RR vs CSK: ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರಾಜಸ್ಥಾನ ರಾಯಲ್ಸ್ಗೆ ರೋಚಕ ಗೆಲುವು
ಗುವಾಹಟಿಯ ಬರ್ಸಾಪುರ ಕ್ರಿಕೆಟ್ ಮೈದಾನದಲ್ಲಿ ನಡೆದ ನಡೆದ ರೋಚಕ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ (RR) ಚೆನ್ನೈ ಸೂಪರ್ ಕಿಂಗ್ಸ್ (CSK) ವಿರುದ್ಧ 6 ರನ್ಗಳ ರೋಚಕ ಗೆಲುವು ಸಾಧಿಸಿದೆ. ಆರ್ ಸಿಬಿ ವಿರುದ್ಧ ಸೋಲಿನ ಬಳಿಕ ಸಿಎಸ್ಕೆ ಮತ್ತೊಂದು ಸೋಲು ಅನುಭವಿಸಿದೆ. ಈ ಆವೃತ್ತಿಯಲ್ಲಿ ಮೊದಲ ಎರಡು ಪಂದ್ಯ ಸೋತಿದ್ದ ರಾಜಸ್ಥಾನ ರಾಯಲ್ಸ್ ಮೊದಲ ಗೆಲುವು ಸಾಧಿಸಿದೆ.
ನ್ಯೂಕ್ಲಿಯರ್ ಡೀಲ್ ಸಹಿ ಮಾಡದಿದ್ರೆ ಬಾಂಬ್ ಹಾಕ್ತಿನಿ; ಇರಾನ್ಗೆ ಡೊನಾಲ್ಡ್ ಟ್ರಂಪ್ ವಾರ್ನ್!
ಪರಮಾಣು ಕಾರ್ಯಕ್ರಮ ಒಪ್ಪಂದಕ್ಕೆ ಸಹಿ ಹಾಕುವಂತೆ ಇರಾನ್ನನ್ನು ಒತ್ತಾಯಿಸುತ್ತಿರುವ ಡೊನಾಲ್ಡ್ ಟ್ರಂಪ್, ಇದೀಗ ಆ ರಾಷ್ಟ್ರಕ್ಕೆ ಬಾಂಬ್ ಬೆದರಿಕೆ ಹಾಕಿದ್ದಾರೆ. ಒಂದು ವೇಳೆ ಇರಾನ್ ಹೊಸ ಪರಮಾಣು ಕಾರ್ಯಕ್ರಮ ಒಪ್ಪಂದಕ್ಕೆ ಸಹಿ ಹಾಕದಿದ್ದರೆ, ಆ ರಾಷ್ಟ್ರದ ಮೇಲೆ ಬಾಂಬ್ ದಾಳಿ ಮಾಡುವ ಆಯ್ಕೆಯನ್ನು ನಾವು ಜೀವಂತವಾಗಿರಿಸಿದ್ದೇವೆ.. ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಟ್ರಂಪ್ ಅವರ ಬೆದರಿಕೆಗೆ ಇರಾನ್ ಇದುವರೆಗೂ ಪ್ರತಿಕ್ರಿಯೆ ನೀಡಿಲ್ಲವಾದರೂ, ಇರಾನ್ ಕಡೆಯಿಂದ ಖಾರವಾದ ಪ್ರತಿಕ್ರಿಯೆಯನ್ನೇ ನಿರೀಕ್ಷಿಸಬಹುದಾಗಿದೆ. ಇಲ್ಲಿದೆ ಮಾಹಿತಿ.
RR Vs CSK - ಗುವಾಹಟಿಯಲ್ಲಿ ರೋಚಕ ಫೈಟ್: ರಾಜಸ್ಥಾನ ರಾಯಲ್ಸ್ ಮುಂದೆಯೂ CSK ಠುಸ್ ಪಟಾಕಿ!
ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಪರಾಭವ ಅನುಭವಿಸಿದ್ದ 5 ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡ ಇದೀಗ ರಾಜಸ್ಥಾನ ರಾಯಲ್ಸ್ ವಿರುದ್ಧವೂ ಮುಖಭಂಗ ಅನುಭವಿಸಿದೆ. ಗುವಾಹಟಿಯಲ್ಲಿದಲ್ಲಿ ವ್ಯವಸ್ಥಿತವಾಗಿ ಬೌಲಿಂಗ್ ಮಾಡಿದ ರಾಜಸ್ಥಾನ ರಾಯಲ್ಸ್ ಬೌಲರ್ ಗಳು ತಂಡಕ್ಕೆ 6 ರನ್ ಗಳ ಗೆಲುವು ಗಳಿಸಿಕೊಡುವಲ್ಲಿ ಯಶಸ್ವಿಯಾದರು. ಗೆಲ್ಲಲು 183 ರನ್ ಗಳ ಗುರಿ ಪಡೆದಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡ ನಿಗದಿತ 20 ಓವರ್ ಗಳು ಮುಗಿದಾಗ 6 ವಿಕೆಟ್ ನಷ್ಟಕ್ಕೆ ಕೇವಲ 176 ರನ್ ಗಳನ್ನಷ್ಟೇ ಶಕ್ತವಾಯಿತು. ಚೆನ್ನೈ ಪರ ನಾಯಕ ಋತುರಾಜ್ ಗಾಯಕ್ವಾಡ್ ಅವರು 44 ಎಸೆತದಲ್ಲಿ 63 ರನ್ ಗಳಿಸಿ ಪ್ರತಿಹೋರಾಟ ಸಂಘಟಿಸಿದರು. ಅಂತಿಮ ಹಂತದಲ್ಲಿ ರವೀಂದ್ರ ಜಡೇಜಾ ಔಟಾಗದೆ 32 ರನ್ ಮತ್ತು ಮಹೇಂದ್ರ ಸಿಂಗ್ ಧೋನಿ ಅವರು 16 ರನ್ ಗಳಿಸಿ ಅಂತಿಮ ಓವರ್ ವರೆಗೆ ಪಂದ್ಯವನ್ನು ಕೊಂಡೊಯ್ದಿದ್ದರು. ಅಂತಿಮ ಓವರ್ ನಲ್ಲಿ ಗೆಲ್ಲಲು 20 ರನ್ ಗಳಿಸಬೇಕಿದ್ದ ಚೆನ್ನೈ ಕೇವಲ 14 ರನ್ ಗಳನ್ನಷ್ಟೇ ಗಳಿಸಿತು. ಮೇಡನ್ ಓವರ್ ಎಸೆದ ಜೋಫ್ರಾ ಆರ್ಚರ್ ರವೀಂದ್ರ ಜಡೇಜಾ ಅವರ ವಿಕೆಟ್ ಎಗರಿಸುವ ಮೂಲಕ ಚೆನ್ನೈಗೆ ತಂಡಕ್ಕೆ ಆರಂಭಿಕ ಆಘಾತ ನೀಡಿದರು. ಬಳಿಕ ಸ್ಪಿನ್ನರ್ ವಹಿಂದು ಹಸರಂಗ ಅವರು 35 ರನ್ ಗೆ 4 ವಿಕೆಟ್ ಕಬಳಿಸಿ ಚೆನ್ನೈ ತಂಡ ಪಂದ್ಯಕ್ಕೆ ಮರಳಲು ಅವಕಾಶ ನೀಡಲಿಲ್ಲ. ನಿತೀಶ್ ರಾಣಾ ಭರ್ಜರಿ ಅರ್ಧಶತಕ ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ರಾಯಲ್ಸ್ ನ ಯಶಸ್ವಿ ಜೈಸ್ವಾಲ್ ಅವರು ಖಲೀಲ್ ಅಹ್ಮದ್ ಅವರೆಸೆದ ಮೊದಲ ಎಸತವನ್ನೇ ಬೌಂಡರಿಗಟ್ಟಿದರು. ಆದರೆ 3ನೇ ಎಸೆತದಲ್ಲೇ ರವಿಚಂದ್ರನ್ ಅಶ್ವಿನ್ ಅವರಿಗೆ ಕ್ಯಾಚಿತ್ತು ಮತ್ತೆ ನಿರಾಸೆ ಮೂಡಿಸಿದರು. ಬಳಿಕ ನಿತೀಶ್ ರಾಣಾ ಅವರ ಜೊತೆ ಸೇರಿ ಇನ್ನಿಂಗ್ಸ್ ಬೆಳೆಸಿದ ಸಂಜು ಸ್ಯಾಮ್ಸನ್ ಅವರು 2ನೇ ವಿಕೆಟ್ ಗೆ 82 ರನ್ ಗಳ ಜೊತೆಯಾಟವಾಡಿದರು. ಪವರ್ ಪ್ಲೇನ 6 ಓವರ್ ಗಳಲ್ಲಿ 79 ರನ್ ಕಬಳಿಸಿದರು. 86 ರನ್ ಆಗಿದ್ದಾಗ ಸಂಜು ಸ್ಯಾಮ್ಸನ್ (20) ವಿಕೆಟ್ ಪತನವಾಯಿತು. ಬಳಿಕ ನಿತೀಶ್ ರಾಣಾ ಅವರು ನಾಯಕ ರಿಯಾನ್ ಪರಾಗ್ ಅವರ ಜೊತೆ ಸೇರಿ ಇನ್ನಿಂಗ್ಸ್ ಕಟ್ಟಲು ಹೊರಟರು. ಈ ಹಾದಿಯಲ್ಲಿ 81 ರನ್ ಗಳಿಸಿದ್ದ ನಿತೀಶ್ ರಾಣಾ ಅವರನ್ನು ಹಾದಿ ತಪ್ಪಿಸುವಲ್ಲಿ ಆರ್ ಅಶ್ವಿನ್ ಅವರು ಯಶಸ್ವಿಯಾದರು. ಸ್ಟಂಪ್ ಔಟ್ ಮಾಡುವಲ್ಲಿ ಧೋನಿ ಎಡವಲಿಲ್ಲ. ಅಲ್ಲಿಗೆ ಕೇವಲ 36 ಎಸೆತಗಳಲ್ಲಿ 10 ಬೌಂಡರಿ ಮತ್ತು 5 ಸಿಕ್ಸರ್ ಗಳನ್ನೊಳಗೊಂಡ ನಿತೀಶ್ ರಾಣಾ ಅವರ ಇನ್ನಿಂಗ್ಸ್ ಮುಕ್ತಾಯಗೊಂಡಿತು. ಆಗ 11ನೇ ಓವರ್ ನಡೆಯುತ್ತಿತ್ತಷ್ಟೇ. ನಾಯಕ ರಿಯಾನ್ ಪರಾಗ್ (37) ಹೊರತುಪಡಿಸಿರೆ ಮಧ್ಯಮ ಕ್ರಮಾಂಕದಲ್ಲಿ ಬೇರಾರು ಯಶಸ್ವಿಯಾಗಲಿಲ್ಲ. ಧ್ರುವ ಜ್ಯುರೆಲ್ (3), ಹಸರಂಗ(4) ಸಂಪೂರ್ಣ ವಿಫಲರಾದರು. ಇದ್ದಿದ್ದರಲ್ಲಿ ಶಿಮೋನ್ ಹೆಟ್ಮೇಯರ್ (19) ಮಾತ್ರ ಕೊಂಚ ರನ್ ಗಳಿಸಿದರು. ಹೀಗಾಗಿ 200 ರನ್ ದಾಟುವ ಸೂಚನೆ ನೀಡಿದ್ದ ರಾಜಸ್ಥಾನ ರಾಯಲ್ಸ್ 182 ರನ್ ಗಳಿಗೆ ಮುಕ್ತಾಯಗೊಂಡಿತು. ಖಲೀಲ್ ಅಹ್ಮದ್, ನೂರ್ ಅಹ್ಮದ್, ಮಥೀಶ ಪಥಿರಣ ತಲಾ 2 ವಿಕೆಟ್ ಪಡೆದರು. ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ ತಲಾ ಒಂದು ವಿಕೆಟ್ ಉರುಳಿಸಿದರು. ಸಂಕ್ಷಿಪ್ತ ಸ್ಕೋರ್ ರಾಜಸ್ಥಾನ ರಾಯಲ್ಸ್ 20 ಓವರ್ ಗಳಲ್ಲಿ 182/9, ನಿತೀಶ್ ರಾಣಾ 81, ರಿಯಾನ್ ಪರಾಗ್ 37, ಸಂಜು ಸ್ಯಾಮ್ಸನ್ 20, ನೂರ್ ಅಹ್ಮದ್ 28ಕ್ಕೆ 2, ಪಥಿರಣ 28ಕ್ಕೆ 2, ಖಲೀಲ ಅಹ್ಮದ್ 38ಕ್ಕೆ 2 ಚೆನ್ನೈ ಸೂಪರ್ ಕಿಂಗ್ಸ್ 20 ಓವರ್ ಗಳಲ್ಲಿ 176/6 ಋತುರಾಜ್ ಗಾಯಕ್ವಾಡ್ 63, ರಾಹುಲ್ ತ್ರಿಪಾಠಿ 23, ರವೀಂದ್ರ ಜಡೇಜಾ ಔಟಾಗದೆ 32, ಧೋನಿ 16, ಹಸರಂಗ35ಕ್ಕೆ 4, ದೋಫ್ರಾ ಆರ್ಚರ್ 13ಕ್ಕೆ 1
RCB: \ಈ ಬಾರಿ ಆರ್ಸಿಬಿ ಕಪ್ ಗೆಲ್ಲದಿದ್ರೆ ಗಂಡನಿಗೆ ಡಿವೋರ್ಸ್\: ವಿಡಿಯೋ ವೈರಲ್
ಐಪಿಎಲ್ನ 18ನೇ ಆವೃತ್ತಿ ಇದೀಗ ಅದ್ಧೂರಿಯಾಗಿ ನಡೆಯುತ್ತಿದೆ. ಅದರಲ್ಲೂ ಎಲ್ಲಾ ತಂಡಗಳಿಗಿಂತಲೂ ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಆರ್ಸಿಬಿ ತಂಡವು ಈಗಾಗಲೇ ಆಡಿರುವ ಎರಡೂ ಪಂದ್ಯಗಳಲ್ಲೂ ಭರ್ಜರಿ ಗೆಲುವು ಸಾಧಿಸಿಗೆ. ಉದ್ಘಾಟನಾ ಪಂದ್ಯದಲ್ಲಿ ಕೆಕೆಆರ್ ವಿರುದ್ಧ ಹಾಗೂ ಎರಡನೇ ಪಂದ್ಯವನ್ನು ಸಿಎಸ್ಕೆ ವಿರುದ್ಧ ಗೆದ್ದು ಬೀಗುವ ಮೂಲಕ ಇತಿಹಾಸ ಸೃಷ್ಟಿಸಿದೆ. ಐಪಿಎಲ್ನಲ್ಲಿ ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ
Karnataka Rain: ಯುಗಾದಿ ಸಂಭ್ರಮ ಹೆಚ್ಚಿಸಿದ ಮಳೆ; ರಾಜ್ಯದಲ್ಲಿ ಭಾರಿ ಮಳೆ ಮುನ್ಸೂಚನೆ
ರಾಜ್ಯದಲ್ಲಿ ಪೂರ್ವ ಮುಂಗಾರು ಮಳೆ ಹಲವು ಕಡೆಗಳಲ್ಲಿ ಆರಂಭವಾಗಿದೆ. ಈಗಾಗಲೇ ಹಲವು ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿದ್ದು ಏಪ್ರಿಲ್ ಮೊದಲ ವಾರದಲ್ಲಿ ರಾಜ್ಯದಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ. ಯುಗಾದಿ ಹಬ್ಬದ ದಿನವಾದ ಭಾನುವಾರ ರಾಜ್ಯದ ಹಲವು ಕಡೆಗಳಲ್ಲಿ ಮಳೆಯಾಗಿದ್ದು ಜನರ ಹಬ್ಬದ ಸಂಭ್ರಮವನ್ನು ಹೆಚ್ಚಿಸಿದೆ. ಧಾರವಾಡ ಮತ್ತು ಬೆಳಗಾವಿ ಜಿಲ್ಲೆಯ ಹಲವು ಕಡೆಗಳಲ್ಲಿ ಭಾನುವಾರ ವ್ಯಾಪಕ ಮಳೆಯಾಗಿದೆ.
ಮಂಗಳೂರು: ಲಕೋಟೆಯಲ್ಲಿ ಸಂಸ್ಕರಿಸಿದ ಮಾನವ ಅಸ್ಥಿಗಳು ಪತ್ತೆ
ಉಳ್ಳಾಲ: ಲಕೋಟೆಯೊಂದರಲ್ಲಿ ಸಂಸ್ಕರಿಸಿಟ್ಟ ಮಾನವ ಅಸ್ಥಿಗಳು ಕುಂಪಲ ಚಿತ್ರಾಂಜಲಿ ನಗರದಲ್ಲಿ ಶನಿವಾರ ರಾತ್ರಿ ಪತ್ತೆಯಾಗಿದ್ದು, ಈ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಬಂದ ಉಳ್ಳಾಲ ಪೊಲೀಸರು ಅಸ್ಥಿಗಳ ಹಿಂದಿನ ಅಸಲಿಯತ್ತನ್ನು ಪತ್ತೆ ಹಚ್ಚಿದ್ದಾರೆ. ಶನಿವಾರ ನಡುರಾತ್ರಿ ಚಿತ್ರಾಂಜಲಿ ನಗರದ ಮನೆಯ ಆವರಣದ ಬಳಿ ಪ್ರಯೋಗಾಲಯದ ಮಾದರಿಯ ಅಸ್ಥಿಗಳು ಲಕೋಟೆಯಲ್ಲಿ ಸಂಸ್ಕರಿಸಿದ ರೀತಿಯಲ್ಲಿ ಪತ್ತೆಯಾಗಿದೆ. ಈಸುದ್ದಿ ತಿಳಿದ ಜನರು ಘಟನಾ ಸ್ಥಳಕ್ಕೆ ಜಮಾಯಿಸಿದ್ದರು. ಈ ವಿಚಾರ ತಿಳಿದು ಸ್ಥಳಕ್ಕೆ ಆಗಮಿಸಿದ ಉಳ್ಳಾಲ ಪೊಲೀಸರು ಅಸ್ಥಿಗಳು ತುಂಬಿದ್ದ ಲಕೋಟೆಯನ್ನು ವಶಕ್ಕೆ ಪಡೆದಿದ್ದಾರೆ. ಚಿತ್ರಾಂಜಲಿ ನಗರದಲ್ಲಿ ದೊರೆತ ಅಸ್ಥಿಗಳನ್ನು ಸ್ಥಳೀಯ ಮಹಿಳೆಯೇ ತನ್ನ ಮನೆಯ ಆವರಣದ ಬಳಿ ಎಸೆದಿರುವ ವಿಚಾರ ಪೊಲೀಸರ ವಿಚಾರಣೆಯಲ್ಲಿ ತಿಳಿದು ಬಂದಿದೆ. ಮಹಿಳೆಯು ಮಂಗಳೂರಿನ ವೈದ್ಯರೋರ್ವರ ಮನೆಯಲ್ಲಿ ಕೆಲಸಕ್ಕಿದ್ದು, ನಿವೃತ್ತಿ ಹೊಂದಿದ್ದ ವೈದ್ಯರು ಮನೆ ಬಿಟ್ಟು ಹೋದಾಗ ಮನೆಯಲ್ಲಿದ್ದ ಕೆಲ ಸಾಮಗ್ರಿಗಳನ್ನು ಮಹಿಳೆ ತಂದಿದ್ದರೆನ್ನಲಾಗಿದೆ. ವೈದ್ಯರ ಮನೆಯಿಂದ ತಂದ ಸಂಸ್ಕರಿಸಿಡಲಾದ ಅಸ್ಥಿಗಳ ಲಕೋಟೆಯನ್ನು ಮಹಿಳೆಯು ತನ್ನ ಮನೆಯ ಕಾಂಪೌಡ್ ಬಳಿ ಎಸೆದಿದ್ದರೆನ್ನಲಾಗಿದೆ. ಕಳೆದ ವಾರ ಚಿತ್ರಾಂಜಲಿ ನಗರದಲ್ಲಿ ನಡೆದ ಸ್ಥಳೀಯ ಸಂಘಟನೆಯೊಂದರ ವಾರ್ಷಿಕೋತ್ಸವದ ವೇದಿಕೆಯಲ್ಲಿ ನೃತ್ಯ ಪ್ರದರ್ಶನ ನೀಡಿದ್ದ ಯುವಕನೋರ್ವನ ಬಾಡಿಗೆ ಕಾಸ್ಟ್ಯೂಮ್ ಕಳೆದು ಹೋಗಿತ್ತು. ನಿನ್ನೆ ರಾತ್ರಿ ಯುವಕ ಕಾಸ್ಟ್ಯೂಮ್ ಹುಡುಕಲು ಬಂದಾಗ ಅಸ್ಥಿಗಳ ಲಕೋಟೆ ದೊರೆತಿದೆ ಎಂದು ತಿಳಿದು ಬಂದಿದೆ.
Mukesh Ambani: ಅಂಬಾನಿ ಮನೆ ಆಂಟಿಲಿಯಾದ ಒಂದು ತಿಂಗಳ ವಿದ್ಯುತ್ ಬಿಲ್ ಎಷ್ಟು ಗೊತ್ತಾ?
ಕರ್ನಾಟಕದಲ್ಲಿ ಭಾಗ್ಯಜ್ಯೋತಿ ಯೋಜನೆಯಡಿ ರಾಜ್ಯ ಸರ್ಕಾರವೇ ಜನಸಾಮಾನ್ಯರ ಮನೆ ಬಳಕೆಯ ವಿದ್ಯುತ್ ಬಿಲ್ ಭರಿಸುತ್ತಿದೆ. ಇದು ಮಧ್ಯಮ, ಬಡ ವರ್ಗದ ಜನರ ಮಾಸಿಕ ಖರ್ಚನ್ನು ತಕ್ಕಮಟ್ಟಿಗೆ ಕಡಿಮೆ ಮಾಡಿದೆ. ಆದರೂ ಉಚಿತ ಕೊಡುಗೆಗಳ ಬಗ್ಗೆ ಪರ-ವಿರೋಧ ಚರ್ಚೆ ನಡೆಯುತ್ತಿದೆ. ಸಾಮಾನ್ಯವಾಗಿ ಒಂದು ಮನೆಯ ವಿದ್ಯುತ್ ಬಿಲ್ ಸಾವಿರ ರೂಪಾಯಿಗಳಲ್ಲಿ ಇರುತ್ತದೆ. ಏನೇ ದೊಡ್ಡ ಮನೆಯಾದರು ಕೆಲವು ಸಾವಿರ
ಯುಗಾದಿ ದಿನ ಯತ್ನಾಳ್ ಸಂಕಲ್ಪ ಪತ್ರ; ದುಷ್ಟರೆಲ್ಲಾ ಸುಳಿಯರು ನನ್ನ ಹತ್ರ.. ಟ್ವೀಟ್ ವೈರಲ್!
ಬಿಜೆಪಿ ಪ್ರಾಥಮಿಕ ಸದಸ್ಯತ್ವದಿಂದ ಆರು ವರ್ಷಗಳ ಕಾಲ ಉಚ್ಚಾಟನೆ ಶಿಕ್ಷೆ ಪಡೆದಿರುವ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಯುಗಾದಿ ಹಬ್ಬದ ನಿಮಿತ್ತವಾಗಿ ರಾಜ್ಯದ ಜನತೆಗೆ ಶುಭ ಕೋರಿ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ನಲ್ಲಿ ತಮ್ಮ ರಾಜಕೀಯ ಹೋರಾಟವನ್ನು ಮುಂದುವರೆಸುವ ವಾಗ್ದಾನ ಮಾಡಿರುವ ಯತ್ನಾಳ್, ಭ್ರಷ್ಟರ ವಿರುದ್ಧದ ನನ್ನ ಹೋರಾಟ ನಿರಂತರ.. ಎಂದು ಹೇಳುವ ಮೂಲಕ, ತಮ್ಮ ಹಾಗೂ ಬಿವೈ ವಿಜಯೇಂದ್ರ ನಡುವಿನ ರಾಜಕೀಯ ಸಮರಕ್ಕೆ ಬ್ರೇಕ್ ಬಿದ್ದಿಲ್ಲ ಎಂಬ ಸಂದೇಶವನ್ನು ಸಾರಿದ್ದಾರೆ.
ರಷ್ಯಾ ವಿರುದ್ಧ ಮತ್ತಷ್ಟು ನಿರ್ಬಂಧ ಹೇರಲು ಡೊನಾಲ್ಡ್ ಟ್ರಂಪ್ ತಯಾರಿ?
ಡೊನಾಲ್ಡ್ ಟ್ರಂಪ್ಗೆ ಬಾಯಿ ಬಡಿದುಕೊಂಡು, ಬಾಯಿ ಬಡಿದುಕೊಂಡು ಸಾಕಾಗಿ ಹೋಗಿದೆ. ರಷ್ಯಾ &ಉಕ್ರೇನ್ ಯುದ್ಧ ನಿಲ್ಲಿಸಲು ಏನೆಲ್ಲಾ ಪ್ರಯತ್ನ ಮಾಡಿದರೂ ಅದು ವರ್ಕೌಟ್ ಆಗ್ತಾ ಇಲ್ಲ. ಟ್ರಂಪ್ ಸರ್ಕಾರದ ಅಧಿಕಾರಿಗಳು ಖುದ್ದಾಗಿ ಸೌದಿ ಅರೇಬಿಯಾಗಿ ಹೋಗಿ, ಅಲ್ಲಿಂದಲೇ ಸಾಲು ಸಾಲು ಸಭೆಗಳನ್ನು ನಡೆಸಿದರೂ ಪ್ರಯೋಜನಕ್ಕೆ ಬರುತ್ತಿಲ್ಲ. ರಷ್ಯಾ &ಉಕ್ರೇನ್ ಯುದ್ಧ ನಿಲ್ಲಿಸದೇ ಬಡಿದಾಡುತ್ತಿವೆ. ಇಂತಹ
ತಪ್ಪಾಯ್ತು ಕ್ಷಮಿಸಿಬಿಡಿ… ಕ್ಷಮೆಯಾಚಿಸಿದ ಮಡಿಲ ಮೀಡಿಯಾ ಮಾಲಕ!
ದೇಶದ ಮಡಿಲ ಮೀಡಿಯಾಗಳ ಪಿತಾಮಹ ಎಂದೇ ಹೇಳಬಹುದಾದ ಚಾನಲ್ ನ ಮಾಲಕರು ಬಹಿರಂಗವಾಗಿ ಕ್ಷಮೆ ಯಾಚಿಸಿದ್ದಾರೆ. ನಮ್ಮ ಚಾನಲ್ ನಿಂದ ದೊಡ್ಡ ಪ್ರಮಾದವಾಗಿದೆ. ನಾವೇ ಶುರು ಮಾಡಿದ ಅಪಪ್ರಚಾರ ಅಭಿಯಾನವನ್ನು ಇತರ ಚಾನಲ್ ಗಳು ಅನುಸರಿಸಿದರು. ನಮ್ಮ ಸಂಪಾದಕರು ಹಾಗು ವರದಿಗಾರರಿಂದ ಆಗ ದೊಡ್ಡ ಪ್ರಮಾದವಾಗಿದೆ. ನಾನು ನೇರವಾಗಿ ಅದರಲ್ಲಿ ಭಾಗಿಯಾಗಿರಲಿಲ್ಲವಾದರೂ ನಾನು ಕ್ಷಮೆ ಯಾಚಿಸುತ್ತೇನೆ ಎಂದು ಅವರು ಟ್ವೀಟ್ ಮಾಡಿದ್ದಾರೆ. ಹಾಗೆ ಬಹಿರಂಗ ಕ್ಷಮೆ ಕೋರಿದವರು ಝೀ ನ್ಯೂಸ್ ನ ಮಾಲಕ, ಒಂದು ಕಾಲದ ಮೀಡಿಯಾ ಮೊಗಲ್ ಸುಭಾಷ್ ಚಂದ್ರ. ಅರೇ.. ನ್ಯೂಸ್ ಚಾನಲ್ ಮಾಲಕರೊಬ್ಬರು ದಿಢೀರನೇ ಇಷ್ಟೊಂದು ಪ್ರಾಮಾಣಿಕರಾಗಿದ್ದು ಹೇಗೆ? ಅವರು ತಮ್ಮ ಪ್ರಮಾದವನ್ನು ಸ್ವೀಕರಿಸಿ ಹೀಗೆ ಕ್ಷಮೆ ಯಾಚನೆ ಮಾಡಲು ಕಾರಣವೇನು ಅಂತ ನೀವು ಯೋಚಿಸುವುದು ಖಚಿತ. ನಟ ಸುಶಾಂತ್ ಸಿಂಗ್ ರಜಪೂತ್ ಅವರು ಆತ್ಮಹತ್ಯೆ ಮಾಡಿಕೊಂಡಾಗ ಅದು ಆತ್ಮಹತ್ಯೆ ಅಲ್ವೇ ಅಲ್ಲ. ಅದೊಂದು ಕೊಲೆ ಅಂತ ಈ ದೇಶದ ಮಡಿಲ ಮೀಡಿಯಾಗಳು ಏನಿಲ್ಲವೆಂದರೂ ಮೂರ್ನಾಲ್ಕು ತಿಂಗಳು ಸತತ ಅಭಿಯಾನ ನಡೆಸಿದವು. ತಮ್ಮ ವಾದಕ್ಕೆ ಪೂರಕವಾಗಿ ಅವರು ಇಡೀ ಬಾಲಿವುಡ್ ಅನ್ನೇ ಕಟಕಟೆಯಲ್ಲಿ ನಿಲ್ಲಿಸಿಬಿಟ್ಟರು. ಅಲ್ಲಿರುವ ಎಲ್ಲರೂ ಮಹಾ ಖದೀಮರು, ಅವರೆಲ್ಲರೂ ಸೇರಿಕೊಂಡು ಸುಶಾಂತ್ ಎಂಬ ಪ್ರತಿಭಾವಂತನನ್ನು ಮುಗಿಸಿಬಿಟ್ಟರು ಎಂದು ಈ ಮಡಿಲ ಮೀಡಿಯಾಗಳು ಹೇಳಿದ್ದೇ ಹೇಳಿದ್ದು. ಆಗ ಈ ಮೀಡಿಯಾಗಳು ಅತ್ಯಂತ ಹೆಚ್ಚು ಟಾರ್ಗೆಟ್ ಮಾಡಿದ್ದು ಸುಶಾಂತ್ ಅವರ ಗೆಳತಿ ನಟಿ ರಿಯಾ ಚಕ್ರಬರ್ತಿಯನ್ನು. ಆಕೆ ಮಹಾ ಮಾರಿ, ಆಕೆ ಡ್ರಗ್ಸ್ ವ್ಯಸನಿ, ಆಕೆ ಡ್ರಗ್ಸ್ ಸರಬರಾಜು ಮಾಡುವವಳು, ಆಕೆ ಹಾಗೆ ಆಕೆ ಹೀಗೆ ಅಂತ ತಿಂಗಳುಗಟ್ಟಲೆ ಆಕೆಯನ್ನು, ಆಕೆಯ ಕುಟುಂಬವನ್ನು ಚಿಂದಿ ಚಿಂದಿ ಮಾಡಿಬಿಟ್ಟೆವು ಇಲ್ಲಿನ ಮಡಿಲ ಮೀಡಿಯಾಗಳು. ಆ ಘೋರ ಅಪಪ್ರಚಾರ ಅಭಿಯಾನದಲ್ಲಿ ಆಗ ಮುಂಚೂಣಿಯಲ್ಲಿದ್ದವರು ಸುಧೀರ್ ಚೌಧರಿ ಸಂಪಾದಕತ್ವದ ಝೀ ನ್ಯೂಸ್, ಅರ್ನಬ್ ಗೋಸ್ವಾಮಿ ಸಂಪಾದಕತ್ವದ ರಿಪಬ್ಲಿಕ್ ಟಿವಿ, ರಾಹುಲ್ ಶಿವಶಂಕರ್ ಹಾಗು ನಾವಿಕ ಕುಮಾರ್ ಸಂಪಾದಕತ್ವದ ಟೈಮ್ಸ್ ನೌ, ಅಂಜನಾ ಓಂ ಕಶ್ಯಪ್ ನೇತೃತ್ವದಲ್ಲಿ ಆಜ್ ತಕ್. ಇವರಲ್ಲದೆ ಇನ್ನೂ ಒಂದಿಷ್ಟು ಚಾನಲ್ ಗಳೂ ಇದೇ ಅಪಪ್ರಚಾರದಲ್ಲಿ ತೊಡಗಿದ್ದರೂ, ಅತ್ಯಂತ ಆಕ್ರಮಣಕಾರಿಯಾಗಿ, ನಿರಂತರ ಹಸಿ ಹಸಿ ಸುಳ್ಳು ಹೇಳಿ ರಿಯಾ ಚಕ್ರಬರ್ತಿಯನ್ನು ದೊಡ್ಡ ಮಾಫಿಯಾ ಎಂಬಂತೆ ಬಿಂಬಿಸಿದ್ದು ಈ ನಾಲ್ಕು ದೊಡ್ಡ ಚಾನಲ್ ಗಳು. ಆದರೆ ಈಗ ಈ ಪೈಕಿ ಒಂದು ಚಾನಲ್ ನ ಮಾಲಕರು ಸ್ವತಃ ಮುಂದೆ ಬಂದು ಆ ಇಡೀ ಅಪಪ್ರಚಾರವನ್ನು ಮೊದಲು ಶುರು ಮಾಡಿದ್ದೇ ನಮ್ಮ ಚಾನಲ್ ಎಂದು ಘೋಷಿಸಿದ್ದಾರೆ. ಅದಕ್ಕಾಗಿ ಸ್ವತಃ ಅವರು ಕ್ಷಮೆ ಯಾಚಿಸಿದ್ದಾರೆ. ತಮ್ಮ ಚಾನಲ್ ನ ಸಿಬ್ಬಂದಿ ಕೂಡ ಕ್ಷಮೆ ಯಾಚಿಸಬೇಕು ಎಂದು ಸಲಹೆ ನೀಡಿದ್ದಾರೆ. ಇದಕ್ಕೆಲ್ಲ ಕಾರಣವಾಗಿದ್ದು ಸುಶಾಂತ್ ಸಾವಿನ ಪ್ರಕರಣದಲ್ಲಿ ಸಿಬಿಐ ತನಿಖೆ ಬಳಿಕ ಸಲ್ಲಿಸಿರುವ ಕ್ಲೋಶರ್ ರಿಪೋರ್ಟ್. ಅದರಲ್ಲಿ ರಿಯಾ ಚಕ್ರಬರ್ತಿ ವಿರುದ್ಧ ಯಾವುದೇ ರೀತಿಯ ಸಾಕ್ಷ್ಯ ಇಲ್ಲ. ಆಕೆ ಇದರಲ್ಲಿ ಯಾವ ರೀತಿಯಲ್ಲೂ ಆರೋಪಿಯಲ್ಲ ಎಂದು ಹೇಳಿರುವುದು. ಆದರೆ ಸುಭಾಷ್ ಚಂದ್ರ ಹೀಗೆ ಸಾರ್ವಜನಿಕವಾಗಿ ತಮ್ಮ ತಪ್ಪನ್ನು ಒಪ್ಪಿಕೊಂಡು, ಕ್ಷಮೆ ಯಾಚಿಸಿದ್ದು ಅವರ ಹೃದಯ ವೈಶಾಲ್ಯದಿಂದಾಗಲಿ, ಪಶ್ಚಾತ್ತಾಪದಿಂದಾಗಲಿ ಅಲ್ಲ. ಅವರ ಕ್ಷಮೆಯಾಚನೆ ಹಿಂದೆ ಒಂದು ದೊಡ್ಡ ರಾಜಕೀಯವಿದೆ, ಸೇಡಿದೆ. ರಿಯಾ ಚಕ್ರಬರ್ತಿ ವಿರುದ್ಧ ಅಪಪ್ರಚಾರ ಅಭಿಯಾನ ನಡೆಸಿದಾಗ ಝೀ ನ್ಯೂಸ್ ಪ್ರಧಾನ ಸಂಪಾದಕರಾಗಿದ್ದವರು ಭಟ್ಟಂಗಿ ಆಂಕರ್ ಗಳಲ್ಲಿ ಅಗ್ರಗಣ್ಯರಾಗಿದ್ದ ಸುಧೀರ್ ಚೌಧರಿ. ಆದರೆ ಸುಭಾಷ್ ಚಂದ್ರ ಹಾಗು ಸುಧೀರ್ ನಡುವೆ ಸಂಬಂಧ ತೀವ್ರ ಹದಗೆಟ್ಟು ಸುಧೀರ್ ಝೀ ನ್ಯೂಸ್ ನಿಂದ ಹೊರಬಂದು ಆಜ್ ತಕ್ ಸೇರಿದ್ದಾರೆ, ಮುಂದಿನ ತಿಂಗಳು ಅವರು ದೂರದರ್ಶನಕ್ಕೆ ಹೋಗುವ ವರದಿಯೂ ಬಂದಿದೆ. ಬಿಜೆಪಿ ಜೊತೆ ಅತ್ಯಂತ ಆತ್ಮೀಯರಾಗಿದ್ದ ಸುಭಾಷ್ ಚಂದ್ರ ಅವರ ಸಂಬಂಧ ಅಲ್ಲಿ ಯಾವ್ಯಾವುದೋ ಕಾರಣಗಳಿಂದ ಕೆಟ್ಟಿತು, ಅವರ ರಾಜ್ಯಸಭಾ ಸ್ಥಾನವೂ ಬಿಜೆಪಿ ಸಹಕರಿಸದೇ ರಿನೀವಲ್ ಆಗಲಿಲ್ಲ, ಹಾಗಾಗಿ ಬಿಜೆಪಿ ವಿರುದ್ಧ ತಿರುಗಿ ಬಿದ್ದಿದ್ದರು ಸುಭಾಷ್ ಚಂದ್ರ. ಆದರೆ ಮೋದಿ ಭಟ್ಟಂಗಿತನದಲ್ಲಿ ವರ್ಲ್ಡ್ ರೆಕಾರ್ಡ್ ಮಾಡಿದ್ದ ಸುಧೀರ್ ಚೌಧರಿ ಮಾತ್ರ ಸುಭಾಷ್ ಹೇಳಿದ ಹಾಗೆ ಝೀ ನ್ಯೂಸ್ ನಲ್ಲಿ ಬಿಜೆಪಿ ವಿರುದ್ಧ ಮಾತಾಡಲು ನಿರಾಕರಿಸಿದರು. ತನ್ನ ಮಾಲಕತ್ವದ ಚಾನಲ್ ನ ಸಂಪಾದಕ ತನಗೇ ತಿರುಗುಬಾಣ ಆದ ಎಂದು ಸುಭಾಷ್ ತೀವ್ರ ಸಿಟ್ಟಾದರು. ಕೊನೆಗೆ ಸುಧೀರ್ ಚಾನಲ್ ನಿಂದ ಹೊರಬಂದರು. ಈಗ ರಿಯಾ ಚಕ್ರಬರ್ತಿ ಅಮಾಯಕಿ ಎಂದು ಸಿಬಿಐ ಹೇಳಿದ ಕೂಡಲೇ ಸುಭಾಷ್ ಚಂದ್ರಗೆ ಮತ್ತೆ ಸುಧೀರ್ ನೆನಪಾಗಿದ್ದಾರೆ. ತನ್ನ ಮಾಜಿ ಸಂಪಾದಕನನ್ನು ಕುಟುಕಲು ಇದಕ್ಕಿಂತ ಒಳ್ಳೆಯ ಸಂದರ್ಭ ಇನ್ನೊಂದಿಲ್ಲ ಎಂದು ನಿರ್ಧರಿಸಿ ಸುಭಾಷ ಚಂದ್ರ ಸುಧೀರ್ ಹೆಸರು ಹೇಳದೆಯೇ ಸುಧೀರ್ ವಿರುದ್ಧ ಕಿಡಿ ಕಾರಿದ್ದಾರೆ. ಅಂದಿನ ಸಂಪಾದಕ ಹಾಗು ಸಿಬ್ಬಂದಿ ಆ ಅಪಪ್ರಚಾರ ನಡೆಸಿದ್ದಾರೆ ಎಂದು ಘೋಷಿಸಿ ಬಿಟ್ಟಿದ್ದಾರೆ. ಇಲ್ಲಿ ಮುಖ್ಯ ವಿಷಯ ಏನಂದರೆ, ಮಾಲಕ ಹಾಗು ಸಂಪಾದಕನ ನಡುವೆ ಬಿರುಕು ಬಂದಾಗ, ಸ್ವತಃ ಮಾಲಕನೇ ತನ್ನ ಚಾನಲ್ ನ ಬಂಡವಾಳ ಬಯಲು ಮಾಡಿದ್ದಾರೆ. ಅಂದಿನ ಸಂಪಾದಕನೇ ಇದನ್ನೆಲ್ಲಾ ಮಾಡಿದ್ದಾನೆ ಎಂದು ಘಂಟಾಘೋಶವಾಗಿ ಸಾರಿದ್ದಾರೆ. ಆದರೆ ಇದೇ ಝೀ ನ್ಯೂಸ್ ಹಾಗು ಇತರ ಭಟ್ಟಂಗಿ ಚಾನಲ್ ಗಳು ಕಳೆದೊಂದು ದಶಕದಲ್ಲಿ ಇಂತಹ ಅದೆಷ್ಟು ಅಪಪ್ರಚಾರ ಅಭಿಯಾನ ನಡೆಸಿಲ್ಲ? ಅದೆಷ್ಟು ಹಸಿ ಹಸಿ ಸುಳ್ಳನ್ನೇ ಸುದ್ದಿ ಎಂದು ಪ್ರಸಾರ ಮಾಡಿಲ್ಲ? ಅದೆಷ್ಟು ದ್ವೇಷ ಹರಡುವ ಕಾರ್ಯಕ್ರಮಗಳನ್ನು ನಡೆಸಿ ಕೊಟ್ಟಿಲ್ಲ? ಅದನ್ನೇ ಆಲ್ಟ್ ನ್ಯೂಸ್ ಝುಬೇರ್ ಅವರು ಸುಭಾಷ್ ಚಂದ್ರಗೆ ಈಗ ನೆನಪಿಸಿ ಕೇಳಿದ್ದಾರೆ. ರಿಯಾ ಪ್ರಕರಣದಲ್ಲಿ ಕ್ಷಮೆ ಕೇಳಿದ ಹಾಗೇ ಮುಸ್ಲಿಮರ ವಿರುದ್ಧ ಮಾಡಿರುವ ಅದೆಷ್ಟು ಸುಳ್ಳು ಹಾಗು ದ್ವೇಷ ತುಂಬಿದ ಕಾರ್ಯಕ್ರಮಗಳಿಗೂ ನೀವು ಕ್ಷಮೆ ಕೇಳ್ತೀರಾ ಎಂದು ಕುಟುಕಿದ್ದಾರೆ. ಕೊರೊನ ಸಂದರ್ಭದಲ್ಲಿ ತಬ್ಲೀಗಿ ಜಮಾತ್ ವಿರುದ್ಧ ಝೀ ನ್ಯೂಸ್ ಮಾಡಿದ್ದ ಸುಳ್ಳು ಸುದ್ದಿಗಳ ಪಟ್ಟಿಯನ್ನೇ ಝುಬೇರ್ ಅವರು ಸುಭಾಷ್ ಎದುರು ಇಟ್ಟಿದ್ದಾರೆ. ಆದರೆ ಅದಕ್ಕೆಲ್ಲ ಕ್ಷಮೆ ಕೇಳುವಷ್ಟು ವಿಶಾಲ ಹೃದಯಿ ಇನ್ನೂ ಆಗಿಲ್ಲ ಸುಭಾಷ ಚಂದ್ರ ರಿಯಾ ಚಕ್ರಬರ್ತಿ ಎಂಬ ಹೆಣ್ಣು ಮಗಳನ್ನು ಒಬ್ಬ ಮಾಫಿಯಾ ಡಾನ್ ತರ ಚಿತ್ರಿಸುವಲ್ಲಿ ಮಹಿಳಾ ಸಂಪಾದಕರೇ ಅದೆಷ್ಟು ದೊಡ್ಡ ಪಾತ್ರ ವಹಿಸಿದ್ದರು ಅಂತ ಒಮ್ಮೆ ನೆನಪಿಸಿಕೊಳ್ಳಿ. ಅಂಜನಾ ಓಂ ಕಶ್ಯಪ್, ನಾವಿಕ ಕುಮಾರ್ ರಂತವರು ರಿಯಾ ವಿರುದ್ಧ ಮಾಡಿದ ಸುಳ್ಳು ಸುದ್ದಿಗಳಿಗೆ ಲೆಕ್ಕವಿದೆಯೇ? ಈಗ ಸಿಬಿಐ ವರದಿ ಬಂದಿರುವಾಗ ನಾವಿಕ ಕುಮಾರ್, ಅಂಜನಾ ಓಂ ಕಶ್ಯಪ್ ಎಲ್ಲಿದ್ದಾರೆ? ಯಾಕೆ ಅವರು ಮುಂದೆ ಬಂದು ತಮ್ಮ ಪಾತ್ರ ಏನಿತ್ತು ಎಂಬ ಬಗ್ಗೆ ಮಾತಾಡಲ್ಲ? ಯಾಕೆ ಕ್ಷಮೆ ಯಾಚಿಸುವುದಿಲ್ಲ? ಈ ದೇಶದಲ್ಲಿ ಮಾಧ್ಯಮವನ್ನು, ಸಮಾಜವನ್ನು ಹಾಳು ಮಾಡುವಲ್ಲಿ ಇಲ್ಲಿನ ಟಿವಿ ನ್ಯೂಸ್ ಚಾನಲ್ ಗಳು ಹಾಗು ಅದರ ಆಂಕರ್ ಗಳ ಪಾತ್ರ ಅತ್ಯಂತ ನಿರ್ಣಾಯಕವಾದದ್ದು ತಾವು ಮಾಡಿದ್ದಕ್ಕೆಲ್ಲ ಈ ಭಟ್ಟಂಗಿ ಹಾಗು ದ್ವೇಶಕೋರ ಆಂಕರ್ ಗಳು ಕ್ಷಮೆಯಾಚಿಸಲು ಪ್ರಾರಂಭಿಸಿದರೆ ಆ ಕ್ಷಮೆ ಯಾಚನೆಯ ಪಟ್ಟಿ ಮುಗಿಯುವುದೇ ಕಷ್ಟ!
