SENSEX
NIFTY
GOLD
USD/INR

Weather

25    C

ಡಿಜಿಟಲ್ ಸುದ್ದಿ ಮೂಲಗಳು

... ...View News by News Source

ಪುರಾಣ ಪ್ರವಚನದಲ್ಲಿ ಕಲಾವಿದರಿಗೆ ಸನ್ಮಾನ

ಚೌಕಿಪೇಟೆಯ ಶ್ರೀ ಬಕ್ಕೇಶ್ವರ ದೇವಸ್ಥಾನದ ಆವರಣದಲ್ಲಿ ಪ್ರತಿದಿನ ಸಂಜೆ 6.30ಕ್ಕೆ ನಡೆಯುತ್ತಿರುವ ಒಂದು ತಿಂಗಳ ಪರ್ಯಂತದ ಪುರಾಣದಲ್ಲಿ ಮೈಸೂರಿನ ಪುಟ್ಟರಾಜ ಕವಿ ಗವಾಯಿಗಳವರ ಶಿಷ್ಯರಾದ ಭೀಮಶಂಕರ ಬೀದೂರ್ ನೇತೃತ್ವದ 20 ಜನರ ತಂಡ ತಬಲಾ ಸೋಲೋ ನಡೆಸಿದರು.

ಜನತಾ ವಾಣಿ 24 Jan 2025 12:24 pm

ನಗರದಲ್ಲಿ ಇಂದು ಉದ್ಯೋಗ ಮೇಳ

ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಮಾದರಿ ವೃತ್ತಿ ಕೇಂದ್ರ ಇವರ ವತಿಯಿಂದ ಇಂದು ಬೆಳಿಗ್ಗೆ 10 ಗಂಟೆಗೆ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದಲ್ಲಿ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ ಎಂದು ಉದ್ಯೋಗಾಧಿಕಾರಿ ಡಿ. ರವೀಂದ್ರ ತಿಳಿಸಿದ್ದಾರೆ. ವಿವರಕ್ಕೆ ಸಂಪರ್ಕಿಸಿ : 7483808321.

ಜನತಾ ವಾಣಿ 24 Jan 2025 12:24 pm

ಹರಿಹರಕ್ಕೆ ಇಂದು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರು

ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಅಪರ್ಣಾ ಎಂ. ಕೊಳ್ಳ ಅವರು ಇಂದು ನಗರಕ್ಕೆ ಆಗಮಿಸಲಿದ್ದಾರೆ.

ಜನತಾ ವಾಣಿ 24 Jan 2025 12:23 pm

ಸಂಸದರ ಸಮಯಾವಕಾಶಕ್ಕೆ ಕಾಯುವುದು ಸಲ್ಲದು

ಹರಿಹರ : ತಾಲ್ಲೂಕಿನ ವಿವಿಧ ಇಲಾಖಾಧಿಕಾರಿಗಳು ನಾನಾ ಯೋಜನೆ, ಕಟ್ಟಡಗಳ ಉದ್ಘಾಟನಾ ಸಮಾರಂಭ ಆಯೋಜಿಸಲು ಸಂಸದರ ಸಮಯಾವಕಾಶಕ್ಕಾಗಿ ಕಾಯುವುದು ಸರಿಯಲ್ಲ ಎಂದು ಶಾಸಕ ಬಿ.ಪಿ.ಹರೀಶ್ ಹೇಳಿದರು.

ಜನತಾ ವಾಣಿ 24 Jan 2025 12:23 pm

ಅನಧಿಕೃತ ಕೋಚಿಂಗ್ ಸೆಂಟರ್‌ಗಳ ಹಾವಳಿ

ನಗರದಲ್ಲಿ ಅನುಮತಿ ಪಡೆಯದೇ ನಡೆಸುವ ಕೋಚಿಂಗ್ ಸೆಂಟರ್ ಹಾವಳಿ ಹೆಚ್ಚಾಗಿದೆ. ಈ ಬಗ್ಗೆ ಪೋಷಕರು ಎಚ್ಚರಿಕೆ ವಹಿಸುವ ಅಗತ್ಯವಿದೆ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯೆ ಅಪರ್ಣಾ ಕೊಳ್ಳ ಹೇಳಿದರು.

