SENSEX
NIFTY
GOLD
USD/INR

Weather

16    C

ಡಿಜಿಟಲ್ ಸುದ್ದಿ ಮೂಲಗಳು

... ...View News by News Source

Post office Scheme : ಅಂಚೆ ಕಚೇರಿಯ ಅದ್ಭುತ ಯೋಜನೆ : ಹಿರಿಯ ನಾಗರಿಕರಿಗೆ ಪ್ರತಿ ತಿಂಗಳು 17,000 ಆದಾಯ.!

ನಿವೃತ್ತಿಯ ನಂತರ ಪ್ರತಿಯೊಬ್ಬರ ದೊಡ್ಡ ಚಿಂತೆ ಎಂದರೆ ತಾವು ಕಷ್ಟಪಟ್ಟು ಉಳಿಸಿದ ಹಣ ಸುರಕ್ಷಿತವಾಗಿರಬೇಕು ಮತ್ತು ಮನೆ ನಡೆಸಲು ಪ್ರತಿ ತಿಂಗಳು ಒಂದು ನಿರ್ದಿಷ್ಟ ಮೊತ್ತದ ಹಣ ಕೈಗೆ ಬರುತ್ತಿರಬೇಕು ಎಂಬುದು. ನಿಮ್ಮ ವೃದ್ಧಾಪ್ಯವನ್ನು ನೀವು ಆರ್ಥಿಕವಾಗಿ ಸ್ವತಂತ್ರಗೊಳಿಸಲು ಬಯಸಿದರೆ, ಪೋಸ್ಟ್ ಆಫೀಸ್ನ ‘ಸೀನಿಯರ್ ಸಿಟಿಜನ್ ಸೇವಿಂಗ್ ಸ್ಕೀಮ್’ (SCSS) ಒಂದು ಅತ್ಯುತ್ತಮ ಆಯ್ಕೆಯಾಗಿದೆ. ಇದು ನಿಮ್ಮ ಹೂಡಿಕೆಗೆ ಸರ್ಕಾರಿ ಸುರಕ್ಷತೆಯನ್ನು ನೀಡುವುದಲ್ಲದೆ, ಬ್ಯಾಂಕ್ ಎಫ್ಡಿಗಿಂತ ಉತ್ತಮ ಲಾಭವನ್ನು ನೀಡುತ್ತದೆ. ಈ ಸರ್ಕಾರಿ ಯೋಜನೆ ಯಾಕೆ ವಿಶೇಷ?ಈ […]

ಕನ್ನಡ ದುನಿಯಾ 10 Feb 2026 7:53 am

ಜಾತ್ರೆ ವೇಳೆ ಗಾಳಿಯಲ್ಲಿ ಗುಂಡು ಹಾರಿಸಿದ ಕಾಂಗ್ರೆಸ್ ಮುಖಂಡನ ವಿರುದ್ಧ ಕೇಸ್ ದಾಖಲು

ಬೆಳಗಾವಿ: ಜಾತ್ರೆಯ ಮೆರವಣಿಗೆ ವೇಳೆ ಗಾಳಿಯಲ್ಲಿ ಗುಂಡು ಹಾರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಫೆಬ್ರವರಿ 5ರಂದು ಬೆಳಗಾವಿ ತಾಲೂಕಿನ ಸುಳಗಾ ಗ್ರಾಮದ ಲಕ್ಷ್ಮೀದೇವಿ ಕಳಸಾರೋಹಣ ಮೆರವಣಿಗೆ ವೇಳೆ ಘಟನೆ ನಡೆದಿದೆ. ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಕಾಂಗ್ರೆಸ್ ಮುಖಂಡ ಬಾವುರಾವ್ ಗಡಕರಿ ಪರವಾನಿಗೆ ಹೊಂದಿದ್ದ ಗನ್ ನಿಂದ ಮೆರವಣಿಗೆಯ ವೇಳೆ ಗಾಳಿಯಲ್ಲಿ ಎರಡು ಸುತ್ತು ಫೈರಿಂಗ್ ಮಾಡಿದ್ದಾರೆ ಎನ್ನಲಾಗಿದೆ. ಸಾರ್ವಜನಿಕ ಸ್ಥಳದಲ್ಲಿ ಫೈರಿಂಗ್ ನಡೆಸಿದ ಹಿನ್ನೆಲೆಯಲ್ಲಿ ಕಾಕತಿ ಠಾಣೆ ಪೊಲೀಸರು […]

ಕನ್ನಡ ದುನಿಯಾ 10 Feb 2026 7:44 am

ಕೆನಡಾದಲ್ಲಿ ಕನ್ನಡಿಗನ ಗುಂಡಿಕ್ಕಿ ಹತ್ಯೆ : ಗೃಹ ಸಚಿವ ಡಾ. ಜಿ.ಪರಮೇಶ್ವರ್ ಹೇಳಿದ್ದೇನು..?

ಬೆಂಗಳೂರು : ಕೆನಡಾದ ಟೊರೊಂಟೊದಲ್ಲಿ ಕನ್ನಡಿಗ ಚಂದನ್ ಕುಮಾರ್ (37) ಅವರ ಹತ್ಯೆ ಕುರಿತಂತೆ ಕರ್ನಾಟಕದ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಆಘಾತ ವ್ಯಕ್ತಪಡಿಸಿದ್ದಾರೆ. ಕೆನಡಾದ ಟೊರೊಂಟೊದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಕನ್ನಡಿಗ ಚಂದನ್ ಕುಮಾರ್ ಹತ್ಯೆಯಾಗಿರುವುದು ಅತ್ಯಂತ ನೋವಿನ ಸಂಗತಿ ಎಂದು ಅವರು ‘X’ (ಟ್ವಿಟರ್) ಮೂಲಕ ಕಳವಳ ವ್ಯಕ್ತಪಡಿಸಿದ್ದಾರೆ. ’ಕೆನಡಾ ದೇಶದ ಟೊರಾಂಟೋ ನಗರದಲ್ಲಿ ಬೆಂಗಳೂರಿನ ನೆಲಮಂಗಲ ಮೂಲದ ಚಂದನ್ ಕುಮಾರ್ ಅವರು ಗುಂಡಿನ ದಾಳಿಯಲ್ಲಿ ಹತ್ಯೆಗೀಡಾಗಿರುವ ಸುದ್ದಿ ಮನಸ್ಸಿಗೆ ಅತೀವ […]

ಕನ್ನಡ ದುನಿಯಾ 10 Feb 2026 7:35 am

ರೈತರಿಗೆ ಗುಡ್ ನ್ಯೂಸ್: ಹಾಲಿನ ಪ್ರೋತ್ಸಾಹಧನ 2 ರೂ. ಹೆಚ್ಚಳ

ಬೆಂಗಳೂರು: ರಾಜ್ಯದಲ್ಲಿ ರೈತರಿಗೆ ಪ್ರತಿ ಲೀಟರ್ ಹಾಲಿಗೆ ಐದು ರೂಪಾಯಿ ಪ್ರೋತ್ಸಾಹಧನ ನೀಡುತ್ತಿದ್ದು, ಇದನ್ನು ಇನ್ನು ಎರಡು ರೂಪಾಯಿ ಹೆಚ್ಚಿಸಲು ಚಿಂತನೆ ನಡೆಸಲಾಗಿದೆ ಎಂದು ಬಮೂಲ್ ಅಧ್ಯಕ್ಷ ಡಿ.ಕೆ. ಸುರೇಶ್ ತಿಳಿಸಿದ್ದಾರೆ. ದೊಡ್ಡಬಳ್ಳಾಪುರದ ಕೊನಘಟ್ಟ ಗ್ರಾಮದಲ್ಲಿ ಅಧಿಕ ಹಾಲು ಕರೆಯುವ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದ ಅವರು, ದೇಶದಲ್ಲಿ ಯಾವುದೇ ರಾಜ್ಯದಲ್ಲಿಯೂ ಹಾಲಿಗೆ ಐದು ರೂಪಾಯಿ ಪ್ರೋತ್ಸಾಹಧನ ನೀಡುತ್ತಿಲ್ಲ. ಕರ್ನಾಟಕದಲ್ಲಿ ಮಾತ್ರ ರೈತರಿಗೆ ಐದು ರೂಪಾಯಿ ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಈಗ ಇದನ್ನು ಎರಡು ರೂಪಾಯಿ ಹೆಚ್ಚಿಸಿ ಹೆಚ್ಚು […]

ಕನ್ನಡ ದುನಿಯಾ 10 Feb 2026 7:33 am

ಮಾಂಜಾ ದಾರಕ್ಕೆ ಸಿಲುಕಿ ಬೈಕ್ ಸವಾರ ಸಾವು: ಎಸಿ ಸೇರಿ ಆರು ಜನರ ವಿರುದ್ಧ ಪ್ರಕರಣ

ಬೀದರ್: ಬೀದರ್ ಜಿಲ್ಲೆ ಚಿಟಗುಪ್ಪ ತಾಲೂಕಿನ ತಾಳಮಡಗಿಯಲ್ಲಿ ಜನವರಿ 16ರಂದು ಮಾಜಾ ದಾರಕ್ಕೆ ಸಿಲುಕಿ ಬೈಕ್ ಸವಾರ ಸಾವನ್ನಪ್ಪಿದ ಪ್ರಕರಣದಲ್ಲಿ ಎಸಿ ಸೇರಿ ಆರು ಜನರ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಲು ಉಪಲೋಕಾಯುಕ್ತ ಬಿ. ವೀರಪ್ಪ ನಿರ್ದೇಶನ ನೀಡಿದ್ದಾರೆ. ಬೀದರ್ ಉಪ ವಿಭಾಗಾಧಿಕಾರಿ ಮೊಹಮ್ಮದ್ ಶಕೀಲ್, ಬಸವಕಲ್ಯಾಣ ಉಪ ವಿಭಾಗಾಧಿಕಾರಿ ಪ್ರಕಾಶ್ ಕುದರಿ, ಚಿಟಗುಪ್ಪ ತಹಶೀಲ್ದಾರ್ ಮಂಜುನಾಥ ಪಂಚಾಳ, ಹುಮನಾಬಾದ್ ಡಿವೈಎಸ್ಪಿ ಮಡೋಳಪ್ಪ, ಚಿಟಗುಪ್ಪ ಪಿಐ ಶ್ರೀನಿವಾಸ್, ಸಬ್ ಇನ್ಸ್ಪೆಕ್ಟರ್ ಮಹೇಂದ್ರ ಕುಮಾರ್ ಅವರ ವಿರುದ್ಧ […]

