SENSEX
NIFTY
GOLD
USD/INR

Weather

28    C

ಡಿಜಿಟಲ್ ಸುದ್ದಿ ಮೂಲಗಳು

... ...View News by News Source

BREAKING : ‘ಕೋಗಿಲು ಲೇಔಟ್’ಒತ್ತುವರಿ ತೆರವು : ‘ಸತ್ಯಶೋಧನಾ ತಂಡ’ರಚಿಸಿ ಬಿ.ವೈ ವಿಜಯೇಂದ್ರ ಆದೇಶ.!

ಬೆಂಗಳೂರು : ಕೋಗಿಲು ಲೇಔಟ್ ಒತ್ತುವರಿ ತೆರವು ವಿಚಾರ ಸಂಬಂಧ ಸತ್ಯಶೋಧನಾ ತಂಡ ರಚಿಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಆದೇಶ ಹೊರಡಿಸಿದ್ದಾರೆ. ಬೆಂಗಳೂರು ಯಲಹಂಕದ ಕೋಗಿಲು ಲೇಔಟ್ ಬಳಿ 200 ಕ್ಕೂ ಅಧಿಕ ಮನೆಗಳನ್ನು ಕಾಂಗ್ರೆಸ್ ಸರ್ಕಾರ ನೆಲಸಮ ಮಾಡಿರುವ ಕುರಿತು ಅದರ ಹಿಂದಿರುವ ಸತ್ಯಾಸತ್ಯತೆಯನ್ನು ಬಯಲಿಗೆಳೆಯುವ ನಿಟ್ಟಿನಲ್ಲಿ ರಾಜ್ಯಾಧ್ಯಕ್ಷರಾದ ವಿಜಯೇಂದ್ರ ಯಡಿಯೂರಪ್ಪ ಅವರು ಸತ್ಯಶೋಧನಾ ತಂಡ ರಚಿಸಿ ಆದೇಶ ಹೊರಡಿಸಿದ್ದಾರೆ ಎಂದು ಬಿಜೆಪಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದೆ. ಏನಿದೆ ಆದೇಶದಲ್ಲಿ..?ಬೆಂಗಳೂರಿನ ಯಲಹಂಕದ ಕೋಗಿಲು […]

ಕನ್ನಡ ದುನಿಯಾ 31 Dec 2025 3:39 pm

SHOCKING : ಮದ್ಯದ ನಶೆಯಲ್ಲಿ ತಾಯಿಗೆ ತಮಾಷೆ : ನೇಣು ಕುಣಿಕೆಗೆ ಸಿಲುಕಿ ಬೆಂಗಳೂರಲ್ಲಿ ಯುವಕ ದಾರುಣ ಸಾವು.!

ಬೆಂಗಳೂರು : ಮದ್ಯದ ನಶೆಯಲ್ಲಿ ತಾಯಿಗೆ ತಮಾಷೆ ಮಾಡಲು ಹೋಗಿ ನೇಣು ಕುಣಿಕೆಗೆ ಸಿಲುಕಿ ಬೆಂಗಳೂರಲ್ಲಿ ಯುವಕ ದಾರುಣವಾಗಿ ಮೃತಪಟ್ಟಂತಹ ಘಟನೆ ನಡೆದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ರೋಹಿತ್ ನಗರದಲ್ಲಿ ಈ ಘಟನೆ ನಡೆದಿದೆ. ಮೃತ ಯುವಕನನ್ನು ವಿಜಯ್ ಕುಮಾರ್ (28) ಎಂದು ಗುರುತಿಸಲಾಗಿದೆ. ಏನಿದು ಘಟನೆ ನಿನ್ನೆ ಸಂಜೆ ವಿಜಯ್ ಕುಮಾರ್ ಕಂಠಪೂರ್ತಿ ಕುಡಿದು ಮನೆಗೆ ಹೋಗಿದ್ದನು. ನಂತರ ತಾಯಿ ಬಳಿ ಖರ್ಚಿಗೆ ಹಣ ಕೇಳಿದ್ದಾನೆ. ಆಕೆ ಕೊಡಲ್ಲ ಎಂದಿದ್ದಾಳೆ. ಇಷ್ಟಕ್ಕೆ ವಿಜಯ್ ಕುಮಾರ್ […]

ಕನ್ನಡ ದುನಿಯಾ 31 Dec 2025 3:27 pm

JOB ALERT : ‘ನಬಾರ್ಡ್’ನಲ್ಲಿ ಭರ್ಜರಿ ಉದ್ಯೋಗವಕಾಶ, ತಿಂಗಳಿಗೆ 70,000 ಸಂಬಳ |NABARD recruitment 2025

ದುನಿಯಾ ಡಿಜಿಟಲ್ ಡೆಸ್ಕ್ : ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ (ನಬಾರ್ಡ್) ತನ್ನ ಅಧಿಕೃತ ಪೋರ್ಟಲ್ nabard.org ನಲ್ಲಿ ಯುವ ವೃತ್ತಿಪರರ ನೇಮಕಾತಿ 2026 ಗಾಗಿ ಅಧಿಸೂಚನೆಯನ್ನು ಪ್ರಕಟಿಸಿದೆ. ಈ ನೇಮಕಾತಿ ಪ್ರಕ್ರಿಯೆಯ ಮೂಲಕ ನಬಾರ್ಡ್ 44 ಯುವ ವೃತ್ತಿಪರರನ್ನು ನೇಮಿಸಿಕೊಳ್ಳಲು ಯೋಜಿಸಿದೆ. ಈ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ನೀಡಲಾಗುತ್ತದೆ ಮತ್ತು ಆಯ್ದ ಅಭ್ಯರ್ಥಿಗಳಿಗೆ ಗ್ರಾಮೀಣಾಭಿವೃದ್ಧಿ ನೀತಿಗಳು, ಕಾರ್ಯಕ್ರಮ ಮೌಲ್ಯಮಾಪನ ಮತ್ತು ಕೃಷಿ ಮತ್ತು ಗ್ರಾಮೀಣ ಹಣಕಾಸುಗೆ ಸಂಬಂಧಿಸಿದ ಕಾರ್ಯತಂತ್ರದ ಯೋಜನೆಗಳಂತಹ ಕ್ಷೇತ್ರಗಳಲ್ಲಿ ಪ್ರಾಯೋಗಿಕ […]

ಕನ್ನಡ ದುನಿಯಾ 31 Dec 2025 3:15 pm

ನನ್ನ ವಿರುದ್ಧ 17 ಕೇಸ್ ಇದೆ…ಇನ್ನೂ ಹಾಕೋಕೆ ಹೇಳಿ, ಆದ್ರೆ ದಾರಿ ತಪ್ಪಿಸಬೇಡಿ : ಪ್ರತಾಪ್ ಸಿಂಹ ತಿರುಗೇಟು.!

ಬೆಂಗಳೂರು : ನನ್ನ ವಿರುದ್ಧ 17 ಕೇಸ್ ಇದೆ, ಇನ್ನೂ ಹಾಕೋಕೆ ಹೇಳಿ ಆದ್ರೆ ದಾರಿ ತಪ್ಪಿಸಬೇಡಿ ಎಂದು ಪ್ರತಾಪ್ ಸಿಂಹ ತಿರುಗೇಟು ನೀಡಿದ್ದಾರೆ. ದ್ವೇಷ ಭಾಷಣ ಪ್ರತಿಬಂಧಕ ಕಾಯಿದೆ ಕುರಿತಾದ ಪೋಸ್ಟ್ ಒಂದಕ್ಕೆ ಪ್ರತಾಪ್ ಸಿಂಹ ತಿರುಗೇಟು ನೀಡಿದ್ದಾರೆ. ‘ನಮ್ಮ ಸಿದ್ದರಾಮಯ್ಯ ‘ ಹೆಸರಿನ ಫೇಸ್ ಬುಕ್ ಪೋಸ್ಟ್ ಗೆ ಅವರು ತಿರುಗೇಟು ನೀಡಿದ್ದಾರೆ. ”ಎರಡು ಮತ್ತು ಮೂರು ವರ್ಷಗಳ ಹಳೆ ಹೇಳಿಕೆಗಳನ್ನು Cut and Paste ಮಾಡಿ, ದ್ವೇಷ ಭಾಷಣ ಪ್ರತಿಬಂಧಕ ಕಾಯಿದೆಗೆ ಪ್ರತಾಪ್ […]

ಕನ್ನಡ ದುನಿಯಾ 31 Dec 2025 3:00 pm

BIG NEWS : ‘KSRTC’ಬಸ್’ನಲ್ಲಿ ಪ್ರಯಾಣಿಕರ ಸುರಕ್ಷತೆಗೆ ಇನ್ಮುಂದೆ ಈ ಕ್ರಮಗಳ ಪಾಲನೆ ಕಡ್ಡಾಯ : ಸರ್ಕಾರ ಆದೇಶ

ಬೆಂಗಳೂರು : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆ.ಎಸ್.ಆರ್.ಟಿ.ಸಿ) ಬಸ್ಸುಗಳಲ್ಲಿ ಪ್ರಯಾಣಿಸುವಾಗ ತುರ್ತು ಪರಿಸ್ಥಿತಿಗಳಲ್ಲಿ ಪ್ರಯಾಣಿಕರ ರಕ್ಷಣೆಗೆ ಅಗತ್ಯವಿರುವ ಹಲವಾರು ಸುರಕ್ಷತಾ ವ್ಯವಸ್ಥೆಗಳನ್ನು ಒದಗಿಸಲಾಗಿದೆ. ಪ್ರಯಾಣಿಕರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಿದೆ. ತುರ್ತು ಪರಿಸ್ಥಿತಿಯಲ್ಲಿ ಪ್ರಯಾಣಿಕರು ತೆಗೆದುಕೊಳ್ಳಬೇಕಾದ ಕ್ರಮಗಳು ಎಲ್ಲಾ ಬಸ್ಸುಗಳ ಒಳಭಾಗದಲ್ಲಿ ಪ್ಯಾನಿಕ್ ಬಟನ್ಗಕಳನ್ನು ಅಳವಡಿಸಲಾಗಿದೆ. ಅಗ್ನಿ ಅವಘಡ, ವೈದ್ಯಕೀಯ ತುರ್ತು ಪರಿಸ್ಥಿತಿ, ಪ್ರಯಾಣಿಕರ ಸುರಕ್ಷತೆಗೆ ಅಪಾಯ ಈ ತುರ್ತು ಸಂದರ್ಭಗಳಲ್ಲಿ ಮಾತ್ರ ಪ್ಯಾನಿಕ್ ಬಟನ್ ಒತ್ತಬೇಕು. ಪ್ಯಾನಿಕ್ ಬಟನ್ ಒತ್ತಿದ ಕೂಡಲೇ ಸಂಬಂಧಿಸಿದ […]

