SENSEX
NIFTY
GOLD
USD/INR

Weather

21    C

ಡಿಜಿಟಲ್ ಸುದ್ದಿ ಮೂಲಗಳು

... ...View News by News Source

ಜೈಲುಗಳ ಮೇಲೆ ನಿಗಾ: ಕಮಾಂಡ್ ಸೆಂಟರ್ ಗೆ ಚಾಲನೆ: 8 ಕೇಂದ್ರ ಜೈಲುಗಳು ಮತ್ತು 4 ಜಿಲ್ಲಾ ಜೈಲುಗಳ ಮೇಲೆ 24/7 ಕಣ್ಗಾವಲು

ಬೆಂಗಳೂರು: ರಾಜ್ಯದ ಜೈಲುಗಳ ಮೇಲೆ ನಿಗಾ ವಹಿಸಲು ನೂತನ ಕಮಾಂಡ್ ಸೆಂಟರ್ ಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಚಾಲನೆ ನೀಡಿದ್ದಾರೆ. ಜೈಲುಗಳಲ್ಲಿ ನಡೆಯುತ್ತಿರುವ ಮಾದಕ ವಸ್ತುಗಳ ಸರಬರಾಜು, ಮದ್ಯ ತಯಾರಿಕೆ, ಅಕ್ರಮವಾಗಿ ಹುಟ್ಟುಹಬ್ಬ ಆಚರಣೆ ಸೇರಿದಂತೆ ಕಾನೂನುಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕಮಾಂಡ್ ಸೆಂಟರ್ ಗೆ ಚಾಲನೆ ನೀಡಲಾಗಿದೆ. ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ಸೇರಿದಂತೆ ರಾಜ್ಯದ ವಿವಿಧ ಜೈಲುಗಳಲ್ಲಿ ಇತ್ತೀಚೆಗೆ ನಡೆದ ಕೆಲ ಅಕ್ರಮಗಳು ಭಾರಿ ಸುದ್ದಿಯಾಗಿದ್ದವು, ಇದರ ಬೆನ್ನಲ್ಲೇ ಕಮಾಂಡ್ ಸೆಂಟರ್ ಆರಂಭವಾಗಿದ್ದು, […]

ಕನ್ನಡ ದುನಿಯಾ 31 Jan 2026 9:32 pm

BREAKING: ಫಿಲಂ ಚೇಂಬರ್ ಅಧ್ಯಕ್ಷರಾಗಿ ನಟಿ ಜಯಮಾಲಾ ಆಯ್ಕೆ: ಭಾ.ಮಾ. ಹರೀಶ್ ವಿರುದ್ಧ ಗೆಲುವು

ಬೆಂಗಳೂರು: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ(ಫಿಲಂ ಚೇಂಬರ್) ನೂತನ ಅಧ್ಯಕ್ಷರಾಗಿ ಹಿರಿಯ ನಟಿ ಜಯಮಾಲಾ ಆಯ್ಕೆಯಾಗಿದ್ದಾರೆ. 170 ಮತಗಳ ಅಂತರದಿಂದ ನಟಿ ಜಯಮಾಲಾ ಗೆಲುವು ಸಾಧಿಸಿದ್ದಾರೆ. ಭಾ.ಮಾ. ಹರೀಶ್ ಅವರ ವಿರುದ್ಧ ಜಯಮಾಲಾ ಗೆಲುವು ಸಾಧಿಸಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಒಟ್ಟು 813 ಮತಗಳು ಚಲಾವಣೆ ಆಗಿದ್ದು, ಅವುಗಳಲ್ಲಿ 512 ಮತಗಳನ್ನು ಜಯಮಾಲಾ ಪಡೆದುಕೊಂಡು ಗೆಲುವು ಸಾಧಿಸಿದ್ದಾರೆ. ಆ ಮೂಲಕ ಮುಂದಿನ ಅವಧಿಗೆ ವಾಣಿಜ್ಯ ಮಂಡಳಿ ಅಧ್ಯಕ್ಷೆಯಾಗಿದ್ದಾರೆ. ಅವರು ಎರಡನೇ ಬಾರಿ ಫಿಲಂ ಚೇಂಬರ್​​ನ ಅಧ್ಯಕ್ಷರಾಗಲಿದ್ದಾರೆ. 2008ರಲ್ಲಿ ಅವರು […]

ಕನ್ನಡ ದುನಿಯಾ 31 Jan 2026 9:27 pm

ದೇವಸ್ಥಾನದ ಆವರಣದಲ್ಲೇ ಗಾಂಜಾ ಗಿಡ ಬೆಳೆದಿದ್ದ ಅರ್ಚಕ ಅರೆಸ್ಟ್: ಹೂವಿನ ತೋಟದ ನೆಪದಲ್ಲಿ ಗಾಂಜಾ ತೋಟ

ಸಂಗಾರೆಡ್ಡಿ(ತೆಲಂಗಾಣ): ದೇವಾಲಯದ ಆವರಣದಲ್ಲಿ ಗಾಂಜಾ ಬೆಳೆದು ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಸಂಗರೆಡ್ಡಿ ಜಿಲ್ಲೆಯ ದೇವಾಲಯದ ಅರ್ಚಕರೊಬ್ಬರನ್ನು ಶನಿವಾರ ಬಂಧಿಸಲಾಗಿದೆ. ಸಂಗರೆಡ್ಡಿ ಜಿಲ್ಲೆಯ ನಾರಾಯಣಖೇಡ್ ಮಂಡಲದ ಪಂಚಗಮ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. 48 ವರ್ಷದ ಆವುತಿ ನಾಗಯ್ಯ ಎಂಬ ಆರೋಪಿ ದೇವಸ್ಥಾನದ ಅರ್ಚಕನಾಗಿ ಕೆಲಸ ಮಾಡುತ್ತಿದ್ದ ಮತ್ತು ಸ್ಥಳೀಯ ಗ್ರಾಮಸ್ಥರಲ್ಲಿ ತನ್ನನ್ನು ತಾನು ಆಧ್ಯಾತ್ಮಿಕ ಗುರು ಎಂದು ಬಿಂಬಿಸಿಕೊಂಡಿದ್ದ. ಅಕ್ರಮ ಗಾಂಜಾ ಕೃಷಿ ಮತ್ತು ವಿತರಣಾ ಕಾರ್ಯಾಚರಣೆಯನ್ನು ನಡೆಸುತ್ತಿದ್ದ ಆರೋಪದ ಮೇಲೆ ಡಿಟಿಎಫ್ ಸಂಗರೆಡ್ಡಿ ತಂಡವು […]

ಕನ್ನಡ ದುನಿಯಾ 31 Jan 2026 8:54 pm

ಪಂಪ್ ದುರಸ್ತಿಗೆ ಬಾವಿಗೆ ಇಳಿದ ವ್ಯಕ್ತಿ ನೀರಲ್ಲಿ ಮುಳುಗಿ ಸಾವು

ಉಡುಪಿ: ಪಂಪ್ ದುರಸ್ತಿ ಮಾಡಲು ಬಾವಿಗೆ ಇಳಿದ ವ್ಯಕ್ತಿ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ನೀರಲ್ಲಿ ಮುಳುಗಿ ಮೃತಪಟ್ಟ ಘಟನೆ ಕುಂದಾಪುರ ಸಮೀಪ ವಡೇರಾ ಹೋಬಳಿಯ ಬಿಸಿ ರೋಡ್ ಬಳಿ ನಡೆದಿದೆ. ವಡೇರಾ ಹೋಬಳಿ ನಿವಾಸಿ ನಾಗರಾಜ್(51) ಮೃತಪಟ್ಟವರು ಎಂದು ಹೇಳಲಾಗಿದೆ. ಮನೆಯ ಬಾವಿಯ ಸಬ್ ಮರ್ಸಿಬಲ್ ಪಂಪ್ ರಿಪೇರಿ ಮಾಡಲು ಬಾವಿಗೆ ನಾಗರಾಜ್ ಅವರು ಇಳಿದಿದ್ದ ವೇಳೆ ಕಾಲು ಜಾರಿ ಬಿದ್ದು ನೀರಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ […]

ಕನ್ನಡ ದುನಿಯಾ 31 Jan 2026 8:43 pm

ವಕ್ಫ್ ಆಸ್ತಿಗಳ ನಿರ್ವಹಣೆ ಪಾರದರ್ಶಕ, ಜನಸ್ನೇಹಿ, ಜವಾಬ್ದಾರಿಯುತವಾಗಿಸಲು ಸರ್ಕಾರ ಮಹತ್ವದ ಕ್ರಮ

ನವದೆಹಲಿ: ಸರ್ಕಾರವು UMEED ಪೋರ್ಟಲ್‌ನಲ್ಲಿ ಸರ್ವೆ ಮಾಡ್ಯೂಲ್ ಮತ್ತು ವಕ್ಫ್ ಆಸ್ತಿ ಗುತ್ತಿಗೆ ಮಾಡ್ಯೂಲ್ ಅನ್ನು ಪ್ರಾರಂಭಿಸಿದೆ. ವಕ್ಫ್ ಆಸ್ತಿಗಳ ನಿರ್ವಹಣೆಯನ್ನು ಪಾರದರ್ಶಕ, ಜನಸ್ನೇಹಿ ಮತ್ತು ಜವಾಬ್ದಾರಿಯುತವಾಗಿಸಲು ಸರ್ಕಾರವು UMEED ಪೋರ್ಟಲ್‌ನಲ್ಲಿ ಸರ್ವೆ ಮಾಡ್ಯೂಲ್ ಮತ್ತು ವಕ್ಫ್ ಆಸ್ತಿ ಗುತ್ತಿಗೆ ಮಾಡ್ಯೂಲ್ ಅನ್ನು ಪ್ರಾರಂಭಿಸಿದೆ. ಪೋರ್ಟಲ್‌ ನಲ್ಲಿ ವಕ್ಫ್ ಆಸ್ತಿಗಳ ಸಮೀಕ್ಷೆಗೆ ಸಂಬಂಧಿಸಿದ ಮಾಹಿತಿಯನ್ನು ಸೆರೆಹಿಡಿಯಲು, ನಿರ್ವಹಿಸಲು ಮತ್ತು ನವೀಕರಿಸಲು ಸರ್ವೆ ಮಾಡ್ಯೂಲ್ ಸಮಗ್ರ ಡಿಜಿಟಲ್ ಚೌಕಟ್ಟನ್ನು ಒದಗಿಸುತ್ತದೆ ಎಂದು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ ಹೇಳಿದೆ. ವಕ್ಫ್ […]

