀಕರ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ದುರ್ಮರಣ

ಉಡುಪಿ: ಬಸ್ ಹಾಗೂ ಕ್ರೂಸರ್ ವಾಹನಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಉಡುಪಿ ಜಿಲ್ಲೆಯಲ್ಲಿ ನಡೆದಿದೆ. ಉಡುಪಿಯ ಕಾರ್ಕಳ ತಾಲೂಕಿನ ಮಿಯಾರು ಗ್ರಾಮದಲ್ಲಿ ಈ ದುರಂತ ಸಂಭವಿಸಿದೆ. ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. 8 ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ 169ರಲ್ಲಿ ಈ ಅಪಘಾತ ಸಂಭವಿಸಿದೆ. ಘಟನಾ ಸ್ಥಳಕ್ಕೆ ಕಾರ್ಕಳ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕನ್ನಡ ದುನಿಯಾ 23 Jan 2026 4:11 pm

ರಾಜ್ಯಪಾಲರನ್ನು ಅಡ್ಡಗಟ್ಟಿದ ಪ್ರಕರಣ: ಬಿ.ಕೆ.ಹರಿಪ್ರಸಾದ್ ಅಮಾನತಿಗೆ ಬಿಜೆಪಿ ಬಿಗಿಪಟ್ಟು: ಪರಿಷತ್ ನಲ್ಲಿ ಗದ್ದಲ-ಕೋಲಾಹಲ

ಬೆಂಗಳೂರು: ಕಾಂಗ್ರೆಸ್ ಸದಸ್ಯರು ರಾಜ್ಯಪಾಲರನ್ನು ಅಡ್ಡಗಟ್ಟಿದ ಪ್ರಕರಣ ವಿಧಾನ ಪರಿಷತ್ ನಲ್ಲಿ ಪ್ರತಿಧ್ವನಿಸಿದ್ದು, ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಅವರನ್ನು ಅಮಾನತುಗೊಸುವಂತೆ ಬಿಜೆಪಿ ಸದಸ್ಯರು ಪಟ್ಟು ಹಿಡಿದ್ದಾರೆ. ವಿಧಾನಮಂಡಲ ವಿಶೇಷ ಅಧಿವೇಶನದ ಆರಂಭದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಭಾಷಣ ಓದದದೇ ಸದನಿಂದ ನಿರ್ಗಮಿಸುತ್ತಿದ್ದ ವೇಳೆ ಕಾಂಗ್ರೆಸ್ ಸದಸ್ಯ ಬಿ.ಕೆ.ಹರಿಪ್ರಸಾದ್ ಸೇರಿದಂತೆ ಇತರ ಸದಸ್ಯರು ರಾಜ್ಯಪಾಲರನ್ನು ಅಡ್ಡಗಟ್ಟಿ ತಡೆಯಲು ಯತ್ನಿಸಿದ್ದರು. ಈ ವೇಳೆ ನಡೆದ ನೂಕಾಟ ತಳ್ಳಾಟದ ವೇಳೆ ಬಿ.ಕೆ.ಹರಿಒರಸಾದ್ ಅವರ ಬಟ್ಟೆ ಹರಿದು ಹೋಗಿತ್ತು. ಇದೇ ವಿಚಾರ […]

ಕನ್ನಡ ದುನಿಯಾ 23 Jan 2026 4:01 pm

ಮನಸ್ಸಿನ ಗೊಂದಲಕ್ಕೆ ಗುಡ್‌ಬೈ ಹೇಳಿ: ಅತಿಯಾದ ಆಲೋಚನೆ ನಿಯಂತ್ರಿಸಲು ಇಲ್ಲಿವೆ ಬೆಸ್ಟ್ ಐಡಿಯಾಸ್

ಚಿಂತಿಸುವುದು ಮನುಷ್ಯನ ಸಹಜ ಗುಣವಾದರೂ, ಅದು ಮಿತಿ ಮೀರಿ ‘ಅತಿಯಾದ ಯೋಚನೆ’ಯಾಗಿ ಬದಲಾದಾಗ ನಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಅನಗತ್ಯ ಅಥವಾ ಅಗತ್ಯವಿಲ್ಲದ ವಿಷಯಗಳ ಬಗ್ಗೆ ಪದೇ ಪದೇ ನಿರಂತರವಾಗಿ ಆಲೋಚಿಸುವುದು ನಮ್ಮನ್ನು ಮಾನಸಿಕವಾಗಿ ಬಳಲಿಸುತ್ತದೆ. ಹಿಂದೆ ನಡೆದ ಕಹಿ ಘಟನೆಗಳು, ಭವಿಷ್ಯದ ಬಗ್ಗೆ ಇರುವ ಅಸ್ಪಷ್ಟ ಆತಂಕ, ಕೆಲಸದ ಒತ್ತಡ ಮತ್ತು ಒಂಟಿತನ ಅತಿಯಾದ ಚಿಂತೆಗೆ ಪ್ರಮುಖ ಕಾರಣಗಳಾಗಿವೆ. ಇಂತಹ ನಕಾರಾತ್ಮಕ ಯೋಚನೆಗಳು ನಮ್ಮನ್ನು ದಾರಿ ತಪ್ಪಿಸುವುದಲ್ಲದೆ, ಸರಿಯಾದ […]

