SENSEX
NIFTY
GOLD
USD/INR

Weather

33    C
... ...View News by News Source

T20 World Cup: ಸೆಮೀಸ್‌ ತಲುಪಬಲ್ಲ 4 ತಂಡಗಳನ್ನು ಆರಿಸಿದ ಯುವರಾಜ್ ಸಿಂಗ್!

Yuvraj Singh Picks 4 Semifinalists: ವೆಸ್ಟ್ ಇಂಡೀಸ್ ಹಾಗೂ ಅಮೇರಿಕ ಜಂಟಿ ಆತಿಥ್ಯದಲ್ಲಿ ಜೂನ್ ಒಂದರಂದು ಆರಂಭವಾಗಲಿರುವ 2024ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸೆಮಿಫೈನಲ್ಸ್‌ ತಲುಪಬಲ್ಲ ನಾಲ್ಕು ತಂಡಗಳನ್ನು ಭಾರತ ತಂಡದ ಮಾಜಿ ಆಲ್‌ರೌಂಡರ್‌ ಹಾಗೂ ಟಿ20 ವಿಶ್ವಕಪ್‌ ರಾಯಬಾರಿ ಯುವರಾಜ್ ಸಿಂಗ್ ಆಯ್ಕೆ ಮಾಡಿದ್ದಾರೆ. ಆತಿಥೇಯ ಹಾಗೂ ಎರಡು ಬಾರಿ ಚಾಂಪಿಯನ್ ವೆಸ್ಟ್ ಇಂಡೀಸ್ ತಂಡವನ್ನು ಹೊರಗಿಟ್ಟು ಯುವಿ ಅಚ್ಚರಿ ಮೂಡಿಸಿದ್ದಾರೆ. 2007ರಲ್ಲಿ ಭಾರತ ಚೊಚ್ಚಲ ಟಿ20 ವಿಶ್ವಕಪ್‌ ಗೆಲುವಿನಲ್ಲಿ ಯುವರಾಜ್‌ ಸಿಂಗ್ ಪ್ರಮುಖ ಪಾತ್ರವನ್ನು ವಹಿಸಿ ಟೂರ್ನಿ ಶ್ರೇಷ್ಠ ಪ್ರಶಸ್ತಿಯನ್ನು ಪಡೆದಿದ್ದರು.

ವಿಜಯ ಕರ್ನಾಟಕ 27 Apr 2024 1:11 pm

ಹೋರಾಟದ ಮೂಲಕ ಕರ್ನಾಟಕಕ್ಕೆ ಬರ ಪರಿಹಾರದ ಹಣ ಸಿಕ್ಕಿದೆ: ಕೃಷ್ಣ ಬೈರೇಗೌಡ

ಕರ್ನಾಟಕಕ್ಕೆ ಹೋರಾಟ ಮೂಲಕ ಕೇಂದ್ರ ಸರ್ಕಾರದಿಂದ ಬರ ಪರಿಹಾರ ಹಣ ಸಿಕ್ಕಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಕೇಂದ್ರ ಸರ್ಕಾರ ಬರ ಪರಿಹಾರ ಬಿಡುಗಡೆ ಮಾಡಿರುವ ಬಗ್ಗೆ ಅಧಿಕೃತ ಮಾಹಿತಿ ಇಲ್ಲ ಎಂದ ಅವರು, ಪರಿಹಾರ ಬಂದ ಬಳಿಕ ಅದನ್ನು ರೈತರ ಖಾತೆಗೆ ಜಮೆ ಮಾಡಲಾಗುವುದು ಎಂದು ಹೇಳಿದರು. ನಾವು ಮನವಿ ಕೊಟ್ಟು ಏಳು ತಿಂಗಳು ಆಗಿತ್ತು. ಕರ್ನಾಟಕ ಮನವಿಗೆ ಗೌರವ ಕೊಡಲಿಲ್ಲ. ಅದಕ್ಕಾಗಿ ನಾವು ಸುಪ್ರೀಂ ಕೋರ್ಟ್ ಮೆಟ್ಟಿಲು ಹತ್ತಿದ್ದೆವು ಎಂದು ಇದೇ ಸಂದರ್ಭದಲ್ಲಿ ಹೇಳಿದರು.

ವಿಜಯ ಕರ್ನಾಟಕ 27 Apr 2024 1:01 pm

ನಿಮಗೆ ಮುಸ್ಲಿಂ ವೋಟ್‌ ಬೇಕು, ಆದರೆ, ಮುಸ್ಲಿಂ ಅಭ್ಯರ್ಥಿಗಳು ಬೇಡ : ಕಾಂಗ್ರೆಸ್‌ ಹೈಕಮಾಂಡ್‌ ವಿರುದ್ಧ 'ಕೈ' ನಾಯಕನ ಬೇಸರ

Muslim Congress Leader On High Command : ಮಹಾರಾಷ್ಟ್ರ ಕಾಂಗ್ರೆಸ್‌ನಲ್ಲಿ ಆಂತರಿಕ ಕಿತ್ತಾಟ ಜೋರಾಗಿದೆ. ಯಾವುದೇ ಕ್ಷೇತ್ರದಲ್ಲಿ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್‌ ಕೊಡದ ಕಾರಣ ಮುಸ್ಲಿಂ ನಾಯಕರು ಅಸಮಾಧಾನ ಹೊರಹಾಕಿದ್ದು, ಕಾಂಗ್ರೆಸ್‌ಗೆ ಮುಸ್ಲಿಂ ಮತಗಳು ಬೇಕು. ಆದರೆ, ಮುಸ್ಲಿಂ ಅಭ್ಯರ್ಥಿಗಳು ಬೇಡ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ಪತ್ರ ಬರೆದಿದ್ದಾರೆ. ಮಹಾರಾಷ್ಟ್ರದ ಹಿರಿಯ ಮುಸ್ಲಿಂ ನಾಯಕ ಮೊಹಮದ್‌ ಆರೀಫ್‌ ಖಾನ್‌ ಪಕ್ಷದ ನಾಯಕರ ವಿರುದ್ಧ ಅಸಮಾಧಾನ ಹೊರಹಾಕಿದ್ದು, ಮಹಾರಾಷ್ಟ್ರ ಕಾಂಗ್ರೆಸ್‌ ಪ್ರಚಾರ ಸಮಿತಿಯಿಂದ ಹೊರಬಂದಿದ್ದಾರೆ. ನನಗೆ ಮುಸ್ಲಿಂ ನಾಯಕರು, ಸಂಘಟನೆಗಳು ಪ್ರಶ್ನೆ ಕೇಳುತ್ತಿದ್ದು, ಅವರಿಗೆ ಉತ್ತರಿಸಲು ಆಗುತ್ತಿಲ್ಲ ಎಂದು ಖರ್ಗೆಯವರ ಮುಂದೆ ಬೇಸರ ಹೊರ ಹಾಕಿದ್ದಾರೆ.

ವಿಜಯ ಕರ್ನಾಟಕ 27 Apr 2024 12:56 pm

ವಿಜಯನಗರ: ಪ್ರಯಾಣದುದ್ದಕ್ಕೂ ಕಣ್ಮನ ಸೆಳೆಯುತ್ತದೆ ಬೇವಿನ ಮರಗಳು

ವಿಜಯನಗರ ಜಿಲ್ಲೆಯ ಹರಪನಹಳ್ಳಿ ಉಚ್ಚಂಗಿದುರ್ಗ ಮುಖ್ಯ ರಸ್ತೆಯ ನಂದಿ ಕಂಬದಿಂದ ಅಣಜಿಗೆರೆ ಮಾರ್ಗದಲ್ಲಿ ನೀವು ಪ್ರಯಾಣಿಸಿದರೆ ದಾರಿಯುದ್ದಕ್ಕೂ ಬೇವಿನ ಮರಗಳು ನೋಡುಗರ ಕಣ್ಮನ ಸೆಳೆಯುತ್ತಿವೆ. ಸಾಮಾಜಿಕ ವಲಯ ಅರಣ್ಯ ಇಲಾಖೆಯಿಂದ ರಸ್ತೆಯ ಎರಡೂ ಬದಿಗಳಲ್ಲಿ 3 ರಿಂದ 04 ವರ್ಷದ ಹಿಂದೆ ಬೇವಿನ ಸಸಿ ನಾಟಿ ಮಾಡಿದ್ದರು. ಬೇವಿನ ಮರಗಳು ಹುಲುಸಾಗಿ ಬೆಳೆದು ನಿಂತಿದ್ದು ಪರಿಸರ ಪ್ರಿಯರ ಗಮನ ಸೆಳೆಯುತ್ತಿವೆ.

ವಿಜಯ ಕರ್ನಾಟಕ 27 Apr 2024 12:55 pm

ತೆಲಂಗಾಣ ಚುನಾವಣಾ ಪ್ರಚಾರ ರೇವಂತ್ ರೆಡ್ಡಿ ಬಿಗಿ ಹಿಡಿತದಲ್ಲಿ : ಕಾಂಗ್ರೆಸ್ ಹೈಕಮಾಂಡಿಗೆ ಬಿಸಿತುಪ್ಪ ?

Revanth Reddy Not Following Congress Culture : ಕಾಂಗ್ರೆಸ್ ಚುನಾವಣಾ ಪ್ರಚಾರ ಎಲ್ಲಾ ಕಡೆ ಒಂದು, ತೆಲಂಗಾಣದಲ್ಲಿ ಮಾತ್ರ ಇನ್ನೊಂದು ಎನ್ನುವ ರೀತಿಯಲ್ಲಿ ಮುಖ್ಯಮಂತ್ರಿ ರೇವಂತ್ ರೆಡ್ಡಿ ಚುನಾವಣಾ ಪ್ರಚಾರ ತನ್ನ ಸುತ್ತಲೇ ಸುತ್ತುವಂತೆ ನೋಡಿಕೊಳ್ಳುತ್ತಿದ್ದಾರೆ. ಇದು ಪಕ್ಷದ ನಾಯಕರ ಮುನಿಸಿಗೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.

ವಿಜಯ ಕರ್ನಾಟಕ 27 Apr 2024 12:25 pm

ಚಾಕೊಲೆಟ್‌ ದರ ಭಾರೀ ಏರಿಕೆ ಸಾಧ್ಯತೆ, ಆಫ್ರಿಕಾದಲ್ಲಿ ಕೊಕ್ಕೊ ಬೆಳೆ ಭೀಕರ ರೋಗ, ಜಾಗತಿಕ ಪೂರೈಕೆ ಏರುಪೇರು

ಜಾಗತಿಕ ಮಟ್ಟದಲ್ಲಿ ಕೊಕ್ಕೊ ಕೊರತೆ ತೀವ್ರವಾಗಿದೆ. ವಿಶ್ವದ ಶೇಕಡಾ 50ರಷ್ಟು ಚಾಕೊಲೆಟ್‌ ತಯಾರಿಕೆಗೆ ಕೊಕ್ಕೊ ಪೂರೈಸುವ ಪಶ್ಚಿಮ ಆಫ್ರಿಕಾದಲ್ಲಿ ಮೀಲಿಬಗ್ಸ್‌ ಕೀಟದಿಂದ ಹಬ್ಬುವ ರೋಗ ಗಿಡಗಳನ್ನು ಆಪೋಷನ ತೆಗೆದುಕೊಳ್ಳುತ್ತಿದೆ. ಇದರಿಂದ ಕೊಕ್ಕೊ ಪೂರೈಕೆ ದೊಡ್ಡ ಮಟ್ಟದಲ್ಲಿ ಇಳಿಕೆಯಾಗಿದ್ದು, ಚಾಕೋಲೆಟ್‌ ಉತ್ಪಾದನೆ ಕುಗ್ಗಿ ಬೆಲೆ ಏರುವ ಸಾಧ್ಯತೆ ನಿಚ್ಚಳವಾಗಿದೆ.

ವಿಜಯ ಕರ್ನಾಟಕ 27 Apr 2024 12:22 pm

ಎರಡನೇ ಬಾರಿಗೆ ವಿಜಯನಗರ ಜಿಲ್ಲೆಗೆ ಭೇಟಿ; ಬಳ್ಳಾರಿ, ಕೊಪ್ಪಳಕ್ಕೆ ಮೋದಿ ಟಾನಿಕ್‌?

ಎರಡು ಲೋಕಸಭೆ ಕ್ಷೇತ್ರಗಳನ್ನು ಕೇಂದ್ರೀಕರಿಸಿಕೊಂಡು ವಿಜಯನಗರದಲ್ಲಿ ನಡೆಯುತ್ತಿರುವ ವಿಜಯ ಸಂಕಲ್ಪ ಸಮಾವೇಶದಲ್ಲಿ ದೊಡ್ಡ ಸಂಖ್ಯೆಯಲ್ಲಿ ಜನರನ್ನು ಸೇರಿಸಲು ಕಾರ್ಯಕರ್ತರ ಸಭೆಗಳನ್ನು ನಡೆಸಿ ಸಿದ್ಧತೆ ನಡೆಸಲಾಗುತ್ತಿದೆ. ಬೃಹತ್‌ ವೇದಿಕೆ ಸಿದ್ಧತಾ ಕಾರ್ಯವೂ ಭರದಿಂದ ಸಾಗಿದೆ. 1.5 ಲಕ್ಷಕ್ಕೂ ಹೆಚ್ಚಿನ ಜನರು ನಿರೀಕ್ಷೆ ಇದೆ. ಆಸನಗಳ ವ್ಯವಸ್ಥೆ ಮಾಡಿದ್ದು, ವೇದಿಕೆ ಬಳಿಗೆ ಸಾರ್ವಜನಿಕರ ಪ್ರವೇಶಕ್ಕೆ ಒಂದೇ ಮಾರ್ಗದ ವ್ಯವಸ್ಥೆ ಮಾಡಲಾಗಿದೆ.

ವಿಜಯ ಕರ್ನಾಟಕ 27 Apr 2024 12:00 pm

ಕರ್ನಾಟಕದ ಹೋರಾಟಕ್ಕೆ ಜಯ: ಕೇಂದ್ರದಿಂದ ಕೊನೆಗೂ ಬರ ಪರಿಹಾರ ಬಿಡುಗಡೆ; ರಾಜ್ಯ ಕೇಳಿದ್ದೆಷ್ಟು, ಬಂದಿದ್ದೆಷ್ಟು?

Drought Relief Fund Release To Karnataka : ಕರ್ನಾಟಕ ಸರ್ಕಾರದ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದ್ದು, ಕೇಂದ್ರ ಸರ್ಕಾರ ಕೊನೆಗೂ ಕರ್ನಾಟಕಕ್ಕೆ ಬರ ಪರಿಹಾರವನ್ನು ಬಿಡುಗಡೆ ಮಾಡಿದೆ. 3,454 ಕೋಟಿ ರೂ. ಬರ ಪರಿಹಾರವನ್ನು ಕೇಂದ್ರ ಬಿಡುಗಡೆ ಮಾಡಿದ್ದು, ನೆರೆ ಪರಿಹಾರ ಎಂದು ತಮಿಳುನಾಡಿಗೆ 275 ಕೋಟಿ ರೂ. ಅನ್ನು ಬಿಡುಗಡೆ ಮಾಡಿದೆ. ಸೆಪ್ಟೆಂಬರ್‌ನಲ್ಲಿಯೇ ಬರ ಪರಿಹಾರಕ್ಕಾಗಿ ರಾಜ್ಯ ಸರ್ಕಾರ ಬೇಡಿಕೆ ಇಟ್ಟಿತ್ತು. ಆದರೆ, ಮಾರ್ಚ್‌ ಬಂದರೂ ಬರ ಪರಿಹಾರ ಬಿಡುಗಡೆಯಾಗದ್ದಕ್ಕೆ ಕರ್ನಾಟಕ ಸುಪ್ರೀಂ ಕೋರ್ಟ್‌ ಮೊರೆ ಹೋಗಿತ್ತು. ಸುಪ್ರೀಂ ಸೂಚನೆಯ ಬಳಿಕೆ ಬರ ಪರಿಹಾರ ಬಿಡುಗಡೆಯಾಗಿದೆ.

ವಿಜಯ ಕರ್ನಾಟಕ 27 Apr 2024 11:44 am

ಬಿಸಿಲಿನ ‘ತಾಪ’ ತರಕಾರಿಗಳ ಬೆಲೆ ಏರಿಕೆಗೆ ‘ಶಾಪ’

ಬಿಸಿಲಿನ ಝಳದಿಂದ ಹಲವು ತರಕಾರಿ ಬೆಳೆಗಳಲ್ಲಿ ಹೂವು ಉದುರಿ, ಇಳುವರಿಗೆ ಸ್ವಲ್ಪ ಹೊಡೆತ ಬಿದ್ದಿದೆ. ಎಲ್ಲೆಡೆ ಶುಭ ಕಾರ್ಯಕ್ರಮಗಳು ನಡೆಯುತ್ತಿವೆ. ಜಾತ್ರೆ, ಊರ ಹಬ್ಬಗಳು ನಡೆಯುತ್ತಿರುವುದರಿಂದ ಅನ್ನ ದಾಸೋಹಗಳು ಹೆಚ್ಚಾಗಿವೆ. ಹೀಗಾಗಿ ಬೇಡಿಕೆ ಹೆಚ್ಚಾಗಿದೆ, ಪೂರೈಕೆಯಲ್ಲಿ ಇಳಿಕೆಯಾಗಿದೆ. ಮುಂದಿನ ದಿನಗಳಲ್ಲಿ ತರಕಾರಿ ಬೆಲೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ವಿಜಯ ಕರ್ನಾಟಕ 27 Apr 2024 11:25 am

ಮುಖ್ಯಮಂತ್ರಿ ಆದ ದಿನವೇ 20 ಸಾವಿರ ಬುಲ್ಡೋಜರ್‌ ಖರೀದಿಸುತ್ತೇನೆ ಎಂದ ಬಸನಗೌಡ ಪಾಟೀಲ್‌ ಯತ್ನಾಳ್‌! ಯಾಕಂತೆ ಗೊತ್ತಾ?

Basanagouda Patil Yatnal On Bulldozers : ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರು ಮತ್ತೆ ಸಿಎಂ ಆಗುವ ಕನಸನ್ನು ಬಿಚ್ಚಿಟ್ಟಿದ್ದಾರೆ. ಅದಲ್ಲದೇ ನಾನು ರಾಜ್ಯದ ಸಿಎಂ ಆದ ದಿನವೇ 20 ಸಾವಿರ ಬುಲ್ಡೋಜರ್‌ ಖರೀದಿಗೆ ಅನುಮತಿ ಕೊಡುವೆ ಎಂದಿದ್ದು, ಅವುಗಳಿಂದ ಭಯೋತ್ಪಾದಕರು ಹಾಗೂ ಮತಾಂಧ ಸಂಘಟನೆಯವರ ಮನೆಗಳನ್ನು ಕೆಡವುತ್ತೇವೆ ಎಂದು ಹೇಳಿದ್ದಾರೆ. ಕುಂದಗೋಳದಲ್ಲಿ ಪ್ರಹ್ಲಾದ್‌ ಜೋಶಿ ಪರ ಪ್ರಚಾರ ಮಾಡುವ ಸಂದರ್ಭದಲ್ಲಿ ಬಸನಗೌಡ ಪಾಟೀಲ್‌ ಯತ್ನಾಳ್‌ ಈ ರೀತಿ ಘೋಷಿಸಿದ್ದಾರೆ.

ವಿಜಯ ಕರ್ನಾಟಕ 27 Apr 2024 10:50 am

’ ನೋಡುತ್ತಿರಿ.. ದೇವೇಗೌಡ್ರ ಮುಂದಿನ ಟಾರ್ಗೆಟ್ ಬಿಜೆಪಿ, ಆಗಲೇ ಶುರು ಹಚ್ಚಿಕೊಂಡಿದ್ದಾರೆ ’

HD Kumaraswamy's Next Target Is BJP : ಜೆಡಿಎಸ್ ಪಾರ್ಟಿಯವರು ಮಾಡಿಕೊಂಡು ಬರುತ್ತಿರುವ ರಾಜಕೀಯವನ್ನು ರಾಜ್ಯದ ಜನತೆ ನೋಡಿಕೊಂಡು ಬರುತ್ತಿದ್ದಾರೆ. ಮೊದಲ ಹಂತದ ಚುನಾವಣೆ ಮುಗಿದಿದೆ, ಇನ್ನು ಬಿಜೆಪಿಯವರನ್ನು ಟಾರ್ಗೆಟ್ ಮಾಡಲು ಶುರು ಮಾಡುತ್ತಾರೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ವಿಜಯ ಕರ್ನಾಟಕ 27 Apr 2024 10:37 am

ಮಂಡ್ಯದತ್ತ ಸುಳಿಯದ ಮಾಜಿ ಸಂಸದೆ: ಈ ಬಾರಿಯೂ ವೋಟ್ ಹಾಕದ ನಟಿ ರಮ್ಯಾ

Actress Ramya Absent from Voting: ಚುನಾವಣೆಯಲ್ಲಿ ಸೋತ ಬಳಿಕ ಮಂಡ್ಯದಿಂದ ದೂರವೇ ಉಳಿದಿರುವ ನಟಿ ರಮ್ಯಾ, ಈ ಬಾರಿ ಕೂಡ ಮತದಾರರಾಗಿ ತಮ್ಮ ಕರ್ತವ್ಯ ನಿಭಾಯಿಸುವಲ್ಲಿ ವಿಫಲರಾಗಿದ್ದಾರೆ. ಮಂಡ್ಯದ ಮತದಾರರ ಪಟ್ಟಿಯಲ್ಲಿ ಹೆಸರಿದ್ದರೂ ಅವರು ಕಳೆದ ಕೆಲವು ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳಲ್ಲಿ ಮತದಾನ ಮಾಡಿಲ್ಲ. ಪ್ರಸಕ್ತ ಚುನಾವಣೆಯಲ್ಲಿ ಕೂಡ ಅವರು ಮತದಾನ ಮಾಡುವಲ್ಲಿ ವಿಫಲರಾಗಿದ್ದಾರೆ.

ವಿಜಯ ಕರ್ನಾಟಕ 27 Apr 2024 10:25 am

ಮೊದಲ ಹಂತದ ಚುನಾವಣೆ ಮುಕ್ತಾಯ; ಇನ್ನು ಉತ್ತರಕ್ಕೆ ಸ್ಟಾರ್‌ ಪ್ರಚಾರಕರ ಎಂಟ್ರಿ

ಈಗಾಗಲೇ ಚುನಾವಣೆ ನಡೆದಿರುವ ದಕ್ಷಿಣ ಕರ್ನಾಟಕದ ಜಿಲ್ಲೆಗಳಲ್ಲಿ ಸಿನಿಮಾ ಸ್ಟಾರ್‌ಗಳು ಕೂಡ ಅಭ್ಯರ್ಥಿಗಳ ಪ್ರಚಾರ ಮಾಡಿದ್ದಾರೆ. ದಕ್ಷಿಣದ ಚುನಾವಣೆ ಮುಗಿದ ಬಳಿಕ ಉತ್ತರದಲ್ಲಿ ಪ್ರಚಾರಕ್ಕೆ ಅವರು ಬರಬಹುದು ಎಂಬ ಕುತೂಹಲ ಜನರಲ್ಲಿ ಮನೆ ಮಾಡಿದೆ. ನಟ ಶಿವರಾಜ ಕುಮಾರ ಅವರು ಪತ್ನಿ ಪರ ಶಿವಮೊಗ್ಗದಲ್ಲಿ ನಡೆಸಿದ ಮತ ಪ್ರಚಾರವನ್ನು ಅಲ್ಲಿನ ಜನ ಸಂಭ್ರಮಿಸಿದ್ದಾರೆ. ಅದೇ ಭಾಗ್ಯ ಉತ್ತರದ ಜನರಿಗೂ ಸಿಗಬಹುದೇ ಎನ್ನುವ ಆಸೆಯ ಚರ್ಚೆ ನಡೆದಿದೆ. ಅದರ ಜತೆಗೆ ಮತ್ತೆ ಯಾವ ಸ್ಟಾರ್‌ ಪ್ರಚಾರಕರು ಬರಬಹುದು ಎನ್ನುವ ಕುತೂಹಲವೂ ಮನೆ ಮಾಡಿದೆ.

ವಿಜಯ ಕರ್ನಾಟಕ 27 Apr 2024 10:14 am

ಏಪ್ರಿಲ್‌ 30 ರಿಂದ ರಾಜ್ಯದಲ್ಲಿ ಮತ್ತೆ ಮಳೆ ಆರಂಭ; ಶುರುವಾಯ್ತಾ ಪೂರ್ವ ಮುಂಗಾರು? ಐಎಂಡಿ ಮುನ್ಸೂಚನೆ ಏನು?

Karnataka Weather Forecast : ಏಪ್ರಿಲ್‌ ಅಂತ್ಯ ಬಂದರೂ ರಾಜ್ಯದಲ್ಲಿ ನಿರೀಕ್ಷಿತ ಮಳೆ ಸುರಿದಿಲ್ಲ. ಕೆಲ ದಿನಗಳ ಹಿಂದೆ ಕರ್ನಾಟಕದ ಕೆಲವೆಡೆ ಮಳೆ ಬಂದಿರುವುದು ಬಿಟ್ಟರೇ ಆಮೇಲೆ ವರುಣ ನಾಪತ್ತೆಯಾಗಿದ್ದಾನೆ. ಇದರ ನಡುವೆ ಮುಂದಿನ ತಿಂಗಳು ಆರಂಭದಿಂದಲೇ ರಾಜ್ಯದಲ್ಲಿ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಐಎಂಡಿ ಹೇಳಿದೆ. ಏಪ್ರಿಲ್‌ 30 ರಿಂದ ನಾಲ್ಕು ದಿನ ರಾಜ್ಯದ ಹಲವೆಡೆ ಮಳೆಯಾಗಲಿದೆ ಎಂದು ಐಎಂಡಿ ಮುನ್ಸೂಚನೆಯನ್ನು ನೀಡಿದೆ. ಅದಲ್ಲದೇ ಮುಂದಿನ ಐದು ದಿನಗಳ ಕಾಲ ಉಷ್ಣ ಅಲೆಯ ಮುನ್ಸೂಚನೆಯನ್ನು ಕೂಡ ಐಎಂಡಿ ನೀಡಿದೆ.