ಕನ್ನಡ ದುನಿಯಾ 10 Feb 2026 7:24 am

ಋತುಚಕ್ರ ರಜೆ ಬಗ್ಗೆ ಸರ್ಕಾರದ ಆದೇಶ ಪ್ರಶ್ನಿಸಿ ಹೈಕೋರ್ಟ್ ಗೆ ಅರ್ಜಿ: ಫೆ. 23ಕ್ಕೆ ವಿಚಾರಣೆ ಮುಂದೂಡಿಕೆ

ಬೆಂಗಳೂರು: ರಾಜ್ಯದಲ್ಲಿ ವಿವಿಧ ಕಾರ್ಮಿಕ ಕಾಯ್ದೆಗಳಡಿ ನೋಂದಣಿಯಾದ ಉದ್ದಿಮೆಗಳಲ್ಲಿ ಕಾರ್ಯನಿರ್ವಹಿಸುವ ಮಹಿಳಾ ನೌಕರರಿಗೆ ಋತುಚಕ್ರದ ಸಮಯದಲ್ಲಿ ಮಾಸಿಕ ಒಂದು ದಿನ ವೇತನ ಸಹಿತ ರಜೆ ನೀಡುವ ಬಗ್ಗೆ ರಾಜ್ಯ ಸರ್ಕಾರ ಹೊರಡಿಸಿದ ಅಧಿಸೂಚನೆ ಪ್ರಶ್ನಿಸಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಕೆಯಾಗಿದ್ದು, ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಫೆಬ್ರವರಿ 23ಕ್ಕೆ ಮುಂದೂಡಿದೆ. ರಾಜ್ಯಕಾರ್ಮಿಕ ಇಲಾಖೆ 2025 ರ ನವೆಂಬರ್ 20ರಂದು ಹೊರಡಿಸಿದ ಅಧಿಸೂಚನೆ ಪ್ರಶ್ನಿಸಿ ಕರ್ನಾಟಕ ಉದ್ಯೋಗದಾತರ ಸಂಘ, ಬೆಂಗಳೂರು ಹೋಟೆಲ್ ಗಳ ಸಂಘ, ಫೆಸಿಲ್ ಏರೋಸ್ಪೇಸ್ ಟೆಕ್ನಾಲಜಿ ಲಿಮಿಟೆಡ್ […]

ಕನ್ನಡ ದುನಿಯಾ 10 Feb 2026 6:53 am

ಲೋಕಸಭೆಯಲ್ಲಿ ಪ್ರಧಾನಿ ಮೋದಿ ಉತ್ತರಿಸದಿರುವುದು ಸಂಸತ್ ಗೆ ತೋರಿದ ಅಗೌರವ, ಹೇಡಿತನ: ಸಿಎಂ ಸಿದ್ಧರಾಮಯ್ಯ

ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಗೆ ಪ್ರಧಾನಿ ಮೋದಿ ಅವರು ಉತ್ತರ ನೀಡದೆ ತಪ್ಪಿಸಿಕೊಂಡಿರುವುದು ಸಂಸತ್‌ಗೆ ತೋರಿಸಿರುವ ಅಗೌರವ ಮಾತ್ರವಲ್ಲ, ಸತ್ಯವನ್ನು ಎದುರಿಸಲಾಗದ ಹೇಡಿತನವೂ ಆಗಿದೆ‌ ಎಂದು ಸಿಎಂ ಸಿದ್ಧರಾಮಯ್ಯ ಹೇಳಿದ್ದಾರೆ. ಭಾರತದ ಸಂಸತ್ತಿನ ಇತಿಹಾಸದಲ್ಲಿ ಮೊದಲ ಬಾರಿಗೆ ಪ್ರಧಾನ ಮಂತ್ರಿಯವರ ಉತ್ತರ ಇಲ್ಲದೆ ವಂದನಾ ನಿರ್ಣಯವನ್ನು ಅಂಗೀಕರಿಸಲಾಗಿದೆ. ಓರ್ವ ಪ್ರಧಾನಿ ಸಂಸತ್ತನ್ನು ನಿರ್ಲಕ್ಷಿಸುವುದೆಂದರೆ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುವ ನಡೆ ಎಂದರ್ಥ ಎಂದು ತಿಳಿಸಿದ್ದಾರೆ. ಅಧಿಕಾರರೂಢ ಬಿಜೆಪಿ ಪಕ್ಷ ಮೊದಲು ವಿರೋಧ ಪಕ್ಷಗಳಿಗೆ ಮಾತನಾಡಲು ಅವಕಾಶ […]

ಕನ್ನಡ ದುನಿಯಾ 10 Feb 2026 6:16 am

ಕನಸಿನಲ್ಲಿ ಚಿನ್ನ-ಬೆಳ್ಳಿ ಕಂಡರೆ ಏನರ್ಥ? ಇದು ಅದೃಷ್ಟದ ಮುನ್ಸೂಚನೆಯೋ ಅಥವಾ ಸಂಕಷ್ಟದ ಸೂಚನೆಯೋ?

ಬೆಂಗಳೂರು: ನಿದ್ರೆಯ ಸಮಯದಲ್ಲಿ ಕನಸು ಕಾಣುವುದು ಪ್ರತಿಯೊಬ್ಬರಿಗೂ ಸಹಜ. ಅದರಲ್ಲೂ ಬೆಳಗಿನ ಜಾವ ಬೀಳುವ ಕನಸುಗಳು ನನಸಾಗುತ್ತವೆ ಎಂಬ ಬಲವಾದ ನಂಬಿಕೆ ನಮ್ಮಲ್ಲಿದೆ. ಸಪ್ನ ಶಾಸ್ತ್ರದ ಪ್ರಕಾರ, ನಾವು ಕಾಣುವ ಪ್ರತಿಯೊಂದು ಕನಸಿಗೂ ಒಂದೊಂದು ಗೂಢ ಅರ್ಥವಿರುತ್ತದೆ. ಅದರಲ್ಲೂ ಕನಸಿನಲ್ಲಿ ಚಿನ್ನ, ಬೆಳ್ಳಿ ಅಥವಾ ವಜ್ರದಂತಹ ಅಮೂಲ್ಯ ಲೋಹಗಳು ಕಂಡರೆ, ಅದು ನಿಮ್ಮ ಭವಿಷ್ಯದ ಆರ್ಥಿಕ ಸ್ಥಿತಿಯ ಬಗ್ಗೆ ದೊಡ್ಡ ಸಂಕೇತಗಳನ್ನು ನೀಡುತ್ತದೆ. ನಿಮ್ಮ ಕನಸಿನಲ್ಲಿ ಚಿನ್ನ ಕಂಡರೆ ಏನಾಗುತ್ತದೆ? ಇಲ್ಲಿದೆ ಕುತೂಹಲಕಾರಿ ಮಾಹಿತಿ. ಚಿನ್ನ ಕಾಣುವುದು: […]

ಕನ್ನಡ ದುನಿಯಾ 10 Feb 2026 5:57 am

BIG NEWS: ಬಹಿಷ್ಕಾರದ ನಿರ್ಧಾರ ಬದಲಿಸಿದ ಪಾಕಿಸ್ತಾನ: ಟಿ20 ವಿಶ್ವಕಪ್‌ ನಲ್ಲಿ ಭಾರತದ ವಿರುದ್ಧ ಆಡಲು ಸಿದ್ಧತೆ

ಪ್ರಮುಖ ಬೆಳವಣಿಗೆಯೊಂದರಲ್ಲಿ, ಪಿಸಿಬಿ(ಪಾಕಿಸ್ತಾನ ಕ್ರಿಕೆಟ್ ಮಂಡಳಿ) 2026 ರ ಟಿ20 ವಿಶ್ವಕಪ್‌ನಲ್ಲಿ ಭಾರತದ ವಿರುದ್ಧ ಆಡದಿರುವ ತನ್ನ ನಿರ್ಧಾರದಿಂದ ಯು-ಟರ್ನ್ ತೆಗೆದುಕೊಂಡಿದೆ. ಇತ್ತೀಚಿನ ಸಭೆಗಳ ನಂತರ, ಪಾಕಿಸ್ತಾನ ಕೊಲಂಬೊಗೆ ಪ್ರಯಾಣಿಸಲಿದ್ದು, ಫೆಬ್ರವರಿ 15 ರಂದು ನಡೆಯುತ್ತಿರುವ ಪಂದ್ಯಾವಳಿಯಲ್ಲಿ ಭಾರತವನ್ನು ಎದುರಿಸಲಿದೆ. ಫೆಬ್ರವರಿ 15 ರಂದು ನಡೆದ ಟಿ 20 ವಿಶ್ವಕಪ್ 2026 ಪಂದ್ಯದಲ್ಲಿ ಭಾರತದ ವಿರುದ್ಧ ಮೈದಾನಕ್ಕಿಳಿಯಲು ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಅವಕಾಶ ನೀಡಲಾಗಿದೆ. ಪಾಕಿಸ್ತಾನ ಸರ್ಕಾರ ಸೋಮವಾರ ಹೇಳಿಕೆಯ ಮೂಲಕ ಈ ನಿರ್ಧಾರವನ್ನು ದೃಢಪಡಿಸಿದೆ. ಪಾಕಿಸ್ತಾನ […]