ಕನ್ನಡ ದುನಿಯಾ 31 Dec 2025 2:46 pm

ಹೊಸ ವರ್ಷಾಚರಣೆ: ಮೈಸೂರಿನಲ್ಲಿ ಅಬಕಾರಿ ಪೊಲೀಸರು ಅಲರ್ಟ್

ಹೊಸ ವರ್ಷದ ಸಂಭ್ರಮದ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಅಕ್ರಮ ಮದ್ಯ ಹಾಗೂ ಮಾದಕ ವಸ್ತುಗಳ ಮಾರಾಟ ತಡೆಯಲು ಅಬಕಾರಿ ಇಲಾಖೆ ಸಂಪೂರ್ಣ ಅಲರ್ಟ್ ಆಗಿದೆ. ಬೆಳ್ಳಂಬೆಳಗ್ಗೆಯೇ ಅಬಕಾರಿ ಪೊಲೀಸರು ಅಕ್ರಮ ಮದ್ಯ, ಡ್ರಗ್ಸ್ ಮಾರಾಟ ಜಾಲದ ಮೇಲೆ ತೀವ್ರ ಶೋಧಕಾರ್ಯ ಆರಂಭಿಸಿದ್ದಾರೆ. ಇತ್ತೀಚೆಗೆ ಮೈಸೂರು ಹಾಗೂ ಬೆಂಗಳೂರು ನಗರಗಳಲ್ಲಿ ಡ್ರಗ್ಸ್ ಫ್ಯಾಕ್ಟರಿಗಳು ತಲೆ ಎತ್ತಿರುವ ಹಿನ್ನೆಲೆಯಲ್ಲಿ ಅಬಕಾರಿ ಇಲಾಖೆ ಹೆಚ್ಚುವರಿ ಎಚ್ಚರಿಕೆ ವಹಿಸಿದೆ. ಎಣ್ಣೆ ಹೊಡೆದು ತೂರಾಡುವವರ ಚಲನವಲನಗಳ ಮೇಲೆ ಪೊಲೀಸರು ಕಣ್ಣಿಟ್ಟಿದ್ದು, ಮದ್ಯದ ಅಂಗಡಿಗಳ […]

ಕನ್ನಡ ದುನಿಯಾ 31 Dec 2025 2:40 pm

2026ರಲ್ಲಿ ಈ ನಾಲ್ಕು ರಾಶಿಯವರ ಅದೃಷ್ಟವೇ ಬದಲಾಗಲಿದೆ: ಅಂದುಕೊಂಡ ಕನಸುಗಳೆಲ್ಲಾ ನನಸಾಗುವ ಕಾಲ ಸಮೀಪಿಸಿದೆ!

ಹೊಸ ವರ್ಷ ಅಂದಮೇಲೆ ಪ್ರತಿಯೊಬ್ಬರಿಗೂ ತಮ್ಮ ಭವಿಷ್ಯದ ಬಗ್ಗೆ ನೂರಾರು ಕನಸುಗಳು ಮತ್ತು ನಿರೀಕ್ಷೆಗಳಿರುತ್ತವೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮುಂಬರುವ 2026ನೇ ವರ್ಷವು ಕೆಲವು ರಾಶಿಯವರಿಗೆ ಅತ್ಯಂತ ಫಲಪ್ರದವಾಗಲಿದ್ದು, ಅವರ ದೀರ್ಘಕಾಲದ ಆಸೆಗಳು ಈಡೇರಲಿವೆ. ಸವಾಲುಗಳ ನಡುವೆಯೂ ಈ ರಾಶಿಯವರು ತಮ್ಮ ಗುರಿಯತ್ತ ಗಮನಹರಿಸಿ ಯಶಸ್ಸಿನ ಶಿಖರ ಏರಲಿದ್ದಾರೆ ಎಂದು ಭವಿಷ್ಯವಾಣಿ ತಿಳಿಸಿದೆ. ಆ ಅದೃಷ್ಟವಂತ ರಾಶಿಗಳು ಯಾವುವು ಎಂಬ ಮಾಹಿತಿ ಇಲ್ಲಿದೆ. ಮೇಷ ರಾಶಿ: ಉತ್ಸಾಹವೇ ಯಶಸ್ಸಿನ ಗುಟ್ಟು ಮೇಷ ರಾಶಿಯವರು ತಾವು ಅಂದುಕೊಂಡ ಕೆಲಸವನ್ನು […]

ಕನ್ನಡ ದುನಿಯಾ 31 Dec 2025 2:31 pm

Shocking News: ನಂಜನಗೂಡು ಪೊಲೀಸ್ ಠಾಣೆ ಪಕ್ಕದಲ್ಲೇ ಸರಣಿ ಕಳ್ಳತನ

ನಂಜನಗೂಡು ಪಟ್ಟಣದಲ್ಲಿ ಸರಣಿ ಕಳ್ಳತನ ಪ್ರಕರಣಗಳು ಬೆಳಕಿಗೆ ಬಂದಿದ್ದು, ನಗರವಾಸಿಗಳಲ್ಲಿ ಆತಂಕ ಮೂಡಿಸಿದೆ. ಈ ಕಳ್ಳತನಗಳು ಪೊಲೀಸ್ ಠಾಣೆ ಸಮೀಪದಲ್ಲೇ ಆಗಿದ್ದು, ಜನರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಪ ಪಟ್ಟಣದ ಆರ್.ಪಿ. ರಸ್ತೆಯಲ್ಲಿರುವ ಸುಮಾರು 14 ರಿಂದ 16 ಅಂಗಡಿಗಳಲ್ಲಿ ಕಳ್ಳತನ ಹಾಗೂ ಕಳ್ಳತನಕ್ಕೆ ಯತ್ನ ನಡೆದಿರುವ ಘಟನೆ ಕಳೆದ ತಡರಾತ್ರಿ ಸಂಭವಿಸಿದೆ. ಪಟ್ಟಣ ಪೊಲೀಸ್ ಠಾಣೆಯ ಪಕ್ಕದಲ್ಲಿರುವ ಬಾಯ್ಸ್ ಮಿಡಲ್ ಶಾಲೆಯ ಆವರಣದಲ್ಲಿನ ಹಾಲಿನ ಡೈರಿಯಲ್ಲಿ ಸುಮಾರು 2 ಸಾವಿರ ರೂ. ನಗದು ಕಳ್ಳತನವಾಗಿದ್ದು, ಎದುರಿನ ಕೋಳಿ […]

ಕನ್ನಡ ದುನಿಯಾ 31 Dec 2025 2:30 pm

ಬಸ್ಸಿನಲ್ಲಿ ಯುವತಿಗೆ ಅಸಭ್ಯವಾಗಿ ಸ್ಪರ್ಶಿಸಿದ ವೃದ್ಧ: ರೊಚ್ಚಿಗೆದ್ದ ಮಹಿಳೆಯಿಂದ ಸಾರ್ವಜನಿಕವಾಗಿ ಚಪ್ಪಲಿ ಸೇವೆ!

ಸಾರ್ವಜನಿಕ ಸಾರಿಗೆಯಲ್ಲಿ ಮಹಿಳೆಯರ ಸುರಕ್ಷತೆ ಎಂಬುದು ಇಂದಿಗೂ ದೊಡ್ಡ ಪ್ರಶ್ನೆಯಾಗಿಯೇ ಉಳಿದಿದೆ. ಇದಕ್ಕೆ ಪುಷ್ಟಿ ನೀಡುವಂತೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಯುವತಿಯೊಬ್ಬಳಿಗೆ ವೃದ್ಧನೊಬ್ಬ ಅಸಭ್ಯವಾಗಿ ವರ್ತಿಸಿದ ಘಟನೆ ನಡೆದಿದ್ದು, ಆತನಿಗೆ ಯುವತಿ ಪಾಠ ಕಲಿಸಿದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ. ಸಹನೆಯ ಕಟ್ಟೆ ಒಡೆದಾಗ ನಡೆದಿದ್ದೇನು? ವೈರಲ್ ಆಗಿರುವ ವಿಡಿಯೋದಲ್ಲಿ ಬಸ್ಸಿನ ಸೀಟಿನಲ್ಲಿ ಕುಳಿತಿದ್ದ ವೃದ್ಧನೊಬ್ಬ ತನ್ನ ಪಕ್ಕದಲ್ಲೇ ಕುಳಿತಿದ್ದ ಯುವತಿಗೆ ಮೊಣಕೈ ಮೂಲಕ ಅಸಭ್ಯವಾಗಿ ಸ್ಪರ್ಶಿಸಲು ಯತ್ನಿಸುತ್ತಿರುವುದು ಕಂಡುಬಂದಿದೆ. ಆರಂಭದಲ್ಲಿ ಯುವತಿ ಇದನ್ನು […]

ಕನ್ನಡ ದುನಿಯಾ 31 Dec 2025 2:28 pm

‘ಡಾರ್ಕ್ ಮೋಡ್’ನಿಮ್ಮ ಮೊಬೈಲ್ ನಲ್ಲಿ ಬ್ಯಾಟರಿ ಬಾಳಿಕೆ ಹೆಚ್ಚಿಸುತ್ತದೆಯೇ ? ಅಚ್ಚರಿಯ ಕಾರಣಗಳು ಇಲ್ಲಿವೆ !