ವಿಜಯ ಕರ್ನಾಟಕ 27 Apr 2024 10:11 am

ಭದ್ರಾವತಿ ಮುಖಂಡರಿಗೆ ಮತ ಸವಾಲು ; ಕಾಂಗ್ರೆಸ್‌-ಜೆಡಿಎಸ್‌ಗೆ ಅಗ್ನಿಪರೀಕ್ಷೆ

ಶಿವಮೊಗ್ಗವನ್ನೇ ತನ್ನ ಶಕ್ತಿ ಕೇಂದ್ರವನ್ನಾಗಿ ಮಾಡಿಕೊಂಡಿರುವ ಬಿಜೆಪಿಗೆ ಭದ್ರಾವತಿಯಲ್ಲಿ ಇದೂವರೆಗೆ ತನ್ನ ಬೇರುಗಳನ್ನು ಚಾಚಲು ಸಾಧ್ಯವಾಗಿಲ್ಲ. ವಿಧಾನಸಭೆ ಚುನಾವಣೆಗಳಲ್ಲಿ ಠೇವಣಿ ಉಳಿಸಿಕೊಂಡಿದ್ದೆ ಕಡಿಮೆ. 2023 ರಲ್ಲಿ ಗಳಿಸಿದ 21,279 ಮತಗಳೇ ಇದುವರೆಗಿನ ದಾಖಲೆಯಾಗಿದೆ. ಹೀಗಿದ್ದರೂ ಲೋಕಸಭೆ ಚುನಾವಣೆಯ ಲ್ಲಿಮಾತ್ರ ಬಿಜೆಪಿ ಅತಿಹೆಚ್ಚು ಮತಗಳನ್ನು ಪಡೆದುಕೊಳ್ಳುತ್ತದೆ. ಯಾವುದೇ ಪಕ್ಷ ಆಡಳಿತದಲ್ಲಿರಲಿ, ಯಾರೇ ಶಾಸಕರಾದರೂ ಇದು ಬದಲಾಗುವುದಿಲ್ಲ.

ವಿಜಯ ಕರ್ನಾಟಕ 27 Apr 2024 9:34 am

Electric Scooter: ಇದು ಪವರ್ ಫುಲ್ ಎಲೆಕ್ಟ್ರಿಕ್ ಸ್ಕೂಟರ್, 35 ನಿಮಿಷ ಚಾರ್ಜ್ ಹಾಕಿದ್ರೆ 130 km ಮೈಲೇಜ್ ಕೊಡುವುದು ಗ್ಯಾರಂಟಿ! ಬೆಲೆ ಕಡಿಮೆ

2023ರ ಡಿಸೆಂಬರ್ ತಿಂಗಳಿನಲ್ಲಿ ನಡೆದ ಎಲೆಕ್ಟ್ರಿಕ್ ಮೊಬಿಲಿಟಿ ಶೋ ದಲ್ಲಿ Lambretta ಕಂಪನಿಯು ತನ್ನ ನೂತನ ಆವಿಷ್ಕಾರದ ಈ ಎಲೆಕ್ಟ್ರಿಕ್ ಸ್ಕೂಟರ್ (Electric Scooter)ಅನ್ನು ಪರಿಚಯಿಸಿದ್ದು ಇದರ ಕ್ಲಾಸಿಕ್ ಲುಕ್(Classic look) ಹಾಗೂ ವೈಶಿಷ್ಟ್ಯತೆಗಳ ಕುರಿತು ಮಾಹಿತಿ ತಿಳಿದಂತಹ ಗ್ರಾಹಕರು, 45 ವರ್ಷ ಹಳೆಯ ಸಿಗ್ನೇಚರ್ ಡಿಸೈನನ್ನು ಎಲೆಕ್ಟ್ರಿಕ್ ವಿಭಾಗದಲ್ಲಿ ಮತ್ತೊಮ್ಮೆ ಖರೀದಿಸಲು ಕುತೂಹಲರಾಗಿದ್ದರು. ಅದರಂತೆ ಕಂಪನಿ ಮತ್ತಷ್ಟು ಆಧುನಿಕ ತಂತ್ರಜ್ಞಾನವನ್ನು ಬಳಸಿ ಸ್ಕೂಟರನ್ನು ತಯಾರು ಮಾಡಿ ಎಲೆಕ್ಟ್ರ(Electra) ಎಂಬ ಹೆಸರಿನಿಂದ ಮಾರುಕಟ್ಟೆಗೆ ಪರಿಚಯಿಸಲು ಸಿದ್ಧಗೊಂಡಿದೆ. The post Electric Scooter: ಇದು ಪವರ್ ಫುಲ್ ಎಲೆಕ್ಟ್ರಿಕ್ ಸ್ಕೂಟರ್, 35 ನಿಮಿಷ ಚಾರ್ಜ್ ಹಾಕಿದ್ರೆ 130 km ಮೈಲೇಜ್ ಕೊಡುವುದು ಗ್ಯಾರಂಟಿ! ಬೆಲೆ ಕಡಿಮೆ appeared first on Karnataka Times .

ಕರ್ನಾಟಕ ಟೈಮ್ಸ್ 27 Apr 2024 8:33 am

ಬಸ್‌ ಅಪಘಾತ: ವಿಮೆ ನೀಡಲು ಕಂಪೆನಿಗೆ ಶಿವಮೊಗ್ಗ ಜಿಲ್ಲಾ ಗ್ರಾಹಕರ ಆಯೋಗ ಆದೇಶ

Shivamogga District Consumer disputes redressal commission: ಬಸ್ ಮಾಲೀಕರು ಮೃತಪಟ್ಟ 14 ದಿನಗಳ ಒಳಗೆ ಪಾಲಿಸಿಯನ್ನು ತಮ್ಮ ಹೆಸರಿಗೆ ವರ್ಗಾವಣೆ ಮಾಡಿಕೊಳ್ಳದ ಕಾರಣಕ್ಕೆ ಅಪಘಾತದಲ್ಲಿ ಹಾನಿಗೊಂಡ ಬಸ್‌ಗೆ ವಿಮೆ ನೀಡಲು ಸಾಧ್ಯವಿಲ್ಲ ಎಂದು ಪಟ್ಟು ಹಿಡಿದಿದ್ದ ವಿಮಾ ಕಂಪೆನಿಗೆ ಬಡ್ಡಿ ಸಹಿತ ವಿಮೆ ಮೊತ್ತ ಪಾವತಿಸುವಂತೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಸೂಚನೆ ನೀಡಿದೆ

ವಿಜಯ ಕರ್ನಾಟಕ 27 Apr 2024 8:28 am

T20 Worldcup: ದುಬೆ, ಪಾಂಡ್ಯ, ಜಡೇಜಾ ಅಲ್ಲ T20 ವಿಶ್ವಕಪ್ ಗೆ ಸಿಕ್ಸರ್ ಸಿದ್ದು ಆಯ್ಕೆ ಮಾಡಿದ್ದು ಈ ಆಲ್ರೌಂಡರ್!

ಇದೇ ಜೂನ್ ತಿಂಗಳಿಂದ ಪ್ರಾರಂಭವಾಗಲಿರುವಂತಹ ಟಿ ಟ್ವೆಂಟಿ ವಿಶ್ವಕಪ್ (T20 Worldcup). ಇನ್ನು ಈ ಬಾರಿಯ t20 ವಿಶ್ವಕಪ್ ನಲ್ಲಿ ಭಾರತೀಯ ಕ್ರಿಕೆಟ್ ತಂಡದಲ್ಲಿ ಯಾರೆಲ್ಲಾ ಆಡಳಿದ್ದಾರೆ ಅನ್ನುವಂತಹ ಲೆಕ್ಕಾಚಾರಗಳು ಹಾಗೂ ಊಹಾಪೋಹಗಳ ಆಟ ಈಗಾಗಲೇ ಪ್ರಾರಂಭವಾಗಿದೆ. ಅದರಲ್ಲಿ ವಿಶೇಷವಾಗಿ ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರರು ಈ ರೀತಿಯ ಊಹಾಪೋಹಗಳನ್ನು ಪ್ರಾರಂಭ ಮಾಡುವುದಕ್ಕೆ ಶುರು ಮಾಡಿದ್ದಾರೆ. ಅದರಲ್ಲೂ ವಿಶೇಷವಾಗಿ ಇವತ್ತಿನ ಈ ಲೇಖನದಲ್ಲಿ ಮಾತನಾಡೋಕೆ ಹೊರಟಿರುವುದು ನವಜೋತ್ ಸಿಂಗ್ ಸಿದ್ದು ಅವರ ಬಗ್ಗೆ. The post T20 Worldcup: ದುಬೆ, ಪಾಂಡ್ಯ, ಜಡೇಜಾ ಅಲ್ಲ T20 ವಿಶ್ವಕಪ್ ಗೆ ಸಿಕ್ಸರ್ ಸಿದ್ದು ಆಯ್ಕೆ ಮಾಡಿದ್ದು ಈ ಆಲ್ರೌಂಡರ್! appeared first on Karnataka Times .

ಕರ್ನಾಟಕ ಟೈಮ್ಸ್ 27 Apr 2024 8:22 am

ತುಮಕೂರು: ಬೆಟ್ಟದ ತಪ್ಪಲು, ಬತ್ತಿದ ಕೆರೆಗಳು ಮಣ್ಣು ಮಾಫಿಯಾಕ್ಕೆ ಆಹುತಿ!

ಮಳೆಯಿಲ್ಲದೆ ಬಿಸಿಲಿನ ಝಳದಿಂದ ಬಹುತೇಕ ಕೆರೆಕಟ್ಟೆಗಳು ಬತ್ತಿವೆ. ಇದುವರೆಗೆ ಬೆಟ್ಟ ಗುಡ್ಡಗಳಲ್ಲಿ ಮಣ್ಣು ದರೋಡೆ ಮಾಡುತ್ತಿದ್ದವರು ಸುಲಭದಲ್ಲಿ ಸಿಗುವ ಕೆರೆ ಅಂಗಳಕ್ಕೆ ಲಗ್ಗೆ ಇಟ್ಟಿದ್ದಾರೆ. ಕುಣಿಗಲ್‌ನ ಚಿಕ್ಕಕೆರೆ, ದೀಪಾಂಬುದಿ ಕೆರೆ, ಎಲೆಯೂರು ಕೆರೆ ಸೇರಿದಂತೆ ನಾನಾ ಕೆರೆಗಳಲ್ಲಿ ನೀರಿಲ್ಲ. ಈ ಭಾಗಗಳಲ್ಲಿ ಹೊಳೆತ್ತುವ ನೆಪದಲ್ಲಿ ಫಲವತ್ತಾದ ಮಣ್ಣು ಕಳ್ಳತನ ಮಾಡಲಾಗುತ್ತಿದೆ. ರೈತರೇ ಹೂಳೆತ್ತಿ ತೋಟಕ್ಕೆ ಹಾಕಿಕೊಳ್ಳುತ್ತಿದ್ದಾರೆಂದು, ರೈತರ ಹೆಸರಲ್ಲಿ ತೋಟಕ್ಕೆಂದು ಟ್ರ್ಯಾಕ್ಟರ್‌ ಮೂಲಕ ಕೆರೆ ಮಣ್ಣು ಸಾಗಾಟ ನಡೆಯುತ್ತಿದೆ.

ವಿಜಯ ಕರ್ನಾಟಕ 27 Apr 2024 8:08 am

ತಾಳಿ ಕಟ್ಟಿಸಿಕೊಳ್ಳಲು ನಿರಾಕರಿಸಿದ ವಧು: ಕಡಬದಲ್ಲಿ ಮದುವೆ ಮಂಟಪದಲ್ಲೇ ಮುರಿದು ಬಿದ್ದ ಮದುವೆ

Bride Refuses to Marry in Wedding Hall: ಮದುವೆ ಮಂಟಪಕ್ಕೆ ಬಂದು ಹಾರ ಬದಲಿಸುವವರೆಗೂ ಸುಮ್ಮನಿದ್ದು, ಇನ್ನೇನು ತಾಳಿ ಕಟ್ಟಬೇಕು ಎನ್ನುವ ವೇಳೆ ವಧು ಮದುವೆ ನಿರಾಕರಿಸಿದ ಸಿನಿಮೀಯ ಘಟನೆ ದಕ್ಷಿಣ ಕನ್ನಡದ ಕಡಬ ತಾಲೂಕಿನಲ್ಲಿ ಶುಕ್ರವಾರ ನಡೆದಿದೆ. ಇದರಿಂದ ಸಂಭ್ರಮ- ಸಡಗರದಿಂದ ಕೂಡಿದ್ದ ಮದುವೆ ಮಂಟಪದಲ್ಲಿ ಕೋಲಾಹಲ ಉಂಟಾಗಿದೆ.

ವಿಜಯ ಕರ್ನಾಟಕ 27 Apr 2024 8:06 am

Bank Loan: ಬ್ಯಾಂಕ್ ಸಾಲ ಕಟ್ಟಲು ಆಗದೇ ಇರುವವರಿಗೆ ಬೆಳ್ಳಂಬೆಳಿಗ್ಗೆ ಸಿಹಿಸುದ್ದಿ! ಬದಲಾಯ್ತು ಈ ನಿಯಮ

ಲೋನ್ (Bank Loan) ಅನ್ನು ತೀರಿಸಲು ಸಾಧ್ಯವಾಗಿದೆ ಇರುವ ಸ್ಥಿತಿಯಲ್ಲಿ ಡಿಫಾಲ್ಟರ್ ಆಗುವ ಪರಿಸ್ಥಿತಿಯನ್ನು ಎದುರಿಸುವವರಿಗೆ ಬಾಂಬೆ ಹೈಕೋರ್ಟ್ ಇತ್ತೀಚಿಗಷ್ಟೇ ನೀಡಿರುವಂತಹ ತೀರ್ಪು ಸಾಕಷ್ಟು ಮಹತ್ವವಾಗಿ ಕಾಣಿಸಿಕೊಳ್ಳಲಿದೆ. ಇನ್ಮುಂದೆ ಈ ರೀತಿ ಸಾಲ ಕಟ್ಟದೆ ಹೋದಲ್ಲಿ ಸರ್ಕಾರಿ ಬ್ಯಾಂಕುಗಳು ಜಾರಿಗೆ ತರುವಂತಹ ಲುಕ್ ಔಟ್ ನೋಟಿಸ್ ಅನ್ನು ಇನ್ಮುಂದೆ ರದ್ದುಗೊಳಿಸಲಾಗುತ್ತದೆ. ಬನ್ನಿ ಇದರ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳೋಣ. The post Bank Loan: ಬ್ಯಾಂಕ್ ಸಾಲ ಕಟ್ಟಲು ಆಗದೇ ಇರುವವರಿಗೆ ಬೆಳ್ಳಂಬೆಳಿಗ್ಗೆ ಸಿಹಿಸುದ್ದಿ! ಬದಲಾಯ್ತು ಈ ನಿಯಮ appeared first on Karnataka Times .

ಕರ್ನಾಟಕ ಟೈಮ್ಸ್ 27 Apr 2024 8:03 am

ಪುತ್ತೂರು: ಕೆಎಸ್ಸಾರ್ಟಿಸಿ ಬಸ್- ರಿಕ್ಷಾ ಢಿಕ್ಕಿ: ಓರ್ವ ಮೃತ್ಯು

ಪುತ್ತೂರು: ಲೋಕಸಭಾ ಚುನಾವಣಾ ಕರ್ತವ್ಯ ಮುಗಿಸಿ ಮಡಿಕೇರಿಯಿಂದ ಪುತ್ತೂರಿಗೆ ಹಿಂದಿರುಗುತ್ತಿದ್ದ ಕೆಎಸ್ಸಾರ್ಟಿಸಿ ಬಸ್ ಮತ್ತು ಆಟೋ ರಿಕ್ಷಾ ನಡುವೆ ಢಿಕ್ಕಿ ಸಂಭವಿಸಿ ರಿಕ್ಷಾ ಚಾಲಕ ಮೃತಪಟ್ಟ ಘಟನೆ ಶನಿವಾರ ತಡರಾತ್ರಿ ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮುಕ್ರಂಪಾಡಿ ಬಳಿ  ನಡೆದಿದೆ. ಮೃತ ಆಟೋ ಚಾಲಕನನ್ನು ಜೈಸನ್ (30)ಎಂದು ಗುರುತಿಸಲಾಗಿದೆ. ಪುತ್ತೂರಿಗೆ ಬರುತ್ತಿದ್ದ ಬಸ್ ಮತ್ತು ವಿರುದ್ಧ ದಿಕ್ಕಿನಿಂದ ಚಲಿಸುತ್ತಿದ್ದ ರಿಕ್ಷಾ ನಡುವೆ ನಸುಕಿನ ಜಾವ ಸುಮಾರು 2 ಗಂಟೆಗೆ ಢಿಕ್ಕಿ ಸಂಭವಿಸಿದೆ ಎನ್ನಲಾಗಿದೆ. ಅಪಘಾತದ ತೀವ್ರತೆಗೆ ರಿಕ್ಷಾ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಚಾಲಕ ಜೈಸನ್ ರಿಕ್ಷಾದ ಒಳಗೆ ಸಿಲುಕಿ ಹಾಕಿಕೊಂಡಿದ್ದರು. ಬಳಿಕ ಪುತ್ತೂರು ಅಗ್ನಿಶಾಮಕ ದಳದವರು ಸ್ಥಳಕ್ಕೆ ಆಗಮಿಸಿ ಜೈಸನ್ ಅವರನ್ನು ಹೊರತೆಗೆದಿದ್ದಾರೆ. ಈ ವೇಳೆಗಾಗಲೇ ಜೈಸನ್ ಮೃತಪಟ್ಟಿದ್ದರು ಎಂದು ತಿಳಿದು ಬಂದಿದೆ.

ವಾರ್ತಾ ಭಾರತಿ 27 Apr 2024 8:01 am

ಚಿಕ್ಕಬಳ್ಳಾಪುರದಲ್ಲಿ ಕೊನೆ ಕ್ಷಣದ ಕರಸತ್ತಿನಲ್ಲಿ ಬದಲಾಯಿತಾ ಟ್ರೆಂಡ್‌?

ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರದಲ್ಲಿ ಇಂಥದೊಂದು ಟ್ರೆಂಡ್‌ ಬಗ್ಗೆ ಮತದಾನದ ದಿನ ಭಾರಿ ಚರ್ಚೆಗೆ ಗ್ರಾಸವಾಯಿತು. ಕ್ಷೇತ್ರದಲ್ಲಿಬಿಜೆಪಿ-ಜೆಡಿಎಸ್‌ ಮೈತ್ರಿ ಹಾಗೂ ಕಾಂಗ್ರೆಸ್‌ ನಡುವೆ ನೇರ ಪೈಪೋಟಿ ಇತ್ತು. ಯಾರೂ ಬೇಕಾದರೂ ಗೆಲ್ಲುವ ವಾತಾವರಣವಿದೆ ಎಂದೇ ಭಾವಿಸಲಾಗಿತ್ತು. ಆದರೆ ಗುರುವಾರ ರಾತ್ರಿ ನಡೆದ ಕೆಲವು ಬೆಳವಣಿಗೆಗಳು ನಾನಾ ತಿರುವುಗಳಿಗೆ ಕಾರಣವಾಯಿತು. ಕೆಲವರ ಮೌನ, ಮತ್ತೊಬ್ಬರ ಅಬ್ಬರ ಬೇರೆಯದ್ದೇ ಲೆಕ್ಕಾಚಾರ ಹಾಕುವಂತಿತ್ತು.

ವಿಜಯ ಕರ್ನಾಟಕ 27 Apr 2024 7:17 am

ಲೋಕಸಭೆಗೆ 2ನೇ ಹಂತದ ಚುನಾವಣೆ ದೇಶಾದ್ಯಂತ ಶೇ 61ರಷ್ಟು ಮತದಾನ

Lok Sabha Elections 2024: ಲೋಕಸಭೆ ಚುನಾವಣೆಯ 'ಸಪ್ತಪದಿ'ಯಲ್ಲಿ ದೇಶ ಎರಡನೇ ಹೆಜ್ಜೆಯನ್ನು ಸಾಂಗವಾಗಿ ಇರಿಸಿದೆ. ಕರ್ನಾಟಕ ಸೇರಿದಂತೆ 13 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿನ 88 ಲೋಕಸಭೆ ಕ್ಷೇತ್ರಗಳಿಗೆ ಶುಕ್ರವಾರ ಮತದಾನ ನಡೆದಿದೆ. ಒಟ್ಟಾರೆ ಸುಮಾರು ಶೇ 61ರಷ್ಟು ಮತದಾನ ದಾಖಲಾಗಿದೆ. ಚುನಾವಣಾ ಆಯೋಗಕ್ಕೆ ಸ್ಪಷ್ಟ ಹಾಗೂ ಅಂತಿಮ ಚಿತ್ರಣ ಲಭಿಸುವಾಗ ಈ ಪ್ರಮಾಣದಲ್ಲಿ ಕೊಂಚ ಬದಲಾವಣೆ ಸಾಧ್ಯತೆ ಇದೆ.

ವಿಜಯ ಕರ್ನಾಟಕ 27 Apr 2024 5:02 am

ಪಿಯುಸಿ ಮರುಮೌಲ್ಯಮಾಪನ - ತುಮಕೂರಿನ ಗ್ಯಾಸ್ ಸಿಲಿಂಡರ್‌ ವಿತರಕನ ಮಗಳು ರಾಜ್ಯಕ್ಕೆ 3ನೇ ರ‍್ಯಾಂಕ್‌

ಕರ್ನಾಟಕ ಪಿಯುಸಿ ಫಲಿತಾಂಶ ಈಗಾಗಲೇ ಪ್ರಕಟವಾಗಿದ್ದು, ಇದೀಗ ಉತ್ತರ ಪತ್ರಿಕೆಗಳ ಮರುಮೌಲ್ಯಮಾಪನದ ಫಲಿತಾಂಶವೂ ಹೊರಬಿದ್ದಿದೆ. ಅದರಲ್ಲಿ ತುಮಕೂರಿನ ವಿದ್ಯಾವಾಹಿನಿ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿಯಾದ ಪವಿತ್ರಾ ಜಿ.ಬಿ. ಅವರು ಮೊದಲಿಗಿಂತ 4 ಅಂಕಗಳನ್ನು ಹೆಚ್ಚು ಗಳಿಸುವ ಮೂಲಕ 595 ಅಂಕಗಳನ್ನು ಗಳಿಸಿ ರಾಜ್ಯಕ್ಕೆ 3ನೇ ರ‍್ಯಾಂಕ್ ಗಳಿಸಿದ್ದಾರೆ. ಈ ಮೊದಲು ಪಿಯುಸಿ ಫಲಿತಾಂಶ ಬಂದಿದ್ದಾಗ ಅವರು 591 ಅಂಕ ಗಳಿಸಿದ್ದರು.

ವಿಜಯ ಕರ್ನಾಟಕ 27 Apr 2024 1:51 am

ಮತಗಟ್ಟೆಯ ಫ್ಲೈಯಿಂಗ್ ಸ್ಕ್ವಾರ್ಡ್ ಗಳಿಂದ ಶೋಭಾ ಕರಂದ್ಲಾಜೆ ವಿರುದ್ಧ ಪ್ರಕರಣ

ಬೆಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಶೋಭಾ ಕರಂದ್ಲಾಜೆ ಅವರು, ಏ. 26ರಂದು ನಡೆದ ಲೋಕಸಭಾ ಚುನಾವಣೆಯ ಮತದಾನದ ಸಂದರ್ಭದಲ್ಲಿ ಮತಗಟ್ಟೆಯ ಆವರಣದಲ್ಲೇ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ್ದರು. ಆ ಹಿನ್ನೆಲೆಯಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಗಳು ಶೋಭಾ ಕರಂದ್ಲಾಜೆ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಆರ್‌ಎಂವಿ ಕ್ಲಬ್‌ ಸರಕಾರಿ ಶಾಲೆಯ ಬೂತ್‌ನಲ್ಲಿ ಮತ ಚಲಾಯಿಸಿ ಹೊರಬಂದ ಕೂಡಲೇ ತಮ್ಮನ್ನು ಎದುರುಗೊಂಡ ಮಾಧ್ಯಮ ಪ್ರತಿನಿಧಿಗಳಿಗೆ ಸಂದರ್ಶನ ನೀಡಿದ್ದರು.

ವಿಜಯ ಕರ್ನಾಟಕ 27 Apr 2024 1:09 am

45 ಎಸೆತಗಳಲ್ಲಿ ಶತಕ ಬಾರಿಸಿ ದಾಖಲೆ ಬರೆದ ಜಾನಿ ಬೈರ್‌ಸ್ಟೋವ್‌!

Jonny Bairstow's Hundred vs KKR in IPL 2024: ಹದಿನೇಳನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟಿ20 ಕ್ರಿಕೆಟ್‌ ಟೂರ್ನಿಯಲ್ಲಿ ರನ್ ಹೊಳೆ ಹರಿಯುವುದು ಮುಂದುವರಿದಿದೆ. ಶುಕ್ರವಾರ ನಡೆದ ಐಪಿಎಲ್‌ 2024 ಟೂರ್ನಿಯ 42ನೇ ಲೀಗ್ ಪಂದ್ಯದಲ್ಲಿ ಹಲವು ದಾಖಲೆಗಳು ನುಚ್ಚು ನೂರಾಗಿದೆ. ಆತಿಥೇಯ ಕೋಲ್ಕತಾ ನೈಟ್‌ ರೈಡರ್ಸ್‌ ಎದುರು ದಾಖಲೆಯ 262 ರನ್‌ಗಳ ಗುರಿ ಮೆಟ್ಟಿ ನಿಲ್ಲಲು ಪಂಜಾಬ್‌ ಕಿಂಗ್ಸ್ ತಂಡಕ್ಕೆ ನೆರವಾದ ಅನುಭವಿ ಬಲಗೈ ಆರಂಭಿಕ ಬ್ಯಾಟರ್‌ ಜಾಣಿ ಬೈರ್‌ ಸ್ಟೋವ್ ಕೇವಲ 45 ಎಸೆತಗಳಲ್ಲಿ ಮನಮೋಹಕ ಶತಕ ಬಾರಿಸಿದರು.

ವಿಜಯ ಕರ್ನಾಟಕ 27 Apr 2024 12:28 am

ಬಳ್ಳಾರಿಯಲ್ಲಿ ರಾಹುಲ್ ಸಮಾವೇಶಕ್ಕೆ ಜನ ಸೇರಿಸಲು ‘ಕೈ’ ನಾಯಕರ ಹರಸಾಹಸ! ರಾಹುಲ್ ಗೆ ಸ್ವಾಗತ ಭಾಷಣವೂ ಇಲ್ಲ!