ಕನ್ನಡ ದುನಿಯಾ 10 Feb 2026 5:52 am

ಸೇವಾನಿರತ ಅಭ್ಯರ್ಥಿಗಳಿಗೆ ವೈದ್ಯಕೀಯ ಎಂಡಿ/ಎಂಎಸ್ ಗೆ ಲಭ್ಯವಿರುವ ಸೀಟು ಹಂಚಿಕೆ

ಸ್ನಾತಕೋತ್ತರ ವೈದ್ಯಕೀಯ ಕೋರ್ಸುಗಳಾದ ಎಂ.ಡಿ./ಎಂ.ಎಸ್.ಗೆ ಲಭ್ಯವಿರುವ ಸೀಟುಗಳಿಗಾಗಿ ಆಸಕ್ತ ಅರ್ಹ ಸೇವಾನಿರತ ಅಭ್ಯರ್ಥಿಗಳು ಫೆ,10ರ ಬೆಳಿಗ್ಗೆ 10ರಿಂದ ಮಧ್ಯಾಹ್ನ 1ರೊಳಗೆ ಎಲ್ಲ ಅಗತ್ಯ ದಾಖಲೆಗಳೊಂದಿಗೆ ಇಲ್ಲಿನ ಮಲ್ಲೇಶ್ವರದಲ್ಲಿರುವ ಕೆಇಎ ಕಚೇರಿಗೆ ಪರಿಶೀಲನೆಗೆ ಹಾಜರಾಗಲು ಅವಕಾಶ ಕಲ್ಪಿಸಲಾಗಿದೆ.. ಸ್ನಾತಕೋತ್ತರ ವೈದ್ಯಕೀಯ ಕೋರ್ಸುಗಳ 3ನೇ ಸುತ್ತಿನ (ಮಾಪ್-ಅಪ್) ಆನ್ ಲೈನ್ ಸೀಟು ಹಂಚಿಕೆಗೆ ಇದು ಅನ್ವಯವಾಗುತ್ತದೆ. ದಾಖಲೆಗಳ ಪರಿಶೀಲನೆಯ ನಂತರ ಅರ್ಹರಾಗುವ ಅಭ್ಯರ್ಥಿಗಳಿಗೆ ಇಚ್ಛೆ/ಆಯ್ಕೆಗಳನ್ನು ನಮೂದಿಸಲು ಫೆ.11ರ ಬೆಳಿಗ್ಗೆ 9ರವರೆಗೆ ಅವಕಾಶವಿರುತ್ತದೆ ರಾಜೀವ್ ಗಾಂಧಿ ಆರೋಗ್ಯ ವಿ.ವಿ.ಯು ಸ್ನಾತಕೋತ್ತರ ವೈದ್ಯಕೀಯ […]

ಕನ್ನಡ ದುನಿಯಾ 10 Feb 2026 5:43 am

EPFO 3.0 ಕ್ರಾಂತಿ: ಏಪ್ರಿಲ್‌ನಿಂದ ಯುಪಿಐ ಮೂಲಕವೇ ಪಿಎಫ್ ಹಣ ಹಿಂಪಡೆಯಲು ಅವಕಾಶ

ಬೆಂಗಳೂರು: ದೇಶದ ಸುಮಾರು 8 ಕೋಟಿ EPFO ಚಂದಾದಾರರಿಗೆ ಕೇಂದ್ರ ಸರ್ಕಾರ ಭರ್ಜರಿ ಸಿಹಿ ಸುದ್ದಿ ನೀಡಿದೆ. ಇನ್ನು ಮುಂದೆ ನಿಮ್ಮ ಪಿಎಫ್ (PF) ಹಣ ಪಡೆಯಲು ವಾರಗಟ್ಟಲೆ ಕಾಯುವ ಕಿರಿಕಿರಿ ಇರುವುದಿಲ್ಲ. ಕೇಂದ್ರ ಕಾರ್ಮಿಕ ಸಚಿವಾಲಯವು EPFO 3.0 ಅಡಿಯಲ್ಲಿ ಕ್ರಾಂತಿಕಾರಿ ಬದಲಾವಣೆ ತರುತ್ತಿದ್ದು ಏಪ್ರಿಲ್ 2026 ರಿಂದ ನೇರವಾಗಿ UPI ಮೂಲಕವೇ ಹಣ ಹಿಂಪಡೆಯಲು ಅವಕಾಶ ಕಲ್ಪಿಸಲಿದೆ. ಏಪ್ರಿಲ್‌ನಲ್ಲಿ ಹೊಸ ಮೊಬೈಲ್ ಆ್ಯಪ್ ಬಿಡುಗಡೆ ನಿವೃತ್ತಿ ನಿಧಿ ಸಂಸ್ಥೆಯಾದ EPFO, ತನ್ನ ಚಂದಾದಾರರಿಗಾಗಿ ಪ್ರತ್ಯೇಕವಾದ […]

ಕನ್ನಡ ದುನಿಯಾ 10 Feb 2026 5:39 am

BIG NEWS : ‘ಸೋಶಿಯಲ್ ಮೀಡಿಯಾ’ಪೋಸ್ಟ್ ಗಳ ಮೇಲೆ ಸುಖಾಸುಮ್ಮನೆ ಕೇಸ್ ಹಾಕುವಂತಿಲ್ಲ : ರಾಜ್ಯದ ಪೊಲೀಸರಿಗೆ ಮಾರ್ಗಸೂಚಿ ಪ್ರಕಟ !

ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿನ ಪೋಸ್ಟ್‌ಗಳಿಗೆ ಸಂಬಂಧಿಸಿದಂತೆ ಯಾವುದೇ ಪ್ರಾಥಮಿಕ ವಿಚಾರಣೆ ನಡೆಸದೆ “ಯಾಂತ್ರಿಕವಾಗಿ” ಎಫ್‌ಐಆರ್ (FIR) ದಾಖಲಿಸುವುದನ್ನು ತಡೆಯಲು ಕರ್ನಾಟಕ ಪೊಲೀಸ್ ಮಹಾನಿರ್ದೇಶಕ ಮತ್ತು ಐಜಿಪಿ ಡಾ. ಎಂ.ಎ. ಸಲೀಂ ಅವರು ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದ್ದಾರೆ. ಸುಪ್ರೀಂ ಕೋರ್ಟ್‌ನ ಇತ್ತೀಚಿನ ತೀರ್ಪುಗಳ ಆಧಾರದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ. ರಾಜ್ಯದ ಎಲ್ಲಾ ಪೊಲೀಸ್ ಅಧಿಕಾರಿಗಳು ಸಾಮಾಜಿಕ ಜಾಲತಾಣ ದೂರುಗಳ ವಿಷಯದಲ್ಲಿ ಈ ಕೆಳಗಿನ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು: ಯಾರಿಗೆ ಅನ್ವಯ? ಈ ಆದೇಶವು ರಾಜ್ಯದ ಎಲ್ಲಾ ಪೊಲೀಸ್ […]

ಕನ್ನಡ ದುನಿಯಾ 10 Feb 2026 5:25 am

‘ವಾಟ್ಸಾಪ್’ಬಳಕೆದಾರರಿಗೆ ಭರ್ಜರಿ ಗುಡ್ ನ್ಯೂಸ್ : ಇನ್ಮುಂದೆ ‘ವಾಟ್ಸಾಪ್ ವೆಬ್’ನಲ್ಲೂ ವಾಯ್ಸ್ , ವಿಡಿಯೋ ಕಾಲ್ ಮಾಡಬಹುದು.!

ವಾಟ್ಸಾಪ್ ಬಳಕೆದಾರರಿಗೆ ಮತ್ತೊಂದು ಅದ್ಭುತ ಫೀಚರ್ ಲಭ್ಯವಾಗಿದೆ. ಇದುವರೆಗೆ ವಾಯ್ಸ್ ಮತ್ತು ವಿಡಿಯೋ ಕಾಲಿಂಗ್ ಆಯ್ಕೆಯು ಕೇವಲ ಮೊಬೈಲ್ ಆ್ಯಪ್ ಅಥವಾ ಡೆಸ್ಕ್ಟಾಪ್ ಆ್ಯಪ್ಗೆ ಮಾತ್ರ ಸೀಮಿತವಾಗಿತ್ತು. ಇದರಿಂದಾಗಿ ಕಾಲ್ ಮಾಡಬೇಕೆಂದರೆ ಮೊಬೈಲ್ ಆ್ಯಪ್ ತೆರೆಯುವುದು ಅನಿವಾರ್ಯವಾಗಿತ್ತು. ಆದರೆ ಇನ್ಮುಂದೆ ಆ ತೊಂದರೆ ಇರುವುದಿಲ್ಲ. ವಾಟ್ಸಾಪ್ ವೆಬ್ (WhatsApp Web) ವರ್ಷನ್ನಲ್ಲಿಯೂ ಇನ್ನು ಮುಂದೆ ವಾಯ್ಸ್ ಮತ್ತು ವಿಡಿಯೋ ಕಾಲ್ ಮಾಡಬಹುದು. ಹೌದು, ವಾಟ್ಸಾಪ್ ಈ ಫೀಚರ್ ಅನ್ನು ಸದ್ದಿಲ್ಲದೆ ಆರಂಭಿಸುತ್ತಿದೆ. ಹಲವು ವರ್ಷಗಳಿಂದ ಈ ಫೀಚರ್ಗಾಗಿ […]

ಕನ್ನಡ ದುನಿಯಾ 9 Feb 2026 9:47 pm

ಉಚಿತ ಸ್ಪೆಷಲ್‌ ಇ ಖಾತಾ ಅಭಿಯಾನ ಪ್ರಾರಂಭ: 15 ದಿನದಲ್ಲಿ ಬಿ ಖಾತೆಯಿಂದ ಎ ಖಾತೆಗೆ ವರ್ಗಾವಣೆ

ಬೆಂಗಳೂರು: ಬೆಂಗಳೂರು ನಗರದಾದ್ಯಂತ ಇದುವರೆಗೂ 25 ಲಕ್ಷ ಆಸ್ತಿಗಳನ್ನು ಡಿಜಿಟಲೀಕರಣ ಮಾಡಲಾಗಿದೆ. 9 ಲಕ್ಷ ಇ ಖಾತೆಗಳನ್ನು ಜನರಿಗೆ ಹಂಚಿಕೆ ಮಾಡಲಾಗಿದೆ. ಉಚಿತವಾಗಿ ಸ್ಪೆಷಲ್‌ ಇ ಖಾತಾ ಅಭಿಯಾನ ಪ್ರಾರಂಭ ಮಾಡಲು ಎಲ್ಲಾ ಪಾಲಿಕೆಗಳಿಗೆ ಸೂಚನೆ ನೀಡಲಾಗಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಖಾತೆ ಪರಿವರ್ತನೆ ಮಾಡಿಸಿಕೊಂಡವರಿಗೆ ಖಾತಾ ಪತ್ರ ವಿತರಣೆ ಮಾಡಿ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ಆಸ್ತಿ ದಾಖಲೆಗಳ ಡಿಜಿಟಲೀಕರಣ ಈ ವರ್ಷದ ಪ್ರಮುಖ ತೀರ್ಮಾನ. ಏಕೆಂದರೆ ಕಳೆದ 50 ವರ್ಷಗಳಿಂದಲೂ ಇದು […]

