SENSEX
NIFTY
GOLD
USD/INR

Weather

18    C

ಡಿಜಿಟಲ್ ಸುದ್ದಿ ಮೂಲಗಳು

... ...View News by News Source

BIG NEWS: ಭಾರತೀಯ ಪ್ರಜೆಗಳಿಗೆ ಗುಡ್ ನ್ಯೂಸ್: ವೀಸಾ ರಹಿತ ಪ್ರಯಾಣ ಘೋಷಿಸಿದ ಜರ್ಮನಿ: ಪ್ರಧಾನಿ ಮೋದಿ ಹೇಳಿಕೆ

ಗಾಂಧಿನಗರ: ಭಾರತೀಯ ಪ್ರಜೆಗಳಿಗೆ ಅಂತರರಾಷ್ಟ್ರೀಯ ಪ್ರಯಾಣವನ್ನು ಸುಗಮಗೊಳಿಸುವ ನಿರೀಕ್ಷೆಯ ಕ್ರಮವಾಗಿ ಜರ್ಮನಿ ಸೋಮವಾರ ತನ್ನ ವಿಮಾನ ನಿಲ್ದಾಣಗಳ ಮೂಲಕ ಪ್ರಯಾಣಿಸುವ ಭಾರತೀಯ ಪಾಸ್‌ಪೋರ್ಟ್ ಹೊಂದಿರುವವರಿಗೆ ವೀಸಾ ರಹಿತ ಸಾರಿಗೆಯನ್ನು ಘೋಷಿಸಿದೆ. ಸೋಮವಾರ ಪ್ರಾರಂಭವಾದ ಜರ್ಮನ್ ಚಾನ್ಸೆಲರ್ ಫ್ರೆಡ್ರಿಕ್ ಮೆರ್ಜ್ ಅವರ ಎರಡು ದಿನಗಳ ಭಾರತ ಭೇಟಿಯ ಸಂದರ್ಭದಲ್ಲಿ ಈ ಘೋಷಣೆ ಮಾಡಲಾಗಿದೆ. ಇದಕ್ಕೂ ಮೊದಲು, ಜರ್ಮನ್ ವಿಮಾನ ನಿಲ್ದಾಣ ಅಥವಾ ವಿಶಾಲವಾದ ಷೆಂಗೆನ್ ಪ್ರದೇಶದ ಮೂಲಕ ಪ್ರಯಾಣಿಸುವಾಗ ಭಾರತೀಯ ಪ್ರಜೆಗಳಿಗೆ ಷೆಂಗೆನ್ ಸಾರಿಗೆ ವೀಸಾ ಅಗತ್ಯವಿತ್ತು. ಆದಾಗ್ಯೂ, […]

ಕನ್ನಡ ದುನಿಯಾ 12 Jan 2026 9:42 pm

BREAKING: ಸ್ನೇಹಿತರ ನಡುವೆ ಗಲಾಟೆ ಕೊಲೆಯಲ್ಲಿ ಅಂತ್ಯ: ಒಂದೇ ಏಟಿಗೆ ಮೃತಪಟ್ಟ ವ್ಯಕ್ತಿ

ಹಾವೇರಿ: ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರ ಮಧ್ಯೆ ಗಲಾಟೆಯಾಗಿದ್ದು ಓರ್ವನನ್ನು ಹತ್ಯೆ ಮಾಡಲಾಗಿದೆ. ಹಾವೇರಿ ಜಿಲ್ಲೆ ಶಿಗ್ಗಾಂವಿಯಲ್ಲಿ ರಫೀಕ್ ಕಳಸಗೇರಿ(50) ಅವರನ್ನು ಕೊಲೆ ಮಾಡಲಾಗಿದೆ. ಗಲಾಟೆಯ ವೇಳೆ ಒಂದೇ ಏಟಿಗೆ ರಫೀಕ್ ಕಳಸಗೇರಿ ಮೃತಪಟ್ಟಿದ್ದಾರೆ. ಮುಸ್ತಾಕ್ ಮುಲ್ಲಾ ಜೊತೆ ಜಗಳದ ವೇಳೆ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ. ಶಿಗ್ಗಾಂವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಹೆಚ್ಚಿನ ವಿವರ ನಿರೀಕ್ಷಿಸಲಾಗಿದೆ.

ಕನ್ನಡ ದುನಿಯಾ 12 Jan 2026 9:30 pm

ಭಕ್ತರಿಗೆ ಭರ್ಜರಿ ಗುಡ್ ನ್ಯೂಸ್: ಅಯೋಧ್ಯೆ, ಪುರಿ ಸೇರಿ ವಿವಿಧೆಡೆಗೆ ಕೈಗೆಟುಕುವ ದರದಲ್ಲಿ IRCTC ಅದ್ಭುತ ಪ್ರವಾಸ ಪ್ಯಾಕೇಜ್

ನವದೆಹಲಿ: IRCTC ತನ್ನ ಗ್ರಾಹಕರಿಗೆ ಬಹುತೇಕ ಪ್ರತಿದಿನ ಹೊಸ ಪ್ರವಾಸ ಪ್ಯಾಕೇಜ್‌ಗಳನ್ನು ಪರಿಚಯಿಸುತ್ತದೆ. ಈ ಬಾರಿ, IRCTC ಗಯಾ, ಪುರಿ ಜಗನ್ನಾಥ, ಕೋನಾರ್ಕ್ ದೇವಸ್ಥಾನ, ಕೋಲ್ಕತ್ತಾ, ಗಂಗಾಸಾಗರ್, ಬೈದ್ಯನಾಥ ಧಾಮ, ವಾರಣಾಸಿ ಮತ್ತು ಅಯೋಧ್ಯೆಗೆ ಭೇಟಿ ನೀಡುವ ಅದ್ಭುತ ಪ್ರವಾಸ ಪ್ಯಾಕೇಜ್ ಅನ್ನು ಪರಿಚಯಿಸಲಿದೆ. 9-ಹಗಲು ಮತ್ತು 10-ರಾತ್ರಿಗಳ ಪ್ರವಾಸ ಪ್ಯಾಕೇಜ್ ಫೆಬ್ರವರಿ 5 ರಿಂದ ಪ್ರಾರಂಭವಾಗುತ್ತದೆ ಮತ್ತು ಫೆಬ್ರವರಿ 14 ರವರೆಗೆ ಮುಂದುವರಿಯುತ್ತದೆ. ಪ್ಯಾಕೇಜ್‌ ನಲ್ಲಿ ಒಳಗೊಂಡಿರುವ ಸ್ಥಳಗಳು ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ […]

ಕನ್ನಡ ದುನಿಯಾ 12 Jan 2026 9:23 pm

BIG NEWS: ಬೆಂಗಳೂರು ವಿಮಾನ ನಿಲ್ದಾಣ ಪ್ರಯಾಣಿಕರ ದಟ್ಟಣೆಯಲ್ಲಿ ಶೇ. 8ರಷ್ಟು ಹೆಚ್ಚಳ: 43.82 ಮಿಲಿಯನ್‌ ಗೆ ಏರಿಕೆ

ಮುಂಬೈ: ಬೆಂಗಳೂರು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸೌಲಭ್ಯದಲ್ಲಿ ಪ್ರಯಾಣಿಕರ ದಟ್ಟಣೆ ವರ್ಷದಿಂದ ವರ್ಷಕ್ಕೆ ಶೇ. 8 ರಷ್ಟು ಹೆಚ್ಚಾಗಿ 2025 ರಲ್ಲಿ 43.82 ಮಿಲಿಯನ್‌ಗೆ ತಲುಪಿದೆ ಎಂದು ಬಿಐಎಎಲ್ ಸೋಮವಾರ ತಿಳಿಸಿದೆ. 2024 ರಲ್ಲಿ, ವಿಮಾನ ನಿಲ್ದಾಣವು 40.73 ಮಿಲಿಯನ್ ಪ್ರಯಾಣಿಕರ ದಟ್ಟಣೆಯನ್ನು ವರದಿ ಮಾಡಿದೆ. ಇದಲ್ಲದೆ, ವಿಮಾನ ನಿಲ್ದಾಣವು 2025 ರಲ್ಲಿ 520,985 ಮೆಟ್ರಿಕ್ ಟನ್ ಸರಕುಗಳನ್ನು ನಿರ್ವಹಿಸಿದ್ದು, 2024 ಕ್ಕೆ ಹೋಲಿಸಿದರೆ ವರ್ಷದಿಂದ ವರ್ಷಕ್ಕೆ ಶೇ. 5 ರಷ್ಟು ಹೆಚ್ಚಳವಾಗಿದೆ ಎಂದು ಬೆಂಗಳೂರು […]

ಕನ್ನಡ ದುನಿಯಾ 12 Jan 2026 8:28 pm

BIG NEWS: ಜಗದೀಪ್ ಧನಕರ್ ಆರೋಗ್ಯದಲ್ಲಿ ಏರುಪೇರು: ಎರಡು ಬಾರಿ ಪ್ರಜ್ಞೆ ತಪ್ಪಿದ ಬಳಿಕ ಏಮ್ಸ್ ಆಸ್ಪತ್ರೆಗೆ ದಾಖಲು

ನವದೆಹಲಿ: ಮಾಜಿ ಉಪರಾಷ್ಟ್ರಪತಿ ಜಗದೀಪ್ ಧನಕರ್ ಆರೋಗ್ಯದಲ್ಲಿ ಏರುಪೇರಾಗಿದ್ದು, ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಜಗದೀಪ್ ಧನಕರ್ ಅವರು ಎರಡು ಬಾರಿ ಪ್ರಜ್ಞೆ ತಪ್ಪಿದ್ದರು. ಹೀಗಾಗಿ ಅವರನ್ನು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತಜ್ಞ ವೈದ್ಯರಿಂದ ಚಿಕಿತ್ಸೆ ನೀಡಲಾಗುತ್ತಿದೆ. ವೈದ್ಯಕೀಯ ತಪಾಸಣೆಯ ಭಾಗವಾಗಿ ಅವರಿಗೆ ಎಂಆರ್ ಐ ಸ್ಕ್ಯಾನಿಂಗ್ ಮಾಡಿಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಜಗದೀಪ್ ಧನಕರ್ ಅವರು ಶನಿವಾರ ಮನೆಯಲ್ಲಿ ಶೌಚಾಲಯಕ್ಕೆ ತೆರಳಿದ್ದಾಗ ಎರಡು ಬಾರಿ ಪ್ರಜ್ಞೆ ತಪ್ಪಿದ್ದರು. ಹಾಗಾಗಿ ಅವರಿಗೆ ವೈದ್ಯಕೀಯ ತಪಾಸಣೆಗೆ ಸೂಚಿಸಲಾಗಿತ್ತು. […]

