ಮಲೆನಾಡಿನಲ್ಲಿ ಮಳೆ: ತುಂಗಾ, ಭದ್ರಾ ಒಳ ಹರಿವು ಮತ್ತಷ್ಟು ಹೆಚ್ಚಳ
ಮಲೇಬೆನ್ನೂರು : ಮಲೆನಾಡಿನಲ್ಲಿ ಮುಂಗಾರು ಮಳೆ ಶುಕ್ರವಾರದಿಂದ ಮತ್ತೆ ಜೋರಾಗಿದ್ದು, ತುಂಗಾ ಮತ್ತು ಭದ್ರಾ ನದಿಯಲ್ಲಿ ನೀರಿನ ಹರಿವು ಮತ್ತಷ್ಟು ಏರಿಕೆಯಾಗಿದೆ.
ಡಿ.ಇ.ಎಲ್.ಇಡಿ ದಾಖಲಾತಿಗೆ ಅರ್ಜಿ ಆಹ್ವಾನ
ಪ್ರಸಕ್ತ ಸಾಲಿನ ಪ್ರಥಮ ವರ್ಷದ ಡಿ.ಇ.ಎಲ್.ಇಡಿ.ಗೆ ದಾಖಲಾತಿ ಪಡೆಯಲು ಇದೇ ದಿನಾಂಕ 31ರವರೆಗೆ ಆಫ್ಲೈನ್ ಅರ್ಜಿ ಸಲ್ಲಿಸಲು ಅವಧಿ ವಿಸ್ತರಿಸಲಾಗಿದೆ.
ಗ್ರೀನ್ ಸಿಗ್ನಲ್ 30 ಸೆಕೆಂಡ್ಗೆ ವಿಸ್ತರಿಸಿ..!
ನಗರದ ಗುಂಡಿ ವೃತ್ತದಲ್ಲಿ ವಾಹನ ಸವಾರರು ಸಂಚಾರಿ ನಿಯಮ ಉಲ್ಲಂಘಿಸುತ್ತಿರುವುದಕ್ಕೆ ಸಂಚಾರಿ ಹಸಿರು ಸೂಚಕದ ಸಮಯವನ್ನು 15 ಸೆಕೆಂಡಿಗೆ ನಿಗದಿ ಪಡಿಸಿರುವುದೇ ಮುಖ್ಯ ಕಾರಣವಾಗಿದೆ.
ಕಂದಾಯ ಕಟ್ಟೇವಿ, ರಸ್ತೆ ಸೌಲಭ್ಯ ಕೊಡಿ
ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ಬಾಲಾಜಿ ನಗರದ ರಸ್ತೆಗಳು ಅಧಿಕ ಮಳೆಯಿಂದಾಗಿ ಕೆಸರು ಗದ್ದೆಯ ಸ್ವರೂಪ ತಾಳಿವೆ. ತಪ್ಪದೇ ಕಂದಾಯ ಕಟ್ಟಿಸಿಕೊಳ್ಳುವ ಪಾಲಿಕೆಯು, ರಸ್ತೆ ಸೌಲಭ್ಯ ಕಲ್ಪಿಸಲು ಕಣ್ಮುಚ್ಚಿ ಕುಳಿತಿದೆ.
ಕಾರ್ಗಿಲ್ ಹುತಾತ್ಮರನ್ನು ಸ್ಮರಿಸೋಣ
ನಗರದ ಎಂಸಿಸಿ `ಬಿ' ಬ್ಲಾಕ್ನಲ್ಲಿ ಕಾರ್ಗಿಲ್ ವಿಜಯೋತ್ಸವ ಆಚರಿಸಲಾಯಿತು.
ಎಸ್ಪಿವೈಎಸ್ಎಸ್ ನಿಂದ ಯೋಧರಿಗೆ ಗೌರವ
ಕಾರ್ಗಿಲ್ ಯುದ್ಧದ 25 ನೇ ವಿಜಯೋತ್ಸವ ರಜತ ಸಂಭ್ರಮಾಚರಣೆ ಯನ್ನು ಎಸ್ಪಿವೈಎಸ್ಎಸ್ ವತಿಯಿಂದ ಶ್ರೀ ಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ ಮಠದಲ್ಲಿ ಅಗ್ನಿಹೋತ್ರ ಹೋಮದೊಂದಿಗೆ ಆಚರಿಸಲಾಯಿತು.
