SENSEX
NIFTY
GOLD
USD/INR

Weather

27    C

ಡಿಜಿಟಲ್ ಸುದ್ದಿ ಮೂಲಗಳು

... ...View News by News Source

BREAKING: ಕೆ.ಜೆ.ಜಾರ್ಜ್ ರಾಜೀನಾಮೆ ಕೊಟ್ಟಿಲ್ಲ: ಸಚಿವರ ರಾಜೀನಾಮೆ ಪ್ರಹಸನದ ಬಗ್ಗೆ ಸದನದಲ್ಲೇ ಸ್ಪಷ್ಟನೆ ನೀಡಿದ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಇಂಧನ ಇಲಾಖೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯನವರ ಹಸ್ತಕ್ಷೇಪಕ್ಕೆ ಬೇಸತ್ತು ಇಂಧನ ಸಚಿವ ಕೆ.ಜೆ.ಜಾರ್ಜ್ ರಾಜೀನಾಮೆ ನೀಡಿದ್ದರು ಎಂಬ ಸುದ್ದಿ ರಾಜ್ಯ ರಾಜಕೀಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಇದೇ ವಿಚಾರ ಇಂದು ವಿಧಾನಮಂಡಲ ಅಧಿವೇಶನದಲ್ಲಿಯೂ ಪ್ರತಿಧ್ವನಿಸಿದೆ. ರಾಜೀನಾಮೆ ಗೊಂದಲದ ಬಗ್ಗೆ ಸ್ವತಃ ಇಂಧನ ಸಚಿವ ಕೆ.ಜೆ.ಜಾರ್ಜ್ ಅವರೇ ಸ್ಪಷ್ಟನೆ ನೀಡಿದರೂ ಸದನದಲ್ಲಿ ಪದೇ ಪದೇ ವಿಷಯ ಚರ್ಚೆಗೆ ಬಂದಿದೆ. ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ರಹಸ್ಯದ ಬಗ್ಗೆ ವಿಧಾನಸಭೆಯಲ್ಲಿ ಪ್ರತಿಕ್ರಿಯೆ ನೀಡಿದರು. ಇಂಧನ […]

ಕನ್ನಡ ದುನಿಯಾ 29 Jan 2026 3:17 pm

‘ESIC’ನೋಂದಣಿ : ಉದ್ಯೋಗಿಗಳಿಗೆ ಬಿಗ್ ಅಪ್ ಡೇಟ್.!

ಕಾರ್ಮಿಕರ ರಾಜ್ಯ ವಿಮಾ ನಿಗಮವು (ಇಎಸ್‌ಐಸಿ) ಉದ್ಯೋಗದಾತರು ಮತ್ತು ಉದ್ಯೋಗಿಗಳ ನೋಂದಣಿಯನ್ನು ಉತ್ತೇಜಿಸುವ ಯೋಜನೆಯಡಿ ಉದ್ಯೋಗದಾತರು ಮತ್ತು ಉದ್ಯೋಗಿಗಳು ನೋಂದಾಯಿಕೊಳ್ಳಲು ಜ.31 ರ ವರೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಕಲಬುರಗಿ ಪ್ರಾದೇಶಿಕ ಕಚೇರಿಯ ಜಂಟಿ ನಿರ್ದೇಶಕ ಯುವರಾಜ ಎಸ್.ವಿ ಅವರು ತಿಳಿಸಿದ್ದಾರೆ. ಉದ್ಯೋಗದಾತರು ಮತ್ತು ಉದ್ಯೋಗಿಗಳ ನೋಂದಣಿಯನ್ನು ಉತ್ತೇಜಿಸುವ ಯೋಜನೆಯು ಕಾರ್ಮಿಕರ ರಾಜ್ಯ ವಿಮಾ ನಿಗಮವು ಸಾಮಾಜಿಕ ಭದ್ರತಾ ವ್ಯಾಪ್ತಿಯನ್ನು ವಿಸ್ತರಿಸಲು ಅನುಮೋದಿಸಿದ ಒಂದು ವಿಶೇಷ ಉಪಕ್ರಮವಾಗಿದ್ದು, ಇದರಡಿ ನೋಂದಾಯಿಸಿಕೊಳ್ಳಲು 31ನೇ ಡಿಸೆಂಬರ್ 2025 ರವರೆಗೆ ಅವಕಾಶ […]

ಕನ್ನಡ ದುನಿಯಾ 29 Jan 2026 3:13 pm

₹15 ಲಕ್ಷ ಖರ್ಚು ಮಾಡಿ ಸಾಕುನಾಯಿಯನ್ನು ಆಸ್ಟ್ರೇಲಿಯಾಕ್ಕೆ ಕರೆದೊಯ್ದ ಹೈದರಾಬಾದ್ ದಂಪತಿ: ಹಣಕ್ಕಿಂತ ಮಿಗಿಲು ಮಮಕಾರ

ಹೈದರಾಬಾದ್: ನಾಯಿಯ ಪ್ರೀತಿ ಪ್ರೀತಿಯ ಅತ್ಯಂತ ಶುದ್ಧ ರೂಪ ಎಂಬ ಮಾತಿಗೆ ಹೈದರಾಬಾದ್‌ನ ದಿವ್ಯಾ ಮತ್ತು ಜಾನ್ ದಂಪತಿ ಜೀವಂತ ಉದಾಹರಣೆಯಾಗಿ ನಿಂತಿದ್ದಾರೆ. ವೃತ್ತಿ ಬದುಕಿನ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾಕ್ಕೆ ವಲಸೆ ಹೋದ ಈ ದಂಪತಿ ತಮ್ಮ ಪ್ರೀತಿಯ ಸಾಕುನಾಯಿ ಸ್ಕೈ (Sky) ನನ್ನು ಬಿಟ್ಟಿರಲಾರದೆ ಬರೋಬ್ಬರಿ 15 ಲಕ್ಷ ರೂಪಾಯಿ ಖರ್ಚು ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಹೈದರಾಬಾದ್‌ನ ದಂಪತಿಗಳು ತಮ್ಮ ಪ್ರೀತಿಯ ಸಾಕುನಾಯಿ ‘ಸ್ಕೈ’ (Sky) ನನ್ನು ಆಸ್ಟ್ರೇಲಿಯಾಕ್ಕೆ ಕರೆದೊಯ್ಯಲು ಸುಮಾರು 15 ಲಕ್ಷ […]

ಕನ್ನಡ ದುನಿಯಾ 29 Jan 2026 3:07 pm

BREAKING : ರಾಜ್ಯದ ಪೊಲೀಸ್ ಸಿಬ್ಬಂದಿಗಳಿಗೆ ಭರ್ಜರಿ ಗಿಫ್ಟ್ : ಹುಟ್ಟುಹಬ್ಬ , ವಿವಾಹ ವಾರ್ಷಿಕೋತ್ಸವಕ್ಕೆ ಸಾಂದರ್ಭಿಕ ರಜೆ ಮಂಜೂರು.!

ಬೆಂಗಳೂರು : ಕರ್ನಾಟಕ ಸರ್ಕಾರವು ಪೊಲೀಸ್ ಸಿಬ್ಬಂದಿಗಳ ಕೆಲಸದ ಒತ್ತಡವನ್ನು ಕಡಿಮೆ ಮಾಡಲು ಮತ್ತು ಅವರ ಕೌಟುಂಬಿಕ ಜೀವನಕ್ಕೆ ಪ್ರಾಮುಖ್ಯತೆ ನೀಡಲು ಹುಟ್ಟುಹಬ್ಬ ಮತ್ತು ವಿವಾಹ ವಾರ್ಷಿಕೋತ್ಸವದ ದಿನದಂದು ಸಾಂದರ್ಭಿಕ ರಜೆ (Casual Leave) ಮಂಜೂರು ಮಾಡಿ ಮಹತ್ವದ ಆದೇಶ ಹೊರಡಿಸಿದೆ. ದಿನದ 24 ಗಂಟೆಯೂ ಕರ್ತವ್ಯದಲ್ಲಿರುವ ಪೊಲೀಸರು ತಮ್ಮ ವೈಯಕ್ತಿಕ ಮತ್ತು ಕೌಟುಂಬಿಕ ಸಂಭ್ರಮಗಳಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ ಎಂಬ ಕಾರಣಕ್ಕೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.ಪೊಲೀಸ್ ಇಲಾಖೆಯ ಕೆಲಸದ ದಕ್ಷತೆಯನ್ನು ಹೆಚ್ಚಿಸಲು ಮತ್ತು ಸಿಬ್ಬಂದಿಗಳ ಮಾನಸಿಕ ಆರೋಗ್ಯ […]

ಕನ್ನಡ ದುನಿಯಾ 29 Jan 2026 3:03 pm

ಟಿ-20 ವಿಶ್ವಕಪ್: ಭಾರತ-ಪಾಕಿಸ್ತಾನ ತಂಡದ ಭದ್ರತೆಗೆ ವಿಶೇಷ ಪಡೆ ನಿಯೋಜಿಸಿದ ಶ್ರೀಲಂಕಾ

ಐಸಿಸಿ ಟಿ-20 ಪುರುಷರ ವಿಶ್ವಕಪ್ ಪಂದ್ಯಗಳು ಭಾರತ ಮತ್ತು ಶ್ರೀಲಂಕಾದಲ್ಲಿ ನಡೆಯಲಿವೆ. ಮುಂದಿನ ತಿಂಗಳು ಆರಂಭವಾಗಲಿರುವ ಪಂದ್ಯಗಳಿಗೆ ಭದ್ರತೆ ಒದಗಿಸಲು ಶ್ರೀಲಂಕಾ ವಿಶೇಷ ಪಡೆಯನ್ನು ನಿಯೋಜನೆ ಮಾಡಿದೆ. ಅದರಲ್ಲೂ ಸಂಪ್ರಾದಾಯಿಕ ಎದುರಾಳಿಗಳಾದ ಭಾರತ-ಪಾಕಿಸ್ತಾನ ತಂಡ, ಪಂದ್ಯಕ್ಕೆ ವಿಶೇಷ ಭದ್ರತೆ ಇರಲಿದೆ. ಟಿ-20 ವಿಶ್ವಕಪ್‌ ತಂಡಗಳ ಭದ್ರತೆಗೆ ಶ್ರೀಲಂಕಾ ಗಣ್ಯರ ಭದ್ರತೆಗೆ ಬಳಕೆ ಮಾಡುವ ಸಶಸ್ತ್ರ ಪಡೆಗಳನ್ನು ನಿಯೋಜಿಸಲಿದೆ. ಭಾರತ ಮತ್ತು ಪಾಕಿಸ್ತಾನದ ನಡುವಿನ ಪಂದ್ಯಗಳಿಗೆ ವಿಶೇಷ ಒತ್ತು ನೀಡುವ ಭದ್ರತಾ ಕ್ರಮಗಳ ಕುರಿತು ಈಗಾಗಲೇ ಯೋಜನೆ ತಯಾರು […]

ಕನ್ನಡ ದುನಿಯಾ 29 Jan 2026 2:57 pm

BREAKING : ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್ ಭೇಟಿಯಾದ ಕಾನ್ಸ್’ಟೇಬಲ್ ಗೆ ಸಂಕಷ್ಟ.!