ಕನ್ನಡ ದುನಿಯಾ 12 Jan 2026 8:19 pm

BREAKING: ವಿದ್ಯಾರ್ಥಿನಿ ಆತ್ಮಹತ್ಯೆ ಕೇಸ್: ಡೆಂಟಲ್ ಕಾಲೇಜಿನ 6 ಲೆಕ್ಚರರ್ಸ್ ಕೆಲಸದಿಂದ ವಜಾ

ಬೆಂಗಳೂರು: ಬೆಂಗಳೂರಿನಲ್ಲಿ ಡೆಂಟಲ್ ಸ್ಟೂಡೆಂಟ್ ಯಶಸ್ವಿನಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕ್ಸ್ ಫರ್ಡ್ ಡೆಂಟಲ್ ಕಾಲೇಜಿನ ಆರು ಲೆಕ್ಚರರ್ ಗಳನ್ನು ಆಡಳಿತ ಮಂಡಳಿ ಕೆಲಸದಿಂದ ವಜಾಗೊಳಿಸಿದೆ. ಒಎಂಆರ್ ವಿಭಾಗದ ಲೆಕ್ಚರರ್ಸ್ ಗಳಾದ ಡಾ. ಅನಿಮೋಲ್, ಡಾ. ಪೈಕಾ, ಡಾ. ಸಿಂಧು, ಡಾ. ಸುಶ್ಮಿನಿ, ಡಾ. ಆಲ್ಬಾ, ಡಾ. ಶಬಾನಾ ಅವರನ್ನು ವಜಾಗೊಳಿಸಲಾಗಿದೆ. ಲೆಕ್ಚರರ್ಸ್ ವಿರುದ್ಧ ಎಫ್ಐಆರ್ ಮತ್ತು ವಿದ್ಯಾರ್ಥಿಗಳಿಂದ ಪ್ರತಿಭಟನೆ ಹಿನ್ನೆಲೆಯಲ್ಲಿ ಆರು ಮಂದಿ ಪ್ರಾಧ್ಯಾಪಕರನ್ನು ವಜಾ ಮಾಡಲಾಗಿದೆ. ಸೂರ್ಯನಗರ ಪೊಲೀಸ್ ಠಾಣೆಯಲ್ಲಿ ನಿನ್ನೆ ಎಫ್ಐಆರ್ ದಾಖಲಿಸಲಾಗಿತ್ತು. […]

ಕನ್ನಡ ದುನಿಯಾ 12 Jan 2026 8:08 pm

ಮಂಗಳೂರು ಪೊಲೀಸರ ಭರ್ಜರಿ ಬೇಟೆ: 4 ಕೋಟಿ ಮೌಲ್ಯದ ಡ್ರಗ್ಸ್ ಸಹಿತ ಉಗಾಂಡ ಮಹಿಳೆ, 6 ಡ್ರಗ್ ಪೆಡ್ಲರ್ ಗಳು ಅರೆಸ್ಟ್

ಮಂಗಳೂರು: ಡ್ರಗ್ ಪೆಡ್ಲರ್ ಗಳಿಗೆ ಮಾದಕ ವಸ್ತು ಸರಬರಾಜು ಮಾಡುತ್ತಿದ್ದ ಉಗಾಂಡ ದೇಶದ ಮಹಿಳೆಯನ್ನು ಮಂಗಳೂರು ಸಿಸಿಬಿ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ. ಉಗಾಂಡ ಮೂಲದ ಝಾಲಿಯ ಜಲ್ಮಾಂಗು ಬಂಧಿತ ಮಹಿಳೆ. ಮಂಗಳೂರಿಗೆ ಡ್ರಗ್ಸ್ ಪೂರೈಕೆ ಮಾಡುತ್ತಿದ್ದ ಈಕೆಯ ಬಗ್ಗೆ ಮಾಹಿತಿ ಕಲೆ ಹಾಕಿದ ಪೊಲೀಸರು ಬೆಂಗಳೂರಿನ ಜಿಗಣಿ ಪ್ರದೇಶದಲ್ಲಿ ದಾಳಿ ನಡೆಸಿ ಬಂಧಿಸಿದ್ದಾರೆ. 4 ಕೋಟಿ ರೂ. ಮೌಲ್ಯದ 4 ಕೆಜಿ ಎಂಡಿಎಂಎ ಡ್ರಗ್ಸ್ ವಶಕ್ಕೆ ಪಡೆಯಲಾಗಿದೆ. ಪ್ರಕರಣದಲ್ಲಿ 6 ಮಂದಿ ಡ್ರಗ್ ಪೆಡ್ಲರ್ ಗಳನ್ನು ಬಂಧಿಸಲಾಗಿದೆ […]

ಕನ್ನಡ ದುನಿಯಾ 12 Jan 2026 7:42 pm

ಹಿಮಾಚಲ ಪ್ರದೇಶ ಮಾರುಕಟ್ಟೆಯಲ್ಲಿ ಅಂಗಡಿ, ಮನೆಗಳಿಗೆ ಬೆಂಕಿ ತಗುಲಿ ಮೂವರು ಸಾವು

ಸೋಲನ್: ಹಿಮಾಚಲ ಪ್ರದೇಶದ ಸೋಲನ್ ನ ಅರ್ಕಿ ಮಾರುಕಟ್ಟೆಯ ಹಳೆಯ ಬಸ್ ನಿಲ್ದಾಣ ಪ್ರದೇಶದಲ್ಲಿ ಭಾನುವಾರ ರಾತ್ರಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಹಲವಾರು ಅಂಗಡಿಗಳು ಮತ್ತು ಕಟ್ಟಡಗಳು ನಾಶವಾಗಿದ್ದು, ಇನ್ನೂ ಹೆಚ್ಚಿನ ಜನರು ಅವಶೇಷಗಳ ಅಡಿಯಲ್ಲಿ ಸಿಲುಕಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ಮೃತರಲ್ಲಿ ಎಂಟು ವರ್ಷದ ಮಗುವೂ ಸೇರಿದ್ದು, ಬಿಹಾರದ ನಿವಾಸಿ ಪ್ರಿಯಾಂಶ್ ಎಂದು ಗುರುತಿಸಲಾಗಿದೆ. ಇತರರ ಹೆಸರು ತಿಳಿದುಬಂದಿಲ್ಲ. ಈವರೆಗೆ ಸ್ಥಳದಿಂದ ಮೂರು ಶವಗಳನ್ನು ಹೊರತೆಗೆಯಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಗೌರವ್ ಸಿಂಗ್ […]

ಕನ್ನಡ ದುನಿಯಾ 12 Jan 2026 7:16 pm

BREAKING: ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಪಲ್ಟಿಯಾದ ಶಾಲಾ ಬಸ್: 10ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗಂಭೀರ ಗಾಯ

ಬೆಂಗಳೂರು: ಶಾಲಾ ಬಸ್ ವೊಂದು ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿ ಬಿದ್ದಿರುವ ಘಟನೆ ಬೆಂಗಳೂರು ದಕ್ಷಿಣ ಜಿಲ್ಲೆಯ ಚನ್ನಪಟ್ಟಣ ಬಳಿ ನಡೆದಿದೆ. ಚನ್ನಪಟ್ಟಣದ ಹೊಸೂರುದೊಡ್ಡಿ ಬಳಿ ಈ ಘಟನೆ ನಡೆದಿದೆ. ಶಾಲೆಯಿಂದ ಮಕ್ಕಳನ್ನು ಮನೆಗೆ ಬಿಡಲು ಕರೆದೊಯ್ಯುತ್ತಿದ್ದ ಬಸ್ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಅಪಘಾತದಲ್ಲಿ 10ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಗಾಯಾಳು ವಿದ್ಯಾರ್ಥಿಗಳನ್ನು ಚನ್ನಪಟ್ಟಣದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದಲ್ಲಿ ಗಾಯಗೊಂಡ ವಿದ್ಯಾರ್ಥಿಗಳನ್ನು ಬೆಂಗಳೂರು ಇಂಟರ್ […]

ಕನ್ನಡ ದುನಿಯಾ 12 Jan 2026 7:11 pm

BREAKING: ಧಾರವಾಡದಲ್ಲಿ ಇಬ್ಬರು ಮಕ್ಕಳ ಅಪಹರಣ ಶಂಕೆ: ಬೈಕ್ ನಲ್ಲಿ ಕೂರಿಸಿಕೊಂಡು ಎಸ್ಕೇಪ್ ಆದ ವ್ಯಕ್ತಿ

ಧಾರವಾಡ: ಶಾಲೆಗೆ ಹೋಗಿದ್ದ ಇಬ್ಬರು ಮಕ್ಕಳನ್ನು ವ್ಯಕ್ತಿಯೋರ್ವ ಅಪಹರಿಸಿರುವ ಆರೋಪ ಕೇಳಿಬಂದಿದೆ. ಧಾರವಾಡದ ಕಮಾಲಾಪುರ ಬಡಾವಣೆಯಲ್ಲಿ ಈ ಘಟನೆ ನಡೆದಿದೆ. ಸರ್ಕಾರಿ ಪ್ರಾಥಮಿಕ ಶಾಲೆಯಿಂದ ಮಕ್ಕಳಿಬ್ಬರನ್ನು ಕರೆದುಕೊಂಡು ಬಂದು ಬೈಕ್ ನಲ್ಲಿ ಕೂರಿಸಿಕೊಂಡಿದ್ದ ವ್ಯಕ್ತಿ ಬಳಿಕ ಬೈಕ್ ಸಮೇತ ನಾಪತ್ತೆಯಾಗಿದ್ದಾನೆ. ಮಕ್ಕಳು ಸಂಜೆಯಾದರೂ ಮನೆಗೆ ಬಾರದಿರುವುದು ಪೋಷಕರಲ್ಲಿ ಆತಂಕ ಮೂಡಿಸಿದೆ. 3ನೇ ತರಗತಿಯ ತನ್ವೀರ್ (9) ಹಾಗೂ ಲಕ್ಷ್ಮೀ ಕರಿಯಪ್ಪನವರ್ (9) ಎಂಬ ಇಬ್ಬರು ಮಕ್ಕಳನ್ನು ವ್ಯಕ್ತಿ ಬೈಕ್ ನಲ್ಲಿ ಅಪಹರಿಸಿರುವ ಶಂಕೆ ವ್ಯಕ್ತವಾಗಿದೆ. ಶಾಲೆಯಲ್ಲಿ ಮಧ್ಯಾಹ್ನಾ […]