ಬಾಗಲಕೋಟೆ | ಸ್ನಾನಕ್ಕೆ ತೆರಳಿದ್ದ ಮೂವರು ಬಾಲಕರು ನೀರುಪಾಲು
ಬಾಗಲಕೋಟೆ: ಯುಗಾದಿ ಪಾಡ್ಯದ ನಿಮಿತ್ತ ಸ್ನಾನಕ್ಕೆ ತೆರಳಿದ್ದ ಮೂವರು ಬಾಲಕರು ನೀರುಪಲಾಗಿರುವ ಘಟನೆ ಆಲಮಟ್ಟಿ ಜಲಾಶಯದ ಮುಂಭಾಗದ ಕೃಷ್ಣಾ ನದಿಯಲ್ಲಿ ನಡೆದಿದೆ. ನೀರುಪಾಲಾದವರನ್ನು ಬಾಗಲಕೋಟೆ ತಾಲೂಕಿನ ಇಲ್ಯಾಳ ಗ್ರಾಮದ ಸೋಮಶೇಖರ ಬೊಮ್ಮಣ್ಣ ದೇವರಮನಿ (15), ಮಲ್ಲಪ್ಪ ಬಸಪ್ಪ ಬಗಲಿ (15) ಹಾಗೂ ಪರನಗೌಡ ಮಲ್ಲಪ್ಪ ಬೀಳಗಿ (17) ನೀರು ಪಾಲಾದವರು ಎಂದು ತಿಳಿದುಬಂದಿದೆ. ಘಟನೆ ನಡೆದ ತಕ್ಷಣ ಮೀನುಗಾರರು ಕಾಣೆಯಾದವರಿಗಾಗಿ ಹುಡುಕಾಟ ನಡೆಸಿ ಸೋಮಶೇಖರ ಬೊಮ್ಮಣ್ಣ ದೇವರಮನಿಯ ಮೃತದೇಹವನ್ನು ಹೊರತೆಗೆದಿದ್ದಾರೆ. ಕಾಣೆಯಾದ ಇನ್ನಿಬ್ಬರ ಹುಡುಕಾಟಕ್ಕಾಗಿ ಜಿಲ್ಲೆಯ ಅಗ್ನಿಶಾಮಕ ದಳದ ಸಿಬ್ಬಂದಿ ಘಟನಾ ಸ್ಥಳಕ್ಕೆ ಆಗಮಿಸಿ ಶೋಧಕಾರ್ಯ ಮುಂದುವರೆಸಿದ್ದಾರೆ. ಬಾಗಲಕೋಟೆ ಗ್ರಾಮೀಣ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ನೋಯ್ಡಾ: ನೋಯ್ಡಾದ ಸೆಕ್ಟರ್ 94 ರಲ್ಲಿ ನಿರ್ಮಾಣ ಹಂತದಲ್ಲಿರುವ ಸಂಕೀರ್ಣದ ಪಕ್ಕದಲ್ಲಿರುವ ಫುಟ್ ಪಾತ್ನಲ್ಲಿ ರವಿವಾರ ಸಂಜೆ ಲ್ಯಾಂಬೋರ್ಗಿನಿ ಕಾರು ಇಬ್ಬರು ಪಾದಚಾರಿಗಳಿಗೆ ಡಿಕ್ಕಿ ಹೊಡೆದಿದೆ. ಕಾರು ಡಿಕ್ಕಿ ಹೊಡೆಯುತ್ತಿದ್ದಂತೆ ಅದರೆಡೆಗೆ ಧಾವಿಸಿದ ಕಾರ್ಮಿಕರು ನೀವು ಭಾರೀ ಸ್ಟಂಟ್ ಮಾಡುವುದುನ್ನು ಕಲಿತಿದ್ದೀರಿ. ಎಷ್ಟು ಜನರು ಮೃತಪಟ್ಟಿದ್ದಾರೆ ಎಂದು ನಿಮಗೆ ತಿಳಿದಿದೆಯೇ? ಎಂದು ಕೇಳುತ್ತಿರುವುದು ವೀಡಿಯೊದಲ್ಲಿ ಸೆರೆಯಾಗಿದೆ. ಅದಕ್ಕೆ ಚಾಲಕ ಇಲ್ಲಿ ಯಾರಾದರೂ ಸತ್ತಿದ್ದಾರೆಯೇ ಎಂದು ಅಸಡ್ಡೆಯಿಂದ ಕೇಳುತ್ತಿರುವುದು ವೀಡಿಯೊದಲ್ಲಿ ಕಾಣುತ್ತಿದೆ. ಗಾಯಗೊಂಡಿದರು ಕಾರ್ಮಿಕರನ್ನು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅವರೆಲ್ಲ ಅಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಡಿಕ್ಕಿ ಹೊಡೆದಿರುವ ಕಾರು ಪುದುಚೇರಿ ನೋಂದಣಿ ಹೊಂದಿತ್ತು. ಪೊಲೀಸರು ಚಾಲಕನನ್ನು ವಶಕ್ಕೆ ಪಡೆದು ಕಾರನ್ನು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. A #Lamborghini , a fat bank account, and ZERO Humanity This #Noida brat mows down two labourers and casually asks—“Koi mar gaya idhar?” pic.twitter.com/TaUgdB769z — Smriti Sharma (@SmritiSharma_) March 30, 2025
ಕಲಬುರಗಿ | ಎಸೆಸೆಲ್ಸಿ ಪರೀಕ್ಷೆ: ವೆಬ್ಕಾಸ್ಟಿಂಗ್ ವ್ಯವಸ್ಥೆ ವೀಕ್ಷಿಸಿದ ಜಿಲ್ಲಾಧಿಕಾರಿ
ಕಲಬುರಗಿ : ಕಳೆದ ಮಾ.21 ರಿಂದ ಎಸೆಸೆಲ್ಸಿ ಪರೀಕ್ಷೆ ಆರಂಭಗೊಂಡಿರುವ ಹಿನ್ನೆಲೆಯಲ್ಲಿ ರವಿವಾವಾರ ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್ ಅವರು ಇಲ್ಲಿನ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಸ್ಥಾಪಿಸಲಾಗಿರುವ ವೆಬ್ ಕಾಸ್ಟಿಂಗ್ ವ್ಯವಸ್ಥೆ ವೀಕ್ಷಿಸಿದರು. ವೆಬ್ ಕಾಸ್ಟಿಂಗ್ ಮೂಲಕ ಪ್ರತಿ ಕೇಂದ್ರದ ಮೇಲೆ ತೀವ್ರ ನಿಗಾ ವಹಿಸಬೇಕು. ಎಲ್ಲಿಯೇ ನಕಲು ಕಂಡುಬಂದಲ್ಲಿ ಕೂಡಲೆ ಸಂಬಂಧಪಟ್ಟ ಅಧಿಕಾರಿಗಳಿಗೆ ವರದಿ ನೀಡಬೇಕು ಎಂದು ವೀಕ್ಷಣಾ ತಂಡದ ಸಿಬ್ಬಂದಿಗಳಿಗೆ ಡಿ.ಸಿ. ಸೂಚಿಸಿದರು. ಇದೇ ಪ್ರಥಮ ಬಾರಿಗೆ ನಕಲು ಮುಕ್ತ ಎಸೆಸೆಲ್ಸಿ ಪರೀಕ್ಷೆಗೆ ವೆಬ್ ಕಾಸ್ಟಿಂಗ್ ಮೂಲಕ ಜಿಲ್ಲಾ ಕೇಂದ್ರದಿಂದಲೆ 131 ಪರೀಕ್ಷಾ ಕೇಂದ್ರದ ಮೇಲೆ ನಿಗಾ ಸಾಧಿಸಲಾಗಿದೆ. ಇದಕ್ಕಾಗಿ ತಾಂತ್ರಿಕ ಸಿಬ್ಬಂದಿಗಳನ್ನೊಳಗೊಂಡ 28 ತಂಡಗಳನ್ನು ರಚಿಸಿ ಪರೀಕ್ಷಾ ಕೇಂದ್ರ ಹಂಚಿಕೆ ಮಾಡಲಾಗಿದೆ. ಈ ವೇಳೆ ಡಿ.ಡಿ.ಪಿ.ಐ ಸೂರ್ಯಕಾಂತ ಮದಾನೆ ಸೇರಿದಂತೆ ಇತರೆ ಸಿಬ್ಬಂದಿಗಳು ಉಪಸ್ಥಿತರಿದ್ದರು
ಕೋಟೆಕಾರ್ ಪ.ಪಂ.ಸಾಮಾನ್ಯ ಸಭೆ: ಅಭಿವೃದ್ಧಿ ಕಾಮಗಾರಿಯದ್ದೇ ಚರ್ಚೆ
ಉಳ್ಳಾಲ: ಬಹು ನೀರಾವರಿ ಯೋಜನೆ, ಸರ್ಕಾರಿ ಜಾಗ, ಚೆಕ್ ವಿತರಣೆ, ಅಭಿವೃದ್ಧಿ ಕಾಮಗಾರಿ, ರಸ್ತೆ, ಶಾಸಕರ ಭೇಟಿ, ಹಿಂದುರುದ್ರ ಭೂಮಿ ಮುಂತಾದ ವಿಷಯಗಳ ಬಗ್ಗೆ ಪರ ವಿರೋಧ ಚರ್ಚೆಗಳು ಕೋಟೆಕಾರ್ ಪಟ್ಟಣ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ನಡೆಯಿತು. ಕೋಟೆಕಾರ್ ಪ.ಪಂ.ನ ಅಧ್ಯಕ್ಷ ದಿವ್ಯ ಸತೀಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಸುಜಿತ್ ಮಾಡೂರು, ಫಲಾನುಭವಿಗಳಿಗೆ ಚೆಕ್ ವಿತರಣೆಯಲ್ಲಿ ತಾರತಮ್ಯ ಬೇಡ. ಎಲ್ಲರಿಗೂ ಏಕಕಾಲದಲ್ಲಿ ನೀಡುವಂತೆ ಮಾಡಬೇಕು ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ದಿವ್ಯ ಸತೀಶ್ ಅವರು ಎಸ್ ಎಫ್ ಸಿ ಯೋಜನೆ ಯಡಿ ಚೆಕ್ ವಿತರಣೆ ಇನ್ನೂ ಆಗಬೇಕಾಗಿದೆ.ಸದ್ಯಕ್ಕೆ ಮುನ್ಸಿಪಾಲಿಟಿ ಅನುದಾನ ದಿಂದ ಬಿಡುಗಡೆ ಮಾಡಿದ ಚೆಕ್ ಮಾತ್ರ ವಿತರಣೆ ಮಾಡಲಾಗಿದೆ ಎಸ್ ಎಫ್ ಸಿ ಯೋಜನೆ ಯಡಿ ಮುಂದಿನ ಹಂತದಲ್ಲಿ ಚೆಕ್ ವಿತರಣೆ ಮಾಡಲಾಗುವುದು ಎಂದರು. ಅನುದಾನ: ಎಲ್ಲಾ ವಾರ್ಡ್ ಗೆ ಅಭಿವೃದ್ಧಿ ಕಾಮಗಾರಿ ಗೆ ಅನುದಾನ ಐದು ಲಕ್ಷ ಇಟ್ಟಿದ್ದೀರಿ.ಅಧ್ಯಕ್ಷರ ವಾರ್ಡ್ ಗೆ 15 , ಉಪಾಧ್ಯಕ್ಷ ರ ವಾರ್ಡ್ ಗೆ 10 ಲಕ್ಷ ಅನುದಾನ ಇಟ್ಟಿದ್ದೀರಿ. ಈ ಅನುದಾನದಲ್ಲಿ ಎಲ್ಲಾ ಕಾಮಗಾರಿ ಆಗದು.ಅಧ್ಯಕ್ಷರಿಗೆ ಶೇ.10 ರಷ್ಟು ಹೆಚ್ಚು ಅನುದಾನ ತನ್ನ ಬಳಿ ಇಟ್ಟುಕೊಳ್ಳಲು ಅವಕಾಶ ಇದೆ. ಆದರೆ ಆ ಹಣವನ್ನು ಬೇರೆ ವಾರ್ಡ್ ಗೆ ಬಳಸಿ ಅಭಿವೃದ್ಧಿ ಕಾಮಗಾರಿ ಮಾಡಬಹುದು ಎಂದು ಸುಜಿತ್ ಮಾಡೂರು ತಿಳಿಸಿದರು. ಈ ವೇಳೆ ಮಾತನಾಡಿದ ಧೀರಜ್ ಅವರು ಅಧ್ಯಕ್ಷರಿಗೆ ತನ್ನ ಬಳಿ10 ಶೇ.ದಷ್ಟು ಹೆಚ್ಚು ಅನುದಾನ ಇಡಬಹುದು ಎಂಬ ನಿಯಮ ಇಲ್ಲ ಎಂದರು. ಕೌನ್ಸಿಲರ್ ಅಹ್ಮದ್ ಅಜ್ಜಿನಡ್ಕ ಅವರು, ಎಲ್ಲಾ ವಾರ್ಡ್ ಗೆ ಸಮಾನ ಆಗಿ ಅನುದಾನ ಇಡುವುದು ಬೇಡ. ಮತದಾರರು ಜಾಸ್ತಿ ಇರುವ ವಾರ್ಡ್ ಗಳಿಗೆ ಜಾಸ್ತಿ ಅನುದಾನ ನೀಡಿ. ಮತದಾರರು ಕಡಿಮೆ ಇರುವ ವಾರ್ಡ್ ಗೆ ಅನುದಾನ ಕಡಿಮೆ ಇಡಿ ಎಂದರು. ರಸ್ತೆ: 11 ವಾರ್ಡ್ ಮಾಡೂರು ನಲ್ಲಿ ಸರ್ಕಾರಿ ಜಾಗ ದ ಸರ್ವೆ ಕಾರ್ಯ ಆಗಿದೆ. ಆದರೆ ರಸ್ತೆ , ಬಯಲು ರಂಗ ಮಂಟಪ ನಿರ್ಮಾಣ ಯಾಕಾಗುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಪಕ್ಷೇತರ ಸದಸ್ಯ ಹರೀಶ್ ಅವರು ಈ ವ್ಯವಸ್ಥೆ ಶೀಘ್ರ ಮಾಡಿ ಎಂದು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ದಿವ್ಯ ಸತೀಶ್ ಅವರು ಮುಂಭಾಗದಲ್ಲಿ ಮನೆ ಇದೆ.ಆ ಮನೆ ಒಡೆದು ರಸ್ತೆ ಮಾಡುವುದು ಆಗುತ್ತದೆಯೇ, ಅವರ ಮೇಲೆ ಕರುಣೆ ಇಲ್ಲವೇ ಎಂದು ಪ್ರಶ್ನಿಸಿದರು. ಈ ವೇಳೆ ಮಾತನಾಡಿದ ಹರೀಶ್ ಅವರು ಈ ಮನೆಯ ಡೋರು ನಂಬರ್ 2014 ರಲ್ಲಿ ಒಬ್ಬರ ಹೆಸರಿ ನಲ್ಲಿ ನೀಡಲಾಗಿದೆ.ಹಕ್ಕು ಪತ್ರ ಇನ್ನೊಬ್ಬರ ಹೆಸರಿನಲ್ಲಿ ನೀಡಿದ್ದು ಹೇಗೆ ಪ್ರಶ್ನಿಸಿದ ಅವರು, ಪ.ಪಂ ವತಿ ಯಿಂದ ಕ್ರೀಡೆಗೆ ಮೈದಾನ ಜೊತೆಗೆ ಬಯಲು ರಂಗ ಮಂಟಪ ಆಗಬೇಕು. ಪೈಪ್ ಲೈನ್ ಕಾಮಗಾರಿ ಪೂರ್ಣ ಆಗಬೇಕು ಎಂದು ಆಗ್ರಹ ವ್ಯಕ್ತಪಡಿಸಿದರು. ಸರಕಾರಿ ಜಾಗ: ಕೋಟೆಕಾರ್ ಗ್ರಾಮ ದಲ್ಲಿರುವ ಸರಕಾರಿ ಜಾಗ ಎಷ್ಟಿದೆ ಎಂದು ಸರ್ವೆ ಮಾಡಿ ಆರ್ ಟಿಸಿ ತೆಗೆಯಲು ಆರು ತಿಂಗಳ ಹಿಂದೆ ಹೇಳಿದ್ದೇವೆ,ಈ ಕೆಲಸ ಆಗಿದೆಯಾ ಎಂದು ಕೌನ್ಸಿಲರ್ ಸುಜಿತ್ ಮಾಡೂರು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಮುಖ್ಯಾಧಿಕಾರಿ ಮಾಲಿನಿ ಅವರು 21-11-2024 ರಂದು ಈ ಬಗ್ಗೆ ತಹಶೀಲ್ದಾರ್ ಪುಟ್ಟರಾಜು ಅವರ ಗಮನಕ್ಕೆ ತಂದಿದ್ದೇವೆ ಎಂದರು. ಶಾಸಕರ ಭೇಟಿ: ಕುಡಿಯುವ ನೀರಿಗೆ ಅನುದಾನ, ಸದಸ್ಯರ ತಿಂಗಳ ಭತ್ಯೆ ಹೆಚ್ಚಳ ಹಾಗೂ ಅಭಿವೃದ್ಧಿ ಕಾಮಗಾರಿ ಗೆ ಸಂಬಂಧಿಸಿ ಶಾಸಕ ಯುಟಿ ಖಾದರ್ ಅವರನ್ನು ಭೇಟಿ ಮಾಡಲು ಕಳೆದ ಸಭೆಯಲ್ಲಿ ತೀರ್ಮಾನಿಸಲಾಗಿತ್ತು.ಆದರೆ ಈವರೆಗೆ ಭೇಟಿ ಆಗಿಲ್ಲ ಎಂದು ಸುಜಿತ್ ಮಾಡೂರು ಹೇಳಿದರು. ಈ ವೇಳೆ ಅಹ್ಮದ್ ಅಜ್ಜಿನಡ್ಕ ಅವರು ಸ್ಪೀಕರ್ ಯುಟಿ ಖಾದರ್ ಬ್ಯುಸಿ ಇರುತ್ತಾರೆ.ಅವರು ಉಳ್ಳಾಲ ತಾಲೂಕು ವ್ಯಾಪ್ತಿಗೆ ಬಂದಾಗ ಅವರನ್ನು ಭೇಟಿ ಮಾಡೋಣ ಎಂದರು. ಹಿಂದೂ ರುದ್ರ ಭೂಮಿ: ಮಾಡೂರು ಹಿಂದೂ ರುದ್ರ ಭೂಮಿ ಯಲ್ಲಿರುವ ವಿಶ್ರಾಂತಿ ಕೊಠಡಿ ವಿಸ್ತರಣೆ, ದಾಸ್ತಾನು ಕೊಠಡಿ ನಿರ್ಮಿಸುವ ಬಗ್ಗೆ ಕಳೆದ ಸಭೆಯಲ್ಲಿ ನಿರ್ಣಯಿಸಲಾಗಿತ್ತು.ಆದರೆ ಈವರೆಗೆ ಯಾಕೆ ಆಗಿಲ್ಲ ಎಂದು ಧೀರಜ್ ಪ್ರಶ್ನಿಸಿದರು. ಈ ವೇಳೆ ಪ.ಪಂ.ಕಿರಿಯ ಅಭಿಯಂತರ ದಿನೇಶ್ ಅವರು ಇದಕ್ಕೆ ಅಂದಾಜು 8.80 ಲಕ್ಷ ಬೇಕು. ಈ ಕಾರಣದಿಂದ ಬಾಕಿಯಾಗಿದೆ ಎಂದು ಸಭೆಗೆ ತಿಳಿಸಿದರು. ಖಾಯಂ ಅಭಿಯಂತರ ಬೇಕು: ಕೋಟೆಕಾರ್ ಪಟ್ಟಣ ಪಂಚಾಯತ್ ನ ಕಿರಿಯ ಅಭಿಯಂತರ ದಿನೇಶ್ ಅವರನ್ನು ವಾರದಲ್ಲಿ ಮೂರು ದಿನ ಉಳ್ಳಾಲ ನಗರ ಸಭೆ ಗೆ ನಿಯೋಜನೆ ಮಾಡಿರುವುದನ್ನು ರದ್ದು ಪಡಿಸ ಬೇಕು. ಈ ಬಗ್ಗೆ ಜಿಲ್ಲಾಧಿಕಾರಿ ಗೆ ಪತ್ರ ಬರೆಯಲು ನಿರ್ಣಯಿಸಲಾಗಿತ್ತು. ಇದು ಯಾಕೆ ಆಗಿಲ್ಲ ಎಂದು ಸುಜಿತ್ ಮಾಡೂರು ಪ್ರಶ್ನಿಸಿದರು. ಈ ವೇಳೆ ಮಾತನಾಡಿದ ಅಧ್ಯಕ್ಷ ದಿವ್ಯ ಸತೀಶ್ ಅವರು ಉಳ್ಳಾಲ ಉರೂಸ್ ಮುಗಿಯುವವರೆಗೆ ಅವರು ಉಳ್ಳಾಲ ದಲ್ಲಿ ಇರುತ್ತಾರೆ.ಇದರ ಬಳಿಕ ಕೋಟೆಕಾರ್ ಪಟ್ಟಣ ಪಂಚಾಯತ್ ನಲ್ಲಿ ಖಾಯಂ ಆಗಿ ಕೆಲಸ ಮಾಡಲಿದ್ದಾರೆ ಎಂದರು. ಕುಡಿಯುವ ನೀರು: ಬಹು ನೀರಾವರಿ ಕುಡಿಯುವ ನೀರಿನ ಯೋಜನೆ ಆಗಿಲ್ಲ, ಪೈಪ್ ಲೈನ್ ಕಾಮಗಾರಿ ಕೆಲವು ಕಡೆ ಬಾಕಿ ಇವೆ.ಮಳೆಗಾಲ ಬರುವ ಸಮಯ ಹತ್ತಿರವಾಗುತ್ತಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಚರಂಡಿಯ ಹೂಳೆತ್ತುವ,ಕಸ, ಹುಲ್ಲು ಕಡ್ಡಿ ತೆಗೆಯುವ ಕೆಲಸ ಆಗಬೇಕು ಎಂದು ಅಹ್ಮದ್ ಅಜ್ಜಿನಡ್ಕ ಅವರು ಅಧ್ಯಕ್ಷರ ಗಮನ ಸೆಳೆದರು. ಸಭೆಯಲ್ಲಿ ಉಪಾಧ್ಯಕ್ಷ ಪ್ರವೀಣ್, ಸ್ಥಾಯಿ ಸಮಿತಿ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.
ಯುಗಾದಿ ದಿನ ಪೊಲಿಟಿಕ್ಸ್ನಿಂದ ರೆಸ್ಟ್; ಸಚಿವ ಸತೀಶ್ ಜಾರಕಿಹೊಳಿ ಆನ್ಸರ್ ದಿ ಬೆಸ್ಟ್..! ಆದರೂ...
ಯುಗಾದಿ ಹಬ್ಬದ ದಿನ ರಾಜಕೀಯ ವಿಚಾರ ಮಾತನಾಡುವುದಕ್ಕೆ ಬ್ರೇಕ್ ಹಾಕಿ, ಎಲ್ಲರೂ ಸಂಭ್ರಮದಿಂದ ಯುಗಾದಿ ಆಚರಿಸೋಣ.. ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿರುವುದು ಗಮನ ಸೆಳೆದಿದೆ. ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಸತೀಶ್ ಜಾರಕಿಹೊಳಿ, ಯುಗಾದಿ ಮತ್ತು ರಂಜಾನ್ ಹಬ್ಬ ಇರುವುದರಿಂದ ಈ ಎರಡು ದಿನ ರಾಜಕಾರಣದ ವಿಚಾರಗಳನ್ನು ಮಾತನಾಡುವುದು ಬೇಡ.. ಎಂದು ಹೇಳಿದರು. ಆದಾಗ್ಯೂ, ಕೆಪಿಸಿಸಿ ಅಧ್ಯಕ್ಷ ಬದಲಾವಣೆ ಮತ್ತು ಹನಿಟ್ರ್ಯಾಪ್ ಸಂಗತಿಗಳ ಬಗ್ಗೆ ಸಚಿವರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
ಹಿಮಾಚಲ ಪ್ರದೇಶದಲ್ಲಿ ಭೂ ಕುಸಿತ; 6 ಮಂದಿ ದುರ್ಮರಣ!
ಹಿಮಾಚಲ ಪ್ರದೇಶದ ಕುಲ್ಲುವಿನ ಗುರುದ್ವಾರ ಮಣಿಕರಣ್ ಸಾಹಿಬ್ ಎದುರಿನ ಪಿಡಬ್ಲ್ಯೂಡಿ ರಸ್ತೆಯ ಬಳಿ ಭಾನುವಾರ ಸಂಜೆ ಸಂಭವಿಸಿದ ಭೂಕುಸಿತದಲ್ಲಿ ಆರು ಜನ ಸಾವನ್ನಪ್ಪಿದ್ದು, ಈ ಪೈಕಿ ಮೂವರು ಮಹಿಳೆಯರು ಇದ್ದಾರೆ. ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ. ಎಸ್ಎಚ್ಒ ಮಣಿಕರಣ್ ನೇತೃತ್ವದ ಪೊಲೀಸ್ ತಂಡ ಸ್ಥಳದಲ್ಲಿದ್ದು, ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳನ್ನು ಮುಂದುವರೆಸಿದೆ ಎಂದು ಜಿಲ್ಲಾಧಿಕಾರಿ ಅಶ್ವನಿ ಕುಮಾರ್ ತಿಳಿಸಿದ್ದಾರೆ.
ಡೊನಾಲ್ಡ್ ಟ್ರಂಪ್ ಆಫರ್ ತಿರಸ್ಕರಿಸಿದ ಇರಾನ್, ಮುಂದೇನು ಕಥೆ?