ಬೆಂಗಳೂರು : ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್ ಅವರನ್ನು ನಿಯಮ ಉಲ್ಲಂಘಿಸಿ ಭೇಟಿಯಾದ ಯಲಹಂಕ ಮೂಲದ ಕಾನ್ಸ್‌ಟೇಬಲ್ ಒಬ್ಬರ ಪ್ರಕರಣ ಈಗ ಭಾರೀ ಸುದ್ದಿಯಲ್ಲಿದೆ. ಹೌದು ಈ ಘಟನೆಯು ಜನವರಿ 24, 2026 ರಂದು ನಡೆದಿದೆ. ಯಲಹಂಕ ಪೊಲೀಸ್ ಠಾಣೆಯ ಕಾನ್ಸ್‌ಟೇಬಲ್ ಒಬ್ಬರು ಬೇರೊಂದು ಪ್ರಕರಣದ ಆರೋಪಿಗಳನ್ನು ಜೈಲಿಗೆ ಬಿಡಲು ಬಂದಿದ್ದರು. ಆದರೆ, ತಮ್ಮ ಅಧಿಕೃತ ಕೆಲಸ ಮುಗಿಸಿದ ನಂತರ ನಟ ದರ್ಶನ್ ಅವರನ್ನು ಭೇಟಿ ಮಾಡುವ ಇಚ್ಛೆ ವ್ಯಕ್ತಪಡಿಸಿದ್ದಾರೆ. ಜೈಲಿನ ವಾರ್ಡನ್ ಪ್ರಭು […]

ಕನ್ನಡ ದುನಿಯಾ 29 Jan 2026 2:46 pm

ತಿಂಗಳಿಗೆ ₹12 ಲಕ್ಷದವರೆಗೆ ಗಳಿಸಬಹುದು: ಪೈಲಟ್ ವೃತ್ತಿಯ ಆಕರ್ಷಕ ಸಂಬಳ ಮತ್ತು ಸವಾಲುಗಳ ಮಾಹಿತಿ ಇಲ್ಲಿದೆ

ಪೈಲಟ್ ಆಗುವುದು ಎಂದರೆ ಅದು ಕೇವಲ ಆಕಾಶದಲ್ಲಿ ಹಾರಾಡುವ ಕನಸಲ್ಲ, ಅದೊಂದು ಜವಾಬ್ದಾರಿಯುತ ಮತ್ತು ಸವಾಲಿನ ವೃತ್ತಿ. ಪೈಲಟ್‌ಗಳ ಸಂಬಳ, ತರಬೇತಿ ಮತ್ತು ಜವಾಬ್ದಾರಿಗಳ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ: ಪೈಲಟ್ ಸಂಬಳ: ತಿಂಗಳಿಗೆ ಎಷ್ಟು ಗಳಿಸಬಹುದು? ವಾಣಿಜ್ಯ ಪೈಲಟ್ (Commercial Pilot) ಆಗಿ ಕೆಲಸ ಮಾಡುವವರಿಗೆ ಅವರ ಅನುಭವ ಮತ್ತು ಹಾರಾಟದ ಸಮಯದ ಆಧಾರದ ಮೇಲೆ ಆಕರ್ಷಕ ಸಂಬಳ ನೀಡಲಾಗುತ್ತದೆ. ಆರಂಭಿಕ ಹಂತ (Fresher): ಕಮರ್ಷಿಯಲ್ ಪೈಲಟ್ ಲೈಸೆನ್ಸ್ (CPL) ಹೊಂದಿರುವ ಹೊಸಬರಿಗೆ ತಿಂಗಳಿಗೆ ಸುಮಾರು […]

ಕನ್ನಡ ದುನಿಯಾ 29 Jan 2026 2:30 pm

ಬಳ್ಳಾರಿ ಬ್ಯಾನರ್ ಗಲಾಟೆ: ವರ್ಗಾವಣೆ ಆದೇಶ ರದ್ದುಪಡಿಸಿ ಚಂದ್ರಕಾಂತ್ ನಂದಾರೆಡ್ಡಿಯನ್ನೇ ಡಿವೈಎಸ್ ಪಿಯಾಗಿ ಮುಂದುವರೆಸಿದ ಸರ್ಕಾರ

ಬಳ್ಳಾರಿ: ಬಳ್ಳಾರಿಯಲ್ಲಿ ನಡೆದಿದ್ದ ಬ್ಯಾನರ್ ಗಲಾಟೆ-ಫೈರಿಂಗ್ ಪ್ರಕರಣದ ಬೆನ್ನಲ್ಲೇ ವರ್ಗಾವಣೆ ಮಾಡಲಾಗಿದ್ದ ಡಿವೈಎಸ್ ಪಿ ಚಂದ್ರಕಾಂತ್ ನಂದಾರೆಡ್ಡಿ ಅವರನ್ನು ರಾಜ್ಯ ಸರ್ಕಾರ ಇದೀಗ ಮತ್ತೆ ಮುಂದುವರಿಕೆ ಮಾಡಿದೆ. ಡಿವೈ ಎಸ್ ಪಿ ನಂದಾರೆಡ್ಡಿ ಅವರಗಾವಣೆ ಆದೇಶವನ್ನು ದುಢೀರ್ ರದ್ದುಗೊಳಿಸಿದ್ದು, ಬಳ್ಳಾರಿ ಡಿವೈಎಸ್ ಪಿಯಾಗಿ ಅವರನ್ನೇ ಮುಂದುವರೆಸಿದೆ. ಸರ್ಕಾರದ ಈ ನಡುವೆ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಬಳ್ಳಾರಿ ಗಲಾಟೆ ನಡೆದ ಮರುದಿನವೇ ರಾಜ್ಯ ಸರ್ಕಾರ ನೂತನ ಎಸ್ ಪಿ ಪವನ್ ನಜ್ಜೂರ್ ಅವರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿತ್ತು. […]

ಕನ್ನಡ ದುನಿಯಾ 29 Jan 2026 2:25 pm

ವೆಸ್ಪಾದಿಂದ ಹೊಸ ಐಷಾರಾಮಿ ಸ್ಕೂಟರ್ 946 ಹಾರ್ಸ್ ಅನಾವರಣ: ಕುದುರೆಯ ಜೀನಿನಂತಹ ಸೀಟ್ ಇದರ ವಿಶೇಷತೆ

ಲೂನಾರ್ ಕ್ಯಾಲೆಂಡರ್ ಆಧಾರಿತವಾಗಿ ಪ್ರತಿ ವರ್ಷ ವಿಶೇಷ ಆವೃತ್ತಿಗಳನ್ನು ಬಿಡುಗಡೆ ಮಾಡುವ ಸಂಪ್ರದಾಯವನ್ನು ವೆಸ್ಪಾ ಮುಂದುವರಿಸಿದೆ. ಈ ಹಿಂದೆ ಬಿಡುಗಡೆಯಾದ ಡ್ರ್ಯಾಗನ್ ಮತ್ತು ಸ್ನೇಕ್ ಎಡಿಷನ್‌ಗಳ ನಂತರ, ಈಗ ಕುದುರೆಯ ಥೀಮ್ ಹೊಂದಿರುವ ಈ ಮಾದರಿಯನ್ನು ಪರಿಚಯಿಸಲಾಗಿದೆ. ಪ್ರಮುಖ ವೈಶಿಷ್ಟ್ಯಗಳು: ವಿಶಿಷ್ಟ ಬಣ್ಣ ಮತ್ತು ವಿನ್ಯಾಸ: ಈ ಸ್ಕೂಟರ್ ಕುದುರೆಗಳ ಬಣ್ಣವನ್ನು ಹೋಲುವ ‘ಬೇ ಬ್ರೌನ್’ (Bay Brown) ಎಂಬ ಗಾಢ ಕಂದು ಬಣ್ಣದಲ್ಲಿದೆ. ಇದರ ಬಾಡಿಯು ಸ್ಟೀಲ್ ಮೋನೊಕಾಕ್ ವಿನ್ಯಾಸ ಹೊಂದಿದ್ದು, ಮ್ಯಾಟ್ ಮತ್ತು ಗ್ಲೋಸಿ […]

ಕನ್ನಡ ದುನಿಯಾ 29 Jan 2026 2:17 pm

Ajit Pawar Plane Crash: “ಓಹ್ ಶಟ್” : ಅಪಘಾತಕ್ಕೂ ಮುನ್ನ ಪೈಲಟ್ ಹೇಳಿದ ಕೊನೆಯ ಮಾತುಗಳು ಇವು.!