ಕನ್ನಡ ದುನಿಯಾ 31 Jan 2026 8:34 pm

ಕೆಲಸದ ನಿರೀಕ್ಷೆಯಲ್ಲಿದ್ದವರಿಗೆ ಮುಖ್ಯ ಮಾಹಿತಿ: ಕೋಟೆನಾಡಿನಲ್ಲಿ ನಾಳೆ ಬೃಹತ್ ಉದ್ಯೋಗ ಮೇಳ: 100ಕ್ಕೂ ಹೆಚ್ಚು ಕಂಪನಿಗಳು ಭಾಗಿ

ಚಿತ್ರದುರ್ಗ: ವಿದ್ಯಾಭ್ಯಾಸ ಮುಗಿಸಿ, ವಿದ್ಯಾರ್ಹತೆಗೆ ತಕ್ಕಂತೆ ಕೆಲಸ ಹುಡುಕಿ ದುಡಿಮೆಯ ಜೀವನ ಪ್ರಾರಂಭಿಸುವ ನಿರೀಕ್ಷೆಯಲ್ಲಿರುವ ಉದ್ಯೋಗಾಕಾಂಕ್ಷಿಗಳಿಗೆ ಸೂಕ್ತ ವೇದಿಕೆ ಕಲ್ಪಿಸಿ ಕೊಡುವ ನಿಟ್ಟಿನಲ್ಲಿ ಇದೇ ಫೆಬ್ರವರಿ 1 ರಂದು ಚಿತ್ರದುರ್ಗ ನಗರದ ಸರ್ಕಾರಿ ಕಲಾ ಕಾಲೇಜು ಆವರಣದಲ್ಲಿ ಬೃಹತ್ ಉದ್ಯೋಗ ಮೇಳಕ್ಕೆ ವೇದಿಕೆ ಸಜ್ಜುಗೊಂಡಿದೆ. ನಿರುದ್ಯೋಗಿ ಯುವಕ ಯುವತಿಯರಿಗೆ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿರುವ ಬೃಹತ್ ಉದ್ಯೋಗ ಮೇಳವು ಯುವ ಜನತೆಗೆ ಸುವರ್ಣಾವಕಾಶವಾಗಿದೆ. ನಗರದ […]

ಕನ್ನಡ ದುನಿಯಾ 31 Jan 2026 8:20 pm

ನಾಳೆ ನಿರ್ಮಲಾ ಸೀತಾರಾಮನ್ ಸತತ 9ನೇ ಬಜೆಟ್ ಮಂಡನೆ

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1ರಂದು ಬಜೆಟ್ ಮಂಡಿಸಲಿದ್ದಾರೆ. ಅವರು ಸತತ 9ನೇ ಬಾರಿಗೆ ಬಜೆಟ್ ಮಂಡಿಸಲಿದ್ದಾರೆ. 2019ರ ಜುಲೈನಲ್ಲಿ ಮೊದಲ ಪೂರ್ಣಾವಧಿ ಹಣಕಾಸು ಸಚಿವರಾಗಿ ಅಧಿಕಾರ ವಹಿಸಿಕೊಂಡಿದ್ದ ನಿರ್ಮಲಾ ಸೀತಾರಾಮನ್ 2024ರ ಫೆಬ್ರವರಿಯ ಮಧ್ಯಂತರ ಬಜೆಟ್ ಜೊತೆಗೆ ಸತತ 8 ಬಜೆಟ್ ಮಂಡಿಸಿದ್ದು, ಫೆಬ್ರವರಿ 1ರ ನಾಳೆ 9ನೇ ಬಾರಿಗೆ ಬಜೆಟ್ ಮಂಡಿಸಲಿದ್ದಾರೆ. ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಅವರು ಅತಿ ಹೆಚ್ಚು ಕೇಂದ್ರ ಬಜೆಟ್ ಮಂಡಿಸಿದ ದಾಖಲೆ ಹೊಂದಿದ್ದಾರೆ. ಅವರು […]

ಕನ್ನಡ ದುನಿಯಾ 31 Jan 2026 8:01 pm

ಐತಿಹಾಸಿಕ ಸಾಗರ ಮಾರಿಕಾಂಬ ಜಾತ್ರೆಗೆ ವಿಶೇಷ ರೈಲು ಸೇವೆ

ಶಿವಮೊಗ್ಗ ಜಿಲ್ಲೆ ಸಾಗರದ ಐತಿಹಾಸಿಕ ಮಾರಿಕಾಂಬ ದೇವಿ ಜಾತ್ರೆಗೆ ಫೆಬ್ರವರಿ 3ರಿಂದ 10 ರವರೆಗೆ ವಿಶೇಷ ರೈಲು ಸೌಲಭ್ಯ ಕಲ್ಪಿಸಲಾಗಿದೆ. ಯಶವಂತಪುರದಿಂದ ತಾಳಗುಪ್ಪಕ್ಕೆ ಮತ್ತು ತಾಳಗುಪ್ಪದಿಂದ ಯಶವಂತಪುರಕ್ಕೆ ರೈಲು ಸಂಚರಿಸಲಿದ್ದು ಸೌಲಭ್ಯ ಸದುಪಯೋಗ ಪಡೆದುಕೊಳ್ಳುವಂತೆ ಸಂಸದ ಬಿ.ವೈ.ರಾಘವೇಂದ್ರ ಮನವಿ ಮಾಡಿದ್ದಾರೆ. ರೈಲು ಸಂಖ್ಯೆ 06586(ತಾಳಗುಪ್ಪ – ಯಶವಂತಪುರ): ಫೆ.4, ಫೆ.6, ಫೆ.9, ಫೆ.11ರಂದು ತಾಳಗುಪ್ಪದಿಂದ ಬೆಳಗ್ಗೆ 9.30ಕ್ಕೆ ಹೊರಟು ಸಂಜೆ 5.15ಕ್ಕೆ ಯಶವಂತಪುರ ತಲುಪಲಿದೆ. ರೈಲು ಸಂಖ್ಯೆ 06588 (ತಾಳಗುಪ್ಪ – ಯಶವಂತಪುರ): ಫೆ.7ರಂದು ಬೆಳಗ್ಗೆ 9.30ಕ್ಕೆ […]

ಕನ್ನಡ ದುನಿಯಾ 31 Jan 2026 7:35 pm

BIG NEWS: ಮಹಾರಾಷ್ಟ್ರ ಮೊದಲ ಮಹಿಳಾ ಡಿಸಿಎಂ ಆಗಿ ಸುನೇತ್ರಾ ಪವಾರ್ ಪ್ರಮಾಣವಚನ ಸ್ವೀಕಾರ

ಮುಂಬೈ: ಮಹಾರಾಷ್ಟ್ರ ಮೊದಲ ಉಪಮುಖ್ಯಮಂತ್ರಿಯಾಗಿ ಸುನೇತ್ರಾ ಪವಾರ್ ಪ್ರಮಾಣವಚನ ಸ್ವೀಕರಿಸಿದ್ದಾರೆ. ಕೆಲ ದಿನಗಳ ಹಿಂದೆ ವಿಮಾನ ದುರಂತದಲ್ಲಿ ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಮೃತಪಟ್ಟಿದ್ದರು. ಅವರ ನಿಧನದಿಂದ ತೆರವಾಗಿದ್ದ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಹುದ್ದೆಗೆ ಪತ್ನಿ ಸುನೇತ್ರಾ ಪವಾರ್ ಹೆಸರು ಕೇಳಿಬಂದಿತ್ತು. ಇಂದು ನಡೆದ ಎನ್ ಸಿಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಸುನೇತ್ರಾ ಪವಾರ್ ಅವರನ್ನು ಪಕ್ಷದ ನಾಯಕಿಯನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿತ್ತು. ಬಳಿಕ ಲೋಕಭವನದಲ್ಲಿ ನಡೆದ ಸರಳ ಪದಗ್ರಹಣ ಸಮಾರಂಭದಲ್ಲಿ ಮಹಾರಾಷ್ಟ್ರ ರಾಜ್ಯಪಾಲ ಆಚಾರ್ಯ ದೇವವ್ರತ್ ಅವರು […]

ಕನ್ನಡ ದುನಿಯಾ 31 Jan 2026 6:16 pm

ಸರ್ಕಾರಿ ಕಚೇರಿಗಳಲ್ಲಿ ಪ್ಲಾಸ್ಟಿಕ್ ಬಾಟಲ್ ಬಳಕೆಗೆ ನಿರ್ಬಂಧ: ಕಾರ್ಯಕ್ರಮ-ಸಭೆ-ಸಮಾರಂಭಗಳಲ್ಲಿ KMF ನಂದಿನಿ ಉತ್ಪನ್ನಗಳ ಬಳಕೆಗೆ ಆದೇಶ