ಕನ್ನಡ ದುನಿಯಾ 9 Feb 2026 9:30 pm

BREAKING : ಬೆಂಗಳೂರಲ್ಲಿ ಸಿಲಿಂಡರ್ ಸ್ಪೋಟ : ಇಬ್ಬರ ಸ್ಥಿತಿ ಗಂಭೀರ

ಬೆಂಗಳೂರು: ರಾಜಧಾನಿಯ ಕೆ.ಆರ್. ಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭೀಕರ ಸಿಲಿಂಡರ್ ಸ್ಫೋಟ ಸಂಭವಿಸಿದ್ದು, ಘಟನೆಯಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಕೆ.ಆರ್. ಪುರಂನ ಮಂಜುನಾಥ್ ಲೇಔಟ್‌ನಲ್ಲಿ ಈ ದುರಂತ ಸಂಭವಿಸಿದೆ. ಮನೆಯಲ್ಲಿದ್ದ ಗ್ಯಾಸ್ ಸಿಲಿಂಡರ್ ಏಕಾಏಕಿ ಸ್ಫೋಟಗೊಂಡ ಪರಿಣಾಮ, ಮನೆಯಲ್ಲಿದ್ದ ಪೂರ್ಣಿಮಾ (46) ಮತ್ತು ವೆಂಕಟೇಶ್ (40) ಅವರಿಗೆ ತೀವ್ರ ಸ್ವರೂಪದ ಸುಟ್ಟ ಗಾಯಗಳಾಗಿವೆ. ಪ್ರಸ್ತುತ ಇಬ್ಬರ ಸ್ಥಿತಿಯೂ ಗಂಭೀರವಾಗಿದ್ದು, ತಕ್ಷಣವೇ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಫೋಟದ ತೀವ್ರತೆಗೆ ಮನೆಯ ಕಿಟಕಿ, ಬಾಗಿಲುಗಳು […]

ಕನ್ನಡ ದುನಿಯಾ 9 Feb 2026 8:56 pm

BREAKING: ಅಂತರರಾಜ್ಯ ಸರಗಳ್ಳರು ಅರೆಸ್ಟ್: 20 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ವಶಕ್ಕೆ

ಶಿವಮೊಗ್ಗ: ಶಿವಮೊಗ್ಗ ವಿನೋಬನಗರ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಅಂತರರಾಜ್ಯ ಸರಗಳ್ಳರು ಮತ್ತು ಒಂಟಿ ಮನೆ ದರೋಡೆಕೋರರ ಬಂಧಿಸಿದ್ದಾರೆ. ದಿನಾಂಕ 18/11/2025 ರಂದು ಮದ್ಯಾಹ್ನ ಶಿವಮೊಗ್ಗ ವಿನೋಬನಗರ ಪೊಲೀಸ್ ಠಾಣೆ ವ್ಯಾಪ್ತಿಯ 60 ಅಡಿ ರಸ್ತೆ ವಿನೋಬನಗರ 16 ಕ್ರಾಸ್ ನ ರಸ್ತೆಯಲ್ಲಿ ಒಬ್ಬ ಮಹಿಳೆಯು ನಡೆದುಕೊಂಡು ಹೋಗುವಾಗ ಯಾರೋ ಒಬ್ಬ ಅಪರಿಚಿತ ವ್ಯೆಕ್ತಿ ಹಿಂಬದಿಯಿಂದ ನಡೆದುಕೊಂಡು ಬಂದು ಕೊರಳಲ್ಲಿದ್ದ ಬಂಗಾರದ ಮಾಂಗಲ್ಯ ಸರವನ್ನು ಕಿತ್ತುಕೊಂಡು ತಳ್ಳಿ ಸ್ವಲ್ಪ ದೂರದಲ್ಲಿ ಬೈಕ್ ಸ್ಟಾಟ್ ಮಾಡಿಕೊಂಡು ಕಾಯುತ್ತಿದ್ದ ವ್ಯಕ್ತಿಯ […]

ಕನ್ನಡ ದುನಿಯಾ 9 Feb 2026 8:43 pm

ರಾಜ್ಯದ ಅಲೆಮಾರಿ ಸಮುದಾಯಕ್ಕೆ ಗುಡ್ ನ್ಯೂಸ್ : ಆಹಾರ ಮಳಿಗೆ ವಾಹನ ಖರೀದಿಗೆ ಸಿಗಲಿದೆ 3 ಲಕ್ಷ ಸಹಾಯಧನ

ಆಹಾರ ವಾಹಿನಿ(ಆಹಾರ ಕಿಯೋಸ್ಕ್) ಯೋಜನೆಯಡಿ ಸ್ಥಳಾಂತರಿಸಬಹುದಾದ ತಿಂಡಿ ಮಳಿಗೆಗಳನ್ನು ನಾಲ್ಕು ಚಕ್ರಗಳ ಇಗಿ-ಗೂಡ್ಸ್ ವಾಹನಗಳನ್ನು ಅಗತ್ಯಕ್ಕೆ ತಕ್ಕಂತೆ ನವೀಕರಿಸಿ ಫಲಾನುಭವಿಗಳಿಗೆ ವಿತರಿಸುವ ಯೋಜನೆಯಾಗಿದೆ. ನಿಗಮದಿಂದ ವಾಹನ ಖರೀದಿಗೆ ರೂ.3 ಲಕ್ಷಗಳ ಸಹಾಯಧನವನ್ನು ಬಿಡುಗಡೆ ಮಾಡಲಾಗುತ್ತದೆ. ಉಳಿಕೆ ಮೊತ್ತವನ್ನು ಬ್ಯಾಂಕ್ ಗಳು/ಹಣಕಾಸು ಸಂಸ್ಥೆಗಳಿಂದ ಸಾಲ ಪಡೆಯಬಹುದಾಗಿದೆ. ನಗರ ಪ್ರದೇಶದ ವಿಧಾನಸಭಾ ಕ್ಷೇತ್ರವಾದ ಮಡಿಕೇರಿ ವಿಧಾನಸಭಾ ಕ್ಷೇತ್ರದ ಹಿಂದುಳಿದ ವರ್ಗಗಳ ಪ್ರವರ್ಗ-1ರ ಅಲೆಮಾರಿ/ಅರೆ ಅಲೆಮಾರಿ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ. ಯೋಜನೆಯ ಸೌಲಭ್ಯ ಪಡೆಯ ಬಯಸುವವರು ಹಿಂದುಳಿದ ವರ್ಗಗಳ ಪ್ರವರ್ಗ-1ರ […]

ಕನ್ನಡ ದುನಿಯಾ 9 Feb 2026 8:35 pm

‘ಪೊಲೀಸ್ ಹುದ್ದೆ’ಆಕಾಂಕ್ಷಿಗಳಿಗೆ ಗುಡ್ ನ್ಯೂಸ್ : ಉಚಿತ ‘PSI’ತರಬೇತಿಗೆ ಅರ್ಜಿ ಆಹ್ವಾನ !

ಬೆಂಗಳೂರು : ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಹಿಂದುಳಿದ ವರ್ಗಗಳ ಅರ್ಹ ಅಭ್ಯರ್ಥಿಗಳಿಗೆ ಉಚಿತವಾಗಿ ವಸತಿ ಸಹಿತ ಪೊಲೀಸ್ ಸಬ್-ಇನ್ಸ್‌ಪೆಕ್ಟರ್(PSI) ಆಯ್ಕೆ ಪೂರ್ವ ತರಬೇತಿಯನ್ನು ನೀಡುತ್ತಿದ್ದು, 2025-26ನೇ ಸಾಲಿನಲ್ಲಿ ಅರ್ಹ ಅಭ್ಯರ್ಥಿಗಳಿಂದ ಆನ್-ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ರಾಜ್ಯದ ಹಿಂದುಳಿದ ವರ್ಗಗಳ ಪ್ರವರ್ಗ-1, 2(ಎ), 3(ಎ) ಹಾಗೂ 3(ಬಿ) ಗಳಿಗೆ ಸೇರಿದ ಅರ್ಹ ಅಭ್ಯರ್ಥಿಗಳಿಗೆ ಮಾತ್ರ ವಸತಿ ಸಹಿತ ಪೊಲೀಸ್ ಸಬ್-ಇನ್ಸ್‌ಪೆಕ್ಟರ್(PSI) ಆಯ್ಕೆ ಪೂರ್ವ ತರಬೇತಿಯನ್ನು 75 ದಿನಗಳ ಅವಧಿಗೆ ಉಚಿತ […]

ಕನ್ನಡ ದುನಿಯಾ 9 Feb 2026 8:19 pm

ಗ್ರೂಪ್ ಸಿ ಹುದ್ದೆ ಪರೀಕ್ಷೆ ವೇಳೆ ಮೊಬೈಲ್, ಎಲೆಕ್ಟ್ರಿಕ್ ಡಿವೈಸ್ ಬಳಸಿ ಕಳ್ಳಾಟ ಬಯಲು: 18 ಪರೀಕ್ಷಾರ್ಥಿಗಳ ವಿಚಾರಣೆ

ಬೆಂಗಳೂರು: ಆರ್ಮಿ ಗ್ರೂಪ್ ಸಿ ಹುದ್ದೆ ಪರೀಕ್ಷೆಯ ವೇಳೆ ಕಳ್ಳಾಟ ಆರೋಪ ಹಿನ್ನೆಲೆಯಲ್ಲಿ 18 ಪರೀಕ್ಷಾರ್ಥಿಗಳನ್ನು ಕರೆತಂದು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಬೆಂಗಳೂರಿನ ಹಲಸೂರು ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸಲಾಗಿದೆ. ನಿನ್ನೆ ಹಲಸೂರು ಠಾಣಾ ವ್ಯಾಪ್ತಿಯಲ್ಲಿ ಪರೀಕ್ಷೆ ನಡೆದಿತ್ತು. ಪರೀಕ್ಷೆಯಲ್ಲಿ ಮೊಬೈಲ್, ಎಲೆಕ್ಟ್ರಿಕ್ ಡಿವೈಸ್ ಬಳಸಿ ನಕಲು ಮಾಡಲಾಗಿತ್ತು. ಮೂರು ಮೊಬೈಲ್ ಮತ್ತು ಎಲೆಕ್ಟ್ರಿಕ್ ಡಿವೈಸ್ ಗಳನ್ನು ಜಪ್ತಿ ಮಾಡಲಾಗಿತ್ತು. ಹಲಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪರೀಕ್ಷಾರ್ಥಿಗಳ ವಿಚಾರಣೆ ನಡೆಸಲಾಗಿದೆ.