ದಾವಣಗೆರೆ ಲಯನ್ಸ್ ಕ್ಲಬ್ ವತಿಯಿಂದ ವೈದ್ಯರ ದಿನಾಚರಣೆ ಕಾರ್ಯಕ್ರಮವು ಲಯನ್ಸ್ ಭವನದಲ್ಲಿ ಇಂದು ಸಂಜೆ 7.45ಕ್ಕೆ ನಡೆಯಲಿದ್ದು, ಲಯನ್ಸ್ ಅಧ್ಯಕ್ಷ ಎಸ್.ಜಿ. ಉಳವಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ
ನಗರದಲ್ಲಿಂದು ಅಬ್ದುಲ್ ಕಲಾಂ ಸ್ಮರಣೆ
ಭಾರತೀಯ ಜನತಾ ಪಾರ್ಟಿ ಅಲ್ಪ ಸಂಖ್ಯಾತರ ಮೋರ್ಚಾದ ವತಿಯಿಂದ ನಗರದ ಸೀತಮ್ಮ ಬಾಲಕಿಯ ಶಾಲೆಯಲ್ಲಿ ರಾಷ್ಟ್ರಪತಿ ಡಾ. ಎಪಿಜೆ ಅಬ್ದುಲ್ ಕಲಾಂ ಅವರ 9ನೇ ಪುಣ್ಯತಿಥಿ ಅಂಗವಾಗಿ ಇಂದು ಬೆಳಿಗ್ಗೆ 10.30ಕ್ಕೆ ಸ್ಮರಣೆ ಕಾರ್ಯಕ್ರಮ ಹಮ್ಮಿಕೊಳ್ಳ ಲಾಗಿದೆ
ಇಂದು ಸಿಎಂ ಮಾಧ್ಯಮ ಸಲಹೆಗಾರರ ಪ್ರವಾಸ
ಮುಖ್ಯಮಂತ್ರಿಗಳ ಮಾಧ್ಯಮ ಸಲಹೆ ಗಾರ ಕೆ.ವಿ ಪ್ರಭಾಕರ್ ಅವರು ಶನಿವಾರ ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ.ಇಂದು ಸಂಜೆ 4ಕ್ಕೆ ಹರಿಹರಕ್ಕೆ ಆಗಮಿಸಿ, ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಆಯೋಜಿಸಿರುವ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ, ಸಂಜೆ 6ಕ್ಕೆ ಹುಬ್ಬಳ್ಳಿಗೆ ಪ್ರಯಾಣಿಸಲಿದ್ದಾರೆ.
ನಗರದಲ್ಲಿ ಜಿಲ್ಲಾ ಕಾಂಗ್ರೆಸ್ನಿಂದ ಕಾರ್ಗಿಲ್ ವಿಜಯೋತ್ಸವ ಆಚರಣೆ
25 ವರ್ಷದ ವಿಜಯೋತ್ಸವದ ಅಂಗವಾಗಿ ಭಾರತೀಯ ವೀರ ಯೋಧರಿಗೆ ನಗರದ ಹರಳೆಣ್ಣೆ ಕೊಟ್ರಬಸಪ್ಪ ವೃತ್ತದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ವೀರ ಯೋಧರಿಗೆ ಸೆಲ್ಯೂಟ್ ಸಲ್ಲಿಸಿ ನಾಗರಿಕರಿಗೆ ಸಿಹಿ ವಿತರಿಸಿ, ವಿಜಯೋತ್ಸವವನ್ನು ಆಚರಿಸಲಾಯಿತು.
ಹನುಮಸಾಗರ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾಗಿ ನಾಗರಾಜ್ ನಾಯ್ಕ್
ಹೊನ್ನಾಳಿ : ತಾಲ್ಲೂಕಿನ ಹನುಮಸಾಗರ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾಗಿ ನಾಗರಾಜ್ ನಾಯ್ಕ್ ಅವಿರೋಧವಾಗಿ ಆಯ್ಕೆಯಾಗಿರುವು ದಾಗಿ ಚುನಾವಣಾಧಿಕಾರಿಯಾಗಿದ್ದ ಸಾಮಾಜಿಕ ವಲಯ ಅರಣ್ಯ ಅಧಿಕಾರಿ ಡಿ.ಎಂ. ಷಣ್ಮುಖ ತಿಳಿಸಿದ್ದಾರೆ.