ಬೆಂಗಳೂರು: ರಾಜ್ಯ ಸರ್ಕಾರ ಮಹತ್ವದ ಆದೇಶವೊಂದನ್ನು ಹೊರಡಿಸಿದೆ. ಇನ್ಮುಂದೆ ಸರ್ಕಾರಿ ಕಚೇರಿಗಳಲ್ಲಿ ಪ್ಲಾಸ್ಟಿಕ್ ಬಾಟಲ್ ಗಳನ್ನು ಬಳಸುವಂತಿಲ್ಲ. ಪರಿಸರ ಸ್ನೇಹಿ ಪರಿಕರಗಳನ್ನು ಮಾತ್ರ ಬಳಸಬೇಕು. ಮಾತ್ರವಲ್ಲ ಯಾವುದೇ ಕಾರ್ಯಕ್ರಮ, ಸಭೆ-ಸಮಾರಂಭಗಳಲ್ಲಿ ಕೆ.ಎಂ.ಎಫ್ ನಂದಿನಿ ಉತ್ಪನ್ನಗಳನ್ನೇ ಬಳಸುವಂತೆ ಆದೇಶ ಹೊರಡಿಸಿದೆ. ರಾಜ್ಯಾದ್ಯಂತ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಪರಿಸರ ಸ್ನೇಹಿ ಕ್ರಮಗಳನ್ನು ಅಳವಡಿಸಿಕೊಳ್ಳುವ ದೃಷ್ಟಿಯಿಂದ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಹಾಗೂ ಸರ್ಕಾರಿ ಕಾರ್ಯಕ್ರಮ, ಸಭೆ-ಸಮಾರಂಭಗಳಲ್ಲಿ ಕುಡಿಯುವ ನೀರಿನ ಪ್ಲಾಸ್ಟಿಕ್ ಬಾಟಲ್ ಗಳ ಬದಲಾಗಿ ಪರಿಸರ ಸ್ನೇಹಿ ವಸ್ತುಗಳಿಂದ ತಯಾರಿಸಿದ ಪರಿಕರಗಳನ್ನು […]

ಕನ್ನಡ ದುನಿಯಾ 31 Jan 2026 6:01 pm

ಶಾಲೆಯಲ್ಲಿ ವಿದ್ಯುತ್ ತಂತಿ ತಗುಲಿ ದುರಂತ: 5ನೇ ತರಗತಿ ವಿದ್ಯಾರ್ಥಿನಿ ದುರ್ಮರಣ

ರಾಯಚೂರು: ಕುಡಿಯಲು ನೀರು ತರಲು ಹೋಗಿದ್ದಾಗ ವಿದ್ಯುತ್ ತಂತಿ ತಗುಲಿ ವಿದ್ಯಾರ್ಥಿನಿ ಸಾವನ್ನಪ್ಪಿರುವ ಧಾರುಣ ಘಟನೆ ರಾಯಚೂರಿನಲ್ಲಿ ನಡೆದಿದೆ. ಇಲ್ಲಿನ ಸಿಂಧನೂರು ತಾಲೂಕಿನ ಕುರಕಂದಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಈ ದುರಂತ ಸಂಭವಿಸಿದೆ. ಶಾಲೆಯಲ್ಲಿ ವಿರಾಮದ ಸಂದರ್ಭದಲ್ಲಿ ಕುಡಿಯಲು ನೀರು ತರಲೆಂದು ವಿದ್ಯಾರ್ಥಿನಿ ತೆರಳಿದ್ದಳು. ಈ ವೇಳೆ ವಿದ್ಯುತ್ ತಂತಿ ತಗುಲಿ ಗಂಭೀರವಾಗಿ ಗಾಯಗೊಂಡಿದ್ದಳು. ತಕ್ಷಣ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾಳೆ. 5 ತರಗತಿಯ ವಿದ್ಯಾರ್ಥಿನಿ ತನುಶ್ರೀ ಮೃತ ಬಾಲಕಿ. ಮಗಳನ್ನು […]

ಕನ್ನಡ ದುನಿಯಾ 31 Jan 2026 5:38 pm

BREAKING: ಉದ್ಯಮಿ ಸಿ.ಜೆ.ರಾಯ್ ಆತ್ಮಹತ್ಯೆ ಪ್ರಕರಣ: ತನಿಖೆಗೆ SIT ರಚನೆ

ಬೆಂಗಳೂರು: ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಪಿಡೆಂಟ್ ಗ್ರೂಪ್ ಚೇರ್ಮನ್ ಡಾ.ಸಿ.ಜೆ.ರಾಯ್ ಆತ್ಮಹತ್ಯೆ ಪ್ರಕರಣದ ತನಿಖೆಗೆ ಎಸ್ಐಟಿ ರಚನೆ ಮಾಡಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಪರಮೇಶ್ವರ್, ಉದ್ಯಮಿ ಸಿ.ಜೆ.ರಾಯ್ ಆತ್ಮಹತ್ಯೆ ಪ್ರಕರಣದ ತನಿಖೆಗೆ ಹೆಚ್ಚುವರಿ ಪೊಲೀಸ್ ಆಯುಕ್ತ ವಂಶಿಕೃಷ್ಣ ನೇತೃತ್ವದಲ್ಲಿ ಎಸ್ ಐಟಿ ರಚನೆ ಮಾಡಲಾಗಿದೆ. ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಕೂಡ ಈ ತಂಡದಲ್ಲಿ ಇರಲಿದ್ದಾರೆ ಎಂದು ತಿಳಿಸಿದರು. ಸಿ.ಜೆ.ರಾಯ್ ಆತ್ಮಹತ್ಯೆಗೆ ನಿಖರ ಕಾರಣಗಳೇನು? ಐಟಿ ದಾಳಿಗೆ […]

ಕನ್ನಡ ದುನಿಯಾ 31 Jan 2026 5:11 pm

BIG News: ಐಸಿಸಿ ಟಿ-20 ವಿಶ್ವಕಪ್ ಬಹಿಷ್ಕಾರ ಮಾಡಲಿದೆ ಪಾಕಿಸ್ತಾನ!

ಭಾರತದಲ್ಲಿ ವಿಶ್ವಕಪ್ ಟಿ-20 ಪಂದ್ಯಗಳನ್ನು ಆಡುವುದಿಲ್ಲ ಎಂದು ಹಠ ಹಿಡಿದಿದ್ದ ಬಾಂಗ್ಲಾದೇಶವನ್ನು ಐಸಿಸಿ ಟೂರ್ನಿಯಿಂದಲೇ ಹೊರ ಹಾಕಿದೆ. ಬಾಂಗ್ಲಾದೇಶ ಜಾಗಕ್ಕೆ ಸ್ಕಾಟ್‌ಲ್ಯಾಂಡ್ ಬಂದಿದೆ. ಈಗ ಪಾಕಿಸ್ತಾನ ಹೊಸ ಕ್ಯಾತೆ ತೆಗೆದಿದ್ದು, ಟೂರ್ನಿಗೆ ಬಹಿಷ್ಕಾರ ಹಾಕುವ ನಿರೀಕ್ಷೆ ಇದೆ. ಟಿ-20 ವಿಶ್ವಕಪ್ ಟೂರ್ನಿಯು ಫೆಬ್ರವರಿ 7ಕ್ಕೆ ಆರಂಭವಾಗಲಿದೆ. ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆಯೋಜಿಸಲಿರುವ ಈ ಟೂರ್ನಿಯಲ್ಲಿ ಭಾರತ-ಪಾಕಿಸ್ತಾನ ಕೊಲಂಬೋದಲ್ಲಿ ಪಂದ್ಯವನ್ನು ಆಡಲಿವೆ. ಸಂಪ್ರದಾಯಿಕ ಎದುರಾಳಿಗಳ ಪಂದ್ಯ ನೋಡಲು ಕಾಯುವ ಅಭಿಮಾನಿಗಳಿಗೆ ನಿರಾಸೆ ಮೂಡಿಸುವ ರೀತಿ ಪಾಕಿಸ್ತಾನ ವರ್ತಿಸುತ್ತಿದೆ. […]

ಕನ್ನಡ ದುನಿಯಾ 31 Jan 2026 4:58 pm

ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು ಆದೇಶಕ್ಕೆ ಹೈಕೋರ್ಟ್ ತಡೆ

ಬೆಂಗಳೂರು: ಧರ್ಮಸ್ಥಳ ಬುರುಡೆ ಪ್ರಕರಣದ ಆರೋಪಿಗಳಲ್ಲಿ ಒಬ್ಬರಾದ ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಮಹೇಶ್ ಶೆಟ್ಟಿ ತಿಮರೋಡಿಯನ್ನು ರಾಯಚೂರು ಜಿಲ್ಲೆಯ ಮಾನ್ವಿಗೆ ಗಡಿಪಾರು ಮಾಡಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಸಹಾಯಕ ಕಮಿಷ್ನರ್ ಆದೇಶ ಹೊರಡಿಸಿದ್ದರು. ಗಡಿಪಾರು ಆದೇಶ ಪ್ರಶ್ನಿಸಿ ಮಹೇಶ್ ತಿಮರೋಡಿ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಇದೀಗ ಪುತ್ತೂರು ಸಹಾಯಕ ಕಮಿಷ್ನರ್ ಹೊರಡಿಸಿದ್ದ ಗಡಿಪಾರು ಆದೇಶಕ್ಕೆ ಹೈಕೋರ್ಟ್ ತಡೆ ನೀಡಿದೆ. ಅಲ್ಲದೇ ಸಹಾಯಕ ಕಮಿಷನರ್ ಆದೇಶ ಸೂಕ್ತವಲ್ಲ ಎಂದು […]

