SENSEX
NIFTY
GOLD
USD/INR

Weather

30    C

ಡಿಜಿಟಲ್ ಸುದ್ದಿ ಮೂಲಗಳು

...

ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್

ಬೆಂಗಳೂರು: ಎಸ್​​.ಎಸ್.​ಎಲ್.​ಸಿ ವಾರ್ಷಿಕ ಪರೀಕ್ಷೆಗೆ ಕ್ಷಣಗಣನೆ ಆರಂಭವಾಗಿದೆ. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕೆಎಸ್​​​​​ಆರ್​​​ಟಿಸಿ ಬಸ್ ಗುಡ್ ನ್ಯೂಸ್ ನೀಡಿದೆ. ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕೆ.ಎಸ್.ಆರ್.ಟಿ.ಸಿ ಉಚಿತ ಪ್ರಯಾಣ ಘೋಷಿಸಿದೆ. ಪರೀಕ್ಷಾ ದಿನಗಳಲ್ಲಿ ಉಚಿತ ಬಸ್ ಪ್ರಯಾಣದ ಸೌಲಭ್ಯವನ್ನು ಪಡೆಯಬಹುದು. ಎಸ್.​​ಎಸ್​.​ಎಲ್.​ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಹಾಲ್‌ ಟಿಕೆಟ್‌ ತೋರಿಸಿ, ನಿವಾಸದಿಂದ ಪರೀಕ್ಷಾ ಕೇಂದ್ರದವರೆಗೆ ಕೆ.ಎಸ್.​ಆರ್.​​ಟಿ.ಸಿ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದಾಗಿದೆ ಎಂದು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಮಾರ್ಚ್‌ 18 ರಿಂದ ಏಪ್ರಿಲ್‌ 2 ರ ವರೆಗೆ ಎಸ್‌.ಎಸ್‌.ಎಲ್‌.ಸಿ ಪರೀಕ್ಷೆಗಳು ನಡೆಯಲಿದ್ದು, […]

ಕನ್ನಡ ದುನಿಯಾ 16 Mar 2026 5:54 pm

ಕನ್ನಡಕ್ಕೆ ಒಲಿದ ಕೇಂದ್ರ ಸಾಹಿತ್ಯ ಅಕಾಡೆಮಿ ಗೌರವ: ಅಮರೇಶ ನುಗಡೋಣಿ ಅವರ ದಡ ಸೇರಿಸು ತಂದೆ ಕೃತಿಗೆ ಪ್ರತಿಷ್ಠಿತ ಪ್ರಶಸ್ತಿ

ಕನ್ನಡ ಸಾಹಿತ್ಯ ಲೋಕಕ್ಕೆ ಮತ್ತೊಂದು ರಾಷ್ಟ್ರೀಯ ಮಟ್ಟದ ಮನ್ನಣೆ ದೊರೆತಿದೆ. ಹಿರಿಯ ಸಾಹಿತಿ ಅಮರೇಶ ನುಗಡೋಣಿ ಅವರ ‘ದಡ ಸೇರಿಸು ತಂದೆ’ ಕಥಾ ಸಂಕಲನಕ್ಕೆ 2025ನೇ ಸಾಲಿನ ಪ್ರತಿಷ್ಠಿತ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ಈ ಮೂಲಕ ಸಮಕಾಲೀನ ಗ್ರಾಮೀಣ ಬದುಕಿನ ನೋವು-ನಲಿವುಗಳಿಗೆ ದೊಡ್ಡ ಗೌರವ ಸಂದಂತಾಗಿದೆ. ಏನಿದೆ ಈ ಕೃತಿಯಲ್ಲಿ? ದಡ ಸೇರಿಸು ತಂದೆ ನುಗಡೋಣಿ ಅವರ 6ನೇ ಕಥಾ ಸಂಕಲನ. ಇದರಲ್ಲಿರುವ ಎಂಟು ಕಥೆಗಳು ಕೇವಲ ಕಲ್ಪನೆಗಳಲ್ಲ, ಬದಲಿಗೆ ಇಂದಿನ ಗ್ರಾಮೀಣ ಭಾರತದ […]

ಕನ್ನಡ ದುನಿಯಾ 16 Mar 2026 5:40 pm

ಬೆಂಗಳೂರಿಗೂ ಬಂತು ಅಂಚೆ ಇಲಾಖೆಯು 24 ಸ್ಪೀಡ್ ಪೋಸ್ಟ್: ಏನಿದು ಯೋಜನೆ

ಭಾರತೀಯ ಅಂಚೆ ಇಲಾಖೆ ಹೊಸ ಯೋಜನೆಯೊಂದನ್ನು ಘೋಷಣೆ ಮಾಡಿದೆ. ದೇಶದ 6 ಪ್ರಮುಖ ನಗರಗಳಲ್ಲಿ ಈ ಯೋಜನೆ ಅನುಷ್ಠಾನಕ್ಕೆ ಬರಲಿದ್ದು, ಕರ್ನಾಟಕದ ಬೆಂಗಳೂರು ನಗರದಲ್ಲಿಯೂ ಪ್ರಾರಂಭವಾಗಲಿದೆ. ಅಂಚೆ ಇಲಾಖೆಯು ’24 ಸ್ಪೀಡ್ ಪೋಸ್ಟ್’ ಅನ್ನು ಪ್ರಾರಂಭಿಸಲಿದೆ. ಮಾರ್ಚ್ 17ರಂದು 24 ಸ್ಪೀಡ್ ಪೋಸ್ಟ್ ಸೇವೆಗೆ ಕೇಂದ್ರ ಸಂವಹನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ಸಂವಹನ ರಾಜ್ಯ ಖಾತೆ ಸಚಿವ ಡಾ. ಚಂದ್ರ ಶೇಖರ್ ಪೆಮ್ಮಸಾನಿ ನವದೆಹಲಿಯ ಆಕಾಶವಾಣಿ ಭವನದ ರಂಗಭವನ ಸಭಾಂಗಣದಲ್ಲಿ ಚಾಲನೆ ನೀಡಲಿದ್ದಾರೆ. ಯೋಜನೆಯ ವಿವರಗಳು: […]

ಕನ್ನಡ ದುನಿಯಾ 16 Mar 2026 5:27 pm

ದೆಹಲಿಗೆ ಆಗಮಿಸುತ್ತಿದ್ದ ಏರ್ ಇಂಡಿಯಾ ವಿಮಾನ ತುರ್ತು ಭೂಸ್ಪರ್ಶ

ನವದೆಹಲಿ: ದೆಹಲಿಗೆ ಆಗಮಿಸುತ್ತಿದ ಏರ್ ಇಂಡಿಯಾ ವಿಮಾನದಲ್ಲಿ ತಾಂತ್ರಿಕ ದೋಷ ಹಿನ್ನೆಲೆಯಲ್ಲಿ ತುರ್ತು ಭೂಸ್ಪರ್ಶವಾಗಿರುವ ಘಟನೆ ನಡೆದಿದೆ. ನ್ಯೂಯಾರ್ಕ್ ನಿಂದ ದೆಹಲಿಗೆ ಆಗಮಿಸುತ್ತಿದ್ದ ಏರ್ ಇಂದುಯಾ ವಿಮಾನದಲ್ಲಿ ತಾಂತ್ರಿಕ ದೋಷ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಐರ್ಯಾಂಡ್ ನಲ್ಲಿ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಲಾಗಿದೆ. ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಎಲ್ಲಾ ಪ್ರಯಾಣಿಕರು ಸಿಬ್ಬಂದಿ ಸುರಕ್ಷಿತವಾಗಿದ್ದಾರೆ. ವಿಮಾನದಲಿ ತಾಂತ್ರಿಕ ಸಮಸ್ಯೆ ಉಂಟಾಗಲು ಕಾರಣವೇನು ಎಂಬುದು ತಿಳಿದುಬಂದಿಲ್ಲ. ಪ್ರಯಾಣಿಕರಿಗಾದ ಅನಾನುಕೂಲತೆಗೆ ಏರ್ ಇಂಡಿಯಾ ವಿಷಾದ ವ್ಯಕ್ತಪಡಿಸಿದೆ.

ಕನ್ನಡ ದುನಿಯಾ 16 Mar 2026 5:04 pm

ಉತ್ತರ ಕರ್ನಾಟಕದ ಕಲಾವಿದರನ್ನು ಒಟ್ಟಿಗೆ ಸೇರಿಸಿದ ‘ಕಲುಷ’ ಚಿತ್ರ, ಪೋಸ್ಟರ್ ಬಿಡುಗಡೆ

ಉತ್ತರ ಕರ್ನಾಟಕ ಭಾಗದ ಹಲವು ಕಲಾವಿದರನ್ನು ‘ಕಲುಷ’ ಚಿತ್ರ ಒಟ್ಟಿಗೆ ಸೇರಿಸಿದೆ. ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಖಾತೆ ಸಚಿವ ಎಂ.ಬಿ.ಪಾಟೀಲ್ ಈ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿದರು. ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ‘ಕಲುಷ’ ಸಿನಿಮಾ ಉತ್ತರ ಕರ್ನಾಟಕದ ಹಲವು ಕಲಾ ಪ್ರತಿಭೆಗಳನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿದೆ. ವಿಜಯಪುರದ ಷಣ್ಮುಖ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಈ ಸಿನಿಮಾ ಈಗಾಗಲೇ ಸಿನಿ ವಲಯದಲ್ಲಿ ಸಾಕಷ್ಟು ಕುತೂಹಲ ಮತ್ತು ಗಮನ ಸೆಳೆಯುತ್ತಿದೆ. ಯುವಾನ್ ಪ್ರತಾಪ್, ಕೆ.ಎಸ್. ಶ್ರೀಧರ, ಬಲ […]