ತೊಟ್ಟಿಲು ತೂಗುವ ಕೈ ದೇಶ ಆಳ ಬಲ್ಲದು
ತೊಟ್ಟಿಲು ತೂಗುವ ಕೈಗೆ ದೇಶ ಆಳುವ ಶಕ್ತಿ ಇದೆ. ಆದ್ದರಿಂದ ಮಹಿಳೆ ತನ್ನ ಸ್ವತಂತ್ರದ ವಿಚಾರದಲ್ಲಿ ಕುಗ್ಗದೇ ಕಡ್ಡಾಯವಾಗಿ ಶಿಕ್ಷಣ ಪಡೆದರೆ ಮಹಿಳಾ ಸಬಲೀಕರಣ ಆಗಬಹುದು ಎಂದು ಸಾಹಿತಿ ಡಾ.ಕೆ. ಷರೀಫಾ ತಿಳಿಸಿದರು.
ಪಾರ್ಶ್ವವಾಯು ತಡೆಗಟ್ಟಲು ಮೆದುಳಿನ ಆರೋಗ್ಯ ಕಾಪಾಡಿಕೊಳ್ಳಬೇಕು
ನರ ರೋಗಗಳಿಗೆ ಸಂಬಂಧಿಸಿದಂತೆ ಪಾರ್ಶ್ವವಾಯು ಕಾಯಿಲೆಯಿಂದ ಅನೇಕ ಜನರು ಸಾವನ್ನಪ್ಪಿದ್ದಾರೆ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗದೇ ಅನೇಕ ಜನರು ಜೀವನವಿಡಿ ಅಂಗವೈಕಲ್ಯತೆ ಹೊಂದಿದ್ದಾರೆ, ಇದನ್ನು ತಡೆಯಲು ಮೆದುಳಿನ ಆರೋಗ್ಯ ಕಾಪಾಡಿಕೊಳ್ಳುವುದು ಬಹಳ ಮುಖ್ಯವಾಗಿದೆ
ಮಲೇಬೆನ್ನೂರಿನಲ್ಲಿ ಅಡುಗೆ ಕೋಣೆ ಕುಸಿತ
ಮಲೇಬೆನ್ನೂರು : 7ನೇ ವಾರ್ಡ್ ನಲ್ಲಿರುವ ಸರ್ಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆಯ ಶೌಚಾಲಯ ಹಾಗೂ ಅಡುಗೆ ಕೋಣೆಯು ಸತತ ಮಳೆಯಿಂದಾಗಿ ಬುಧವಾರ ಬೆಳಗಿನ ಜಾವ ಭಾಗಶಃ ಕುಸಿದು ಬಿದ್ದಿದೆ
ಕಕ್ಕರಗೊಳ್ಳ ಗ್ರಾ.ಪಂ ಅಧ್ಯಕ್ಷರಾಗಿ ಸಿ. ಆಶಾ ಸಿದ್ದೇಶ್
ತಾಲ್ಲೂಕು ಕಕ್ಕರಗೊಳ್ಳ ಗ್ರಾಮ ಪಂಚಾಯತಿ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಶ್ರೀಮತಿ ಸಿ. ಆಶಾ ಸಿದ್ದೇಶ್ ಕೆ.ಆರ್. ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನಾಳಿನ ಛಲವಾದಿ ಸಮಾಜದ ಕಾರ್ಯಕ್ರಮಕ್ಕೆ ಸಚಿವ ಡಾ. ಮಹಾದೇವಪ್ಪ
ಜಿಲ್ಲಾ ಛಲವಾದಿ ಮಹಾಸಭಾದ ವತಿಯಿಂದ 2023-24 ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ. 75 ರಷ್ಟು ಹಾಗೂ ದ್ವಿತೀಯ ಪಿಯುಸಿಯಲ್ಲಿ ಶೇ. 80 ರಷ್ಟು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ನಾಡಿದ್ದು ದಿನಾಂಕ 28 ರಂದು ಬೆಳಿಗ್ಗೆ 11 ಕ್ಕೆ ಬಿಐಇಟಿ ಕಾಲೇಜಿನ ಆವರಣದಲ್ಲಿರುವ ಎಸ್.ಎಸ್. ಮಲ್ಲಿಕಾರ್ಜುನ್ ಸಾಂಸ್ಕೃತಿಕ ಭವನದಲ್ಲಿ ನಡೆಸಲಾಗುವುದು