ಕನ್ನಡ ದುನಿಯಾ 31 Jan 2026 4:53 pm

ಭೀಮಸಮುದ್ರ ಗಣಿಯಲ್ಲಿ ಲಾರಿ ಅಪಘಾತ: ಸೂಪರ್ ವೈಸರ್ ಸ್ಥಳದಲ್ಲೇ ಸಾವು

ಚಿತ್ರದುರ್ಗ: ಭೀಮಸಮುದ್ರ ಬಳಿ ಗಣಿಯಲ್ಲಿ ಲಾರಿ ಡಿಕ್ಕಿಯಾಗಿ ಸೂಪರ್ ವೈಸರ್ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ. 49 ವರ್ಷದ ಚಂದ್ರಶೇಖರ್ ಮೃತ ದುರ್ದೈವಿ. ಲಾರಿ ಅಪಘಾತದಲ್ಲಿ ಚಂದ್ರಶೇಖರ್ ಗಣಿಯಲ್ಲಿಯೇ ಸಾವನ್ನಪ್ಪಿದ್ದಾರೆ. ಆದರೆ ವಿಷಯವನ್ನು ಕುಟುಂಬದಿಂದ ಮುಚ್ಚಿಡಲು ಗಣಿ ಕಂಪನಿಯವರು ಯತ್ನಿಸಿದ್ದರು ಎಂದು ಆರೋಪಿಸಲಾಗಿದೆ. ಗಣಿಯಲ್ಲಿ ಕೆಲಸ ಮಾಡುವ ಸಿಬ್ಬಂದಿಗಳುಗೆ ಯಾವುದೇ ಸುರಕ್ಷತೆ ಇಲ್ಲ. ಅಮಾಯಕ ಜೀವಗಳು ಬಲಿಯಾಗುತ್ತಿವೆ ಎಂದು ಮೃತರ ಕುಟುಂಬ ಆಕ್ರೋಶ ವ್ಯಕ್ತಪಡಿಸಿದೆ. ತಪ್ಪಿಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಕುಟುಂಬ ಆಗ್ರಹಿಸಿದೆ. […]

ಕನ್ನಡ ದುನಿಯಾ 31 Jan 2026 4:15 pm

SHOCKING : ಬಲವಂತದ ಮತಾಂತರ ಆರೋಪ : ‘ಸೆಲ್ಪಿ’ವೀಡಿಯೊ ಮಾಡಿ ಯುವಕ ಆತ್ಮಹತ್ಯೆ |WATCH VIDEO

ಕಾನ್ಪುರ: ಮತಾಂತರ ಮಾಡುವಂತೆ ತನಗೆ ಒತ್ತಡ ಹೇರಲಾಗುತ್ತಿದೆ ಎಂದು ವಿಡಿಯೋದಲ್ಲಿ ಗಂಭೀರ ಆರೋಪ ಮಾಡಿ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ. ಪನಕಿ ಪೊಲೀಸ್ ಠಾಣಾ ವ್ಯಾಪ್ತಿಯ ರತನ್ಪುರದಲ್ಲಿ ಈ ದುರಂತ ಸಂಭವಿಸಿದೆ. ಮೃತ ಯುವಕ ಆತ್ಮಹತ್ಯೆ ಮಾಡಿಕೊಳ್ಳುವ ಕೆಲವೇ ಕ್ಷಣಗಳ ಮೊದಲು ಸ್ವತಃ ಒಂದು ವಿಡಿಯೋವನ್ನು ಚಿತ್ರೀಕರಿಸಿದ್ದಾನೆ. ಈ ವಿಡಿಯೋದಲ್ಲಿ ತನಗೆ ಮತಾಂತರಗೊಳ್ಳುವಂತೆ ಕೆಲವು ವ್ಯಕ್ತಿಗಳು ನಿರಂತರವಾಗಿ ಮಾನಸಿಕ ಹಿಂಸೆ ಮತ್ತು ಒತ್ತಡ ನೀಡುತ್ತಿದ್ದಾರೆ ಎಂದು ಆತ ಹೇಳಿಕೊಂಡಿದ್ದಾನೆ. ಯುವಕನ ಸಾವಿನ […]

ಕನ್ನಡ ದುನಿಯಾ 31 Jan 2026 4:12 pm

Namma Metro: ಮೆಟ್ರೋದಲ್ಲಿ ಪ್ರಯಾಣಿಕರು ಮಾಡುವ ತಪ್ಪುಗಳ ಪಟ್ಟಿ

Namma Metro ಬೆಂಗಳೂರು ನಗರದ ಜನರ ಜೀವನಾಡಿ. ಪ್ರತಿದಿನ ಸುಮಾರು 8 ಲಕ್ಷ ಜನರು ಮಟ್ರೋ ರೈಲಿನಲ್ಲಿ ಪ್ರಯಾಣ ಮಾಡುತ್ತಾರೆ. ನಗರದಲ್ಲಿ ಸದ್ಯ 3 ಮಾರ್ಗದಲ್ಲಿ ನಮ್ಮ ಮೆಟ್ರೋ ರೈಲುಗಳು ಸಂಚಾರವನ್ನು ನಡೆಸುತ್ತಿವೆ. ನಮ್ಮ ಮೆಟ್ರೋ ರೈಲಿನಲ್ಲಿ ಪ್ರಯಾಣ ಮಾಡುವಾಗ ಜನರು ನಿಯಮಗಳನ್ನು ಪಾಲನೆ ಮಾಡುತ್ತಿಲ್ಲ. ಈ ಕುರಿತು ಪ್ರಯಾಣಿಕರಿಗೆ ಜಾಗೃತಿ ಮೂಡಿಸಲಾಗುತ್ತಿದೆ. ಆದರೆ ಜನರು ತಪ್ಪುಗಳನ್ನು ಮಾಡುತ್ತಲೇ ಇದ್ದಾರೆ. ಆದ್ದರಿಂದ ಈಗ ಬಿಎಂಆರ್‌ಸಿಎಲ್ ಪ್ರಯಾಣಿಕರು ನಿಯಮಗಳನ್ನು ಪಾಲಿಸಲು ವಿಶೇಷ ಜಾಗೃತಿ ಅಭಿಯಾನವನ್ನು ನಡೆಸುತ್ತಿದೆ. ಅಲ್ಲದೇ ಪ್ರಯಾಣಿಕರು […]

ಕನ್ನಡ ದುನಿಯಾ 31 Jan 2026 4:04 pm

ದೈಹಿಕ ಸದೃಢತೆಯಷ್ಟೇ ಮಾನಸಿಕ ಆರೋಗ್ಯವೂ ಮುಖ್ಯ: ಮೆದುಳಿನ ಕಾಳಜಿಗೆ ಇಲ್ಲಿವೆ ಸಲಹೆಗಳು.

ಸಾಮಾನ್ಯವಾಗಿ ಯಾರನ್ನಾದರೂ ಆರೋಗ್ಯ ಹೇಗಿದೆ? ಎಂದು ಕೇಳಿದರೆ, ಅವರು ತಮ್ಮ ಜಿಮ್ ಕಸರತ್ತು ಅಥವಾ ದೇಹದ ತೂಕದ ಬಗ್ಗೆ ಹೇಳುತ್ತಾರೆ. ಆದರೆ, ನಿಜವಾದ ಆರೋಗ್ಯ ಎಂದರೆ ಕೇವಲ ಸಿಕ್ಸ್ ಪ್ಯಾಕ್ ಹೊಂದುವುದಲ್ಲ; ಬದಲಿಗೆ ನೆಮ್ಮದಿಯ ಮನಸ್ಸನ್ನು ಹೊಂದಿರುವುದು. ದುರದೃಷ್ಟವಶಾತ್, ಇಂದು ನಾವು ಶರೀರಕ್ಕೆ ನೀಡುವ ಪ್ರಾಮುಖ್ಯತೆಯನ್ನು ಮಾನಸಿಕ ಆರೋಗ್ಯಕ್ಕೆ (Mental Health) ನೀಡುತ್ತಿಲ್ಲ. ದೈಹಿಕ ಬಲಕ್ಕಿಂತ ಮನೋಬಲ ದೊಡ್ಡದು! ನಾವು ದೈಹಿಕವಾಗಿ ಎಷ್ಟೇ ಬಲಿಷ್ಠರಾಗಿದ್ದರೂ, ಮನಸ್ಸಿನಲ್ಲಿ ನೆಮ್ಮದಿ ಇಲ್ಲದಿದ್ದರೆ ಇಡೀ ಜೀವನವೇ ಅಸ್ತವ್ಯಸ್ತವಾಗುತ್ತದೆ. ದೈಹಿಕ ಆರೋಗ್ಯವು ನಮ್ಮನ್ನು […]

ಕನ್ನಡ ದುನಿಯಾ 31 Jan 2026 3:59 pm

1 ಲಕ್ಷ ರೂಪಾಯಿ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದ ವಿಲೇಜ್ ಅಕೌಂಟೆಂಟ್

ಶಿವಮೊಗ್ಗ: 1 ಲಕ್ಷ ರೂಪಾಯಿ ಲಂಚ ಪಡೆಯುತ್ತಿದ್ದಾಗಲೇ ಗ್ರಾಮ ಲೆಕ್ಕಾಧಿಕಾರಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ನಡೆದಿದೆ. ಚಿಕ್ಕಜಂಬೂರು ಗ್ರಾಮ ಲೆಕ್ಕಾಧಿಕಾರಿ ವಿಠಲ ಲೋಕಾಯುಕ್ತ ಬಲೆಗೆ ಬಿದ್ದವನು. ಶಿಕಾರಿಪುರ ಪಟ್ಟಣದ ಸರ್ಕಾರಿ ನೌಕರರ ಕ್ಯಾಂಟೀನ್ ನಲ್ಲಿ ಲಂಚದ ಹಣ ಸ್ವೀಕರಿಸುತ್ತಿದ್ದಾಗಲೇ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಜಂಬೂರಿನ ಜಿಕ್ರಿಯಾ ಬೇಗ್ ಎಂಬುವವರು ತನ್ನ ತಂದೆಯ ವಿಲ್ ಪತ್ರದಂತೆ ಜಮೀನಿನ ಖಾತೆ ಬದಲಾವಣೆಗೆ ಅರ್ಜಿ ಸಲ್ಲಿಸಿದ್ದರು. ಖಾತೆ ಬದಲಾವಣೆ […]

ಕನ್ನಡ ದುನಿಯಾ 31 Jan 2026 3:49 pm

EPF ಬ್ಯಾಲೆನ್ಸ್ ತಿಳಿಯಲು ಇನ್ನು ಆಫೀಸ್‌ಗೆ ಅಲೆಯಬೇಡಿ ಮನೆಯಲ್ಲೇ ಕುಳಿತು ಬ್ಯಾಲೆನ್ಸ್ ಚೆಕ್ ಮಾಡಲು ಇಲ್ಲಿದೆ ನಂಬರ್

