ಮುಂಬೈ ಮಹಾನಗರದ ಮೇಯರ್ ಯಾರು, ಚುನಾವಣೆ ಯಾವಾಗ?
ಬೃಹನ್ ಮುಂಬಯಿ ಮಹಾನಗರ ಪಾಲಿಕೆ (ಬಿಎಂಸಿ) ಚುನಾವಣೆಯಲ್ಲಿ ಬಿಜೆಪಿ ಮತ್ತು ಶಿವಸೇನೆ (ಏಕನಾಥ್ ಶಿಂಧೆ) ಮೈತ್ರಿಕೂಟ ಗೆಲುವು ಸಾಧಿಸಿದೆ. 25 ವರ್ಷಗಳ ನಂತರ ದೇಶದ ಅತ್ಯಂತ ಶ್ರೀಮಂತ ಪಾಲಿಕೆಯ ಮೇಲಿನ ನಿಯಂತ್ರಣ ಕಳೆದುಕೊಂಡಿದ್ದಾರೆ ಠಾಕ್ರೆ ಸೋದರ ಸಂಬಂಧಿಗಳು. ಈಗ ಮುಂಬೈ ಮೇಯರ್ ಯಾರು? ಎಂಬುದು ಪ್ರಶ್ನೆ. ಜನವರಿ 22ರಂದು ಮುಂಬೈ ನಗರದ ಮೇಯರ್ ಮೀಸಲಾತಿ ನಿಗದಿ ಮಾಡಲಾಗಿದೆ. ಬಳಿಕ ಮಹಾರಾಷ್ಟ್ರದ 29 ಮಹಾನಗರ ಪಾಲಿಕೆಗಳಲ್ಲಿ ಮೇಯರ್ ಮತ್ತು ಉಪ ಮೇಯರ್ಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆಯು ವೇಗವನ್ನು ಪಡೆದುಕೊಂಡಿದೆ. […]
SHOCKING : 50 ರವರೆಗೆ ಅಂಕಿಗಳನ್ನು ಬರೆಯದಿದ್ದಕ್ಕೆ 4 ವರ್ಷದ ಮಗಳನ್ನು ಹೊಡೆದು ಕೊಂದ ಪಾಪಿ ತಂದೆ..!
ಫರೀದಾಬಾದ್ : ಕೇವಲ 50ರ ವರೆಗಿನ ಅಂಕಿಗಳನ್ನು ಬರೆಯಲು ಬರಲಿಲ್ಲ ಎಂಬ ಕಾರಣಕ್ಕೆ ಜೈಸ್ವಾಲ್ ಎಂಬ ವ್ಯಕ್ತಿ ತನ್ನ ನಾಲ್ಕು ವರ್ಷದ ಪುಟ್ಟ ಮಗಳನ್ನು ಅಮಾನುಷವಾಗಿ ಹೊಡೆದು ಸಾಯಿಸಿರುವ ಘಟನೆ ನಡೆದಿದೆ. ಮಗಳಿಗೆ ಓದಲು-ಬರೆಯಲು ಕಲಿಸುವಾಗ ಈ ಕೃತ್ಯ ನಡೆದಿದೆ.ಮಗು 50ರ ವರೆಗೆ ಅಂಕಿಗಳನ್ನು ಬರೆಯಲು ವಿಫಲವಾಗಿದ್ದರಿಂದ ತಂದೆಗೆ ಅತಿಯಾದ ಕೋಪ ಬಂದಿದೆ.ಪರಿಣಾಮ ತಂದೆಯ ತೀವ್ರವಾದ ಹಲ್ಲೆಯಿಂದಾಗಿ ಮಗು ಸ್ಥಳದಲ್ಲೇ ಮೃತಪಟ್ಟಿದೆ. ಘಟನೆಯ ವಿವರ: ಆರೋಪಿ ಕೃಷ್ಣ ಜೈಸ್ವಾಲ್ (31) ಎಂಬಾತನನ್ನು ಸೆಕ್ಟರ್ 58 ಪೊಲೀಸ್ ಠಾಣೆಯಲ್ಲಿ […]
BREAKING: ಪೊಲೀಸರ ವಿರುದ್ಧ ಕಿರುಕುಳ ಆರೋಪ: ವಿಧಾನಸೌಧದ ಮುಂದೆ ವಿಷಸೇವಿಸಿದ ಡಾ.ನಾಗೇಂದ್ರಪ್ಪ ಆತ್ಮಹತ್ಯೆಗೆ ಯತ್ನ
ಬೆಂಗಳೂರು: ಪೊಲೀಸರ ವಿರುದ್ಧ ಕಿರುಕುಳ ಆರೋಪ ಮಾಡಿ ವಿಧಾನಸೌಧದ ಮುಂದೆ ವ್ಯಕ್ತಿಯೋರ್ವರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ. ಡಾ.ನಾಗೇಂದ್ರಪ್ಪ ಶಿರೂರ್ ಎಂಬುವವರು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಸೋಲದೇವನಹಳ್ಳಿಯಲ್ಲಿ ಸಮಸ್ಯೆಯಾಗಿದೆ ಎಂದು ಡಾ.ನಾಗೇಂದ್ರಪ್ಪ ಶಿರೂರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ವಿಧಾನಸೌಧದ ಮುಂಭಾಗದಲ್ಲಿ ಈ ಘಟನೆ ನಡೆದಿದೆ. ತೀವ್ರ ಅಸ್ವಸ್ಥರಾಗಿದ್ದ ನಾಗೇಂದ್ರಪ್ಪ ಅವರನ್ನು ಪೊಲೀಸರು ಶಿವಾಜಿನಗರದ ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಡಾ.ನಾಗೇಂದ್ರಪ್ಪ ಹಾಗೂ ರಾಷ್ಟ್ರ ರಕ್ಷಣಾ ಸೇನೆಯ ಮುಖಂಡ ಪುನೀತ್ ಕೆರೆಹಳ್ಳಿ ಇಬ್ಬರು ಸೇರಿ ಬೆಂಗಳೂರಿನಲ್ಲಿ ಅಕ್ರಮ […]
Big Update: ಸರ್ಕಾರಿ ಕಾರ್ಯಕ್ರಮಗಳಲ್ಲಿ ಜನರ ಸುರಕ್ಷತೆ: ಹೊಸ ಸುತ್ತೋಲೆ
ಕರ್ನಾಟಕ ಸರ್ಕಾರ ಸುತ್ತೋಲೆಯೊಂದನ್ನು ಹೊರಡಿಸಿದೆ. ಸರ್ಕಾರಿ ಕಾರ್ಯಕ್ರಮ, ರಾಷ್ಟ್ರೀಯ ಹಬ್ಬಗಳು, ಶಾಲಾ-ಕಾಲೇಜುಗಳ ಕಾರ್ಯಕ್ರಮಗಳಲ್ಲಿ ಜನರ, ಮಕ್ಕಳ ಸುರಕ್ಷತೆಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸೂಚನೆ ನೀಡಲಾಗಿದೆ. ಶುಭಮಂಗಳ ಆರ್.ವಿ. ವಿಶೇಷಾಧಿಕಾರಿ ಮತ್ತು ಪದನಿಮಿತ್ತ ಸರ್ಕಾರದ ಅಧೀನ ಕಾರ್ಯದರ್ಶಿ (ಯೋಜನೆ) ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಈ ಕುರಿತು ಸುತ್ತೋಲೆಯನ್ನು ಹೊರಡಿಸಿದ್ದಾರೆ. ಈ ಸುತ್ತೋಲೆಯು ಸರ್ಕಾರಿ ಕಾರ್ಯಕ್ರಮಗಳು ಸೇರಿದಂತೆ ರಾಷ್ಟ್ರೀಯ ಹಬ್ಬಗಳು ಹಾಗೂ ಶಾಲಾ ಕಾಲೇಜುಗಳ ಇತರ ಸಾಂಸ್ಕೃತಿಕ ಮತ್ತು ಆಡಳಿತಾತ್ಮಕ ಕಾರ್ಯಕ್ರಮಗಳನ್ನು ಆಯೋಜಿಸುವ ಸಂದರ್ಭಗಳಲ್ಲಿ ಅಪಘಾತಗಳು ಸಂಭವಿಸದಂತೆ […]
ಬೆಂಗಳೂರು: ನೀವು ಚಿನ್ನ ಖರೀದಿಸುವ ಪ್ಲಾನ್ ಮಾಡಿದ್ದೀರಾ? ಹಾಗಿದ್ದರೆ ಇಂದಿನ ಮಾರುಕಟ್ಟೆ ದರ ಒಮ್ಮೆ ನೋಡಿ. ಕಳೆದ ಕೆಲವು ದಿನಗಳಿಂದ ಏರಿಳಿತ ಕಾಣುತ್ತಿದ್ದ ಹಳದಿ ಲೋಹದ ಬೆಲೆ ಇಂದು ದಿಢೀರ್ ಏರಿಕೆ ಕಂಡಿದೆ. ಹಳದಿ ಲೋಹಕ್ಕೆ ಡಿಮ್ಯಾಂಡ್ ಹೆಚ್ಚಿದ್ದು 10 ಗ್ರಾಂಗೆ 1470 ರೂಪಾಯಿ ಜಿಗಿದಿದೆ. ಆದ್ರೆ ಬೆಳ್ಳಿ ಇಳಿಕೆಯತ್ತ ಮುಖಮಾಡಿದೆ ಭಾರತೀಯ ಮಾರುಕಟ್ಟೆಯಲ್ಲಿ ಶನಿವಾರ ಚಿನ್ನದ ಬೆಲೆಯು ಸಲ್ಪ ಏರಿಕೆಯೊಂದಿಗೆ ಸ್ಥಿರತೆಯನ್ನು ಕಾಯ್ದುಕೊಂಡಿದೆ. ಜಾಗತಿಕ ಮಾರುಕಟ್ಟೆಯ ಏರಿಳಿತ ಮತ್ತು ಭೌಗೋಳಿಕ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಹೂಡಿಕೆದಾರರು […]