ದುನಿಯಾ ಡಿಜಿಟಲ್ ಡೆಸ್ಕ್ : ಇತ್ತೀಚಿನ ದಿನಗಳಲ್ಲಿ ಬಹುತೇಕ ಎಲ್ಲಾ ಸ್ಮಾರ್ಟ್ಫೋನ್ಗಳು ಡಾರ್ಕ್ ಮೋಡ್ನೊಂದಿಗೆ ಬರುತ್ತವೆ. ಅನೇಕ ಬಳಕೆದಾರರು ಇದನ್ನು ಆನ್ನಲ್ಲಿಯೇ ಇಡುತ್ತಾರೆ. ಇದು ಬ್ಯಾಟರಿಯನ್ನು ಉಳಿಸುತ್ತದೆ ಮತ್ತು ಕಣ್ಣಿನ ಒತ್ತಡವನ್ನು ಕಡಿಮೆ ಮಾಡುತ್ತದೆ ಎಂದು ಅವರು ನಂಬುತ್ತಾರೆ. ಮೊದಲ ನೋಟದಲ್ಲಿ, ಡಾರ್ಕ್ ಸ್ಕ್ರೀನ್ ಕಣ್ಣುಗಳಿಗೆ ಹಿತಕರವಾಗಿ ತೋರುತ್ತದೆ. ಏಕೆಂದರೆ ಅದು ಪ್ರಕಾಶಮಾನವಾದ ಬೆಳಕಿಗೆ ಹಾನಿ ಮಾಡುವುದಿಲ್ಲ. ಅದಕ್ಕಾಗಿಯೇ ಜನರು ಕಡಿಮೆ ಹೊಳಪು ಬ್ಯಾಟರಿ ಬಳಕೆಯನ್ನು ಕಡಿಮೆ ಮಾಡುತ್ತದೆ ಎಂದು ಭಾವಿಸುತ್ತಾರೆ. ಆದರೆ ವಾಸ್ತವವು ವಿಭಿನ್ನವಾಗಿದೆ.ಮೇಕ್ ಯೂಸ್ […]

ಕನ್ನಡ ದುನಿಯಾ 31 Dec 2025 2:28 pm

ಆನೆಗೂ ಬಂತು ಹೇರ್ ಸ್ಟೈಲ್ ಕ್ರೇಜ್: ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಯಿತು ಗಜರಾಜನ ‘ಪರ್ಫೆಕ್ಟ್ ಹೇರ್ ಫ್ಲಿಪ್’ವಿಡಿಯೋ!

ವನ್ಯಜೀವಿಗಳ ಲೋಕದಲ್ಲಿ ಆಗಾಗ್ಗೆ ನಗು ತರಿಸುವಂತಹ ಘಟನೆಗಳು ನಡೆಯುತ್ತಿರುತ್ತವೆ. ಇದೀಗ ಆನೆಯೊಂದು ತನ್ನದೇ ಸ್ಟೈಲ್‌ನಲ್ಲಿ ಮಾಡಿದ ‘ಹೇರ್ ಫ್ಲಿಪ್’ ವಿಡಿಯೋ ಅಂತರಾಷ್ಟ್ರೀಯ ಮಟ್ಟದಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರನ್ನು ಅಚ್ಚರಿಗೊಳಿಸಿದೆ. ಆನೆಯ ಈ ವಿಚಿತ್ರ ಮತ್ತು ತಮಾಷೆಯ ವರ್ತನೆ ನೋಡಿ ಜನರು ಫಿದಾ ಆಗಿದ್ದಾರೆ. ಹುಲ್ಲಿನ ಕಟ್ಟು ತಲೆಯ ಮೇಲೆ ಬಿದ್ದಾಗ… ವೈರಲ್ ಆಗಿರುವ ಪುಟ್ಟ ವಿಡಿಯೋ ಕ್ಲಿಪ್‌ನಲ್ಲಿ ಆನೆಯೊಂದು ತನಗಿಷ್ಟ ಬಂದಂತೆ ಆಟವಾಡುತ್ತಿರುತ್ತದೆ. ಈ ವೇಳೆ ಅದು ಒಂದಿಷ್ಟು ಹುಲ್ಲಿನ ಕಟ್ಟುಗಳನ್ನು ತನ್ನ ಸೊಂಡಿಲಿನಿಂದ ಮೇಲೆಕ್ಕೆ ಎಸೆಯುತ್ತದೆ. […]

ಕನ್ನಡ ದುನಿಯಾ 31 Dec 2025 2:26 pm

ಮದ್ಯಪಾನ ‘ಲಿಮಿಟ್’ನಲ್ಲಿದ್ದರೂ ಡೇಂಜರ್: 28 ವರ್ಷದ ಯುವಕನ ಲಿವರ್ ಶೇ. 100ರಷ್ಟು ಡ್ಯಾಮೇಜ್! ವೈದ್ಯರು ಹಂಚಿಕೊಂಡ ಬೆಚ್ಚಿಬೀಳಿಸುವ ಫೋಟೋ

“ಮಿತವಾಗಿ ಮದ್ಯಪಾನ ಮಾಡಿದರೆ ಆರೋಗ್ಯಕ್ಕೆ ಏನೂ ಆಗುವುದಿಲ್ಲ” ಎಂಬುದು ಅನೇಕರ ನಂಬಿಕೆ. ಆದರೆ ಗುಜರಾತ್‌ನ ವಡೋದರಾದ ಖ್ಯಾತ ರೇಡಿಯಾಲಜಿಸ್ಟ್ ಡಾ. ಹರ್ಷ್ ವ್ಯಾಸ್ ಅವರು ಹಂಚಿಕೊಂಡಿರುವ ಒಂದು ವೈದ್ಯಕೀಯ ವರದಿ ಈ ನಂಬಿಕೆಯನ್ನು ಅಕ್ಷರಶಃ ಹುಸಿಗೊಳಿಸಿದೆ. ಕೇವಲ 28 ವರ್ಷದ ಯುವಕನೊಬ್ಬ ಅನಿರೀಕ್ಷಿತವಾಗಿ ಲಿವರ್ ವೈಫಲ್ಯಕ್ಕೆ ಒಳಗಾಗಿರುವ ಘಟನೆ ಈಗ ವೈದ್ಯಕೀಯ ಲೋಕದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಬೆಚ್ಚಿಬೀಳಿಸುವ ಅಲ್ಟ್ರಾಸೌಂಡ್ ರಿಪೋರ್ಟ್ ಡಾ. ಹರ್ಷ್ ವ್ಯಾಸ್ ಇತ್ತೀಚೆಗೆ ತಮ್ಮ ಇನ್‌ಸ್ಟಾಗ್ರಾಮ್ ಪುಟದಲ್ಲಿ ಯುವಕನೊಬ್ಬನ ಲಿವರ್ ಸ್ಕ್ಯಾನಿಂಗ್ ಫೋಟೋವನ್ನು […]

ಕನ್ನಡ ದುನಿಯಾ 31 Dec 2025 2:24 pm

ಹೋಟೆಲ್ ರೂಮ್‌ನಲ್ಲಿ ಎಲ್ಲವೂ ಇರುತ್ತೆ, ಆದ್ರೆ ಗಡಿಯಾರ ಯಾಕಿರಲ್ಲ? ಇದರ ಹಿಂದಿದೆ ಅಚ್ಚರಿಯ ಸೀಕ್ರೆಟ್!

ನೀವು ಎಂದಾದರೂ ಹೋಟೆಲ್ ರೂಮ್‌ಗಳಿಗೆ ಹೋದಾಗ ಗಮನಿಸಿದ್ದೀರಾ? ಅಲ್ಲಿ ಸುಸಜ್ಜಿತ ಮಂಚ, ಟಿವಿ, ಎಸಿ ಎಲ್ಲವೂ ಇರುತ್ತದೆ. ಆದರೆ ಸಮಯ ತೋರಿಸುವ ಗಡಿಯಾರ ಮಾತ್ರ ಎಲ್ಲಿಯೂ ಕಾಣಿಸುವುದಿಲ್ಲ. ಅರೆ, ಇದೇನಪ್ಪಾ ಇಷ್ಟು ದೊಡ್ಡ ಹೋಟೆಲ್‌ನಲ್ಲಿ ಒಂದು ಗಡಿಯಾರ ಇಟ್ಟಿಲ್ಲವಲ್ಲ ಎಂದು ನೀವು ಅಂದುಕೊಂಡಿರಬಹುದು. ಆದರೆ ಇದು ಹೋಟೆಲ್ ಮಾಲೀಕರ ಮರೆವು ಅಥವಾ ಹಣ ಉಳಿಸುವ ತಂತ್ರವಲ್ಲ. ಇದರ ಹಿಂದೆ ಕೆಲವು ಆಸಕ್ತಿದಾಯಕ ಮತ್ತು ವೈಜ್ಞಾನಿಕ ಕಾರಣಗಳಿವೆ. ನಿಮಗೆ ಒತ್ತಡ ಮುಕ್ತ ಅನುಭವ ನೀಡಲು ಹೋಟೆಲ್‌ಗೆ ಹೋಗುವುದೇ ವಿಶ್ರಾಂತಿ […]

ಕನ್ನಡ ದುನಿಯಾ 31 Dec 2025 2:22 pm

ಭಾರತದಲ್ಲೂ ಇದೆ ಇಂತಹದೊಂದು ವಿಸ್ಮಯ ನಗರ: ಇಲ್ಲಿ ಒಂದೇ ಒಂದು ಟ್ರಾಫಿಕ್ ಸಿಗ್ನಲ್ ಇಲ್ಲದಿದ್ರೂ ಜಾಮ್ ಆಗಲ್ಲ ರಸ್ತೆ!