ನೀವು ಸರ್ಕಾರಿ ಅಥವಾ ಖಾಸಗಿ ಸಂಸ್ಥೆಯ ಉದ್ಯೋಗಿಯೇ? ಹಾಗಿದ್ದರೆ ನಿಮ್ಮ ಭವಿಷ್ಯದ ಆರ್ಥಿಕ ಭದ್ರತೆಗೆ ಇರುವ ಅತಿ ದೊಡ್ಡ ಆಸರೆ ಎಂದರೆ ಅದು ನೌಕರರ ಭವಿಷ್ಯ ನಿಧಿ (EPF). ಕೇಂದ್ರ ಸರ್ಕಾರದ ಕಾರ್ಮಿಕರ ಭವಿಷ್ಯ ನಿಧಿ ಪ್ರಾಧಿಕಾರವು (EPFO) ನಿರ್ವಹಿಸುವ ಈ ಯೋಜನೆ, ಇಂದು ಕೋಟ್ಯಂತರ ಉದ್ಯೋಗಿಗಳ ಬದುಕಿಗೆ ಭದ್ರತೆ ನೀಡುತ್ತಿದೆ. ಏನಿದು ಇಪಿಎಫ್? ಪ್ರತಿ ತಿಂಗಳು ನಿಮ್ಮ ಸಂಬಳದಲ್ಲಿ ಸಣ್ಣ ಮೊತ್ತದ ಹಣ ಕಡಿತವಾಗಿ ಇಪಿಎಫ್ ಖಾತೆಗೆ ಜಮೆಯಾಗುತ್ತದೆ. ಅಷ್ಟೇ ಮೊತ್ತದ ಹಣವನ್ನು ನಿಮ್ಮ ಕಂಪನಿಯೂ […]

ಕನ್ನಡ ದುನಿಯಾ 31 Jan 2026 3:36 pm

BIG NEWS: ಸರ್ಕಾರಿ ಶಾಲೆಯಲ್ಲಿ ಕೆಮಿಕಲ್ ಸ್ಫೋಟ: ಓರ್ವ ವಿದ್ಯಾರ್ಥಿಗೆ ಗಂಭೀರ ಗಾಯ

ಬೆಂಗಳೂರು: ಬೀದರ್ ನ ಮೊಳಕೇರಾ ಗ್ರಾಮದಲ್ಲಿ ಅನುಮಾನಾಸ್ಪದ ವಸ್ತು ಸ್ಫೋಟಗೊಂಡು ವಿದ್ಯಾರ್ಥಿಗಳು ಸೇರಿ ಆರು ಜನರು ಗಾಯಗೊಂದಿರುವ ಘಟನೆ ಬೆನ್ನಲ್ಲೇ ದೇವನಹಳ್ಲಿಯಲ್ಲಿ ಸರ್ಕಾರಿ ಶಾಲೆಯಲ್ಲಿ ಕೆಮಿಕಲ್ ಸ್ಫೋಟಗೊಂಡು ವಿದ್ಯಾರ್ಥಿ ಗಾಯಗೊಂಡಿರುವ ಘಟನೆ ನಡೆದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ವಿಜಯಪುರ ಸರ್ಕಾರಿ ಉರ್ದು ಶಾಲೆಯಲ್ಲಿ ಈ ಘಟನೆ ನಡೆದಿದೆ. ಕೆಮಿಕಲ್ ಸ್ಫೋಟಗೊಂಡು 7ನೇ ತರಗತಿ ವಿದ್ಯಾರ್ಥಿಯೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾನೆ. ವಿದ್ಯಾರ್ಥಿ ಕಾರ್ಬನ್ ಕೆಮಿಕಲ್ ಶಾಲೆಗೆ ತಂಡಿದ್ದ. ಶೌಚಾಲಯದಲ್ಲಿ ಜಗ್ ನೀರಿಗೆ ಹಾಕಿ ಪ್ರಯೋಗ ಮಾಡಲು ಮುಂದಾಗಿದ್ದ. […]

ಕನ್ನಡ ದುನಿಯಾ 31 Jan 2026 3:32 pm

SHOCKING : ಅಯ್ಯೋ ಎಂತಹ ವಿಧಿ ! ಗಂಟಲಿನಲ್ಲಿ ‘ಬೋಂಡಾ’ಸಿಲುಕಿ ವ್ಯಕ್ತಿ ದುರ್ಮರಣ.!

ಸಾವು ಹೇಗೆ ಬೇಕಾದರೂ ಬರುತ್ತದೆ” ಎಂಬುದು ಬದುಕಿನ ಕಟು ಸತ್ಯ. ಇತ್ತೀಚಿನ ಘಟನೆಗಳನ್ನು ನೋಡಿದಾಗ, ಸಾವು ಕೇವಲ ವಯಸ್ಸಾದವರಿಗೆ ಅಥವಾ ಕಾಯಿಲೆ ಇರುವವರಿಗೆ ಮಾತ್ರ ಬರುವುದಿಲ್ಲ; ಅತ್ಯಂತ ಸಾಮಾನ್ಯ ಮತ್ತು ಅನಿರೀಕ್ಷಿತ ಸಂದರ್ಭಗಳಲ್ಲೂ ಸಾವು ಸಂಭವಿಸಬಹುದು ಎಂಬುದು ಸಾಬೀತಾಗುತ್ತಿದೆ.ಹೈದರಾಬಾದ್ನ ಮಧುರಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂತಹದೊಂದು ಅನಿರೀಕ್ಷಿತ ಮತ್ತು ಹೃದಯವಿದ್ರಾವಕ ಘಟನೆ ನಡೆದಿದೆ. ಟಿಫಿನ್ ಮಾಡಲು ಹೋದ ವ್ಯಕ್ತಿ ಶವವಾಗಿ ಮರಳಿದ್ದು, ಕುಟುಂಬದವರ ಆಕ್ರಂದನ ಹೇಳತೀರದಾಗಿದೆ. ಘಟನೆಯ ವಿವರರಹ್ಮತ್ನಗರದ ಎಸ್.ಪಿ.ಆರ್ ಹಿಲ್ಸ್ ನಿವಾಸಿಯಾದ ದಾಸರಿ ರಮೇಶ್ ಎಂಬುವವರು […]

ಕನ್ನಡ ದುನಿಯಾ 31 Jan 2026 3:29 pm

ಉದ್ಯೋಗ ವಾರ್ತೆ : ಭಾರತೀಯ ರೈಲ್ವೇ ಇಲಾಖೆಯಲ್ಲಿ 22,000 ಹುದ್ದೆಗಳಿಗೆ ಇಂದಿನಿಂದ ಅರ್ಜಿ ಸಲ್ಲಿಕೆ ಆರಂಭ |RRB recruitment 2026

ರೈಲ್ವೆ ನೇಮಕಾತಿ ಮಂಡಳಿ (RRB) ನಿರುದ್ಯೋಗಿಗಳಿಗೆ ಸಿಹಿ ಸುದ್ದಿ ನೀಡಿದೆ. ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ 22,000 ಗ್ರೂಪ್ ಡಿ (Group D) ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಲಾಗಿದ್ದು, ಅರ್ಜಿ ಸಲ್ಲಿಕೆ ಪ್ರಕ್ರಿಯೆ ಇಂದಿನಿಂದಲೇ ಆರಂಭವಾಗಿದೆ. • ಹುದ್ದೆಗಳ ಸಂಖ್ಯೆ: ಸುಮಾರು 22,000 (ಲೆವೆಲ್-1 ಹುದ್ದೆಗಳು).• ಹುದ್ದೆಯ ಹೆಸರು: ಪಾಯಿಂಟ್ಸ್ಮನ್, ಅಸಿಸ್ಟೆಂಟ್, ಟ್ರ್ಯಾಕ್ ಮೇಂಟೈನರ್, ಅಸಿಸ್ಟೆಂಟ್ ಲೋಕೋ ಶೆಡ್, ಅಸಿಸ್ಟೆಂಟ್ ಆಪರೇಷನ್ಸ್ ಇತ್ಯಾದಿ.• ಅರ್ಜಿ ಸಲ್ಲಿಸಲು ಆರಂಭದ ದಿನಾಂಕ: 31 ಜನವರಿ 2026.• ಅರ್ಜಿ ಸಲ್ಲಿಸಲು ಕೊನೆಯ […]

ಕನ್ನಡ ದುನಿಯಾ 31 Jan 2026 2:51 pm

ಬಜೆಟ್ ಪೂರ್ವ ತಯಾರಿ: ಸೋಮವಾರದಿಂದ ಸಿಎಂ ಸಿದ್ದರಾಮಯ್ಯ ಫುಲ್ ಬ್ಯುಸಿ

ಹಣಕಾಸು ಸಚಿವರೂ ಆಗಿರುವ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ 2026ರ ಬಜೆಟ್ ಮಂಡನೆಗೆ ತಯಾರಿ ನಡೆಸುತ್ತಿದ್ದಾರೆ. ಫೆಬ್ರವರಿ 2 ರಿಂದ ಅವರು ವಿವಿಧ ಇಲಾಖೆಗಳ ಸಭೆಗಳನ್ನು ನಡೆಸಲಿದ್ದಾರೆ. ಮಾರ್ಚ್‌ನಲ್ಲಿ ಬಜೆಟ್ ಅಧಿವೇಶನ ನಡೆಯಲಿದ್ದು, ಬಜೆಟ್ ಮಂಡನೆ ದಿನಾಂಕ ಇನ್ನೂ ಸಹ ನಿಗದಿಯಾಗಿಲ್ಲ. ಬೆಂಗಳೂರಿನ ಶಕ್ತಿ ಭವನದಲ್ಲಿ 2026-27ನೇ ಸಾಲಿನ ಬಜೆಟ್ ಪೂರ್ವಭಾವಿ ಸಭೆ ಇಲಾಖಾವಾರು ನಡೆಯಲಿದೆ. ಫೆಬ್ರವರಿ 2ರ ಸೋಮವಾರದಿಂದ ಫೆಬ್ರವರಿ 6ರ ಶುಕ್ರವಾರದ ತನಕ ಸರಣಿ ಸಭೆಗಳು ನಡೆಯಲಿದ್ದು, ಯಾವ ಇಲಾಖೆ ಸಭೆ ಯಾವಾಗ? ಎಂದು ಈಗಾಗಲೇ […]