ಕನ್ನಡ ದುನಿಯಾ 9 Feb 2026 8:14 pm

ಸೋಶಿಯಲ್ ಮೀಡಿಯಾದಲ್ಲಿ ಲವ್ : ನೂರಾರು ಅಪ್ರಾಪ್ತ ಬಾಲಕಿಯರು ಗರ್ಭಿಣಿ, 300 ಯುವಕರ ವಿರುದ್ಧ ಕೇಸ್.!

ಸಾಮಾಜಿಕ ಜಾಲತಾಣಗಳ ಮೂಲಕ ಶುರುವಾದ ಪ್ರೇಮ ಸಂಬಂಧಗಳು ಇಂದು ನೂರಾರು ಬಾಲಕಿಯರ ಬದುಕನ್ನು ಸಂಕಷ್ಟಕ್ಕೆ ದೂಡಿವೆ. ತಮಿಳುನಾಡಿನ ತಿರುಪತ್ತೂರು ಜಿಲ್ಲೆಯಲ್ಲಿ ಸಾಮಾಜಿಕ ಜಾಲತಾಣದ ವ್ಯಾಮೋಹದಿಂದ ನಡೆದ ಬಾಲ್ಯ ವಿವಾಹಗಳ ಪರಿಣಾಮವಾಗಿ ನೂರಾರು ಅಪ್ರಾಪ್ತೆಯರು ಗರ್ಭಿಣಿಯರಾಗಿದ್ದು, ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಹೌದು. ಇನ್ಸ್ಟಾಗ್ರಾಮ್ ಪ್ರೇಮಪಾಶಕ್ಕೆ ಬಲಿಯಾಗಿ ನೂರಾರು ಅಪ್ರಾಪ್ತ ಬಾಲಕಿಯರು ಗರ್ಭಿಣಿಯಾದ ಘಟನೆ ತಮಿಳುನಾಡಿನಲ್ಲಿ ಸಂಚಲನ ಮೂಡಿಸಿದೆ. ಈ ಸಂಬಂಧ 300ಕ್ಕೂ ಹೆಚ್ಚು ಜನರ ಮೇಲೆ ಎಫ್ಐಆರ್ ದಾಖಲಾಗಿದ್ದು, ಸಮಾಜಕ್ಕೆ ದೊಡ್ಡ ಎಚ್ಚರಿಕೆಯ ಸಂದೇಶ ರವಾನೆಯಾಗಿದೆ. ತಮಿಳುನಾಡಿನ […]

ಕನ್ನಡ ದುನಿಯಾ 9 Feb 2026 8:01 pm

BIG BREAKING: ಐಸಿಸಿ ಬೇಡಿಕೆ ತಿರಸ್ಕರಿಸಿದ ಬೆನ್ನಲ್ಲೇ ಪಾಕ್ ಯುಟರ್ನ್: ಟಿ20 ವಿಶ್ವಕಪ್ ನಲ್ಲಿ ಭಾರತದ ಎದುರು ಪಂದ್ಯವಾಡಲು ಒಪ್ಪಿಗೆ

ನವದೆಹಲಿ: ಟಿ20 ವಿಶ್ವಕಪ್ ನಲ್ಲಿ ಭಾರತದ ವಿರುದ್ಧದ ಪಂದ್ಯ ಆಡಲು ಪಾಕಿಸ್ತಾನ ಒಪ್ಪಿಗೆ ಸೂಚಿಸಿದೆ ಎಂದು ಹೇಳಲಾಗಿದೆ. ಪಾಕಿಸ್ತಾನ ಯು-ಟರ್ನ್ ತೆಗೆದುಕೊಂಡು ಮುಂಬರುವ ವಿಶ್ವಕಪ್‌ನಲ್ಲಿ ಭಾರತವನ್ನು ಎದುರಿಸುವುದಾಗಿ ದೃಢಪಡಿಸಿದೆ, ಹೈ ಪ್ರೊಫೈಲ್ ಘರ್ಷಣೆಯ ಬಗ್ಗೆ ತನ್ನ ಹಿಂದಿನ ನಿಲುವನ್ನು ಹಿಮ್ಮೆಟ್ಟಿಸಿದೆ. ಐಸಿಸಿ ಮತ್ತು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ನಡುವೆ ನಡೆಯುತ್ತಿರುವ ಚರ್ಚೆ ನಿರ್ಣಾಯಕ ಹಂತವನ್ನು ತಲುಪಿದೆ. ಭಾರತದ ವಿರುದ್ಧ ಆಡಲು ನಿರಾಕರಿಸುವ ತನ್ನ ಸಾರ್ವಜನಿಕ ನಿಲುವಿನಿಂದ ಪಿಸಿಬಿ ಹಿಂದೆ ಸರಿದು ಮತ್ತು ಮುಂದಿನ ಗಂಟೆಗಳಲ್ಲಿ ಅಂತಿಮ […]

ಕನ್ನಡ ದುನಿಯಾ 9 Feb 2026 7:59 pm

BREAKING : ಖಜಾನೆಗೆ ಬಿಲ್ಲುಗಳ ಸಲ್ಲಿಕೆ : ಫೆ.16 ರವರೆಗೆ ಗಡುವು ವಿಸ್ತರಿಸಿ ರಾಜ್ಯ ಸರ್ಕಾರ ಆದೇಶ

ಬೆಂಗಳೂರು: ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಬಿಲ್‌ಗಳನ್ನು ಖಜಾನೆಗೆ ಸಲ್ಲಿಸುವ ಗಡುವನ್ನು ವಿಸ್ತರಿಸಿ ಕರ್ನಾಟಕ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. 2025-26ನೇ ಸಾಲಿನ ವರ್ಷಾಂತ್ಯದ ಬಿಲ್‌ಗಳನ್ನು ಮಾರ್ಚ್ 31ರೊಳಗೆ ಇತ್ಯರ್ಥಪಡಿಸುವ ಉದ್ದೇಶದಿಂದ ಈ ಹಿಂದೆ ಜನವರಿ 30ರವರೆಗೆ ಕಾಲಮಿತಿ ನೀಡಲಾಗಿತ್ತು. ಆದರೆ, ಅನುದಾನದ ಲಭ್ಯತೆ ಮತ್ತು ತಾಂತ್ರಿಕ ಕಾರಣಗಳಿಂದಾಗಿ ಬಿಲ್ ಸಲ್ಲಿಕೆಗೆ ಹೆಚ್ಚಿನ ಸಮಯ ನೀಡುವಂತೆ ಕೋರಲಾಗಿತ್ತು. ಈ ಮನವಿಯನ್ನು ಪುರಸ್ಕರಿಸಿರುವ ಸರ್ಕಾರ, ಈಗ ಫೆಬ್ರವರಿ 16, 2026 ರವರೆಗೆ ಅವಧಿಯನ್ನು ವಿಸ್ತರಿಸಿದೆ. ಈ ಆದೇಶವು […]

ಕನ್ನಡ ದುನಿಯಾ 9 Feb 2026 7:48 pm

ಟೈಪ್-ಸಿ ಪೋರ್ಟ್ ಕೇವಲ ಚಾರ್ಜಿಂಗ್‌’ಗೆ ಮಾತ್ರವಲ್ಲ : ಈ ರಹಸ್ಯ ಬಳಕೆಗಳು 90% ಜನರಿಗೆ ತಿಳಿದೇ ಇಲ್ಲ!

ಬೆಂಗಳೂರು: ಇಂದಿನ ದಿನಗಳಲ್ಲಿ ಸ್ಮಾರ್ಟ್‌’ಫೋನ್‌’ನಿಂದ ಹಿಡಿದು ಲ್ಯಾಪ್‌’ಟಾಪ್‌’ವರೆಗೆ ಎಲ್ಲದರಲ್ಲೂ ಟೈಪ್-ಸಿ (USB Type-C) ಪೋರ್ಟ್ ಸರ್ವೇಸಾಮಾನ್ಯವಾಗಿದೆ. ಆದರೆ, ನಾವು ಈ ಪೋರ್ಟ್ ಅನ್ನು ಕೇವಲ ಬ್ಯಾಟರಿ ಚಾರ್ಜ್ ಮಾಡಲು ಮಾತ್ರ ಬಳಸುತ್ತಿದ್ದೇವೆ. ವಾಸ್ತವವಾಗಿ, ಈ ಪುಟ್ಟ ಪೋರ್ಟ್ನಲ್ಲಿ ಅಡಗಿರುವ ಅದ್ಭುತ ತಾಂತ್ರಿಕ ಸಾಮರ್ಥ್ಯಗಳ ಬಗ್ಗೆ ಶೇ. 90 ರಷ್ಟು ಬಳಕೆದಾರರಿಗೆ ಅರಿವೇ ಇಲ್ಲ! ನಿಮ್ಮ ಸ್ಮಾರ್ಟ್ಫೋನ್ ಅನ್ನು ಪವರ್ ಬ್ಯಾಂಕ್ ಆಗಿ ಬಳಸುವುದರಿಂದ ಹಿಡಿದು, ದೊಡ್ಡ ಪರದೆಯ ಮೇಲೆ ಸಿನಿಮಾ ನೋಡುವವರೆಗೆ ಟೈಪ್-ಸಿ ಪೋರ್ಟ್ನಿಂದ ಏನೆಲ್ಲಾ ಮಾಡಬಹುದು […]

