ಬೆಳಗಾವಿ : ಬೆಳಗಾವಿ ಹಿಂಡಲಗಾ ಜೈಲಿನ ಆವರಣಕ್ಕೆ ದುಷ್ಕರ್ಮಿಗಳು ಡ್ರಗ್ಸ್, ಮೊಬೈಲ್ ಎಸೆದು ಪರಾರಿಯಾದ ಘಟನೆ ನಡೆದಿದೆ. ಬೆಳಗಾವಿ ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ ಈ ಘಟನ ನಡೆದಿದೆ. ದುಷ್ಕರ್ಮಿಗಳ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮುಖಕ್ಕೆ ಮಾಸ್ಕ್ ಧರಿಸಿಕೊಂಡು ಬಂದ ದುಷ್ಕರ್ಮಿಗಳು ಹೊರಗೆ ನಿಂತುಕೊಂಡೇ ಜೈಲಿನ ಆವರಣದೊಳಗೆ ಮೊಬೈಲ್, ಸಿಮ್ ಕಾರ್ಡ್, ಮಾದಕ ವಸ್ತುಗಳನ್ನು ಎಸೆದಿದ್ದಾರೆ ಎಂದು ತಿಳಿದಿ ಬಂದಿದೆ. ಹಿಂಡಲಗಾ ಜೈಲಿನ ಬಳಿ ಮುಂಜಾನೆ 3 ಗಂಟೆಗೆ ಘಟನೆ ನಡೆದಿದೆ. ಜೈಲಿನ ಸಿಸಿಟಿವಿಯಲ್ಲಿ […]
ಸಾರ್ವಜನಿಕರಿಗೆ ಮಹತ್ವದ ಪ್ರಕಟಣೆ : ಊರು ಹಬ್ಬ, ಜಾತ್ರೆ-ಉತ್ಸವದಲ್ಲಿ ಈ ನಿಯಮಗಳ ಪಾಲನೆ ಕಡ್ಡಾಯ
ಸಾರ್ವಜನಿಕರು ಊರು ಹಬ್ಬ, ಜಾತ್ರೆ-ಉತ್ಸವ ಮುಂತಾದ ಧಾರ್ಮಿಕ ಆಚರಣೆಗಳ ಸಂದರ್ಭದಲ್ಲಿ ಜನತೆಯು ಕುಡಿಯಲು ಶುದ್ಧ ನೀರು ಬಳಸಬೇಕು. ಸೇವಿಸುವ ಆಹಾರ ಸಂಪೂರ್ಣವಾಗಿ ಬೇಯಿಸಿ ಸೇವಿಸುವ ಮೂಲಕ ಸಂಭಾವ್ಯ ವಾಂತಿ ಬೇಧಿ ಪ್ರಕರಣಗಳು ಸಂಭವಿಸದಂತೆ ಆರೋಗ್ಯ ಇಲಾಖೆಯ ಜೊತೆಗೆ ಕೈ ಜೋಡಿಸಬೇಕು ಎಂದು ಬಳ್ಳಾರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲಾ ರಮೇಶ್ ಬಾಬು ಅವರು ತಿಳಿಸಿದ್ದಾರೆ. ಗ್ರಾಮ / ಪಟ್ಟಣಗಳಲ್ಲಿ ನಡೆಯುವ ಎಲ್ಲಾ ಜಾತ್ರೆಗಳು, ಉತ್ಸವಗಳು ಮತ್ತು ಉರುಸುಗಳಲ್ಲಿನ ನೀರಿನ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಿ […]
ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: ಅಪರಾಧಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ
ಕೊಪ್ಪಳ: ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಕೊಪ್ಪಳ ನಗರದ ಮಹಮ್ಮದ ಸೋಯಿಬ ಎಂಬ ಆರೋಪಿಯ ಮೇಲಿನ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಕೊಪ್ಪಳ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯ, ತ್ವರಿತ ವಿಲೇವಾರಿ ನ್ಯಾಯಾಲಯ(ಪೋಕ್ಸೊ) ನ್ಯಾಯಾಧೀಶರಾದ ಕುಮಾರ ಡಿ.ಕೆ. ಅವರು ಅಪರಾಧಿಗೆ ರೂ.25 ಸಾವಿರಗಳ ದಂಡ ಸಹಿತ 20 ವರ್ಷಗಳ ಕಠಿಣ ಜೈಲು ಶಿಕ್ಷೆಯನ್ನು ವಿಧಿಸಿ ಡಿಸೆಂಬರ್ 23 ರಂದು ತೀರ್ಪು ಪ್ರಕಟಿಸಿದ್ದಾರೆ. ಕೊಪ್ಪಳ ನಗರದ ಮಹಮ್ಮದ ಸೋಯಿಬ ಎಂಬ ವ್ಯಕ್ತಿಯು 2 ವರ್ಷದ ಹಿಂದೆ […]
BREAKING: ಎನ್ ಕೌಂಟರ್ ನಲ್ಲಿ ವಾಂಟೆಡ್ ನಕ್ಸಲೈಟ್ ದಯಾನಂದ್ ಮಾಲಾಕರ್ ಹತ್ಯೆ
ಪಾಟ್ನಾ: ಬಿಹಾರದ ಬೇಗುಸರಾಯ್ ಜಿಲ್ಲೆಯಲ್ಲಿ ಬುಧವಾರ ಭದ್ರತಾ ಸಿಬ್ಬಂದಿಯೊಂದಿಗೆ ನಡೆದ ಎನ್ ಕೌಂಟರ್ ನಲ್ಲಿ ತಲೆಗೆ 50,000 ರೂ. ಬಹುಮಾನ ಹೊಂದಿದ್ದ ನಕ್ಸಲೈಟ್ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತನನ್ನು ನಿಷೇಧಿತ ಸಿಪಿಐ-ಮಾವೋವಾದಿಯ ಉತ್ತರ-ಬಿಹಾರ ಕೇಂದ್ರ ವಲಯ ಸಮಿತಿಯ ಕಾರ್ಯದರ್ಶಿ ದಯಾನಂದ್ ಮಾಲಾಕರ್ ಎಂದು ಗುರುತಿಸಲಾಗಿದೆ. ಅವರ ಇಬ್ಬರು ಸಹಚರರನ್ನು ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಬಿಹಾರ ಪೊಲೀಸರ ವಿಶೇಷ ಕಾರ್ಯಪಡೆ(ಎಸ್ಟಿಎಫ್) ಬಿಡುಗಡೆ ಮಾಡಿದ ಹೇಳಿಕೆಯ ಪ್ರಕಾರ, 14 ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ […]
BREAKING : ಹೊಸ ವರ್ಷಕ್ಕೆ ಗ್ರಾಹಕರಿಗೆ ಬಿಗ್ ಶಾಕ್ : ವಾಣಿಜ್ಯ LPG ಗ್ಯಾಸ್ ಸಿಲಿಂಡರ್ ದರದಲ್ಲಿ ಭಾರಿ ಏರಿಕೆ !