2024ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಏ. 26ರಂದು ಬಳ್ಳಾರಿಯಲ್ಲಿ ಆಯೋಜಿಸಲಾಗಿದ್ದ ಕಾಂಗ್ರೆಸ್ ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಆ ಸಂದರ್ಭದಲ್ಲಿ ಸಮಾರಂಭಕ್ಕೆ ಜನರ ಕೊರತೆ ಎದ್ದು ಕಾಣುತ್ತಿತ್ತು. ಜನರನ್ನು ಸೇರಿಸಲು ಕಾಂಗ್ರೆಸ್ ನಾಯಕರು ಹರಸಾಹಸ ಪಟ್ಟರು. ಖುದ್ದು ಸಚಿವ ನಾಗೇಂದ್ರ ಅವರೇ ಜನರಿಗೆ, ವಿವಿಐಪಿ ಹಾಗೂ ಸಾಮಾನ್ಯ ಜನರ ನಡುವೆ ಹಾಕಿದ್ದ ಗೇಟ್ ಅನ್ನು ಮುರಿದು ಮುಂದೆ ಬಂದು ಕೂರುವಂತೆ ಸೂಚಿಸಿದರು. ಲಾರಿಗಳಲ್ಲಿ ಅಕ್ಕಪಕ್ಕದ ಜಿಲ್ಲೆಗಳಿಂದ ಕಾರ್ಯಕರ್ತರನ್ನು ಕರೆತರಲಾಗಿದ್ದರೂ ಜನರ ಕೊರತೆ ಕಂಡುಬಂತು.

ವಿಜಯ ಕರ್ನಾಟಕ 26 Apr 2024 11:52 pm

ರಸೆಲ್‌ ಅಲ್ಲ - ಗೂಳಿಯಂತ ಬಲಿಷ್ಠ ಕೆಕೆಆರ್ ಬ್ಯಾಟರ್‌ ಹೆಸರಿಸಿದ ರವಿ ಶಾಸ್ತ್ರಿ!

Ravi Shastri on Rinku Singh: ಹಲವು ವರ್ಷಗಳ ಕಾಲ ಟೀಮ್ ಇಂಡಿಯಾಗೆ ಕೋಚಿಂಗ್‌ ಮಾಡಿ ಯಶಸ್ಸಿನ ಹಾದಿಯಲ್ಲಿ ಸಾಗುವಂತೆ ಮಾಡಿದ ಟೀಮ್ ಇಂಡಿಯಾ ಮಾಜಿ ಆಲ್ರೌಂಡರ್‌ ರವಿ ಶಾಸ್ತ್ರಿ ಇದೀಗ ತಮ್ಮ ನೆಚ್ಚಿನ ಕಾಮೆಂಟರಿ ಕೆಲಸಕ್ಕೆ ಹಿಂದಿರುಗಿದ್ದಾರೆ. ಹದಿನೇಳನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ ಟೂರ್ನಿಯಲ್ಲಿ ರವಿ ಶಾಸ್ತ್ರಿ ವೀಕ್ಷಕ ವಿವರಣೆ ಕೆಲಸ ನಿಭಾಯಿಸುತ್ತಿದ್ದು, ಈ ಸಂದರ್ಭದಲ್ಲಿ ತಮ್ಮ ಹಲವು ನೆನಪುಗಳನ್ನು ಹಂಚಿಕೊಂಡಿದ್ದಾರೆ. ಕೋಲ್ಕತಾ ನೈಟ್‌ ರೈಡರ್ಸ್‌ ತಂಡದ ಸ್ಟಾರ್‌ ಬ್ಯಾಟರ್‌ ರಿಂಕು ಸಿಂಗ್‌ ಅವರನ್ನು ಭೇಟಿಯಾದ ಮೊದಲ ಅನುಭವ ಹಂಚಿಕೊಂಡಿದ್ದಾರೆ.

ವಿಜಯ ಕರ್ನಾಟಕ 26 Apr 2024 11:34 pm

ಡೆಲ್ಲಿ ವಿರುದ್ಧದ ಸೋಲು ಖುಷಿ ಕೊಟ್ಟಿದೆ - ಶುಭಮನ್ ಗಿಲ್ ಅಚ್ಚರಿಯ ಹೇಳಿಕೆ!

Delhi Capitals vs Gujarat Titans Highlights: 2022ರ ಚಾಂಪಿಯನ್ಸ್‌ ಗುಜರಾತ್ ಟೈಟನ್ಸ್‌ ತಂಡ 2024ರ ಸಾಲಿನ ಇಂಡಿಯನ್ ಪ್ರೀಮಿಯರ್‌ ಲೀಗ್‌ ಸ್ಥಿರ ಪ್ರದರ್ಶನ ನೀಡುವಲ್ಲಿ ಎಡವುತ್ತಿದೆ. ಯುವ ನಾಯಕ ಶುಭಮನ್ ಗಿಲ್ ಸಾರಥ್ಯದಲ್ಲಿ ಗುಜರಾತ್‌ ಟೈಟನ್ಸ್‌ ಈವರೆಗೆ ಆಡಿರುವ 9 ಪಂದ್ಯಗಳಲ್ಲಿ 4 ಗೆಲುವು ಮತ್ತು 5 ಸೋಲಿನೊಂದಿಗೆ ಅಂಕಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದೆ. ಅದರಲ್ಲೂ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಹೈ ಸ್ಕೋರಿಂಗ್‌ ಮತ್ತು ರೋಚಕ ಚೇಸಿಂಗ್ ಪಂದ್ಯದಲ್ಲಿ ಟೈಟನ್ಸ್‌ ಕೇವಲ 4 ರನ್‌ಗಳ ಸೋಲುಂಡಿತು. ಆದರೆ, ಈ ಸೋಲು ಖುಷಿ ನೀಡಿದೆ ಎಂಬ ಅಚ್ಚರಿಯ ಹೇಳಿಕೆಯನ್ನು ಟೈಟನ್ಸ್‌ ನಾಯಕ ಶುಭಮನ್ ಗಿಲ್ ನೀಡಿದ್ದಾರೆ.

ವಿಜಯ ಕರ್ನಾಟಕ 26 Apr 2024 10:31 pm

ಲೋಕಸಭಾ ಚುನಾವಣೆ: ಕರ್ನಾಟಕದ ಮೊದಲ ಹಂತದ 14 ಕ್ಷೇತ್ರಗಳಲ್ಲಿ ಶೇ 69.23 ರಷ್ಟು ಮತದಾನ; ಯಾವ ಕ್ಷೇತ್ರದಲ್ಲಿ ಎಷ್ಟು?

Karnataka 14 Constituencies Final Voting Percentage: ಲೋಕಸಭಾ ಚುನಾವನೆ ಕರ್ನಾಟಕದಲ್ಲಿ ಮೊದಲ ಹಂತದ ಮತದಾನ ಪೂರ್ಣಗೊಂಡಿದೆ. ಒಟ್ಟಾರೆ ಶೇ 69 ರಷ್ಟು ಮತದಾನವಾಗಿದೆ. ಮಂಡ್ಯ ಜನ ಅತಿ ಹೆಚ್ಚು ಮತದಾನ ಮಾಡಿದ್ದು, ಬೆಂಗಳೂರು ಕೇಂದ್ರದ ಜನ ಅತಿ ಕಡಿಮೆ ಮತದಾನ ಮಾಡಿದ್ದಾರೆ. ಯಾವ ಕ್ಷೇತ್ರಗಳಲ್ಲಿ ಎಷ್ಟು ಮತದಾನವಾಗಿದೆ? ಇಲ್ಲಿದೆ ಮಾಹಿತಿ.

ವಿಜಯ ಕರ್ನಾಟಕ 26 Apr 2024 9:46 pm

ಇಸ್ರೇಲ್ ವಿರುದ್ಧ ಪ್ರತಿಭಟನೆ - ಅಮೆರಿಕದ ಪ್ರಿನ್ಸ್ ಟನ್ ವಿವಿಯಲ್ಲಿನ ಇಬ್ಬರು ಭಾರತೀಯ ವಿದ್ಯಾರ್ಥಿಗಳ ಬಂಧನ

ಅಮೆರಿಕದ ನ್ಯೂಜೆರ್ಸಿಯಲ್ಲಿರುವ ಪ್ರಿನ್ಸ್ ಟನ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ಅಚಿಂತ್ಯ ಶಿವಲಿಂಗನ್ ಹಾಗೂ ಹಸನ್ ಸಯ್ಯೀದ್ ಎಂಬ ಭಾರತೀಯ ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈ ಇಬ್ಬರೂ ವಿದ್ಯಾರ್ಥಿಗಳು, ವಿಶ್ವವಿದ್ಯಾಲಯದ ಕ್ಯಾಂಪಸ್ಸಿನಲ್ಲಿ ಕೆಲವು ದಿನಗಳಿಂದ ನಡೆಯುತ್ತಿದ್ದ ಇಸ್ರೇಲ್ ವಿರುದ್ಧದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಆ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿದೆಯಲ್ಲದೆ, ಅವರನ್ನು ಕ್ಯಾಂಪಸ್ಸಿನಿಂದ ನಿಷೇಧಿಸಲಾಗಿದೆ ಎಂದು ವಿವಿ ವಕ್ತಾರರು ತಿಳಿಸಿದ್ದಾರೆ.

ವಿಜಯ ಕರ್ನಾಟಕ 26 Apr 2024 9:35 pm

ರೋಹಿತ್‌, ಕೊಹ್ಲಿಯ ಟಿ20ಐ ನಿವೃತ್ತಿ ಬಗ್ಗೆ ಮಹತ್ವದ ಹೇಳಿಕೆ ನೀಡಿದ ಯುವರಾಜ್ ಸಿಂಗ್‌!

Yuvraj Singh on Rohit Sharma-Virat Kohli's T20 Future: ಪ್ರಸ್ತುತ ನಡೆಯುತ್ತಿರುವ 2024ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟೂರ್ನಿಯಲ್ಲಿ ಅತ್ಯುತ್ತಮ ಲಯದಲ್ಲಿರುವ ವಿರಾಟ್‌ ಕೊಹ್ಲಿ ಹಾಗೂ ರೋಹಿತ್‌ ಶರ್ಮಾ ಅವರನ್ನು ಭಾರತ ತಂಡದ ಮಾಜಿ ಆಲ್‌ರೌಂಡರ್‌ ಯುವರಾಜ್‌ ಸಿಂಗ್‌ ಮುಕ್ತಕಂಠದಿಂದ ಗುಣಗಾಣ ಮಾಡಿದ್ದಾರೆ. ಈ ಇಬ್ಬರೂ ಟಿ20 ವಿಶ್ವಕಪ್‌ ಟೂರ್ನಿಯನ್ನು ಆಡಬೇಕು ಹಾಗೂ ಇವರು ಇಷ್ಟಬಂದ ವೇಳೆ ಟಿ20 ಕ್ರಿಕೆಟ್‌ಗೆ ನಿವೃತ್ತಿ ಪಡೆಯಬೇಕೆಂದು ಯುವರಾಜ್‌ ಸಿಂಗ್‌ ಹೇಳಿದ್ದಾರೆ.

ವಿಜಯ ಕರ್ನಾಟಕ 26 Apr 2024 9:19 pm

ಧರ್ಮದ ಆಧಾರದಲ್ಲಿ ಮತಯಾಚನೆ: ತೇಜಸ್ವಿ ಸೂರ್ಯ ವಿರುದ್ಧ ಪ್ರಕರಣ ದಾಖಲು

Election Commission Case Against Tejasvi Surya : ಧರ್ಮದ ಆಧಾರದಲ್ಲಿ ಮತಯಾಚನೆ ಮಾಡಿದ ಆರೋಪಕ್ಕೆ ಬಿಜೆಪಿ ನಾಯಕ ತೇಜಸ್ವಿ ಸೂರ್ಯ ಗುರಿಯಾಗಿದ್ದಾರೆ. ಇವರ ವಿರುದ್ಧ ಚುನಾವಣಾ ಆಯೋಗವು ಪ್ರಕರಣ ದಾಖಲಿಸಿದೆ. ಈ ಬಗ್ಗೆ ವಿವರ ಇಲ್ಲಿದೆ.

ವಿಜಯ ಕರ್ನಾಟಕ 26 Apr 2024 9:00 pm

ನಿಮ್ಮ ಆಸ್ತಿ ಉಳಿಸಿಕೊಳ್ಳಬೇಕೆಂದ್ರೆ ಬಿಜೆಪಿಗೆ ಮತ ಹಾಕಿ; ಸರ್ಕಾರಕ್ಕೆ ಹೋಗಬೇಕೆಂದರೆ ಕಾಂಗ್ರೆಸ್‌ಗೆ ಹಾಕಿ - ಬಸವರಾಜ ಬೊಮ್ಮಾಯಿ

Basavaraja Bommai On Congress : ಕಾಂಗ್ರೆಸ್‌ ವಿರುದ್ಧ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಕಿಡಿಕಾರಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪಿತ್ರಾರ್ಜಿತ ಆಸ್ತಿ ಹೊಸ ಕಾನೂನು ತರಲು ಮುಂದಾಗಿದ್ದಾರೆ. ನಿಮ್ಮ ಆಸ್ತಿ ನಿಮ್ಮ ಬಳಿಯೇ ಉಳಿಯಬೇಕು ಎಂದರೆ ಬಿಜೆಪಿಗೆ ಗೆಲ್ಲಿಸಿ. ಸರ್ಕಾರಕ್ಕೆ ಹೋಗಬೇಕು ಎಂದರೆ ಕಾಂಗ್ರೆಸ್‌ ಗೆಲ್ಲಿಸಿ ಎಂದಿದ್ದಾರೆ.

ವಿಜಯ ಕರ್ನಾಟಕ 26 Apr 2024 8:52 pm

ರಾಜ್ಯಕ್ಕೆ ಮೋದಿ ಚೊಂಬು ಕೊಟ್ಟಿದ್ದಾರೆ; ಬಿಜೆಪಿ ಶ್ರೀಮಂತರಿಗೆ ಹಣ ಕೊಟ್ರೆ, ನಾವು ಬಡವರನ್ನ ಲಕ್ಷಾಧೀಶ್ವರ ಮಾಡ್ತೇವೆ - ರಾಹುಲ್‌ ಗಾಂಧಿ

Rahul Gandhi Ballari Visit : ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಬಳ್ಳಾರಿಯಲ್ಲಿ ಸಮಾವೇಶ ಉದ್ದೇಶಿಸಿ ಮಾತನಾಡಿದ್ದಾರೆ. ಮೋದಿ ಕರ್ನಾಟಕ ಹಾಗೂ ದೇಶಕ್ಕೆ ಚೊಂಬು ಕೊಟ್ಟಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಾವಣೆ ಮಾಡ್ತಾರೆ ಎಂದು ಆರೋಪ ಮಾಡಿದ್ದಾರೆ. ಇಲ್ಲಿದೆ ರಾಹುಲ್‌ ಗಾಂಧಿ ಭಾಷಣ ವಿವರ.

ವಿಜಯ ಕರ್ನಾಟಕ 26 Apr 2024 7:51 pm

Live Score | PBKS vs KKR: ಟಾಸ್‌ ಗೆದ್ದು ಬೌಲಿಂಗ್‌ ಆಯ್ದುಕೊಂಡ ಪಂಜಾಬ್‌!

Kolkata Knight Riders vs Punjab Kings Match Live: ಕೋಲ್ಕತಾದ ಈಡನ್‌ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಇದೀಗ ನಡೆಯುತ್ತಿರುವ 2024ರ ಇಂಡಿಯನ್‌ ಪ್ರೀಮಿಯರ್‌ ಲೀಗ್ (ಐಪಿಎಲ್) ಟೂರ್ನಿಯ 42ನೇ ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್ ಹಾಗೂ ಕೋಲ್ಕತಾ ನೈಟ್‌ ರೈಡರ್ಸ್ ತಂಡಗಳು ಸೆಣಸುತ್ತಿವೆ. ಈ ಪಂದ್ಯದಲ್ಲಿ ಟಾಸ್‌ ಗೆದ್ದ ಪಂಜಾಬ್‌ ಕಿಂಗ್ಸ್ ತಂಡ ಮೊದಲು ಬೌಲಿಂಗ್‌ ಆಯ್ಕೆ ಮಾಡಿಕೊಂಡಿದೆ. ಹಾಗಾಗಿ ಶ್ರೇಯಸ್‌ ಅಯ್ಯರ್‌ ನಾಯಕತ್ವದ ಕೆಕೆಆರ್‌ ಮೊದಲು ಬ್ಯಾಟ್‌ ಮಾಡಲಿದೆ. ಅಂದ ಹಾಗೆ ಕೆಕೆಆರ್‌ 10 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ, ಪಂಜಾಬ್ ಕಿಂಗ್ಸ್‌ 4 ಅಂಕಗಳೊಂದಿಗೆ ಆರನೇ ಸ್ಥಾನದಲ್ಲಿದೆ.

ವಿಜಯ ಕರ್ನಾಟಕ 26 Apr 2024 7:45 pm

IPL 2024: ಮಿಚೆಲ್‌ ಮಾರ್ಷ್‌ ಔಟ್‌, ಡೆಲ್ಲಿ ಕ್ಯಾಪಿಟಲ್ಸ್‌ ಸೇರಿದ ಆಫ್ಘನ್‌ ಆಲ್‌ರೌಂಡರ್!

Gulbadin Naib joins Delhi Capitals: ಗಾಯದ ಕಾರಣ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಲ್‌ರೌಂಡರ್‌ ಮಿಚೆಲ್‌ ಮಾರ್ಷ್‌ 2024ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟೂರ್ನಿಯ ಇನ್ನುಳಿದ ಭಾಗದಿಂದ ಹೊರ ಬಿದ್ದಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಸ್ಥಾನಕ್ಕೆ ಅಫಘಾನಿಸ್ತಾನ ತಂಡದ ಆಲ್‌ರೌಂಡರ್‌ ಗುಲ್ಬದ್ದಿನ್‌ ನೈಬ್ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಮಿಚೆಲ್‌ ಮಾರ್ಷ್‌ ಸ್ಥಾನವನ್ನು ತುಂಬಿದ್ದಾರೆ. ಹ್ಯಾಮ್‌ ಸ್ಟ್ರಿಂಗ್‌ ಇಂಜುರಿಗೆ ಒಳಗಾಗಿದ್ದ ಮಿಚೆಲ್‌ ಮಾರ್ಷ್ ಅವರು ಆಸ್ಟ್ರೇಲಿಯಾಗೆ ತೆರಳಿದ್ದು, ಕ್ರಿಕೆಟ್‌ ಆಸ್ಟ್ರೇಲಿಯಾ ಸಲಹೆಯ ಮೇರೆಗೆ ಚಿಕಿತ್ಸೆಗೆ ಒಳಗಾಗಿದ್ದಾರೆ.

ವಿಜಯ ಕರ್ನಾಟಕ 26 Apr 2024 7:15 pm

ಲೋಕಸಭಾ ಚುನಾವಣೆ: ರಾಜ್ಯದಲ್ಲಿ ಸಂಜೆ 5.30ಕ್ಕೆ ಶೇ 63 ರಷ್ಟು ಮತದಾನ; ಯಾವ ಕ್ಷೇತ್ರಗಳಲ್ಲಿ ಎಷ್ಟು ವೋಟಿಂಗ್‌?

Karnataka 14 Constituency Voting Percentage : ರಾಜ್ಯದಲ್ಲಿ ಕೊನೆಯ ಕ್ಷಣದಲ್ಲಿ ಮತ ಕೇಂದ್ರಗಳತ್ತ ಜನ ಧಾವಿಸುತ್ತಿದ್ದು, ಮತದಾನ ಪ್ರಮಾಣ ಹೆಚ್ಚಳವಾಗುತ್ತಿದೆ. ಸಂಜೆ 5.30 ರ ವೇಳೆಗೆ ಶೇ. 63.9 ರಷ್ಟು ಮತದಾನವಾಗಿದೆ. ಯಾವ ಕ್ಷೇತ್ರಗಳಲ್ಲಿ ಎಷ್ಟು ಮತದಾನ ಇಲ್ಲಿದೆ ಮಾಹಿತಿ.

ವಿಜಯ ಕರ್ನಾಟಕ 26 Apr 2024 6:57 pm

ಸುಳ್ಯ: ಕಾರು ಢಿಕ್ಕಿ; ಬೈಕ್‌ ಸವಾರ ಮೃತ್ಯು

ಸುಳ್ಯ: ಕಲ್ಲುಗುಂಡಿಯ ದೊಡ್ಡಡ್ಕ ಸಮೀಪ ಬೈಕ್ ಹಾಗೂ ಕಾರು ನಡುವೆ ನಡೆದ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟ ಘಟನೆ ಗುರುವಾರ ರಾತ್ರಿ ಸಂಭವಿಸಿದೆ. ಅರಂತೋಡು ಗ್ರಾಮದ ಪಂಚಾಯತ್ ಸದಸ್ಯ ಗಂಗಾಧರ ಎಂಬವರ ಪುತ್ರ ದರ್ಶನ್ ಮೃತರು. ದರ್ಶನ್ ಅವರು ಮತದಾನ ಮಾಡಲು ಬೆಂಗಳೂರಿನಿಂದ ಆಗಮಿಸುತ್ತಿದ್ದರು.  ಇವರು ಮಡಿಕೇರಿ ತನಕ ಬಸ್ ಅಲ್ಲಿ ಬಂದು ನಂತರ ಊರಿನ ಶೇಷಪ ಎಂಬವರ ಪುತ್ರ ಅವಿನ್ ಜೊತೆ ಬರುತ್ತಿದ್ದ ವೇಳೆ ಘಟನೆ ಸಂಭವಿಸಿದೆ. ಗಂಭೀರ ಗಾಯಗೊಂಡ ಅವಿನ್ ಅವರನ್ನು ಆಸ್ಪತ್ರೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಾರ್ತಾ ಭಾರತಿ 26 Apr 2024 6:29 pm

ಅಕ್ರಮ ತಡೆಯಲಾಗದ ಚುನಾವಣಾ ಆಯೋಗ ಬಾಗಿಲು ಹಾಕಿಕೊಳ್ಳುವುದು ಒಳ್ಳೆಯದು : ಎಚ್‍ಡಿಕೆ

ಬೆಂಗಳೂರು : ‘ರಣಹೇಡಿ ನಾನಲ್ಲ, ನೇರವಾಗಿ ಚುನಾವಣೆ ಎದುರಿಸಲಾಗದೆ ರಾತ್ರೋರಾತ್ರಿ ಮತದಾರರಿಗೆ ಕ್ಯೂಆರ್ ಕೋಡ್ ಗಿಫ್ಟ್ ಕೂಪನ್, ಹಣ ಹಂಚಿಕೆ ಮಾಡುವವರು ರಣಹೇಡಿಗಳು’ ಎಂದು ಡಿಕೆಶಿ ಹೇಳಿಕೆಗೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. ಶುಕ್ರವಾರ ರಾಮನಗರದ ಬಿಡದಿ ಸಮೀಪದ ಕೇತಿಗಾನಹಳ್ಳಿ ಮತಗಟ್ಟೆಯಲ್ಲಿ ಮತದಾನ ಮಾಡಿದ ನಂತರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ರಣಹೇಡಿ ನಾನಲ್ಲ, ರಣಹೇಡಿಗಳು ಅವರು, ಕುತಂತ್ರದ ರಾಜಕಾರಣಿಗಳು ಅವರು. ಯಾರು ರಣಹೇಡಿ ಎಂದು ಮುಂದೆ ಚರ್ಚೆ ಮಾಡೋಣ. ರಣಹೇಡಿ ಸಂಸ್ಕೃತಿ ಡಿ.ಕೆ.ಶಿವಕುಮಾರ್ ಅವರದ್ದು. ನಾವು ನೇರವಾಗಿಯೇ ಚುನಾವಣೆ ಮಾಡುತ್ತಿದ್ದೇವೆ. ರಾತ್ರೋರಾತ್ರಿ ಹೋಗಿ ಕಳ್ಳಕಳ್ಳವಾಗಿ ಜನರಿಗೆ ಕ್ಯೂಆರ್ ಕೋಡ್ ಇರುವ ಗಿಫ್ಟ್ ಕೂಪನ್‍ಗಳನ್ನು ಹಂಚಿಕೆ ಮಾಡಿದ ವ್ಯಕ್ತಿ ರಣಹೇಡಿತನದ ಬಗ್ಗೆ ಮಾತನಾಡುತ್ತಿದ್ದಾರೆಂದು ಟೀಕಿಸಿದರು. ದೂರು ಕೊಟ್ಟರೆ ಪ್ರಯೋಜವಿಲ್ಲ: ಗಿಫ್ಟ್ ಕೂಪನ್ ಬಗ್ಗೆ ಚುನಾವಣಾ ಆಯೋಗಕ್ಕೆ ಈಗ ದೂರು ಕೊಟ್ಟರೂ ಏನು ಪ್ರಯೋಜನ ಇಲ್ಲ. ಹಿಂದೆ ಹಲವು ಬಾರಿ ದೂರು ಕೊಟ್ಟರೂ ಆಯೋಗ ಯಾವುದೇ ಕ್ರಮ ಕೈಗೊಂಡಿಲ್ಲ. ಈಗ ದೂರು ಕೊಟ್ಟರೆ ಏನು ಉಪಯೋಗ? ಎಂದು ಕುಮಾರಸ್ವಾಮಿ ಪ್ರಶ್ನಿಸಿದರು. ಮುಕ್ತವಾಗಿ ಹಣ ಹಂಚುವ ವ್ಯವಸ್ಥೆಯನ್ನೆ ತನ್ನಿ: ಚುನಾವಣಾ ಆಯೋಗಕ್ಕೆ ಮನವಿ ಮಾಡುತ್ತೇನೆ. ಈ ರೀತಿ ಚುನಾವಣೆ ಮಾಡುವ ಬದಲು ನೇರವಾಗಿ, ಮುಕ್ತವಾಗಿ ಗಿಫ್ಟ್, ಹಣ ಹಂಚುವ ವ್ಯವಸ್ಥೆಯನ್ನೇ ತನ್ನಿ. ಅವರವರ ಶಕ್ತಿ ಅನುಸಾರ ಹಣ ಹಂಚಿ ವೋಟು ಪಡೆಯುವ ವ್ಯವಸ್ಥೆ ಜಾರಿಗೆ ತನ್ನಿ. ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತದಲ್ಲಿ ಈ ರೀತಿಯ ವ್ಯವಸ್ಥೆ ಬಂದರೆ ಕಾಂಗ್ರೆಸ್‍ನವರಿಗೆ ಒಳ್ಳೆಯದು ಎಂದು ಅವರು ವ್ಯಂಗ್ಯವಾಡಿದರು.  ಬಾಗಿಲು ಹಾಕಿಕೊಳ್ಳುವುದು ಒಳ್ಳೆಯದು ‘ಇದನ್ನು ಚುನಾವಣಾ ಅಂತ ಪರಿಗಣಿಸಲು ಸಾಧ್ಯವಾ? ಪ್ರಜಾಪ್ರಭುತ್ವದ ಹಬ್ಬ ಎಂದು ಇದನ್ನು ಕರೆಯಲು ಆಗುತ್ತದೆಯೇ? ದುಡ್ಡು ಇರುವವರಿಗೆ ಲೂಟಿ ಮಾಡುವವರಿಗೆ ಇದು ಹಬ್ಬವೇ ಹೊರತು ಜನಸಾಮಾನ್ಯರಿಗೆ ಅಲ್ಲ. ಚುನಾವಣಾ ಆಯೋಗ ಬಾಗಿಲು ಹಾಕಿಕೊಳ್ಳುವುದು ಒಳ್ಳೆಯದು. ಚುನಾವಣಾ ಆಯೋಗ ವ್ಯವಸ್ಥೆಯನ್ನು ಬದಲಾವಣೆ ಮಾಡಿಕೊಳ್ಳೋದು ಉತ್ತಮ ಎಂದು ಅವರು ವಾಗ್ದಾಳಿ ನಡೆಸಿದರು. ಈ ರೀತಿ ಅಡ್ಡದಾರಿಯಲ್ಲಿ, ವಾಮಮಾರ್ಗದಲ್ಲಿ ಮತ ಪಡೆಯುವ ಮಹಾನುಭಾವರು ಜನರಿಗೆ ಬುದ್ದಿ ಹೇಳಿದ್ದೇ ಹೇಳಿದ್ದು. ಈ ಮಹಾನುಭಾವ ಇಲ್ಲಿ ಇದ್ದಾರಲ್ಲ, ದೇಶದ ಬಗ್ಗೆ ಚರ್ಚೆ ಮಾಡ್ತಾರಲ್ಲ ಈ ಇಬ್ಬರು ಮಹಾನುಭಾವರು.. ಇವರ ಬಗ್ಗೆ ಚುನಾವಣಾ ಆಯೋಗ ಏನು ಮಾಡುತ್ತಿದೆ? ಎಂದು ಕುಮಾರಸ್ವಾಮಿ ಪ್ರಶ್ನಿಸಿದರು. ದೇವರ ಲಾಡು: ಜೋತಿಷಿಯೊಬ್ಬರು ಹೇಳಿದಂತೆ ಇವರು ಕನಕಪುರದಲ್ಲಿ ಹಣ, ಗಿಫ್ಟ್ ಕೂಪನ್ ಹಂಚಿದ್ದಾರೆ. ಅವರು ಹೇಳಿದರು ಎಂದು 505 ರೂ.ಹಣ, ಮಲೆಮಹದೇಶ್ವರ ದೇವಾಲಯದ ಲಾಡು ಮತ್ತು ಈ ಗ್ಯಾರಂಟಿ ಕಾರ್ಡ್‍ಗಳನ್ನ ರಾತ್ರಿಯೆಲ್ಲಾ ಹಂಚಿದ್ದಾರೆ. ಕಾರ್ಡು ಹಂಚಿಕೆ ಮಾಡುತ್ತಿದ್ದ ಕಾಂಗ್ರೆಸ್ ಕಾರ್ಯಕರ್ತರನ್ನು ನಮ್ಮ ಎರಡೂ ಪಕ್ಷಗಳ ಕಾರ್ಯಕರ್ತರು ತಡೆದಿದ್ದಾರೆ. ಜಿಲ್ಲಾಧಿಕಾರಿ ಮತ್ತು ಚುನಾವಣಾ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಅವರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಮುಕ್ತ, ನ್ಯಾಯ ಸಮ್ಮತ ಚುನಾವಣೆ ನಡೆಯುತ್ತಿಲ್ಲ. ಸೋಲಿನ ಭೀತಿಯಿಂದ ಕುತಂತ್ರದ ರಾಜಕಾರಣ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ವಾರ್ತಾ ಭಾರತಿ 26 Apr 2024 6:25 pm