ಕನ್ನಡ ದುನಿಯಾ 16 Mar 2026 4:42 pm

ಕಾರ್ಖಾನೆಗಳ ಸಮಸ್ಯೆ: ಹಿರೇಬಗನಾಳ್ ರೈತರಿಗೆ ಶೀಘ್ರವೇ ಸಿಹಿಸುದ್ದಿ

ಕೊಪ್ಪಳದ ಹಿರೇಬಗನಾಳ್ ಗ್ರಾಮದಲ್ಲಿ ಸ್ಪಾಂಜ್‌ ಮತ್ತು ಐರನ್‌ ಕಾರ್ಖಾನೆಗಳಿಂದ ವ್ಯಾಪಕ ಮಾಲಿನ್ಯವಾಗುತ್ತಿದೆ. ರೈತರು ಕಾರ್ಖಾನೆಗಳನ್ನು ಸ್ಥಳಾಂತರ ಮಾಡಿ ಅಥವ ವಿಷ ಕೊಡಿ ಎಂದು ಸರ್ಕಾರದ ಮುಂದೆ ಬೇಡಿಕೆ ಇಟ್ಟಿದ್ದಾರೆ. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಪಿ.ಎಂ.ನರೇಂದ್ರ ಸ್ವಾಮಿ ಕೊಪ್ಪಳ ಜಿಲ್ಲೆಯ ಹಿರೇಬಗನಾಳ್ ಕೈಗಾರಿಕಾ ಪ್ರದೇಶದಲ್ಲಿರುವ ಟಾಟಾ ಸ್ಟೀಲ್ ಟೆಕ್ ಪ್ರೈ. ಲಿಮಿಟೆಡ್ ಸಂಸ್ಥೆಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಹಿರೇಬಗನಾಳ್ ಗ್ರಾಮದಲ್ಲಿನ ವಾಯು ಮಾಲಿನ್ಯ ಸಮಸ್ಯೆಗಳ ಬಗ್ಗೆ ಪರಿಶೀಲಿಸಿ ಗ್ರಾಮದ ಕರಿಯಮ್ಮದೇವಿ ದೇವಸ್ಥಾನದ ಆವರಣದಲ್ಲಿ […]

ಕನ್ನಡ ದುನಿಯಾ 16 Mar 2026 4:27 pm

‘ರೇಣುಕಾಸ್ವಾಮಿ ಕೇಸ್’ಆಧರಿಸಿದ ‘ಬಾಸ್’ಚಿತ್ರಕ್ಕೆ ಸಂಕಷ್ಟ : ‘CBFC’ಗೆ ದರ್ಶನ್ ಲಾಯರ್ ನೋಟಿಸ್.!

ಬೆಂಗಳೂರು: ಸ್ಯಾಂಡಲ್‌ವುಡ್ ನಟ ದರ್ಶನ್ ಮತ್ತು ರೇಣುಕಾಸ್ವಾಮಿ ಕೊಲೆ ಪ್ರಕರಣದ ನೆರಳು ಈಗ ಚಿತ್ರರಂಗದ ಮೇಲೂ ಬಿದ್ದಿದೆ. ಈ ಪ್ರಕರಣದ ಎಳೆಗಳನ್ನು ಹೋಲುವ ಕಥಾಹಂದರ ಹೊಂದಿರುವ ‘ಬಾಸ್’ ಚಲನಚಿತ್ರದ ವಿರುದ್ಧ ದರ್ಶನ್ ಪರ ವಕೀಲರು ದೂರು ದಾಖಲಿಸಿದ್ದಾರೆ. ಪ್ರಕರಣ ಇನ್ನೂ ನ್ಯಾಯಾಲಯದಲ್ಲಿ ವಿಲೇವಾರಿಯಾಗದ ಕಾರಣ, ಸತ್ಯಾಸತ್ಯತೆ ತಿಳಿಯುವ ಮೊದಲೇ ಸಿನಿಮಾ ಮೂಲಕ ಘಟನೆಯನ್ನು ವೈಭವೀಕರಿಸುವುದು ಸರಿಯಲ್ಲ ಎಂದು ವಕೀಲರು ವಾದಿಸಿದ್ದಾರೆ. ಚಿತ್ರದ ಟೀಸರ್ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಸೆನ್ಸಾರ್ ಮಂಡಳಿ ಈ ಬಗ್ಗೆ […]

ಕನ್ನಡ ದುನಿಯಾ 16 Mar 2026 3:50 pm

ದುಬೈಗೆ ತೆರಳಿದ್ದ ವಿಮಾನ ಲ್ಯಾಂಡಿಗ್ ಸಿಗದೇ ಬೆಂಗಳೂರಿಗೆ ವಾಪಸ್

ಬೆಂಗಳೂರು: ಬೆಂಗಳೂರಿನಿಂದ ದುಬೈಗೆ ತೆರಳಿದ್ದ ಎಮಿರೇಟ್ಸ್ ವಿಮಾನ ಲ್ಯಾಂಡಿಂಗ್ ಸಿಗದ ಕಾರಣ ಮತ್ತೆ ಬೆಂಗಳೂರಿಗೆ ವಾಪಸ್ ಆಗಿರುವ ಘಟನೆ ನಡೆದಿದೆ. ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಳಿಗ್ಗೆ 4:30ಕ್ಕೆ ವಿಮಾನ ಟೇಕಾಫ್ ಆಗಿತ್ತು. ದುಬೈಗೆ ತೆರಳಿದಾಗ ಅಲ್ಲಿ ಲ್ಯಾಂಡಿಂಗ್ ಅನುಮತಿ ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ವಿಮಾನ ಮತ್ತೆ ಬೆಂಗಳೂರಿಗೆ ವಾಪಸ್ ಆಗಿದೆ. ಇದರಿಂದಾಗಿ ಜಿದ್ದಾಗೆ ತೆರಳಬೇಕಿದ್ದ ಪ್ರಯಾಣಿಕರು ಪರದಾಡುವಂತಾಗಿದೆ. ವಾಅಪಸ್ ಬಂದ ಪ್ರಯಾಣಿಕರಿಗೆ ತಿಂಡಿ, ಊಟದ ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ ಹೋಟೆಲ್ ಗಳಲ್ಲಿ ಉಳಿದುಕೊಳ್ಳಲು ವ್ಯವಸ್ಥೆ […]

ಕನ್ನಡ ದುನಿಯಾ 16 Mar 2026 3:49 pm

ಬೆಂಗಳೂರು-ಕಣ್ಣೂರು ರೈಲು ಕೋಯಿಕ್ಕೋಡ್‌ಗೆ ವಿಸ್ತರಣೆ, ವಿರೋಧ

ಕರ್ನಾಟಕದ ಕರಾವಳಿ ಭಾಗದ ಜನರ ವಿರೋಧದ ನಡುವೆಯೂ ರೈಲ್ವೆ ಇಲಾಖೆ ಕೆಎಸ್‌ಆರ್ ಬೆಂಗಳೂರು-ಕಣ್ಣೂರು ಎಕ್ಸ್‌ಪ್ರೆಸ್ (16511/ 16512) ರೈಲನ್ನು ಕೋಯಿಕ್ಕೋಡ್‌ಗೆ ವಿಸ್ತರಣೆ ಮಾಡಿದೆ. ಮಾರ್ಚ್ 15, 2026 ರಿಂದಲೇ ಜಾರಿಗೆ ಬರುವಂತೆ ರೈಲು ಕೋಯಿಕ್ಕೋಡ್‌ಗೆ ವಿಸ್ತರಣೆಯಾಗಿದೆ. ಈ ರೈಲು ಸೇವೆಯಿಂದ ಮಂಗಳೂರು-ಬೆಂಗಳೂರು ನಡುವಿನ ಸಂಚಾರ ಸುಲಭವಾಗುವುದಿಲ್ಲ. ಕರ್ನಾಟಕಕ್ಕಿಂತ ಈ ರೈಲು ಕೇರಳ ರಾಜ್ಯಕ್ಕೆ ಹೆಚ್ಚು ಅನುಕೂಲವಾಗಲಿದೆ. ಮಂಗಳೂರು ನಗರಕ್ಕೆ ಪ್ರಯಾಣಿಸುವ ಜನರಿಗೆ ಸೀಟು ಸಿಗುವುದಿಲ್ಲ ಎಂಬುದು ಪ್ರಯಾಣಿಕರ ದೂರು. ಆದ್ದರಿಂದಲೇ ಈ ರೈಲು ಸೇವೆ ವಿಸ್ತರಣೆಗೆ ವಿರೋಧ […]

ಕನ್ನಡ ದುನಿಯಾ 16 Mar 2026 3:40 pm

ರಾಜ್ಯದ 1-10 ತರಗತಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ; ಶಾಲೆಗಳಲ್ಲಿ ಪೌಷ್ಟಿಕ ಆಹಾರ ವಿತರಣೆಗೆ ಅನುದಾನ ಬಿಡುಗಡೆ.!