ಜನತಾ ವಾಣಿ 24 Jan 2025 12:22 pm

ಭದ್ರಾ ಮೇಲ್ದಂಡೆ ಕಾಮಗಾರಿ ಸ್ಥಗಿತವಾಗಿಲ್ಲ

ಚಿತ್ರದುರ್ಗ : ಭದ್ರಾ ಮೇಲ್ದಂಡೆ ಕಾಮಗಾರಿಗಳು ಸ್ಥಗಿತವಾಗಿಲ್ಲ. ಆದರೆ ಶೀಘ್ರಗತಿ ಯಲ್ಲಿ ಕಾಮಗಾರಿಗಳು ನಡೆಯುತ್ತಿಲ್ಲ. ಗುತ್ತಿಗೆದಾರಿಗೆ ಈ ವರ್ಷ 800 ಕೋಟಿಗಳನ್ನು ಪಾವತಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಜನತಾ ವಾಣಿ 24 Jan 2025 12:21 pm

ಹರಿಹರ ತುಂಗಭದ್ರಾ ಕ್ರೆಡಿಟ್ ಸೊಸೈಟಿಗೆ ಹೇಮಂತರಾಜ್ ಅಧ್ಯಕ್ಷ

ಹರಿಹರ : ನಗರದ ದಿ ತುಂಗಭದ್ರಾ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಲಿಮಿಟೆಡ್‌ನ ನೂತನ ಅಧ್ಯಕ್ಷರಾಗಿ ಡಿ. ಹೇಮಂತರಾಜ್ ಮತ್ತು ಉಪಾಧ್ಯಕ್ಷರಾಗಿ ಕೆ.ಬಿ. ಮಂಜುನಾಥ್ ಅವಿರೋಧ ವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ ಹೆಚ್. ಸುನಿತಾ ಘೋಷಣೆ ಮಾಡಿದರು.

ಜನತಾ ವಾಣಿ 24 Jan 2025 12:20 pm

ಎಸ್ಸೆಸ್‌ ಆರೋಗ್ಯಕ್ಕಾಗಿ ಧರ್ಮಸ್ಥಳ, ಕುಕ್ಕೆಯಲ್ಲಿ ವಿಶೇಷ ಪೂಜೆ

ಶಾಸಕ ಶಾಮನೂರು ಶಿವಶಂಕರಪ್ಪರ ಆರೋಗ್ಯ ಮತ್ತು ಆಯಸ್ಸು ವೃದ್ಧಿಸಲೆಂದು ಮಹಾನಗರ ಪಾಲಿಕೆ 38ನೇ ವಾರ್ಡ್‌ನ ಸದಸ್ಯ ಮಂಜುನಾಥ್ ಗಡಿಗುಡಾಳ್ ನೇತೃತ್ವದಲ್ಲಿ ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿ ಹಾಗೂ ಕುಕ್ಕೆ ಸುಬ್ರಹ್ಮಣ್ಯ ಸನ್ನಿಧಿಯಲ್ಲಿ ದೇವರ ದರ್ಶನ ಪಡೆಯಲಾಯಿತು.

ಜನತಾ ವಾಣಿ 24 Jan 2025 12:16 pm

ನಗರ ದೇವತೆಗೆ ಹರಕೆ ತೀರಿಸಿದ ಎಸ್ಸೆಸ್ ಯುವ ಅಭಿಮಾನಿ ಬಳಗ

ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅನಾರೋಗ್ಯದಿಂದ ಗುಣಮುಖರಾಗಿ ನಗರಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ನಗರ ದೇವತೆ ದುರ್ಗಾಂಬಿಕಾ ದೇವಿಗೆ 101 ಕಾಯಿ ಒಡೆಯುವ ಮೂಲಕ ಎಸ್.ಎಸ್ ಯುವ ಅಭಿಮಾನಿ ಬಳಗ ಹರಕೆ ತೀರಿಸಿತು.