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ಸಾವಿಗೆ ಕಾರಣವಾದ ಭೀಕರ ವಿಮಾನ ಅಪಘಾತಕ್ಕೆ ಸಂಬಂಧಿಸಿದಂತೆ ಕೆಲವು ಆಘಾತಕಾರಿ ವಿಷಯಗಳು ಬೆಳಕಿಗೆ ಬರುತ್ತಿವೆ. ವಿಮಾನವು ಪತನಗೊಳ್ಳುವ ಕೆಲವೇ ಕ್ಷಣಗಳ ಮೊದಲು ಕಾಕ್ಪಿಟ್ನಲ್ಲಿ ದಾಖಲಾದ ಕೊನೆಯ ಮಾತುಗಳು ಈಗ ಎಲ್ಲರನ್ನೂ ದಿಗ್ಭ್ರಮೆಗೊಳಿಸಿವೆ. ಮುಂಬೈನಿಂದ ಬಾರಾಮತಿಗೆ ಪ್ರಯಾಣಿಸುತ್ತಿದ್ದ ಈ ಖಾಸಗಿ ವಿಮಾನವು ಲ್ಯಾಂಡಿಂಗ್ ಸಮಯದಲ್ಲಿ ನಿಯಂತ್ರಣ ತಪ್ಪಿ ನೆಲಕ್ಕೆ ಅಪ್ಪಳಿಸಿತು. ಈ ವೇಳೆ ಅಜಿತ್ ಪವಾರ್ ಅವರೊಂದಿಗೆ ಪೈಲಟ್ ಸುಮಿತ್ ಕಪೂರ್, ಸಹ-ಪೈಲಟ್ ಶಾಂಭವಿ ಪಾಠಕ್ ಮತ್ತು ಸಿಬ್ಬಂದಿ ಸೇರಿದಂತೆ ಒಟ್ಟು […]

ಕನ್ನಡ ದುನಿಯಾ 29 Jan 2026 2:10 pm

BREAKING : ಆರ್ಥಿಕ ಸಮೀಕ್ಷೆ ವರದಿ ಮಂಡನೆ : 2026-27 ರಲ್ಲಿ ಶೇ. 6.8 ರಿಂದ 7.2 ರಷ್ಟು ‘GDP’ಬೆಳವಣಿಗೆ ನಿರೀಕ್ಷೆ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಗುರುವಾರ (ಜನವರಿ 29) ಸಂಸತ್ತಿನಲ್ಲಿ ಆರ್ಥಿಕ ಸಮೀಕ್ಷೆಯನ್ನು (Economic Survey) ಬಿಡುಗಡೆ ಮಾಡಿದರು. ಇದರ ಪ್ರಕಾರ, 2026-27ರ ಹಣಕಾಸು ವರ್ಷದಲ್ಲಿ (FY27) ಭಾರತದ ಆರ್ಥಿಕತೆಯು ಶೇಕಡಾ 6.8 ರಿಂದ 7.2 ರಷ್ಟು ವೃದ್ಧಿ ದರವನ್ನು ದಾಖಲಿಸಲಿದೆ ಎಂದು ಅಂದಾಜಿಸಲಾಗಿದೆ. ಜಾಗತಿಕ ರಾಜಕೀಯ ಉದ್ವಿಗ್ನತೆ ಮತ್ತು ಆರ್ಥಿಕ ಅನಿಶ್ಚಿತತೆಯ ನಡುವೆಯೂ ಭಾರತದ ಆರ್ಥಿಕತೆಯು ಸ್ಥಿರವಾಗಿ ಮುನ್ನುಗ್ಗುತ್ತಿರುವುದು ಗಮನಾರ್ಹ. ದೇಶದ ಸಂಭಾವ್ಯ ಬೆಳವಣಿಗೆ ದರ (Potential Growth) ಸುಮಾರು ಶೇ. 7 […]

ಕನ್ನಡ ದುನಿಯಾ 29 Jan 2026 1:54 pm

BIG NEWS: ಪಂಜಾಬ್ ಹಾಗೂ ಹರಿಯಾಣ ಸಚಿವಾಲಯಕ್ಕೆ ಬಾಂಬ್ ಬೆದರಿಕೆ

ನವದೆಹಲಿ: ರಾಷ್ಟ್ರಾದ್ಯಂತ ಇತ್ತೀಚಿನ ದಿನಗಳಲ್ಲಿ ಬಾಂಬ್ ಬೆದರಿಕೆ ಕರೆಗಳು ಹೆಚ್ಚುತ್ತಿವೆ. ರಾಷ್ಟ್ರ ರಾಜಧಾನಿ ದೆಹಲಿಯ ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆ ಬೆನ್ನಲ್ಲೇ ಇದೀಗ ಪಂಜಾಬ್, ಹರಿಯಾಣ ಸಚಿವಾಲಯಕ್ಕೆ ಬಾಂಬ್ ಬೆದರಿಕೆ ಹಾಕಲಾಗಿದೆ. ಪಂಜಾಬ್ ಹಾಗೂ ಹರಿಯಾಣ ಸಚಿವಾಲಯಕ್ಕೆ ದುಷ್ಕರ್ಮಿಗಳು ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಸಂದೇಶ ರವಾನಿಸಿದ್ದಾರೆ. ತಕ್ಷಣ ಪೊಲೀಸರು, ಬಾಂಬ್ ಪತ್ತೆದಳ, ಬಾಂಬ್ ನಿಷ್ಕ್ರಿಯ ದಳ ಕಾರ್ಯಪ್ರವೃತ್ತರಾಗಿದ್ದು, ಸಚಿವಾಲಯದಲ್ಲಿ ಪರಿಶೀಲನೆ ನಡೆಸಿದ್ದಾರೆ. ಸಚಿವಾಲಯ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿಯೂ ಪರಿಶೀಲನೆ ನಡೆಸಿದ್ದು, ಯಾವುದೇ ಸ್ಫೋಟಕ ವಸ್ತುಗಳು ಪತ್ತೆಯಾಗಿಲ್ಲ […]

ಕನ್ನಡ ದುನಿಯಾ 29 Jan 2026 1:48 pm

ಮಲೆ ಮಹದೇಶ್ವರ ಜಾತ್ರೆ 2026: ಭಕ್ತರಿಗೆ ಅಪ್‌ಡೇಟ್‌ಗಳು

ಕರ್ನಾಟಕದ ಪ್ರಸಿದ್ಧ ಯಾತ್ರಾ ಸ್ಥಳವಾದ ಮಲೆ ಮಹದೇಶ್ವರ ಬೆಟ್ಟ 2026ನೇ ಸಾಲಿನ ಜಾತ್ರೆಗೆ ತಯಾರಾಗುತ್ತಿದೆ. ಮಹಾಶಿವರಾತ್ರಿ ಹಾಗೂ ಯುಗಾದಿ ಜಾತ್ರಾ ಸಂದರ್ಭದಲ್ಲಿ ಭಕ್ತಾಧಿಗಳಿಗೆ ಹೆಚ್ಚಿನ ಮೂಲಸೌಲಭ್ಯಗಳನ್ನು ಕಲ್ಪಿಸಲು ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್ ಸೂಚನೆ ನೀಡಿದ್ದಾರೆ. ಬೆಂಗಳೂರಿನ ವಿಕಾಸಸೌಧದ 4ನೇ ಮಹಡಿಯಲ್ಲಿರುವ ಕೊಠಡಿ ಸಂಖ್ಯೆ 419ರಲ್ಲಿ ಮಹಾಶಿವರಾತ್ರಿ ಹಾಗೂ ಯುಗಾದಿ ಜಾತ್ರಾ ಸಂಬಂಧ ನಡೆದ ಪೂರ್ವಸಿದ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಸಚಿವರು ಮಾತನಾಡಿದರು. ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ದಿ ಪ್ರಾಧಿಕಾರದ ಉಪಾಧ್ಯಕ್ಷರು ಆಗಿರುವ ಜಿಲ್ಲಾ ಉಸ್ತುವಾರಿ […]

ಕನ್ನಡ ದುನಿಯಾ 29 Jan 2026 1:47 pm

BREAKING NEWS : ‘UGC’ಯ ಹೊಸ ನಿಯಮಗಳಿಗೆ ಸುಪ್ರೀಂಕೋರ್ಟ್ ತಡೆಯಾಜ್ಞೆ.!

ನವದೆಹಲಿ : ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯ ತಡೆಯಲು ವಿಶ್ವವಿದ್ಯಾಲಯ ಧನಸಹಾಯ ಆಯೋಗ (UGC) ಹೊರತಂದಿದ್ದ ಹೊಸ ನಿಯಮಗಳಿಗೆ ಸುಪ್ರೀಂ ಕೋರ್ಟ್ ಗುರುವಾರ ಮಧ್ಯಂತರ ತಡೆ ನೀಡಿದೆ. ಈ ನಿಯಮಗಳು ಸಮಾಜದಲ್ಲಿ ಒಡಕು ಮೂಡಿಸುವ ಸಾಧ್ಯತೆಯಿದೆ ಎಂದು ನ್ಯಾಯಾಲಯ ಕಳವಳ ವ್ಯಕ್ತಪಡಿಸಿದೆ. ಹೌದು, ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ (UGC) ಹೊರತಂದಿದ್ದ ಹೊಸ ತಾರತಮ್ಯ ವಿರೋಧಿ ನಿಯಮಗಳ ಜಾರಿಗೆ ಸುಪ್ರೀಂ ಕೋರ್ಟ್ ಗುರುವಾರ ತಡೆ ನೀಡಿದೆ. ಈ ಮಾರ್ಗಸೂಚಿಗಳು “ಅಸ್ಪಷ್ಟವಾಗಿವೆ” ಮತ್ತು ಇವುಗಳು ದುರ್ಬಳಕೆಯಾಗುವ ಸಾಧ್ಯತೆಯಿದೆ […]

ಕನ್ನಡ ದುನಿಯಾ 29 Jan 2026 1:43 pm

ಗ್ರಾಮೀಣ ಜನರ ಹಕ್ಕುಗಳನ್ನು ಕಸಿಯುತ್ತಿರುವ ಕೇಂದ್ರದ ವಿರುದ್ಧ ‘ಗ್ರಾಮಸಂಗ್ರಾಮ’ : ಸಚಿವ ಪ್ರಿಯಾಂಕ್ ಖರ್ಗೆ