ಕನ್ನಡ ದುನಿಯಾ 9 Feb 2026 7:31 pm

ಆಯುಷ್ಮಾನ್ ಯೋಜನೆಯಡಿ ಪ್ರಸೂತಿ ತೀವ್ರ ನಿಗಾ ಘಟಕ ಪ್ಯಾಕೇಜ್ ಹೆಚ್ಚಿನ ದರ ನಿಗದಿಗೆ ಅನುಮೋದನೆ

ಆಯುಷ್ಮಾನ್ ಭಾರತ್ -ಆರೋಗ್ಯ ಕರ್ನಾಟಕ (AB PMJAY CM’s ArK) ಯೋಜನೆಯಡಿಯಲ್ಲಿ ಸುವರ್ಣ ಆರೋಗ್ಯ ಸುರಕ್ಷ ಟ್ರಸ್ಟ್ (SAST) ಎಂಪನೇಲ್ಡ್ ಆರೋಗ್ಯ ಸೌಲಭ್ಯಗಳಿಗಾಗಿ ಪ್ರಸೂತಿ ತೀವ್ರ ನಿಗಾ ಘಟಕ (ICU) ಪ್ಯಾಕೇಜ್ ದರ ನಿಗದಿ ಮಾಡಿ ಸರ್ಕಾರ ಆದೇಶಿಸಿದೆ. ಸುವರ್ಣ ಸುರಕ್ಷಾ ಆರೋಗ್ಯ ಟ್ರಸ್ಟ್ (SAST) ನ ಎಂಪನೇಲ್ ಮಾಡಲಾದ ಸರ್ಕಾರಿ ಮತ್ತು ಖಾಸಗಿ ಆರೋಗ್ಯ ಸೌಲಭ್ಯಗಳಿಗೆ ಪ್ರಸ್ತಾವಿತ ಪ್ರಸೂತಿ ಸಂಕೇತಗಳು ಮತ್ತು ಪ್ರಸೂತಿ ತೀವ್ರ ನಿಗಾ ಘಟಕ (ICU) ಪ್ಯಾಕೇಜ್‌ಗಳಿಗೆ ಹೆಚ್ಚಿದ ದರಗಳಿಗೆ ಅನುಮೋದನೆ ನೀಡಲಾಗಿದೆ. […]

ಕನ್ನಡ ದುನಿಯಾ 9 Feb 2026 7:26 pm

BREAKING: ಟಿ20 ವಿಶ್ವಕಪ್ ಭಾರತ ಎದುರಿನ ಪಂದ್ಯ ಬಹಿಷ್ಕರಿಸಿ 3 ಬೇಡಿಕೆ ಇಟ್ಟ ಪಾಕಿಸ್ತಾನಕ್ಕೆ ಬಿಗ್ ಶಾಕ್: ದ್ವಿಪಕ್ಷೀಯ ಸರಣಿ ಬೇಡಿಕೆ ತಿರಸ್ಕರಿಸಿದ ಐಸಿಸಿ

ನವದೆಹಲಿ: ಟಿ20 ವಿಶ್ವಕಪ್ ಬಹಿಷ್ಕಾರ ವಿವಾದದ ನಡುವೆ ಭಾರತದೊಂದಿಗೆ ದ್ವಿಪಕ್ಷೀಯ ಸರಣಿಗೆ ಪಾಕಿಸ್ತಾನದ ಬೇಡಿಕೆಯನ್ನು ಐಸಿಸಿ ತಿರಸ್ಕರಿಸಿದೆ. ಹೌದು ಪ್ರಮುಖ ಬೆಳವಣಿಗೆಯೊಂದರಲ್ಲಿ ಭಾರತೀಯ ತಂಡದೊಂದಿಗೆ ದ್ವಿಪಕ್ಷೀಯ ಸರಣಿಯನ್ನು ಪುನರಾರಂಭಿಸಬೇಕೆಂಬ ಪಿಸಿಬಿಯ(ಪಾಕಿಸ್ತಾನ ಕ್ರಿಕೆಟ್ ಮಂಡಳಿ) ಬೇಡಿಕೆಯನ್ನು ಐಸಿಸಿ (ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ) ತಿರಸ್ಕರಿಸಿದೆ. 2026 ರ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ಸರ್ಕಾರ ಭಾರತದ ವಿರುದ್ಧ ಆಡಲು ತಮ್ಮ ತಂಡಕ್ಕೆ ಅವಕಾಶ ನೀಡಲು ನಿರಾಕರಿಸಿದ ಕಾರಣ ಸಭೆ ನಡೆದ ನಂತರ ಪಿಸಿಬಿ ಅಂತಹ ಬೇಡಿಕೆಗಳನ್ನು ಮುಂದಿಟ್ಟಿದೆ. ಟಿ20 ವಿಶ್ವಕಪ್‌ನಲ್ಲಿ ನಡೆಯುತ್ತಿರುವ […]

ಕನ್ನಡ ದುನಿಯಾ 9 Feb 2026 7:05 pm

ALERT : ಹುಲಿ ಎದುರಾದರೆ ಹೆದರಬೇಡಿ, ಈ ಜೀವ ರಕ್ಷಕ ಸೂತ್ರಗಳನ್ನು ಪಾಲಿಸಿ !

ಹುಲಿ-ಮಾನವ ಸಂಘರ್ಷ (Tiger-Human Conflict) ಎಂಬುದು ಇಂದಿನ ದಿನಗಳಲ್ಲಿ ಒಂದು ಗಂಭೀರ ಸವಾಲಾಗಿದೆ. ಅರಣ್ಯ ಪ್ರದೇಶಗಳ ನಾಶ ಮತ್ತು ಜನವಸತಿ ಪ್ರದೇಶಗಳ ವಿಸ್ತರಣೆಯಿಂದಾಗಿ ಈ ಸಮಸ್ಯೆ ಉಲ್ಬಣಿಸುತ್ತಿದೆ. ಹುಲಿಗಳ ಸಂಘರ್ಷ ಹೆಚ್ಚಾಗುತ್ತಿರುವ ಇಂದಿನ ದಿನಗಳಲ್ಲಿ ಈ ಕೆಳಗಿನ ಸುರಕ್ಷತಾ ಕ್ರಮಗಳು ಅತ್ಯಂತ ನಿರ್ಣಾಯಕವಾಗಿವೆ. ಇವುಗಳನ್ನು ‘ಜೀವ ರಕ್ಷಕ ಸೂತ್ರಗಳು’ ಎಂದು ಪರಿಗಣಿಸಬಹುದು. ಅರಣ್ಯಗಳು ಚಿಕ್ಕದಾಗುತ್ತಿರುವುದರಿಂದ ಹುಲಿಗಳಿಗೆ ತಮ್ಮದೇ ಆದ ‘ಟೆರಿಟರಿ’ (ಭೂಪ್ರದೇಶ) ನಿರ್ಮಿಸಿಕೊಳ್ಳಲು ಜಾಗ ಸಾಲುತ್ತಿಲ್ಲ.ಕಾಡಿನಲ್ಲಿ ಜಿಂಕೆ, ಕಾಡುಹಂದಿಗಳ ಸಂಖ್ಯೆ ಕಡಿಮೆಯಾದಾಗ ಹುಲಿಗಳು ಆಹಾರಕ್ಕಾಗಿ ಹಳ್ಳಿಗಳತ್ತ ಮುಖ […]

ಕನ್ನಡ ದುನಿಯಾ 9 Feb 2026 6:57 pm

ಗೃಹಲಕ್ಷ್ಮಿ ಫಲಾನುಭವಿಗಳಿಗೆ ಜೀವಿತ ಪ್ರಮಾಣ ಪತ್ರ ಕಡ್ಡಾಯ: ಗ್ಯಾರಂಟಿ ನಿಲ್ಲಿಸುವ ಹುನ್ನಾರ: ಆರ್. ಅಶೋಕ್ ಆಕ್ರೋಶ

ಬೆಂಗಳೂರು: ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳು ಜೀವಿತ ಪ್ರಮಾಣ ಪತ್ರ(ಲೈಫ್ ಸರ್ಟಿಫಿಕೇಟ್) ಕೊಡಬೇಕು ಎನ್ನುವ ಹೊಸ ನಿಯಮ ಜಾರಿಗೊಳಿಸಲು ಸರ್ಕಾರ ಮುಂದಾಗಿರುವುದಕ್ಕೆ ವಿಧಾನಸಭೆ ವಿಪಕ್ಷ ನಾಯಕ ಾರ್. ಅಶೋಕ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಸರ್ಕಾರ ಬಂದ ಮೇಲೆ ಎರಡು ಲಕ್ಷ ಕೋಟಿ ರೂ. ಸಾಲ ಮಾಡಿದೆ. ಈ ಬಜೆಟ್ ಗೆ ಸಾಲದ ಮೊತ್ತ ಮೂರು ಲಕ್ಷ ಕೋಟಿ ರೂ. ಆಗಲಿದೆ. ಅವರ ಬಳಿ ಹಣವಿಲ್ಲದ ಕಾರಣ ಈಗಾಗಲೇ ಪಡಿತರ ಚೀಟಿಗಳನ್ನು ರದ್ದು ಮಾಡುತ್ತಿದ್ದಾರೆ. ಈಗ ಗ್ಯಾರಂಟಿ ಯೋಜನೆಗಳನ್ನು ಕಡಿತ […]

ಕನ್ನಡ ದುನಿಯಾ 9 Feb 2026 6:48 pm

SHOCKNG : 8 ವರ್ಷದಿಂದ ಸುಖ ನೀಡದ ಪತ್ನಿ : ಬೇಸತ್ತು ಖಾಸಗಿ ಅಂಗವನ್ನೇ ಕತ್ತರಿಸಿಕೊಂಡ ಪತಿ.!

“ದಾಂಪತ್ಯ ಜೀವನದಲ್ಲಿ ದೈಹಿಕ ಸುಖದ ಕೊರತೆ ಎಂತಹ ಘೋರ ಅನಾಹುತಕ್ಕೆ ಕಾರಣವಾಗಬಹುದು ಎಂಬುದಕ್ಕೆ ಈ ಬೆಚ್ಚಿಬೀಳಿಸುವ ಘಟನೆಯೇ ಸಾಕ್ಷಿ. ಕಳೆದ ಎಂಟು ವರ್ಷಗಳಿಂದ ಪತ್ನಿಯು ದೈಹಿಕ ಸಂಬಂಧಕ್ಕೆ ಸಹಕರಿಸುತ್ತಿಲ್ಲ ಎಂಬ ಹತಾಶೆಯಿಂದ ಮನನೊಂದ ಪತಿಯೊಬ್ಬ, ತನ್ನ ಜನನಾಂಗವನ್ನೇ ಕತ್ತರಿಸಿಕೊಂಡಿರುವ ದಾರುಣ ಘಟನೆ ಉತ್ತರ ಪ್ರದೇಶದ ಸೀತಾಪುರದಲ್ಲಿ ನಡೆದಿದೆ. ಸಂಸಾರದಲ್ಲಿನ ಅತೃಪ್ತಿ ಮನುಷ್ಯನನ್ನು ಯಾವ ಮಟ್ಟದ ಹುಚ್ಚು ಸಾಹಸಕ್ಕೆ ತಳ್ಳುತ್ತದೆ ಎಂಬುದನ್ನು ಈ ಘಟನೆ ತೋರಿಸಿಕೊಟ್ಟಿದೆ. ಉತ್ತರ ಪ್ರದೇಶದ ಸೀತಾಪುರ ಜಿಲ್ಲೆಯಲ್ಲಿ ಅತ್ಯಂತ ಆಘಾತಕಾರಿ ಮತ್ತು ವಿಲಕ್ಷಣ ಘಟನೆಯೊಂದು […]