ಇರಾನ್ &ಅಮೆರಿಕ ನಡುವೆ ಸುಮಾರು ಅರ್ಧ ಶತಮಾನದಿಂದ ತಿಕ್ಕಾಟ ನಡೆಯುತ್ತಲೇ ಇದೆ. ಎರಡೂ ದೇಶಗಳು ಆಜನ್ಮ ವೈರಿಗಳಂತೆ ಆಗಿದ್ದು, ಪದೇ ಪದೇ ಬಡಿದಾಡುತ್ತವೆ. ಇಷ್ಟೆಲ್ಲಾ ಕಿರಿಕ್ ಮಾಡಿಕೊಂಡು, ಜಗತ್ತಿನಲ್ಲಿ ಮತ್ತೊಂದು ಮಹಾಯುದ್ಧದ ಭಯವನ್ನೂ ಇರಾನ್ &ಅಮೆರಿಕ ನಾಯಕರು ಹುಟ್ಟುಹಾಕಿದ್ದಾರೆ. ಯಾಕೆ ಅಂದ್ರೆ ಇರಾನ್ ಬಳಿಯೂ ನ್ಯೂಕ್ಲಿಯರ್ ವೆಪನ್ಸ್ ಇದ್ದು, ಅಮೆರಿಕ ಪರಮಾಣು ಅಸ್ತ್ರಗಳ ವಿಚಾರದಲ್ಲಿ
ಕಾರ್ಕಳ, ಮಾ.30: ವೇಗವಾಗಿ ಬಂದ ಮೋಟಾರು ಸೈಕಲ್ ಒಂದು ರಸ್ತೆ ಬದಿ ನಿಂತಿದ್ದ ಮಹಿಳೆಗೆ ಡಿಕ್ಕಿ ಹೊಡೆದು ಆಕೆ ಸ್ಥಳದಲ್ಲೇ ಮೃತ ಪಟ್ಟ ಘಟನೆ ರವಿವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ಮಿಯ್ಯಾರು ಗ್ರಾಮದ ಜೋಡುಕಟ್ಟೆ ಕೊಂಕಣ್ ರೆಸಿಡೆನ್ಸಿ ಎದುರು ನಡೆದಿದೆ. ಮೃತರನ್ನು ಮೇರಿವಾಜ್ (70) ಎಂದು ಗುರುತಿಸಲಾಗಿದೆ. 9:10ರ ಸುಮಾರಿಗೆ ಮೇರಿವಾಜ್ ಕೊಂಕಣ್ ರೆಸಿಡೆನ್ಸಿ ಎದುರು ರಸ್ತೆ ಬದಿಯಲ್ಲಿ ನಿಂತಿದ್ದಾಗ ಸಂತೋಷ್ ಎಂಬಾತ ನಿರ್ಲಕ್ಷ್ಯದಿಂದ ಮೋಟಾರು ಸೈಕಲ್ನ್ನು ಚಲಾಯಿಸಿಕೊಂಡು ಬಂದು ಮೇರಿವಾಜ್ ಅವರಿಗೆ ಡಿಕ್ಕಿ ಹೊಡೆದ ಪರಿಣಾಮ ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟರು. ಸವಾರ ಸಂತೋಷ್ಗೂ ಗಾಯವಾಗಿದ್ದು ಕಾರ್ಕಳ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
KAS Officers Transfer: ದಿಢೀರ್ 13 ಮಂದಿ ಕೆಎಎಸ್ ಅಧಿಕಾರಿಗಳ ವರ್ಗಾವಣೆ
KAS Officers Transfer: ರಾಜ್ಯ ಸರ್ಕಾರವು ಆಗಾಗ ಮೇಜರ್ ಸರ್ಜರಿಯನ್ನು ಮಾಡುತ್ತಲೇ ಇರುತ್ತದೆ. ಹಾಗೆಯೇ ಇದೀಗ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ ಮಾಡಿದ್ದು, 13 ಮಂದಿ ಕೆಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಹಾಗಾದ್ರೆ ಯಾರು, ಎಲ್ಲಿಗೆ ವರ್ಗಾವಣೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ. ಕರ್ನಾಟಕ ಆಡಳಿತ ಸೇವೆಗೆ ಸೇರಿದ ಈ ಕೆಳಕಂಡ
ಎಪ್ರಿಲ್ ಮೊದಲ ಮೂರು ದಿನ ಕರಾವಳಿಯಲ್ಲಿ ಭಾರೀ ಗಾಳಿ-ಮಳೆ ಸಾಧ್ಯತೆ: ಹವಾಮಾನ ಇಲಾಖೆ
ಉಡುಪಿ, ಮಾ.30: ಕರಾವಳಿಯ ಮೂರು ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡದ ಅನೇಕ ಪ್ರದೇಶಗಳಲ್ಲಿ ಎಪ್ರಿಲ್ ತಿಂಗಳ ಮೊದಲ ಮೂರು ದಿನ ಗಂಟೆಗೆ 40 ರಿಂದ 50ಕಿ.ಮೀ. ವೇಗದ ಗಾಳಿಯೊಂದಿಗೆ ಭಾರೀ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮಯನ್ಮಾರ್ ಬಳಿಕ ಈಗ ಟೊಂಗಾದಲ್ಲಿ ಭೂಕಂಪ, ಸುನಾಮಿ ಎಚ್ಚರಿಕೆ; ಪೆಸಿಫಿಕ್ನಲ್ಲಿ ಏನೋ ಸರಿಯಲ್ಲ!
ಮಯನ್ಮಾರ್ ಭೀಕರ ಭೂಕಂಪನದ ಆಘಾತದಿಂದ ಚೇತರಿಸಕೊಳ್ಳುವ ಮೊದಲೇ, ಪೆಸಿಫಿಕ್ ದ್ವೀಪರಾಷ್ಟ್ರ ಟೊಂಗಾದಲ್ಲೂ 7.1 ತೀವ್ರತೆಯ ಭೂಕಂಪ ಸಂಭವಿಸಿದೆ. ಅಲ್ಲದೇ ಟೊಂಗಾ ಮತ್ತು ನಿಯುಯೆ ಕರಾವಳಿ ಭಾಗಕ್ಕೆ ಸುನಾಮಿ ಎಚ್ಚರಿಕೆ ನೀಡಲಾಗಿದೆ. ಭೂಕಂಪವು ಭೂಮೇಲ್ಮೈಯಿಂದ 10 ಕಿಲೋಮೀಟರ್ ಆಳದಲ್ಲಿ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 7.1 ತೀವ್ರತೆ ದಾಖಲಾಗಿದೆ ಎಂದು ಯುಎಸ್ ಜಿಯೋಲಾಜಿಕಲ್ ಸರ್ವೆ ಮಾಹಿತಿ ನೀಡಿದೆ. ಪೆಸಿಫಿಕ್ ಭಾಗದಲ್ಲಿ ನಿರಂತರವಾಗಿ ಭೂಮಿ ನಡಗುತ್ತಿರುವುದು ಇದೀಗ ಆತಂಕಕ್ಕೆ ಕಾರಣವಾಗಿದೆ. ಇಲ್ಲಿದೆ ಹೆಚ್ಚಿನ ಮಾಹಿತಿ.
SRH Vs DC - 3ರ ಹರೆಯದಲ್ಲೇ ತಾಯಿಯ ಕಳಕೊಂಡ ಅನಿಕೇತ್ ವರ್ಮಾಗೆ ಅಗಾಧ ರನ್ ಹಸಿವು! ಈತ ಸನ್ ರೈಸರ್ಸ್ ನ ಹೊಸತಾರೆ!
Aniket Verma - ಈ ಸನ್ ರೈಸರ್ಸ್ ಬ್ಯಾಟಿಂಗ್ ಸಾಮರ್ಥ್ಯದ ಆಳವೇ ಎಣಿಕೆಗೆ ನಿಲುಕುತ್ತಿಲ್ಲ. ಭಾನುವಾರ ದಿಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಅಭಿಷೇಕ್ ಶರ್ಮಾ, ಇಶಾನ್ ಕಿಶನ್, ನಿತೀಶ್ ಕುಮಾರ್ ರೆಡ್ಡಿ ಕೊನೆಗೆ ಟ್ರಾವಿಸ್ ಹೆಡ್ ಸಹ ಮಿಚೆಲ್ ಸ್ಟಾರ್ಕ್ ಬೌಲಿಂಗ್ ಮುಂದೆ ತರಗೆಲೆಗಳಂತೆ ಉದುರುತ್ತಿದ್ದರೆ ಇವನ್ಯಾರೋ ಈ ವರೆಗೂ ಹೆಸರೇ ಕೇಳಿರದ ಅನಿಕೇತ್ ವರ್ಮಾ ಎಂಬ ಯುವ ಬ್ಯಾಟರ್ ಬಿಸಿ ಮುಟ್ಟಿಸಿದ. ಐಪಿಎಲ್ ನಲ್ಲಿ ಇನ್ನೂ 3ನೇ ಪಂದ್ಯ ಆಡುತ್ತಿದ್ದ ಆತನ ಆಟದ ಪರಿ ಮಾತ್ರ ಬೊಂಬಾಟಾಗಿತ್ತು. ಯಾರೀ ಹೊಸ ಹೀರೋ?
ಅಖಿಲ ಭಾರತ ಸುನ್ನೀ ವಿದ್ಯಾಭ್ಯಾಸ ಮಂಡಳಿ ಪಬ್ಲಿಕ್ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ಸ್ವಾಲಿಹ
ಮಂಗಳೂರು : ಅಖಿಲ ಭಾರತ ಸುನ್ನೀ ವಿದ್ಯಾಭ್ಯಾಸ ಮಂಡಳಿ ನಡೆಸಿದ ಐದನೇ ತರಗತಿಯ ಪಬ್ಲಿಕ್ ಪರೀಕ್ಷೆಯಲ್ಲಿ ಎಸ್.ಜೆ.ಎಂ ಸಾಗರ ರೇಂಜ್ ಮಟ್ಟದಲ್ಲಿ ನಗರ ಸಿರಾಜುಲ್ ಹುದಾ ಅರೇಬಿಕ್ ಮದ್ರಸದ ವಿದ್ಯಾರ್ಥಿನಿ ಸ್ವಾಲಿಹ 557 ಅಂಕ ಪಡೆದು ಪ್ರಥಮ ಸ್ಥಾನ ಪಡೆದಿದ್ದಾರೆ. ಇವರು ನೂಲಿಗ್ಗೇರಿ ಮುಹಮ್ಮದ್ ರಫಿ ಮತ್ತು ರೇಷ್ಮಾ ಭಾನು ದಂಪತಿಯ ಪುತ್ರಿಯಾಗಿದ್ದಾರೆ. ಇವರ ಉಜ್ವಲ ಭವಿಷ್ಯಕ್ಕೆ ಆಡಳಿತ ಮದರಸ ಮಂಡಳಿ ಶುಭಕೋರಿದೆ.
ಶವ್ವಾಲ್ ತಿಂಗಳ ಚಂದ್ರ ದರ್ಶನ, ದೇಶದಾದ್ಯಂತ ಸೋಮವಾರ ಈದ್ ಉಲ್ ಫಿತ್ರ್ ಆಚರಣೆ
ಹೊಸದಿಲ್ಲಿ: ರವಿವಾರ ಶವ್ವಾಲ್ ತಿಂಗಳ ಚಂದ್ರ ದರ್ಶನವಾದ್ದರಿಂದ ದೇಶದಾದ್ಯಂತ ಸೋಮವಾರ ಈದ್ ಉಲ್ ಫಿತ್ರ್ ಆಚರಣೆ ನಡೆಯಲಿದೆ. ಪಿಟಿಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಫತೇಪುರಿ ಮಸೀದಿಯ ಇಮಾಮ್ ಮುಫ್ತಿ ಮುಕರ್ರಮ್ ಅಹ್ಮದ್ , ಮಸೀದಿಯ ರುಯೆತ್-ಎ-ಹಿಲಾಲ್ ಸಮಿತಿಯು ಶವ್ವಾಲ್ ತಿಂಗಳ ಚಂದ್ರದರ್ಶನವಾದ ಕುರಿತು ಖಚಿತಪಡಿಸಿಕೊಂಡಿದೆ. ಮಾರ್ಚ್ 31, ಸೋಮವಾರ ದೇಶದಲ್ಲಿ ಈದ್ ಆಚರಿಸಲಾಗುವುದು ಎಂದು ಹೇಳಿದರು. ಈದ್ ಅನ್ನು ಸಹೋದರತ್ವ ಮತ್ತು ಸಾಮರಸ್ಯದ ಹಬ್ಬವೆಂದ ಅವರು, ಈ ಸಂದರ್ಭದಲ್ಲಿ, ದೇಶದಲ್ಲಿ ಸಹೋದರತ್ವ ಮತ್ತು ಸಾಮರಸ್ಯವು ಮುಂದುವರಿಯಲಿ. ಪ್ರೀತಿಯು ಹೆಚ್ಚಲಿ ಎಂದು ನಾವು ಪ್ರಾರ್ಥಿಸುತ್ತೇವೆ ಎಂದು ಹೇಳಿದರು.
ರಸ್ತೆಯಲ್ಲಿ ನಮಾಝ್ ಕುರಿತ ಪ್ರಶ್ನೆ : ಪಾಡ್ ಕಾಸ್ಟ್ ಚರ್ಚೆಯ ವಿಡಿಯೋ ವೈರಲ್!
ಬೆಂಗಳೂರು: ಈದ್ ದಿನ ರಸ್ತೆಯಲ್ಲಿ ನಮಾಝ್ ಮಾಡುವ ಕುರಿತ ಪ್ರಶ್ನೆ ಕೇಳಲಾದ ಪಾಡ್ ಕಾಸ್ಟ್ ವೀಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. The Sujit Kumar Show ಎಂಬ ಯೂಟ್ಯೂಬ್ ಚಾನೆಲ್ ನ ಪಾಡ್ ಕಾಸ್ಟ್ ಶೋ ನಲ್ಲಿ ಕಾಂಗ್ರೆಸ್ ನಾಯಕ ಮತ್ತು ಆಲ್ ಇಂಡಿಯಾ ಮಿಲ್ಲಿ ಕಾಂಗ್ರೆಸ್ ನ ಸೈಯ್ಯದ್ ಶಫೀಯುಲ್ಲಾ ಸಾಹೇಬ್ ಅವರು ನಡೆಸಿದ ಚರ್ಚೆ ಸಾಕಷ್ಟು ಗಮನ ಸೆಳೆದಿದೆ. ರಸ್ತೆಯಲ್ಲಿ ನಮಾಝ್ ವಿಚಾರವಾಗಿ ಪ್ರಶ್ನೆಯೆತ್ತಿದ ಪಾಡ್ ಕಾಸ್ಟ್ ಶೋ ನಡೆಸಿಕೊಡುವ ಸುಜಿತ್ ಕುಮಾರ್ ಅವರು, ಸೈಯ್ಯದ್ ಶಫೀಯುಲ್ಲಾ ಅವರ ಉತ್ತರ ಮತ್ತು ಮರುಪ್ರಶ್ನೆಗಳಿಗೆ ಉತ್ತರಿಸಲಾಗದೇ ತಿಣುಕಾಡಿರುವುದು ವೀಡಿಯೊದಲ್ಲಿ ಸೆರೆಯಾಗಿದೆ. ವಿಸ್ತ್ರತವಾಗಿ ವಿವಿಧ ವಿಚಾರಗಳ ಕುರಿತು ಸಾಗಿದ ಚರ್ಚೆಯ ಒಂದು ಹಂತದಲ್ಲಿ ಸುಜಿತ್ ಕುಮಾರ್ ಅವರು ರಸ್ತೆಯಲ್ಲಿ ನಮಾಝ್ ಮಾಡುವ ಕುರಿತು ಸಯ್ಯದ್ ಶಫೀಯುಲ್ಲಾ ಅವರನ್ನು ಪ್ರಶ್ನಿಸುತ್ತಾರೆ. ಮುಸ್ಲಿಮರು ರಸ್ತೆಯಲ್ಲಿ ನಮಾಝ್ ಮಾಡುತ್ತಾರೆ. ರಸ್ತೆಯೇ ಮಸೀದಿ ಎಂದು ಭಾವಿಸಿ ನಮಾಝ್ ಮಾಡುತ್ತಾರೆ. ಅಲ್ಲದೇ ಬೀದಿಗಳು, ಉದ್ಯಾನವನಗಳು ಹೀಗೆ ಎಲ್ಲೆಂದರಲ್ಲಿ ನಮಾಝ್ ಮಾಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಸುಜಿತ್ ಕುಮಾರ್ ಅವರು ಶಫಿಯುಲ್ಲಾ ಅವರನ್ನು ಪ್ರಶ್ನಿಸುತ್ತಾರೆ. ಅದಕ್ಕೆ ಪ್ರಯುತ್ತರವಾಗಿ ಶಫೀಯುಲ್ಲಾ ಅವರು, ಈ ದೇಶದಲ್ಲಿ ನ್ಯಾಯ ಎಲ್ಲರಿಗೂ ಒಂದೇ ಅಲ್ಲವೇ? ಎಲ್ಲರೂ ಸಮಾನ ನಾಗರೀಕರಲ್ಲವೇ? ರಸ್ತೆಯಲ್ಲಿ ಮುಸ್ಲಿಮರು ಮಾತ್ರ ನಮಾಝ್ ಮಾಡುವುದೇ? ಹಿಂದೂಗಳು ಏನೂ ಮಾಡುವುದಿಲ್ಲವೇ? ಎಂದು ಮರುಪ್ರಶ್ನೆ ಮಾಡುತ್ತಾರೆ. ಆರಂಭದಲ್ಲಿ ಶಫೀಯುಲ್ಲಾ ಅವರ ಪ್ರಶ್ನೆಗೆ ಏನೂ ಉತ್ತರ ಕೊಡದೇ, ಹಾ… ಹಾ… ಎಂದಷ್ಟೇ ಹೇಳಿದ ಸುಜಿತ್ ಕುಮಾರ್, ಒಂದು ಹಂತದಲ್ಲಿ ಹಿಂದೂಗಳು ರಸ್ತೆಯಲ್ಲಿ ಏನೂ ಮಾಡುವುದಿಲ್ಲ ಎನ್ನುತ್ತಾರೆ. ಆಗ ಶಫೀಯುಲ್ಲಾ ನಿಮಗೆ ತಿಳಿದಿರದಿದ್ದರೆ ನಾನೇ ಆ ಬಗ್ಗೆ ಹೇಳಲೇ? ಹಿಂದೂಗಳು ರಸ್ತೆಯಲ್ಲಿ ಯಾವ ಆಚರಣೆಗಳನ್ನೂ ಮಾಡುವುದಿಲ್ಲವೇ ಎಂದು ಪ್ರಶ್ನಿಸುತ್ತಾರೆ. ಆ ವೇಳೆ ಸುಜಿತ್ ಕುಮಾರ್ ಅವರು ಹಿಂದೂಗಳು ರಸ್ತೆಯಲ್ಲಿ ಧಾರ್ಮಿಕ ಆಚರಣೆ ಮಾಡುತ್ತಾರೆ ಎಂದು ಒಪ್ಪಿಕೊಳ್ಳುತ್ತಾರೆ. ಕನ್ವರ್ ಯಾತ್ರಾರ್ಥಿಗಳು ಎಲ್ಲಿ ಹೋಗುತ್ತಾರೆ? ನೀವು ನನಗೆ ಗೊತ್ತಿಲ್ಲ ಎಂದು ಹೇಳುತ್ತೀರಿ. ಜವಾಬ್ದಾರಿಯುತ ನಾಗರಿಕರಾಗಿ ಈ ಬಗ್ಗೆ ಹೇಳಿ ಎಂದು ಶಫೀಯುಲ್ಲಾ ತೀವ್ರವಾಗಿಯೇ ಪ್ರಶ್ನಿಸುತ್ತಾರೆ. ಮುಂದುವರಿದು ಅವರು, ಹಿಂದೂಗಳು ಗಣೇಶ ಹಬ್ಬಕ್ಕೆ ಎಷ್ಟುದಿನ ಗಣೇಶ ಮೂರ್ತಿ ಕೂರಿಸುತ್ತಾರೆ? ಮನೆಯೊಳಗೆ ಕೂರಿಸುತ್ತಾರೆಯೇ ಎಂದು ಪ್ರಶ್ನಿಸಿದ್ದಾರೆ. ಆಗ ಸುಜಿತ್ ಕುಮಾರ್ ಅವರು, ಗಣೇಶ ಮೂರ್ತಿಯನ್ನು 1,3,5,7 ದಿನ ಬೀದಿಯಲ್ಲಿ ಕೂರಿಸುತ್ತಾರೆ ಎನ್ನುತ್ತಾರೆ. ಅದಕ್ಕೆ ಶಫೀಯುಲ್ಲಾ ನಮ್ಮ ಕಡೆ ಇಷ್ಟು ದಿನಗಳು, ಮುಂಬೈನಲ್ಲಿ ಎಷ್ಟು ದಿನ ಬೀದಿಯಲ್ಲಿ ಕೂರಿಸುತ್ತಾರೆ ನಿಮಗೆ ತಿಳಿದಿದೆಯಾ? ಮುಂಬೈನ ಲಾಲ್ ಬಾಗ್ ಗಣೇಶನನ್ನು ಬೀದಿಯಲ್ಲಿ, ರಸ್ತೆಯಲ್ಲಿ ತಿಂಗಳ ಕಾಲ ಇರಿಸುತ್ತಾರಲ್ಲವೇ ಎಂದು ಹೇಳಿರುವುದು ವೀಡಿಯೊದಲ್ಲಿದೆ. ಕೃಷ್ಣ ಜನ್ಮಾಷ್ಟಮಿಗೂ ಮೊಸರು ಕುಡಿಕೆಗೂ ಇದೇ ಪರಿಪಾಠವಿದೆಯಲ್ಲವೇ ಎಂದು ಅವರು ಸುಜಿತ್ ಕುಮಾರ್ ಗೆ ಹೇಳಿದ್ದಾರೆ. ದಕ್ಷಿಣ ಭಾರತದಲ್ಲಿ ನಡೆಯುವ ಕರಗ ಉತ್ಸವದ ಬಗ್ಗೆಯೂ ಹೇಳಿರುವ ಶಫೀಯುಲ್ಲಾ ಅದೂ ರಸ್ತೆಯಲ್ಲಿ ನಡೆಯುವ ಧಾರ್ಮಿಕ ಆಚರಣೆ ಎಂದು ನೆನಪಿಸಿದ್ದಾರೆ. ಮುಂದುವರಿದು ಮಾತನಾಡಿರುವ ಶಫೀಯುಲ್ಲಾ ನಾನು ಈ ಪ್ರಶ್ನೆಯನ್ನು ನಿಮ್ಮಂತಹ ಹಲವರಿಗೆ ಕೇಳಿದ್ದೇನೆ. ನಮಾಝ್ ನಿರ್ವಹಿಸಿವುದು ಹೆಚ್ಚೋ? ಗಣೇಶನನ್ನು ಕೂರಿಸುವುದು ಹೆಚ್ಚೋ ನೀವೇ ಹೇಳಿ. ಗಣೇಶನನ್ನು ಕೂರಿಸುವ ಹಲವರು ನನ್ನ ಹಿಂದೂ ಸ್ನೇಹಿತರು ನನ್ನನ್ನೂ ಆ ಕಾರ್ಯಕ್ರಮಕ್ಕೆ ಕರೆಯುತ್ತಾರೆ. ನಾನೂ ಹೋಗಿದ್ದೇನೆ. ದಸರಾ ಸಂದರ್ಭದಲ್ಲಿಯೂ ಇದೇ ರೀತಿಯ ಆಚರಣೆಗಳು ನಡೆಯುತ್ತವೆ ಎಂದು ಶಫೀಯುಲ್ಲಾ ಹೇಳಿದ್ದಾರೆ. ಎಲ್ಲ ಧರ್ಮಗಳ ಆಚರಣೆಗಳೂ ರಸ್ತೆಯಲ್ಲಿ ನಡೆಯುವಾಗ, ಅದೂ ದಿನಗಟ್ಟಲೆ, ವಾರಗಟ್ಟಲೆ ನಡೆಯುವಾಗ ಕೇವಲ ಒಂದು ಧರ್ಮದ ಆಚರಣೆ ಕೆಲವೇ ನಿಮಿಷ ನಡೆದ ಕೂಡಲೇ ಅದನ್ನು ಮಾತ್ರ ಎತ್ತಿಕೊಂಡು ದೊಡ್ಡ ವಿವಾದವಾಗಿಸುವುದು ಸರಿಯಲ್ಲ ಎಂದು ಶಫೀಯುಲ್ಲಾ ಅವರು ತಮ್ಮ ಉತ್ತರದ ಮೂಲಕ ಸಂದೇಶ ರವಾನಿಸಿದ್ದಾರೆ. ಈ ಪಾಡ್ ಕಾಸ್ಟ್ ವೈರಲ್ ವೀಡಿಯೊಗೆ ಪ್ರತಿಕ್ರಿಯಿಸಿರುವ ಸರಾಹ್ ಡಿಯೋ ಎಂಬ ಬಳಕೆದಾರರು, ಯಾರೀ ಪಾಡ್ ಕಾಸ್ಟರ್? ಅವರ ಡಬಲ್ ಸ್ಟಾಂಡರ್ಡ್ ಪ್ರಶ್ನೆಗೆ ಉತ್ತರಿಸಲು ಸರಿಯಾದ ವ್ಯಕ್ತಿಯೇ ಬಂದಿದ್ದಾರೆ ಎಂದು ಹೇಳಿದ್ದಾರೆ.
ಮೂಡುಬಿದಿರೆ| ಅಕ್ರಮ ದನ ಸಾಗಾಟ ಆರೋಪದಲ್ಲಿ ಮಾರಣಾಂತಿಕ ಹಲ್ಲೆ ಪ್ರಕರಣ: ಇಬ್ಬರು ಬಜರಂಗದಳ ಕಾರ್ಯಕರ್ತರ ಬಂಧನ
ಮೂಡುಬಿದಿರೆ: ಅಕ್ರಮ ದನ ಸಾಗಾಟದ ಆರೋಪದಲ್ಲಿ ಇಬ್ಬರಿಗೆ ಮಾರಣಾಂತಿಕ ಹಲ್ಲೆ ನಡೆಸಿ ವಾಹನ ಜಖಂಗೊಳಿಸಿದ್ದ ಪ್ರಕರಣದ ಇಬ್ಬರು ಬಜರಂಗದಳದ ಕಾರ್ಯಕರ್ತರನ್ನು ಮೂಡುಬಿದಿರೆ ಪೊಲೀಸರು ಬಂಧಿಸಿದ್ದಾರೆ. ಕಡಂದಲೆಯ ಸುಧೀರ್ ಶೆಟ್ಟಿ ಹಾಗೂ ಸುರತ್ಕಲ್ ನ ಧನರಾಜ್ ಬಂಧಿತ ಆರೋಪಿಗಳಾಗಿದ್ದು, ತಲೆ ಮರೆಸಿಕೊಂಡಿರುವ ಐವರು ಆರೋಪಿಗಳಿಗಾಗಿ ಪೊಲೀಸರು ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಮೂಡುಬಿದಿರೆ ಬಿರಾವಿನ ಕೂಸಪ್ಪ ಪೂಜಾರಿ ಅವರು ಬಜಗೋಳಿಯ ತನ್ನ ಪರಿಚಯದ ಮನೆಯಿಂದ ಹಸುವನ್ನು ಕೃತಕ ಗರ್ಭಧಾರಣೆಗಾಗಿ ಸಂಗಬೆಟ್ಟು ನಿವಾಸಿ ಅಬ್ದುಲ್ ರಹ್ಮಾನ್ ಅವರ ವಾಹನದಲ್ಲಿ ಮೂಡುಬಿದಿರೆಯತ್ತ ತರುತ್ತಿದ್ದರು. ಈ ವೇಳೆ ಬೆಳುವಾಯಿ ಬಳಿ ವಾಹನವನ್ನು ತಡೆದ ಬಜರಂಗದಳದ 7 ಮಂದಿ ಕಾರ್ಯಕರ್ತರು ವಾಹನ ವನ್ನು ಜಖಂಗೊಳಿಸಿ ಇಬ್ಬರಿಗೂ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಜಾನುವಾರು ಸಾಗಾಟಕ್ಕಾಗಿ ಪಡೆದು ಕೊಂಡಿದ್ದ ಕಾನೂನು ರೀತಿಯ ದಾಖಲೆ ಪತ್ರಗಳನ್ನು ಹಾಗೂ ಮೊಬೈಲ್ ಫೋನ್ ಗಳನ್ನು ದರೋಡೆಗೈದು ಪರಾರಿಯಾಗಿದ್ದರು ಎಂದು ದೂರಲಾಗಿತ್ತು. ಗಾಯಗೊಂಡಿದ್ದ ಇಬ್ಬರನ್ನು ಸ್ಥಳೀಯರು ಮೂಡುಬಿದಿರೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ದ್ದರು ಮತ್ತು ಹೆಚ್ಚಿನ ಚಿಕಿತ್ಸೆಗಾಗಿ ಕೂಸಪ್ಪ ಅವರನ್ನು ಖಾಸಗಿ ಆಸ್ಪತ್ರಗೆ ಹಾಗೂ ಅಬ್ದುಲ್ ರಹ್ಮಾನ್ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಸಂಬಂಧ ಕೂಸಪ್ಪ ಅವರು ಮೂಡುಬಿದಿರೆ ಪೊಲೀಸರಿಗೆ ದೂರು ನೀಡಿದ್ದರು. ಈ ದೂರಿನ ಅನ್ವಯ ಕಾರ್ಯಾಚರಣೆ ಕೈಗೊಂಡ ಮೂಡುಬಿದಿರೆ ಪೊಲೀಸ್ ಇನ್ ಸ್ಪೆಕ್ಟರ್ ಸಂದೇಶ್ ನೇತೃತ್ವದ ಪೊಲೀಸ್ ತಂಡ ಇಬ್ಬರು ಬಜರಂಗದಳ ಕಾರ್ಯಕರ್ತರನ್ನು ಬಂಧಿಸಿದ್ದು, ತಲೆ ಮರೆಸಿಕೊಂಡಿರುವ ಐವರು ಆರೋಪಿಗಳ ಬಂಧನಕ್ಕೆ ಕಾರ್ಯಾಚರಣೆ ನಡೆಸುತ್ತಿದ್ದಾರೆ.
Tsunami: ಟೊಂಗಾ ದ್ವೀಪದಲ್ಲಿ 7.1 ತೀವ್ರತೆ ಭೂಕಂಪ; ಸುನಾಮಿ ಎಚ್ಚರಿಕೆ
ಟೊಂಗಾ ದ್ವೀಪದ ಬಳಿ 7.1 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು ಪೆಸಿಫಿಕ್ ದ್ವೀಪ ರಾಷ್ಟ್ರಕ್ಕೆ ಸುನಾಮಿ ಎಚ್ಚರಿಕೆ ನೀಡಲಾಗಿದೆ ಅಮೆರಿಕ ಭೂವೈಜ್ಞಾನಿಕ ಸಮೀಕ್ಷೆ (ಯುಎಸ್ಜಿಎಸ್) ಮಾಹಿತಿ ನೀಡಿದೆ. ಸ್ಥಳೀಯ ಸಮಯ ಸೋಮವಾರ ಮುಂಜಾನೆ ಟೊಂಗಾದ ಮುಖ್ಯ ದ್ವೀಪದ ಈಶಾನ್ಯಕ್ಕೆ ಸುಮಾರು 100 ಕಿಲೋಮೀಟರ್ (62 ಮೈಲುಗಳು) ದೂರದಲ್ಲಿ ಭೂಕಂಪ ಸಂಭವಿಸಿದೆ ಎಂದು ವರದಿ ಮಾಡಿದೆ. ಪೆಸಿಫಿಕ್ ಸುನಾಮಿ
Yatnal: ಮಹಾಭಾರತದಲ್ಲಿ ಜಯಿಸಿದ್ದು ಶಕುನಿ, ಧೃತರಾಷ್ಟ್ರರಲ್ಲ: ಯತ್ನಾಳ್ ಹೊಸ ಸಂಕಲ್ಪ
ಬಿಜೆಪಿಯಿಂದ ಉಚ್ಛಾಟನೆ ಬೆನ್ನಲ್ಲೇ ಮಹತ್ವದ ನಿರ್ಧಾರ ತೆಗೆದುಕೊಂಡಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಹೊಸ ಪಕ್ಷ ಸ್ಥಾಪಿಸುವುದಾಗಿ ಘೋಷಿಸಿ, ಬಿಜೆಪಿ ಹೈಕಮಾಂಡ್ ಮುಂದೆ ತೊಡೆ ತಟ್ಟಿದ್ದಾರೆ. ಇಂದು ವಿಜಯಪುರ ನಗರದ ಸಿದ್ದೇಶ್ವರ ದೇವಸ್ಥಾನದಲ್ಲಿ ಯುಗಾದಿ ಪಾಡ್ಯ ಅಂಗವಾಗಿ ವಿಶೇಷ ಪೂಜೆ ಸಲ್ಲಿಸಿ, ನಾಡಿಗೆ ಒಳಿತಾಗಲೆಂದು ಪ್ರಾರ್ಥಿಸಿರುವ ಅವರು ವಿಜಯದಶಮಿ ವೇಳೆಗೆ ಹೊಸ ಪಕ್ಷ ಕಟ್ಟುವ
ಹಿಮಾಚಲ ಪ್ರದೇಶ | ಕುಲ್ಲುವಿನಲ್ಲಿ ಭೂಕುಸಿತ ; ಆರು ಜನರು ಮೃತ್ಯು
ಶಿಮ್ಲಾ: ಹಿಮಾಚಲ ಪ್ರದೇಶದ ಕುಲ್ಲುವಿನಲ್ಲಿ ಭೂಕುಸಿತ ಸಂಭವಿಸಿದ್ದು, ಮಣಿಕರಣ್ ಗುರುದ್ವಾರ ಪಾರ್ಕಿಂಗ್ ಬಳಿ ರವಿವಾರ ಮರಗಳು ಉರುಳಿ ಬಿದ್ದ ಪರಿಣಾಮ ಆರು ಜನರು ಮೃತಪಟ್ಟು ಐವರು ಗಾಯಗೊಂಡಿದ್ದಾರೆ ಎಂದು ANI ವರದಿ ಮಾಡಿದೆ. ಪೊಲೀಸರು ಮತ್ತು ರಕ್ಷಣಾ ತಂಡಗಳು ಐದು ಮಂದಿ ಗಾಯಾಳುಗಳನ್ನು ಸ್ಥಳೀಯ ಸಮುದಾಯ ಆಸ್ಪತ್ರೆಗೆ ಸ್ಥಳಾಂತರಿಸಿವೆ ಎಂದು ಕುಲ್ಲುವಿನ ಹೆಚ್ಚುವರಿ ಜಿಲ್ಲಾಧಿಕಾರಿ ಅಶ್ವನಿ ಕುಮಾರ್ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಯಾದಗಿರಿ | ಮಹಾತ್ಮಗಾಂಧಿ ನರೇಗಾ ಯೋಜನೆ ಕೂಲಿ ದರ ಹೆಚ್ಚಳ : ಇಒ ಬಸವರಾಜ ಸಜ್ಜನ್
ಸುರಪುರ : ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಅರಕುಶಲ ಕೂಲಿ ಕೆಲಸ ಮಾಡುವ ಗ್ರಾಮೀಣ ಪ್ರದೇಶದ ಕೂಲಿಕಾರರ ದಿನದ ಕೂಲಿ ದರವನ್ನು 370 ರೂ.ಗಳಿಗೆ ಹೆಚ್ಚಳ ಮಾಡಿ, ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಾಲಯವು ಆದೇಶ ಹೊಡಿಸಿದೆ ಎಂದು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಾದ ಬಸವರಾಜ ಸಜ್ಜನ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇದಕ್ಕೂ ಮುನ್ನ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಕೂಲಿ ಕೆಲಸ ಮಾಡುವ ಕೂಲಿ ಕಾರ್ಮಿಕರಿಗೆ ದಿನದ ಕೂಲಿ ಹಣ 349 ರೂ.ಗಳನ್ನು ಪಾವತಿಸಲಾಗುತ್ತಿತ್ತು. ನರೇಗಾ ಕೂಲಿಕಾರ ಕೂಲಿ ದರ ಪರಿಷ್ಕರಿಸಿದ ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಾಲಯವು 2025ರ ಪ್ರಸಕ್ತ ಸಾಲಿನ ಏಪ್ರಿಲ್ ತಿಂಗಳ ಹೊಸ ಆರ್ಥಿಕ ವರ್ಷದಿಂದ ಚಾರಿಗೆ ಬರುವಂತೆ 21ರೂ.ಗಳನ್ನು ಹೆಚ್ಚುವರಿಯಾಗಿ 349 ರೂ.ಗಳಿಗೆ ಸೇರಿಸಿ 370ರೂ. ದಿನದ ಕೂಲಿದರ ಪರಿಷ್ಕರಿಸಿ ನಿಗದಿಪಡಿಸಿದೆ ಎಂದು ಹೇಳಿದ್ದಾರೆ. ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಗ್ರಾಮೀಣ ಪ್ರದೇಶದ ಪ್ರತಿ ಅರ್ಹ ಕುಟುಂಬಕ್ಕೂ ಒಂದು ಆರ್ಥಿಕ ವರ್ಷದಲ್ಲಿ ಏಪ್ರಿಲ್ ತಿಂಗಳಿಂದ ಮಾರ್ಚ್ ಅಂತ್ಯದ ವರೆಗೆ ನೂರು ದಿನಗಳ ಅಕುಶಲ ಕೂಲಿ ಕೆಲಸ ನೀಡಲಾಗುತ್ತದೆ. ಗ್ರಾಮೀಣ ಭಾಗದ ಒಂದು ಕುಟುಂಬ ವರ್ಷದಲ್ಲಿ ನೂರು ದಿನ ಕೆಲಸ ಮಾಡಿದರೆ 37 ಸಾವಿರ ರೂ.ಗಳ ಕೂಲಿ ಹಣ ಪಡೆದುಕೊಳ್ಳಬಹುದು. ನರೇಗಾ ಯೋಜನೆಯಡಿ ಕೂಲಿ ಕೆಲಸ ಮಾಡುವ ಗಂಡು-ಹೆಣ್ಣಿಗೂ 370 ರೂ.ಗಳ ಸಮಾನ ಕೂಲಿ ಪಾವತಿಸಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ. ಬೇಸಿಗೆ ಆರಂಭವಾಗಿ ಗ್ರಾಮೀಣ ರೈತರ ಕೃಷಿ ಚಟುವಟಿಕೆಗಳು ಭಾಗತ: ಪೂರ್ಣಗೊಂಡಿದ್ದು, ಕೃಷಿ ಕೂಲಿಕಾರರು ಕೆಲಸವಿಲ್ಲದೆ ಕುಟುಂಬದ ನಿರ್ವಹಣೆ ಮಾಡಲು ದೂರದ ನಗರಗಳಿಗೆ ಕೂಲಿ ಕೆಲಸಕ್ಕಾಗಿ ವಲಸೆ ಹೊಗದೆ, ನರೇಗಾ ಯೋಜನೆಯಡಿ ಒಂದು ಕುಟುಂಬ ನೂರು ದಿನ ಕೆಲಸ ಪಡೆದುಕೊಳ್ಳುವ ಅವಕಾಶವಿದೆ. ಹೀಗಾಗಲೇ ತಾಲೂಕಿನ ಎಲ್ಲಾ ಗ್ರಾಮ ಪಂಚಾಯತ್ ಗಳಲ್ಲಿ ಕೂಲಿ ಬೇಡಿಕೆ ಕೇಂದ್ರ ಆರಂಭಿಸಿದೆ. ಕೂಲಿ ಕೆಲಸಕ್ಕಾಗಿ ತಮ್ಮ ಹತ್ತಿರದ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ, ಕೂಲಿ ಬೇಡಿಕೆ ಸಲ್ಲಿಸಿ ಕೆಲಸ ಪಡೆದುಕೊಳ್ಳುವ ಮೂಲಕ ನರೇಗಾ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕೂಲಿಕಾರರಲ್ಲಿ ಮನವಿ ಮಾಡಿದ್ದಾರೆ.