ಲಕ್ಕುಂಡಿ ಬೆನ್ನಲ್ಲೇ ಯಾದಗಿರಿಯ ಮುದನೂರಿನಲ್ಲಿಯೂ ಉತ್ಖನನ: ಭೂಗರ್ಭದಲ್ಲಿ ಅಡಗಿದೆ ಅಪಾರ ಸಂಪತ್ತು
ಯಾದಗಿರಿ: ಗದಗ ಜಿಲ್ಲೆಯ ಐತಿಹಾಸಿಕ ಲಕ್ಕುಂಡಿಯಲ್ಲಿ ಕೋಟೆ ವೀರಭದ್ರಸ್ವಾಮಿ ದೇವಸ್ಥಾನದ ಬಳಿ ಕಳೆದ 9 ದಿನಗಳಿಂದ ಉತ್ಖನನ ಕಾರ್ಯ ನಡೆಯುತ್ತಿದೆ. ಉತ್ಖನನದ ವೇಳೆ ಪುರಾತನ ಹಾಗೂ ಅಮೂಲ್ಯ ವಸ್ತುಗಳು ಕೆಂಪು ಹವಳ, ಪಚ್ಚೆ ಸೇರಿದಂತೆ ವಿವಿಧ ವಸ್ತುಗಳು ಪತ್ತೆಯಾಗುತ್ತಿವೆ. ಈ ನಡುವೆ ದೇವರದಾಸಿಮಯ್ಯ ಪುಣ್ಯಕ್ಷೇತ್ರ ಯಾದಗಿರಿ ಜಿಲ್ಲೆಯ ಮುದನೂರು ಗ್ರಾಮದಲ್ಲಿಯೂ ಉತ್ಖನನ ನಡೆಸಲು ಸಿಧತೆ ನಡೆದಿದೆ. ಮುದನೂರು ಗ್ರಾಮ ರಾಜ-ಮಹಾರಾಜರ ಕಾಲದಲ್ಲಿ ವಾಣಿಜ್ಯ ಕೇಂದ್ರವಾಗಿತ್ತು. ಈಗ ಪುಣ್ಯಕ್ಷೇತ್ರವಾಗಿದೆ. ಇಲ್ಲಿ ಭೂಗರ್ಭದಲ್ಲಿ ಅಪಾರ ಪ್ರಮಾಣದ ಸಂಪತ್ತು ಅಡಗಿದೆ ಎಂಬ […]
ಯದುವೀರ್ ಒಡೆಯರ್ ಭೇಟಿಯಾಗಿ ಮಹತ್ವದ ಬೇಡಿಕೆ ಮುಂದಿಟ್ಟ ಪ್ರತಾಪ್ ಸಿಂಹ
ಮಾಜಿ ಸಂಸದ ಪ್ರತಾಪ್ ಸಿಂಹ ಈಗ ಸುದ್ದಿಯಲ್ಲಿದ್ದಾರೆ. 2028ರ ವಿಧಾನಸಭೆ ಚುನಾವಣೆಗೆ ಅವರು ಮೈಸೂರು ನಗರದ ಚಾಮರಾಜ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ. ಈಗ ಪ್ರತಾಪ್ ಸಿಂಹ ಮೈಸೂರು ಕೊಡಗು ಕ್ಷೇತ್ರದ ಸಂಸದ ಯದುವೀರ್ ಒಡೆಯರ್ ಭೇಟಿ ಮಾಡಿದ್ದಾರೆ. ಈ ಕುರಿತು ಪ್ರತಾಪ್ ಸಿಂಹ ತಮ್ಮ ಫೇಸ್ಬುಕ್ ಖಾತೆಯಲ್ಲಿ ಪೋಸ್ಟ್ ಹಾಕಿದ್ದಾರೆ. ವಿವಿಧ ಅಭಿವೃದ್ಧಿ ಕಾಮಗಾರಿಗಳ ಕುರಿತು ಚರ್ಚಿಸಲು ಪ್ರತಾಪ್ ಸಿಂಹ ಅವರು ಯದುವೀರ್ ಒಡೆಯರ್ ಭೇಟಿಯಾಗಿದ್ದರು. ಪ್ರತಾಪ್ ಸಿಂಹ ಮೈಸೂರು-ಕೊಡಗು ಲೋಕಸಭಾ ಸದಸ್ಯರಾದ ಮಾನ್ಯ ಶ್ರೀ […]
ವಿಸ್ಕಿ ಸಾಮ್ರಾಜ್ಯದ ಅಧಿಪತಿಗಳೆಂದು ಮೆರೆಯುತ್ತಿದ್ದ ಸ್ಕಾಟ್ಲೆಂಡ್ ಮತ್ತು ಜಪಾನ್ ದೇಶಗಳ ಸಾರ್ವಭೌಮತ್ವಕ್ಕೆ ಬೆಂಗಳೂರು ಮೂಲದ ‘ಅಮೃತ್ ಡಿಸ್ಟಿಲರೀಸ್’ ಈಗ ಸಡ್ಡು ಹೊಡೆದಿದೆ! ವಿಶ್ವದ ಅತ್ಯಂತ ಪ್ರತಿಷ್ಠಿತ ಮದ್ಯ ವಿಮರ್ಶೆ ಎಂದೇ ಪರಿಗಣಿಸಲಾಗುವ ಜಿಮ್ ಮರ್ರೆ ಅವರ ‘ವಿಸ್ಕಿ ಬೈಬಲ್ 2025-26’ ರ ವರದಿಯಲ್ಲಿ, ಭಾರತದ ಹೆಮ್ಮೆಯ ‘ಅಮೃತ್ ಎಕ್ಸ್ಪೆಡಿಶನ್’ (Amrut Expedition) 15 ವರ್ಷ ಹಳೆಯ ಸಿಂಗಲ್ ಮಾಲ್ಟ್ ವಿಸ್ಕಿಯು ಜಗತ್ತಿನ 3ನೇ ಅತ್ಯುತ್ತಮ ವಿಸ್ಕಿ ಎಂಬ ಐತಿಹಾಸಿಕ ಕಿರೀಟವನ್ನು ಮುಡಿಗೇರಿಸಿಕೊಂಡಿದೆ. ಆ ಮೂಲಕ ಜಾಗತಿಕ ಮದ್ಯದ […]
Big Update: ಬೆಂಗಳೂರು ಏರ್ಪೋರ್ಟ್ ರೋಡ್ ಸಂಚಾರ ಮಾರ್ಗ ಬದಲು, ಸಂಚಾರ ಸಲಹೆ
ಬೆಂಗಳೂರು ನಗರದ ಸಂಚಾರಿ ಪೊಲೀಸರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯಲ್ಲಿ ಸಂಚಾರ ಮಾರ್ಗವನ್ನು ಬದಲಾವಣೆ ಮಾಡಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದು, ವಾಹನ ಸವಾರರಿಗೆ ಮಾಹಿತಿಯನ್ನು ನೀಡಿದ್ದಾರೆ. ದಿನಾಂಕ 23.01.2026 ರಿಂದ 25.01.2026ರ ತನಕ ಪ್ರತಿದಿನ ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆಯ ತನಕ ಈ ಮಾರ್ಗ ಬದಲಾವಣೆ ಜಾರಿಯಲ್ಲಿರುತ್ತದೆ. ಜನರು ಸಹಕಾರ ನೀಡಬೇಕು ಎಂದು ಮನವಿ ಮಾಡಲಾಗಿದೆ. ಸಂಜಯನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕಡೆಗೆ […]
ಬೆಳ್ಳಿತೆರೆಯ ಮೇಲೆ ಮೂಡಿಬರಲಿದೆ ಸೌರವ್ ಗಂಗೂಲಿ ಕ್ರಿಕೆಟ್ ಜರ್ನಿ: ಶೂಟಿಂಗ್ ಆರಂಭದ ದಿನಾಂಕ ಬಹಿರಂಗ
ಭಾರತೀಯ ಕ್ರಿಕೆಟ್ ತಂಡದ ಯಶಸ್ವಿ ನಾಯಕ ಹಾಗೂ ಕನ್ನಡಿಗರ ನೆಚ್ಚಿನ ‘ದಾದಾ’ ಸೌರವ್ ಗಂಗೂಲಿ ಅವರ ಜೀವನಗಾಥೆ ಬೆಳ್ಳಿತೆರೆಯ ಮೇಲೆ ಬರಲು ಸಜ್ಜಾಗಿದೆ. ಖ್ಯಾತ ನಿರ್ದೇಶಕ ಲವ್ ರಂಜನ್ ಈ ಬಹುನಿರೀಕ್ಷಿತ ಬಯೋಪಿಕ್ ಅನ್ನು ಕೈಗೆತ್ತಿಕೊಂಡಿದ್ದು, ಚಿತ್ರದ ಚಿತ್ರೀಕರಣದ ಬಗ್ಗೆ ಮಹತ್ವದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿರುವ ಲವ್ ರಂಜನ್, ಸೌರವ್ ಗಂಗೂಲಿ ಅವರ ಜೀವನ ಆಧರಿತ ಚಿತ್ರದ ಶೂಟಿಂಗ್ ಮಾರ್ಚ್ 2026 ರಿಂದ ಆರಂಭವಾಗಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಕೋಲ್ಕತ್ತಾದಲ್ಲಿ ಚಿತ್ರದ ಪ್ರಮುಖ ಭಾಗಗಳ ಚಿತ್ರೀಕರಣ […]
BREAKING : ವಸತಿ ಕಟ್ಟಡದ ಮೇಲೆ ಗುಂಡು ಹಾರಿಸಿದ ಆರೋಪ : ನಟ ಕಮಲ್ ಆರ್. ಖಾನ್ ಅರೆಸ್ಟ್.!