ಕನ್ನಡ ದುನಿಯಾ 9 Feb 2026 6:39 pm

SHOCKING: ತಡೆಗೋಡೆಗೆ ಆಟೋ ಡಿಕ್ಕಿ: ರುಂಡ, ಮುಂಡ ಬೇರ್ಪಟ್ಟು ಮಹಿಳೆ ಸಾವು

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕು ನಾಲೂರು ಸಮೀಪ ವೇಗವಾಗಿದ್ದ ಆಟೋ ತಡೆಗೋಡೆಗೆ ಡಿಕ್ಕಿ ಹೊಡೆದು ಸಂಭವಿಸಿದ ಭೀಕರ ಅಪಘಾತದಲ್ಲಿ ಆಟೋದಲ್ಲಿದ್ದ ಮಹಿಳೆ ರುಂಡ, ಮುಂಡ ಬೇರ್ಪಟ್ಟು ಸಾವನ್ನಪ್ಪಿದ್ದಾರೆ. ನಿಶ್ಮಿತಾ ಶೆಟ್ಟಿ(27) ಮೃತಪಟ್ಟವರು. ಅವರ ಪತಿ ಸುದರ್ಶನ್ ಶೆಟ್ಟಿ(35), ಪುತ್ರ ಸಂಚಿತ್(7) ಗಾಯಗೊಂಡಿದ್ದು ತೀರ್ಥಹಳ್ಳಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಟೋ ಚಾಲಕ ಯಲ್ಲಪ್ಪ ಕೂಡ ಗಾಯಗೊಂಡಿದ್ದಾರೆ. ಆಟೋ ಚಾಲಕನ ನಿರ್ಲಕ್ಷವೇ ಅಪಘಾತಕ್ಕೆ ಕಾರಣವೆನ್ನಲಾಗಿದೆ. ತೀರ್ಥಹಳ್ಳಿ ಪಟ್ಟಣದ ಆಗುಂಬೆ ಬಸ್ ನಿಲ್ದಾಣ ಸಮೀಪದ ಹೋಟೆಲ್ ಮಾಲೀಕರಾದ ಸುದರ್ಶನ್ ಶೆಟ್ಟಿ ಮತ್ತು […]

ಕನ್ನಡ ದುನಿಯಾ 9 Feb 2026 6:34 pm

ಬೆಸ್ಕಾಂ ನೇಮಕಾತಿ: ವೇತನ, ವಿದ್ಯಾರ್ಹತೆಯ ವಿವರಗಳು

ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಬೆಸ್ಕಾಂ) 2026ನೇ ಸಾಲಿನ ಅಪ್ರೆಂಟಿಸ್ ತರಬೇತಿಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ. ಒಟ್ಟು 520 ಹುದ್ದೆಗಳಿದ್ದು, ಇಂಜಿನಿಯರಿಂಗ್ ಪದವೀಧರರು ಮಾತ್ರವಲ್ಲ ಬಿಎ, ಬಿಕಾಂ, ಬಿಎಸ್‌ಸಿ ಪದವೀಧರರಿಗೂ ತರಬೇತಿ ಪಡೆಯುವ ಅವಕಾಶವಿದೆ. ಅರ್ಜಿ ಸಲ್ಲಿಕೆ ಮಾಡುವ ಅಭ್ಯರ್ಥಿಗಳಿಗೆ ಕನ್ನಡ ಭಾಷಾ ಜ್ಞಾನ ಕಡ್ಡಾಯ. ಈಗಾಗಲೇ ಅಪ್ರೆಂಟಿಸ್ ತರಬೇತಿ ಪಡೆದವರು ಅಥವ ಒಂದು ವರ್ಷಕ್ಕೂ ಹೆಚ್ಚು ಕೆಲಸದ ಅನುಭವ ಇರುವವರು ಅರ್ಜಿಗಳನ್ನು ಸಲ್ಲಿಸುವಂತಿಲ್ಲ. ಅಭ್ಯರ್ಥಿಗಳ ಆಯ್ಕೆಗೆ ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ. ಮೆರಿಟ್ ಮೂಲಕ ಆಯ್ಕೆ […]

ಕನ್ನಡ ದುನಿಯಾ 9 Feb 2026 6:19 pm

ಬೆಂಗಳೂರು ಮಹಿಳೆಯರಿಗೆ ಗುಡ್ ನ್ಯೂಸ್: ಪ್ರೇಮಿಗಳ ದಿನದಂದೇ ಆರಂಭವಾಗಲಿದೆ ಸಖಿ ಆಟೋ

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು ಮಹಿಳೆಯರಿಗೆ ಇಲ್ಲೊಂದು ಖುಷಿ ಸುದ್ದಿಯಿದೆ. ಮಹಿಳಾ ಸಬಲೀಕರಣ ಹಾಗೂ ಮಹಿಳೆಯರ ಸುರಕ್ಷತೆ ದೃಷ್ಟಿಯಿಂದ ಸಖಿ ಆಟೋ ಎಂಬ ವಿಶೇಷ ಆಟೋ ಆರಂಭವಾಗಲಿದೆ. ಇದೇ ಫೆಬ್ರವರಿ 14 ರಂದು ಪ್ರೇಮಿಗಳ ದಿನದಂದೆ ಈ ಆಟೋ ಸೇವೆ ಆರಂಭವಾಗಲಿದೆ. ಮಹಿಳಾ ಚಾಲಕಿಯರೇ ಇರಲಿರುವ ಈ ಆಟೋ ಮಹಿಳೆಯರಿಗಾಗಿಯೇ ಕಾರ್ಯನಿರ್ವಹಿಸಲಿದೆ. ಮಹಿಳೆಯರೇ ಮಹಿಳೆಯರಿಗಾಗಿ ಆರಂಭಿಸಲಿರುವ ವಿಶೇಷ ಸಾರಿಗೆ ವ್ಯವಸ್ಥೆ ಇದಾಗಿದೆ. ಸಖಿ ಆಟೋದಲ್ಲಿ ಮೊದಲ 2 ಕಿ.ಮೀ.ಗೆ 50 ರೂ. ಶುಲ್ಕವಿದ್ದು, ನಂತರದ ಪ್ರತಿ ಕಿಲೋಮೀಟರ್‌ಗೆ […]

ಕನ್ನಡ ದುನಿಯಾ 9 Feb 2026 6:13 pm

ಟಿ20 ವಿಶ್ವಕಪ್ ಸಮರ: ಇಂದು ಅಹಮದಾಬಾದ್‌ನಲ್ಲಿ ದಕ್ಷಿಣ ಆಫ್ರಿಕಾ ಮತ್ತು ಕೆನಡಾ ಮುಖಾಮುಖಿ: ಹರಿಣಗಳಿಗೆ ಕಂಟಕವಾಗಲಿದೆಯೇ ಕೆನಡಾ?

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಗೆದ್ದು ಬೀಗುತ್ತಿರುವ ದಕ್ಷಿಣ ಆಫ್ರಿಕಾ ತಂಡವು ಇಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಕೆನಡಾ ವಿರುದ್ಧ ಸೆಣಸುವ ಮೂಲಕ ತನ್ನ ಟಿ20 ವಿಶ್ವಕಪ್ 2026ರ ಅಭಿಯಾನವನ್ನು ಆರಂಭಿಸಲಿದೆ. ಕಳೆದ ಟಿ20 ವಿಶ್ವಕಪ್‌ನಲ್ಲಿ ರನ್ನರ್ ಅಪ್ ಆಗಿದ್ದ ಏಡನ್ ಮಾರ್ಕ್ರಾಮ್ ನೇತೃತ್ವದ ದಕ್ಷಿಣ ಆಫ್ರಿಕಾ ತಂಡವು ಈ ಬಾರಿ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದೆ. 2024ರ ವಿಶ್ವಕಪ್ ಫೈನಲ್‌ನಲ್ಲಿ ಭಾರತದ ವಿರುದ್ಧ ಅನುಭವಿಸಿದ ಸೋಲಿನ ಕಹಿ ನೆನಪನ್ನು ಮರೆತು ಹೊಸ ಹುರುಪಿನೊಂದಿಗೆ ಕಣಕ್ಕಿಳಿಯಲು ಹರಿಣಗಳ ಪಡೆ […]

ಕನ್ನಡ ದುನಿಯಾ 9 Feb 2026 6:08 pm

ಖಾಸಗಿ ಶಾಲೆಗಳ ಮಾನ್ಯತೆ ನವೀಕರಣ : ಫೆ. 16ರ ವರೆಗೆ ಗಡುವು ವಿಸ್ತರಣೆ

ಚಿತ್ರದುರ್ಗ : ಚಿತ್ರದುರ್ಗ ತಾಲ್ಲೂಕಿನ ವ್ಯಾಪ್ತಿಯಲ್ಲಿರುವ ಎಲ್ಲಾ ಖಾಸಗಿ ಅನುದಾನಿತ ಹಾಗೂ ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಮಾನ್ಯತೆ ನವೀಕರಣಕ್ಕೆ ಇದೇ ಫೆಬ್ರವರಿ 16ರ ವರೆಗೆ ಕಾಲಾವಕಾಶ ವಿಸ್ತರಿಸಲಾಗಿದೆ ಎಂದು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ. ಪ್ರತಿ ಶೈಕ್ಷಣಿಕ ವರ್ಷದಲ್ಲಿ ಶಾಲೆಗಳನ್ನು ನಡೆಸಲು ಸಕ್ಷಮ ಪ್ರಾಧಿಕಾರದಿಂದ ಮಾನ್ಯತೆ ಪಡೆಯುವುದು ಕಡ್ಡಾಯವಾಗಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರು ಮಾನ್ಯತೆ ನವೀಕರಿಸಲು 2026ರ ಫೆಬ್ರವರಿ 16 ರವರೆಗೆ ಅವಧಿ ವಿಸ್ತರಿಸಿ ಆದೇಶಿಸಿದ್ದಾರೆ. ಚಿತ್ರದುರ್ಗ […]