ಕನ್ನಡ ದುನಿಯಾ 23 Jan 2026 3:18 pm

ಶಬರಿಮಲೆ ಪ್ರವಾಸಕ್ಕೆ ಹೋಗಿದ್ದ ಕೋಲಾರದ ವ್ಯಕ್ತಿ ನಾಪತ್ತೆ; ನಾಲ್ಕು ದಿನಗಳಾದರೂ ಸಿಗದ ಸುಳಿವು

ಕೋಲಾರ: ಶಬರಿಮಲೆ ಪ್ರವಾಸಕ್ಕೆಂದು ಹೋಗಿದ್ದ ಕೋಲಾರ ಮೂಲದ ವ್ಯಕ್ತಿಯೊಬ್ಬರು ನಾಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಕಾಣೆಯಾಯಿ ನಾಲ್ಕು ದಿನಗಳು ಕಳೆದರೂ ಸುಳಿವು ಸಿಗದಿರುವುದು ಕುಟುಂಬದವರಲ್ಲಿ ಆತಂಕ ಮೂಡಿಸಿದೆ. ಕೋಲಾರದ ಬಂಗಾರಪೇಟೆ ತಾಲೂಕಿನ ದೇವಗಾನಹಳ್ಳಿಯ ರವಿ (40) ನಾಪತ್ತೆಯಾಗಿರುವವರು. ಶಬರಿಮಲೆ ಪ್ರವಾಸಕ್ಕೆಂದು ಹೋಗಿದ್ದ ರವಿ, ಅಲ್ಲಿಂದ ತಮಿಳುನಾಡಿನ ತಿರುಚಂದೂರ್ ಗೆ ತೆರಳಿದ್ದರು. ತಿರುಚಂದೂರ್ ಗೆ ಹೋಗಿದ್ದವರು ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ. ಕಳೆದ ನಾಲ್ಕು ದಿನಗಳಿಂದ ರವಿ ಅವರ ಸುಳಿವು ಸಿಗುತ್ತಿಲ್ಲ. ಇದರಿಂದ ಆತಂಕಗೊಂಡಿರುವ ಕುಟುಂಬ ತಿರುಚಂದೂರ್ ಪೊಲೀಸ್ […]

ಕನ್ನಡ ದುನಿಯಾ 23 Jan 2026 2:49 pm

ಒಂದೇ ದಿನ OTTಗೆ ಬಂದ ಶಿವಣ್ಣ, ಸುದೀಪ್ ಸಿನಿಮಾ: ಈ ವಾರದ ಒಟಿಟಿ ಸಿನಿಮಾ ಪಟ್ಟಿ

ಜನವರಿ 24ರಿಂದ ಸಾಲು ಸಾಲು ರಜೆ. ಸೋಮವಾರದ ತನಕ ಇರುವ ರಜೆಯನ್ನು ಮನೆಯಲ್ಲಿಯೇ ಕುಳಿತು ಸಿನಿಮಾ ನೋಡಿ ಕಳೆಯುವ ಜನರಿಗೆ ಮಹತ್ವದ ಅಪ್‌ಡೇಟ್‌. ಶಿವಣ್ಣ ಮತ್ತು ಸುದೀಪ್ ಅಭಿನಯನದ ಚಿತ್ರಗಳು ಒಂದೇ ದಿನ ಒಟಿಟಿಗೆ ಬಂದಿವೆ. ಹೌದು 2025ರ ಡಿಸೆಂಬರ್‌ನಲ್ಲಿ ಬಿಡುಗಡೆಯಾಗಿದ್ದ ‘ಮಾರ್ಕ್’ ಮತ್ತು ‘45’ ಸಿನಿಮಾಗಳು ಒಟಿಟಿಗೆ ಬಂದಿವೆ. ಈ ಮೂಲಕ ಇಬ್ಬರು ನಟರ ಅಭಿಮಾನಿಗಳಿಗೆ ಸಖತ್ ಕಿಕ್ ಕೊಡುವ ಸುದ್ದಿ ಸಿಕ್ಕಿದೆ. ಜನವರಿ 24 ರಿಂದ 26ರ ತನಕ ಇರುವ ಸರಣಿ ರಜೆಯನ್ನು ಗಮನದಲ್ಲಿಟ್ಟುಕೊಂಡು […]

ಕನ್ನಡ ದುನಿಯಾ 23 Jan 2026 2:35 pm

ವಿಶ್ವದ ಮೋಸ್ಟ್ ಹ್ಯಾಂಡ್ಸಮ್ ಪುರುಷರ ಪಟ್ಟಿ ರಿಲೀಸ್: ಸ್ಪೇನ್ ನಂ.1 ಭಾರತಕ್ಕೆ ಎಷ್ಟನೇ ಸ್ಥಾನ ಗೊತ್ತಾ?