ಮೋದಿ ಭಾಷಣ ಕೇಳಿದ್ದೀರಿ, ಕಣ್ಣೀರು ಹಾಕುವುದನ್ನೂ ನೋಡಿ : ರಾಹುಲ್ ಗಾಂಧಿ ವಾಗ್ದಾಳಿ

PM Modi Scared, May Even Shed Tears : ಪ್ರಧಾನಿ ಮೋದಿ ವಿರುದ್ದ ವಾಗ್ದಾಳಿ ಮುಂದುವರಿಸಿರುವ ರಾಹುಲ್ ಗಾಂಧಿ, ಸದ್ಯದಲ್ಲೇ ವೇದಿಕೆಯಲ್ಲಿ ಪ್ರಧಾನ ಮಂತ್ರಿ ಕಣ್ಣೀರು ಹಾಕಲಿದ್ದಾರೆ ಎಂದು ಹೇಳಿದ್ದಾರೆ. ವಿಜಯಪುರದಲ್ಲಿನ ಚುನಾವಣಾ ಸಭೆಯಲ್ಲಿ ರಾಹುಲ್, ಪ್ರಧಾನಿ ವಿರುದ್ದ ಕಿಡಿಕಾರಿದ್ದಾರೆ.

ವಿಜಯ ಕರ್ನಾಟಕ 26 Apr 2024 6:19 pm

ಬೆಂಗಳೂರು ಹೆದ್ದಾರಿ ಟೋಲ್‌ಗಳು ಫುಲ್‌ ರಶ್‌! ವಾರಾಂತ್ಯ ಹಿನ್ನೆಲೆ ಮತಚಲಾಯಿಸಿ ಊರುಗಳತ್ತ ಹೊರಟ ಜನ

Traffic Jam In Bengaluru Highway Tolls: ಮತದಾನ ಮುಗಿಸಿಕೊಂಡ ಬೆಂಗಳೂರಿನ ಜನ ವಾರಾಂತ್ಯ ಹಿನ್ನೆಲೆ ವಿವಿಧ ಊರುಗಳಿಗೆ ತೆರಳುತ್ತಿದ್ದಾರೆ. ಈ ಹಿನ್ನೆಲೆ ನಗರದ ಹೊರಹೊಲಯದ ಟೋಲ್‌ಗಳಲ್ಲಿ ವಾಹನ ದಟ್ಟಣೆ ಹೆಚ್ಚಳವಾಗಿದೆ. ಸಂಜೆ ಕೆಲವೊತ್ತು ಕಿ.ಮೀ ಗಟ್ಟಲೆ ವಾಹನ ಸರತಿಯಲ್ಲಿ ನಿಂತಿವೆ. ಈ ಬಗ್ಗೆ ವಿವರ ಇಲ್ಲಿದೆ.

ವಿಜಯ ಕರ್ನಾಟಕ 26 Apr 2024 6:19 pm

Fact Check: ತುಮಕೂರಿನ ಕಾಂಗ್ರೆಸ್‌ ರ್‍ಯಾಲಿಯಲ್ಲಿ ಪಾಕಿಸ್ತಾನ ಧ್ವಜ ಹಾರಾಡಿದ್ದು ನಿಜವೇ? ವಿಡಿಯೋದ ಅಸಲಿಯತ್ತೇನು?

2024ರ ಲೋಕಸಭಾ ಚುನಾವಣೆ ಹೊತ್ತಲ್ಲೇ ಇತ್ತೀಚಿನ ಘಟನೆ ಎಂಬಂತೆ ತುಮಕೂರಿನ ಕಾಂಗ್ರೆಸ್ ರ್‍ಯಾಲಿಯಲ್ಲಿ ಭಾರತದ ರಾಷ್ಟ್ರಧ್ವಜದ ಜತೆ ಪಾಕಿಸ್ತಾನದ ಧ್ವಜ ಹಾರಿಸಲಾಗಿದೆ ಎಂದು ಆರೋಪಿಸಿ ಹಲವರು ಹಸಿರು ಧ್ವಜ ಇರುವ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ಆದರೆ, ಇದನ್ನು ಪರಿಶೀಲಿಸಿದಾಗ ಇದು ಪಾಕಿಸ್ತಾನದ ಧ್ವಜವಲ್ಲ; ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಧ್ವಜಕ್ಕೂ ಇದಕ್ಕೂ ಹೋಲಿಕೆಯಿದೆ ಎಂದು ಗೊತ್ತಾಗಿದೆ. ಜೊತೆಗೆ ಇದು 2018ರ ಘಟನೆ ಎಂದೂ ತಿಳಿದು ಬಂದಿದೆ.

ವಿಜಯ ಕರ್ನಾಟಕ 26 Apr 2024 6:15 pm

ಡಾ ಕೆ ಸುಧಾಕರ್‌ಗೆ ಸೇರಿದ 4.8 ಕೋಟಿ ರೂ. ಜಪ್ತಿ; ಮತದಾರರಿಗೆ ಆಮಿಷವೊಡ್ಡಿದ ಪ್ರಕರಣ ದಾಖಲು

Dr K Sudhakar Booked For Bribery Case : ಚಿಕ್ಕಬಳ್ಳಾಪುರ ಬಿಜೆಪಿ ಅಭ್ಯರ್ಥಿ ಡಾ ಕೆ ಸುಧಾಕರ್‌ ಅವರಿಗೆ ಸೇರಿದ 4.8 ಕೋಟಿ ರೂ. ಅನ್ನು ಚುನಾವಣಾ ಆಯೋಗ ಜಪ್ತಿ ಮಾಡಿದ್ದು, ಮತದಾರರಿಗೆ ಆಮಿಷವೊಡ್ಡಿದ ಪ್ರಕರಣವನ್ನು ದಾಖಲಿಸಲಾಗಿದೆ. ಮಾದನಾಯಕನಹಳ್ಳಿ ಪೊಲೀಸ್‌ ಠಾಣೆಯಲ್ಲಿ ಕೇಸ್‌ ದಾಖಲಾಗಿದೆ. ಚಿಕ್ಕಬಳ್ಳಾಪುರದ ಫ್ಲೈಯಿಂಗ್‌ ಸ್ಕ್ವಾಡ್‌ ತಂಡ ದಾಳಿ ನಡೆಸಿದಾಗ ಮತದಾರರಿಗೆ ಹಂಚಲು ಸಂಗ್ರಹಿಸಿದ್ದ ಹಣ ದೊರೆತಿದ್ದು, ಅದನ್ನು ಚುನಾವಣಾಧಿಕಾರಿಗಳು ವಶಪಡಿಸಿಕೊಂಡು ಈಗ ಪ್ರಕರಣವನ್ನು ದಾಖಲಿಸಿದ್ದಾರೆ.

ವಿಜಯ ಕರ್ನಾಟಕ 26 Apr 2024 6:14 pm

ಲೋಕಸಭಾ ಚುನಾವಣೆ: ಮತೋತ್ಸವದಲ್ಲಿ ಮರೆತೇ ಹೋಗುವ ಮತಗಟ್ಟೆ ಸಿಬ್ಬಂದಿಗೆ ಹ್ಯಾಟ್ಸಾಫ್!

ಚುನಾವಣೆ ವೇಳೆ ಮತದಾನ ಮಾಡೋಕೆ ಜನರು ನೂರೆಂಟು ನೆಪ ಹೇಳಿ ತಪ್ಪಿಸಿಕೊಳ್ತಾರೆ. ಆದರೆ, ಮತಗಟ್ಟೆ ಅಧಿಕಾರಿಗಳು ಮಾತ್ರ ತಮ್ಮ ಕರ್ತವ್ಯವನ್ನು ಚಾಚೂ ತಪ್ಪದೇ ನಿರ್ವಹಿಸುವ ಸಲುವಾಗಿ ಊಟ, ನಿದ್ರೆ ಬಿಟ್ಟು ಕೆಲಸ ಮಾಡ್ತಾರೆ. ಚುನಾವಣಾ ಕರ್ತವ್ಯಕ್ಕೆ ನಿಯೋಜನೆ ಆಗುವ ಸರ್ಕಾರಿ ಅಧಿಕಾರಿಗಳಿಗೆ ಪ್ರತಿ ಚುನಾವಣೆಯೂ ಒಂದು ಸವಾಲು. ಒಂದೇ ಒಂದು ಸಣ್ಣ ತಪ್ಪು ಅವರ ವೃತ್ತಿ ಬದುಕಿಗೆ ಮುಳುವಾಗಬಲ್ಲದು! ಆದರೆ, ಬೆರಳಿಗೆ ಶಾಯಿ ಹಾಕಿಸಿಕೊಂಡು ಬಂದು ಸೆಲ್ಫಿಗೆ ಪೋಸ್ ಕೊಡುವ ಜನ ಶಾಯಿ ಹಾಕಿದವರಿಗೆ ಧನ್ಯವಾದವನ್ನೂ ಹೇಳೋದಿಲ್ಲ!

ವಿಜಯ ಕರ್ನಾಟಕ 26 Apr 2024 6:14 pm

ಫಾರ್ಚುನರ್ ಗಿಂತ 15 ಲಕ್ಷ ರೂ ಕಡಿಮೆಯಲ್ಲಿ ಸಿಗಲಿದೆ ಈ ಕಾರು! ಬೆಂಕಿ ಫೀಚರ್ಸ್.

ನಿಸ್ಸಾನ್ ಕಂಪನಿ (Nissan Company) ಲಾಂಚ್ ಮಾಡ ಹೊರಟಿರುವ ನೂತನ ಕಾರಿನ ಕುರಿತು ಯಾವುದೇ ಹೆಚ್ಚಿನ ಮಾಹಿತಿಯನ್ನು ಅಧಿಕೃತವಾಗಿ ಹಂಚಿಕೊಂಡಿಲ್ಲ, ಆದರೆ ಕಾರಿನ ಕೆಲ ಸುಂದರ ಫೋಟೋಗಳು ಎಲ್ಲೆಡೆ ಬಾರಿ ವೈರಲ್ ಆಗುತ್ತಿದ್ದು, ಇದರ ಅತ್ಯಾಕರ್ಷಕ ನೋಟ, ಡಿಸೈನ್ ಹಾಕು ಬಣ್ಣ ಗ್ರಾಹಕರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ. ಇದೇ ವರ್ಷಾಂತ್ಯದೊಳಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ (Indian Automobile Market) ಪ್ರವೇಶಿಸಲು ಸಜ್ಜಾಗಿರುವ ನಿಸ್ಸಾನ್ ಎಕ್ಸ್ ಟ್ರೈಲ್ (Nissan X-Trail) ಕಾರಿನ ಬೆಲೆಯನ್ನು 35 ಲಕ್ಷಕ್ಕೆ ನಿಗದಿಪಡಿಸಬಹುದೆಂಬ ಮಾಹಿತಿ ಇದೆ. The post ಫಾರ್ಚುನರ್ ಗಿಂತ 15 ಲಕ್ಷ ರೂ ಕಡಿಮೆಯಲ್ಲಿ ಸಿಗಲಿದೆ ಈ ಕಾರು! ಬೆಂಕಿ ಫೀಚರ್ಸ್. appeared first on Karnataka Times .

ಕರ್ನಾಟಕ ಟೈಮ್ಸ್ 26 Apr 2024 6:11 pm

ಎಸ್‌ಆರ್‌ಎಚ್ ಫ್ಲಾಪ್‌ ಶೋ.. ವೈರಲ್‌ ಆಯ್ತು ಕಾವ್ಯಾ ಮಾರನ್‌ ವಿಡಿಯೋ!

Sunrisers Hyderabad vs Royal Challengers Bengaluru: 2023ರ ಸಾಲಿನ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟಿ20 ಕ್ರಿಕೆಟ್‌ ಟೂರ್ನಿಯಲ್ಲಿ ಹೀನಾಯ ಪ್ರದರ್ಶನ ನೀಡಿ ಅಂಕಪಟ್ಟಿಯಲ್ಲಿ ಕೊನೇ ಸ್ಥಾನ ಪಡೆದಿದ್ದ ಸನ್‌ರೈಸರ್ಸ್‌ ಹೈದರಾಬಾದ್‌ ತಂಡ ಈ ಬಾರಿ ಸ್ಪೋಟಕ ಬ್ಯಾಟಿಂಗ್ ಮೂಲಕ ಎದುರಾಳಿ ತಂಡಗಳ ಮನದಲ್ಲಿ ಭಯ ಹುಟ್ಟಿಸಿದೆ. ಟೂರ್ನಿಯಲ್ಲಿ ಎರಡು ಬಾರಿ ಲೀಗ್‌ ಇತಿಹಾಸದ ಗರಿಷ್ಠ ಸ್ಕೋರ್‌ ದಾಖಲೆಯನ್ನು ಮುರಿದಿರುವ ಸನ್‌ರೈಸರ್ಸ್‌ ಹೈದರಾಬಾದ್‌ ತಂಡದ ಗರ್ವವನ್ನು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಮುರಿದಿದ್ದು, ಇದರ ಬೆನ್ನಲ್ಲೇ ಎಸ್‌ಆರ್‌ಎಚ್‌ ಒಡತಿ ಕಾವ್ಯಾ ಮಾರನ್‌ ಅವರ ಅಳು ಮುಖದ ವಿಡಿಯೋ ವೈರಲ್ ಆಗಿದೆ.

ವಿಜಯ ಕರ್ನಾಟಕ 26 Apr 2024 6:08 pm

ಪ್ರಧಾನಿ ಮೋದಿ ಹತಾಶೆಯಿಂದ ಸಂವಿಧಾನದ ವಿರುದ್ಧ ಮಾತನಾಡುತ್ತಿದ್ದಾರೆ: ಮುಖ್ಯಮಂತ್ರಿ ಸಿದ್ದರಾಮಯ್ಯ

ಸಿಎಂ ಸಿದ್ದರಾಮಯ್ಯ ಅವರು ಪ್ರಧಾನಿ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಅವರು ಬೆಲೆಯೇರಿಕೆ, ನಿರುದ್ಯೋಗ, ರೈತರ ಸಮಸ್ಯೆ ಮುಂತಾದ ಗಂಭೀರ ವಿಚಾರಗಳ ಬಗ್ಗೆ ಚರ್ಚೆ ಮಾಡುವುದಿಲ್ಲ. ಬಡವರ, ಅಲ್ಪಸಂಖ್ಯಾತರ, ದಲಿತರ ಬಗ್ಗೆ ಮಾತನಾಡುವುದಿಲ್ಲ. ಬದಲಾಗಿ ಮೊದಲ ಹಂತದ ಚುನಾವಣೆಯಲ್ಲಿ ನಿರೀಕ್ಷಿತ ಮತಗಳು ಬಾರದ್ದಕ್ಕೆ ಹತಾಶೆಯಿಂದ ಸಂವಿಧಾನದ ವಿರುದ್ಧ ಮಾತನಾಡುತ್ತಿದ್ದಾರೆ ಎಂದು ಆರೋಪಿಸಿದರು. ಹಿಂದೂಗಳ ಮೀಸಲಾತಿಯನ್ನು ಮುಸ್ಲಿಮರಿಗೆ ನೀಡಲಾಗುತ್ತಿದೆ ಎಂದು ಒಬ್ಬ ಪ್ರಧಾನಿಯಾಗಿ ಅವರು ಹೇಳುತ್ತಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿಜಯ ಕರ್ನಾಟಕ 26 Apr 2024 6:01 pm

ಬೆಲೆಯೇರಿಕೆ, ನಿರುದ್ಯೋಗ, ರೈತರ ಸಮಸ್ಯೆಗಳ ಬಗ್ಗೆ ಪ್ರಧಾನಿ ಮೋದಿ ಚರ್ಚೆ ಮಾಡುವುದಿಲ್ಲ : ಸಿಎಂ ಸಿದ್ದರಾಮಯ್ಯ

ವಿಜಯಪುರ : ಬೆಲೆಯೇರಿಕೆ, ನಿರುದ್ಯೋಗ, ರೈತರ ಸಮಸ್ಯೆಗಳ ಬಗ್ಗೆ ಪ್ರಧಾನಿಗಳು ಚರ್ಚೆ ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ವತಿಯಿಂದ ವಿಜಯಪುರ ನಗರ ದಲ್ಲಿ ಆಯೋಜಿಸಲಾಗಿದ್ದ ಪ್ರಜಾಧ್ವನಿ -02 ಲೋಕಸಭಾ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ ತಮ್ಮ ಪಕ್ಷದ ಅಭ್ಯರ್ಥಿಯಾದ ರಾಜು ಅಲಗೂರು ಅವರ ಪರವಾಗಿ ಮಾತಾಯಾಚನೆ ಮಾಡಿ ನಂತರ ಮತದಾರರನ್ನು ಉದ್ದೇಶಿಸಿ ಮಾತನಾಡಿದರು. ನರೇಂದ್ರ ಮೋದಿಯವರು ಹತ್ತು ವರ್ಷ ಪ್ರಧಾನಿಯಾಗಿ ಬಡವರು, ಯುವಕರು,ದಲಿತರು ಅಲ್ಪಸಂಖ್ಯಾತ ಪರವಾಗಿ ಕೆಲಸ ಮಾಡಿಲ್ಲ. ಬೆಲೆಯೇರಿಕೆ, ನಿರುದ್ಯೋಗ, ರೈತರ ಸಮಸ್ಯೆಗಳ ಬಗ್ಗೆ ಪ್ರಧಾನಿಗಳು ಚರ್ಚೆ ಮಾಡುವುದಿಲ್ಲ. ಅವರು ಸಾಧನೆಗಳನ್ನು ಹೇಳದೆ ಭಾವನೆಗಳನ್ನು ಕೆರಳಿಸಿ, ಧರ್ಮ ಧರ್ಮಗಳ ನಡುವೆ, ಜಾತಿಗಳ ನಡುವೆ ಬೆಂಕಿ ಇಡುವ ಕೆಲಸಗಳನ್ನು ಮಾಡಿದ್ದಾರೆ. ಇತ್ತೀಚಿನ ಅವರ ಭಾಷಣಗಳನ್ನು ಗಮನಿಸಿದರೆ ಮೊದಲಹಂತದ ಚುನಾವಣೆಯಲ್ಲಿ ಅವರು ನಿರೀಕ್ಷಿಸಿದ ಮತಗಳು ಬರುವುದಿಲ್ಲ ಎಂದು ಅವರು ಹತಾಶರಾಗಿದ್ದಾರೆ. ಸಂಬಂಧಪಡದ ಅನೇಕ ವಿಚಾರಗಳನ್ನು ಪ್ರಸ್ತಾಪಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಸಂವಿಧಾನದ 15 ಮತ್ತು 16 ನೇ ಕಲಂ ನಲ್ಲಿ ಸ್ಪಷ್ಟವಾಗಿ ಸಾಮಾಜಿಕವಾಗಿ ಶೈಕ್ಷಣಿಕವಾಗಿ ಹಿಂದುಳಿದವರಿಗೆ ಮೀಸಲಾತಿ ನೀಡಬೇಕೆಂದು ಹೇಳಲಾಗಿದೆ. ಅದರಲ್ಲಿ ಹಿಂದೂಗಳು ಹಾಗೂ ಮುಸಲ್ಮಾನರು, ಕ್ರಿಶ್ಚಿಯನ್ ಹಾಗೂ ಎಲ್ಲಾ ಜನರೂ ಬರುತ್ತಾರೆ. ಮುಸಲ್ಮಾನರಿಗೆ ಮೀಸಲಾತಿ ಕೊಡಲಾಗುವುದಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ಹಿಂದೂಗಳ ಮೀಸಲಾತಿಯನ್ನು ಕಿತ್ತು ಮುಸಲ್ಮಾನರಿಗೆ ಕೊಡುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ. ಒಬ್ಬ ಪ್ರಧಾನಮಂತ್ರಿಯಾಗಿ ಈ ರೀತಿ ಮಾತುಗಳನ್ನಾಡುವುದು ಅವರ ಸ್ಥಾನಕ್ಕೆ ಚ್ಯುತಿ ತರುವ ಕೆಲಸ ಎಂದರು. 1977ನಲ್ಲಿಯೇ ಹಾವನೂರು ಆಯೋಗ ಅಲ್ಪಸಂಖ್ಯಾತರಿಗೆ ಮೀಸಲಾತಿ ಕೊಡಬೇಕೆಂದು ಶಿಫಾರಸ್ಸು ಮಾಡಿದೆ. ಚಿನ್ನಪ್ಪ ರೆಡ್ಡಿ ಆಯೋಗವೂ ಇದನ್ನೇ ಶಿಫಾರಸು ಮಾಡಿದೆ. 2004 ನಲ್ಲಿ ಕರ್ನಾಟಕದಲ್ಲಿ ಮುಸಲ್ಮಾನರಿಗೆ ಮೀಸಲಾತಿಯನ್ನು 2ಬಿ ಅಡಿಯಲ್ಲಿ ಪ್ರಾರಂಭಿಸಲಾಯಿತು. 4.ಶೇ ಮೀಸಲಾತಿಯನ್ನು ಕೊಡಲು ಪ್ರಾರಂಭಿಸಲಾಯಿತು. 1994ರಿಂದ ಈವರೆಗೆ ಮೀಸಲಾತಿ ಹಾಗೆ ಉಳಿದುಕೊಂಡು ಬಂದಿದೆ ಎಂದರು. ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದಾಗ ಮುಸಲ್ಮಾನರ ಶೇ.4 ಮೀಸಲಾತಿಯನ್ನು ತೆಗೆದುಹಾಕಿದರು. ಅದರ ವಿರುದ್ಧ ಮುಸ್ಲಿಂ ಮುಖಂಡರು ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಹಾಕಿ, ಬಿಜೆಪಿಯವರು ಅಫಿಡವಿಟ್ ಹಾಕಿ ಯಥಾಸ್ಥಿತಿ ಮುಂದುವರೆಸುತ್ತೇವೆ ಎಂದು ಮುಚ್ಚಳಿಕೆ ಬರೆದುಕೊಟ್ಟಿದ್ದಾರೆ. ನರೇಂದ್ರ ಮೋದಿಯವರು ಮೀಸಲಾತಿ ನೀಡುತ್ತಿರುವುದು ಸಂವಿಧಾನ ಬಾಹಿರ ಎಂಬಂತೆ ಮಾತನಾಡುತ್ತಿರುವುದು ಆಶ್ಚರ್ಯವನ್ನುಂಟು ಮಾಡುತ್ತಿದೆ. ಧೃವೀಕರಣ ಮಾಡುವ ಪ್ರಯತ್ನ ಇದು. ಸುಪ್ರೀಂ ಕೋರ್ಟ್ ಆದೇಶದ ನಂತರ ಹಿಂದೆ ಅವರೇ ಮುಂದುವರೆಸಿ ಈಗ ಹೊಸದಾಗಿ ಕೊಡಲಾಗುತ್ತಿದೆ ಎಂದು ಹೇಳುತ್ತಿರುವುದು ಅತ್ಯಂತ ದೊಡ್ಡ ಸುಳ್ಳು ಎಂದು ಹೇಳಿದರು. ನರೇಂದ್ರ ಮೋದಿಯವರು ಸುಳ್ಳು ಹೇಳುವುದರಲ್ಲಿ ಪ್ರವೀಣರು. ಸ್ವತಂತ್ರ ಭಾರತದಲ್ಲಿ ಆಗಿ ಹೋದ ಪ್ರಧಾನಮಂತ್ರಿಗಳ ಪೈಕಿ ಅತಿ ಹೆಚ್ಚು ಸುಳ್ಳು ಹೇಳುವುದು ನರೇಂದ್ರ ಮೋದಿಯವರು ಎಂದರು. ಸೋಲುವ ಹತಾಶೆಯಿಂದ ಹೇಳಿರುವುದೇ ಹೊರತು ಯಾವುದೇ ಸಂವಿಧಾನಾತ್ಮಕ ಅಂಶಗಳಿಲ್ಲ. ಕಳೆದ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದ ಜನ ಬಿಜೆಪಿಗೆ ಮತ ಹಾಕಿ 25 ಜನರನ್ನು ಆಯ್ಕೆ ಮಾಡಿದರು. ಆಯ್ಕೆ ಆಗಿರುವ ಯಾವೊಬ್ಬ ಸಂಸದರೂ ಕರ್ನಾಟಕಕ್ಕೆ ಅನ್ಯಾಯದ ಬಗ್ಗೆ ಬಾಯಿ ಬಿಡಲಿಲ್ಲ . ರಾಜ್ಯದ ಹಿತ ಕಾಪಾಡದವರು ಲೋಕಸಭೆಗೆ ಹೋದರೆ ಪ್ರಯೋಜನವಿಲ್ಲ ಎಂದರು. ಭರವಸೆ ಈಡೇರಿಸದ ಮೋದಿ ನರೇಂದ್ರ ಮೋದಿಯವರು 2014ರ ನೀಡಿದ್ದ ಭರವಸೆಗಳನ್ನು ನೆನೆಸಿಕೊಳ್ಳಬೇಕು. ವಿದೇಶದಿಂದ ಕಪ್ಪು ಹಣ ತಂದು ಪ್ರತಿಯೊಬ್ಬರಿಗೂ 15 ಲಕ್ಷ ಹಾಕಲಿಲ್ಲ, ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಯಾಗಲಿಲ್ಲ, ರೈತರ ಆದಾಯ ದುಪ್ಪಟ್ಟು ಆಗಲಿಲ್ಲ, ಅಗತ್ಯ ವಸ್ತುಗಳ ಬೆಲೆ ಕಡಿಮೆಯಾಗಲಿಲ್ಲ. ಅಚ್ಚೇ ದಿನ್ ಬರಲಿಲ್ಲ ಎಂದು ವಿವರಿಸಿದರು.