ಲೇಖಕ-ನಿರ್ದೇಶಕ ನೀರಜ್ ಕುಮಾರ್ ಮಿಶ್ರಾ ಅವರು ವಾಸಿಸುವ ಅಂಧೇರಿಯ ವಸತಿ ಕಟ್ಟಡವೊಂದರ ಮೇಲೆ ನಾಲ್ಕು ಸುತ್ತು ಗುಂಡು ಹಾರಿಸಿದ ಆರೋಪದ ಮೇಲೆ ಮುಂಬೈ ಪೊಲೀಸರು ನಟ ಕಮಲ್ ಆರ್ ಖಾನ್ (ಕೆಆರ್ಕೆ) ಅವರನ್ನು ಬಂಧಿಸಿದ್ದಾರೆ. ಶುಕ್ರವಾರ ರಾತ್ರಿ ಖಾನ್ ಅವರನ್ನು ಅವರ ಸ್ಟುಡಿಯೋದಿಂದ ವಶಕ್ಕೆ ಪಡೆಯಲಾಗಿದ್ದು, ಮುಂಬೈ ಪೊಲೀಸ್ ತಂಡವು ವಿಚಾರಣೆ ನಡೆಸಿದ ನಂತರ ಅಧಿಕೃತವಾಗಿ ಬಂಧಿಸಿದೆ. ವಿಚಾರಣೆಯ ಸಮಯದಲ್ಲಿ, ಅವರು ಜನವರಿ 18 ರಂದು ತಮ್ಮ ಪರವಾನಗಿ ಪಡೆದ ಬಂದೂಕಿನಿಂದ ಗುಂಡು ಹಾರಿಸಿರುವುದನ್ನು ಒಪ್ಪಿಕೊಂಡಿದ್ದಾರೆ. ಈ […]
ಕಾರು ಬೇಡ ಅಂದ್ರೆ ನಂಬರ್ ಪ್ಲೇಟ್ ಕೊಡಿ: ಅನಾಥ ಬಿಎಂಡಬ್ಲ್ಯು ಕಂಡು ನೆಟ್ಟಿಗರ ತಮಾಷೆ, ಅಸಲಿ ವಿಷಯ ಬೇರೆಯೇ ಇದೆ
ಮುಂಬೈನ ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿರುವ ಐಷಾರಾಮಿ ಬಿಎಂಡಬ್ಲ್ಯು ಎಕ್ಸ್7 (BMW X7) ಕಾರಿನ ವೀಡಿಯೋವೊಂದು ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಸುಮಾರು 1.5 ರಿಂದ 1.7 ಕೋಟಿ ರೂಪಾಯಿ ಬೆಲೆಬಾಳುವ ಈ ಕಾರು ಕಳೆದ ಕೆಲವು ವಾರಗಳಿಂದ ರಸ್ತೆ ಬದಿಯಲ್ಲಿ ದೂಳು ಹಿಡಿಯುತ್ತಾ ನಿಂತಿದೆ. ಕೇವಲ ಎರಡು ವರ್ಷ ಹಳೆಯದಾದ ಈ ಕಾರಿನ ಸ್ಥಿತಿ ಕಂಡು ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ಈ ಕಾರಿನ ಮತ್ತೊಂದು ವಿಶೇಷವೆಂದರೆ ಅದರ ನೋಂದಣಿ ಸಂಖ್ಯೆ. ಈ ಐಷಾರಾಮಿ ಎಸ್ಯುವಿ […]
BREAKING: ವಾಹನ ಅಡ್ಡಗಟ್ಟಿ ದರೋಡೆ: ವ್ಯಾಪಾರಿಯಿಂದ ಹಣ ದೋಚಿ ಪರಾರಿಯಾಗಿದ್ದ ಮಂಗಳಮುಖಿ ನಿಶಾ ಅರೆಸ್ಟ್
ಬೆಂಗಳೂರು: ತರಕಾರಿ ವ್ಯಾಪಾರಿಯ ವಾಹನ ಅಡ್ಡಗಟ್ಟಿ ದರೋಡೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳಮುಖಿ ನಿಶಾಳನ್ನು ಪೊಲೀಸರು ಬಂಧಿಸಿದ್ದಾರೆ. ದರೋಡೆ ಪ್ರಕರಣದಲ್ಲಿ ಮಂಗಳಮುಖಿ ನಿಶಾಳನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಠಾಣೆ ಪೊಲೀಸರು ಬಂಧಿಸಿದ್ದಾರೆ. ತರಕಾರಿ ವ್ಯಾಪಾರಿ ವೇಣು ಎಂಬುವವರ ವಾಹನ ಅಡ್ಡಗಟ್ಟಿ ನಿಶಾ ದರೋಡೆ ಮಾಡಿ ಹಣ ದೋಚಿ ಪರಾರಿಯಾಗಿದ್ದಳು. ಜನವರಿ 23ರಂದು ಆಂಧ್ರಪ್ರದೇಶದ ಅನಂತಪುರದಿಂದ ವೇಣು ಬೆಂಗಳೂರೂರಿಗೆ ತರಕಾರಿ ತಂದಿದ್ದರು. ಮಾರ್ಕೆಟ್ ನಲ್ಲಿ ತರಕಾರಿ ಇಳಿಸಿ ಬೊಲೆರೋ ವಾಹನದಲ್ಲಿ ವಾಪಸ್ ಆಗುತ್ತಿದ್ದರು. ಈ ವೇಳೆ ಟಿ.ಬೇಗೂರಿನಲ್ಲಿ […]
ಬ್ಯಾಂಕ್ ಖಾತೆಯಲ್ಲಿ ́Zero Balancé ಇದ್ದರೂ UPI ಪಾವತಿ ಮಾಡಬಹುದು.! ಇಲ್ಲಿದೆ ಟ್ರಿಕ್ಸ್
ಕೈಯಲ್ಲಿ ಸ್ಮಾರ್ಟ್ಫೋನ್ ಇದ್ದರೂ, ಯುಪಿಐ (UPI) ಆಪ್ಗಳಿದ್ದರೂ.. ಖಾತೆಯಲ್ಲಿ ಹಣವಿಲ್ಲದಿದ್ದರೆ ಏನು ಭಾಗ್ಯ..! ಆದರೆ ಈಗ ನಿಮ್ಮ ಬ್ಯಾಂಕ್ ಖಾತೆಯಲ್ಲಿ ಒಂದು ರೂಪಾಯಿ ಇಲ್ಲದಿದ್ದರೂ ಸಹ, ನೀವು ಯುಪಿಐ ಮೂಲಕ ಸ್ಕ್ಯಾನ್ ಮಾಡಿ ಪಾವತಿ ಮಾಡಬಹುದು. ಹೌದು, ಇದು ನಿಜ! ಆರ್ಬಿಐ (RBI) ಮತ್ತು ಎನ್ಪಿಸಿಐ (NPCI) ಜಂಟಿಯಾಗಿ ತಂದಿರುವ ಒಂದು ಹೊಸ ಕ್ರಾಂತಿಕಾರಿ ಬದಲಾವಣೆಯಿಂದಾಗಿ ಈಗ ಇದು ಸಾಧ್ಯವಾಗಿದೆ. ಅಸಲಿಗೆ ಅಕೌಂಟ್ನಲ್ಲಿ ಹಣವಿಲ್ಲದಿದ್ದರೂ ಪೇಮೆಂಟ್ ಹೇಗೆ ನಡೆಯುತ್ತದೆ? ಈ ಸೌಲಭ್ಯವನ್ನು ನೀವು ಪಡೆಯುವುದು ಹೇಗೆ? ಯುಪಿಐ […]
ಪ್ರಧಾನಿ ಮೋದಿಗೆ ನಮಸ್ಕರಿಸಿ ಕಣ್ಣೀರಿಟ್ಟ ಉಪಮೇಯರ್!