ಬೆಂಗಳೂರು: ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಕಲಿಯುತ್ತಿರುವ 1 ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಪೌಷ್ಟಿಕಾಂಶಯುಕ್ತ ಆಹಾರ ಒದಗಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ‘ಕ್ಷೀರಭಾಗ್ಯ’ ಯೋಜನೆಯಡಿ ಶ್ರೀ ಸತ್ಯ ಸಾಯಿ ಅನ್ನಪೂರ್ಣ ಟ್ರಸ್ಟ್ ವತಿಯಿಂದ ನೀಡಲಾಗುವ ‘ಸಾಯಿ ಶ್ಯೂರ್’ (SaiSure) ರಾಗಿ ಹೆಲ್ತ್ ಮಿಕ್ಸ್ ವಿತರಣೆಗಾಗಿ 865.66 ಲಕ್ಷ ರೂಪಾಯಿಗಳನ್ನು ಬಿಡುಗಡೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಅನುದಾನ ಬಿಡುಗಡೆ: 2025-26ನೇ ಸಾಲಿನ ಆಯವ್ಯಯ ಘೋಷಣೆಯಂತೆ, ಜೂನ್-2025 ರಿಂದ ಡಿಸೆಂಬರ್-2025ರ ಅವಧಿಗೆ […]

ಕನ್ನಡ ದುನಿಯಾ 16 Mar 2026 3:35 pm

‘ಗ್ಯಾಸ್ ಸ್ಟವ್’ಉರಿ ಕಡಿಮೆಯಾಗಿದೆಯೇ ? ಮನೆಯಲ್ಲೇ 5 ನಿಮಿಷದಲ್ಲಿ ಹೀಗೆ ಸರಿಪಡಿಸಿ! |WATCH VIDEO

ಪ್ರತಿದಿನ ಅಡುಗೆ ಮಾಡುವಾಗ ಗ್ಯಾಸ್ ಸ್ಟವ್ ಉರಿ (Flame) ಕಡಿಮೆಯಾಗಿ ತೊಂದರೆಯಾಗುತ್ತಿದೆಯೇ? ಪಾತ್ರೆಗಳು ಕಪ್ಪಾಗುವುದು ಅಥವಾ ಅಡುಗೆ ಮಾಡಲು ತುಂಬಾ ಸಮಯ ತಗುಲುತ್ತಿದ್ದರೆ ಮೆಕ್ಯಾನಿಕ್ ಕರೆಯುವ ಮೊದಲು ಈ ಸುದ್ದಿಯನ್ನು ತಪ್ಪದೇ ಓದಿ. ನಿಮ್ಮ ಗ್ಯಾಸ್ ಸ್ಟವ್‌ನ ಬರ್ನರ್ ಉರಿ ಕಡಿಮೆಯಾಗಿದ್ದರೆ, ಅದನ್ನು ಮೊದಲಿನಂತೆ ಹೆಚ್ಚಿಸಲು ಕೆಲವು ಸುಲಭವಾದ ಮಾರ್ಗಗಳಿವೆ. ಸಾಮಾನ್ಯವಾಗಿ ಜೆಂಟ್‌ನಲ್ಲಿಕಸ ಅಥವಾ ಧೂಳು ತುಂಬಿಕೊಳ್ಳುವುದೇ ಉರಿ ಕಡಿಮೆಯಾಗಲು ಪ್ರಮುಖ ಕಾರಣ. ಇದನ್ನು ಸರಿಪಡಿಸಲು ಈ ಕೆಳಗಿನ ಹಂತಗಳನ್ನು ಅನುಸರಿಸಿ: ಅನುಸರಿಸಬೇಕಾದ ಹಂತಗಳು: ಗಮನಿಸಿ: ಜೆಟ್ […]

ಕನ್ನಡ ದುನಿಯಾ 16 Mar 2026 3:20 pm

IPL 2026: ಆಲ್‌ಟೈಮ್ ಆರ್‌ಸಿಬಿ ಬೆಸ್ಟ್ ತಂಡ ಹೆಸರಿಸಿದ ಕೊಹ್ಲಿ; 7 ವರ್ಷ ಶ್ರಮಿಸಿದವನಿಗೆ, ಕಪ್ ಗೆಲ್ಲಿಸಿದವರಿಗೆ ಬೆಲೆ ಇಲ್ವ ಎಂದ ಫ್ಯಾನ್ಸ್!

ಇದೇ ಮಾರ್ಚ್ 28ರಿಂದ ಬಹು ನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆರಂಭವಾಗಲಿದ್ದು, ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಉದ್ಘಾಟನಾ ಪಂದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಸೆಣಸಾಟ ನಡೆಸಲಿವೆ. ಟೂರ್ನಿ ಸನಿಹಕ್ಕೆ ಬರುತ್ತಿದ್ದಂತೆ ಎಲ್ಲ ಫ್ರಾಂಚೈಸಿಗಳು ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಐಪಿಎಲ್ ಕುರಿತು ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎಲ್ಲ ಆವೃತ್ತಿಗಳಲ್ಲಿಯೂ ಪ್ರತಿನಿಧಿಸಿರುವ ವಿರಾಟ್ ಕೊಹ್ಲಿ ಸಂದರ್ಶನದ ವಿಡಿಯೊವೊಂದನ್ನು ಹಂಚಿಕೊಂಡಿದೆ. ಈ ವಿಡಿಯೊದಲ್ಲಿ ವಿರಾಟ್ ಕೊಹ್ಲಿ ರಾಯಲ್ ಚಾಲೆಂಜರ್ಸ್ […]

ಕನ್ನಡ ದುನಿಯಾ 16 Mar 2026 3:19 pm

ಡಯಾಲಿಸಿಸ್ ರೋಗಿಗಳಿಗೆ ಫಿಶ್ ಆಯಿಲ್ ಅಮೃತ: ಹೃದಯಾಘಾತ ತಡೆಯಲು ಸಿಕ್ಕಿತು ಹೊಸ ದಾರಿ

ಕಿಡ್ನಿ ವೈಫಲ್ಯದಿಂದಾಗಿ ಡಯಾಲಿಸಿಸ್ ಪಡೆಯುತ್ತಿರುವ ರೋಗಿಗಳಲ್ಲಿ ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ಅತಿ ಹೆಚ್ಚಿರುತ್ತದೆ. ಆದರೆ, ಇತ್ತೀಚಿನ ಅಂತರಾಷ್ಟ್ರೀಯ ಸಂಶೋಧನೆಯೊಂದು ಈ ರೋಗಿಗಳಿಗೆ ಹೊಸ ಆಶಾದಾಯಕ ಸುದ್ದಿ ನೀಡಿದೆ. ಪ್ರತಿದಿನ ಮೀನಿನ ಎಣ್ಣೆಯ ಸಪ್ಲಿಮೆಂಟ್‌ಗಳನ್ನು ತೆಗೆದುಕೊಳ್ಳುವುದರಿಂದ ಹೃದಯಾಘಾತ ಮತ್ತು ಪಾರ್ಶ್ವವಾಯು ಅಪಾಯವನ್ನು ಗಣನೀಯವಾಗಿ ಕಡಿಮೆ ಮಾಡಬಹುದು ಎಂದು ಈ ಅಧ್ಯಯನ ತಿಳಿಸಿದೆ. ಸಂಶೋಧನೆಯ ಮುಖ್ಯಾಂಶಗಳು ಪ್ರತಿಷ್ಠಿತ **’ದಿ ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್’**ನಲ್ಲಿ ಪ್ರಕಟವಾದ ಈ ಅಧ್ಯಯನದ ಪ್ರಕಾರ: ಏನಿದು ಒಮೆಗಾ-3? ಒಮೆಗಾ-3 ಎನ್ನುವುದು ಮೆದುಳಿನ […]

ಕನ್ನಡ ದುನಿಯಾ 16 Mar 2026 3:15 pm

ಪಾದಗಳಲ್ಲಿ ಜುಮ್ಮೆನ್ನುತ್ತಿದೆಯೇ? ಇದು ಕೇವಲ ಸುಸ್ತಲ್ಲ, ಮಧುಮೇಹದ ಆರಂಭಿಕ ಲಕ್ಷಣವಿರಬಹುದು

ಮಧುಮೇಹ ಅಥವಾ ಡಯಾಬಿಟಿಸ್ ಎನ್ನುವುದು ಇತ್ತೀಚಿನ ದಿನಗಳಲ್ಲಿ ಜಗತ್ತನ್ನು ಕಾಡುತ್ತಿರುವ ದೊಡ್ಡ ಆರೋಗ್ಯ ಸಮಸ್ಯೆ. ರಕ್ತದಲ್ಲಿ ಸಕ್ಕರೆ ಮಟ್ಟ ಹೆಚ್ಚಾದಾಗ ಹಸಿವು, ಬಾಯಾರಿಕೆ ಅಥವಾ ಪದೇ ಪದೇ ಮೂತ್ರ ವಿಸರ್ಜನೆಯಂತಹ ಸಾಮಾನ್ಯ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಆದರೆ, ಇದಕ್ಕಿಂತ ಮುಖ್ಯವಾಗಿ ನಮ್ಮ ಪಾದಗಳಲ್ಲಿ ಕಾಣಿಸಿಕೊಳ್ಳುವ ಕೆಲವು ಬದಲಾವಣೆಗಳು ಮಧುಮೇಹದ ಮುನ್ಸೂಚನೆಯಾಗಿರುತ್ತವೆ. ನಮ್ಮ ದೇಹದ ಸಂಪೂರ್ಣ ಭಾರವನ್ನು ಹೊರುವ ಪಾದಗಳು, ದೇಹದ ಒಳಗಿನ ಅನಾರೋಗ್ಯದ ಬಗ್ಗೆ ಮೊದಲು ಸುಳಿವು ನೀಡುತ್ತವೆ. ವರದಿಯ ಪ್ರಕಾರ, ಪಾದಗಳಲ್ಲಿನ ಈ ಕೆಳಗಿನ ಬದಲಾವಣೆಗಳು ಮಧುಮೇಹದ […]

ಕನ್ನಡ ದುನಿಯಾ 16 Mar 2026 3:14 pm

ಉಪಚುನಾವಣೆ ಗೆಲುವಿನಲ್ಲಿ ಕಾಂಗ್ರೆಸ್ ಮಹಿಳಾ ಸದಸ್ಯರ ಪಾತ್ರ ಮಹತ್ವವಾದುದು: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಬಾಗಲಕೋಟೆ ಹಾಗೂ ದಾವಣಗೆರೆ ಉಪಚುನಾವಣೆಯ ಗೆಲುವಿನಲ್ಲಿ ಕಾಂಗ್ರೆಸ್ ಮಹಿಳಾ ಸದಸ್ಯರ ಪಾತ್ರ ಮಹತ್ವವಾದುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕಾರಿ ಸಭೆ ಮತ್ತು ತರಬೇತಿ ಶಿಬಿರ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, 2013 ರಿಂದ 2018 ಮತ್ತು 2023ರಿಂದ ಕಾಂಗ್ರೆಸ್ ಸರ್ಕಾರ ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಿದೆ. ಪ್ರಮುಖ ಗ್ಯಾರಂಟಿಯೋಜನೆಗಳಲ್ಲಿ ಒಂದಾದ ಶಕ್ತಿಯೋಜನೆಯಿಂದ ಇದುವರೆಗೆ ಮಹಿಳೆಯರು 700 ಕೋಟಿ ಪ್ರಯಾಣಗಳನ್ನು ಕೈಗೊಂಡಿದ್ದಾರೆ. ಮಹಿಳಾ ಕೇಂದ್ರಿತ ಯೋಜನೆಗಳಿಂದ ಮಹಿಳೆಯರ […]

ಕನ್ನಡ ದುನಿಯಾ 16 Mar 2026 3:11 pm

ಪ್ರೋಟೀನ್ ಯುಕ್ತ ಹೆಸರುಕಾಳು ಕಟ್ಲೆಟ್: ತೂಕ ಇಳಿಸುವವರಿಗಾಗಿ ಇಲ್ಲಿದೆ ಬೆಸ್ಟ್ ಸ್ನಾಕ್ಸ್ ರೆಸಿಪಿ!