ವಾರ್ತಾ ಭಾರತಿ 26 Apr 2024 6:00 pm

ಲೋಕಸಭಾ ಚುನಾವಣೆ : ಸಂಜೆ 5 ಗಂಟೆ ವೇಳೆಗೆ ರಾಜ್ಯದಲ್ಲಿ 63.90 ಶೇ. ಮತದಾನ

ಬೆಂಗಳೂರು: ಎರಡನೇ ಹಂತದ ಲೋಕಸಭೆ ಚುನಾವಣೆ ನಡೆಯುತ್ತಿರುವ ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಸಂಜೆ 5 ಗಂಟೆಯ ವೇಳೆ 63.90 ಶೇ. ಮತದಾನವಾಗಿದೆ ಎಂದು ಚುನಾವಣಾ ಆಯೋಗದ ಪ್ರಕಟನೆ ತಿಳಿಸಿದೆ. ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ 72.13 ಶೇ. ಮತದಾನವಾಗಿದ್ದರೆ, ಹಾಸನ 72.13 ಶೇ., ದಕ್ಷಿಣ ಕನ್ನಡ 71.83 ಶೇ., ಚಿತ್ರದುರ್ಗ-67.00 ಶೇ., ತುಮಕೂರು 72.10ಶೇ., ಮಂಡ್ಯ 74.87 ಶೇ., ಮೈಸೂರು 65.85, ಚಾಮರಾಜನಗರ- 69.60 ಶೇ., ಬೆಂಗಳೂರು ಗ್ರಾಮಾಂತರ-50.4 ಶೇ., ಬೆಂಗಳೂರು ಉತ್ತರ-50.04, ಬೆಂಗಳೂರು ಸೆಂಟ್ರಲ್-48.64 ಶೇ., ಬೆಂಗಳೂರು ದಕ್ಷಿಣ-49.37 ಶೇ., ಚಿಕ್ಕಬಳ್ಳಾಪುರ 70.97 ಶೇ. ಹಾಗೂ ಕೋಲಾರ ಲೋಕಸಭಾ ಕ್ಷೇತ್ರದಲ್ಲಿ 71.26 ಶೇ. ಮತದಾನವಾಗಿದೆ.

ವಾರ್ತಾ ಭಾರತಿ 26 Apr 2024 5:55 pm

Fan: ನಿಮ್ಮ ಮನೆಯಲ್ಲಿರುವ ಫ್ಯಾನ್ನಿಂದ ಸರಿಯಾದ ಗಾಳಿ ಬರ್ತಿಲ್ವಾ? ಹಾಗಾದ್ರೆ ಕೇವಲ ₹70 ಖರ್ಚು ಮಾಡಿ ಫ್ಯಾನ್ ಹೊಸದರಂತೆ ಕೆಲಸ ಮಾಡುತ್ತೆ!

ಈ ಕಂಡೆನ್ಸರ್ (Condenser) ಗಳಲ್ಲಿ ವಿದ್ಯುತ್ ಶಕ್ತಿಯನ್ನು ಸಂಗ್ರಹಿಸುವ (Stores Electrical Energy) ಸಾಮರ್ಥ್ಯವಿದ್ದು, ಫ್ಯಾನ್ (Fan) ನಲ್ಲಿ ಹಾಕಲಾಗಿರುವ ಮೋಟಾರ್ಗಳು ಎಂದಿಗೂ ತಂತಾನೆ ತಿರುಗುವುದಿಲ್ಲ ಅದಕ್ಕೆ ಈ ಕಂಡೆನ್ಸರ್ಗಳ ಸಹಾಯ ಬೇಕು. ನೀವೇ ಕೆಲವೊಮ್ಮೆ ಗಮನಿಸಿರುವ ಹಾಗೆ ಫ್ಯಾನಿನ ಸ್ವಿಚ್ ಹಾಕಿದರೂ ಅದು ತಿರುಗದಿರುವುದನ್ನು ಗಮನಿಸಿರುತ್ತೀರಾ ಆನಂತರ ಮರದ ಕಡ್ಡಿಯನ್ನು ಬಳಸಿ ಅದನ್ನು ತಿರುಗಿಸುವ ಪ್ರಯತ್ನ ಮಾಡಿದ ಬಳಿಕ ಫ್ಯಾನ್ ಕೆಲಸ ಮಾಡಲು ಪ್ರಾರಂಭಿಸುತ್ತದೆ‌. The post Fan: ನಿಮ್ಮ ಮನೆಯಲ್ಲಿರುವ ಫ್ಯಾನ್ನಿಂದ ಸರಿಯಾದ ಗಾಳಿ ಬರ್ತಿಲ್ವಾ? ಹಾಗಾದ್ರೆ ಕೇವಲ ₹70 ಖರ್ಚು ಮಾಡಿ ಫ್ಯಾನ್ ಹೊಸದರಂತೆ ಕೆಲಸ ಮಾಡುತ್ತೆ! appeared first on Karnataka Times .

ಕರ್ನಾಟಕ ಟೈಮ್ಸ್ 26 Apr 2024 5:49 pm

ವಿವಾಹ ಪೆಂಡಾಲ್‍ಗೆ ಬೆಂಕಿ: ಆರು ಮಂದಿ ಸಜೀವ ದಹನ

ಪಾಟ್ನಾ: ಬಿಹಾರದ ದರ್ಬಾಂಗ ಜಿಲ್ಲೆಯಲ್ಲಿ ವಿವಾಹ ಪೆಂಡಾಲ್‍ನಲ್ಲಿ ಬೆಂಕಿ ಆಕಸ್ಮಿಕ ಸಂಭವಿಸಿ ಕನಿಷ್ಠ ಆರು ಮಂದಿ ಬೆಂಕಿಗೆ ಆಹುತಿಯಾದ ಘಟನೆ ಗುರುವಾರ ತಡರಾತ್ರಿ ನಡೆದಿದೆ. ಈ ಘಟನೆ ರಾತ್ರಿ 11.45ರ ಸುಮಾರಿಗೆ ಬಹೇರಾ ಪೊಲೀಸ್ ಠಾಣೆ ವ್ಯಾಪ್ತಿಯ ಅಲೀಂನಗರ ಎಂಬಲ್ಲಿ ಸಂಭವಿಸಿದೆ. ಸಿಡಿಮದ್ದುಗಳನ್ನು ಸಿಡಿಸುವ ವೇಳೆ ಪೆಂಡಾಲ್‍ಗೆ ಬೆಂಕಿ ಹತ್ತಿಕೊಂಡಿತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಪೆಂಡಾಲ್‍ನ ಒಳಗೆ ಕೆಲವು ದಹಿಸುವ ವಸ್ತುಗಳನ್ನು ಇರಿಸಿದ್ದರಿಂದ ಬೆಂಕಿ ಕೆಲವೇ ಕ್ಷಣಗಳಲ್ಲಿ ಇಡೀ ಪೆಂಡಾಲ್‍ಗೆ ಹರಡಲು ಕಾರಣವಾಯಿತು ಎನ್ನಲಾಗಿದೆ. ಘಟನೆಯಲ್ಲಿ ಸುನೀಲ್ ಪಾಸ್ವಾನ್ (26), ಲೀಲಾದೇವಿ (23), ಕಾಂಚನದೇವಿ (26), ಸಿದ್ಧಾಂತ ಕುಮಾರ್ (4), ಶಶಾಂಕ್ ಕುಮಾರ್ (3) ಮತ್ತು ಸಾಕ್ಷಿ ಕುಮಾರಿ (5) ಮೃತಪಟ್ಟಿದ್ದಾರೆ. ಮೂರು ಹಸುಗಳು ಕೂಡಾ ಬೆಂಕಿಗೆ ಆಹುತಿಯಾಗಿವೆ. ಬೆಂಕಿಗೆ ನಿಖರವಾದ ಕಾರಣ ಏನು ಎಂದು ಪತ್ತೆ ಮಾಡಲು ತನಿಖೆಗೆ ಆದೇಶಿಸಿದ್ದೇನೆ. ಏತನ್ಮಧ್ಯೆ ವಿಕೋಪ ನಿರ್ವಹಣಾ ಮಾರ್ಗಸೂಚಿ ಅನ್ವಯ ಜಿಲ್ಲಾಡಳಿತ ಸಂತ್ರಸ್ತರ ಕುಟುಂಬಗಳಿಗೆ ಸಾಧ್ಯವಾದ ಎಲ್ಲ ನೆರವನ್ನು ನೀಡುತ್ತಿದೆ ಎಂದು ಜಿಲ್ಲಾಧಿಕಾರಿ ರಾಜೀವ್ ರೋಶನ್ ಹೇಳಿದ್ದಾರೆ.

ವಾರ್ತಾ ಭಾರತಿ 26 Apr 2024 5:43 pm

ಜನ ಸಾಮಾನ್ಯರಂತೆ ಕ್ಯೂನಲ್ಲಿ ನಿಂತು ಮತ ಚಲಾಯಿಸಿದ ರಾಹುಲ್‌ ದ್ರಾವಿಡ್‌!

Rahul Dravid Cast his vote: ಭಾರತೀಯ ಕ್ರಿಕೆಟ್‌ನ ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್‌ಮನ್‌ ಹಾಗೂ ಟೀಮ್‌ ಇಂಡಿಯಾ ಹೆಡ್‌ ಕೋಚ್‌ ರಾಹುಲ್‌ ದ್ರಾವಿಡ್‌ ಅವರು ಶುಕ್ರವಾರ 2024ರ ಲೋಕ ಸಭಾ ಚುನಾವಣೆ ನಿಮಿತ್ತ ಬೆಂಗಳೂರಿನಲ್ಲಿ ಮತ ಚಲಾಯಿಸಿದರು. ತಮ್ಮ ಪತ್ನಿ ವಿಜೇತಾ, ಪುತ್ರ ಸಮಿತ್ ಅವರೊಂದಿಗೆ ರಾಹುಲ್ ದ್ರಾವಿಡ್‌ ಸರತಿ ಸಾಲಿನ ಮೂಲಕ ಮತ ಚಲಾಯಿಸಿದರು. ಮತ ಚಲಯಿಸಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ದ್ರಾವಿಡ್, ಪ್ರತಿಯೊಬ್ಬರೂ ಮತ ಚಲಾಯಿಸುವಂತೆ ಮನವಿ ಮಾಡಿದರು. ಆ ಮೂಲಕ ಬೆಂಗಳೂರಿನಲ್ಲಿ ದಾಖಲೆಯ ಮಟ್ಟದಲ್ಲಿ ಮತ ಚಲಾವಣೆಯಾಗಬೇಕೆಂದು ಹೇಳಿದ್ದಾರೆ.

ವಿಜಯ ಕರ್ನಾಟಕ 26 Apr 2024 5:40 pm

ಮತದಾನ ಮಾಡಲು ಲಂಡನ್ ನಿಂದ ಒಂದೂವರೆ ಲಕ್ಷ ರೂ. ಖರ್ಚು ಮಾಡಿಕೊಂಡು ಬಂದ ಸೋನಿಕಾ!

ಲೋಕಸಭಾ ಚುನಾವಣೆಯಡಿ ಕರ್ನಾಟಕದಲ್ಲಿ ನಡೆದ ಮೊದಲ ಹಂತದ ಮತದಾನದಲ್ಲಿ ಮಧ್ಯಾಹ್ನ 3 ಗಂಟೆಯವರೆಗೆ ಶೇ. 50ರ ಆಜುಬಾಜಿನಲ್ಲಿ ಮತದಾನವಾಗಿತ್ತು. ಅನೇಕ ಮತದಾರರು, ಅದರಲ್ಲೂ ಯುವ ಮತದಾರರು ಮತ ಚಲಾಯಿಸದೇ ಇರುವುದು ಭಾರೀ ಬೇಸರದ ಸಂಗತಿಯಾಗಿದೆ. ಇದೇ ವೇಳೆ, ದೂರದ ಲಂಡನ್ ನಲ್ಲಿ ಉದ್ಯೋಗಿಯಾಗಿರುವ ಮಂಡ್ಯ ಮೂಲದ ಸೋನಿಕಾ ಎಂಬುವರು ಮತದಾನಕ್ಕಾಗಿಯೇ ಲಂಡನ್ ನಿಂದ ಬಂದು ತಮ್ಮ ಹಕ್ಕು ಚಲಾಯಿಸಿದ್ದಾರೆ. ಈ ಪ್ರಯಾಣಕ್ಕಾಗಿ ಅವರು ಒಂದೂವರೆ ಲಕ್ಷ ರೂ. ಖರ್ಚು ಮಾಡಿದ್ದಾರೆ.

ವಿಜಯ ಕರ್ನಾಟಕ 26 Apr 2024 5:29 pm

ಹತ್ಯೆಯಾದ ನೇಹಾ ಮನೆಗೆ ಅನುಮಾನಾಸ್ಪದ ವ್ಯಕ್ತಿಗಳು ಆಗಮನ; ಬೆಡ್‌ ರೂಮ್‌ ವಿಡಿಯೋ ಸೆರೆ; ಕುಟುಂಬಕ್ಕೆ ಪೊಲೀಸ್‌ ಭದ್ರತೆ

Police Security For Neha Hiremath Father : ಹತ್ಯೆಯಾದ ನೇಹಾ ಕುಟುಂಬಸ್ಥರಿಗೆ ಪೊಲೀಸ್‌ ಇಲಾಖೆಯಿಂದ ಭದ್ರತೆಯ ವ್ಯವಸ್ಥೆ ಮಾಡಲಾಗಿದೆ. ಮೃತರ ಮನೆಗೆ ಸಾಂತ್ವನ ಹೇಳುವ ನೆಪದಲ್ಲಿ ಹಲವರು ಆಗಮಿಸುತ್ತಿದ್ದಾರೆ. ಈ ವೇಳೆ ಅನುಮಾನಾಸ್ಪದ ವ್ಯಕ್ತಿಗಳು ಬಂದ್ದಿದ್ದಾರೆ. ಕೆಲವರು ವಿಡಿಯೋ ಶೂಟ್‌ ಮಾಡಿದ್ದಾರೆ. ಈ ಬಗ್ಗೆ ವಿವರ ಇಲ್ಲಿದೆ.

ವಿಜಯ ಕರ್ನಾಟಕ 26 Apr 2024 5:27 pm

ಡಿಕೆ ಶಿವಕುಮಾರ್‌ ಪುತ್ರಿ ಐಶ್ವರ್ಯ ರಾಜಕೀಯಕ್ಕೆ ಬರ್ತಾರಾ? ಮತದಾನದ ಬಳಿಕ ಡಿಕೆ ಮಗಳು ಹೇಳಿದ್ದೇನು?

DK Shivakumar Daughter Aishwarya To Join Politics? : ಡಿಸಿಎಂ ಡಿಕೆ ಶಿವಕುಮಾರ್‌ ಅವರ ಪುತ್ರಿ ಐಶ್ವರ್ಯ ಅವರ ಇತ್ತೀಚಿನ ಕೆಲಸಗಳನ್ನು ನೋಡಿದರೆ ಅವರು ರಾಜಕೀಯಕ್ಕೆ ಬರುತ್ತಾರೆ ಎಂಬ ಚರ್ಚೆಗಳು ಶುರುವಾಗಿದ್ದವು. ಆದರೆ, ಇದಕ್ಕೆ ಐಶ್ವರ್ಯ ಹೆಗಡೆ ಸ್ಪಷ್ಟನೆಯನ್ನು ನೀಡಿದ್ದು, ನನಗೆ ರಾಜಕೀಯಕ್ಕೆ ಬರುವ ಉದ್ದೇಶ ಇಲ್ಲ ಎಂದಿದ್ದಾರೆ. ಈ ಮೂಲಕ ರಾಜಕೀಯ ಕ್ಷೇತ್ರದ ಬಗ್ಗೆ ನಿರಾಸಕ್ತಿ ವ್ಯಕ್ತಪಡಿಸಿದ್ದಾರೆ. ಅದಲ್ಲದೇ ನಾನು ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದು, ದೇಶಕ್ಕೆ ಅದು ಈಗ ಅಗತ್ಯವಿದೆ ಎಂದು ಹೇಳಿದರು.

ವಿಜಯ ಕರ್ನಾಟಕ 26 Apr 2024 5:13 pm

ಈ ಬಾರಿಯ ಲೋಕಸಭಾ ಸಮರ, ಜಗತ್ತಿನ ಸಾರ್ವಕಾಲಿಕ ದುಬಾರಿ ಚುನಾವಣೆ : ಖರ್ಚುವೆಚ್ಚ ಎಷ್ಟು ಗೊತ್ತೇ?

Costliest Ever Parliamnet Election : ಹದಿನೆಂಟನೇ ಲೋಕಸಭಾ ಚುನಾವಣೆಯು ವಿಶ್ವದ ಇದುವರೆಗಿನ ಅತ್ಯಂತ ದುಬಾರಿ ಚುನಾವಣೆಯಾಗಲಿದೆ ಎಂದು ಸೆಂಟರ್ ಫಾರ್ ಮೀಡಿಯಾ ಸ್ಟಡೀಸ್ ಅಭಿಪ್ರಾಯ ಪಟ್ಟಿದೆ. ಸುಮಾರು 1.35 ಲಕ್ಷ ಕೋಟಿ ರೂಪಾಯಿ ಖರ್ಚಾಗಲಿದೆ ಎಂದು ಅಂದಾಜಿಸಲಾಗಿದೆ.

ವಿಜಯ ಕರ್ನಾಟಕ 26 Apr 2024 5:11 pm

ಲೋಕಸಭಾ ಚುನಾವಣೆ : ಮತದಾನ ಮಾಡಿದ ಸಕಲೇಶಪುರದ ಶತಾಯುಷಿ ಸಿದ್ದಮ್ಮ

ಸಕಲೇಶಪುರ : ಲೋಕಸಭಾ ಚುನಾವಣೆ ಭರದಿಂದ ಸಾಗಿದ್ದು, ಯುವಕ ಯುವತಿಯರಿಂದ ಹಿಡಿದು ವೃದ್ಧರೆಲ್ಲರೂ ಮತ ಚಲಾಯಿಸುತ್ತಿದ್ದಾರೆ. ವೃದ್ಧರು ನಡೆಯಲಾಗದಿದ್ದರೂ ಮತಗಟ್ಟೆವರಿಗೂ ಬಂದು ಮತ ಚಲಾಯಿಸುತ್ತಿರುವುದು ಕಂಡು ಬಂದಿದೆ. ತಾಲೂಕಿನ ಬಾಳ್ಳುಪೇಟೆ ಗ್ರಾಪಂ ವ್ಯಾಪ್ತಿಯ ಹಸುಗವಳ್ಳಿ ಮತಗಟ್ಟೆಗೆ 101 ವರ್ಷದ ಸಿದ್ದಮ್ಮ ನಡೆದುಕೊಂಡು ಬಂದು ತನ್ನ ಹಕ್ಕು ಚಲಾಯಿಸಿದ್ದು ವಿಶೇಷವಾಗಿತ್ತು. ತನ್ನ ಇಳಿ ವಯಸ್ಸಿನಲ್ಲೂ ನೆಡೆದುಕೊಂಡು ಬಂದು ಮತ ಚಲಾವಣೆ ಮಾಡಿದ್ದು ಇತರರಿಗೆ ಪ್ರೇರಣೆ ನೀಡಿದೆ.

ವಾರ್ತಾ ಭಾರತಿ 26 Apr 2024 5:05 pm

ಧರ್ಮದ ಹೆಸರಿನಲ್ಲಿ ಮತಯಾಚನೆ: ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಧರ್ಮದ ಹೆಸರಿನಲ್ಲಿ ಮತ ಯಾಚಿಸಿ ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ಚುನಾವಣಾ ಆಯೋಗವು ಬೆಂಗಳೂರು ದಕ್ಷಿಣ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ವಿರುದ್ಧ ಪ್ರಕರಣ ದಾಖಲಿಸಿದೆ. ತಮ್ಮ ಎಕ್ಸ್‌ ಹ್ಯಾಂಡಲ್‌ನಲ್ಲಿ ವೀಡಿಯೋ ಪೋಸ್ಟ್‌ ಮಾಡಿ ಈ ಮೂಲಕ ಧರ್ಮದ ಆಧಾರದಲ್ಲಿ ಮತ ಯಾಚಿಸಿದ್ದಕ್ಕಾಗಿ ತೇಜಸ್ವಿ ಸೂರ್ಯ ವಿರುದ್ಧ ಸೆಕ್ಷನ್‌ 123(3) ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ರಾಜ್ಯದ ಮುಖ್ಯ ಚುನಾವಣಾ ಅಧಿಕಾರಿ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ವಾರ್ತಾ ಭಾರತಿ 26 Apr 2024 5:03 pm

ಜೆಡಿಎಸ್‌ನವರು ನನ್ನನ್ನು ಪ್ರಚಾರಕ್ಕೆ ಕರೆದಿಲ್ಲ ಎಂದ ಸುಮಲತಾ ಹೇಳಿಕೆಗೆ ಎಚ್‌ಡಿಕೆ ಪ್ರತಿಕ್ರಿಯಿಸಿದ್ದು ಹೀಗೆ..

ಮಂಡ್ಯ : ನಾನು ಸುಮಲತಾ ಅವರ ಮನೆ ಬಾಗಿಲಿಗೇ ಹೋಗಿ ಸಹಕಾರ ಕೇಳಿದ್ದೇನೆ, ಇದಕ್ಕಿಂತ ಇನ್ನೇನು ಮಾಡಬೇಕು? ಎಂದು ಸಂಸದೆ ಸುಮಲತಾ ಅವರ ಹೇಳಿಕೆಗೆ ಮಂಡ್ಯ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ. ಜೆಡಿಎಸ್‌ ಅವರು ನನ್ನ ಪ್ರಚಾರಕ್ಕೆ ಕರೆದಿಲ್ಲ ಎಂಬ ಸುಮಲತಾ ಹೇಳಿಕೆ ಸಂಬಂಧ ಮದ್ದೂರಿನ ಕೆ.ಹೊನ್ನಲಗೆರೆ ಗ್ರಾಮದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು‌, ನಾನು ಮೈಸೂರಿನ ಮೋದಿ ಕಾರ್ಯಕ್ರಮದಲ್ಲೂ ಕೂಡ ಸುಮಲತಾ ಅವರನ್ನು ಎರಡು ದಿನ ಪ್ರಚಾರಕ್ಕೆ ಬರುವಂತೆ ಕೋರಿದ್ದೆ ಎಂದರು. ಸುಮಲತಾ ಮಂಡ್ಯದಲ್ಲಿ ಕುಮಾರಸ್ವಾಮಿಗೆ ಸಪೋರ್ಟ್ ಮಾಡಿಲ್ಲ ಎಂಬ ದೇವೇಗೌಡರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ದೇವೇಗೌಡರು ಆ ರೀತಿ ಯಾಕೆ ಹೇಳಿದ್ದಾರೆ ಅಂತ ನನಗೆ ಗೊತ್ತಿಲ್ಲ. ದೇವೇಗೌಡರಿಗೆ ಮಾಹಿತಿ ಕೊರತೆ ಇರಬೇಕು ಅನಿಸುತ್ತೆ ಎಂದರು. ಪಕ್ಷಭೇದ ಮರೆತು ಕಾಂಗ್ರೆಸ್, ಬಿಜೆಪಿಯವ ನನ್ನ ಪರವಾಗಿ ಕೆಲಸ ಮಾಡಿದ್ದಾರೆ. ಯಾರು ವಿರೋಧ ಮಾಡಿಲ್ಲ. ಬೆಂಗಳೂರಿನಿಂದ ಬಂದು ಸುಮಲತಾ ಅವರೂ ನನಗೇ ಮತ ಹಾಕಿದ್ದಾರೆ. ಅಂಬರೀಷ್ ಅಭಿಮಾನಿಗಳು ಮತ ಹಾಕಿದ್ದಾರೆ. ಅತ್ಯಂತ ಬಹುಮತಗಳಿಂದ ಗೆಲ್ಲಲಿದ್ದೇನೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ವಾರ್ತಾ ಭಾರತಿ 26 Apr 2024 4:56 pm

ತೆಲಂಗಾಣ: ಇಂಟರ್‍ಮೀಡಿಯೇಟ್ ಫಲಿತಾಂಶ ಪ್ರಕಟಗೊಂಡ ಬೆನ್ನಲ್ಲೇ ಏಳು ವಿದ್ಯಾರ್ಥಿಗಳು ಆತ್ಮಹತ್ಯೆ

ಹೈದರಾಬಾದ್: ತೆಲಂಗಾಣದಲ್ಲಿ ಇಂಟರ್‍ಮೀಡಿಯೇಟ್ ಪರೀಕ್ಷೆ ಫಲಿತಾಂಶ ಪ್ರಕಟವಾದ 48 ಗಂಟೆಗಳಲ್ಲಿ, ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಏಳು ಮಂದಿ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತೆಲಂಗಾಣ ಇಂಟರ್‍ಮೀಡಿಯೇಟ್ ಎಕ್ಸಾಮಿನೇಷನ್ ಬೋರ್ಡ್ ಮೊದಲ ವರ್ಷದ ಹಾಗೂ ಎರಡನೇ ವರ್ಷದ ಫಲಿತಾಂಶವನ್ನು ಎಪ್ರಿಲ್ 24ರಂದು ಪ್ರಕಟಿಸಿತ್ತು. ಮೆಹಬೂಬಾಬಾದ್ ಎಸ್ಪಿಯವರ ಪ್ರಕಾರ, ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಇಬ್ಬರು ಬಾಲಕಿಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಒಬ್ಬ ವಿದ್ಯಾರ್ಥಿನಿ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡರೆ ಮತ್ತೊಬ್ಬಳು ಬಾವಿಗೆ ಹಾರಿ ಜೀವ ಕಳೆದುಕೊಂಡಿದ್ದಾಳೆ. ಅಂತೆಯೇ ಸುಲ್ತಾನ್‍ಬಜಾರ್ ಠಾಣೆ ವ್ಯಾಪ್ತಿಯಲ್ಲಿ ಮೊದಲ ವರ್ಷದ ವಿದ್ಯಾರ್ಥಿ ಪರೀಕ್ಷೆಯಲ್ಲಿ ಅನುತ್ತೀರ್ಣನಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಡಿಸಿಪಿ ಆರ್. ಗಿರಿಧರ್ ಹೇಳಿದ್ದಾರೆ. ನಗರದ ನಲ್ಲಕುಂಟಾದಲ್ಲಿ ವಿದ್ಯಾರ್ಥಿಯೊಬ್ಬನ ಶವ ಜಡಚೇರ್ಲಾ ರೈಲ್ವೆ ಹಳಿಯಲ್ಲಿ ಪತ್ತೆಯಾಗಿದೆ. ಪರೀಕ್ಷೆಯಲ್ಲಿ ಕಳಪೆ ಸಾಧನೆಯೇ ಈ ವಿದ್ಯಾರ್ಥಿಗಳ ಆತ್ಮಹತ್ಯೆಗೆ ಕಾರಣ ಎನ್ನುವುದು ಪೊಲೀಸರ ಶಂಕೆ.