ತಿರುವನಂತಪುರಂ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಎನ್ಡಿಎ ಮೈತ್ರಿಕೂಟ ಐತಿಹಾಸಿಕ ಜಯ ಸಾಧಿಸಿದೆ. ಈ ಗೆಲುವಿನ ಬಳಿಕ ಬಿಜೆಪಿಯ ಮೇಯರ್ ಆಗಿ ವಿ.ವಿ.ರಾಜೇಶ್, ಉಪ ಮೇಯರ್ ಆಗಿ ಜಿ.ಎಸ್.ಆಶಾನಾಥ್ ಆಯ್ಕೆಯಾಗಿದ್ದಾರೆ. 2026ರ ವಿಧಾನಸಭೆ ಚುನಾವಣೆಗೂ ಮುನ್ನ ಕೇರಳ ರಾಜ್ಯದಲ್ಲಿ ಬಿಜೆಪಿಗೆ ಬಹುದೊಡ್ಡ ಶಕ್ತಿ ಬಂದಂತೆ ಆಗಿದೆ. ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಕೇರಳ ಪ್ರವಾಸ ಕೈಗೊಂಡಿದ್ದರು. ಅವರು ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು. ಹೊಸದಾಗಿ ಆಯ್ಕೆಯಾದ ತಿರುವನಂತಪುರಂ ಮಹಾನಗರ ಪಾಲಿಕೆ ಮೇಯರ್, ಉಪ ಮೇಯರ್ ಮತ್ತು ಪಕ್ಷದ ನಾಯಕತ್ವನ್ನು ಪ್ರಧಾನಿ […]
ಪ್ರೇಯಸಿ ಮನೆಗೆ ಹೋಗಿದ್ದ ಪ್ರೇಮಿ ಟ್ರಂಕ್ ನಲ್ಲಿ ಲಾಕ್ : ಕಾನ್ಪುರ ಪೊಲೀಸರ ಎಂಟ್ರಿಯಿಂದ ಬದುಕುಳಿದ ಯುವಕ
ಉತ್ತರ ಪ್ರದೇಶದ ಕಾನ್ಪುರದಲ್ಲಿ ಪ್ರೇಮಿಗಳಿಬ್ಬರ ತುಂಟಾಟವೊಂದು ಪ್ರಾಣಾಪಾಯದ ಹಂತಕ್ಕೆ ತಲುಪಿದ ಘಟನೆ ನಡೆದಿದೆ. ಪ್ರೇಯಸಿಯ ಕುಟುಂಬದವರಿಂದ ತಪ್ಪಿಸಿಕೊಳ್ಳಲು ಹೋಗಿ ಯುವಕನೊಬ್ಬ ಸುಮಾರು 45 ನಿಮಿಷಗಳ ಕಾಲ ಕಬ್ಬಿಣದ ಪೆಟ್ಟಿಗೆಯೊಳಗೆ (Iron Trunk) ಸಿಲುಕಿ ಉಸಿರುಗಟ್ಟುವ ಪರಿಸ್ಥಿತಿ ಎದುರಿಸಿದ್ದಾನೆ. ನಡೆದಿದ್ದೇನು? ಕಾನ್ಪುರದ ಚಕೇರಿ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಯುವತಿಯ ಮನೆಯವರು ಕೆಲಸಕ್ಕೆ ತೆರಳಿದ್ದ ಸಮಯದಲ್ಲಿ ಆಕೆ ತನ್ನ ಪ್ರಿಯಕರನನ್ನು ಮನೆಗೆ ಆಹ್ವಾನಿಸಿದ್ದಳು. ಪ್ರಿಯಕರ ಕೂಡ ಯುವತಿಯ ಮನೆಯಿಂದ ಕೆಲವೇ ಹೆಜ್ಜೆಗಳ ಅಂತರದಲ್ಲಿ ವಾಸವಿದ್ದನು. ಇಬ್ಬರೂ ಮಾತನಾಡುತ್ತಾ ಕುಳಿತಿದ್ದಾಗ, […]
10 ನಿಮಿಷ ಸಾಕು ಮೊಬೈಲ್ನಲ್ಲೇ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಡೌನ್ಲೋಡ್ ಮಾಡುವ ವಿಧಾನ
ಬೆಂಗಳೂರು: ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಗುಡ್ ನ್ಯೂಸ್ ಇನ್ಮುಂದೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರ (Caste & Income Certificate) ಪಡೆಯಲು ಸರ್ಕಾರಿ ಕಚೇರಿಗಳಿಗೆ ಅಲೆದಾಡುವ ಅವಶ್ಯಕತೆಯಿಲ್ಲ. ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸಲು ಮತ್ತು ಸಮಯ ಉಳಿಸಲು ರಾಜ್ಯ ಸರ್ಕಾರವು ಆನ್ಲೈನ್ ಮೂಲಕವೇ ಈ ಪತ್ರಗಳನ್ನು ಪಡೆಯುವ ಸರಳ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಕೇವಲ 5 ರಿಂದ 10 ನಿಮಿಷಗಳಲ್ಲಿ ನಿಮ್ಮ ರೇಷನ್ ಕಾರ್ಡ್ ಅಥವಾ ಆಧಾರ್ ಕಾರ್ಡ್ ಬಳಸಿ ಈ ಪ್ರಮಾಣ ಪತ್ರವನ್ನು ನೀವು ಮನೆಯಲ್ಲೇ […]
ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ತೆರಳಿದ್ದ ಭಕ್ತನನ್ನು ತಿಂದು ತೇಗಿದ್ದ ಚಿರತೆ ಕೊನೆಗೂ ಸೆರೆ
ಚಾಮರಾಜನಗರ: ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ತೆರಳಿದ್ದ ಭಕ್ತನೊಬ್ಬನ ಮೇಲೆ ದಳಿ ನಡೆಸಿ, ಆತನನ್ನು ಕೊಂದು ತಿಂದು ತೇಗಿದ್ದ ಚಿರತೆಯನ್ನು ಕೊನೆಗೂ ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ. ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಹೋಗುತ್ತಿದ್ದ ಭಕ್ತರ ಮೇಲೆ ಚಿರತೆ ನಡೆಸಿತ್ತು. ಈ ವೇಳೆ ಮಂಡ್ಯದ ಚೀರನಹಳ್ಳಿ ಮೂಲದ ಪ್ರವೀಣ್ ಎಂಬ ಭಕ್ತನ ಮೇಲೆ ದಾಳಿ ನಡೆಸಿದ್ದ ಚಿರತೆ ಕತ್ತು ಸೀಳಿ ಕೊಂದು ಹೊತ್ತೊಯ್ದಿತ್ತು. ಈ ಘಟನೆ ಬೆನ್ನಲ್ಲೇ ಎಚ್ಚೆತ್ತ […]
ಕಲಬುರಗಿ : ತಹಶೀಲ್ದಾರ್ ಕಚೇರಿಯಲ್ಲಿ ಲಂಚ ಸ್ವೀಕರಿಸುತ್ತಿದ್ದ ಪ್ರಥಮ ದರ್ಜೆ ಸಹಾಯಕ (FDA) ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಕಲಬುರಗಿ ಜಿಲ್ಲೆಯ ಜೇವರ್ಗಿಯಲ್ಲಿ ನಡೆದಿದೆ. ಜೇವರ್ಗಿ ತಹಶೀಲ್ದಾರ್ ಕಚೇರಿಯಲ್ಲಿ ಈ ದಾಳಿ ನಡೆದಿದೆ. ಪ್ರಥಮ ದರ್ಜೆ ಸಹಾಯಕ ಸತೀಶ್ ರಾಠೋಡ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಜೇವರ್ಗಿಯ ಶಿವಕುಮಾರ್ ಹೆಗಡೆ ಎಂಬುವವರ ಬಳಿ ಲಂಚ ಸ್ವೀಕಾರ ಮಾಡುವಾಗ ಅವರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಫೋನ್ ಪೇ ಮೂಲಕ 10 ಸಾವಿರ ಲಂಚ ಸ್ವೀಕಾರ ಜಮೀನು ಪಹಣಿಯಲ್ಲಿ ನಮೂದಾಗಿದ್ದ ಹೆಸರು […]