ಹೊಸ ವರ್ಷಕ್ಕೆ ಗ್ರಾಹಕರಿಗೆ ಬಿಗ್ ಶಾಕ್ ಎದುರಾಗಿದ್ದು, ಗ್ಯಾಸ್ ಸಿಲಿಂಡರ್ ಬೆಲೆ ಭಾರಿ ಏರಿಕೆಯಾಗಿದೆ. ಹೌದು, ವಾಣಿಜ್ಯ ಎಲ್ ಪಿಜಿ ಸಿಲಿಂಡರ್ ದರ ತೀವ್ರವಾಗಿ ಹೆಚ್ಚಳವಾಗಿದೆ. ಆದರೆ ಗೃಹಬಳಕೆಯ ಅನಿಲ ಸಿಲಿಂಡರ್ಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ. 28 ತಿಂಗಳಲ್ಲಿ ಗ್ಯಾಸ್ ಸಿಲಿಂಡರ್ ಬೆಲೆಗಳಲ್ಲಿ ಅತಿದೊಡ್ಡ ಹೆಚ್ಚಳವಾಗಿದೆ. ಅಂದರೆ, ಕೊನೆಯ ಬಾರಿಗೆ ಅಕ್ಟೋಬರ್ 2023 ರಲ್ಲಿ ಇಷ್ಟು ದೊಡ್ಡ ಏರಿಕೆಯಾಗಿತ್ತು. ವಾಸ್ತವವಾಗಿ, ವಾಣಿಜ್ಯ ಅನಿಲ ಸಿಲಿಂಡರ್ಗಳ ಬೆಲೆಯಲ್ಲಿ ಈ ಹೆಚ್ಚಳ ಕಂಡುಬಂದಿದೆ. ದೇಶದ ನಾಲ್ಕು ಮಹಾನಗರಗಳಲ್ಲಿ ಮೂರು […]
BIG NEWS: ತಂಬಾಕು ಉತ್ಪನ್ನಗಳ ಮೇಲೆ ಹೆಚ್ಚುವರಿ ಅಬಕಾರಿ ಸುಂಕ, ಪಾನ್ ಮಸಾಲ ಮೇಲಿನ ಸೆಸ್ ಫೆ. 1 ರಿಂದ ಜಾರಿ
ನವದೆಹಲಿ: ಫೆಬ್ರವರಿ 1 ರಿಂದ ತಂಬಾಕು ಉತ್ಪನ್ನಗಳ ಮೇಲೆ ಹೆಚ್ಚುವರಿ ಅಬಕಾರಿ ಸುಂಕ ಮತ್ತು ಪಾನ್ ಮಸಾಲಾ ಮೇಲೆ ಹೊಸ ಸೆಸ್ ವಿಧಿಸಲಾಗುವುದು ಎಂದು ಸರ್ಕಾರವು ಬುಧವಾರ ಅಧಿಸೂಚನೆ ಹೊರಡಿಸಿದೆ. ತಂಬಾಕು ಮತ್ತು ಪಾನ್ ಮಸಾಲಾ ಮೇಲಿನ ಹೊಸ ಸುಂಕಗಳು ಜಿಎಸ್ಟಿ ದರಕ್ಕಿಂತ ಹೆಚ್ಚಿರುತ್ತವೆ ಮತ್ತು ಪ್ರಸ್ತುತ ಅಂತಹ ಪಾಪ ಸರಕುಗಳ ಮೇಲೆ ವಿಧಿಸಲಾಗುತ್ತಿರುವ ಪರಿಹಾರ ಸೆಸ್ ಅನ್ನು ಬದಲಾಯಿಸುತ್ತವೆ. ಫೆಬ್ರವರಿ 1 ರಿಂದ, ಪಾನ್ ಮಸಾಲಾ, ಸಿಗರೇಟ್, ತಂಬಾಕು ಮತ್ತು ಅಂತಹುದೇ ಉತ್ಪನ್ನಗಳು ಶೇ. 40 […]
ದಂತ ವೈದ್ಯಕೀಯ, ಪಶು ವೈದ್ಯಕೀಯ ಕೋರ್ಸ್ ಪ್ರವೇಶ: ಸೀಟು ಹಂಚಿಕೆ ಬಗ್ಗೆ ಅಭ್ಯರ್ಥಿಗಳಿಗೆ ಮುಖ್ಯ ಮಾಹಿತಿ
ಬೆಂಗಳೂರು: ರಾಜ್ಯದ ವಿವಿಧ ಕಾಲೇಜುಗಳಲ್ಲಿ ಇನ್ನೂ 24 ಪಶು ವೈದ್ಯಕೀಯ ಸೀಟುಗಳು ಹಂಚಿಕೆಗೆ ಲಭ್ಯ ಇದ್ದು, ಅವುಗಳ ಭರ್ತಿಗೆ ಜನವರಿ 6ರಂದು ಅಂತಿಮ ಸುತ್ತಿನ ಸೀಟು ಹಂಚಿಕೆ ಮಾಡಲಾಗುವುದು. ಇದುವರೆಗೂ ಯಾವುದೇ ಸುತ್ತಿನಲ್ಲಿ ವೈದ್ಯಕೀಯ, ದಂತ ವೈದ್ಯಕೀಯ, ಆಯುಷ್, ಪಶು ವೈದ್ಯಕೀಯ ಸೀಟು ಹಂಚಿಕೆಯಾಗದಿರುವ ಅಭ್ಯರ್ಥಿಗಳು ಈ ಸುತ್ತಿನಲ್ಲಿ ಭಾಗವಹಿಸಬಹುದು. ಆಸಕ್ತ ಅಭ್ಯರ್ಥಿಗಳು ಕೋರ್ಸ್ ಶುಲ್ಕದ ಡಿ.ಡಿ ಜತೆಗೆ ಮೂಲ ದಾಖಲೆಗಳೊಂದಿಗೆ ಜ.6ರಂದು ಬೆಳಿಗ್ಗೆ 10ರಿಂದ 11ಗಂಟೆವರೆಗೆ ಕೆಇಎ ಕಚೇರಿಯಲ್ಲಿ ಖುದ್ದು ಸಲ್ಲಿಸಬೇಕು. ಬಳಿಕ ಮಧ್ಯಾಹ್ನ 12ರಿಂದ […]
ಹೊಸ ವರ್ಷಕ್ಕೆ ನಟ ‘ಪ್ರಭಾಸ್’ಅಭಿಮಾನಿಗಳಿಗೆ ಗಿಫ್ಟ್ : ‘ಸ್ಪಿರಿಟ್’ಚಿತ್ರದ ಫಸ್ಟ್ ಲುಕ್ ರಿಲೀಸ್ |WATCH VIDEO
ದುನಿಯಾ ಸಿನಿಮಾ ಡಿಜಿಟಲ್ ಡೆಸ್ಕ್ : ಹೊಸ ವರ್ಷಕ್ಕೆ ನಟ ಪ್ರಭಾಸ್ ಅಭಿಮಾನಿಗಳಿಗೆ ಗಿಫ್ಟ್ ಸಿಕ್ಕಿದ್ದು, ಸ್ಪಿರಿಟ್ ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿದೆ. ನಟ ಪ್ರಭಾಸ್ ಡಿಫರೆಂಟ್ ಲುಕ್ ನಲ್ಲಿ ಪೋಸ್ಟ್ ಕೊಟ್ಟಿದ್ದಾರೆ. ಬಾಯಲ್ಲಿ ಸಿಗರೇಟ್ ಹಿಡಿದು ಸಿಗರೇಟ್ ಗೆ ನಟಿ ಬೆಂಕಿ ಹಚ್ಚುತ್ತಿರುವಂತೆ ಪೋಸ್ ಕೊಟ್ಟಿದ್ದಾರೆ. ಸಂದೀಪ್ ರೆಡ್ಡಿ ವಂಗಾ ಅವರ ‘ಸ್ಪಿರಿಟ್’ ಚಿತ್ರದ ಘೋಷಣೆಯ ನಂತರ, ಅಭಿಮಾನಿಗಳ ಕ್ಯುರಿಯಾಸಿಟಿ ಹೆಚ್ಚಿಸಿದೆ. ಹೊಸ ವರ್ಷಕ್ಕೆ ಸಿನಿಮಾ ತಯಾರಕರು ಅಂತಿಮವಾಗಿ ಚಿತ್ರದ ಮೊದಲ ಅಧಿಕೃತ ಪೋಸ್ಟರ್ […]
BREAKING: ಹೊಸ ವರ್ಷಾಚರಣೆ ವೇಳೆ ಶಿವಮೊಗ್ಗ, ಹುಬ್ಬಳ್ಳಿಯಲ್ಲಿ ಗಲಾಟೆ
ಬೆಂಗಳೂರು: ಹೊಸ ವರ್ಷಾಚರಣೆಯ ವೇಳೆ ಯುವಕರ ನಡುವೆ ಮಾರಾಮಾರಿ ನಡೆದ ಘಟನೆ ಹುಬ್ಬಳ್ಳಿಯ ಗೋಕುಲ್ ರಸ್ತೆಯಲ್ಲಿ ನಡೆದಿದೆ. ಕ್ಷುಲ್ಲಕ ಕಾರಣಕ್ಕೆ ಯುವಕರ ಮಧ್ಯೆ ಗ್ಯಾಂಗ್ ವಾರ್ ನಡೆದಿದ್ದು, ಕೊರಳಪಟ್ಟಿ ಹಿಡಿದುಕೊಂಡು ಯುವಕರು ಹೊಡೆದಾಡಿಕೊಂಡಿದ್ದಾರೆ. ನ್ಯೂ ಇಯರ್ ಪಾರ್ಟಿ ಮೂಡಿನಲ್ಲಿ ಯುವಕರು ಹೊಡೆದಾಡಿಕೊಂಡಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾಗಿದೆ. ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆ ಪೊಲೀಸರು ಎಂಟ್ರಿ ಕೊಟ್ಟಿದ್ದಾರೆ. ಜಗಳ ಬಿಡಿಸಿ ಎಲ್ಲರನ್ನು ಸ್ಥಳದಿಂದ ಕಳಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಶಿವಮೊಗ್ಗದಲ್ಲಿ ಹೊಸ ವರ್ಷಾಚರಣೆಯ ವೇಳೆ ಎರಡು ಗುಂಪುಗಳ ನಡುವೆ ಘರ್ಷಣೆ […]
ರಾಜ್ಯದ ಪೊಲೀಸರಿಗೆ ಗುಡ್ ನ್ಯೂಸ್: ವರ್ಷಕ್ಕೆ 13 ತಿಂಗಳ ವೇತನ