ವಾರ್ತಾ ಭಾರತಿ 26 Apr 2024 4:55 pm

ಜೆಡಿಎಸ್ ನಾಯಕರು ನನ್ನನ್ನು ಚುನಾವಣಾ ಪ್ರಚಾರಕ್ಕೆ ಕರೆಯಲೇ ಇಲ್ಲ : ಸುಮಲತಾ ಸ್ಪಷ್ಟನೆ

ಮಂಡ್ಯ : ಜೆಡಿಎಸ್‌ನ ನಾಯಕರು ಯಾವುದೇ ಚುನಾವಣಾ ಪ್ರಚಾರ ಸಭೆಗೆ ನನ್ನನ್ನು ಆಹ್ವಾನಿಸಿಲ್ಲ ಎಂದು ಸಂಸದೆ ಸುಮಲತಾ ಅಂಬರೀಷ್ ಹೇಳಿದ್ದಾರೆ. ಮದ್ದೂರು ತಾಲೂಕಿನ ದೊಡ್ಡರಸಿನಕೆರೆಯಲ್ಲಿ ಮತದಾನ ಮಾಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್‌ನವರು ಸಭೆಗೆ ಕರೆದು ನಾನು ಬರದೆದೇ ಇದ್ದರೆ ತಪ್ಪಾಗುತ್ತೆ. ಆದರೆ, ಅವರು ನನ್ನನ್ನು ಕರೆದೇ ಇಲ್ಲ ಎಂದು ಸ್ಪಷ್ಟಪಡಿಸಿದರು. ದೇವೇಗೌಡ ದೊಡ್ಡವರು, ಅವರು ಸುಮಲತಾ ಬೆಂಬಲ ನೀಡಿಲ್ಲ ಎಂದು ಹೇಳಿದ್ದಾರೆ. ಬಹುಶಃ ಅವರಿಗೆ ಸರಿಯಾದ ಮಾಹಿತಿ ಇಲ್ಲದೆ ಆ ರೀತಿ ಹೇಳಿರಬಹುದು. ಅವರಿಂದ ಇಂತಹ ಹೇಳಿಕೆ ನಿರೀಕ್ಷೆ ಮಾಡಿರಲಿಲ್ಲ ಎಂದು ಹೇಳಿದರು. ಸ್ವತಂತ್ರ ಸಂಸದೆಯಾಗಿ ನನ್ನ ಜವಾಬ್ದಾರಿಯನ್ನು ನಿರ್ವಹಿಸಿದ್ದೀನಿ. ಮೋದಿ ಅವರು ಪ್ರಧಾನಿಯಾಗಬೇಕು ಎಂಬ ಉದ್ದೇಶದಿಂದ ನಾನು ಗೆದ್ದಂತಹ ಸ್ಥಾನವನ್ನು ತ್ಯಾಗ ಮಾಡಿದ್ದೀನಿ. ನನ್ನನ್ನು ಯಾವುದೇ ಪ್ರಚಾರಕ್ಕೆ ಕರೆದಿಲ್ಲ. ಕುಮಾರಸ್ವಾಮಿ ನಮ್ಮ ಮನೆಗೆ ಬಂದು ಹೋದ ನಂತರ ನನಗೆ ಒಂದು ಫೋನ್‌ ಕರೆ ಮಾಡಿ ಪ್ರಚಾರಕ್ಕೆ ಬನ್ನಿ ಎಂದು ಕೇಳಿಲ್ಲ. ತ್ಯಾಗ ಮಾಡಿಯೂ ನನ್ನ ಕರೆಯಲಿಲ್ಲ ಅನ್ನೋದು ನನಗೆ ಬೇಸರವಾಗಿದೆ ಎಂದು ಅವರು ಹೇಳಿದರು. ನನ್ನ ಅಭಿಮಾನಿಗಳು ಒಂದಷ್ಟು ಜನ ವಿರೋಧ ವ್ಯಕ್ತಪಡಿಸಿದರು. ಸೋತ ಸೀಟನ್ನೇ ಬಿಡಲ್ಲ, ಅದರಲ್ಲಿ ನಾನು ಗೆದ್ದ ಸೀಟನ್ನು ಬಿಟ್ಟು ಕೊಟ್ಟಿದ್ದೀನಿ. ಅವರ ಮನಸ್ಸಿನಲ್ಲಿ ಏನಿದೆ ಎಂಬುದು ನನಗೆ ಗೊತ್ತಿಲ್ಲ. ನನ್ನ ಪಕ್ಷ ಸೂಚನೆ ನೀಡಿದ ಕಡೆಗೆ ನಾನು ಪ್ರಚಾರಕ್ಕೆ ಹೋಗಿದ್ದೇನೆ. ಮಂಗಳೂರುವರೆಗೂ ಹೋಗಿದ್ದೀನಿ ಎಂದು ನುಡಿದರು.

ವಾರ್ತಾ ಭಾರತಿ 26 Apr 2024 4:42 pm

ಚಾಮರಾಜನಗರದ ಇಂಡಿಗನತ್ತ ಗ್ರಾಮದಲ್ಲಿ ಮತಗಟ್ಟೆ ಧ್ವಂಸ! ಲಾಠಿ ಪ್ರಹಾರ, ಕಲ್ಲು ತೂರಾಟ..

Poll Booth Vandalised In Chamarajanagar: ಗಡಿ ಜಿಲ್ಲೆಯ ಕುಗ್ರಾಮದಲ್ಲಿ ಯಾವುದೇ ಮೂಲ ಸೌಕರ್ಯ ಇಲ್ಲ ಅನ್ನೋ ಕಾರಣಕ್ಕೆ ಗ್ರಾಮಸ್ಥರು ಮತದಾನ ಬಹಿಷ್ಕಾರ ಮಾಡಿದ್ದರು. ತಾವು ಮತದಾನ ಮಾಡುತ್ತಿಲ್ಲ ಎಂದು ಪೊಲೀಸರಿಗೂ ಮಾಹಿತಿ ನೀಡಿದ್ದರು. ಇಷ್ಟಾದರೂ ತಹಶೀಲ್ದಾರ್ ಸೇರಿದಂತೆ ಹಲವು ಅಧಿಕಾರಿಗಳು ಮನವೊಲಿಕೆಗೆ ಮುಂದಾದಾಗ ರೊಚ್ಚಿಗೆದ್ದ ಸ್ಥಳೀಯರು ಮತಗಟ್ಟೆಗೆ ನುಗ್ಗಿ ಮತ ಯಂತ್ರವನ್ನು ಪುಡಿಗಟ್ಟಿದ್ದಾರೆ. ಈ ವೇಳೆ ಘರ್ಷಣೆ ಸಂಭವಿಸಿ ಪೊಲೀಸರು ಲಾಠಿ ಪ್ರಹಾರ ಕೂಡಾ ನಡೆಸಿದ್ದಾರೆ. ಕಲ್ಲು ತೂರಾಟವೂ ನಡೆದಿದೆ.

ವಿಜಯ ಕರ್ನಾಟಕ 26 Apr 2024 4:28 pm

ವೋಟಿಂಗ್‌ ದಿನವೂ ಮಂಡ್ಯದಲ್ಲಿ ಸುಮಲತಾ VS ಕುಮಾರಸ್ವಾಮಿ ಗುದ್ದಾಟ ; ದೇವೇಗೌಡರ ಹೇಳಿಕೆಯಿಂದ 2019ರ ಜಿದ್ದು ವಾಪಸ್‌ ಬಂತಾ?

Sumalatha Ambareesh VS HD Kumaraswamy : ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಎಚ್‌ಡಿ ಕುಮಾರಸ್ವಾಮಿ ಹಾಗೂ ಸುಮಲತಾ ಅಂಬರೀಶ್‌ ನಡುವೆ ಮತ್ತೆ ವಾಕ್ಸಮರ ನಡೆದಿದೆ. ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರ ಹೇಳಿಕೆಯಿಂದ ಇಬ್ಬರ ನಡುವೆ 2019ರ ಜಿದ್ದು ವಾಪಸ್‌ ಬಂತಾ ಎಂಬ ಪ್ರಶ್ನೆ ಮೂಡಿದೆ. ಎಚ್‌ಡಿ ದೇವೇಗೌಡರ ಹೇಳಿಕೆಗೆ ಬೇಸರಗೊಂಡಿರುವ ಸುಮಲತಾ ನನ್ನನ್ನು ಎಚ್‌ಡಿ ಕುಮಾರಸ್ವಾಮಿ ಪ್ರಚಾರಕ್ಕೆ ಕರೆದೇ ಇಲ್ಲ. ನಾನು ಎಲ್ಲಿಂದ ಹೋಗಲಿ ಎಂದಿದ್ದಾರೆ. ಇದಕ್ಕೆ ಎಚ್‌ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದು, ಮನೆಗೋಗಿ ಸಹಕಾರ ಕೇಳಿ ಬಂದಿದ್ದೇನೆ. ಇನ್ನೇನು ಮಾಡಲಿ ಹೇಳಲಿ ಎಂದು ತಿರುಗೇಟು ನೀಡಿದರು.

ವಿಜಯ ಕರ್ನಾಟಕ 26 Apr 2024 4:25 pm

ಟಿ20 ವಿಶ್ವಕಪ್‌ಗೆ ಭಾರತದ ಬೆಸ್ಟ್‌ ಬೌಲಿಂಗ್‌ ಬಳಗ ಹೆಸರಿಸಿದ ನವಜೋತ್ ಸಿಂಗ್ ಸಿಧು!

Navjot Sing Sidhu on Team India Bowling Combination: ಇದೇ ವರ್ಷ ವೆಸ್ಟ್‌ ಇಂಡೀಸ್‌ ಮತ್ತು ಅಮೆರಿಕದ ಜಂಟಿ ಆತಿಥ್ಯದಲ್ಲಿ ನಡೆಯಲಿರುವ ಐಸಿಸಿ ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಗೆ ಟೀಮ್ ಇಂಡಿಯಾದ 15 ಆಟಗಾರರ ಬಲಿಷ್ಠ ತಂಡದ ರಚನೆ ಮಾಡಲು ಟೀಮ್ ಇಂಡಿಯಾ ಸೆಲೆಕ್ಟರ್ಸ್‌ ಕೆಲವೇ ದಿನಗಳಲ್ಲಿ ಸಭೆ ಸೇರಲಿದ್ದಾರೆ. ರೋಹಿತ್ ಶರ್ಮಾ ಭಾರತದ ಟಿ20 ವಿಶ್ವಕಪ್ ತಂಡವನ್ನು ಮುನ್ನಡೆಸುವುದು ಖಾತ್ರಿಯಾಗಿದ್ದು, ತಂಡದ ಬೌಲಿಂಗ್‌ ವಿಭಾಗದಲ್ಲಿ ಯಾರೆಲ್ಲಾ ಇರಬೇಕು ಎಂದು ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ಮಾತನಾಡಿದ್ದಾರೆ.

ವಿಜಯ ಕರ್ನಾಟಕ 26 Apr 2024 4:23 pm

ಚುನಾವಣೆ ಕರ್ತವ್ಯ ನಿರ್ವಹಿಸುತ್ತಿರುವ ವೇಳೆ ಹೃದಯಾಘಾತ: ಚಳ್ಳಕೆರೆ ಶಿಕ್ಷಕಿ ಮತಗಟ್ಟೆಯಲ್ಲೇ ಸಾವು

ಚಳ್ಳಕೆರೆ/ತುಮಕೂರು : ಚುನಾವಣೆ ಕರ್ತವ್ಯ ನಿರ್ವಹಿಸಿದ್ದ ವೇಳೆ ಶಿಕ್ಷಕಿಯೊಬ್ಬರು ಹೃದಯಾಘಾತದಿಂದ ಮೃತಪಟ್ಟ ಘಟನೆ ಚಳ್ಳಕೆರೆ ತಾಲೂಕಿನಲ್ಲಿ ಶುಕ್ರವಾರ ನಡೆದಿದೆ. ಇದೇ ವೇಳೆ ಮತದಾನದ ಬಳಿಕ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಮೃತಪಟ್ಟ ಘಟನೆ ತುಮಕೂರಿನಿಂದ ವರದಿಯಾಗಿದೆ. ಚಳ್ಳಕೆರೆ ತಾಲೂಕಿನ ಹೊಟ್ಟೆಪ್ಪನಹಳ್ಳಿಯ ಮೇಗಳಗೊಲ್ಲರಹಟ್ಟಿ ಮತಗಟ್ಟೆ ಸಂಖ್ಯೆ 202ರಲ್ಲಿ ಸಹಾಯಕ ಮತಗಟ್ಟೆ ಅಧಿಕಾರಿ ಆಗಿ ಕರ್ತವ್ಯ ನಿರ್ವಹಿಸುವ ವೇಳೆ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ. ಮೃತರನ್ನು ಯಶೋಧ (58) ವರ್ಷ ಎಂದು ಗುರುತಿಸಲಾಗಿದೆ. ಮೃತ ಶಿಕ್ಷಕಿ ಯಶೋಧರ ಅವರು ಬೊಮ್ಮಸಂದ್ರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು.ಮುಂಜಾನೆ ಮತದಾನ ಆರಂಭದ ವೇಳೆಯಲ್ಲಿ ಯಶೋಧಮ್ಮನವರಿಗೆ ರಕ್ತದೊತ್ತಡದಲ್ಲಿ ಏರುಪೇರು ಉಂಟಾಗಿದೆ. ಸ್ಥಳಕ್ಕೆ ಆಗಮಿಸಿದ ಸೆಕ್ಟರ್ ಅಧಿಕಾರಿಗಳು ತಕ್ಷಣವೇ ಸ್ಪಂದಿಸಿ ವಾಹನದಲ್ಲಿ ಆಸ್ಪತ್ರೆ ಕರೆದೊಯ್ದಿದ್ದಾರೆ. ಆಸ್ಪತ್ರೆ ತಲುಪುವ ವೇಳೆಗಾಗಲೇ ತೀವ್ರ ಹೃದಯಾಘಾತಕ್ಕೆ ತುತ್ತಾದ್ದರಿಂದ ಯಶೋಧಮ್ಮ ಮೃತಪಟ್ಟಿದ್ದಾರೆ ಎಂದು ಸಹಾಯಕ ಚುನಾವಣಾಧಿಕಾರಿ ಆನಂದ.ಬಿ ಮಾಹಿತಿ ನೀಡಿದ್ದಾರೆ. ಮತದಾನದ ಬಳಿಕ ಕುಸಿದು ಸಾವು. ತುಮಕೂರಿನ ಎಸ್ .ಎಸ್. ಪುರಂ ಮತ ಕೇಂದ್ರದಿಂದ ಮತದಾನ ಮಾಡಿ ಬಂದಿದ್ದ ರಮೇಶ್‌ ಎಂಬವರು ಕುಸಿದು ಬಿದ್ದು ಮೃತಪಟ್ಟಿದ್ದಾರೆ. ರಮೇಶ್ ದಂಪತಿ ಸಮೇತವಾಗಿ ಇಂದು ಮತದಾನದಲ್ಲಿ ಪಾಲ್ಗೊಂಡಿದ್ದರು. ಬಳಿಕ ತಮ್ಮದೇ ಮಾಲಿಕತ್ವದ ಬಟ್ಟೆ ಅಂಗಡಿಗೆ ತೆರಳಿದ್ದಾಗ ದಿಢೀರನೆ ಕುಸಿದು ಬಿದ್ದು ಸಾವಿಗೀಡಾಗಿದ್ದಾರೆ. ಹೃದಯಾಘಾತದಿಂದ ಸಾವು ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. ಅವರು ಮಯೂರ ಯುವ ವೇದಿಕೆಯ ಸದಸ್ಯರಾಗಿ ಸಕ್ರಿಯರಾಗಿದ್ದರು. ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಮಧ್ಯಾಹ್ನ 3 ಗಂಟೆವರೆಗೆ ಶೇ 52.14% ಮತದಾನ ದಾಖಲಾಗಿದೆ. ಚಳ್ಳಕೆರೆ ವಿಧಾನ ಸಭಾ ಕ್ಷೇತ್ರದಲ್ಲಿ 52.72%, ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಲ್ಲಿ 51.68%, ಹೊಳಲ್ಕೆರೆ - 53.34%, ಹೊಸದುರ್ಗ-51.31%, ಮೊಳಕಾಲ್ಮೂರು- 56.66%, ಪಾವಗಡ- 48.13%, ಶಿರಾ-51.99% ಮತದಾನವಾಗಿದೆ.

ವಿಜಯ ಕರ್ನಾಟಕ 26 Apr 2024 4:23 pm

ದ.ಕ.-ಉಡುಪಿ: ನೂರಾರು ಅನಿವಾಸಿ ಕನ್ನಡಿಗರಿಂದ ಮತ ಚಲಾವಣೆ

ಮಂಗಳೂರು, ಎ.26: ವಿದೇಶದಲ್ಲಿ ಅದರಲ್ಲೂ ಗಲ್ಫ್ ರಾಷ್ಟ್ರಗಳಲ್ಲಿ ಉದ್ಯಮ ಹೊಂದಿರುವ, ಉದ್ಯೋಗ ಮಾಡುತ್ತಿರುವ ದ.ಕ. ಮತ್ತು ಉಡುಪಿ ಜಿಲ್ಲೆಯ ನೂರಾರು ಕನ್ನಡಿಗರು ಇಂದು ನಡೆದ ಲೋಕಸಭಾ ಚುನಾವಣೆಯಲ್ಲಿ ಮತ ಚಲಾಯಿಸಿದ್ದಾರೆ. ತಮ್ಮ ಹಕ್ಕುಗಳನ್ನು ಚಲಾಯಿಸಲೆಂದೇ 2-3 ದಿನಗಳ ಹಿಂದೆ ವಿದೇಶದಿಂದ ತವರೂರಿಗೆ ಬಂದಿರುವ ಈ ಅನಿವಾಸಿ ಕನ್ನಡಿಗರು ಮತ ಚಲಾಯಿಸಿ ಇತರರಿಗೆ ಮಾದರಿಯಾಗಿದ್ದಾರೆ. ಸೌದಿ ಅರೇಬಿಯಾದ ಅಲ್ ಮುಝೈನ್ ಕಂಪೆನಿಯ ಸಿಇಒ ಝಕರಿಯಾ ಜೋಕಟ್ಟೆ, ಎಕ್ಸ್ ಪರ್ಟೈಸ್ ಕಾಂಟ್ರಾಕ್ಟಿಂಗ್ ಕಂಪೆನಿ ಲಿ.ನ ನಿರ್ದೇಶಕ ಶೇಖ್ ಕರ್ನಿರೆ, ದುಬೈಯಲ್ಲಿರುವ ಖ್ಯಾತ ಉದ್ಯಮಿ, ಕೊಡುಗೈ ದಾನಿ ಹಾಗೂ ವಿಷನ್ ಕೊಂಕಣಿಯ ಪ್ರವರ್ತಕ ಮೈಕಲ್ ಡಿಸೋಜ ದಂಪತಿ, ಉದ್ಯಮಿಗಳಾದ ಸತೀಶ್ ಕುಮಾರ್ ಬಜಾಲ್, ಅಯಾಝ್ ಕೈಕಂಬ, ಇಬ್ರಾಹೀಂ ಪಡುಬಿದ್ರೆ, ಸಲಾಂ ಪಡುಬಿದ್ರೆ ಮತ್ತಿತರರು ಮತ ಚಲಾಯಿಸಲೆಂದೆ ಬಂದು ಗಮನ ಸೆಳೆದಿದ್ದಾರೆ. ನಾವು ಮತದಾನ ಮಾಡಲೆಂದೇ ವಿದೇಶದಿಂದ ಬಂದಿದ್ದೇವೆ. ಇಲ್ಲಿರುವ ಎಲ್ಲ ಮತದಾರರು ತಪ್ಪದೇ ಮತದಾನ ಮಾಡಬೇಕು ಎಂದು ಈ ಗಣ್ಯರು ಕರೆ ನೀಡಿದ್ದರು. ಹೀಗೆ ಇನ್ನೂ ನೂರಾರು ಮಂದಿ ಮತ ಚಲಾಯಿಸಲು ವಿದೇಶಗಳಿಂದ ಬಿಡುವು ಮಾಡಿಕೊಂಡು ಬಂದಿದ್ದಾರೆ. ''ಇದು ಕೇವಲ ಮತದಾನವಲ್ಲ, ಇದು ಪ್ರಜಾಪ್ರಭುತ್ವದ ಹಬ್ಬವೂ ಆಗಿದೆ. ಈ ಹಬ್ಬದಲ್ಲಿ ನಾವು ಸಂತೋಷದಿಂದಲೇ ಪಾಲ್ಗೊಂಡಿದ್ದೇವೆ. ನಮ್ಮ ಹಕ್ಕುಗಳನ್ನು ಚಲಾಯಿಸಿದ್ದೇವೆ. ದೇಶದಲ್ಲಿ ಮಹತ್ವದ ಬದಲಾವಣೆಗೆ ಇದು ನಾಂದಿ ಹಾಡಲಿ'' ಎಂದು ಉದ್ಯಮಿ ಹಾಗೂ ಸೌದಿ ಅರೇಬಿಯಾದ ಜುಬೈಲ್ ನಲ್ಲಿ ಕಳೆದ ಬಾರಿ ನಡೆದ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯ ಕೋಶಾಧಿಕಾರಿ ಅಯಾಝ್ ಕೈಕಂಬ ಪ್ರತಿಕ್ರಿಯಿಸಿದ್ದಾರೆ. ''ಪರಸ್ಪರ ಪ್ರೀತಿ, ಸೌಹಾರ್ದ ಮೂಡಿಬರಬೇಕು. ದ.ಕ. ಜಿಲ್ಲೆಯಲ್ಲಿ ಗತಕಾಲದ ವೈಭವ ಪುನರಾವರ್ತನೆಯಾಗಬೇಕು. 33 ವರ್ಷಗಳಲ್ಲಿ ಆಗದ ಅಭಿವೃದ್ಧಿ ಕೆಲಸ ಕಾರ್ಯಗಳು ಮತ್ತೆ ಮರುಕಳಿಸಬೇಕು. ಸಾಕಷ್ಟು ಕೈಗಾರಿಕೆಗಳು ಸ್ಥಾಪನೆಗೊಳ್ಳಬೇಕು. ಉದ್ಯೋಗ ಸೃಷ್ಟಿಯಾಗಬೇಕು. ಜಾತಿ, ಧರ್ಮದ ಹೆಸರಿನಲ್ಲಿ ಸಮಸ್ಯೆ ಸೃಷ್ಟಿಸಿಕೊಳ್ಳದೆ, ಅಪನಂಬಿಕೆಯನ್ನುಂಟು ಮಾಡಬಾರದು. ಸಮಾಜದಲ್ಲಿ ಶಾಂತಿ ನೆಲೆಸಬೇಕು. ಅದಕ್ಕಾಗಿ ನಾವು ವಿದೇಶದಲ್ಲಿದ್ದರೂ ಊರಿಗೆ ಬಂದು ನಮ್ಮ ಹಕ್ಕುಗಳನ್ನು ಚಲಾಯಿಸಿದ್ದೇವೆ. ದೇಶದಲ್ಲಿ ಸುಭದ್ರ ಸರಕಾರ ನಿರ್ಮಿಸುವುದೇ ನಮ್ಮ ಆಶಯವಾಗಿದೆ'' ಎಂದು ಉದ್ಯಮಿ ಹಾಗೂ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷ ಸತೀಶ್ ಕುಮಾರ್ ಬಜಾಲ್ ಪ್ರತಿಕ್ರಿಯಿಸಿದ್ದಾರೆ. ಝಕರಿಯಾ ಜೋಕಟ್ಟೆ ಶೇಖ್ ಕರ್ನಿರೆ ಸತೀಶ್ ಕುಮಾರ್ ಬಜಾಲ್ ಅಯಾಝ್ ಕೈಕಂಬ ಇಬ್ರಾಹೀಂ ಪಡುಬಿದ್ರೆ-ಸಲಾಂ ಪಡುಬಿದ್ರೆ           

ವಾರ್ತಾ ಭಾರತಿ 26 Apr 2024 4:17 pm

ಚಾಮರಾಜನಗರ : ಆಕ್ರೋಶಿತ ಗುಂಪಿನಿಂದ ಮತಗಟ್ಟೆ ಧ್ವಂಸ

ಚಾಮರಾಜನಗರ : ಮತದಾನ ಬಹಿಷ್ಕಾರ ಹಾಕಿದ್ದ ಮತದಾರರನ್ನು ಮನ ವೊಲಿಸಲು ಯತ್ನಿಸಿದ್ದ ಪೊಲೀಸ್ ಇನ್ಸ್ ಪೆಕ್ಟರ್, ತಹಸೀಲ್ದಾರ್ ಹಾಗೂ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳ ಮಾತಿಗೆ ಕೆರಳಿದ ಗುಂಪೊಂದು ಮಾತಿನ ಚಕಮಕಿಯಿಂದಾಗಿ ಮತಗಟ್ಟೆ ದ್ವಂಸ ಮಾಡಿದ ಘಟನೆ ಚಾಮರಾಜನಗರ ಜಿಲ್ಲೆಯ ಮಹದೇಶ್ವರ ಬೆಟ್ಟದ ಇಂಡಿಗನತ್ತ ಗ್ರಾಮದಲ್ಲಿ ನಡೆದಿರುವುದಾಗಿ ವರದಿಯಾಗಿದೆ. ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯತಿ ವ್ಯಾಪ್ತಿಯ ಇಂಡಿಗನತ್ತ ಗ್ರಾಮದಲ್ಲಿ ಮೂಲಭೂತ ಸೌಕರ್ಯ ಕೊರತೆ ಹಿನ್ನಲೆಯಲ್ಲಿ ಮತ ಬಹಿಷ್ಕಾರಕ್ಕೆ ಮುಂದಾಗಿದ್ದರು. ಇದನ್ನು ಅರಿತ ತಹಸೀಲ್ದಾರ್ ಗುರುಪ್ರಸಾದ್, ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಉಮೇಶ್ ಹಾಗೂ ಪೊಲೀಸ್ ಇನ್ಸ್ ಪೆಕ್ಟರ್ ರವರು ಮತದಾರರನ್ನು ಮನವೊಲಿಸಲು ಮುಂದಾದರು. ಮತ ಚಲಾವಣೆಗೆ ಬಂದ ಮತದಾರರನ್ನು ಕಂಡು ಕೆರಳಿದ ಮತ್ತೊಂದು ಗುಂಪಿನವರು ಮಾತಿನ‌ ಚಕಮಕಿ ನಡೆದಾಗ ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಮತಗಟ್ಟೆ ಗೆ ನುಗ್ಗಿದ ಪ್ರತಿಭಟನಾಕಾರರು ವಿದ್ಯುನ್ಮಾನ ಯಂತ್ರ ನಾಶ ಪಡಿಸಿ ಮತಗಟ್ಟೆ ದ್ವಂಸ ಮಾಡಿದರು ಎನ್ನಲಾಗಿದೆ. ಈ ವೇಳೆ ಮಹಿಳೆಯರೊಬ್ಬರ ತಲೆಗೆ ಪೆಟ್ಟಾಗಿದೆ ಪ್ರಸ್ತುತ ಇಂಡಿಗನತ್ತ ಗ್ರಾಮದ ಮತಗಟ್ಟೆ ಯಲ್ಲಿ ಮತದಾನ ಸ್ಥಗಿತಗೊಂಡಿದೆ ಎಂದು ತಿಳಿದು ಬಂದಿದೆ.