ಕನ್ನಡ ದುನಿಯಾ 12 Jan 2026 6:48 pm

BIG NEWS: ಕರೂರು ಕಾಲ್ತುಳಿತ ಪ್ರಕರಣ: 7 ಗಂಟೆಗೂ ಹೆಚ್ಚು ಕಾಲ ಸಿಬಿಐ ವಿಚಾರಣೆ ಎದುರಿಸಿದ ದಳಪತಿ ವಿಜಯ್

ನವದೆಹಲಿ: ಕರೂರು ಕಾಲ್ತಿಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳು ನಟ, ತಮಿಳಿಗ ವೆಟ್ರಿ ಕಳಗಂ ಪಕ್ಷದ ಸಂಸ್ಥಾಪಕ ದಳಪತಿ ವಿಜಯ್ ಸಿಬಿಐ ವಿಚಾರಣೆಗೆ ಮುಗಿಸಿ ಹಿಂತಿರುಗಿದ್ದಾರೆ. ನಟ ವಿಜಯ್ ಅವರ ರಾಜಕೀಯ ರ್ಯಾಲಿ ವೇಳೆ ತಮಿಳುನಾಡಿನ ಕರೂರಿನಲ್ಲಿ ಸಂಭವಿಸಿದ್ದ ಕಾಲ್ತುಳಿತ ದಿರಂತದಲ್ಲಿ 41 ಜನರು ಮೃತಪಟ್ಟಿದ್ದರು. 60ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. 2025ರ ಸೆ.27ರಂದು ಈ ಘಟನೆ ನಡೆದಿತ್ತು. ಪ್ರಕರಣದ ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸಲಾಗಿತ್ತು. ತನಿಖೆ ಚುರುಕುಗೊಳಿಸಿರುವ ಸಿಬಿಐ ನಟ ವಿಜಯ್ ಗೆ ಸಮನ್ಸ್ ಜಾರಿ ಮಾಡಿ ವಿಚಾರಣೆಗೆ […]

ಕನ್ನಡ ದುನಿಯಾ 12 Jan 2026 6:36 pm

ಸಾಮಾನ್ಯ ಟಿಕೆಟ್ ದರದಲ್ಲೇ ಸುರಕ್ಷಿತ ಪ್ರಯಾಣ; ಮುಂಬೈ ಹೊಸ ಲೋಕಲ್ ಟ್ರೈನ್ ವಿಶೇಷತೆಗಳೇನು?

ಮುಂಬೈ ನಗರದ ಜೀವನಾಡಿಯಾಗಿರುವ ಲೋಕಲ್ ಟ್ರೈನ್‌ಗಳಲ್ಲಿ ಬಾಗಿಲು ತೆರೆದಿರುವುದರಿಂದ ಸಂಭವಿಸುವ ಸಾವು-ನೋವುಗಳನ್ನು ತಡೆಯಲು ರೈಲ್ವೆ ಮಂಡಳಿ ಮಹತ್ವದ ನಿರ್ಧಾರ ಕೈಗೊಂಡಿದೆ. ನಗರದ ಮೊದಲ ‘ನಾನ್-ಎಸಿ’ (Non-AC) ಆಟೋಮ್ಯಾಟಿಕ್ ಬಾಗಿಲು ಹೊಂದಿರುವ ರೈಲು ಈಗ ಸಜ್ಜಾಗಿದೆ. ಬದಲಾವಣೆಗೆ ಕಾರಣವಾದ ಆ ಕರಾಳ ಘಟನೆ: ಜೂನ್ 2025 ರಲ್ಲಿ ಮುಂಬ್ರಾದಲ್ಲಿ ನಡೆದ ಭೀಕರ ಅಪಘಾತ ಈ ನಿರ್ಧಾರಕ್ಕೆ ಪ್ರಮುಖ ಕಾರಣ. ಅಂದು ಕಿಕ್ಕಿರಿದು ತುಂಬಿದ್ದ ರೈಲಿನ ಬಾಗಿಲ ಬಳಿ ನಿಂತಿದ್ದ ಐವರು ಪ್ರಯಾಣಿಕರು ಆಯತಪ್ಪಿ ಬಿದ್ದು ಸಾವನ್ನಪ್ಪಿದ್ದರು. ಈ ದುರಂತದ […]

ಕನ್ನಡ ದುನಿಯಾ 12 Jan 2026 6:23 pm

‘ನೊಬೆಲ್ ಪ್ರಶಸ್ತಿ ವರ್ಗಾವಣೆ ಮಾಡಲು ಬರುವುದಿಲ್ಲ’: ಟ್ರಂಪ್ ಆಸೆಗೆ ತಣ್ಣೀರು ಸುರಿದ ನೊಬೆಲ್ ಸಮಿತಿ!

ವೆನೆಜುವೆಲಾದ ಪ್ರಜಾಪ್ರಭುತ್ವವಾದಿ ಹೋರಾಟಗಾರ್ತಿ ಮಾರಿಯಾ ಕೊರಿನಾ ಮಚಾಡೊ ಅವರು ತಮಗೆ ಸಂದ 2025ರ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಡೊನಾಲ್ಡ್ ಟ್ರಂಪ್ ಅವರಿಗೆ ಉಡುಗೊರೆಯಾಗಿ ನೀಡಲು ಬಯಸಿದ್ದರು. ಈ ಕುರಿತು ಟ್ರಂಪ್ ಕೂಡ ಒಲವು ವ್ಯಕ್ತಪಡಿಸಿದ್ದರು. ಆದರೆ, ನೊಬೆಲ್ ಸಮಿತಿಯು ಇದು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ. ನೊಬೆಲ್ ಸಮಿತಿಯ ಅಧಿಕೃತ ಹೇಳಿಕೆ: ವಿವಾದದ ಬೆನ್ನಲ್ಲೇ ಸ್ಪಷ್ಟನೆ ನೀಡಿರುವ ಸಮಿತಿಯು, “ನೊಬೆಲ್ ಪ್ರಶಸ್ತಿಯನ್ನು ಒಮ್ಮೆ ಘೋಷಿಸಿದ ನಂತರ ಅದನ್ನು ಹಿಂಪಡೆಯಲು, ಹಂಚಿಕೊಳ್ಳಲು ಅಥವಾ ಇನ್ನೊಬ್ಬರಿಗೆ ವರ್ಗಾಯಿಸಲು ಸಾಧ್ಯವಿಲ್ಲ. ಈ ನಿರ್ಧಾರ […]

ಕನ್ನಡ ದುನಿಯಾ 12 Jan 2026 6:20 pm

ಗ್ಯಾರಂಟಿ ಯೋಜನೆ ಕುರಿತು ವಿರೋಧ ಪಕ್ಷದ ಅಪಪ್ರಚಾರ

“ವಿರೋಧಪಕ್ಷದವರು ರಾಜಕಾರಣಕ್ಕಾಗಿ ಸುಳ್ಳನ್ನೇ ಅವಲಂಬಿಸಿದ್ದಾರೆ. ಗ್ಯಾರಂಟಿ ಯೋಜನೆಗಳಿಂದ ಮೂಲಸೌಕರ್ಯ ಕಾಮಗಾರಿಗಳಿಗೆ ಸರ್ಕಾರದಲ್ಲಿ ಅನುದಾನವಿಲ್ಲ ಎಂದು ಎಲ್ಲೆಡೆ ಅಪಪ್ರಚಾರ ಮಾಡುತ್ತಿದ್ದಾರೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಸೋಮವಾರ ಕಲಬುರಗಿ ಜಿಲ್ಲೆಯ ಯಡ್ರಾಮಿಯಲ್ಲಿ ಆಯೋಜಿಸಿದ್ದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ಮತ್ತು ಫಲಾನುಭವಿಗಳಿಗೆ ಸೌಲಭ್ಯ ವಿತರಣೆ ಸಮಾರಂಭದಲ್ಲಿ ಅವರು ಮಾತನಾಡಿದರು. “ಸರ್ಕಾರ ದಿವಾಳಿಯಾಗಿದ್ದರೆ ಜೇವರ್ಗಿ ಮತಕ್ಷೇತ್ರ ಒಂದರಲ್ಲಿ ರೂ. 906 ಕೋಟಿ ವೆಚ್ಚ ಮಾಡಲಾಗುತ್ತಿರಲಿಲ್ಲ” ಎಂದರು. “ನೂತನವಾಗಿ ಘೋಷಣೆಯಾಗಿರುವ ಯಡ್ರಾಮಿ ತಾಲ್ಲೂಕಿನಲ್ಲಿ, ಜೇವರ್ಗಿ ಮತಕ್ಷೇತ್ರದಲ್ಲಿ ರೂ. 867.49 […]

ಕನ್ನಡ ದುನಿಯಾ 12 Jan 2026 6:19 pm

ಟಾಕ್ಸಿಕ್ ಟೀಸರ್ ನ ಅಶ್ಲೀಲ ದೃಶ್ಯದ ವಿರುದ್ಧ ಆಮ್ ಆದ್ಮಿ ಪಕ್ಷ ಆಕ್ರೋಶ: ಮಹಿಳಾ ಆಯೋಗಕ್ಕೆ ದೂರು ಸಲ್ಲಿಕೆ