ಬೆಂಗಳೂರು: ರಾಜ್ಯದ ಕಾನ್ ಸ್ಟೆಬಲ್ ಗಳಿಂದ ಹಿಡಿದು ನಾನ್ ಐಪಿಎಸ್ ಎಸ್ಪಿ ದರ್ಜೆಯ ಅಧಿಕಾರಿಗಳಿಗೆ ಪತ್ರಾಂಕಿತ ರಜೆ ಸೌಲಭ್ಯ ಮಂಜೂರು ಮಾಡಲು ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ಮುಂದಾಗಿದ್ದಾರೆ. ಇದಕ್ಕಾಗಿ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳುವಂತೆ ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ಹಬ್ಬದ ಸಂದರ್ಭಗಳಲ್ಲಿಯೂ ರಜೆ ಸಿಗದೆ ಕಾರ್ಯನಿರ್ವಹಿಸುವ ಪೊಲೀಸ್ ಸಿಬ್ಬಂದಿ ಅಧಿಕಾರಿಗಳಿಗೆ ಶೀಘ್ರವೇ ವಾರ್ಷಿಕ 13 ತಿಂಗಳು ವೇತನ ದೊರೆಯುವ ಸಾಧ್ಯತೆ ಇದೆ. ಪೊಲೀಸ್ ಇಲಾಖೆಯ ಪ್ರಸ್ತಾವನೆಗೆ ಸರ್ಕಾರ […]
ರಾಜ್ಯದ ಗ್ರಾಮೀಣ ಜನತೆಗೆ ಗುಡ್ ನ್ಯೂಸ್: ಗ್ರಾಪಂ ವ್ಯಾಪ್ತಿಯಲ್ಲೂ ಒ.ಸಿ.ಗೆ ವಿನಾಯಿತಿ
ಬೆಂಗಳೂರು: ರಾಜ್ಯದ ಗ್ರಾಮೀಣ ಜನತೆಗೆ ಸಿಹಿಸುದ್ದಿ ಸಿಕ್ಕಿದೆ. ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ನಕ್ಷೆ ಮಂಜೂರಾತಿ ಇಲ್ಲದೆ 1200 ಚದರ ಅಡಿ ವಿಸ್ತೀರ್ಣದ ಒಳಗಿನ ನಿವೇಶನಗಳಲ್ಲಿ ನಿರ್ಮಾಣ ಮಾಡಿದ ವಸತಿ ಕಟ್ಟಡಗಳಿಗೆ ಸ್ವಾಧೀನಾನುಭವ ಪ್ರಮಾಣ ಪತ್ರ(ಒ.ಸಿ.) ಪಡೆಯುವುದರಿಂದ ವಿನಾಯಿತಿ ನೀಡಿ ಸರ್ಕಾರದಿಂದ ಆದೇಶ ಹೊರಡಿಸಲಾಗಿದೆ. ನೆಲ ಪ್ಲಸ್ ಎರಡು ಅಂತಸ್ತು ಅಥವಾ ಸ್ಟಿಲ್ಟ್ ಪ್ಲಸ್ ಮೂರು ಅಂತಸ್ತಿನವರೆಗಿನ ವಸತಿ ಕಟ್ಟಡಗಳಿಗೆ ಮಾತ್ರ ಇದು ಅನ್ವಯವಾಗುತ್ತದೆ. ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ನಿರ್ದೇಶಕರು ಬುಧವಾರ ಗ್ರಾಮ ಪಂಚಾಯಿತಿ […]
ಶಿವಮೊಗ್ಗ SP ಮಿಥುನ್ ಕುಮಾರ್ ವರ್ಗಾವಣೆ
ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಜಿ.ಕೆ. ಮಿಥುನ್ ಕುಮಾರ್ ಅವರನ್ನು ಬೆಂಗಳೂರು (ಬೆಂಗಳೂರು) ಈಶಾನ್ಯ ವಿಭಾಗ ಡಿಸಿಪಿಯಾಗಿ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಮಿಥುನ್ ಕುಮಾರ್ ವರ್ಗಾವಣೆಯಿಂದ ತೆರವಾದ ಸ್ಥಾನಕ್ಕೆ ಬಿ. ನಿಖಿಲ್ ಅವರನ್ನು ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನಾಗಿ ನಿಯೋಜಿಸಲಾಗಿದೆ. 2017 ನೇ ಬ್ಯಾಚ್ ನ ಐಪಿಎಸ್ ಅಧಿಕಾರಿಯಾಗಿರುವ ಬಿ. ನಿಖಿಲ್ ಅವರು ಕೋಲಾರ ಜಿಲ್ಲೆ ಎಸ್ಪಿಯಾಗಿ ಕಾರ್ಯನಿರ್ವಹಣೆ ಮಾಡಿದ್ದರು. ಇನ್ನು ಮಿಥುನ್ಕುಮಾರ್ ಅವರನ್ನು ಬೆಂಗಳೂರು ಆಗ್ನೇಯ ವಿಭಾಗದ ಡಿಸಿಪಿ ಆಗಿ […]
BREAKING: ಮಧ್ಯಪ್ರದೇಶದಲ್ಲಿ ಗುಂಡಿನ ದಾಳಿಗೆ ಆಭರಣ ವ್ಯಾಪಾರಿ, ಪತ್ನಿ ಸೇರಿ ಮೂವರು ಬಲಿ
ಮಂದ್ಸೌರ್(ಮಧ್ಯಪ್ರದೇಶ): ಮಧ್ಯಪ್ರದೇಶದ ಮಂದ್ಸೌರ್ ನಗರದ ಮನೆಯೊಂದರಲ್ಲಿ ಬುಧವಾರ ರಾತ್ರಿ ನಡೆದ ಗುಂಡಿನ ದಾಳಿಯಲ್ಲಿ ಆಭರಣ ವ್ಯಾಪಾರಿ ಮತ್ತು ಅವರ ಪತ್ನಿ ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮನೆಯಲ್ಲಿ ಗುಂಡಿನ ಸದ್ದು ಕೇಳಿಬಂದ ನಂತರ ಜನಸಮೂಹ ಜಮಾಯಿಸಿದ್ದು, ನಂತರ ಪೊಲೀಸ್ ವರಿಷ್ಠಾಧಿಕಾರಿ ವಿನೋದ್ ಕುಮಾರ್ ಮೀನಾ, ಹೆಚ್ಚುವರಿ ಎಸ್ಪಿ ಟೈರ್ ಸಿಂಗ್, ಪ್ರದೇಶ ಸ್ಟೇಷನ್ ಹೌಸ್ ಆಫೀಸರ್ ಪುಷ್ಪೇಂದ್ರ ಸಿಂಗ್ ಮತ್ತು ಇತರ ಅಧಿಕಾರಿಗಳು ಗೋಲ್ ಚೌರಾಹಾ ಪ್ರದೇಶದಲ್ಲಿ ಸ್ಥಳಕ್ಕೆ ತಲುಪಿದರು. ಘಟನೆಯಲ್ಲಿ ಆಭರಣ ವ್ಯಾಪಾರಿ, […]
BREAKING: ಅಕ್ರಮವಾಗಿ ನ್ಯೂ ಇಯರ್ ಪಾರ್ಟಿ ಮಾಡ್ತಿದ್ದವರಿಗೆ ಪೊಲೀಸರ ಶಾಕ್
ಬೆಂಗಳೂರು: ಅಕ್ರಮವಾಗಿ ನಡೆಯುತ್ತಿದ್ದ ನ್ಯೂ ಇಯರ್ ಪಾರ್ಟಿಯನ್ನು ಪೊಲೀಸರು ರದ್ದುಗೊಳಿಸಿದ್ದಾರೆ. ಫಾರ್ಮ್ ಹೌಸ್ ನಲ್ಲಿ ನಡೆಯುತ್ತಿದ್ದ ನ್ಯೂ ಇಯರ್ ಪಾರ್ಟಿಯ ಮೇಲೆ ದಾಳಿ ನಡೆಸಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಹೆಗ್ಗಡಹಳ್ಳಿಯ ಬಳಿ ನಿಯಮ ಉಲ್ಲಂಘಿಸಿ ನಡೆಸಲಾಗುತ್ತಿತ್ತು. ಹೆಗ್ಗಡಹಳ್ಳಿ ಸಮೀಪ ಗಾರ್ಡನ್ ಏರಿಯಾದ ಖಾಸಗಿ ಫಾರ್ಮ್ ಹೌಸ್ ನಲ್ಲಿ ಅನುಮತಿ ಪಡೆದುಕೊಳ್ಳದೆ ನಡೆಯುತ್ತಿದ್ದ ಪಾರ್ಟಿ ರದ್ದು ಮಾಡಲಾಗಿದೆ. 40-50 ಯುವಕರು ಸೇರಿಕೊಂಡು ಭರ್ಜರಿ ಎಣ್ಣೆ ಪಾರ್ಟಿ ಮಾಡುತ್ತಿದ್ದರು. ಡಿಜೆ ಸೌಂಡ್ ಗೆ ಕುಣಿದು ಕುಪ್ಪಳಿಸುತ್ತಿದ್ದರು. ಈ […]
ಹಾವೇರಿ: ತಂದೆಯ ಅಂತ್ಯಕ್ರಿಯೆ ಮುಗಿಸಿಕೊಂಡು ಬರುತ್ತಿದ್ದ ವ್ಯಕ್ತಿಯನ್ನು ಕೊಲೆ ಮಾಡಲಾಗಿದೆ. ತಲೆ ಮೇಲೆ ಕಲ್ಲು ಎತ್ತಿ ಹಾಕಿ ಸ್ನೇಹಿತನಿಂದಲೇ ವ್ಯಕ್ತಿಯ ಕೊಲೆ ನಡೆದಿದೆ. ಹಾವೇರಿ ತಾಲೂಕಿನ ಹೊಂಬರಡಿ ಗ್ರಾಮದಲ್ಲಿ ಘಟನೆ ನಡೆದಿದೆ. ತಲೆ ಮೇಲೆ ಕಲ್ಲು ಎತ್ತಿ ಹಾಕಿ ಮಂಜುನಾಥ್ ಮುದ್ದಿನವರ(40) ಕೊಲೆ ಮಾಡಲಾಗಿದೆ. ಎಣ್ಣೆ ನಶೆಯಲ್ಲಿ ಸ್ನೇಹಿತನನ್ನೇ ಶಿವಕುಮಾರ್ ಶಿವಪುರ ಕೊಲೆ ಮಾಡಿದ್ದಾನೆ. ಡಿಸೆಂಬರ್ 30ರಂದು ಹೃದಯಾಘಾತದಿಂದ ಮಂಜುನಾಥ ತಂದೆ ರಾಜೇಂದ್ರ ನಿಧನರಾಗಿದ್ದು, ತಂದೆ ಅಂತ್ಯಕ್ರಿಯೆ ಮುಗಿಸಿಸಿಕೊಂಡು ಬರುತ್ತಿದ್ದ ಮಂಜುನಾಥ್ ಸ್ನೇಹಿತ ಶಿವಕುಮಾರನೊಂದಿಗೆ ಮದ್ಯ ಸೇವನೆ […]
ನೆನೆಸಿದ ಹಸಿರು ಕಡಲೆಯಲ್ಲಿದೆ ಆರೋಗ್ಯದ ಗುಟ್ಟು….!