ಜನತಾ ವಾಣಿ 24 Jan 2025 12:16 pm

ನೇತಾಜಿ ಆದರ್ಶ ಯುವಕರಿಗೆ ಮಾದರಿ : ದಿನೇಶ್ ಕೆ. ಶೆಟ್ಟಿ

ನಗರದ ರಾಮ್‌ ಅಂಡ್ ಕೋ ಸರ್ಕಲ್‌ನಲ್ಲಿ ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 128ನೇ ಜನ್ಮ ದಿನಾಚರಣೆ ಆಚರಿಸಲಾಯಿತು.

ಜನತಾ ವಾಣಿ 24 Jan 2025 12:16 pm

ಎಐಡಿಎಸ್ಓನಿಂದ ನೇತಾಜಿ ಜನ್ಮ ದಿನಾಚರಣೆ

ಎಐಡಿಎಸ್ಓ ದಾವಣಗೆರೆ ಜಿಲ್ಲಾ ಸಮಿತಿ ವತಿಯಿಂದ ಸ್ವಾತಂತ್ರ್ಯ ಸಂಗ್ರಾಮದ ಮಹಾನ್ ಕ್ರಾಂತಿಕಾರಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 128ನೇ ಜನ್ಮದಿನ ಆಚರಿಸಲಾಯಿತು.

ಜನತಾ ವಾಣಿ 24 Jan 2025 12:16 pm

ವೀರಶೈವ-ಲಿಂಗಾಯತ ಮಹಾಸಭಾಕ್ಕೆ ಪದಾಧಿಕಾರಿಗಳ ಆಯ್ಕೆ

ಅಖಿಲ ಭಾರತ ವೀರಶೈವ ಮಹಾಸಭಾದ ನೂತನ ಪದಾಧಿಕಾರಿಗಳನ್ನು ರಾಷ್ಟ್ರೀಯ ಅಧ್ಯಕ್ಷ ಡಾ. ಶಾಮನೂರು ಶಿವಶಂಕರಪ್ಪ ಅವರು ಆಯ್ಕೆ ಮಾಡಿದ್ದಾರೆ.

ಜನತಾ ವಾಣಿ 24 Jan 2025 12:15 pm

24.01.2025

This content is restricted.

ಜನತಾ ವಾಣಿ 24 Jan 2025 5:35 am

ನಗರದ ಪುರಾಣ ಪ್ರವಚನದಲ್ಲಿ ಇಂದು

ಪ್ರತಿದಿನ ಸಂಜೆ 6.30ಕ್ಕೆ ನಡೆಯುತ್ತಿರುವ ಒಂದು ತಿಂಗಳ ಪರ್ಯಂತದ ಪುರಾಣದಲ್ಲಿ ಇಂದಿನ ಕಾರ್ಯಕ್ರಮದಲ್ಲಿ ಮೈಸೂರಿನ ಪುಟ್ಟರಾಜ ಕವಿ ಗವಾಯಿಗಳವರ ಶಿಷ್ಯರಾದ ಭೀಮಶಂಕರ ಬೀದೂರ್ ನೇತೃತ್ವದ 15 ಜನರ ತಂಡ ತಬಲಾ ಸೋಲೋ ನಡೆಸುವರು ಎಂದು ಸಂಚಾಲಕ ಅಜ್ಜಂಪುರ ಶೆಟ್ರು ಮೃತ್ಯುಂಜಯ ತಿಳಿಸಿದ್ದಾರೆ.

ಜನತಾ ವಾಣಿ 23 Jan 2025 12:55 pm

ಜಿಲ್ಲಾ ಸಹಕಾರ ಯೂನಿಯನ್‍ ಉಪಾಧ್ಯಕ್ಷರಾಗಿ ಮಂಜುಳಾ ಗಣೇಶ್

ಹೊನ್ನಾಳಿ : ದಾವಣಗೆರೆ ಜಿಲ್ಲಾ ಸಹಕಾರ ಯೂನಿಯನ್‍ನ ಉಪಾಧ್ಯಕ್ಷರಾಗಿ ತಾಲ್ಲೂಕಿನ ಬೆನಕನಹಳ್ಳಿ ಗ್ರಾಮದ ಎಚ್.ಜಿ ಮಂಜುಳಾ ಗಣೇಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಜನತಾ ವಾಣಿ 23 Jan 2025 12:49 pm