ಪ್ರೋಟೀನ್‌ನಿಂದ ಸಮೃದ್ಧವಾಗಿರುವ ಮತ್ತು ಆರೋಗ್ಯಕರವಾದ ಹೆಸರುಕಾಳಿನ ಕಟ್ಲೆಟ್ ರೆಸಿಪಿ ಇಲ್ಲಿದೆ. ಇದನ್ನು ಡಯಟ್ ಮಾಡುವವರು ಕೂಡ ಯಾವುದೇ ಭಯವಿಲ್ಲದೆ ಸವಿಯಬಹುದು. ಈ ಕಟ್ಲೆಟ್ ಕೇವಲ ರುಚಿಯಷ್ಟೇ ಅಲ್ಲ, ಹೆಸರುಕಾಳು ಮತ್ತು ಪೋಹಾದ (ಅವಲಕ್ಕಿ) ಪೋಷಕಾಂಶಗಳನ್ನು ಒಳಗೊಂಡಿದೆ. ಇದನ್ನು ನೀವು ಎಣ್ಣೆಯಲ್ಲಿ ಫ್ರೈ ಮಾಡುವ ಬದಲು ಏರ್-ಫ್ರೈ ಅಥವಾ ಬೇಕ್ ಕೂಡ ಮಾಡಬಹುದು ಬೇಕಾಗುವ ಸಾಮಗ್ರಿಗಳು: ತಯಾರಿಸುವ ವಿಧಾನ: ಬಿಸಿಬಿಸಿಯಾದ ಈ ಹೆಸರುಕಾಳು ಕಟ್ಲೆಟ್‌ಗಳನ್ನು ಪುದೀನಾ ಚಟ್ನಿ ಅಥವಾ ಟೊಮೆಟೊ ಕೆಚಪ್ ಜೊತೆ ಸವಿಯಲು ನೀಡಿ.

ಕನ್ನಡ ದುನಿಯಾ 16 Mar 2026 3:06 pm

ALERT : ಸಾಲ ಕೊಡುವ ಮುನ್ನ ಎಚ್ಚರ ; ‘ಪ್ರಾಮಿಸರಿ ನೋಟ್’ಮೇಲೆ ಸಹಿ ಜೊತೆ ಇದೂ ಇರಲಿ !

ಬೆಂಗಳೂರು: ನಂಬಿಕೆಯ ಮೇಲೆ ಹಣದ ವ್ಯವಹಾರ ನಡೆಸಿ ಸಂಕಷ್ಟಕ್ಕೆ ಸಿಲುಕುವವರ ಸಂಖ್ಯೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಾಮಿಸರಿ ನೋಟ್ ಬಳಸುವಾಗ ಅನುಸರಿಸಬೇಕಾದ ಕಾನೂನು ಕ್ರಮಗಳ ಬಗ್ಗೆ ಹೈಕೋರ್ಟ್ ವಕೀಲರು ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ. ಕೇವಲ ಸಹಿ ಹಾಕಿದರೆ ಕಾನೂನಿನ ಅಡಿಯಲ್ಲಿ ಹಣ ವಾಪಸ್ ಪಡೆಯುವುದು ಎಷ್ಟು ಕಷ್ಟ? ಹೆಬ್ಬೆರಳಿನ ಗುರುತು ಹಾಕುವುದರಿಂದ ಸಿಗುವ ರಕ್ಷಣೆ ಏನು? ಮತ್ತು ಸಾಲ ತೀರಿಸಿದ ನಂತರ ನೀವು ಮಾಡಬೇಕಾದ ಮೊದಲ ಕೆಲಸ ಯಾವುದು? ನಿಮ್ಮ ಕಷ್ಟಾರ್ಜಿತ ಹಣವನ್ನು ಉಳಿಸಿಕೊಳ್ಳಲು ಈ ಕೆಳಗಿನ […]

ಕನ್ನಡ ದುನಿಯಾ 16 Mar 2026 3:02 pm

ಕೃಷಿ ಇಲಾಖೆ ಅಧಿಕಾರಿಗಳ ಕಿರುಕುಳ: ಡೆತ್ ನೋಟ್ ಬರೆದಿಟ್ಟು ಗುತ್ತಿಗೆ ನೌಕರ ಆತ್ಮಹತ್ಯೆ

ಬಳ್ಳಾರಿ: ಕೃಷಿ ಇಲಾಖೆಯ ಮೇಲಾಧಿಕಾರಿಗಳ ಕಿರುಕುಳಕ್ಕೆ ಮನನೊಂದ ಗುತ್ತಿಗೆ ನೌಕರ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬಳ್ಳಾರಿಯಲ್ಲಿ ನಡೆದಿದೆ. ಸಂಡೂರು ಕೃಷಿ ಇಲಾಖೆ ವಿಭಾಗದಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ನೌಕರ ರಾಜು ಆತ್ಮಹತ್ಯೆ ಮಾಡಿಕೊಂಡವರು. ಗೌರಿಪುರ ಗ್ರಾಮದ ನಿವಾಸಿಯಾಗಿದ್ದ ರಾಜು ಕೃಷಿ ಇಲಾಖೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದರು. ಇಲಾಖೆಯ ಅಧಿಕಾರಿಗಳ ವರ್ತನೆಯಿಂದ ತೀವ್ರವಾಗಿ ಮನನೊಂದಿದ್ದ ರಾಜು ಮೂರು ಪುಟಗಳ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ. ಅಧಿಕಾರಿಯೊಬ್ಬರು ನಿರಂತರವಾಗಿ ಕಿರುಕುಳ ನೀಡುತ್ತಿರುವ ಬಗ್ಗೆ […]

ಕನ್ನಡ ದುನಿಯಾ 16 Mar 2026 2:49 pm

ಬೆಂಗಳೂರಲ್ಲಿ TCS ಹೊಸ ಕ್ಯಾಂಪಸ್, 25,000 ಉದ್ಯೋಗಿಗಳು ಒಂದೇ ಕಡೆ

ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್​ (ಟಿಸಿಎಸ್) ಕರ್ನಾಟಕದಲ್ಲಿ 2.9 ಬಿಲಿಯನ್ ಡಾಲರ್ ಮೊತ್ತದ ಹೂಡಿಕೆ ಮಾಡಲಿದೆ. ಇದರ ಭಾಗವಾಗಿ ಬೆಂಗಳೂರು ನಗರದಲ್ಲಿ ಟಿಸಿಎಸ್‌ನ ಹೊಸ ಕ್ಯಾಂಪಸ್ ನಿರ್ಮಾಣವಾಗಲಿದೆ. ಫೆಬ್ರವರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಅಧ್ಯಕ್ಷ ಬನ್ಮಾಲಿ ಅಗರ್ವಾಲಾ ನೇತೃತ್ವದ ನಿಯೋಗವು ಭೇಟಿ ಮಾಡಿತ್ತು. ಆಗ ಹೂಡಿಕೆಯ ಕುರಿತು ಚರ್ಚೆಯನ್ನು ಮಾಡಿದೆ. ಟಿಸಿಎಸ್ ಬೆಂಗಳೂರು ನಗರದ ವೈಟ್‌ಫೀಲ್ಡ್‌ನಲ್ಲಿ ಹೊಸ ಕ್ಯಾಂಪಸ್ ನಿರ್ಮಾಣ ಮಾಡಲಿದೆ. ಇಲ್ಲಿ 25,000 ಉದ್ಯೋಗಿಗಳು ಒಟ್ಟಿಗೆ ಕೆಲಸ ಮಾಡುವಷ್ಟು ಸಾಮರ್ಥ್ಯದ ಮೂಲ ಸೌಕರ್ಯವನ್ನು […]

ಕನ್ನಡ ದುನಿಯಾ 16 Mar 2026 2:45 pm

ವಿಶ್ವದ ಗೋಲ್ಡ್ ಕುಬೇರರು : ಯಾವ ದೇಶದ ಬಳಿ ಎಷ್ಟಿದೆ ಚಿನ್ನ.. ಭಾರತಕ್ಕೆ ಎಷ್ಟನೇ ಸ್ಥಾನ ?