ಸಾಮಾನ್ಯವಾಗಿ ಸೌಂದರ್ಯ ಎಂದ ತಕ್ಷಣ ನಮ್ಮ ಕಣ್ಣಮುಂದೆ ಬರುವುದು ವೆನೆಜುವೆಲಾ ದೇಶದ ಮಹಿಳೆಯರು. ಅವರ ಹೊಳೆಯುವ ಚರ್ಮ, ದಟ್ಟವಾದ ಕಪ್ಪು ಕೂದಲು ಮತ್ತು ಆಕರ್ಷಕ ಮೈಬಣ್ಣಕ್ಕೆ ಇಡೀ ಜಗತ್ತೇ ಫಿದಾ ಆಗಿದೆ. ಆದರೆ, ಯಾವ ದೇಶದ ಪುರುಷರು ಅತ್ಯಂತ ಸುಂದರರು? ಎಂಬ ಪ್ರಶ್ನೆ ಬಂದಾಗ ಮಾತ್ರ ಹಲವರಲ್ಲಿ ಕುತೂಹಲದ ಜೊತೆಗೆ ಒಂದು ಸಣ್ಣ ಗೊಂದಲವೂ ಇತ್ತು. ಈಗ ಆ ಕುತೂಹಲಕ್ಕೆ ಜಾಗತಿಕ ವೇದಿಕೆಗಳಾದ ಇನ್ಫೋಡೆಕ್ಸ್ (Infodex) ಮತ್ತು ಇನ್ಸೈಡರ್ ಮಂಕಿ (InsiderMonkey) ತೆರೆ ಎಳೆದಿವೆ ವಿಶ್ವದಾದ್ಯಂತ ಸಮೀಕ್ಷೆ […]

ಕನ್ನಡ ದುನಿಯಾ 23 Jan 2026 2:33 pm

ಮಹಿಳೆ ಮೇಲೆ ಅತ್ಯಾಚಾರ, ಕೊಲೆ ಒಂದು ಸಣ್ಣ ಘಟನೆ: ವಿವಾದಾತ್ಮಕ ಹೇಳಿಕೆ ನೀಡಿದ ಸಂಸದ ರಾಜಶೇಖರ್ ಹಿಟ್ನಾಳ್

ಕೊಪ್ಪಳ: ಅತ್ಯಾಚಾರ, ಕೊಲೆಯಂತಹ ಘಟನೆಗಳು ಸಣ್ಣ ಘಟನೆ ಎಂದು ಹೇಳುವ ಮೂಲಕ ಸಂಸದ ರಾಜಶೇಖರ್ ಹಿಟ್ನಾಳ್ ಹೊಸ ವಿವಾದ ಸೃಷ್ಟಿಸಿದ್ದಾರೆ. ಸಂಸದರ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಪ್ರವಾಸೋದ್ಯಮ ಇಲಾಖೆ ಏರ್ಪಡಿಸಿದ್ದ ಕೊಪ್ಪಳ ಅನ್ವೇಷಿಸಿ ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸದ ರಾಜಶೇಖರ್ ಹಿಟ್ನಾಳ್, ಒಂದು ವರ್ಷದ ಹಿಂದೆ ಕೊಪ್ಪಳದ ಸಾಣಾಪುರದಲ್ಲಿ ವಿದೇಶಿ ಮಹಿಳೆ ಮೇಲೆ ನಡೆದ ಅತ್ಯಾಚಾರ ಹಾಗೂ ವ್ಯಕ್ತಿಯ ಕೊಲೆ ಪ್ರಕರಣ ಸಣ್ಣದಾಗಿದ್ದರೂ ಅದನ್ನು ಮಾಧ್ಯಮಗಳು ವೈಭವೀಕರಿಸಿದ್ದರಿಂದ ಪ್ರವಾಸೋಯಮಕ್ಕೆ ವ್ಯಾಪಕ ಪೆಟ್ಟುಬಿದ್ದಿದೆ ಎಂದು ಹೇಳಿದ್ದಾರೆ. ವಿದೇಶಿ ಮಹಿಳೆ […]

ಕನ್ನಡ ದುನಿಯಾ 23 Jan 2026 2:29 pm

ಉದ್ಯೋಗಾಂಕ್ಷಿಗಳಿಗೆ ಗುಡ್ ನ್ಯೂಸ್ : ‘ಇನ್ಫೋಸಿಸ್’ನಲ್ಲಿ ಭಾರಿ ನೇಮಕಾತಿ, ಹೊಸಬರಿಗೆ ಹಬ್ಬ.!