ಶಸಾಪ ಸಮ್ಮೇಳನದಲ್ಲಿ ಕದಳಿ ಮಹಿಳಾ ವೇದಿಕೆಯಿಂದ ವಚನ ಗಾಯನ

ಚಿತ್ರದುರ್ಗ : ಇಲ್ಲಿನ ಶ್ರೀ ಮುರುಘರಾಜೇಂದ್ರ ಬೃಹನ್ಮಠ, ಅನುಭವ ಮಂಟಪದ ಆವರಣದಲ್ಲಿ ನಡೆದ 13 ನೇ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಸಮ್ಮೇಳನದಲ್ಲಿ ದಾವಣಗೆರೆಯ ಕದಳಿ ಮಹಿಳಾ ವೇದಿಕೆ ವತಿಯಿಂದ ವಚನ ಗಾಯನ ನಡೆಯಿತು.

ಜನತಾ ವಾಣಿ 23 Jan 2025 12:34 pm

ಜಗಳೂರು : ಇಂದು ದೇವದಾಸಿ ಸಮರ್ಪಣೆ ನಿಷೇಧ ಅರಿವು ಕಾರ್ಯಕ್ರಮ

ಜಗಳೂರು ತಾಲ್ಲೂಕಿನ ಸೊಕ್ಕೆ ಗ್ರಾಮ, ಚಿಕ್ಕಬಂಟನ ಹಳ್ಳಿಯ ಪ್ರತಿಭಾ ವಿಕಾಸ ವೇದಿಕೆ, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಇಂದು ಬೆಳಿಗ್ಗೆ 11 ಗಂಟೆಗೆ ದೇವದಾಸಿ ಸಮರ್ಪಣೆ ನಿಷೇಧ ಕುರಿತು ಮಾಜಿ ದೇವದಾಸಿ ಮಹಿಳೆಯರಿಗೆ ಅರಿವು ಕಾರ್ಯಕ್ರಮ ಆಯೋಜಿಸಲಾಗಿದೆ

ಜನತಾ ವಾಣಿ 23 Jan 2025 12:33 pm

ಪುಟ್ಟರಾಜ ಗವಾಯಿಗಳ ಆಶ್ರಮದಲ್ಲಿ ಟಿ.ಆರ್‌. ಶಂಕರಪ್ಪ ಜನ್ಮ ದಿನ

ನಗರದ ಬಾಡ ಕ್ರಾಸ್‌ ಬಳಿಯ ಶ್ರೀ ಪುಟ್ಟರಾಜ ಗವಾಯಿಗಳ ಆಶ್ರಮದಲ್ಲಿ ಬುಧವಾರ ಟಿ.ಆರ್‌. ಶಂಕರಪ್ಪ ಅವರ 75ನೇ ವರ್ಷದ ಜನ್ಮ ದಿನವನ್ನು ಸರಳವಾಗಿ ಆಚರಿಸಲಾಯಿತು.

ಜನತಾ ವಾಣಿ 23 Jan 2025 12:33 pm

ಸ್ನೇಹ ಮಹಿಳಾ ಬಳಗದ ವಾರ್ಷಿಕೋತ್ಸವ

ಸ್ನೇಹ ಮಹಿಳಾ ಬಳಗದ ವತಿಯಿಂದ ವಾರ್ಷಿಕೋತ್ಸವ ಮತ್ತು ಸಂಕ್ರಾಂತಿ ಹಬ್ಬವನ್ನು ಆಚರಿಸಲಾಯಿತು. ಆಜೀವ ಗೌರವ ಅಧ್ಯಕ್ಷರಾದ ಮಂಜುಳಾ ನಿಂಗಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಜನತಾ ವಾಣಿ 23 Jan 2025 12:32 pm

ಲಿಂ. ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ನೀಡಲು ಆಗ್ರಹ

ನಡೆದಾಡುವ ದೇವರು ಎಂದೇ ಹೆಸರಾಗಿರುವ ತ್ರಿವಿಧ ದಾಸೋಹಿ ಲಿಂಗೈಕ್ಯ ಸಿದ್ದಗಂಗಾ ಮಠದ ಡಾ. ಶಿವಕುಮಾರ ಮಹಾಸ್ವಾಮಿಗಳಿಗೆ ಕೇಂದ್ರ ಸರ್ಕಾರ ಮರಣೋತ್ತರ ಭಾರತ ರತ್ನ ಪ್ರಶಸ್ತಿ ನೀಡುವಂತೆ, ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ ಆಗ್ರಹಿಸಿದ್ದಾರೆ.