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಟಾಕ್ಸಿಕ್ ಚಿತ್ರದ ಟೀಸರ್ ವಿವಾದಗಳಿಂದ ಭಾರಿ ಸದ್ದು ಮಾಡುತ್ತಿದೆ. ಟಾಕ್ಸಿಕ್ ಟೀಸರ್ ನಲ್ಲಿರುವ ಅಶ್ಲೀಲ ದೃಶ್ಯದ ವಿರುದ್ಧ ಸಾಲು ಸಾಲು ದೂರು ದಾಖಲಾಗುತ್ತಿವೆ. ಟೀಸರ್ ರಿಲೀಸ್ ಆಗಿ 24 ಗಂಟೆಗಳಲ್ಲಿಯೇ 200 ಮಿಲಿಯನ್ ವೀಕ್ಷಣೆ ಕಂಡಿದ್ದ ಟಾಕ್ಸಿಕ್ ಟೀಸರ್, ಅದರಲ್ಲಿನ ಅಶ್ಲೀಲ ದೃಶ್ಯ ವಿವಾದಕ್ಕೆ ಕಾರಣವಾಗಿದೆ. ಕೆಲ ದಿನಗಳ ಹಿಂದೆ ವಕೀಲರೊಬ್ಬರು ಟೀಸರ್ ನಲ್ಲಿರುವ ಬೋಲ್ಡ್ ದೃಶ್ಯಗಳ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಕುಟುಂಬದ ಜೊತೆ ಕುಳಿತು ವೀಕ್ಷಿಸಲು […]

ಕನ್ನಡ ದುನಿಯಾ 12 Jan 2026 6:12 pm

BIG NEWS: ಅಲ್ವಾರ್ ನಗರದ ಮನೆಯಲ್ಲಿ ಬಾಂಬ್ ರೀತಿಯ ವಸ್ತು ಪತ್ತೆ: ಚುರುಕುಗೊಂಡ ತನಿಖೆ

ಜೈಪುರ: ರಾಜಸ್ಥಾನದ ಅಲ್ವಾರ್ ನಲ್ಲಿ ಮನೆಯೊಂದರಲ್ಲಿ ಬಾಂಬ್ ರೀತಿಯ ವಸ್ತು ಪತ್ತೆಯಾಗಿದ್ದು, ಆತಂಕದ ವಾತಾವರಣ ನಿರ್ಮಾಣವಾಗಿದೆ. ಟೈಮರ್ ಅಳವಡಿಸಲಾದ ಬಾಂಬ್ ರೀತಿಯ ವಸ್ತು ಪತ್ತೆಯಾಗಿದ್ದು, ಆ ಪ್ರದೇಶದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಜೈಪುರದ ಭಯೋತ್ಪಾದನಾ ನಿಗ್ರಹ ದಳ ಹಾಗೂ ಬಾಂಬ್ ನಿಷ್ಖ್ರಿಯ ದಳದ ತಂಡಗಳು ಅನುಮಾನಾಸ್ತದ ವಸ್ತುವಿನ ಪರಿಶೀಲನೆ ನಡೆಸಿವೆ. ರಾಜಸ್ಥಾನದ ಅರಾವಳಿ ವಿಹಾರ್ ಪ್ರದೇಶದ ವಿವೇಕಾನಂದ ನಗರದ ಸೆಕ್ಟರ್ 4ರಲ್ಲಿ ಈ ವಸ್ತು ಪತ್ತೆಯಾಗಿದೆ. ಅದನ್ನು ವಶಕ್ಕೆ ಪಡೆದ ಪೊಲೀಸರು, ಮುನ್ನೆಚ್ಚರಿಕಾ ಕ್ರಮವಾಗಿ ಅದನ್ನು ನಗರದಿಂದ […]

ಕನ್ನಡ ದುನಿಯಾ 12 Jan 2026 5:32 pm

ಪೊಲೀಸ್ ಪತಿಯಿಂದ ಪತ್ನಿಗೆ ವರದಕ್ಷಿಣೆ ಕಿರುಕುಳ; ಹಣ ತರದಿದ್ದರೆ ಅಕ್ಕನ ಮಗಳ ಜೊತೆ ಮತ್ತೊಂದು ಮದುವೆಯಾಗುತ್ತೇನೆ ಎಂದು ಬೆದರಿಕೆ

ಬೀದರ್: ವರದಕ್ಷಿಣೆ ಕಿರುಕುಳ ಪ್ರಕರಣ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅದರಲ್ಲಿಯೂ ಪೊಲೀಸ್ ಅಧಿಕಾರಿಗಳು, ಕಾನೂನಿನ ಅರಿವಿರುವವರೇ ಇಂತಹ ಕಿರುಕುಳ ನೀಡುತ್ತಿರುವುದು ನಿಜಕ್ಕೂ ದುರಂತವೇ ಸರಿ. ಪೊಲೀಸ್ ಕಾನ್ಸ್ ಟೇಬಲ್ ಓರ್ವ ಪತ್ನಿಗೆ ವರದಕ್ಷಿಣೆಗಾಗಿ ಪೀಡಿಸುತ್ತಿರುವುದೂ ಅಲ್ಲದೇ ಹಣ ತರದಿದ್ದರೆ ಅಕ್ಕನ ಮಗಳ ಜೊತೆ ಮತ್ತೊಂದು ಮದುವೆಯಾಗುವುದಾಗಿ ಬೆದರಿಕೆ ಹಾಕಿರುವ ಆರೋಪ ಕೇಳಿಬಂದಿದೆ. ಬೆಂಗಳೂರಿನ ಮೈಕೋ ಲೇಔಟ್ ಟ್ರಾಫಿಕ್ ಠಾಟ್ನೆ ಪಿಸಿ ಆಗಿರುವ ಮಚ್ಚೇಂದ್ರ ವಿರುದ್ಧ ಪತ್ನಿ ವರದಕ್ಷಿಣೆ ಕಿರುಕುಳ, ಬೆದರಿಕೆ ಆರೋಪ ಮಾಡಿದ್ದಾರೆ. ಮಚ್ಚೇಂದ್ರ ಹಾಗೂ […]

ಕನ್ನಡ ದುನಿಯಾ 12 Jan 2026 4:43 pm

Good News: ಸರ್ಕಾರಿ ನೌಕರರ ಗಳಿಕೆ ರಜೆ ನಗದೀಕರಣ, ಮಹತ್ವದ ಆದೇಶ

ಕರ್ನಾಟಕ ಸರ್ಕಾರ ಸರ್ಕಾರಿ ನೌಕರರಿಗೆ ಸಿಹಿಸುದ್ದಿ ನೀಡಿದೆ. 2026ನೇ ಸಾಲಿನ ಅವಧಿಗೆ ಗಳಿಕೆ ರಜೆಯನ್ನು ಅಧ್ಯರ್ಪಿಸಿ ನಗದೀಕರಣ ಪಡೆಯುವ ಸೌಲಭ್ಯವನ್ನು ನಿಯತಗೊಳಿಸುವ ಬಗ್ಗೆ ಆದೇಶವನ್ನು ಹೊರಡಿಸಿದೆ. ಈ ಕುರಿತು ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ಅಜಯ್ ಎಸ್. ಕೊರಡೆ ಸರ್ಕಾರದ ಅಧೀನ ಕಾರ್ಯದರ್ಶಿ ಆರ್ಥಿಕ ಇಲಾಖೆ (ಸೇವೆಗಳು-1) ಆದೇಶವನ್ನು ಹೊರಡಿಸಿದ್ದಾರೆ. ಮೇಲೆ ಓದಲಾದ ದಿನಾಂಕ: 17.1.2025ರ ಸರ್ಕಾರಿ ಆದೇಶದಲ್ಲಿ 2025ನೇ ಸಾಲಿನ ಬ್ಲಾಕ್ ಅವಧಿಗೆ ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಯ ನಿಯಮ 118(2)(i)ರನ್ವಯ ಗಳಿಕೆ […]

ಕನ್ನಡ ದುನಿಯಾ 12 Jan 2026 4:11 pm

BREAKING: ಬೆಂಗಳೂರಿನಲ್ಲಿ ಹಾಡಹಗಲೇ ಮಹಿಳೆಯ ಬರ್ಬರ ಹತ್ಯೆ

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ಕೊಲೆ ನಡೆದಿದೆ. ಹಾಡಹಗಲೇ ಮಹಿಳೆಯನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿ ಪರಾರುಯಾಗಿರುವ ಘಟನೆ ನಡೆದಿದೆ. ಬೆಂಗಳೂರು ಉತ್ತರ ತಾಲೂಕಿನ ಕುದುರಗೆರೆ ಗ್ರಾಮದಲ್ಲಿ ಈ ಕೃತ್ಯ ನಡೆದಿದೆ. ಹಾಡಹಗಲೇ ಮಹಿಳೆಯನ್ನು ಕೊಡಲಿಯಿಂದ ಕೊಚ್ಚಿ ಬರ್ಬರವಾಗಿ ಹತ್ಯೆಗೈದು, ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. 55 ವರ್ಷದ ದಾಕ್ಷಾಯಣಮ್ಮ ಕೊಲೆಯಾದ ಮಹಿಳೆ. ಘಟನ ಅಸ್ಥಳಕ್ಕೆ ಮಾದನಾಯಕನಹಳ್ಳಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲ.

ಕನ್ನಡ ದುನಿಯಾ 12 Jan 2026 4:06 pm

‘ಮೊರಾರ್ಜಿ ದೇಸಾಯಿ’ವಸತಿ ಶಾಲೆಯಲ್ಲಿ 6 ನೇ ತರಗತಿ ಪ್ರವೇಶಾತಿಗಾಗಿ ಅರ್ಜಿ ಆಹ್ವಾನ, ಪೋಷಕರಿಗೆ ಇಲ್ಲಿದೆ ಮಾಹಿತಿ

ಧಾರವಾಡ ಜಿಲ್ಲೆಯಲ್ಲಿನ 06 ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ 6 ನೇ ತರಗತಿ (ಆಂಗ್ಲ ಮಾಧ್ಯಮ) ಪ್ರವೇಶಕ್ಕಾಗಿ ಅಲ್ಪಸಂಖ್ಯಾತರ ಸಮುದಾಯದ ಮತ್ತು ಇತರೇ ವಿದ್ಯಾರ್ಥಿಗಳಿಂದ 2026-27 ನೇ ಸಾಲಿಗೆ ಅರ್ಜಿ ಆಹ್ವಾನಿಸಲಾಗಿದೆ. 5 ನೇ ತರಗತಿ ಪಾಸಾದ ಹಾಗೂ ಆದಾಯ ರೂ.2.50 ಲಕ್ಷಗಳಿಂತ ಕಡಿಮೆ ಇರುವ ಅಲ್ಪಸಂಖ್ಯಾತ ಸಮುದಾಯದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಸಿಖ್, ಬೌದ್ಧ ಮತ್ತು ಪಾರ್ಸಿ ವಿದ್ಯಾರ್ಥಿಗಳಿಗೆ ಶೇ.75 ಹಾಗೂ ಪರಿಶಿಷ್ಠ ಜಾತಿ, ಪರಿಶಿಷ್ಠ ವರ್ಗ ಹಾಗೂ ಇತರೆ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ […]

ಕನ್ನಡ ದುನಿಯಾ 12 Jan 2026 4:03 pm

ಸರ್ಕಾರಿ ನೌಕರರ ಪ್ರಮುಖ ಬೇಡಿಕೆ 2026ರಲ್ಲಿ ಈಡೇರಿಕೆ?