ಹಬ್ಬವಿರಲಿ ಮದುವೆಯಿರಲಿ ಅಥವಾ ಹೂಡಿಕೆಯ ಆಲೋಚನೆಯಿರಲಿ, ಭಾರತೀಯರಿಗೆ ಮೊದಲು ನೆನಪಾಗುವುದೇ ಚಿನ್ನ. ನಮಗೆ ಚಿನ್ನ ಎಂದರೆ ಕೇವಲ ಆಭರಣವಲ್ಲ, ಅದು ಭವಿಷ್ಯದ ಭದ್ರತೆ. ಆರ್ಥಿಕ ಬಿಕ್ಕಟ್ಟಿನ ಸಮಯದಲ್ಲಿ ಕರೆನ್ಸಿ ಮೌಲ್ಯ ಕುಸಿದಾಗ ದೇಶದ ಆರ್ಥಿಕತೆಯನ್ನು ರಕ್ಷಿಸುವುದು ಇದೇ ಚಿನ್ನದ ನಿಧಿ. ಅದಕ್ಕಾಗಿಯೇ ವಿಶ್ವದ ಕೇಂದ್ರ ಬ್ಯಾಂಕುಗಳು ತಮ್ಮ ಖಜಾನೆಯಲ್ಲಿ ಸಾವಿರಾರು ಟನ್ ಚಿನ್ನವನ್ನು ಸಂಗ್ರಹಿಸಿಡುತ್ತವೆ. ಆರ್ಥಿಕ ಬಿಕ್ಕಟ್ಟು ಅಥವಾ ಜಾಗತಿಕ ಯುದ್ಧದಂತಹ ಸಂಕಷ್ಟದ ಸಮಯದಲ್ಲಿ ದೇಶದ ಬೆನ್ನೆಲುಬಾಗಿ ನಿಲ್ಲುವುದು ಆಯಾ ದೇಶಗಳ ಚಿನ್ನದ ನಿಧಿ (Gold Reserves). […]

ಕನ್ನಡ ದುನಿಯಾ 16 Mar 2026 2:10 pm

ಶಿವಮೊಗ್ಗದಲ್ಲಿ ಗೃಹ ಬಳಕೆಯ LPG ಸಿಲಿಂಡರ್’ಗಳ ಕೊರತೆ ಇಲ್ಲ : ಜಿಲ್ಲಾಧಿಕಾರಿ ಸ್ಪಷ್ಟನೆ

ಶಿವಮೊಗ್ಗ : ಜಿಲ್ಲೆಯಲ್ಲಿ ಗೃಹ ಬಳಕೆಯ ಅನಿಲ ಸಿಲಿಂಡರ್‌ಗಳ ಸರಬರಾಜಿನಲ್ಲಿ ಯಾವುದೇ ವ್ಯತ್ಯಯ ಇರುವುದಿಲ್ಲ. ಈ ಕಾರಣದಿಂದ ಗ್ರಾಹಕರು ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿರುವ ವದಂತಿಗಳಿಗೆ ಕಿವಿಗೊಡಬಾರದು ಮತ್ತು ಗಾಬರಿ, ಆತಂಕ ಪಡದೇ ಹೆಚ್ಚುವರಿಯಾಗಿ ದಾಸ್ತಾನು ಮಾಡಿಕೊಳ್ಳಬಾರದೆಂದು ಜಿಲ್ಲಾಧಿಕಾರಿಗಳಾದ ಪ್ರಭುಲಿಂಗ ಕವಳಿಕಟ್ಟಿ ಜಿಲ್ಲೆಯ ಗ್ರಾಹಕರಿಗೆ ತಿಳಿಸಿದ್ದಾರೆ. ಹೆಚ್ಚಿನ ಗ್ರಾಹಕರು ಒಂದು ರಿಫಿಲ್ಲಿಂಗ್ ಸಿಲಿಂಡರ್ ಪಡೆದ ನಂತರ ಸಿಂಗಲ್ ಗೃಹ ಬಳಕೆ ಸಿಲಿಂಡರ್‌ಗಾಗಿ 25 ದಿನಗಳ ಅಂತರದ ನಂತರ ಮತ್ತು ಡಬ್ಬಲ್ ಸಿಲಿಂಡರ್ ಗೃಹ ಬಳಕೆಯವರು 30 ದಿನಗಳ […]

ಕನ್ನಡ ದುನಿಯಾ 16 Mar 2026 2:09 pm

ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಡಿದ ಆರೋಪ: 19 ಭಾರತೀಯರು ಸೇರಿ 35 ಜನರ ಬಂಧನಕ್ಕೆ UAE ಆದೇಶ

ದುಬೈ: ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿನ ಯುದ್ಧದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಕೃತ್ರಿಮ ವಿಡಿಯೋಗಳನ್ನು ಹಂಚಿ, ದಾರಿ ತಪ್ಪಿಸುವಂತಹ ಸುದ್ದಿ ಪ್ರಕಟಿಸಿದ ಆರೋಪದಲ್ಲಿ 19 ಭಾರತೀಯರು ಸೇರಿ 35 ಜನರ ಬಂಧನಕ್ಕೆ ಯುಎಇ ಆದೇಶ ನೀಡಿದೆ. ಬಂಧಿತರನ್ನು ತ್ವರಿತವಾಗಿ ವಿಚಾರಣೆ ನಡೆಸಲು ಸೂಚಿಸಲಾಗಿದೆ. ಈ ಬಗ್ಗೆ ಯುಎಇ ಅಧಿಕೃತ ಸುದ್ದಿಸಂಸ್ಥೆ ವಾಮ್ ತಿಳಿಸಿದೆ. ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಉದ್ದೇಶದಿಂದ ಸುಳ್ಳು ಮಾಹಿತಿ ಮತ್ತು ಕೃತಕ ಬುದ್ಧಿಮತ್ತೆ ಆಧಾರಿತ ವಿಷಯಗಳ ಪ್ರಸಾರವನ್ನು ತಡೆಗಟ್ಟಲು ಡಿಜಿಟಲ್ ವೇದಿಕೆಗಳ ಮೇಲೆ ನಡೆಸಿದ ಕಟ್ಟುನಿಟ್ಟಿನ […]

ಕನ್ನಡ ದುನಿಯಾ 16 Mar 2026 1:59 pm

ದೇಶಪ್ರೇಮದ ಸಿನಿಮಾದಲ್ಲಿ ಪಾಕಿಸ್ತಾನಕ್ಕೆ ಅವಮಾನ ? KRK ಹೇಳಿಕೆಗೆ ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ !

ಬಾಲಿವುಡ್ ಚಿತ್ರರಂಗದಲ್ಲಿ ಸದ್ಯ ಕೇಳಿಬರುತ್ತಿರುವ ಏಕೈಕ ಹೆಸರು ‘ಧುರಂಧರ್ 2’. ಮಾರ್ಚ್ 19 ರಂದು ವಿಶ್ವಾದ್ಯಂತ ಬಿಡುಗಡೆಯಾಗಲಿರುವ ಈ ಚಿತ್ರವು ಅಡ್ವಾನ್ಸ್ ಬುಕ್ಕಿಂಗ್‌ನಲ್ಲಿಯೇ ಬರೋಬ್ಬರಿ ₹100 ಕೋಟಿ ಗಡಿ ದಾಟುವ ಮೂಲಕ ಇತಿಹಾಸ ಸೃಷ್ಟಿಸಿದೆ. ಒಂದೆಡೆ ರಣವೀರ್ ಸಿಂಗ್ ಅವರ ಸಿಖ್ ಪಾತ್ರವು ಸಿಗರೇಟ್ ಸೇದುತ್ತಿರುವ ದೃಶ್ಯಕ್ಕೆ ಧಾರ್ಮಿಕ ಸಂಘಟನೆಗಳಿಂದ ಕಾನೂನು ನೋಟಿಸ್ ಜಾರಿಯಾಗಿದ್ದರೆ, ಮತ್ತೊಂದೆಡೆ ಸ್ವಯಂಘೋಷಿತ ವಿಮರ್ಶಕ ಕೆಆರ್‌ಕೆ (KRK) ಚಿತ್ರದ ಸಂಭಾಷಣೆಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಎಲ್ಲ ವಿವಾದಗಳ ನಡುವೆಯೂ, ಸುಮಾರು 4 […]

ಕನ್ನಡ ದುನಿಯಾ 16 Mar 2026 1:51 pm

ಬಾರಾಮತಿ ಉಪ ಚುನಾವಣೆ ಘೋಷಣೆ: ಸುನೇತ್ರಾ ಪವಾರ್‌ ಅವಿರೋಧ ಆಯ್ಕೆ?

ಮಹಾರಾಷ್ಟ್ರದ ಉಪಮುಖ್ಯಮಂತ್ರಿ, ಎನ್‌ಸಿಪಿ ಮುಖ್ಯಸ್ಥ ಅಜಿತ್‌ ಪವಾರ್‌ ನಿಧನದ ಕಾರಣ ಬಾರಾಮತಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಎದುರಾಗಿದೆ. ಏಪ್ರಿಲ್ 23ರಂದು ಮತದಾನ ನಡೆಯಲಿದ್ದು, ಮೇ 4ರಂದು ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಲಿದೆ. ಬಾರಾಮತಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಅಜಿತ್ ಪವಾರ್ ಪತ್ನಿ, ಮಹಾರಾಷ್ಟ್ರದ ಡಿಸಿಎಂ ಸುನೇತ್ರಾ ಪವಾರ್‌ ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆ ಇದೆ. ಈ ಕ್ಷೇತ್ರವನ್ನು ಅಜಿತ್ ಪವಾರ್ ಭದ್ರಕೋಟೆ ಎಂದೇ ಕರೆಯಲಾಗುತ್ತದೆ. ಅಜಿತ್ ಪವಾರ್ ಬಾರಾಮತಿ ವಿಧಾನಸಭಾ ಕ್ಷೇತ್ರದಲ್ಲಿ 8 ಬಾರಿ ಗೆಲುವು […]