ಜನತಾ ವಾಣಿ 23 Jan 2025 12:32 pm

ವ್ಹೀಲಿಂಗ್ ಪುಂಡರ ಬಂಧನ : 2 ಬೈಕ್‌ ವಶ

ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿ-48ರಲ್ಲಿ ಬೈಕ್ ವೀಲಿಂಗ್ ಮಾಡಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದು, ಎರಡು ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಜನತಾ ವಾಣಿ 23 Jan 2025 12:31 pm

ಕುಡಿಯುವ ನೀರು ಕಾಮಗಾರಿಗಳಲ್ಲಿ ಅವ್ಯವಹಾರ: ಕ್ರಮಕ್ಕೆ ಆಗ್ರಹ

2023-24ನೇ ಸಾಲಿನಲ್ಲಿ ದಾವಣಗೆರೆ ತಾಲ್ಲೂಕಿನ ಸಮಸ್ಯಾತ್ಮಕ ಗ್ರಾಮಗಳಲ್ಲಿ ತುರ್ತು ಕುಡಿಯುವ ನೀರಿನ ಕಾಮಗಾರಿಗಳಲ್ಲಿ ಸುಮಾರು 87.45 ಲಕ್ಷ ರೂ. ಅವ್ಯವಹಾರ ನಡೆದಿರುವುದಾಗಿ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ -ಕರ್ನಾಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ಕೆ.ಎ. ಓಬಳೇಶ್ ಆರೋಪಿಸಿದ್ದಾರೆ.

ಜನತಾ ವಾಣಿ 23 Jan 2025 12:31 pm

ಸಮಸಮಾಜ ಕಟ್ಟಲು ಯುವಕರು ಮುಂದಾಗಲಿ

ಮಾಯಕೊಂಡ : ಶರಣ ಧರ್ಮ ಪಾಲಿಸಿ, ಸಮಸಮಾಜ ಕಟ್ಟಲು ಯುವಕರು ಮುಂದಾಗಬೇಕು ಎಂದು ಹೊಳಲ್ಕೆರೆ ಒಂಟಿಕಂಬ ಮಠದ ತಿಪ್ಪೇರುದ್ರ ಸ್ವಾಮೀಜಿ ಕರೆ ನೀಡಿದರು.

ಜನತಾ ವಾಣಿ 23 Jan 2025 12:30 pm

ಕೆಂಚನಹಳ್ಳಿ ಪಿಎಸಿಎಸ್ ಚುನಾವಣೆ : ಕೆ.ಹೆಚ್. ಮಹೇಶ್ ಸೇರಿ 12 ಜನ ಆಯ್ಕೆ

ಮಲೇಬೆನ್ನೂರು : ಕೆಂಚನಹಳ್ಳಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯ 11 ಜನ ನಿರ್ದೇಶಕರು ಚುನಾವಣೆಯಲ್ಲಿ ಮತ್ತು ಒಬ್ಬರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಜನತಾ ವಾಣಿ 23 Jan 2025 12:29 pm

ಕುರುಹಿನಶೆಟ್ಟಿ ನೇಕಾರ ಸಮಾಜ ಸಂಘದಿಂದ ಪ್ರತಿಭಾ ಪುರಸ್ಕಾರ

ಕುರುಹಿನಶೆಟ್ಟಿ ನೇಕಾರ ಸಮಾಜ ಸಂಘ ಹಾಗೂ ಆರ್.ಎಲ್. ಹನುಮಂತಪ್ಪ ಚಾರಿಟೇಬಲ್ ಟ್ರಸ್ಟ್ ದಾವಣಗೆರೆ ಇವರ ಸಹಯೋಗದಲ್ಲಿ ಶ್ರೀ ನೀಲಕಂಠೇಶ್ವರ ದೇವಸ್ಥಾನದಲ್ಲಿ ಪ್ರತಿಭಾ ಪುರಸ್ಕಾರ ಮತ್ತು ಪ್ರೋತ್ಸಾಹ ಧನ ವಿತರಣೆ ಕಾರ್ಯಕ್ರಮ ನಡೆಯಿತು.

ಜನತಾ ವಾಣಿ 23 Jan 2025 12:28 pm

ಗುಡಿಸಲು ವಾಸಿಗಳಿಗೆ ಆಹಾರ ಕಿಟ್‌ ವಿತರಣೆ

ಕಾಯಕಯೋಗಿ ಹಾಗೂ ತ್ರೀವಿಧ ದಾಸೋಹಿ ಸಿದ್ಧಗಂಗಾ ಮಠದ ಲಿಂ. ಡಾ. ಶಿವಕುಮಾರ ಸ್ವಾಮೀಜಿಯವರ 6ನೇ ಪುಣ್ಯಸ್ಮರಣೆ ನಿಮಿತ್ತ ಸರ್ಕಾರಿ ನೌಕರರ ಸಂಘದ ನಿಕಟ ಪೂರ್ವ ಜಿಲ್ಲಾಧ್ಯಕ್ಷ ಎಸ್‌. ಹಾಲೇಶಪ್ಪ ಅವರು, ನಗರದಲ್ಲಿನ ಗುಡಿಸಲು ವಾಸಿಗಳಿಗೆ ಆಹಾರ ಕಿಟ್‌ ಮತ್ತು ಮಕ್ಕಳಿಗೆ ಸಿಹಿ ಹಂಚಿದರು.

ಜನತಾ ವಾಣಿ 23 Jan 2025 12:26 pm

ಅಂಬಿಗರ ಚೌಡಯ್ಯ ವಿಚಾರಧಾರೆ ಮನುಕುಲಕ್ಕೆ ದಾರಿದೀಪ

ಹರಿಹರ : ನಿಜ ಶರಣ ಅಂಬಿಗರ ಚೌಡಯ್ಯನವರ ವಿಚಾರ ಧಾರೆಗಳು ಒಂದು ಜಾತಿಗೆ ಮಾತ್ರ ಸೀಮಿತವಾಗಿರದೇ ಮನು ಕುಲಕ್ಕೇ ಮಾರ್ಗದರ್ಶನ ಮಾಡತಕ್ಕಂತಹ ವಿಚಾರಗಳಾಗಿದ್ದಾವೆ ಎಂದು ಶಾಸಕ ಬಿ.ಪಿ. ಹರೀಶ್ ಹೇಳಿದರು.

ಜನತಾ ವಾಣಿ 23 Jan 2025 12:26 pm

26ರಂದು 76ನೇ ಗಣರಾಜ್ಯೋತ್ಸವ

ಜಿಲ್ಲಾಡಳಿತದ ವತಿಯಿಂದ ಜ.26 ರಂದು 76ನೇ ಗಣರಾಜ್ಯೋತ್ಸವ ದಿನಾಚರಣೆಯನ್ನು ಜಿಲ್ಲಾ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದೆ.

ಜನತಾ ವಾಣಿ 23 Jan 2025 12:24 pm

ನಗರದಲ್ಲಿ ನಾಳೆ ವಿಶೇಷ ಚೇತನರ ಸ್ವ ಉದ್ಯೋಗ ಮಾಹಿತಿ ಕಾರ್ಯಗಾರ

ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ ವತಿಯಿಂದ ಸ್ವಾಮಿ ವಿವೇಕಾನಂದರ ಜಯಂತಿ, ರಾಷ್ಟ್ರೀಯ ಯುವ ದಿನ ದಿನಾಚರಣೆ ಅಂಗವಾಗಿ ನಾಡಿದ್ದು ದಿನಾಂಕ 24ರ ಶುಕ್ರವಾರ ಬೆಳಿಗ್ಗೆ 10 ಕ್ಕೆ ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ವಿಶೇಷ ಚೇತನರ ಸ್ವ ಉದ್ಯೋಗ ಮಾಹಿತಿ ಕಾರ್ಯಾಗಾರ ನಡೆಯಲಿದೆ.

ಜನತಾ ವಾಣಿ 23 Jan 2025 12:23 pm

ರೈತರಿಗೆ ಆನ್‍ಲೈನ್‌ ತಂತ್ರಾಂಶದಲ್ಲಿ ಮಂಜೂರಾತಿ

ಹೊನ್ನಾಳಿ : ತಾಲ್ಲೂಕಿನ ಬೆನಕನ ಹಳ್ಳಿ ರೈತರಿಗೆ ಆನ್‍ಲೈನ್ ತಂತ್ರಾಂಶದಲ್ಲಿ ಮಂಜೂರಾತಿ ಆದೇಶ ನೀಡಲಾಗಿದೆ ಎಂದು ಬಗರ್ ಹುಕ್ಕುಂ ಸಮಿತಿ ತಾಲ್ಲೂಕು ಅಧ್ಯಕ್ಷರೂ ಆಗಿರುವ ಶಾಸಕ ಡಿ.ಜಿ.ಶಾಂತನಗೌಡರು ತಿಳಿಸಿದರು.

ಜನತಾ ವಾಣಿ 23 Jan 2025 12:22 pm

ಹರಿಹರದಲ್ಲಿ ಇಂದು ನಡೆಯಬೇಕಿದ್ದ ದೂಡಾ ಜನ ಸಂಪರ್ಕ ಸಭೆ ಮುಂದೂಡಿಕೆ

ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಇಂದು (ಜ. 23) ಹರಿಹರದಲ್ಲಿ ನಡೆಬೇಕಿದ್ದ ಜನ ಸಂಪರ್ಕ ಸಭೆಯನ್ನು ಕಾರಣಾಂತರದಿಂದ ಮುಂದೂಡಲಾಗಿದೆ.

ಜನತಾ ವಾಣಿ 23 Jan 2025 12:21 pm

ಆದರ್ಶ ಶಾಲೆಗಳು ಪ.ಪೂ. ಕಾಲೇಜಾಗಿ ಮೇಲ್ದರ್ಜೆಗೆ

ಹರಪನಹಳ್ಳಿ : ವಿಜಯನಗರ ಜಿಲ್ಲೆಯ ಹೊಸಪೇಟೆ. ಹರಪನಹಳ್ಳಿ. ಹಗರಿಬೊಮ್ಮನಹಳ್ಳಿ ಹಾಗೂ ಕೂಡ್ಲಿಗಿ ಸೇರಿ ಜಿಲ್ಲೆಯ ನಾಲ್ಕು ಕಾಲೇಜುಗಳನ್ನು ಆದರ್ಶ ಕಾಲೇಜುಗಳಾಗಿ ಮೇಲ್ದರ್ಜೆಗೇರಿಸಲಾಗಿದೆ

ಜನತಾ ವಾಣಿ 23 Jan 2025 12:19 pm

ಅಪಘಾತದಲ್ಲಿ ಗಾಯಗೊಂಡ ವಿಜಯ್‌ಗೆ ಧರ್ಮಸ್ಥಳ ಯೋಜನೆಯಿಂದ ಪರಿಹಾರ

ಮಲೇಬೆನ್ನೂರು : ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ನೀಡುವ ಸಹಾಯಧನ ಕಾರ್ಯಕ್ರಮದಡಿಯಲ್ಲಿ ಇತ್ತೀಚೆಗೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಾಯಗೊಂಡು ಬಲಗಾಲಿಗೆ ತೀವ್ರ ಹಾನಿಯಾಗಿ ನಡೆಯಲು ಸಾಧ್ಯವಾಗದ ಪರಿಸ್ಥಿತಿಯಲ್ಲಿರುವ ವಿಜಯ್ ಅವರಿಗೆ 10 ಸಾವಿರ ರೂ.ಗಳ ಸಹಾಯಧನದ ವಿತರಣೆ ಮಾಡಿದರು.

ಜನತಾ ವಾಣಿ 23 Jan 2025 11:56 am

ನಗರಕ್ಕೆ ಇಂದು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರು

ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಅಪರ್ಣಾ ಎಂ. ಕೊಳ್ಳ ಅವರು ಇಂದು ನಗರಕ್ಕೆ ಆಗಮಿಸಲಿದ್ದಾರೆ.

ಜನತಾ ವಾಣಿ 23 Jan 2025 11:56 am

ಕೊನೆ ಭಾಗದ ಜಮೀನಿಗೆ ನೀರು ತಲುಪಿಸುವಂತೆ ರೈತರ ಆಗ್ರಹ

ನಾಲೆಯ ನೀರು ನಿರ್ವಹಣೆ ಮಾಡುವ ಸೌಡಿಗಳ ಬಾಕಿ ವೇತನವನ್ನು ತಕ್ಷಣವೇ ಬಿಡುಗಡೆಗೊಳಿಸಿ, ಕೊನೆ ಭಾಗದ ರೈತರಿಗೆ ನೀರು ತಲುಪಿಸುವಂತೆ ಆಗ್ರಹಿಸಿ ರೈತರ ಒಕ್ಕೂಟವು ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ.

ಜನತಾ ವಾಣಿ 23 Jan 2025 11:56 am

ಹರಿಹರದಲ್ಲಿ ಶ್ರೀ ರಾಮ ಮೂರ್ತಿ ಮೆರವಣಿಗೆ

ಹರಿಹರ : ಅಯೋಧ್ಯೆ ನಗರದ ಶ್ರೀ ರಾಮ ಮಂದಿರದ ದೇವಸ್ಥಾನದಲ್ಲಿ ಶ್ರೀ ರಾಮನ ಮೂರ್ತಿ ಪ್ರತಿಷ್ಠಾಪನೆ ಮಾಡಿ ಇಂದಿಗೆ ಒಂದು ವರ್ಷ ಕಳೆದಿರುವುದರಿಂದ ನಗರದ ಶ್ರೀರಾಮನ ಭಾವಚಿತ್ರದ ಮೆರವಣಿಗೆ ಯನ್ನು ಶ್ರದ್ಧಾ ಭಕ್ತಿಯಿಂದ ಮತ್ತು ಸಡಗರ, ಸಂಭ್ರಮದಿಂದ ಮಾಡಲಾಯಿತು.

ಜನತಾ ವಾಣಿ 23 Jan 2025 11:55 am

ಶ್ರೀ ಶ್ರೀಶೈಲ ಕ್ರೆಡಿಟ್‌ ಸೊಸೈಟಿ ಚುನಾವಣೆ : ಮೇಕಾ ಸೇರಿ ಐವರು ಅವಿರೋಧ ಆಯ್ಕೆ

ನಗರದ ಶ್ರೀ ಶ್ರೀಶೈಲ ಕ್ರೆಡಿಟ್‌ ಕೋ-ಆಪರೇಟಿವ್ ಸೊಸೈಟಿ ಆಡಳಿತ ಮಂಡಳಿಯ ಹಿರಿಯ ನಿರ್ದೇಶಕರಾಗಿದ್ದ ಮೇಕಾ ಮುರುಳಿಕೃಷ್ಣ ಅವರು ಸೇರಿ ದಂತೆ ಐವರು ಅವಿರೋಧ ವಾಗಿ ಆಯ್ಕೆಯಾಗಿದ್ದಾರೆ.

ಜನತಾ ವಾಣಿ 23 Jan 2025 11:53 am

ಬಸವಪ್ರಭು ಶ್ರೀಗೆ ಕುವೆಂಪು ವಿವಿಯಿಂದ ಪಿಹೆಚ್‌ಡಿ ಪದವಿ

ನಗರದ ಶ್ರೀ ಶಿವಯೋಗಾ ಶ್ರಮ - ವಿರಕ್ತಮಠದ ಶ್ರೀ ಬಸವ ಪ್ರಭು ಸ್ವಾಮೀಜಿ ಯವರಿಗೆ ಕುವೆಂಪು ವಿಶ್ವವಿದ್ಯಾನಿಲಯದಿಂದ ಪಿಹೆಚ್‌ಡಿ ಪದವಿ ಲಭಿಸಿದೆ.

ಜನತಾ ವಾಣಿ 23 Jan 2025 11:52 am