RCB Vs CSK: ಸಿಎಸ್ಕೆ ಅಲ್ಲ.. ಆರ್ಸಿಬಿನೇ.. ಉಲ್ಟಾ ಹೊಡೆದ ಡಬಲ್ ಗೇಮ್ ಅಂಬಟಿ ರಾಯಡು
Ambati Rayudu: ಸುಮ್ಮನೆ ಇರಲಾರದೇ ಇರುವೆ ಬಿಟ್ಟುಕೊಂಡ್ರು ಎನ್ನುವ ಕಥೆ ಸಿಎಸ್ಕೆ ಮಾಜಿ ಕ್ರಿಕೆಟಿಗ ಅಂಬಟಿ ರಾಯಡು ಅವರದ್ದಾಗಿತ್ತು. ಯಾಕೆ ಅಂತೀರಾ.. ಆರ್ಸಿಬಿಯನ್ನು ಪದೇ ಪದೇ ವ್ಯಂಗ್ಯವಾಡಿ ಅಭಿಮಾನಿಗಳ ಕೆಂಗಣಿಗೆ ಗುರಿಯಾಗುತ್ತಲಿದ್ದರು. ಇದೀಗ ಆರ್ಸಿಬಿ ಅಭಿಮಾನಿಗಳ ಕಾಟ ತಾಳರಾದೇ ತಮ್ಮ ವರಸೆಯನ್ನೂ ಬದಲಿಸಿದ್ದಾರೆ. ಇತ್ತೀಚೆಗಷ್ಟೇ ಸಿಎಸ್ಕೆ ವಿರುದ್ಧ ಪಂದ್ಯಕ್ಕೂ ಮುನ್ನ ಆರ್ಸಿಬಿಯನ್ನು ಕೆಣಕಿದ್ದ ಅಂಬಟಿ ರಾಯಡು ಇದೀಗ
ಯಾದಗಿರಿ | ಎಡದಂಡೆ ಕಾಲುವೆಗಳಿಗೆ ನೀರು ಹರಿಸಲು ಸಿಎಂ ಸಿದ್ದರಾಮಯ್ಯಗೆ ಮಾಜಿ ಸಚಿವ ರಾಜುಗೌಡರಿಂದ ಮನವಿ
ಸುರಪುರ : ಕೃಷ್ಣಾ ಎಡದಂಡೆ ಕಾಲುವೆಗಳಿಗೆ ಏ.10ರ ವರೆಗೆ ನಿರಂತರವಾಗಿ ನೀರು ಹರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಸಲ್ಲಿಸಿರುವುದಾಗಿ ಮಾಜಿ ಸಚಿವ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ನರಸಿಂಹ ನಾಯಕ (ರಾಜುಗೌಡ) ತಿಳಿಸಿದರು. ಸಿಎಂ ಗೆ ಮನವಿ ಮಾಡಿದ ನಂತರ ಈ ಕುರಿತು ಪತ್ರಿಕೆಗೆ ಹೇಳಿಕೆ ನೀಡಿದ ಅವರು, ಮುಖ್ಯಮಂತ್ರಿಗಳಿಗೆ ರೈತರ ಬೆಳೆಗಳಿಗೆ ಅಗತ್ಯವಿರುವ ನೀರಿನ ಕುರಿತು ಮನವರಿಕೆ ಮಾಡಿದ್ದೇವೆ, ಈ ಹಿಂದೆಯೂ ಇಷ್ಟೇ ಪ್ರಮಾಣದಲ್ಲಿ ನೀರು ಇದ್ದಾಗ ಬೆಳೆಗಳಿಗೆ ನೀರು ಬಿಡಲಾಗಿದೆ, ಅಲ್ಲದೆ ಜಲಾಶಯದಲ್ಲಿ ನೀರು ಲಭ್ಯವಿದೆ ಎಂದು ತಿಳಿಸಿದ್ದೇವೆ. ಮುಖ್ಯಮಂತ್ರಿಗಳು ಕೋಯ್ನಾ ಜಲಾಶಯ ದಿಂದ ನೀರು ಬಿಡಲು ಮಹಾರಾಷ್ಟ್ರ ಸರಕಾರಕ್ಕೆ ಪತ್ರ ಬರೆಯಲಾಗಿದೆ, ಕೋಯ್ನಾ ಜಲಾಶಯದಿಂದ ನೀರು ಬಿಟ್ಟಲ್ಲಿ ಬಿಡುವುದಾಗಿ ಹಾಗೂ ಅಧಿಕಾರಿಗಳನ್ನು ಕರೆದ ಮಾಹಿತಿ ಪಡೆದು ತಮಗೆ ತಿಳಿಸುವುದಾಗಿ ತಿಳಿಸಿದ್ದಾರೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಜಿ.ಪಂ ಮಾಜಿ ಅಧ್ಯಕ್ಷ ಬಸನಗೌಡ ಯಡಿಯಾಪೂರ, ಕಲಬುರಗಿ-ಯಾದಗಿರಿ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಡಾ.ಸುರೇಶ ಸಜ್ಜನ್, ಚಂದ್ರಶೇಖರಗೌಡ ಮಾಗನೂರ, ಬಸನಗೌಡ ಹಳ್ಳಿಕೋಟಿ, ವಿರೇಶ ಚಿಂಚೋಳಿ, ಬಸವರಾಜಸ್ವಾಮಿ ಸ್ಥಾವರಮಠ, ವೆಂಕಟೇಶ, ಕೃಷ್ಣಾರಡ್ಡಿ ಮುದನೂರ, ಮೋತಿಲಾಲ ಚವ್ಹಾಣ್ ಸೇರಿದಂತೆ ಅನೇಕರು ಭಾಗವಹಿಸಿದ್ದರು. ನೀರಿಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ, ಕೆಬಿಜೆಎನ್ಎಲ್ ವ್ಯವಸ್ಥಾಪಕ ನಿರ್ದೇಶಕರಿಗೂ ಮನವಿ ಸಲ್ಲಿಸಿದ್ದೇವೆ, ರೈತರಿಗಾಗಿ ನೀರು ತರಲು ನಿರಂತರವಾಗಿ ಪ್ರಯತ್ನ ಹೋರಾಟ ನಡೆಸುವೆ. - ರಾಜುಗೌಡ ಮಾಜಿ ಸಚಿವ
Fact Check : ನಟ ಅಜಯ್ ರಾವ್ ಕೋಟ್ಯಾಂತರ ರೂ. ಸಾಲ ಮಾಡಿ ಬೀದಿಗೆ ಬಿದ್ರಾ? ವೈರಲ್ ಪೋಸ್ಟ್ ಸತ್ಯವೇ?
Actor Ajay Rao Loan : ನಟ ಅಜಯ್ ರಾವ್ ಅವರು ಸಾಲ ಮಾಡಿಕೊಂಡು ಬೀದಿಗೆ ಬಿದ್ದಿದ್ದಾರೆ ಎಂಬ ಫೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದರೆ, ಇದು ಸುಳ್ಳು ಎಂದು ಸಜಗ್ ತನಿಖೆಯಲ್ಲಿ ದೃಢವಾಗಿದೆ. ಈ ಬಗ್ಗೆ ಹೆಚ್ಚಿನ ವಿವರ ಇಲ್ಲಿದೆ.
ರಾಜ್ಯಾದ್ಯಂತ ಸೋಮವಾರ (ಮಾ.31) ಈದುಲ್ ಫಿತ್ರ್ ಆಚರಣೆ
ಬೆಂಗಳೂರು : ಶವ್ವಾಲ್ ಚಂದ್ರ ದರ್ಶನವಾದ ಹಿನ್ನಲೆಯಲ್ಲಿ ರಾಜ್ಯಾದ್ಯಂತ ಸೋಮವಾರ(ಮಾ.31) ಈದ್ ಉಲ್ ಫಿತ್ರ್ ಆಚರಣೆ ಮಾಡಲು ನಿರ್ಧರಿಸಲಾಗಿದೆ ಎಂದು ಮೌಲಾನಾ ಮಕ್ಸೂದ್ ಇಮ್ರಾನ್ ತಿಳಿಸಿದ್ದಾರೆ. ರವಿವಾರ ನಗರದ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿರುವ ವಕ್ಫ್ ಬೋರ್ಡ್ ಕಚೇರಿಯಲ್ಲಿ ಅಮೀರ್ ಎ ಶರೀಅತ್ ಮೌಲಾನಾ ಸಗೀರ್ ಅಹ್ಮದ್ ಖಾನ್ ರಶಾದಿ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಚಂದ್ರ ದರ್ಶನ ಸಮಿತಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.
DC vs SRH: ಮಿಚೆಲ್ ಸ್ಟಾರ್ಕ್, ಫಾಫ್ ಅಬ್ಬರಕ್ಕೆ ಸನ್ರೈಸರ್ಸ್ ಹೈದರಬಾದ್ ಧೂಳಿಪಟ!
ವಿಶಾಖಪಟ್ಟಣದ ಡಾ. ವೈ. ಎಸ್ ರಾಜಶೇಖರ ರೆಡ್ಡಿ ಎಸಿಎ-ವಿಡಿಸಿಎ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಸನ್ರೈಸರ್ಸ್ ಹೈದರಾಬಾದ್ ವಿರುದ್ದ 7 ವಿಕೆಟ್ಗಳ ಅಮೋಘ ಗೆಲುವು ಸಾಧಿಸಿದೆ. ಬಲಿಷ್ಠ ಬ್ಯಾಟಿಂಗ್ ಮೂಲಕವೇ ಸದ್ದು ಮಾಡಿದ್ದ ಸನ್ರೈಸರ್ಸ್ ಹೈದರಾಬಾದ್ ಡೆಲ್ಲಿ ಕ್ಯಾಪಿಟಲ್ಸ್ ಮಾರಕ ಬೌಲಿಂಗ್ ದಾಳಿಗೆ ಮಂಡಿಯೂರಿತು. ಟಾಸ್ ಗೆದ್ದ ಸನ್ರೈಸರ್ಸ್ ಹೈದರಾಬಾದ್ ಮೊದಲು ಬ್ಯಾಟಿಂಗ್ ಆಯ್ಕೆ
ಶಸ್ತ್ರಾಸ್ತ್ರ ತ್ಯಜಿಸಿ ಶರಣಾದ 50 ನಕ್ಸಲರು: ಛತ್ತೀಸ್ಗಢಕ್ಕೆ ಮೋದಿ ಭೇಟಿಗೆ ಮುನ್ನ ನಡೀತು ದೊಡ್ಡ ಬೆಳವಣಿಗೆ
ಛತ್ತೀಸ್ಗಢದ ಸುಕ್ಮಾ-ದಂತೇವಾಡಾ ಗಡಿಯ ಉಪಂಪಲ್ಲಿ ಕೆರ್ಲಪಾಲ್ ಪ್ರದೇಶದ ಅರಣ್ಯದಲ್ಲಿ ಭದ್ರತಾ ಪಡೆಗಳೊಂದಿಗೆ ಆಗಾಗೆ ಘರ್ಷಣೆ ಉಂಟಾಗುತ್ತಲೇ ಇರುತ್ತದೆ. ಆದರೆ ಇಂದು ಮಾ.30ರಂದು ಛತ್ತೀಸ್ಗಢದ ಬಿಲಾಸ್ಪುರಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸುವ ಕೆಲವೇ ಗಂಟೆಗಳ ಮೊದಲು ಛತ್ತೀಸ್ಗಢದ ಬಿಜಾಪುರ ಜಿಲ್ಲೆಯಲ್ಲಿ ಐವತ್ತು ನಕ್ಸಲರು ಶರಣಾಗಿದ್ದಾರೆ. ಇನ್ನೂ ನಕ್ಸಲಿಸಂ ಬಗ್ಗೆ ಮಾತನಾಡಿದ ಪ್ರಧಾನಿ, ಮಾವೋವಾದಿ ಹಿಂಸಾಚಾರದಲ್ಲಿ ಅನೇಕ ತಾಯಂದಿರು ತಮ್ಮ ಪ್ರೀತಿಯ ಪುತ್ರರನ್ನು ಕಳೆದುಕೊಂಡರು. ಅನೇಕ ಸಹೋದರಿಯರು ತಮ್ಮ ಸಹೋದರರನ್ನು ಕಳೆದುಕೊಂಡರು. ದಶಕಗಳಿಂದ, ಕಾಂಗ್ರೆಸ್ ನೀತಿಗಳಿಂದಾಗಿ ಛತ್ತೀಸ್ಗಢ ಸೇರಿದಂತೆ ಹಲವು ರಾಜ್ಯಗಳಲ್ಲಿ ನಕ್ಸಲಿಸಂಗೆ ಪ್ರೋತ್ಸಾಹ ಸಿಕ್ಕಿದೆ ಎಂದು ವಾಗ್ದಾಳಿ ನಡೆಸಿದರು.
ಸೋಮವಾರ ಈದುಲ್ ಫಿತ್ರ್: ಖಾಝಿ ಮಾಣಿ ಉಸ್ತಾದ್ ಘೋಷಣೆ
ಉಡುಪಿ: ಇಂದು ಶವ್ವಾಲ್ ತಿಂಗಳ ಚಂದ್ರದರ್ಶನವಾಗಿರುವುದರಿಂದ ಸೋಮವಾರ ಈದುಲ್ ಫಿತ್ರ್ ಆಚರಿಸಲಾಗುವುದು ಎಂದು ಉಡುಪಿ , ಚಿಕ್ಕಮಗಳೂರು, ಹಾಸನ, ಶಿವಮೊಗ್ಗ ಜಿಲ್ಲಾ ಸಂಯುಕ್ತ ಜಮಾಅತ್ ಹಾಗೂ ದ.ಕ.ಜಿಲ್ಲೆಯ ವಿವಿಧ ಮೊಹಲ್ಲಾಗಳ ಖಾಝಿ ಝೈನುಲ್ ಉಲಮಾ ಎಂ ಅಬ್ದುಲ್ ಹಮೀದ್ ಮುಸ್ಲಿಯಾರ್ ಘೋಷಿಸಿದ್ದಾರೆ. ಈದ್ ದಿನ ಎಲ್ಲಾ ಮಸೀದಿ ಈದ್ಗಾಗಳಲ್ಲಿ ಫೆಲೆಸ್ತೀನ್ ಜನತೆಗಾಗಿ ಪ್ರಾರ್ಥಿಸುವಂತೆಯೂ ಎಲ್ಲಾ ಮೊಹಲ್ಲಾಗಳಲ್ಲಿ ಮೊಹಲ್ಲಾ ಕಮಿಟಿಗಳು, ಸ್ಥಳೀಯ ಯುವ ಸಂಘಸಂಸ್ಥೆಗಳು ಮಾದಕ ವ್ಯಸನಗಳ ವಿರುದ್ಧ ಜಾಗೃತಿ ಮೂಡಿಸುವಂತೆಯೂ ಅವರು ಪ್ರಕಟನೆಯಲ್ಲಿ ಕರೆ ನೀಡಿದ್ದಾರೆ ಎಂದು ಉಡುಪಿ ಜಿಲ್ಲಾ ಸಂಯುಕ್ತ ಜಮಾಅತ್ ಪ್ರಧಾನ ಕಾರ್ಯದರ್ಶಿ ಹಾಜಿ ಎಂ ಎ ಬಾವು ಮೂಳೂರು ತಿಳಿಸಿದ್ದಾರೆ
Tungabhadra: ಕಲ್ಯಾಣ ಕರ್ನಾಟಕ ರೈತರಿಗೆ ಯುಗಾದಿ ಸಿಹಿಸುದ್ದಿ: ತುಂಗಾಭದ್ರಾ ಕಾಲುವೆಗೆ 2 ಟಿಎಂಸಿ ನೀರು
ಸಿಎಂ ಸಿದ್ದರಾಮಯ್ಯ ಅವರು ಯುಗಾದಿ ಹಬ್ಬದ ಪ್ರಯುಕ್ತ ಕಲ್ಯಾಣ ಕರ್ನಾಟಕ ಭಾಗದ ರೈತರಿಗೆ ಸಿಹಿಸುದ್ದಿ ನೀಡಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದ ರೈತಾಪಿ ಜನರಿಗೆ ಯುಗಾದಿ ಕೊಡುಗೆಯಾಗಿ ಭದ್ರಾ ಜಲಾಶಯದಿಂದ ತುಂಗಾಭದ್ರಾ ಕಾಲುವೆಗೆ ಎರಡು ಟಿಎಂಸಿ ನೀರು ಹರಿಸಲಾಗುವುದು ಎಂದು ಸಿದ್ದರಾಮಯ್ಯ ಘೋಷಿಸಿದ್ದಾರೆ. ಏಪ್ರಿಲ್ 1ರಿಂದ 5ರ ಅವಧಿಯಲ್ಲಿ ಕಾಲುವೆಗೆ ನೀರು ಹರಿಸಲು ನಿರ್ಧರಿಸಲಾಗಿದೆ. ಇದರಿಂದ ಕೊಪ್ಪಳ, ರಾಯಚೂರು
ಮುಂಬೈ: ವ್ಯಕ್ತಿಯೊಬ್ಬ ಅಕ್ರಮವಾಗಿ ಮಸೀದಿಗೆ ಪ್ರವೇಶಿಸಿ ಅಲ್ಲಿ ಜಿಲೆಟಿನ್ ಕಡ್ಡಿಗಳಿಟ್ಟಿದ್ದು, ಅದು ಸ್ಫೋಟಗೊಂಡಿರುವ ಘಟನೆ ರವಿವಾರ ಮುಂಜಾನೆ ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ರವಿವಾರ ಮುಂಜಾನೆ ಸುಮಾರು 2.30ರ ವೇಳೆಗೆ ಜಿಯೊರಾಯಿ ತಾಲ್ಲೂಕಿನ ಆರ್ಧಾ ಮಾಸ್ಲಾ ಗ್ರಾಮದಲ್ಲಿ ಸಂಭವಿಸಿದ ಈ ಸ್ಫೋಟ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ಅವರು ಹೇಳಿದ್ದಾರೆ. ಆದರೆ, ಜಿಲೆಟಿನ್ ಕಡ್ಡಿಗಳ ಸ್ಫೋಟದಿಂದ ಮಸೀದಿಯ ಕಟ್ಟಡದ ಒಳ ಭಾಗ ಹಾನಿಗೊಳಗಾಗಿದೆ ಎಂದು ಅವರು ತಿಳಿಸಿದ್ದಾರೆ. ಈ ಸಂಬಂಧ ಇಬ್ಬರನ್ನು ಬಂಧಿಸಲಾಗಿದ್ದು, ಆರೋಪಿಗಳನ್ನು ವಿಜಯ್ ರಾಮ ಗವ್ಹಾನೆ (22) ಹಾಗೂ ಶ್ರೀರಾಮ್ ಅಶೋಕ್ ಸಗ್ಡೆ (24) ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆಯ ಬೆನ್ನಿಗೇ ಗ್ರಾಮದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಹೀಗಾಗಿ, ಕಾನೂನು ಮತ್ತು ಸುವ್ಯವಸ್ಥೆಗೆ ಸಂಬಂಧಿಸಿದ ಯಾವುದೇ ಸಮಸ್ಯೆಗಳು ಉದ್ಭವಿಸದಂತೆ ತಡೆಯಲು ಗ್ರಾಮದಲ್ಲಿ ಭಾರಿ ಭದ್ರತೆಯನ್ನು ನಿಯೋಜಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹಿಂಭಾಗದಿಂದ ಮಸೀದಿಯನ್ನು ಪ್ರವೇಶಿಸಿರುವ ವ್ಯಕ್ತಿಯೊಬ್ಬ, ಅಲ್ಲಿ ಕೆಲವು ಜಿಲೆಟಿನ್ ಕಡ್ಡಿಗಳನ್ನು ಇಟ್ಟಿದ್ದು, ನಂತರ ಅವು ಸ್ಫೋಟಗೊಂಡಿವೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. ಈ ಘಟನೆಯ ಕುರಿತು ಮುಂಜಾನೆ ಸುಮಾರು 4 ಗಂಟೆಯ ವೇಳೆಗೆ ತಲವಾಡ ಪೊಲೀಸ್ ಠಾಣೆಗೆ ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆಯೆ, ಬೀಡ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನವನೀತ್ ಕನ್ವತ್ ಹಾಗೂ ಇನ್ನಿತರ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದರು. ಅವರೊಂದಿಗೆ, ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳ ಹಾಗೂ ವಿಧಿ ವಿಜ್ಞಾನ ತಂಡಗಳೂ ಸ್ಥಳಕ್ಕೆ ಧಾವಿಸಿದವು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮಸೀದಿಯ ಒಳಗೆ ಸಂಭವಿಸಿದ ಸ್ಫೋಟದ ಸಂಬಂಧ ಬೀಡ್ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ನವನೀತ್ ಕನ್ವತ್ ಹೇಳಿದ್ದಾರೆ. ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಅವರ ವಿರುದ್ಧ ಕಾನೂನಿನ ಪ್ರಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ. ಅಲ್ಲದೆ, ಯಾವುದೇ ವದಂತಿಗಳನ್ನು ಹರಡಬಾರದು ಹಾಗೂ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಪೊಲೀಸರೊಂದಿಗೆ ಸಹಕರಿಸಬೇಕು ಎಂದೂ ಅವರು ಜನರಿಗೆ ಮನವಿ ಮಾಡಿದ್ದಾರೆ. Appreciation to @BEEDPOLICE , @navneet_kanwat and team for taking quick and strict action. The criminals blew up walls of Masjid using Gelatine sticks at around 2:30 AM, The police reached the spot at around 3 AM. Arrested both the accused by 4 AM. https://t.co/MAjgD7fhdP pic.twitter.com/3c80Y84PHf — Mohammed Zubair (@zoo_bear) March 30, 2025
DC Vs SRH - ಕಮಿನ್ಸ್ ಪಡೆಗೆ ಶಾಕ್ ನೀಡಿದ ಸ್ಟಾರ್ಕ್: ದಿಲ್ಲಿ ಕ್ಯಾಪಿಟಲ್ಸ್ ವಿರುದ್ಧವೂ ಮುಳುಗಿದ ಸನ್ ರೈರರ್ಸ್
IPL 2025-ಸನ್ ರೈಸರ್ಸ್ ಬ್ಯಾಟಿಂಗ್ ಪಡೆಯನ್ನು ಲಖನೌ ಸೂಪರ್ ಜೈಂಟ್ಸ್ ತಂಡದ ದಿಲ್ಲಿ ಕ್ಯಾಪಿಟಲ್ಸ್ ಸಹ ಮಣ್ಣು ಮುಕ್ಕಿಸಿದೆ. ಮಿಚೆಲ್ ಸ್ಟಾರ್ಕ್ ನೇತೃತ್ವದ ಬೌಲಿಂಗ್ ಪಡೆ ತನ್ನ ನೇರ ಮತ್ತು ನಿಖರವಾದ ಬೌಲಿಂಗ್ ನಿಂದ ಸಾಧಾರಣ ಮೊತ್ತಕ್ಕೆ ಆಲೌಟ್ ಮಾಡಿತು. ಬ್ಯಾಟಿಂಗ್ ಗೆ ಅನುಕೂಲಕರವಾದ ಪಿಚ್ ನಲ್ಲಿ ಹೈದರಾಬಾದ್ ನ ಅಗ್ರಕ್ರಮಾಂಕದ ಎಲ್ಲ ಬ್ಯಾಟರ್ ಗಳು ವಿಫಲರಾದರು. ಅನಿಕೇತ್ ವರ್ಮಾ ಹೊರತುಪಡಿಸಿದರೆ ಬೇರಾರೂ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು. 164 ರನ್ ಗಳ ಸುಲಭ ಗುರಿಯನ್ನು ದಿಲ್ಲಿ ಪಡೆ ಇನ್ನೂ 4 ಓವರ್ ಗಳು ಬಾಕಿ ಇರುವಂತೆಯೇ ಜಯಭೇರಿ ಬಾರಿಸಿತು.
Gruhalakshmi: ಗೃಹಲಕ್ಷ್ಮಿ ಫಲಾನುಭವಿಗಳಿಗೆ ಯುಗಾದಿ ಗಿಫ್ಟ್: ಎಷ್ಟು ತಿಂಗಳ ಹಣ ಜಮೆ?
ಯುಗಾದಿ ಹಾಗೂ ರಂಜಾನ್ ಹಬ್ಬದ ಹೊತ್ತಲ್ಲೇ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಭರ್ಜರಿ ಸಿಹಿಸುದ್ದಿ ಹೊರಬಿದ್ದಿದೆ. ಹಲವು ತಿಂಗಳಿನಿಂದ ಗೃಹಲಕ್ಷ್ಮಿ ಹಣಕ್ಕಾಗಿ ಕಾಯುತ್ತಿದ್ದ ಮನೆಯ ಯಜಮಾನಿಯರಿಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಕೊನೆಗೂ ನೆಮ್ಮದಿಯ ವಿಚಾರ ತಿಳಿಸಿದ್ದಾರೆ. ಇಂದು ಯುಗಾದಿ ಹಬ್ಬದ ದಿನವೇ ಅವರು ಗೃಹಲಕ್ಷ್ಮಿ ಯೋಜನೆಯಡಿ ಬಾಕಿ ಹಣ ಬಿಡುಗಡೆ ಸಂಬಂಧ ಮಹತ್ವದ ಮಾಹಿತಿ ನೀಡಿದ್ದಾರೆ. ಹಣ
ಮ್ಯಾನ್ಮಾರ್ ಭೂಕಂಪ: ಅವಶೇಷಗಳಡಿಯಲ್ಲಿ ಮತ್ತಷ್ಟು ಮೃತದೇಹಗಳು ಪತ್ತೆ; ಮೃತರ ಸಂಖ್ಯೆ 1664ಕ್ಕೆ ಏರಿಕೆ
ಬ್ಯಾಂಕಾಕ್: ಶುಕ್ರವಾರ ಕೇಂದ್ರ ಮ್ಯಾನ್ಮಾರ್ ನಲ್ಲಿ ಸಂಭವಿಸಿದ 7.7 ತೀವ್ರತೆಯ ಭೂಕಂಪದಿಂದಾಗಿ ಕುಸಿದು ಬಿದ್ದಿರುವ ಅವಶೇಷಗಳಡಿ ಸಿಲುಕಿಕೊಂಡಿರುವ ಮೃತದೇಹಗಳನ್ನು ಇನ್ನೂ ಹೊರ ತೆಗೆಯಲಾಗುತ್ತಿದ್ದು, ಇಲ್ಲಿಯವರೆಗೆ ಒಟ್ಟು 1664 ಮಂದಿ ಮೃತಪಟ್ಟಿದ್ದಾರೆ ಎಂದು ಶನಿವಾರ ಮ್ಯಾನ್ಮಾರ್ ನ ಸೇನಾ ಆಡಳಿತ ಸರಕಾರಿ ದೂರದರ್ಶನದ ಪ್ರಕಟಣೆಯಲ್ಲಿ ದೃಢಪಡಿಸಿದೆ. ಮ್ಯಾನ್ಮಾರ್ ದೇಶದ ಎರಡನೆ ಅತಿ ದೊಡ್ಡ ನಗರವಾದ ಕೇಂದ್ರ ಮ್ಯಾನ್ಮಾರ್ ನ ಮ್ಯಾಂಡಲೆಯಲ್ಲಿ ಶುಕ್ರವಾರ ಸಂಭವಿಸಿದ ಭಾರಿ ಭೂಕಂಪದಲ್ಲಿ ಒಟ್ಟು 1,002 ಮಂದಿ ಮೃತಪಟ್ಟಿದ್ದಾರೆ ಎಂದು ಮೊದಲಿಗೆ ಪ್ರಕಟಿಸಲಾಗಿತ್ತು. ಆದರೆ, ಕೆಲವೇ ಗಂಟೆಗಳಲ್ಲಿ ಮೃತರ ಸಂಖ್ಯೆಯಲ್ಲಿ ತೀವ್ರ ಏರಿಕೆಯಾಗಿದ್ದು, ವ್ಯಾಪಕ ವಿಸ್ತಾರ ಹೊಂದಿರುವ ಈ ಪ್ರಾಂತ್ಯದಲ್ಲಿ ಸಂಭವಿಸಿರುವ ಸಾವು-ನೋವುಗಳನ್ನು ಅಂದಾಜಿಸುವುದು ಕ್ಲಿಷ್ಟಕರವಾಗಿ ಪರಿಣಮಿಸಿದೆ. ಹೀಗಾಗಿ, ಮೃತರ ಸಂಖ್ಯೆಯಲ್ಲಿ ಮತ್ತಷ್ಟು ಏರಿಕೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಶನಿವಾರದ ವೇಳೆಗೆ ಭೂಕಂಪದಲ್ಲಿ ಗಾಯಗೊಂಡವರ ಪ್ರಮಾಣ 3,408ಕ್ಕೆ ಏರಿಕೆಯಾಗಿದ್ದರೆ, ನಾಪತ್ತೆಯಾದವರ ಸಂಖ್ಯೆ 139ಕ್ಕೆ ಏರಿಕೆಯಾಗಿದೆ. ಭೂಕಂಪ ಪೀಡಿತ ಪ್ರಮುಖ ನಗರಗಳಲ್ಲಿ ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದ್ದು, ವಿಶೇಷವಾಗಿ ದೇಶದ ಎರಡನೆ ದೊಡ್ಡ ನಗರವಾದ ಮ್ಯಾಂಡಲೆ ಹಾಗೂ ರಾಜಧಾನಿ ನೇಪ್ಯಿಟಾವ್ ನಲ್ಲಿ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ. ವಿವಿಧ ದೇಶಗಳಿಂದ ರಕ್ಷಣಾ ತಂಡಗಳು ಹಾಗೂ ಸಾಧನಗಳನ್ನು ಮ್ಯಾನ್ಮಾರ್ ಗೆ ರವಾನಿಸಲಾಗಿದ್ದರೂ, ಈ ನಗರಗಳಲ್ಲಿನ ವಿಮಾನ ನಿಲ್ದಾಣಗಳು ಭೂಕಂಪದಿಂದ ಹಾನಿಗೀಡಾಗಿರುವುದರಿಂದ, ಈ ವಿಮಾನ ನಿಲ್ದಾಣಗಳಲ್ಲಿ ವಿಮಾನಗಳನ್ನು ಲ್ಯಾಂಡಿಂಗ್ ಅಸಾಧ್ಯವಾಗಿ ಪರಿಣಮಿಸಿದೆ. ಮ್ಯಾಂಡಲೆ ನಗರದ ಬಹುತೇಕ ಭಾಗಗಳಲ್ಲಿ ಈಗಲೂ ವಿದ್ಯುತ್, ದೂರವಾಣಿ ಹಾಗೂ ಅಂತರ್ಜಾಲ ಸೇವೆಗಳು ಕಡಿತಗೊಂಡಿವೆ. ಸರಕಾರಿ ನಾಗರಿಕ ಸೇವಾ ಸಿಬ್ಬಂದಿಗಳಿಗಾಗಿ ನಿರ್ಮಿಸಲಾಗಿದ್ದ ವಸತಿ ಸಮಚ್ಚಯದ ಹಲವು ಘಟಕಗಳು ಸೇರಿದಂತೆ ಹಲವಾರು ಕಟ್ಟಡಗಳು ಈ ಭೂಕಂಪದಲ್ಲಿ ನೆಲಸಮಗೊಂಡಿವೆ. ಆದರೆ, ಶನಿವಾರ ಈ ಭಾಗವನ್ನು ಅಧಿಕಾರಿಗಳು ಮುಚ್ಚಿದ್ದಾರೆ.
Vladimir Putin: ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹತ್ಯೆಗೆ ಸ್ಕೆಚ್?
ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಜೀವಕ್ಕೆ ಪದೇ ಪದೇ ಆಪತ್ತು ಎದುರಾಗುತ್ತಿದೆ. ಈ ಹಿಂದೆ ಕೂಡ ಹಲವು ಬಾರಿ ವ್ಲಾದಿಮಿರ್ ಪುಟಿನ್ ಅವರ ಕೊಲೆಗೆ ಸ್ಕೆಚ್ ಹಾಕಿ ವಿಫಲವಾಗಿದ್ದ ಶತ್ರು ಪಡೆ ಇದೀಗ, ಪುಟಿನ್ ಅವರ ಅಧಿಕೃತ ಸರ್ಕಾರಿ ಕಾರನ್ನೇ ಸ್ಫೋಟ ಮಾಡಿತಾ? ಈ ಅನುಮಾನ ಮೂಡಲು ಕಾರಣವಾಗಿರುವುದು ರಷ್ಯಾ ರಾಜಧಾನಿಯಲ್ಲಿ ಸಂಭವಿಸಿರುವ ಕಾರು ಸ್ಫೋಟದ ವಿಡಿಯೋ
IMD Weather Forecast: ಈ ಭಾಗಗಳಲ್ಲಿ ಗುಡುಗು, ಮಿಂಚು ಸಹಿತ ರಣಮಳೆ ಮುನ್ಸೂಚನೆ
IMD Weather Forecast: ಇದೀಗ ದೇಶದ ಬಹುತೇಕ ರಾಜ್ಯಗಳಲ್ಲಿ ರಣಭೀಕರ ಬಿಸಿಲು ಮುಂದುವರೆದಿದೆ. ಈ ನಡುವೆಯೇ ಹಲವೆಡೆ ಮಳೆಯಾಗುತ್ತಿದೆ. ಹಾಗೆಯೇ ಮುಂದಿನ ಮೂರು ದಿನಗಳ ಕಾಲ ಈ ಭಾಗಗಳಲ್ಲಿ ಗುಡುಗು ಸಿಡಿಲು ಸಹಿತ ಭಾರೀ ಮಳೆ ಸುರಿಯುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಭಾರತೀಯ ಹವಾಮಾನ ಇಲಾಖೆ ಪ್ರಕಾರ, ದೇಶದ ಬಹುತೇಕ ಪ್ರದೇಶಗಳಲ್ಲಿ
ಅನಂತ ವಿಶ್ವದ ರಚನೆ, ಭೌತಿಕ ವಿಶ್ವದಲ್ಲಿರುವ ಕೌತುಕ ವಿದ್ಯಾಮಾನಗಳು, ಬ್ರಹ್ಮಾಂಡವನ್ನು ಅರಿಯುವಲ್ಲಿ ಆಧುನಿಕ ಮಾನವನ ಪ್ರಯತ್ನಗಳು ಮತ್ತು ಈ ನಿಟ್ಟಿನಲ್ಲಿ ಆತ ಸಾಧಿಸಿರುವ ವೈಜ್ಞಾನಿಕ ಪ್ರಗತಿಯ ಬಗ್ಗೆ ನಿಮ್ಮ ನೆಚ್ಚಿನ ವಿಜಯ ಕರ್ನಾಟಕ ವೆಬ್ ವಿಶ್ವ ಕಣ್ಣೋಟ ಹೆಸರಿನ ಸಾಪ್ತಾಹಿಕ ಸಂಪಾದಕೀಯವನ್ನು ಪ್ರಕಟಿಸುತ್ತಿರುವುದು ನಿಮಗೆಲ್ಲಾ ಗೊತ್ತಿರುವ ಸಂಗತಿ. ಅದರಂತೆ ಈ ಸಾಪ್ತಾಹಿಕ ಸಂಪಾದಕೀಯದ ನಾಲ್ಕನೇ ಭಾಗದಲ್ಲಿ, ಭಾರತೀಯ ಖಗೋಳಶಾಸ್ತ್ರಜ್ಞರಿಂದ ಪತ್ತೆಹಚ್ಚಲ್ಪಟ್ಟ ಸರಸ್ವತಿ ನಕ್ಷತ್ರಪುಂಜ ಗುಂಪಿ( ಗ್ಯಾಲಕ್ಸಿ ಸೂಪರ್ ಕ್ಲಸ್ಟರ್)ನ ಬಗ್ಗೆ ನಾವು ತಿಳಿದುಕೊಳ್ಳೋಣ.