ಕನ್ನಡ ದುನಿಯಾ 31 Jan 2026 2:44 pm

BIG NEWS: ಬೀದರ್ ನಲ್ಲಿ ಅನುಮಾನಾಸ್ಪದ ವಸ್ತು ಸ್ಫೋಟ ಪ್ರಕರಣ: ತನಿಖೆಗೆ ಆದೇಶಿಸಿದ ಸಚಿವ ಈಶ್ವರ ಖಂಡ್ರೆ

ಬೀದರ್: ಅನುಮಾನಾಸ್ಪದ ವಸ್ತು ಸ್ಫೋಟಗೊಂಡು ವಿದ್ಯಾರ್ಥಿಗಳೂ ಸೇರಿ 6 ಜನರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಬ್ದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ಮೊಳಕೇರಾ ಗ್ರಾಮದಲ್ಲಿ ನಡೆದಿದೆ. ಈ ಘಟನೆ ಬಗ್ಗೆ ತನಿಖೆ ನಡೆಸುವಂತೆ ಸಚಿವ ಈಶ್ವರ ಖಂಡ್ರೆ ಆದೇಶ ನೀಡಿದ್ದಾರೆ. ಮೊಳಕೇರಾ ಗ್ರಾಮದಲ್ಲಿ ಇಂದು ಬೆಳಿಗ್ಗೆ ಮಕ್ಕಳು ಶಾಲೆಗೆ ತೆರಳುತ್ತಿದ್ದಾಗ ರಸ್ತೆ ಬದಿ ಅನುಮಾನಾಸ್ಪದ ವಸ್ತು ಸ್ಫೋಟಗೊಂಡಿದೆ. ಸ್ಫೋಟದ ರಭಸಕ್ಕೆ ನಲವರು ವಿದ್ಯಾರ್ಥಿಗಳು ಸೇರಿ ಆರು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ […]

ಕನ್ನಡ ದುನಿಯಾ 31 Jan 2026 2:40 pm

BIG NEWS: ವಿದ್ಯುತ್ ಬಿಲ್ ಪಾವತಿಸದ ಸಬ್ ರಿಜಿಸ್ಟ್ರಾರ್ ಕಚೇರಿಗೆ ಹೆಸ್ಕಾಂ ಶಾಕ್: ಕಚೇರಿಯ ಕರೆಂಟ್ ಕಟ್

ಬೆಳಗಾವಿ: ಹಲವು ತಿಂಗಳಿಂದ ವಿದ್ಯುತ್ ಬಿಲ್ ಪಾವತಿಸದೇ ನಿರ್ಲಕ್ಷ ತೋರಿದ್ದ ಸಬ್ ರಿಜಿಸ್ಟ್ರಾರ್ ಕಚೇರಿಯ ಕರೆಂಟ್ ಕಟ್ ಮಾಡಿ ಹೆಸ್ಕಾಂ ಅಧಿಕಾರಿಗಳು ಬಿಸಿ ಮುಟ್ಟಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಬೆಳಗಾವಿ ನಗರದ ಸಬ್ ರಿಜಿಸ್ಟ್ರಾರ್ ಕಚೇರಿ ಕಳೆದ ನಾಲ್ಕು ತಿಂಗಳಿನಿಂದ ವಿದ್ಯುತ್ ಬಿಲ್ ಪಾವತಿಸದೇ ಬಾಕಿ ಉಳಿಸಿಕೊಂಡಿದೆ. 2 ಲಕ್ಷಕ್ಕೂ ಅಧಿಕ ಬಿಲ್ ಬಾಕಿ ಇದೆ. ಹಲವು ಬಾರಿ ಕರೆಂಟ್ ಬಿಲ್ ಪಾವತಿಸುವಂತೆ ಹೆಸ್ಕಾಂ ಸಿಬ್ಬಂದಿ ಸೂಚಿಸಿದರೂ ಉಪನೋಂದಣಿ ಕಚೇರಿ ಅಧಿಕಾರಿಗಳು ಬೇಜವಾಬ್ದಾರಿ ಮೆರೆದಿದ್ದಾರೆ. ಇದರಿಂದ ಬೇಸತ್ತ […]

ಕನ್ನಡ ದುನಿಯಾ 31 Jan 2026 2:27 pm

ಭಾರೀ ಇಳಿಕೆ ಕಂಡ ಚಿನ್ನದ ದರ: 22K ಮತ್ತು 24K ಚಿನ್ನದ ಇಂದಿನ ಬೆಲೆ ಇಲ್ಲಿದೆ

ನೀವೇನಾದರೂ ಚಿನ್ನ ಅಥವಾ ಬೆಳ್ಳಿ ಖರೀದಿಸಲು ಪ್ಲ್ಯಾನ್ ಮಾಡುತ್ತಿದ್ದರೆ ನಿಮಗೊಂದು ಗುಡ್ ನ್ಯೂಸ್ ಕಳೆದ ಎರಡು ದಿನಗಳಿಂದ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಪಾತಾಳಕ್ಕೆ ಕುಸಿಯುತ್ತಿವೆ. ವೀಕೆಂಡ್‌ನಲ್ಲಿ ಬೆಲೆ ಇಳಿಕೆಯಾಗಿರುವುದು ಗ್ರಾಹಕರಲ್ಲಿ ಹರ್ಷ ಮೂಡಿಸಿದೆ. ಕೇವಲ ಎರಡು ದಿನಗಳಲ್ಲಿ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 1,500 ರೂಪಾಯಿಗೂ ಅಧಿಕ ಇಳಿಕೆಯಾಗಿದೆ.ನಿನ್ನೆ ಗ್ರಾಮ್‌ಗೆ 800 ರೂ. ಕಡಿಮೆಯಾಗಿದ್ದರೆ, ಇಂದು ಶನಿವಾರ ಮತ್ತೆ 920 ರೂ. ಕುಸಿತ ಕಂಡಿದೆ.ವಿದೇಶಿ ಮಾರುಕಟ್ಟೆಯಲ್ಲೂ ಚಿನ್ನದ ಬೇಡಿಕೆ ತಗ್ಗಿದ್ದು, ಭಾರತದಲ್ಲೂ ಅದರ ನೇರ ಪರಿಣಾಮ ಬೀರಿದೆ.ಒಂದೇ […]

ಕನ್ನಡ ದುನಿಯಾ 31 Jan 2026 2:25 pm

ನಾಳೆ ರಾಯಚೂರಿಗೆ ‘CM ಸಿದ್ದರಾಮಯ್ಯ’ಭೇಟಿ : ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿ.!

ರಾಯಚೂರು : ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಫೆಬ್ರವರಿ 01 ರಂದು ರಾಯಚೂರು ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದಾರೆ ಎಂದು ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅಂದು ಬೆಳಿಗ್ಗೆ 10 ಗಂಟೆಗೆ ಬೆಂಗಳೂರಿನಿಂದ ವಿಶೇಷ ವಿಮಾನದ ಮೂಲಕ ಹೊರಟು 11 ಗಂಟೆಗೆ ಕಲಬುರಗಿ ವಿಮಾನ ನಿಲ್ದಾಣಕ್ಕೆ ಆಗಮಿಸುವರು. ಅಲ್ಲಿಂದ 11.10ಕ್ಕೆ ಹೆಲಿಕ್ಯಾಪ್ಟರ್ ಮೂಲಕ ಹೊರಟು 11.40ಕ್ಕೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಬಂಡೊಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಹೆಲಿಪ್ಯಾಡ್ ಗೆ ಆಗಮಿಸಿ, ರಾಯಚೂರು […]

ಕನ್ನಡ ದುನಿಯಾ 31 Jan 2026 2:16 pm

ಬೆಂಗಳೂರಿನ ಫೇಮಸ್ ರಾಮೇಶ್ವರಂ ಕೆಫೆ ಈಗ ಮುಂಬೈನಲ್ಲಿ: ಇಲ್ಲಿದೆ ವಿವರ

ಮುಂಬೈನ ಆಹಾರ ಪ್ರಿಯರಿಗೆ ಒಂದು ಸಿಹಿ ಸುದ್ದಿ. ದಕ್ಷಿಣ ಭಾರತದ ಅಪ್ಪಟ ರುಚಿಗೆ ಹೆಸರಾದ ಬೆಂಗಳೂರಿನ ಖ್ಯಾತ ‘ದ ರಾಮೇಶ್ವರಂ ಕೆಫೆ’ ಈಗ ಅಧಿಕೃತವಾಗಿ ಮುಂಬೈಗೆ ಕಾಲಿಡುತ್ತಿದೆ. ನಗರದ ಪ್ರತಿಷ್ಠಿತ ಚರ್ಚ್‌ಗೇಟ್ (Churchgate) ಪ್ರದೇಶದಲ್ಲಿ ತನ್ನ ಮೊದಲ ಶಾಖೆಯನ್ನು ತೆರೆಯಲು ಸಜ್ಜಾಗುತ್ತಿದೆ.ಇತ್ತೀಚೆಗಷ್ಟೇ ಹೊಸ ಮಳಿಗೆಯಲ್ಲಿ ಪೂಜೆ ನೆರವೇರಿಸಲಾಗಿದ್ದು, ಶೀಘ್ರದಲ್ಲೇ ಉದ್ಘಾಟನಾ ದಿನಾಂಕವನ್ನು ಘೋಷಿಸಲಾಗುತ್ತದೆ.ಮುಂಬೈನ ಐತಿಹಾಸಿಕ ಇರೋಸ್ (Eros) ಕಟ್ಟಡದಲ್ಲಿ ಈ ಕೆಫೆ ಆರಂಭವಾಗುತ್ತಿರುವುದು ವಿಶೇಷ. ಬೆಂಗಳೂರಿನಂತೆಯೇ ಇಲ್ಲಿಯೂ ತುಪ್ಪ ಸವರಿದ ಪೋಡಿ ಇಡ್ಲಿ, ಗರಿಗರಿಯಾದ ಮಸಾಲ ದೋಸೆ […]