ಕರ್ನಾಟಕದ ಸರ್ಕಾರಿ ನೌಕರರ ಪ್ರಮುಖ ಬೇಡಿಕೆ ಹಳೆ ಪಿಂಚಣಿ ಯೋಜನೆ (ಒಪಿಎಸ್) ಮರು ಜಾರಿ ಮಾಡುವ ಮೂಲಕ ಹೊಸ ಪಿಂಚಣಿ ಯೋಜನೆ (ಎನ್‌ಪಿಎಸ್) ರದ್ದುಗೊಳಿಸುವುದು. 2023ರ ವಿಧಾನಸಭೆ ಚುನಾವಣೆ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಈ ಕುರಿತು ಸರ್ಕಾರಿ ನೌಕರರಿಗೆ ಭರವಸೆ ನೀಡಿತ್ತು. ಆದರೆ ಸರ್ಕಾರ ಅಧಿಕಾರಕ್ಕೆ ಬಂದು ಎರಡೂವರೆ ವರ್ಷ ಕಳೆದರೂ ಸಹ ಈ ಬೇಡಿಕೆ ಇನ್ನೂ ಸಹ ಈಡೇರಿಲ್ಲ. 2025ರ ಡಿಸೆಂಬರ್‌ನಲ್ಲಿ ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿಯೂ ಈ ಕುರಿತು ಚರ್ಚೆಗಳು ನಡೆದಿತ್ತು. ತರೀಕೆರೆ ಶಾಸಕ ಶ್ರೀನಿವಾಸ […]

ಕನ್ನಡ ದುನಿಯಾ 12 Jan 2026 3:56 pm

ಮೋದಿ ವಿಮರ್ಶಕ ಎನ್ಆರ್‌ಐ ಯೂಟ್ಯೂಬರ್ ಮುಂಬೈ ವಿಮಾನ ನಿಲ್ದಾಣದಲ್ಲಿ ವಶಕ್ಕೆ! 15 ಗಂಟೆಗಳ ವಿಚಾರಣೆ ಬಳಿಕ ಬಿಡುಗಡೆ

ಲಂಡನ್ ನಿವಾಸಿ ಡಾ. ಸಂಗ್ರಾಮ್ ಪಾಟೀಲ್ ಮತ್ತು ಅವರ ಪತ್ನಿಯನ್ನು ಶನಿವಾರ ಮುಂಜಾನೆ 2 ಗಂಟೆಗೆ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ತಕ್ಷಣ ವಲಸೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ನಾಯಕರ ವಿರುದ್ಧ ಅವಹೇಳನಕಾರಿ ಪೋಸ್ಟ್‌ಗಳನ್ನು ಹಂಚಿಕೊಂಡ ಆರೋಪದ ಮೇಲೆ ಅವರ ವಿರುದ್ಧ ಲುಕ್ ಔಟ್ ನೋಟಿಸ್ (LOC) ಹೊರಡಿಸಲಾಗಿತ್ತು. ಏನಿದು ಪ್ರಕರಣ? ಡಿಸೆಂಬರ್ 18 ರಂದು ಮಹಾರಾಷ್ಟ್ರ ಬಿಜೆಪಿ ಸೋಶಿಯಲ್ ಮೀಡಿಯಾ ಸಂಯೋಜಕ ನಿಖಿಲ್ […]

ಕನ್ನಡ ದುನಿಯಾ 12 Jan 2026 3:55 pm

‘ಇಂಡಿಯನ್ ಐಡಲ್’ಖ್ಯಾತಿಯ ಪ್ರಶಾಂತ್ ತಮಂಗ್ ಇನ್ನಿಲ್ಲ: 43ನೇ ವಯಸ್ಸಿಗೆ ಹೃದಯಾಘಾತದಿಂದ ನಿಧನರಾದ ಗಾಯಕ

ಭಾರತೀಯ ಸಂಗೀತ ಮತ್ತು ಸಿನಿಮಾ ಲೋಕಕ್ಕೆ ಮತ್ತೊಂದು ಆಘಾತ ಎದುರಾಗಿದೆ. ಖ್ಯಾತ ರಿಯಾಲಿಟಿ ಶೋ ‘ಇಂಡಿಯನ್ ಐಡಲ್’ ಸೀಸನ್ 3 ರ ವಿಜೇತ ಪ್ರಶಾಂತ್ ತಮಂಗ್ (Prashant Tamang) ಅವರು ಸೋಮವಾರ ನವದೆಹಲಿಯ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ ಕೇವಲ 43 ವರ್ಷ ವಯಸ್ಸಾಗಿತ್ತು. ರಿಯಾಲಿಟಿ ಶೋ ಇತಿಹಾಸದಲ್ಲಿ ದಾಖಲೆ: ದಾರ್ಜೀಲಿಂಗ್ ಮೂಲದವರಾದ ಪ್ರಶಾಂತ್ ತಮಂಗ್ 2004ರಲ್ಲಿ ‘ಇಂಡಿಯನ್ ಐಡಲ್ 3’ ವಿನ್ನರ್ ಆಗಿ ಹೊರಹೊಮ್ಮಿದ್ದರು. ಅಂದು ಅವರು ಪಡೆದ ಮತಗಳ ಸಂಖ್ಯೆ ಇತಿಹಾಸ ಸೃಷ್ಟಿಸಿತ್ತು. […]

ಕನ್ನಡ ದುನಿಯಾ 12 Jan 2026 3:51 pm

ದೆಹಲಿ ನಲ್ಲಿ ನೀರಿನಲ್ಲಿ ಬಟ್ಟೆ ಒಗೆದ್ರೆ ಬಿಳಿ ಬಣ್ಣ ಹಳದಿಯಾಗುತ್ತೆ! ಸಿಎಂ ವಿರುದ್ಧ ವ್ಯಕ್ತಿಯೊಬ್ಬನ ‘ವಜ್ರದಂತಹ’ವ್ಯಂಗ್ಯ.

ದೆಹಲಿಯಲ್ಲಿ ಶುದ್ಧ ಕುಡಿಯುವ ನೀರು ಪೂರೈಸಲಾಗುತ್ತಿದೆ ಎಂಬ ಸರ್ಕಾರದ ಭರವಸೆಗಳ ನಡುವೆಯೇ, ವಾಸ್ತವ ಪರಿಸ್ಥಿತಿಯನ್ನು ಬಿಂಬಿಸುವ ವಿಡಿಯೋವೊಂದು ವೈರಲ್ ಆಗಿದೆ. ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರ ಪಾರದರ್ಶಕ ಆಡಳಿತದ ಘೋಷಣೆಗಳ ನಡುವೆ, ನಲ್ಲಿಯ ನೀರು ಬಟ್ಟೆಗಳ ಬಣ್ಣವನ್ನೇ ಬದಲಿಸುತ್ತಿರುವ ದೃಶ್ಯವಿದು. ವೈರಲ್ ವಿಡಿಯೋದಲ್ಲಿ ಏನಿದೆ? ಟ್ವಿಟರ್‌ನಲ್ಲಿ (X) ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ, ವ್ಯಕ್ತಿಯೊಬ್ಬರು ತೊಳೆಯಲು ಹಾಕಿದ್ದ ಬಿಳಿ ಬಣ್ಣದ ಟಿ-ಶರ್ಟ್‌ನ ಸ್ಥಿತಿಯನ್ನು ತೋರಿಸಿದ್ದಾರೆ. ವಾಷಿಂಗ್ ಮೆಷಿನ್‌ನಲ್ಲಿ ಡಿಟರ್ಜೆಂಟ್ ಹಾಕಿ ದೆಹಲಿಯ ನಲ್ಲಿಯ ನೀರಿನಲ್ಲಿ ಒಗೆದ ನಂತರ, […]

ಕನ್ನಡ ದುನಿಯಾ 12 Jan 2026 3:39 pm

2010ರಲ್ಲಿ ಬುಕ್ ಮಾಡಿದ ನೋಕಿಯಾ ಫೋನ್ ಈಗ ಮನೆಗೆ ಬಂತು! ಪಾರ್ಸೆಲ್ ನೋಡಿ ಶಾಕ್ ಆದ ಲಿಬಿಯಾ ವ್ಯಾಪಾರಿ