ಕನ್ನಡ ದುನಿಯಾ 9 Feb 2026 6:05 pm

ನಿಮ್ಮ ಮಗು ಸೂಪರ್ ಇಂಟೆಲಿಜೆಂಟ್ ಹಾಗೂ ಸುಂದರವಾಗಿ ಜನಿಸಬೇಕೇ? ಈ ಆಹಾರಗಳನ್ನು ಮರೆಯದೇ ಸೇವಿಸಿ

ಬೆಂಗಳೂರು: ಪ್ರತಿಯೊಬ್ಬ ತಾಯಿಗೂ ತನ್ನ ಮಗು ಸುಂದರವಾಗಿರಬೇಕು, ಎಲ್ಲರಿಗಿಂತ ಬುದ್ಧಿವಂತನಾಗಿರಬೇಕು ಮತ್ತು ಜೀವನದಲ್ಲಿ ದೊಡ್ಡ ಸಾಧನೆ ಮಾಡಬೇಕು ಎಂಬ ಕನಸಿರುತ್ತದೆ. ಆದರೆ, ಮಗುವಿನ ಈ ಜಾಣತನ ಮತ್ತು ಆರೋಗ್ಯ ನಿರ್ಧಾರವಾಗುವುದು ಆ ಮಗು ಗರ್ಭದಲ್ಲಿರುವಾಗಲೇ ಎಂಬುದು ನಿಮಗೆ ಗೊತ್ತೇ? ಹೌದು, ಗರ್ಭಾವಸ್ಥೆಯ ಒಂಬತ್ತು ತಿಂಗಳುಗಳಲ್ಲಿ ತಾಯಿ ಸೇವಿಸುವ ಆಹಾರ ಮತ್ತು ಆಕೆಯ ಜೀವನಶೈಲಿ ಮಗುವಿನ ಐಕ್ಯೂ (IQ) ಮಟ್ಟವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಕೇವಲ ಹಸಿವು ನೀಗಿಸಲು ಆಹಾರ ಸೇವಿಸುವುದಕ್ಕಿಂತ, ಮಗುವಿನ ಮೆದುಳಿನ ಬೆಳವಣಿಗೆಗೆ ಪೂರಕವಾದ […]

ಕನ್ನಡ ದುನಿಯಾ 9 Feb 2026 5:55 pm

ಬೆಂಗಳೂರಿನ ಜಪಾನ್, ಡಚ್ ರಾಯಭಾರ ಕಚೇರಿಗೆ ಬಾಂಬ್ ಬೆದರಿಕೆ: ತಮಿಳುನಾಡು ಸಿಎಂ ಪುತ್ರನ ಹೆಸರು ಉಲ್ಲೇಖ

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿರುವ ಜಪಾನ್ ಹಾಗೂ ಡಚ್ ರಾಯಭಾರ ಕಚೇರಿಗಳಿಗೆ ಬಾಂಬ್ ಬೆದರಿಕೆ ಕರೆ ಬಂದಿದೆ. ಕಳೆದ ಹತ್ತು ದಿನಗಳಲ್ಲಿ ಬಂದಿರುವ ಎರಡನೇ ಬಾಂಬ್ ಬೆದರಿಕೆ ಕರೆ ಇದಾಗಿದೆ. ಬೆಂಗಳೂರು ನಗರದಲ್ಲಿರುವ ಜಪಾನ್ ಹಾಗೂ ಡಚ್ ರಾಯಭಾರ ಕಚೇರಿಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಸಂದೇಶ ಬಂದಿದೆ. ಬಾಂಬ್ ಬೆದರಿಕೆ ಇ-ಮೇಲ್ ನಲ್ಲಿ ಅಪರಿಚಿತರು ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್ ಪುತ್ರ, ಡಿಸಿಎಂ ಉದಯನಿಧಿ ಸ್ಟಾಲಿನ್ ಹೆಸರನ್ನು ಉಲ್ಲೇಖಿಸಿದ್ದಾರೆ. ಕೋರಮಂಡಲ್ ಹೋಟೆಲ್ ನ ಕೊಠಡಿ ಸಂಖ್ಯೆ 536ರಲ್ಲಿ […]

ಕನ್ನಡ ದುನಿಯಾ 9 Feb 2026 5:35 pm

ಮುಡಾ ಹಗರಣ: ಬಿ ರಿಪೋರ್ಟ್ ನೀಡಲು ಲೋಕಾಯುಕ್ತ ಅಧಿಕಾರಿಗಳಿಗೆ 4 ಕೋಟಿ 35 ಲಕ್ಷ ಲಂಚ ನೀಡಲಾಗಿದೆ: ಸ್ನೇಹಮಯಿ ಕೃಷ್ಣ ಆರೋಪ

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಪತ್ನಿ ಪಾರ್ವತಿ ವಿರುದ್ಧ ದೂರು ದಾಖಲಿಸಿದ್ದ ಸ್ನೇಹಮಯಿ ಕೃಷ್ಣಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಹಿನ್ನಡೆಯಾಗಿದ್ದರೂ, ಮತ್ತೆ ಹೋರಾಟ ಮುಂದುವರೆಸಿರುವ ಸ್ನೇಹಮಯಿ ಕೃಷ್ಣ ಇದೀಗ ಮತ್ತೊಂದು ಗಂಭೀರ ಆರೋಪ ಮಡಿದ್ದಾರೆ. ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸ್ನೇಹಮಯಿ ಕೃಷ್ಣ, ಮುಡಾ ಹಗರಣದ ತನಿಖೆ ನಡೆಸಿರುವ ಲೋಕಾಯುಕ್ತ ಅಧಿಕಾರಿಗಳಿಗೆ ಕೋಟಿ ಕೋಟಿ ಲಂಚ ನೀಡಲಾಗಿದೆ. ಹಾಗಾಗಿಯೇ ಮುಡಾ ಹಗರಣದಲ್ಲಿ ಲೋಕಾಯುಕ್ತ ಬಿ ರಿಪೋರ್ಟ್ ನೀಡಿದೆ ಎಂದು ಗಂಭೀರ ಆರೋಪ […]

ಕನ್ನಡ ದುನಿಯಾ 9 Feb 2026 5:09 pm

ಸ್ಟಾರ್ ಗಾಯಕಿ ರಾಣು ಮೊಂಡಲ್ ಬದುಕು ಈಗ ಹೀಗಿದೆ ನೋಡಿ: ನೆರೆಯವರ ದಾನವೇ ಇವರ ಜೀವನಾಧಾರ

ಬಾಲಿವುಡ್ ಎಂಬ ಬಣ್ಣದ ಲೋಕ ಎಷ್ಟು ಅದ್ಭುತವೋ ಅಷ್ಟೇ ನಿಗೂಢ. ಇಲ್ಲಿ ರಾತ್ರೋರಾತ್ರಿ ಸ್ಟಾರ್ ಆದವರು ಅಷ್ಟೇ ವೇಗವಾಗಿ ಮರೆಯಾದ ಉದಾಹರಣೆಗಳು ಸಾಕಷ್ಟಿವೆ. ಇದಕ್ಕೆ ತಾಜಾ ಉದಾಹರಣೆ ಎಂದರೆ ಗಾಯಕಿ ರಾಣು ಮೊಂಡಲ್. 2019ರಲ್ಲಿ ಪಶ್ಚಿಮ ಬಂಗಾಳದ ರಣಘಾಟ್ ರೈಲ್ವೇ ನಿಲ್ದಾಣದಲ್ಲಿ ಲತಾ ಮಂಗೇಶ್ಕರ್ ಅವರ ಹಾಡನ್ನು ಹಾಡುವ ಮೂಲಕ ಇಡೀ ದೇಶದ ಗಮನ ಸೆಳೆದಿದ್ದ ಈ ಪ್ರತಿಭೆ, ಇಂದು ಮತ್ತೆ ಹಳೆಯ ಬಡತನದ ಕೂಪಕ್ಕೆ ತಳ್ಳಲ್ಪಟ್ಟಿದ್ದಾರೆ. ಸಂಗೀತ ನಿರ್ದೇಶಕ ಹಿಮೇಶ್ ರೇಶಮಿಯಾ ಅವರು ರಾಣು ಮೊಂಡಲ್ […]

ಕನ್ನಡ ದುನಿಯಾ 9 Feb 2026 5:00 pm

ಹೆದ್ದಾರಿಗಳ ಸುಧಾರಣೆ: ಖಡಕ್ ಸೂಚನೆ ಕೊಟ್ಟು, ಗಡುವು ನೀಡಿದ ಮೋದಿ

ಪ್ರಧಾನಿ ನರೇಂದ್ರ ಮೋದಿ ಕೇಂದ್ರ ಬಜೆಟ್ 2026ರ ಬಳಿಕ ಭಾರತದ ರಾಷ್ಟ್ರೀಯ ಹೆದ್ದಾರಿಗಳ ಸುಧಾರಣೆ ಕಡೆ ಗಮನಹರಿಸಿದ್ದಾರೆ. ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಖಾತೆ ಅಧಿಕಾರಿಗಳಿಗೆ ಅವರು ಖಡಕ್ ಸೂಚನೆಗಳನ್ನು ನೀಡಿದ್ದಾರೆ. ದೇಶದಲ್ಲಿ ಹೆದ್ದಾರಿಗಳು ಸುಧಾರಣೆಯಾಗಬೇಕಿದೆ. ಕಾಮಗಾರಿಗಳು ಬೇಗ ಮುಗಿಯಬೇಕಿದೆ ಎಂದು ನಿರ್ದೇಶನ ನೀಡಿ ಮೇ ತಿಂಗಳ ಗುಡುವನ್ನು ಕೊಟ್ಟಿದ್ದಾರೆ. ಸರಿಯಾಗಿ ಕಾಮಗಾರಿ ನಿರ್ವಹಣೆ ಮಾಡದ ಕಾಂಟ್ರಾಕ್ಟರ್‌ಗಳನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಎಂದು ನಿರ್ದೇಶಿಸಿದ್ದಾರೆ. ಹೆದ್ದಾರಿಗಳ ಗುಣಮಟ್ಟವನ್ನು ಸುಧಾರಿಸಲು ಒತ್ತು ನೀಡುವಂತೆ ಸಚಿವಾಲಯಕ್ಕೆ ಪ್ರಧಾನಿ ನರೇಂದ್ರ ಮೋದಿ […]

ಕನ್ನಡ ದುನಿಯಾ 9 Feb 2026 4:46 pm