ಬೆಂಗಳೂರು : ಗ್ರಾಮೀಣ ಜನರು ವಲಸೆ ಹೋಗುವುದನ್ನು ತಪ್ಪಿಸಬೇಕು, ಗ್ರಾಮೀಣ ಜನರಿಗೆ ಉದ್ಯೋಗ ನೀಡಬೇಕು ಎಂಬ ಸದುದ್ದೇಶದಿಂದ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿಯನ್ನು ಜಾರಿಗೆ ತರಲಾಗಿತ್ತು. ಇದರಿಂದ ಗ್ರಾಮೀಣ ಭಾಗದ ಪುರುಷರಿಗೂ, ಮಹಿಳೆಯರಿಗೆ ಸಮಾನವಾದ ವೇತನ ನೀಡುವ ಮೂಲಕ ವಾರ್ಷಿಕವಾಗಿ 100 ದಿನದ ಉದ್ಯೋಗವನ್ನು ನೀಡುತ್ತಿತ್ತು. ಆದರೆ ಕೇಂದ್ರ ಸರ್ಕಾರ ವಿಬಿ ಗ್ರಾಮ್ ಜಿ ಇದೆಲ್ಲ ಹಕ್ಕುಗಳನ್ನು ಹಿಂಪಡೆದು, ಮರಣ ಶಾಸನ ಬರೆಯುತ್ತಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ. ರಾಜ್ಯಗಳೂ ಅನುದಾನದ ಪಾಲು ಹಂಚಿಕೊಳ್ಳಬೇಕು […]

ಕನ್ನಡ ದುನಿಯಾ 29 Jan 2026 1:25 pm

SHOCKING : ಪ್ರೀತಿಗೆ ವಿರೋಧ : ನಿದ್ದೆ ಬರುವ ಇಂಜೆಕ್ಷನ್ ಕೊಟ್ಟು ತಂದೆ-ತಾಯಿಯನ್ನೇ ಕೊಂದ ನರ್ಸ್ .!

ತೆಲಂಗಾಣದ ಯಾಚಾರಂನಲ್ಲಿ ನಡೆದ ಈ ಘಟನೆಯು ಸಮಾಜವೇ ತಲೆತಗ್ಗಿಸುವಂತಹದ್ದಾಗಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಪರಿಚಯವಾದ ಯುವಕನ ಪ್ರೇಮಪಾಶಕ್ಕೆ ಬಿದ್ದಿದ್ದ ಈಕೆಗೆ ಪೋಷಕರು ಮದುವೆಗೆ ಒಪ್ಪಿಗೆ ನೀಡಿರಲಿಲ್ಲ. ತನ್ನ ಸುಖಕ್ಕೆ ಅಡ್ಡಿಯಾಗುತ್ತಿದ್ದಾರೆ ಎಂಬ ಒಂದೇ ಕಾರಣಕ್ಕೆ, ತಾನು ಕಲಿತ ವಿದ್ಯೆಯನ್ನು (ನರ್ಸಿಂಗ್) ಅವರಿಗೇ ಮೃತ್ಯುವನ್ನಾಗಿ ಬಳಸಿಕೊಂಡಳು. ಹೌದು..ಪ್ರೀತಿಗೆ ಅಡ್ಡಿಯಾಗಿದ್ದರೆಂಬ ಕಾರಣಕ್ಕೆ ಸ್ವಂತ ಪೋಷಕರನ್ನೇ ನರ್ಸ್ ಒಬ್ಬಳು ಇಂಜೆಕ್ಷನ್ ನೀಡಿ ಕೊಲೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಯಾಚಾರಂ ಎಂಬಲ್ಲಿ ನಡೆದಿದೆ.ಯಾಚಾರಂ ಮಂಡಲದ ಬಂಟ್ವಾರಂ ಗ್ರಾಮದ ನಿವಾಸಿಗಳಾದ ನಕ್ಕಲಿ ದಶರಥ್ (59) […]

ಕನ್ನಡ ದುನಿಯಾ 29 Jan 2026 1:17 pm

ಸುಪ್ರೀಂಕೋರ್ಟ್ ಮಹತ್ವದ ಘೋಷಣೆ: ಕೇಸ್ ವಿಚಾರಣೆಗೆ ಎಐ ಆಧಾರಿತ ಡಿಜಿಟಲ್ ವೇದಿಕೆ

ಎಐ ಕುರಿತು ಎಲ್ಲಾ ವಲಯಗಳಲ್ಲಿ ಚರ್ಚೆಗಳು ನಡೆಯುತ್ತಿದೆ. ಈಗ ಸುಪ್ರೀಂಕೋರ್ಟ್‌ ಸಹ ಪ್ರಮುಖವಾದ ಆಡಳಿತಾತ್ಮಕ ಸುಧಾರಣೆಯನ್ನು ಘೋಷಣೆ ಮಾಡಿದೆ. ಎಐ ಬಳಕೆ ಮಾಡಿಕೊಂಡು ಬಾಕಿ ಇರುವ ಪ್ರಕರಣಗಳನ್ನು ಇತ್ಯರ್ಥ ಮಾಡುವತ್ತ ಮಹತ್ವದ ಹೆಜ್ಜೆಯನ್ನು ಇಟ್ಟಿದೆ. ನ್ಯಾಯಾಲಯದ ದಕ್ಷತೆಯನ್ನು ಸುಧಾರಿಸಲು ಮತ್ತು ದೀರ್ಘಕಾಲದಿಂದ ಬಾಕಿ ಇರುವ ಪ್ರಕರಣಗಳ ಸಮಸ್ಯೆಯನ್ನು ಪರಿಹರಿಸಲು ಕೃತಕ ಬುದ್ಧಿಮತ್ತೆ (ಎಐ) ಬಳಸುವತ್ತ ಗಮನಹರಿಸಲಾಗಿದೆ. ಈ ಆಡಳಿತಾತ್ಮಕ ಸುಧಾರಣೆಗಳನ್ನು ಭಾರತದ ಸುಪ್ರೀಂಕೋರ್ಟ್ ಗುರುವಾರ ಘೋಷಣೆ ಮಾಡಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಈ ಬೆಳವಣಿಗೆಗಳನ್ನು ಕೆಲವು ಒಳ್ಳೆಯ […]

ಕನ್ನಡ ದುನಿಯಾ 29 Jan 2026 1:16 pm

ಬ್ಯಾಂಕ್ ಲಾಕರ್‌ನಲ್ಲಿ ಚಿನ್ನ ಇಟ್ಟರೆ ಸಂಪೂರ್ಣ ಸುರಕ್ಷಿತವೆ? ಈ ಕಹಿ ಸತ್ಯ ನಿಮಗೆ ಗೊತ್ತೇ?

ನಮ್ಮಲ್ಲಿ ಹೆಚ್ಚಿನವರಿಗೆ ಮನೆಯಲ್ಲಿ ಚಿನ್ನ ಇಡುವುದೆಂದರೆ ಒಂದು ರೀತಿಯ ಭಯ. ಅದಕ್ಕಾಗಿಯೇ ಬ್ಯಾಂಕ್ ಲಾಕರ್ ಎಂದರೆ ಭದ್ರತೆಯ ಕೋಟೆ ಎಂದು ನಂಬಿ, ವರ್ಷಕ್ಕೆ ಸಾವಿರಾರು ರೂಪಾಯಿ ಬಾಡಿಗೆ ಕಟ್ಟಿ ನಮ್ಮ ಪ್ರಾಣಕ್ಕಿಂತ ಪ್ರೀತಿಯ ಒಡವೆಗಳನ್ನು ಅಲ್ಲಿಟ್ಟು ನಿರಾಳವಾಗಿ ನಿಟ್ಟುಸಿರು ಬಿಡುತ್ತೇವೆ. ಆದರೆ, ಈ ನಿರಾಳತೆಯ ಹಿಂದೆ ಒಂದು ಆಘಾತಕಾರಿ ಸತ್ಯ ಅಡಗಿದೆ. ಒಂದು ವೇಳೆ ಬ್ಯಾಂಕ್‌ನಲ್ಲಿ ಕಳ್ಳತನವಾದರೆ ಅಥವಾ ಅಗ್ನಿ ಅವಘಡ ಸಂಭವಿಸಿದರೆ, ನಿಮ್ಮ ಜೀವನದ ಸಕಲ ಉಳಿತಾಯಕ್ಕೆ ಬ್ಯಾಂಕ್ ಪೂರ್ತಿ ಪರಿಹಾರ ನೀಡುತ್ತದೆ ಎಂದು ನೀವು […]

ಕನ್ನಡ ದುನಿಯಾ 29 Jan 2026 1:15 pm

ಇನ್ನು ಮುಂದೆ ಆಧಾರ್ ಕೇಂದ್ರಕ್ಕೆ ಹೋಗುವ ಕಿರಿಕಿರಿ ಇಲ್ಲ ನಿಮ್ಮ ಫೋನ್‌ನಲ್ಲೇ ಮೊಬೈಲ್ ಸಂಖ್ಯೆ ಬದಲಾಯಿಸಲು ಬಂತು ಹೊಸ ಆ್ಯಪ್

ಸರ್ಕಾರವು ಆಧಾರ್ ಆ್ಯಪ್‌ನ (mAadhaar) ಹೊಸ ಆವೃತ್ತಿಯನ್ನು ಬಿಡುಗಡೆ ಮಾಡಿದ್ದು, ಇನ್ನು ಮುಂದೆ ಸಾರ್ವಜನಿಕರು ಮೊಬೈಲ್ ಸಂಖ್ಯೆ ಮತ್ತು ವಿಳಾಸವನ್ನು ಬದಲಾಯಿಸಲು ಆಧಾರ್ ಕೇಂದ್ರಗಳಿಗೆ ಅಲೆಯುವ ಅಗತ್ಯವಿಲ್ಲ. ಈ ಅಪ್‌ಡೇಟ್ ಕುರಿತಾದ ಸಂಪೂರ್ಣ ವಿವರ ಇಲ್ಲಿದೆ: ನಿಮ್ಮ ಫೋನ್‌ನಲ್ಲೇ ಬದಲಾಯಿಸಿ ಆಧಾರ್ ಮೊಬೈಲ್ ನಂಬರ್ ಮತ್ತು ವಿಳಾಸ: ಹೊಸ ಆ್ಯಪ್‌ನಲ್ಲಿ ಏನೆಲ್ಲಾ ಬದಲಾವಣೆಗಳಿವೆ? ಆಧಾರ್ ಸೇವೆಗಳನ್ನು ಸರಳಗೊಳಿಸಲು ಮತ್ತು ಸುರಕ್ಷಿತವಾಗಿಸಲು ಕೇಂದ್ರ ಸರ್ಕಾರವು ಆಧಾರ್ ಆ್ಯಪ್ ಅನ್ನು ನವೀಕರಿಸಿದೆ. ಈ ಹೊಸ ಅಪ್ಲಿಕೇಶನ್ ಮೂಲಕ ಜನರು ತಮ್ಮ […]

ಕನ್ನಡ ದುನಿಯಾ 29 Jan 2026 1:00 pm

UPI Fail Compensation : ‘UPI’ಪಾವತಿ ಫೇಲ್ ಆದ್ರೆ ಇನ್ಮುಂದೆ ನಿಮಗೆ ಹಬ್ಬ : ‘ಬ್ಯಾಂಕ್‌’ನಿಂದಲೇ ಬರುತ್ತೆ ದಂಡದ ಹಣ.!