ಈಗ ಹಸಿರು ಕಡಲೆಯ ಸೀಸನ್. ಇದು ಚಳಿಗಾಲದ ತರಕಾರಿ. ಪ್ರೋಟೀನ್, ಫೈಬರ್ ಮತ್ತು ಕಬ್ಬಿಣದಂತಹ ಖನಿಜಗಳ ಉಗ್ರಾಣ ಈ ಹಸಿರು ಕಡಲೆ. ಅದಕ್ಕಾಗಿಯೇ ಅವು ಆರೋಗ್ಯದ ದೃಷ್ಟಿಯಿಂದ ತುಂಬಾ ಪ್ರಯೋಜನಕಾರಿ. ಸಾಮಾನ್ಯವಾಗಿ ಹಸಿರು ಕಡಲೆಯನ್ನು ಪಲ್ಯ , ಬಾಜಿ ಮಾಡಿ ಸೇವಿಸುತ್ತೇವೆ.ಹಸಿರು ಕಡಲೆ ತಿನ್ನಲು ಬಹಳ ರುಚಿಯಾಗಿರುತ್ತವೆ. ಜೊತೆಗೆ ಅನೇಕ ಅದ್ಭುತ ಪ್ರಯೋಜನಗಳನ್ನೂ ಇವು ಹೊಂದಿವೆ. ಇವುಗಳನ್ನು ಸೇವಿಸುವುದರಿಂದ ತೂಕವನ್ನು ಕಡಿಮೆ ಮಾಡಬಹುದು, ರಕ್ತದೊತ್ತಡವನ್ನು ನಿಯಂತ್ರಿಸಬಹುದು. ಒತ್ತಡದಿಂದ ಮುಕ್ತಿ: ಹಸಿರು ಕಡಲೆಯಲ್ಲಿ ವಿಟಮಿನ್ ಬಿ 9 ಅಥವಾ […]
BREAKING: 2025ಕ್ಕೆ ವಿದಾಯ, 2026 ಹೊಸ ವರ್ಷಕ್ಕೆ ಅದ್ಧೂರಿ ಸ್ವಾಗತ: ಎಲ್ಲೆಡೆ ಸಂಭ್ರಮಾಚರಣೆ
ಬೆಂಗಳೂರು: 2025ಕ್ಕೆ ವಿದಾಯ ಹೇಳಲಾಗಿದ್ದು. 2026 ಹೊಸ ವರ್ಷವನ್ನು ಅದ್ದೂರಿಯಾಗಿ ಸ್ವಾಗತಿಸಲಾಗಿದೆ. ಸಂಭ್ರಮ, ಸಡಗರದೊಂದಿಗೆ ಕೇಕ್ ಕತ್ತರಿಸಿ ಪಟಾಕಿ ಸೇರಿಸಿ ಪಾರ್ಟಿ ಮಾಡುವ ಮೂಲಕ ಜನ ಹೊಸ ವರ್ಷವನ್ನು ಅದ್ದೂರಿಯಾಗಿ ಸ್ವಾಗತಿಸಿದ್ದಾರೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸಂಭ್ರಮಾಚರಣೆ ಮುಗಿಲು ಮುಟ್ಟಿತ್ತು. ವರ್ಷಾಚರಣೆಯ ಪ್ರಮುಖ ಕೇಂದ್ರಗಳಾದ ಬೆಂಗಳೂರಿನ ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್. ಕೋರಮಂಗಲ ಮೊದಲಾದ ಕಡೆ ಮಧ್ಯರಾತ್ರಿ ಸಂಭ್ರಮಾಚರಣೆ ಮುಗಿಲು ಮುಟ್ಟಿತ್ತು. ವಿದ್ಯುತ್ ದೀಪಾಲಂಕಾರದಿಂದ ಜಗಮಗಿಸುತ್ತಿದ್ದ ರಸ್ತೆಗಳಲ್ಲಿ ಸೇರಿದ್ದ ಲಕ್ಷಾಂತರ ಜನ ರಾತ್ರಿ ಹನ್ನೆರಡು […]
ಮುಖದ ಮೇಲೆ ಕಾಡುವ ಮೊಡವೆಗಳು, ಕಲೆಗಳನ್ನು ಸುಲಭವಾಗಿ ಹೋಗಲಾಡಿಸಲು ಪರಿಣಾಮಕಾರಿ ಮನೆ ಮದ್ದುಗಳು…!
ಮೊಡವೆ ಸಮಸ್ಯೆ ತುಂಬಾ ಸಾಮಾನ್ಯ. ಯುವಕ-ಯುವತಿಯರಲ್ಲಿ ಮುಖದ ಮೇಲೆ, ಬೆನ್ನು, ಕತ್ತಿನ ಮೇಲೆ ಮೊಡವೆಗಳೇಳುತ್ತವೆ. ಇದು ಸಾಮಾನ್ಯ ಸಮಸ್ಯೆಯಾದರೂ ನಮ್ಮ ಅಂದವನ್ನೇ ಹಾಳು ಮಾಡಿಬಿಡುತ್ತದೆ. ಹಾಗಾಗಿ ಮೊಡವೆಯಿಂದ ಮುಕ್ತಿ ಪಡೆಯಬೇಕೆಂಬುದು ಬಹುತೇಕ ಎಲ್ಲರ ಆಸೆ. ಕೆಲವರಿಗೆ ಬೇಗನೆ ಮೊಡವೆಗಳು ಮಾಯವಾಗಿ ಮುಖ ಕಾಂತಿಯನ್ನು ಮರಳಿ ಪಡೆದರೆ, ಇನ್ನು ಕೆಲವರಿಗೆ ವರ್ಷಗಟ್ಟಲೇ ಮೊಡವೆ ಕಿರಿಕಿರಿ ಹುಟ್ಟಿಸುತ್ತದೆ. ಎಷ್ಟೇ ಔಷಧ ತೆಗೆದುಕೊಂಡ್ರೂ ಬಗೆಬಗೆಯ ಕ್ರೀಮ್ ಬಳಸಿದ್ರೂ ಮೊಡವೆ ಏಳುತ್ತಲೇ ಇರುತ್ತದೆ. ಹಾಗಾಗಿ ಅಂಥವರು ಪರಿಣಾಮಕಾರಿ ಮನೆಮದ್ದುಗಳನ್ನು ಅನುಸರಿಸಬೇಕು. ಜೀರ್ಣಾಂಗ ವ್ಯವಸ್ಥೆ […]
BREAKING: ಶಿವಮೊಗ್ಗ ಜಿಲ್ಲಾಧಿಕಾರಿಯಾಗಿ ಪ್ರಭುಲಿಂಗ ಕವಲಿಕಟ್ಟಿ
ಶಿವಮೊಗ್ಗ: ಐಎಎಸ್ ಅಧಿಕಾರಿ ಪ್ರಭುಲಿಂಗ ಕವಲಿಕಟ್ಟಿ ಅವರನ್ನು ಶಿವಮೊಗ್ಗ ಜಿಲ್ಲೆಯ ಜಿಲ್ಲಾಧಿಕಾರಿಯನ್ನಾಗಿ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. 2013 ರ ಬ್ಯಾಚ್ನ ಐಎಎಸ್ ಅಧಿಕಾರಿ ಆಗಿರುವ ಪ್ರಭುಲಿಂಗ ಕವಲಿಕಟ್ಟಿ, ಪ್ರಸ್ತುತ ಬೆಂಗಳೂರಿನ ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಮೂಲತಃ ಧಾರವಾಡ ಜಿಲ್ಲೆಯವರಾದ ಪ್ರಭುಲಿಂಗ ಕವಲಿಕಟ್ಟಿ, ಈ ಹಿಂದೆ ಹಟ್ಟಿ ಚಿನ್ನದ ಗಣಿ ಕಂಪನಿ ವ್ಯವಸ್ಥಾಪಕ ನಿರ್ದೇಶಕರಾಗಿ, ಉತ್ತರ ಕನ್ನಡದ ಜಿಲ್ಲಾಧಿಕಾರಿಯಾಗಿ ಕೆಲಸ ನಿರ್ವಹಿಸಿದ್ದರು. ಪ್ರಸ್ತುತ ಬೆಂಗಳೂರಿನ ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇದೀಗ […]
BREAKING: ಪೊಲೀಸರ ವಿಶೇಷ ಕಾರ್ಯಾಚರಣೆ, ನ್ಯೂ ಇಯರ್ ಪಾರ್ಟಿಗೆ ಡ್ರಗ್ಸ್ ಸಪ್ಲೈ ಮಾಡ್ತಿದ್ದ ಓರ್ವ ಅರೆಸ್ಟ್
ಬೆಂಗಳೂರು: ನ್ಯೂ ಇಯರ್ ಪಾರ್ಟಿಗೆ ಡ್ರಗ್ಸ್ ಸಪ್ಲೈ ಮಾಡುತ್ತಿದ್ದವನನ್ನು ದೇವನಹಳ್ಳಿ ಠಾಣೆ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ನೈಜೀರಿಯಾ ಮೂಲದ ಆರೋಪಿಯನ್ನು ಬಂಧಿಸಲಾಗಿದೆ. ಏರ್ಪೋರ್ಟ್ ಬ್ಯಾಕ್ ಗೇಟ್ ಸಮೀಪ ಡ್ರಗ್ಸ್ ಮಾರಾಟ ಮಾಡುವಾಗ ದಾಳಿ ನಡೆಸಿ ಬಂಧಿಸಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತನಿಂದ 21 ಗ್ರಾಂ ಕೊಕೇನ್ ಮತ್ತು 30 ಗ್ರಾಂ ಎಂಡಿಎಂಎ ಮಾದಕ ವಸ್ತು ವಶಕ್ಕೆ ಪಡೆಯಲಾಗಿದೆ. ಹೆಚ್ಚಿನ ವಿಚಾರಣೆ ನಡೆಸಲಾಗಿದೆ.