ಜಿಲ್ಲಾ ಜನೌಷಧಿ ಕೇಂದ್ರಗಳ ಮಾಲೀಕರ ಸಂಘದ ಅಧ್ಯಕ್ಷರಾಗಿ ಟಿ.ಎಸ್.ಕಿರಣ್
ಪ್ರಧಾನ ಮಂತ್ರಿ ಭಾರತೀಯ ಜನ ಔಷಧಿ ಕೇಂದ್ರಗಳ ಮಾಲೀಕರ ಜಿಲ್ಲಾ ಸಂಘದ ಅಧ್ಯಕ್ಷರಾಗಿ ಟಿ. ಎಸ್. ಕಿರಣ್, ಉಪಾಧ್ಯಕ್ಷರಾಗಿ ವಾಸಿಕ್, ಕಾರ್ಯದರ್ಶಿ ಆಗಿ ಮಹೇಶ್ವರಪ್ಪ, ಸಹ ಕಾರ್ಯದರ್ಶಿ ರುದ್ರೇಶ್, ಖಜಾಂಚಿಯಾಗಿ ಗಣೇಶ್ ಇವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಮಲೇಬೆನ್ನೂರು : ಕಣ್ಣಿನ ಕಾಯಿಲೆಗಳ ಬಗ್ಗೆ ನಿರ್ಲಕ್ಷ್ಯ ಬೇಡ
ಮಲೇಬೆನ್ನೂರು : ಕಣ್ಣುಗಳು ನಮ್ಮ ದೇಹದ ಪ್ರಮುಖ ಇಂದ್ರಿಯಗಳಾಗಿವೆ. ಕಣ್ಣುಗಳಲ್ಲಿನ ಸಮಸ್ಯೆಯು ವ್ಯಕ್ತಿಗಳ ಆರೋಗ್ಯದ ಮೇಲೂ ಸಹ ಪರಿಣಾಮ ಬೀರಬಹುದು. ಕಣ್ಣಿನ ಗಾಯ, ಕಣ್ಣಿನ ಕಾಯಿಲೆಗಳ ಬಗ್ಗೆ ನಿರ್ಲಕ್ಷ್ಯ ವಹಿಸದೇ ತಕ್ಷಣಕ್ಕೆ ನೇತ್ರ ತಜ್ಞರನ್ನು ಸಂಪರ್ಕಿಸಬೇಕೆಂದು ವೈದ್ಯಾಧಿಕಾರಿ ಡಾ. ಜಿ.ಎಸ್.ಅರ್ಚಿತ್ ತಿಳಿಸಿದರು.
ಗ್ರಾ. ಪಂ.ನಲ್ಲೇ ಮಲಗಿ ವಿನೂತನ ಪ್ರತಿಭಟನೆ
ಕೊಟ್ಟೂರು : ತಾಲ್ಲೂಕಿನ ಉಜ್ಜಿನಿ ಗ್ರಾಮ ಪಂಚಾಯತಿಯ ಬೈರದೇವರ ಗುಡ್ಡದ ಸದಸ್ಯ ಚಂದ್ರಪ್ಪ ಪೈಪ್ಲೈನ್ ರಿಪೇರಿ ಮಾಡಿದ ಕೆಲಸಕ್ಕೆ ಹಣ ಕೊಡದೇ ಸತಾಯಿಸುತ್ತಿರುವ ಪಿಡಿಒ ಜಯಮ್ಮನವರ ವಿರುದ್ಧ ಗ್ರಾಮ ಪಂಚಾಯತಿಯಲ್ಲೆ ಹಾಸಿಗೆ ಸಮೇತ ಮಲಗಿ ವಿನೂತನವಾಗಿ ಪ್ರತಿಭಟಿಸಿದ್ದಾರೆ.
ಪರಸ್ಪರರ ಧಾರ್ಮಿಕ ಕೇಂದ್ರಗಳ ಭೇಟಿಯಿಂದ ಸಾಮರಸ್ಯ, ಸ್ನೇಹ, ವಿಶ್ವಾಸ ಬೆಳೆಯಲು ಸಾಧ್ಯ
ಹರಿಹರ : ಜಮಾತೆ ಇಸ್ಲಾಂ ಹಿಂದ್ ಹರಿಹರ ಘಟಕದಿಂದ ಸ್ಥಳೀಯ ಪ್ರಶಾಂತ ನಗರದ ಮಸ್ಜಿದ್ - ಎ - ಅಲಿ ಮಸೀದಿಯಲ್ಲಿ ಇಂದು ಆಯೋಜಿಸಿದ್ದ ‘ನಮ್ಮೂರ ಮಸೀದಿ ನೋಡ ಬನ್ನಿ’ ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ ದೊರೆಯಿತು.