ಕನ್ನಡ ದುನಿಯಾ 31 Jan 2026 2:04 pm

ವಸತಿ ಸೌಲಭ್ಯಕ್ಕೆ ಮಾಜಿ ದೇವದಾಸಿ ಮಹಿಳೆಯರಿಂದ ಅರ್ಜಿ ಆಹ್ವಾನ

ರಾಯಚೂರು : ನಿವೇಶನ ಹೊಂದಿರುವ ವಸತಿ ರಹಿತ ಮಾಜಿ ದೇವದಾಸಿ ಮಹಿಳೆಯರಿಗೆ ಗ್ರಾಮೀಣ ಮತ್ತು ನಗರ ಫಲಾನುಭವಿಗಳಿಗೆ ವಸತಿ ಸೌಲಭ್ಯ ಕಲ್ಪಿಸಲು ಅರ್ಜಿ ಆಹ್ವಾನಿಸಲಾಗಿದೆ. ನಿವೇಶನ ಹೊಂದಿರುವ ವಸತಿ ರಹಿತ ಮಾಜಿ ದೇವದಾಸಿ ಮಹಿಳೆಯರಿಗೆ ಗ್ರಾಮೀಣ ಫಲಾನುಭವಿಗಳಿಗೆ 262 ಮತ್ತು ನಗರ ಫಲಾನುಭವಿಗಳಿಗೆ 140 ವಸತಿ ಸೌಲಭ್ಯ ಕಲ್ಪಿಸಲು ಅನುದಾನವನ್ನು ರಾಜೀವ್ ಗಾಂಧಿ ವಸತಿ ನಿಗಮರವರಿಗೆ ಆಡಳಿತ್ಮಾತಕ ಅನುಮೋದನೆಯನ್ನು ನೀಡಿರುತ್ತಾರೆ. ಜಿಲ್ಲೆಯ ಮಾಜಿ ದೇವದಾಸಿ ಮಹಿಳೆಯರು ನಿವೇಶನ ಹೋದಿರುವ ವಸತಿ ರಹಿತ ಫಲಾನುಭವಿಗಳು ದೇವದಾಸಿ ಪುನರ್ವಸತಿ ಯೋಜನೆ […]

ಕನ್ನಡ ದುನಿಯಾ 31 Jan 2026 2:01 pm

ಅಕ್ರಮ ಮರಳು ಗಣಿಗಾರಿಕೆ: ಸ್ವಯಂಪ್ರೇರಿತ ಪಿಐಎಲ್ ದಾಖಲಿಸಿಕೊಂಡ ಹೈಕೋರ್ಟ್: ಗೃಹ ಸಚಿವರೇ ಅಸಹಾಯಕರಾಗಿರುವ ಪರಿಸ್ಥಿತಿ ಎಂದು ತರಾಟೆ

ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಅಕ್ರಮ ಮರಳು ದಂಧೆಗೆ ಸಂಬಂಧಿಸಿದಂತೆ ಹೈಕೋರ್ಟ್ ಸ್ವಯಂ ಪ್ರೇರಿತ ಪಿಐಎಲ್ ದಾಖಲಿಸಿಕೊಂಡಿದ್ದು, ಅಕ್ರಮ ಮರಳು ಸಾಗಣೆಗೆ ಕಡಿವಾಣ ಹಾಕುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ತರಾಟೆಗೆ ತೆಗೆದುಕೊಂಡಿದೆ. ಅಕ್ರಮ ಮರಳು ಸಾಗಾಟ ವಿಚಾರವಾಗಿ ಸ್ವಯಂಪ್ರೇರಿತವಾಗಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿಕೊಂಡಿರುವ ಹೈಕೋರ್ಟ್, ಅಕ್ರಮ ಮರಳು ಗಣಿಗಾರಿಕೆ ನಿಯಂತ್ರಣಕ್ಕೆ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ತಿಳಿಸಿದೆ. ಅಕ್ರಮ ಮರಳು ಗಣಿಗಾರಿಕೆ ಬಗ್ಗೆ ವಿಧಾನಸಭೆಯಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ನೀಡಿದ್ದ ಹೇಳಿಕೆಯನ್ನು ಉಲ್ಲೇಖಿಸಿದ […]

ಕನ್ನಡ ದುನಿಯಾ 31 Jan 2026 1:42 pm

ಸರ್ಕಾರಿ ನೌಕರರಿಗೆ ಗುಡ್‌ನ್ಯೂಸ್: ರೇಷ್ಮೆ ಬಟ್ಟೆ ಖರೀದಿಗೆ ಸಿಗಲಿದೆ ರಿಯಾಯಿತಿ

ಕರ್ನಾಟಕ ಸರ್ಕಾರ ರಾಜ್ಯ ಸರ್ಕಾರಿ ನೌಕರರಿಗೆ ಶೀಘ್ರದಲ್ಲೇ ಗುಡ್‌ನ್ಯೂಸ್ ನೀಡಲಿದೆ. ಈಗಾಗಲೇ ಖಾದಿ ಬಟ್ಟೆ ಧರಿಸಲು ಸುತ್ತೋಲೆ ಹೊರಡಿಸಲಾಗಿದೆ. ಈಗ ರೇಷ್ಮೆ ಬಟ್ಟೆ ಖರೀದಿಗೆ ರಿಯಾಯಿತಿಯನ್ನು ಘೋಷಣೆ ಮಾಡಲಾಗುತ್ತದೆ. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ನೇತೃತ್ವದ ನಿಯೋಗ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಭೇಟಿಯ ವೇಳೆ ಈ ಕುರಿತು ಮನವಿಯನ್ನು ಸಲ್ಲಿಕೆ ಮಾಡಿದೆ. ಪ್ರಸ್ತಾಪಿಸಿದ ಪ್ರಮುಖ ವಿಷಯಗಳು: ರಾಜ್ಯ ಸರ್ಕಾರಿ ನೌಕರರ ಸಂಘ ಪ್ರಕಟಣೆ ಮೂಲಕ ಮುಖ್ಯ ಕಾರ್ಯದರ್ಶಿಗಳ ಬಳಿ ಯಾವ […]

ಕನ್ನಡ ದುನಿಯಾ 31 Jan 2026 1:31 pm

Union Budget 2026 : ಎಣ್ಣೆ, ಸಿಗರೇಟ್ ಪ್ರಿಯರಿಗೆ ಶಾಕ್ ? ಈ ಬಾರಿ ‘ಸಿನ್ ಟ್ಯಾಕ್ಸ್’ಬರೆ ಹಾಕಲಿದೆಯೇ ಸರ್ಕಾರ !

ಕೇಂದ್ರ ಸರ್ಕಾರವು 2026-27ರ ಬಜೆಟ್ ಮಂಡನೆಗೆ ಮುನ್ನವೇ ತಂಬಾಕು ಮತ್ತು “ಸಿನ್ ಗೂಡ್ಸ್” (Sin Goods) ಮೇಲೆ ಕಠಿಣ ಕ್ರಮ ಕೈಗೊಂಡಿದೆ. ಹೌದು, ಕೇಂದ್ರ ಬಜೆಟ್ 2026 ರಲ್ಲಿ ಸರ್ಕಾರವು ‘ಸಿನ್ ಟ್ಯಾಕ್ಸ್’ (Sin Tax) ಮೂಲಕ ಹಾನಿಕಾರಕ ಉತ್ಪನ್ನಗಳ ಮೇಲೆ ಭಾರಿ ತೆರಿಗೆಯ ಬರೆ ಹಾಕಲು ಈಗಾಗಲೇ ಸಿದ್ಧತೆ ಮಾಡಿಕೊಂಡಿದೆ. ಸರ್ಕಾರವು ತಂಬಾಕು ಉತ್ಪನ್ನಗಳ ಮೇಲಿನ ಜಿಎಸ್ಟಿ (GST) ದರವನ್ನು ಶೇ. 28 ರಿಂದ ಶೇ. 40ಕ್ಕೆ ಏರಿಸಲು ನಿರ್ಧರಿಸಿದೆ. ಇದರ ಜೊತೆಗೆ:ಸಿಗರೇಟ್ಗಳ ಮೇಲೆ ಅವುಗಳ […]

ಕನ್ನಡ ದುನಿಯಾ 31 Jan 2026 1:28 pm

ಡ್ರಗ್ಸ್ ದಂಧೆ ಗಂಭೀರತೆ ಅರಿಯದೇ ಗೃಹ ಸಚಿವರಿಂದ ಉಡಾಫೆ ಉತ್ತರ: ಕಾಂಗ್ರೆಸ್ ಸರ್ಕಾರ ಯುವ ಜನಾಂಗದ ಭವಿಷ್ಯದ ಜೊತೆ ಚಲ್ಲಾಟವಾಡುತ್ತಿದೆ: ಆರ್.ಅಶೋಕ್ ವಾಗ್ದಾಳಿ