ಬೆಂಗಳೂರು: ರಾಜ್ಯಪಾಲ ಥಾವರ್ ಚಂದ್ ಗೆಹ್ಲೊಟ್ ಅವರು ಹೊಸ ವರ್ಷದ ಶುಭಾಶಯ ಕೋರಿದ್ದಾರೆ. ಹೊಸ ವರ್ಷ ನಮ್ಮ ದೇಶವನ್ನು ಶಾಂತಿ ಸಮೃದ್ಧಿ ಮತ್ತು ಏಕತೆ ಮಾರ್ಗದಲ್ಲಿ ಮುನ್ನಡೆಸುವ ಅವಕಾಶ ಒದಗಿಸಲು ಎಂದು ತಿಳಿಸಿದ್ದಾರೆ. ಹೊಸ ವರ್ಷ ಎಲ್ಲರಿಗೂ ಸಂತೋಷ, ಸಮೃದ್ಧಿ ತರಲಿ ಎಂದು ಹಾರೈಸಿದ್ದಾರೆ. ದೇಶದ ಭವಿಷ್ಯದತ್ತ ನಾವೆಲ್ಲರೂ ಒಟ್ಟಾಗಿ ಮುನ್ನಡೆಯೋಣ ಎಂದು ರಾಜ್ಯಪಾಲರು ಶುಭಾಶಯ ಕೋರಿದ್ದಾರೆ.
ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ ಮಾಡಲಾಗಿದೆ. 23 ಐಪಿಎಸ್ ಅಧಿಕಾರಿಗಳಿಗೆ ಡಿಐಜಿಪಿ ಹುದ್ದೆಗೆ, ಇಬ್ಬರು ಡಿಐಜಿಪಿಗಳಿಗೆ ಐಜಿಪಿಯಾಗಿ ಬಡ್ತಿ ನೀಡಿ ಸರ್ಕಾರ ಆದೇಶ ಹೊರಡಿಸಿದೆ. ಮೂವರು ಅಡಿಷನಲ್ ಎಸ್ಪಿಗಳಿಗೆ ಎಸ್ಪಿಗಳಾಗಿ ಬಡ್ತಿ ನೀಡಲಾಗಿದೆ. 20 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಭೀಮಶಂಕರ ಗುಳೇದ್ – ಡಿಐಜಿಪಿ, ಸಿಐಡಿ, ಆರ್ಥಿಕ ಅಪರಾಧ ಇಲಾಕಿಯಾ ಕರುಣಾಗರನ್ – ಡಿಐಜಿಪಿ, ವೈರ್ ಲೆಸ್ ವೇದಮೂರ್ತಿ – ಡಿಐಜಿಪಿ, ರಾಜ್ಯ ಗುಪ್ತಚರ ಹನುಮಂತರಾಯ – ಡಿಐಜಿಪಿ, […]
ಭೋಪಾಲ್ನಲ್ಲಿ ವಿಚಿತ್ರ ದರೋಡೆ: ಬೆದರಿಸುವ ಶ್ವಾನಗಳಿಗೆ ಮಾಂಸದ ಚೂರು ನೀಡಿ 18 ಲಕ್ಷ ರೂ. ಲೂಟಿ!
ಭೋಪಾಲ್: ಮಧ್ಯಪ್ರದೇಶದ ರಾಜಧಾನಿ ಭೋಪಾಲ್ನಲ್ಲಿ ಈವರೆಗೆ ಕಾಣದಂತಹ ವಿಭಿನ್ನ ಶೈಲಿಯ ದರೋಡೆ ನಡೆದಿದೆ. ವಕೀಲರೊಬ್ಬರ ಮನೆಯಲ್ಲಿದ್ದ ಖತರ್ನಾಕ್ ಡೋಬರ್ಮನ್ ತಳಿಯ ನಾಯಿಗಳಿಗೆ ಮಾಂಸದ ಚೂರುಗಳನ್ನು ಹಾಕಿ ಸದ್ದಿಲ್ಲದಂತೆ ಮಾಡಿದ ಎಂಟು ಮಂದಿ ಮುಸುಕುಧಾರಿ ದರೋಡೆಕೋರರು, ಲಕ್ಷಾಂತರ ಮೌಲ್ಯದ ಚಿನ್ನಾಭರಣ ಹಾಗೂ 18 ಲಕ್ಷ ರೂಪಾಯಿ ನಗದು ದೋಚಿ ಪರಾರಿಯಾಗಿದ್ದಾರೆ. ಶ್ವಾನಗಳನ್ನು ಮೌನಗೊಳಿಸಲು ಮಾಂಸದ ತಂತ್ರ ಸೂರಜ್ ನಗರದ ಏರ್ಪೋರ್ಟ್ ರಸ್ತೆಯಲ್ಲಿರುವ ವಕೀಲ ಅಖಿಲೇಶ್ ಶ್ರೀವಾಸ್ತವ ಅವರ ಮನೆಯಲ್ಲಿ ಈ ಘಟನೆ ನಡೆದಿದೆ. ಅಖಿಲೇಶ್ ಅವರು ಚಿಕಿತ್ಸೆಗಾಗಿ ಇಂದೋರ್ಗೆ […]
ಟಿ20 ಕ್ರಿಕೆಟ್ನಲ್ಲಿ ವಿಶ್ವದಾಖಲೆ: ಕೇವಲ 7 ರನ್ ನೀಡಿ 8 ವಿಕೆಟ್ ಪಡೆದ ಭೂತಾನ್ ಸ್ಪಿನ್ನರ್ ಸೋನಮ್ ಯೇಶೆ!
ಗೆಲೆಫು (ಭೂತಾನ್): ಕ್ರಿಕೆಟ್ ಲೋಕದಲ್ಲಿ ಹಲವು ಅಚ್ಚರಿಯ ದಾಖಲೆಗಳು ನಿರ್ಮಾಣವಾಗುತ್ತವೆ. ಆದರೆ ಭೂತಾನ್ನ ಯುವ ಬೌಲರ್ ಸೋನಮ್ ಯೇಶೆ ಈಗ ಬರೆದಿರುವ ದಾಖಲೆ ಮಾತ್ರ ಇಡೀ ಕ್ರೀಡಾ ಜಗತ್ತನ್ನು ಬೆಚ್ಚಿಬೀಳಿಸಿದೆ. ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಬೌಲರ್ವೊಬ್ಬರು ಒಂದೇ ಪಂದ್ಯದಲ್ಲಿ ಎಂಟು ವಿಕೆಟ್ ಪಡೆಯುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಮ್ಯಾನ್ಮಾರ್ ವಿರುದ್ಧ ಯೇಶೆ ಅಟ್ಟಹಾಸ ಶುಕ್ರವಾರ ಮ್ಯಾನ್ಮಾರ್ ವಿರುದ್ಧ ನಡೆದ ಮೂರನೇ ಟಿ20 ಪಂದ್ಯದಲ್ಲಿ 22 ವರ್ಷದ ಸೋನಮ್ ಯೇಶೆ ಈ ಸಾಧನೆ […]
ಆಸ್ತಿ ಪ್ರಕರಣದಲ್ಲಿ ಎಸ್ಸಿ/ಎಸ್ಟಿ ಕಾಯ್ದೆ ಬಳಕೆ ತಿರಸ್ಕರಿಸಿದ ಹೈಕೋರ್ಟ್ ಮಹತ್ವದ ಆದೇಶ: ಕ್ರಿಮಿನಲ್ ಕೇಸ್ ರದ್ದು
ನವದೆಹಲಿ: ಎರಡು ದಶಕಗಳ ಹಿಂದೆ ಮಾಡಲಾದ ಭೂ ಹಂಚಿಕೆಗಳಲ್ಲಿನ ಅಕ್ರಮಗಳು ಮತ್ತು ಸಂಬಂಧಿತ ಆದಾಯ ಪ್ರಕ್ರಿಯೆಗಳಿಂದ ಉಂಟಾದ ಎಸ್ಸಿ/ಎಸ್ಟಿ ಕಾಯ್ದೆಯಡಿ ಆರೋಪಗಳನ್ನು ಒಳಗೊಂಡಂತೆ ಕ್ರಿಮಿನಲ್ ಪ್ರಕರಣವನ್ನು ಅಲಹಾಬಾದ್ ಹೈಕೋರ್ಟ್ ರದ್ದುಗೊಳಿಸಿದೆ. ಕ್ರಿಮಿನಲ್ ಮೇಲ್ಮನವಿಯನ್ನು ಅನುಮತಿಸುತ್ತಾ, ನ್ಯಾಯಮೂರ್ತಿ ಶೇಖರ್ ಕುಮಾರ್ ಯಾದವ್ ಅವರ ಏಕಸದಸ್ಯ ಪೀಠವು ಪರಿಶಿಷ್ಟ ಜಾತಿಯ ಭೂಮಿ ಅಥವಾ ಮಾಹಿತಿದಾರರ ಜಾತಿ ಸ್ಥಿತಿಯನ್ನು ಉಲ್ಲೇಖಿಸುವುದು ವಿಶೇಷ ಕಾನೂನಿನ ನಿಬಂಧನೆಗಳನ್ನು ಅನ್ವಯಿಸಲು ಸಾಕಾಗುವುದಿಲ್ಲ ಎಂದು ಗಮನಿಸಿದೆ. ಪ್ರಕರಣವು ಪ್ರಧಾನವಾಗಿ ನಾಗರಿಕ ಮತ್ತು ಕಂದಾಯ ಸ್ವರೂಪದ್ದಾಗಿದೆ ಮತ್ತು ಮೊಕದ್ದಮೆಯು […]
ಚಾಣಕ್ಯ ನೀತಿ: ನಿಮ್ಮ ಈ 11 ರಹಸ್ಯಗಳನ್ನು ಸಂಬಂಧಿಕರಿಗೆ ತಿಳಿಸಬೇಡಿ, ತಿಳಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿ!