ಭದ್ರಾ ಅಚ್ಚುಕಟ್ಟಿನ 2024-25 ನೇ ಸಾಲಿನ ಮುಂಗಾರು ಬೆಳೆಗಳಿಗೆ ನೀರು ಹರಿಸುವ ಕುರಿತು ತೀರ್ಮಾನಿಸಲು ಭದ್ರಾ 85 ನೇ ನೀರಾವರಿ ಸಲಹಾ ಸಮಿತಿ ಸಭೆಯನ್ನು ಇದೇ ದಿನಾಂಕ 29 ರ ಸೋಮವಾರ ಬೆಳಗ್ಗೆ 11 ಗಂಟೆಗೆ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರ ಅಧ್ಯಕ್ಷತೆಯಲ್ಲಿ ಕರೆಯಲಾಗಿದೆ
ಟ್ರೇಡಿಂಗ್ ಲಾಭ ತೋರಿಸಿ 1.35 ಕೋಟಿ ರೂ. ವಂಚನೆ
ಷೇರು ಮಾರುಕಟ್ಟೆಯಲ್ಲಿ ಉತ್ತಮ ಲಾಭ ಮಾಡಬಹುದೆಂದು ನಂಬಿಸಿ ವ್ಯಕ್ತಿಯೊಬ್ಬರಿಗೆ ಆನ್ಲೈನ್ ಮೂಲಕ 1.35 ಕೋಟಿ ರೂ. ವಂಚಿಸಿದ ಘಟನೆ ನಗರದಲ್ಲಿ ನಡೆದಿದೆ.
ಭಗತ್ ಸಿಂಗ್ ನಗರದಲ್ಲಿ ವ್ಯಕ್ತಿಯ ಸುಲಿಗೆ, ಕೊಲೆಗೆ ಯತ್ನ
ಭಗತ್ ಸಿಂಗ್ ನಗರದ ಅಂಜುಮನ್ ಶಾಲೆ ಬಳಿ ಬುಧವಾರ ರಾತ್ರಿ 11.15ರ ವೇಳೆ ವ್ಯಕ್ತಿಯೊಬ್ಬರ ಸುಲಿಗೆ ನಡೆದಿದ್ದು, ತಲೆ ಮೇಲೆ ಕಲ್ಲು ಹಾಕಿ ಕೊಲೆಗೂ ಯತ್ನಿಸಲಾಗಿದೆ. ಈ ಕುರಿತು ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಜಿಲ್ಲೆಯಲ್ಲಿ ವಾಡಿಕೆಗಿಂತ 41 ಮಿ.ಮೀ. ಹೆಚ್ಚು ಮಳೆ
ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಪೂರ್ವ ಮುಂಗಾರು ಹಾಗೂ ಮುಂಗಾರಿ ನಲ್ಲಿ ವಾಡಿಕೆಗಿಂತ 41 ಮಿ.ಮೀ ಹೆಚ್ಚು ಮಳೆಯಾಗಿದೆ.
ಮದರ್ ಥೆರೆಸಾ, ಡಾ. ಬಿ.ಸಿ. ರಾಯ್ ಸೇವಾ ಪ್ರಶಸ್ತಿ ಪ್ರದಾನ
ಕರುಣಾ ಜೀವ ಕಲ್ಯಾಣ ಟ್ರಸ್ಟ್ನಿಂದ ನಗರದ ಮಹಿಳೆಯರು ಮತ್ತು ಮಕ್ಕಳ ಆಸ್ಪತ್ರೆ ವೈದ್ಯರು ಮತ್ತು ಸಿಬ್ಬಂದಿಗೆ ಈಚೆಗೆ ಮದರ್ ಥೆರೆಸಾ ಮತ್ತು ಡಾ. ಬಿ.ಸಿ. ರಾಯ್ ಸೇವಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ನಗರದಲ್ಲಿ ಈಚೆಗೆ ನಡೆದ ರಾಷ್ಟ್ರೀಯ ಮುಕ್ತ ಕರಾಟೆ ಚಾಂಪಿಯನ್ಶಿಪ್ ಸ್ಪರ್ಧೆಯಲ್ಲಿ ಇಲ್ಲಿನ ಚಾಣಕ್ಯ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿ.ಯು.ಸಿ. ವಿದ್ಯಾರ್ಥಿ ಸಾದತ್ ಮಹಮ್ಮದ್ ಅವರು ಕಾಟಾ ಮತ್ತು ಕುಮುಟೆ ಈ ಎರಡು ವಿಭಾಗದಲ್ಲಿ ಭಾಗವಹಿಸಿ ಬಂಗಾರದ ಪದಕ ಕೊರಳಿಗೇರಿಸಿಕೊಂಡಿದ್ದಾರೆ.