ಕನ್ನಡ ದುನಿಯಾ 16 Mar 2026 1:35 pm

ಶಾಸಕರು ಕೇಳಿದ ಲಿಖಿತ ಪ್ರಶ್ನೆಗಳಿಗೆ ಉತ್ತರಿಸಲು ಸಚಿವರು ವಿಫಲ: ಅಸಮಾಧಾನಗೊಂಡು ಕಲಾಪ ನಡೆಸದೇ ಹೊರ ನಡೆದ ಸ್ಪೀಕರ್ ಖಾದರ್

ಬೆಂಗಳೂರು: ವಿಧಾನಸಭೆ ಕಲಾದ ವೇಳೆ ಶಾಸಕರು ಕೇಳಿದ ಲಿಖಿತ ಪ್ರಶ್ನೆಗಳಿಗೆ ಉತ್ತರಿಸಲು ಸಚಿವರು ವಿಫಲರಾದ ಹಿನ್ನೆಲೆಯಲ್ಲಿ ಸಚಿವರುಗಳ ವಿರುದ್ಧ ತೀವ್ರ ಅಸಮಾಧಾನಗೊಂಡ ಸ್ಪೀಕರ್ ಯು.ಟಿ.ಖಾದರ್ ಕಲಾಪ ನಡೆಸದೇ ಪೀಠದಿಂದ ಎದ್ದು ಹೊರ ನಡೆದ ಘಟನೆ ನಡೆದಿದೆ. ಶಸಾಕರ ಪ್ರಶ್ನೆಗಳಿಗೆ ಉತ್ತರಿಸಲು ವಿಫಲಾರದ ಸಚಿವರ ಕಾರ್ಯ ವೈಖರಿ ಕಂಡು ಸ್ಪೀಕರ್ ಯು.ಟಿ.ಖಾದರ್ ಗರಂ ಆದರು. 230 ಲಿಖಿತ ಪ್ರಶ್ನೆಗಳ ಪೈಕಿ 84 ಪ್ರಶ್ನೆಗಳಿಗೆ ಮಾತ್ರ ಉತ್ತರ ಬಂದಿದೆ. ಉತ್ತರಗಳನ್ನು ನಿದುವಂತೆ ಮೊನ್ನೆಯೇ ಸಚಿವರು ಹಾಗೂ ಸರ್ಕಾರಕ್ಕೆ ಹೇಳಿದ್ದೇವೆ. ಸದನ […]

ಕನ್ನಡ ದುನಿಯಾ 16 Mar 2026 1:17 pm

BREAKING: ಬೆಂಗಳೂರಿನಲ್ಲಿ ಮಂತ್ರಿ ಡೆವಲಪರ್ಸ್ ಮೇಲೆ ಇಡಿ ದಾಳಿ

ಬೆಂಗಳೂರು: ಬೆಂಗಳೂರಿನ ಮಂತ್ರಿ ಡೆವಲಪರ್ಸ್ ಕಚೇರಿ ಮೇಲೆ ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದಾರೆ. ಬೆಂಗಳೂರಿನ ವಿಠಲ್ ಮಲ್ಯ ರಸ್ತೆಯಲ್ಲಿರುವ ಮಂತ್ರಿ ಡೆವಲಪರ್ಸ್ ಕಚೇರಿ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. 10ಕ್ಕೂ ಹೆಚ್ಚು ಅಧಿಕಾರಿಗಳಿಂದ ದಾಳಿ ನಡೆದಿದ್ದು, ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ಕನ್ನಡ ದುನಿಯಾ 16 Mar 2026 1:04 pm

ವಾರದ ಆರಂಭದಲ್ಲೇ ಚಿನ್ನದ ಬೆಲೆ ₹4,900 ಕುಸಿತ: ಇಂದೇ ಖರೀದಿಗೆ ಸೂಕ್ತ ಸಮಯ

ಬೆಂಗಳೂರು: ಇಸ್ರೇಲ್, ಅಮೆರಿಕಾ ಮತ್ತು ಇರಾನ್ ನಡುವಿನ ಸಂಘರ್ಷ ಮೂರನೇ ವಾರಕ್ಕೆ ಕಾಲಿಟ್ಟಿದ್ದರೂ, ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಮಾತ್ರ ದಿನೇ ದಿನೇ ಕುಸಿಯುತ್ತಲೇ ಸಾಗಿವೆ. ಕಳೆದ ವಾರವಿಡೀ ಇಳಿಕೆಯ ಹಾದಿಯಲ್ಲಿದ್ದ ಅಮೂಲ್ಯ ಲೋಹಗಳ ಬೆಲೆ, ಈ ವಾರದ ಆರಂಭದ ದಿನವಾದ ಇಂದು ಕೂಡ ದಿಢೀರ್ ಕುಸಿತ ಕಂಡು ಆಭರಣ ಖರೀದಿದಾರರಿಗೆ ನಿಟ್ಟುಸಿರು ಬಿಡುವಂತೆ ಮಾಡಿದೆ. ಬೆಂಗಳೂರಿನಲ್ಲಿ ಇಂದಿನ ಸ್ಥಿತಿ: ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಬಂಗಾರದ ದರ ಗಣನೀಯವಾಗಿ ಇಳಿಕೆಯಾಗಿದೆ. ಯುದ್ಧದಂತಹ […]

ಕನ್ನಡ ದುನಿಯಾ 16 Mar 2026 1:00 pm

BREAKING : ರಾಜ್ಯದ ಹೋಟೆಲ್’ಗಳಿಗೆ ಪ್ರತಿದಿನ 1,000 ಸಿಲಿಂಡರ್ ಪೂರೈಕೆ : ಸಚಿವ ಕೆ.ಹೆಚ್ ಮುನಿಯಪ್ಪ

ಬೆಂಗಳೂರು : ರಾಜ್ಯಾದ್ಯಂತ ಎದುರಾಗಿದ್ದ ವಾಣಿಜ್ಯ ಗ್ಯಾಸ್ ಸಿಲಿಂಡರ್‌ಗಳ ಅಭಾವಕ್ಕೆ ಸರ್ಕಾರ ಮದ್ದು ಅರೆದಿದ್ದು, ಹೋಟೆಲ್ ಮಾಲೀಕರಿಗೆ ಪ್ರತಿದಿನ 1,000 ಸಿಲಿಂಡರ್ ಒದಗಿಸುವ ಮಹತ್ವದ ತೀರ್ಮಾನ ಕೈಗೊಂಡಿದೆ. ಹೌದು. ಮಧ್ಯಪ್ರಾಚ್ಯದ ಸಂಘರ್ಷದಿಂದಾಗಿ ರಾಜ್ಯಾದ್ಯಂತ ಎದುರಾಗಿರುವ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ತೀವ್ರ ಅಭಾವಕ್ಕೆ ಕೊನೆಗೂ ಸರ್ಕಾರ ಮದ್ದು ಅರೆದಿದೆ. ಹೋಟೆಲ್ ಉದ್ಯಮ ಸ್ಥಗಿತಗೊಳ್ಳುವ ಭೀತಿ ಎದುರಾದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಹೋಟೆಲ್‌ಗಳ ಸುಗಮ ಕಾರ್ಯನಿರ್ವಹಣೆಗೆ ಪ್ರತಿದಿನ 1,000 ಸಿಲಿಂಡರ್‌ಗಳನ್ನು ವಿಶೇಷವಾಗಿ ಪೂರೈಸಲು ನಿರ್ಧರಿಸಿದೆ. […]

ಕನ್ನಡ ದುನಿಯಾ 16 Mar 2026 12:54 pm

BREAKING: ದುಬೈ ಏರ್ ಪೋರ್ಟ್ ಬಳಿ ಇರಾನ್ ದಾಳಿ: ತಿರುವನಂತಪುರಂನಿಂದ ದುಬೈಗೆ ಹೊರಟಿದ್ದ ವಿಮಾನ ಅರ್ಧದಲ್ಲೇ ವಾಪಸ್

ತಿರುವನಂತಪುರಂ: ದುಬೈ ಏರ್ ಪೋರ್ಟ್ ಬಳಿಯ ಇಂಧನ ಟ್ಯಾಂಕ್ ಮೇಲೆ ಇರಾನ್ ಡ್ರೋನ್ ದಾಳಿ ನಡೆಸಿದ್ದು, ಪರಿಣಾಮ ಇಂಧನ ಟ್ಯಾಂಕ್ ಹೊತ್ತಿ ಉರಿದಿದೆ. ಸುತ್ತಮುತ್ತ ಪ್ರದೇಶದಲ್ಲಿ ಆತಂಕದ ವಾತವಾರಣ ನಿರ್ಮಾಣವಾಗಿದೆ. ಈ ನಡುವೆ ದುಬೈ ಏರ್ ಪೋರ್ಟ್ ನಲ್ಲಿ ವಿಮಾನಗಳ ಹಾರಾಟವನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿದೆ. ದುಬೈಗೆ ತೆರಳುವ ಹಾಗೂ ದುಬೈನಿಂದ ಆಗಮಿಸಬೇಕಿದ್ದ ಎಲ್ಲಾ ವಿಮಾನಗಳನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ತಿರುವಂತಪುರಂನಿಂದ ದುಬೈಗೆ ಹೊರಟಿದ್ದ ವಿಮಾನವೊಂಡು ಅರ್ಧದಲ್ಲೇ ವಾಪಸ್ ಆಗಿರುವ ಘಟನೆ ನಡೆದಿದೆ. 353 ಪ್ರಯಾಣಿಕರು ಹಾಗೂ […]

ಕನ್ನಡ ದುನಿಯಾ 16 Mar 2026 12:52 pm

ALERT : ವಿಪರೀತ ‘ಸೌದೆ ಒಲೆ’ಬಳಕೆಯಿಂದ  ಕ್ಯಾನ್ಸರ್ ಬರಬಹುದು : ವೈದ್ಯರ ಎಚ್ಚರಿಕೆ.!