ಇತ್ತೀಚೆಗೆ ಬಂದ ಕೃತಕ ಬುದ್ಧಿಮತ್ತೆ (Artificial Intelligence – AI) ತಂತ್ರಜ್ಞಾನ ವಲಯವನ್ನೇ ಶೇಕ್ ಮಾಡುತ್ತಿದೆ. ಎಐ ಬಂದಾಗಿನಿಂದ ಉದ್ಯೋಗಿಗಳಿಗೆ ನಿದ್ದೆ ಇಲ್ಲ..ಯಾವಾಗ ನಮ್ಮ ಕೆಲಸಕ್ಕೆ ಕುತ್ತು ಬರುತ್ತೋ ಎಂಬ ಆತಂಕದಲ್ಲಿ ದಿನ ದೂಡುತ್ತಿದ್ದಾರೆ. ಇನ್ಫೋಸಿಸ್, ಟಿಸಿಎಸ್, ಅಮೆಜಾನ್, ಮೆಟಾ.. ನಂತಹ ಅನೇಕ ಸಾಫ್ಟ್ವೇರ್ ದೈತ್ಯರು ವಜಾಗೊಳಿಸುವಿಕೆಯನ್ನು ಪ್ರಾರಂಭಿಸಿದ್ದಾರೆ. ಅವರು ಹೊಸ ಉದ್ಯೋಗಾವಕಾಶಗಳನ್ನು ಸ್ಥಗಿತಗೊಳಿಸುತ್ತಿದ್ದಾರೆ ಮತ್ತು ಅಸ್ತಿತ್ವದಲ್ಲಿರುವ ಉದ್ಯೋಗಗಳಿಗೆ ಮೌಲ್ಯಮಾಪನಗಳ ಘೋಷಣೆಯನ್ನು ವಿಳಂಬ ಮಾಡುತ್ತಿದ್ದಾರೆ. ಈ ಬೆಳವಣಿಗೆಗಳ ನಡುವೆ ದೈತ್ಯ ಇನ್ಫೋಸಿಸ್ ಒಳ್ಳೆಯ ಸುದ್ದಿಯನ್ನು ನೀಡಿದೆ. ಕೃತಕ […]

ಕನ್ನಡ ದುನಿಯಾ 23 Jan 2026 2:16 pm

BIG NEWS: ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಅಪರಾಧ ಸಾಬೀತು: ತನಿಖಾ ತಂಡಕ್ಕೆ 25 ಲಕ್ಷ ನಗದು ಬಹುಮಾನ ಘೋಷಣೆ

ಬೆಂಗಳೂರು: ಜೆಡಿಎಸ್ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಅಪರಾಧ ಸಾಬೀತು ಪಡಿಸಿದ ತನಿಖಾ ತಂಡದ 30 ಅಧಿಕಾರಿಗಳು, ಸಿಬ್ಬಂದಿಗಳಿಗೆ 25 ಲಕ್ಷ ನಗದು ಬಹುಮಾನ ಘೋಷಿಸಲಾಗಿದೆ. ಎಸ್ ಐಟಿ ಮುಖ್ಯಸ್ಥ ಬಿ.ಕೆ.ಸಿಂಗ್, ಡಿಐಜಿ ಸೀಮಾ ಲಾಟ್ಕರ್, ಎಸ್ ಪಿ ಸುಮನ್ ಡಿ ಪನ್ನೇಕರ್, ಎಸ್ ಪಿ, ಸಿಎ ಸೈಮನ್, ಎಸಿಪಿ ಸತ್ಯನಾರಾಯಣ ಸಿಂಗ್, ಇನ್ಸ್ ಪೆಕ್ಟರ್ ಗಳಾದ ರಾವ್ ಗಣೇಶ್ ಜನಾರ್ಧನ್, ಶೋಭಾ ಜಿ, ಸುಮಾರಾಣಿ, ಹೇಮಂತ್ ಕುಮಾರ್ ಸೇರಿದಂತೆ 30 ಪೊಲೀಸ್ ಅಧಿಕಾರಿಗಳು ಹಾಗೂ […]

ಕನ್ನಡ ದುನಿಯಾ 23 Jan 2026 2:05 pm

Business Tips : ಹಳೆಯ ತಂತಿಗಳಿಂದ ಲಕ್ಷ ಲಕ್ಷ ಸಂಪಾದಿಸಿ , ನಿಮ್ಮ ಜೀವನವನ್ನೇ ಬದಲಾಯಿಸುವ ವ್ಯವಹಾರ !