ಮಲಗಾಕ್ಕಾದ್ರೂ ಬಿಡಿ ಪ್ಲೀಸ್; ಸ್ಯಾಮ್ ಅಲ್ಟ್ಮನ್ & ಟೀಂ ನಿದ್ರೆ ಕಸಿದ ಘಿಬ್ಲಿ ಗೊಂಬೆ
ಇನ್ಸ್ಟಾಗ್ರಾಮ್, ಫೇಸ್ಬುಕ್, ಎಕ್ಸ್ ಸೋಶಿಯಲ್ ಮೀಡಿಯಾ ರೀಲ್ಸ್ಗಳು ಎಲ್ಲೇ ನೋಡಿದ್ರೂ ಘಿಬ್ಲಿ ಶೈಲಿಯ AI ಚಿತ್ರಗಳು ಪೂರಾ ಧೂಳೆಬ್ಬಿಸಿವೆ.ರೀಲ್ಸ್ಗಳಲ್ಲಿ ಟ್ರೆಂಡ್ ಹೆಚ್ಚಾದಂತೆ, ಚಾಟ್ ಜಿಪಿಟಿಯಲ್ಲಿ, ಓಪನ್ AI, GROKನಲ್ಲಿ ಜನರ ಬೇಡಿಕೆ ಸಹ ಹೆಚ್ಚಾಗುತ್ತಿದೆ. ಈ ಬಗ್ಗೆ ಸ್ಯಾಮ್ ಅಲ್ಟ್ಮನ್ ಮೌನ ಮುರಿದು, ತಮ್ಮ ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿದ್ದಾರೆ. ದಯವಿಟ್ಟು ಚಿತ್ರಗಳನ್ನು ರಚಿಸುವುದರಲ್ಲಿ ಶಾಂತರಾಗಿರಿ, ಇದು ಹುಚ್ಚುತನ, ನಮ್ಮ ತಂಡಕ್ಕೆ ನಿದ್ರೆ ಬೇಕು ಎಂದು ಹೇಳಿದ್ದಾರೆ.
IPL 2025 - ಹಾರ್ದಿಕ್ ಪಾಂಡ್ಯಗೆ ಮತ್ತೆ ದಂಡ: ಒಮ್ಮೆ ಪೆಟ್ಟುತಿಂದರೂ ಪಾಠ ಕಲಿಯದ MI ನಾಯಕನಿಗೆ ಇನ್ನೇನು ಹೇಳೋಣ!
ಬದುಕಿನಲ್ಲಿ ಇನ್ನೊಬ್ಬರ ತಪ್ಪಿಂದ ಪಾಠ ಕಲಿಯಬೇಕಂತೆ. ಆದರೆ ತನ್ನ ತಪ್ಪಿನಿಂದಲೇ ಪಾಠ ಕಲಿತರೂ ತಿದ್ದಿಕೊಳ್ಳದೇ ಹೋದರೆ ಏನನ್ನಬೇಕು? ಹೌದು ಇದು ಐಪಿಎಲ್ ನ ಅತ್ಯಂತ ಅನಿಶ್ಚಿತ ನಾಯಕ ಹಾರ್ದಿಕ್ ಪಾಂಡ್ಯ ಅವರ ಕತೆ. ಕಳೆದ ಐಪಿಎಲ್ ಸೀಸನ್ ನಲ್ಲಿ ಅವರು ನಿಧಾನಗತಿಯ ಓವರ್ ಗಾಗಿ ದಂಡ ತೆತ್ತಿದ್ದರು. ಬಳಿಕ ನಿಯಮದಂತೆ ಈ ಬಾರಿಯ ಸೀಸನ್ ನ ಪ್ರಥಮ ಪಂದ್ಯದಿಂದ ನಿಷೇಧಕ್ಕೊಳಗಾಗಿದ್ದರು. ತಂಡಕ್ಕೆ ಮರಳಿದ ಮೊದಲ ಪಂದ್ಯದಲ್ಲೇ ಮತ್ತೆ ಅದೇ ಹಳೇ ತಪ್ಪನ್ನು ಮಾಡಿದ್ದಾರೆ!
Myanmar Earthquake: ಅನ್ನ, ನೀರು, ಸೂರು ಇಲ್ಲದೆ ನರಳುತ್ತಿರುವ ಮ್ಯಾನ್ಮಾರ್ ಪ್ರಜೆಗಳು
ಒಂದೇ ಒಂದು ಭೂಕಂಪನ ಏನೆಲ್ಲಾ ಅನಾಹುತ ಮಾಡಬಹುದು? ಪ್ರಕೃತಿಯ ಮುಂದೆ ಈ ಮನುಷ್ಯರು ಅದೆಷ್ಟು ಚಿಕ್ಕವರು? ಅನ್ನೋದು ಮತ್ತೊಮ್ಮೆ ಇಡೀ ಜಗತ್ತಿಗೆ ಗೊತ್ತಾಗಿದೆ. ಇದು ಮ್ಯಾನ್ಮಾರ್ ದೇಶಕ್ಕೆ ಮಾತ್ರವಲ್ಲ ಇಡೀ ಜಗತ್ತಿಗೆ ಬಂದು ಎರಗಿರುವ ಭೀಕರ ಪ್ರಾಕೃತಿಕ ವಿಕೋಪ ಎನ್ನಬಹುದು. ನಾವು ಹೇಳುತ್ತಿರುವುದು ಇತ್ತೀಚೆಗೆ ಮ್ಯಾನ್ಮಾರ್ ದೇಶದಲ್ಲಿ ಸಂಭವಿಸಿದ್ದ ಭೀಕರ 7.7 ತೀವ್ರತೆಯ ಭೂಕಂಪನದ ಬಗ್ಗೆ. ಪ್ರಕೃತಿ
Gaza War: ಗಾಜಾದಲ್ಲಿ ಮತ್ತೊಂದು ಸುತ್ತಿನ ಕದನ ವಿರಾಮಕ್ಕೆ ಮುಂದಾದ ಹಮಾಸ್?
ಹಮಾಸ್ &ಇಸ್ರೇಲ್ ನಡುವೆ ಶಾಂತಿ ಮಾತುಕತೆ ಸರಿಹೊಂದುತ್ತಿಲ್ಲ, ಇಬ್ಬರ ನಡುವೆ ಭಾರಿ ಘೋರ ಹಿಂಸಾಚಾರ ಶುರುವಾಗಿದೆ. ಇಬ್ಬರ ಈ ಜಗಳದ ಪರಿಣಾಮ ಗಾಜಾ ಪಟ್ಟಿ ಇದೀಗ ನರಕದ ರೂಪ ಪಡೆದಿದೆ. ಇದೇ ಸಮಯದಲ್ಲಿ ಜನರು ಕೂಡ ಊರು ಬಿಟ್ಟು ಓಡುತ್ತಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಮಾಸ್ &ಇಸ್ರೇಲ್ ವಿರುದ್ಧ ಆಕ್ರೋಶ ಮೊಳಗಿದೆ. ಇಬ್ಬರ ಜಗಳದಲ್ಲಿ ಸಾಮಾನ್ಯ
ಸ್ವತಂತ್ರ ಭಾರತದಲ್ಲೂ ದಲಿತರ ಬದುಕು ಚಿಂತಾಜನಕ: ಡಾ. ಕೃಷ್ಣಪ್ಪ ಕೊಂಚಾಡಿ
ಮಂಗಳೂರು: ದೇಶಕ್ಕೆ ಸ್ವಾತಂತ್ರ್ಯ ಲಭಿಸಿ 77 ವರ್ಷಗಳು ಕಳೆದರೂ ದಲಿತರ ಬದುಕು ಉತ್ತಮಗೊಂಡಿಲ್ಲ. ಜಾತಿ ವ್ಯವಸ್ಥೆ ಅಸ್ಪ್ರಶ್ಯತೆಯಿಂದ ನಲುಗಿಹೋಗಿರುವ ದಲಿತ ಸಮುದಾಯವನ್ನು ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಸಂಘಟಿತ ಹೋರಾಟದ ಅವಶ್ಯಕತೆ ಇದೆ. ಆಳುವ ವರ್ಗಗಳ ಜನವಿರೋಧಿ ನೀತಿಗಳಿಂದ ದೇಶದ ಆರ್ಥಿಕತೆ ವಿನಾಶದ ಅಂಚಿಗೆ ಹೋಗುತ್ತಿದ್ದು ಅದಕ್ಕೆ ಅತ್ಯಂತ ಶೋಷಿತ ವಿಭಾಗವಾದ ದಲಿತರೇ ಮೊದಲ ಬಲಿಪಶುಗಳಾಗಿದ್ದಾರೆ. ಒಟ್ಟಿನಲ್ಲಿ ಸ್ವತಂತ್ರ ಭಾರತದಲ್ಲಿ ದಲಿತರ ಪರಿಸ್ಥಿತಿ ತೀರಾ ಚಿಂತಾಜನಕವಾಗಿದೆ ಎಂದು ದ.ಕ.ಜಿಲ್ಲೆಯ ಪ್ರಗತಿಪರ ಚಿಂತಕರೂ, ಸಾಹಿತಿಗಳಾದ ಡಾ.ಕೃಷ್ಣಪ್ಪ ಕೊಂಚಾಡಿಯವರು ಅಭಿಪ್ರಾಯಪಟ್ಟರು. ದಲಿತ ಸಮುದಾಯದ ಸರ್ವಾಂಗೀಣ ಅಭಿವೃದ್ಧಿಗಾಗಿ, ಭೂಮಿ ಮನೆ ನಿವೇಶನ ಆರೋಗ್ಯ ಉದ್ಯೋಗದ ಹಕ್ಕಿಗಾಗಿ,ದಲಿತ ಮೀಸಲು ನಿಧಿಯ ಸಮರ್ಪಕ ಬಳಕೆಗಾಗಿ ಇಂದು ತೊಕ್ಕೊಟ್ಟುವಿನಲ್ಲಿ ನಡೆದ ಉಳ್ಳಾಲ ತಾಲೂಕು ಮಟ್ಟದ ದಲಿತ ಚೈತನ್ಯ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಜಿಲ್ಲೆಯ ರೈತ ಚಳುವಳಿಯ ನಾಯಕರಾದ ಕೃಷ್ಣಪ್ಪ ಸಾಲ್ಯಾನ್ ರವರು ಮಾತನಾಡುತ್ತಾ, ಜಾತಿ ಧರ್ಮದ ಹೆಸರಿನಲ್ಲಿ ಕೋಮುದ್ವೇಷ ಹಬ್ಬಿಸುವ ಮತಾಂಧರು ಜಾತಿ ತಾರತಮ್ಯದ ಬಗ್ಗೆ ಚಕಾರ ಶಬ್ದವೆತ್ತುತ್ತಿಲ್ಲ. ದಲಿತರನ್ನು ಮನುಷ್ಯರನ್ನಾಗಿ ನೋಡದ ಕೋಮುವಾದಿ ಶಕ್ತಿಗಳು ದಲಿತರನ್ನು ತಮ್ಮ ರಾಜಕೀಯ ಲಾಭಕ್ಕೆ ಮಾತ್ರ ದುರುಪಯೋಗಪಡಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಮಾರೋಪ ಭಾಷಣ ಮಾಡಿದ ಜಿಲ್ಲೆಯ ಕಾರ್ಮಿಕ ಮುಖಂಡರಾದ ಸುನಿಲ್ ಕುಮಾರ್ ಬಜಾಲ್ ರವರು ಮಾತನಾಡಿ, ಗ್ರಾಮ ಪಂಚಾಯತ್ ನಿಂದ ಹಿಡಿದು ಎಲ್ಲಾ ಸ್ಥಳೀಯ ಆಡಳಿತಗಳು ಸೇರಿದಂತೆ ರಾಜ್ಯ ಕೇಂದ್ರ ಸರ್ಕಾರಗಳ ದಲಿತ ಮೀಸಲು ನಿಧಿಗಳು ದಲಿತ ಸಮುದಾಯದ ಆರ್ಥಿಕ ಸಾಮಾಜಿಕ ಶೈಕ್ಷಣಿಕ ಅಭ್ಯುದಯಕ್ಕಾಗಿ ವಿನಿಯೋಗ ಆಗುವ ಬದಲು ಹಾಡುಹಗಲಲ್ಲೇ ದುರುಪಯೋಗವಾಗುತ್ತಿದೆ. ಮಾತ್ರವಲ್ಲದೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ದಲಿತರಿಗೆ ಮೀಸಲಿಡಬೇಕಾದ ಅನುದಾನವನ್ನು ವರ್ಷದಿಂದ ವರ್ಷಕ್ಕೆ ಕಡಿತ ಮಾಡುವ ಮೂಲಕ ದಲಿತ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ ಎಂದು ಹೇಳಿದರು. ಸಮಾವೇಶವನ್ನು ಉದ್ದೇಶಿಸಿ ದಲಿತ ಹಕ್ಕುಗಳ ಸಮಿತಿಯ ಜಿಲ್ಲಾಧ್ಯಕ್ಷರಾದ ಕೃಷ್ಣಪ್ಪ ಕೋಣಾಜೆ, ಪ್ರಧಾನ ಕಾರ್ಯದರ್ಶಿ ಕೃಷ್ಣ ತಣ್ಣೀರುಬಾವಿಯವರು ಮಾತನಾಡಿದರು. ಸಮಾವೇಶವು ನೂತನ ತಾಲೂಕು ಸಮಿತಿಯನ್ನು ರಚಿಸಿತು. ಸಭೆಯ ಅಧ್ಯಕ್ಷತೆಯನ್ನು ದಲಿತ ಹಕ್ಕುಗಳ ಸಮಿತಿಯ ನಾಯಕರಾದ ವಿಶ್ವನಾಥ ಮಂಜನಾಡಿಯವರು ವಹಿಸಿದ್ದರು. ವೇದಿಕೆಯಲ್ಲಿ ದಲಿತ ಹಕ್ಕುಗಳ ಸಮಿತಿಯ ಜಿಲ್ಲಾ ನಾಯಕರಾದ ಚಂದ್ರಶೇಖರ ಕಿನ್ಯಾ, ಕೋಟೆಕಾರ್ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ನ ನಿರ್ದೇಶಕರಾದ ಕೃಷ್ಣಪ್ಪರವರು ಉಪಸ್ಥಿತರಿದ್ದರು.
ಕಲಬುರಗಿ | ಚಲಿಸುತ್ತಿದ್ದ ಬಸ್ನಲ್ಲಿ ಕಂಡಕ್ಟರ್ ಗೆ ಹೃದಯಾಘಾತ : ಮೃತ್ಯು
ಕಲಬುರಗಿ : ಚಲಿಸುತ್ತಿದ್ದ ಸಾರಿಗೆ ಬಸ್ ನಲ್ಲಿ ಹೃದಯಾಘಾತ ಸಂಭವಿಸಿ ಕಂಡಕ್ಟರ್ ಓರ್ವ ಮೃತಪಟ್ಟಿರುವ ಘಟನೆ ಇಲ್ಲಿನ ಫರಹತಾಬಾದ್ ಬಳಿ ಶನಿವಾರ ನಡೆದಿದೆ. ಯಡ್ರಾಮಿ ತಾಲೂಕಿನ ಜವಳಗಾ ಗ್ರಾಮದ ಕಾಶಿನಾಥ್ ಮಲ್ಲಪ್ಪ (44) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ಕಲಬುರಗಿಯಿಂದ ಜೇವರ್ಗಿಗೆ ಬಸ್ ಹೊರಟಿದ್ದು, ಫರಹತಾಬಾದ್ ಬಳಿ ಏಕಾಏಕಿಯಾಗಿ ಹೃದಯಾಘಾತದಿಂದ ಕಂಡಕ್ಟರ್ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಚಾಲಕ ಹಾಗೂ ಪ್ರಯಾಣಿಕರು ಬಸ್ನಲ್ಲೇ ಕಲಬುರಗಿಯ ಜಯದೇವ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ, ಅಷ್ಟರಲ್ಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.
ರಾಯಚೂರು | ಬೀದಿ ನಾಯಿಗಳ ದಾಳಿಗೆ ಐದು ವರ್ಷದ ಬಾಲಕ ಮೃತ್ಯು
ರಾಯಚೂರು : ಬೀದಿ ನಾಯಿಗಳ ದಾಳಿಯಿಂದ ಐದು ವರ್ಷದ ಬಾಲಕನೊಬ್ಬ ಮೃತಪಟ್ಟಿರುವ ಘಟನೆ ಲಿಂಗಸೂಗೂರು ತಾಲ್ಲೂಕು ಕಸಬಾ ಲಿಂಗಸೂಗೂರು ಗ್ರಾಮದಲ್ಲಿ ನಡೆದಿದೆ. ಸಿದ್ದು ಬೀರಪ್ಪ ಮೃತ ಬಾಲಕ ಎಂದು ಗುರುತಿಸಲಾಗಿದೆ. ತಾಯಿಯು ಮನೆಯಿಂದ ಹೊರಗೆ ಹೋಗಿದ್ದ ವೇಳೆ ಬೀದಿ ನಾಯಿಗಳ ಗುಂಪೊಂದು ಬಾಲಕನ ಮೇಲೆ ದಾಳಿ ಮಾಡಿ ಎಳೆದಾಡಿ ಗಂಭೀರ ಗಾಯಗೊಳಿಸಿವೆ ಎನ್ನಲಾಗಿದೆ. ಬಳಿಕ ಬಾಲಕನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದಾದ ಬಳಿಕ ಹೆಚ್ಚಿನ ಚಿಕಿತ್ಸೆಗೆ ಬಾಗಲಕೋಟೆಗೆ ರವಾನಿಸಲಾಗಿತ್ತು ಚಿಕಿತ್ಸೆ ಫಲಕಾರಿಯಾಗಿ ಬಾಲಕ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.
ಕಲ್ಯಾಣ ಕರ್ನಾಟಕಕ್ಕೆ ಗುಡ್ನ್ಯೂಸ್: ಭದ್ರಾ ಡ್ಯಾಂನಿಂದ ತುಂಗಭದ್ರಾ ಡ್ಯಾಂಗೆ 2 TMC ನೀರು ಹರಿಸಲು ಸಿಎಂ ಸೂಚನೆ
Water Release From Bhadra Dam To Tungabhadra Dam : ಯುಗಾದಿ ಹಬ್ಬದ ದಿನ ಕಲ್ಯಾಣ ಕರ್ನಾಟಕ ಜನಕ್ಕೆ ಸಿಎಂ ಸಿದ್ದರಾಮಯ್ಯ ಗುಡ್ನ್ಯೂಸ್ ನೀಡಿದ್ದಾರೆ. ಭದ್ರಾ ಡ್ಯಾಂನಿಂದ ತುಂಗಭದ್ರಾ ಡ್ಯಾಂಗೆ 2 TMC ನೀರು ಹರಿಸಲಾಗುತ್ತದೆ. ಈ ಮೂಲಕ ಕೊಪ್ಪಳ, ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳ ಬೆಳೆ ಹಾಗೂ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಸಿಗಲಿದೆ. ಈ ಬಗ್ಗೆ ವಿವರ ಇಲ್ಲಿದೆ.
ರೈತರಿಗೆ ಯುಗಾದಿ ಕೊಡುಗೆ | ತುಂಗಾಭದ್ರಾ ಕಾಲುವೆಗೆ 2 ಟಿಎಂಸಿ ನೀರು: ಸಿಎಂ ಸಿದ್ದರಾಮಯ್ಯ
ಬೆಂಗಳೂರು: ಕಲ್ಯಾಣ ಕರ್ನಾಟಕ ಭಾಗದ ರೈತಾಪಿ ಜನರಿಗೆ ಯುಗಾದಿ ಕೊಡುಗೆಯಾಗಿ ಭದ್ರಾ ಜಲಾಶಯದಿಂದ ತುಂಗಾಭದ್ರಾ ಕಾಲುವೆಗೆ ಎರಡು ಟಿಎಂಸಿ ನೀರು ಹರಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ. ಎಪ್ರಿಲ್ 1ರಿಂದ 5ರ ಅವಧಿಯಲ್ಲಿ ಕಾಲುವೆಗೆ ನೀರು ಹರಿಸಲು ನಿರ್ಧರಿಸಲಾಗಿದ್ದು, ಇದು ಕೊಪ್ಪಳ, ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಬೆಳೆದು ನಿಂತಿರುವ ಬೆಳೆಗಳಿಗೆ ಮತ್ತು ಇಲ್ಲಿನ ಜನರಿಗೆ ಕುಡಿಯುವ ನೀರಿನ ಲಭ್ಯತೆಯನ್ನು ಖಾತ್ರಿಪಡಿಸಲಿದೆ ಎಂದು ಹೇಳಿದ್ದಾರೆ. ಮಾರ್ಚ್ 30ರಂದು ಭದ್ರಾ ಜಲಾಶಯದಲ್ಲಿ 28 ಟಿಎಂಸಿ ನೀರು ಸಂಗ್ರಹ ಲಭ್ಯವಿದೆ. ಇದರಲ್ಲಿ ಮೇ 8ರವರೆಗೆ ನೀರಾವರಿಗೆ 11ಟಿಎಂಸಿ ಮತ್ತು ಕುಡಿಯುವ ನೀರಿಗಾಗಿ 14ಟಿಎಂಸಿ ಅಗತ್ಯವಿದ್ದು, 3ಟಿಎಂಸಿ ನೀರು ಜಲಾಶಯದಲ್ಲಿ ಉಳಿಸಿಕೊಳ್ಳಬೇಕಾಗಿದೆ. ಎಪ್ರಿಲ್ 6ರಿಂದ ಕಾಲುವೆಗಳನ್ನು ಕೇವಲ ಕುಡಿಯುವ ನೀರಿನ ಪೂರೈಕೆಗೆ ಮಾತ್ರ ಬಳಸಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ರೈತಾಪಿ ಜನರ ಬೆಳೆಗಳಿಗೆ ಮತ್ತು ಜನರಿಗೆ ಕುಡಿಯುವ ನೀರು ಪೂರೈಸಲು ಸರ್ಕಾರ ಎಲ್ಲಾ ಹಂತದಲ್ಲೂ ಬದ್ಧವಾಗಿದೆ ಎಂದು ಅವರು ಹೇಳಿದ್ದಾರೆ.
ಸರ್ಕಾರದ ಕಿವುಡುತನ ತೆಗೆಯುವ ಕೆಲಸ ಡಾಕ್ಟರ್ ಆಗಿ ನಾವು ಮಾಡ್ತೇವೆ: ಶೋಭಾ ಕರಂದ್ಲಾಜೆ
ರಾಜ್ಯ ಸರ್ಕಾರ ಸಂಪೂರ್ಣವಾಗಿ ಕಿವುಡಾಗಿದೆ. ಜನಸಾಮಾನ್ಯರ ಸಮಸ್ಯೆಗಳು ಸರ್ಕಾರಕ್ಕೆ ಕೇಳುತ್ತಿಲ್ಲ. ಯಾವುದಕ್ಕೂ ಸ್ಪಂದನೆಯೂ ಇಲ್ಲ. ಸರ್ಕಾರದ ಕಿವುಡುತನ ತೆಗೆದು, ಚುರುಕು ಮಾಡುವ ಕೆಲಸ ಡಾಕ್ಟರ್ ಆಗಿ ನಾವು ಮಾಡುತ್ತೇವೆ. ಜನರನ್ನು ಲೂಟಿ ಮಾಡುವ ಸರ್ಕಾರದ ವಿರುದ್ಧ ನಮ್ಮ ಹೋರಾಟ ನಿರಂತರ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
Fact Check : ರಶ್ಮಿಕಾ ಮಂದಣ್ಣ - ಹಾರ್ದಿಕ್ ಪಾಂಡ್ಯ ದುಬೈನಲ್ಲಿ ಜತೆಗಿರುವ ಫೋಟೋ ವೈರಲ್; ಸತ್ಯವೇನು?
ಹಾರ್ದಿಕ್ ಪಾಂಡ್ಯ ಮತ್ತು ರಶ್ಮಿಕಾ ಮಂದಣ್ಣ ಅವರ ಬಿಳಿ ಬಟ್ಟೆ ಧರಿಸಿಕೊಂಡು ಜತೆಗೆ ನಿಂತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ಫೋಟೋ ಎಐ ತಂತ್ರಜ್ಞಾನ ಬಳಸಿ ರಚಿಸಲಾಗಿದೆ. ಸಜಗ್ ತಂಡ ಈ ಫೋಟೋವನ್ನು ಪರಿಶೀಲಿಸಿದಾಗ, ಇದು ನಿಜವಾದದರಲ್ಲ ಎಂದು ತಿಳಿದುಬಂದಿದೆ.
ಬಂದೂಕು ಬಿಸಾಕಿದರೆ ಗಾಜಾ ಬಿಟ್ಟು ಹೊರಹೋಗಲು ಅವಕಾಶ; ಇಸ್ರೇಲ್ ಆಫರ್ ಬಗ್ಗೆ ಹಮಾಸ್ ನಾಯಕರು ಏನಂತಾರೆ?
ಇಸ್ರೇಲ್-ಹಮಾಸ್ ಸಂಘರ್ಷ ದಿನದಿಂದ ದಿನಕ್ಕೆ ತಿರುವು ಪಡೆಯುತ್ತಿದ್ದು, ಹಮಾಸ್ ನಾಯಕರು ಶಸ್ತ್ರಗಳನ್ನು ತ್ಯಜಿಸುವುದಾದರೆ ಅವರಿಗೆ ಗಾಜಾದಿಂದ ಹೊರಹೋಗುವ ಅವಕಾಶ ನೀಡಲಾಗುವುದು.. ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಘೋಷಿಸಿದ್ದಾರೆ. ಹಮಾಸ್ ಗಾಜಾಪಟ್ಟಿ ಮೇಲಿನ ತನ್ನ ನಿಯಂತ್ರಣವನ್ನು ಕಳೆದುಕೊಳ್ಳುತ್ತಿದ್ದು, ಪರಿಸ್ಥಿತಿಯನ್ನು ಗ್ರಹಿಸಿರುವ ನೆತನ್ಯಾಹು, ಹಮಾಸ್ ಉಗ್ರಗ್ರಾಮಿಗಳು ಗಾಜಾವನ್ನು ತೊರೆಯುವಂತೆ ಸೂಚ್ಯವಾಗಿ ಎಚ್ಚರಿಕೆ ನೀಡಿದ್ದಾರೆ. ಹಮಾಸ್ ಹೊಸ ಕದನ ವಿರಾಮ ಒಪ್ಪಂದವನ್ನು ಪ್ರಸ್ತಾಪಿಸಿದ್ದು, ಇದಕ್ಕೆ ಪ್ರತಿಯಾಗಿ ಇಸ್ರೇಲ್ ಕೂಡ ತನ್ನ ಷರತ್ತುಗಳನ್ನು ಮುಂದಿಟ್ಟಿದೆ.
ಜನಾಭಿಪ್ರಾಯ ಬಂದರೆ ನೂರಕ್ಕೆ ನೂರು ಹೊಸ ಪಕ್ಷ : ಯತ್ನಾಳ್
ವಿಜಯಪುರ : ʼಹೊಸ ರಾಜಕೀಯ ಪಕ್ಷ ಕಟ್ಟಲಿ ಎಂದು ಜನಾಭಿಪ್ರಾಯ ಬಂದರೆ ನೂರಕ್ಕೆ ನೂರು ರಾಜ್ಯದಲ್ಲಿ ನಾವು ಹೊಸ ರಾಜಕೀಯ ಪಕ್ಷವನ್ನು ಮುಂದಿನ ವಿಜಯದಶಮಿ ದಿನ ಉದ್ಘಾಟನೆ ಮಾಡುತ್ತೇವೆʼ ಎಂದು ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ರವಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಿಂದೂ ನಾಯಕರನ್ನು ಮೂಲೆಗುಂಪು ಮಾಡುವ ಕುತಂತ್ರವನ್ನು ಯಡಿಯೂರಪ್ಪ ಕುಟುಂಬ ಮಾಡುತ್ತಿದೆ. ಜನಾಭಿಪ್ರಾಯ ಆಧಾರದ ಮೇಲೆ ನಾವು ನಿರ್ಣಯ ಕೈಗೊಳ್ಳುತ್ತೇವೆ. ಜನ ಏನು ಹೇಳುತ್ತಾರೆ ಅದನ್ನು ನಾವು ಮಾಡುತ್ತೇವೆ. ನಾವು ಜನರನ್ನು ಬಿಟ್ಟು ಇರುವುದಿಲ್ಲ ಎಂದರು. ಮುಂದಿನ ಮುಖ್ಯಮಂತ್ರಿಯಾಗಿ ವಿಜಯೇಂದ್ರ ಅವರನ್ನು ಬಿಂಬಿಸುವುದಾದರೆ ರಾಜ್ಯದ ಜನ ರಾಜ್ಯದ ಅಭಿವೃದ್ಧಿಗೆ, ಸನಾತನ ಧರ್ಮ ರಕ್ಷಣೆ ಮಾಡುವ ನಿರ್ಣಯ ಕೈಗೊಳ್ಳುತ್ತಾರೆ. ವಿಜಯೇಂದ್ರ ಒಬ್ಬ ಮಹಾಭ್ರಷ್ಟ. ಇವನಿಂದಾಗಿಯೇ ಯಡಿಯೂರಪ್ಪ ಜೈಲಿಗೆ ಹೋದರು ಎಂದು ವಾಗ್ದಾಳಿ ನಡೆಸಿದರು. ರಾಜ್ಯದಲ್ಲಿ ನಾವು ಈ ವಿಚಾರವಾಗಿ ಇವತ್ತಿನಿಂದಲೇ ಜನ ಜಾಗೃತಿ ಆರಂಭಿಸುತ್ತೇವೆ. ರಾಜ್ಯದಲ್ಲಿ ಹಿಂದು ರಕ್ಷಣೆಗಾಗಿ ಪಕ್ಷ ಕಟ್ಟಬೇಕು ಎಂದು ನನಗೆ ಬಹಳ ಜನ ಹೇಳುತ್ತಿದ್ದಾರೆ. ನನ್ನ ಹೋರಾಟ ಮೋದಿ ಅವರ ವಿರುದ್ಧ ಅಲ್ಲ, ಪಕ್ಷದ ವಿರುದ್ಧ ಅಲ್ಲ. ಇವರಿಗೆ ಯಡಿಯೂರಪ್ಪ ಕುಟುಂಬವೇ ಬೇಕು ಎಂದರೆ ನಾವು ಮುಕ್ತವಾಗಿ ಮುಂದಿನ ನಿರ್ಣಯ ಮಾಡುತ್ತೇವೆ. ಯಡಿಯೂರಪ್ಪನವರಿಗೆ ಕಾಂಗ್ರೆಸ್ ಜೊತೆ ಹೊಂದಾಣಿಕೆ ಇದೆ. ಡಿ.ಕೆ. ಶಿವಕುಮಾರ್ ಜೊತೆಗೆ ವ್ಯಾಪಾರ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
Karnataka Rains: ಏಪ್ರಿಲ್ 2ರಿಂದ ಬೆಂಗಳೂರು ಸೇರಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆ ಮುನ್ಸೂಚನೆ
Karnataka Rains: ಇದೀಗ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ರಣಬಿಸಿಲು ಮುಂದುವರೆದಿದೆ. ಈ ನಡುವೆಯೂ ಹಲವೆಡೆ ಮಳೆ ಸುರಿಯುತ್ತಿದೆ. ಹಾಗೆಯೇ ಏಪ್ರಿಲ್ 2ರಿಂದ ಹಲವು ಜಿಲ್ಲೆಗಳಲ್ಲಿ ರಣಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಾಗಾದ್ರೆ ಎಲ್ಲೆಲ್ಲಿ ಮಳೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು (ಮಾರ್ಚ್ 30)
ಕದ್ದ ಟ್ರಕ್ ಜೊತೆಗೆ ತನನ್ನು ಪಾರು ಮಾಡಿಕೊಳ್ಳಲು ಕ್ಯಾಲಿಫೋರ್ನಿಯಾದಲ್ಲಿ ಹೈ ಸ್ಪೀಡ್ನಲ್ಲಿ ಬೇಕಾಬಿಟ್ಟಿ ಗಾಡಿ ಚಲಾಯಿಸಿದ ಖದೀಮನನ್ನು ಸಿನಿಮೀಯಾ ರೀತಿಯಲ್ಲಿ ಚೇಸ್ ಮಾಡಿದ ಪೊಲೀಸರು ಕೊನೆಗೂ ಆತನ ಹೆಡೆಮುರಿ ಕಟ್ಟಿದ್ದಾರೆ. ಹೈ ಸ್ಪೀಡ್ನಲ್ಲಿ ಚಲಾಯಿಸಿದ ಖದೀಮ ಬರೋಬ್ಬರಿ 13 ವಾಹನಗಳಿಗೆ ಡಿಕ್ಕಿ ಹೊಡೆದಿದ್ದಾನೆ. ಕೊನೆಗೆ ಬಣ್ಣ ಮಾಡುತ್ತಿದ್ದ ಅಂಗಡಿ ಬಳಿಯ ಪಾರ್ಕಿಂಗ್ ಸ್ಥಳಕ್ಕೆ ಡಿಕ್ಕಿ ಹೊಡೆದು ಕಾಲ್ನಡಿಗೆಯಲ್ಲಿ ಪರಾರಿಯಾಗಲು ಯತ್ನಿಸಿದ್ದಾಗ ಅಲ್ಲೇ ಹತ್ತಿರದಲ್ಲಿ ಬೀಡು ಬಿಟ್ಟಿದ್ದ ಪೊಲೀಸರು ಚೇಸ್ ಮಾಡಿ ಬಂಧಿಸಿದ್ದಾರೆ.
ʼಇದು ದುಃಖದ ಈದ್ʼ : ಗಾಝಾದಲ್ಲಿ ಧ್ವಂಸಗೊಂಡ ಮಸೀದಿಗಳ ಬಳಿ ನಾಗರಿಕರಿಂದ ಈದ್ ನಮಾಝ್!