2010ರಲ್ಲಿ ಆರ್ಡರ್ ಮಾಡಿದ ಫೋನ್‌ಗಳು 2026ರಲ್ಲಿ ಕೈಗೆ ಸೇರಿದರೆ ಹೇಗಿರುತ್ತದೆ? ಲಿಬಿಯಾದ ಮೊಬೈಲ್ ವ್ಯಾಪಾರಿಯೊಬ್ಬರಿಗೆ ಇಂತಹದ್ದೇ ಒಂದು ಅನುಭವವಾಗಿದೆ. 2011ರಲ್ಲಿ ಲಿಬಿಯಾದಲ್ಲಿ ಆರಂಭವಾದ ನಾಗರಿಕ ಯುದ್ಧದ ಕಿಚ್ಚು ಮತ್ತು ಮೂಲಸೌಕರ್ಯಗಳ ಕುಸಿತದಿಂದಾಗಿ, ಗೋದಾಮಿನಲ್ಲಿ ಸಿಲುಕಿಕೊಂಡಿದ್ದ ನೋಕಿಯಾ ಫೋನ್‌ಗಳ ಶಿಪ್‌ಮೆಂಟ್ ಬರೋಬ್ಬರಿ 16 ವರ್ಷಗಳ ನಂತರ ಕೊನೆಗೂ ತಲುಪಿದೆ. ಐತಿಹಾಸಿಕ ಅವಶೇಷಗಳೋ ಅಥವಾ ಮೊಬೈಲ್ ಫೋನ್‌ಗಳೋ? ಪಾರ್ಸೆಲ್ ಬಿಚ್ಚಿದ ಅಂಗಡಿ ಮಾಲೀಕನಿಗೆ ನಗು ತಡೆಯಲಾಗಲಿಲ್ಲ. ಆ ಕಾಲದ ದುಬಾರಿ ಮಾಡೆಲ್‌ಗಳಾದ ‘ಮ್ಯೂಸಿಕ್ ಎಡಿಷನ್’ ಮತ್ತು ‘ನೋಕಿಯಾ ಕಮ್ಯುನಿಕೇಟರ್’ ಫೋನ್‌ಗಳನ್ನು […]

ಕನ್ನಡ ದುನಿಯಾ 12 Jan 2026 3:36 pm

ಒಮ್ಮೆ ಫೇಲ್ ಆದವನು ಇಂದು ಐಐಟಿ ರೂರ್ಕಿ ವಿದ್ಯಾರ್ಥಿ! ಅನಾರೋಗ್ಯವನ್ನೂ ಗೆದ್ದು ಬೀಗಿದ ಹರ್ಷನ ಸಕ್ಸಸ್ ಸ್ಟೋರಿ

ಬಡತನ ಮತ್ತು ಸಂಪನ್ಮೂಲಗಳ ಕೊರತೆಯನ್ನು ನೆಪ ಮಾಡಿಕೊಳ್ಳುವವರಿಗೆ ಮಹಾರಾಷ್ಟ್ರದ ಥಾಣೆಯ 19 ವರ್ಷದ ಯುವಕ ಹರ್ಷ ಗುಪ್ತಾ (Harsh Gupta) ಒಂದು ದೊಡ್ಡ ಮಾದರಿ. ಸೋಲಿನಿಂದ ಕುಗ್ಗದೆ, ಪರಿಶ್ರಮದಿಂದ ಇಂದು ಐಐಟಿ ರೂರ್ಕಿ (IIT Roorkee) ಸೇರುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಸೋಲಿನಿಂದ ಆರಂಭವಾದ ಗೆಲುವಿನ ಪಯಣ: ಹರ್ಷ ಅವರ ತಂದೆ ಸಂತೋಷ್ ಗುಪ್ತಾ ಥಾಣೆಯ ರಸ್ತೆಬದಿಯಲ್ಲಿ ಪಾನಿಪುರಿ ಮಾರಾಟ ಮಾಡುತ್ತಾರೆ. ಕಲ್ಯಾಣ್‌ನ ಎರಡು ಕೋಣೆಗಳ ಪುಟ್ಟ ಚಾವ್ಲ್‌ನಲ್ಲಿ ವಾಸವಿರುವ ಹರ್ಷ, 11ನೇ ತರಗತಿಯಲ್ಲಿ ಅನುತ್ತೀರ್ಣರಾಗಿದ್ದರು. […]

ಕನ್ನಡ ದುನಿಯಾ 12 Jan 2026 3:32 pm

ಅಂಚೆ ಕಚೇರಿಯ ಈ ಯೋಜನೆಗಳಲ್ಲಿ ಹೂಡಿಕೆ ಮಾಡಿದ್ರೆ ನಿಮ್ಮ ಹಣ ಡಬಲ್ : ಬ್ಯಾಂಕಿಗಿಂತ ಉತ್ತಮ ಬಡ್ಡಿ

ಭಾರತೀಯ ರಿಸರ್ವ್ ಬ್ಯಾಂಕ್ ಇತ್ತೀಚೆಗೆ ರೆಪೊ ದರವನ್ನು ಶೇಕಡಾ 0.25 ರಷ್ಟು ಕಡಿತಗೊಳಿಸಿದೆ. ಈ ವರ್ಷ ಇದು ಸತತ ನಾಲ್ಕನೇ ಬಡ್ಡಿದರ ಕಡಿತವಾಗಿದೆ. ಹೌದು, ಈ ನಿರ್ಧಾರವು ಬ್ಯಾಂಕ್ ಸ್ಥಿರ ಠೇವಣಿಗಳನ್ನು ಅವಲಂಬಿಸಿರುವ ಹೂಡಿಕೆದಾರರ ಆದಾಯವನ್ನು ಕಡಿಮೆ ಮಾಡುತ್ತದೆ. ಈ ಸಂದರ್ಭದಲ್ಲಿ, ಸುರಕ್ಷಿತ ಮತ್ತು ಹೆಚ್ಚು ಇಳುವರಿ ನೀಡುವ ಸಣ್ಣ ಉಳಿತಾಯ ಯೋಜನೆಗಳು ಸಾಮಾನ್ಯ ಜನರಿಗೆ ವರದಾನವಾಗಿವೆ. ಸಾಮಾನ್ಯವಾಗಿ, ರೆಪೊ ದರ ಕಡಿಮೆಯಾದರೆ, ಬ್ಯಾಂಕುಗಳು ತಮ್ಮ ಠೇವಣಿಗಳ ಮೇಲಿನ ಬಡ್ಡಿದರಗಳನ್ನು ಸಹ ಕಡಿಮೆ ಮಾಡುತ್ತವೆ. ಪ್ರಮುಖ ಬ್ಯಾಂಕುಗಳು […]

ಕನ್ನಡ ದುನಿಯಾ 12 Jan 2026 3:29 pm

ಪ್ರಕಾಶಕರಿಗೆ ಗುಡ್ ನ್ಯೂಸ್: ಕನ್ನಡ ಪುಸ್ತಕ ಪ್ರಾಧಿಕಾರಕ್ಕೆ ಹೆಚ್ಚಿನ ಅನುದಾನದ ಭರವಸೆ ನೀಡಿದ ಸಚಿವ ಶಿವರಾಜ್ ತಂಗಡಗಿ

ಬೆಂಗಳೂರು: ರಾಜ್ಯದ ಪ್ರಕಾಶಕರ ಸಂಕಷ್ಟ ನನ್ನ ಗಮನಕ್ಕೆ ಬಂದಿದೆ. ಪ್ರಕಾಶಕರ ಹಿತಕಾಯಲು ಸಗಟು ಖರೀದಿ ಯೋಜನೆಗಾಗಿ ಮುಂದಿನ ದಿನಗಳಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರಕ್ಕೆ ಹೆಚ್ಚಿನ ಅನುದಾನ ಒದಗಿಸಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಭರವಸೆ ನೀಡಿದ್ದಾರೆ. ಗೃಹ ಕಚೇರಿಯಲ್ಲಿ ಪುಸ್ತಕ ಪ್ರಾಧಿಕಾರದ ಮನೆಗೊಂದು ಗ್ರಂಥಾಲಯ ಯೋಜನೆಯಡಿ ಗ್ರಂಥಾಲಯ ಅನುಷ್ಠಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಸಚಿವರು, ಕನ್ನಡ ಪುಸ್ತಕ ಪ್ರಾಧಿಕಾರ ಮನೆಗೊಂದು ಗ್ರಂಥಾಲಯ ಯೋಜನೆಯಡಿ ಉತ್ತಮ ಕೆಲಸ ಮಾಡುತ್ತಿದೆ, ಪುಸ್ತಕ ಪ್ರೀತಿ […]

ಕನ್ನಡ ದುನಿಯಾ 12 Jan 2026 3:28 pm

ವೆನೆಜುವೆಲಾ ಮೇಲೆ ಅಮೆರಿಕದ ರಹಸ್ಯ ಆಯುಧ ಪ್ರಯೋಗ? ರಕ್ತ ವಾಂತಿ ಮಾಡಿದ ಸೈನಿಕರು; ಇದು ‘ಸೋನಿಕ್ ಅಟ್ಯಾಕ್’ಇರಬಹುದೇ?

ನ್ಯೂಯಾರ್ಕ್ ಟೈಮ್ಸ್ ವರದಿಯ ಪ್ರಕಾರ, ಜನವರಿ 3ರಂದು ನಡೆದ ಕಾರ್ಯಾಚರಣೆಯಲ್ಲಿ ಅಮೆರಿಕದ ಸೈನ್ಯವು ಈ ಹಿಂದೆಂದೂ ನೋಡಿರದ ರಹಸ್ಯ ಆಯುಧವೊಂದನ್ನು ಬಳಸಿದೆ. ಈ ದಾಳಿಯಿಂದಾಗಿ ವೆನೆಜುವೆಲಾದ ನೂರಾರು ಸೈನಿಕರು ಯಾವುದೇ ಪ್ರತಿರೋಧ ಒಡ್ಡಲಾಗದೆ ಅಸಹಾಯಕರಾದರು. ದಾಳಿಯ ಭೀಕರ ಕ್ಷಣಗಳು: ಪ್ರತ್ಯಕ್ಷದರ್ಶಿ ಭದ್ರತಾ ಸಿಬ್ಬಂದಿಯೊಬ್ಬರು ವಿವರಿಸಿರುವಂತೆ, ಕಾರ್ಯಾಚರಣೆ ಆರಂಭವಾಗುತ್ತಿದ್ದಂತೆಯೇ ವೆನೆಜುವೆಲಾದ ಎಲ್ಲಾ ರೇಡಾರ್ ವ್ಯವಸ್ಥೆಗಳು ಸ್ಥಗಿತಗೊಂಡವು. ನಂತರ ಆಕಾಶದಲ್ಲಿ ಅಪಾರ ಸಂಖ್ಯೆಯ ಡ್ರೋನ್‌ಗಳು ಕಾಣಿಸಿಕೊಂಡವು. ಇದಾದ ಕೆಲವೇ ಕ್ಷಣಗಳಲ್ಲಿ ವಿಚಿತ್ರವಾದ ಅಬ್ಬರದ ಶಬ್ದ ಕೇಳಿಸಿತು. ಏನಿದು ರಹಸ್ಯ ಆಯುಧ? […]