ಬೆಂಗಳೂರು : ಮಧ್ಯಪ್ರಾಚ್ಯದ ಯುದ್ಧದ ಹಿನ್ನೆಲೆಯಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳ ಅಭಾವ ತೀವ್ರಗೊಂಡಿದೆ. ಇದರಿಂದಾಗಿ ಅನಿವಾರ್ಯವಾಗಿ ಜನರು ಮತ್ತು ಹೋಟೆಲ್‌ಗಳು ಮತ್ತೆ ಸಾಂಪ್ರದಾಯಿಕ ಸೌದೆ ಒಲೆಗಳ ಮೊರೆ ಹೋಗುತ್ತಿವೆ. ಆದರೆ, ಈ ಬದಲಾವಣೆಯು ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಬಹುದು ಎಂದು ವೈದ್ಯರು ಎಚ್ಚರಿಸಿದ್ದಾರೆ. ಹೌದು. ಎಲ್‌ಪಿಜಿ ಸಿಲಿಂಡರ್‌ಗಳ ತೀವ್ರ ಅಭಾವದಿಂದಾಗಿ ಅನಿವಾರ್ಯವಾಗಿ ಸೌದೆ ಒಲೆಗಳ ಮೊರೆ ಹೋಗುತ್ತಿರುವ ಜನಸಾಮಾನ್ಯರಿಗೆ ವೈದ್ಯಕೀಯ ಲೋಕ ಭೀತಿಯ ಸುದ್ದಿಯೊಂದನ್ನು ನೀಡಿದೆ. ಸೌದೆ ಉರಿಸುವಾಗ ಹೊರಹೊಮ್ಮುವ ಹೊಗೆಯು ಕೇವಲ ಕಣ್ಣಿಗೆ ಕಿರಿಕಿರಿ ಉಂಟುಮಾಡುವುದಲ್ಲದೆ, […]

ಕನ್ನಡ ದುನಿಯಾ 16 Mar 2026 12:48 pm

‘ಟ್ರಂಪ್’ಗೆ ಶಾಕ್ ನೀಡಿದ ಮಿತ್ರರಾಷ್ಟ್ರಗಳು : ಹಾರ್ಮುಜ್ ಸಮರಕ್ಕೆ ನೌಕೆ ಕಳುಹಿಸಲು ಜಪಾನ್, ಆಸ್ಟ್ರೇಲಿಯಾ ಹಿಂದೇಟು

ಟ್ರಂಪ್ ಅವರಿಂದ ಒತ್ತಡ ಹೆಚ್ಚಾಗುತ್ತಿದ್ದರೂ, ಹಾರ್ಮುಜ್ ಜಲಸಂಧಿಗೆ (Strait of Hormuz) ಯುದ್ಧನೌಕೆಗಳನ್ನು ಕಳುಹಿಸುವ ಯಾವುದೇ ಉದ್ದೇಶವಿಲ್ಲ ಎಂದು ಜಪಾನ್ ಮತ್ತು ಆಸ್ಟ್ರೇಲಿಯಾ ತಿಳಿಸಿವೆ. ಪ್ರಮುಖ ಜಲಮಾರ್ಗದ ಮೂಲಕ ಹಡಗು ಸಂಚಾರಕ್ಕೆ ಅನುವು ಮಾಡಿಕೊಡಲು ಬೆಂಬಲ ಕೋರಿ ತಮ್ಮ ಆಡಳಿತವು ಏಳು ದೇಶಗಳನ್ನು ಸಂಪರ್ಕಿಸಿದೆ ಎಂದು ಟ್ರಂಪ್ ಹೇಳಿದ್ದಾರೆ. ಹಾರ್ಮುಜ್ ಜಲಸಂಧಿಯಲ್ಲಿ ಇರಾನ್ ವಿಧಿಸಿರುವ ದಿಗ್ಬಂಧನದಿಂದಾಗಿ ಜಾಗತಿಕ ತೈಲ ಮಾರುಕಟ್ಟೆ ತಲ್ಲಣಗೊಂಡಿದ್ದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಿಲಿಟರಿ ಬೆಂಬಲದ ಮನವಿಗೆ ಪ್ರಮುಖ ಮಿತ್ರರಾಷ್ಟ್ರಗಳಾದ ಜಪಾನ್ […]

ಕನ್ನಡ ದುನಿಯಾ 16 Mar 2026 12:36 pm

ಕೇಂದ್ರ ಸರ್ಕಾರದಿಂದ ಉದ್ಯೋಗಿಗಳಿಗೆ ಭರ್ಜರಿ ಗಿಫ್ಟ್ ! ನಿಮ್ಮ ಮೊದಲ ಕೆಲಸಕ್ಕೆ ಸಿಗಲಿದೆ ₹15,000 ಬೋನಸ್!

ಹೊಸದಾಗಿ ಉದ್ಯೋಗಕ್ಕೆ ಸೇರುವವರಿಗೆ ಕೇಂದ್ರ ಸರ್ಕಾರವು ಆರ್ಥಿಕ ನೆರವು ನೀಡುತ್ತಿದೆ. ಇದರ ಭಾಗವಾಗಿ ಬ್ಯಾಂಕ್ ಖಾತೆಗೆ ₹15,000 ಜಮೆ ಮಾಡುತ್ತಿದೆ. ಈ ಹಣವನ್ನು ಎರಡು ಕಂತುಗಳಲ್ಲಿ ನೀಡಲಾಗುವುದು. ವಿಶೇಷವೆಂದರೆ, ಇದಕ್ಕಾಗಿ ಯಾವುದೇ ಪ್ರತ್ಯೇಕ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ. ಉದ್ಯೋಗಿಯು ಇಪಿಎಫ್‌ಒ (EPFO) ಖಾತೆಯನ್ನು ಹೊಂದಿದ್ದರೆ ಸಾಕು, ಹಣ ನೇರವಾಗಿ ಖಾತೆಗೆ ಬರುತ್ತದೆ. ಯೋಜನೆಯ ಹೆಸರು: ಹೊಸ ಉದ್ಯೋಗಿಗಳನ್ನು ಪ್ರೋತ್ಸಾಹಿಸಲು ಕೇಂದ್ರ ಸರ್ಕಾರವು ‘ಪ್ರಧಾನ ಮಂತ್ರಿ ವಿಕಸಿತ್ ಭಾರತ್ ರೋಜ್‌ಗಾರ್ ಯೋಜನೆ’ (PMVBRJY) ಜಾರಿಗೆ ತಂದಿದೆ.ಉದ್ಯೋಗಿಗೆ ₹15,000 ಪ್ರೋತ್ಸಾಹಧನ […]

ಕನ್ನಡ ದುನಿಯಾ 16 Mar 2026 12:19 pm

BIG NEWS: ಯುದ್ಧದ ನಡುವೆ ಭಾರತಕ್ಕೆ ಬಂತು 45,000 ಮೆಟ್ರಿಕ್ ಟನ್ ಎಲ್ ಪಿಜಿ ಹೊತ್ತ ಶಿವಾಲಿಕ್ ಹಡಗು

ಅಹಮದಾಬಾದ್: ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಯುದ್ಧದ ನಡುವೆಯೇ 45,000 ಮೆಟ್ರಿಕ್ ಟನ್ ಎಲ್ ಪಿಜಿ ಹೊತ್ತ ಶಿವಾಲಿಕ್ ಹಡಗು ಭಾರತಕ್ಕೆ ಆಗಮಿಸಿದೆ. ಗುಜರಾತ್ ನ ಮುಂದ್ರಾ ಬಂದರಿಗೆ ಆಗಮಿಸಿದೆ. ಈ ಬಗ್ಗೆ ಬಂದರು, ಹಡಗು ಮಾತ್ತು ಜಲಮಾರ್ಗಗಳ ಸಚಿವಲಯ ಮಾಹಿತಿ ನೀಡಿದ್ದು, 92,700 ಮೆಟ್ರಿಕ್ ಟನ್ ಎಲ್ ಪಿಜಿ ಹೊತ್ತ ನಂದಾ ದೇವಿ ಹಾಗೂ ಶಿವಾಲಿಕ್ ಎಂಬ ಎರಡು ಹಡಗುಗಳು ಹೊರ್ಮೆಜ್ ಜಲಸಂಧಿಯನ್ನು ದಾಟಿ ಭಾರತಕ್ಕೆ ಆಗಮಿಸುತ್ತಿವೆ. ಶಿವಾಲಿಕ್ ಮಾರ್ಚ್ 16ರಂದು ಹಾಗೂ ನಂದಾ ದೇವಿ ಮಾರ್ಚ್ 17 […]

ಕನ್ನಡ ದುನಿಯಾ 16 Mar 2026 12:15 pm

ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಭೇಟಿ: ಬಾಗಲಕೋಟೆ ಉಪ ಚುನಾವಣೆಗೆ ಟ್ವಿಸ್ಟ್!