ಆಚಾರ್ಯ ಚಾಣಕ್ಯರ ನೀತಿಗಳು ಕೇವಲ ಇತಿಹಾಸಕ್ಕೆ ಸೀಮಿತವಾಗಿಲ್ಲ, ಅವು ಇಂದಿನ ಕಾಲಕ್ಕೂ ಅನ್ವಯಿಸುವ ಜೀವನ ಪಾಠಗಳಾಗಿವೆ. ಚಾಣಕ್ಯರ ಪ್ರಕಾರ, ವ್ಯಕ್ತಿಯು ತನ್ನ ಗೌರವ ಮತ್ತು ನೆಮ್ಮದಿಯನ್ನು ಕಾಪಾಡಿಕೊಳ್ಳಲು ಕೆಲವು ವಿಷಯಗಳನ್ನು ಅತ್ಯಂತ ಆಪ್ತರಿಂದಲೂ ಮುಚ್ಚಿಡಬೇಕು. ಸಂಬಂಧಿಕರಿಗೆ ಹೇಳಬಾರದು ಎಂದು ಚಾಣಕ್ಯರು ಎಚ್ಚರಿಸಿರುವ ಆ 11 ಪ್ರಮುಖ ವಿಷಯಗಳು ಇಲ್ಲಿವೆ: 1. ನಿಮ್ಮ ಆದಾಯ ಮತ್ತು ಸಂಪತ್ತು (Income and Wealth) ನಿಮ್ಮ ನಿಜವಾದ ಗಳಿಕೆ ಎಷ್ಟು ಎಂಬುದು ಯಾರಿಗೂ ತಿಳಿಯಬಾರದು. ನಿಮ್ಮ ಬಳಿ ಹಣ ಹೆಚ್ಚಿದೆ ಎಂದು […]
BREAKING: ಬೆಂಗಳೂರಿನಲ್ಲಿ ಮತ್ತೆ ಟೋಯಿಂಗ್ ಆರಂಭಿಸಿದ ಟ್ರಾಫಿಕ್ ಪೊಲೀಸರು
ಬೆಂಗಳೂರು: ಬೆಂಗಳೂರಿನಲ್ಲಿ ಮತ್ತೆ ಟೋಯಿಂಗ್ ಶುರುವಾಗಿದೆ. ಬೆಂಗಳೂರಿನಲ್ಲಿ ಟ್ರಾಫಿಕ್ ಪೊಲೀಸರು ಟೋಯಿಂಗ್ ಆರಂಭಿಸಿದ್ದಾರೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರದ(ಜಿಬಿಎ) ವತಿಯಿಂದ 6 ಟೋಯಿಂಗ್ ವಾಹನಗಳನ್ನು ಟ್ರಾಫಿಕ್ ಪೊಲೀಸರಿಗೆ ಹಸ್ತಾಂತರ ಮಾಡಲಾಗಿದೆ. ಇವತ್ತು 6 ಟೋಯಿಂಗ್ ವಾಹನಗಳನ್ನು ಬಳಕೆ ಮಾಡುತ್ತಿದ್ದೇವೆ ಎಂದು ಸಂಚಾರ ವಿಭಾಗದ ಜಂಟಿ ಪೋಲಿಸ್ ಆಯುಕ್ತ ಕಾರ್ತಿಕ್ ರೆಡ್ಡಿ ಹೇಳಿದ್ದಾರೆ. ಜಿಬಿಎ ವತಿಯಿಂದ ಅಧಿಕೃತವಾಗಿ ನೋಟಿಫಿಕೇಶನ್ ಆಗುತ್ತದೆ. ಇಂದು ಟೋಯಿಂಗ್ ಶುಲ್ಕ ಪಡೆಯುವುದಿಲ್ಲ. ಬೆಂಗಳೂರಿನಲ್ಲಿ ಇಂದು ಎಲ್ಲಾ ಫ್ಲೈ ಓವರ್ ಗಳನ್ನು ಬಂದ್ ಮಾಡಲಾಗುವುದು. ರಾತ್ರಿ 8 […]
BREAKING: ಚಿಕ್ಕಮಗಳೂರು ಎಸ್ಪಿ ವಿಕ್ರಂ ಆಮ್ಟೆ ವರ್ಗಾವಣೆ, ಬೆಂಗಳೂರು ಪೂರ್ವ ಡಿಸಿಪಿಯಾಗಿ ನೇಮಕ
ಬೆಂಗಳೂರು: ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ಅಧೀಕ್ಷಕ ವಿಕ್ರಂ ಆಮ್ಟೆ ಅವರನ್ನು ವರ್ಗಾವಣೆ ಮಾಡಲಾಗಿದೆ. ಬೆಂಗಳೂರು ಪೂರ್ವ ವಿಭಾಗದ ಡಿಸಿಪಿಯಾಗಿ ವಿಕ್ರಂ ಆಂಟಿ ಅವರನ್ನು ವರ್ಗಾವಣೆ ಮಾಡಲಾಗಿದೆ. ಚಿಕ್ಕಮಗಳೂರು ಎಸ್ಪಿ ಆಗಿ ಜಿತೇಂದ್ರ ಕುಮಾರ್ ದಯಾಮ ಅವರನ್ನು ನೇಮಕ ಮಾಡಲಾಗಿದೆ. ANF ಎಸ್ಪಿಯಾಗಿ ಜಿತೇಂದ್ರ ಕುಮಾರ್ ದಯಾಮ ಕಾರ್ಯ ನಿರ್ವಹಿಸುತ್ತಿದ್ದಾರೆ.
‘ನಿಮ್ಮ ಸುರಕ್ಷತೆ ನಮ್ಮ ಆದ್ಯತೆ’: ಹೊಸ ವರ್ಷ ಸಂಭ್ರಮಾಚರಣೆ ವೇಳೆ ಸಲಹೆ, ಸೂಚನೆ ಪಾಲಿಸಲು ಸಿಎಂ ಸಿದ್ದರಾಮಯ್ಯ ಮನವಿ
ಹೊಸ ವರ್ಷದ ಸಂಭ್ರಮಾಚರಣೆಯ ಸಂದರ್ಭದಲ್ಲಿ ನಿಮ್ಮ ಸುರಕ್ಷತೆಯನ್ನು ನಾವು ಆದ್ಯತೆಯಾಗಿಟ್ಟುಕೊಂಡಿದ್ದೇವೆ. ಹೀಗಾಗಿ ಹೆಚ್ಚುವರಿ ಗಸ್ತು ವ್ಯವಸ್ಥೆ, ತುರ್ತು ಪ್ರತಿಕ್ರಿಯಾ ಘಟಕ ಹಾಗೂ ಅಗತ್ಯ ಬೆಂಬಲ ವ್ಯವಸ್ಥೆಯೊಂದಿಗೆ ಬೆಂಗಳೂರು ನಗರ ಪೊಲೀಸರು ಸಕಲ ತಯಾರಿ ಮಾಡಿಕೊಂಡಿದ್ದಾರೆ. ಸಂಭ್ರಮಾಚರಣೆಯ ಸಂದರ್ಭದಲ್ಲಿ ಪೊಲೀಸರು ನೀಡುವ ಸಲಹೆ, ಸೂಚನೆಗಳನ್ನು ತಪ್ಪದೇ ಪಾಲಿಸಿ, ಸುಗಮ ಸಂಚಾರಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಬೆಂಗಳೂರು ನಗರ ಪೊಲೀಸರೊಂದಿಗೆ ಸಹಕರಿಸಿ ಎಂದು ತಮ್ಮೆಲ್ಲರಲ್ಲಿ ಮನವಿ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.