ನೀವು ಬುದ್ಧಿವಂತರಾಗಿದ್ದರೆ ಉತ್ತಮ ಲಾಭವನ್ನು ತರುವ ಅನೇಕ ವ್ಯಾಪಾರ ಅವಕಾಶಗಳಿವೆ. ಅಂತಹ ಒಂದು ವ್ಯವಹಾರವೆಂದರೆ ತಾಮ್ರದ ತಂತಿ ಮರುಬಳಕೆ ವ್ಯವಹಾರ. ಅದರ ಬಗ್ಗೆ ಸಂಪೂರ್ಣ ವಿವರಗಳನ್ನು ತಿಳಿದುಕೊಳ್ಳೋಣ. ಈ ವ್ಯವಹಾರದ ಮುಖ್ಯ ಕಾರ್ಯವೆಂದರೆ ಹಳೆಯ ತಂತಿಗಳಿಂದ ತಾಮ್ರವನ್ನು ಹೊರತೆಗೆಯುವ ಪ್ರಕ್ರಿಯೆ. ಸಾಮಾನ್ಯವಾಗಿ, ವಿದ್ಯುತ್ ತಂತಿಗಳು ಪ್ಲಾಸ್ಟಿಕ್ ಲೇಪನವನ್ನು ಹೊಂದಿರುತ್ತವೆ. ಲೇಪನವನ್ನು ತೆಗೆದು ಒಳಗಿನ ಶುದ್ಧ ತಾಮ್ರವನ್ನು ಬೇರ್ಪಡಿಸಬೇಕು. ಇದಕ್ಕಾಗಿ, ವಿಶೇಷವಾಗಿ ಲಭ್ಯವಿರುವ ತಂತಿ ತೆಗೆಯುವ ಯಂತ್ರಗಳನ್ನು ಬಳಸಲಾಗುತ್ತದೆ. ಈ ಯಂತ್ರಗಳು ಮಾರುಕಟ್ಟೆಯಲ್ಲಿ ಹಸ್ತಚಾಲಿತ, ಅರೆ-ಸ್ವಯಂಚಾಲಿತ ಮತ್ತು ಸಂಪೂರ್ಣ […]

ಕನ್ನಡ ದುನಿಯಾ 23 Jan 2026 2:04 pm

ಡ್ರೋನ್ ಮೂಲಕ ಅಕ್ರಮ ಶಸ್ತ್ರಾಸ್ತ್ರ ಸಾಗಣೆ ಎಚ್ಚರಿಕೆ ನೀಡಿದ ಗುಪ್ತಚರ ಇಲಾಖೆ: ಜಮ್ಮು-ಕಾಶ್ಮೀರ, ಪಂಜಾಬ್, ರಾಜಸ್ಥಾನ ಗಡಿಯಲ್ಲಿ ಹೈ ಅಲರ್ಟ್

ನವದೆಹಲಿ: ಗಣರಾಜ್ಯೋತ್ಸವಕ್ಕೆ ಎರಡು ದಿನಗಳು ಮಾತ್ರ ಬಾಕಿ ಇದೆ. ಎಲ್ಲೆಡೆ ಗಣರಾಜ್ಯೋತ್ಸವಕ್ಕೆ ಸಕಲ ಸಿದ್ಧತೆಗಳು ನಡೆಯುತ್ತಿವೆ. ಈ ನಡುವೆ ದೇಶದ ಗಡಿ ಭಾಗಗಳಲ್ಲಿ ಕಟ್ಟೆಚ್ಚವಹಿಸುವಂತೆ ಗುಪ್ತಚರ ಇಲಾಖೆ ಸೂಚನೆ ನೀಡಿದೆ. ಜಮ್ಮು-ಕಾಶ್ಮೀರ, ರಾಜಸ್ಥಾನ ಗಡಿ ಭಾಗಗಳಲ್ಲಿ ಕೆಲ ದಿನಗಳ ಹಿಂದೆ ಪಾಕಿಸ್ತಾನ ಡ್ರೋನ್ ಗಳು ಹಾರಾಟ ನಡೆಸಿದ್ದ ಹಿನ್ನೆಲೆಯಲ್ಲಿ ಅಲರ್ಟ್ ಆಗಿದ್ದ ಸೇನೆಗೆ ಇದೀಗ ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ಮತ್ತಷ್ಟು ಕಟ್ಟೆಚ್ಚರ ವಹಿಸಲು ಸೂಚನೆ ನೀಡಲಾಗಿದೆ. ಪಂಜಾಬ್, ರಾಜಸ್ಥಾನ, ಜಮ್ಮು-ಕಾಶ್ಮೀರದ ಗಡಿ ಪ್ರದೇಶಗಳಲ್ಲಿ ಡ್ರೋನ್, ಪ್ಯಾರಾಗ್ಲೈಡರ್ ಹಾಗೂ ಹ್ಯಾಂಗ್ […]

ಕನ್ನಡ ದುನಿಯಾ 23 Jan 2026 1:39 pm

ಈ ರಾಜ್ಯದ ಪೊಲೀಸರ ಸಮವಸ್ತ್ರ ಖಾಕಿ ಅಲ್ಲ ಬಿಳಿ : ಇದರ ಹಿಂದಿದೆ ಈ ಕಾರಣ.!