ಬೆಂಗಳೂರು : ಇಂದಿನ ಡಿಜಿಟಲ್ ಯುಗದಲ್ಲಿ ಟೀ ಅಂಗಡಿಯಿಂದ ಹಿಡಿದು ದೊಡ್ಡ ಶಾಪಿಂಗ್ ಮಾಲ್ಗಳವರೆಗೆ ಎಲ್ಲೆಡೆ ಯುಪಿಐ (UPI) ಪಾವತಿ ಸಾಮಾನ್ಯವಾಗಿದೆ. ಆದರೆ, ಕೆಲವೊಮ್ಮೆ ತಾಂತ್ರಿಕ ದೋಷದಿಂದಾಗಿ ನಮ್ಮ ಖಾತೆಯಿಂದ ಹಣ ಕಡಿತವಾಗುತ್ತದೆ, ಆದರೆ ಹಣ ಪಡೆಯುವವರಿಗೆ ತಲುಪದೆ “ಟ್ರಾನ್ಸಾಕ್ಷನ್ ಫೇಲ್” (Transaction Failed) ಆಗುತ್ತದೆ. ಇಂತಹ ಸಂದರ್ಭಗಳಲ್ಲಿ ಗ್ರಾಹಕರು ಆತಂಕಕ್ಕೊಳಗಾಗುವುದು ಸಹಜ. ಇನ್ನು ಮುಂದೆ ಇಂತಹ ತೊಂದರೆಗಳಿಗೆ ಹೆದರಬೇಕಿಲ್ಲ; ಏಕೆಂದರೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಗ್ರಾಹಕರ ಹಿತರಕ್ಷಣೆಗಾಗಿ ಕಠಿಣ ನಿಯಮವನ್ನು ಜಾರಿಗೆ ತಂದಿದೆ. […]

ಕನ್ನಡ ದುನಿಯಾ 29 Jan 2026 12:54 pm

ಅಪಘಾತದಲ್ಲಿ ಪಾದಚಾರಿ ಸಾವು: ಬರೋಬ್ಬರಿ 32 ವರ್ಷಗಳ ಬಳಿಕ ಆರೋಪಿ ಲಾರಿ ಚಾಕನನ್ನು ಬಂಧಿಸಿದ ಪೊಲೀಸರು

ದಾವಣಗೆರೆ: ಲಾರಿ ಡಿಕ್ಕಿ ಹೊಡೆದು ಪಾದಚಾರಿ ಸಾವನ್ನಪ್ಪಿದ್ದ ಪ್ರಕರಣದಲ್ಲಿ ಬರೋಬ್ಬರಿ 32ವರ್ಷಗಳ ಬಳಿಕ ಆರ್ಪಿ ಲಾರಿ ಚಾಲಕನ್ನು ಬಂಧಿಸಿರುವ ಘಟನೆ ದಾವನಗೆರೆಯಲ್ಲಿ ನಡೆದಿದೆ. ಜಗಳೂರು ಪೊಲೀಸರು ಆರೋಪಿ ನಾರಿ ಚಾಲಕನನ್ನು ಬಂಧಿಸಿದ್ದು, ಬಂಧಿತನನ್ನು ಗಂಗಾಧರಪ್ಪ (67 ಎಂದು ಗುರುತಿಸಲಾಗಿದೆ. 1994 ಕಲ್ಲೇದೇವಪುರ ಬಳಿ ರಾಷ್ಟ್ರೀಯ ಹೆದ್ದಾರಿ 13ರಲ್ಲಿ ಸಂಭವಿಸಿದ್ದ ಅಪಘಾತದಲ್ಲಿ ಲಾರಿ ಹರಿದು ಪಾದಚಾರಿ ಸಾವನ್ನಪ್ಪಿದ್ದರು. ಅಪಘಾತದ ಬಳಿಕ 32ವರ್ಷಗಳ ಕಾಲ ಲಾರಿ ಚಾಲಕ ತಲೆಮರೆಸಿಕೊಂಡಿದ್ದ. ಈಗ ಲಾರಿ ಚಾಲಕನನ್ನು ಪತ್ತೆ ಮಾಡಿರುವ ಪೊಲೀಸರು ಬಂಧಿಸಿದ್ದಾರೆ. ಇನ್ಸ್ […]

ಕನ್ನಡ ದುನಿಯಾ 29 Jan 2026 12:47 pm

ಕೇಂದ್ರ ಬಜೆಟ್ 2026-27: ರೈತರ ನಿರೀಕ್ಷೆಗಳು

ಕೇಂದ್ರ ಬಜೆಟ್ ಅಧಿವೇಶನ ಆರಂಭವಾಗಿದೆ. 2026-27ನೇ ಸಾಲಿನ ಬಜೆಟ್‌ ಅನ್ನು ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1ರಂದು ಮಂಡನೆ ಮಾಡುತ್ತಿದ್ದಾರೆ. ಈ ಬಾರಿ ಭಾನುವಾರ ಸಂಸತ್ ಕಲಾಪ ನಡೆಸಿ, 2025-26ನೇ ಸಾಲಿನ ಕೇಂದ್ರ ಬಜೆಟ್ ಅನ್ನು ಮಂಡಿಸುವುದು ವಿಶೇಷವಾಗಿದೆ. ಹಲವು ವರ್ಷಗಳಿಂದ ಫೆಬ್ರವರಿ 1ರಂದು ಬಜೆಟ್ ಮಂಡಿಸಲಾಗುತ್ತಿದೆ. ಈ ಬಾರಿ ಭಾನುವಾರ ಆದರೂ ಸಹ ಆ ಸಂಪ್ರದಾಯವನ್ನು ಪಾಲಿಸಲಾಗುತ್ತಿದೆ. 5 ರಾಜ್ಯಗಳ ವಿಧಾನಸಭೆ ಚುನಾವಣೆಯ ಹಿನ್ನಲೆಯಲ್ಲಿ ಈ ಬಾರಿ […]

ಕನ್ನಡ ದುನಿಯಾ 29 Jan 2026 12:34 pm

BREAKING : ಚಂಡೀಗಢ ಮೇಯರ್ ಚುನಾವಣೆಯಲ್ಲಿ ಬಿಜೆಪಿಯ ‘ಸೌರವ್ ಜೋಶಿ’ಗೆ ಗೆಲುವು.!

ಚಂಡೀಗಢ: ಗುರುವಾರ ನಡೆದ ಚಂಡೀಗಢ ಮಹಾನಗರ ಪಾಲಿಕೆಯ ಮೇಯರ್ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ಸೌರವ್ ಜೋಶಿ ಅವರು ಸ್ಪಷ್ಟ ಬಹುಮತದೊಂದಿಗೆ ಗೆಲುವು ಸಾಧಿಸಿದ್ದಾರೆ. ಚುನಾವಣಾ ಪ್ರಕ್ರಿಯೆಯು ಪ್ರಿಸೈಡಿಂಗ್ ಆಫೀಸರ್ ರಮನೀಕ್ ಸಿಂಗ್ ಬೇಡಿ ಅವರ ಮೇಲ್ವಿಚಾರಣೆಯಲ್ಲಿ ನಡೆಯಿತು. ಕೈ ಎತ್ತುವ ಮೂಲಕ ಮತದಾನ ಮಾಡುವುದು ಸೇರಿದಂತೆ ಹಲವು ಪ್ರಮಾಣಿತ ಕಾರ್ಯವಿಧಾನಗಳನ್ನು (SOP) ಅವರು ಜಾರಿಗೊಳಿಸಿದ್ದರು. ಪ್ರತಿ ಮತದ ನಂತರ ಕೌನ್ಸಿಲರ್ಗಳು ಮೌಖಿಕವಾಗಿ ಘೋಷಣೆ ಮಾಡಿ, ಸಹಿ ಹಾಕುವ ಮೂಲಕ ತಮ್ಮ ಮತವನ್ನು ಚಲಾಯಿಸಿದರು. ಮತಗಳ ವಿವರ:ಅಂತಿಮ […]

ಕನ್ನಡ ದುನಿಯಾ 29 Jan 2026 12:28 pm

BIG NEWS: ಮಂಗನ ಕಾಯಿಲೆ: 29 ವರ್ಷದ ಯುವಕ ಬಲಿ

ಶಿವಮೊಗ್ಗ: ಮಲೆನಾಡು ಭಾಗದಲ್ಲಿ ಮಂಗನ ಕಾಯಿಲೆ ಅಥವಾ ಕೆ ಎಫ್ ಡಿ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. 29 ವರ್ಷದ ಯುವಕನೊಬ್ಬ ಮಂಗನ ಕಾಯಿಲೆಯಿಂದ ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನಲ್ಲಿ ನಡೆದಿದೆ. ಸಸಿತೋಟದ ನಿವಾಸಿ ಕಿಶೋರ್ ಮೃತ ದುರ್ದೈವಿ. ಮಂಗನ ಕಾಯಿಲೆಯಿಂದ ಬಳಲುತ್ತಿದ್ದ ಕಿಶೋರ್ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. ಜನವರಿ 20ರಂದು ಕಿಶೋರ್ ವಿಪರೀತ ಜ್ವರ, ಶೀತದಿಂದ ಬಳಲುತ್ತಿದ್ದರು. ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಆದರೂ ಜ್ವರ ಕಡಿಮೆಯಾಗದೇ ಕಾಯಿಲೆ ಉಲ್ಬಣಗೊಂಡಿತ್ತು. ತಪಾಸಣೆ ನಡೆಸಿದಾಗ […]