ವಾರ್ತಾ ಭಾರತಿ 26 Apr 2024 4:13 pm

EVM ಪರ ಸುಪ್ರೀಂ ತೀರ್ಪು: ವಿಪಕ್ಷಗಳ ಮತಪೆಟ್ಟಿಗೆ ಲೂಟಿ ಕನಸು ನುಚ್ಚುನೂರು: ಪ್ರಧಾನಿ ಲೇವಡಿ

PM Modi On EVM: ಭಾರತ ದೇಶದ ಭವ್ಯ ಪ್ರಜಾಪ್ರಭುತ್ವ ಹಾಗೂ ಚುನಾವಣೆಗಳಲ್ಲಿ ತಂತ್ರಜ್ಞಾನ ಬಳಸುವ ವಿಧಾನವನ್ನು ಇಡೀ ವಿಶ್ವವೇ ಕೊಂಡಾಡುತ್ತಿದೆ. ಆದರೆ, ವಿರೋಧ ಪಕ್ಷಗಳು ಮಾತ್ರ ತಮ್ಮ ಸ್ವಾರ್ಥಕ್ಕಾಗಿ ಇವಿಎಂ ವಿರುದ್ಧ ದೂಷಣೆ ಮಾಡುತ್ತಿವೆ. ಇದೀಗ ಸುಪ್ರೀಂ ಕೋರ್ಟ್‌ ಇವಿಎಂ ಪರ ತೀರ್ಪು ಕೊಟ್ಟಿರುವ ಹಿನ್ನೆಲೆಯಲ್ಲಿ ಸಾಂಪ್ರದಾಯಿಕ ಮತ ಪೆಟ್ಟಿಗೆಗಳನ್ನು ಲೂಟಿ ಮಾಡಬಹುದು ಎಂದು ಕನಸು ಕಾಣುತ್ತಿದ್ದ ವಿಪಕ್ಷಗಳಿಗೆ ಆಘಾತ ಆಗಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

ವಿಜಯ ಕರ್ನಾಟಕ 26 Apr 2024 4:08 pm

ಉಡುಪಿ: ರಾಜೀವ ನಗರ ಮತಗಟ್ಟೆಯಲ್ಲಿ ನಕಲಿ ಮತದಾನ ಆರೋಪ

ಉಡುಪಿ, ಎ.26: ಕಾಪು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 80ನೇ ಬಡಗಬೆಟ್ಟು ಗ್ರಾಪಂನ ರಾಜೀವ ನಗರ ಸಂಯುಕ್ತ ಪ್ರೌಢಶಾಲೆಯ ಮತಗಟ್ಟೆಯಲ್ಲಿ ವ್ಯಕ್ತಿಯೊಬ್ಬರ ಹೆಸರಿನಲ್ಲಿ ಬೇರೆ ವ್ಯಕ್ತಿ ಆಗಮಿಸಿ ಮತದಾನ ಮಾಡಿದ್ದು, ಇಲ್ಲಿ ನಕಲಿ ಮತದಾನ ನಡೆದಿರುವ ಆರೋಪಗಳು ಕೇಳಿಬಂದಿವೆ. ಅರ್ಬಿಯ ಕೃಷ್ಣ ನಾಯಕ್ ಎಂಬವರು ಮತದಾನ ಮಾಡಲು ಮತಗಟ್ಟೆಗೆ ಆಗಮಿಸಿದಾಗ ತಮ್ಮ ಹೆಸರಿನಲ್ಲಿ ಆಗಲೇ ಮತದಾನ ಮಾಡಿರುವುದಾಗಿ ಮತ ಗಟ್ಟೆ ಅಧಿಕಾರಿಗಳು ತಿಳಿಸಿದರು. ಆದರೆ ನಾನು ಮತದಾನ ಮಾಡಿಲ್ಲ ಎಂದು ಕೃಷ್ಣ ನಾಯಕ್ ವಾದ ಮಂಡಿಸಿದರು. ಇದರಿಂದ ಸ್ಥಳದಲ್ಲಿ ಗೊಂದಲದ ವಾತಾವರಣ ಉಂಟಾಯಿತು. ಪಕ್ಷದ ಏಜೆಂಟ್ ಗಳು ಈ ವಿಚಾರದಲ್ಲಿ ಸಂಬಂಧಪಟ್ಟ ಮತಗಟ್ಟೆಯ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು. ಕೃಷ್ಣ ನಾಯಕ್ ಹೆಸರಿನಲ್ಲಿ ಯಾರೋ ನಕಲಿ ಮತದಾನ ಮಾಡಿದ್ದಾರೆಂದು ಆರೋಪಿಸಲಾಯಿತು. ಆದುದರಿಂದ ಈ ಮತಗಟ್ಟೆಯಲ್ಲಿ ಮರು ಮತದಾನ ಆಗಬೇಕು ಎಂದು ಅವರು ಒತ್ತಾಯಿಸಿದರು. ಮುಖ ನೋಡದೆ ಒಬ್ಬರ ಹೆಸರಿನಲ್ಲಿ ಇನ್ನೊಬ್ಬರಿಗೆ ಮತದಾನ ಮಾಡಲು ಹೇಗೆ ಅವಕಾಶ ಮಾಡಿಕೊಟ್ಟಿದ್ದೀರಿ ಎಂದು ಅವರು ಅಧಿಕಾರಿಯನ್ನು ಪ್ರಶ್ನಿಸಿದರು. ಈ ಕುರಿತು ತಮ್ಮಿಂದ ಆಗಿರುವ ತಪ್ಪನ್ನು ಅಧಿಕಾರಿಗಳು ಒಪ್ಪಿಕೊಂಡರು. ಈ ಬಗ್ಗೆ ಸರಿಪಡಿಸುವುದಾಗಿ ಭರವಸೆ ನೀಡಿದರು. ಬಳಿಕ ಸ್ಥಳಕ್ಕೆ ಮಣಿಪಾಲ ಪೊಲೀಸ್ ನಿರೀಕ್ಷಕ ದೇವರಾಜ್, ಸೆಕ್ಟರ್ ಆಫೀಸರ್ ನಿಧೀಶ್ ಆಗಮಿಸಿ ಮಾತುಕತೆ ನಡೆಸಿದರು. ಕೃಷ್ಣ ನಾಯಕ್ ಹೆಸರಿನಲ್ಲಿ ಮತದಾನ ಮಾಡಿರುವವರನ್ನು ಹುಡುಕುವ ಪ್ರಯತ್ನ ನಡೆಯುತ್ತಿದೆ. ಈ ಬಗ್ಗೆ ಸಿಸಿಟಿವಿ ದೃಶ್ಯಾವಳಿಯ ಪರಿಶೀಲನೆ ನಡೆಸಲಾಗುತ್ತಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಡಾ.ವಿದ್ಯಾ ಕುಮಾರಿ ಅವರನ್ನು ಸಂಪರ್ಕಿಸಿದಾಗ, ಇಲ್ಲಿ ನಕಲಿ ಮತದಾನ ಆಗಿಲ್ಲ. ಒಂದೇ ಹೆಸರಿನ ಇಬ್ಬರು ವ್ಯಕ್ತಿಗಳಿರುವುದರಿಂದ ಅದಲು ಬದಲು ಆಗಿರಬಹುದು. ಈ ಬಗ್ಗೆ ಅಧಿಕಾರಿಗಳು ಪರಿಶೀಲಿಸಿ ಎಲ್ಲರಿಗೂ ಮತದಾನಕ್ಕೆ ಅವಕಾಶ ಮಾಡಿಕೊಡಲಿದ್ದಾರೆ ಎಂದರು. ‘ಮತದಾನ ಮಾಡಲು ಬರುವಾಗ ಸ್ವಲ್ಪ ತಡವಾಗಿತ್ತು. ಆದರೂ ಮತದಾನ ಮಾಡಲು ಒಳಗೆ ಹೋಗಿ ಸ್ಲಿಪ್ ಕೊಟ್ಟು, ಎಪಿಕ್ ಕಾರ್ಡ್ ತೋರಿಸಿದೆ. ಆಗ ಅಧಿಕಾರಿಗಳು ಈ ಹೆಸರಿನಲ್ಲಿ ಮತದಾನ ಮಾಡಿ ಆಗಿದೆ ಎಂದು ಹೇಳಿದರು. ಅದಕ್ಕೆ ನಾನು ಮತದಾನ ಮಾಡಿಲ್ಲ ಎಂದು ತಿಳಿಸಿದೆ. ಅದಕ್ಕೆ ಟೆಂಡರ್ ಮತ ಹಾಕುವಂತೆ ಅಧಿಕಾರಿಗಳು ತಿಳಿಸಿದರು. ನನ್ನ ಹೆಸರಿನಲ್ಲಿ ಯಾರು ಹಾಕಿದ್ದಾರೆ ಎಂದು ಗೊತ್ತಿಲ್ಲ’ -ಕೃಷ್ಣ ನಾಯಕ್, ಮತದಾರ

ವಾರ್ತಾ ಭಾರತಿ 26 Apr 2024 4:00 pm

ಲೋಕಸಭಾ ಚುನಾವಣೆ : 3 ಗಂಟೆ ವೇಳೆಗೆ ರಾಜ್ಯದಲ್ಲಿ 50.93 ಶೇ. ಮತದಾನ

ಬೆಂಗಳೂರು: ಎರಡನೇ ಹಂತದ ಲೋಕಸಭೆ ಚುನಾವಣೆ ನಡೆಯುತ್ತಿರುವ ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮಧ್ಯಾಹ್ನ 3 ಗಂಟೆಯ ವೇಳೆ 50.93 ಶೇ. ಮತದಾನವಾಗಿದೆ ಎಂದು ಚುನಾವಣಾ ಆಯೋಗದ ಪ್ರಕಟನೆ ತಿಳಿಸಿದೆ. ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ 57.49 ಶೇ. ಮತದಾನವಾಗಿದ್ದರೆ, ಹಾಸನ 55.92 ಶೇ., ದಕ್ಷಿಣ ಕನ್ನಡ 58.76 ಶೇ., ಚಿತ್ರದುರ್ಗ- 52.14 ಶೇ., ತುಮಕೂರು 56.62 ಶೇ., ಮಂಡ್ಯ 57.44 ಶೇ., ಮೈಸೂರು 53.55, ಚಾಮರಾಜನಗರ- 54.82 ಶೇ., ಬೆಂಗಳೂರು ಗ್ರಾಮಾಂತರ-49.62 ಶೇ., ಬೆಂಗಳೂರು ಉತ್ತರ-41.12, ಬೆಂಗಳೂರು ಸೆಂಟ್ರಲ್-40.10 ಶೇ., ಬೆಂಗಳೂರು ದಕ್ಷಿಣ-40.77 ಶೇ., ಚಿಕ್ಕಬಳ್ಳಾಪುರ 55.90 ಶೇ. ಹಾಗೂ ಕೋಲಾರ ಲೋಕಸಭಾ ಕ್ಷೇತ್ರದಲ್ಲಿ 54.66 ಶೇ. ಮತದಾನವಾಗಿದೆ.

ವಾರ್ತಾ ಭಾರತಿ 26 Apr 2024 3:53 pm

ಇವಿಎಂಗಳಿಗೆ ತಾಂತ್ರಿಕ ಮಾನ್ಯತೆ ನೀಡುವ ಸಮಿತಿಯ ಬಗ್ಗೆಯೇ ಕಾಡುತ್ತಿರುವ ಹಲವು ಪ್ರಶ್ನೆಗಳು

ಇವಿಎಂಗಳ ಕುರಿತ ಅನುಮಾನಗಳು, ಅವುಗಳನ್ನು ಇಟ್ಟುಕೊಂಡು ಬಿಜೆಪಿ ಆಡಬಹುದಾದ ಆಟಗಳ ಬಗೆಗಿನ ಆತಂಕಗಳು ತೀವ್ರವಾಗಿರುವಾಗಲೇ ಮತ್ತೂ ಒಂದು ದೊಡ್ಡ ಸಮಸ್ಯೆ ಎದುರಾಗಿದೆ. ಇವಿಎಂಗಳಿಗೆ ತಾಂತ್ರಿಕ ಮಾನ್ಯತೆ ನೀಡುವ ಸಮಿತಿಯ ಬಗ್ಗೆಯೇ ಹಲವು ಪ್ರಶ್ನೆಗಳು ಎದ್ದಿವೆ. ಆ ಸಮಿತಿಯೊಳಗೇ ವೈರುಧ್ಯಗಳು, ಗೊಂದಲಗಳಿವೆ ಎಂಬ ವಿಚಾರ ಬಯಲಾಗಿದ್ದು, thenewsminute.comನಲ್ಲಿ ನೀಲ್ ಮಾಧವ್ ಮತ್ತು ಪಾರ್ಥ್ ಎಂ.ಎನ್. ಬರೆದಿರುವ ತನಿಖಾ ವರದಿಯಲ್ಲಿರುವ ಮುಖ್ಯ ವಿವರಗಳನ್ನು ಇಲ್ಲಿ ಸಂಗ್ರಹಿಸಿ ನೀಡಲಾಗಿದೆ.

ವಾರ್ತಾ ಭಾರತಿ 26 Apr 2024 3:44 pm

ನನ್ನನ್ನು ರಣಹೇಡಿ ಅನ್ನೋರು ರಾತ್ರೋರಾತ್ರಿ ಕದ್ದುಮುಚ್ಚಿ ಗಿಫ್ಟ್ ಕೂಪನ್, ಹಣ ಹಂಚ್ತಿದ್ದಾರೆ : ಡಿಕೆಶಿ ವಿರುದ್ಧ ಎಚ್‌ಡಿ ಕುಮಾರಸ್ವಾಮಿ ಕಿಡಿ

HD Kumaraswamy On DK Shivakumar : ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಅವರು ಡಿಸಿಎಂ ಡಿಕೆ ಶಿವಕುಮಾರ್‌ ವಿರುದ್ಧ ಕಿಡಿಕಾರಿದ್ದಾರೆ. ನನ್ನನ್ನು ರಣಹೇಡಿ ಎನ್ನುವವರು ರಾತ್ರೋರಾತ್ರಿ ಕದ್ದುಮುಚ್ಚಿ ಗಿಫ್ಟ್‌, ಕೂಪನ್‌, ಹಣ ಹಾಗೂ ದೇವರ ಲಾಡು ಹಂಚುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ರಾಮನಗರದಲ್ಲಿ ಅಕ್ರಮ ತಡೆಯಲಾಗದ ಚುನಾವಣಾ ಆಯೋಗ ಬಾಗಿಲು ಹಾಕಿಕೊಳ್ಳೋದು ಒಳ್ಳೆಯದು, ಇಂಥ ಚುನಾವಣೆಯನ್ನು ಪ್ರಜಾಪ್ರಭುತ್ವದ ಹಬ್ಬ ಎಂದು ಕರೆಯಬೇಕಾ? ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿಜಯ ಕರ್ನಾಟಕ 26 Apr 2024 3:36 pm

ನೇಹಾ ಹತ್ಯೆ ಪ್ರಕರಣದ ತನಿಖೆ ದಾರಿ ತಪ್ಪಿದೆ; ಇತರೆ ಹಲವರನ್ನು ಬಂಧಿಸಿ ವಿಚಾರಣೆ ನಡೆಸಿಲ್ಲ - ಬಸವರಾಜ ಬೊಮ್ಮಾಯಿ

Basavaraja Bommai About Neha Murder Investigation : ಹುಬ್ಬಳ್ಳಿಯಲ್ಲಿ ಕೊಲೆಗೀಡಾದ ನೇಹಾ ಕುಟುಂಬವನ್ನು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಭೇಟಿ ಮಾಡಿದ್ದಾರೆ. ಹತ್ಯೆ ಪ್ರಕರಣವು ದಾರಿತಪ್ಪಿದೆ. ಹಲವರನ್ನು ಬಂಧಿಸಿ ವಿಚಾರಣೆ ನಡೆಸಿಲ್ಲ. ಸಿಬಿಐಗೆ ಒಪ್ಪಿಸಬೇಕು ಎಂದು ಒತ್ತಾಯ ಮಾಡಿದ್ದಾರೆ. ಈ ಬಗ್ಗೆ ವಿವರ ಇಲ್ಲಿದೆ.

ವಿಜಯ ಕರ್ನಾಟಕ 26 Apr 2024 3:33 pm

ಫಿಲಿಫೈನ್ಸ್ ನಿಂದ ಬಂದು ಮತದಾನ ಮಾಡಿ ಮಾದರಿಯಾದ ಚಿತ್ರದುರ್ಗದ ವೈದ್ಯ ವಿದ್ಯಾರ್ಥಿನಿ

ಮನೆ ಪಕ್ಕದಲ್ಲೇ ಮತಗಟ್ಟೆಯಿದ್ದರೂ ತೆರಳಿ ಮತದಾನ ಮಾಡದೆ ನಿರ್ಲಕ್ಷ್ಯ ಧೋರಣೆ ತಾಳುವವರು ಬಹಳಷ್ಟು ಮಂದಿ ಇದ್ದಾರೆ. ಅಂಥದ್ದರಲ್ಲಿ ವಿದೇಶದಿಂದ ಆಗಮಿಸಿ ಮತದಾನ ಮಾಡುವುದು ನಿಜಕ್ಕೂ ಮಾದರಿ ಸಂಗತಿ. ಕರಾವಳಿ ಮತ್ತು ಕೇರಳದಲ್ಲಿ ಇಂತಹ ಬಹಳಷ್ಟು ಮತದಾರರಿದ್ದಾರೆ. ಇದೀಗ ಚಿತ್ರದುರ್ಗ ಜಿಲ್ಲೆಯ ವಿದ್ಯಾರ್ಥಿನಿಯೊಬ್ಬರು ಈ ರೀತಿ ಮತದಾನ ಮಾಡಿ ಮಾದರಿಯಾಗಿದ್ದಾರೆ. ಚಿತ್ರದುರ್ಗದ ಶಿಕ್ಷಕರ ಕಾಲೋನಿ ನಿವಾಸಿ ಲಿಖಿತಾ ಫಿಲಿಫೈನ್ಸ್ ನಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದಾರೆ. ರಜೆಯಲ್ಲಿ ಊರಿಗೆ ಬಂದಿದ್ದ ಅವರು ಶುಕ್ರವಾರ ಮತಗಟ್ಟೆಗೆ ತೆರಳಿ ಹಕ್ಕು ಚಲಾಯಿಸಿದರು.

ವಿಜಯ ಕರ್ನಾಟಕ 26 Apr 2024 3:15 pm

ಮೈಸೂರು ಜಿಲ್ಲೆ ಹುಣಸೂರಿನಲ್ಲಿ ಮತದಾನದ ಬಳಿಕ ಇಹಲೋಕ ತ್ಯಜಿಸಿದ 91 ವರ್ಷ ವಯಸ್ಸಿನ ವೃದ್ಧೆ

Old Woman Dies After Casting Vote: ಮತದಾನ, ಶ್ರೇಷ್ಠ ದಾನ. ಆದರೆ, ಯುವಕರು ಮತದಾನ ಮಾಡಲು ಉತ್ಸಾಹವನ್ನೇ ತೋರಿಸಲ್ಲ. ಅಂತಾದ್ರಲ್ಲಿ 91 ವರ್ಷ ವಯಸ್ಸಿನ ವೃದ್ಧೆಯೊಬ್ಬರು ಶುಕ್ರವಾರ ಬೆಳಗ್ಗೆಯೇ ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ಕಲ್ಲಳ್ಳಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಸ್ಥಾಪನೆಯಾಗಿದ್ದ ಮತಗಟ್ಟೆ ಎದುರು ನಿಂತಿದ್ದರು. ಬಿಸಿಲ ಝಳದ ನಡುವಲ್ಲೂ ತಮ್ಮ ಹಕ್ಕು ಚಲಾಯಿಸಿದ ವೃದ್ಧೆ ಪುಟ್ಟಮ್ಮ, ಮನೆಗೆ ತೆರಳಿದ ಬಳಿಕ ಇಹಲೋಕವನ್ನೇ ತ್ಯಜಿಸಿದ್ದಾರೆ. ವಯೋವೃದ್ಧರಾದರೂ ಮತ ಚಲಾಯಿಸಿದ್ದ ಪುಟ್ಟಮ್ಮ ಯುವಕರಿಗೆ ಮಾದರಿಯಾಗಿದ್ದರು.

ವಿಜಯ ಕರ್ನಾಟಕ 26 Apr 2024 3:06 pm

ಕಾಂಗ್ರೆಸ್‌ಗೆ ರಾಜ್ಯದಲ್ಲಿ ಉತ್ತಮ ವಾತಾವರಣ ಇದೆ, 20ಕ್ಕೂ ಹೆಚ್ಚು ಸ್ಥಾನ ಗೆಲ್ಲಲಿದ್ದೇವೆ: ಸಿದ್ದರಾಮಯ್ಯ

ಕರ್ನಾಟಕದಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಉತ್ತಮ ವಾತಾವರಣ ಇದ್ದು, 20ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲ್ಲಲಿದ್ದೇವೆ ಎಂದು ಮುಖ್ಯಮಂತ್ರಿ‌ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಶುಕ್ರವಾರ ತಮ್ಮ ಸ್ವಗ್ರಾಮ ಮೈಸೂರಿನ ವರುಣಾ ಕ್ಷೇತ್ರದ ಸಿದ್ದರಾಮನಹುಂಡಿಯಲ್ಲಿ ಪುತ್ರ ಡಾ ಯತೀಂದ್ರ ಸಿದ್ದರಾಮಯ್ಯ ಜೊತೆ ಅವರು ಮತಚಲಾಯಿಸದರು. ಕ್ಷೇತ್ರದಲ್ಲಿ ಮಧ್ಯಾಹ್ನ 1 ಗಂಟೆವರೆಗೆ ಶೇಕಡಾ 41.58ರಷ್ಟು ಮತದಾನ ನಡೆದಿದೆ.

ವಿಜಯ ಕರ್ನಾಟಕ 26 Apr 2024 3:01 pm

2ನೇ ಹಂತದ ಚುನಾವಣೆ ಕಣದಲ್ಲಿನ ಟಾಪ್ 5 ಶ್ರೀಮಂತ ಅಭ್ಯರ್ಥಿಗಳಲ್ಲಿ ಕರ್ನಾಟಕದ ಮೂವರು

Lok Sabha Elections 2024 2nd Phase: ಲೋಕಸಭೆ ಚುನಾವಣೆಯ ಎರಡನೆ ಹಂತದ ಮತದಾನ ಪ್ರಗತಿಯಲ್ಲಿದೆ. ಸಾವಿರಕ್ಕೂ ಅಧಿಕ ಅಭ್ಯರ್ಥಿಗಳು ಕಣದಲ್ಲಿದ್ದು, ಅವುಗಳ ಪೈಕಿ ಅನೇಕ ಅಭ್ಯರ್ಥಿಗಳು 200 ಕೋಟಿ ರೂಗೂ ಅಧಿಕ ಮೊತ್ತದ ಸಂಪತ್ತು ಹೊಂದಿದ್ದಾರೆ. ಈ ಟಾಪ್ 5ರ ಪಟ್ಟಿಯಲ್ಲಿ ಕರ್ನಾಟಕದಿಂದಲೇ ಮೂವರು ಅಭ್ಯರ್ಥಿಗಳಿದ್ದಾರೆ.