ಹಣಕ್ಕಿಂತ ಫ್ಯಾಮಿಲಿ ಗೌರವವೇ ಮುಖ್ಯ: 40 ಕೋಟಿಯ ತಂಬಾಕು ಜಾಹೀರಾತಿಗೆ ನೋ ಅಂದ ಸುನಿಲ್ ಶೆಟ್ಟಿ
ಬಾಲಿವುಡ್ನ ಖ್ಯಾತ ನಟರು ಪಾನ್ ಮಸಾಲಾ ಮತ್ತು ತಂಬಾಕು ಬ್ರ್ಯಾಂಡ್ಗಳ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವುದು ಇಂದು ದೊಡ್ಡ ವಿವಾದಕ್ಕೆ ಕಾರಣವಾಗುತ್ತಿದೆ. ಅಜಯ್ ದೇವಗನ್, ಅಕ್ಷಯ್ ಕುಮಾರ್ ಅವರಂತಹ ಸ್ಟಾರ್ ನಟರು ಇಂತಹ ಜಾಹೀರಾತುಗಳಲ್ಲಿ ನಟಿಸಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಆದರೆ, ಇದೇ ಹಾದಿಯಲ್ಲಿ ಹೋಗದ ಹಿರಿಯ ನಟ ಸುನಿಲ್ ಶೆಟ್ಟಿ, ಬರೋಬ್ಬರಿ 40 ಕೋಟಿ ರೂಪಾಯಿಯ ಆಫರ್ ಅನ್ನು ಸಾರಾಸಗಟಾಗಿ ತಿರಸ್ಕರಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇತ್ತೀಚೆಗೆ ಪಾಡ್ಕಾಸ್ಟ್ ಒಂದರಲ್ಲಿ ಮಾತನಾಡಿದ ಸುನಿಲ್ ಶೆಟ್ಟಿ, ತಾವು ಈ […]
ರೈಲಿನಲ್ಲಿ ಮದ್ಯದ ಬಾಟಲಿ ಕೊಂಡೊಯ್ಯಬಹುದೇ..? ಕಾನೂನು ಏನು ಹೇಳುತ್ತದೆ ತಿಳಿಯಿರಿ
ದೇಶಾದ್ಯಂತ ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರಲ್ಲಿ “ರೈಲಿನಲ್ಲಿ ಮದ್ಯ ಕೊಂಡೊಯ್ಯುವುದು ಕಾನೂನುಬದ್ಧವೇ ಅಥವಾ ಇಲ್ಲವೇ?” ಎಂಬ ಪ್ರಶ್ನೆ ಆಗಾಗ್ಗೆ ಉದ್ಭವಿಸುತ್ತದೆ. ವಿಶೇಷವಾಗಿ ಹಬ್ಬ ಮತ್ತು ರಜಾದಿನಗಳ ಸಂದರ್ಭದಲ್ಲಿ ಈ ಗೊಂದಲ ಇನ್ನೂ ಹೆಚ್ಚಾಗುತ್ತದೆ. ರೈಲ್ವೆಯು ರೈಲುಗಳನ್ನು ಸಾರ್ವಜನಿಕ ಸ್ಥಳವೆಂದು ಪರಿಗಣಿಸುತ್ತದೆ ಮತ್ತು ಪ್ರಯಾಣಿಕರ ಸುರಕ್ಷತೆ ಹಾಗೂ ವ್ಯವಸ್ಥೆಯನ್ನು ಕಾಪಾಡಲು ನಿಗದಿತ ನಿಯಮಗಳನ್ನು ಪಾಲಿಸುತ್ತದೆ. ಆದಾಗ್ಯೂ, ಮದ್ಯಕ್ಕೆ ಸಂಬಂಧಿಸಿದ ನಿಯಮಗಳು ನೇರವಾಗಿ ರೈಲ್ವೆ ಇಲಾಖೆಗೆ ಸೇರಿರುವುದಿಲ್ಲ, ಬದಲಾಗಿ ಆಯಾ ರಾಜ್ಯಗಳ ಅಬಕಾರಿ ಕಾನೂನುಗಳಿಗೆ ಒಳಪಟ್ಟಿರುತ್ತವೆ. ರೈಲಿನಲ್ಲಿ ಮದ್ಯ ಸಾಗಿಸುವ ಬಗ್ಗೆ […]
BREAKING: ಪೌರಾಯುಕ್ತಗೆ ಬೆದರಿಕೆ ಕೇಸ್: ರಾಜೀವ್ ಗೌಡ 3 ಮನೆಗಳಿಗೆ 2ನೇ ನೋಟಿಸ್ ಅಂಟಿಸಿದ ಪೊಲೀಸರು
ಬೆಂಗಳೂರು: ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆಗೆ ನಿಂದನೆ ಹಾಗೂ ಜೀವ ಬೆದರಿಕೆ ಹಾಕಿರುವ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಪತ್ತೆಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದಾರೆ. ನಾಲ್ಕು ವಿಶೇಶ ತಂಡಗಳನ್ನು ರಚಿಸಿ ಬೆಂಗಳೂರು, ಕೋಲಾರ, ತಮಿಳುನಾಡು ಸೇರಿದಂತೆ ಹಲವೆಡೆ ಶೋಧಕಾರ್ಯ ನಡೆಸಲಾಗುತ್ತಿದೆ. ಆದರೆ ತಲೆಮರೆಸಿಕೊಂಡಿರುವ ರಾಜೀವ್ ಗೌಡ ಎಲ್ಲಿದ್ದಾರೆ ಎಂಬುದೇ ಪೊಲೀಸರುಗೆ ತಿಳಿಯುತ್ತಿಲ್ಲ ಎನ್ನಲಾಗಿದೆ. ಈ ನಡುವೆ ರಾಜೀವ್ ಗೌಡ್ ಮನೆಗೆ ಎರಡನೇ ನೋಟಿಸ್ ಅಂಟಿಸಿದ್ದಾರೆ. ರಾಜೀವ್ ಗೌಡಗೆ ನಿರೀಕ್ಷಣಾ ಜಾಮೀನು ಅರಿ ವಜಾಗೊಂಡಿರುವ ಹಿನ್ನೆಲೆಯಲ್ಲಿ ಹಾಗೂ ಎಫ್ […]
NPS to OPS: ಸರ್ಕಾರಿ ನೌಕರರ ಮಹತ್ವದ ಸಭೆಗೆ ದಿನಾಂಕ ನಿಗದಿ
ಹೊಸ ಪಿಂಚಣಿ ಯೋಜನೆ (NPS) ರದ್ದುಗೊಳಿಸಿ ಹಳೆ ಪಿಂಚಣಿ ಯೋಜನೆ (OPS) ಮರು ಜಾರಿಗೊಳಿಸಬೇಕು ಎಂಬುದು ಕರ್ನಾಟಕದ ಸರ್ಕಾರಿ ನೌಕರರ ಪ್ರಮುಖ ಬೇಡಿಕೆಯಾಗಿದೆ. ಈ ಕುರಿತು ಹಲವು ವರ್ಷಗಳಿಂದ ಹೋರಾಟಗಳು ನಡೆಯುತ್ತಿವೆ. ಕಾಂಗ್ರೆಸ್ 2023ರ ವಿಧಾನಸಭೆ ಚುನಾವಣೆಯಲ್ಲಿ ನೀಡಿದ ಭರವಸೆಯಂತೆ ಒಪಿಎಸ್ ಜಾರಿಗೊಳಿಸಬೇಕು ಎಂದು ಸರ್ಕಾರಿ ನೌಕರರು ಒತ್ತಡ ಹೇರುತ್ತಿದ್ದಾರೆ. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಈಗ ಒಪಿಎಸ್ ಮರು ಜಾರಿ ವಿಚಾರದಲ್ಲಿ ರಾಜ್ಯ ಮಟ್ಟದ ಹೋರಾಟಕ್ಕೆ ತಯಾರಿ ನಡೆಸಿದೆ. ಹೌದು ರಾಜ್ಯ ಕಾರ್ಯಕಾರಿ ಸಮಿತಿ […]
ನಾವು ಏನನ್ನು ತಿನ್ನುತ್ತೇವೆಯೋ ಅದೇ ನಮ್ಮ ಆರೋಗ್ಯವನ್ನು ನಿರ್ಧರಿಸುತ್ತದೆ. ಅದರಲ್ಲೂ ಭಾರತೀಯ ಅಡುಗೆಮನೆಗಳಲ್ಲಿ ಎಣ್ಣೆ ಇಲ್ಲದೆ ಒಗ್ಗರಣೆ ಬೀಳುವುದೇ ಇಲ್ಲ. ಆದರೆ ರುಚಿಗಾಗಿ ನಾವು ಬಳಸುವ ಎಣ್ಣೆ ಹಿತವಾಗಿದ್ದರೆ ಮಾತ್ರ ಆರೋಗ್ಯ, ಮಿತಿಯಿಲ್ಲದಿದ್ದರೆ ಅದುವೇ ಮಾರಕ. ರುಚಿಗಿಂತ ಆರೋಗ್ಯ ಮುಖ್ಯ ಎಂಬ ಮಾತು ಇಂದಿನ ಕಾಲಕ್ಕೆ ಅನ್ವರ್ಥವಾಗಿದೆ. ಮಾಂಸಾಹಾರವೇ ಇರಲಿ ಘಮಘಮಿಸುವ ಬಿರಿಯಾನಿಯೇ ಇರಲಿ ಅಥವಾ ಬಾಯಿಯಲ್ಲಿ ನೀರೂರಿಸುವ ಸಿಹಿತಿಂಡಿಯೇ ಇರಲಿ ಎಣ್ಣೆ ಇಲ್ಲದೆ ಭಾರತೀಯ ಅಡುಗೆ ಪೂರ್ಣವಾಗದು. ಆದರೆ ನಾಲಿಗೆಯ ರುಚಿಗೆ ದಾಸರಾಗಿ ನಾವು ಬಳಸುವ […]
BREAKING : ಶಿಡ್ಲಘಟ್ಟ ಪೌರಾಯುಕ್ತೆಗೆ ಆಸಿಡ್ ಎರಚುವುದಾಗಿ ಬೆದರಿಕೆ, ರಕ್ಷಣೆಗಾಗಿ ಕೋರ್ಟ್ ಮೊರೆ..!