ಭಾರತದ ಬಹುತೇಕ ರಾಜ್ಯಗಳಲ್ಲಿ (ಕರ್ನಾಟಕ ಸೇರಿದಂತೆ) ಪೊಲೀಸರು ಖಾಕಿ ಧರಿಸುತ್ತಾರೆ, ಇದು ಶಿಸ್ತು ಮತ್ತು ಧೈರ್ಯದ ಸಂಕೇತ. . ಒಂದು ಘಟನೆ ಸಂಭವಿಸಿದಾಗ ಮೊದಲು ಮಾಹಿತಿ ಪಡೆಯುವುದು ಪೊಲೀಸರೇ.ಪೊಲೀಸ್ ಪಡೆಗಳನ್ನು ನೋಡಿದಾಗ, ನೀವು ಅವರ ಸಮವಸ್ತ್ರವನ್ನು ಒಮ್ಮೆ ಗಮನಿಸಿರಬೇಕು. ಭಾರತದ ಬಹುತೇಕ ಎಲ್ಲಾ ನಗರಗಳಲ್ಲಿ ಖಾಕಿ ಪೊಲೀಸ್ ಸಮವಸ್ತ್ರದ ಬಣ್ಣವಾಗಿದೆ, ಆದರೆ ಭಾರತದಲ್ಲಿ ಪೊಲೀಸ್ ಸಮವಸ್ತ್ರವು ಬಿಳಿಯಾಗಿರುತ್ತದೆ ಎಂದು ನಿಮಗೆ ತಿಳಿದಿದೆಯೇ? ಇಂದು, ನಾವು ಆ ನಗರದ ಹೆಸರನ್ನು ನಿಮಗೆ ಹೇಳುತ್ತೇವೆ ಮತ್ತು ಆ ನಗರದ ಪೊಲೀಸರು […]

ಕನ್ನಡ ದುನಿಯಾ 23 Jan 2026 1:38 pm

ಧನುಷ್ 55ನೇ ಚಿತ್ರಕ್ಕೆ ಮುಹೂರ್ತ ಫಿಕ್ಸ್: ಅಮರನ್ ನಿರ್ದೇಶಕನ ಜೊತೆ ಧನುಷ್ ಮಿಂಚಿನ ಸಂಚಾರ

ದಕ್ಷಿಣ ಭಾರತದ ಖ್ಯಾತ ನಟ ಧನುಷ್ ತಮ್ಮ ಮುಂದಿನ ಸಿನಿಮಾಗಳ ಮೂಲಕ ಚಿತ್ರರಂಗದಲ್ಲಿ ಸಂಚಲನ ಮೂಡಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಅವರ 54ನೇ ಚಿತ್ರ ‘ಕಾರಾ’ (Kara) ದ ಫಸ್ಟ್ ಲುಕ್ ಬಿಡುಗಡೆಯಾಗಿ ಅಭಿಮಾನಿಗಳಲ್ಲಿ ಸಂಭ್ರಮ ಮೂಡಿಸಿತ್ತು. ಇದರ ಬೆನ್ನಲ್ಲೇ ಈಗ ಅವರ 55ನೇ ಚಿತ್ರದ (D55) ಅಧಿಕೃತ ಘೋಷಣೆಯಾಗಿದ್ದು, ಸಿನಿಮಾ ಪ್ರೇಮಿಗಳಲ್ಲಿ ಕುತೂಹಲ ದುಪ್ಪಟ್ಟಾಗಿದೆ. ‘ಅಮರನ್’ ನಿರ್ದೇಶಕನ ಜೊತೆ ಧನುಷ್ ಕೈಜೋಡಿ ಇತ್ತೀಚೆಗಷ್ಟೇ ಶಿವಕಾರ್ತಿಕೇಯನ್ ನಟನೆಯ ‘ಅಮರನ್’ ಚಿತ್ರದ ಮೂಲಕ ದೊಡ್ಡ ಯಶಸ್ಸು ಕಂಡ ನಿರ್ದೇಶಕ ರಾಜಕುಮಾರ್ ಪೆರಿಯಸಾಮಿ […]

ಕನ್ನಡ ದುನಿಯಾ 23 Jan 2026 1:31 pm

Business Tips : ಹಳ್ಳಿಯಲ್ಲೇ ತಿಂಗಳಿಗೆ 50,000 ಗಳಿಸಬಹುದು ! ಈ ‘ಬ್ಯುಸಿನೆಸ್’ಮಾಡಿದ್ರೆ ಒಳ್ಳೆ ಲಾಭ.!