ಭಾರತದ ಯಾವುದೇ ನಗರಕ್ಕೆ ಹೋದರೂ ವಾಹನ ಸವಾರರನ್ನು ಕಾಡುವ ಮೊದಲ ಸಮಸ್ಯೆ ಎಂದರೆ ಅದು ಟ್ರಾಫಿಕ್ ಸಿಗ್ನಲ್‌ಗಳು. ಸಿಗ್ನಲ್ ಬಿದ್ದಾಗ ನಿಮಿಷಗಟ್ಟಲೆ ಕಾಯುವುದು, ಹಾರ್ನ್ ಸದ್ದು ಹಾಗೂ ಟ್ರಾಫಿಕ್ ಜಾಮ್ ಕಿರಿಕಿರಿ ಸಾಮಾನ್ಯ. ಆದರೆ, ಭಾರತದಲ್ಲೇ ಒಂದು ನಗರವಿದೆ, ಅಲ್ಲಿ ನೀವು ಎಷ್ಟೇ ದೂರ ಪ್ರಯಾಣಿಸಿದರೂ ಒಂದೇ ಒಂದು ಟ್ರಾಫಿಕ್ ಸಿಗ್ನಲ್ ನಿಮಗೆ ಎದುರಾಗುವುದಿಲ್ಲ! ಹೌದು, ರಾಜಸ್ಥಾನದ ಕೋಟಾ ನಗರ ಇಂದು ದೇಶದ ಮೊದಲ ‘ಸಿಗ್ನಲ್ ಮುಕ್ತ’ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಶಿಕ್ಷಣದ ಕಾಶಿಯಲ್ಲಿ ಟ್ರಾಫಿಕ್ […]

ಕನ್ನಡ ದುನಿಯಾ 31 Dec 2025 2:19 pm

ಅಂತ್ಯಕ್ರಿಯೆಯ ವೇಳೆ ಚಿತೆಯ ಸುತ್ತ ಮಡಿಕೆ ಹೊತ್ತು ತಿರುಗುವುದೇಕೆ? ಮಡಿಕೆಯನ್ನು ಒಡೆಯುವ ಹಿಂದಿನ ಅಸಲಿ ಕಾರಣವೇನು?

ಹಿಂದೂ ಸಂಪ್ರದಾಯದಲ್ಲಿ ಜನನದಿಂದ ಮರಣದವರೆಗೆ ಹದಿನಾರು ಸಂಸ್ಕಾರಗಳಿವೆ. ಅದರಲ್ಲಿ ಅಂತಿಮವಾದುದು ‘ಅಂತ್ಯಸಂಸ್ಕಾರ’. ಸ್ಮಶಾನದಲ್ಲಿ ಚಿತೆಗೆ ಬೆಂಕಿ ಇಡುವ ಮೊದಲು ನಡೆಸುವ ‘ಮಡಿಕೆ ಒಡೆಯುವ’ ವಿಧಿಯನ್ನು ನಾವೆಲ್ಲರೂ ನೋಡಿರುತ್ತೇವೆ. ಮೇಲ್ನೋಟಕ್ಕೆ ಇದು ಕೇವಲ ಒಂದು ಆಚರಣೆಯಂತೆ ಕಂಡರೂ, ಇದರ ಹಿಂದೆ ಜೀವನದ ಸತ್ಯ ಮತ್ತು ಆತ್ಮದ ಪಯಣದ ಕುರಿತಾದ ಆಳವಾದ ಅರ್ಥಗಳಿವೆ. ದೇಹ ಮತ್ತು ಆತ್ಮದ ಸಂಕೇತ ಹಿಂದೂ ತತ್ವಶಾಸ್ತ್ರದ ಪ್ರಕಾರ, ಮನುಷ್ಯನ ದೇಹವು ಮಣ್ಣಿನ ಮಡಿಕೆಯಂತೆ. ಮಡಿಕೆಯನ್ನು ಮಣ್ಣಿನಿಂದ ಮಾಡಿ ಹೇಗೆ ಮಣ್ಣಿಗೇ ಸೇರಿಸಲಾಗುತ್ತದೆಯೋ, ಹಾಗೆಯೇ ಪಂಚಭೂತಗಳಿಂದಾದ […]

ಕನ್ನಡ ದುನಿಯಾ 31 Dec 2025 2:12 pm

BIG ALERT : ‘ಪ್ಯಾನ್- ಆಧಾರ್ ಕಾರ್ಡ್’ಲಿಂಕ್’ಗೆ ಇನ್ನು ಕೆಲವೇ ಗಂಟೆಗಳು ಬಾಕಿ.. ಇಲ್ಲದಿದ್ದರೆ 1,000 ರೂ.ದಂಡ..!

ಡಿಸೆಂಬರ್ 31 ರ ಗಡುವಿಗೆ ಕೆಲವೇ ಗಂಟೆಗಳು ಬಾಕಿ ಇರುವಾಗ, ದೇಶಾದ್ಯಂತ ಲಕ್ಷಾಂತರ ಭಾರತೀಯ ತೆರಿಗೆದಾರರು ತಮ್ಮ ಪ್ಯಾನ್ (PAN) ಅನ್ನು ಆಧಾರ್ನೊಂದಿಗೆ ಲಿಂಕ್ ಮಾಡಲು ಧಾವಿಸುತ್ತಿದ್ದಾರೆ. ಹಣಕಾಸು ಸಚಿವಾಲಯದ ಅಡಿಯಲ್ಲಿ ಬರುವ ಕೇಂದ್ರೀಯ ನೇರ ತೆರಿಗೆ ಮಂಡಳಿ (CBDT) ಅರ್ಹ ನಾಗರಿಕರಿಗೆ ಈ ಪ್ರಕ್ರಿಯೆಯನ್ನು ಕಡ್ಡಾಯಗೊಳಿಸಿದೆ. ತಮ್ಮ ಪ್ಯಾನ್-ಆಧಾರ್ ಅನ್ನು ಲಿಂಕ್ ಮಾಡದವರು ಇಂದು ಮಧ್ಯರಾತ್ರಿ ಮುಗಿದ ನಂತರ, ಅಂದರೆ ಜನವರಿ 1, 2026 ರಿಂದ ಗಂಭೀರ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ. ದೇಶಾದ್ಯಂತದ […]

ಕನ್ನಡ ದುನಿಯಾ 31 Dec 2025 1:56 pm

Good News: ವಂದೇ ಭಾರತ್ ರೈಲು, ಮಂಗಳೂರಿಗೆ ಗುಡ್‌ನ್ಯೂಸ್ ಕೊಟ್ಟ ಸಚಿವ

ಭಾರತೀಯ ರೈಲ್ವೆ ಸಕಲೇಶಪುರ-ಸುಬ್ರಹ್ಮಣ್ಯ ಘಾಟ್ ವಿಭಾಗದ ವಿದ್ಯುದೀಕರಣ ಕಾಮಗಾರಿಯನ್ನು ಪೂರ್ಣಗೊಳಿಸುವ ಮೂಲಕ ಐತಿಹಾಸಿಕ ಮೈಲಿಗಲ್ಲು ಸ್ಥಾಪಿಸಿದೆ. ಇದರಿಂದಾಗಿ ರಾಜಧಾನಿ ಬೆಂಗಳೂರು ಮತ್ತು ಕರಾವಳಿ ಭಾಗದ ಸಂಪರ್ಕ ಇನ್ನಷ್ಟು ಸುಲಭವಾಗಲಿದೆ. ಕರಾವಳಿಗೆ ವಂದೇ ಭಾರತ್ ರೈಲು ಓಡಿಸಲು ಸಹ ಅನುಕೂಲವಾಗಲಿದೆ. ಈ ಕುರಿತು ಮಾತನಾಡಿದ ಕೇಂದ್ರ ರೈಲ್ವೆ, ಮಾಹಿತಿ ಮತ್ತು ಪ್ರಸಾರ ಹಾಗೂ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್, “ಈಗ ನಾವು ಈ ಮಾರ್ಗದ ಮೂಲಕ ಮಂಗಳೂರಿಗೆ ವಂದೇ ಭಾರತ್ ರೈಲನ್ನು ಓಡಿಸಲು ಸಾಧ್ಯವಾಗುತ್ತದೆ” […]

ಕನ್ನಡ ದುನಿಯಾ 31 Dec 2025 1:43 pm

BIG NEWS : ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯಲ್ಲಿ ‘ಮೊಬೈಲ್ ಆಧಾರಿತ ಹಾಜರಾತಿ’ಕಡ್ಡಾಯ

ಬೆಂಗಳೂರು : ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯು ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಮೊಬೈಲ್ ಆಧಾರಿತ ಹಾಜರಾತಿಯನ್ನು ಕಡ್ಡಾಯವಾಗಿ ಜಾರಿಗೊಳಿಸಿ ಆದೇಶ ಹೊರಡಿಸಿದೆ. ಇಲಾಖೆಯು ಈಗಾಗಲೇ ಚಾಲ್ತಿಯಲ್ಲಿದ್ದ ಬಯೋಮೆಟ್ರಿಕ್ ಹಾಜರಾತಿಯನ್ನು ರದ್ದುಗೊಳಿಸಿ, ಮೊಬೈಲ್ ಆಧಾರಿತ ಹಾಜರಾತಿಯ (ಕರ್ನಾಟಕ ಹಾಜರಾತಿ ನಿರ್ವಹಣಾ ವ್ಯವಸ್ಥೆ) ಮೂಲಕ ಕಡ್ಡಾಯವಾಗಿ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹಾಜರಾತಿ ನೀಡಬೇಕೆಂದು ಎಂದು ಸೂಚಿಸಿದೆ. ಈ ಹೊಸ ಹಾಜರಾತಿ ವ್ಯವಸ್ಥೆಯನ್ನು ಅನುಸರಿಸದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ವೇತನವನ್ನು ಕಡಿತಗೊಳಿಸುವುದರ ಜೊತೆಗೆ ನಡತೆ ನಿಯಮದ ಉಲ್ಲಂಘನೆ […]

ಕನ್ನಡ ದುನಿಯಾ 31 Dec 2025 1:15 pm

BREAKING : ಚಿತ್ರದುರ್ಗ ಬಸ್ ದುರಂತ : ಮತ್ತೋರ್ವ ಗಾಯಾಳು ಸಾವು, ಸಾವಿನ ಸಂಖ್ಯೆ 8 ಕ್ಕೇರಿಕೆ.!