ಆಕ್ಲೆಂಡ್ ನ ಸ್ಕೈ ಟವರ್ ನಿಂದ ಅದ್ಭುತ ಪಟಾಕಿ ಸಿಡಿಸುವುದರೊಂದಿಗೆ ನ್ಯೂಜಿಲೆಂಡ್ 2026ರ ಹೊಸ ವರ್ಷವನ್ನು ಅದ್ಧೂರಿಯಾಗಿ ಸ್ವಾಗತಿಸಿದೆ. ಬುಧವಾರ ಆಕ್ಲೆಂಡ್ನಲ್ಲಿ ಅದ್ಭುತ ಪಟಾಕಿಗಳೊಂದಿಗೆ, ನ್ಯೂಜಿಲೆಂಡ್ 2025 ಕ್ಕೆ ವಿದಾಯ ಹೇಳಿ 2026 ಅನ್ನು ಸ್ವಾಗತಿಸಲಾಯಿತು. ನ್ಯೂಜಿಲೆಂಡ್ನ ಅತಿ ಎತ್ತರದ ಕಟ್ಟಡವಾದ ಸ್ಕೈ ಟವರ್, ನಗರದ ಮಧ್ಯಭಾಗದಲ್ಲಿ ಅದ್ಭುತ ಪಟಾಕಿ ಪ್ರದರ್ಶನವನ್ನು ಏರ್ಪಡಿಸಿತು, ಮಳೆಯಿಂದ ಆವೃತವಾದ ಆಚರಣೆಯೊಂದಿಗೆ ಹೊಸ ವರ್ಷವನ್ನು ಸ್ವಾಗತಿಸಿದ ಮೊದಲ ಪ್ರಮುಖ ಮಹಾನಗರವಾಗಿದೆ. 2025 ಕ್ಕೆ ವಿದಾಯ ಹೇಳುವ ಮೊದಲ ರಾಷ್ಟ್ರಗಳು ದಕ್ಷಿಣ ಪೆಸಿಫಿಕ್ನಲ್ಲಿರುವ […]
ಚಾಮರಾಜನಗರ: ಮತ್ತೊಂದು ಹುಲಿ ಸೆರೆ, ನಿಟ್ಟುಸಿರು ಬಿಟ್ಟ ಜನರು
ಚಾಮರಾಜನಗರ ತಾಲ್ಲೂಕಿನ ಕಲ್ಪುರ ಭಾಗದಲ್ಲಿ ಸಂಚಾರ ಮಾಡುತ್ತಿದ್ದ ಮತ್ತೊಂದು ಹುಲಿಯನ್ನು ಅರವಳಿಕೆ ಚುಚ್ಚುಮದ್ದು ನೀಡಿ ಸೆರೆ ಹಿಡಿಯಲಾಗಿದೆ. ಕಳೆದ 10 ದಿನಗಳಿಂದ ತಾಯಿ ಹುಲಿ ಹಾಗೂ 4 ಹುಲಿ ಮರಿಗಳ ಸೆರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಕೂಂಬಿಂಗ್ ಕಾರ್ಯಾಚರಣೆ ನಡೆಸಿದ್ದರು. 5 ಸಾಕಾನೆಗಳನ್ನು ಬಳಸಿಕೊಂಡು ಹುಲಿಯನ್ನು ಹೇಗಾದರೂ ಮಾಡಿ ಸೆರೆ ಹಿಡಿಯಬೇಕು ಎಂದು ಪಣ ತೊಟ್ಟಿದ್ದರು. ಚಾಮರಾಜನಗರ ತಾಲ್ಲೂಕಿನ ನಂಜೇದೇವನಪುರ, ಉಡಿಗಾಲ, ವೀರನಪುರ, ಕೆ.ಕೆ.ಹುಂಡಿ ಸೇರಿದಂತೆ ಏಳು ಗ್ರಾಮಗಳಲ್ಲಿ ಬಿಳಿಗಿರಿರಂಗನ ಬೆಟ್ಟ ಹುಲಿ ಸಂರಕ್ಷಿತಾರಣ್ಯದ ಅಧಿಕಾರಿಗಳು ಕಾರ್ಯಾಚರಣೆ […]
ರೈಲ್ವೆ ಪ್ರಯಾಣಿಕರಿಗೆ ಬಂಪರ್ ಆಫರ್: ಕೌಂಟರ್ನಲ್ಲಿ ಕಾಯುವ ಕಿರಿಕಿರಿ ಬೇಡ, ಆಪ್ ಮೂಲಕ ಬುಕ್ ಮಾಡಿ ಹಣ ಉಳಿಸಿ!
ನವದೆಹಲಿ: ನೀವೇನಾದರೂ ರೈಲಿನಲ್ಲಿ ಜನರಲ್ (ಅನ್ ರಿಸರ್ವ್ಡ್) ಟಿಕೆಟ್ನಲ್ಲಿ ಪ್ರಯಾಣಿಸುವವರಾಗಿದ್ದರೆ ಈ ಸುದ್ದಿ ನಿಮಗಾಗಿ. ಭಾರತೀಯ ರೈಲ್ವೆಯ ಹೊಸ ‘ರೈಲ್ ಒನ್’ (RailOne) ಆಪ್ ಮೂಲಕ ಟಿಕೆಟ್ ಕಾಯ್ದಿರಿಸುವ ಪ್ರಯಾಣಿಕರಿಗೆ ರೈಲ್ವೆ ಇಲಾಖೆಯು ವಿಶೇಷ ರಿಯಾಯಿತಿ ಘೋಷಿಸಿದೆ. ರಿಯಾಯಿತಿಯ ವಿವರಗಳು: ಭಾರತೀಯ ರೈಲ್ವೆಯ ಆದೇಶದಂತೆ, ಜನವರಿ 14, 2026 ರಿಂದ ಜುಲೈ 14, 2026 ರವರೆಗೆ (ಆರು ತಿಂಗಳ ಕಾಲ) ಈ ಕೆಳಗಿನ ರಿಯಾಯಿತಿಗಳು ಲಭ್ಯವಿರುತ್ತವೆ: ರೈಲ್ವೆ ಇಲಾಖೆಯ ಈ ಕ್ರಮದ ಉದ್ದೇಶ: ರೈಲ್ವೆ ನಿಲ್ದಾಣಗಳಲ್ಲಿರುವ ಟಿಕೆಟ್ […]
ಭಾರತೀಯ ಮಾರುಕಟ್ಟೆಯಲ್ಲಿ ಅದರಲ್ಲೂ ವಿಶೇಷವಾಗಿ 80 ಮತ್ತು 90ರ ದಶಕದಲ್ಲಿ ‘ವಿಮಲ್’ ಎಂಬ ಹೆಸರು ಮನೆಮಾತಾಗಿತ್ತು. ಟೆಲಿವಿಷನ್ ಜಾಹೀರಾತುಗಳಿಂದ ಹಿಡಿದು ಅಂತರಾಷ್ಟ್ರೀಯ ಕ್ರಿಕೆಟ್ ಮೈದಾನಗಳವರೆಗೆ ‘ಓನ್ಲಿ ವಿಮಲ್’ ಎಂಬ ಟ್ಯಾಗ್ ಲೈನ್ ಒಂದು ಸಂಚಲನವನ್ನೇ ಸೃಷ್ಟಿಸಿತ್ತು. ಆದರೆ ಈ ಐಕಾನಿಕ್ ಬ್ರ್ಯಾಂಡ್ ಆ ಹೆಸರನ್ನು ಪಡೆದಿದ್ದು ಯಾರಿಂದ ಮತ್ತು ಆ ವ್ಯಕ್ತಿ ಇಂದು ಏನು ಮಾಡುತ್ತಿದ್ದಾರೆ ಎಂಬ ಕುತೂಹಲಕಾರಿ ಮಾಹಿತಿ ಇಲ್ಲಿದೆ. ಧೀರೂಭಾಯಿ ಅಂಬಾನಿ ಮತ್ತು ವಿಮಲ್ ಬ್ರ್ಯಾಂಡ್ ಉದಯ ಧೀರೂಭಾಯಿ ಅಂಬಾನಿ ಅವರು 1958ರಲ್ಲಿ ವಿದೇಶದಿಂದ […]
ಆಪರೇಷನ್ ಬಳಿಕ ಬದಲಾಯ್ತು ಹುಡುಗನ ಭಾಷೆ ಅಚ್ಚರಿಗೊಳಿಸುತ್ತೆ ಹೆತ್ತವರನ್ನೇ ಗುರುತಿಸಲಾಗದ ಈ ವಿಲಕ್ಷಣ ಸ್ಥಿತಿ !