ಹಳ್ಳಿಯಲ್ಲೇ ಒಂದು ಒಳ್ಳೆಯ ವ್ಯವಹಾರ… ಬೆರಳೆಣಿಕೆಯಷ್ಟು ಸಂಪಾದನೆ, ಮತ್ತು ನಾಲ್ಕು ಜನರಿಗೆ ಒಳ್ಳೆಯದನ್ನು ಮಾಡಿದ ತೃಪ್ತಿ. ಇನ್ನೇನು ಬೇಕು? ಹೌದು ತಿಂಗಳಿಗೆ ರೂ. 50,000 ಕ್ಕಿಂತ ಹೆಚ್ಚು ಸಂಪಾದಿಸಿ ನಿಮ್ಮ ಸ್ವಂತ ಮನೆಯಲ್ಲಿ ಆರಾಮಾಗಿ ಬದುಕಲು ಒಂದು ವ್ಯವಹಾರ ಬಗ್ಗೆ ತಿಳಿಸಿಕೊಡುತ್ತಿದ್ದೇವೆ. ಹೆಚ್ಚಿನ ಜನರು ಸಾಮಾನ್ಯವಾಗಿ ತಮ್ಮ ಜೀವನೋಪಾಯಕ್ಕಾಗಿ ಕೃಷಿಯನ್ನು ಅವಲಂಬಿಸಿರುತ್ತಾರೆ. ಕೃಷಿಯೇತರ ಆದಾಯದ ಮೂಲಗಳು ಬಹಳ ಕಡಿಮೆ. ಅಂತಹ ಹಳ್ಳಿಗಳಲ್ಲಿ ವ್ಯಾಪಾರ ಮಾಡಲು, ಒಂದು ಒಳ್ಳೆಯ ಕಲ್ಪನೆಯ ಅಗತ್ಯವಿದೆ. ಅಂತಹ ಒಂದು ಕಲ್ಪನೆ ಎಂದರೆ ನೀರಿನ […]

ಕನ್ನಡ ದುನಿಯಾ 23 Jan 2026 1:14 pm

ನಿಮ್ಮ ಮುಖದ ಕಾಂತಿ ಹೆಚ್ಚಿಸಲು ಈ 10 ನಿಮಿಷದ ಮ್ಯಾಜಿಕ್ ಸಾಕು: ಇಲ್ಲಿದೆ ಕೊರಿಯನ್ 4-2-4 ಟ್ರಿಕ್

ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ಕಲೆರಹಿತ, ಮೃದುವಾದ ಮತ್ತು ಹೊಳೆಯುವ ಚರ್ಮ (Glass Skin) ಬೇಕೆಂಬ ಆಸೆ ಇರುತ್ತದೆ. ಅದರಲ್ಲೂ ಕೊರಿಯನ್ ಮಹಿಳೆಯರ ಚರ್ಮದ ಕಾಂತಿ ವಿಶ್ವಪ್ರಸಿದ್ಧ. ಅವರು ಯಾವುದೇ ದುಬಾರಿ ಚಿಕಿತ್ಸೆ ಅಥವಾ ಕ್ರೀಮ್‌ಗಳಿಗಿಂತ ಹೆಚ್ಚಾಗಿ ತಮ್ಮ ದಿನನಿತ್ಯದ ಚರ್ಮದ ಆರೈಕೆಯಲ್ಲಿ ‘4-2-4’ ಎಂಬ ಸರಳ ನಿಯಮವನ್ನು ಪಾಲಿಸುತ್ತಾರೆ. ಕೇವಲ 10 ನಿಮಿಷಗಳ ಕಾಲ ಮನೆಯಲ್ಲೇ ಇದನ್ನು ಅನುಸರಿಸುವ ಮೂಲಕ ನೀವು ಅದ್ಭುತ ಫಲಿತಾಂಶ ಪಡೆಯಬಹುದು. ಏನಿದು 4-2-4 ಸ್ಕಿನ್ ಕೇರ್ ಸೂತ್ರ? ಈ ವಿಧಾನವು ಮೂರು […]

ಕನ್ನಡ ದುನಿಯಾ 23 Jan 2026 1:12 pm

ನಾಲ್ಕು ವರ್ಷದ ಮಗುವಿನ ಮೇಲೆ ಹರಿದು ಹೋದ ಬಸ್; ಕಂದಮ್ಮ ಸ್ಥಳದಲ್ಲೇ ಸಾವು

ರಾಯಚೂರು: ನಾಲ್ಕು ವರ್ಷದ ಮಗುವಿನ ಮೇಲೆ ಕೆ.ಕೆ.ಆರ್.ಟಿ.ಸಿ ಬಸ್ ಹರಿದು ಹೋಗಿದ್ದು, ಕಂದಮ್ಮ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಮದರಕಲ್ ನಲ್ಲಿ ನಡೆದಿದೆ. ನಾಲ್ಕು ವರ್ಷದ ವಿದ್ಯಾಶ್ರೀ ಮೃತ ಕಂದಮ್ಮ. ಗೂಗಲ್ ನಿಂದ ದೇವದುರ್ಗಕ್ಕೆ ತೆರಳುತ್ತಿದ್ದ ಬಸ್ ಗೆ ಬಾಲಕಿ ಅಚಾನಕ್ ಆಗಿ ರಸ್ತೆಯಲ್ಲಿ ಅಡ್ಡ ಬಂದಿದ್ದಾಳೆ. ಬಸ್ ಮಗುವಿನ ಮೇಲೆಯೇ ಹರಿದು ಹೋಗಿದ್ದು, ಸ್ಥಳದಲ್ಲೇ ಬಾಲಕಿ ಸಾವನ್ನಪ್ಪಿದ್ದಾಳೆ. ಬಸ್ ಬರುವುದನ್ನೂ ಗಮನಿಸದೇ ಮಗು ರಸ್ತೆ ದಾಟುತ್ತಿದ್ದಾಗ ಈ ದುರಂತ ಸಂಭವಿಸಿದೆ. ಮಗು […]