ವಿಜಯ ಕರ್ನಾಟಕ 26 Apr 2024 2:34 pm

Fact Check: ಮೋದಿಗೆ ಮತ ಹಾಕಿದ್ರೆ ಉತ್ತಮ ಭವಿಷ್ಯಕ್ಕೆ ಮತ ನೀಡಿದಂತೆ: ಉದ್ಧವ್ ಠಾಕ್ರೆ ಹೇಳಿದ್ದು ಯಾವಾಗ?

Fact Check On Uddhav Thackeray Viral Video: 2019ರಲ್ಲಿ ಮಹಾರಾಷ್ಟ್ರ ರಾಜಕಾರಣದಲ್ಲಿ ಸಂಚಲನ ಉಂಟಾಗಿತ್ತು. ಬಿಜೆಪಿ ಜೊತೆಗಿನ 25 ವರ್ಷಗಳ ಮೈತ್ರಿ ಮುರಿದುಕೊಂಡಿದ್ದ ಉದ್ಧವ್ ಠಾಕ್ರೆ, ವಿಪಕ್ಷಗಳ ಬಣ ಸೇರಿದ್ದರು. ಇದಕ್ಕೂ ಮುನ್ನ 2014ರಲ್ಲಿ ಮೋದಿ ಅವರನ್ನು ಉದ್ಧವ್ ಠಾಕ್ರೆ ಹೊಗಳಿದ್ದ ವಿಡಿಯೋ ಇದೀಗ ವೈರಲ್ ಆಗಿದೆ. 2024ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರನ್ನು ಶಿವಸೇನೆ ನಾಯಕ ಉದ್ಧವ್ ಠಾಕ್ರೆ ಹೊಗಳುತ್ತಿದ್ದಾರೆ ಎಂದು ಈ ವೈರಲ್ ವಿಡಿಯೋದಲ್ಲಿ ಬಿಂಬಿಸಲಾಗಿದೆ.

ವಿಜಯ ಕರ್ನಾಟಕ 26 Apr 2024 2:11 pm

ತೆಲಂಗಾಣದಲ್ಲಿ ಪರೀಕ್ಷೆ ಫಲಿತಾಂಶ ಪ್ರಕಟವಾದ 48 ಗಂಟೆಯಲ್ಲೇ 7 ವಿದ್ಯಾರ್ಥಿಗಳ ಆತ್ಮಹತ್ಯೆ

Telangana Students Death: ತೆಲಂಗಾಣದಲ್ಲಿ ಮೊದಲ ಹಾಗೂ ಎರಡನೇ ವರ್ಷಗಳ ಇಂಟರ್‌ಮೀಡಿಯೇಟ್ (ಪದವಿ ಪೂರ್ವ) ಪರೀಕ್ಷೆಗಳ ಫಲಿತಾಂಶ ಪ್ರಕಟವಾದ ಕೇವಲ 48 ಗಂಟೆಗಳಲ್ಲಿ ಏಳು ಮಂದಿ ಆತ್ಮಹತ್ಯೆ ಮಾಡಿಕೊಂಡ ದುರಂತ ಘಟನೆಗಳು ವರದಿಯಾಗಿವೆ. ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡ ವಿದ್ಯಾರ್ಥಿಗಳು ಈ ದುಡುಕಿನ ನಿರ್ಧಾರ ಕೈಗೊಂಡಿದ್ದಾರೆ.

ವಿಜಯ ಕರ್ನಾಟಕ 26 Apr 2024 1:44 pm

’ ದೇಶದಲ್ಲಿ ಇರುವುದು ಒಂದೇ ಪಕ್ಷ, ಮಿಕ್ಕಿದ್ದೆಲ್ಲಾ ಪಕ್ಷಪಾತ: ಭಾರತ ಮಾತೆಯ ಋಣ ತೀರಿಸಿ ’

Udupi Admar Mutt Seer Statement : ಪ್ರವಚನ ಸ್ಪೆಷಲಿಸ್ಟ್ ಎಂದೇ ಹೆಸರಾಗಿರುವ ಉಡುಪಿ ಅದಮಾರು ಮಠದ ವಿಶ್ವಪ್ರಿಯ ತೀರ್ಥ ಸ್ವಾಮೀಜಿ, ದೇಶದಲ್ಲಿ ಇರುವುದು ಒಂದೇ ಪಕ್ಷ. ಅದೇ ಪಕ್ಷದ ಪರವಾಗಿ ಮತಚಲಾಯಿಸಿದ್ದೇನೆ ಎಂದು ಪರೋಕ್ಷವಾಗಿ ಬಿಜೆಪಿಗೆ ಮತನೀಡಿದ್ದಾಗಿ ಹೇಳಿದ್ದಾರೆ.

ವಿಜಯ ಕರ್ನಾಟಕ 26 Apr 2024 1:32 pm

ಕೋಟಕ್‌ ಬ್ಯಾಂಕ್‌ಗೆ ಆರ್‌ಬಿಐ ನಿರ್ಬಂಧ, ಒಂದೇ ದಿನ ₹10,225 ಕೋಟಿ ಕಳೆದುಕೊಂಡ ಉದಯ್‌ ಕೋಟಕ್‌

ಆರ್‌ಬಿಐ ನಿರ್ಬಂಧದ ನಂತರ ಗುರುವಾರ ಕೋಟಕ್‌ ಮಹೀಂದ್ರಾ ಷೇರುಗಳು ಬಿಎಸ್‌ಇನಲ್ಲಿ ಭಾರೀ ಕುಸಿತ ಕಂಡಿದ್ದು ಇದರಿಂದ ಬ್ಯಾಂಕ್‌ ಸಂಸ್ಥಾಪಕ ಉದಯ್‌ ಕೋಟಕ್‌ ಭಾರೀ ನಷ್ಟ ಅನುಭವಿಸಿದ್ದಾರೆ. ​ಬ್ಯಾಂಕ್‌ನಲ್ಲಿ ಉದಯ್‌ ಕೋಟಕ್‌ ಶೇಕಡಾ 25.71ರಷ್ಟು ಷೇರುಗಳನ್ನು ಹೊಂದಿದ್ದು, ಷೇರುಗಳ ಕುಸಿತದಿಂದ ಅವರು ಒಂದೇ ದಿನದಲ್ಲಿ 10,225 ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆ.

ವಿಜಯ ಕರ್ನಾಟಕ 26 Apr 2024 1:31 pm

ರಜತ್ ಪಾಟಿದಾರ್ ಟೀಮ್ ಇಂಡಿಯಾದಲ್ಲಿ ಮತ್ತೆ ಸ್ಥಾನ ಪಡೆಯುತ್ತಾರೆ - ಮೈಕ್ ಹೇಸನ್!

Mike Hesson on Rajat patidar: ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ 2 ಬೌಂಡರಿ ಹಾಗೂ 5 ಸ್ಫೋಟಕ ಸಿಕ್ಸರ್ ಸಹಿತ 19 ಎಸೆತಗಳಲ್ಲಿ ಆಕರ್ಷಕ 50 ರನ್ ಸಿಡಿಸಿದ ಆರ್ ಸಿಬಿಯ ಯುವ ಸ್ಫೋಟಕ ಆಟಗಾರ ರಜತ್ ಪಾಟಿದಾರ್ ಅವರನ್ನು ತಂಡದ ಮಾಜಿ ನಿರ್ದೇಶಕ ಮೈಕ್ ಹೇಸನ್ ಮುಕ್ತ ಕಂಠದಿಂದ ಗುಣಗಾನ ಮಾಡಿದ್ದಾರೆ. ತಮ್ಮ ಸಿಡಿಲಬ್ಬರದ ಪ್ರದರ್ಶನದಿಂದ ಫಾಫ್ ಡುಪ್ಲೆಸಿಸ್ ಪಡೆ 206 ರನ್ ಗಳಿಸಲು ನೆರವು ನೀಡಿರುವ ಪಾಟಿದಾರ್ ಮತ್ತೆ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆಯುತ್ತಾರೆ ಎಂದು ಹೇಸನ್ ಭವಿಷ್ಯ ನುಡಿದಿದ್ದಾರೆ. ತಂಡ 35 ರನ್ ಗಳ ಗೆಲುವು ಸಾಧಿಸಲು ಬಲ ತುಂಬಿದ್ದ ರಜತ್ ಪಾಟಿದಾರ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ವಿಜಯ ಕರ್ನಾಟಕ 26 Apr 2024 1:29 pm

ತಮಗೆ ತಾವೇ ಮತ ಹಾಕಿಕೊಳ್ಳಲಾಗದೇ ಬೇರೆಯವರಿಗೆ ವೋಟ್‌ ಮಾಡಿದ ಅಭ್ಯರ್ಥಿಗಳು! ಯಾರೆಲ್ಲಾ? ಯಾಕೆ?

Candidates Could Not Vote For Themselves In Karnataka : ಕರ್ನಾಟಕದಲ್ಲಿ ಲೋಕಸಭಾ ಚುನಾವಣೆ ರಂಗೇರಿದ್ದು, ಮೊದಲ ಹಂತದ ಮತದಾನ ಭರ್ಜರಿಯಾಗಿ ನಡೆಯುತ್ತಿದೆ. ರಾಜ್ಯದ 14 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದ್ದು, ಬಿರು ಬೇಸಿಗೆಯಲ್ಲೂ ಉತ್ಸಾಹದಿಂದ ನಾಗರೀಕರು ತಮ್ಮ ಹಕ್ಕನ್ನು ಚಲಾಯಿಸುತ್ತಿದ್ದಾರೆ. ಇದರ ನಡುವೆ ಒಂದಿಷ್ಟು ಅಭ್ಯರ್ಥಿಗಳು ತಮಗೆ ತಾವೇ ಮತದಾನ ಮಾಡಿಕೊಳ್ಳಲು ಆಗದೇ ಬೇರೆಯವರಿಗೆ ಮತ ಹಾಕಿದ್ದಾರೆ. ಹಲವು ಅಭ್ಯರ್ಥಿಗಳು ತಮ್ಮ ಕ್ಷೇತ್ರದಿಂದ ಹೊರಗಡೆ ಚುನಾವಣೆಗೆ ನಿಂತಿರುವುದರಿಂದ ಬೇರೆಯವರಿಗೆ ಮತ ಹಾಕುವ ಅನಿವಾರ್ಯತೆ ಸೃಷ್ಟಿಯಾಗಿತ್ತು.

ವಿಜಯ ಕರ್ನಾಟಕ 26 Apr 2024 1:24 pm

ಮದ್ಯದಂಗಡಿ ಮುಚ್ಚಲು ಆಗ್ರಹ; ಕೋಲಾರದ ಬೆಗ್ಲಿಬೆಣಜೇನಹಳ್ಳಿಯಲ್ಲಿ ಮಧ್ಯಾಹ್ನವಾದರೂ ಒಬ್ಬರೂ ಮತಗಟ್ಟೆಗೆ ಬಂದಿಲ್ಲ!

ಕೋಲಾರ: ಮದ್ಯದಂಗಡಿ ಮುಚ್ಚಬೇಕೆಂಬ ಬಹುಕಾಲದ ಬೇಡಿಕೆಯನ್ನು ಈಡೇರಿಸದ್ದಕ್ಕೆ ಆಕ್ರೋಶಗೊಂಡು ಗ್ರಾಮಸ್ಥರು ಮತದಾನ ಬಹಿಷ್ಕರಿಸಿರುವ ಘಟನೆ ಕೋಲಾರ ತಾಲೂಕಿನ ಬೆಗ್ಲಿಬೆಣಜೇನಹಳ್ಳಿಯಲ್ಲಿ ಶುಕ್ರವಾರ ನಡೆದಿದೆ. ಈ ಗ್ರಾಮದಲ್ಲಿ 577 ಮತದಾರರಿದ್ದಾರೆ. ದ ವ್ಯಾಪ್ತಿಯ ಈ ಮತಗಟ್ಟೆಯಲ್ಲಿ ಮಧ್ಯಾಹ್ನ 1 ಗಂಟೆ ಕಳೆದರೂ ಗ್ರಾಮದ ಒಬ್ಬರೂ ಮತದಾನ ಮಾಡಿಲ್ಲ. ಈ ವಿಚಾರವಾಗಿ ಚುನಾವಣಾ ಅಧಿಕಾರಿಗಳು ಗ್ರಾಮಸ್ಥರ ಮನವೊಲಿಸಲು ಪ್ರಯತ್ನಿಸಿದ್ದರೂ ಸಫಲರಾಗಿಲ್ಲ. ಇದೀಗ ಸ್ಥಳಕ್ಕೆ ಸಂಸದ ಮುನಿಸ್ವಾಮಿ, ಮೈತ್ರಿ ಅಭ್ಯರ್ಥಿ ಮಲ್ಲೇಶ್ ಬಾಬು, ವಿಧಾನ ಪರಿಷತ್ ಸದಸ್ಯ ಇಂಚರ ಗೋವಿಂದ ರಾಜು, ಸಿಎಂಆರ್ ಶ್ರೀನಾಥ್ ಅವರು ಗ್ರಾಮಕ್ಕೆ ಆಗಮಿಸಿ ಮತದಾರರ ಮನವೊಲಿಸಲು ಪ್ರಯತ್ನ ಮಾಡಿದ್ದಾರೆ. ಆದರೆ ಪಟ್ಟು ಬಿಡದ ಗ್ರಾಮಸ್ಥರು ಜಿಲ್ಲಾಧಿಕಾರಿಯೇ ಸ್ಥಳಕ್ಕೆ ಬಂದು ಸಮಸ್ಯೆ ಪರಿಹರಿಸಬೇಕೆಂದು ಹಠ ಹಿಡಿದಿದ್ದಾರೆ. ಬೆಗ್ಲಿ ಬೆಣಜೇನಹಳ್ಳಿ ಗ್ರಾಮದಲ್ಲಿ ರಸ್ತೆ ಮಧ್ಯೆಯೇ ಇರುವ ಸರ್ಕಾರಿ ಸ್ವಾಮ್ಯದ MSIL ಮದ್ಯದಂಗಡಿ ಇದೆ. ಈ ಹಿಂದೆ ಹಲವು ಬಾರಿ MSIL ಬಾರ್ ತೆರವುಗೊಳಿಸುವಂತೆ ಪ್ರತಿಭಟನೆ ಮಾಡಿದ್ದರು. ಎಲ್ಲ ಅಧಿಕಾರಿಗಳು, ಜನಪ್ರತಿನಿಧಿಗಳು ತೆರವುಗೊಳಿಸುವುದಾಗಿ ಭರವಸೆ ನೀಡಿದರೂ ಈ ವರೆಗೂ ತೆರವುಗೊಳಿಸಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈವರೆಗೂ ಈ ಬಗ್ಗೆ ಯಾವುದೇ ಉನ್ನತ ಮಟ್ಟದ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ವಿಜಯ ಕರ್ನಾಟಕ 26 Apr 2024 12:55 pm

Lok Sabha Election : ಬೆಂಗಳೂರಿನ ನಾಗರಿಕರೆ, ಮತ ಹಕ್ಕು ಚಲಾಯಿಸಲು ಏಕೆ ಈಪರಿ ಅಸಡ್ಡೆ?

Voting in Bengaluru for Lok Sabha Elections 2024 : ಲೋಕಸಭೆ ಚುನಾವಣೆ ಎಂಬುದು ಒಂದು ಉತ್ಸವವಿದ್ದಂತೆ. ಈ ಸಂಭ್ರಮದಲ್ಲಿ ಪ್ರತಿಯೊಬ್ಬ ಅರ್ಹ ಮತದಾರ ಪಾಲ್ಗೊಳ್ಳಬೇಕು. ತಮಗೆ ಬೇಕಾದ ಸಂಸದ, ಪ್ರಧಾನಿಯನ್ನು ಆಯಲು ಇದಕ್ಕಿಂತ ಉತ್ತಮ ಅವಕಾಶ ಬೇಕೆ? ಆದರೆ, ಬೆಂಗಳೂರಿನ ನಾಗರಿಕರಲ್ಲಿ ಈ ಉತ್ಸವದಲ್ಲಿ ಭಾಗವಹಿಸಲು ಅಸಡ್ಡೆಯೇಕೆ? ಅದರಲ್ಲಿಯೂ ಯುವಕ-ಯುವತಿಯರು, ಹೊರಗಿನಿಂದ ಬಂದು ನೆಲೆಸಿರುವವರು, ಸಾಫ್ಟ್ ವೇರ್ ಉದ್ಯೋಗಿಗಳು ಉದಾಸೀನತೆ ತೋರಿಸುತ್ತಿರುವುದು ನಿಜಕ್ಕೂ ದುರಂತ.

ವಿಜಯ ಕರ್ನಾಟಕ 26 Apr 2024 12:53 pm

ಲೋಕಸಭಾ ಚುನಾವಣೆ: 11 ಗಂಟೆ ವೇಳೆ ರಾಜ್ಯದಲ್ಲಿ 22.34 ಶೇ. ಮತದಾನ

ಬೆಂಗಳೂರು, ಎ.26: ಎರಡನೇ ಹಂತದ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಿಗೆ ನಡೆಯುತ್ತಿರುವ ಮತದಾನ ಸಾಧಾರಣವಾಗಿದೆ. 11 ಗಂಟೆ ವೇಳೆ 22.34 ಶೇ. ಹಕ್ಕು ಚಲಾವಣೆಯಾಗಿದೆ ಎಂದು ಚುನಾವಣಾ ಆಯೋಗದ ಪ್ರಕಟನೆ ತಿಳಿಸಿದೆ. ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ 29.03 ಶೇ. ಮತದಾನವಾಗಿದ್ದರೆ, ಹಾಸನ 22.03 ಶೇ., ದಕ್ಷಿಣ ಕನ್ನಡ 30.98 ಶೇ., ಚಿತ್ರದುರ್ಗ- 21.75 ಶೇ., ತುಮಕೂರು 23.32 ಶೇ., ಮಂಡ್ಯ 21.24 ಶೇ., ಮೈಸೂರು 25.09, ಚಾಮರಾಜನಗರ- 262.81 ಶೇ., ಬೆಂಗೂರು ಗ್ರಾಮಾಂತರ-20.35 ಶೇ., ಬೆಂಗಳೂರು ಸೆಂಟ್ರಲ್-19.21 ಶೇ., ಬೆಂಗಳೂರು ದಕ್ಷಿಣ-19.81.ಶೇ., ಚಿಕ್ಕಬಳ್ಳಾಪುರ 21.92 ಶೇ. ಹಾಗೂ ಕೋಲಾರ ಲೋಕಸಭಾ ಕ್ಷೇತ್ರದಲ್ಲಿ 20.76 ಶೇ. ಮತದಾನವಾಗಿದೆ.

ವಾರ್ತಾ ಭಾರತಿ 26 Apr 2024 12:53 pm

ಉಡುಪಿ: ಸೋಮೇಶ್ವರದಲ್ಲಿ 11:50ರ ವೇಳೆ ಶೇ.55 ಮತದಾನ

ಉಡುಪಿ, ಎ.26: ಜಿಲ್ಲೆಯ ನಕ್ಸಲ್ ಬಾಧಿತ ಮತಗಟ್ಟೆಗಳಲ್ಲಿ ಒಂದಾದ ನಾಡ್ಪಾಲು ಸೋಮೇಶ್ವರ ಪೇಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ 11:50ರ ವೇಳೆಗೆ ದಾಖಲೆಯ ಶೇ.55.43 ಮತದಾನವಾಗಿದೆ. ಈ ಮತಗಟ್ಟೆಯಲ್ಲಿ 6,71 ಮಂದಿ ಮತದಾರರಿದ್ದು, ಈ ಪೈಕಿ 3,72 ಮಂದಿ ಈಗಾಗಲೇ ಮತ ಚಲಾಯಿಸಿದ್ದಾರೆ. 187 ಮಂದಿ ಪುರುಷರು 1,85 ಮಹಿಳೆಯರು ತಮ್ಮ ಹಕ್ಕು ಚಲಾಯಿಸಿದವರಲ್ಲಿ ಸೇರಿದ್ದಾರೆ. ನಾಡ್ಪಾಲಿನ 85 ವರ್ಷ ಪ್ರಾಯದ ಕಮಲ ಶೆಟ್ಟಿ ಹಾಗೂ ಬಡಾ ತಿಂಗಳೆಯ ಆನಂದ ಶೆಟ್ಟಿ ತಮ್ಮ ಕುಟುಂಬದ ಸದಸ್ಯರೊಂದಿಗೆ ಬಂದು ಮತ ಹಾಕಿದರು. ಸೋಮೇಶ್ವರ ಪೇಟೆ ಮತಗಟ್ಟೆಯಲ್ಲಿ ಬೆಳಗ್ಗೆ ಒಂದು ಗಂಟೆ ವಿಳಂಬವಾಗಿ ಮತದಾನ ಆರಂಭವಾಯಿತು. ಮೊದಲ ಮತ ಹಾಕುವಾಗ ಯಂತ್ರ ಕೈಕೊಟ್ಟು ಒಂದು ಗಂಟೆ ಮತದಾನ ಸಾಧ್ಯವಾಗಲಿಲ್ಲ. ಅಧಿಕಾರಿಗಳು ತಂತ್ರಜ್ಞರೊಂದಿಗೆ ಬಂದು ಯಂತ್ರ ದುರಸ್ತಿ ಮಾಡಿದ ಬಳಿಕ ಮತದಾನ ಪ್ರಾರಂಭಗೊಂಡಿತು. ಈ ವೇಳೆ ಮತದಾನಕ್ಕೆ ಬಂದ 25 ಮಂದಿ ಮತಹಾಕದೇ ಮರಳಿದರು. ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ 11 ಗಂಟೆಗೆ ಶೇ.29.03 ಮತದಾನವಾಗಿದೆ ಎಂದು ಅದಿಕೃತವಾಗಿ ಪ್ರಕಟಿಸಲಾಗಿದೆ. ಕುಂದಾಪುರದಲ್ಲಿ ಶೇ.32.77, ಕಾಪುವಲ್ಲಿ ಶೇ.32.35, ಕಾರ್ಕಳದಲ್ಲಿ ಶೇ.31.77, ಉಡುಪಿ ಶೇ.30.27ಮತದಾನವಾಗಿದೆ.

ವಾರ್ತಾ ಭಾರತಿ 26 Apr 2024 12:41 pm

ಪ್ರಜಾಪ್ರಭುತ್ವವನ್ನು ಸರ್ವಾಧಿಕಾರದ ಕಪಿಮುಷ್ಠಿಯಿಂದ ರಕ್ಷಿಸಲು ಮತದಾನ ಮಾಡಿ: ಮಲ್ಲಿಕಾರ್ಜುನ ಖರ್ಗೆ

ಹೊಸದಿಲ್ಲಿ: ಮತದಾರರು ಮತಗಟ್ಟೆಗೆ ಬಂದು ನಮ್ಮ ಪ್ರಜಾಪ್ರಭುತ್ವವನ್ನು ಸರ್ವಾಧಿಕಾರದ ಕಪಿಮುಷ್ಠಿಯಿಂದ ರಕ್ಷಿಸಲು ಮತ ಚಲಾಯಿಸಬೇಕೆಂದು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಗ್ರಹಿಸಿದ್ದಾರೆ. ಎರಡನೇ ಹಂತದ ಲೋಕಸಭಾ ಚುನಾವಣೆ ನಡೆಯುತ್ತಿರುವ ಸಂದರ್ಭ ಮತದಾರರಿಗೆ ಅವರು ಈ ಅಪೀಲು ಮಾಡಿದ್ದಾರೆ. ಇದೇನು ಸಾಮಾನ್ಯ ಚುನಾವಣೆಯಲ್ಲ, ಗಮನ ಬೇರೆಡೆಗೆ ಹರಿಸುವ ತಂತ್ರಗಾರಿಕೆಗೆ ಬಲಿ ಬೀಳದಂತೆ ಅವರು ಮತದಾರರಿಗೆ ಆಗ್ರಹಿಸಿದ್ದಾರೆ. “ಮತದಾನದ ವೇಳೆ ಬಟನ್‌ ಒತ್ತುವ ಮುನ್ನ ನಿಮ್ಮ ಹೃದಯಗಳಲ್ಲಿ ಸಂವಿಧಾನದ ಆಶಯಗಳು ಪ್ರತಿಧ್ವನಿಸಬೇಕು,” ಎಂದು ಅವರು ಹೇಳಿದರು. ಮೊದಲ ಬಾರಿಯ ಮತದಾರರು ದೊಡ್ಡ ಸಂಖ್ಯೆಯಲ್ಲಿ ಮತದಾನ ಮಾಡಬೇಕು ಪ್ರಜಾಪ್ರಭುತ್ವದ ಉಳಿವಿಗಾಗಿನ ಈ ಆಂದೋಲನದಲ್ಲಿ ಅವರೇ ಬದಲಾವಣೆಯ ಹರಿಕಾರರು ಎಂದು ಖರ್ಗೆ ಹೇಳಿದ್ದಾರೆ. “ನಾವು, ಇಂಡಿಯಾದ ಜನರು – ನಮ್ಮ ದೇಶದ ಸಂವಿಧಾನದ ಆತ್ಮ ನಿಮ್ಮ ಹೃದಯ ಮತ್ತು ಮನಸ್ಸುಗಳಲ್ಲಿ ನೀವು ಮತದಾನದ ಗುಂಡಿ ಒತ್ತುವ ಮುನ್ನ ಪ್ರತಿಧ್ವನಿಸಬೇಕು. ಇದು ಸಾಮಾನ್ಯ ಚುನಾವಣೆಯಲ್ಲ ಎಂಬುದನ್ನು ಮರೆಬೇಡಿ. ಇದು ಸರ್ವಾಧಿಕಾರದ ಕಪಿಮುಷ್ಠಿಯಿಂದ ಪ್ರಜಾಪ್ರಭುತ್ವವನ್ನು ರಕ್ಷಿಸುವ ಚುನಾವಣೆ,” ಎಂದು ಖರ್ಗೆ ಪೋಸ್ಟ್‌ ಮಾಡಿದ್ದಾರೆ. “ನಿಮ್ಮ ಮತವು ದೇಶದ 140 ಕೋಟಿ ನಾಗರಿಕರ ಜೀವನಗಳನ್ನು ಯುವ ನ್ಯಾಯ್, ಕಿಸಾನ್‌ ನ್ಯಾಯ್‌, ಶ್ರಮಿಕ್‌ ನ್ಯಾಯ್‌ ಮತ್ತು ಹಿಸ್ಸೇದಾರಿ ನ್ಯಾಯ್‌ ಮೂಲಕ ಬದಲಾಯಿಸಲಿ,” ಎಂದು ಖರ್ಗೆ ಹೇಳಿದ್ದಾರೆ.

ವಾರ್ತಾ ಭಾರತಿ 26 Apr 2024 12:41 pm