ಚಿತ್ರದುರ್ಗ : ಚಿತ್ರದುರ್ಗ ಬಸ್ ದುರಂತದಲ್ಲಿ ಗಾಯಗೊಂಡಿದ್ದ ಮತ್ತೋರ್ವ ಗಾಯಾಳು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದು, ಸಾವಿನ ಸಂಖ್ಯೆ 8 ಕ್ಕೇರಿಕೆಯಾಗಿದೆ. ಮೃತರನ್ನು ಮಂಜುನಾಥ್ ಎಂದು ಗುರುತಿಸಲಾಗಿದೆ. ಚಿತ್ರದುರ್ಗದಲ್ಲಿ ನಡೆದ ಬಸ್ ಅಪಘಾತದಲ್ಲಿ ಶೇ.40 ರಷ್ಟು ಸುಟ್ಟು ಗಾಯಗೊಂಡಿದ್ದ ಮಂಜುನಾಥ್ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದರು. ಬೆಂಕಿಯಲ್ಲಿ ಶ್ವಾಸಕೋಶ ಸುಟ್ಟು ಹೋಗಿದ್ದರಿಂದ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಸಮೀಪದ ಗೊರ್ಲತ್ತು ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಮತ್ತು ಖಾಸಗಿ ಬಸ್ […]

ಕನ್ನಡ ದುನಿಯಾ 31 Dec 2025 1:05 pm

Big Breaking: ಕೇರಳ ಸಿಎಂ, ಕೆ.ಸಿ.ವೇಣುಗೋಪಾಲ್ ಜೊತೆ ವೇದಿಕೆ ಹಂಚಿಕೊಂಡ ಸಿದ್ದರಾಮಯ್ಯ!

ರಾಷ್ಟ್ರಮಟ್ಟದಲ್ಲಿ ಸುದ್ದಿಯಾದ ಕೋಗಿಲು ಬಡಾವಣೆಯಲ್ಲಿ ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಶೆಡ್ ತೆರವು ಕಾರ್ಯಾಚರಣೆ ಬಳಿಕ ಸಿಎಂ ಸಿದ್ದರಾಮಯ್ಯ ಕೇರಳದಲ್ಲಿದ್ದಾರೆ. ಅವರು ಕೇರಳ ಸಿಎಂ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಸಂಸದ ಕೆ.ಸಿ.ವೇಣುಗೋಪಾಲ್ ಜೊತೆ ವೇದಿಕೆ ಹಂಚಿಕೊಂಡಿದ್ದಾರೆ. ಬುಧವಾರ ಸಿಎಂ ಸಿದ್ದರಾಮಯ್ಯ ಕೇರಳ ಪ್ರವಾಸದಲ್ಲಿದ್ದಾರೆ. ತಿರುವನಂತಪುರಂ ಜಿಲ್ಲೆಯ ಶಿವಗಿರಿ ಮಠದಲ್ಲಿ ಶ್ರೀ ನಾರಾಯಣ ಧರ್ಮಸಂಗಮ ಟ್ರಸ್ಟ್‌ ಆಯೋಜಿಸಿರುವ ಮಠದ ಯಾತ್ರಾರ್ಥಿಗಳ‌ ಸಮಾವೇಶದಲ್ಲಿ ಪಾಲ್ಗೊಂಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಕೇರಳ ಸರ್ಕಾರದ ಸಚಿವ ವಿ.ಎನ್.ವಾಸವನ್, ಸಂಸದ […]

ಕನ್ನಡ ದುನಿಯಾ 31 Dec 2025 12:54 pm

BREAKING : ‘ವಾಲ್ಮೀಕಿ ನಿಗಮ ಹಗರಣ’ಕೇಸ್ : ಬಳ್ಳಾರಿಯಲ್ಲಿ ಮಾಜಿ ಸಚಿವ ಬಿ.ನಾಗೇಂದ್ರ ಆಪ್ತನ ಮನೆ ಮೇಲೆ ‘CBI’ದಾಳಿ

ಬಳ್ಳಾರಿ : ವಾಲ್ಮೀಕಿ ನಿಗಮ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಬಿ.ನಾಗೇಂದ್ರ ಆಪ್ತನಿಗೆ ‘ಸಿಬಿಐ’ (CBI) ಶಾಕ್ ನೀಡಿದ್ದು, ಬಳ್ಳಾರಿಯಲ್ಲಿ ವಿಶ್ವನಾಥ್ ಮನೆ ಮೇಲೆ ದಾಳಿ ನಡೆಸಲಾಗಿದೆ. ನಾಲ್ವರು ಸಿಬಿಐ ಅಧಿಕಾರಿಗಳು ಮಾಜಿ ಸಚಿವ ಬಿ.ನಾಗೇಂದ್ರ ಆಪ್ತ ವಿಶ್ವನಾಥ್ ಮನೆ ಮೇಲೆ ದಾಳಿ ನಡೆಸಿ ಶೋಧ ನಡೆಸಿದೆ.ದಾಳಿ ನಡೆಸಿದ ಅಧಿಕಾರಿಗಳು ವಿಶ್ವನಾಥ್ ಸಹೋದರನನ್ನು ಬ್ರೂಸ್ ಪೇಟೆ ಠಾಣೆಗೆ ಕರೆತಂದಿದ್ದಾರೆ ಎಂದು ತಿಳಿದು ಬಂದಿದೆ. ವಿಶ್ವನಾಥ್ ಇಲ್ಲದಿರುವ ಹಿನ್ನೆಲೆ ಅವರ ಸಹೋದರ ಮಹೇಶ್ ನನ್ನು ಪೊಲೀಸರು ಕರೆತಂದು […]

ಕನ್ನಡ ದುನಿಯಾ 31 Dec 2025 12:43 pm

ಮನುಷ್ಯ ಹುಟ್ಟಲು ಒಂಬತ್ತು ತಿಂಗಳುಗಳು ಏಕೆ ಬೇಕಾಗುತ್ತದೆ..? ಇಲ್ಲಿದೆ ಇಂಟರೆಸ್ಟಿಂಗ್ ಸಂಗತಿ

ಸಾಮಾನ್ಯವಾಗಿ ತಾಯಿಯ ಗರ್ಭದಿಂದ ಒಂಬತ್ತು ತಿಂಗಳ ನಂತರ ಮಾನವ ಜನನ ಸಂಭವಿಸುತ್ತದೆ. ಮನುಷ್ಯ ಹುಟ್ಟಲು ಕೇವಲ ಒಂಬತ್ತು ತಿಂಗಳುಗಳು ಏಕೆ ಬೇಕಾಗುತ್ತದೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಇಂದಿನ ಜೀವಶಾಸ್ತ್ರವು ಭ್ರೂಣದ ಬೆಳವಣಿಗೆಯನ್ನು ವಿವರಿಸಿದೆ. ಆದರೆ ಅದಕ್ಕೂ ಮುಂಚೆಯೇ, ನಮ್ಮ ಧಾರ್ಮಿಕ ಗ್ರಂಥಗಳು ಮತ್ತು ಪೌರಾಣಿಕ ಗ್ರಂಥಗಳು ಮಾನವ ಜನ್ಮಕ್ಕೆ ಸಂಬಂಧಿಸಿದ ಅನೇಕ ವಿಷಯಗಳನ್ನು ಬಹಿರಂಗಪಡಿಸಿದೆ. ತಾಯಿಯ ಗರ್ಭದಲ್ಲಿ ಮಗುವಿನ ಒಂಬತ್ತು ತಿಂಗಳ ಪ್ರಯಾಣದಲ್ಲಿ, ದೈಹಿಕ ಬೆಳವಣಿಗೆ ಮಾತ್ರವಲ್ಲದೆ ಇತರ ಹಲವು ಅಂಶಗಳೂ ಸಹ ಸಂಯೋಜಿಸಲ್ಪಟ್ಟಿವೆ. ಆತ್ಮ […]

ಕನ್ನಡ ದುನಿಯಾ 31 Dec 2025 12:28 pm

BREAKING : ಮಾಜಿ ಸಚಿವ ಬಿ.ನಾಗೇಂದ್ರ ಆಪ್ತನಿಗೆ ‘CBI’ ಶಾಕ್ : ಬಳ್ಳಾರಿಯಲ್ಲಿ ವಿಶ್ವನಾಥ್ ಮನೆ ಮೇಲೆ ದಾಳಿ.!

ಬಳ್ಳಾರಿ : ಮಾಜಿ ಸಚಿವ ಬಿ.ನಾಗೇಂದ್ರ ಆಪ್ತನಿಗೆ ‘ಸಿಬಿಐ’ (CBI) ಶಾಕ್ ನೀಡಿದ್ದು, ಬಳ್ಳಾರಿಯಲ್ಲಿ ವಿಶ್ವನಾಥ್ ಮನೆ ಮೇಲೆ ದಾಳಿ ನಡೆಸಲಾಗಿದೆ. ನಾಲ್ವರು ಸಿಬಿಐ ಅಧಿಕಾರಿಗಳು ಮಾಜಿ ಸಚಿವ ಬಿ.ನಾಗೇಂದ್ರ ಆಪ್ತ ವಿಶ್ವನಾಥ್ ಮನೆ ಮೇಲೆ ದಾಳಿ ನಡೆಸಿ ಶೋಧ ನಡೆಸಿದೆ. ದಾಳಿ ನಡೆಸಿದ ಅಧಿಕಾರಿಗಳು ವಿಶ್ವನಾಥ್ ಕುಟುಂಬದವರನ್ನು ಬ್ರೂಸ್ ಪೇಟೆ ಠಾಣೆಗೆ ಕರೆತಂದಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ಕನ್ನಡ ದುನಿಯಾ 31 Dec 2025 12:09 pm

BIG NEWS : ಬೆಂಗಳೂರಲ್ಲಿ ಹೊಸ ವರ್ಷಾಚರಣೆಗೆ ಬಿಗಿ ಭದ್ರತೆ, ಮಹಿಳೆಯರ ಸುರಕ್ಷತೆಗೆ ಆದ್ಯತೆ : DCM ಡಿ.ಕೆ ಶಿವಕುಮಾರ್