ಕನ್ನಡ ದುನಿಯಾ 23 Jan 2026 1:03 pm

NCC ಯಲ್ಲಿ ಮಾಜಿ ಸೈನಿಕರಿಗೆ ಒಪ್ಪಂದದ ಮೇರೆಗೆ ಬೋಧಕರ ಹುದ್ದೆಗೆ ನೇಮಕಾತಿ

ಚಿತ್ರದುರ್ಗ : ಕರ್ನಾಟಕ ಮತ್ತು ಗೋವಾ ಎನ್.ಸಿ.ಸಿ ನಿರ್ದೇಶನಾಲಯವು 2026-27 ನೇ ಸಾಲಿಗಾಗಿ ಮಾಜಿ ಸೈನಿಕರನ್ನು ಒಪ್ಪಂದದ ಮೇರೆಗೆ 30 ಎನ್.ಸಿ.ಸಿ ಬೋಧಕರ ಹುದ್ದೆಗೆ ಕೆಲವು ಷರತ್ತುಗಳೊಂದಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸಲು ಜ.25 ಕೊನೆಯ ದಿನಾಂಕವಾಗಿದೆ. ಆಸಕ್ತರು ಅರ್ಜಿಯನ್ನು ಇಮೇಲ್ jtdirpc.kardte@nccindia.nic.in ಮೂಲಕ ಮತ್ತು ಅಂಚೆ ವಿಳಾಸ NCC Dte (Karnataka and Goa) KSCMF, Building, 4th Floor, No-8, Cunningham Road, Bengaluru-560001 ಮೂಲಕ ಸಲ್ಲಿಸಬೇಕಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ https://nccindia.gov.in ಜಾಲತಾಣವನ್ನು ಅಥವಾ […]

ಕನ್ನಡ ದುನಿಯಾ 23 Jan 2026 12:59 pm

ಐಟಿ ಹಬ್‌ನಲ್ಲಿ ಬಾಡಿಗೆಯದ್ದೇ ಅಬ್ಬರ: ಬೆಂಗಳೂರಿನ ಈ ಏರಿಯಾದಲ್ಲಿ 2BHK ಫ್ಲ್ಯಾಟ್ ಬೆಲೆ ಬರೋಬ್ಬರಿ 70,000 ರೂ

ಬೆಂಗಳೂರು: ಕನಸುಗಳ ನಗರಿ, ಉದ್ಯಾನ ನಗರಿ ಬೆಂಗಳೂರಿಗೆ ಕೆಲಸ ಅರಸಿ ಬರುವ ಹೊರರಾಜ್ಯದ ಯುವಕ-ಯುವತಿಯರು ಮೊದಲು ಎದುರಿಸುವ ಸವಾಲೇ ಬಾಡಿಗೆ ಮನೆ. ಆದರೆ, ಸಿಲಿಕಾನ್ ಸಿಟಿಯ ಬಾಡಿಗೆ ದರಗಳು ಈಗ ಜನಸಾಮಾನ್ಯರ ಕೈಗೆಟುಕದ ಮಟ್ಟಕ್ಕೆ ಏರುತ್ತಿವೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ.ರಾಜಧಾನಿಯ ಐಟಿ ಕಾರಿಡಾರ್‌ಗಳಲ್ಲಿ ಮನೆ ಬಾಡಿಗೆ ದರ ಗಗನಕ್ಕೇರುತ್ತಿರುವುದು ಹೊಸ ಸುದ್ದಿಯಲ್ಲದಿದ್ದರೂ ಇತ್ತೀಚಿನ ಒಂದು ಸಾಮಾಜಿಕ ಜಾಲತಾಣದ ಪೋಸ್ಟ್ ಬೆಂಗಳೂರಿನ ಜೀವನದ ಕಹಿ ವಾಸ್ತವವನ್ನು ಮತ್ತೆ ಮುನ್ನೆಲೆಗೆ ತಂದಿದೆ. ತಕ್ಷಣವೇ ಈ ಬಗ್ಗೆ ಎಕ್ಸ್ (X) […]

ಕನ್ನಡ ದುನಿಯಾ 23 Jan 2026 12:51 pm