ಚಿಕ್ಕಬಳ್ಳಾಪುರ : ಶಿಡ್ಲಘಟ್ಟ ಪೌರಾಯುಕ್ತೆ ಅಮೃತಾ ಗೌಡಗೆ ಇತ್ತೀಚೆಗೆ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಕರೆ ಮಾಡಿ ಅಶ್ಲೀಲವಾಗಿ ನಿಂದಿಸಿ ಬೆದರಿಕೆಯೊಡ್ಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಪತ್ತೆಯಾಗಿರುವ ರಾಜೀವ್ ಗೌಡನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಈ ಬೆನ್ನಲ್ಲೇ ಪೌರಾಯುಕ್ತೆಗೆ ಆಸಿಡ್ ಎರಚುವುದಾಗಿ ಅನಾಮಧೇಯ ಬೆದರಿಕೆ ಪತ್ರ ಬಂದಿದೆ. ಆಸಿಡ್ ಎರಚುವುದಾಗಿ ಬೆದರಿಕೆಯೊಡ್ಡಿ ಹಲವು ಬೆದರಿಕೆ ಕರೆಗಳು ಬರುತ್ತಿದ್ದು, ರಕ್ಷಣೆಗಾಗಿ ಅವರು ಚಿಂತಾಮಣಿ ಕೋರ್ಟ್ ಮೊರೆ ಹೋಗಿದ್ದಾರೆ. ನನಗೆ ಸೂಕ್ತ ರಕ್ಷಣೆ ನೀಡುವಂತೆ ಅವರು ಕೋರ್ಟ್ ಗೆ ಮನವಿ […]
ಸಾವಿನ ನಂತರದ ಪ್ರಪಂಚ ಹೇಗಿದೆ? ಮೂರು ಬಾರಿ ಬದುಕಿ ಬಂದ ಮಹಿಳೆಯಿಂದ ಆಘಾತಕಾರಿ ಸತ್ಯ ಬಹಿರಂಗ
ಮನುಷ್ಯನ ಸಾವಿನ ನಂತರದ ಬದುಕು ಅಥವಾ ಆತ್ಮದ ಅಸ್ತಿತ್ವದ ಬಗ್ಗೆ ಶತಮಾನಗಳಿಂದಲೂ ಚರ್ಚೆಗಳು ನಡೆಯುತ್ತಲೇ ಇವೆ. ಆದರೆ ಅಮೆರಿಕದ ಮೇರಿಲ್ಯಾಂಡ್ನ 80 ವರ್ಷದ ಪಾಸ್ಟರ್ ನಾರ್ಮಾ ಎಡ್ವರ್ಡ್ಸ್ ಎಂಬುವವರು ಮರಣದ ನಂತರದ ಪ್ರಪಂಚ ಹೇಗಿರುತ್ತದೆ ಎಂಬುದನ್ನು ಸ್ವತಃ ಅನುಭವಿಸಿ ಬಂದಿದ್ದೇನೆ ಎಂದು ಹೇಳುತ್ತಿದ್ದಾರೆ. ಇವರು ಒಮ್ಮೆ ಅಲ್ಲ, ಬರೋಬ್ಬರಿ ಮೂರು ಬಾರಿ ವೈದ್ಯಕೀಯವಾಗಿ ಮೃತಪಟ್ಟಿದ್ದರು (Clinically Dead) ಎಂದು ಘೋಷಿಸಲಾಗಿತ್ತು. ಆದರೆ ಪ್ರತಿ ಬಾರಿಯೂ ಅವರು ಅಚ್ಚರಿಯ ರೀತಿಯಲ್ಲಿ ಬದುಕಿ ಬಂದಿದ್ದಾರೆ. ನಾರ್ಮಾ ಅವರ ಈ ಅತೀಂದ್ರಿಯ […]
ಗದಗ: ಗದಗ ಜಿಲ್ಲೆಯ ಐತಿಹಾಸಿಕ ಲಕ್ಕುಂಡಿಯಲ್ಲಿ ಜಿಲ್ಲಾಡಳಿತದಿಂದ ಉತ್ಖನನ ಕಾರ್ಯ ಮುಂದುವರೆದಿದೆ. ಲಕ್ಕುಂಡಿಯಲ್ಲಿ ಬಗೆದಷ್ಟು ಗತ ವೈಭವವನ್ನು ಸಾರುವ ಅಮೂಲ್ಯ ವಸ್ತುಗಳು, ಶಿಲಾ ವಿಗ್ರಹಗಳು ಪತ್ತೆಯಾಗುತ್ತಿವೆ. ಇಂದು 9 ನೇ ದಿನದ ಉತ್ಖನನ ಕಾರ್ಯ ಮುಂದುವರೆದಿದೆ. ಲಕ್ಕುಂಡಿಯ ಶ್ರೀ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಬಳಿ ಉತ್ಖನನ ಕಾರ್ಯ ಮುಂದುವರೆದಿದ್ದು, 35 ಕಾರ್ಮಿಕರು ಉತ್ಖನನದ ಕೆಲಸಲ್ಲಿ ತೊಡಗಿದ್ದಾರೆ. ನೆಲದಲ್ಲಿನ ಮಣ್ಣು ತೆಗೆದಷ್ಟು ಪುರಾತನ ವಸ್ತುಗಳು, ಅಮೂಲ್ಯ ವಸ್ತುಗಳು ಪತ್ತೆಯಾಗುತ್ತಿದ್ದು, ದಿನದಿಂದ ದಿನಕ್ಕೆ ಕುತೂಹಲವನ್ನು ಇಮ್ಮಡಿಹೊಳಿಸಿದೆ. ಇಂದು ತೋಟದ ಮನೆಯ […]
ಜೈಲಿನಲ್ಲಿ ಪ್ರೀತಿ, ಹೈಕೋರ್ಟ್ನಿಂದ ಪೆರೋಲ್: ಹಸೆಮಣೆ ಏರುತ್ತಿದ್ದಾರೆ ರಾಜಸ್ಥಾನದ ಇಬ್ಬರು ಕುಖ್ಯಾತ ಕೊಲೆಗಡುಕರು!
ಸಿನಿಮಾ ಕಥೆಗಳನ್ನೂ ಮೀರಿಸುವಂತಹ ವಿಚಿತ್ರ ಪ್ರೇಮಕಥೆಯೊಂದು ರಾಜಸ್ಥಾನದ ಅಲ್ವಾರ್ನಲ್ಲಿ ನಡೆದಿದೆ. ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ಇಬ್ಬರು ಕುಖ್ಯಾತ ಕೊಲೆ ಆರೋಪಿಗಳು ಪರಸ್ಪರ ಪ್ರೀತಿಸಿ, ಇದೀಗ ವಿವಾಹವಾಗಲು ಸಜ್ಜಾಗಿದ್ದಾರೆ. ಇದಕ್ಕಾಗಿ ರಾಜಸ್ಥಾನ ಹೈಕೋರ್ಟ್ ಇವರಿಬ್ಬರಿಗೂ 15 ದಿನಗಳ ತುರ್ತು ಪೆರೋಲ್ ಮಂಜೂರು ಮಾಡಿದೆ. ಯಾರೀ ಪ್ರಿಯಾ ಸೇಠ್? ಪ್ರಿಯಾ ಸೇಠ್ ಅಲಿಯಾಸ್ ನೇಹಾ ಸೇಠ್ ಎಂಬಾಕೆ ವೃತ್ತಿಯಲ್ಲಿ ಮಾಡೆಲ್ ಆಗಿದ್ದವಳು. 2018ರಲ್ಲಿ ಡೇಟಿಂಗ್ ಆ್ಯಪ್ ಟಿಂಡರ್ ಮೂಲಕ ಪರಿಚಯವಾಗಿದ್ದ ದುಶ್ಯಂತ್ ಶರ್ಮಾ ಎಂಬ ಯುವಕನನ್ನು ಅಪಹರಿಸಿ, 10 ಲಕ್ಷ […]
ನಾಯಿ ಕಚ್ಚಿದಾಗ ಮೊದಲು ಮಾಡಬೇಕಾದ ಕೆಲಸಗಳಿವು: ರೇಬಿಸ್ ಎಂಬ ಮಾರಣಾಂತಿಕ ಕಾಯಿಲೆಯಿಂದ ಪಾರಾಗಲು ಇಲ್ಲಿವೆ ಟಿಪ್ಸ್
ಬೀದಿ ನಾಯಿಗಳ ಹಾವಳಿ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಸಾಕು ನಾಯಿಗಳೇ ಇರಲಿ ಅಥವಾ ಬೀದಿ ನಾಯಿಗಳೇ ಇರಲಿ, ನಾಯಿ ಕಚ್ಚಿದಾಗ ಅಥವಾ ಉಗುರಿನಿಂದ ಪರಚಿದಾಗ ಅದನ್ನು ಅಗುರವಾಗಿ ಪರಿಗಣಿಸುವುದು ಅತಿ ದೊಡ್ಡ ತಪ್ಪಾದೀತು. ನಾಯಿ ಕಚ್ಚಿದ ತಕ್ಷಣ ಸರಿಯಾದ ಚಿಕಿತ್ಸೆ ಪಡೆಯದಿದ್ದರೆ ರೇಬಿಸ್ (Rabies) ನಂತಹ ಮಾರಣಾಂತಿಕ ಕಾಯಿಲೆಗೆ ತುತ್ತಾಗುವ ಅಪಾಯವಿರುತ್ತದೆ. ರೇಬಿಸ್ ವೈರಸ್ ನಾಯಿಯ ಲಾಲಾರಸದ ಮೂಲಕ ಮನುಷ್ಯನ ದೇಹ ಸೇರುತ್ತದೆ, ಇದು ಮೆದುಳಿನ ಮೇಲೆ ಪರಿಣಾಮ ಬೀರಿ ಹೈಡ್ರೋಫೋಬಿಯಾದಂತಹ (ನೀರಿನ ಭಯ) ಗಂಭೀರ ಲಕ್ಷಣಗಳಿಗೆ […]