ಬೆಂಗಳೂರು : ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆಗೆ ಬಿಗಿ ಭದ್ರತೆ ಕೈಗೊಳ್ಳಲಾಗಿದ್ದು, ಈ ಕುರಿತು ಸ್ವತಹ ಡಿಸಿಎಂ ಡಿಕೆ ಶಿವಕುಮಾರ್ ಮಾಹಿತಿ ನೀಡಿದ್ದಾರೆ. ಡಿಸಿಎಂ ಡಿಕೆಶಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. * ಸಾರ್ವಜನಿಕರ ಭದ್ರತೆಗಾಗಿ ನಗರದಾದ್ಯಂತ 20,000 ಪೊಲೀಸ್ ಸಿಬ್ಬಂದಿ ನಿಯೋಜನೆ *ಮಹಿಳೆಯರ ಸುರಕ್ಷತೆಗಾಗಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳು *ಜನಸಂದಣಿ ಮೇಲ್ವಿಚಾರಣೆಗಾಗಿ ರಿಯಲ್‌-ಟೈಮ್ ಹೀಟ್ ಮ್ಯಾಪ್ ತಂತ್ರಜ್ಞಾನ *ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ಇಂದಿರಾನಗರ, ಕೋರಮಂಗಲ ಮತ್ತು ಎಲೆಕ್ಟ್ರಾನಿಕ್ ಸಿಟಿ ಸೇರಿದಂತೆ ಹೆಚ್ಚಿನ ಜನಸಂದಣಿ ಇರುವ ಪ್ರದೇಶಗಳಲ್ಲಿ […]

ಕನ್ನಡ ದುನಿಯಾ 31 Dec 2025 11:58 am

2026 Watch Trend: ಮುಂಬರುವ ವಿಧಾನಸಭೆ ಚುನಾವಣೆಗಳತ್ತ ಚಿತ್ತ

2025 ಕಳೆದು ಹೋಗಿದೆ. 2026 ಸ್ವಾಗತಿಸಲು ಜನರು ತಯಾರಿ ನಡೆಸಿದ್ದಾರೆ. ರಾಜಕೀಯ ಪಕ್ಷಗಳು ಸಹ ಮುಂದಿನವ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆಯ ತಯಾರಿಯನ್ನು ಪ್ರಾರಂಭಿಸಿದ್ದಾರೆ. 5 ರಾಜ್ಯಗಳ ವಿಧಾನಸಭೆ ಚುನಾವಣೆ, ರಾಜ್ಯಸಭೆಯ 75 ಸೀಟುಗಳ ಭರ್ತಿಗೆ 2026ರಲ್ಲಿ ಚುನಾವಣೆ ನಡೆಯಬೇಕಿದೆ. 2026ರಲ್ಲಿ ತಮಿಳುನಾಡು, ಪಶ್ಚಿಮ ಬಂಗಾಳ, ಅಸ್ಸಾಂ, ಕೇರಳ ಮತ್ತು ಕೇಂದ್ರಾಡಳಿತ ಪದೇಶವಾದ ಪುದುಚೇರಿ ವಿಧಾನಸಭೆ ಚುನಾವಣೆ ನಡೆಯಬೇಕಿದೆ. ಈ ಚುನಾವಣೆ ಎನ್‌ಡಿಎ ಮತ್ತು ಯುಪಿಎ ಪಾಲಿಗೆ ಅತೀ ಮಹತ್ವದ್ದಾಗಿದೆ. 2025ರಲ್ಲಿ ದೆಹಲಿ ಮತ್ತು ಬಿಹಾರ ವಿಧಾಸನಭೆ […]

ಕನ್ನಡ ದುನಿಯಾ 31 Dec 2025 11:52 am

Big Update : ಮಧ್ಯಪ್ರದೇಶದಲ್ಲಿ ಕಲುಷಿತ ನೀರು ಸೇವಿಸಿ 8 ಮಂದಿ ಸಾವು : 100 ಕ್ಕೂ ಹೆಚ್ಚು ಜನ ಆಸ್ಪತ್ರೆಗೆ ದಾಖಲು

ಮಧ್ಯಪ್ರದೇಶದ ಇಂದೋರ್ ನಗರದ ಭಾಗೀರಥಪುರ ಪ್ರದೇಶದಲ್ಲಿ ಕಲುಷಿತ ನೀರು ಸೇವಿಸಿದ ಹಿನ್ನೆಲೆ ಕನಿಷ್ಠ 8 ಜನರು ಸಾವನ್ನಪ್ಪಿದ್ದು ಮತ್ತು 100 ಕ್ಕೂ ಹೆಚ್ಚು ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಡಿಸೆಂಬರ್ 25 ರಂದು ಸರಬರಾಜು ಮಾಡಲಾದ ಪುರಸಭೆಯ ನೀರಿನಲ್ಲಿ ಅಸಾಮಾನ್ಯ ರುಚಿ ಮತ್ತು ವಾಸನೆ ಇದೆ ಎಂದು ನಿವಾಸಿಗಳು ವರದಿ ಮಾಡಿದ ನಂತರ ಪ್ರಾರಂಭವಾದ ಈ ಸೋಂಕು ನಗರದಲ್ಲಿ ಕುಡಿಯುವ ನೀರಿನ ಸುರಕ್ಷತೆಯ ಬಗ್ಗೆ ಗಂಭೀರ ಕಳವಳವನ್ನು ಹುಟ್ಟುಹಾಕಿದೆ. ಮುಖ್ಯಮಂತ್ರಿ ಮೋಹನ್ ಯಾದವ್ ಸಾವಿನ ಬಗ್ಗೆ ದುಃಖ ವ್ಯಕ್ತಪಡಿಸಿ, […]

ಕನ್ನಡ ದುನಿಯಾ 31 Dec 2025 11:44 am

ಗಮನಿಸಿ : ‘ಗ್ರಾಮ ಒನ್ ಕೇಂದ್ರ’ಗಳಿಗೆ ಆಸಕ್ತ ಪ್ರಾಂಚೈಸಿಗಳಿಂದ ಅರ್ಜಿ ಆಹ್ವಾನ

ಕೊಡಗು ಜಿಲ್ಲೆಯಲ್ಲಿ ಪ್ರಸ್ತುತ 15 ಗ್ರಾಮ ಪಂಚಾಯತ್‍ಗಳಲ್ಲಿ ಸಮಗ್ರ ನಾಗರಿಕ ಸೇವಾ ಕೇಂದ್ರ/ ಗ್ರಾಮ ಒನ್ ಕೇಂದ್ರಗಳಿಗೆ ಆಸಕ್ತ ಪ್ರಾಂಚೈಸಿಗಳಿಂದ ಇಡಿಸಿಎಸ್ ಬೆಂಗಳೂರಿನಿಂದ ಅರ್ಜಿ ಆಹ್ವಾನಿಸಲಾಗಿದೆ. ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲ್ಲೂಕಿನ ಪೊನ್ನಂಪೇಟೆ, ಬಿ.ಶೆಟ್ಟಿಗೇರಿ, ನಾಲ್ಕೇರಿ, ಕೆ.ಬಾಡಗ, ನಿಟ್ಟೂರು, ಬಲ್ಯಮಂಡೂರು, ದೇವರಪುರ ಮತ್ತು ಟಿ.ಶೆಟ್ಟಿಗೇರಿ, ಮಡಿಕೇರಿ ತಾಲ್ಲೂಕಿನ ಮಕ್ಕಂದೂರು, ಕುಂದಚೇರಿ, ಹಾಕತ್ತೂರು ಮತ್ತು ಚೆಂಬು, ವಿರಾಜಪೇಟೆ ತಾಲ್ಲೂಕಿನ ಅಮ್ಮತ್ತಿ, ಚೆಂಬೆಬೆಳ್ಳೂರು ಹಾಗೂ ಸೋಮವಾರಪೇಟೆ ತಾಲ್ಲೂಕಿನ ಆಲೂರು ಸಿದ್ದಾಪುರ ಗ್ರಾ.ಪಂ.ವ್ಯಾಪ್ತಿಯಲ್ಲಿ ಅರ್ಜಿ ಸಲ್ಲಿಸಬಹುದು. ಆಸಕ್ತ ಪ್ರಾಂಚೈಸಿಗಳು https://kal-mys.gramaone.karnataka.gov.in/ ಲಿಂಕ್‍ನ […]

ಕನ್ನಡ ದುನಿಯಾ 31 Dec 2025 11:28 am

GOOD NEWS : ‘ರೈಲ್ವೇ’ಪ್ರಯಾಣಿಕರಿಗೆ ಗುಡ್ ನ್ಯೂಸ್ : ಈ ‘ಟಿಕೆಟ್’ಗಳ ಮೇಲೆ ಶೇಕಡ 3.ರಷ್ಟು ರಿಯಾಯಿತಿ

ದುನಿಯಾ ಡಿಜಿಟಲ್ ಡೆಸ್ಕ್ : ರೈಲ್ಒನ್ ಅಪ್ಲಿಕೇಶನ್ ಮೂಲಕ ಟಿಕೆಟ್ ಖರೀದಿಸುವವರಿಗೆ ರೈಲ್ವೆ ಒಳ್ಳೆಯ ಸುದ್ದಿ ನೀಡಿದೆ. ಡಿಜಿಟಲ್ ಪಾವತಿ ಮಾದರಿಯಲ್ಲಿ ರೈಲ್ಒನ್ ಅಪ್ಲಿಕೇಶನ್ ಮೂಲಕ ಕಾಯ್ದಿರಿಸಿದ ಟಿಕೆಟ್ಗಳನ್ನು ಖರೀದಿಸುವವರಿಗೆ ಶೇಕಡಾ 3 ರಷ್ಟು ರಿಯಾಯಿತಿ ನೀಡಲಾಗುವುದು ಎಂದು ಹೇಳಲಾಗಿದೆ. ಈ ಕೊಡುಗೆ ಜನವರಿ 14 ರಿಂದ ಜುಲೈ 14, 2026 ರವರೆಗೆ ಲಭ್ಯವಿರುತ್ತದೆ ಎಂದು ಹೇಳಲಾಗಿದೆ. ಆದಾಗ್ಯೂ, ಈ ಕೊಡುಗೆಗೆ ಅನುಗುಣವಾಗಿ ಸಾಫ್ಟ್ವೇರ್ ವ್ಯವಸ್ಥೆಯಲ್ಲಿ ಬದಲಾವಣೆಗಳನ್ನು ಮಾಡಲು ರೈಲ್ವೆ ಮಾಹಿತಿ ವ್ಯವಸ್ಥೆ-CRIS ಕೇಂದ್ರಕ್ಕೆ ಸೂಚನೆ ನೀಡಿದೆ. […]