ಬಾಗಲಕೋಟೆ ಕ್ಷೇತ್ರದ ಉಪ ಚುನಾವಣೆ ದಿನಾಂಕ ಘೋಷಣೆಯಾಗಿದೆ. ಹೆಚ್.ವೈ.ಮೇಟಿ ನಿಧನದ ಕಾರಣ ಉಪ ಚುನಾವಣೆ ಎದುರಾಗಿದ್ದು, ಏಪ್ರಿಲ್ 9ರಂದು ಮತದಾನ ನಡೆಯಲಿದೆ. ನಾಮಪತ್ರ ಸಲ್ಲಿಕೆ ಮಾಡಲು ಮಾರ್ಚ್ 23 ಕೊನೆಯ ದಿನವಾಗಿದೆ. ಉಪ ಚುನಾವಣೆ ದಿನಾಂಕ ಭಾನುವಾರ ಘೋಷಣೆಯಾಗಿದೆ. ಆದರೆ ಶನಿವಾರ ಬಾಗಲಕೋಟೆಗೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಲ್ಲಿಕಾರ್ಜುನ ಚರಂತಿಮಠ ನಿವಾಸಕ್ಕೆ ಭೇಟಿ ನೀಡಿದ್ದು, ಉಪ ಚುನಾವಣೆಗೆ ಟ್ವಿಸ್ಟ್ ನೀಡಿದೆ. ಮಾಜಿ ಶಾಸಕ ವೀರಣ್ಣ ಚರಂತಿಮಠ ಸಹೋದರ ಮಲ್ಲಿಕಾರ್ಜುನ ಚರಂತಿಮಠ 2023ರ […]

ಕನ್ನಡ ದುನಿಯಾ 16 Mar 2026 12:10 pm

ಪೋಷಕರಿಗೆ ಹೊಸ ಕಾರು ಉಡುಗೊರೆ ನೀಡಿ ಸರ್ಪ್ರೈಸ್ ಕೊಟ್ಟ ಪುತ್ರಿಯರು : ಹೃದಯಸ್ಪರ್ಶಿ ವಿಡಿಯೋ ವೈರಲ್ |WATCH VIDEO

ಇಬ್ಬರು ಪುತ್ರಿಯರು ತಮ್ಮ ಪೋಷಕರಿಗೆ ಹೊಚ್ಚಹೊಸ ಕಾರನ್ನು ಉಡುಗೊರೆಯಾಗಿ ನೀಡುವ ಮೂಲಕ ಅಚ್ಚರಿಗೊಳಿಸಿದ್ದಾರೆ. ಕಣ್ಣಿಗೆ ಬಟ್ಟೆ ಕಟ್ಟಿದ ಕ್ಷಣದಿಂದ ಹಿಡಿದು, ಕಾರನ್ನು ನೋಡಿ ಕುಟುಂಬದವರು ಸಂಭ್ರಮಿಸಿದ ಸಂಪೂರ್ಣ ಭಾವುಕ ಕ್ಷಣಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದೆ. ಇನ್‌ಸ್ಟಾಗ್ರಾಮ್ ಬಳಕೆದಾರರಾದ ವರ್ಷಾ ಎಂಬುವವರು ಈ ವಿಡಿಯೋವನ್ನು ಹಂಚಿಕೊಂಡಿದ್ದು, ತಮ್ಮ ಪೋಷಕರಿಗೆ ಧನ್ಯವಾದ ಅರ್ಪಿಸಲು ತಾವು ಮತ್ತು ತಮ್ಮ ಸಹೋದರಿ ಈ ವಿಶೇಷ ಸರ್ಪ್ರೈಸ್ ನೀಡಿದ್ದಾಗಿ ತಿಳಿಸಿದ್ದಾರೆ. ವಿಡಿಯೋದ ಆರಂಭದಲ್ಲಿ, ಪೋಷಕರ ಕಣ್ಣಿಗೆ ಬಟ್ಟೆ ಕಟ್ಟಿ ಅವರನ್ನು ಮನೆಯ ಮುಂಭಾಗದ ರಸ್ತೆಗೆ (Driveway) […]

ಕನ್ನಡ ದುನಿಯಾ 16 Mar 2026 12:04 pm

BREAKING: ಜಗಳ ಬಿಡಿಸಲು ಹೋದ ವ್ಯಕ್ತಿ ಮೇಲೆಯೇ ಹಲ್ಲೆ: ಪತಿ-ಪತ್ನಿ ಗಲಾಟೆಯಲ್ಲಿ ಅಮಾಯಕ ಸಾವು

ಚಿತ್ರದುರ್ಗ: ಗಂಡ-ಹೆಂಡತಿ ನಡುವೆ ಜಗಳ ಬಿಡಿಸಲು ಹೋದ ವ್ಯಕ್ತಿಗೆ ಮಚ್ಚಿನಿಂದ ಹಲ್ಲೆ ನಡೆಸಲಾಗಿದು, ಗಂಭೀರವಾಗಿ ಗಾಯಗೊಂಡ ಆತ ಸಾವನ್ನಪ್ಪಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ. ಇಲ್ಲಿನ ಬುದ್ಧ ವೃತ್ತದಲ್ಲಿ ಈ ಘಟನೆ ನಡೆದಿದೆ. ಸಾದಿಕ್ ವುಲ್ಲಾ ಎಂಬತ ತನ್ನ ಪತ್ನಿಯೊಂದಿಗೆ ನಡುರಸ್ತೆಯಲ್ಲಿಯೇ ಗಲಾಟೆ ಮಾಡುತ್ತಿದ್ದ. ಈ ವೇಳೆ ಗಂಡ-ಹೆಂಡತಿ ಜಗಳ ಬಿಡಿಸಲು ಹೋದ ತಾಜ್ ಪಿರ್ (42) ಎಂಬಾತನ ಮೇಲೆ ಸಾದಿಕ್ ವುಲ್ಲಾ ಮಚ್ಚಿನಿಂದ ಹಲ್ಲೆ ನಡೆಸಿದ್ದಾನೆ. ಪರಿಣಾಮ ರಾಜ್ ಪಿರ್ ಗಂಭೀರವಾಗಿ ಗಾಯಗೊಂದು ದಾವಣಗೆರೆ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. […]

ಕನ್ನಡ ದುನಿಯಾ 16 Mar 2026 11:53 am

ಬಿಸಿಯೂಟದ ಬದಲು ಮಕ್ಕಳಿಗೆ ಪಾನಿಪುರಿ ಬಡಿಸಿದ ಶಾಲೆ ಗ್ಯಾಸ್ ಸಿಲಿಂಡರ್ ಕೊರತೆಯಿಂದ ಎದುರಾಯ್ತು ವಿಚಿತ್ರ ಪರಿಸ್ಥಿತಿ

ದೇಶಾದ್ಯಂತ ತಲೆದೂರಿರುವ ಎಲ್‌ಪಿಜಿ (LPG) ಸಿಲಿಂಡರ್‌ಗಳ ತೀವ್ರ ಕೊರತೆಯು ಸಾಮಾನ್ಯ ಜನರ ಅಡುಗೆ ಮನೆಯ ದಾಟಿ ಈಗ ಶಾಲಾ ಅಂಗಳಕ್ಕೂ ಕಾಲಿಟ್ಟಿದೆ. ಪಶ್ಚಿಮ ಬಂಗಾಳದ ಸರ್ಕಾರಿ ಶಾಲೆಯೊಂದರಲ್ಲಿ ಗ್ಯಾಸ್ ಸಿಲಿಂಡರ್ ಇಲ್ಲದ ಕಾರಣ, ಮಧ್ಯಾಹ್ನದ ಪೌಷ್ಟಿಕ ಬಿಸಿಯೂಟದ ಬದಲಾಗಿ ಅನಿವಾರ್ಯವಾಗಿ ಮಕ್ಕಳಿಗೆ ‘ಪಾನಿಪುರಿ’ (ಪುಚ್ಕಾ) ವಿತರಿಸಲಾಗಿದೆ. ಶಾಲಾ ಆವರಣದಲ್ಲೇ ಮಕ್ಕಳು ಸಾಲಾಗಿ ನಿಂತು ಪಾನಿಪುರಿ ಸವಿಯುತ್ತಿರುವ ಈ ವಿಡಿಯೋ, ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಇಂಧನ ಬಿಕ್ಕಟ್ಟಿನ ಭೀಕರತೆಯನ್ನು ಸಾರಿ ಹೇಳುತ್ತಿದ್ದು ಭಾರೀ ಚರ್ಚೆಗೆ ಗ್ರಾಸವಾಗಿದೆ. ವೈರಲ್ ವಿಡಿಯೋದಲ್ಲಿ […]

ಕನ್ನಡ ದುನಿಯಾ 16 Mar 2026 11:48 am

ದೂರವಾಣಿ ಕರೆ: ದಾವಣಗೆರೆ ದಕ್ಷಿಣದ ಬಿಜೆಪಿ ಅಭ್ಯರ್ಥಿ ಫೈನಲ್?

ಶಾಮನೂರು ಶಿವಶಂಕರಪ್ಪ ನಿಧನದ ಕಾರಣ ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಉಪ ಚುನಾವಣೆ ಎದುರಾಗಿದೆ. ಮಾರ್ಚ್ 23 ನಾಮಪತ್ರ ಸಲ್ಲಿಕೆ ಮಾಡಲು ಕೊನೆಯ ದಿನವಾಗಿದೆ. ಏಪ್ರಿಲ್ 9ರಂದು ಚುನಾವಣೆ ನಡೆಯಲಿದ್ದು, ಮೇ 4ರಂದು ಫಲಿತಾಂಶ ಘೋಷಣೆಯಾಗಲಿದೆ. ಇದುವರೆಗೂ ದಾವಣಗೆರೆ ದಕ್ಷಿಣ ಕ್ಷೇತ್ರ 4 ಚುನಾವಣೆ ಎದುರಿಸಿದೆ. ಆದರೆ ಬಿಜೆಪಿ ಒಮ್ಮೆಯೂ ಗೆದ್ದಿಲ್ಲ. ಶಾಮನೂರು ಶಿವಶಂಕರಪ್ಪ ಅನುಪಸ್ಥಿತಿಯಲ್ಲಿ ಕ್ಷೇತ್ರದಲ್ಲಿ ಗೆಲ್ಲಬೇಕು ಎಂಬುದು ಬಿಜೆಪಿ ತಂತ್ರಗಾರಿಕೆ. ಆದರೆ ಪಕ್ಷದಲ್ಲಿನ ಬಣ ರಾಜಕೀಯ ಪಕ್ಷದ ನಾಯಕರಿಗೆ ತಲೆನೋವು ತಂದಿದೆ. ದಾವಣಗೆರೆ ದಕ್ಷಿಣದಲ್ಲಿ ಜಿ.ಎಂ. […]

ಕನ್ನಡ ದುನಿಯಾ 16 Mar 2026 11:46 am