ಕನ್ನಡ ದುನಿಯಾ 12 Jan 2026 3:27 pm

BREAKING: ಶೌಚಾಲಯದ ಗೋಡೆ ಕೊರೆದು ಬ್ಯಾಂಕ್ ದರೋಡೆಗೆ ಯತ್ನ: ಸ್ಟ್ರಾಂಗ್ ರೂಂ ಗೆ ಕನ್ನ ಹಾಕಲಾಗದೇ ವಾಪಾಸ್ ಆದ ಖದೀಮರು

ಕಾರವಾರ: ರಾಜ್ಯದಲ್ಲಿ ಸಾಲು ಸಾಲು ಬ್ಯಾಂಕ್ ದರೋಡೆ ಪ್ರಕರಣಗಳು ಬೆಳಕಿಗೆ ಬಂದಿರುವಾಗಲೇ ಉತ್ತರ ಕನ್ನಡ ಜಿಲ್ಲೆಯಲ್ಲಿಯೂ ಕಳ್ಳರು ಬ್ಯಾಂಕ್ ದರೋಡೆಗೆ ಯತ್ನಿಸಿರುವ ಘಟನೆ ನಡೆದಿದೆ. ಸುಂಕಸಾಳದ ಬ್ಯಾಂಕ್ ಆಫ್ ಬರೋಡಾ ಶಾಖೆಯಲ್ಲಿ ದರೋಡೆಕೋರರು ಶೌಚಾಲಯದ ಗೋಡೆ ಕೊರೆದು ಬ್ಯಾಂಕ್ ದರೋಡೆಗೆ ಯತ್ನಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಸುಂಕಸಾಳದಲ್ಲಿರುವ ಬ್ಯಾಂಕ್ ನಲ್ಲಿ ಈ ಘಟನೆ ನಡೆದಿದೆ. ಬ್ಯಾಂಕ್ ಹಿಂಭಾಗದ ಶೌಚಾಲಯದ ಗೋಡೆ ಕೊರೆದು ಖದೀಮರ ಗ್ಯಾಂಗ್ ಬ್ಯಾಂಕ್ ಗೆ ಎಂಟ್ರಿಕೊಟ್ಟಿದೆ. ಸ್ಟ್ರಾಂಗ್ ರೂಂ ನ ಗೋಡೆ […]

ಕನ್ನಡ ದುನಿಯಾ 12 Jan 2026 3:07 pm

ಚಾಣಕ್ಯ ನೀತಿ : ಈ 2 ಗುಣಗಳಿರುವ ವ್ಯಕ್ತಿ ಜೀವನದಲ್ಲಿ ಎಂದಿಗೂ ಸೋಲುವುದಿಲ್ಲ!

ಆಚಾರ್ಯ ಚಾಣಕ್ಯರು ತಮ್ಮ ನೀತಿಶಾಸ್ತ್ರದಲ್ಲಿ, ಮನುಷ್ಯ ಹೇಗೆ ಬದುಕಬೇಕು ಮತ್ತು ಹೇಗೆ ಬದುಕಬಾರದು ಎಂಬುದನ್ನು ಸ್ಪಷ್ಟವಾಗಿ ವಿವರಿಸಿದ್ದಾರೆ. ಅವರು ಅನೇಕ ಸಮಸ್ಯೆಗಳಿಗೆ ಪರಿಹಾರಗಳನ್ನು ನೀಡಿದರು. ಅನೇಕ ಜನರು ಯಶಸ್ಸನ್ನು ಸಾಧಿಸುವ ಉದ್ದೇಶದಿಂದ ಒಂದು ಕೆಲಸವನ್ನು ಪ್ರಾರಂಭಿಸುತ್ತಾರೆ, ಆದರೆ ಅವರು ಮೊದಲ ಪ್ರಯತ್ನದಲ್ಲಿ ವಿಫಲವಾದಾಗ, ಅವರು ಬಿಟ್ಟುಬಿಡುತ್ತಾರೆ. ಕೆಲವರು ಎರಡನೇ ಬಾರಿ ಪ್ರಯತ್ನಿಸುತ್ತಾರೆ. ಇತರರು ಯಶಸ್ವಿಯಾಗುವವರೆಗೂ ಬಿಟ್ಟುಬಿಡುತ್ತಾರೆ. ಅದಕ್ಕಾಗಿಯೇ ಬಿಟ್ಟುಕೊಡುವವರು ಎಂದಿಗೂ ಯಶಸ್ವಿಯಾಗುವುದಿಲ್ಲ ಎಂದು ಚಾಣಕ್ಯ ಹೇಳುತ್ತಾನೆ. ಒಬ್ಬ ವ್ಯಕ್ತಿಯಲ್ಲಿ ಕೆಲವು ಗುಣಗಳಿದ್ದರೆ, ಅವನು ತನ್ನ ಜೀವನದಲ್ಲಿ ಎಂದಿಗೂ […]

ಕನ್ನಡ ದುನಿಯಾ 12 Jan 2026 2:48 pm

Good News; ಬಿಡಿಎ ಸೈಟು ಪಡೆದವರಿಗೆ ಗುಡ್‌ನ್ಯೂಸ್, ವಿವರ

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ನಾಡಪ್ರಭು ಕೆಂಪೇಗೌಡ ಬಡಾವಣೆಯ 4ನೇ ಬ್ಲಾಕ್ ನಿವಾಸಿಗಳಿಗೆ ಸಿಹಿ ಸುದ್ದಿ ನೀಡಿದೆ. ರಸ್ತೆಗಳ ಅಗಲೀಕರಣಕ್ಕೆ ಬಿಡಿಎ ಆಡಳಿತ ಮಂಡಳಿ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ. ಬಿಡಿಎ ಅಭಿವೃದ್ಧಿಪಡಿಸಿರುವ ನಾಡಪ್ರಭು ಕೆಂಪೇಗೌಡ ಬಡಾವಣೆಯ 4ನೇ ಬ್ಲಾಕ್‌ನ ನಿವಾಸಿಗಳ ದೀರ್ಘಕಾಲದ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದೆ. ಈ ಬ್ಲಾಕ್‌ನಲ್ಲಿನ ಕಿರಿದಾದ ರಸ್ತೆಗಳನ್ನು ಅಗಲೀಕರಣಗೊಳಿಸಲು ಅನುಮೋದನೆ ಸಿಕ್ಕಿದೆ. 4ನೇ ಬ್ಲಾಕ್‌ನಲ್ಲಿ ಕೇವಲ 9 ಮೀಟರ್ ಇದ್ದ ಕಿರಿದಾದ ರಸ್ತೆಗಳನ್ನು ಈಗ 18 ಮೀಟರ್‌ವರೆಗೆ ಅಗಲೀಕರಣ ಮಾಡಲು ನಿರ್ಧರಿಸಲಾಗಿದೆ. […]

ಕನ್ನಡ ದುನಿಯಾ 12 Jan 2026 2:41 pm

ರೈಲು ಪ್ರಯಾಣಿಕರಿಗೆ ಇಂದಿನಿಂದ ಬಿಗ್ ರಿಲೀಫ್: ಆಧಾರ್ ಲಿಂಕ್ ಇದ್ದರೆ ಮಧ್ಯರಾತ್ರಿವರೆಗೂ ಟಿಕೆಟ್ ಬುಕ್ಕಿಂಗ್ ಲಭ್ಯ

ನವದೆಹಲಿ: ರೈಲು ಪ್ರಯಾಣಿಕರ ಹಿತದೃಷ್ಟಿಯಿಂದ ಮತ್ತು ಟಿಕೆಟ್ ದಲ್ಲಾಳಿಗಳ ಹಾವಳಿಗೆ ಬ್ರೇಕ್ ಹಾಕಲು ಭಾರತೀಯ ರೈಲ್ವೆ ಇಲಾಖೆ ಇಂದಿನಿಂದ (ಜನವರಿ 12, 2026) ಐತಿಹಾಸಿಕ ಬದಲಾವಣೆಯೊಂದನ್ನು ಜಾರಿಗೆ ತಂದಿದೆ. ಇನ್ನು ಮುಂದೆ ಆಧಾರ್ ದೃಢೀಕೃತ IRCTC ಬಳಕೆದಾರರಿಗೆ ಮುಂಗಡ ಟಿಕೆಟ್ ಕಾಯ್ದಿರಿಸುವಿಕೆಯಲ್ಲಿ ವಿಶೇಷ ಆದ್ಯತೆ ಸಿಗಲಿದೆ. ಹಂತ ಹಂತವಾಗಿ ವಿಸ್ತರಣೆಯಾದ ಬುಕಿಂಗ್ ಸಮಯ ಟಿಕೆಟ್ ಬುಕಿಂಗ್ ವಿಂಡೋ ಸಮಯವನ್ನು ರೈಲ್ವೆ ಇಲಾಖೆ ಕಳೆದ ಕೆಲವು ದಿನಗಳಿಂದ ಹಂತ ಹಂತವಾಗಿ ವಿಸ್ತರಿಸುತ್ತಾ ಬಂದಿದೆ. ಈ ಹಿಂದೆ ಇದ್ದ ನಿಯಮಗಳಿಗೂ […]

ಕನ್ನಡ ದುನಿಯಾ 12 Jan 2026 2:37 pm

High Blood Pressure : ಪ್ರತಿನಿತ್ಯ ‘ಬಿಪಿ’ಹೆಚ್ಚಿಸುವ ಈ 5 ತಪ್ಪು ಮಾಡಬೇಡಿ, ತಜ್ಞರಿಂದ ಎಚ್ಚರಿಕೆ