ಗಾಝಾ: ಯುದ್ಧಪೀಡಿತ ಗಾಝಾದಲ್ಲಿ ನಾಗರಿಕರು ರವಿವಾರ ಈದ್ ಉಲ್-ಫಿತ್ರ್ ಪ್ರಾರ್ಥನೆಗಾಗಿ ಧ್ವಂಸಗೊಂಡ ಮಸೀದಿಗಳ ಬಳಿ ಸೇರಿದರು. ಯುದ್ಧ ಅವಶೇಷಗಳು ಮತ್ತು ಧ್ವಂಸಗೊಂಡ ಕಟ್ಟಡಗಳ ಮಧ್ಯೆ ಈದ್ ನಮಾಝ್ ನಿರ್ವಹಿಸಿದರು. ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಅನೇಕರು ಇಸ್ರೇಲ್ ದಾಳಿಯಲ್ಲಿ ಮಡಿದ ತಮ್ಮ ಪ್ರೀತಿಪಾತ್ರರ ಸಮಾಧಿಗಳಿಗೆ ತೆರಳಿ ಪ್ರಾರ್ಥನೆಯನ್ನು ಸಲ್ಲಿಸಿದರು. ʼಇದು ದುಃಖದ ಈದ್ʼ ಎಂದು ಕೇಂದ್ರ ಪಟ್ಟಣ ದೀರ್ ಎಲ್-ಬಾಲಾಹ್ನಲ್ಲಿ ಪ್ರಾರ್ಥನೆಯಲ್ಲಿ ಭಾಗವಹಿಸಿದ ಆದಿಲ್ ಅಲ್-ಶೇರ್ ಹೇಳಿದರು. ʼನಾವು ನಮ್ಮ ಪ್ರೀತಿಪಾತ್ರರನ್ನು, ನಮ್ಮ ಮಕ್ಕಳು, ನಮ್ಮ ಜೀವನ ಮತ್ತು ನಮ್ಮ ಭವಿಷ್ಯವನ್ನು ಕಳೆದುಕೊಂಡಿದ್ದೇವೆ. ನಾವು ನಮ್ಮ ವಿದ್ಯಾರ್ಥಿಗಳು, ನಮ್ಮ ಶಾಲೆಗಳು, ಸಂಸ್ಥೆಗಳು ಸೇರಿ ಎಲ್ಲವನ್ನೂ ಕಳೆದುಕೊಂಡಿದ್ದೇವೆ. ಇಸ್ರೇಲ್ ದಾಳಿಯಲ್ಲಿ ನನ್ನ ಕುಟುಂಬದ 20 ಸದಸ್ಯರು ಮೃತಪಟ್ಟಿದ್ದಾರೆʼ ಎಂದು ನೋವಿನಿಂದ ಹೇಳಿದರು. ಇಸ್ರೇಲ್ ಹಮಾಸ್ನೊಂದಿಗೆ ಕದನ ವಿರಾಮವನ್ನು ಕೊನೆಗೊಳಿಸಿ ಈ ತಿಂಗಳ ಆರಂಭದಲ್ಲಿ ಮತ್ತೆ ದಾಳಿ ಆರಂಭಿಸಿದೆ. ದಾಳಿಯಲ್ಲಿ ನೂರಾರು ಫೆಲೆಸ್ತೀನ್ ನಾಗರಿಕರು ಮೃತಪಟ್ಟಿದ್ದಾರೆ. ಯಾವುದೇ ಆಹಾರ, ಇಂಧನ ಅಥವಾ ಮಾನವೀಯ ನೆರವು ಗಾಝಾಕ್ಕೆ ರವಾನೆಯಾಗದಂತೆ ತಡೆಯೊಡ್ಡಿತು. ʼಇಲ್ಲಿ ಹತ್ಯೆ, ಸ್ಥಳಾಂತರ, ಹಸಿವು ಮತ್ತು ಯುದ್ಧ ಮುಂದುವರಿದಿದೆ. ನಾವು ಮಕ್ಕಳನ್ನು ಸಂತೋಷಪಡಿಸುವ ದೃಷ್ಟಿಯಿಂದ ಈದ್ ಪ್ರಾರ್ಥನೆಗಳನ್ನು ನೆರವೇರಿಸಲು ಹೋಗುತ್ತೇವೆ, ಸಂತೋಷಕ್ಕಾಗಿ ಅಲ್ಲ, ನಮಗೆ ಈದ್ ಇಲ್ಲʼ ಎಂದು ಸಯದ್ ಅಲ್-ಕೌರ್ದ್ ಹೇಳಿದರು. 2023ರ ಅಕ್ಟೋಬರ್ 7ರಂದು ಇಸ್ರೇಲ್ ಗಾಝಾ ಮೇಲೆ ದಾಳಿಯನ್ನು ಪ್ರಾರಂಭಿಸಿದೆ. ಗಾಝಾದ ಆರೋಗ್ಯ ಸಚಿವಾಲಯದ ಪ್ರಕಾರ, ಇಸ್ರೇಲ್ ದಾಳಿಗೆ ಮಕ್ಕಳು, ಮಹಿಳೆಯರು ಸೇರಿ 50,000 ಫೆಲೆಸ್ತೀನ್ ನಾಗರಿಕರು ಮೃತಪಟ್ಟಿದ್ದಾರೆ. ಇಸ್ರೇಲ್ ಬಾಂಬ್ ದಾಳಿಯಿಂದ ಗಾಝಾದ ವಿಶಾಲ ಭೂಪ್ರದೇಶಗಳು, ಕಟ್ಟಡಗಳು, ಆಸ್ಪತ್ರೆಗಳು, ಸಂಸ್ಥೆಗಳು ನಾಶವಾಗಿವೆ. ಗಾಝಾ ಪಟ್ಟಿಯಿಂದ 90% ನಾಗರಿಕರನ್ನು ಸ್ಥಳಾಂತರಿಸಲಾಗಿದೆ. ಜನರು ನಿರಾಶ್ರಿತ ಶಿಬಿರಗಳಲ್ಲಿ ಭಯದಿಂದ ದಿನದೂಡುತ್ತಿದ್ದಾರೆ. ಆಹಾರ, ನೀರಿಲ್ಲದೆ ಪರದಾಡುತ್ತಿದ್ದಾರೆ. ಈ ಮಧ್ಯೆ ಅರಬ್ ದೇಶಗಳು ಕದನ ವಿರಾಮವನ್ನು ಮರಳಿ ಅನುಷ್ಟಾನಕ್ಕೆ ತರಲು ಪ್ರಯತ್ನಿಸುತ್ತಿದೆ. ಈಜಿಪ್ಟ್ ಮತ್ತು ಖತರ್ನ ಹೊಸ ಪ್ರಸ್ತಾಪವನ್ನು ಒಪ್ಪಿಕೊಂಡಿರುವುದಾಗಿ ಹಮಾಸ್ ಶನಿವಾರ ಹೇಳಿದೆ. ಅಮೆರಿಕದ ಸಮನ್ವಯದಲ್ಲಿ ತನ್ನದೇ ಆದ ಪ್ರಸ್ತಾಪವನ್ನು ಮುಂದಿಟ್ಟಿರುವುದಾಗಿ ಇಸ್ರೇಲ್ ಹೇಳಿದೆ.
Earthquake: ಮ್ಯಾನ್ಮರ್ನಲ್ಲಿ ಮತ್ತೊಮ್ಮೆ ಕಂಪಿಸಿದ ಭೂಮಿ: ಸರಣಿ ಭೂಕಂಪನಕ್ಕೆ ಬೆಚ್ಚಿಬಿದ್ದ ಜನ
ಮ್ಯಾನ್ಮರ್ನಲ್ಲಿ ಸಂಭವಿಸಿದ ಪ್ರಬಲ ಭೂಕಂಪನದ ಭೀತಿ ಜನರಿಂದ ಮಾಸುವ ಮುನ್ನವೇ ಮತ್ತೊಮ್ಮೆ ಭೂಮಿ ಅಲುಗಾಡಿ. ಶುಕ್ರವಾರ 7.7 ತೀವ್ರತೆಯಲ್ಲಿ ಮ್ಯಾನ್ಮರ್ನಲ್ಲಿ ಭೂಕಂಪನ ಸಂಭವಿಸಿದ್ದು ಇಂದು (ಮಾರ್ಚ್ 30) ಮತ್ತೆ ಭೂಕಂಪವಾಗಿದೆ. ಶುಕ್ರವಾರ ಎರಡು ಬಾರಿ ಅಲುಗಾಡಿದ ಭೂಮಿ ಇಂದು ಮತ್ತೆ ನಡುಗಿದೆ. ಮ್ಯಾನ್ಮಾರ್ನ ಎರಡನೇ ಅತಿದೊಡ್ಡ ಮಂಡಲೆ (Mandalay in Myanmar) ನಗರದ ಬಳಿ 5.1 ತೀವ್ರತೆಯ
ಮಂಡ್ಯ: ಸೊಸೈಟಿ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಮತ ಹಾಕಿದ್ದಕ್ಕೆ ಯುವಕ, ಸಹೋದರಿಯ ಮೇಲೆ ಮಾರಣಾಂತಿಕ ಹಲ್ಲೆ
ನಾಗಮಂಗಲ ತಾಲೂಕಿನ ಚೋಳೆನಹಳ್ಳಿ ಸೊಸೈಟಿ ಚುನಾವಣೆ ವಿಚಾರದಲ್ಲಿ ಗಲಾಟೆ ನಡೆದಿದ್ದು, ಕಾಂಗ್ರೆಸ್ ಪರ ಮತ ಹಾಕಿದ್ದಕ್ಕೆ ಯುವಕನ ಮೇಲೆ ಇನ್ನೊಂದು ಗುಂಪು ಮಾರಣಾಂತಿಕ ಹಲ್ಲೆ ನಡೆಸಿದೆ. ಚೋಳನಹಳ್ಳಿ ಗ್ರಾಮದ ವಿಕಾಸ್ ಎಂಬಾತ ಕಾಂಗ್ರೆಸ್ ಪರವಾಗಿ ಪ್ರಚಾರ ಮಾಡಿದ್ದ. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಪರವಾಗಿ ಮತ ಚಲಾಯಿಸಿದ್ದ ಎಂದು ಇನ್ನೊಂದು ಗುಂಪು ಮಾರಣಾಂತಿಕ ಹಲ್ಲೆ ನಡೆಸಿದೆ.
Train Accident: ಹಳಿತಪ್ಪಿದ ಬೆಂಗಳೂರು-ಕಾಮಾಕ್ಯ ಎಕ್ಸ್ಪ್ರೆಸ್ನ 11 ಬೋಗಿಗಳು
ದೇಶದೆಲ್ಲೆಡೆ ಯುಗಾದಿ ಸಂಭ್ರಮದಲ್ಲಿದ್ದರೆ, ಹಬ್ಬದ ದಿನವೇ ಘೋರ ದುರಂತವೊಂದು ಸಂಭವಿಸಿದೆ. ಒಡಿಶಾದ ಕಟಕ್ನ ನೆರ್ಗುಂಡಿ ನಿಲ್ದಾಣದ ಬಳಿ ಬೆಂಗಳೂರು-ಕಾಮಾಕ್ಯ ಸೂಪರ್ಫಾಸ್ಟ್ ಎಕ್ಸ್ಪ್ರೆಸ್ನ ಹನ್ನೊಂದು ಬೋಗಿಗಳು ಹಳಿತಪ್ಪಿವೆ. ಈಸ್ಟ್ ಕೋಸ್ಟ್ ರೈಲ್ವೆ ವ್ಯಾಪ್ತಿಯ ಖುರ್ದಾ ರಸ್ತೆ ವಿಭಾಗದ ಕಟಕ್-ನೆರ್ಗುಂಡಿ ರೈಲ್ವೆ ವಿಭಾಗದಲ್ಲಿ ಭಾನುವಾರ ಬೆಳಿಗ್ಗೆ ಸುಮಾರು 11:54 ರ ಸುಮಾರಿಗೆ ಈ ಘಟನೆ ಸಂಭವಿಸಿದೆ ಎಂದು ವರದಿಯಾಗಿದೆ. ಈವರೆಗೆ
ಮನಸ್ಸಿಗೆ ಮೇಲಿಂದ ಮೇಲೆ ಆಗುವ ಪ್ರಭಾವ, ಪ್ರಚೋದನೆ, ಪ್ರಲೋಭನೆಗಳು, ಆನುವಂಶೀಯ ಗುಣಗಳು, ಸ್ವಾಭಾವಿಕವಾಗಿ ಬೇರೂರಿರುವ ಅಂಶಗಳು ಮತ್ತು ಆಗಿರುವ ರೂಢಿಯಲ್ಲಿ ವಿರಮಿಸಿರುವಂತಹ ಗುಣಗಳೆಲ್ಲವೂ ಅದರ ಆರೋಗ್ಯ ಮತ್ತು ಅನಾರೋಗ್ಯದ ವಿಷಯವನ್ನು ನಿರ್ಧರಿಸುತ್ತವೆ. ಆದರೆ ಆರೋಗ್ಯವಾಗಿರುವುದು ನಮ್ಮ ಹಕ್ಕು, ಅನಿವಾರ್ಯ ಮತ್ತು ಪ್ರಯತ್ನದಿಂದ ಆಗುವಂತಹುದು. ರೋಗ ವಕ್ಕರಿಸುವುದು ಅನಪೇಕ್ಷಿತವಾಗಿ, ಅನಿರೀಕ್ಷಿತವಾಗಿ ಮತ್ತು ಅನಾ ಹ್ವಾನಿತವಾಗಿ. ಕರೆಯದೇ ಇದ್ದರೂ, ಬಯಸದೇ ಇದ್ದರೂ ಬಂದು ಕಾಡುವ ಸಂಗತಿ ರೋಗಗಳು ಅಥವಾ ಸಮಸ್ಯೆಗಳು. ಇದು ಮನಸ್ಸಿನ ಮತ್ತು ದೇಹದ ವಿಷಯದಲ್ಲಾದರೂ ನಿಜವೇ. ಎಷ್ಟೋ ಸಲ ಆರೋಗ್ಯಕ್ಕಾಗಿ ಪ್ರಯತ್ನ ಮತ್ತು ಶ್ರಮ ಪಡಲಾರದ ಆಲಸ್ಯದ ಗುಣವು ಅನಾರೋಗ್ಯಕರವಾದ ಸ್ಥಿತಿಯೊಂದಿಗೇ ಹೊಂದಾಣಿಕೆ ಮಾಡಿಕೊಂಡು, ಅದೇ ಸ್ಥಿತಿ ಮತ್ತು ಪರಿಸ್ಥಿತಿಯಲ್ಲೇ ವಿರಮಿಸಿಕೊಳ್ಳುವ ಹಾಗೆ ಮನಸ್ಥಿತಿಯನ್ನು ರೂಪುಗೊಳಿಸಿಕೊಂಡುಬಿಡುತ್ತಾರೆ. ನಮ್ಮ ಸುತ್ತಮುತ್ತ ನೋಡುವ ಸಾಮಾಜಿಕ ವಾತಾವರಣದಲ್ಲಿ ಬಡತನ, ಕೊಳಕುತನ, ಇಕ್ಕಟ್ಟು, ಕೊರತೆ ಮತ್ತು ಒಲ್ಲದ ಹಾಗೂ ಒಗ್ಗದ ಪರಿಸ್ಥಿತಿಯೊಡನೆ ಹೊಂದಾಣಿಕೆ ಮಾಡಿಕೊಂಡು ಬದುಕುತ್ತಿರುತ್ತಾರೆ. ಅವರು ತಾವಿರುವ ಸ್ಥಿತಿಯನ್ನೇ ದೂಷಿಸಿಕೊಂಡು, ಇದು ತಮ್ಮ ಕರ್ಮ ಅಥವಾ ವಿಧಿ ಎಂದುಕೊಂಡು, ನಮ್ಮನ್ನು ಈ ಸ್ಥಿತಿಗೆ ಅವರ್ಯಾರೋ ತಂದಿದ್ದಾರೆ ಎಂದು ವ್ಯವಸ್ಥೆಯನ್ನೋ ಅಥವಾ ವ್ಯಕ್ತಿಗಳನ್ನೋ ದೂರಿಕೊಂಡು, ಆ ಮೂಲಕವೇ ತೃಪ್ತಿ ಪಡುತ್ತಾ, ಅದರಿಂದ ಹೊರಗೆ ಬರುವ ಪ್ರಯತ್ನವನ್ನೇ ಮಾಡುವುದಿಲ್ಲ. ಏಕೆಂದರೆ ಈ ಪ್ರಯತ್ನ ಶ್ರಮವನ್ನು ಬೇಡುತ್ತದೆ ಮತ್ತು ರೂಢಿಯಾಗಿರುವುದಕ್ಕಿಂತ ಭಿನ್ನವಾದ ದಿಕ್ಕು ಮತ್ತು ಚಲನೆಗೆ ಒಗ್ಗಿಕೊಳ್ಳಬೇಕಾಗುತ್ತದೆ. ಇಂತಹ ಹೊಸ ಪ್ರಯತ್ನದ ಶ್ರಮದಿಂದ ಪಾರಾಗಲು ಅವರು ದೂರಿಕೊಂಡು, ದೂಷಿಸಿಕೊಂಡು, ಹೆಣಗಿಕೊಂಡು, ಪರದಾಡಿಕೊಂಡೇ ಇದ್ದುಬಿಡುತ್ತಾರೆ. ಇದೇ ವಿಷಯವು ಮಾನಸಿಕ ಆರೋಗ್ಯದ ವಿಷಯದಲ್ಲಿಯೂ ಕೂಡಾ ಅನ್ವಯವಾಗುತ್ತದೆ. ತಮ್ಮ ಭಾವನಾತ್ಮಕ ತೊಳಲಾಟ, ಮಾನಸಿಕ ಸ್ಥಿತಿ, ಬದುಕಿನ ರೀತಿಯನ್ನು ಗಮನಿಸಿಕೊಂಡು, ಅದಕ್ಕೆ ಅಗತ್ಯವಿರುವ ಪ್ರಯತ್ನವನ್ನು ಮಾಡುವ ಬದಲು ಅದಕ್ಕೇ ಒಗ್ಗಿಕೊಂಡು ಹೋಗುವುದು ಒಂದು ವ್ಯಸನ ಅಥವಾ ಚಾಳಿ. ಮನಸ್ತಾಪ ಅಥವಾ ಒಡಕಿರುವ ಸಂಬಂಧಗಳಲ್ಲಿ ಕಾರಣಗಳನ್ನು ಗುರುತಿಸಿಕೊಂಡು, ಅವುಗಳನ್ನು ಸ್ಪಷ್ಟವಾಗಿ ಗ್ರಹಿಸಿ, ಅದನ್ನು ಸರಿಪಡಿಸಿಕೊಳ್ಳಲು ಬೇಕಾದ ಪ್ರಯತ್ನವನ್ನು ಮಾಡುವ ಬದಲು ಪರ್ಯಾಯವನ್ನು ನೋಡುವುದೋ ಅಥವಾ ದೂರುತ್ತಾ, ಸ್ವಮರುಕವನ್ನು ಪಡುತ್ತಾ, ಅದೇ ಮನಸ್ಥಿತಿ ಮತ್ತು ಪರಿಸ್ಥಿತಿಯಲ್ಲಿ ವಿರಮಿಸುತ್ತಾ ತೃಪ್ತಿಪಟ್ಟುಕೊಳ್ಳುವುದು ಒಂದು ವ್ಯಸನ ಅಥವಾ ಚಾಳಿ. ವ್ಯಕ್ತಿಗಳು ಚಾಳಿಯಲ್ಲಿಯೇ ವಿರಮಿಸುವುದೇಕೆಂದರೆ, ರೂಢಿಯಾಗಿರುವುದರಲ್ಲಿ ಮುಂದುವರಿಯುವುದು ಸರಾಗ ಮತ್ತು ಸುಲಭ. ಹೊಸ ರೂಢಿ ಎಂದರೆ ಶ್ರಮವನ್ನು ಬೇಡುತ್ತದೆ. ಹಾಗೆಯೇ ಎಷ್ಟೋ ಸಲ ನಮ್ಮ ನೋವಿಗೆ, ತೊಂದರೆಗಳಿಗೆ ಮತ್ತು ಸಮಸ್ಯೆಗಳಿಗೆ ನಾವು ಯಾವುದೋ ವ್ಯವಸ್ಥೆಯನ್ನು ಅಥವಾ ವ್ಯಕ್ತಿಯನ್ನು ದೂರುತ್ತಿರುತ್ತೇವೆ. ಹಾಗೆ ದೂಷಿಸುವ ಬದಲು ಅರಿಯುತ್ತಾ ಹೋದರೆ ಅದಕ್ಕೆ ಕಾರಣ ನಾವೇ ಎಂದು ಬೊಟ್ಟು ಮಾಡಿಕೊಳ್ಳಬೇಕಾಗುವುದು. ಇಷ್ಟೂ ಕಾಲ ನಾನು ಮಾಡಿರುವ ದೂರು ಮತ್ತು ದೂಷಣೆ ವಿನಾಕಾರಣವಾದದ್ದು, ನಾನೇ ಇದಕ್ಕೆ ಕಾರಣ ಎಂದು ಅಪರಾಧಿ ಸ್ಥಾನದಲ್ಲಿ ನಿಲ್ಲಲು ನನ್ನ ಮನಸ್ಸು ಒಪ್ಪುವುದಿಲ್ಲ. ಕುಟುಂಬ, ಸಮಾಜ, ಧಾರ್ಮಿಕ ಮತ್ತು ಸಾಂಸ್ಕೃತಿಕ ವ್ಯವಸ್ಥೆಗಳು ಒಳ್ಳೆಯ ಮತ್ತು ಕೆಟ್ಟ ಎಂಬ ಎರಡು ನಿರ್ದಿಷ್ಟ ವಲಯಗಳನ್ನು ಮತ್ತು ಸ್ಥಾನಗಳನ್ನು ಗುರುತಿಸಿದ್ದು ಯಾವುದಾದರೂ ಒಂದರಲ್ಲಿ ಹೊಂದಿಸಿಕೊಳ್ಳಲು ಅಥವಾ ಅಡಕವಾಗಲು ಅಥವಾ ಆಗಿಸಿಕೊಳ್ಳಲು ಮನಸ್ಸು ಪ್ರಯತ್ನಪಡುತ್ತಿರುತ್ತದೆ. ಸ್ವರ್ಗ ಮತ್ತು ನರಕದ ಎರಡು ವೈಪರೀತ್ಯದ ಪರಿಕಲ್ಪನೆಗಳಂತೆ! ಆದರೆ ಒಳ್ಳೆಯ ಮತ್ತು ಕೆಟ್ಟ ಎಂಬ ಎರಡು ವಲಯಗಳು ಬೆಳಕು ಮತ್ತು ಕತ್ತಲೆಯಂತೆ ಇರುವ ಬದಲು ಕತ್ತಲೆ ಮತ್ತು ಬೆಳಕು ಎರಡೂ ಬೆರೆತಿರುವ ಬಹುದೊಡ್ಡ ನಡುವಲಯವೂ ಇರುತ್ತದೆ. ಇದನ್ನು ಕಪ್ಪು ಮತ್ತು ಬಿಳುಪಿನ ನಡುವಿನ ಬೂದವಲಯ ಅಥವಾ ಗ್ರೇ ಏರಿಯಾ ಎನ್ನಬಹುದು. ನಾವಿರುವ ಜಗತ್ತು ಮತ್ತು ನಮಗಿರುವ ಮನಸ್ಸು ನಿರ್ದಿಷ್ಟವಾದ ಸ್ವರ್ಗವೋ ಅಥವಾ ನರಕವೋ, ಪಾಪವೋ, ಪುಣ್ಯವೋ, ಒಳ್ಳೆಯದೋ ಅಥವಾ ಕೆಟ್ಟದ್ದೋ ಎಂದು ಗಡಿಯುಳ್ಳ ಚೌಕಟ್ಟಿನದಲ್ಲ! ಬೂದವಲಯದ್ದು. ವ್ಯಕ್ತಿಗಳು ಈ ಬೂದವಲಯದ ಅರಿವಿಲ್ಲದೇ ತಮ್ಮನ್ನು ಕೆಟ್ಟ ಸ್ಥಾನದಲ್ಲಿ ಇರಿಸಿಕೊಂಡು ಖಂಡಿಸಿಕೊಳ್ಳಲು ಬಯಸದೇ ಸದಾ ಒಳ್ಳೆಯ ಸ್ಥಾನದಲ್ಲಿಟ್ಟುಕೊಂಡು ಮನ್ನಣೆ ಮತ್ತು ಮರುಕ ಬಯಸುವ ಕಾರಣದಿಂದ ತಮಗೇ ಅರಿವಿಲ್ಲದಂತೆ ತಮ್ಮನ್ನು ಶಿಕ್ಷಿಸಿಕೊಳ್ಳುತ್ತಿರುತ್ತಾರೆ. ಜಗತ್ತು ಮತ್ತು ಮನಸ್ಸು ಬೂದವಲಯದ್ದು. ಅದು ಎಂದಿಗೂ ಕಪ್ಪು ಮತ್ತು ಬಿಳಿಯೆಂಬ ನಿರ್ದಿಷ್ಟ ತೀರ್ಮಾನಗಳಿಗೆ ಒಗ್ಗದ್ದು. ಪಾಪ ಮತ್ತು ಪುಣ್ಯ ಅಥವಾ ಸ್ವರ್ಗ ಮತ್ತು ನರಕ ಅಥವಾ ಒಳ್ಳೆಯ ಮತ್ತು ಕೆಟ್ಟ ಎಂಬ ಅಸಾಧ್ಯದ ಮಾನದಂಡಗಳನ್ನು ಬೆನ್ನಟ್ಟುವುದರಲ್ಲಿಯೇ ಮನಸ್ಸು ಮತ್ತು ವ್ಯವಸ್ಥೆಗಳು ವೃಥಾ ಬಳಲುತ್ತದೆ. ಒಳ್ಳೆಯ ಮತ್ತು ಕೆಟ್ಟ ಎಂಬ ಎರಡು ತೀರ್ಮಾನಗಳಿಂದ ಹೊರತಾಗಿ ಬೂದವಲಯವನ್ನು ಗಮನಿಸಿರುವುದರಲ್ಲಿ, ಅದನ್ನು ಒಪ್ಪಿಕೊಳ್ಳುವುದರಲ್ಲಿ ಮತ್ತು ಅದರ ಕುರಿತಾಗಿ ಕೆಲಸ ಮಾಡುವುದರಲ್ಲಿ ಮನಸ್ಸಿನ ಆರೋಗ್ಯವಿರುವುದು. ಬೂದವಲಯದ ಅರಿವು ಇಲ್ಲದಿರಲು ಅಥವಾ ಒಪ್ಪದೇ ಇರುವಾಗ ಎಷ್ಟೋ ವಿಷಯಗಳ ಉತ್ತರದಾಯಿತ್ವವನ್ನೂ ಮತ್ತು ಹೊಣೆಗಾರಿಕೆಯನ್ನೂ ವ್ಯಕ್ತಿಗಳು ಒಪ್ಪಿಕೊಳ್ಳದೇ ಹೋಗುತ್ತಾರೆ.
Ugadi 2025 Prediction: ಇದೇ ವರ್ಷ ಸಿಎಂ ಬದಲಾಗ್ತಾರಾ? ಯುಗಾದಿ ದಿನವೇ ಬೊಂಬೆಗಳಿಂದ ಅಚ್ಚರಿ ಭವಿಷ್ಯ
ಐತಿಹಾಸಿಕ ಹಿನ್ನೆಲೆಯುಳ್ಳ ಧಾರವಾಡ ತಾಲ್ಲೂಕಿನ ಹನುಮನಕೊಪ್ಪದ ಯುಗಾದಿ ಬೊಂಬೆ ಭವಿಷ್ಯ ಇಂದು ಹೊರಬಿದ್ದಿದೆ. ಈ ಬೊಂಬೆಗಳು ಪ್ರತಿ ಯುಗಾದಿ ಹಬ್ಬದಂದು ಅಚ್ಚರಿ ಭವಿಷ್ಯ ನುಡಿಯುತ್ತವೆ. ಈ ಪೈಕಿ ಬಹುತೇಕ ಭವಿಷ್ಯವಾಣಿಗಳು ನಿಜವಾಗಿರುವ ನಿದರ್ಶನವೂ ಇದೆ. ಇಂದು ನುಡಿದಿರುವ ಭವಿಷ್ಯವು ಅಚ್ಚರಿ ಮೂಡಿಸುತ್ತಿದ್ದು, ರಾಜ್ಯ ರಾಜಕಾರಣ ಹಾಗೂ ಸಿಎಂ ಸ್ಥಾನದ ಬಗ್ಗೆಯೂ ಕುತೂಹಲಕಾರಿ ಭವಿಷ್ಯ ನುಡಿದಿವೆ. ಹನುಮನಕೊಪ್ಪ ಗ್ರಾಮದಲ್ಲಿ
ಡೊನಾಲ್ಡ್ ಟ್ರಂಪ್ ಅವರ ಡೆಫಿನಿಷನ್ ಆಫ್ ವುಮನ್; ಸಂಡೇ ಲಂಚ್ ಟೈಮ್ನಲ್ಲೇ ಪ್ರೈಮ್ ಟೈಮ್ ನ್ಯೂಸ್!
ಮಹಿಳೆ ಎಂದರೆ ಯಾರು? ಎಂಬ ಪ್ರಶ್ನೆಗೆ ಉತ್ತರ ನೀಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಮಗುವನ್ನು ಹೆರುವ ಸಾಮರ್ಥ್ಯವಿರುವ ಮನುಷ್ಯರು ಮಾತ್ರ ಮಹಿಳೆ.. ಎಂದು ವ್ಯಾಖ್ಯಾನಿಸಿದ್ದಾರೆ. ತೃತೀಯ ಲಿಂಗಿಗಳು ಮಹಿಳೆಯರ ಕ್ರೀಡಾಕೂಟಗಳಲ್ಲಿ ಭಾಗವಹಿಸುವುದು, ಮಹಿಳೆಯರಿಗೆ ಮಾಡುವ ಅಪಮಾನ.. ಎಂದೂ ಡೊನಲ್ಡ್ ಟ್ರಂಪ್ ತಮ್ಮ ಈ ಹಿಂದಿನ ಹೇಳಿಕೆಯನ್ನು ಪುನರುಚ್ಛಿಸಿದ್ದಾರೆ. ಡೊನಾಲ್ಡ ಟ್ರಂಪ್ ಅವರ ರಿಪಬ್ಲಿಕನ್ ಪಕ್ಷ ಆಡಳಿತದಲ್ಲಿರುವ ರಾಜ್ಯಗಳಲ್ಲಿ, ತೃತೀಯ ಲಿಂಗಿಗಳ ಹಕ್ಕುಗಳನ್ನು ಸೀಮಿತಗೊಳಿಸುವ ಅನೇಕ ಬಗೆಯ ಕಾನೂನುಗಳನ್ನು ಜಾರಿಗೆ ತರಲಾಗಿದೆ.
ರಾಷ್ಟ್ರ ನಿರ್ಮಾಣದಲ್ಲಿ RSS ಪಾತ್ರವನ್ನು ಶ್ಲಾಘಿಸಿದ ನರೇಂದ್ರ ಮೋದಿ; ಪ್ರಧಾನಿ ಹೇಳಿದ್ದೇನು?
‘ಗುಡಿ ಪಡವಾ’ ಅಂಗವಾಗಿ ಮಹಾರಾಷ್ಟ್ರದ ನಾಗಪುರಕ್ಕೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರೆಸ್ಸೆಸ್) ಸಂಶೋಧನಾ ಕೇಂದ್ರ ‘ಮಾಧವ ನೇತ್ರಾಲಯ’ದ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಕೊಡುಗೆಗಳನ್ನು ಶ್ಲಾಘಿಸಿದರು. ಭಾರತದ ಅಭಿವೃದ್ಧಿಗೆ RSS ನೀಡಿದ ಸಹಾಯವನ್ನು ನೆನಪಿಸಿಕೊಂಡರು. ‘ಜಗತ್ತಿಗೆ ಭಾರತವು ಮಾನವೀಯ ಸಹಾಯವನ್ನು ನೀಡುವಲ್ಲಿ ಮುಂದಿದೆ. ಜಗತ್ತಿನಲ್ಲಿ ಸಂಕಷ್ಟದಲ್ಲಿರುವ ದೇಶಗಳಿಗೆ RSS ಮೌಲ್ಯಗಳಿಂದಾಗಿ ಭಾರತವು ತಕ್ಷಣ ಸಹಾಯ ಮಾಡಿದೆ ಎಂದು ಹೇಳಿದರು.
ರಾಯಚೂರು | ತೋರಣದಿನ್ನಿ ಗ್ರಾಪಂ ಅಧಿಕಾರಿ ವಿರುದ್ಧ ಕ್ರಮಕ್ಕೆ ಒತ್ತಾಯ
ರಾಯಚೂರು: ಜಿಲ್ಲೆಯ ಮಸ್ಕಿ ತಾಲ್ಲೂಕಿನ ತೋರಣದಿನ್ನಿ ಗ್ರಾಮ ಪಂಚಾಯತ್ನ 15ನೇ ಹಣಕಾಸು ಯೋಜನೆ, ಪಂಚವಾರ್ಷಿಕ ಯೋಜನೆಯ ಅನುದಾನ, ಕರವಸೂಲಿ ಹಾಗೂ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ತಿಮ್ಮಪ್ಪ ಅವರು ಅವ್ಯವಹಾರ ನಡೆಸಿದ್ದಾರೆ ಎಂದು ಗ್ರಾಪಂ ಸದಸ್ಯೆ ಚಂದಮ್ಮ ಜೋಸೆಫ್ ಆರೋಪಿಸಿದ್ದಾರೆ. ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತೋರಣದಿನ್ನಿ ಗ್ರಾಪಂ ವ್ಯಾಪ್ತಿಯ ಗ್ರಾಮಗಳಿಗೆ ಯಾವುದೇ ಅಭಿವೃದ್ಧಿ ಕಾರ್ಯಗಳು ಆಗಿಲ್ಲ. ಸರ್ಕಾರದ ವಿವಿಧ ಲೆಕ್ಕ ಶಿರ್ಷಿಕೆ ಅನುದಾನ ಸಂಪೂರ್ಣವಾಗಿ ದುರ್ಬಳಕೆ ಮಾಡಲಾಗಿದೆ ಎಂದು ಆರೋಪಿಸಿದರು. ಈ ಬಗ್ಗೆ ಮಸ್ಕಿ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗೆ ದೂರು ಸಲ್ಲಿಸಿದರೂ, ಯಾವುದೇ ಕ್ರಮ ತೆಗೆದುಕೊಂಡಿಲ್ಲ.ಇದುವರೆಗೂ ಯಾವುದೇ ತನಿಖೆ ನಡೆಸಿಲ್ಲ. ಕ್ರಮ ತೆಗೆದುಕೊಂಡಿಲ್ಲ. ಈ ಬಗ್ಗೆ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಗಮನಕ್ಕೂ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದರು. ಅಲ್ಲದೇ ಗ್ರಾಮ ಪಂಚಾಯತ್ ಸದಸ್ಯರು ಸಭೆಯಲ್ಲಿ ವಾರ್ಡ್ನ ಸಮಸ್ಯೆಗಳ ಕುರಿತು ಗಮನ ಸೆಳೆದಾಗ ಸದಸ್ಯರೊಂದಿಗೆ ಪಿಡಿಒ ಅವರು ಅಗೌರವದೊಂದಿಗೆ ನಡೆದುಕೊಳ್ಳುತ್ತಾರೆ. ಸದಸ್ಯರ ಗಮನಕ್ಕೆ ತರದೇ ಕ್ರಿಯಾ ಯೋಜನೆ ಸಿದ್ಧಪಡಿಸುತ್ತಾರೆ ಎಂದು ಆಪಾದಿಸಿದರು. ತೋರಣದಿನ್ನಿ ಗ್ರಾಪಂಯಲ್ಲಿನ ವಿವಿಧ ಯೋಜನೆಗಳಲ್ಲಿ ನಡೆದಿರುವ ಅವ್ಯಹಾರಕ್ಕೆ ಸಂಬಂಧಿಸಿದಂತೆ ಸಾಮಾಗ್ರಿಗಳ ಖರೀದಿಗೆ ಸರ್ಕಾರ ಮಾರ್ಗಸೂಚಿ ಪಾಲಿಸಿಲ್ಲ. ಲೆಕ್ಕ ಪರಿಶೋಧನಾ ವರದಿಯ ಬಗ್ಗೆ ಪರಿಶೀಲನೆ ಮಾಡಬೇಕು, ತೆರಿಗೆ ಹಣ ಸಂಗ್ರಹಣೆ ಹಾಗೂ ಬಳಕೆಗೆ ಮಾಡಲು ಸಿದ್ಧಪಡಿಸಿದ ಕ್ರಿಯಾಯೋಜನೆ ಹಾಗೂ ಯಾರ ಹೆಸರಿನಲ್ಲಿ ಹಣ ಪಾವತಿಸಲಾಗಿದೆ ಎಂಬುವುದು ಸೇರಿದಂತೆ ಇನ್ನಿತರ ವಿಷಯಗಳ ಕುರಿತು ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು. ತೋರಣದಿನ್ನಿ ಗ್ರಾಪಂ ನಡೆದ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಒಂದು ವಾರದೊಳಗಾಗಿ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳದೇ ಇದ್ದರೆ, ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಸಿದರು. ಗ್ರಾಪಂ ಸದಸ್ಯರಾದ ಯಲ್ಲಮ್ಮ, ಮಲ್ಲಮ್ಮ, ಜೋಸೆಫ್, ಬಸವಲಿಂಗಮ್ಮ ಹಾಗೂ ಮತ್ತಿತರರು ಪತ್ರಿಕಾಗೋಷ್ಟಿಯಲ್ಲಿದ್ದರು.
ಹಳಿ ತಪ್ಪಿದ ಬೆಂಗಳೂರು - ಕಾಮಾಕ್ಯ ಸೂಪರ್ಫಾಸ್ಟ್ ಎಕ್ಸ್ಪ್ರೆಸ್ ರೈಲು! 11 ಬೋಗಿಗಳಿಗೆ ಹಾನಿ
ಒಡಿಶಾದ ಕಟಕ್ ಜಿಲ್ಲೆಯಲ್ಲಿ ಬೆಂಗಳೂರು - ಕಾಮಾಕ್ಯ ಎಸಿ ಸೂಪರ್ ಫಾಸ್ಟ್ ಎಕ್ಸ್ಪ್ರೆಸ್ ರೈಲು ಹಳಿ ತಪ್ಪಿದೆ. 11 ಬೋಗಿಗಳಿಗೆ ಹಾನಿಯಾಗಿದೆ. ರೈಲ್ವೇ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ.ಪ್ರವಾಸಿಗರನ್ನು ಸುರಕ್ಷಿತ ಸ್ಥಳಕ್ಕೆ ಕಳುಹಿಸುವ ವ್ಯವಸ್ಥೆ ಮಾಡಲಾಗುತ್ತಿದೆ. ಸಾವು ನೋವಿನ ಮಾಹಿತಿ ಅಧಿಕೃತವಾಗಿ ಲಭ್ಯವಾಗಿಲ್ಲ.