ಕನ್ನಡ ದುನಿಯಾ 29 Jan 2026 12:27 pm

ಅಜಿತ್ ಪವಾರ್ ನಿಧನದ ಬೆನ್ನಲ್ಲೇ ಜ್ಯೋತಿಷಿಯ ಭವಿಷ್ಯ ವೈರಲ್: ಪ್ರಚಾರದ ಗೀಳಿಗೆ ನೆಟ್ಟಿಗರಿಂದ ಭಾರಿ ತರಾಟೆ

ಮುಂಬೈ: ಬಾರಾಮತಿ ವಿಮಾನ ನಿಲ್ದಾಣದ ಬಳಿ ನಡೆದ ಭೀಕರ ವಿಮಾನ ಅಪಘಾತದಲ್ಲಿ ಮಹಾರಾಷ್ಟ್ರದ ಹಿರಿಯ ನಾಯಕ ಅಜಿತ್ ಪವಾರ್ ಮೃತಪಟ್ಟಿದ್ದಾರೆ. ಮುಂಬೈನಿಂದ ಬಾರಾಮತಿಗೆ ತೆರಳುತ್ತಿದ್ದ ಖಾಸಗಿ ಜೆಟ್ ವಿಮಾನವು ಲ್ಯಾಂಡಿಂಗ್ ಸಮಯದಲ್ಲಿ ರನ್‌ವೇ ಅಂಚಿನಲ್ಲಿ ಪತನಗೊಂಡಿದೆ. ಈ ದುರಂತದಲ್ಲಿ ಅಜಿತ್ ಪವಾರ್ ಸೇರಿದಂತೆ ಐವರು ಮೃತಪಟ್ಟಿದ್ದಾರೆ. ವೈರಲ್ ಆದ ಜ್ಯೋತಿಷಿಯ ಭವಿಷ್ಯ: ಈ ಘಟನೆಯ ಬೆನ್ನಲ್ಲೇ ಪ್ರಶಾಂತ್ ಕಿಣಿ ಎಂಬ ಜ್ಯೋತಿಷಿ 2025ರ ನವೆಂಬರ್ 8ರಂದು ಮಾಡಿದ್ದ ಪೋಸ್ಟ್ ವೈರಲ್ ಆಗಿದೆ. ಆ ಪೋಸ್ಟ್‌ನಲ್ಲಿ ಅವರು, “ಡಿಸೆಂಬರ್ […]

ಕನ್ನಡ ದುನಿಯಾ 29 Jan 2026 12:20 pm

BREAKING : ಪಂಚಭೂತಗಳಲ್ಲಿ DCM ‘ಅಜಿತ್ ಪವಾರ್’ಲೀನ, ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ |WATCH VIDEO

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಮತ್ತು ಎನ್‌ಸಿಪಿ (NCP) ನಾಯಕ ಅಜಿತ್ ಪವಾರ್ ಅವರು ಜನವರಿ 28, 2026 ರಂದು ಪುಣೆ ಜಿಲ್ಲೆಯ ಬಾರಾಮತಿಯಲ್ಲಿ ಸಂಭವಿಸಿದ ಭೀಕರ ವಿಮಾನ ಅಪಘಾತದಲ್ಲಿ ನಿಧನರಾದರು. ಇಂದು (ಜನವರಿ 29, 2026) ಅವರ ಅಂತ್ಯಕ್ರಿಯೆಯು ನೆರವೇರಿದೆ. ಈ ಮೂಲಕ ಅವರು ಪಂಚಭೂತಗಳಲ್ಲಿ ಲೀನರಾದರು. ಬಾರಾಮತಿಯ ವಿದ್ಯಾ ಪ್ರತಿಷ್ಠಾನ ಮೈದಾನದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿತು.ಕೇಂದ್ರ ಗೃಹ ಸಚಿವ ಅಮಿತ್ ಶಾ, ನಿತಿನ್ ಗಡ್ಕರಿ, ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್, ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ […]

ಕನ್ನಡ ದುನಿಯಾ 29 Jan 2026 12:19 pm

ದರ್ಭಾಂಗದಲ್ಲಿ ಪೊಲೀಸರ ದರ್ಪ: ಒನ್-ವೇ ಉಲ್ಲಂಘನೆಗಾಗಿ ಮಹಿಳಾ ವೈದ್ಯೆ ಮತ್ತು ಚಾಲಕನಿಗೆ ಅವಾಚ್ಯ ಶಬ್ದಗಳಿಂದ ನಿಂದನೆ

ದರ್ಭಾಂಗ: ಮಂಗಳವಾರ (ಜನವರಿ 27, 2026) ಬೆಳಗ್ಗೆ ದರ್ಭಾಂಗದ ಬೆಂತಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಪಾಟ್ನಾದಿಂದ ಬರುತ್ತಿದ್ದ ಹಿರಿಯ ಮಹಿಳಾ ವೈದ್ಯೆ ತೇಜಸ್ವಿನಿ ಪಾಂಡೆ ಅವರ ಕಾರು ಅಚಾನಕ್ ಆಗಿ ಒನ್-ವೇ ರಸ್ತೆಯನ್ನು ಪ್ರವೇಶಿಸಿತ್ತು. ಈ ವೇಳೆ ಅಲ್ಲಿ ಕರ್ತವ್ಯದಲ್ಲಿದ್ದ ಬೆಂತಾ ಠಾಣಾಧಿಕಾರಿ (SHO) ಹರೇಂದ್ರ ಕುಮಾರ್ ಅವರು ಕಾರನ್ನು ತಡೆದು ನಿಲ್ಲಿಸಿದರು. ವಿಡಿಯೋದಲ್ಲೇನಿದೆ? ವೈರಲ್ ಆಗಿರುವ ವಿಡಿಯೋದಲ್ಲಿ, ಅಧಿಕಾರಿ ಹರೇಂದ್ರ ಕುಮಾರ್ ಅವರು ಕಾರಿನ ಚಾಲಕನನ್ನು ಅತಿರೇಕದ ಭಾಷೆಯಲ್ಲಿ ನಿಂದಿಸುತ್ತಿರುವುದು ಮತ್ತು […]

ಕನ್ನಡ ದುನಿಯಾ 29 Jan 2026 12:17 pm

ಧೂಳು ಮತ್ತು ಮಾಲಿನ್ಯದಿಂದ ನಿಮ್ಮ ಮುಖ ಕಾಂತಿ ಕಳೆದುಕೊಂಡಿದೆಯೇ? ಅಮೆಜಾನ್‌ನಲ್ಲಿ ಅತಿ ಹೆಚ್ಚು ರೇಟಿಂಗ್ ಪಡೆದ ಟಾಪ್ 8 ಫೇಸ್ ಕ್ಲೆನ್ಸರ್‌ಗಳು ಇಲ್ಲಿವೆ

ಇಂದಿನ ಧೂಳು, ಹೊಗೆ ಮತ್ತು ಮಾಲಿನ್ಯದ ನಡುವೆ ನಮ್ಮ ತ್ವಚೆಯು ತನ್ನ ನೈಸರ್ಗಿಕ ಹೊಳಪನ್ನು ಕಳೆದುಕೊಂಡು ಮಂಕಾಗಿ ಕಾಣುವುದು ಸಹಜ. ಕೇವಲ ನೀರು ಅಥವಾ ಸಾಮಾನ್ಯ ಸೋಪಿನಿಂದ ಮುಖ ತೊಳೆದರೆ ಚರ್ಮದ ಆಳದಲ್ಲಿರುವ ಕೊಳೆ ಹೋಗುವುದಿಲ್ಲ. ಅದಕ್ಕಾಗಿಯೇ ನಿಮ್ಮ ತ್ವಚೆಯನ್ನು ಹೈಡ್ರೇಟ್ ಮಾಡುವ ಮತ್ತು ಮೃದುವಾಗಿಸುವ ಸರಿಯಾದ ಫೇಶಿಯಲ್ ಕ್ಲೆನ್ಸರ್ ಅಗತ್ಯವಿದೆ. ನಿಮ್ಮ ಕೆಲಸವನ್ನು ಸುಲಭವಾಗಿಸಲು, ಅಮೆಜಾನ್ ಇಂಡಿಯಾದಲ್ಲಿ ಗ್ರಾಹಕರು ಮೆಚ್ಚಿದ ಮತ್ತು ಅತಿ ಹೆಚ್ಚು ರೇಟಿಂಗ್ ಪಡೆದ ಟಾಪ್ 8 ಕ್ಲೆನ್ಸರ್‌ಗಳ ಪಟ್ಟಿ ಇಲ್ಲಿದೆ: 1.ಸೆರಾವೆ […]

ಕನ್ನಡ ದುನಿಯಾ 29 Jan 2026 12:11 pm

BREAKING : DCM ಅಜಿತ್ ಪವಾರ್ ಅಂತ್ಯಕ್ರಿಯೆಯಲ್ಲಿ ಕೇಂದ್ರ ಸಚಿವ ಅಮಿತ್ ಶಾ ಸೇರಿದಂತೆ ಹಲವರು ಭಾಗಿ |WATCH VIDEO

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರು ವಿಮಾನ ಅಪಘಾತದಲ್ಲಿ ನಿಧನರಾಗಿದ್ದು, ಅವರ ಅಂತ್ಯಕ್ರಿಯೆಯು ಗುರುವಾರ ಇಂದು (ಜನವರಿ 29, 2026) ಪುಣೆ ಜಿಲ್ಲೆಯ ಬಾರಾಮತಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ, ಕೇಂದ್ರ ಸಚಿವ ನಿತಿನ್ ಗಡ್ಕರಿ, ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್ ಮತ್ತು ಗೋವಾ ಸಿಎಂ ಪ್ರಮೋದ್ ಸಾವಂತ್ ಅವರು ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ […]