ಬೆಂಗಳೂರು: ಮೈಸೂರಿನಲ್ಲಿ ಡ್ರಗ್ಸ್ ಫ್ಯಾಕ್ಟರಿ ಪತ್ತೆ ಪ್ರಕರಣದ ಬೆನ್ನಲ್ಲೇ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ವಿಪಕ್ಷ ನಾಯಕ ಆರ್.ಅಶೋಕ್, ರಾಜ್ಯದಲ್ಲಿ ಎಗ್ಗಿಲ್ಲದೆ ನಡೆಯುತ್ತಿರುವ ಡ್ರಗ್ಸ್ ದಂಧೆಗೆ ಕಡಿವಾಣ ಹಾಕುವಲ್ಲಿ ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಕಿಡಿಕಾರಿದ್ದಾರೆ. ರಾಜ್ಯ ಕಾಂಗ್ರೆಸ್ ಸರ್ಕಾರ ನಮ್ಮ ಯುವಕರ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿದೆ. ಡ್ರಗ್ಸ್ ದಂಧೆಯ ಗಂಭಿರತೆ ಬಗ್ಗೆಯೂ ಸರ್ಕಾರಕ್ಕೆ ಅರಿವಿಲ್ಲ ಎಂದು ಗುಡುಗಿದ್ದಾರೆ. ಬೆಳಗಾವಿ ಅಧಿವೇಶನದಲ್ಲಿ ಇದರ ಬಗ್ಗೆ ಪ್ರಸ್ತಾಪ ಮಾಡಿದ ಸಂದರ್ಭದಲ್ಲಿ ‘ಡ್ರಗ್ಸ್ ದಂಧೆ ಎಲ್ಲ ರಾಜ್ಯಗಳಲ್ಲಿಯೂ […]

ಕನ್ನಡ ದುನಿಯಾ 31 Jan 2026 1:17 pm

ಟೀ-ಕಾಫಿ ಚಟಕ್ಕೆ ಬ್ರೇಕ್ ಹಾಕಿ, 10 ದಿನಗಳಲ್ಲಿ ನಿಮ್ಮ ದೇಹದಲ್ಲಿ ನಡೆಯುತ್ತೆ ಈ ಪವಾಡ.!

ಬೆಳಿಗ್ಗೆ ಎದ್ದ ಕೂಡಲೇ ಬೆಡ್ ಕಾಫಿ ಅಥವಾ ಟೀ ಕುಡಿಯದಿದ್ದರೆ ಹೆಚ್ಚಿನವರಿಗೆ ದಿನವೇ ಶುರುವಾಗುವುದಿಲ್ಲ. ಆಫೀಸಿನ ಕೆಲಸದ ಒತ್ತಡವಿರಲಿ ಅಥವಾ ಸಂಜೆಯ ಸುಸ್ತಾಗಿರಲಿ, ಟೀ-ಕಾಫಿ ಮನುಷ್ಯನ ಜೀವನದ ಅವಿಭಾಜ್ಯ ಅಂಗವಾಗಿಬಿಟ್ಟಿದೆ.ಆದರೆ, ಇವುಗಳನ್ನು ಇದ್ದಕ್ಕಿದ್ದಂತೆ ಬಿಟ್ಟರೆ (Quitting Tea and Coffee) ನಮ್ಮ ದೇಹ ಹೇಗೆ ಪ್ರತಿಕ್ರಿಯಿಸುತ್ತದೆ ಎಂದು ಎಂದಾದರೂ ಯೋಚಿಸಿದ್ದೀರಾ? ಕೇವಲ 10 ದಿನಗಳ ಕಾಲ ಇವುಗಳಿಂದ ದೂರವಿದ್ದರೆ ನಿಮ್ಮ ಆರೋಗ್ಯದಲ್ಲಿ ಆಗುವ ಬದಲಾವಣೆಗಳು ಇಲ್ಲಿವೆ: ಮೊದಲ ಮೂರು ದಿನಗಳು ಸ್ವಲ್ಪ ಕಷ್ಟ (Withdrawal Symptoms)ನೀವು ಪ್ರತಿದಿನ […]

ಕನ್ನಡ ದುನಿಯಾ 31 Jan 2026 12:53 pm

ಮೈಸೂರಿನಲ್ಲಿ ಡ್ರಗ್ಸ್ ಗೋಡೌನ್ ಮೇಲೆ ದಾಳಿ ಪ್ರಕರಣ: ಉತ್ತರ ಪ್ರದೇಶ ಮೂಲದ ದಂಪತಿ ಅರೆಸ್ಟ್

ಮೈಸೂರು: ಮೈಸೂರಿನ ಯಾಂಡಳ್ಳಿ ಬಳಿ ಡ್ರಗ್ಸ್ ತಯಾರಿಕೆಗೆ ಸಿದ್ಧತೆ ನದೆಸಿದ್ದ ಓಡೌನ್ ಮೇಲೆ ದಾಳಿ ನಡೆಸಿದ್ದ ಪೊಲೀಸರು ಉತ್ತರ ಪ್ರದೇಶ ಮೂಲದ ದಂಪತಿಯನ್ನು ಬಂಧಿಸಿದ್ದಾರೆ. ಗೋಡೌನ್ ಜಪ್ತಿ ಮಾಡಿರುವ ಪೊಲೀಸರು ಅದರಲ್ಲಿ ಸಂಗ್ರಹಿಸಿಟ್ಟಿದ್ದ ಡ್ರಗ್ಸ್ ತಯಾರಿಕಾ ರಾಸಾಯನಿಕ, ಉಪಕರಣಗಳನ್ನು ವಶಕ್ಕೆ ಪಡೆದಿದ್ದಾರೆ. ಇದೇ ವೇಳೆ ಉತ್ತರ ಪ್ರದೇಶ ಮೂಲದ ದಂಪತಿಯನ್ನು ವಶಕ್ಕೆ ಪಡೆದಿದ್ದಾರೆ. ನಾಲ್ಕು ತಿಂಗಳ ಹಿಂದಷ್ಟೇ ದಂಪತಿ ಇಲ್ಲಿ ಎರಡು ಮನೆ ಹಾಗೂ ಮನೆ ಕೆಳಭಾಗದಲ್ಲಿದ್ದ ಗೋಡೌನ್ ಬಾಡಿಗೆ ಪಡೆದಿದ್ದರು. ಈ ಗೋಡೌನ್ ನಲ್ಲಿ ಡ್ರಗ್ಸ್ […]

ಕನ್ನಡ ದುನಿಯಾ 31 Jan 2026 12:52 pm

ಬೆಂಗಳೂರಿನ ಅತಿ ಉದ್ದದ ಅಂಡರ್ ಪಾಸ್: ಯೋಜನೆ ವಿವರಗಳು

ಬೆಂಗಳೂರು ನಗರದಲ್ಲಿ ಸುರಂಗ ಮಾರ್ಗ ರಸ್ತೆಯ ಕುರಿತು ಚರ್ಚೆ ನಡೆಯುತ್ತಿದೆ. ಈಗ ಸುರಂಗ ಮಾದರಿಯಲ್ಲಿಯೇ ನಗರದ ಅತಿ ಉದ್ದದ ಅಂಡರ್ ಪಾಸ್ ನಿರ್ಮಾಣವಾಗಲಿದೆ. ಈ ಯೋಜನೆ ಎಲ್ಲಿ ಜಾರಿಗೆ ಬರಲಿದೆ? ಎಂಬುದು ಸೇರಿದಂತೆ ಯೋಜನೆ ಮಾಹಿತಿ ಇಲ್ಲಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಂಪರ್ಕಿಸುವ ಹೆದ್ದಾರಿಯಲ್ಲಿ ಯಲಹಂಕ ಏರ್‌ ಬೇಸ್ ಸಮೀಪ ಈ ಯೋಜನೆ ಬರಲಿದೆ. ಇದು ನಗರದ ಅತಿ ಉದ್ದದ ಅಂಡರ್‌ ಪಾಸ್ ಆಗಲಿದ್ದು, ಸರ್ವೀಸ್ ರಸ್ತೆಗಳನ್ನು ಸಹ ನಿರ್ಮಾಣ ಮಾಡಲಾಗುತ್ತದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು […]

ಕನ್ನಡ ದುನಿಯಾ 31 Jan 2026 12:46 pm

Post office Scheme : ಅಂಚೆ ಕಚೇರಿಯ ಈ ಯೋಜನೆಯಡಿ ತಿಂಗಳಿಗೆ 1,000 ರೂ. ಹೂಡಿಕೆ ಮಾಡಿದ್ರೆ ಎಷ್ಟು ಲಾಭ ಸಿಗುತ್ತೆ.? ತಿಳಿಯಿರಿ

ಅಂಚೆ ಕಚೇರಿ (Post Office) ಉಳಿತಾಯ ಯೋಜನೆಗಳು ಭಾರತದಲ್ಲಿ ಅತ್ಯಂತ ಸುರಕ್ಷಿತ ಮತ್ತು ಜನಪ್ರಿಯ ಹೂಡಿಕೆ ಮಾರ್ಗಗಳಾಗಿವೆ. ಇವು ಕೇಂದ್ರ ಸರ್ಕಾರದ ಅಡಿಯಲ್ಲಿ ಬರುವುದರಿಂದ ನಿಮ್ಮ ಹಣಕ್ಕೆ 100% ಗ್ಯಾರಂಟಿ ಇರುತ್ತದೆ.ನೀವು ಸುರಕ್ಷಿತವಾಗಿ ಹಣ ಉಳಿತಾಯ ಮಾಡಿ ಉತ್ತಮ ಲಾಭ ಪಡೆಯಲು ಬಯಸುತ್ತೀರಾ? ಹಾಗಿದ್ದಲ್ಲಿ, ಪೋಸ್ಟ್ ಆಫೀಸ್ನ ರಿಕರಿಂಗ್ ಡೆಪಾಸಿಟ್ (RD) ಯೋಜನೆ ನಿಮಗಾಗಿ ಇದೆ. ಪೋಸ್ಟ್ ಆಫೀಸ್ ನಡೆಸುವ ಸಣ್ಣ ಉಳಿತಾಯ ಯೋಜನೆಗಳಲ್ಲಿ ಆರ್ಡಿ ಅತ್ಯಂತ ಜನಪ್ರಿಯವಾದುದು. ಇಲ್ಲಿ ಹಣ ಸಂಪೂರ್ಣ ಸುರಕ್ಷಿತವಾಗಿರುತ್ತದೆ ಏಕೆಂದರೆ ಇದು […]

ಕನ್ನಡ ದುನಿಯಾ 31 Jan 2026 12:39 pm