ಹರಿಹರ : 29 ರಂದು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಆಡಿ ಕೃತಿಕ ಪೂಜೆ
ಹರಿಹರ : ನಗರದ ಹೊಸಭರಂಪುರ ಬಡಾವಣೆಯ ನೂರ ಎಂಟು ಲಿಂಗೇಶ್ವರ ದೇವಸ್ಥಾನ ಹಿಂಬದಿಯಲ್ಲಿರುವ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಇದೇ ದಿನಾಂಕ 29 ರ ಸೋಮವಾರ ಶ್ರೀ ಸುಬ್ರಹ್ಮಣ್ಯ ಸ್ವಾಮಿಗೆ ಆಡಿ ಕೃತ್ತಿಕ ಪೂಜೆ ನಡೆಯಲಿದೆ.
ತೊಗರಿ ಬೆಳೆ ನಿರ್ವಹಣೆಗೆ ಬೇಸಾಯ ತಜ್ಞರ ಸಲಹೆ
ಜಿಲ್ಲೆಯಲ್ಲಿ ತೊಗರಿ ಬೆಳೆಯ ವಿಸ್ತರಣೆ ಮುಂಗಾರಿನಲ್ಲಿ ಹೆಚ್ಚಾಗಿದೆ. ತೊಗರಿ ಅಂತರ ಬೆಳೆಯಾಗಿ ಮೆಕ್ಕೆಜೋಳ, ಅಡಿಕೆ ಹಾಗೂ ಇತರೆ ಬೆಳೆಗಳಲ್ಲಿ ಬೆಳೆಯಲಾಗಿದೆ ಈ ನಿಟ್ಟಿನಲ್ಲಿ ತೊಗರಿಯ ಇಳುವರಿ ಹೆಚ್ಚಿಸಲು ಸೂಕ್ತ ಕ್ರಮ ಕೈಗೊಳ್ಳುವುದು ಅತ್ಯಗತ್ಯ
ಹರಿಹರ : ನಗರದ ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ದಾರ್ಶನಿಕ ಹಡಪದ ಅಪ್ಪಣ್ಣ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು.
ಮಲೇಬೆನ್ನೂರಿನಲ್ಲಿ ಹಸು ಕಳ್ಳನ ಬಂಧನ
ಮಲೇಬೆನ್ನೂರು : ಹಸು ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಮಲೇಬೆನ್ನೂರು ಪೊಲೀಸರು ಬಂಧಿಸಿದ್ದಾರೆ.
ನಾಳೆ ಆರೂಢ ದಾಸೋಹಿ ಮಾಗನೂರು ಬಸಪ್ಪ ಪ್ರಶಸ್ತಿ ಪ್ರದಾನ
ಶರಣ ಮಾಗನೂರು ಬಸಪ್ಪ ಪ್ರಶಸ್ತಿ ಪ್ರದಾನ ಸಮಾರಂಭವನ್ನು ನಾಡಿದ್ದು ದಿನಾಂಕ 27ರಂದು ಬೀದರ್ನ ಡಾ.ಚನ್ನಬಸವ ಪಟ್ಟದೇವರ ರಂಗ ಮಂದಿರ ಹಾಗೂ ಬರುವ ಆಗಸ್ಟ್ 3ರಂದು ದಾವಣಗೆರೆ ಕುವೆಂಪು ಕನ್ನಡ ಭವನದಲ್ಲಿ ಹಮ್ಮಿ ಕೊಳ್ಳಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ ಹೇಳಿದರು.