ಕನ್ನಡ ದುನಿಯಾ 29 Jan 2026 12:05 pm

ಇಂಧನ ಇಲಾಖೆಯಲ್ಲಿ ಸಿಎಂ ಪುತ್ರ ಯತೀಂದ್ರ ಸಿದ್ದರಾಮಯ್ಯ ಹಸ್ತಕ್ಷೇಪ: ಬೇಸತ್ತು ರಾಜೀನಾಮೆಗೆ ಮುಂದಾಗಿದ್ರಾ ಸಚಿವ ಕೆ.ಜೆ.ಜಾರ್ಜ್? ವಿಧಾನಸಭೆಯಲ್ಲಿ ಪ್ರತಿದ್ವನಿಸಿದ ಘಟನೆ

ಬೆಂಗಳೂರು: ಇಂಧನ ಇಲಾಖೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯನವರ ಹಸ್ತಕ್ಷೇಪಕ್ಕೆ ಬೇಸತ್ತು ಇಂಧನ ಸಚಿವ ಕೆ.ಜೆ.ಜಾರ್ಜ್ ರಾಜೀನಾಮೆಗೆ ನಿರ್ಧರಿಸಿದ್ದರು ಎಂಬ ವಿಚಾರ ರಾಜ್ಯ ರಾಜಕಾರಣದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ಇದೇ ವಿಚಾರ ಇಂದು ವಿಧಾನಸಭೆಯಲ್ಲಿ ಪ್ರತಿಧ್ವನಿಸಿದ್ದು, ಸ್ವತಃ ಈ ಬಗ್ಗೆ ಇಂಧನ ಸಚಿವರೇ ಸ್ಪಷ್ಟನೆ ನಿದಬೇಕು ಎಂದು ಬಿಜೆಪಿ ಸದಸ್ಯರು ಪಟ್ಟು ಹಿಡಿದರು. ಇಂಧನ ಇಲಾಖೆಯಲ್ಲಿ ಸಚಿವ ಕೆ.ಜೆ.ಜಾರ್ಜ್ ಅವರ ಗಮನಕ್ಕೂ ತರದೇ ಸಿಎಂ ಸಿದ್ದರಾಮಯ್ಯ ಅವರ ಪುತ್ರ ಎಂಎಲ್ ಸಿ ಯತೀಂದ್ರ ಸಿದ್ದರಾಮಯ್ಯ ಅಧಿಕಾರಿಗಳ […]

ಕನ್ನಡ ದುನಿಯಾ 29 Jan 2026 12:00 pm

BIG NEWS : ‘UPS’ಕಂಪನಿ ಉದ್ಯೋಗಿಗಳಿಗೆ ಬಿಗ್ ಶಾಕ್ : 30,000 ನೌಕರರ ವಜಾ |Ups Lay offs

ಇಂದಿನ ದಿನಗಳಲ್ಲಿ ಉದ್ಯೋಗಕ್ಕೆ ಯಾವುದೇ ಗ್ಯಾರಂಟಿ ಇಲ್ಲದಂತಾಗಿದೆ. ಇದ್ದಕ್ಕಿದ್ದಂತೆ ಕೆಲಸ ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಉದ್ಯೋಗ ಯಾವಾಗ ಇರುತ್ತದೋ ಅಥವಾ ಯಾವಾಗ ಹೋಗುತ್ತದೋ ತಿಳಿಯದಂತಾಗಿದೆ. ಈ ಹಿಂದೆ ಕೋವಿಡ್ ಬಿಕ್ಕಟ್ಟಿನ ಸಮಯದಲ್ಲಿ ದೊಡ್ಡ ದೊಡ್ಡ ಕಂಪನಿಗಳು ಸಹ ಭಾರಿ ಸಂಖ್ಯೆಯಲ್ಲಿ ಉದ್ಯೋಗಿಗಳನ್ನು ವಜಾಗೊಳಿಸಿದ್ದವು. ಸಣ್ಣ ಸಂಸ್ಥೆಗಳಂತೂ ಸಂಪೂರ್ಣವಾಗಿ ಮುಚ್ಚಿಹೋದವು. ಕೋವಿಡ್ ನಂತರ ಚೇತರಿಸಿಕೊಂಡಂತೆ ಕಂಡ ಮಾರುಕಟ್ಟೆ, ಈಗ ಮತ್ತೆ ಆರ್ಥಿಕ ಹಿಂಜರಿತದ ಭೀತಿಯಿಂದಾಗಿ ಬದಲಾಗಿದೆ. ದೈತ್ಯ ಟೆಕ್ ಕಂಪನಿಗಳು ಪುನರ್ವ್ಯವಸ್ಥೀಕರಣದ ಹೆಸರಿನಲ್ಲಿ ಮತ್ತೆ ಲೇಆಫ್‌ಗಳನ್ನು ಘೋಷಿಸುತ್ತಿವೆ. ಇತ್ತೀಚಿನ […]

ಕನ್ನಡ ದುನಿಯಾ 29 Jan 2026 11:53 am

ಅಪ್ಪ, ನಾನು ಡಿಸಿಎಂ ಅಜಿತ್ ಪವಾರ್ ಅವರ ವಿಮಾನದಲ್ಲಿ ಹೋಗುತ್ತಿದೇನೆ: ನಾಳೆ ಊರಿಗೆ ಬರುತ್ತೇನೆ: ಅಪಘಾತಕ್ಕೂ ಮುನ್ನ ತಂದೆಯ ಜೊತೆ ಫ್ಲೈಟ್ ಅಟೆಂಡೆಂಟ್ ಪಿಂಕಿ ಕೊನೆಯ ಮಾತು

ಮುಂಬೈ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಬಾರಾಮತಿಯಲ್ಲಿ ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಅಜಿತ್ ಪವಾರ್ ಅವರೊಂದಿಗೆ ವಿಮನದಲ್ಲಿದ್ದ ಪೈಲಟ್, ಫ್ಲೈಟ್ ಅಟೆಂಡೆಂಟ್ ಇಬ್ಬರು ಭದ್ರತಾ ಸಿಬ್ಬಂದಿಗಳು ಸೇರಿ 6 ಜನರು ದುರ್ಮರಣ ಹೊಂದಿದ್ದಾರೆ. ವಿಮಾನದಲ್ಲಿ ಫ್ಲೈಟ್ ಅಟೆಂಡೆಂಟ್ ಆಗಿದ್ದ ಪಿಂಕಿ ಮಾಲಿ ತನ್ನ ತಂದೆಯ ಜೊತೆ ಮಾತನಾಡಿದ್ದ ಕೊನೆಯ ಮಾತುಗಳು ವೈರಲ್ ಆಗಿವೆ. ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ಸಾವಿಗೆ ಕಾರಣವಾದ ವಿಮಾನದಲ್ಲಿ ಇಬ್ಬರು ಮಹಿಳಾ ಪೈಲಟ್ ಗಳು ಇದ್ದರು. ಅವರು ಕೂಡ ವಿಮಾನ ದುರಂತದಲ್ಲಿ […]

ಕನ್ನಡ ದುನಿಯಾ 29 Jan 2026 11:42 am

Big Update: ಸಿಎಂ ಸಿದ್ದರಾಮಯ್ಯಗೆ ರಾಜೀನಾಮೆ ಪತ್ರ ನೀಡಿದ್ದ ಕೆ.ಜೆ.ಜಾರ್ಜ್!

ಕರ್ನಾಟಕ ರಾಜ್ಯ ರಾಜಕಾರಣದ ಬಿಗ್ ಅಪ್‌ಡೇಟ್ ಒಂದಿದೆ. ಕಾಂಗ್ರೆಸ್ ಹೈಕಮಾಂಡ್ ಮಟ್ಟದಲ್ಲಿ ಪ್ರಭಾವ ಹೊಂದಿರುವ, ಮುಖ್ಯಮಂತ್ರಿ ಸಿದ್ದರಾಮಯ್ಯ ಪರಮಾಪ್ತ ನಾಯಕರಾದ ಕೆ.ಜೆ.ಜಾರ್ಜ್ ರಾಜೀನಾಮೆ ಪತ್ರವನ್ನು ನೀಡಿದ್ದರು. ಕೆ.ಜೆ.ಜಾರ್ಜ್ ಸಿದ್ದರಾಮಯ್ಯ ಸಂಪುಟದಲ್ಲ ಇಂಧನ ಮತ್ತು ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವರು. ಟಿವಿ9 ವಾಹಿನಿ ಈ ಕುರಿತು ವರದಿಯೊಂದನ್ನು ಪ್ರಸಾರ ಮಾಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ, ಎಂಎಲ್‌ಸಿ ಯತೀಂದ್ರ ಸಿದ್ದರಾಮಯ್ಯ ಕಾರಣಕ್ಕೆ ಕೆ.ಜೆ.ಜಾರ್ಜ್ ಬೇಸತ್ತು, ಸಚಿವ ಸಂಪುಟ ಸಭೆಗೆ ಗೈರಾಗಿದ್ದರು, ಸಿದ್ದರಾಮಯ್ಯಗೆ ರಾಜೀನಾಮೆ ಪತ್ರವನ್ನು ನೀಡಿದ್ದರು ಎಂದು ವರದಿ ಹೇಳಿದೆ. […]

ಕನ್ನಡ ದುನಿಯಾ 29 Jan 2026 11:25 am

BREAKING : ಉದ್ಯಮಿ ಅನಿಲ್ ಅಂಬಾನಿಗೆ E.D ಶಾಕ್ : ಸಾವಿರಾರು ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ!