ಇತ್ತೀಚಿನ ದಿನಗಳಲ್ಲಿ ವಿಶೇಷವಾಗಿ ಯುವಕರಲ್ಲಿ.. ಅಧಿಕ ರಕ್ತದೊತ್ತಡ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ. ತಜ್ಞರ ಪ್ರಕಾರ, ಅಧಿಕ ರಕ್ತದೊತ್ತಡ ಹೆಚ್ಚಾಗಿ ಇದ್ದಕ್ಕಿದ್ದಂತೆ ಹೆಚ್ಚಾಗುವುದಿಲ್ಲ. ಕೆಲವು ದೈನಂದಿನ ಅಭ್ಯಾಸಗಳಿಂದಾಗಿ ಇದು ಕ್ರಮೇಣ ಹೆಚ್ಚಾಗುತ್ತದೆ ಎಂದು ಅವರು ಹೇಳುತ್ತಾರೆ. ನಿದ್ರೆ, ಒತ್ತಡ, ಆಹಾರ ಪದ್ಧತಿ ಮತ್ತು ಜೀವನಶೈಲಿಗೆ ಸಂಬಂಧಿಸಿದ ಸಣ್ಣ ತಪ್ಪುಗಳು ಕಾಲಾನಂತರದಲ್ಲಿ ರಕ್ತದೊತ್ತಡವನ್ನು ಹೆಚ್ಚಿಸುತ್ತವೆ. ಮತ್ತು ಅಧಿಕ ರಕ್ತದೊತ್ತಡದ ಅಪಾಯವನ್ನು ಹೆಚ್ಚಿಸುವ ಐದು ದೈನಂದಿನ ಅಭ್ಯಾಸಗಳಿಂದ ನಾವು ದೂರವಿರಬೇಕು ಎಂದು ಅವರು ಹೇಳುತ್ತಾರೆ. ಹಾಗಾದರೆ ಆ ತಪ್ಪುಗಳು ಯಾವುವು.. ಮತ್ತು […]

ಕನ್ನಡ ದುನಿಯಾ 12 Jan 2026 2:31 pm

BREAKING: ಕನ್ನಡಿಗರ ಕ್ಷಮೆ ಕೋರಿದ ಬೆಂಗಳೂರಿನ ಖಾಸಗಿ ಕಂಪನಿ

ಬೆಂಗಳೂರು: ಕನ್ನಡಿಗರಲ್ಲದವರು ಹೆಚ್ ಆರ್ ಹುದ್ದೆಯ ಕೆಲಸಕ್ಕೆ ಬೇಕೆಂದು ಪ್ರಕಟಣೆ ಹೊರಡಿಸಿ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದ್ದ ಬೆಂಗಳೂರಿನ ಖಾಸಗಿ ಕಂಪನಿ ಇದೀಗ ಕನ್ನಡಿಗರ ಕ್ಷಮೆಯಾಚಿಸಿದೆ. ಬೆಂಗಳೂರಿನ ಜೆ.ಪಿ ನಗರದಲ್ಲಿರುವ ಸ್ಕಿಲ್ ಸೋನಿಕ್ಸ್ ಎಂಬ ಖಾಸಗಿ ಕಂಪನಿ ನಾನ್ ಕನ್ನಡಿಗರು ಹೆಚ್ ಆರ್ ಕೆಲಸಕ್ಕೆ ಬೇಕು ಎಂದು ಪ್ರಕಟಣೆ ಹೊರಡಿಸಿತ್ತು. ಈ ಬಗ್ಗೆ ನೌಕ್ರಿ ಡಾಟ್ ಕಾಮ್ ವೆಬ್ ಸೈಟ್ ನಲ್ಲಿ ಕಂಪನಿ ಪ್ರಕಟಿಸಿತ್ತು. ಕರ್ನಾಟಕದಲ್ಲಿರುವ ಕಂಪನಿ ಕನ್ನಡಿಗರಲ್ಲದವರು ಕೆಲಸಕ್ಕೆ ಬೇಕೆಂದು ಪ್ರಕಟಿಸಿದ್ದು, ಕನ್ನಡಿಗರನ್ನು ಕೆರಳಿಸಿತ್ತು. ಕಂಪನಿ ವಿರುದ್ಧ […]

ಕನ್ನಡ ದುನಿಯಾ 12 Jan 2026 2:27 pm

ಕ್ರೆಡಿಟ್ ಕಾರ್ಡ್ ಬಿಲ್ ಮತ್ತು ನಗದು ಜಮೆ ಮೇಲೆ ಐಟಿ ಇಲಾಖೆ ಕಣ್ಣು! ಈ ಮಿತಿ ಮೀರಿದರೆ ಬರಬಹುದು ನೋಟಿಸ್

ತೆರಿಗೆದಾರರೇ ಗಮನಿಸಿ! ನಾವು ಮಾಡುವ ಪ್ರತಿಯೊಂದು ವ್ಯವಹಾರವೂ ಆದಾಯ ತೆರಿಗೆ ಇಲಾಖೆಯ (Income Tax Department) ಕಣ್ಣಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ವಿಶೇಷವಾಗಿ ಕೆಲವು ನಿರ್ದಿಷ್ಟ ಹೆಚ್ಚಿನ ಮೌಲ್ಯದ ವಹಿವಾಟುಗಳನ್ನು ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು ಕಡ್ಡಾಯವಾಗಿ ಐಟಿ ಇಲಾಖೆಗೆ ವರದಿ ಮಾಡಬೇಕಾಗುತ್ತದೆ. ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 285BA ಅನ್ವಯ, ಈ ಕೆಳಗಿನ ವಹಿವಾಟುಗಳು ನಿಮ್ಮನ್ನು ಸಂಕಷ್ಟಕ್ಕೆ ಸಿಲುಕಿಸಬಹುದು: ಐಟಿ ಇಲಾಖೆಯ ರೇಡಾರ್‌ನಲ್ಲಿರುವ ಪ್ರಮುಖ ವಹಿವಾಟುಗಳು: ನೀವು ಏಕೆ ಜಾಗರೂಕರಾಗಿರಬೇಕು? ನಿಮ್ಮ ಆದಾಯ ತೆರಿಗೆ ರಿಟರ್ನ್ಸ್ (ITR) […]

ಕನ್ನಡ ದುನಿಯಾ 12 Jan 2026 2:14 pm

ಅಪಘಾತದಲ್ಲಿ ಯೋಧ ಸಾವು : ಪತ್ನಿಗೆ ಮಗು ಜನನ , ಅಂತಿಮ ದರ್ಶನಕ್ಕೆ ಸ್ಟ್ರೆಚರ್ ನಲ್ಲಿ ಬಂದ ಹೆಂಡತಿ |WATCH VIDEO

ಮಹಾರಾಷ್ಟ್ರದ ಸತಾರಾ ಜಿಲ್ಲೆಯಲ್ಲಿ ನಡೆದ ಹೃದಯವಿದ್ರಾವಕ ಘಟನೆಯೊಂದು ಗ್ರಾಮದ ಜನರನ್ನು ದುಃಖದಲ್ಲಿ ಮುಳುಗಿಸಿದೆ. ದೇಶ ಸೇವೆ ಮಾಡುತ್ತಿದ್ದ ಸೇನಾ ಯೋಧನೊಬ್ಬ ತನ್ನ ಮಗಳು ಈ ಲೋಕಕ್ಕೆ ಬಂದ ಕೆಲವೇ ಗಂಟೆಗಳಲ್ಲಿ ನಿಧನರಾದರು. ಆದರೆ ಆ ಮಗು ತನ್ನ ತಂದೆಯನ್ನು ನೋಡದೆಯೇ ಜನಿಸಿದ್ದು ಎಲ್ಲರನ್ನೂ ಆಘಾತಕ್ಕೆ ದೂಡಿದೆ. ಈ ದುರಂತ ಘಟನೆಗೆ ಇಡೀ ಗ್ರಾಮದ ಜನರೇ ಕಂಬನಿ ಮಿಡಿದಿದ್ದಾರೆ. ಏನಿದು ಘಟನೆಸತಾರಾ ಜಿಲ್ಲೆಯ ಪಾರ್ಲಿ ಗ್ರಾಮದ ನಿವಾಸಿ ಪ್ರಮೋದ್ ಸೇನೆಯಲ್ಲಿ ಯೋಧರಾಗಿ ಸೇವೆ ಸಲ್ಲಿಸುತ್ತಿದ್ದರು. ಅವರು ಒಂದು ವರ್ಷದ […]

ಕನ್ನಡ ದುನಿಯಾ 12 Jan 2026 2:08 pm

‘ಧೋನಿಗೂ ಹೀಗೆ ಆಗುತ್ತಿತ್ತು..’: ರೋಹಿತ್ ಔಟ್ ಆದಾಗ ವಡೋದರಾ ಫ್ಯಾನ್ಸ್ ಸಂಭ್ರಮಿಸಿದ್ದಕ್ಕೆ ಕೊಹ್ಲಿ ಗರಂ!

ಭಾನುವಾರ (ಜನವರಿ 11) ವಡೋದರಾದಲ್ಲಿ ನಡೆದ ಪಂದ್ಯದಲ್ಲಿ ಭಾರತ ತಂಡವು ನ್ಯೂಜಿಲೆಂಡ್ ನೀಡಿದ್ದ 301 ರನ್‌ಗಳ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿತು. ಆದರೆ, ಮೈದಾನದಲ್ಲಿ ನಡೆದ ಒಂದು ಘಟನೆ ವಿರಾಟ್ ಕೊಹ್ಲಿ ಅವರ ಮನಸ್ಸಿಗೆ ನೋವುಂಟು ಮಾಡಿದೆ. ನಡೆದಿದ್ದೇನು? ಭಾರತದ ಇನ್ನಿಂಗ್ಸ್ ಆರಂಭದಲ್ಲಿ ನಾಯಕ ರೋಹಿತ್ ಶರ್ಮಾ ಔಟ್ ಆದಾಗ, ಮೈದಾನದಲ್ಲಿದ್ದ ಪ್ರೇಕ್ಷಕರು ದೊಡ್ಡ ಮಟ್ಟದಲ್ಲಿ ಸಂಭ್ರಮಿಸಿದರು. ಇದಕ್ಕೆ ಕಾರಣ ರೋಹಿತ್ ಔಟ್ ಆಗಿದ್ದಕ್ಕೆ ಅವರು ಖುಷಿಪಟ್ಟಿದ್ದಲ್ಲ, ಬದಲಿಗೆ ಮುಂದಿನ ಬ್ಯಾಟರ್ ಆಗಿ ವಿರಾಟ್ ಕೊಹ್ಲಿ ಕ್ರೀಸ್‌ಗೆ ಬರುತ್ತಾರೆ […]

ಕನ್ನಡ ದುನಿಯಾ 12 Jan 2026 2:08 pm