ನಗರದಲ್ಲಿ ನಾಳೆ ಸಂಗೀತ, ನೃತ್ಯ, ತಾಳವಾದ್ಯದ ಲಿಖಿತ ಪರೀಕ್ಷೆ
ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ 2024ನೇ ಸಾಲಿನ ವಿಶೇಷ ಸಂಗೀತ, ನೃತ್ಯ ಹಾಗೂ ತಾಳವಾದ್ಯ ಲಿಖಿತ ಪರೀಕ್ಷೆಗಳು ನಾಡಿದ್ದು ದಿನಾಂಕ 27 ಮತ್ತು 28ರಂದು ನಡೆಯಲಿವೆ
ಸ್ನೇಹದಿಂದ ಸಂಸ್ಥೆಯ ವಾರ್ಷಿಕೋತ್ಸವ
ರಾಣೇಬೆನ್ನೂರು : ಇಲ್ಲಿನ ಶ್ರೀರಾಮ ನಗರದ ಸ್ನೇಹದೀಪ ಅಂಧ ಅಂಗವಿಕಲರ ಸಂಸ್ಥೆಯಲ್ಲಿ ಶನಿವಾರ ಸಂಸ್ಥೆಯ 8ನೇ ವರ್ಷದ ವಾರ್ಷಿಕೋತ್ಸವ ಸಮಾರಂಭವನ್ನು ಉಪಸಭಾಪತಿ ರುದ್ರಪ್ಪ ಲಮಾಣಿ ಉದ್ಘಾಟಿಸಿದರು.
ಶ್ರೀ ಗುರು ವಾದ್ಯ ವೃಂದದಿಂದ ಗಣೇಶ್ ಬಿಸಲೇರಿ ಅವರಿಗೆ ಸನ್ಮಾನ
ಚಿತ್ರದುರ್ಗ : ದಾವಣಗೆರೆಯ ಹಿರಿಯ ರಂಗಭೂಮಿ ಕಲಾವಿದ ಚಿಂದೋಡಿ ಶಂಭುಲಿಂಗಪ್ಪ ಅವರ ಶ್ರೀ ಗುರು ವಾದ್ಯ ವೃಂದದಿಂದ ಚಿತ್ರದುರ್ಗದ ತ.ರಾ.ಸು ರಂಗಮಂದಿರದಲ್ಲಿ ನಿನ್ನೆ ನಡೆದ ನಾಟಕೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ನಗರದ ಬಿ.ಕೆ. ಗಣೇಶ್ ಬಿಸಲೇರಿ ಅವರನ್ನು ಸನ್ಮಾನಿಸಲಾಯಿತು.
ಸ್ಥಳೀಯ ಪಿ.ಜೆ. ಬಡಾವಣೆಯ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಶ್ರೀ ಜಯತೀರ್ಥರ ಆರಾಧನೆ ಮಹೋತ್ಸವವು ಜರುಗಿತು.
ಕರ್ನಾಟಕ ಸಾಹಿತ್ಯ ಅಕಾಡೆಮಿ, ಜೆ.ಹೆಚ್. ಪಟೇಲ್ ಫೌಂಡೇಷನ್, ಕರುಣಾ ಜೀವ ಕಲ್ಯಾಣ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮವನ್ನು ಶಿರಮಗೊಂಡನ ಹಳ್ಳಿಯ ಅನ್ಮೋಲ್ ಪಬ್ಲಿಕ್ ಸ್ಕೂಲ್ ಅಂಡ್ ಕಾಲೇಜಿನಲ್ಲಿ ಇಂದು ಬೆಳಿಗ್ಗೆ 11 ಕ್ಕೆ ಏರ್ಪಡಿಸಲಾಗಿದೆ.
ಹದಗೆಟ್ಟ ನೈರ್ಮಲ್ಯ : ದುರಸ್ತಿಗೆ ಆಗ್ರಹ
ಪಿ.ಬಿ. ರಸ್ತೆಯ ಪೂಜಾ ಹೋಟೆಲ್ ಎದುರು, ಸೊಸೈಟಿ ಪೆಟ್ರೋಲ್ ಬಂಕ್ ಪಕ್ಕದಲ್ಲಿ ಇರುವ ಮಳಿಗೆಗಳ ಮುಂಭಾಗದ ಪಾರ್ಕಿಂಗ್ನಲ್ಲಿ ಮಳೆ ನೀರು ಹರಿಯದೇ ಕೆಸರು ಗದ್ದೆಯಂತಾಗಿದೆ.