ಒಂದಾನೊಂದು ಕಾಲದಲ್ಲಿ ದೇಶದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದ ರಿಲಯನ್ಸ್ ಅನಿಲ್ ಧೀರೂಭಾಯಿ ಅಂಬಾನಿ ಗ್ರೂಪ್ (ADAG) ಮುಖ್ಯಸ್ಥ ಅನಿಲ್ ಅಂಬಾನಿ ಅವರ ಸಂಕಷ್ಟಗಳು ಮುಗಿಯುವ ಲಕ್ಷಣ ಕಾಣುತ್ತಿಲ್ಲ. ಇತ್ತೀಚೆಗಷ್ಟೇ ವ್ಯವಹಾರಗಳಲ್ಲಿ ಮತ್ತೆ ಸಕ್ರಿಯರಾಗಲು ಪ್ರಯತ್ನಿಸುತ್ತಿದ್ದ ಅಂಬಾನಿಗೆ ಹಳೆಯ ಪ್ರಕರಣಗಳು ಈಗ ಮುಳ್ಳಾಗಿ ಪರಿಣಮಿಸಿವೆ. ಬ್ಯಾಂಕ್ಗಳಿಗೆ ವಂಚನೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ರಿಲಯನ್ಸ್ ಗ್ರೂಪ್ ಮುಖ್ಯಸ್ಥ ಅನಿಲ್ ಅಂಬಾನಿ ಅವರಿಗೆ ಜಾರಿ ನಿರ್ದೇಶನಾಲಯ (ED) ಭಾರಿ ಶಾಕ್ ನೀಡಿದೆ. ಈ ಪ್ರಕರಣದಲ್ಲಿ ಸಾವಿರಾರು ಕೋಟಿ ರೂಪಾಯಿ ಮೌಲ್ಯದ […]

ಕನ್ನಡ ದುನಿಯಾ 29 Jan 2026 11:23 am

ಅರಿಜಿತ್ ಸಿಂಗ್ ಹಿನ್ನೆಲೆ ಗಾಯನಕ್ಕೆ ನಿವೃತ್ತಿ ಹಾಡು ನಿಲ್ಲಿಸಿದರೂ ಗಾಯಕನ ಬ್ಯಾಂಕ್ ಬ್ಯಾಲೆನ್ಸ್ ಏರುತ್ತಲೇ ಇರುವುದೇಕೆ?

ಅಪಾರ ಜನಪ್ರಿಯತೆಯ ಉತ್ತುಂಗದಲ್ಲಿರುವಾಗಲೇ ಹಿನ್ನೆಲೆ ಗಾಯನಕ್ಕೆ (Playback Singing) ಗುಡ್‌ಬೈ ಹೇಳುವ ಮೂಲಕ ಅರಿಜಿತ್ ಸಿಂಗ್ ತಮ್ಮ ಅಭಿಮಾನಿಗಳಿಗೆ ಅಚ್ಚರಿ ನೀಡಿದ್ದಾರೆ. ಜನವರಿ 27, 2026 ರಂದು ಈ ಮಹತ್ವದ ನಿರ್ಧಾರ ಪ್ರಕಟಿಸಿರುವ ಅವರು, ಇನ್ನು ಮುಂದೆ ಚಲನಚಿತ್ರಗಳಿಗಾಗಿ ಹಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ, ಅವರು ಸಂಗೀತ ಲೋಕದಿಂದ ಸಂಪೂರ್ಣವಾಗಿ ದೂರ ಸರಿಯುತ್ತಿಲ್ಲ. ಅರಿಜಿತ್ ಸಿಂಗ್ ಅವರ ಈ ನಿರ್ಧಾರದ ನಂತರವೂ ಅವರ ಆದಾಯಕ್ಕೆ ಯಾವುದೇ ಕೊರತೆಯಾಗುವುದಿಲ್ಲ. ಅದಕ್ಕೆ ಪ್ರಮುಖ ಕಾರಣಗಳು ಇಲ್ಲಿವೆ: 1. ರಾಯಲ್ಟಿ ಮೂಲಕ […]

ಕನ್ನಡ ದುನಿಯಾ 29 Jan 2026 11:12 am

ಬೆಂಗಳೂರಲ್ಲಿ ಮತ್ತೊಂದು ATM ದರೋಡೆ: ಪೊಲೀಸರು ಕೊಟ್ಟ ಸ್ಪಷ್ಟನೆ

ಬೆಂಗಳೂರು ನಗರದಲ್ಲಿ ಎಟಿಎಂಗೆ ಹಣ ಸಾಗಣೆ ಮಾಡುತ್ತಿದ್ದ ವಾಹನವನ್ನು ಹಾಡ ಹಗಲೇ ದರೋಡೆ ಮಾಡಿ 7.11 ಕೋಟಿ ರೂ. ದೋಚಲಾಗಿತ್ತು. ಡೈರಿ ಸರ್ಕಲ್ ಫ್ಲೈ ಓವರ್ ಮೇಲೆ ನಡೆದ ಈ ಘಟನೆ ಬೆಂಗಳೂರನ್ನೇ ಬೆಚ್ಚಿಬೀಳಿಸಿತ್ತು. ಈ ದರೋಡೆ ಕೃತ್ಯದಲ್ಲಿ ಭಾಗಿಯಾಗಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬುಧವಾರದಿಂದ ಬೆಂಗಳೂರು ನಗರದಲ್ಲಿ ಮತ್ತೊಂದು ಎಟಿಎಂ ದರೋಡೆ ನಡೆದಿದೆ ಎಂಬ ಸುದ್ದಿಗಳು ವೈರಲ್ ಆಗಿದೆ. ಜನರು ಪೊಲೀಸರು, ಗೃಹ ಸಚಿವರ ಕಾರ್ಯ ವೈಖರಿ ಬಗ್ಗೆ ಟೀಕೆಗಳನ್ನು ಮಾಡುತ್ತಿದ್ದಾರೆ. ಆದರೆ ಈ ಕುರಿತು […]

ಕನ್ನಡ ದುನಿಯಾ 29 Jan 2026 10:56 am

ಆಕಾಶಕ್ಕೆ ಏಣಿ ಹಾಕಿದ ಚಿನ್ನ-ಬೆಳ್ಳಿ ದರ ಇತಿಹಾಸದಲ್ಲೇ ಮೊದಲ ಬಾರಿಗೆ ಬೆಳ್ಳಿ ಕೆಜಿಗೆ 4 ಲಕ್ಷ ದಾಟಿದ್ದು ಹೇಗೆ?

ಬೆಂಗಳೂರು: ಚಿನ್ನ ಮತ್ತು ಬೆಳ್ಳಿ ಮಾರುಕಟ್ಟೆಯಲ್ಲಿ ಈಗ ನಿಜವಾದ ಅಲ್ಲೋಲ ಕಲ್ಲೋಲ ಶುರುವಾಗಿದೆ. ಹೂಡಿಕೆದಾರರು ಫುಲ್ ಖುಷ್ ಆಗಿದ್ದರೆ, ಮದುವೆ-ಮುಂಜಿ ಅಂತ ಪ್ಲಾನ್ ಮಾಡಿದ್ದ ಜನ ಮಾತ್ರ ಬೆಲೆ ಕೇಳಿ ಬೆಚ್ಚಿಬೀಳುತ್ತಿದ್ದಾರೆ. ನೋಡನೋಡುತ್ತಿದ್ದಂತೆಯೇ ಬೆಳ್ಳಿ ಕೆಜಿಗೆ 4 ಲಕ್ಷದ ಗಡಿ ದಾಟಿದ್ದರೆ, ಚಿನ್ನದ ಬೆಲೆ ಈಗ 1.80 ಲಕ್ಷದ ಹತ್ತಿರಕ್ಕೆ ಬಂದು ನಿಂತಿದೆ ಬೆಳ್ಳಿಯ ಹ್ಯಾಟ್ರಿಕ್ ಧಮಾಕಾ ಬಿಳಿ ಲೋಹ ಬೆಳ್ಳಿ ಸತತ ಮೂರು ದಿನಗಳಿಂದ ದಾಖಲೆ ಮಟ್ಟದಲ್ಲಿ ಏರಿಕೆಯಾಗುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಿದೆ. ಕೇವಲ […]

ಕನ್ನಡ ದುನಿಯಾ 29 Jan 2026 10:51 am

BREAKING : ಬಂಗಾರದ ಬೆಲೆಯಲ್ಲಿ ಸಾರ್ವಕಾಲಿಕ ದಾಖಲೆ : 10 ಗ್ರಾಂ ಚಿನ್ನದ ದರ  1,78,850 ಕ್ಕೆ ಏರಿಕೆ !

ಬಂಗಾರ ಪ್ರಿಯರಿಗೆ ಅಕ್ಷರಶಃ ಶಾಕ್ ನೀಡುವ ಸುದ್ದಿಯೊಂದು ಹೊರಬಿದ್ದಿದೆ. ಚಿನ್ನದ ಬೆಲೆ ಇತಿಹಾಸದಲ್ಲೇ ಹಿಂದೆಂದೂ ಕಾಣದ ಮಟ್ಟಕ್ಕೆ ಏರಿಕೆಯಾಗಿದ್ದು, ಹೊಸ ದಾಖಲೆ ನಿರ್ಮಿಸಿದೆ. ಪ್ರತಿ 10 ಗ್ರಾಂ ಶುದ್ಧ ಚಿನ್ನದ ಬೆಲೆ ಈಗ ₹1,78,850ಕ್ಕೆ ತಲುಪುವ ಮೂಲಕ ಸಾಮಾನ್ಯ ಜನರಿಗೆ ಗಗನಕುಸುಮವಾಗಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಬೆಳವಣಿಗೆಗಳ ಪರಿಣಾಮವಾಗಿ ಭಾರತೀಯ ಮಾರುಕಟ್ಟೆಯಲ್ಲೂ ಚಿನ್ನದ ದರ ವಿಪರೀತವಾಗಿ ಏರಿಕೆಯಾಗಿದೆ.ಈಗಿನ ವೇಗವನ್ನು ನೋಡಿದರೆ, 10 ಗ್ರಾಂ ಚಿನ್ನದ ಬೆಲೆ ಶೀಘ್ರದಲ್ಲೇ ₹1.80 ಲಕ್ಷದ ಗಡಿ ದಾಟುವ ಸಾಧ್ಯತೆ ಇದೆ ಎಂದು ಮಾರುಕಟ್ಟೆ […]

ಕನ್ನಡ ದುನಿಯಾ 29 Jan 2026 10:46 am