ಮಂಗಳೂರು- ತಲಪಾಡಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಹಿನ್ನೆಲೆ; ಸಂಚಾರ ಮಾರ್ಗದಲ್ಲಿ ಬದಲಾವಣೆ
ಮಂಗಳೂರು: ನಗರದಿಂದ ಕೇರಳ ರಾಜ್ಯಕ್ಕೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 66 ರ ಹಳೆಯ ನೇತ್ರಾವತಿ ಸೇತುವೆಯಲ್ಲಿ (ತಲಪಾಡಿ - ಮಂಗಳೂರು ನಗರಕ್ಕೆ ಬರುವ) ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವತಿಯಿಂದ ದಿನಾಂಕ:01-04-2025 ರಿಂದ 30-04-2025 ರವರೆಗೆ 30 ದಿನಗಳು ಪ್ರಮುಖ ದುರಸ್ತಿ ಕಾಮಗಾರಿ ನಡೆಯಲಿದೆ. ಹೀಗಾಗಿ ಒಂದು ಸೇತುವೆಯಲ್ಲಿ (ಮಂಗಳೂರು ನಗರದಿಂದ ತಲಪಾಡಿ ಕಡೆಗೆ ಹೋಗುವ) ವಾಹನಗಳ ಸಂಚಾರಕ್ಕಾಗಿ ದ್ವಿಮುಖ ಸಂಚಾರ ವ್ಯವಸ್ಥೆ ಮಾಡಲಾಗಿರುತ್ತದೆ. ಇದರಿಂದ ಪಂಪ್ವೆಲ್ ನಿಂದ ತೊಕ್ಕೊಟ್ಟು ವರೆಗೆ ಸದ್ರಿ ಹೆದ್ದಾರಿಯ ರಸ್ತೆಯಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿರುತ್ತದೆ. ಆದ್ದರಿಂದ ಹಳೆಯ ನೇತ್ರಾವತಿ ಸೇತುವೆಯಲ್ಲಿ ದುರಸ್ತಿ ಕಾಮಗಾರಿ ನಡೆಯುವ ದಿನಗಳಲ್ಲಿ ಸಂಚಾರ ದಟ್ಟಣೆ ಹೆಚ್ಚಾಗುವ ಸಾದ್ಯತೆಗಳಿದ್ದು, ನೇತ್ರಾವತಿ ಸೇತುವೆಯ ಮೂಲಕ ಸಂಚರಿಸುವ ಎಲ್ಲಾ ವಾಹನಗಳ ಚಾಲಕರು/ ಸವಾರರು ಮತ್ತು ಸಾರ್ವಜನಿಕರು ಎಚ್ಚರಿಕೆಯಿಂದ ಚಲಿಸಬೇಕು ಹಾಗೂ ಪೀಕ್ ಅವರ್ಸ್ ಗಳಲ್ಲಿ ಸದರಿ ಮಾರ್ಗದಲ್ಲಿ ವಾಹನ ಸಂಚಾರ ಮಾಡದಂತೆ ಮಂಗಳೂರು ನಗರ ಪೊಲೀಸ್ ಆಯುಕ್ತರು ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಸಾರ್ವಜನಿಕರಿಗೆ ಉಪಯೋಗಿಸಬಹುದಾದ ಇತರೆ ಮಾರ್ಗಗಳು *ಮುಡಿಪು-ಕೊಣಾಜೆ-ದೇರಳಕಟ್ಟೆ ಕಡೆಯಿಂದ ಮಂಗಳೂರು ನಗರ ಕಡೆಗೆ ಸಂಚರಿಸುವ ಸ್ಥಳೀಯ ಲಘು ವಾಹನಗಳು/ದ್ವಿಚಕ್ರ ವಾಹನಗಳು ಕೊಣಾಜೆ- ಹರೇಕಳ(ಬ್ರಿಡ್ಜ್) ಅಡ್ಯಾರ್ ಮುಖಾಂತರ ಮಂಗಳೂರು ಕಡೆಗೆ ಸಂಚರಿಸಬಹುದಾಗಿದೆ. *ಮಂಗಳೂರು ಕಡೆಯಿಂದ ಕೊಣಾಜೆ-ಮುಡಿಪು-ದೇರಳಕಟ್ಟೆ ಕಡೆಗೆ ಸಂಚರಿಸುವ ಸ್ಥಳೀಯ ದ್ವಿಚಕ್ರ / ಲಘು ವಾಹನಗಳು ಅಡ್ಯಾರ್-ಹರೇಕಳ(ಬ್ರಿಡ್ಜ್) ಮುಖಾಂತರ ಸಂಚರಿಸುವುದು. *ತಲಪಾಡಿ, ಉಳ್ಳಾಲ ಕಡೆಯಿಂದ ಬೆಂಗಳೂರು – ಉಪ್ಪಿನಂಗಡಿ – ಪುತ್ತೂರು - ಸುಳ್ಯ ಕಡೆಗೆ ಸಂಚರಿಸುವ ವಾಹನಗಳು ತೊಕ್ಕೊಟ್ಟಿನಿಂದ ಬಲಕ್ಕೆ ತಿರುಗಿ ಮುಡಿಪು – ಬೋಳಿಯಾರ್ -ಮೆಲ್ಕಾರ್ ಮೂಲಕ ಸಂಚರಿಸುವುದು *ಬಿ.ಸಿ ರೋಡ್ ಕಡೆಯಿಂದ ತಲಪಾಡಿ ಮತ್ತು ಕೇರಳ ಕಡೆಗೆ ಸಂಚರಿಸುವ ವಾಹನಗಳು ಮೆಲ್ಕಾರ್-ಮುಡಿಪು-ತೊಕ್ಕೊಟ್ಟು ಮುಖಾಂತರ ಸಂಚರಿಸುವುದು.
ಒಡಿಶಾದಲ್ಲಿ ಹಳಿ ತಪ್ಪಿದ ಬೆಂಗಳೂರು- ಗುವಾಹಟಿ ಕಾಮಾಕ್ಯ ಎಕ್ಸ್ಪ್ರೆಸ್ ರೈಲು
ಕಟಕ್ : ಬೆಂಗಳೂರಿನಿಂದ ಅಸ್ಸಾಂನ ಗುವಾಹಟಿಗೆ ಸಂಚರಿಸುತ್ತಿದ್ದ ಬೆಂಗಳೂರು-ಕಾಮಾಕ್ಯ ಎಸಿ ಎಕ್ಸ್ಪ್ರೆಸ್ ರೈಲು ಡಿಶಾದ ಕಟಕ್ ಜಿಲ್ಲೆಯ ನೆರ್ಗುಂಡಿ ರೈಲು ನಿಲ್ದಾಣದ ಬಳಿ ರವಿವಾರ ಹಳಿತಪ್ಪಿದೆ ಎಂದು ವರದಿಯಾಗಿದೆ. ಬೆಂಗಳೂರು- ಗುವಾಹಟಿ ಕಾಮಾಕ್ಯ ಎಸಿ ಎಕ್ಸ್ಪ್ರೆಸ್ ರೈಲಿನ 11 ಬೋಗಿಗಳು ಹಳಿತಪ್ಪಿದೆ. ಬೆಂಗಳೂರಿನ ವಿಶ್ವೇಶ್ವರಯ್ಯ ಟರ್ಮಿನಲ್ನಿಂದ ಹೊರಟಿದ್ದ ಕಾಮಾಕ್ಯ ಎಕ್ಸ್ಪ್ರೆಸ್ ರೈಲು ತಮಿಳುನಾಡು, ಆಂಧ್ರಪ್ರದೇಶ, ಒಡಿಶಾ, ಬಿಹಾರ, ಪಶ್ಚಿಮ ಬಂಗಾಳದ ಮೂಲಕ ಅಸ್ಸಾಂನ ಗುವಾಹಟಿಗೆ ತೆರಳುತ್ತಿತ್ತು. ಪೂರ್ವ ಕರಾವಳಿ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಅಶೋಕ್ ಕುಮಾರ್ ಮಿಶ್ರಾ ಈ ಕುರಿತು ಪ್ರತಿಕ್ರಿಯಿಸಿ, ʼಮಂಗೂಳಿ ಬಳಿಯ ನಿರ್ಗುಂಡಿಯಲ್ಲಿ ಬೆಳಿಗ್ಗೆ 11.54ಕ್ಕೆ ಘಟನೆ ನಡೆದಿದೆ. ಆದರೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲʼ ಎಂದು ಹೇಳಿದರು.
ಬೆಂಗಳೂರು : ಪತ್ನಿಯನ್ನು ಹತ್ಯೆಗೈದು ಮೃತದೇಹವನ್ನು ಸೂಟ್ಕೇಸ್ನಲ್ಲಿ ಇಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ರಾಕೇಶ್ ಕಡೇಕರ್ಗೆ 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ರವಿವಾರ ಕೋರಮಂಗಲ ಎನ್ಜಿವಿ ಮ್ಯಾಜಿಸ್ಟ್ರೇಟ್ ಕೋರ್ಟ್ ಜಡ್ಜ್ ನಿವಾಸಕ್ಕೆ ಹಾಜರುಪಡಿದ್ದು, ರಾಕೇಶ್ನನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶಿಸಿದರು. ಇನ್ನೂ ಪ್ರಕರಣ ಸಂಬಂಧ ಆರೋಪಿ ರಾಕೇಶ್ ತಂದೆ ರಾಜೇಂದ್ರ ಕೆಡೇಕರ್ ಪ್ರತಿಕ್ರಿಯಿಸಿದ್ದು, ಮೃತ ಗೌರಿ ನನ್ನ ಸಹೋದರಿಯ ಮಗಳು. ರಾಕೇಶ್ -ಗೌರಿ ಮದುವೆಗೆ ನಮ್ಮ ಕುಟುಂಬದ ಒಪ್ಪಿಗೆ ಇರಲಿಲ್ಲ. ಮದುವೆ ವಿಚಾರಕ್ಕೆ ಕುಟುಂಬದ ಜೊತೆ ಗೌರಿ ಜಗಳ ಮಾಡಿಕೊಂಡಿದ್ದರು. ಎರಡು ವರ್ಷದ ಹಿಂದೆ ಪರಿವಾರದ ವಿರೋಧದ ನಡುವೆಯೂ ಮದುವೆ ಆಗಿದ್ದರು. ಗೌರಿ ಯಾವಾಗಲೂ ನನ್ನ ಮಗ ಮತ್ತು ಕುಟುಂಬಸ್ಥರ ಜೊತೆ ಹಲವು ಬಾರಿ ಜಗಳ ಆಡಿದ್ದಳು. ಗಂಡ-ಹಂಡತಿ ಮತ್ತು ಕುಟುಂಬದ ಜಗಳ ಪೊಲೀಸ್ ಠಾಣೆ ಮೇಟ್ಟಿಲೇರಿತ್ತು ಎಂದಿದ್ದಾರೆ.
ಅನೀಶ್ರ ಬೆಟ್ಟದ ಮೇಲಿನ ಗದ್ದೆಯೂ ಕೃಷಿಕನ ಕೈ ಹಿಡಿಯುವ ಹುಡುಗಿಯೂ...
ದೇವರಾಯರ ಪುಸ್ತಕವನ್ನು ಎಷ್ಟು ಜನ ಓದಿದ್ದಾರೋ ನನಗೆ ಗೊತ್ತಿಲ್ಲ, ಶಿವಪ್ರಸಾದರ ವೀಡಿಯೊವನ್ನು ಎಷ್ಟು ಸಾವಿರ ಜನ ನೋಡಿದ್ದಾರೋ ಗೊತ್ತಿಲ್ಲ. ಹಾಗಂತ ಅನೀಶ್ ಬೆಳ್ತಂಗಡಿಗೆ ಹೋಗಿ ದೇವರಾಯರ ಮಿತ್ತಮಜಲಿನ ಗದ್ದೆಗಳನ್ನು ನೋಡಿಲ್ಲ. ಅವರೊಟ್ಟಿಗೆ ಜಗಲಿಯಲ್ಲಿಯೋ ಗದ್ದೆಯ ಕಟ್ಟಪುಣಿಯಲ್ಲಿಯೋ ಕೂತು ಮಾತಾಡಿ ಅನುಭವವನ್ನು ಪಡೆದಿಲ್ಲ. ಸಾಗುವಳಿಯ ಲಾಭ-ನಷ್ಟ, ಸೋಲು -ಗೆಲುವುಗಳ ಬಗ್ಗೆ ಚರ್ಚಿಸಿಲ್ಲ. ಮಾಡಬೇಕೆಂಬ ಹಠವೊಂದಿದ್ದರೆ ಏನೂ ಸಾಧಿಸಬಹುದು ಎಂಬುದಕ್ಕೆ ಈ ಯಶೋಗಾಥೆ ನಮ್ಮ ಯುವಕರಿಗೊಂದು ಮಾದರಿ.
Ukraine War: 1,130 ದಿನಗಳ ರಕ್ತಪಾತಕ್ಕೆ ಬ್ರೇಕ್ ಬೀಳಲೇ ಇಲ್ಲ, ರಷ್ಯಾ &ಉಕ್ರೇನ್ ಯುದ್ಧ ಮುಂದುವರಿಕೆ...
ಅಲ್ಲಿ ಯುದ್ಧ ಶುರುವಾಗಿ ಬರೋಬ್ಬರಿ 3 ವರ್ಷವೇ ಉರುಳಿ ಹೋಗಿದೆ, ಲಕ್ಷ ಲಕ್ಷ ಜನಗಳ ದೇಹ ಮಣ್ಣಾಗಿದೆ. ಜಾಗತಿಕ ಮಟ್ಟದಲ್ಲಿ ಭಯ ಕೂಡ ಶುರುವಾಗಿದೆ, ಹೀಗಿದ್ದರೂ ಯುದ್ಧ ನಿಲ್ಲುವ ಯಾವುದೇ ಲಕ್ಷಣ ಕಾಣುತ್ತಿಲ್ಲ. ಬದಲಾಗಿ ತಿಕ್ಕಾಟ ಇನ್ನಷ್ಟು &ಮತ್ತಷ್ಟು ಜೋರು ಜೋರಾಗುತ್ತಿದೆ. ರಷ್ಯಾ &ಉಕ್ರೇನ್ ಯುದ್ಧ ನೋಡ ನೋಡುತ್ತಲೇ 1130 ದಿನಗಳ ರಕ್ತಪಾತ ಮುಗಿಸಿದ್ದು,
ಅಭಿಮಾನಿಗಳಿಗೆ ಉಂಟಾದ ನೋವಿಗೆ ವಿಷಾದಿಸುತ್ತೇನೆ : ಎಂಪುರಾನ್ ವಿವಾದದ ಬೆನ್ನಲ್ಲೇ ಕ್ಷಮೆಯಾಚಿಸಿದ ಮೋಹನ್ ಲಾಲ್
ತಿರುವನಂತಪುರಂ : ಎಂಪುರಾನ್ ಚಿತ್ರದಲ್ಲಿ ಗುಜರಾತ್ ಗಲಭೆ ಬಗ್ಗೆ ಉಲ್ಲೇಖಿಸಲಾಗಿದೆ ಎಂದು ವಿವಾದ ಭುಗಿಲೆದ್ದ ಬೆನ್ನಲ್ಲೇ ನಟ ಮೋಹನ್ ಲಾಲ್ ಅವರು ಕ್ಷಮೆಯಾಚಿಸಿದ್ದು, ಪ್ರೀತಿಯ ಅಭಿಮಾನಿಗಳಿಗೆ ಉಂಟಾದ ನೋವಿಗೆ ವಿಷಾದಿಸುತ್ತೇನೆ ಎಂದು ಹೇಳಿದರು. ಎಂಪುರಾನ್ ಚಿತ್ರ ನಿರ್ಮಾಣ ತಂಡವು ಚಿತ್ರದಲ್ಲಿನ ಕೆಲವು ದೃಶ್ಯಗಳನ್ನು ತೆಗೆದು ಹಾಕಲು ನಿರ್ಧರಿಸಿದೆ ಎಂದು ಮೋಹನ್ ಲಾಲ್ ಹೇಳಿದ್ದು, ಪೋಸ್ಟ್ನ್ನು ಚಿತ್ರದ ನಿರ್ದೇಶಕ ಪೃಥ್ವಿರಾಜ್ ಸುಕುಮಾರನ್ ಫೇಸ್ಬುಕ್ನಲ್ಲಿ ಹಂಚಿಕೊಂಡಿದ್ದಾರೆ. ʼಲೂಸಿಫರ್ ಚಿತ್ರದ ಎರಡನೇ ಭಾಗವಾದ 'ಎಂಪುರಾನ್'ನಲ್ಲಿ ಕೆಲವು ರಾಜಕೀಯ-ಸಾಮಾಜಿಕ ವಿಷಯಗಳು ನನ್ನ ಅನೇಕ ಅಭಿಮಾನಿಗಳಲ್ಲಿ ನಿರಾಶೆಯನ್ನುಂಟುಮಾಡಿದೆ ಎಂದು ನಾನು ಅರಿತಿದ್ದೇನೆ. ಕಲಾವಿದನಾಗಿ, ನನ್ನ ಯಾವುದೇ ಚಲನಚಿತ್ರಗಳು ಯಾವುದೇ ರಾಜಕೀಯ ಚಳುವಳಿ, ಕಲ್ಪನೆ ಅಥವಾ ಧರ್ಮದ ಬಗ್ಗೆ ದ್ವೇಷವನ್ನು ಹೊಂದದಂತೆ ನೋಡಿಕೊಳ್ಳುವುದು ನನ್ನ ಕರ್ತವ್ಯ. ಆದ್ದರಿಂದ, ನಾನು ಮತ್ತು ಎಂಪುರಾನ್ ತಂಡ ನನ್ನ ಪ್ರೀತಿಪಾತ್ರರಿಗೆ ಉಂಟಾದ ಮಾನಸಿಕ ನೋವಿಗೆ ಪ್ರಾಮಾಣಿಕವಾಗಿ ವಿಷಾದಿಸುತ್ತೇವೆ. ಚಿತ್ರದ ಹಿಂದೆ ಕೆಲಸ ಮಾಡಿದ ನಾವೆಲ್ಲರೂ ಜವಾಬ್ದಾರರು ಎಂದು ಅರಿತುಕೊಂಡು ನಾವು ಒಟ್ಟಾಗಿ ಅಂತಹ ದೃಶ್ಯಗಳನ್ನು ಚಲನಚಿತ್ರದಿಂದ ತೆಗೆದುಹಾಕಲು ನಿರ್ಧರಿಸಿದ್ದೇವೆ. ಕಳೆದ ನಾಲ್ಕು ದಶಕಗಳಿಂದ ಸಿನಿಮಾ ಜೀವನವನ್ನು ನಡೆಸಿದ್ದೇನೆ. ನಿಮ್ಮ ಪ್ರೀತಿ ಮತ್ತು ನಂಬಿಕೆ ನನ್ನ ಏಕೈಕ ಶಕ್ತಿ. ಮೋಹನ್ ಲಾಲ್ ಅದಕ್ಕಿಂತ ದೊಡ್ಡವನಲ್ಲ ಎಂದು ನಾನು ನಂಬುತ್ತೇನೆʼ ಎಂದು ಮೋಹನ್ಲಾಲ್ ಪೋಸ್ಟ್ನಲ್ಲಿ ಹೇಳಿದರು. ಇದಕ್ಕೂ ಮೊದಲು ಚಿತ್ರದ ನಿರ್ಮಾಪಕ ಗೋಕುಲಂ ಗೋಪಾಲನ್ ಮಾತನಾಡಿ, ಚಿತ್ರ ನಿರ್ಮಾಣ ತಂಡವು ಚಿತ್ರದಲ್ಲಿನ 17 ದೃಶ್ಯಗಳಿಗೆ ಕತ್ತರಿ ಹಾಕಲು ನಿರ್ಧರಿಸಿದೆ ಎಂದು ಹೇಳಿದರು.
ಪತ್ನಿಯನ್ನು ಕೊಂದು ಸೂಟ್ಕೇಸ್ನಲ್ಲಿಟ್ಟಿದ್ದ ಕೇಸ್; ಆರೋಪಿಗೆ 14 ದಿನ ನ್ಯಾಯಾಂಗ ಬಂಧನ
ಪತ್ನಿ ಹತ್ಯೆ ಮಾಡಿ, ಶವವನ್ನು ಸೂಟ್ಕೇಸ್ನಲ್ಲಿ ತುಂಬಿ, ಆತ್ಮಹತ್ಯೆಗೆ ಯತ್ನಿಸಿದ್ದ ಆರೋಪಿ ರಾಕೇಸ್ ಕಡೇಕರ್ಗೆಗೆ 14 ದಿನ ನ್ಯಾಯಾಂಗ ಬಂಧನ ನೀಡಿ ಆದೇಶಿಸಲಾಗಿದೆ. ಇಂದು(ಮಾ.30)ಕೋರಮಂಗಲ ಎನ್ಜಿವಿ ಮ್ಯಾಜಿಸ್ಟ್ರೇಟ್ ಕೋರ್ಟ್ನ ನ್ಯಾಯಾಧೀಶರ ನಿವಾಸಕ್ಕೆ ಹಾಜರುಪಡಿಸಿದ್ದರು. ಸದ್ಯ ಆರೋಪಿ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾನೆ. ಪತ್ನಿ ಕೊಂದ ಪಶ್ಚಾತಾಪದಲ್ಲಿ ಜಿರಳೆ ಔಷಧ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ. ಕರ್ನಾಟಕ ಮಹಾರಾಷ್ಟ್ರ ಬಾರ್ಡರ್ನಲ್ಲಿದ್ದ ರಾಕೇಶ್ನನ್ನು ಬೈಕ್ ಸವಾರನೊಬ್ಬ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದರು.
ಯುಗಾದಿ ಪುಣ್ಯಸ್ನಾನಕ್ಕೆ ತೆರಳಿದ್ದ ಬಾಲಕ ತ್ರಿವೇಣಿ ಸಂಗಮದಲ್ಲಿ ಮುಳುಗಿ ಸಾವು
ಯುಗಾದಿ ಸಂಭ್ರಮದ ದಿನವೇ ಮೈಸೂರಿನ ತಿ.ನರಸೀಪುರದಲ್ಲಿ ಭೀಕರ ದುರಂತ ಸಂಭವಿಸಿದೆ.ಯುಗಾದಿ ಹಬ್ಬದ ದಿನ ಪುಣ್ಯಸ್ನಾನಕ್ಕೆ ತೆರಳಿದ್ದ ಬಾಲಕ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಮೃತ ಬಾಲಕನನ್ನು ಶ್ರೀರಾಂಪುರದ ಶರಣ್ (13) ಎಂದು ಗುರುತಿಸಲಾಗಿದೆ.
ಭಟ್ಕಳದ ರಮಝಾನ್ ಪೇಟೆ: ಸೌಹಾರ್ದತೆಯ ಸಂಗಮ
ಭಟ್ಕಳ : ರಮಝಾನ್ ತಿಂಗಳ ಪವಿತ್ರತೆಯಲ್ಲಿ ಈದುಲ್ ಫಿತರ್ ಹಬ್ಬದ ಸಂಭ್ರಮಕ್ಕಾಗಿ ದಿನಗಣನೆ ಆರಂಭವಾಗಿದೆ. ಭಟ್ಕಳ ಸೇರಿದಂತೆ ದೇಶಾದ್ಯಂತ ಈದ್ ಆಚರಣೆಯ ಸಂತಸ ತುಂಬಲಿದೆ. ಈ ಸಂತೋಷದ ಸಂದರ್ಭದಲ್ಲಿ ಭಟ್ಕಳದಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ‘ರಮಝಾನ್ ಪೇಟೆ’ ಎಂಬ ವಿಶೇಷ ಮಾರುಕಟ್ಟೆ ತನ್ನ ಝಗಮಗಿಸುವ ದೀಪಗಳು, ಜನರ ಜಂಗುಳಿ ಮತ್ತು ಸಾಮರಸ್ಯದ ಸಂದೇಶದೊಂದಿಗೆ ಗಮನ ಸೆಳೆಯುತ್ತಿದೆ. ಈ ಪೇಟೆ ಕೇವಲ ವ್ಯಾಪಾರದ ಕೇಂದ್ರವಷ್ಟೇ ಅಲ್ಲ, ಇದು ಮಾನವೀಯತೆ, ಪರಸ್ಪರ ವಿಶ್ವಾಸ ಮತ್ತು ಸೌಹಾರ್ದತೆಯ ಸಂಕೇತವಾಗಿ ಹೊರಹೊಮ್ಮಿದೆ. ಎಲ್ಲರಿಗೂ ಒಂದು ಮಾರುಕಟ್ಟೆ : ಭಟ್ಕಳದ ರಮಝಾನ್ ಪೇಟೆಯ ವಿಶೇಷತೆ ಎಂದರೆ, ಇದು ಎಲ್ಲ ಜಾತಿ, ಧರ್ಮದ ಜನರನ್ನು ಒಂದೇ ತಾಣದಲ್ಲಿ ಸೇರಿಸುತ್ತದೆ. ಇಲ್ಲಿ ದಿನಬಳಕೆಯ ವಸ್ತುಗಳಿಂದ ಹಿಡಿದು ಬಟ್ಟೆ, ಪಾತ್ರೆಗಳು, ಮಕ್ಕಳ ಆಟಿಕೆಗಳು ಮತ್ತು ತಿನಿಸುಗಳವರೆಗೆ ಎಲ್ಲವೂ ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ದೊರೆಯುತ್ತವೆ. ಭಟ್ಕಳ ಮಾತ್ರವಲ್ಲದೇ ಉತ್ತರ ಕನ್ನಡ ಜಿಲ್ಲೆ, ಉಡುಪಿ ಜಿಲ್ಲೆ ಹಾಗೂ ದೂರದ ಉತ್ತರ ಪ್ರದೇಶ, ಬಿಹಾರದಂತಹ ರಾಜ್ಯಗಳಿಂದಲೂ ವ್ಯಾಪಾರಿಗಳು ಮತ್ತು ಗ್ರಾಹಕರು ಇಲ್ಲಿಗೆ ಆಗಮಿಸುತ್ತಾರೆ. ದುಬಾರಿ ವಸ್ತುಗಳಿಂದ ಹಿಡಿದು ಅಗ್ಗದ ಸಾಮಗ್ರಿಗಳವರೆಗೆ ಎಲ್ಲವೂ ಒಂದೇ ಚಾವಣಿಯಡಿ ದೊರೆಯುವ ಈ ಪೇಟೆ, ಪ್ರತಿಯೊಬ್ಬರ ಅಗತ್ಯಕ್ಕೆ ತಕ್ಕಂತೆ ಆಯ್ಕೆಯನ್ನು ಒದಗಿಸುತ್ತದೆ. ಪೇಟೆಯ ಸುರಕ್ಷತೆಗೆ ವ್ಯಾಪಕ ಪೊಲೀಸ್ ಬಂದೋಬಸ್ತ್, ಸಿಸಿಟಿವಿ ಕ್ಯಾಮೆರಾಗಳ ಕಣ್ಗಾವಲು ಮತ್ತು ಸಂಚಾರ ನಿಯಂತ್ರಣದಂತಹ ಕ್ರಮಗಳು ಯಾವುದೇ ಕಿಡಿಗೇಡಿತನಕ್ಕೆ ಅವಕಾಶವೇ ಇಲ್ಲದಂತೆ ಮಾಡಿವೆ. ಸೌಹಾರ್ದತೆಗೆ ಸಾಕ್ಷಿ : ಇತ್ತೀಚೆಗೆ ದೇಶದ ಕೆಲವು ಭಾಗಗಳಲ್ಲಿ, ವಿಶೇಷವಾಗಿ ಉತ್ತರ ಭಾರತದ ರಾಜ್ಯಗಳಲ್ಲಿ ಹಿಂದೂ ಉತ್ಸವಗಳು ಮತ್ತು ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಿಗಳನ್ನು ಬಹಿಷ್ಕರಿಸುವ ಪ್ರಕರಣಗಳು ವರದಿಯಾಗಿವೆ. ಮಹಾ ಕುಂಭಮೇಳದಂತಹ ದೊಡ್ಡ ಕಾರ್ಯಕ್ರಮಗಳಲ್ಲಿ ಸರ್ಕಾರವೇ ಈ ರೀತಿಯ ಬಹಿಷ್ಕಾರಕ್ಕೆ ಮುಂದಾಗಿರುವುದು ದುರದೃಷ್ಟಕರ. ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿಯೂ ಕೆಲವು ಮನುಷ್ಯ ವಿರೋಧಿ ಸಂಘಟನೆಗಳು ಮುಸ್ಲಿಂ ವ್ಯಾಪಾರಿಗಳ ವಿರುದ್ಧ ದ್ವೇಷದ ಧ್ವನಿ ಎತ್ತಿವೆ. ಆದರೆ ಭಟ್ಕಳದ ರಮಝಾನ್ ಪೇಟೆ ಇದಕ್ಕೆ ಒಂದು ಸುಂದರ ಅಪವಾದವಾಗಿ ನಿಂತಿದೆ. ಇಲ್ಲಿ ಪಕ್ಕದ ಕುಂದಾಪುರ, ಉಡುಪಿ ಜಿಲ್ಲೆಗಳಿಂದ ಬಂದ ಹಿಂದೂ ವ್ಯಾಪಾರಿಗಳು ತಮ್ಮ ಅಂಗಡಿಗಳನ್ನು ಹಾಕಿಕೊಂಡು, ಯಾವುದೇ ಆತಂಕವಿಲ್ಲದೆ ವ್ಯಾಪಾರ ಮಾಡುತ್ತಿದ್ದಾರೆ. ಇದೇ ರೀತಿ ಹಿಂದೂ ಗ್ರಾಹಕರು ಸಹ ಸಾಕಷ್ಟು ಸಂಖ್ಯೆಯಲ್ಲಿ ಖರೀದಿಗೆ ಆಗಮಿಸುತ್ತಾರೆ. ಮಾನವೀಯತೆಯ ಮಹತ್ವ : ರಮಝಾನ್ ಪೇಟೆ ಕೇವಲ ಒಂದು ಮಾರುಕಟ್ಟೆಯಾಗಿ ಮಾತ್ರ ಸೀಮಿತವಾಗಿಲ್ಲ. ಇದು ಒಂದು ಸಾಮಾಜಿಕ ಸಂಗಮ ಸ್ಥಾನವಾಗಿದೆ. ಇಲ್ಲಿ ಧರ್ಮ, ಜಾತಿ, ಪ್ರಾಂತದ ಗಡಿಗಳು ಮಾಸಿ, ಜನರು ಪರಸ್ಪರ ವಿಶ್ವಾಸ ಮತ್ತು ಪ್ರೀತಿಯೊಂದಿಗೆ ಒಟ್ಟಾಗಿ ಸಂತಸ ಪಡುತ್ತಾರೆ. ಉತ್ತರ ಪ್ರದೇಶ, ಬಿಹಾರದಿಂದ ಬಂದ ವ್ಯಾಪಾರಿಗಳು ತಮ್ಮ ಸಾಮಗ್ರಿಗಳನ್ನು ಮಾರಾಟ ಮಾಡುತ್ತಾ ಈ ಸೌಹಾರ್ದತೆಯ ಭಾಗವಾಗುತ್ತಾರೆ. ಇಲ್ಲಿ ಯಾರೂ ಒಬ್ಬರನ್ನು ತಾರತಮ್ಯದ ದೃಷ್ಟಿಯಿಂದ ನೋಡುವುದಿಲ್ಲ. ಎಲ್ಲರಿಗೂ ಸಮಾನ ಅವಕಾಶ ಮತ್ತು ಗೌರವ ದೊರೆಯುತ್ತದೆ. ರಮಝಾನ್ ಪೇಟೆಯ ಸಂದೇಶ : ಭಟ್ಕಳದ ರಮಝಾನ್ ಪೇಟೆ ತನ್ನ ಸರಳತೆಯಲ್ಲಿ ಒಂದು ದೊಡ್ಡ ಸಂದೇಶವನ್ನು ಮುಂದಿಡುತ್ತದೆ. ಧರ್ಮದ ಹೆಸರಿನಲ್ಲಿ ದ್ವೇಷ ಹರಡುವವರಿಗೆ ಇದೊಂದು ಪಾಠ. ಇಲ್ಲಿ ಜನರು ಒಂದಾಗಿ ವ್ಯಾಪಾರ ಮಾಡುತ್ತಾರೆ, ಖರೀದಿಸುತ್ತಾರೆ, ಸಂತೋಷಿಸುತ್ತಾರೆ. ಈ ಪೇಟೆ ಸಾಮರಸ್ಯದ ಸಂಕೇತವಾಗಿ, ಎಲ್ಲರನ್ನೂ ಒಂದೇ ಎತ್ತರದಲ್ಲಿ ಕಾಣುವ ಮಾನವೀಯತೆಯನ್ನು ಪ್ರತಿಬಿಂಬಿಸುತ್ತದೆ. ಇಂತಹ ಸೌಂದರ್ಯವನ್ನು ಉಳಿಸಿಕೊಂಡು, ಭಟ್ಕಳದ ರಮಝಾನ್ ಪೇಟೆ ದೇಶಕ್ಕೆ ಒಂದು ಮಾದರಿಯಾಗಿದೆ. ರಮಝಾನ್ ಪೇಟೆ ಕೇವಲ ಹಬ್ಬದ ತಯಾರಿಯ ಸ್ಥಳವಲ್ಲ : ರಮಝಾನ್ ಪೇಟೆ ಕೇವಲ ಹಬ್ಬದ ತಯಾರಿಯ ಸ್ಥಳವಲ್ಲ. ಇದು ಭಾರತದ ಸಂಸ್ಕೃತಿಯ ಆಳವಾದ ಏಕತೆಯನ್ನು ತೋರುವ ಜೀವಂತ ಉದಾಹರಣೆಯಾಗಿದೆ. ರಮಝಾನ್ ಪೇಟೆಯ ಈ ಸೌಹಾರ್ದತೆ ಎಂದೆಂದಿಗೂ ಮುಂದುವರಿಯಲಿ ಎಂಬುದೇ ಎಲ್ಲರ ಆಶಯವಾಗಿದೆ. “ಇಲ್ಲಿ ಎಲ್ಲ ಜಾತಿ, ಧರ್ಮದ ಜನರು ವ್ಯಾಪಾರ ಮಾಡುತ್ತಾರೆ. ಹಿಂದೂ ಗ್ರಾಹಕರೂ ಸಾಕಷ್ಟು ಬರುತ್ತಾರೆ. ಯಾರಿಗೂ ಯಾವುದೇ ನಿರ್ಬಂಧವಿಲ್ಲ. ಈ ರಮಝಾನ್ ಪೇಟೆ ಹಿಂದೂ-ಮುಸ್ಲಿಂ ಸೌಹಾರ್ದತೆಗೆ ಒಂದು ಉತ್ತಮ ಉದಾಹರಣೆ.” -ಮಾಸ್ತಪ್ಪ ನಾಯ್ಕ, ಭಟ್ಕಳ “ರಮಝಾನ್ ಪೇಟೆ ಬಹಳ ಖುಷಿ ನೀಡುತ್ತದೆ. ಇಲ್ಲಿ ತಿಂಡಿ ತಿನಿಸುಗಳು, ಕಡಿಮೆ ಬೆಲೆಯ ವಸ್ತುಗಳು ಸಿಗುತ್ತವೆ. ಪ್ರತಿ ವರ್ಷ ನಾವು ಮಕ್ಕಳೊಂದಿಗೆ ಇಲ್ಲಿಗೆ ಬರುತ್ತೇವೆ.” -ಸಂತೋಷ್, ಕುಂದಾಪುರ
ಭರ್ಜರಿ ಮಳೆ, ಗುಡುಗು, ಗಾಳಿಯೊಂದಿಗೆ ಎಪ್ರಿಲ್ ತಿಂಗಳು ಆರಂಭ ಆಗಲಿದೆ. ದಕ್ಷಿಣ ಕರ್ನಾಟಕ ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆಯ ಅಲರ್ಟ್ ಇದೆ. ಉತ್ತರ ಒಳನಾಡಿನ ಕೆಲವು ಜಿಲ್ಲೆಗಳಿಗೂ ಮಳೆ ಅಲರ್ಟ್ ಇದ್ದು, ಯಾವ್ಯಾವ ಜಿಲ್ಲೆಗಳಿಗೆ ಮಳೆಯಾಗಲಿದೆ ಎಂಬ ವಿವರ ಇಲ್ಲಿದೆ.