ನೆದರ್ಲೆಂಡ್ಸ್ನಲ್ಲಿ ನಡೆದ ಅಚ್ಚರಿಯ ಘಟನೆಯೊಂದು ಈಗ ವೈದ್ಯಕೀಯ ಲೋಕದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಸಾಮಾನ್ಯ ಮಂಡಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ 17 ವರ್ಷದ ಬಾಲಕನೊಬ್ಬ ಆಪರೇಷನ್ ಥಿಯೇಟರ್ನಿಂದ ಹೊರಬಂದ ನಂತರ ತನ್ನ ಮಾತೃಭಾಷೆಯನ್ನೇ ಮರೆತು ಕೇವಲ ವಿದೇಶಿ ಭಾಷೆಯಲ್ಲಿ ಮಾತನಾಡಲಾರಂಭಿಸಿದ ವಿಲಕ್ಷಣ ಪ್ರಕರಣವೊಂದು ವರದಿಯಾಗಿದೆ. ಮಾತೃಭಾಷೆ ಮರೆತು ಇಂಗ್ಲಿಷ್ನಲ್ಲಿ ಸಂಭಾಷಣೆ ಫುಟ್ಬಾಲ್ ಆಟದ ವೇಳೆ ಗಾಯಗೊಂಡಿದ್ದ ಈ ಬಾಲಕನನ್ನು ಶಸ್ತ್ರಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಪರೇಷನ್ ಯಶಸ್ವಿಯಾಗಿ ಮುಗಿದ ನಂತರ ಅರಿವಳಿಕೆ ಪ್ರಭಾವದಿಂದ ಹೊರಬಂದ ಬಾಲಕ ಎಲ್ಲರನ್ನೂ ಆಶ್ಚರ್ಯಚಕಿತಗೊಳಿಸಿದ. ನೆದರ್ಲೆಂಡ್ಸ್ನ ನಿವಾಸಿಯಾದ […]
ಸೂರ್ಯಕುಮಾರ್ ಯಾದವ್ ಮೆಸೇಜ್ ಮಾಡುತ್ತಿದ್ದರು! ಬಾಲಿವುಡ್ ನಟಿಯ ಸ್ಫೋಟಕ ಹೇಳಿಕೆಯಿಂದ ಕ್ರಿಕೆಟ್ ಲೋಕದಲ್ಲಿ ಸಂಚಲನ
ಭಾರತೀಯ ಕ್ರಿಕೆಟ್ ಮತ್ತು ಚಿತ್ರರಂಗದ ನಡುವಿನ ಸಂಬಂಧ ಹಳೆಯದು. ಆದರೆ ಆಗಾಗ್ಗೆ ಕೇಳಿಬರುವ ಕೆಲವು ಗಾಸಿಪ್ಗಳು ತೀವ್ರ ಚರ್ಚೆಗೆ ಕಾರಣವಾಗುತ್ತವೆ. ಇದೀಗ ಟೀಮ್ ಇಂಡಿಯಾದ ಟಿ20 ನಾಯಕ ಸೂರ್ಯಕುಮಾರ್ ಯಾದವ್ ಅವರ ಹೆಸರನ್ನು ಉಲ್ಲೇಖಿಸಿ ಬಾಲಿವುಡ್ ನಟಿ ಮತ್ತು ಮಾಡೆಲ್ ಒಬ್ಬರು ನೀಡಿರುವ ಹೇಳಿಕೆ ಕ್ರೀಡಾ ಮತ್ತು ಸಿನಿಮಾ ವಲಯದಲ್ಲಿ ದೊಡ್ಡ ಮಟ್ಟದ ಸಂಚಲನ ಸೃಷ್ಟಿಸಿದೆ. ಸೂರ್ಯಕುಮಾರ್ ಬಗ್ಗೆ ನಟಿ ಖುಷಿ ಮುಖರ್ಜಿ ಹೇಳಿದ್ದೇನು? ಖ್ಯಾತ ರಿಯಾಲಿಟಿ ಶೋ ಸ್ಪ್ಲಿಟ್ಸ್ವಿಲ್ಲಾ ಮೂಲಕ ಗುರುತಿಸಿಕೊಂಡಿರುವ ನಟಿ ಖುಷಿ ಮುಖರ್ಜಿ […]
ಶೋರೂಮ್ ಮುಂದೆ ಧಗಧಗನೆ ಉರಿದ ಇ-ರಿಕ್ಷಾ! ಸರ್ವಿಸ್ ನೀಡದ ಕಂಪನಿಗೆ ತನ್ನದೇ ಗಾಡಿ ಸುಟ್ಟು ಪಾಠ ಕಲಿಸಿದ ಮಾಲೀಕ
ಬಜಾಜ್ ಶೋರೂಮ್ ಒಂದರ ಮುಂದೆ ಯುವಕನೊಬ್ಬ ತನ್ನ ಸ್ವಂತ ಇ-ರಿಕ್ಷಾಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ನಾಟಕೀಯ ಘಟನೆ ರಾಜಸ್ಥಾನದ ಜೋಧ್ಪುರದಲ್ಲಿ ನಡೆದಿದೆ. ಪದೇ ಪದೇ ದೂರು ನೀಡಿದರೂ ಕಂಪನಿಯು ದೋಷಪೂರಿತ ವಾಹನವನ್ನು ಸರಿಪಡಿಸದ ಅಥವಾ ಬದಲಿಸಿಕೊಡದ ಹಿನ್ನೆಲೆಯಲ್ಲಿ ಈ ಆಕ್ರೋಶದ ಪ್ರತಿಭಟನೆ ನಡೆದಿದೆ. ಈ ಘಟನೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಏನಿದು ಘಟನೆ? ಮೋಹನ್ ಸೋಲಂಕಿ ಎಂಬುವವರು ಈ ಇ-ರಿಕ್ಷಾದ ಮಾಲೀಕರು. ಇವರು ಇ-ರಿಕ್ಷಾ ಖರೀದಿಸಿದ ದಿನದಿಂದಲೂ ಅದರ ಬ್ಯಾಟರಿಯಲ್ಲಿ […]
BREAKING : ‘ಕೋಗಿಲು ಲೇಔಟ್’ಒತ್ತುವರಿ ತೆರವು : ‘ಸತ್ಯಶೋಧನಾ ತಂಡ’ರಚಿಸಿ ಬಿ.ವೈ ವಿಜಯೇಂದ್ರ ಆದೇಶ.!
ಬೆಂಗಳೂರು : ಕೋಗಿಲು ಲೇಔಟ್ ಒತ್ತುವರಿ ತೆರವು ವಿಚಾರ ಸಂಬಂಧ ಸತ್ಯಶೋಧನಾ ತಂಡ ರಚಿಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಆದೇಶ ಹೊರಡಿಸಿದ್ದಾರೆ. ಬೆಂಗಳೂರು ಯಲಹಂಕದ ಕೋಗಿಲು ಲೇಔಟ್ ಬಳಿ 200 ಕ್ಕೂ ಅಧಿಕ ಮನೆಗಳನ್ನು ಕಾಂಗ್ರೆಸ್ ಸರ್ಕಾರ ನೆಲಸಮ ಮಾಡಿರುವ ಕುರಿತು ಅದರ ಹಿಂದಿರುವ ಸತ್ಯಾಸತ್ಯತೆಯನ್ನು ಬಯಲಿಗೆಳೆಯುವ ನಿಟ್ಟಿನಲ್ಲಿ ರಾಜ್ಯಾಧ್ಯಕ್ಷರಾದ ವಿಜಯೇಂದ್ರ ಯಡಿಯೂರಪ್ಪ ಅವರು ಸತ್ಯಶೋಧನಾ ತಂಡ ರಚಿಸಿ ಆದೇಶ ಹೊರಡಿಸಿದ್ದಾರೆ ಎಂದು ಬಿಜೆಪಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದೆ. ಏನಿದೆ ಆದೇಶದಲ್ಲಿ..?ಬೆಂಗಳೂರಿನ ಯಲಹಂಕದ ಕೋಗಿಲು […]
SHOCKING : ಮದ್ಯದ ನಶೆಯಲ್ಲಿ ತಾಯಿಗೆ ತಮಾಷೆ : ನೇಣು ಕುಣಿಕೆಗೆ ಸಿಲುಕಿ ಬೆಂಗಳೂರಲ್ಲಿ ಯುವಕ ದಾರುಣ ಸಾವು.!
ಬೆಂಗಳೂರು : ಮದ್ಯದ ನಶೆಯಲ್ಲಿ ತಾಯಿಗೆ ತಮಾಷೆ ಮಾಡಲು ಹೋಗಿ ನೇಣು ಕುಣಿಕೆಗೆ ಸಿಲುಕಿ ಬೆಂಗಳೂರಲ್ಲಿ ಯುವಕ ದಾರುಣವಾಗಿ ಮೃತಪಟ್ಟಂತಹ ಘಟನೆ ನಡೆದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ರೋಹಿತ್ ನಗರದಲ್ಲಿ ಈ ಘಟನೆ ನಡೆದಿದೆ. ಮೃತ ಯುವಕನನ್ನು ವಿಜಯ್ ಕುಮಾರ್ (28) ಎಂದು ಗುರುತಿಸಲಾಗಿದೆ. ಏನಿದು ಘಟನೆ ನಿನ್ನೆ ಸಂಜೆ ವಿಜಯ್ ಕುಮಾರ್ ಕಂಠಪೂರ್ತಿ ಕುಡಿದು ಮನೆಗೆ ಹೋಗಿದ್ದನು. ನಂತರ ತಾಯಿ ಬಳಿ ಖರ್ಚಿಗೆ ಹಣ ಕೇಳಿದ್ದಾನೆ. ಆಕೆ ಕೊಡಲ್ಲ ಎಂದಿದ್ದಾಳೆ. ಇಷ್ಟಕ್ಕೆ ವಿಜಯ್ ಕುಮಾರ್ […]

21 C