ತಾಯಿಯ ಕ್ಯಾನ್ಸರ್ ಬಿಲ್ ನೋಡಿ ಮರುಗಿದ ಬಿಎಂಡಬ್ಲ್ಯು ಮಾಲೀಕ: ಡೆಲಿವರಿ ಬಾಯ್ ಕಣ್ಣೀರು ಒರೆಸಿದ ಸಿದ್ಧಾರ್ಥ್ ಭಾರದ್ವಾಜ್
ಮಾನವೀಯತೆ ಇನ್ನು ಸತ್ತಿಲ್ಲ ಎಂಬುದಕ್ಕೆ ಮುಂಬೈನಲ್ಲಿ ನಡೆದ ಈ ಒಂದು ಘಟನೆ ಸಾಕ್ಷಿಯಾಗಿದೆ. ನಟ ಸಿದ್ಧಾರ್ಥ್ ಭಾರದ್ವಾಜ್ ಅವರ ಐಷಾರಾಮಿ ಬಿಎಂಡಬ್ಲ್ಯು ಕಾರಿಗೆ ಡೆಲಿವರಿ ಬಾಯ್ ಒಬ್ಬರು ಆಕಸ್ಮಿಕವಾಗಿ ಡಿಕ್ಕಿ ಹೊಡೆದಾಗ ನಡೆದ ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಜನರ ಕಣ್ಣಾಲಿಗಳು ಒದ್ದೆಯಾಗುವಂತೆ ಮಾಡಿದೆ. ರಸ್ತೆಯ ಬದಿಯಲ್ಲಿ ನಿಲ್ಲಿಸಿದ್ದ ಸಿದ್ಧಾರ್ಥ್ ಅವರ ಕಾರಿಗೆ ವಿಶಾಲ್ ಎಂಬ ಡೆಲಿವರಿ ಬಾಯ್ ಡಿಕ್ಕಿ ಹೊಡೆದಿದ್ದರು. ಇದರಿಂದ ಕಾರಿಗೆ ಸಾಕಷ್ಟು ಹಾನಿಯಾಗಿತ್ತು. ಸಿದ್ಧಾರ್ಥ್ ಅವರು ಕಾರಿನ ಬಳಿ ಬಂದು ಎಷ್ಟು […]
AI ಬಂದ ಮೇಲೆ ಬೆಂಗಳೂರಲ್ಲಿ ಈ ಕೆಲಸಕ್ಕೆ ಭಾರೀ ಡಿಮಾಂಡ್!
ಕೃತಕ ಬುದ್ಧಿಮತ್ತೆ (AI) ಈಗ ಎಲ್ಲಾ ವಲಯದಲ್ಲೂ ಎಐ ಮಾತು. ಎಐ ಬಂದ ಮೇಲೆ ಯಾವ ಉದ್ಯೋಗಕ್ಕೆ ಬೇಡಿಕೆ ಹೆಚ್ಚಿದೆ? ಎಂಬುದು ಸಹಜವಾದ ಪ್ರಶ್ನೆ. ಭಾರತದ ವೃತ್ತಿಪರ ನೆಟ್ ವರ್ಕ್ ಆಗಿರುವ ಲಿಂಕ್ಡ್ ಇನ್ ಸಂಸ್ಥೆಯು ‘ಜಾಬ್ಸ್ ಆನ್ ದಿ ರೈಸ್-2026′ ವರದಿಯನ್ನು ಬಿಡುಗಡೆ ಮಾಡಿದೆ. ವರದಿಯು ಬೆಂಗಳೂರಿನಲ್ಲಿ ಅತಿ ಹೆಚ್ಚು ಬೆಳವಣಿಗೆ ಹೊಂದುತ್ತಿರುವ ಹುದ್ದೆಗಳಲ್ಲಿ ಎಐ ಇಂಜಿನಿಯರ್ ಮೊದಲನೇ ಸ್ಥಾನದಲ್ಲಿದೆ ಎಂದು ತಿಳಿಸಿದೆ. ಈ ಹೊಸ ಸಂಶೋಧನೆಯ ಪ್ರಕಾರ ಶೇಕಡ 72ರಷ್ಟು ಜನರು 2026ರಲ್ಲಿ ಹೊಸ […]
ಕಲ್ಲಡ್ಕ ಪ್ರಭಾಕರ ಭಟ್ ದ್ವೇಷ ಭಾಷಣ ಕೇಸ್: ವಿದ್ಯಾವರ್ಧಕ ಸಂಘದ ಸಿಇಒ ಗೆ ನೋಟಿಸ್
ಮಂಗಳೂರು: ಪುತ್ತೂರು ನಗರದ ವಿವೇಕಾನಂದ ಕಾಲೇಜ್ ನಲ್ಲಿ ನಡೆದ ವಿವೇಕಾನಂದ ಜಯಂತಿ ಕಾರ್ಯಕ್ರಮದಲ್ಲಿ ಆರ್ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಕೋಮು ಪ್ರಚೋದನಕಾರಿ ಭಾಷಣ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆಗೆ ಹಾಜರಾಗಲು ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮಿ ಪ್ರಸಾದ್ ಬೋಟ್ಯಾಡಿ ಅವರಿಗೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ. ಜನವರಿ 12ರಂದು ವಿವೇಕಾನಂದ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ದ್ವೇಷ ಭಾಷಣ ಮಾಡಿದ ಆರೋಪದ ಮೇಲೆ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾಗಿರುವ ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ, ಅದನ್ನು […]
ʼಮಾತೃವಂದನಾ ಯೋಜನೆʼ ಯಡಿ ರಾಜ್ಯದ ಗರ್ಭಿಣಿಯರಿಗೆ 11,000 ಸಹಾಯಧನ, ನೋಂದಣಿ ಆರಂಭ
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕೇಂದ್ರ ಪುರಸ್ಕೃತ ಯೋಜನೆಗಳಲ್ಲೊಂದಾದ ಪ್ರಧಾನಮಂತ್ರಿ ಮಾತೃವಂದನಾ ಯೋಜನೆ ಸೌಲಭ್ಯ ಪಡೆಯಲು ಮೊದಲನೇ ಪ್ರಸವದ ಗರ್ಭಿಣಿ ಮಹಿಳೆಯರು ಮತ್ತು ಎರಡನೇ ಪ್ರಸವದಲ್ಲಿ ಹೆಣ್ಣು ಮಗು ಜನಿಸಿದ ಮಹಿಳೆಯರಿಂದ ನೋಂದಣಿ ಅಭಿಯಾನ ನಡೆಯಲಿದೆ. ಮಹಿಳೆಯ ಮೊದಲ ಪ್ರಸವದ ಮತ್ತು ನಂತರದ ಸಾಕಷ್ಟು ವಿಶ್ರಾಂತಿಗಾಗಿ ಆಂಶಿಕ ಪರಿಹಾರವನ್ನು ಗರ್ಭಿಣಿ ಮತ್ತು ಬಾಣಂತಿಯರ ಆರೋಗ್ಯದಲ್ಲಿ ಸುಧಾರಣೆ ತರಲು ಪ್ರೋತ್ಸಾಹಧನದ ರೂಪದಲ್ಲಿ ವೇತನ ನಷ್ಟಕ್ಕಾಗಿ ನೀಡುವುದಾಗಿದೆ ಮೊದಲ ಮಗುವಿಗೆ ಎರಡು ಕಂತುಗಳಲ್ಲಿ ರೂ.5 ಸಾವಿರ, ಎರಡನೇ ಮಗು(ಹೆಣ್ಣು […]
ವಿಶ್ವ ಆರೋಗ್ಯ ಸಂಸ್ಥೆಯಿಂದ ಅಧಿಕೃತವಾಗಿ ಹೊರ ಬಂದ ಅಮೆರಿಕ