ನಮ್ಮ ಸರ್ಕಾರ ಬಾಬಾಸಾಹೇಬರ ಮಾರ್ಗವನ್ನು ಅನುಸುತ್ತಿದೆ! ಪ್ರಧಾನಿ ಮೋದಿ
PM Modi visits Deekshabhoomi: ಪ್ರಧಾನಿ ನರೇಂದ್ರ ಮೋದಿ ‘ಗುಡಿ ಪಡವಾ’ ಅಂಗವಾಗಿ ಮಹಾರಾಷ್ಟ್ರದ ನಾಗಪುರಕ್ಕೆ ಭೇಟಿ ನೀಡಿ, ಅಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರೆಸ್ಸೆಸ್) ಸಂಶೋಧನಾ ಕೇಂದ್ರ ‘ಮಾಧವ ನೇತ್ರಾಲಯ’ದ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಇದೇ ವೇಳೆ ನಾಗಪುರದ ಸ್ಮೃತಿ ಮಂದಿರಕ್ಕೆ ಪ್ರಧಾನಿ ಮೋದಿ ಭೇಟಿ ನೀಡಿ ಗೌರವ ಸಲ್ಲಿಸಿದರು. ಪ್ರಧಾನಿ ಜತೆಗೆ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಇದ್ದರು. ಪ್ರಧಾನಿ ಹಾಗೂ ಭಾಗವತ್ ಅವರ ನಡುವಿನ ಈ ಭೇಟಿಯು ಬಹಳ ಮಹತ್ವದ್ದಾಗಿದೆ. ಸೈದ್ಧಾಂತಿಕ ಸಮನ್ವಯತೆ ಹಾಗೂ ರಾಜಕೀಯವಾಗಿ ಸರಾಗವಾಗಿ ಕುರಿತಾಗಿ ಪ್ರಮುಖ ಚರ್ಚೆ ನಡೆಯುವ ನಿರೀಕ್ಷೆ ಹುಟ್ಟಿಸಿತ್ತು.
ಸ್ವಯಂ ನಿವೃತ್ತಿ ಪಡೆದ ಮಾಜಿ ಐಎಎಸ್ ಅಧಿಕಾರಿ ಪತ್ನಿ
ನವದೆಹಲಿ, ಮಾರ್ಚ್ 30: ಮಾಜಿ ಐಎಎಸ್ ಅಧಿಕಾರಿ ಮತ್ತು ಬಿಜು ಜನತಾ ದಳ (ಬಿಜೆಡಿ) ನಾಯಕ ವಿ. ಕೆ. ಪಾಂಡಿಯನ್ ಅವರ ಪತ್ನಿ ಐಎಎಸ್ ಅಧಿಕಾರಿ ಸುಜಾತಾ ಕಾರ್ತಿಕೇಯನ್ ಸ್ವಯಂ ನಿವೃತ್ತಿ ಪಡೆದಿದ್ದಾರೆ. ಮೂರು ತಿಂಗಳ ನೋಟಿಸ್ ಪಿರಿಯಡ್ನಲ್ಲಿ ಕೆಲಸ ಮಾಡುವ ಷರತ್ತು ವಿಧಿಸಿ, ಮಾರ್ಚ್ 13, 2025ರಂದು ಕೇಂದ್ರ ಸರ್ಕಾರ ಸುಜಾತಾ ಕಾರ್ತಿಕೇಯನ್ ಸ್ವಯಂ ನಿವೃತ್ತಿ
ಮಂಗಳೂರು: ಬ್ಯಾಂಕ್ ನೌಕರ ನಾಪತ್ತೆ
ಮಂಗಳೂರು, ಮಾ.30: ನಗರದ ಮಂಗಳೂರು ಕೋ-ಆಪರೇಟಿವ್ ಟೌನ್ ಬ್ಯಾಂಕ್ನಲ್ಲಿ ಜವಾನನಾಗಿ ಕೆಲಸ ಮಾಡುತ್ತಿದ್ದ ದೀಪಕ್ ಪ್ರಭು (39) ಎಂಬವರು ಮಾ.27ರಿಂದ ಕಾಣೆಯಾದ ಬಗ್ಗೆ ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಂದು ಸಂಜೆ 4:30ಕ್ಕೆ ತನ್ನ ಮೊಬೈಲ್ ಪೋನನ್ನು ಸೆಂಟ್ರಲ್ ರೈಲ್ವೇ ಸ್ಟೇಷನ್ನಲ್ಲಿ ಬಿಸಾಡಿ ಹೋಗಿದ್ದಾರೆ ಎನ್ನಲಾಗಿದೆ. ವಿಷಯ ತಿಳಿದ ಮನೆಮಂದಿ ಎಲ್ಲೆಡೆ ಹುಡುಕಾಡಿದರೂ ಈವರೆಗೆ ಸಿಕ್ಕಿಲ್ಲ ಎಂದು ತಿಳಿದು ಬಂದಿದೆ. ಸುಮಾರು 6 ಅಡಿ ಎತ್ತರ, ಗೋದಿ ಮೈಬಣ್ಣ, ಸಾಧಾರಣ ಶರೀರದ, ಕನ್ನಡ, ತುಳು, ಕೊಂಕಣಿ ಮಾತನಾಡಬಲ್ಲ ದೀಪಕ್ ಪ್ರಭು ಮನೆಯಿಂದ ಹೊರಗೆ ಹೋಗುವಾಗ ತಿಳಿ ನೀಲಿ ಬಣ್ಣದ ಉದ್ದತೋಳಿನ ಅಂಗಿ, ಕಪ್ಪುಬಣ್ಣದ ಪ್ಯಾಂಟ್ ಧರಿಸಿದ್ದರು. ಇವರನ್ನು ಕಂಡವರು (ದೂ.ಸಂ: 0824-220533/ಪೊಲೀಸ್ ಕಂಟ್ರೋಲ್ ರೂಂ ದೂ.ಸಂ: 0824-2220800) ನ್ನು ಸಂಪರ್ಕಿಸಬಹುದು ಎಂದು ಕಾವೂರು ಪೊಲೀಸ್ ಠಾಣೆಯ ಪ್ರಕಟನೆ ತಿಳಿಸಿದೆ.
ಪುಟಿನ್ ಅಧಿಕೃತ ಕಾರು ಸ್ಫೋಟ!; ರಷ್ಯಾ ಅಧ್ಯಕ್ಷರ ಹತ್ಯೆಗೆ ಯತ್ನ?
ಮಾಸ್ಕೋ : ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ಅಧಿಕೃತ ಕಾರು ʼಔರಸ್ ಸೆನಾಟ್ ಲಿಮೋಸಿನ್ʼ ಸ್ಫೋಟಗೊಂಡು ಬೆಂಕಿಗಾಹುತಿಯಾಗಿದೆ. ಇದು ಪುಟಿನ್ ಹತ್ಯೆ ಯತ್ನವೇ ಎಂಬ ಸಂಶಯ ಮೂಡಿದೆ. ಮಾರ್ಚ್ 29ರಂದು ಲುಬಿಯಾಂಕದಲ್ಲಿರುವ ಮಾಸ್ಕೋದ FSB ರಹಸ್ಯ ಸೇವೆಯ ಪ್ರಧಾನ ಕಚೇರಿ ಬಳಿ ಘಟನೆ ನಡೆದಿದೆ. ಕಾರು ಹಠಾತ್ ಸ್ಪೋಟಗೊಳ್ಳಲು ಕಾರಣವೇನು ಎಂಬುದು ಸ್ಪಷ್ಟವಾಗಿಲ್ಲ. ಘಟನೆಯಲ್ಲಿ ಯಾವುದೇ ಗಾಯಗಳು ಅಥವಾ ಸಾವುಗಳು ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲ. ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ರಷ್ಯಾ ಅಧ್ಯಕ್ಷರ ಹತ್ಯೆ ಯತ್ನದ ಕುರಿತು ವದಂತಿಗೆ ಕಾರಣವಾಗಿದೆ.
Slowest ball in IPL history: ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡದ ಯುವ ವೇಗಿ ಸತ್ಯನಾರಾಯಣ ರಾಜು ಐಪಿಎಲ್ ಇತಿಹಾಸದಲ್ಲಿ ಅತ್ಯಂತ ನಿಧಾನಗತಿಯ ಎಸೆತವೊಂದನ್ನು (Slowest ball in IPL history) ಎಸೆದಿದ್ದಾರೆ. ಸತ್ಯನಾರಾಯಣ ರಾಜು ಎಸೆದ 13ನೇ ಓವರ್ನ ಐದು ಎಸೆತಗಳ ವೇಗ ಸ್ಪೀಡ್ಗನ್ನಲ್ಲಿ ದಾಖಲಾಗಿವೆ. ಆದರೆ ನಿಧಾನವಾಗಿ ಎಸೆದ ಬಾಲ್ನ ವೇಗೆ ಎಷ್ಟಿತ್ತು ಎಂಬುದು ಮಾತ್ರ ದಾಖಲಾಗಿಲ್ಲ. ಬಾಲ್ ಎಷ್ಟು ನಿಧಾನವಾಗಿತ್ತೆಂದರೆ, ಜೋಸ್ ಬಟ್ಲರ್ಗೆ ಚೆಂಡನ್ನು ಯಾವ ದಿಕ್ಕಿಗೆ ಹೊಡೆಯಬೇಕು ಎಂಬುದನ್ನು ಸೂಕ್ಷವಾಗಿ ನೋಡಿ ನಿರ್ಧರಿಸುವಷ್ಟು ಸಮಯ ಇತ್ತು. ಸದ್ಯ ನಿಧಾನಗತಿಯ ಬೌಲಿಂಗ್ನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಮೊದಲ ಬಾರಿಗೆ ಆರೆಸ್ಸೆಸ್ ಕೇಂದ್ರ ಕಚೇರಿಗೆ ಮೋದಿ ಭೇಟಿ
ನಾಗ್ಪುರ: ಪ್ರಧಾನಮಂತ್ರಿ ನರೇಂದ್ರ ಮೋದಿ ರವಿವಾರ ನಾಗ್ಪುರದ ರೇಶಿಮ್ ಭಾಗ್ನಲ್ಲಿರುವ ಡಾ. ಹೆಡಗೇವಾರ್ ಸ್ಮೃತಿ ಮಂದಿರಕ್ಕೆ ಭೇಟಿ ನೀಡಿ ಆರೆಸ್ಸೆಸ್ ಸಂಸ್ಥಾಪಕ ಕೇಶವ ಬಲಿರಾಮ್ ಹೆಡಗೇವಾರ್ ಮತ್ತು ಎರಡನೇ ಸರಸಂಘ ಸಂಚಾಲಕ ಎಂಎಸ್ ಗೋಳ್ವಾಲ್ಕರ್ ಅವರ ಸ್ಮಾರಕಗಳಿಗೆ ಗೌರವ ಸಲ್ಲಿಸಿದರು. ಪ್ರಧಾನಿಯಾಗಿ ಅಧಿಕಾರವಹಿಸಿಕೊಂಡ ಬಳಿಕ ಇದೇ ಮೊದಲ ಬಾರಿಗೆ ಮೋದಿ ಆರೆಸ್ಸೆಸ್ ಕೇಂದ್ರ ಕಚೇರಿಗೆ ಭೇಟಿ ನೀಡಿದ್ದು, ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್, ಸಂಘದ ಮಾಜಿ ಪ್ರಧಾನ ಕಾರ್ಯದರ್ಶಿ ಸುರೇಶ್ ಭಯ್ಯಾಜಿ ಜೋಶಿ, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತು ಕೇಂದ್ರ ಸಚಿವ ನಿತಿನ್ ಗಡ್ಕರಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಸ್ಮೃತಿ ಭವನದಲ್ಲಿ ಆರೆಸ್ಸೆಸ್ ಕಚೇರಿಯ ಪದಾಧಿಕಾರಿಗಳನ್ನು ಭೇಟಿ ಮಾಡಿದ ಪ್ರಧಾನಿ ಮೋದಿ ಅವರ ಜೊತೆ ಫೋಟೊ ತೆಗೆಸಿಕೊಂಡಿದ್ದಾರೆ. Visiting Smruti Mandir in Nagpur is a very special experience. Making today’s visit even more special is the fact that it has happened on Varsha Pratipada, which is also the Jayanti of Param Pujya Doctor Sahab. Countless people like me derive inspiration and strength from the… pic.twitter.com/6LzgECjwvI — Narendra Modi (@narendramodi) March 30, 2025
‘ಹಾಲಿನ ದರ ಏರಿಕೆ ಹೊರೆಯಲ್ಲ, ರೈತರ ಋಣ ಸಂದಾಯಕ್ಕೆ ಸಿಕ್ಕ ಒಂದು ಅವಕಾಶ’
ಕರ್ನಾಟಕ ಸರಕಾರ ಹಾಲು ಮತ್ತು ಮೊಸರಿನ ಮಾರಾಟ ದರವನ್ನು ಪ್ರತೀ ಲೀಟರ್ / ಕೆ.ಜಿ. ಗೆ ರೂ.4 ರಂತೆ ಹೆಚ್ಚಿ ಸಲು ತೀರ್ಮಾನಿಸಿದೆ. ನಿರೀಕ್ಷೆಯಂತೆ ವಿರೋಧಪಕ್ಷಗಳು ಇದನ್ನು ವಿರೋಧಿಸಿ ಹೇಳಿಕೆಗಳನ್ನು ನೀಡುತ್ತಿವೆ. ಈ ರೀತಿ ವಿರೋಧಿಸುವವರು ಗ್ರಾಹಕರು ಖರೀದಿಸುವ ದರದಲ್ಲಿ ಮಾಡಲಾದ ಏರಿಕೆಯನ್ನು ಪ್ರಸ್ತಾಪ ಮಾಡುತ್ತಾರೆಯೇ ಹೊರತು ದರ ಏರಿಕೆಯ ಹಣವನ್ನು ಹಾಲು ಮಾರಾಟ ಮಾಡುವ ರೈತರಿಗೆ ನೀಡುತ್ತಿರುವ ಸರ್ಕಾರದ ನಿರ್ಧಾರದ ಬಗ್ಗೆ ಸೊಲ್ಲೆತ್ತುವುದಿಲ್ಲ. ರೈತರು ನಮ್ಮ ಅನ್ನದಾತರು, ಸಮಾಜದ ಬೆನ್ನೆಲುಬು ಎಂದೆಲ್ಲ ಕೊಂಡಾಡುವ ನಾವೆಲ್ಲರೂ ರೈತರು ಬೆಳೆದ ಧಾನ್ಯ, ತರಕಾರಿ, ಉತ್ಪಾಧಿಸುವ ಹಾಲು-ಮೊಸರಿನ ಬೆಲೆ ಹೆಚ್ಚಾದಕೂಡಲೇ ರೈತರು ನಮ್ಮನ್ನೇ ಲೂಟಿ ಮಾಡುತ್ತಿದ್ದಾರೆ ಎನ್ನುವ ರೀತಿಯಲ್ಲಿ ಬೊಬ್ಬೆ ಹಾಕುತ್ತೇವೆ. ಇದು ರೈತರನ್ನು ಮಣ್ಣಿನ ಮಕ್ಕಳು ಎಂದು ಬಣ್ಣಿಸುವ ನಮ್ಮೆಲ್ಲರ ಆತ್ಮವಂಚನೆ. ರಾಜ್ಯ ಸರಕಾರ ಹಾಲು ಮೊಸರಿನ ಬೆಲೆ ಹೆಚ್ಚಿಸಿರುವುದು ತನ್ನ ಖಜಾನೆ ತುಂಬಿಸಿಕೊಳ್ಳಲು ಅಲ್ಲ. ರಾಜ್ಯದ ರೈತರು ಕಳೆದ ಕೆಲವು ತಿಂಗಳುಗಳಿಂದ ಹಾಲಿನ ದರ ಹೆಚ್ಚಳ ಮಾಡುವಂತೆ ಒತ್ತಾಯಿಸುತ್ತಾ ಬಂದಿದ್ದಾರೆ. ಅವರ ಮನವಿಗೆ ಸ್ಪಂದಿಸುವುದು ರಾಜ್ಯ ಸರಕಾರದ ಜವಾಬ್ದಾರಿಯಾಗಿದೆ. ಈ ಕಾರಣದಿಂದಾಗಿ ಹಾಲು ಮತ್ತು ಮೊಸರಿನ ದರವನ್ನು ಪ್ರತೀ ಲೀಟರ್ / ಕೆ.ಜಿ. ಗೆ ರೂ.4 ರಂತೆ ಹೆಚ್ಚಿಸಲು ತೀರ್ಮಾನಿಸಿದೆ. ಅಕ್ಕಿ, ಬೇಳೆಕಾಳು, ಎಣ್ಣೆ, ಸಂಬಾರ ಪದಾರ್ಥ, ತರಕಾರಿ, ಹಾಲು, ಮಾಂಸ, ಮೊಟ್ಟೆ ಹೀಗೆ ದಿನ ಬಳಕೆಯ ಎಲ್ಲಾ ವಸ್ತುಗಳ ಬೆಲೆ ಏರಿಕೆ ಸಹಜ ಪ್ರಕ್ರಿಯೆ. ಇದಕ್ಕೆ ಕಾರಣ ಅವುಗಳ ಉತ್ಪಾದನೆಯ ವೆಚ್ಚದಲ್ಲಿ ಆಗುತ್ತಿರುವ ಬೆಲೆ ಏರಿಕೆ. ಹೈನುಗಾರಿಕೆಯ ಉದಾಹರಣೆಯನ್ನೇ ತೆಗೆದುಕೊಳ್ಳುವುದಾದರೆ ಹಿಂಡಿ, ಬೂಸಾ, ಜಾನುವಾರುಗಳ ಔಷಧ ಈ ಯಾವುದೂ ಕಳೆದ ವರ್ಷ ಸಿಗುತ್ತಿದ್ದ ಬೆಲೆಯಲ್ಲಿ ಇಂದು ದೊರೆಯುತ್ತಿಲ್ಲ. ಮೊದಲೇ ಹೈನುಗಾರಿಕೆ ಎಂಬುದು ನಷ್ಟದ ಉದ್ಯೋಗವೆಂದು ಹೆಸರುವಾಸಿಯಾಗಿರುವಾಗ, ಆಕಳು ಸಾಕಣೆ ಎಂದರೆ ಜನರು ಮೂಗು ಮುರಿಯುವಂಹ ಸ್ಥಿತಿ ಇರುವಾಗ ಈ ಬೆಲೆಯೇರಿಕೆ ಕೂಡ ರೈತರನ್ನು ಮತ್ತಷ್ಟು ಬಾಧಿಸಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಹೀಗಾಗಿಯೇ ಹಾಲಿನ ಬೆಲೆ ಹೆಚ್ಚಳ ಮಾಡಬೇಕು ಎಂಬುದು ಹೈನುಗಾರರ ಬಹುದಿನದ ಬೇಡಿಕೆಯಾಗಿತ್ತು. ರೈತರ ಹಿತದೃಷ್ಟಿಯಿಂದ ಮಾಡಲಾದ ಈ ದರ ಏರಿಕೆಯನ್ನು ರಾಜ್ಯ ಸರಕಾರದ ವಿರುದ್ಧ ಟೀಕಾ ಪ್ರಹಾರ ನಡೆಸಲು ಸಿಕ್ಕ ಸುವರ್ಣಾವಕಾಶವೆಂಬಂತೆ ವಿಪಕ್ಷಗಳ ನಾಯಕರು ‘‘ಗ್ಯಾರಂಟಿಗಳಿಂದ ಸರಕಾರ ದಿವಾಳಿಯಾಗಿದೆ ಹಾಗಾಗಿ ಬೆಲೆಯೇರಿಕೆ ಮಾಡಿದೆ, ಕೆಎಂಎಫ್ ನಷ್ಟದಲ್ಲಿತ್ತು ಅದಕ್ಕೆ ಬೆಲೆಯೇರಿಕೆ ಮಾಡಲಾಗಿದೆ’’ಎಂಬೆಲ್ಲಾ ಸುಳ್ಳುಗಳನ್ನು ಹಬ್ಬಿಸಲು ಸರಕಾರ ದರ ಏರಿಕೆ ನಿರ್ಧಾರ ಕೈಗೊಂಡ ಮರುಕ್ಷಣದಿಂದಲೇ ಆರಂಭ ಮಾಡಿದ್ದಾರೆ. ನಿಜವಾಗಿ ಹೇಳಬೇಕೆಂದರೆ ಕೆಎಂಎಫ್ ಎನ್ನುವುದು ಸರಕಾರಕ್ಕೆ ಲಾಭ ತಂದುಕೊಡುವ ಉದ್ದೇಶದಿಂದ ಹುಟ್ಟುಹಾಕಿದ ಸಂಸ್ಥೆಯಲ್ಲ. ಇದು ರೈತರ ಕಲ್ಯಾಣಕ್ಕಾಗಿ, ಅವರು ನೀಡುವ ಹಾಲಿಗೆ ನ್ಯಾಯಬದ್ಧ ಬೆಲೆ ಸಿಗುವಂತೆ ಮಾಡಬೇಕು ಮತ್ತು ಜೊತೆಯಲ್ಲಿ ಉತ್ತಮ ಗುಣಮಟ್ಟದ ಹಾಲನ್ನು ಕನ್ನಡಿಗರಿಗೆ ನೀಡಬೇಕು ಎನ್ನುವುದು ಕೆಎಂಎಫ್ನ ಮೂಲ ಉದ್ದೇಶ. ಈ ಕಾರಣದಿಂದಾಗಿ ತನ್ನ ಉತ್ಪನ್ನಗಳ ಮಾರಾಟದಿಂದ ಕೆಎಂಎಫ್ ಸಂಗ್ರಹಿಸುವ ಪ್ರತೀ ಒಂದು ರೂಪಾಯಿಯಲ್ಲಿ 80 ಪೈಸೆಗೂ ಹೆಚ್ಚಿನ ಪಾಲನ್ನು ನೇರವಾಗಿ ರೈತರಿಗೆ ವರ್ಗಾವಣೆ ಮಾಡುತ್ತಿದೆ. ಇಲ್ಲಿ ಗಮನಿಸಬೇಕಾದ ಇನ್ನೊಂದು ಪ್ರಮುಖ ಅಂಶವೆಂದರೆ ಅಸ್ಸಾಮಿನಲ್ಲಿ ವಮುಲ್ ಸಂಸ್ಥೆ ರೈತರಿಂದ ಲೀಟರ್ ಹಾಲಿಗೆ 37.93 ರೂಪಾಯಿ ನೀಡಿ ಖರೀದಿ ಮಾಡಿ, ಅದನ್ನು 60 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. ಅಂದರೆ ಸರಕಾರ ಅಥವಾ ಹಾಲು ಮಹಾಮಂಡಳ 20 ರೂಪಾಯಿಗೂ ಅಧಿಕ ಹಣವನ್ನು ತಾನು ಪಡೆಯುತ್ತಿದೆ. ಅದೇ ರೀತಿ ಹರ್ಯಾಣದಲ್ಲಿ 35.05 ರೂಪಾಯಿಗೆ ಖರೀದಿಸಿ 56ಕ್ಕೆ, ಆಂಧ್ರಪ್ರದೇಶದಲ್ಲಿ 39ಕ್ಕೆ ಖರೀದಿಸಿ 60ಕ್ಕೆ ಮಾರಾಟ ಮಾಡಲಾಗುತ್ತಿದೆ. ಆದರೆ ಕರ್ನಾಟಕದಲ್ಲಿ ಮಾತ್ರ ರಾಜ್ಯದಲ್ಲಿ ರೈತರಿಂದ 31.68ಕ್ಕೆ ಖರೀದಿ ಮಾಡುವ ಕೆಎಂಎಫ್ ಸಂಸ್ಕರಣೆ, ಪ್ಯಾಕಿಂಗ್, ಸಾಗಾಟ ಹೀಗೆ ಎಲ್ಲ ವೆಚ್ಚವನ್ನು ನಿರ್ವಹಿಸಿ ಲೀಟರ್ ಪ್ಯಾಕೇಟ್ ಮೇಲೆ ಕೇವಲ 10 ರೂಪಾಯಿ ಹೆಚ್ಚಳ ಮಾಡಿ 42ಕ್ಕೆ ಮಾರಾಟ ಮಾಡುತ್ತಿದೆ. ಇನ್ನು ಈಗ ಹೆಚ್ಚಳ ಮಾಡಲಾಗಿರುವ ಹಾಲಿನ ದರ ಗ್ರಾಹಕರಿಗೆ ದೊಡ್ಡ ಮಟ್ಟದ ಹೊರೆಯಾಗಿದೆ ಎಂದು ವಿರೋಧ ಪಕ್ಷಗಳು ಆರೋಪಿಸುತ್ತಿವೆ. ಬೇರೆ ರಾಜ್ಯಗಳ ಹಾಲಿನ ಬೆಲೆಯ ಅರಿವಿದ್ದೋ, ಇಲ್ಲದೆಯೋ ಇವರು ಈ ರೀತಿಯ ಆರೋಪ ಮಾಡುತ್ತಿದ್ದಾರೆ. ಬೇರೆ ರಾಜ್ಯಗಳಲ್ಲಿ ಹಾಲಿನ ದರ ಎಷ್ಟಿದೆ ಎಂಬುದನ್ನು ನೋಡಿದರೆ, ಲೀಟರ್ ಹಾಲಿಗೆ 4 ರೂಪಾಯಿ ಹೆಚ್ಚಳದ ನಂತರವೂ ಕರ್ನಾಟಕದಲ್ಲಿ ಮಾತ್ರವೇ ದೇಶದಲ್ಲಿ ಅತಿ ಕಡಿಮೆ ಬೆಲೆಗೆ ಹಾಲು ಮಾರಾಟ ಮಾಡುತ್ತಿರುವುದನ್ನು ಗಮನಿಸಬೇಕಾಗಿದೆ. ಪಕ್ಕದ ತಮಿಳುನಾಡಿನಿಂದ ಹಿಡಿದು ದೂರದ ದಿಲ್ಲಿಯ ವರೆಗೆ ಯಾವ ರಾಜ್ಯಗಳಲ್ಲೂ ಹಾಲಿನ ಬೆಲೆ 50 ರೂಪಾಯಿಗಿಂತ ಕಡಿಮೆಯಿಲ್ಲ. ಕರ್ನಾಟಕದಲ್ಲಿ ಹಾಲಿನ ಬೆಲೆ ಗಗನಕ್ಕೇರಿದೆ ಎಂದು ಬೊಬ್ಬೆ ಹಾಕುತ್ತಿರುವ ಬಿಜೆಪಿ ನಾಯಕರಿಗೆ ನನ್ನದೊಂದು ಪ್ರಶ್ನೆ, ಕಳೆದ 20 ವರ್ಷಗಳಿಂದ ಬಿಜೆಪಿಯೇ ಅಧಿಕಾರದಲ್ಲಿರುವ ಗುಜರಾತ್ ನಲ್ಲಿ ಹಾಲಿನ ಬೆಲೆ ಎಷ್ಟಿದೆ? ಅಲ್ಲಿ ಪ್ರತೀ ಲೀಟರ್ ಹಾಲಿನ ಬೆಲೆ 53 ರೂಪಾಯಿ. ಇದನ್ನು ಕೂಡಾ ಗ್ರಾಹಕರ ಮೇಲೆ ಹಾಲಿನ ದರ ಹೆಚ್ಚಳ ಬರೆ ಎಂದು ಬಣ್ಣಿಸಬಹುದೇ? ಹೈನುಗಾರಿಕೆ ಇಂದು ಭಾರೀ ಲಾಭ ತರುವ ವೃತ್ತಿ ಅಲ್ಲ. ಇತ್ತೀಚೆಗೆ ಚರ್ಮಗಂಟು, ಕಾಲುಬಾಯಿ ರೋಗದಿಂದ ಇಡೀ ಹೈನುಗಾರಿಕಾ ಉದ್ಯಮವೇ ತತ್ತರಿಸಿ ಹೋಗಿದೆ. ಹೈನುಗಾರಿಕೆಗೆ ಬೇಕಾದ ಎಲ್ಲಾ ಅಗತ್ಯ ವಸ್ತುಗಳ ಬೆಲೆಯೂ ಹೆಚ್ಚಾಗುತ್ತಿದೆ. ಹೀಗಿರುವಾಗ ಹಾಲಿನ ಬೆಲೆ ಮಾತ್ರ ಹೆಚ್ಚಾಗಬಾರದು ಎನ್ನುವುದು ಯಾವ ನ್ಯಾಯ? ವಿರೋಧ ಪಕ್ಷಗಳು ಇರುವುದೇ ಸರಕಾರವನ್ನು ಟೀಕಿಸುವುದಕ್ಕಾಗಿ. ಹಾಗಾಗಿ ಅದನ್ನು ನಿರ್ಲಕ್ಷಿಸೋಣ. ಹಾಲಿನ ಗ್ರಾಹಕರಾದ ಜನರಿಗೆ ಏನಾಗಿದೆ? ಪ್ರತೀ ಕುಟುಂಬ ಪ್ರತಿದಿನ ಒಂದು ಲೀಟರ್ ಹಾಲು ಬಳಸುತ್ತದೆ ಎಂದು ಇಟ್ಟುಕೊಳ್ಳೋಣ. ಇದರಂತೆ ತಿಂಗಳಿಗೆ 30 ಲೀಟರ್ ಹಾಲಿಗೆ ಹೆಚ್ಚುವರಿಯಾಗಿ 120 ರೂಪಾಯಿ ನೀಡಬೇಕಾಗುತ್ತದೆ. ಈ ಹಣ ಸಂದಾಯವಾಗುವುದು ರೈತರಿಗೆ ಎನ್ನುವುದನ್ನು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಪಶುಸಂಗೋಪನಾ ಸಚಿವರು ಮತ್ತು ಕೆಎಂಎಫ್ ಸೇರಿದಂತೆ ಎಲ್ಲರೂ ಮತ್ತೆ ಮತ್ತೆ ಸಾರಿ ಹೇಳುತ್ತಿದ್ದಾರೆ. ನಾವು ನೀಡುತ್ತಿರುವ ಹೆಚ್ಚುವರಿ ಹಣ ಮಳೆ-ಬಿಸಿಲು ಎನ್ನದೆ ಹೊಲಗದ್ದೆಗಳಲ್ಲಿ ದುಡಿಯುತ್ತಿರುವ, ಹೈನುಗಾರಿಕೆಯನ್ನೇ ನಂಬಿ ಬದುಕುತ್ತಿರುವ ಬಡ ರೈತ ಕುಟುಂಬಕ್ಕೆ ಹೋಗುತ್ತದೆ ಎನ್ನುವುದನ್ನು ನಾವು ಮರೆಯಬಾರದು. ಇದೊಂದು ರೀತಿಯ ರೈತರ ಋಣ ಸಂದಾಯದ ಅವಕಾಶ ಎಂದು ಗ್ರಾಹಕರು ತಿಳಿದುಕೊಂಡು ಹಾಲಿನ ದರ ಏರಿಕೆಯನ್ನು ಸ್ವಯಂಪ್ರೇರಿತರಾಗಿ ಬೆಂಬಲಿಸಬೇಕಾಗಿದೆ.
ವಿಜಯಪುರದಲ್ಲಿ ವಿಜಯೇಂದ್ರ ವಿರುದ್ಧ ತೀವ್ರ ವಾಗ್ದಾಳಿ! ಹೊಸ ಪಕ್ಷ ಕಟ್ಟುವ ಬಗ್ಗೆ ಯತ್ನಾಳ್ ಹೇಳಿದ್ದೇನು?
ವಿಜಯೇಂದ್ರ ಒಬ್ಬ ಮಹಾ ಭ್ರಷ್ಟ, ಇವನ ಸಲುವಾಗಿಯೇ ಯಡಿಯೂರಪ್ಪ ಜೈಲಿಗೆ ಹೋದ. ಇಂತಹ ಕುಟುಂಬವನ್ನು ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿ ಮುಂದುವರೆಸುವದಾದರೆ ಈ ನಾಡಿನ ಹಿಂದೂ ಕಾರ್ಯಕರ್ತರು, ಮಹಾ ಜನತೆ ಒಂದು ನಿರ್ಣಯ ಮಾಡುತ್ತಾರೆ. ಹಿಂದು ರಕ್ಷಣೆಗಾಗಿ ಪಕ್ಷ ಕಟ್ಟಬೇಕು ಎನ್ನುತ್ತಿದ್ದಾರೆ ಎಂದು ಯತ್ನಾಳ್ ಹೇಳಿದ್ದಾರೆ.
ಉತ್ತರ ಪ್ರದೇಶ | ಮುಖ್ತಾರ್ ಅನ್ಸಾರಿ ಗ್ಯಾಂಗ್ ಶೂಟರ್ ಎನ್ಕೌಂಟರ್ನಲ್ಲಿ ಹತ್ಯೆ
ಲಕ್ನೋ: ಜಮ್ಶೆಡ್ಪುರದಲ್ಲಿ ಮುಖ್ತಾರ್ ಅನ್ಸಾರಿ ಗ್ಯಾಂಗ್ನ ಶೂಟರ್ ಅನುಜ್ ಕನೌಜಿಯಾನನ್ನು ಎನ್ಕೌಂಟರ್ ಮಾಡಿರುವುದಾಗಿ ಅಧಿಕಾರಿಯೋರ್ವರು ತಿಳಿಸಿದರು. ಉತ್ತರ ಪ್ರದೇಶ ಪೊಲೀಸರ ವಿಶೇಷ ಕಾರ್ಯಪಡೆ ಮತ್ತು ಜಾರ್ಖಂಡ್ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಅನುಜ್ ಕನೌಜಿಯಾನನ್ನು ಎನ್ಕೌಂಟರ್ ಮಾಡಿದರು. ಎನ್ಕೌಂಟರ್ ವೇಳೆ ಎಸ್ಟಿಎಫ್ ಉಪ ಪೊಲೀಸ್ ವರಿಷ್ಠಾಧಿಕಾರಿ ಡಿ ಕೆ ಶಾಹಿ ಗಾಯಗೊಂಡಿದ್ದಾರೆ. ಉತ್ತರ ಪ್ರದೇಶ ಎಸ್ಟಿಎಫ್ ಹೆಚ್ಚುವರಿ ಮಹಾನಿರ್ದೇಶಕ ಅಮಿತಾಬ್ ಯಶ್ ಈ ಕುರಿತು ಪ್ರತಿಕ್ರಿಯಿಸಿ, ಖಚಿತ ಮಾಹಿತಿ ಮೇರೆಗೆ ಎಸ್ಟಿಎಫ್ ಮತ್ತು ಜಾರ್ಖಂಡ್ ಪೊಲೀಸರು ಅನುಜ್ ಕನೌಜಿಯಾನನ್ನು ಬಂಧಿಸಲು ಪ್ರಯತ್ನಿಸಿದರು. ಆದರೆ ಈ ವೇಳೆ ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ. ಪೊಲೀಸರು ನಡೆಸಿದ ಪ್ರತಿ ದಾಳಿಗೆ ಅನುಜ್ ಕನೌಜಿಯಾ ಮೃತಪಟ್ಟಿದ್ದಾನೆ ಎಂದು ತಿಳಿಸಿದರು. ಕನೌಜಿಯಾ ಕೊಲೆ, ಸುಲಿಗೆ, ಭೂಕಬಳಿಕೆ, ಶಸ್ತ್ರಾಸ್ತ್ರ ಕಳ್ಳಸಾಗಣೆ ಸೇರಿದಂತೆ 23 ಅಪರಾಧ ಪ್ರಕರಣಗಳಲ್ಲಿ ತಲೆಮರೆಸಿಕೊಂಡಿದ್ದ. ಉತ್ತರ ಪ್ರದೇಶದ ಡಿಜಿಪಿ ಪ್ರಶಾಂತ್ ಕುಮಾರ್ ಇತ್ತೀಚೆಗೆ ಆತನ ಬಗ್ಗೆ ಮಾಹಿತಿ ನೀಡುವವರಿಗೆ 2.5 ಲಕ್ಷ ನಗದು ಬಹುಮಾನ ಘೋಷಿಸಿದ್ದರು.
ಪೋಷಕರ ಚಿಂತೆಗೆ ಕಾರಣವಾದ 6 ವರ್ಷ ಕಡ್ಡಾಯ ನಿಯಮ: ಸಚಿವರು ಹೇಳಿದ್ದೇನು?
ಬೆಂಗಳೂರು, ಮಾರ್ಚ್ 30: ಮಕ್ಕಳು 1ನೇ ತರಗತಿಗೆ ಪ್ರವೇಶ ಪಡೆಯಲು 6 ವರ್ಷ ಪೂರ್ಣಗೊಂಡಿರಬೇಕು ಎಂಬ ನಿಯಮ ಪೋಷಕರ ಚಿಂತೆಗೆ ಕಾರಣವಾಗಿದೆ. 2025-26ನೇ ಸಾಲಿನ ಶೈಕ್ಷಣಿಕ ವರ್ಷದಿಂದ ಮಕ್ಕಳ ಪ್ರವೇಶಕ್ಕೆ ಈ ನಿಯಮ ಕಡ್ಡಾಯಗೊಳಿಸಲಾಗಿದೆ. ಆದರೆ ಈ ನಿಯಮವನ್ನು ಸಡಿಲಗೊಳಿಸಬೇಕು ಎಂದು ಚರ್ಚೆಗಳು ನಡೆಯುತ್ತಿವೆ. ಪೋಷಕರು ಈ ಕುರಿತು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವರಾದ