ಯುಗಾದಿ ವರ್ಷ ಭವಿಷ್ಯ `ಶ್ರೀ ವಿಶ್ವಾವಸು ನಾಮ ಸಂವತ್ಸರ’ದಿನಾಂಕ : 30.03.2025 ರಿಂದ 19.03.2026 ರವರೆಗೆ
ದಿನಾಂಕ : 30.03.2025 ರಿಂದ 19.03.2026 ರವರೆಗೆ
ಬದುಕು ಅನ್ನೋದು ಬವಣೆ, ಅವರವರ ಭಾವಕ್ಕೆ ಕುತೂಹಲಗಳನ್ನು ಹೊತ್ತು ಸಾಗುವ ಜೀವಕ್ಕೆ ಒಮ್ಮೆ ನಗು, ಒಮ್ಮೆ ಅಳು... ಬಂದದ್ದನ್ನು ಸಂತೈಸಿಕೊಂಡು ಸಮಯ ಬಂದಾಗ ಸರಿದು ಹೋಗುವ ಸುದೀರ್ಘ ಪಯಣ...
ಹೊನ್ನಾಳಿಗೂ ಬಂದ ಮೆಕ್ಸಿಕೋ ದೇಶದ ಸಿರಿಧಾನ್ಯ `ಚಿಯಾ’ಬೆಳೆ
ಕೃಷಿ ಇಲಾಖೆಯ ಮಾಹಿತಿ ಪಡೆದು ಚಿಯಾ ಸೀಡ್ಸ್ ಎಂಬ ಹೊಸ ಬೆಳೆಯನ್ನು ಬೆಳೆಯುವ ಶ್ರಮಜೀವಿಯ ಯಾವುದೇ ರೈತ ಆರ್ಥಿಕ ಚೇತರಿಕೆಯೊಂದಿಗೆ ತನ್ನ ಜೀವನ ಸುಧಾರಣೆ
ನಗರದ ಆಲೂರು ಕನ್ವೆನ್ಷನ್ ಹಾಲ್ನಲ್ಲಿ ಇದೇ ದಿನಾಂಕ 31ರಿಂದ ಏಪ್ರಿಲ್ 6ರವರೆಗೆ ಓಶೋ ಧ್ಯಾನ ಶಿಬಿರ ನಡೆಯಲಿದೆ.
ಮೋಟಾರು ವಾಹನ ಕಾಯ್ದೆಯು ಸೀಟು ಆಟೋಗಳಿಗೆ ಅನ್ವಯಿಸದೇ ?
ನಗರದಲ್ಲಿ ಸೀಟು ಆಟೋಗಳ ಹಾವಳಿ ಹೆಚ್ಚಾಗಿದ್ದು, ಸಾರ್ವಜನಿಕರು ಇದರಲ್ಲಿ ದರ ಪ್ರಮಾಣ ಕಡಿಮೆ ಎಂದು ತಮ್ಮ ಜೀವಗಳನ್ನು ಲೆಕ್ಕಿಸದೇ ನಿತ್ಯ ಪ್ರಯಾಣಿಸುತ್ತಿದ್ದಾರೆ.
ಪ್ರತಿಮಾ ಸಭಾದಿಂದ ನಾಳೆ `ಸಂವಾದ, ಹಾಸ್ಯ ನಾಟಕ ಪ್ರದರ್ಶನ’
ನಗರದ ಪ್ರತಿಮಾ ಸಭಾದ ವತಿಯಿಂದ ಹೊಸ ಸಂವತ್ಸರ `ವಿಶ್ವಾವಸು' ಹಾಗೂ ಹೊಸ ವರ್ಷ ಉಗಾದಿಗೆ ಸ್ವಾಗತ ಕೋರುವ ಹಿನ್ನೆಲೆಯಲ್ಲಿ `ಸಂವಾದ ಮತ್ತು ಹಾಸ್ಯ ನಾಟಕ ಪ್ರದರ್ಶನ' ಏರ್ಪಡಿಸಲಾಗಿದೆ.
ನಗರದಲ್ಲಿ ಇಂದು –ನಾಳೆ `ಶೃಂಗ-2025′ವಾರ್ಷಿಕೋತ್ಸವ
ಜೈನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯು ಕಾಲೇಜಿನ ಕ್ರೀಡಾ ಮತ್ತು ಸಾಂಸ್ಕೃತಿಕ ಉತ್ಸವ `ಶೃಂಗ 2025' ಅನ್ನು ಕಾಲೇಜಿನ ಮೈದಾನದಲ್ಲಿ ಇಂದು ಮತ್ತು ನಾಳೆ ಆಚರಿಸಲಾಗುವುದು.
ಶ್ರೀ ದಾನಮ್ಮ ದೇವಸ್ಥಾನದಲ್ಲಿ ನಾಳೆ ಯುಗಾದಿ ಅಮಾವಾಸ್ಯೆ ಪೂಜೆ
ನಗರದ ದೊಡ್ಡಪೇಟೆಯ ಶ್ರೀ ಬಸವೇಶ್ವರ ಮತ್ತು ಶ್ರೀ ದಾನಮ್ಮ ದೇವಿ ದೇವಸ್ಥಾನದಲ್ಲಿ ಯುಗಾದಿ ಅಮಾವಾಸ್ಯೆ ಪ್ರಯುಕ್ತ ನಾಡಿದ್ದು ದಿನಾಂಕ 29ರ ಶನಿವಾರ ಬೆಳಿಗ್ಗೆ ಶ್ರೀ ಸ್ವಾಮಿಗೆ ಅಭಿಷೇಕ, ಪೂಜೆ, ಹೂವಿನ ಅಲಂ ಕಾರ ನಡೆ ಯುವುದು
ಜಿನೆಸಿಸ್ ರಿಟ್ರೀಟ್ ಮಾರಾಟ ಸುದ್ದಿ ಮಾಲೀಕರಿಂದ ದೂರು ದಾಖಲು
ನಗರದ ಹೊರವಲಯದಲ್ಲಿರುವ ಜಿನೆಸಿಸ್ ರಿಟ್ರೀಟ್ ಮಾರಾಟಕ್ಕಿದೆ ಎಂಬ ವದಂತಿ ಹಬ್ಬಿಸಿದ ವ್ಯಕ್ತಿಯ ವಿರುದ್ಧ ಮಾಲೀಕ ಜಿ.ಎಸ್. ಮಂಜುನಾಥ್ ಅವರು ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕರುಣಾ ಜೀವ ಕಲ್ಯಾಣ ಟ್ರಸ್ಟ್ ವತಿಯಿಂದ ನಡೆಸುತ್ತಿರುವ ಮಜ್ಜಿಗೆ ವಿತರಣಾ ಕಾರ್ಯಕ್ರಮಕ್ಕೆ ತ್ರಿವೇಣಿ ಡಾ. ಮಲ್ಲೇಶ್, ದಿ. ಕೆ.ಎಸ್. ಶಂಕರ್ ನಾರಾಯಣರಾವ್ ದಿ. ಶ್ರೀಮತಿ ಸುಲೋಚನಮ್ಮ (ಹೊಸದುರ್ಗ) ಇವರು ಇಂದಿನ ದಾನಿಗಳಾಗಿದ್ದಾರೆ.
ನಗರದಲ್ಲಿ ಇಂದು ವಿಜ್ಞಾನ, ಮಹಿಳಾ ದಿನ
ಎ.ವಿ. ಕಮಲಮ್ಮ ಮಹಿಳಾ ಕಾಲೇಜಿನ ವಿಜ್ಞಾನ ವೇದಿಕೆ ಮತ್ತು ಹಳೆಯ ವಿದ್ಯಾರ್ಥಿಗಳ ಸಂಘದಿಂದ ರಾಷ್ಟ್ರೀಯ ವಿಜ್ಞಾನ ದಿನ ಮತ್ತು ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಇಂದು ಬೆಳಿಗ್ಗೆ 11.30ಕ್ಕೆ ಕಾಲೇಜಿನ ಶ್ರೀಮತಿ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಸಭಾಂಗಣದಲ್ಲಿ ನಡೆಯಲಿದೆ.
ಎಸ್ಬಿಐ ಬ್ಯಾಂಕ್ ಕಳ್ಳತನ ಪ್ರಕರಣ : ಐವರ ಬಂಧನ
ನ್ಯಾಮತಿ : ಪಟ್ಟಣದ ಭಾರತೀಯ ಸ್ಟೇಟ್ ಬ್ಯಾಂಕ್ನ (ಎಸ್ಬಿಐ) ನೆಹರೂ ರಸ್ತೆಯ ಶಾಖೆಯಲ್ಲಿ 6 ತಿಂಗಳ ಹಿಂದೆ ನಡೆದಿದ್ದ 17 ಕೆ.ಜಿ 705 ಗ್ರಾಂ ಚಿನ್ನಾಭರಣ ಕಳವು ಪ್ರಕರಣ ಭೇದಿಸಿರುವ ಪೊಲೀಸರು, ತಮಿಳುನಾಡಿನ ಇಬ್ಬರು ಸೇರಿ ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
ದೊಡ್ಡಬಾತಿ : ಸಂಚಾರಿ ನಿಯಂತ್ರಣ ಅಗತ್ಯ
ತಾಲ್ಲೂಕಿನ ದೊಡ್ಡಬಾತಿ ಗ್ರಾಮದ ಪಿ.ಬಿ ರಸ್ತೆಯು ಹರಿಹರ ಮತ್ತು ದಾವಣಗೆರೆ ನಗರಗಳನ್ನು ಸಂಪರ್ಕಿಸುತ್ತದೆ, ದಾವಣಗೆರೆ ಮಹಾನಗರವಾಗಿ ಬೆಳೆದ ಪರಿಣಾಮ ವಾಹನಗಳ ದಟ್ಟಣೆ ದೊಡ್ಡಬಾತಿ ಗ್ರಾಮದಲ್ಲಿ ಹೆಚ್ಚುತ್ತಿದೆ.ಆದರೆ ಇಲ್ಲಿ ಸೇವಾ ರಸ್ತೆಗಳಿಲ್ಲದ ಕಾರಣ ಸಾಮಾನ್ಯ ಪಾದಚಾರಿಗಳು ಪರದಾಡುವಂತಾಗಿದೆ.
ಮೇ. 2ಕ್ಕೆ ತ್ರಿಮತಸ್ಥ ವಿಪ್ರವಟುಗಳಿಗೆ ಉಪನಯನ
ನಗರದ ಶ್ರೀ ಶಂಕರ ಸೇವಾ ಸಂಘದ ವತಿಯಿಂದ ಮೇ 2ರಂದು ಆದಿ ಗುರು ಶ್ರೀ ಶಂಕರ ಜಯಂತಿ ಅಂಗವಾಗಿ ತ್ರಿಮತಸ್ಥ ವಿಪ್ರ ವಟುಗಳಿಗೆ ಸಾಮೂಹಿಕ ಉಪನಯನ ಹಮ್ಮಿಕೊಳ್ಳಲಾಗಿದೆ.
ಕೋಡಿ ಕ್ಯಾಂಪ್ ಕೊಟ್ಟೂರೇಶ್ವರ ಮಠದಲ್ಲಿ ನಾಳೆ ಅಮಾವಾಸ್ಯೆ
ಕೊಟ್ಟೂರು ಶ್ರೀ ಗುರುಬಸವರಾಜೇಂದ್ರ ಸ್ವಾಮಿ ಪಾದಯಾತ್ರೆ ಟ್ರಸ್ಟ್ನಿಂದ ಮಾಗಾನಹಳ್ಳಿ ಕೋಡಿ ಕ್ಯಾಂಪ್ ಬಳಿ ಇರುವ ಶ್ರೀ ಕೊಟ್ಟೂರೇಶ್ವರ ಮಹಾಸ್ವಾಮಿ ಪಾದಗಳಿಗೆ ಯುಗಾದಿ ಅಮಾವಾಸ್ಯೆ ಪ್ರಯುಕ್ತ ನಾಡಿದ್ದು ದಿನಾಂಕ 29ರ ಶನಿವಾರ ಬೆಳಿಗ್ಗೆ 6.30ಕ್ಕೆ ಅಭಿಷೇಕ - ಪೂಜೆ ನಡೆಯಲಿದೆ.
ನಗರದಲ್ಲಿ ನಾಳೆ ಶನಿಮೌನಿ ಅಮಾವಾಸ್ಯೆ, ಸೂರ್ಯಗ್ರಹಣ
ವಿಶ್ವಾಸುನಾಮ ಸಂವತ್ಸರಂಭದ ಪ್ರಯುಕ್ತ ನಾಡಿದ್ದು ದಿನಾಂಕ 29 ರ ಶನಿವಾರ ಬೆಳಿಗ್ಗೆ ಪಂಚದೇವರಗಳಿಗೆ, ಶ್ರೀಕಾಶಿ ವಿಶ್ವನಾಥಲಿಂಗ ಶ್ರೀಶನೇಶ್ವರಸ್ವಾಮಿಗೆ ತೈಲಾಭಿಷೇಕ, ಬೆಳಿಗ್ಗೆ 9ಕ್ಕೆ ಶ್ರೀ ಶನೇಶ್ವರಸ್ವಾಮಿ ಸಹಿತ ಪಂಚದೇವರಗಳ ಪಲ್ಲಕ್ಕಿ ಉತ್ಸವ ಇರುತ್ತದೆ
ಹಸಿರು ಗದ್ದೆಯ ಮೇಲೆ ಕೆಂಪು ಸೂರ್ಯ…
ಬೆಳಕಿನ ಜೊತೆಗೆ ಬೇಸಿಗೆಯ ಬಿಸಿಲನ್ನೂ ಭೂಮಿಗೆ ನೀಡಿ ಸಂಜೆಯ ಹೊತ್ತಿಗೆ ಆಕಾಶವನ್ನು ಕೆಂಪಾಗಿಸಿ ತಂಪು ವಾತಾವರಣ ಸೃಷ್ಟಿಸಿ ಮುಳುಗುವ ಸೂರ್ಯನ ಸೊಬಗನ್ನು ಜಿಗಳಿ ಗ್ರಾಮದ ಹೊರ ವಲಯದಲ್ಲಿ ಭತ್ತದ ನಾಟಿಯ ಹಚ್ಚ ಹಸಿರಿನ ನಡುವೆ ಕ್ಯಾಮರಾ ಕಣ್ಣಿನಲ್ಲಿ ಸೆರೆ ಹಿಡಿಯಲಾಗಿದೆ.
ಜಲಜೀವನ್ ಮಿಷನ್ ಯೋಜನೆಯಡಿ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಲು ಯೋಜನೆ ರೂಪಿಸಿದ 24x7 ಮಾದರಿ ಸ್ವಾವಲಂಬನೆಯತ್ತ ಗ್ರಾಮಗಳು ಮುನ್ನಡೆಯುವ ಆಯಾಮ
ಮಲೇಬೆನ್ನೂರು ಪುರಸಭೆಗೆ 22 ಕೋಟಿ ಆದಾಯ ನಿರೀಕ್ಷೆ
ಮಲೇಬೆನ್ನೂರು : ಇಲ್ಲಿನ ಪುರಸಭೆಯ ಸಭಾಂಗಣದಲ್ಲಿ ಗುರುವಾರ 2025-26ನೇ ಸಾಲಿನ ಆಯವ್ಯಯ ಮಂಡನೆ ಮಾಡಿದ್ದು, ವಿವಿಧ ಮೂಲಗಳಿಂದ 22 ಕೋಟಿ ರೂ. ಆದಾಯ ನಿರೀಕ್ಷಿಸಲಾಗಿದೆ.
ಜಿಲ್ಲೆಯ ಆಸ್ಪತ್ರೆಗಳ ಅಭಿವೃದ್ಧಿಗೆ ಸಚಿವ ಎಸ್ಸೆಸ್ಸೆಂ ಮನವಿ
ಜಿಲ್ಲೆಯ ಆಸ್ಪತ್ರೆಗಳ ಮೂಲಸೌಕರ್ಯ ಅಭಿವೃದ್ಧಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಮನವಿ ಸಲ್ಲಿಸಿದರು.
ಸ್ವಯಂ ಉದ್ಯೋಗವಾಗಿ ಷೇರು ಮಾರುಕಟ್ಟೆಯಲ್ಲಿ ತೊಡಗಿಸಿಕೊಳ್ಳಿ
ಹರಿಹರ : ಷೇರು ಮಾರುಕಟ್ಟೆಯು ಷೇರುಗಳನ್ನು ಖರೀದಿಸಲು ಮತ್ತು ಮಾರಾಟ ಮಾಡಲು ಇರುವ ವೇದಿಕೆಯಾಗಿದ್ದು, ಹಣಕಾಸಿನ ಬೆಳವಣಿಗೆಯನ್ನು ಗುರಿಯಾಗಿಟ್ಟುಕೊಂಡು ಹೂಡಿಕೆದಾರರೊಂದಿಗೆ ಬಂಡವಾಳ ವನ್ನು ಹುಡುಕುವ ಕಂಪನಿಗಳಿಗೆ ಇದು ಸೇತುವೆಯಾಗಿದೆ.
ಕಣ್ಮನ ಸೆಳೆದ `ಸಣ್ತಿಮ್ಮಿ ಪಕ್ಷಿ ಪುರಾಣ’ಏಕವ್ಯಕ್ತಿ ನಾಟಕ ಪ್ರದರ್ಶನ
ನಗರದ ವನಿತಾ ಸಮಾಜದ ಆವರಣದಲ್ಲಿರುವ ಶ್ರೀ ಸತ್ಯ ಸಾಯಿ ರಂಗಮಂದಿರದಲ್ಲಿ ಭೂಮಿಕ-ವನಿತಾ ರಂಗ ವೇದಿಕೆ ವತಿಯಿಂದ ವಿಶ್ವ ರಂಗಭೂಮಿ ದಿನಾಚರಣೆ ಪ್ರಯುಕ್ತ ಇಂದು ಸಂಜೆ ಹಮ್ಮಿಕೊಂಡಿದ್ದ `ಸಣ್ತಿಮ್ಮಿ ಪಕ್ಷಿ ಪುರಾಣ' ಏಕ ವ್ಯಕ್ತಿ ನಾಟಕ ಪ್ರದರ್ಶನ ನೆರೆದಿದ್ದ ಪ್ರೇಕ್ಷಕರ ಕಣ್ಮನ ಸೆಳೆಯಿತು.