ಕನ್ನಡ ದುನಿಯಾ 31 Dec 2025 11:16 am

JOB ALERT : ಕೆಲಸ ಹುಡುಕುತ್ತಿರುವವರಿಗೆ ಗುಡ್ ನ್ಯೂಸ್ : ಜ.30 ರಂದು ಚಿತ್ರದುರ್ಗದಲ್ಲಿ ‘ಉದ್ಯೋಗ ಮೇಳ’

ಚಿತ್ರದುರ್ಗ : ಯುವ ಜನತೆಗೆ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಚಿತ್ರದುರ್ಗ ನಗರದ ಸರ್ಕಾರಿ ಕಲಾ ಕಾಲೇಜು (ಸ್ವಾಯತ್ತ) ಆವರಣದಲ್ಲಿ 2026 ರ ಜನವರಿ 30 ರಂದು ಉದ್ಯೋಗ ಮೇಳ ಆಯೋಜಿಸಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಎಸ್.ಆಕಾಶ್ ಹೇಳಿದರು. ನಗರದ ಜಿಲ್ಲಾ ಪಂಚಾಯಿತಿ ಮಿನಿ ಸಭಾಂಗಣದಲ್ಲಿ ಮಂಗಳವಾರ ಉದ್ಯೋಗ ಮೇಳ ಆಯೋಜಿಸುವ ಕುರಿತು ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಂಜೀವಿನಿ-ಕೆಎಸ್‍ಆರ್‍ಎಲ್‍ಪಿಎಸ್-ಡಿಡಿಯುಜಿಕೆವೈ ಯೋಜನೆ, ಜಿಲ್ಲಾ ಪಂಚಾಯಿತಿಯ ಎನ್.ಆರ್.ಎಲ್.ಎಂ ಹಾಗೂ ಜಿಲ್ಲಾ ಕೌಶಲ್ಯಾಭಿವೃದ್ಧಿ […]

ಕನ್ನಡ ದುನಿಯಾ 31 Dec 2025 11:00 am

Good News: ಕರ್ನಾಟಕ ಪೊಲೀಸರಿಗೆ 30 ದಿನಗಳ ಹೆಚ್ಚುವರಿ ವೇತನ!

ಕರ್ನಾಟಕ ಸರ್ಕಾರ ರಾಜ್ಯದ ಪೊಲೀಸರಿಗೆ ಶೀಘ್ರವೇ ಗುಡ್‌ನ್ಯೂಸ್ ನೀಡಲಿದೆ. ವರ್ಷದಲ್ಲಿ 12ರ ಬದಲು 13 ತಿಂಗಳ ವೇತನವನ್ನು ಅವರು ಪಡೆಯಲಿದ್ದಾರೆ. ವಾರ್ಷಿಕ 30 ದಿನಗಳ ಹೆಚ್ಚುವರಿ ವೇತನವನ್ನು ಪೊಲೀಸರಿಗೆ ನೀಡುವ ಕುರಿತು ಶೀಘ್ರ ಆದೇಶ ಪ್ರಕಟವಾಗಲಿದೆ. ಇದಕ್ಕಾಗಿ ಅನುದಾನ ಮಂಜೂರು ಮಾಡುವಂತೆ ಕೋರಿ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಶಾಂತಿ, ಸುವ್ಯವಸ್ಥೆ ಕಾಪಾಡಲು ಸರ್ಕಾರಿ ರಜೆ, ಹಬ್ಬದ ದಿನಗಳಲ್ಲೂ ಕೆಲಸ ಮಾಡುವ ಪೊಲೀಸರಿಗೆ ‘ಪತ್ರಾಂಕಿತ ರಜೆ’ ನೀಡಲಾಗುತ್ತದೆ. ಈ ರಜೆಯನ್ನು 30 ದಿನಗಳಿಗೆ ವಿಸ್ತರಣೆ ಮಾಡಬೇಕು ಮತ್ತು ಅದಕ್ಕೆ ಹೆಚ್ಚುವರಿ […]

ಕನ್ನಡ ದುನಿಯಾ 31 Dec 2025 10:44 am

Big News : ‘ಮನರೇಗಾ’ಯೋಜನೆಯ ಹೆಸರು, ಸ್ವರೂಪ ಬದಲಾವಣೆಗೆ ಪ್ರಧಾನಿ ಮೋದಿಗೆ ‘CM ಸಿದ್ದರಾಮಯ್ಯ’ಪತ್ರ.!

ಬೆಂಗಳೂರು : ಮನರೇಗಾ ಯೋಜನೆಯ ಹೆಸರು, ಸ್ವರೂಪ ಬದಲಾವಣೆಗೆ ಪ್ರಧಾನಿ ಮೋದಿಗೆ ಸಿಎಂ ಸಿದ್ದರಾಮಯ್ಯ ಪತ್ರ ಪತ್ರ ಬರೆದಿದ್ದಾರೆ. ಹೊಸ ಕಾಯ್ದೆಯು ಮೂಲ ಉದ್ಯೋಗ ಖಾತರಿಯ ಹಕ್ಕನ್ನೇ ಕಸಿದುಕೊಳ್ಳುವ ಅಪಾಯವನ್ನು ಹೊಂದಿದೆ. ಹಾಗಾಗಿ ಈ ಕಾಯ್ದೆಯು ಬೇಡಿಕೆ ಆಧಾರಿತ ಹಾಗೂ ಹಕ್ಕು ಆಧಾರಿತವಾಗಿರಬೇಕು ಎಂದು ಈ ಮೂಲಕ ಒತ್ತಾಯಿಸುತ್ತಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ. ಮನರೇಗಾ ಯೋಜನೆಯ ಹೆಸರು ಮತ್ತು ಸ್ವರೂಪದ ಬದಲಾವಣೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ Siddaramaiah ಅವರು ಪ್ರಧಾನಿ Narendra Modi ಅವರಿಗೆ ಬರೆದಿರುವ […]

ಕನ್ನಡ ದುನಿಯಾ 31 Dec 2025 10:32 am

ಉದ್ಯೋಗ ವಾರ್ತೆ : 25,487 ‘ಕಾನ್ಸ್‌ಟೇಬಲ್’ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಂದೇ ಕೊನೆಯ ದಿನ |SSC Constable recruitment 2025

ದುನಿಯಾ ಡಿಜಿಟಲ್ ಡೆಸ್ಕ್ : ಸ್ಟಾಫ್ ಸೆಲೆಕ್ಷನ್ ಕಮಿಷನ್ (ಎಸ್ಎಸ್ಸಿ) ಅಸ್ಸಾಂ ರೈಫಲ್ಸ್ನಲ್ಲಿ ಕೇಂದ್ರ ಸಶಸ್ತ್ರ ಪೊಲೀಸ್ ಪಡೆ (ಸಿಎಪಿಎಫ್ಗಳು), ಸೆಕ್ರೆಟರಿಯೇಟ್ ಸೆಕ್ಯುರಿಟಿ ಫೋರ್ಸ್ (ಎಸ್ಎಸ್ಎಫ್) ಮತ್ತು ರೈಫಲ್ಮ್ಯಾನ್ (ಜಿಡಿ) ಹುದ್ದೆಗಳಲ್ಲಿ 25,487 ಜನರಲ್ ಡ್ಯೂಟಿ (ಜಿಡಿ) ಕಾನ್ಸ್ಟೇಬಲ್ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದ್ದು, ಅರ್ಜಿ ಸಲ್ಲಿಸಲು ಇಂದು (ಡಿ.31 ) ಕೊನೆಯ ದಿನವಾಗಿದೆ. ಈ ಹುದ್ದೆಗಳು ಲೆವೆಲ್-3 ವೇತನ ಶ್ರೇಣಿಯ ಅಡಿಯಲ್ಲಿ ಬರುತ್ತವೆ, ರೂ.21,700 ರಿಂದ ರೂ.69,100 ರವರೆಗೆ ವೇತನವನ್ನು ನೀಡುತ್ತವೆ. 10 ನೇ ತರಗತಿ ಉತ್ತೀರ್ಣರಾದ […]

ಕನ್ನಡ ದುನಿಯಾ 31 Dec 2025 10:17 am

BREAKING : ‘ದಟ್ಟ ಮಂಜು’ಹಿನ್ನೆಲೆ ದೆಹಲಿ ‘ಏರ್ ಪೋರ್ಟ್’ನಲ್ಲಿ 148 ವಿಮಾನಗಳ ಹಾರಾಟ ರದ್ದು.!