ವಾಷಿಂಗ್ಟನ್: ಮಹತ್ವದ ಬೆಳವಣಿಗೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆಯಿಂದ ಅಮೆರಿಕ ಅಧಿಕೃತವಾಗಿ ಹೊರ ಬಂದಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸೂಚನೆಯಂತೆ ವಿಶ್ವ ಆರೋಗ್ಯ ಸಂಸ್ಥೆಯ ಸದಸ್ಯತ್ವವನ್ನು ಹಿಂಪಡೆಯಲಾಗಿದೆ. ಅಮೆರಿಕ ಆರೋಗ್ಯ ಇಲಾಖೆ ಹಾಗೂ ವಿದೇಶಾಂಗ ಇಲಾಖೆ ಜಂಟಿಯಾಗಿ ವಿಶ್ವ ಆರೋಗ್ಯ ಸಂಸ್ಥೆಯಿಂದ ಅಮೆರಿಕ ಹೊರ ಬಂದಿರುವ ವಿಷಯವನ್ನು ತಿಳಿಸಿವೆ. ಸದಸ್ಯತ್ವ ಹಿಂಪಡೆದ ಬೆನ್ನಲ್ಲೇ ಜಿನಿವಾದಲ್ಲಿರುವ ಆರೋಗ್ಯ ಸಂಸ್ಥೆಯ ಕೇಂದ್ರ ಕಚೇರಿಯಲ್ಲಿದ್ದ ಅಮೆರಿಕ ರಾಷ್ಟ್ರಧ್ವಜವನ್ನು ತೆರವು ಮಾಡಲಾಗಿದೆ. ಕಳೆದ ವರ್ಷ ಜನವರಿ 20ರಂದು ಅಮೆರಿಕ ಅಧ್ಯಕ್ಷರಾಗಿ ಡೊನಾಲ್ಡ್ […]
ನೋಂದಣಿ ಮತ್ತು ಮುದ್ರಾಂಕ ಇಲಾಖೆ : ರಾಜ್ಯಾದ್ಯಂತ ಕಾಗದ ರಹಿತ ನೋಂದಣಿ ಕುರಿತು ತರಬೇತಿ ಕಾರ್ಯಕ್ರಮ
ಧಾರವಾಡ : ನೋಂದಣಿ ಮಹಾಪರಿವೀಕ್ಷಕರು ಹಾಗೂ ಮುದ್ರಾಂಕಗಳ ಆಯುಕ್ತರು ಕಾಗದ ರಹಿತ ನೋಂದಣಿ (Paperless Registration) ವ್ಯವಸ್ಥೆಯನ್ನು ರಾಜ್ಯಾದ್ಯಂತ ಜಾರಿಗೊಳಿಸುವ ಕುರಿತು ಮಾರ್ಗಸೂಚಿಗಳೊಂದಿಗೆ ಉಪ ನೋಂದಣಿ ಕಛೇರಿಗಳಲ್ಲಿ ತರಬೇತಿ ನೀಡುವಂತೆ ಸೂಚಿಸಿರುತ್ತಾರೆ. ಧಾರವಾಡ ಉಪ ನೋಂದಣಿ ಕಛೇರಿಯಲ್ಲಿ ಜನವರಿ 27, 2026, ಹುಬ್ಬಳ್ಳಿ (ದಕ್ಷಿಣ) ಮತ್ತು ಹುಬ್ಬಳ್ಳಿ (ಉತ್ತರ) ಉಪ ನೋಂದಣಿ ಕಛೇರಿಯಲ್ಲಿ ಜನವರಿ 28, 2026, ಕುಂದಗೋಳ ಉಪ ನೋಂದಣಿ ಕಛೇರಿಯಲ್ಲಿ ಜನವರಿ 29, 2026, ನವಲಗುಂದ ಮತ್ತು ಅಣ್ಣಿಗೇರಿ ಉಪ ನೋಂದಣಿ ಕಛೇರಿಯಲ್ಲಿ ಜನವರಿ […]
ಬೆಳ್ಳಿ ಉತ್ಪಾದನೆಯಲ್ಲಿ ಯಾವ ದೇಶ ನಂ. 1? ಭಾರತದ ಪಾಲಿಗೆ ಬೆಳ್ಳಿ ಎಲ್ಲಿಂದ ಬರುತ್ತೆ? ಇಲ್ಲಿದೆ ಕಂಪ್ಲೀಟ್ ರಿಪೋರ್ಟ್
ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಬೆಳ್ಳಿಯ ದರ ರಾಕೆಟ್ ವೇಗದಲ್ಲಿ ಏರುತ್ತಿದೆ. ಕೆಜಿ ಬೆಳ್ಳಿ ಲಕ್ಷದ ಗಡಿ ದಾಟುತ್ತಿರುವುದು ಹೂಡಿಕೆದಾರರ ನಿದ್ದೆ ಗೆಡಿಸಿದೆ. ಆದರೆ, ಬೆಳ್ಳಿ ಕೇವಲ ಹಣ ಮಾಡುವ ಸಾಧನವಲ್ಲ ಇದು ಇಂದಿನ ಹೈಟೆಕ್ ಜಗತ್ತಿನ ರಿಯಲ್ ಹೀರೋ. ಸೌರಶಕ್ತಿಯಿಂದ ವೈದ್ಯಕೀಯ ಕ್ಷೇತ್ರದವರೆಗೆ ಬೆಳ್ಳಿ ಇಲ್ಲದೆ ಕೆಲಸ ನಡೆಯುವುದೇ ಇಲ್ಲ. ಅಷ್ಟಕ್ಕೂ ಈ ಹೊಳೆಯುವ ಲೋಹ ಹುಟ್ಟುವುದು ಹೇಗೆ? ಬೆಳ್ಳಿ ಪ್ರಕೃತಿಯಲ್ಲಿ ಹೇಗೆ ರೂಪುಗೊಳ್ಳುತ್ತದೆ? ಬೆಳ್ಳಿಯ ಮೂಲ ಭೂಮಿಯಲ್ಲಲ್ಲ, ಬದಲಿಗೆ ಆಕಾಶದ ನಕ್ಷತ್ರಗಳಲ್ಲಿ ಸೂಪರ್ನೋವಾ ಸ್ಫೋಟ ಲಕ್ಷಾಂತರ […]
ಬ್ರೈನ್ ಫಾಗ್ : ಯುವಜನತೆಯಲ್ಲಿ ಹೆಚ್ಚುತ್ತಿದೆ ಮರೆವು.. ಅಸಲಿ ಕಾರಣ ಇಲ್ಲಿದೆ!
ಇತ್ತೀಚಿನ ದಿನಗಳಲ್ಲಿ ಯುವಕರಲ್ಲಿ ಮರೆವು ಮತ್ತು ಏಕಾಗ್ರತೆಯ ಕೊರತೆಯಂತಹ ಬ್ರೈನ್ ಫಾಗ್ (Brain Fog) ಸಮಸ್ಯೆಗಳು ಹೆಚ್ಚಾಗುತ್ತಿವೆ. ಒತ್ತಡ, ಡಿಜಿಟಲ್ ಸಾಧನಗಳ ಅತಿಯಾದ ಬಳಕೆ ಮತ್ತು ನಿದ್ರಾಹೀನತೆ ಇದಕ್ಕೆ ಪ್ರಮುಖ ಕಾರಣಗಳು. ಇದು ಒಂದು ಕಾಯಿಲೆಯಲ್ಲದಿದ್ದರೂ, ನಿರ್ಲಕ್ಷಿಸಿದರೆ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಮೊಬೈಲ್ ಬಳಕೆಯನ್ನು ಕಡಿಮೆ ಮಾಡುವುದು, ಉತ್ತಮ ಆಹಾರ, ಸಾಕಷ್ಟು ನಿದ್ರೆ ಮತ್ತು ಸಾಮಾಜಿಕ ಜೀವನದ ಮೂಲಕ ಬ್ರೈನ್ ಫಾಗ್ ಅನ್ನು ಪರಿಣಾಮಕಾರಿಯಾಗಿ ತಡೆಗಟ್ಟಬಹುದು. ಬ್ರೈನ್ ಫಾಗ್ (Brain Fog) ಕಾರಣಗಳು, ಲಕ್ಷಣಗಳು ಮತ್ತು […]
ಗ್ರಾಹಕರಿಗೆ ಗುಡ್ ನ್ಯೂಸ್: ಇನ್ನು ಮುಂದೆ 10ರೂ. ಪ್ಯಾಕ್ ನಲ್ಲೂ ನಂದಿನಿ ಹಾಲು, ಮೊಸರು
ಬೆಂಗಳೂರು: ಕೆಎಂಎಫ್ ನಂದಿನಿಯಿಂದ ಗ್ರಾಹಕರಿಗೆ ಸಿಹಿ ಸುದ್ದಿ ಸಿಕ್ಕಿದೆ. ಇನ್ನು ಮುಂದೆ ನಂದಿನಿ ಹಾಲು ಮತ್ತು ಮೊಸರು 10 ರೂಪಾಯಿ ಪ್ಯಾಕೆಟ್ ನಲ್ಲೂ ಸಿಗಲಿದೆ. 10 ರೂ.ಮೌಲ್ಯದ ಹಾಲು, ಮೊಸರಿನ ಪ್ಯಾಕೆಟ್ ಗಳೊಂದಿಗೆ ಮೀಡಿಯಂ ಫ್ಯಾಟ್ ಇರುವ ಪನ್ನೀರ್, ಹೈ ಅರೋಮ ತುಪ್ಪ, ಪ್ರೊ ಬಯಾಟಿಕ್, ಮಾವಿನ ಲಸ್ಸಿ, ಡೇರಿ ವೈಟ್ನರ್ ಸೇರಿದಂತೆ ಒಟ್ಟು 10 ಹೊಸ ಉತ್ಪನ್ನಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸೌಧದಲ್ಲಿ ಶುಕ್ರವಾರ ಬಿಡುಗಡೆ ಮಾಡಿದ್ದಾರೆ. ಕೆಎಂಎಫ್ ನಂದಿನಿ ಬ್ರಾಂಡ್ ನ ಹಾಲು 160 ಎಂಎಲ್ […]

25 C