ನವದೆಹಲಿ : ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಐಜಿಐ) ಡಿಸೆಂಬರ್ 31 ಬುಧವಾರ ಕಾರ್ಯಾಚರಣೆಯಲ್ಲಿನ ಅಡಚಣೆಗಳ ಕಾರಣ ಸುಮಾರು 148 ವಿಮಾನಗಳನ್ನು ರದ್ದುಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಲಭ್ಯವಿರುವ ಮಾಹಿತಿಯ ಪ್ರಕಾರ, ಒಟ್ಟು ರದ್ದತಿಗಳಲ್ಲಿ 70 ನಿರ್ಗಮನ ವಿಮಾನಗಳು ಮತ್ತು 78 ಆಗಮನ ವಿಮಾನಗಳು ಸೇರಿವೆ. ಇದಲ್ಲದೆ, ಎರಡು ವಿಮಾನಗಳನ್ನು ಬೇರೆಡೆಗೆ ತಿರುಗಿಸಲಾಗಿದೆ. ದಟ್ಟವಾದ ಮಂಜಿನಿಂದಾಗಿ ಭಾನುವಾರವೂ ಉತ್ತರ ಭಾರತದಾದ್ಯಂತ ಕೆಲವು ವಿಮಾನ ನಿಲ್ದಾಣಗಳಲ್ಲಿ ಗೋಚರತೆ ಕಡಿಮೆಯಾಗಿದ್ದರಿಂದ ವಿಮಾನ ವಿಳಂಬವಾಗುವ ಸಾಧ್ಯತೆ ಹೆಚ್ಚಿತ್ತು. ಪ್ರಯಾಣಿಕರು ತಮ್ಮ […]

ಕನ್ನಡ ದುನಿಯಾ 31 Dec 2025 10:03 am

Big Update: ವಂದೇ ಭಾರತ್ ಸ್ಲೀಪರ್ ರೈಲು ಸಂಚಾರಕ್ಕೆ ದಿನಗಣನೆ

ವಂದೇ ಭಾರತ್ ಸ್ಲೀಪರ್ ರೈಲು ಸಂಚಾರಕ್ಕೆ ದಿನಗಣನೆ ಆರಂಭವಾಗಿದೆ. ಹೌದು ಭಾರತದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಭಾರೀ ಬೇಡಿಕೆ ಇದೆ. ಕೇಂದ್ರ ಸರ್ಕಾರ ದೂರದ ನಗರಗಳನ್ನು ಸಂಪರ್ಕಿಸಲು ವಂದೇ ಭಾರತ್ ಸ್ಲೀಪರ್ ರೈಲುಗಳ ಘೋ‍ಷಣೆಯನ್ನು ಮಾಡಿತ್ತು. ರೈಲ್ವೆ ಸುರಕ್ಷತಾ ಆಯುಕ್ತರು (ಸಿಆರ್‌ಎಸ್) ವಂದೇ ಭಾರತ್ ಎಕ್ಸ್‌ಪ್ರೆಸ್ ಸ್ಲೀಪರ್ ರೈಲು ಸಂಚಾರದ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಪ್ರಾಯೋಗಿಕ ಸಂಚಾರವನ್ನು ನಡೆಸಿದ್ದಾರೆ. ಗಂಟೆಗೆ 180 ಕಿ.ಮೀ. ವೇಗದಲ್ಲಿ ರೈಲನ್ನು ಓಡಿಸಿ ಈ ಪರಿಶೀಲನೆ ಪೂರ್ಣಗೊಳಿಸಲಾಗಿದೆ. ಈ ಕುರಿತು ಕೇಂದ್ರ ರೈಲ್ವೆ […]

ಕನ್ನಡ ದುನಿಯಾ 31 Dec 2025 9:54 am

SHOCKING : ದೇಶದಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ : ಚಲಿಸುತ್ತಿದ್ದ ಕಾರಿನಲ್ಲಿ ಮಹಿಳೆ ಮೇಲೆ ‘ಗ್ಯಾಂಗ್ ರೇಪ್’.!

ದುನಿಯಾ ಡಿಜಿಟಲ್ ಡೆಸ್ಕ್ : ದೇಶದಲ್ಲಿ ಮತ್ತೊಂದು ಬೆಚ್ಚಿ ಬೀಳಿಸೋ ಕೃತ್ಯ ನಡೆದಿದ್ದು, ಚಲಿಸುತ್ತಿದ್ದ ಕಾರಿನಲ್ಲಿ ಮಹಿಳೆ ಮೇಲೆ ಗ್ಯಾಂಗ್ ರೇಪ್ ಎಸಗಿದ ದುರುಳರು ನಂತರ ಕಾರಿನಿಂದ ಆಕೆಯನ್ನು ಹೊರಗೆ ಎಸೆದಿದ್ದಾರೆ. ಸೋಮವಾರ ರಾತ್ರಿ ವ್ಯಾನ್‌ನಲ್ಲಿ ಲಿಫ್ಟ್ ಪಡೆದ 25 ವರ್ಷದ ಮಹಿಳೆಯ ಮೇಲೆ ಇಬ್ಬರು ಪುರುಷರು ಸಾಮೂಹಿಕ ಅತ್ಯಾಚಾರ ನಡೆಸಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಘಟನೆಯಲ್ಲಿ ಆಕೆ ಗಂಭೀರವಾಗಿ ಗಾಯಗೊಂಡಿದ್ದು, ಮುಖಕ್ಕೆ 12 ಹೊಲಿಗೆಗಳನ್ನು ಹಾಕಲಾಗಿದೆ. ಗುರ್ಗಾಂವ್-ಫರಿದಾಬಾದ್ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, […]

ಕನ್ನಡ ದುನಿಯಾ 31 Dec 2025 9:39 am

BREAKING : ಮಧ್ಯಪ್ರದೇಶದಲ್ಲಿ ‘ಕಲುಷಿತ ನೀರು’ಕುಡಿದು ಮೂವರು ಸಾವು, 100 ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲು

ಮಧ್ಯಪ್ರದೇಶದ ಇಂದೋರ್‌ನಲ್ಲಿ ನಗರದ ಭಾಗೀರಥಪುರ ಪ್ರದೇಶದಲ್ಲಿ ಕಲುಷಿತ ನೀರು ಸೇವಿಸಿದ ಹಿನ್ನೆಲೆ ಕನಿಷ್ಠ ಮೂರು ಜನರು ಸಾವನ್ನಪ್ಪಿದರು ಮತ್ತು 100 ಕ್ಕೂ ಹೆಚ್ಚು ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆಲವು ಸ್ಥಳೀಯರು ಈ ಘಟನೆಯಲ್ಲಿ ಐದು ಜನರು ಸಾವನ್ನಪ್ಪಿದ್ದಾರೆ ಎಂದು ಹೇಳಿಕೊಂಡಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಡಿಸೆಂಬರ್ 25 ರಂದು ಸರಬರಾಜು ಮಾಡಲಾದ ಪುರಸಭೆಯ ನೀರಿನಲ್ಲಿ ಅಸಾಮಾನ್ಯ ರುಚಿ ಮತ್ತು ವಾಸನೆ ಇದೆ ಎಂದು ನಿವಾಸಿಗಳು ವರದಿ ಮಾಡಿದ ನಂತರ ಪ್ರಾರಂಭವಾದ ಈ ಸೋಂಕು […]

ಕನ್ನಡ ದುನಿಯಾ 31 Dec 2025 9:25 am

ಹೊಸ ವರ್ಷಾಚರಣೆ: ಕೊಡಗು ಪ್ರವಾಸಿಗರಿಗೆ ಅಲರ್ಟ್‌ ಕೊಟ್ಟ ಪೊಲೀಸ್

ಕರ್ನಾಟಕದ ಪ್ರಸಿದ್ಧ ಪ್ರವಾಸಿ ತಾಣ ಕೊಡಗು 2026ರ ಹೊಸ ವರ್ಷಾಚರಣೆಗೆ ಸಿದ್ದವಾಗಿದೆ. ಸಾವಿರಾರು ಪ್ರವಾಸಿಗರು ಹೊಸ ವರ್ಷವನ್ನು ಸಂಭ್ರಮಿಸುವ ಸಲುವಾಗಿ ಜಿಲ್ಲೆಗೆ ಆಗಮಿಸಿ ಜಿಲ್ಲಾ ವ್ಯಾಪ್ತಿಯಲ್ಲಿನ ಹೋಂ ಸ್ಟೇ/ ರೆಸಾರ್ಟ್/ ಲಾಡ್ಜ್‌ಗಳಲ್ಲಿ ವಾಸ್ತವ್ಯ ಹೂಡುತ್ತಾರೆ. ಪ್ರವಾಸಿಗರು ರೇವ್ ಪಾರ್ಟಿ ನೆಪದಲ್ಲಿ ನಿಷೇಧಿತ ಮಾದಕ ವಸ್ತುಗಳನ್ನು ಮಾರಾಟ ಸರಬರಾಜು/ ಬಳಕೆ ಮಾಡುವುದು ಕಂಡುಬಂದಲ್ಲಿ ಜಿಲ್ಲಾ ಪೊಲೀಸ್ ಕಚೇರಿ ದೂರವಾಣಿ ಸಂಖ್ಯೆ 08272- 228300, 9480804900ಕ್ಕೆ ಕರೆ ಮಾಡಿ ಮಾಹಿತಿ ನೀಡಿ ಎಂದು ಪೊಲೀಸರು ಮನವಿ ಮಾಡಿದ್ದಾರೆ. ಜಿಲ್ಲಾದ್ಯಂತ ಸಂಭ್ರಮಾಚರಣೆ […]

ಕನ್ನಡ ದುನಿಯಾ 31 Dec 2025 9:25 am

Rain alert Karnataka : ಹೊಸ ವರ್ಷಾಚರಣೆ ದಿನವೇ ರಾಜ್ಯದಲ್ಲಿ ‘ಮಳೆ’ಮುನ್ಸೂಚನೆ, ಬೆಂಗಳೂರಿಗರಿಗೆ ಮಹತ್ವದ ಸೂಚನೆ

ಬೆಂಗಳೂರು : ಹೊಸ ವರ್ಷಾಚರಣೆ ನಡುವೆ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಸಾಧಾರಣೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಒಳನಾಡಿನ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಾಮರಾಜನಗರ, ಮಂಡ್ಯ, ಕೋಲಾರ, ಮೈಸೂರು. ತುಮಕೂರು. ರಾಮನಗರ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಬೆಂಗಳೂರಿಗರಿಗೆ ಸೂಚನೆ ಬೆಂಗಳೂರಿನಲ್ಲಿ ಇಂದು ಮೋಡ ಕವಿದ ವಾತಾವರಣವಿದ್ದು, ಸ್ವಲ್ಪ ಪ್ರಮಾಣದಲ್ಲಿ ಚಳಿಯಾಗುವ ಸಾಧ್ಯತೆಯಿದೆ. ಚಳಿಯಿಂದ ಆರೋಗ್ಯದಲ್ಲಿ ಏರುಪೇರಾಗುತ್ತಿದ್ದು, ಬೆಚ್ಚಗಿನ ಹೊದಿಕೆ ಹಾಗೂ ಬಿಸಿ ಆಹಾರ […]

ಕನ್ನಡ ದುನಿಯಾ 31 Dec 2025 9:00 am